Tuesday, March 8, 2016


ಅಭಿವ್ಯಕ್ತಿ ಸ್ವಾತಂತ್ರದ ಅಪ್ರತಿಮ ಪ್ರತಿಭೆ ಪಿ.ಲಂಕೇಶ್.


ಸಿ.ಗುರುಮೂತರ್ಿ ಕೊಟಿಗೆಮನೆ
                              ಶಿಕ್ಷಕ, ಹವ್ಯಾಸಿ ಲೇಖಕ, ಚಿಕ್ಕನಾಯಕನಹಳ್ಳಿ. 9448659573 
 ಕನ್ನಡ ಪತ್ರಿಕಾಲೋಕದಲ್ಲಿ 'ಮೇಷ್ಟ್ರು' ಎಂದಾಕ್ಷಣ ನೆನಪಾಗುವುದು ಪಿ.ಲಂಕೇಶ್. ನಿದರ್ೇಶಕ, ಅಂಕಣಕಾರ, ವಿಚಾರವಾದಿ, ಎಂಬಿತ್ಯಾದಿ ಅಭಿನಾಮಗಳಿದ್ದರೂ,  ಜ್ಞಾನಲೋಕದಲ್ಲಿ ಇವರತ್ತ ಕಣ್ಣು ಹೊರಳುವಂತೆ ಮಾಡಿದ್ದು ಬರವಣಿಗೆ.   ಎಂಭತ್ತು-ತೊಂಭತ್ತರ ದಶಕದಲ್ಲಿ ಯುವಕರನ್ನು ಹೆಚ್ಚು ಪ್ರಭಾವಿಸಿದ್ದು ಇವರ ಸಂಪಾದಕತ್ವದ ಕನ್ನಡ ಜಾಣ-ಜಾಣೆಯರ ಪತ್ರಿಕೆ ಲಂಕೇಶ್.
ಎರಡು ದಶಕಗಳ ಕಾಲ ಕನ್ನಡ ಟ್ಯಾಬುಲ್ಯಾಡ್ ಪತ್ರಿಕಾ ಕ್ಷೇತ್ರದಲ್ಲಿ ವಿಚಾರವಾದಿಯಾಗಿ, ರಂಜನೆ, ಬೋಧನೆ ಹಾಗೂ ಪ್ರಚೋದನೆಗಳನ್ನು ಅಸ್ತ್ರವಾಗಿಟ್ಟುಕೊಂಡು, ಸಕರ್ಾರಗಳನ್ನು ರಾಜಕಾರಣಿಗಳನ್ನು ವಿಚಾರವಂತರನ್ನು ತನ್ನತ್ತ ಸೆಳೆದುಕೊಂಡಿದ್ದು ಲಂಕೇಶ್ ಪತ್ರಿಕೆ. ವಿಡಂಬನೆ, ಸ್ಮರಣೆ, ಭಾವುಕತೆ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸುತ್ತಾ ಅಭಿವ್ಯಕ್ತಿ ಸ್ವತಂತ್ರದ ಪರವಾಗಿ ದೊಡ್ಡ ಧ್ವನಿಯಾಗಿದ್ದ ಲಂಕೇಶ್, ಕನ್ನಡ ಓದುಗರ ಒಳನೋಟವನ್ನು ಬದಲಿಸಿದ ಲೇಖಕ. ಇಂಗ್ಲೀಷ್ ಸಾಹಿತ್ಯವನ್ನು ಓದಿಕೊಂಡು, ಗೋಪಾಲಕೃಷ್ಣ ಅಡಿಗರ ಗರಡಿಯಲ್ಲಿ ಸಾಹಿತ್ಯ ಲೋಕದ ಪಟ್ಟುಗಳನ್ನು ತಿಳಿದ ಲಂಕೇಶ್, ಕನ್ನಡ ಸಾಹಿತ್ಯವನ್ನು ವಿಸ್ತರಿಸುವಂತಹ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಂತಹ ಸೃಜನಶೀಲ ಲೇಖಕ. ಕೆಲವೊಮ್ಮೆ ಇಂಗ್ಲೀಷ್ ಸಾಹಿತ್ಯದ ಒಳತೋಟಿಗಳನ್ನು ಕನ್ನಡಕ್ಕೆ ರೂಪಾಂತರಿಸುವಲ್ಲೂ ಸಫಲರಾಗಿರುವ ಅಪರೂಪದ ಪತ್ರಿಭೆ.
