Saturday, June 4, 2011






ಬಾಬಾ ರಾಮ್ದೇವ್ರವರಿಗೆ ಬೆಂಬಲ

ಚಿಕ್ಕನಾಯಕನಹಳ್ಳಿ,ಜೂ.04 : ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ಹಿಂದಿರುಗಿ ಪಡೆಯುವುದು, ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಠಾಚಾರವನ್ನು ತಡೆಯುವುದು ವಿದೇಶಿ ಕಾನೂನು ಪದ್ದತಿ ರದ್ದು ಮಾಡುವುದು, ತಪ್ಪಿತಸ್ಥರನ್ನು ಗಲ್ಲಿಗೇರಿಸುವುದು, 500, 1000 ಮುಖ ಬೆಲೆಯ ನೋಟು ಹಿಂದೆ ಪಡೆಯಲು ಒತ್ತಾಯಿಸುತ್ತಿರುವ ಯೋಗ ಗುರು ರಾಮದೇವರ ನಿಲುವು ಸ್ವಾಗತಾರ್ಹ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀನಿವಾಸಮೂತರ್ಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ಭ್ರಷ್ಠರಾಜಕಾರಣಿಗಳು ಕೋಟಿಗಟ್ಟಲೆ ಹಣ ಲೂಟಿ ಮಾಡಿ ವಿದೇಶಿ ಬ್ಯಾಂಕ್ನಲ್ಲಿಟ್ಟಿರುವುದು ಅಕ್ಷಮ್ಯ ಅಪರಾಧ, ಅಂತಹ ಹಣವನ್ನು ಹಿಂದಿರುಗಿ ಪಡೆಯುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ, ಇದೀಗ ಬಾಬ ರಾಮದೇವರವರು, ಅಣ್ಣಾ ಹಜಾರೆರವರು ಈ ನಿಟ್ಟಿನಲ್ಲಿ ಹೋರಾಟ ಕೈಗೊಂಡು ಜನಜಾಗೃತಿ ಮೂಡಿಸುತ್ತಿದ್ದಾರೆ, ದೇಶದ ಪ್ರತಿಯೊಬ್ಬ ಪ್ರಜೆಯೂ ಇವರು ಕೈಗೊಂಡಿರುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೋರಿದ್ದಾರೆ.
ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಚಿಕ್ಕನಾಯಕನಹಳ್ಳಿ,ಜೂ.04: ತಾಲ್ಲೂಕಿನ ಕಂದಿಕೆರೆ ಹೋಬಳಿಯಲ್ಲಿ ಕೃಷಿ, ಐನುಗಾರಿಕೆ, ಜೇನುಸಾಕಾಣೀಕೆ, ಮೀನುಗಾರಿಕೆ, ತೋಟಗಾರಿಕೆಗಳ ಚಟುವಟಿಕೆಗಳಿಗೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆಮಾಡಲಾಯಿತು. ಪರಿಷಿಷ್ಠ ಜಾತಿಯ 46 ಮಹಿಳಾ ಫಲಾನುಭವಿಗಳು, 92 ಮಂದಿ ಪುರಷ ಫಲಾನುಭವಿಗಳು, ಸಾಮಾನ್ಯವರ್ಗದ 68 ಮಹಿಳೆಯರು, 137 ಮಂದಿ ಸಾಮಾನ್ಯ ರೈತ ಫಲಾನುಭವಿಗಳು ಆಯ್ಕೆಗೊಂಡು ಶೇಖಡಾ 10ರ ಅನುಪಾತದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತಾ.ಪಂ.ಸದಸ್ಯೆ ಲತಾ, ಕೆ.ಎಸ್.ಸುಮಿತ್ರಾ, ಉಮಾದೇವಿ, ಇ,ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಆಂಜನಪ್ಪ, ಆನಂದಪ್ಪ, ಸೋಮಶೇಖರ್ ಉಪಸ್ಥಿತರಿದ್ದರು.

