Monday, September 19, 2011





ಚಿಕ್ಕನಾಯಕನಹಳ್ಳಿ,ಸೆ.19 : ನಮ್ಮ ಮಕ್ಕಳು ದೇಶದ ಪ್ರಜೆಯಾದರೆ ಸಾಲದು, ದೇಶ ರಕ್ಷಿಸುವಂತಹ ದೇಶಪ್ರೇಮಿಗಳಾಗಬೇಕು ಎಂದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಹೇಳಿದರು.
ಪಟ್ಟಣದ ಕಾಳಮ್ಮನ ಗುಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಡಿ,ಎಂ.ಸಿ ಮತ್ತು ಸಿ, ಎ, ಸಿ ,ಸದಸ್ಯರಿಗೆ ಸನಿವಾಸ ಕಾರ್ಯಕ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಉತ್ತಮ ವಿದ್ಯಾಭ್ಯಾಸ ಕಲಿತು ದೇಶದ ರಕ್ಷಣೆಯಂತಹ ಕಾರ್ಯಗಳಲ್ಲಿ ಭಾಗವಹಿಸಿಬೇಕು, ಹಲವಾರು ಸಂಘ ಸಂಸ್ಥೆಗಳು ದೇಶಪ್ರೇಮದ ಬಗ್ಗೆ ಉತ್ತಮ ತರಬೇತಿ ನೀಡುತ್ತಿದ್ದು ಮಕ್ಕಳು ಇದರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಉತ್ತಮ ವಿದ್ಯಾಭ್ಯಾಸದ ಬಗ್ಗೆ ಜವಾಬ್ದಾರಿ ವಹಿಸಿ ದೇಶ ರಕ್ಷಣೆಗೆ ಪರೋಕ್ಷವಾಗಿ ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್ ಶಾಲೆಗೆ ಬರುವ ಮಕ್ಕಳು ನಮ್ಮ ಮಕ್ಕಳೆಂದು ಭಾವಿಸಿ ಅವರ ಭವಿಷ್ಯದ ಕಡೆ ಯೋಚಿಸಿ ಯಾವ ಮಗುವೂ ಶಾಲೆಗೆ ಗೈರುಹಾಜರಾಗದಂತೆ ನೋಡಿಕೊಂಡು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗುವಂತೆ ಪ್ರೋತ್ಸಾಹಿಸಬೇಕು. ಶಾಲಾ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ ಮಾಡಬೇಕು. ಶಾಲಾ ಮಕ್ಕಳ ಕಲಿಕೆ ಕುರಿತಂತೆ ಅಧ್ಯಾಪಕರೊಂದಿಗೆ ಚಚರ್ಿಸಿ ಉತ್ತಮಪಡಿಸಲು ಪ್ರಯತ್ನಿಸಬೇಕು ಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಶಿಕ್ಷಣ ಸಂಯೋಜಕ ಮರುಳಾನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಯ್ಯ ಮಾತನಾಡಿದರು.
ಸಮಾರಂಭದಲ್ಲಿ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿ, ಮು.ಶಿ ಶಂಕರಪ್ಪ ವಂದಿಸಿದರು.