ವಿದ್ಯಾಥರ್ಿ ದೆಸೆಯಲ್ಲೇ ಸಾಹಿತ್ಯದ ತೆಕ್ಕೆಗೆ ಬಂದ ಲಂಕೇಶ್, ಶಿವಮೊಗ್ಗದಲ್ಲಿ ತಾವು ಓದುತ್ತಿದ್ದ ಕಾಲೇಜ್ಗೆ ಮೊದಲಬಾರಿಗೆ  ಕಾದಂಬರಿಕಾರ ಅ.ನ.ಕೃಷ್ಣರಾಯರನ್ನು ಕರೆತಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮೊದಲ ಬಾರಿಗೆ ಸಾಹಿತ್ಯ ಸಂಘಟನೆಯಲ್ಲಿ ತೊಡಗುತ್ತಾರೆ. ನಂತರ ತನ್ನ ಓರುಗೆಯವರಿಗೆ ಕನ್ನಡ ಸಾಹಿತ್ಯದ ರುಚಿಯನ್ನು ಹತ್ತಿಸುವ ಸಲುವಾಗಿ ಕನ್ನಡ ಸಾಹಿತ್ಯ ಸಂಘವನ್ನು ಕಟ್ಟಿಕೊಂಡು,  ಕಾದಂಬರಿಕಾರ ನಿರಂಜನ್, ಶಿವರಾಮ ಕಾರಂತ, ಜಿ.ಎಸ್.ಶಿವರುದ್ರಪ್ಪನಂತವರ ಒಡನಾಟದಿಂದ ಪೂರ್ಣ ಪ್ರಮಾಣದ ಸಾಹಿತ್ಯ ಪರಿಚಾರಿಕೆಗೆ ಒಗ್ಗಿಕೊಂಡ ವ್ಯಕ್ತಿ. ಬೆಂಗಳೂರು, ಮೈಸೂರುನಲ್ಲಿ ಓದುವಾಗಲೇ ಹಲವು ಸಾಹಿತಿಗಳ ಅಂತರಂಗದ ಗೆಳೆಯರಾಗಿದ್ದುಕೊಂಡು ಕಥಾಲೋಕವನ್ನು ಪ್ರವೇಶಿಸಿದರು, ಕವಿತೆ ಎಂದರೆ ಇಷ್ಟಪಡುವ ಪಿ.ಎಲ್,  ಆರಂಭದಲ್ಲಿ ತಮ್ಮನ್ನು ತೆತ್ತುಕೊಂಡಿದ್ದು ಕಥೆ, ಲೇಖನಗಳಿಗೆ. ನಂತರ ಓದು ಮುಗಿಸಿಕೊಂಡು ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ನಲ್ಲಿ ಇಂಗ್ಲೀಷ್ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದರು, ಆಗ ಅಲ್ಲಿನ ವಿದ್ಯಾಥರ್ಿಗಳಿಗೆ ಕವಿತೆಗಳನ್ನು ಬರೆಯುವದಕ್ಕೆ ಪ್ರೇರಿಪಿಸುತ್ತಲ್ಲೇ ತಮ್ಮ ಕಾವ್ಯಕೃಷಿಯನ್ನು ವಿಸ್ತರಿಸಿಕೊಂಡರು, ದೇ.ಜವರೇಗೌಡರು ಇವರ  ಪ್ರಾಂಶುಪಾಲರಾಗಿದ್ದರು.
