Tuesday, March 8, 2016


ಪುರಸಭೆ ಮುಂಭಾಗ ಕಸದ ತೊಟ್ಟಿಯಂತಾದ ನೀರಿನ ವಾಲ್ವ್
ಚಿಕ್ಕನಾಯಕನಹಳ್ಳಿ : ಪಟ್ಟಣದ ಪುರಸಭಾ ಮುಂಭಾಗದಲ್ಲಿ ಕುಡಿಯುವ ನೀರಿನ ವಾಲ್ವ್ ಇರುವ ಗುಂಡಿಗಳು ಕಸದ ತೊಟ್ಟಿಗಳಾಗಿವೆ.
ನಿತ್ಯ ಪುರಸಭಾ ವತಿಯಿಂದ ಪಟ್ಟಣಕ್ಕೆ ಸರಬರಾಜು ಮಾಡುವ ನೀರಿನ ಪೈಪ್ಲೈನ್ಗೆ ಹಾಕಿರುವ ವಾಲ್ವ್ ಗುಂಡಿಗಳ ಬಳಿ ದನಗಳನ್ನು ಕಟ್ಟಿ ಹುಲ್ಲು ಹಾಕಿ ಮೇಯಿಸುತ್ತಿರುವುದರಿಂದ ಹುಲ್ಲು ಹಾಗೂ ಘನತ್ಯಾಜ್ಯ ವಾಲ್ವ್ಗುಂಡಿಯಲ್ಲಿ ಹಾಕುವುದರಿಂದ ವಾಲ್ವ್ನಿಂದ ಸೋರುವ ನೀರು ಗುಂಡಿಯಲ್ಲಿ ಶೇಖರಣೆಯಾಗಿ ಪುನಹ ವಾಲ್ವ್ ಮುಖಾಂತರ ಪಟ್ಟಣಕ್ಕೆ ಕೊಚ್ಚೆ ನೀರು ಹೋಗುತ್ತಿದ್ದು ಇದನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಅನೇಕ ಬಾರಿ ಪುರಸಭಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಮನವಿ ಮಾಡಿದರೂ ಇದುವರೆವಿಗೂ ಏನೂ ಪ್ರಯೋಜನವಾಗಿಲ್ಲ, ಪುರಸಭೆ ಅಧಿಕಾರಿಗಳು, ಸದಸ್ಯರು ವಾಲ್ವ್ನ ಗುಂಡಿಯನ್ನು ನೋಡಿಕೊಂಡು ಹೋಗುತ್ತಾರೆಯೇ ವಿನಃ ಗುಂಡಿಯಲ್ಲಿರುವ ಘನತ್ಯಾಜ್ಯವನ್ನು ತೆರವುಗೊಳಿಸುವುದಾಗಲಿ ಅಥವಾ ಪಕ್ಕದಲ್ಲೇ ಹಾಕಿರುವ ಕಾಂಕ್ರಿಟ್ ಹಾಸುಗಲ್ಲನ್ನು ಹಾಕದೇ ನಿರ್ಲಕ್ಷಿಸಿದ್ದಾರೆ, ನಿತ್ಯ ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಾರೆ ರಾತ್ರಿ ವೇಳೆ ವಿದ್ಯುತ್ ಹೋದ ಸಂದರ್ಭದಲ್ಲಿ ವಾಲ್ವ್ವಿರುವ ಗುಂಡಿ ಕಾಣದೇ ಬೀಳುವ ಸಂಭವವೇ ಹೆಚ್ಚಾಗಿದ್ದು ಇದರಿಂದ ಕೈಕಾಲು ಮುರಿದುಕೊಳ್ಳಬೇಕಾಗುತ್ತದೆ ಆದ್ದರಿಂದ ಕೂಡಲೇ ಅಧಿಕಾರಿಗಳು ವಾಲ್ವ್ ಗುಂಡಿಯಲ್ಲಿರುವ ಘನತ್ಯಾಜ್ಯ ಹಾಗೂ ಕಾಂಕ್ರಿಟ್ ಹಾಸುಗಲ್ಲು ಹಾಕಿ ಮುಚ್ಚುವರೇ ?.
                  ಬಿಆರ್ಪಿ ಹಾಗೂ ಸಿಆರ್ಪಿ ಹುದ್ದೆಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮಾ.07 : 2016-17ನೇ ಸಾಲಿನ ಬಿಆರ್ಪಿ ಹಾಗೂ ಸಿಆರ್ಪಿಯ ಖಾಲಿಯಿರುವ ಹುದ್ದೆಗಳಿಗೆ ಭತರ್ಿ ಮಾಡಲು ಅಜರ್ಿ ಆಹ್ವಾನಿಸಲಾಗಿದೆ.
ಸಮೂಹ ಸಂಪನ್ಮೂಲ ವ್ಯಕ್ತಿಗಳ ಖಾಲಿ ಹುದ್ದೆಗಳಿಗೆ ಭತರ್ಿ ಮಾಡಲು ರಾಜ್ಯ ಯೋಜನ ನಿದರ್ೇಶಕರ ಕಛೇರಿಯ ಆದೇಶದಂತೆ ಅಜರ್ಿ ಆಹ್ವಾನಿಸಲಾಗಿದೆ, ಆಸಕ್ತ ಶಿಕ್ಷಕರು ಅಜರ್ಿಗಳೊಂದಿಗೆ ಎರಡು ಪ್ರತಿ ಪ್ರವೇಶ ಪತ್ರ ಹಾಗೂ ಭಾವಚಿತ್ರದೊಂದಿಗೆ ಬಿಇಓ ಕಛೇರಿಯಿಂದ ದೃಢೀಕರಿಸಿ ಮಾಚರ್್ 14ರ ಸಂಜೆ 5ಗಂಟೆಯೊಳಗೆ ಕ್ಷೇತ್ರ ಸಮನ್ವಯಧಿಕಾರಿಗಳ ಕಛೇರಿಗೆ ಪ್ರವೇಶ ಪತ್ರದ ದ್ವಿಪ್ರತಿ ಹಾಗೂ ನಿಗದಿತ ನಮೂನೆಯಲ್ಲಿ ವಿವರಗಳೊಂದಿಗೆ ಕಛೇರಿಗೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಈ ಕಛೇರಿಯ ವೆಬ್ಸೈಟ್ ತಿತಿತಿ.ಚಿಞಚಿಡಿಟಿಚಿಣಚಿಞಚಿ.ರಠತ.ಟಿ <ಣಣಠಿ://ತಿತಿತಿ.ಚಿಞಚಿಡಿಟಿಚಿಣಚಿಞಚಿ.ರಠತ.ಟಿ> ನಲ್ಲಿ ವೀಕ್ಷಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಕೋರಿದ್ದಾರೆ.

