Friday, May 24, 2013



ಮನಸ್ಸು ವಿಕಾಸಗೊಳ್ಳಲು ಬೇಸಿಗೆಶಿಬಿರ ಸಹಕಾರಿ.
ಚಿಕ್ಕನಾಯಕನಹಳ್ಳಿ,ಮೇ24: ಸಕರ್ಾರದ ಯೋಜನೆಯ ಸದ್ಬಳಕೆಯಿಂದ ಹಚ್ಚಿನ ಅನುಕೂಲವಾಗಲಿದೆ ಎಂದು ಪುರಸಭಾ ಸದಸ್ಯೆ ರೇಣುಕಮ್ಮ ತಿಳಿಸಿದರು.
ಅವರು ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ 10 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳ ಜ್ಞಾನವಿಕಾಸಕ್ಕೆ ಇಂತಹ ಶಿಬಿರಗಳು ಹೆಚ್ಚಿನ ಅನುಕೂಲವಾಗಲಿದೆ. ನಮ್ಮಲ್ಲಿನ ವೈವಿದ್ಯಮಯ ಸಂಸ್ಕೃತಿಗಳ ಪರಿಚಯ ಹಾಗೂ ವಿನಿಮಯಗಳಿಂದ  ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಿ ಭವಿಷ್ಯದಲ್ಲಿ ಸುಶಿಕ್ಷಿತ ಸಮಾಜ ನಿಮರ್ಾಣಕ್ಕೆ ದಾರಿಯಾಗಲಿದ್ದು ಈ ಶಿಬಿರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರಚಾರ ನೀಡಬೇಕಾಗಿತ್ತೆಂದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಈರಣ್ಣ ಮಾತನಾಡಿ ಇಂದು ಮಕ್ಕಳಿಗೆ ಶಾಲೆಯ ಪುಸ್ತಕಗಳು ಹೆಚ್ಚು ಹೊರೆಯಾಗಿದ್ದು ಅವರ ಮನೋವಿಕಾಸ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ.  ಈ ಶಿಬಿರದಿಂದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಹಾಕುವ ಮೂಲಕ ಮಕ್ಕಳಲ್ಲಿ ಕ್ರಿಯಾತ್ಮಕ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ ರಜಾದಿನಗಳಲ್ಲಿ ಮಕ್ಕಳು ಪರ ಊರುಗಳಿಗೆ ತೆರಳುವುದರಿಂದ ವಿವಿಧ ರೋಗ ರುಜಿನಗಳ ಬಾದೆಗೆ ತುತ್ತಾಗಲಿದ್ದಾರೆ. ಇಂತಹ ಶಿಬಿರಗಲ್ಲಿ ಮಕ್ಕಳು ತಮ್ಮ ಬೇಸಿಗೆ ರಜಾದಿನಗಳನ್ನು ಕರಕುಶಲ ಕಲೆ, ನೃತ್ಯ, ಪೇಪರ್ ಕಟಿಂಗ್ ಮುಂತಾದ ಮನೋವಿಕಾಸ ಚಟುವಟಿಕೆಯಿಂದ ಮನಸ್ಸು ಅರಳಲಿದೆ ಎಂದರು.
ಸಮಾರಂಭದಲ್ಲಿ ಸಂಪನ್ಮೂಲವ್ಯಕ್ತಿಗಳಾದ ಸಿ.ಎನ್. ಕೃಷ್ಣಾಚಾರ್, ಕುಮಾರಯ್ಯ, ಮಾಜಿ ಪುರಸಭಾ ಸದಸ್ಯೆ ರಾಜಲಕ್ಷ್ಮಿ, ನಾಗರತ್ನಮ್ಮ, ಶಶಿಕಲಾ ಹಾಗೂ ಎಸಿಡಿಪಿಒ ಪರಮೇಶ್ವರಪ್ಪ ಉಪಸ್ಥಿತರಿದ್ದರು. ಕುಮಾರ್ನಿರೂಪಿಸಿದರು. 
(ಪೊಟೋ ಇದೆ)
ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ.
ಚಿಕ್ಕನಾಯಕನಹಳ್ಳಿ,ಮೇ.24: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಮಾಡುವಂತೆ ಕೇಳಿದವರ ಮೇಲೆ ಅನೈತಿಕ ಸಂಬಂಧ ಹುಟ್ಟುಹಾಕಿ ಸಾವಿಗೆ ಕಾರಣವಾಗಿದ್ದವರನ್ನು ಪೊಲೀಸರು ಈವರೆಗೂ ಬಂದಿಸಿಲ್ಲ ಎಂದು ದೂರುದಾರರಾದ ಅನುಸೂಯಮ್ಮ ಆರೋಪಿಸಿದ್ದಾರೆ.