ಪಿ.ಎಲ್. ಶಿವಮೊಗ್ಗದಿಂದ ವರ್ಗವಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ನ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಕಾಲವಿದ್ದರು, ನಂತರದಲ್ಲಿ ಹನ್ನೆರಡು ವರ್ಷ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಈ ಮಧ್ಯೆ ಅನಂತಮೂತರ್ಿಯವರ 'ಸಂಸ್ಕಾರ'ದಲ್ಲಿ ಅಭಿನಯಿಸಿದ್ದರಿಂದ ಇವರ ಚಿತ್ತ  ಚಲನಚಿತ್ರದತ್ತ ವಾಲುತ್ತದೆ. ತಮ್ಮ ಮೊದಲ ಚಿತ್ರ 'ಪಲ್ಲವಿ'ಯನ್ನು ತಮ್ಮದೇ ನಿದರ್ೇಶನದಲ್ಲಿ ನಿಮರ್ಿಸಿದ ನಂತರದಲ್ಲಿ ಅವರ ಆಸಕ್ತಿ ಹೆಚ್ಚು ನಿದರ್ೇಶನದ ಕಡೆ ತಿರುಗಿ 'ಅನುರೂಪ' ಚಿತ್ರವನ್ನು ತೆಗೆಯುತ್ತಾರೆ. ಇಷ್ಟರಲ್ಲಾಗಲೇ ಪೂರ್ಣ ಪ್ರಮಾಣದ ನಿದರ್ೇಶಕನ ಸ್ಥಾನಕ್ಕೆ ಹೊಂದಿಕೊಂಡಿದ್ದ ಪಿ.ಎಲ್. ತಮ್ಮ ಅಧ್ಯಾಪಕ ಹುದ್ದೆಗೆ ರಾಜಿನಾಮೆ ನೀಡಿ ವಿಶ್ವವಿದ್ಯಾಲಯದ ಸಂಕೋಲೆಯಿಂದ ಹೊರಬಂದು ಸ್ವತಂತ್ರವಾಗಿ ಅಲೋಚಿಸುವ ಕ್ರಮವನ್ನು ತನ್ನದಾಗಿಸಿಕೊಳ್ಳುತ್ತಾರೆ.  ಇಂಗ್ಲೀಷ್ ಸಾಹಿತ್ಯವನ್ನು ಹೆಚ್ಚು ಓದುತ್ತಾ, ಇಂಗ್ಲೀಷ್ ಫಿಲಂಗಳ ಕಡೆ ತಮ್ಮ ಕಣ್ಣುಗಳನ್ನು ಹರಿಸುತ್ತಾ ಹೋಗುತ್ತಾರೆ. ಈ ಮಧ್ಯೆ ಪ್ರಜಾವಾಣಿಯ ಕೆ.ಎನ್.ಹರಿಕುಮಾರ್ ರವರ ಭೇಟಿಯಿಂದಾಗಿ ಹವ್ಯಾಸಿ ಅಂಕಣಕಾರರಾಗಿ ಬರೆಯಲಾರಂಭಸುತ್ತಾರೆ. ಆಗಿನ ಮುಖ್ಯಮಂತ್ರಿ ದೇವರಾಜ ಅರಸ್ ರವರ ಸಂದರ್ಶನವೊಂದನ್ನು ತಮ್ಮ ಅಂಕಣದಲ್ಲಿ ದಾಖಲಿಸಿದ್ದರಿಂದ ಪತ್ರಿಕಾ ಆಡಳಿತದವರೊಂದಿಗೆ ಉಂಟಾದ ಗೊಂದಲದಿಂದ  ತಮ್ಮ ಅಂಕಣಕಾರನ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ಕಿಚ್ಚಿನಲ್ಲಿ ಹುಟ್ಟಿಕೊಂಡಿದ್ದೇ ಲಂಕೇಶ್ ಪತ್ರಿಕೆ. ಆ ಕಾಲಕ್ಕೆ ಟ್ಯಾಬುಲ್ಯಾಡ್ ಪತ್ರಿಕೆಗಳಲ್ಲಿ ಶೇಷಪ್ಪನವರ 'ಕಿಡಿ'ಪತ್ರಿಕೆಯೊಂದೇ ಸ್ವಲ್ಪ ಮಟ್ಟದಲ್ಲಿ ಜೀವ ಹಿಡಿದುಕೊಂಡಿದ್ದ ಪತ್ರಿಕೆ, ಆದರೆ ಅದು ರಾಜಕೀಯವನ್ನೇ ಹೆಚ್ಚು ಭಿತ್ತರಿಸುತಿತ್ತು.   