Monday, November 5, 2012


ಸದಾಶಿವ ಆಯೋಗವನ್ನು ವಿರೋಧಿಸಿ ವಿವಿಧ ಸಮುದಾಯದವರ ಭಾರಿ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ನ.5 : ಎ.ಜೆ.ಸದಾಶಿವ ಆಯೋಗ ಸಕರ್ಾರಕ್ಕೆ ನೀಡಿರುವ ವರದಿ ದೋಷಪೂರಿತವಾಗಿದೆ, ಕೆಲವರ ಸ್ವಾರ್ಥಕ್ಕಾಗಿ ಹಾಗೂ ರಾಜಕಾರಣದ ತಂತ್ರಗಾರಿಕೆಗಾಗಿ ಇಂತಹ ವರದಿ ಹೊರ ಬಂದಿದೆ, ಇದು ಜಾತಿ-ಜಾತಿಗಳಲ್ಲಿ ಕಿಚ್ಚನ್ನು ಹಚ್ಚಿ ಪರಸ್ಪರ ಕಾದಾಡುವುದಕ್ಕೆ ನಾಂದಿಯಾಗಿದ್ದು, ಸಕರ್ಾರ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಬಂಜಾರ, ಬೋವಿ, ಕೊರಚ, ಕೊರಮ, ಕುಳುವ, ಸಿಳ್ಳೇಕ್ಯಾತ, ಬುಡುಬುಡಿಕೆ, ಸಿದ್ದರು, ಜೋಗಿ, ದೊಂಬಿದಾಸ ಹಾಗೂ ಇತರೆ ಸಮುದಾಯದವರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕನಕ ಭವನದಿಂದ ತಾಲ್ಲೂಕು ಕಛೇರಿವೆರಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಸಮುದಾಯದ ಭಾರಿ ಸಂಖ್ಯೆಯಲ್ಲಿನ ಜನರು ಹಾಗೂ ಸಮಾಜದ ಮುಖಂಡರಗಳು  ಭಾಗವಹಿಸಿದ್ದರು.
ಪರಿಶಿಷ್ಟರಲ್ಲಿ ಒಳಮೀಸಲಾತಿಯ ವಗರ್ೀಕರಣಕ್ಕೆ ಉದ್ದೇಶ ಪೂರ್ವಕವಾಗಿ ಶಿಫಾರಸ್ಸು ಮಾಡಿರುವ ವರದಿಯು, ಈ ನೆಲದ ಕಾನೂನಿಗೆ ವ್ಯತಿರಿಕ್ತವಾಗಿದೆ, ಈ ವರದಿಯ ಪರಿಣಾಮವಾಗಿ ಪರಿಶಿಷ್ಠ ಜಾತಿಗಳಲ್ಲೇ ಶ್ರೇಣಿಕೃತ ಸಮಾಜದ ನಿಮರ್ಾಣವಾಗಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುವ ಸ್ಥಿತಿ ನಿಮರ್ಾಣವಾಗುತ್ತದೆ. ಪರಿಶಿಷ್ಠರಲ್ಲಿ ವಿವಿಧ ಜಾತಿ ಜನಾಂಗಗಳು ಸೇರ್ಪಡೆಗೊಂಡಿರುವುದರಿಂದ ಇವರೆಲ್ಲ ಸಾಮಾಜಿಕ, ಆಥರ್ಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂಬ ವಿಶಾಲವಾದ ಪರಿಕಲ್ಪನೆ ಈಗಿನ ಪೀಳಿಗೆಯ ಜನರಲ್ಲಿದೆ. ಈ ವರದಿಯಾದಾರದ ಮೇಲೆ ಸ್ಪೃಶ್ಯ ಮತ್ತು ಅಸ್ಪೃಶ್ಯ ಪರಿಶಿಷ್ಠ ಜಾತಿ ವಗರ್ೀಕರಣವೇನಾದರೂ ಆದರೆ ಈ ವರ್ಗಗಳನ್ನು ಜನರ ನೋಡುವ ದೃಷ್ಠಿಕೋನವೇ ಬೇರೆಯಾಗಬಹುದು ಎಂದರು.
ಆದ್ದರಿಂದ ಈ ವರದಿಯ ತಯಾರಿಕೆಗಾಗಿ ಸಂಗ್ರಹಿಸಿರುವ ಎಲ್ಲಾ ಅಧಿಕೃತ ಮಾಹಿತಿಗಳನ್ನು ಬಳಕೆ ಮಾಡಿಕೊಂಡು ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅಂಕಿ ಅಂಶಗಳನ್ನು ಕಲೆಹಾಕಿ 1950ರಿಂದ ಇದುವರೆವಿಗೂ ಪರಿಶಿಷ್ಠ ಜಾತಿಯಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ 101 ಜಾತಿಗಳಿಗೆ ಮೀಸಲಾತಿ ಅನ್ವಯವಾಗುವ ಪ್ರತಿ ಕ್ಷೇತ್ರಗಳಲ್ಲಿ ಅವರವರ ಜನಸಂಖ್ಯೆಗನುಗುಣವಾಗಿ ಎಷ್ಟು ಪ್ರಯೋಜನ ಪಡೆಯಬೇಕಿತ್ತು ಮತ್ತು ಅದರಲ್ಲಿ ಎಷ್ಟು ಪರಯೋಜನ ಪಡೆಯಲಾಗಿದೆ ಎಂಬುದನ್ನು ಪರಮಾಶರ್ಿಸಿ, ಕಡಿಮೆ ಪ್ರಯೋಜನ ಪಡೆದಿರುವ ಜಾತಿ ಮತ್ತು ಜನಾಂಗಕ್ಕೆ ಹೆಚ್ಚು ಪ್ರಯೋಜನ ಪಡೆದವರ ಸಮಕ್ಕೆ ತರಲು ಕಾನೂನು ರೀತ್ಯಾ ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ವಾಸ್ತವಾಂಶದ ವರದಿ ತಯಾರಿಸಲು ಹಾಗೂ ಸಲಹೆ ಶಿಫಾರಸ್ಸನ್ನು ಮಾಡಲು ಒಂದು ಸಮಿತಿ ರಚಿಸಬೇಕು.
 ಈ ಆಯೋಗ ಸಮಗ್ರ ವರದಿಯೊಂದನ್ನು ನೀಡಬೇಕಾಗಿರುವುದರಿಂದ  ಹೆಚ್ಚಿನ ಜನಸಂಖ್ಯೆ ಇರುವ ಎಡ, ಬಲ, ಬಂಜಾರ ಮತ್ತು ಭೋವಿ ಜನಾಂಗದವರಿಎಗ ಸೂಕ್ತ ಪ್ರಾತಿನಿಧ್ಯ ನೀಡಿ ಇತರೆ ಜಾತಿಗಳ ಪರವಾಗಿ ಎರಡು ಜನ ಪ್ರತಿನಿಧೀಗಳನ್ನು ಸದಸ್ಯರನ್ನಾಗಿಸಿ ಎಲ್ಲರೂ ಒಪ್ಪಬಹುದಾದ ಒಂದು ಸಮಗ್ರವಾದ ವರದಿಯನ್ನು ತಯಾರಿಸಲು ಆಯೋಗಕ್ಕೆ ತಿಳಿಸಬೇಕೆಂದು ಸಕರ್ಾರಕ್ಕೆ ನೀಡಿರುವ  ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರಿಭಟನೆಯಲ್ಲಿ  ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್ ಮಾತನಾಡಿ ಎ.ಜೆ.ಸದಾಶಿವ ಆಯೋಗವು ತಾನು ನಡೆಸಬೇಕಿದ್ದ ಅಧ್ಯಯನದಲ್ಲಿ ಭಾರತ ಸಂವಿಧಾನವು ನೀಡಿರುವ ಮೀಸಲಾತಿ ಸೌಲಭ್ಯವು 1950ರಿಂದ ಈವರೆವಿಗೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಎಲ್ಲಾ ಉಪಜಾತಿಯವರಿಗೆ ಎಷ್ಟರ ಮಟ್ಟಿಗೆ ತಲುಪಿದೆ, ಕೆಲವರಿಗೆ ತಲುಪದೆ ಅನಾನುಕೂಲವಾಗಿದೆಯೇ ಎಂಬುದನ್ನು ಪ್ರತಿಬಿಂಬಿಸಿ ಕಡಿಮೆ ಪ್ರಯೋಜನವಾಗಿರುವ ಜಾತಿಗಳಿಗೆ ಇತರೆಯವರು ಪಡೆದ ಪ್ರಯೋಜನಕ್ಕೆ ಸಮನಾಗಿ ಸರಿದೂಗಿಸಲು ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸಲಹೆಗಳನ್ನು ನೀಡಬೇಕಾಗಿತ್ತು, ಆದರೆ ಆಯೋಗವು ಈ ಎಲ್ಲಾ ಅಂಶಗಳನ್ನು ಬದಿಗೊತ್ತಿ ಕೆಲವೇ ಉಪಜಾತಿಯ ಜನರಿಗೆ ಅನುಕೂಲವಾಗುವಂತಹ ಶಿಫಾರಸ್ಸು ಮಾಡಿರುವುದು ನ್ಯಾಯ ಸಮ್ಮತವಾದ ವರದಿಯಲ್ಲವೆಂಬುದನ್ನು ಸ್ಪಷ್ಟ ಪಡಿಸುತ್ತದೆ ಎಂದರು.
ಮಾಜಿ.ಜಿ.ಪಂ.ಉಪಾಧ್ಯಕ್ಷೆ ಚಂಪಕಮಾಲಾ ಮಾತನಾಡಿ ಎ.ಜೆ.ಸದಾಶಿವ ಆಯೋಗದ ವರದಿಯು ಮೀಸಲಾತಿಯನ್ನು ಪ್ರಕಟಿಸಿರುವುದನ್ನು ನೋಡಿದರೆ ಈ ಆಯೋಗವು ಸರಿಯಾದ ಸಮೀಕ್ಷೆ ನಡೆಸದೆ ಸಿದ್ದಪಡಿಸಿರುವ ಅವೈಜ್ಞಾನಿಕವಾದ ವರದಿಯಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕು ಅಧಿಕ ಜನರು ಜಮಾಯಿಸಿದ್ದರು. ತಾ.ಬಂಜಾರ ಸೇವಾ ಸಂಘದ ಕಾರ್ಯದಶರ್ಿ ರಾಮಚಂದ್ರನಾಯ್ಕ ಮನವಿ ಪತ್ರವನ್ನು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರರವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾ.ಭೋವಿ ಸಮಾಜದ ಅಧ್ಯಕ್ಷ ಕೆ.ಕೆ.ಹನುಮಂತಯ್ಯ, ಕಾರ್ಯದಶರ್ಿ ತಿಮ್ಮಾಭೋವಿ, ತಾ.ಪಂ.ಸದಸ್ಯೆ ಚೇತನಗಂಗಾಧರ್,  ಗುರುವಯ್ಯ, ಚಂದ್ರಾನಾಯ್ಕ,  ಲಕ್ಷ್ಮೀನಾಯ್ಕ, ಮೋತಿನಾಯ್ಕ, ವೇದಮೂತರ್ಿ ಸೇರಿದಂತೆ ವಿವಿಧ ಸಮುದಾಯದವರು ಭಾಗವಹಿಸಿದರು.
ಗ್ರಾಮ ಸಹಾಯಕರ ಸಂಘದ ಪಾದಯಾತ್ರೆಗೆ ಬೆಂಬಲ
ಚಿಕ್ಕನಾಯಕನಹಳ್ಳಿ,ನ.5: ಗ್ರಾಮ ಸಹಾಯಕರುಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿದ್ದಗಂಗಾ ಮಠದಿಂದ ವಿಧಾನ ಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ಯಾತ್ರೆಗೆ ತಾಲೂಕು ಗ್ರಾಮ ಸಹಾಯಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.

Tuesday, October 30, 2012


ಅಲ್ಲಿದೆ ನಮ್ಮನೆ, ಇಲ್ಲಿರಿವೆ ಸುಮ್ಮನೆ: ಸಚಿವ ಪುಟ್ಟಸ್ವಾಮಿ
ಚಿಕ್ಕನಾಯಕನಹಳ್ಳಿ,ಅ.30 : ಯಡಿಯೂರಪ್ಪ ನಮ್ಮ ನಾಯಕರು, ಅವರು ಎಲ್ಲಿರುತ್ತಾರೋ ನಾನು ಅಲ್ಲಿರುತ್ತೇನೆ, ಜಗದೀಶ್ ಶೆಟ್ಟರ್ ನಮಗೆ ಸಭಾ ನಾಯಕರು ಅವರ ಕ್ಯಾಬಿನೇಟ್ನಲ್ಲಿರುವವರೆಗೆ ಮಾತ್ರ ನಾನು ಅವರಿಗೆ ನಿಷ್ಠನಾಗಿರುತ್ತೇನೆ ಎಂದು ಸಹಕಾರ ಸಚಿವ ಪುಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯಡಿಯೂರಪ್ಪನವರ ಅಭಿಮಾನಿ, 24 ವರ್ಷಗಳಿಂದ ರಾಜಕೀಯವಾಗಿ ಅಜ್ಞಾತವಾಸವಾಗಿದ್ದ ನನ್ನನ್ನು ಮುಖ್ಯವಾಹಿನಿಗೆ ತರುವುದಷ್ಟೇ ಅಲ್ಲ, ನನ್ನ ಗಾಣಿಗ ಸಮಾಜ ಎಂದು ಮರೆಯಲಾರದಷ್ಟು ಸಹಾಯ ಮಾಡಿದ್ದಾರೆ, ಬೆಂಗಳೂರಿನಲ್ಲಿ 10 ಎಕರೆ ಜಾಗವನ್ನು ಕೊಟ್ಟಿದ್ದಾರೆ ಅದು ಈಗ 150 ಕೋಟಿ ರೂಗಳಷ್ಟು ಬೆಲೆ ಬಾಳುವಂತಹ ಜಾಗ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ 5 ಕೋಟಿ ರೂಗಳಷ್ಟು ಹಣವನ್ನು ನೀಡಿದ್ದಾರೆ, ನಮ್ಮ ಸಮಾಜ ಅಲ್ಲೊಂದು ಗುರುಪೀಠವನ್ನು ಸ್ಥಾಪಿಸಿ, ಶಾಲೆಗಳನ್ನು ತೆರೆಯುವುದಲ್ಲದೆ, ವಿದ್ಯಾಥರ್ಿಗಳಿಗೆ ವಸತಿ ನಿಲಯವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ನಮ್ಮ ಸಮಾಜದ ಹೆಸರನ್ನು ಹೇಳಿಕೊಂಡ ವೈಯಕ್ತಿಕ ಲಾಭ ಮಾಡಿಕೊಂಡ ಸುದರ್ಶನ್, ದೊಡ್ಡ ಮಟ್ಟದ  ಒಂದು ಸಮಾವೇಶವನ್ನು ಮಾಡಲಿಲ್ಲ ಎಂದರಲ್ಲದೆ, ಗಾಣಿಗ ಸಮಾಜ ಇತಿಹಾಸದಲ್ಲೇ ಕಂಡರಿಯದಷ್ಟು ಸಹಕಾರವನ್ನು ನೀಡಿರುವ ಯಡಿಯೂರಪ್ಪನವರನ್ನು ಸದಾ ಸ್ಮರಿಸುತ್ತದೆ ಎಂದರು.
ದೊಡ್ಡವರು ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಿ:  ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಬಡ್ಡಿ ಇಲ್ಲದಂತೆ ಸಾಲ ನೀಡುತ್ತಿರುವುದನ್ನು ಇತರರು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಎಲ್ಲಾ ರೈತರು ಸಹಕಾರ ಕ್ಷೇತ್ರದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು  
ಇತ್ತೀಚೆಗೆ ಸಕರ್ಾರ ರೈತರು ಪಡೆದಿದ್ದ 25ಸಾವಿರ ಸಾಲವನ್ನು ಮನ್ನಾ ಮಾಡಿದೆ ಆದರೆ ಇದರಿಂದ ತೀರ ಹಿಂದುಳಿದ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಯಾವ ಉಪಯೋಗವೂ ಆಗಿಲ್ಲ ಎಂದರಲ್ಲದೆ ಈಗ ನೀಡುವ ಬಡ್ಡಿ ರಹಿತ ಸಾಲದ ಅನಕೂಲವನ್ನು ನಿಜವಾದ ಫಲಾನುಭವಿಗಳು ಪಡೆದುಕೊಳ್ಳಲು ಸದಸ್ಯತ್ವ ಪಡೆದುಕೊಳ್ಳಬೇಕೆಂದು ತಿಳಿಸಿದ ಅವರು 10 ಗುಂಟೆ ಜಮೀನು ಪಡೆದಿರುವ ಎಲ್ಲರು ರೈತ ಸಹಕಾರ ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಹಾಗೂ ಇದರಿಂದ ಫಲಾನುಭವಿಗಳು ಸಾಲ ಪಡೆಯಬಹುದು ಎಂದರಲ್ಲದೆ, ಸಣ್ಣ ಹಿಡುವಳಿದಾರರಿಗೆ  ಸಾಲ ಕೊಡದಿದ್ದರೆ ನನಗೆ ದೂರವಾಣಿ ಮೂಲಕ ತಿಳಿಸಿ ಎಂದರು.
ಸಹಕಾರ ಇಲಾಖೆ ಬಡವರ ಪರವಾಗಿದೆ ಸಹಕಾರ ಬ್ಯಾಂಕ್ಗಳಲ್ಲಿ  ಸಾಲ ಪಡೆಯದವರು ಮೊದಲ ಸಂಘದ ಸದಸ್ಯರಾಗಿ ಎಂದ ಅವರು, ಯಾರಿಗೆ ಜಮೀನು ಇರುವುದಿಲ್ಲ ಅಂತಹವರು ಹೈನುಗಾರಿಕೆಗೆ ಮುಂದಾಗಿ ಅಂತಹವರಿಗೆ ಜಿಲ್ಲಾ ಕೋ ಆಪರೇಟಿವ್ನಿಂದ ಸಹಾಯ ಸಿಗಲಿದೆ ಎಂದರು.
ಈಗಾಗಲೇ ಹೈನುಗಾರಿಕೆಯ ಮೂಲಕ ಹಾಲಿನ ಉತ್ಪಾದನೆಯಲ್ಲಿ ತೊಡಗಿರುವವರಿಗೆ ನೇರವಾಗಿ ಪ್ರತಿ ವಾರ ಸಂಬಳ ಸಿಗುತ್ತಿದೆ, 2006-07ರಲ್ಲಿ ಹಾಲಿಗೆ 8.5ರೂ ಇತ್ತು 2012ರಲ್ಲಿ 22.5ರೂ ಆಗಿದ್ದು ಇದರಲ್ಲಿ ನೇರವಾಗಿ ರೈತರಿಗೆ 19.5ರೂ ಸಿಗುತ್ತಿದೆ ಅಲ್ಲದೆ 2ರೂ ಸಬ್ಸಿಡಿ ಹಣವಾಗಿ ಯಡಿಯೂರಪ್ಪನವರು ನೀಡಿದ್ದಾರೆ ಇದರ ಪರಿಣಾಮ ಜಮೀನು ಇಲ್ಲದವರು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಆಥರ್ಿಕವಾಗಿ ಸುಧಾರಿಸುತ್ತಿದ್ದಾರೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಹಕಾರಿ ಮುಖಂಡ ಸಿಂಗದಹಳ್ಳಿ ರಾಜ್ಕುಮಾರ್, ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರೇವಣ್ಣ ಶೆಟ್ಟಿ, ಗಾಣಿಗ ಸಮಾಜದ ಮುಖಂಡ, ಪುರಸಭಾ ಮಾಜಿ ಸದಸ್ಯ ಮುದ್ದವೀರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Sunday, October 28, 2012



