Monday, September 19, 2011



ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯ ಧುರೀಣರೇ ಹಾಳುಮಾಡುತ್ತಿರುವುದು
ಚಿಕ್ಕನಾಯಕನಹಳ್ಳಿ,ಸೆ.18 : ನಮ್ಮ ಪ್ರಜಾಪ್ರಭುತ್ವದ ರಾಜಕೀಯದ ಧುರೀಣರು, ಜಾತಿ ಅಂಕುಶ, ಶ್ರೀಮಂತ ವರ್ಗಗಳ ಪ್ರಭಾವ ಹಾಗೂ ಆಮಿಷಗಳ ಅಂಕುಶಗಳಿಗೆ ಒಳಗಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾ ಇನ್ನೊಬ್ಬರ ಅಡಿಯಾಳಾಗಿ ಪ್ರಜಾಪ್ರಭುತ್ವದ ರಾಜಕಾರಣವನ್ನು ಹಾಳುಮಾಡುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆ ತರುತ್ತಿದಾರೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಹೇಳಿದರು.
ಪಟ್ಟಣದಲ್ಲಿ ನಡದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ಪ್ರಾಬಲ್ಯಕ್ಕಾಗಿ ಬದುಕಿನ ಅಸ್ಥಿರತೆ, ಅಶಾಂತಿ, ಗೊಂದಲಗಳು ಸ್ಥಷ್ಠಿಗೊಂಡು ನಿರುದ್ಯೋಗ, ಮತಧರ್ಮ ಸಂಸ್ಥೆಗಳ ದುರ್ಬಳಕೆ, ಶಿಕ್ಷಣದ ವೈರುಧ್ಯಗಳು, ವ್ಯಕ್ತಿ ಸಮಾಜದ ಮುಖಾಮುಖಿಯು ಮಾನವೀಯ ಸಂಬಂಧಗಳ ಅರ್ಥಹೀನತೆ ದಾರಿ ಕಾಣುತ್ತದೆ. ರಾಜಕೀಯ ಧುರೀಣರು ಕ್ರಿಯಾಶೀಲತೆಯನ್ನು ಪ್ರಕಟಗೊಳಿಸಿ ಸರಕಾರ ಮತ್ತು ಸಮುದಾಯ ಮಟ್ಟದಲ್ಲಿ ಮುಂದಾಲೋಚನೆಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಪ್ರಯತ್ನ ಮಾಡಬೇಕಾಗಿದೆ. ನಿರಪೇಕ್ಷ ಸೇವೆ ಮತ್ತು ಪ್ರೀತಿಯು ಬಾಳಿನಲ್ಲಿ ಮಿಂಚಿನಂತೆ, ಹೊಳೆದಾಗಲೇ ಸಾಹಿತ್ಯ ಸಂಕೀರ್ಣ ಶುರುವಾಗಿ ಜಗತ್ತಿನ ವೈರುಧ್ಯಗಳ ಸಂಘರ್ಷವನ್ನು ಬಿಂಬಿಸಿ ಬದುಕಿನ ಆಶಯವನ್ನು ಕಟ್ಟಿಕೊಡಲು ಪ್ರಾರಂಭಿಸುತ್ತದೆ. ಈಗೆ ಬದುಕು ಸಮುದಾಯಗಳ ಬಿನ್ನಭಿಪ್ರಾಯವಿದ್ದರೂ ವಿರೋಧದಿಂದ ಕೂಡಿರದೆ ಪ್ರಾಕೃತಿಕ ಸಂಪನ್ಮೂಲ ವಿತರಣೆ, ರಕ್ಷಣೆ ಮೊದಲಾದವನ್ನು ಎಲ್ಲರ ಅಭ್ಯುದಯಕ್ಕೆ, ಸುಖಕ್ಕೆ ಬಳಕೆ ಮಾಡುವ ಚಿಂತನೆ ಹಾಗೂ ಕ್ರಿಯೆಯಲ್ಲಿ ತೊಡಗುವ ಆಲೋಚನೆಯೇ ಆಗಿರುತ್ತದೆ, ಹೀಗೆ ಜೀವನವನ್ನು ಹಲವು ಮಗ್ಗಲುಗಳಿಂದ ಕಂಡು, ಅನುಭವದ ದ್ರವ್ಯದಲ್ಲಿ ಅದ್ದಿ ಸಾಹಿತ್ಯ ಸೃಷ್ಠಿ ಮಾಡಬೇಕಾಗುತ್ತದೆ, ಈ ರೀತಿಯ ಸತ್ವಯುತ ಬರಹದಲ್ಲಿಯೇ ಸಾಹಿತಿ ಬದುಕನ್ನು ಬಿಂಬಿಸುವ ಕಾರ್ಯದಲ್ಲಿ ತೊಡಗುತ್ತಾ ಜೀವನ ಕಳೆಯುತ್ತಾನೆ ಎಂದ ಅವರು ಗ್ರಾಮೀಣ ಸೊಗಡಿನ ಜಾನಪದ, ಪಟ್ಟಣಗಳ ಶಿಷ್ಟ ಮಾತು ಹಾಗೂ ಸಂಸ್ಕೃತದ ಒಡನಟ ಹಾಗೂ ಪ್ರಭಾವ ಹಳಗನ್ನಡದ ಸಿರಿನುಡಿ, ಹೊಸಗನ್ನಡದ ಚೆಲುವು, ಕನ್ನಡ ಭಾಷೆಯಲ್ಲಿ ನುಡಿ ಸಂವಹನ ಹಾಗೂ ಬರಹ ಸಂವಹನ ಸೂಕ್ತ ರೀತಿಯಲ್ಲಿ ಸಜ್ಜುಗೊಳಿಸಿದ್ದು ಅದೇ ರೀತಿಯಲ್ಲಿ ನಮ್ಮ ಚಿಂತನಾ ಕ್ರಮ ಮತ್ತು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವ ಬಗೆಯೂ ಹೊಸತನ ಕಂಡುಕೊಂಡಿದೆ. ತಾಲ್ಲೂಕಿನಲ್ಲಿ ಕೈಮಗ್ಗ ನೇಕಾರಿಕೆ ಹಾಗೂ ಉಣ್ಣೆ ಕಂಬಳಿಯ ಉದ್ಯಮದ ಪ್ರಾಧನ್ಯತೆಯು ನಿರುದ್ಯೋಗ ಪ್ರಪಾತದಲ್ಲಿ ಸಿಲುಕಿ ನೇಕಾರಿಕೆ ಹಾಗೂ ಕಂಬಳಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಇದರಿಂದ ಆಥರ್ಿಕ ಪರಿಸ್ಥಿತಿಯನ್ನು ತಂದುಕೊಡಲು ಸಾಧ್ಯವಾಗದೆ ರಾಜಕಾರಣ ಮಾತ್ರ ಪಲ್ಲವದ ಚೈತ್ರದಂತೆ ಜನಮನವನ್ನು ಸಂಪೂರ್ಣ ತಟ್ಟಿದೆ ಎಂದರು.
ತಾಲ್ಲೂಕಿನ ಗಣಿ ಉದ್ಯಮ ಎರಡು ದಶಕಗಳಿಗೂ ಹೆಚ್ಚು ಕಾಲ ಇಲ್ಲಿನ ಗುಡ್ಡಗಳನ್ನು ಕಬಳಿಸಿ ಭೂ ಸಂಪತ್ತನ್ನು ಬರಿದುಮಾಡುವ ಮಟ್ಟಕ್ಕೂ ನಡೆದಿದೆ, ಗಣಿಗಾರಿಕೆಯ ಕಾರಣದಿಂದ ಉತ್ತಮ ರಸ್ತೆ ಮಾಡಲ್ಪಟ್ಟರೂ, ಧೂಳಿನ ಪರಿಸರ ಊರಿನ ಜನತೆಗೆ ದುಷ್ಪರಿಣಾಮವನ್ನು ಉಂಟುಮಾಡಿ ತಾಲ್ಲೂಕಿನ ನೈಸಗರ್ಿಕ ಸಂಪತ್ತನ್ನು ಹಾಳುಮಾಡುತ್ತಿದ್ದು ಪ್ರಜ್ಞಾವಂತರಾದ ಎಲ್ಲಾ ರಂಗದ ಧುರೀಣರು ಒಗ್ಗೂಡಿ ಗಣಿಗಾರಿಕೆಯ ಉತ್ಪನ್ನವನ್ನು ಸೂಕ್ತ ವಹಿವಾಟಿನ ಮೂಲಕ ಮಾರಾಟ ಯೋಜನೆಗೆ ಸೀಮಿತಗೊಳಿಸಲು ಸರಕಾರಕ್ಕೆ ನೆರವಾಗಬೇಕು ಎಂದರು.

ಚಿಕ್ಕನಾಯಕನಹಳ್ಳಿ, ಅನುಭವದ ಅಭಿವ್ಯಕ್ತಿಯೇ ಸಾಹಿತ್ಯವಾಗಿದ್ದು, ಸಾಹಿತ್ಯ ಎನ್ನುವುದು ಅನುಭವದ ಸಾರ ಆಗಿರಬೇಕು ಎಂದು ನಾಡಿನ ಪ್ರಸಿದ್ದ ಕವಿ ಡಾ.ಸಾ.ಶಿ.ಮರುಳಯ್ಯ ನುಡಿದರು.
