Monday, June 6, 2011









ಬಾಬಾ ರಾಮ್ದೇವ್ರವರ ಬಂಧನ ಖಂಡಿಸಿ ಪ್ರತಿಭಟನೆ ಚಿಕ್ಕನಾಯಕನಹಳ್ಳಿ,

ಜೂ.06: ಕೋಟ್ಯಾಂತರ ರೂಗಳನ್ನು ಸ್ವಿಸ್ಬ್ಯಾಂಕ್ನಲ್ಲಿಟ್ಟು ಸಕರ್ಾರಕ್ಕೆ ತೆರಿಗೆ ಕಟ್ಟದೆ ದೇಶದ ಸಂಪತ್ತನ್ನು ಲೂಟಿ ಹೊಡಯುತ್ತಿರುವವರ ಭ್ರಷ್ಠರ ವಿರುದ್ದ ಬಾಬಾ ರಾಮ್ದೇವ್ರವರು ಶಾಂತಿಯುತವಾಗಿ ಹೋರಾಟ ಮಾಡಿದರೆ ಸಕರ್ಾರ ಗೂಂಡಾ ಸಕರ್ಾರವಾಗಿ ತಿರುಗಿ ಗುರೂಜಿರವರನ್ನು ರಾತ್ರೋರಾತ್ರಿ ಬಂಧಿಸಿರುವುದು ಖಂಡನೀಯ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹೇಳಿದರು.ಪಟ್ಟಣದ ಎಸ್.ಬಿ.ಎಂ. ಬ್ಯಾಂಕ್ ಬಳಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ವತಿಯಿಂದ ಬಾಬಾ ರಾಮ್ದೇವರ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡಸಿದ ಸಂದರ್ಭದಲ್ಲಿ ಮಠಾಧೀಶರು, ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಮಾತನಾಡಿದ ಅವರು ಪ್ರತಿಭಟನೆ ನಡೆಯುತ್ತಿರುವುದು ಯಾವುದೇ ವ್ಯಕ್ತಿ ಅಥವಾ ರಾಜಕಾರಣಿಗಳ ವಿರುದ್ದವಲ್ಲ, ದೇಶದ ಸಂಪತ್ತನ್ನು, ದೇಶದಲ್ಲಿರುವ ಕೆಟ್ಟ ವ್ಯವಸ್ಥೆಯ ವಿರುದ್ದವಷ್ಟೇ ಎಂದ ಅವರು, ಸ್ವಿಸ್ ಬ್ಯಾಂಕ್ನಲ್ಲಿರುವ ಹಣವನ್ನು ತರಲು ಸಕರ್ಾರಕ್ಕೆ ಯಾವುದೇ ಕಾನೂನುಗಳಿಲ್ಲವಾದರೂ ಈ ರೀತಿಯ ವ್ಯವಸ್ಥೆಗೆ ಬೆಂಬಲಿಸುವುದಾದರೂ ಏಕೆ ಎಂದು ಪ್ರಶ್ನಿಸಿದರು. ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಮಾತನಾಡಿ ರಾಮ್ದೇವ್ ಗುರೂಜಿರವರ ಪ್ರತಿಭಟನೆಯು ನಮ್ಮ ಮುಂದಿನ ಯುವಪೀಳಿಗೆಯ ಭವಿಷ್ಯಕ್ಕಾಗಿದೆ, ಭ್ರಷ್ಠಾಚಾರದ ಮೂಲಕ ನಮ್ಮ ದೇಶದ ಸಂಪತ್ತನ್ನು ಕಾಣದೆ ಪರದೇಶದಲ್ಲಿ ಕಾಪಾಡುತ್ತಿವವರ ವಿರುದ್ದ ಬಾಬಾರವರು ಪ್ರತಿಭಟಿಸುತ್ತಿರುವುದು ಸಮಂಜಸವಾಗಿದೆ, ಆದರೆ ಪ್ರಾಮಾಣಿಕವಾಗಿ ಪ್ರತಿಭಟನೆಯ ಪರವಾಗಿ ಹೋರಾಡುತ್ತಿರುವ ಬಾಬಾರವರನ್ನು ಬಂಧಿಸಿರುವುದು ಅಪರಾಧವಾಗಿದೆ ಎಂದರು. ಗೋಡೆಕೆರೆ ಸಿದ್ದರಾಮದೇಶೀಕೇಂದ್ರಸ್ವಾಮಿ ಮಾತನಾಡಿ ಸಂಧಾನದ ಮೂಲಕವಾದರೂ ಅಥವಾ ಮಾಧ್ಯಮದ ಮೂಲಕವಾದರೂ ಪ್ರತಿಭಟನೆಯ ಬಗ್ಗೆ ಸಕರ್ಾರ ಮಾತನಾಡಬಹುದಿತ್ತು ಆದರೆ ಬಾಬಾರವರನ್ನು ಬಂಧಿಸಿರುವುದು ಖಂಡನೀಯ ಎಂದರು. ಮಾದೀಹಳ್ಳಿಯ ಮಲ್ಲಿಕಾಜರ್ುನಸ್ವಾಮಿ ಮಾತನಾಡಿ ಭ್ರಷ್ಠಾಚಾರದ ವಿರುದ್ದ ನಮ್ಮ ನಿಮ್ಮೆಲ್ಲರ ಪಾಲು ಮುಖ್ಯವಾಗಿದೆ ಎಂದರು. ಅಭಾವಿಪ ತಾಲ್ಲೂಕ್ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಭ್ರಷ್ಠಾಚಾರವನ್ನು ಕಿತ್ತೊಗೆಯಲು ಯೋಗಗುರು ಬಾಬಾರಾಮ್ದೇವ್ರವರು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿ ಅವರನ್ನು ಅಮಾನುಷವಾಗಿ ನಡೆಸಿಕೊಂಡಿರುವದು ಮತ್ತು ಅವರ ಬೆಂಬಲಿಗರ ಮೇಲೆ ಲಾಠಿ ಚಾಜರ್್ ಮಾಡಿರುವುದ ಅಕ್ಷಮ್ಯ ಅಪಾರಾದ ಎಂದರು. ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಜಾತಿ ವಿನಾಶವಾಗದಿದ್ದರೆ ಭ್ರಷ್ಠಾಚಾರ ವಿನಾಶವಾಗುವುದಿಲ್ಲ ಈ ಭ್ರಷ್ಠಾಚಾರದ ವಿರುದ್ದ ಹೋರಾಡುತ್ತಿರುವ ಬಾಬಾರಾಮ್ದೇವ್ ಮತ್ತು ಹಜಾರೆಅಣ್ಣರವರಂತೆ ಅನೇಕರು ಮುಂದೆ ಬರಬೇಕು ಎಂದ ಅವರು ಭ್ರಷ್ಠಾಚಾರದಿಂದ ಸ್ವಿಸ್ಬ್ಯಾಂಕ್ಗಳಲ್ಲಿ 500ಲಕ್ಷ ಕೋಟಿ ತೊಡಗಿಸಿರುವ ಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರಿಗೊ 1ಕೋಟಿಯಂತೆ ನೀಡದರೂ ಹೆಚ್ಚಾಗಿ ಉಳಿಯುತ್ತದೆ ಎಂದರುಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಅಭಾವಿಪ ಕಾಯಕರ್ತರಾದ ರವಿಕುಮಾರ್, ಮನು, ವಿಜಯ್, ರವಿ, ನಂದನ್ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

No comments:

Post a Comment