ಭೋವಿ ಸಮಾಜಕ್ಕೆ ಆದ್ಯತೆ ನೀಡಿದವರನ್ನು  ಬೆಂಬಲಿಸಿ: ಶಾಸಕ ವೆಂಕಟರಮಣಪ್ಪ
ಚಿಕ್ಕನಾಯಕನಹಳ್ಳಿ,ಅ.27 : ಭೋವಿ ಜನಾಂಗವನ್ನು ನಿರ್ಲಕ್ಷ್ಯ ಮಾಡುವ ರಾಜಕಾರಣಿಗಳನ್ನು ತಿರಸ್ಕರಿಸುವ ಮೂಲಕ ಅವರಿಗೆ  ಬುದ್ದಿ ಕಲಿಸಬೇಕೆಂದು ಪಾವಗಡ ಶಾಸಕ ವೆಂಕಟರಮಣಪ್ಪ ಹೇಳಿದ್ದಾರೆ.
ತಾಲ್ಲೂಕಿನ ಬಡಕೇಗುಡ್ಲು ಬೋವಿ ಕಾಲೋನಿಯಲ್ಲಿ ನೂತನವಾಗಿ ನಿಮರ್ಿಸಿರುವ ರೇಣುಕಾ ಯಲ್ಲಮ್ಮದೇವಿ ದೇವಾಲಯದ ಪ್ರಾರಂಭೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಒಗ್ಗಟ್ಟು ನಮ್ಮ ಏಳಿಗೆಗೆ ರಹದಾರಿ, ನಿಮ್ಮ ಒಂದು ಕ್ಷಣದ ತಪ್ಪು ನಿಧರ್ಾರ ಐದು ವರ್ಷ ನೀವು ಅವರ ಮುಂದೆ ಕೈ ಕಟ್ಟಿಕೊಂಡು ನಿಲ್ಲುವಂತೆ ಮಾಡುತ್ತದೆ ಎಂದ ಅವರು ಚುನಾವಣೆಯಲ್ಲಿ ಕೈ ಮುಗಿದು ನಿಮ್ಮ ಮತಗಳನ್ನು ಪಡೆದು ಆಯ್ಕೆಯಾದ ಮೇಲೆ ನಿಮ್ಮನ್ನು ನಿರ್ಲಕ್ಷಿಸುವವರರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕಿದೆ ಎಂದರಲ್ಲದೆ, ಜನಾಂಗದ ಶಕ್ತಿ ಏನೆಂಬುದನ್ನು ಮತಗಳ ಮೂಲಕ ತೋರಿಸಿ, ನನ್ನ ಕ್ಷೇತ್ರದಲ್ಲಿ ಎಲ್ಲಾ ವರ್ಗದ, ಜಾತಿಯ ಜನರ ದೇವಾಲಯಗಳಿಗೆ ನೆರವು ನೀಡುವ ಸಲುವಾಗು 3 ಕೋಟಿ ವಿನಿಯೋಗಿಸಿದ್ದೇನೆ ಎಂದಿದ್ದಾರೆ.
ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಸುಮಾರು 30ಕಡೆ ಕಲ್ಯಾಣ ಮಂಟಪಗಳ ರೀತಿಯಲ್ಲಿ ಸಮುದಾಯ ಭವನಗಳನ್ನು ನಿಮರ್ಿಸಿದ್ದೇನೆ. ಇದರಿಂದ ಬಡ ಜನರ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತಿದೆ.
ಮೊದಲಿನಿಂದಲೂ ಕೊಕ್ಕರೆಗೊಂದು ಕೆರೆಯಿಲ್ಲ, ವಡ್ಡರಿಗೊಂದು ಊರಿಲ್ಲ ಎಂಬಂತೆ ನಮ್ಮ ಜನಾಂಗ ಎಂದೂ ಒಂದು ಕಡೆ ನೆಲೆ ನಿಂತಿಲ್ಲ. ಆದ್ದರಿಂದ ನಮ್ಮ ಜನಾಂಗ ಶೈಕ್ಷಣಿಕವಾಗಿ ಹಿಂದುಳಿದಿದೆ. ವಿದ್ಯವಾವಂತರಾಗದಿದ್ದರೆ ಬಡತನ ನಿವಾರಣೆಯಾಗುವುದಿಲ್ಲ. ಬೋವಿ ಜನಾಂಗ ಎಂದೂ ಕಷ್ಠಜೀವಿಗಳು. ವಿಧಾನಸೌಧ, ಕನ್ನಂಬಾಡಿ, ಅಷ್ಟೇ ಏಕೆ ಇಲ್ಲಿನ ಬೋರನಕಣಿವಯನ್ನು ಕಟ್ಟಿದಾರೆ. ಆದರೆ ಅದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದರು.
ಇಂದು ಸಹ ಅವರು ಕೂಲಿಯಿಂದಲೇ ಜೀವನ ನಿರ್ವಹಣೆ ಮಾಡಬೇಕಾಗಿದೆ, ನೂರು ರೂಗೆ ದುಡಿದರೆ 150 ಖಚರ್ು ಮಾಡುವ ಮನೋಭಾವನೆಯಿಂದ ಹಿಂದುಳಿದಿದ್ದೀರಿ. ಮುಂದಾದರು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿ ಎಂದರಲ್ಲದೆ, ಮದುವೆಗೆ ಅದ್ದೂರಿ, ಆಡಂಬರ ಬೇಡ. ಮದುವೆಗೆ ಪ್ರೀತಿಯೊಂದೇ ಸಾಕು. ಮುಂದಿನ ನಿಮ್ಮ ಜೀವನ ಬಹಳ ದೂರಸಾಗಬೇಕಿದೆ. ಆದ್ದರಿಂದ ಯಾವುದನ್ನೇ ಆದರೂ ಯೋಚಿಸಿ ನಿಧರ್ಾ ಕೈಗೊಳ್ಳಿ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಶಿಕ್ಷಿತರಲ್ಲೇ ಅದ್ದೂರಿ ವಿವಾಹಗಳು ಹೆಚ್ಚುತ್ತಿದ್ದು ಅದೇ ರೀತಿ ವಿಚ್ಛೇದನಗಳು ಸಹ ವಿದ್ಯಾವಂತರಲ್ಲೇ ಹೆಚ್ಚುತ್ತಿವೆ, ಇದು ಇಂದಿನ ನಮ್ಮ ಸಮಾಜಕ್ಕೆ ಆತಂಕಕಾರಿಯಾಗಿದೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಇಲ್ಲಿನ ಜನರಿಗೆ ಬಡತನವಿದ್ದರು ಭಕ್ತಿಗೆ ಬಡತನವಿಲ್ಲ ಎಂಬುದಕ್ಕೆ ನೀವು ನಿಮರ್ಿಸಿರುವ ದೇವಾಲಯವೇ ಸಾಕ್ಷಿ. ಈ ಭಾಗದ ಜನರ ನೀರಿನ ಕೊರತೆಯನ್ನು ನೀಗಿಸುವುದಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿಗಾಗಿ 102ಕೋಟಿ ಮೊತ್ತದ ಯೋಜನೆ ಮಂಜೂರಾಗಿದೆ ಎಂದರು,
ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಬೋವಿ ಸಮಾಜದವರು ಶ್ರಮ ಜೀವಿಗಳು, ಪ್ರತಿ ಗ್ರಾಮಗಳ ಕೆರೆ,ಕಟ್ಟೆ, ದೇವಸ್ಥಾನಗಳನ್ನು ಕಟ್ಟಿದವರು ಬೋವಿ ಜನಾಂಗದವರೇ ಎಂದ ಅವರು, ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ನೀಡಿ ಅವರ ಮುಂದಿನ ಭವಿಷ್ಯಕ್ಕೆ ದಾರಿಯಾಗಿ ಎಂದರಲ್ಲದೆ ಸಾಮೂಹಿಕ ವಿವಾಹದಿಂದ ಆಥರ್ಿಕ ಸಂಕಷ್ಟಗಳನ್ನು ನಿವಾರಿಸಬಹುದು ಎಂದರು.
ಸಮಾರಂಭದಲ್ಲಿ ತಿಮ್ಮನಹಳ್ಳಿ ಲೋಕೇಶ್ ಮಾತನಾಡಿದರು. ಜಿ.ಪಂ.ಸದಸ್ಯೆ ಲೋಹಿತಬಾಯಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಗ್ರಾ.ಪಂ.ಅಧ್ಯಕ್ಷೆ ಅನಸೂಯಮ್ಮ, ಬೋವಿ ಜನಾಂಗದ ಮುಖಂಡರಾದ ಕೆ.ಕೆ.ಹನುಮಂತಪ್ಪ, ನಾಗರಾಜು ಮುಂತಾದವರಿದ್ದರು.

ಚಿ.ನಾ.ಹಳ್ಳಿಯಲ್ಲಿ ಅ.29ರಂದು ವಾಲ್ಮೀಕಿ ಜಯಂತಿ
ಚಿಕ್ಕನಾಯಕನಹಳ್ಳಿ,ಅ.27 : ಶ್ರೀ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇದೇ 29ರ ಸೋಮವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್          ಮಹಷರ್ಿ ವಾಲ್ಮೀಕಿ ಭಾವಚಿತ್ರ ಅನಾವರಣಗೊಳಿಸಲಿದ್ದು ನಿವೃತ ಮುಖ್ಯೋಪಾಧ್ಯಾಯ ಸೋಮಶೇಖರಯ್ಯ ಮಹಷರ್ಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಧ್ಯಯನದ ವಿಭಾಗದ ಮುಖ್ಯಸ್ಥ ಡಾ.ಸಿದ್ದಗಂಗಮ್ಮ,  ಅಸಿಸ್ಟೆಂಟ್ ಪ್ರೊಫೆಸರ್ ಡಾ.ಪಿ.ಪರಮೇಶ್ವರ, ಕಲಾವಿದ ಶಂಕರಪ್ಪ,  ಸಮಾಜ ಸೇವಾಕರ್ತ ಶ್ರೀನಿವಾಸಶೆಟ್ಟಿರವರಿಗೆ ಸನ್ಮಾನಿಸಲಾಗುವುದು.

ಚಿ.ನಾ.ಹಳ್ಳಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ.
ಚಿಕ್ಕನಾಯಕನಹಳ್ಳಿ,ಅ27 :    ಕನ್ನಡ ರಾಜ್ಯೋತ್ಸವ  ಸಮಾರಂಭವನ್ನು ಇದೇ ನವಂಬರ್ 1ರ ಗುರುವಾರ ಬೆಳಗ್ಗೆ 9-00 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ  ಏರ್ಪಡಿಸಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ. ಸುರೇಶ್ಬಾಬು  ವಹಿಸಲಿದ್ದು ತಹಸೀಲ್ದಾರ್ ಎನ್.ಆರ್. ಉಮೇಶಚಂದ್ರ ಧ್ವಜಾರೋಹಣವನ್ನು ನೆರವೇರಿಸುವರು.
ಸಮಾರಂಭದಲ್ಲಿ ಜಾನಪದ ಕಲಾವಿದರಾದ ಕದುರಮ್ಮ,  ಹಾಮರ್ೋನಿಯಂ ಮಾಸ್ಟರ್ ಸಿ.ಎಸ್.ಗಂಗಾಧರಯ್ಯ ಮತ್ತು ರಂಗಭೂಮಿ ಕಲಾವಿದ ಶ್ರೀಬೋರಯ್ಯ ರವರಿಗೆ ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು,  ವಿಧಾನ ಪರಿಷತ್ ಮುಖ್ಯ ಸಚೇತಕ  ಎ.ಹೆಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ.ರಂ.ಆರ್.ಹುಲಿನಾಯ್ಕರ್, ವೈ.ಎ.ನಾಆಯಣಸ್ವಾಮಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ ಸೇರಿದಂತೆ ಹಲವರು ಉಪಸ್ಥಿತರಿರುವರು.