ಅವರು ತಾಲ್ಲೂಕಿನ ಹಂದನಕೆರೆವಾಸಿ ಜಗದೀಶನ ಪತ್ನಿ ಶಶಿಕಲಾ ಎಂಬುವರು ತನ್ನ ತಾಯಿ ಅನುಸೂಯಮ್ಮನ ಕಡೆಯಿಂದ ತರಕಾರಿ ಗಂಗಮ್ಮ ಎಂಬುವರ ಅಳಿಯನಾದ ಚಲುವರಾಜುಗೆ ಹತ್ತು ಸಾವಿರ ಹಣವನ್ನು ಸಾಲವಾಗಿ ಕೊಡಿಸಿದ್ದರು ಎನ್ನಲಾಗಿದ್ದು,  ಸಾಲ ಪಡೆದ ಚಲುವರಾಜು ತಿಂಗಳುಗಳು ಕಳೆದರೂ ಹಣ ವಾಪಸ್ಮಾಡದ ಕಾರಣ ಚಲುವರಾಜು ಹಾಗೂ ಶಶಿಕಲಾ ನಡುವೆ ವಾಗ್ವಾದ ನಡೆದು ಚಲುವರಾಜು ಕೊರಳಲ್ಲಿದ್ದ ಚಿನ್ನದ ಸರವನ್ನು ಶಶಿಕಲ ಪಡೆದು ಹಣ ಪಡೆದ ನಂತರ ಸರ ನೀಡಲಾಗುವುದು ಎಂದು ಹೇಳಿದ ಹಿನ್ನಲೆಯಲ್ಲಿ ಅದೇ ಗ್ರಾಮದ ಪಂಚಾಯಿತಿದಾರರ ಸಮ್ಮುಖದಲ್ಲಿ ಬಡ್ಡಿ ಇಲ್ಲದೆ ಅಸಲು ಹತ್ತು ಸಾವಿರ ಹಣವನ್ನು ಚಲುವರಾಜು ರವರಿಗೆ  ಶಶಿಕಲಾ ಸಾಲದ ರೂಪದಲ್ಲಿ ಕೊಡಿಸಿದ್ದ ಹಣವನ್ನು ವಾಪಸ್ ಮಾಡಿ ಚಿನ್ನದ ಸರವನ್ನು ಮೇ 14 ರಂದು ವಾಪಸ್ ಪಡೆದಿದ್ದರು. ಈ ಎಲ್ಲಾ ವಿಚಾರವನ್ನು ಮನದಲ್ಲಿಟ್ಟುಕೊಂಡಿದ್ದ ಚಲುವರಾಜು, ಪತ್ನಿ ಸವಿತಾ ಹಾಗೂ ಅತ್ತೆ ತರಕಾರಿ ಗಂಗಮ್ಮ ಈ ಮೂವರು ಸಾರ್ವಜನಿಕರೆದರು ಶಶಿಕಲಾ ಮೇಲೆ ದ್ವೇಷದಿಂದ ಸವಿತಾಳು ತನ್ನ ಗಂಡನ ಜೊತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಿಯ ಎಂದು ಬೀದಿಯಲ್ಲಿ ಎಳೆದಾಡಿದ ಪರಿಣಾಮ ಅವಮಾನ ತಾಳಲಾರದೆ ಶಶಿಕಲಾ ಹಂದನಕೆರೆಯ ತೋಟದ ಮನೆಯಲ್ಲಿ ಮೇ.19ರಂದು  ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 
ಈ ಪ್ರಕರಣದ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಅನುಸೂಯಮ್ಮ 505/306 ಪ್ರಕರಣ ದಾಖಲಿಸಿದ್ದರು. ಈ ದೂರಿನ ಮೇಲೆ ತರಕಾರಿ ಗಂಗಮ್ಮನನ್ನು ಬಂದಿಸಲಾಗಿದೆ. ಆದರೆ ಚಲುವರಾಜು ಮತ್ತು ಸವಿತಾ ಎಂಬುವರಿರುವ ಸ್ಥಳದ ಮಾಹಿತಿಯನ್ನು ನೀಡಿದರೂ ಅವರನ್ನು ಬಂಧಿಸುವಲ್ಲಿ ಪೊಲೀಸರು ನಿಲ್ರ್ಯಕ್ಷ ತೋರಿದ್ದಾರೆ ಎಂದು ಅನುಸೂಯಮ್ಮ ಆರೋಪಿಸಿದ್ದಾರೆ.

ಕಾಲೇಜ್ ದಿನಗಳನ್ನು ಸ್ಮರಿಸಿಕೊಳ್ಳಲು 12 ವರ್ಷಗಳ ನಂತರ ಒಂದಾದ ಸ್ನೇಹಿತರು.
