Friday, May 24, 2013


(ಸಿ.ಗುರುಮೂತರ್ಿ ಕೊಟಿಗೆಮನೆ)
ಮುತ್ಸದ್ದಿ ರಾಜಕಾರಣಿ   ಜೆ.ಸಿ.ಮಾಧುಸ್ವಾಮಿ ನಿವೃತ್ತರಾಗುತ್ತಾರೆಯೇ. . . . . ?!


ಚಿಕ್ಕನಾಯಕನಹಳ್ಳಿ,ಮೇ.22: ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಕೆ.ಎಂ.ಎಫ್ ಅಧ್ಯಕ್ಷರಾಗಿ, ಜೆ.ಡಿ.ಯು.ನಿಂದ  ಸದನದ ನಾಯಕರಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ, ಸದನ ಶೂರ ಎನಿಸಿಕೊಂಡಿದ್ದ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಕೆ.ಜೆ.ಪಿ. ಪಕ್ಷದಿಂದ ಸೋಲುಂಡ ಮುತ್ಸದ್ದಿ ರಾಜಕಾರಣಿ ಜೆ.ಸಿ.ಮಾಧುಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡುತ್ತಿರುವುದು  ಕ್ಷೇತ್ರದ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚಚರ್ೆಯಾಗುತ್ತಿದೆ.
ಈ ರೀತಿಯ ಚಚರ್ೆಯನ್ನು ಆರಂಭಿಸಿರುವವರು ಸ್ವತಃ ಜೆ.ಸಿ.ಮಾಧುಸ್ವಾಮಿಯವರೇ, ತಮ್ಮ ಬಳಿ ಬರುವ ತಮ್ಮ ಅಭಿಮಾನಿಗಳ ಬಳಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸುತ್ತಿರುವುದು ಗುಟ್ಟಾಗಿ ಉಳಿದಿರುವ ವಿಷಯವಲ್ಲ. ಅವರ  ಈಗಲೂ ಯಾರೇ ಕೆಲಸ ಕೇಳಿಕೊಂಡು ಹೋದವರಿಗೆ ರಾಜಕೀಯದಿಂದ ದೂರ ಉಳಿಯಬೇಕೆಂದಿದ್ದೇನೆ ಯಾಕೆ ನಮ್ಮ ಬಳಿ ಬರುತ್ತೀರ ಎನ್ನುತ್ತಲೇ ಬಂದವರ ಕೆಲಸದ ಬಗ್ಗೆ  ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿ ಕೆಲಸ ಮಾಡಿಸುತ್ತಾರೆ. ಅಭಿಮಾನಿಗಳು, ಕಾರ್ಯಕರ್ತರು ಮುಂದೆ ಏನು ಮಾಡುವುದು ಎಂದು ಕೇಳಿದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂಬ ಮಾತುಗಳಾಡುತ್ತಾರೆ ಎಂದು ಅವರ ಆಪ್ತರು ಹೇಳುತ್ತಾರೆ.
ಕಳೆದ ಎರಡು ಬಾರಿಯಿಂದ ಸೋಲು ಅನುಭವಿಸಿರುವ ನೇರ ನಿಷ್ಠುರ ಮಾತುಗಾರ ಜೆ.ಸಿ.ಎಂ. ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆಯೂ ಅಷ್ಟೇ ದಿಟ್ಟವಾಗಿ ನೇರವಾಗಿ ಮಾತನಾಡುತ್ತಿದ್ದಾರೆ ಎಂಬುದು ಅವರ ಆಪ್ತರ ಅಭಿಪ್ರಾಯ. ಈ ಬಾರಿಯ ಚುನಾವಣೆಯಲ್ಲಿ ಗೆದ್ದೇತೀರಬೇಕೆಂದು ತಂತ್ರಗಾರಿಕೆಯ ಜೊತಗೆ ಎಲ್ಲಾ ರೀತಿಯಲ್ಲೂ ಬಹಳಷ್ಟು ಶ್ರಮ ಹಾಕಿದ್ದ ಜೆ.ಸಿ.ಎಂ. ತಮ್ಮ ಸೋಲಿನಿಂದ ವಿಚಲಿತರಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ರಾಜಕೀಯ ನಡೆಯ ಬಗ್ಗೆಯೂ ಅಸ್ಪಷ್ಟ ಚಿತ್ರಣದಿಂದಾಗಿ ಗೊಂದಲಕ್ಕೀಡಾಗಿದ್ದಾರೆ.