Friday, October 26, 2012



ಕೃಷಿ ಇಲಾಖೆಯ ನಿರ್ಲಕ್ಷ್ಯ: ನೂರಾರು ಎಕರೆ ರಾಗಿ ಫಸಲು ಹುಳುಗಳ ಪಾಲು, ಬೆಳೆದವನ ಹೊಟ್ಟೆಗೆ ತಣ್ಣೀರು ಬಟ್ಟೆ.
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಸೆ.26 : ಬರದಿಂದ ಬದುಕು ಮೂರಾಬಟ್ಟೆಯಾಗಿದೆ, ಹೆಂಗೋ ಅಂಗದಲ್ಲಿ ಭಂಗದಲ್ಲಿ ಉಸಿರಿಟ್ಟಕೊಂಡು ಜೀವನಕ್ಕೆ ಅಂತ ಅಷ್ಟೊ ಇಷ್ಟೋ ರಾಗಿ ಬೆಳೆಕೊಳ್ಳುತ್ತಿದಿವಿ, ಅದನ್ನೂ ಈ ಹುಳುಗಳು ಮಣಪಾಲು ಮಾಡ್ಯಾಕ್ಯಾವೆ, ನಮಗೀಗ ಹೊಟ್ಟೆಗೆ ತಣ್ಣೀರ ಬಟ್ಟೇನೇ ಗತಿ. ಇಷ್ಟಾದ್ರೂ ಕೃಷಿ ಇಲಾಖೆಯವರು ನಮ್ಮ ಹೊಲಗಳಿಗೆ ಬಂದು ನೋಡಿಲ್ಲ, ನಮ್ಮ ಕಷ್ಟ ಕೇಳಿಲ್ಲ. ನಾವೇ ಆಫೀಸ್ಗೆ ಹೋಗಿ ಹೇಳಿದ್ರೂವೇ ಎಂತಂದೊ ಒಂದಿಷ್ಟು ಔಷಧಿ ಕೊಟ್ಟು ಸಾಗ ಆಕ್ಯಾವರೇ, ನೋಡಿ ಸ್ವಾಮಿ ನಮ್ಮ ಜೀವನ ಹಿಂಗೆ ಬೀದಿ ಬಿದ್ದೋಗದೆ ಎಂದು ಗದ್ಗದಿತ ಧ್ವನಿಯಲ್ಲಿ ಹೇಳ್ತಾರೆ ಸಾಲ್ಕಟ್ಟೆ ಎ.ಕೆ.ಕಾಲೋನಿಯ ಸಣ್ಣ ಹಿಡುವಳಿದಾರ ಕರಿಯಪ್ಪ.
ಈ ನೊಂದ ಮಾತುಗಳು ಕೇವಲ ಒಬ್ಬರದ್ದಲ್ಲ, ತಾಲೂಕಿನ ಆಲದಕಟ್ಟೆ ಭಾಗದಿಂದ ಸಾಲ್ಕಟ್ಟೆವರೆಗಿನ ಸುಮಾರು 500 ಎಕರೆಗೆ ಹೆಚ್ಚು ಜಮೀನುಗಳ ನೂರಾರು ಬಡ ರೈತರ ಗೋಳು. ಮಳೆಯ ಅಭಾವದಿಂದಲೇ ಸುಮಾರು 2ತಿಂಗಳ ಹಿಂದಷ್ಟೇ ಬಿದ್ದ ಅಲ್ಪಸ್ವಲ್ಪ ಮಳೆಯಲ್ಲಿ  ಉಳುಮೆ ಮಾಡಿ ಬೆಳೆಯುತ್ತಿದ್ದ 500 ಎಕರೆಯಲ್ಲಿನ ರಾಗಿ ಬೆಳೆಯು ಹುಳುವಿನ ಹಸಿವಿಗೆ ನಾಶವಾಗಿ ರೈತರ ಹೊಟ್ಟೆಪಾಡಿನ ಬೆಳೆಗೆ ಕೊಡಲಿಪೆಟ್ಟು ಬಿದ್ದಿದೆ.
 ತಾಲ್ಲೂಕಿನ ಸಾಲ್ಕಟ್ಟೆ ಗ್ರಾಮದ ಬಸವರಾಜು, ಶ್ರೀರಂಗಯ್ಯ ಹಾಗೂ ಅಕ್ಕಪಕ್ಕದಲ್ಲಿನವರ ಜಮೀನಿನವರು, ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆಯವರ ಬಳಿ ತಮಗಾಗಿರುವ ನಷ್ಟವನ್ನು ವಿವರಿಸಿದರು. ಹೆಕ್ಟೇರ್ಗಟ್ಟಲೆ ರಾಗಿ ಬೆಳೆಗೆ ಹುಳುಗಳು ದಾಳಿ ಇಟ್ಟು ರಾಗಿ ಫಸಲನ್ನು ನಾಶಗೊಳಿಸಿ ರೈತರಿಗೆ ಸಿಗಬೇಕಿದ್ದ ಲಕ್ಷಾಂತರ ರೂಗಳಿಗೂ ಹೆಚ್ಚಿನ ಬೆಳೆಯನ್ನು ಹುಳು ನಾಶ ಮಾಡಿದೆ.
ರೈತಾಪಿ ವರ್ಗ ತಮ್ಮಲ್ಲಿರುವ ಅಲ್ಪ ಪ್ರಮಾಣದ ಸವಲತ್ತುಗಳಿಂದ ಬೆಳೆದ ಬೆಳೆಯು ನಾಶವಾಗಿರುವುದರಿಂದ ಬೆಳೆಯನ್ನೇ ನಂಬಿರುವ ರೈತರು ಮುಂದಿನ ಪರಿಸ್ಥಿತಿ ಬಗ್ಗೆ ಯೋಚಿಸುತ್ತಿದ್ದಾರೆ, ಅವರು ಹೇಳುವಂತೆ ಮುಂಜಾನೆ ಹೊತ್ತು ಇಂತಹ ಹುಳುಗಳು ರಸ್ತೆಯಲ್ಲೇ ಹರಿದುಕೊಂಡು ಹೋಗುತ್ತವೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ತಾಳದೆ ಹೊಲದ ಬದುಗಳಲ್ಲಿ ಹರಿದಾಟಿ ಅಲ್ಲಿರುವ ಹುಲ್ಲನ್ನು ತಿನ್ನುತ್ತಿವೆ, ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಹುಳುಗಳು ಬೆಳೆಯನ್ನು ನಾಶ ಮಾಡುತ್ತವೆ ಎಂದ ಅವರು ಈ ಬಗ್ಗೆ ಕೃಷಿ ಇಲಾಖೆಗೆ ತಿಳಿಸಿದರೂ ಅವರು ನಿರ್ಲಕ್ಷದಿಂದಿದ್ದಾರೆ  ಎಂದು ತಿಳಿಸಿದರಲ್ಲದೆ ಸಕರ್ಾರ ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ ರೈತರ ಆಥರ್ಿಕ ಪರಿಸ್ಥಿತಿ ಸುಧಾರಿಸುವಂತೆ ಆ ಭಾಗದ ಮುಖಂಡ ಸಾಲ್ಕಟ್ಟೆ ಶ್ರೀನಿವಾಸ ಆಗ್ರಹಿಸಿದ್ದಾರೆ. 





ನೇಕಾರರ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಜನ ಹೊರಡಲು ದೇವಾಂಗ ಸಂಘದ ಮನವಿ.

                                  
ಚಿಕ್ಕನಾಯಕನಹಳ್ಳಿ,ಅ.26 :  ತುಮಕೂರಿನಲ್ಲಿ ಇದೇ 28ರ ಭಾನುವಾರದಂದು ನಡೆಯಲಿರುವ ಜಿಲ್ಲಾ ನೇಕಾರರ ಸಮಾವೇಶಕ್ಕೆ ತಾಲ್ಲೂಕಿನ ಎಲ್ಲಾ ನೇಕಾರ ಬಂಧುಗಳು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾಧ್ಯಕ್ಷ  ಹಾಗೂ ದೇವಾಂಗ ಸಮುದಾಯದ ಮುಖಂಡ ಸಿ.ಟಿ.ವರದರಾಜು ಮನವಿ ಮಾಡಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೇಕಾರರಲ್ಲಿ 27 ಒಳಪಂಗಡಗಳಿದ್ದು ಈ ಎಲ್ಲಾ ಪಂಗಡಗಳು ಸಕರ್ಾರಿ ಸವಲತ್ತುಗಳಿಂದ ಹಾಗೂ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾವೆ, ಈ ಸೌಲಭ್ಯಗಳನ್ನು ಪಡೆಯಲು ನೇಕಾರರ ಸಮುದಾಯ ಸಮಾವೇಶ ನಡೆಸುತ್ತಿದೆ, ಅದಕ್ಕಾಗಿ ನೇಕಾರ ಸಮುದಾಯದವರಾದ ದೇವಾಂಗ ಸಮಾಜ, ಪದ್ಮಶಾಲಿ ಸಮಾಜ, ತೊಗಟವೀರ ಸಮಾಜ, ಕುರುಹಿನಶೆಟ್ಟಿ ಸಮಾಜ, ಪಟ್ಟಸಾಲೆ ಸಮಾಜ ಸೇರಿದಂತೆ  ಎಲ್ಲಾ ನೇಕಾರರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು, 
 ಆಥರ್ಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯ ಸೌಲಭ್ಯಗಳಲ್ಲಿ ಹಿಂದುಳಿದಿರುವ ನಾವು ಈ ಸಮಾವೇಶದ ಮುಖಾಂತರ ಸಂಘಟನೆಗೊಂಡು ಸಕರ್ಾರದ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಎಂದು ತಿಳಿಸಿದ ಅವರು ಸಮಾವೇಶದ ದಿವ್ಯ ಸಾನಿಧ್ಯ್ಯವನ್ನು ದಯಾನಂದಪುರಿಸ್ವಾಮಿಜಿ, ಪ್ರಭುಲಿಂಗಸ್ವಾಮಿಜಿ, ದಿವ್ಯಜ್ಞಾನಾನಂದಪುರಿ ಸ್ವಾಮಿ, ಶಂಕರಶಿವಾಚಾರ್ಯಸ್ವಾಮಿ, 1008 ಜಗದ್ಗುರು ಬಸವರಾಜಪಟ್ಟದಾರ್ಯಸ್ವಾಮಿರವರು ವಹಿಸಲಿದ್ದು ಸಮಾಜದ ಮುಖಂಡ ಎಂ.ಡಿ.ಲಕ್ಷೀನಾರಾಯಣ ಸಮಾವೇಶದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ದೇವಾಂಗ ಸಂಘದ ಕಾರ್ಯದಶರ್ಿ ಸಿ.ಎ.ಕುಮಾರಸ್ವಾಮಿ ಮಾತನಾಡಿ  ರಾಜ್ಯದಲ್ಲಿ 80ಲಕ್ಷ ಹಾಗೂ ಜಿಲ್ಲೆಯಲ್ಲಿ 2ಲಕ್ಷದಷ್ಟು ಜನರಿರುವ ನೇಕಾರ ಸಮುದಾಯ ಒಗ್ಗಟ್ಟಾಗಿ ಸಮಾವೇಶಗೊಂಡು ನೇಕಾರರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದ ಅವರು ಸಮಾವೇಶಕ್ಕೆ ತಾಲ್ಲೂಕಿನಿಂದ ಹತ್ತು ಜನಪದ ಕಲಾತಂಡಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದರು.
ದೇವಾಂಗ ಸಂಘದ ಮುಖಂಡ ಬನಶಂಕರಯ್ಯ ಮಾತನಾಡಿ ತಾಲ್ಲೂಕಿನಲ್ಲಿ 10ಸಾವಿರಕ್ಕೂ ಹೆಚ್ಚು ಜನರಿರುವ ಇರುವ ನೇಕಾರರು ಸಮಾವೇಶಕ್ಕೆ ಪಾಲ್ಗೊಂಡು ನೇಕಾರ ಸಮುದಾಯದ ಸಮಸ್ಯೆಗಳನ್ನು ತಿಳಿಸಬೇಕು ಎಂದ ಅವರು ಆ ಮೂಲಕ ನೇಕಾರರು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಂಗ ಸಂಘದ ಅಧ್ಯಕ್ಷ ಕೋದಂಡರಾಮಯ್ಯ, ಸಹಕಾರ್ಯದಶರ್ಿ ಅಶೋಕ್, ಕುರುಹೀನಶೆಟ್ಟಿ ಸಮಾಜದ ನಾಗರಾಜು, ಪ್ರಮೋದ್, ನೇಕಾರ ಧನಪಾಲ್, ರಂಗನಾಥ್ ಉಪಸ್ಥಿತರಿದ್ದರು.