ಸಾಹಿತ್ಯ, ಸಾಂಸ್ಕೃತಿ ಹಾಗೂ ವಿಚಾರವಂತಿಕೆಯ ಕ್ಷೇತ್ರಗಳನ್ನು ಹೆಚ್ಚು ವಿಸ್ತರಿಸಲು ಲಂಕೇಶ್ ಪತ್ರಿಕೆಯನ್ನು 1980 ರಲ್ಲಿ ಆರಂಭಿಸುತ್ತಾರೆ, ಈ ಪತ್ರಿಕೆಗೆ ಲಂಕೇಶ್ ಎಂದು ಹೆಸರಿಡಲು ಸೂಚಿಸಿದ್ದು, ಇನ್ನೊಬ್ಬ ಸ್ಕಾಲರ್, ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ, ಪತ್ರಿಕೆಗೆ ಆರಂಭದಲ್ಲಿ ಚಂದ್ರಶೇಖರ ಪಾಟೀಲ(ಚಂಪಾ) ಅಂಕಣಕಾರರಾಗಿದ್ದರು. ಆರಂಭದಲ್ಲಿ ಎಂಟು ಪುಟಗಳ ಈ ಪತ್ರಿಕೆಯ ಬೆಲೆ ಅರವತ್ತು ಪೈಸೆ ಮಾತ್ರ.
ಲಂಕೇಶ್ ಪತ್ರಿಕೆ ಅಕ್ಷರ ಲೋಕದಲ್ಲಿ ನಾಗಲೋಟದಲ್ಲಿ ಓಡಲಾರಂಭಿಸುತ್ತದೆ, ಎಂಭತ್ತರ ದಶಕದ ಕೊನೆಯ ಹೊತ್ತಿಗೆ ಇದರ ಪ್ರಸಾರ ಸಂಖ್ಯೆ ಒಂದುವರೆ ಲಕ್ಷದವರೆಗೆ ಮುಟ್ಟಿದ್ದು ಒಂದು ಮೈಲಿಗಲ್ಲು. ಪತ್ರಿಕೆ ಇವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಪತ್ರಿಕೆಯಲ್ಲಿ ರಾಜಕೀಯ ಚಿಂತನೆಗಳನ್ನು  ಬರೆಯುತ್ತಲ್ಲೇ, ತಮ್ಮ ಚಿಂತನಾ ಕ್ರಮವನ್ನು ಪ್ರಯೋಗಕ್ಕಿಳಿಸುವ ನಿಟ್ಟಿನಲ್ಲಿ ಪತ್ರಿಕಾರಂಗದಿಂದ  'ಪ್ರಗತಿರಂಗ' ಎಂಬ ಪಕ್ಷವನ್ನು ಕಟ್ಟಿಕೊಂಡು  ರಾಜಕೀಯ ಸಂಘಟನೆಗೆ  ಇಳಿಯುತ್ತಾರೆ. ಇವರಂತೇ ಆಲೋಚಿಸುವ ಪೂರ್ಣಚಂದ್ರ ತೇಜಸ್ವಿ, ಕೆ.ರಾಮದಾಸ್ ರಂತಹ  ಗೆಳೆಯರೊಂದಿಗೆ ರಾಜ್ಯದ ನಾನಾಕಡೆ ತಿರುಗುತ್ತಾರೆ, ಈ ಪ್ರಯೋಗದಲ್ಲಿ ಸೋಲುತ್ತಾರೆ. ಏಳು ಬೀಳುಗಳಿಗೆ ಚಿಕ್ಕಂದಿನಿಂದಲೂ ಒಗ್ಗಿಕೊಂಡಿದ್ದ ಇವರಿಗೆ ಇದು ಅಂತಹ ಹತಾಶೆ ಎನಿಸಲಿಲ್ಲ.  ಇದರಿಂದ ನಿರಾಶರಾಗದೆ ಪತ್ರಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಸುತ್ತಾರೆ. ಇವರ ಸೃಜನಶೀಲತೆಗೆ ಕೊನೆಯವರಿಗೂ ಸಾಥ್ ನೀಡಿದ್ದು ಬರವಣಿಗೆಯೊಂದೆ.