ಚಿಕ್ಕನಾಯಕನಹಳ್ಳಿ,ಸೆ.19 : ಲಂಬಾಣಿ ಸಮಾಜದ ತಮ್ಮದೇ ಆದ ಗುರುಪರಂಪರೆ ಸಂಸ್ಕೃತಿ ಇದ್ದು ಸಮಾಜ ಅಭಿವೃದ್ದಿ ಹೊಂದಲು ಶಿಕ್ಷಣ, ಸಂಸ್ಕಾರ, ಸ್ವಾಭಿಮಾನದಿಂದ ಬಾಳಬೇಕಾಗಿದೆ ಎಂದು ಚಿತ್ರದುರ್ಗದ ಸೇವಾಲಾಲ್ ಮಠದ ಸರದಾರ್ ಸೇವಾಲಾಲ್ ಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ಆಲದಕಟ್ಟೆ ತಾಂಡ್ಯದ ನೂತನ ಸೇವಲಾಲ್ ಪರಿಶಿಷ್ಠ ಜಾತಿ(ಲಂಬಾಣಿ) ವಿವಿದ್ದೋದ್ದೇಶ ಸಹಕಾರ ಸಂಘದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಪಾಲಿಸುವುದು ಲಂಬಾಣಿ ಜನಾಂಗದಲ್ಲಿ ಹೆಚ್ಚು, ನಮ್ಮಲ್ಲಿ ವ್ಯವಸಾಯ ವೃತ್ತಿ ಮಾಡುವವರೇ ಹೆಚ್ಚು, ದುಡಿದ ಹಣವನ್ನು ದುಶ್ಚಟಗಳಿಗೆ ವ್ಯಯಮಾಡದೆ ಸ್ವಲ್ಪ ಹಣ ಉಳಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ ಎಂದರು. ಜನಾಂಗದ ಮಹಿಳೆಯರು ಸಂಸ್ಕೃತವಂತರಾಗಿ ಅಡುಗೆ ಜೊತೆಯಲ್ಲಿ ಸಮಾಜ ಸೇವೆ ಮಾಡುವಂತೆ ಸಲಹೆ ನೀಡಿದರು. ನಮ್ಮ ಜನಾಂಗದ ವಿದ್ಯಾವಂತರು ಹಾಗೂ ಸಕರ್ಾರಿ ನೌಕರರು ತಮ್ಮ ತಾಂಡ್ಯಗಳಿಗೆ ಭೇಟಿ ನೀಡಿ ಅನಕ್ಷರಸ್ಥರಿಗೆ ತಿಳುವಳಿಕೆ ನೀಡಲು ಸಲಹೆ ನೀಡಿದರು.
ಜಿ.ಪಂ.ಸದಸ್ಯ ಲೋಹಿತಾಬಾಯಿ ಮಾತನಾಡಿ ಸಹಕಾರ ಮನೋಭಾವವನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಂಡು ದ್ವೇಶ, ಅಸೂಹೆಗಳಿಂದ ದೂರವಿದ್ದರೆ ಮಾತ್ರ ಸಮಾಜ ಉದ್ದಾರವಾಗಲಿದೆ, ಇದಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ನಮ್ಮ ಜನಾಂಗವನ್ನು ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಅಲ್ಪಸ್ವಲ್ಪ ಆಮಿಶ ಒಡ್ಡಿ ಮತ ಪಡದು ಕೈಬಿಡುತ್ತಾರೆ ಎಂದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ,ಸಹಕಾರ ಸಂಘಗಳು ನಮ್ಮದು ಎನ್ನುವ ಭಾವನೆ ಬಂದಾಗ ಮಾತ್ರ ಸಂಘಗಳು ಉಳಿಯಲು ಸಾಧ್ಯ ಎಂದರಲ್ಲದೆ, ್ನ ತೆಗೆದುಕೊಂಡ ಸಾಲವನ್ನು ಸರಿಯಾಗಿ ಪಾವತಿಸಿ ಸಂಘದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸವುಂತೆ ತಿಳಿಸಿದರು.
ಸಮಾರಂಭದಲ್ಲಿ ಬಿ.ವೆಂಕಟೇಶ್ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್, ಕೈಗಾರಿಕೋದ್ಯಮಿ ಟಿ.ಜಿ.ತಿಮ್ಮಯ್ಯ, ಆಲದಕಟ್ಟೆ ಶ್ರೀರಂಗನಾಯಕ, ಮಾಜಿ ತಾ.ಪಂ.ಉಪಾಧ್ಯಕ್ಷ ಕಮಲಾನಾಯಕ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರುಗಳಾದ ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಗ್ರಾ.ಪಂ.ಸದಸ್ಯರಾದ ನಾಗರಾಜನಾಯ್ಕ, ರಂಗಮ್ಮ ವೆಂಕಟೇಶ್, ವಿನೋದಬಾಯಿ ರಾಜಾನಾಯಕ, ಕರಿಯಮ್ಮರಾಮಚಂದ್ರನಾಯಕ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಮಲಾನಾಯಕ ಸ್ವಾಗತಿಸಿದರು. ರಾಮಚಂದ್ರನಾಯಕ ನಿರೂಪಿಸಿದರು.


ರಾಜ್ಯ ವೀರಶೈವ ವೇದಿಕೆಯ ಸೆ.26ರಂದು ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಸೆ.19 : ವೀರಶೈವ ಸಮಾಜದ ಸಂಘಟನೆಯನ್ನು ಮನೆ ಮನೆ ಹಾಗೂ ಹಳ್ಳಿಗಳಿಂದ ಸಂಘಟನೆ ಮಾಡಲು ಕನರ್ಾಟಕ ರಾಜ್ಯ ವೀರಶೈವ ವೇದಿಕೆ ತೀಮರ್ಾನಿಸಿದೆ ಎಂದು ರಾಜ್ಯಧ್ಯಾಕ್ಷ ಶಿವಮಹದೇವಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಮಂಟಪ ಉಚಿತ ವಿದ್ಯಾಥರ್ಿನಿಲಯಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಬಡವಿದ್ಯಾಥರ್ಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗುವುದು, ಬಸವ ಜಯಂತಿ ಹಾಗೂ ಶರಣರ ಜಯಂತಿ ಸೇರಿದಂತೆ ಶಾಲಾ ಮಕ್ಕಳಿಗೆ ಚಚರ್ಾ ಸ್ಪಧರ್ೆ, ಪ್ರಭಂದ ಸ್ಪಧರ್ೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳನ್ನು ನಡೆಸಲಾಗುವುದು ಹಾಗೂ ಸ್ಮಧರ್ಾತ್ಮಕ ಪರೀಕ್ಷೆ, ಉದ್ಯೋಗಕ್ಕೆ ಸಲಹೆ, ಗಾಂಧೀ ಜಯಂತಿ, ಸ್ವತಂತ್ರ ದಿನಾಚಾರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುವುದು ಎಂದರು. ಈ ಸಂಘಟನೆಯ ರೂಪರೇಷೆ ಹಾಗೂ ಸಂಘದ ಸಂಘಟೆನಯ ಬಗ್ಗೆ ಚಚರ್ಿಸಲು ಇದೇ 26ರಂದು ಪಟ್ಟಣದ ಎಸ್.ಎಂ.ಎಸ್. ಶಾಲೆಯ ಆವರಣಲದಲ್ಲಿ ಬೆಳಗ್ಗೆ 10.30ಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿಯವರ ಸಾನಿಧ್ಯದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಗಂಗಾಧರ, ತೋಟರಾಧ್ಯ ಉಪಸ್ಥಿತರಿದ್ದರು.

No comments:

Post a Comment