ಚಿ.ನಾ.ಹಳ್ಳಿ: ಕಾಂಗ್ರೇಸ್ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಅ.26 : ಕಾಂಗ್ರೆಸ್ನೊಂದಿಗೆ ಬನ್ನಿ-ಬದಲಾವಣೆ ತನ್ನಿ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ನವಂಬರ್ 6ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಏರ್ಪಡಿಸಿದ್ದು ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವಭಾವಿ ಸಭೆಯನ್ನು ಇದೇ 29ರ ಸೋಮವಾರ ಮಧ್ಯಾಹ್ನ 12ಕ್ಕೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ  ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ಆರ್.ನಾರಾಯಣ್, ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು  ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 


Wednesday, October 24, 2012




ತಾಲೂಕು ಹಾಗೂ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಗಳ ದಿನಾಂಕಗಳ ನಿಗಧಿ
ಚಿಕ್ಕನಾಯಕನಹಳ್ಳಿ,ಅ.24 : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ 5ನೇ ಸಮ್ಮೇಳನವನ್ನು ಹಂದನಕೆರೆ ಹೋಬಳಿಯಲ್ಲಿ ನಡೆಸಲು ಹಾಗೂ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲೂ ಹೋಬಳಿ ಮಟ್ಟದ ಸಮ್ಮೇಳನ ನಡೆಸಲು ಸಮಿತಿ ತೀಮರ್ಾನಿಸಿದೆ ಎಂದು  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕು ಸಮ್ಮೇಳನವನ್ನು ಹಂದನಕೆರೆಯಲ್ಲಿ ಮುಂದಿನ ಡಿಸೆಂಬರ್ 29 ರಂದು ಹಾಗೂ ನಗರ ಕೇಂದ್ರಿತ ಹೋಬಳಿ ಘಟಕ ಸಮ್ಮೇಳನವನ್ನು ಕೇದಿಗೆಹಳ್ಳಿ ಪಾಳ್ಯದಲ್ಲಿ ನವಂಬರ್ 24ರಂದು, ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆಯಲ್ಲಿ ಕಡೆ ಕಾತರ್ಿಕದ ಮುಂದಿನ ಶನಿವಾರದಂದು, ಹುಳಿಯಾರಿನ ಬೋರನಕಣಿವೆಯಲ್ಲಿ ನವಂಬರ್ 30ರಂದು, ಕಂದಿಕೆರೆಯಲ್ಲಿ ಡಿಸೆಂಬರ್ 8ರಂದು ಸಮ್ಮೇಳನಗಳನ್ನು ನಡೆಸಲಾಗುವುದು ಎಂದ ಅವರು, ಸಮ್ಮೇಳನದ ದಿನಾಂಕವನ್ನು ಈಗ ನಿಗಿಧಿ ಮಾಡಿದ್ದು ತಾಲ್ಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಸಮ್ಮೇಳನಾಧ್ಯಕ್ಷರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು  ಎಂದರು.
ಸಮ್ಮೇಳನಕ್ಕಾಗಿ ಈಗಾಗಲೇ ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದಲ್ಲಿ ತಾಲೂಕಿನ  ಪ್ರಸ್ತುತ ಸಮಸ್ಯೆಗಳ ಬಗ್ಗೆ ಚಚರ್ಿಸಲಾಗುವುದು ಎಂದರಲ್ಲದೆ, ಸಮ್ಮೇಳನಗಳಲ್ಲಿ  ಯಾವುದೇ ರಾಜಕೀಯ ಸೇರಿಸದಂತೆ ಮನವಿ ಮಾಡಿದ ಅವರು ಸಮ್ಮೇಳನದಲ್ಲಿ ಮೂರು ಗೋಷ್ಠಿಗಳನ್ನು ಏರ್ಪಡಿಸಲಾಗುವುದು ಹಾಗೂ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ 6 ಜನ ಗಣ್ಯರಿಗೆ ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಮ್ಮೇಳನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಾ.ಚಿ.ರಾಜಕುಮಾರ್, ಕನ್ನಡ ಸಾಹಿತ್ಯ ಪರಿಷತ್ನ ಸದಸ್ಯರಾದ ಬೆಳಗುಲಿ ಶಶಿಭೂಷಣ್, ಹುಳಿಯಾರ್ ಷಬ್ಬೀರ್, ನಂದೀಶ್ಬಟ್ಲೇರಿ, ರವಿಕುಮಾರ್, ಎಸ್.ಬಿ.ಕುಮಾರ್ ಉಪಸ್ಥಿತರಿದ್ದರು.

Monday, October 22, 2012


ಉಮೇಶ್ಕತ್ತಿ ರಾಜೀನಾಮೆಗೆ ಆಗ್ರಹ 


ಚಿಕ್ಕನಾಯಕನಹಳ್ಳಿ,ಅ.22 :  ಸಚಿವ ಉಮೇಶ್ಕತ್ತಿ ರಾಜ್ಯವನ್ನು ಇಬ್ಭಾಗ ಮಾಡುವ ಹೇಳಿಕೆ ಖಂಡನೀಯ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ತಾಲ್ಲೂಕು ಕನ್ನಡಪರ ಸಂಘಟನೆಗಳು ಒತ್ತಾಯಿಸಿದವು.
ಪಟ್ಟಣದ ನೆಹರು ಸರ್ಕಲ್ ಬಳಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಸಚಿವ ಉಮೇಶ್ಕತ್ತಿ ನೀಡಿರುವ ಕನರ್ಾಟಕ ಇಬ್ಬಾಗ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ ರಾಜ್ಯದ ಏಕೀಕರಣಕ್ಕಾಗಿ ಲಕ್ಷಾಂತರ ಜನ ಶ್ರಮಿಸಿ, ಕನರ್ಾಟಕ ರಾಜ್ಯ ರಚಿಸಿ ರಾಜ್ಯದ ಏಕತೆ, ಐಕ್ಯತೆಯನ್ನು ಎತ್ತಿ ಹಿಡಿದಿರುವ ಸಂದರ್ಭದಲ್ಲಿ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ಖಂಡನೀಯವಾದುದು, ಆಲೂರು ವೆಂಕಟರಾಯರು, ಗಂಗಾಧರ್ರಾವ್ ದೇಶಪಾಂಡೆಯಂತಹ ಹಲವರು ರಾಜ್ಯದ ಏಕೀಕರಣಕ್ಕಾಗಿ ದುಡಿದು ಅಖಂಡ ಕನರ್ಾಟಕ ಸೃಷ್ಠಿಸಿದ್ದಾರೆ, ಆದರೆ ಸಚಿವರಾಗಿ ರಾಜ್ಯವನ್ನು ಇಬ್ಬಾಗ ಮಾಡುವ ಹೇಳಿಕೆ ಸರಿಯಲ್ಲ ಅವರ ಸಚಿವ ಸ್ಥಾನದ ರಾಜೀನಾಮೆ ಪಡೆಯಬೇಕೆಂದು ತಿಳಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದ ಘನತೆಯನ್ನು ಎತ್ತಿ ಹಿಡಿದು ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತೇನೆಂದು ತಿಳಿಸಿ  ಈಗ ಪ್ರತ್ಯೇಕ  ರಾಜ್ಯದ ಕೂಗು ಹರಿಸಿರುವುದು ಅವರ ಮೂರ್ಖತನದ ಪರಮಾವಧಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕನರ್ಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿ.ಟಿ.ಗುರುಮೂತರ್ಿ , ತಾ.ಅಭಾವಿಪ ಪ್ರಮುಖ್ ಚೇತನ್ಪ್ರಸಾದ್, ಕರವೇಯ ವಾಸು, ಎಸ್.ಬಿ.ಕುಮಾರ್, ಶಿವಣ್ಣ  ಮುಂತಾದವರಿದ್ದರು.