ಹಿನ್ನೆಡೆಗೆ ಕಾರಣಗಳೇನು...?: ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಪುನರ್ ವಿಂಗಡಣೆಯಿಂದ ಇವರ ಓಟ್ ಬ್ಯಾಂಕ್ ಬದಲಾಗಿರುವುದಷ್ಟೇ ಅಲ್ಲ, ಯಾವ ಪಕ್ಷದ ಚಿಹ್ನೆ ಅಡಿಯಲ್ಲಿ ನಿಲ್ಲಬೇಕೆಂಬ ಗೊಂದಲದಿಂದ  ಶುರುವಾದ ಇವರ ಚುನಾವಣಾ ಪರ್ವ ಕೆ.ಜೆ.ಪಿ.ಗೆ ಸೇರುವ ವರೆಗೆ ಅನಿಶ್ಚಿತವಾಗಿಯೇ ನಡೆಯಿತು. ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ಸೇರಬೇಕೊ ಅಥವಾ ಕೆ.ಜೆ.ಪಿ.ಗೆ ಸೇರಬೇಕೊ ಎಂಬ ಗೊಂದಲವೇ ಇವರನ್ನು ಬಹಳಷ್ಟು ತಿಂಗಳು ಕಾಡಿತು, ಈ ಮಧ್ಯೆ ಜೆ.ಸಿ.ಎಂ. ಕೆ.ಜೆ.ಪಿ.ಸೇರದಿದ್ದರೆ ಆ ಪಕ್ಷದಿಂದ ಮತ್ತೊಬ್ಬ ಲಿಂಗಾಯಿತ ಹೊಸ ಅಭ್ಯಾಥರ್ಿ ಹುಟ್ಟುವ ಲಕ್ಷಣಗಳು ಕಂಡಿದ್ದರಿಂದ ಹಾಗೂ 2008ರ ಚುನಾವಣೆಯಲ್ಲಿ ತನ್ನ ಸೋಲಿಗೆ ಯಡಿಯೂರಪ್ಪನವರ ಅಲೆಯೇ ಕಾರಣ ಎಂಬ ಅಭಿಪ್ರಾಯವಿದದ್ದರಿಂದ ಕೊನೆಗೆ ಕೆ.ಜೆ.ಪಿ.ಗೆ ಸೇರ್ಪಡೆಗೊಂಡು ಆ ಪಕ್ಷದಿಂದ ಸ್ಪಧರ್ಿಸಿದ್ದರು.
ಚುನಾವಣೆ ಇನ್ನೂ ಆರು ತಿಂಗಳು ಇರುವಾಗಲೇ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಅಲ್ಲಿ ಅವರ ಕಾರ್ಯಕರ್ತರು, ಅಭಿಮಾನಿಗಳನ್ನೆಲ್ಲಾ ಭೇಟಿ ಮಾಡಿ ತಮ್ಮ ಮುಂದಿನ ಆಲೋಚನೆಗಳನ್ನೇಲ್ಲಾ ಹಂಚಿಕೊಂಡು ತಮ್ಮ ಪರವಾದ ಪಡೆಯನ್ನೇ ಕಟ್ಟುತ್ತಿದ್ದರು.  ಹುಳಿಯಾರು, ಬುಕ್ಕಾಪಟ್ಟಣ ಹೋಬಳಿಗಳಿಗೂ ಅಷ್ಟೇ ಮಹತ್ವವನ್ನು ಕೊಟ್ಟಿದ್ದರೂ, ಇಷ್ಟೆಲ್ಲಾ ಪ್ರಯತ್ನ ಪಟ್ಟರು ಹೀಗಾಯಿತಲ್ಲಾವೆಂಬುದು ಒಂದಡೆಯಾದರೆ, ಮುಂದೇನು ಎಂಬ ವಿಚಾರ ಅವರನ್ನು ಸಾಕಷ್ಟು ಚಿಂತನೆಗೆ ಈಡುಮಾಡಿದೆ.
