Tuesday, June 7, 2011



ಧಾಮರ್ಿಕ, ಆಧ್ಮ್ಯಾತಿಕತೆಯಲ್ಲಿ ಪ್ರಾಮಾಣಿಕತೆ ಇದ್ದರೆ ವಿಶ್ವಶಾಂತಿ :ರಂಭಾಪುರಿ ಶ್ರೀ ಚಿಕ್ಕನಾಯಕನಹಳ್ಳಿ,ಜೂ.07 : ಧಾಮರ್ಿಕ ಆಧ್ಮ್ಯಾತಿಕತೆಯು ಪ್ರಾಮಾಣಿಕವಾಗಿದ್ದರೆ ಧರ್ಮದ ನಿಲುವಿನಲ್ಲಿ ವಹಿಸುವ ಕಾರ್ಯಗಳಿಗೆ ಜಯ ದೊರಕಿ ವಿಶ್ವವು ಶಾಂತಿಯುತವಾಗಿರುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯಸ್ವಾಮಿ ಹೇಳಿದರು.ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಜಾಗೃತಿ ಧಾಮರ್ಿಕ ಸಮಾರಂಭದಲ್ಲಿ ಮಾತನಾಡಿದ ಅವರು ಸತ್ಯಪಾಲನೆ ಮತ್ತು ಅಹಿಂಸಾ ಪಾಲನೆಯಿಂದ ಅಸಾಧ್ಯವಾದುದನ್ನು ಸಾದಿಸಿ ಜಯ ಪಡೆಯಬಹುದು, ಸತ್ಯಪಾಲನೆಯನ್ನು ಬಿಟ್ಟು ಸಮಾಜದ ದಿಕ್ಕುಗಳನ್ನು ಬೇರೆ ರೀತಿಯಲ್ಲಿ ಬದಲಾಯಿಸುತ್ತಿರುವ ಸಮಾಜ ಕಂಟಕರು ಧರ್ಮಗಳ ಆದರ್ಶವನ್ನು ಬೀದಿಗೆ ಹಾಕುತ್ತಿದ್ದಾರೆ, ಸಜ್ಜನರರ ಪ್ರಾಮಾಣಿಕತೆ, ಸತ್ಯ, ಅಹಿಂಸೆಯ ದಾರಿಯನ್ನು ಪಾಲಿಸುವವರು ಇಂದು ಸಮಾಜದಲ್ಲಿ ಮುಂದೆ ಬರುತ್ತಿಲ್ಲ ಎಂದ ಅವರು ನಾಗರೀಕರು, ಹಿರಿಯರು ಕಟ್ಟಿ ಹೋಗಿರುವ ನುಡಿಮುತ್ತುಗಳನ್ನು ಪಾಲಿಸಿ ಆ ತತ್ವಗಳ ಮಾರ್ಗದರ್ಶನಕ್ಕೆ ಬಾಳಬೇಕು ಎಂದರು.ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಾದು ಹೋಗುವ ರಾಜ್ಯದ ಹೆದ್ದಾರಿಯ ಅಭಿವೃದ್ದಿಗೆ 234ಕೋಟಿ ರೂ ಸಕರ್ಾರದಿಂದ ಬಿಡುಗಡೆ ಮತ್ತು ಸಾಸಲು ಗ್ರಾಮದಲ್ಲಿರುವ ಬನಶಂಕರಿ ದೇವಾಲಯದ ನಿಮರ್ಾಣಕ್ಕೆ 5ಲಕ್ಷರೂಗಳನ್ನು ನೀಡಲಾಗುವುದು ಎಂದ ಅವರು ಗುಡಿಸಲು ವಾಸಿಗಳಿಗೆ ನಿವೇಶನ ನೀಡಿ, ಸೂರುಕಟ್ಟುವ ಕಾರ್ಯವನ್ನು ಪಕ್ಷಾತೀತವಾಗಿ ನಿರ್ವಹಿಸುವುದಾಗಿ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಕಳೆದ 3ದಶಕಗಳಿಂದಲೂ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಹೋರಾಟ ನಡೆಸುತ್ತಿದ್ದು, ಗಡಬನಕೆರೆ ಮೂಲಕ ಬೋರನಕಣಿವೆಗೆ, ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಮೂಲಕ ಹುಳಿಯಾರು, ದಬ್ಬೇಘಟ್ಟದಿಂದ ಮೇಲನಹಳ್ಳಿ ಕೆರೆಗೆ ನೀರು ಹರಿಸಲು 106ಕೋಟಿ ರೂ. ಅನುದಾನಕ್ಕೆ ಸಂಪುಟ ಸಚಿವ ಸಭೆಯಲ್ಲಿ ಅನುಮತಿ ದೊರೆಯಬೇಕಿದೆ, ಶುದ್ದ ಕುಡಿಯುವ ನೀರನ್ನು ಜನರಿಗೆ ಒದಗಿಸಲು ರಾಜ್ಯ ಸಕರ್ಾರ ಪ್ರಯತ್ನ ನಡೆಸಿದ್ದು ಈ ಕಾರ್ಯಕ್ಕಾಗಿ 850ಕೋಟಿ ರೂ. ಮಂಜೂರಾಗಿದೆ ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಗುರುವಿನ ಮೂಲಕ ದೇವರನ್ನು ಕಾಣಬೇಕು, ಅವರ ಮಾರ್ಗದರ್ಶನದಂತೆ ಸಮಾಜವನ್ನು ತಿದ್ದಬೇಕು ಎಂದ ಅವರು ಎಲ್ಲಾ ಜಾತಿಯ ಜನಾಂಗದವರು ಒಗ್ಗಟ್ಟಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಷಡಕ್ಷರಮಠದ ರುದ್ರಮುನಿಸ್ವಾಮೀಜಿ ಮಾತನಾಡಿ ಕಲುಷಿತಗೊಳ್ಳುತ್ತಿರುವ ಸಮಾಜವನ್ನು ತಿದ್ದಲು ಲೀನಗೊಳ್ಳದ ಮನಸ್ಸುಗಳು ಮುಖ್ಯವಾಹಿನಿಗೆ ಬರಬೇಕು ಎಂದರು. ಸಮಾರಂಭದಲ್ಲಿ ಡಾ.ಯತೀಶ್ವರಶಿವಚಾರ್ಯಸ್ವಾಮಿ, ಡಾ. ಅಭಿನವಮಲ್ಲಿಕಾಜರ್ುನಸ್ವಾಮಿ, ಮಲ್ಲಿಕಾಜರ್ುನಸ್ವಾಮಿ, ರೇವಣಸಿದ್ದೇಶ್ವರ ಶಿವಚಾರ್ಯಸ್ವಾಮಿ, ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಹಾ.ಒ.ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಬಿ.ಎನ್.ಶಿವಪ್ರಕಾಶ್, ಬಿ.ಎಸ್.ನಟರಾಜು ಉಪಸ್ಥಿತರಿದ್ದರು.

No comments:

Post a Comment