Saturday, October 20, 2012


ಚಿಕ್ಕನಾಯಕನಹಳ್ಳಿ,ಅ.16 : ತಾಲ್ಲೂಕಿನ ಹಂದನಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಜಮೀನಿನ ಸಂಬಂಧ ಪ್ರಕರಣದ ನಡೆದಿದ್ದ ಗಲಾಟೆಯಲ್ಲಿ ಕೆಂಪಣ್ಣ ಎಂಬ ವ್ಯಕ್ತಿಗೆ ಇಲ್ಲಿನ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ವೀಣಾ.ಎನ್ರವರು ಒಂದು ವರ್ಷ ಜೈಲುವಾಸ ಮತ್ತು ಐದುನೂರು ರೂಪಾಯಿ ದಂಡ ವಿಧಿಸಿ ತೀಪರ್ು ನೀಡಿದ್ದಾರೆ.
  2010, ಜೂನ11ರಂದ ದಾಖಲಾಗಿದ್ದ ಪ್ರಕರಣದ ಆರೋಪಿಗಳಾದ ಕೆಂಪಣ್ಣ, ಈತನ ಹೆಂಡತಿ ಸುಶೀಲಮ್ಮ, ಇವರ ಮಗಳು ಗೌರಮ್ಮ, ಹಾಗೂ ಗೌರಮ್ಮನ ಗಂಡ ಕೆಂಪಯ್ಯ ಇವರುಗಳು ಜಮೀನಿನ ದ್ವೇಷದಿಂದ ಸರೋಜಳಮ್ಮನನ್ನು ಹೊಡೆಯಬೇಕೆಂಬ ಉದ್ದೇಶದಿಂದ ಅವ್ಯಾಚ್ಯಾ ಶಬ್ದಗಳಿಂದ ಬೈದು, ಆರೋಪಿ ಕೆಂಪಣ್ಣ ದೊಣ್ಣೆಯಿಂದ ಆಕೆಯ ಬಲಗೈಗೆ ಹೊಡೆದು ಬಲಗೈ ಮುರಿದಿದ್ದು ಸುಶೀಲಮ್ಮ, ಗೌರಮ್ಮ, ಸರೋಜಳಮ್ಮನ ಮೇಲೆ ಆರೋಪಿತರು ಹಲ್ಲೆ ಮಾಡಿ ಸರೋಜಮ್ಮಳಿಗೆ ಪ್ರಾಣ ಬೆದರಿಕೆ ಹಾಕಿದ್ದರ ಮೇರೆಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರಿಗೆ ಭಾರತೀಯ ದಂಡ ಸಂಹಿತಿ ಕಲಂ 504, 506, 324ರ ಅಡಿಯಲ್ಲಿ ತಲಾ 6ತಿಂಗಳು ಜೈಲುವಾಸ ಇಲ್ಲವೇ 500ರೂ ದಂಡ ವಿಧಿಸಿ ನ್ಯಾಯಾಲಯ ತೀಪರ್ು ನೀಡಿದೆ.
ರಾಜ್ಯ ಸಕರ್ಾರದ ಪರವಾಗಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ ವಾದಿಸಿದ್ದರು.
ತೆಂಗು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ ನಿಗಧಿಗೆ ಒತ್ತಾಯ: ಸಂಸದ ಜಿ.ಎಸ್.ಬಿ.
ಚಿಕ್ಕನಾಯಕನಹಳ್ಳಿ,ಅ.14 : ತೆಂಗು ಬೆಳೆಯು ದೇಶದಲ್ಲಿ ಶೇ. 47ರಷ್ಟು ಮಾತ್ರ ಉತ್ಪಾನೆಯಾಗುತ್ತಿದೆ, ಉಳಿದ ಶೇ.53ರಷ್ಟು ತೆಂಗನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಇದರಿಂದ ಕೊಬ್ಬರಿ ಬೆಲೆಗಿಂತ ಪಾಮಾಯಿಲ್(ತಾಳೆ ಎಣ್ಣೆ)ನ ಬೆಲೆ ಹೆಚ್ಚುತ್ತಿದೆ ಇದನ್ನು ತಡೆಗಟ್ಟಲು ತೆಂಗು ಬೆಳೆಗಾರರು ಒಗ್ಗಟ್ಟಾಗಿ ಬೆಳೆಯನ್ನು ಹೆಚ್ಚಿಸಿ ಕೊಬ್ಬರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಬೇಕು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ತೆಂಗು ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಂಗು ಬೆಳೆಗಾರರ ಅಭಿವೃದ್ದಿಗಾಗಿ ಕೇಂದ್ರ ಸಕರ್ಾರ ನೀಡುತ್ತಿರುವ ಸವಲತ್ತನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಆದರೆ ಬೆಳೆಗಾರರು ಸವಲತ್ತನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದರೆ ಎಂದ ಅವರು ಕೇರಳ, ಕನರ್ಾಟಕ, ಆಂದ್ರಪ್ರದೇಶ, ತಮಿಳುನಾಡಿನ ರೈತರಿಗೆ ತೆಂಗು ಬೆಳೆ ಉತ್ಪಾದಿಸಲು ಅಲ್ಲಿನ ಸಕರ್ಾರಗಳು ಉತ್ತಮ ಅವಕಾಶ ಕಲ್ಪಿಸುತ್ತಿವೆ ಎಂದರು.
ಬೆಳೆಗಾರರು ಉತ್ತಮ ತೆಂಗನ್ನು ಬೆಳೆಯಲು  ತಾವು ಮಾಡುವ ಪರಾಂಪರಿಕ ಕೃಷಿಯೊಂದಿಗೆ ಸಾವಯುವ ಕೃಷಿ, ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡಿದರೆ ಹೆಚ್ಚು ಬೆಳೆ ಬೆಳೆಯಬಹುದು ಎಂದರಲ್ಲದೆ ತೆಂಗಿನ ಬೆಳೆಯಲ್ಲಿ ರಸಸೋರುವ ರೋಗ, ಕೆಂಪುಮೂತಿ ರೋಗವನ್ನು ತಡೆಗಟ್ಟಬೇಕು, ಇಲ್ಲವಾದರೆ ಈ ರೋಗದಿಂದ ಬೆಳೆಗೆ ಹೆಚ್ಚು ತೊಂದರೆಯಾಗುತ್ತದೆ, ರಾಜ್ಯದಲ್ಲಿ ತೆಂಗುಬೆಳೆಯಲ್ಲಿ ರಸಸೋರುವ ರೋಗ ಹೆಚ್ಚಾಗಿ ಕಂಡ ಬರುತ್ತಿದೆ ಆದ್ದರಿಂದ ರೈತರು ಈ ರೋಗ ತಡೆಗಟ್ಟಲು ಕಾಳಜಿವಹಿಸಬೇಕು ಎಂದರು.
 ಹುಳಿಯಾರಿನಲ್ಲಿ ನೆಫೆಡ್ ಕೇಂದ್ರ ಇರುವಂತೆ ಚಿಕ್ಕನಾಯಕನಹಳ್ಳಿಯಲ್ಲಿ ಹಾಗೂ   ಇತರೆಡೆಗಳಲ್ಲೂ  ಕೊಬ್ಬರಿ ನೆಫೆಡ್ ಕೇಂದ್ರ ತೆರೆಯಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಇಂತಹ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಈಡೀ ರಾಜ್ಯಾದ್ಯಾಂತ ತೆಂಗು ಬೆಳೆಗಾರರು, ತೆಂಗು ಮಾರಾಟಗಾರರಿಗೆ ಹಲವಾರು ಸ್ಫಧರ್ಿಗಳಿದ್ದಾರೆ ಇಂತಹ ಸಂದರ್ಭದಲ್ಲಿ ಉತ್ಪಾದನೆ, ಮಾರಾಟ ಮಾಡುವಾಗ ಮೋಸ ಮಾಡುವ ವರ್ತಕರಿರುತ್ತಾರೆ ಇದನ್ನು ಗಮನದಲ್ಲಿಟ್ಟುಕೊಂಡು ರೈತರು ವ್ಯವಹಾರ ನಡೆಸಬೇಕು ಎಂದರು.
ಸಮಾರಂಭದಲ್ಲಿ ತಾಲ್ಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು, ತೆಂಗು ಬೆಳೆಗಾರರ ಜಿಲ್ಲಾ ಸಂಚಾಲಕ ಎಂ.ಬಿ.ಸಿದ್ದಪ್ಪ, ತಿಪಟೂರು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಸ್ವಾಮಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ರೈತ ಮುಖಂಡ ಸತೀಶ್ಕೆಂಕೆರೆ ಮತ್ತಿತರರು ಉಪಸ್ಥಿತರಿದ್ದರು.