ಮುಂದಿನ ಅವಕಾಶಗಳು: ಇನ್ನೂ ಒಂದುವರ್ಷವಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದ ಕಸರತ್ತು ಶುರು ಮಾಡುತ್ತಾರೆಂಬ ಒಂದು ಲಹರಿ ಇದೆ, ತುಮಕೂರು ಎಂ.ಪಿ.ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪಧರ್ಿಸುವ ಈರಾದೆ ಇದೆ, ಆದರೆ ಅಲ್ಲಿಗಾಗಲೇ ಈಗಿರುವ ಎಂ.ಪಿ.ಯವರು ಕಾಂಗ್ರೆಸ್ಗೆ ಹೋಗುತ್ತಾರೆ, ಆ ಪಕ್ಷದಿಂದ ಸ್ಪಧರ್ಿಸುತ್ತಾರೆ ಎಂಬು ಕೂಗು ಕೇಳಿಬರುತ್ತಿರುವುದು ಇವರ ದಾರಿಗೆ ತೊಂದರೆಯಾಗಿದೆ. 
ಇನ್ನೂ ಕ್ಷೇತ್ರ ಬದಲಾಯಿಸುವ ಬಗ್ಗೆ ಯೋಚಿಸುವ ಆಲೋಚನೆಯ ಬಗ್ಗೆ ವಿಚಾರ ಬಂದರೂ ಕಳೆದ ಬಾರಿ ಸೋತ ಸಂದರ್ಭದಲ್ಲೇ ಅವರು ಒಂದು ಮಾತು ಹೇಳಿದ್ದರು, ಏನೇ ಆದರೂ ಸೋತ ಕ್ಷೇತ್ರದಲ್ಲಿ ಗೆದ್ದನಂತರವೇ  ಬದಲಾವಣೆಯ ಆಲೋಚನೆಯೇ ಹೊರತು ಅಲ್ಲಿಯವರೆಗೆ ನಾನು ಕ್ಷೇತ್ರ ಬದಲಾವಣೆಯ ಮಾತನಾಡುವುದಿಲ್ಲವೆಂದಿದ್ದರು. ಹಾಗಾಗಿ ಈ ಅವಕಾಶಗಳೂ ಕಡಿಮೆ ಈ ಎಲ್ಲಾ ಲೆಕ್ಕಾಚಾರಗಳ ತಾಳೆ ನೋಡಿದರೆ, ಅವರು ರಾಜಕೀಯ ನಿವೃತ್ತಿಯ ಮಾತನಾಡುತ್ತಿರುವುದು ಸಹಜವೇ ಎನಿಸುತ್ತಿದೆ ಆದರೆ ಅವರು ಮಾತ್ರ ಅಧಿಕೃತವಾಗಿ ಏನನ್ನು ಹೇಳಿಲ್ಲಾ, ಎಲ್ಲವನ್ನು ಕಾದು ನೋಡುವ ತಂತ್ರದ ಜೊತೆಗೆ ಮುಂದಿನ ಅವಕಾಶಗಳ ತೆರೆದಿಟ್ಟುಕೊಂಡಿದ್ದಾರೆ.