ಇವರು ಲೇಖನಿಯಿಂದ ಹೊರಬಂದ ಕೃತಿಗಳು, ಪ್ರಶಸ್ತಿಗಳು:  ಕಥಾ ಸಂಕಲಗಳ ಪೈಕಿ, ಕೆರೆಯ ನೀರನು ಕೆರೆಗೆ ಚೆಲ್ಲಿ, ನಾನಲ್ಲ, ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಕಲ್ಲು ಕರಗುವ ಸಮಯ, ಉಲ್ಲಂಘನೆ. 'ತಲೆ ಮಾರು' ಎಂಬ ಕವನ ಸಂಕಲನ. ಬಿರುಕು, ಮುಸ್ಸಂಜೆಯ ಕಥಾಪ್ರಸಂಗ, ಅಕ್ಕ ಎಂಬ ಕಾದಂಬರಿಗಳು. ತೆರೆಗಳು, ಸಂಕ್ರಾಂತಿ, ಗುಣಮುಖ ನಾಟಕಗಳು. ಪಾಪದ ಹೂವುಗಳು, ದೊರೆ ಈಡಿಪಸ್, ಅಂತಿಗೊನೆ ಅನುವಾದ ಕೃತಿಗಳು. ಪ್ರಸ್ತುತ, ಕಂಡದ್ದು ಕಂಡಹಾಗೆ, ಟೀಕೆ-ಟಿಪ್ಪಣಿ ಇವೆಲ್ಲಾ ಗದ್ಯ ಬರಹಗಳ ಸಂಕಲನ. ಪಲ್ಲವಿ ಅನುಪಲ್ಲವಿ, ಅನುರೂಪ, ಎಲ್ಲೆಂದಲೊ ಬಂದವರು ಚಲನಚಿತ್ರಗಳು. ಪಲ್ಲವಿ ಚಿತ್ರದ ನಿದರ್ೇಶನಕ್ಕಾಗಿ 1977ರಲ್ಲಿ ರಾಷ್ಟ್ರಪ್ರಶಸ್ತಿ, 1993ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಅನುರೂಪ ಚಿತ್ರಕ್ಕೆ ರಾಜ್ಯ ಪ್ರಶಸ್ತಿ,  ಚಲನಚಿತ್ರ ವಿಮರ್ಶಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಹರಿಸಿ ಬರುತ್ತವೆ.
ಇಂತಹ ದೈತ ಪ್ರತಿಭೆ 1935 ರಲ್ಲಿ  ಒಬ್ಬ ಸಾಮಾನ್ಯ ರೈತ ಕುಟುಂಬದ ಐದನೇ ಮಗನಾಗಿ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ, ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಶಿವಮೊಗ್ಗೆಯಲ್ಲಿ ಇಂಟರ್ ಮೀಡಿಯಟ್, ಬೆಂಗಳೂರಿನ ಸೆಂಟ್ರಲ್ ಕಾಲೇಜ್ನಲ್ಲಿ ಇಂಗ್ಲೀಷ್ ಆನರ್ಸ್, ಮೈಸೂರಿನ ಮಹಾರಾಜ್ ಕಾಲೇಜ್ನಲ್ಲಿ ಇಂಗ್ಲೀಷ್ ಎಂ.ಎ.ಯನ್ನು ಓದಿ, ಗ್ರಾಮೀಣ ಸೊಗಡನ್ನು ಕೊನೆಗಳಿಗೆಯ ವರೆಗೆ ಉಳಿಸಿಕೊಂಡಿದ್ದ ಪಿ.ಲಂಕೇಶ್ ರವರನ್ನು ಅವರ ಜನ್ಮದಿನವಾಗಿ ಅಂಗವಾಗಿ ಇಂದು ಸ್ಮರಿಸುತ್ತಾ ಇಂದಿನ ಪೀಳಿಗೆಯವರಿಗೆ ಇವರ ಪತ್ರಿಭಾವಂತಿಕೆಯನ್ನು ತಲುಪಿಸುವ ಸಲುವಾಗಿ ಈ ಬರಹ.  


No comments:

Post a Comment