ತಾ.ಪಂ. ಗದ್ದುಗೆಗೆ ಚುನಾವಣೆ: ಬಿ.ಜೆ.ಪಿ.ಯ.ಜಗದೀಶ್ ಅಧ್ಯಕ್ಷ, ಜೆ.ಡಿ.ಯು.ನ.ಲತಾ ಉಪಾಧ್ಯಕ್ಷೆ
ಚಿಕ್ಕನಾಯಕನಹಳ್ಳಿ,ಅ.19: ತಾ.ಪಂ. ಅಧ್ಯಕ್ಷರಾಗಿ ಬಿ.ಜೆ.ಪಿ.ಯ ಜೆ.ಸಿ.ಪುರ ಕ್ಷೇತ್ರದ ಸದಸ್ಯ ಎಂ.ಎಂ.ಜಗದೀಶ್ 12 ಮತಗಳನ್ನು ಪಡೆದು ಆಯ್ಕೆಯಾದರೆ, ತೀರ್ಥಪುರ ಕ್ಷೇತ್ರದ ಎಂ.ಇ.ಲತಾ ಕೇಶವಮೂತರ್ಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಶಿಲ್ಪ ತಿಳಿಸಿದರು.
ಒಟ್ಟು 19 ಸದಸ್ಯ ಬಲವಿರುವ ತಾ.ಪಂ.ಸಮಿತಿಯಲ್ಲಿ ಜೆ.ಡಿ.ಎಸ್.ನ 7ಸದಸ್ಯರು  ಬಿ.ಜೆ.ಪಿ.6 ಹಾಗೂ ಜೆ.ಡಿ.ಯು 6 ಸಂಖ್ಯಾಬಲಹೊಂದಿದೆ, ಅಧ್ಯಕ್ಷರ ಹುದ್ದೆಗೆ ಇಬ್ಬರು ಸ್ಪಧರ್ೆಗಿಳಿದಿದ್ದರು, ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದ ಅಧ್ಯಕ್ಷರ ಹುದ್ದೆಗೆ ಬಿ.ಜೆ.ಪಿ.ಯಜಗದೀಶ್ 12 ಮತಗಳನ್ನು ಪಡೆದರೆ, ಜೆ.ಡಿ.ಎಸ್.ನ ಎ.ಜಿ.ಕವಿತ 7 ಮತಗಳಿ ತೃಪ್ತಿ ಪಡೆದುಕೊಳ್ಳಬೇಕಾಯಿತು.
ಹೊಂದಾಣಿಕ ಸೂತ್ರದಂತೆ ಅಧ್ಯಕ್ಷ ಹುದ್ದೆ:  ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷ ಎಂ.ಎಂ.ಜಗದೀಶ್, ಈ ಚುನಾವಣೆಯಲ್ಲಿ ಬಿ.ಜೆ.ಪಿ ಹಾಗೂ ಜೆ.ಡಿ.ಯು ಹೊಂದಾಣಿಕೆ ಮಾಡಿಕೊಂಡಿದ್ದು, ಅದರ ಪ್ರಕಾರ ನಾನು 6 ತಿಂಗಳ ಅವಧಿಗೆ ಅಧ್ಯಕ್ಷನಾಗಿರುವುದಾಗಿ ತಿಳಿಸಿದರಲ್ಲದೆ, ಮುಂದಿನ ಆರು ತಿಂಗಳನಂತರ  ಅಧ್ಯಕ್ಷ ಗಾಧಿಯನ್ನು  ಜೆ.ಡಿ.ಯು.ಗೆ ಬಿಟ್ಟುಕೊಡಲು ಸಿದ್ದ ಎಂದರು.
ಉಪಾಧ್ಯಕ್ಷೆ ಲತಾ ಕೇಶವಮೂತರ್ಿ ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಮುಖಂಡ ಹಾಗೂ ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ರವರ ಸಹಕಾರದಿಂದ ನಾನು ಈ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು ಎಂದ ಅವರು, ಈ ಮೂಲಕ ಕಾಡು ಗೊಲ್ಲ ಸಮಾಜದ ಮಹಿಳೆಯೊಬ್ಬಳು ಪ್ರಥಮ ಬಾರಿಗೆ ತಾ.ಪಂ. ಉಪಾಧ್ಯಕ್ಷರ ಹುದ್ದೆ ಅಲಂಕರಿಸಿದಂತಾಗಿದೆ ಎಂದರು.
ರಸ್ತೆಗಿಳಿದ ಜೆ.ಡಿ.ಎಸ್. ಸದಸ್ಯರು: ಬಿ.ಜೆ.ಪಿ. ಸದಸ್ಯರು ಮೋಸ ಮಾಡಿದ್ದಾರೆ, ಕೆ.ಎಸ್.ಕಿರಣ್ಕುಮಾರ್ ವಚನ ಭ್ರಷ್ಟರಾಗಿದ್ದಾರೆ ಎಂಬ ಘೋಷಣೆಗಳ ಮೂಲಕ ರಸ್ತೆಗಿಳಿದ ಜೆ.ಡಿ.ಎಸ್.ನ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಅವರ ಬೆಂಬಲಿಗರು ಐ.ಬಿ.ಮುಂಭಾಗದಲ್ಲಿ ರಸ್ತೆಗಿಳಿದು ಪ್ರತಿಭಟಿಸಲು ಮುಂದಾದರು, ಕಳೆದ ಅವಧಿಯಲ್ಲಿ ನಮ್ಮೊಂದಿಗೆ ಅಧಿಕಾರ ಹಂಚಿಕೊಂಡ ಬಿ.ಜೆ.ಪಿ.ಯವರು  ಅಧ್ಯಕ್ಷರಾಗಿ ಮೆರೆದು, ಈಗ ನಮ್ಮ ಕಡೆಯವರು  ಅಧ್ಯಕ್ಷರಾಗುವ ಹಂತದಲ್ಲಿ ನಮ್ಮಿಂದ ದೂರವಾಗಿ ಜೆ.ಡಿ.ಯು ಸದಸ್ಯರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕೆಲಕಲ ರಸ್ತೆ ಮಧ್ಯೆ ಕುಳಿತುಕೊಂಡರಾದರೂ ಪೊಲೀಸರ ಮಧ್ಯೆ ಪ್ರವೇಶದಿಂದ ಜೆ.ಡಿ.ಎಸ್.ನವರು ರಸ್ತೆಯನ್ನು ತೆರವುಗೊಳಿಸಿ ವಾಹನಗಳು ಓಡಾಡಲು ಅನವು ಮಾಡಿದರು.
ಹಲವು ಕುತೂಹಲಗಳನ್ನಿಟ್ಟುಕೊಂಡಿದ್ದ ಬಿ.ಜೆ.ಪಿ, ಜೆ.ಡಿ.ಎಸ್ ಹಾಗೂ ಜೆ.ಡಿ.ಯು ಪಕ್ಷದ ಬೆಂಬಲಿಗರು, ಭಾರಿ ಸಂಖ್ಯೆಯಲ್ಲಿ ತಾ.ಪಂ.ಯ ಸುತ್ತಾಮುತ್ತಾ ಸೇರಿದ್ದರು. ಹಲವು ಗೊಂದಲಗಳಿಗೆ ಕಾರಣವಾಗಿದ್ದ ಚುನಾವಣೆಯ ಫಲಿತಾಂಶವನ್ನು ತಿಳಿಯಲು ಸೇರಿದ್ದ ಜನರನ್ನು ಸಮರ್ಥರೀತಿಯಲ್ಲಿ ಹತೋಟಿಗೆ ತೆಗೆದುಕೊಂಡಿದ್ದ ಪೊಲೀಸರು,  ಶಾಂತರೀತಿಯಿಂದ ಚುನಾವಣೆ ನಡೆಯುವಂತೆ ನೋಡಿಕೊಂಡರಲ್ಲದೆ, ವಿಜಯೋತ್ಸವದ ಮೇರವಣಿಗೆಯನ್ನು ದಕ್ಷರೀತಿಯಲ್ಲಿ ನಿಭಾಯಿಸಿದರು.   

ಮಾತಿಗೆ ತಪ್ಪಿದ ಬಿ.ಜೆ.ಪಿ.: ಶಾಸಕ ಸಿ.ಬಿ.ಎಸ್. ಆರೋಪ
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಪಂಚಾಯಿತಿ ಚುನಾವಣೆಯ ಅಧಿಕಾರಕ್ಕಾಗಿ ತಾಲೂಕು ಬಿ.ಜೆ.ಪಿ. ಮಾತಿಗೆ ತಪ್ಪಿ, ವಚನ ಭ್ರಷ್ಟತನವನ್ನು ಪ್ರದಶರ್ಿಸುವ ಮೂಲಕ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ರವರು ಒಂದು ಸಮಾಜಕ್ಕೆ ಸೀಮಿತವೆಂಬುದನ್ನು ಪ್ರದಶರ್ಿಸಿದ್ದಾರೆ ಶಾಸಕ ಸಿ.ಬಿ.ಸುರೇಶ್ ಬಾಬು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅವಧಿಯ ಅಧ್ಯಕ್ಷರ ಅವಧಿಯಲ್ಲಿ ಜೆ.ಡಿ.ಎಸ್.ನೊಂದಿಗೆ ಒಪ್ಪಂದ ಮಾಡಿಕೊಂಡ ಬಿ.ಜೆ.ಪಿ.ಯವರು ಅವರು ಅಧ್ಯಕ್ಷ ಪದವಿ ಇಟ್ಟುಕೊಂಡು ನಮಗೆ ಉಪಾಧ್ಯಕ್ಷ ಪದವಿಯನ್ನು ಕೊಟ್ಟರು. ಬಿ.ಜೆ.ಪಿಯವರ ಒಪ್ಪಂದಂತೆ ಈ ಅವಧಿಯಲ್ಲಿ ಜೆ.ಡಿ.ಎಸ್.ಗೆ  ಅಧ್ಯಕ್ಷ ಪದ ವಿ ಕೊಡಬೇಕಾಗುತ್ತದೆ ಎಂಬ ಧೋರಣೆಯಿಂದ ಜೆ.ಡಿ.ಯು.ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಮತ್ತೇ ಬಿ.ಜೆ.ಪಿ.ಯವರು ಅದರಲ್ಲೂ ಅವರ ಸಮಾಜದವರೇ ಅಧ್ಯಕ್ಷರಾಗುವಂತೆ ನೋಡಿಕೊಳ್ಳುವ ಮೂಲಕ ಬಿ.ಜೆ.ಪಿ.ಯವರ ಕೋಮುವಾದಿತನವನ್ನು ಮತ್ತೇ ಪ್ರದಶರ್ಿಸಿದ್ದಾರೆ, ಇದಕ್ಕೆ ಮುಂದಿನ ಚುನಾವಣೆಗಳಲ್ಲಿ ಬಿ.ಜೆ.ಪಿ.ಗೆ ತಕ್ಕ ಪಾಠ ಜನರೇ ಕಲಿಸಲಿದ್ದಾರೆ ಎಂದರು.
ತಾ.ಪಂ.ಚುನಾವಣೆ ಸಂಬಂಧ ಹಿಂದಿನ ಒಪ್ಪಂದದ ಬಗ್ಗೆ ನೆನಪಿಸಲು ನಾನು ದೂರವಾಣಿ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಅವರ ಮೊಬೈಲ್ನ ಸ್ವಿಚ್ ಆಫ್ ಮಾಡಿಕೊಳ್ಳುವ ಮೂಲಕ ತಮ್ಮ ಅಸಹಕಾರವನ್ನು ಪ್ರದಶರ್ಿಸಿದರು ಎಂದರು.
ಇನ್ನು ಮುಂದೆ ಜೆ.ಡಿ.ಎಸ್ ಯಾವುದೇ ಸಂದರ್ಭದಲ್ಲೂ ಬಿ.ಜೆ.ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟ ಪಡಿಸಿದ ಅವರು, ಈ ವಿಷಯವನ್ನು ನಮ್ಮ ಕಾರ್ಯಕರ್ತರು ಜನರ ಮುಂದಿಟ್ಟು ಮುಂದಿನ ಚುನಾವಣೆಗಳಿಗೆ ಹೋಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ.ಎಸ್.ನ ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಕಲ್ಪವೃಕ್ಷ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ರಮೇಶ್, ಜೆ.ಡಿ.ಎಸ್.ಮುಖಂಡ ರಾಮಚಂದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾ.ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ ನಿಧನ
ಚಿಕ್ಕನಾಯಕನಹಳ್ಳಿ,ಅ.19 : ತಾಲ್ಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ 15ವರ್ಷಗಳ ಕಾಲ ಹಾಗೂ ಕಾರ್ಯದಶರ್ಿಯಾಗಿ 10ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕ ಎಂ.ನರಸಿಂಹಯ್ಯನವರು(86) ವಿಧಿವಶರಾಗಿದ್ದಾರೆ.
ಎಂ.ನರಸಿಂಹಯ್ಯನವರು ಬಿ.ಎ.ಪಧವೀದರರಾಗಿದ್ದು, ಇವರು ಶಿಕ್ಷಕ ವೃತ್ತಿಯನ್ನು ತಿಮ್ಮನಹಳ್ಳಿಯಿಂದ ಪ್ರಾರಂಭಿಸಿ, ಚಿಕ್ಕನಾಯಕನಹಳ್ಳಿ, ಕಿಬ್ಬನಹಳ್ಳಿಯಲ್ಲಿ ವೃತ್ತಿ ನಿರ್ವಹಿಸಿ ಚಿಕ್ಕನಾಯಕನಹಳ್ಳಿಯ ಕುರುಬರಶ್ರೇಣಿಯಲ್ಲಿ ನಿವೃತ್ತಿ ಹೊಂದಿರುತ್ತಾರೆ. ನಂತರ ಚಿಕ್ಕನಾಯಕನಹಳ್ಳಿಯ ತಾಲ್ಲೂಕು ನಿವೃತ್ತಿ ಶಿಕ್ಷಕರ ಸಂಘದಲ್ಲಿ ಸೇವೆ ಸಲ್ಲಿಸಿ ಅವರ ಅವಧಿಯಲ್ಲಿ ಸಂಘಕ್ಕೆ ಕೆಳ ಮತ್ತು ಮೊದಲ ಅಂತಸ್ಥಿನ ಕಟ್ಟಡ ನಿಮರ್ಾಣ ಮಾಡಿದ್ದಾರೆ.
ಮೈಸೂರಿನಲ್ಲಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಇವರ ಕಾರ್ಯವೈಖರಿಯನ್ನು ಮೆಚ್ಚಿ ಅಭಿನಂದಿಸಲಾಗಿತ್ತು. ಇವರು ಕಳೆದ  ಹದಿನೈದು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಇವರು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಾದ ವಿಜ್ಞಾನ ಸಂಘದ ಅಧ್ಯಕ್ಷೆ ಹಾಗೂ ತೀರ್ಥಪುರ ಸಕರ್ಾರಿ ಕಾಲೇಜ್ನ ಪ್ರಾಚಾಯರ್ಾರಾದ  ಎನ್.ಇಂದಿರಮ್ಮ ನವರನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ಕಂದಿಕೆರೆಯ ಅವರ ಜಮೀನಿನಲ್ಲಿ ಮಾಡಲಾಯಿತು.
ಪಾಥರ್ೀವ ಶರೀರಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಮುಷ್ಕರ
ಚಿಕ್ಕನಾಯಕನಹಳ್ಳಿ,ಅ.19 : ಖಾಯಮಾತಿ, ಕನಿಷ್ಟಕೂಲಿ, ಪಿಂಚಣಿ ಹಾಗೂ ಉಪಧನ(ಗ್ರಾಚ್ಯುಯಿಟಿ) ಮುಂತಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಇಲ್ಲಿನ ಅಂಗನವಾಡಿ ಕಾರ್ಯಕತರ್ೆಯರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿಯವರೆಗೆ ಹೊರಟ ಪ್ರತಿಭಟನಾ ಮೆರವಣಿಯಲ್ಲಿ ಅಂಗನವಾಡಿ ನೌಕರರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಬೊಮ್ಮಾಯ್ಯರವರಿಗೆ ಮನವಿ ಪತ್ರ ಸಲ್ಲಿಸಿದರು.
ಮಿನಿ ಅಂಗನವಾಡಿ ಕೇಂದ್ರದಲ್ಲಿರುವ ಕಾರ್ಯಕತರ್ೆಯರಿಗೂ ಮೈನ್ ಅಂಗನವಾಡಿ ಕಾರ್ಯಕತರ್ೆಯರ ಸೌಲಭ್ಯ ನೀಡಬೇಕು, ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು, ಅಂಗನವಾಡಿ ಕಾರ್ಯಕತರ್ೆರಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಲ ಕಿರುಕುಳ ನಿಲ್ಲಬೇಕು. ಗ್ರಾಮ ನೈರ್ಮಲ್ಯ ಸಮಿತಿಯಲ್ಲಿ ಆಶಾ ಕಾರ್ಯಕತರ್ೆ ಇಲ್ಲದ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಕಾರ್ಯದಶರ್ಿಯಾಗಿ ಸಮಿತಿ ನಡೆಸುತ್ತಿದ್ದು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಕಾರ್ಯಕತೆರ್ಯರಿಗೆ ಕಿರುಕುಳ ನೀಡುವುದು ತಪ್ಪಬೇಕು, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕಿಯರಿಗೆ ಕೊಟ್ಟಿರುವ ಸಮವಸ್ತ್ರ ಸರಿ ಇಲ್ಲದಿರುವುದರಿಂದ ಕ್ಷೇತ್ರ ಮಟ್ಟದ ಸಭೆ ಮತ್ತು ವೃತ್ತ ಮಟ್ಟದ ಸಭೆ ಹಾಕಬಾರೆಂದು ಅನುಮತಿ ನೀಡಬೇಖು, ಅಂಗನವಾಡಿ ಕೇಂದ್ರದಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಮುಜೀಬ್, ಅಧ್ಯಕ್ಷೆ ಪೂರ್ಣಮ್ಮ, ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದಶರ್ಿ ಶಾರದ ಕೆ.ಜಿ, ಖಜಾಂಚಿ ಯಶೋಧ, ಸಾವಿತ್ರಮ್ಮ, ಲಕ್ಷ್ಮಮ್ಮ, ಸುನಂದ ಹಾಗೂ ಕಾರ್ಯಕತರ್ೆಯರು ಉಪಸ್ಥಿತರಿದ್ದರು.