ರಾಜಕೀಯ ವಲಯದಲ್ಲಿನ ಅಭಿಪ್ರಾಯಗಳು: ಇನ್ನೂ ಅವರ ರಾಜಕೀಯ ವಲಯದಲ್ಲಿ ಗುತರ್ಿಸಿಕೊಂಡವರ ಪ್ರಕಾರ, ಅವರು ಮಾತುಗಳು ಬಹಳ ಮಾಮರ್ಿಕವಾಗಿರುತ್ತವೆ, ಅದನ್ನು ಹೇಗೆ ಸ್ವೀಕರಿಸಬೇಕೆಂಬುದು ಇಷ್ಟು ಹತ್ತಿರದಲ್ಲಿರುವ ನಮಗೆ ತಿಳಿದಿರುವುದಿಲ್ಲ, ಅವರ ಪ್ರತಿ ನಡೆಯೂ ಒಂದು ರೀತಿ ನಿಗೂಢ, ಏನೇ ಆಗಲಿ ಅಂತಹ ಮುತ್ಸದ್ದಿ ರಾಜಕಾರಣಿಯೊಬ್ಬರು ಸೋಲು ಗೆಲವನ್ನು ಸಮಾನವಾಗಿ ತೆಗೆದುಕೊಳ್ಳಬೇಕು, ಆಟಕ್ಕೆ ಬಂದವರೆಲ್ಲಾ ಗೆಲ್ಲಲಾಗುವುದಿಲ್ಲ ಹಾಗಂತ ರಾಜಕೀಯ ನಿವೃತ್ತಿಯಂತಹ  ನಿಧರ್ಾರ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ಅವರ ಅಭಿಮಾನಿ ಧನಂಜಯ.
ಇನ್ನೂ ಮಾಧುಸ್ವಾಮಿಯವರು ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು, ಬಿರುನುಡಿಗಳನ್ನು ಬಿಡಬೇಕು, ಬಡವರ, ದೀನ ದಲಿತರ ಬಗ್ಗೆ  ಮೃದುಧೋರಣೆ ಇರಬೇಕು, ಯಾವ ರಾಜಕಾರಣಿಯೂ ಸತ್ಯಸಂದನಲ್ಲ ಕೆಲವೊಂದನ್ನಾದರೂ ಅನುಸರಿಸಿಕೊಂಡು ಹೋಗುವ ಗುಣ ಬೆಳಸಿಕೊಳ್ಳಬೇಕು ಜನ ಸಾಮಾನ್ಯರೊಂದಿಗೆ ಬೆರಯುವ ಗುಣ ಬೆಳಸಿಕೊಂಡರೆ ಭರವಸೆಯ ನಾಯಕರಾಗಬಲ್ಲ  ಎಂದು ಹೇಳುತ್ತಲೇ ಆಕಾಶದ ಕಡೆ ಮುಗ ಮಾಡುತ್ತಾನೆ ಹೆಸರು ಬಹಿರಂಗ ಪಡಿಸಲಿಚ್ಚಸದ ಅವರ ನಿಕಟವತರ್ಿ. 

 ಜನರ ಪ್ರೀತಿ,ವಿಶ್ವಾಸದ ಜೊತೆಗೆ ಕ್ಷೇತ್ರದ ಅಭಿವೃದ್ದಿಯೇ ನನ್ನ ಆದ್ಯತೆ: ಶಾಸಕ ಸಿ.ಬಿ.ಸುರೇಶ್ಬಾಬು

ಚಿಕ್ಕನಾಯಕನಹಳ್ಳಿ,ಮೇ.23 : ಕ್ಷೇತ್ರದ ಎಲ್ಲಾ ವರ್ಗದ ಜನತೆಯ ಆಶೀವರ್ಾದದಿಂದ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು ನನ್ನ 42ವರ್ಷ ಜೀವನದಲ್ಲಿ ಐದು ಬಾರಿ ಚುನಾವಣೆ ಎದುರಿಸಿ 3ಬಾರಿ ಗೆಲುವು ಹಾಗೂ 2ಬಾರಿ ಸೋಲನ್ನು ಕಂಡಿರುವೆ, ಶಾಸಕನಾಗಿ ಅಧಿಕಾರವಿದೆ ಎಂದು ನಾನೂ ಎಂದಿಗೂ ದರ್ಪದಿಂದ ವತರ್ಿಸದೆ ಜನರ ಪ್ರೀತಿ, ವಿಶ್ವಾಸಗಳಿಸಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗಿರುವೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಅಧಿಕಾರಾವಧಿಯಲ್ಲಿ ತಾಲ್ಲೂಕಿನಲ್ಲಿ ಒಂದು ಸುಸಜ್ಜಿತವಾದ ತೀ.ನಂ.ಶ್ರೀ ಭವನ ನಿಮರ್ಾಣ, ಹೇಮಾವತಿ ಕುಡಿಯುವ ನೀರನ್ನು ತಾಲ್ಲೂಕಿನ ಜನತೆಗೆ ಸಿಗುವಂತೆ ಮಾಡುವುದು, ತಾಲ್ಲೂಕಿನಲ್ಲಿ ವಿದ್ಯಾಥರ್ಿಗಳಿಗಾಗಿ ಒಂದು ಸಕರ್ಾರಿ ಅಥವಾ ಖಾಸಗಿ ಪಾಲಿಟೆಕ್ನಿಕ್ ಕಾಲೇಜು ತರುವುದಾಗಿ ತಿಳಸಿದರು.