ಮೂರೇ ದಿನಕ್ಕೆ ಕಿತ್ತುಹೋದ ಚರಂಡಿ ಕಾಮಗಾರಿ
 

ಚಿಕ್ಕನಾಯಕನಹಳ್ಳಿ,ಮಾ.07  : ತಾಲ್ಲೂಕಿನ ದೊಡ್ಡಬಿದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅವಳಗೆರೆ ಭೋವಿ ಕಾಲೋನಿಯಲ್ಲಿ ಈವರೆಗೆ  ಚರಂಡಿ ಹಾಗೂ ರಸ್ತೆಯಂತಹ ಕನಿಷ್ಟ ಮೂಲಭೂತ ಸೌಕರ್ಯ ಕಂಡಿರಲಿಲ್ಲ, ಚರಂಡಿ ಹಾಗೂ ಸಿಮೆಂಟ್ ರಸ್ತೆ ಮುಂಜೂರಾಗಿದ್ದರಿಂದ ಗ್ರಾಮಸ್ಥರು ಸಹಜವಾಗೇ ಖುಷಿಯಾಗಿದ್ದರೂ ಆದರೆ ನಿಮರ್ಾಣವಾದ 3ದಿನಕ್ಕೆ ಚರಂಡಿ ಮುರಿದು, ರಸ್ತೆ ಕಿತ್ತು ಹೋಗಿದೆ ಇದರಿಂದ ಬೇಸತ್ತ ಜನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಹಾಗೂ ಕಳಪೆ ಕಾಮಗಾರಿ ಕುರಿತು ತನಿಖೆ ಹಾಗಬೇಕು ಎಂದು ಒತ್ತಾಯಿಸಿದ್ದಾರೆ.
   60 ಮನೆ 200 ಜನಸಂಖ್ಯೆ ಹೊಂದಿರುವ ಅವಳಗೆರೆ ಭೋವಿ ಕಾಲೋನಿ ಮುಖ್ಯ ರಸ್ತೆಯಿಂದ 2.ಕಿಮಿ ದೂರದಲ್ಲಿದೆ, ಪರಿಶಿಷ್ಠ ಜಾತಿಯವರೇ ಇರುವ ಗ್ರಾಮಕ್ಕೆ  ಕನರ್ಾಟಕ ಸಕರ್ಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 5054-04-337-0-01-422 ವಿಶೇಷ ಘಟಕ ಯೋಜನೆಯಲ್ಲಿ ಗ್ರಾಮಕ್ಕೆ  162 ಮೀಟರ್ ಉದ್ದದ ಸಿ.ಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ಮುಂಜೂರಾಗಿದೆ, ನಿಮರ್ಾಣದ ಜವಾಬ್ಧಾರಿಯನ್ನು ತುಮಕೂರಿನ ಗುತ್ತಿಗೆದಾರ ಕೆ.ಎಸ್.ನಾಗರಾಜು ಎಂಬುವರು ವಹಿಸಿಕೊಂಡಿದ್ದಾರೆ, ತರಾತುರಿಯಲ್ಲಿ ಕಾಮಗಾರಿ ಮುಗಿಸಿದ್ದು ಕಾಮಗಾರಿ ಕಳಪೆಯಾಗಿದೆ ಎಂದು ಜನ ದೂರುತ್ತಿದ್ದಾರೆ.
   ಗ್ರಾಮದ ಮುಖಂಡ ಪ್ರಕಾಶ್ ಮಾತನಾಡಿ, ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗುತ್ತಿಗೆದಾರರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ, ಒಬ್ಬ ಮೇಸ್ತ್ರಿ ಉಸ್ತುವಾರಿಯಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ ಮುಗಿದು ಹೋಗಿದೆ, ಇಲಾಖೆ ನೀಡಿರುವ ಮಾರ್ಗ ಸೂಚಿ ಪ್ರಕಾರ 6ಅಡಿ ದಪ್ಪದ ಸಿ.ಸಿ ರಸ್ತೆ ನಿಮರ್ಾಣ ಆಗಬೇಕಿತ್ತು, ಆದರೆ 3ಅಡಿಗೂ ಕಡಿಮೆ ದಪ್ಪದ ಸಿಮೆಂಟ್ ಹಾಕಿದ್ದಾರೆ, ಅಲ್ಲದೆ ಕಳಪೆ ಗುಣಮಟ್ಟದ ಮರಳು ಹಾಗೂ ಸಿಮೆಂಟ್ ಬಳಸಿದ್ದಾರೆ, ಸರಿಯಾದ ಕ್ಯೂರಿಂಗ್ ಮಾಡಿಲ್ಲ ಎಂದು ದೂರಿದರು.
    ಚರಂಡಿ ಹಾಗೂ ರಸ್ತೆ ಅವೈಜ್ಞಾನಿಕವಾಗಿ ನಿಮರ್ಾಣವಾಗಿದೆ, ನೀರು ಹರಿಯಲು ಸರಿಯಾದ ದಾರಿಯಿಲ್ಲ, ಚರಂಡಿ ದಾಟಲು ರಸ್ತೆಗೆ ಅಡ್ಡಲಾಗಿ ಹಾಕಿರುವ ಒದಿಕೆ ಸರಿಯಿಲ್ಲ. ಈಗಾಗಲೆ ಮೂನರ್ಾಲ್ಕು ಕಡೆ ಚರಂಡಿ ದಡ ಕುಸಿದಿದೆ. ರಸ್ತೆ ಸಮತಟ್ಟಾಗಿಲ್ಲದೆ ಓಡಾಟ ಅಸಾಧ್ಯ ಎನ್ನುವಂತಾಗಿದೆ, ಗುಂಡಿ ಬಿದ್ದಿದೆ, ಈ ಭಾಗ್ಯಕ್ಕೆ ಸಿ.ಸಿ.ರಸ್ತೆ ಹಾಗೂ ಬಾಕ್ಸ್ ಚರಂಡಿ ಬೇಕಿತ್ತಾ ಎನ್ನುವಂತಾಗಿದೆ ಎಂದು ಹನುಮಕ್ಕ ಪ್ರಶ್ನೆ ಹಾಕುತ್ತಾರೆ.


ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆಯ ಮಹೇಶ್ ಎಂಬುವರ ಒಡೆತನದ ಹಸು ಅವಳಿ ಕರುಗಳಿಗೆ ಜನ್ಮ ನೀಡಿದೆ.

No comments:

Post a Comment