ಅವರು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿನ ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿನ ಅನುಭವವು ಸಾಹಿತ್ಯ ರಚಿಸುವ ಅಂಶ ಒಳಗೊಂಡಿದೆ, ಪ್ರತಿಯೊಬ್ಬರ ಅನುಭವದ ಬಗ್ಗೆ ಕುರಿತು ರಚಿಸುವವ ಸಾಹಿತ್ಯವು ಇನ್ನೊಬ್ಬರಿಗೆ ಆನಂದವನ್ನುಂಟು ಮಾಡುತ್ತದೆ. ಸಾಹಿತ್ಯವು ಸರ್ವರ ಸ್ವತ್ತಾಗಬೇಕಾಗಿದೆಯೇ ಹೊರತು ಯಾರೊಬ್ಬರ ಸ್ವತ್ತಾಗಬಾರದು ಎಂದರು. ಸ್ತ್ರೀಯರು ಸಾಹಿತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಉನ್ನತ ಸಾಧನೆ ಮಾಡುತ್ತಲೇ ಬಂದಿದ್ದಾರೆ ಅವರಿಗೆ ಈಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುವವರಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ ಅಂತಹವರಿಗೆ ಸಾಹಿತ್ಯ ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದ ಅವರು ನಮ್ಮ ಹೊಟ್ಟೆಯ ಮುಂದೆ ಯಾವ ಫಿಲಾಸಪಿಯೂ ಫಲ ಕೊಡುವುದಿಲ್ಲ, ಆದ್ದರಿಂದ ನಮ್ಮ ಹೊಟ್ಟೆಗೆ ಅನ್ನ ಕೊಡುವ ಕೃಷಿಕರನ್ನು ನೆನೆಯಬೇಕಿದೆ ಅವರ ಬಗ್ಗೆ ಮಾತನಾಡಬೇಕಿದೆ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಬಿಟ್ಟು ವಲಸೆ ಹೋಗುತ್ತಿದ್ದಾರೆ ನಿರುದ್ಯೋಗ ಸಮಸ್ಯೆಯೂ ಸ್ಥಷ್ಠಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕ.ಪು. ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಇಂದು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಪರಿಷತ್ತಿನ ಪಧಾಧಿಕಾರಿಳಿಗೆ ಮಾತ್ರ ಸೀಮಿತವಾಗಿರಬಾರದು ಅದು ಪ್ರತಿಯೊಬ್ಬ ಕನ್ನಡಿಗರೂ ಮುಂದೆ ಬಂದು ಸಾಹಿತ್ಯ ಚಟುವಟಿಕೆಗಳಿಗೆ ಮುಂದಾಗಿ ಕನ್ನಡ ಸಾಹಿತ್ಯವನ್ನು ಉಳಿಸವಂತಾಗುವುದು ಎಂದ ಅವರು ಈಗಿನ ಜಾಗತಿಕ ವೇದಿಕೆಯಲ್ಲಿ ಸಂಸ್ಕೃತಿಯನ್ನು ಯುವಕರೇ ಹಾಳುಮಾಡುತ್ತಿದ್ದಾರೆ, ಕಲಿಯಬಾರದ ವ್ಯಸನಗಳನ್ನೆಲ್ಲಾ ಕಲಿತು ತಮ್ಮ ತಮ್ಮ ಹಳ್ಳಿಗಳನ್ನು ಬಿಟ್ಟು ದೂರದ ಊರುಗಳಿಗೆ ಗುಳೇ ಹೋಗುತ್ತಾ ಅಲ್ಲಿನ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ಸಾಹಿತ್ಯ ಸಂಸ್ಕೃತಿಳನ್ನು ಮರೆಯುತ್ತಿದ್ದಾರೆ, ಇದರಿಂದಲೇ ಸಾಹಿತ್ಯವು ಈಗಿನ ಯುವಕರಲ್ಲಿ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಉಳಿದುಕೊಂಡಿದ್ದ ಕನ್ನಡ ಭಾಷೆಯು ಕಾನ್ವೆಂಟ್ ಶಾಲೆಗಳಿಂದ ಆಂಗ್ಲ ಭಾಷೆಗೆ ಮಾರುಹೋಗಿ ಕನ್ನಡ ಸಂಸ್ಕೃತಿ ನಾಶವಾಗುತ್ತಿದೆ, ಇದರಿಂದ ಸಾಹಿತ್ಯಾಸಕ್ತಿಯು ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಪೂರ್ಣಕುಂಭ, ದೊಳ್ಳುಕುಣಿತ, ನಾಸಿಕ್ಡೋಲ, ನಂದಿಧ್ವಜ, ಸೋಮನಕುಣಿತ, ತಮಟೆವಾಧ್ಯ, ಸೇರಿದಂತೆ ಅನೇಕ ಜನಪದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳಾದ ಲೋಹಿತಾಬಾಯಿ, ಸಿ.ಎಸ್.ನಟರಾಜು, ಸಿ.ಎಲ್.ದೊಡ್ಡಯ್ಯ, ಸಿ.ಟಿ.ಗುರುಮೂತರ್ಿ, ಸಿ.ಬಿ.ರೇಣುಕಸ್ವಾಮಿ, ಸೀಮೆಎಣ್ಣೆಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಎಂ.ಎನ್.ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಇ.ಒ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಪತ್ರಕರ್ತರಾದ ಜಿ.ಇಂದ್ರಕುಮಾರ್, ಚಿ.ನಿ,ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹಲವರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಉಪನ್ಯಾಸಕ ಕಣ್ಣಯ್ಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಇನ್ನರ್ವೀಲ್ ಕ್ಲಬ್ ಸದಸ್ಯರು ಕ್ನನಡಗೀತೆ ಹಾಡಿದರು. ಅಣ್ಣಪ್ಪರಾವ್ ವಂದಿಸಿದರು. ವೀಣಾಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿದರು.


No comments:

Post a Comment