ತಾಲ್ಲೂಕಿನಲ್ಲಿ ಆರಂಭಿಸಲು ಉದ್ದೇಶಿಸಿರುವ  ಗಾಮರ್ೆಂಟ್ಸ್ಗೆ ಈಗಾಗಲೇ ನಾಲ್ಕೈದು ಪ್ರತಿಷ್ಠಿತ ಗಾಮರ್ೆಂಟ್ಸ್ ಕಂಪನಿಗಳಲ್ಲಿ ಚಚರ್ಿಸಿದ್ದು ಅವರು ತಾಲ್ಲೂಕಿನಲ್ಲಿ ಗಾಮರ್ೆಂಟ್ಸ್ ಆರಂಭಿಸಲು ಮುಂದಾಗಿದ್ದಾರೆ ಎಂದರಲ್ಲದೆ, ಈ ಮೂಲಕ ತಾಲ್ಲೂಕಿನ ನಿರುದ್ಯೋಗ ಯುವಕ, ಯುವತಿಯರು ಗುಳೇ ಹೋಗದೇ ತಮ್ಮ ಸ್ಥಳದಲ್ಲೇ ಉತ್ತಮ ಸಂಬಳ ಪಡೆದು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಈ ಕಾರ್ಯಕ್ಕೆ ಎಲ್ಲಾ ಸಂಘ-ಸಂಸ್ಥೆಗಳ ನೆರವು ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದರಲ್ಲದೆ ಜನತೆಯಲ್ಲಿ ಮನೆ ಮಾಡಿರುವ ಜಾತಿ ವ್ಯವಸ್ಥೆ ಹಾಗೂ ಭೇದ-ಭಾವ ತೊಲಗಿಸಲು ಕರೆ ನೀಡಿದರು.
ಸಾರ್ವಜನಿಕ ಸೇವೆಗೆ ಹೆಚ್ಚಿನ ಒತ್ತು ನೀಡಿ ಅವರ ಅಭಿವೃದ್ದಿ ಮೂಲಕ ತಮ್ಮ ಸಂಸ್ಥೆಯ ಏಳಿಗೆಯನ್ನು ಕಾಣುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ಸಂಸ್ಥೆಯ ಶಿಸ್ತಿನ ಆದರ್ಶದ ಸೇವೆ ಇನ್ನಷ್ಟು ಹೆಚ್ಚಲಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆಶಿಸಿದರು.
ರೋಟರಿಯ ಜಿಲ್ಲಾ 3190ರ ಗವರ್ನರ್ ರೊ.ಆರ್.ಬದರಿಪ್ರಸಾದ್ ಮಾತನಾಡಿ ರೋಟರಿ ಅಧ್ಯಕ್ಷ ಹಾಗೂ ಕಾರ್ಯದಶರ್ಿ ಹುದ್ದೆ ಜವಬ್ದಾರಿಯುತವಾದ ಅಧಿಕಾರ, ಇಲ್ಲಿ ಸಾರ್ವಜನಿಕರ ಸೇವೆಗೆ ತಮ್ಮ ಸಮಯವನ್ನು ಮುಡಿಪಾಗಿಡಬೇಕು, ರೋಟರಿ ಸಂಸ್ಥೆ ಸಾರ್ವಜನಿಕರಿಗಾಗಿ ಹಲವು ಸೇವೆ ನೀಡಿದ್ದು ತಾಲ್ಲೂಕಿನಲ್ಲಿ ಪುರಸಭೆ ಜಾಗ ನೀಡಿದ್ದರೆ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿಮರ್ಿಸಲು ಮುಂದಾಗಿದ್ದೆವು ಆದರೆ ಜಮೀನಿನ ಸಮಸ್ಯೆಯಿಂದ ಕೆಲಸವಾಗಲಿಲ್ಲ ಮುಂದೆ ಪುರಸಭೆ ಹಾಗೂ ಶಾಸಕರು ಸಂಸ್ಥೆಯೊಂದಿಗೆ ಕೈ ಜೋಡಿಸಿದರೆ  ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.