ಕಾನ್ವೆಂಟ್ ಶಾಲೆಗಳ ವ್ಯಾಮೋಹ ; ಸಕರ್ಾರಿ ಶಾಲೆಗಳು ಮುಚ್ಚುವ ಸಂಭವಗಳಿಂದ ಚಿಕ್ಕನಾಯಕನಹಳ್ಳಿ,ಜೂ.03: ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ಗಳಿಗೆ ಕಳಿಸುವುದರಿಂದ ಸಕರ್ಾರಿ ಶಾಲೆಗಳನ್ನು ಮುಚ್ಚುವಂತಾಗಿದೆ ಎಂದ ಬಿ.ಇ.ಓ ಸಾ.ಚಿ.ನಾಗೇಶ್ ಕರೆ ನೀಡಿದರು. ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಇಲಾಖೆರವರ ಸಂಯುಕ್ತಾಶ್ರಯದಲ್ಲಿ ನಡೆದ ಮಾಧ್ಯಮ ಮತ್ತು ದಾಖಲೀಕರಣ ಬುಡಕಟ್ಟು ಪ್ರದೇಶದ ಪೋಷಕರ ಜಾಗೃತ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುಡಕಟ್ಟು ಜನಾಂಗ, ಬೋವಿ ಕಾಲೋನಿಗಳ ತಾಂಡಗಳ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಸಕರ್ಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ, ಮಕ್ಕಳಿಗೆ ಉಚಿತ ಊಟ, ಸಮವಸ್ತ್ರ, ಸೈಕಲ್, ವಿದ್ಯಾಥರ್ಿವೇತನ ನೀಡುತ್ತಾ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದೆ ಎಂದರು. ಎ.ಸಿ.ಡಿ.ಪಿ.ಓ ಪರ್ವತಯ್ಯ ಮಾತನಾಡಿ ತಾಲ್ಲೂಕಿನಲ್ಲಿ 1015ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿವೆ, ಮಹಿಳೆಯರು ಜಾಗೃತರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದ ಅವರು ಸ್ತ್ರೀ ಶಕ್ತಿ ಸಂಘಗಳು ಬರೀ ಉಳಿತಾಯ ಮಾಡಿದರೆ ಸಾಲದು ಸಸ್ವಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳನ್ನು ಸ್ತ್ರೀ ಶಕ್ತಿ ಭವನದಲ್ಲಿ ಮಾರಾಟ ಮಾಡಿ ಆಥರ್ಿಕವಾಗಿ ಸದೃಡವಾಗಿ ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಲತಾ, ಡಿ.ವಿ.ಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಖಜಾಂಚಿ ತಿಮ್ಮಯ್ಯ, ಮುಖ್ಯೋಪಾಧ್ಯಾಯ ಮಲ್ಲಿಕಾಜರ್ುನಯ್ಯ ಉಪಸ್ಥಿತರಿದ್ದರು.
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭಚಿಕ್ಕನಾಯಕನಹಳ್ಳಿ,ಜೂ.01: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮತ್ತು ಸನ್ಮಾನ ಸಮಾರಂಭವನ್ನು ಇದೇ ಜೂನ್ 10ರಂದು ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ಕುಪ್ಪೂರಿನ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ಬಾಬು ಸಮ್ಮೇಳನಾಧ್ಯಕ್ಷರಿಗೆ ಗೌರವಾರ್ಪಣೆ ಮಾಡಲಿದ್ದಾರೆ, ನಾಲ್ಕನೆಯ ಕಸಪಾ ಸಮ್ಮೇಳನಾಧ್ಯಕ್ಷ ಲಿಂಗದೇವರು ಹಳೆಮನೆ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದು ಕನರ್ಾಟಕ ಜಾನಪದ ಪರಿಷತ್ ಡಾ.ಚಕ್ಕೆರೆ ಶಿವಶಂಕರ್ ಸಮಾರೋಪ ಭಾಷಣ ಮಾಡಲಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಾಲ್ಲೂಕಿನ ಗಣ್ಯರಾದ ಸಿ.ಎಸ್.ನಾರಾಯಣರಾವ್, ಸಿ.ಕೆ.ಪರುಶುರಾಮಯ್ಯ, ಪ್ರಭಾಕರ್, ಎಂ.ಬಸವಯ್ಯ, ಸಿ.ಎಂ.ಹೊಸೂರಪ್ಪ, ಡಾ.ಕೆ.ಆರ್.ಕಮಲೇಶ್, ಡಾ.ಸಿ.ಎಂ.ಸುರೇಶ್, ಸಿ.ಟಿ.ಮುದ್ದುಕುಮಾರ್, ಬಿ.ಎಸ್.ಲಿಂಗದೇವರು, ರಂಗಸ್ವಾಮಿ, ಸುಶೀಲಮ್ಮ, ಎಂ.ಮಹಾಲಿಂಗಯ್ಯ, ಎಂ.ಚಂದ್ರಶೇಖರ್ರವರಿಗೆ ಸನ್ಮಾನಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿಫಾತೀಮ, ಜಿ.ಹಾ.ಒಕ್ಕೂಟ ಶಿವನಂಜಪ್ಪ ಹಳೇಮನೆ, ಮೈನ್ಸ್ ಅಸೋಸಿಯೇಶನ್ ಎಸ್.ಎ.ನಭಿ, ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಮಾ.ಅ.ಪಿ.ಎಲ್.ಡಿ.ಬ್ಯಾಂಕ್ ಸಿ.ಎಲ್.ಜಯದೇವ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್, ಪತ್ರಕರ್ತ ಎಚ್.ಎನ್.ಮಲ್ಲೇಶ್, ಕಿರುತರೆಯ ನಟಿ ಹೇಮಾಶ್ರೀ ಉಪಸ್ಥಿತರಿರುವರು.

No comments:

Post a Comment