ಚಿಕ್ಕನಾಯಕನಹಳ್ಳಿ,ಮೇ.24: ಕಾಲೇಜ್ ದಿನಗಳನ್ನು ನೆನಪಿಸಿಕೊಳ್ಳುವ, ಬದುಕಿನ ಜಂಜಾಟದಿಂದ ಕೆಲ ಕಾಲ ಸ್ನೇಹಿತರೊಂದಿಗೆ ತಮ್ಮ ಯಶೋಗಾಧೆಗಳನ್ನು ಹೇಳಿಕೊಳ್ಳುವ ಹಾಗೂ ಸ್ನೇಹಿತೆಯರಿಗೆ ಬಾಗಿಣ ನೀಡುವ ಹೊಸ ಕಲ್ಪನೆಗೆ ನಾಂದಿ ಹಾಡಿದ್ದು, ತಮ್ಮ ಹೆಂಡತಿ, ಮಕ್ಕಳಿಗೆಲ್ಲಾ ತನ್ನ ಕಾಲೇಜ್ ದಿನಗಳ  ಸ್ನೇಹತರನ್ನು ಪರಸ್ಪರ ಪರಿಚಯಿಸಿಕೊಳ್ಳುವ ಮೂಲಕ  ಮರೆತೇನೆಂದರೆ ಮರೆಯಲಿ ಹ್ಯಾಂಗ. . . . ! ಎಂಬ ವಿಶೇಷ ಕಾರ್ಯಕ್ರಮ ಅಭೂತ ಪೂರ್ವವಾಗಿ ನಡೆದಿದೆ.
2001ರಲ್ಲಿ ಪಿ.ಯು.ಸಿ.ಓದುತ್ತಿದ್ದ ವಿದ್ಯಾಥರ್ಿಗಳು ಹನ್ನೆರಡು ವರ್ಷಗಳ ಬಳಿಕ ತಾವು ಒಂದೆಡೆ ಕಲೆಯುವ ಮೂಲಕ ತಾವು ಓದುತ್ತಿದ್ದ ಕುಪ್ಪಾಳಿನ ಶ್ರೀ ಮಲ್ಲಿಕಾರ್ಜನ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ಆವರಣದಲ್ಲಿ ಬೆರೆತು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಈ ರೀತಿಯ ಆಲೋಚನೆ ಮಾಡಿದ್ದು ಕಲಾವಿದ ಗೋಪಾಲನಹಳ್ಳಿ ಆತ್ಮಾನಂದ, ತನ್ನ ಜೊತೆಯ 80 ವಿದ್ಯಾಥರ್ಿಗಳ ವಿಳಾಸ, ಪೋನ್ ನಂಬರ್ಗಳನ್ನು ಸಂಗ್ರಹಿಸಿ ಅವರಿಗೆಲ್ಲಾ ವಿಷಯ ತಿಳಿಸಿ ಕಾಲೇಜ್ಗೆ ಬರಮಾಡಿಕೊಂಡು ವೈಭವದ ಕಾರ್ಯಕ್ರಮವನ್ನು ಗೆಳೆಯರ ಸಹಾಯದಿಂದ ಆಯೋಜಿಸಿದ್ದರು. 
ಸಮಾರಂಭದಲ್ಲಿ ಸ್ನೇಹಿತರೆಲ್ಲಾ ತಮ್ಮ ವೃತ್ತಿ ಜೀವನ, ಸಿಹಿ ಕಹಿ ಘಟನೆಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು. ನಿವೃತ್ತ ಪ್ರಾಂಶುಪಾಲರಾದ ಕೆ.ಸಿ.ಮಲ್ಲಿಕಾಜರ್ುನಯ್ಯ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಬಾಲರಾವ್ರವರನ್ನು ಸನ್ಮಾನಿಸಲಾಯಿತು.  ಸ್ನೇಹಿತ ಶಿವಕುಮಾರ್ ಆಕಸ್ಮಿಕ ಮರಣಹೊಂದಿದ್ದು ಅವರ ಸ್ಮರಣೆಯ ಪ್ರಯುಕ್ತ ಮೌನ ಆಚರಿಸಿದರು.
 ಮುಂದಿನ ದಿನಗಳಲ್ಲಿ ಸ್ನೇಹಿತರು ಪರಸ್ಪರ ಕಷ್ಟ ಸುಖಗಳನ್ನು ಭಾಗಿಯಾಗಬೇಕೆಂದು ದೃಢ ತೀಮರ್ಾನ ತೆಗೆದುಕೊಂರು, ಸಮಾರಂಭದ ನಂತರ ಎಲ್ಲಾ ಸ್ನೇಹಿತರು ತಮ್ಮೊಂದಿಗೆ ಕಲಿತಿದ್ದ ಸ್ನೇಹಿತೆಯರಿಗೆ ಬಾಗಣ ನೀಡಿ ಆತ್ಮೀಯವಾಗಿ ಗೌರವಿಸಿ ಕಳುಹಿಸಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ನಾಗರಾಜು ವಹಿಸಿದ್ದರು, ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.


No comments:

Post a Comment