ರೊಟರಿಯ ಅಸಿಸ್ಟೆಂಟ್ ಗವರ್ನರ್ ರೊ.ಬಿಳಿಗೆರೆ ಶಿವಕುಮಾರ್ ಮಾತನಾಡಿ ಒಂದು ತಿಂಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ರೋಟರಿ ಅಧ್ಯಕ್ಷ, ಕಾರ್ಯದಶರ್ಿಗಳ ಅಧಿಕಾರಾವಧಿಯು  ಮುಗಿಯಲಿದ್ದು ಮುಂದೆ ಅಧಿಕಾರ ವಹಿಸಿಕೊಳ್ಳಲಿರುವ ಅಧ್ಯಕ್ಷರು, ಎಂ.ವಿ.ನಾಗರಾಜ್ರಾವ್ರವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಉತ್ತಮ ಕಾರ್ಯಕ್ರಮಗಳನ್ನು ನಡೆಸಿರಿ ಎಂದು ತಿಳಿಸಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸನ್ಮಾನ ಸ್ವೀಕರಿಸಿ ಮಾತನಾಡಿ ರೋಟರಿ ಸಂಸ್ಥೆ ಪೋಲಿಯೋ ನಿಮರ್ೂಲನಾ ರಾಷ್ಟ್ರ ಮಾಡುವಲ್ಲಿ ಯಶಸ್ವಿಯೂ ಆಗಿದೆ, ರೋಟರಿ ಸಂಸ್ಥೆಯಿಂದ ತಾಲ್ಲೂಕಿನಲ್ಲಿ 50ಮನೆಗನ್ನು ನಿಮರ್ಾಣ ಮಾಡಿಕೊಡುವ ಕಾರ್ಯ ಉತ್ತಮವಾಗಿದ್ದು ಈ ಕಾರ್ಯಕ್ಕೆ ಪುರಸಭೆ ಸ್ಪಂದಿಸುತ್ತದೆ ಎಂದರಲ್ಲದೆ ತಾಲ್ಲೂಕನ್ನು ಕಸಮುಕ್ತ ನಗರವಾಗಲು ಪುರಸಭೆ ತೀಮರ್ಾನಿಸಿದ್ದು ಇದಕ್ಕೆ ರೋಟರಿ ಸಂಸ್ಥೆ ನಮ್ಮೊಂದಿಗೆ ಕೈ ಜೋಡಿಸುವಂತೆ ಕೋರಿದರು. 
ಸಮಾರಂಭದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಿಸಲಾಯಿತು. ಹಾಗೂ ತಾಲ್ಲೂಕಿನ 30 ಶಾಲೆಗಳಿಗೆ ಉಚಿತ ವಾಟರ್ ಪಿಲ್ಟರ್ನ್ನು ನೀಡಲಾಯಿತು. 
ಸಮಾರಂಭದಲ್ಲಿ  ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಇನ್ನರ್ವೀಲ್ ಅಧ್ಯಕ್ಷೆ ಭವಾನಿಜಯರಾಂ, ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.

ಬೇಸಿಗೆಯ ರಂಗತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಮೇ.23: ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಬೇಸಿಗೆಯ ರಂಗತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ಎಸ್.ಗಂಗಾಧರ್ ತಿಳಿಸಿದ್ದಾರೆ.
ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ26 ಭಾನುವಾರ ಬೆಳಿಗ್ಗೆ 10ಗಂಟೆಗೆ ಬೇಸಿಗೆಯ ರಂಗತರಬೇತಿ ಶಿಬಿರ ಪ್ರಾರಂಭವಾಗುವುದು. ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜಿನ ವಿಧ್ಯಾಥರ್ಿಗಳಿಗೆ ಚಿ.ನಾ.ಹಳ್ಳಿಯ ಸ್ವರಗಂಗಾ ಸ್ಕೂಲ್ ಆಫ್ ಅಕಾಡಮಿ ವತಿಯಿಂದ ವಚನಗಳು, ಶ್ಲೋಕಗಳು, ಸುಗಮ ಸಂಗೀತ, ಭಕ್ತಿಗೀತೆಗಳು, ಚಲನಚಿತ್ರ ಗೀತೆಗಳಿಗೆ ತರಬೇತಿ ಮತ್ತು ರಂಗ ಅಭಿನಯವನ್ನು ಹೇಳಿಕೊಡಲಾಗುವುದು. ಗಾನವಿಶಾರದ ಸಂಗೀತ ವಾದ್ಯವೈವಿದ್ಯ ನಾಟ್ಯ ಸಂಘದ ಜೂ.ಪಿ.ಬಿ.ಶ್ರೀನಿವಾಸ್ ಎಂ.ಸಿ.ಕಲ್ಲೇಶ್ ಮತ್ತು ತಾಲ್ಲೂಕು ರಂಗಕಲಾವಿದರ ಸಂಘ ಇವರ ಸಹಕಾರದಲ್ಲಿ ವಿಶೇಷವಾಗಿ ಶಿಬಿರದಲ್ಲಿ ತರಬೇತಿಯಾದ ಉತ್ತಮ ಕಲಾಪ್ರತಿಭೆಗಳನ್ನು ಗುರುತಿಸಿ ದೂರದರ್ಶನ(ಚಂದನ ವಾಹಿನಿ)ಹಾಗು ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿ ಕೊಡುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9538431494.
ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿ
ಚಿಕ್ಕನಾಯಕನಹಳ್ಳಿ,ಮೇ.23 :ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿಯಾಗಿದ್ದು ಪಾರದರ್ಶಕ ತನಿಖೆ ನಡೆಸಿ ಬೇಜವ್ದಾರಿ ತೋರಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು.
 ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಶೆಟ್ಟಿಕೆರೆ ಹೋಬಳಿ ದಿಬ್ಬದಹಳ್ಳಿಯಲ್ಲಿ ಬುಧವಾರ ಸಂಜೆ 7.30ರ ಸುಮಾರಿನಲ್ಲಿ ಹೈ ಓಲ್ಟೇಜ್ ವಿದ್ಯತ್ ಪ್ರವಹಿಸಿದ್ದರ ಪರಿಣಾಮ ಶಿವಕುಮಾರ್ ಅವರ ಪುತ್ರ ಸುಮಾರು 3 ವರ್ಷದ ಪ್ರಜ್ವಲ್ ಎಂಬ ಬಾಲಕ ಟಿ.ವಿ.ಸ್ಟಾಂಡ್ ಮುಟ್ಟುತ್ತಲೇ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದು ಸಂತ್ರಸ್ತ ಕುಟುಂಬಕ್ಕೆ ಗುರುವಾರ ಬೆಸ್ಕಾಂನಿಂದ ಕೊಡಮಾಡಿದ 2ಲಕ್ಷ ಮೊತ್ತದ ಚಕ್ ವಿತರಿಸಿ ಮಾತನಾಡುತ್ತಿದ್ದರು
   ಈ ಗ್ರಾಮದಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ಏರುಪೇರಾಗುತ್ತಿತ್ತು. 220 ವೋಲ್ಟೇಜ್ ಬದಲಿಗೆ 440 ವೋಲ್ಟೇಜ್ ವಿದ್ಯುತ್ ಹರಿಯುತ್ತಿತ್ತು. ಗೋಡೆಗಳಿಗೆ ಗ್ರೌಂಡ್ ಆಗಿ ಹಲವರಿಗೆ ಸಣ್ಣ ಪುಟ್ಟ ಶಾಕ್ಗಳೂ ಆಗಿದ್ದು ಈ ಬಗ್ಗೆ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ ಎಇಇ ಅವರಿಗೆ ತಿಳಿಸಿದ್ದರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಆದ್ದರಿಂದ ಗ್ರಾಮಸ್ತರೇ ವಿದ್ಯತ್ ಸಂಪರ್ಕವನ್ನು ತೆಗೆದಿದ್ದರು ಎಂದು ಗ್ರಾಮಸ್ತರು ದೂರಿದರಲ್ಲದೆ. ಬುಧವಾರ ಗ್ರಾಮಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ವಿದ್ಯತ್ ಪರಿವರ್ತಕಕ್ಕೆ ಸಂಪರ್ಕ ಕಲ್ಪಿಸಿ ಪರಿಶೀಲಿಸದೆ ಮರಳಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ತರು ದೂರಿದರು
 ತನಿಕೆ ಕೈಗೋಂಡಿರುವ ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್ ತನಿಕೆ ಪೂರ್ಣಗೊಂಡ ನಂತರ ಘಟನೆಯ ಪೂರ್ಣವಿವರ ನೀಡಲಾಗುವುದು ಎಂದು ತಿಳಿಸಿದರು.
 ಸ್ಥಳಕ್ಕೆ ತಹಶಿಲ್ದಾರ್ ಕಾಮಾಕ್ಷಮ್ಮ,ಸಿಡಿಪಿಒ ಅನೀಸ್ ಖೈಸರ್,ಡೆಪ್ಯೂಟಿ ಎಲೆಕ್ತ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್,ವೈತ್ತ ನಿರೀಕ್ಷಕ ಪ್ರಭಾಕರ್,ಎಎಸೈ ನರಸಿಂಹಯ್ಯ ಮುಂತಾದವರು ಬೇಟಿ ನೀಡಿದ್ದರು.
ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿ
ಚಿಕ್ಕನಾಯಕನಹಳ್ಳಿ,ಮೇ.23 : ತಾಲ್ಲೂಕು ಸಮಾಜಕಲ್ಯಾಣ ಇಲಾಖಾ ವ್ಯಾಪ್ತಿಯ ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ 2013-14ನೇ ಸಾಲಿಗೆ ಸೇರ ಬಯಸುವ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಠ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿ, ವಿದ್ಯಾಥರ್ಿನಿಯರಿಂದ ಅಜರ್ಿಯನ್ನು ಆಹ್ವಾನಿಸಿದ್ದು ಜೂನ್ 2013ರ 10ನೇ ತಾರೀಖು ಅಜರ್ಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಬೆಳಗುಲಿ, ಬರಕನಹಾಳ್, ಹುಳಿಯಾರು, ದಸೂಡಿ, ಗುರುವಾಪುರ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಹುಳಿಯಾರು ಈ ನಿಲಯಗಳಲ್ಲಿ ಅಜರ್ಿ ಸಲ್ಲಿಸಬಹುದು. ಸಂಬಂಧಿಸಿದ ವಿದ್ಯಾಥರ್ಿ ನಿಲಯಗಳಲ್ಲಿ ಅಜರ್ಿಗಳನ್ನು ಉಚಿತವಾಗಿ ಪಡೆಯಬಹುದು ಮತ್ತು ಕಛೇರಿ ವೇಳೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಅಜರ್ಿಗಳನ್ನು ಪಡೆಯಬಹುದು.
ಅಜರ್ಿಯೊಂದಿಗೆ ಇತ್ತೀಚಿನ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ ಲಗತ್ತಿಸಿ ಸಲ್ಲಿಸಲು ಕೋರಿದೆ. ಹಾಗೂ ಈ ವಸತಿ ನಿಲಯಗಳಲ್ಲಿ ಉಚಿತವಾಗಿ ಊಟ, ತಿಂಡಿ, ಸಮವಸ್ತ್ರ, ಸ್ಟೇಷನರಿ, ಸಂಕೀರ್ಣ ವಸ್ತುಗಳನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




No comments:

Post a Comment