Wednesday, October 10, 2012


  1. ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿರುವಾಗ ಅಲ್ಲಿನ ಬೆಳೆಗೆ ನೀರು ಬಿಡುಎನ್ನುವುದು  ಎಂತಹ ನ್ಯಾಯ: ಡಾ.ಯತೀಶ್ವರಶಿವಾಚಾರ್ಯಸ್ವಾಮಿ

  • ವಿದ್ಯಾಥರ್ಿಗಳಿಗೂ ತಟ್ಟಿದ ಕಾವೇರಿ ಹೋರಾಟದ ಕಾವು
  • ಮಾನವ ಸರಪಳಿ ರಚಿಸಿ,  ರಸ್ತೆತಡೆ.


 ಚಿಕ್ಕನಾಯಕನಹಳ್ಳಿ,ಅ.08 ; ಹಳೇ ಮೈಸೂರು ಪ್ರಾಂತ್ಯದವರು ಕುಡಿಯುವ ನೀರಿಗಾಗಿ ನಂಬಿರುವುದೇ ಕಾವೇರಿ ನೀರನ್ನು, ನಾವಿಲ್ಲಿ ಕುಡಿಯುವ ನೀರಿಗೇ ಪರಿತಪಿಸುತ್ತಿರುವಾಗ ತಮಿಳುನಾಡಿನ ಜನಕ್ಕೆ  ಬೇಸಾಯಕ್ಕೆ ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಕುಪ್ಪೂರು ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಹೇಳಿದರು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ಸಂಘಟನೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಬಾರಿಯ ಬರಗಾಲದ ಸಂದರ್ಭದಲ್ಲಿ ನೀರಿನ  ವಿಷಯವಾಗಿ ಜಯಲಲಿತಾ ಸಮಸ್ಯೆ ಉಂಟು ಮಾಡುತ್ತಲೇ ಇರುತ್ತಾರೆ, ನಮ್ಮ ರಾಜ್ಯದಲ್ಲಿ ಹುಟ್ಟುವ ಕಾವೇರಿ ನಮ್ಮವಳು, ನಮಗಾಗಿ ಮೀಸಲಿರುವಳು, ಕೇಂದ್ರ ಸಕರ್ಾರ ಕಾವೇರಿ ವಿಚಾರವಾಗಿ ತಮಿಳುನಾಡಿನ ಪರ ವಹಿಸುವ ಮೂಲಕ  ರಾಜ್ಯಕ್ಕೆ ಮೋಸ ಮಾಡುತ್ತಲೇ ಬಂದಿದ್ದಾರೆ ಎಂದರು.
ಭಾಜಪ ಮುಖಂಡ  ಶಿವಣ್ಣ ಮಾತನಾಡಿ, ಕೇಂದ್ರ ಸಕರ್ಾರ ರಾಜಕೀಯ ಉದ್ದೇಶದಿಂದ ಕಾವೇರಿ ನದಿ ನೀರನ್ನು ಬಳಸಿಕೊಂಡಿರುವುದು ಖಂಡನೀಯವಾಗಿದೆ, ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು ಇಲ್ಲವಾದರೆ ನೀರಿಗಾಗಿ ರಾಜ್ಯಾದ್ಯಂತ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.
ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ, ಈಗಾಗಲೇ ತಮಿಳುನಾಡಿಗೆ ಬಿಟ್ಟಿರುವ ನೀರಿನಿಂದ ಕಬಿನಿ ಜಲಾಶಯ ಖಾಲಿಯಾಗುವ ಭೀತಿ ಎದುರಾಗಿದೆ, ಇದರಿಂದ ರೈತರಿಗೆ ತೀವ್ರ ರೀತಿಯ ಸಂಕಷ್ಟ ಎದುರಾಗಿ ಮುಂದಿನ ದಿನಗಳಲ್ಲಿ ಹನಿ ನೀರಿಗೂ ಇಲ್ಲಿನ ಜನ ಪರದಾಡುವ ಸ್ಥಿತಿ ಎದುರಾಗಲಿದೆ ಎಂದರು. 
ತಾ.ಅಭಾವಿಪ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ರಾಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದರೂ ಸಹ ಕೇಂದ್ರ ಸಕರ್ಾರ ತಮಿಳುನಾಡಿಗೆ ನೀರನ್ನು ಬಿಡಬೇಕು ಎಂದು ಅಧಿಸೂಚನೆ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದರಲ್ಲದೆ,  ಜನವರಿ ನಂತರ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾದರೂ ಆಶ್ಚರ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಂಚಾಲಕ ಜಾಕಿರ್ ಹುಸೇನ್, ಕಾರ್ಯಕರ್ತರುಗಳಾದ ರವಿ, ಮಧು, ಸುಧಿಂದ್ರ, ಕರವೇ ಕಾರ್ಯಕರ್ತರಾದ ಮಧು, ಸೇರಿದಂತೆ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಂಡು , ಮಾನವ ಸರಪಳಿ ರಚಿಸಿದರು, ರಸ್ತೆ ತಡೆ ನಡೆಸಿದರು.

Saturday, October 6, 2012


ಕಾವೇರಿಗೆ  ಚಿ.ನಾ.ಹಳ್ಳಿಯಲ್ಲಿ ಬಂದ್ಗೆ ಸಂಪೂರ್ಣ ಬೆಂಬಲ




aPÀÌ£ÁAiÀÄPÀ£ÀºÀ½î §AzïUÁV £ÉºÀgÀÄ ¸ÀPÀð¯ï §½ ¸ÀÛ§Ý
ka,ra,ve strice


memorandam sallike
raitha sangatane strice


ಚಿಕ್ಕನಾಯಕನಹಳ್ಳಿ,ಅ.06 : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು  ವಿರೋಧಿಸಿ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕನರ್ಾಟಕ ಬಂದ್ಗೆ ತಾಲ್ಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಇಲ್ಲಿನ ಕನರ್ಾಟಕ ರಕ್ಷಣ ವೇದಿಕೆ, ಜನಪರ ವೇದಿಕೆ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸ್ಪಂದನ ಪ್ರಗತಿಪರ ಒಕ್ಕೂಟ, ಸ್ನೇಹಕೂಟ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ, ಟಿಪ್ಪುಸುಲ್ತಾನ್ ಯುವಕ ಸಂಘ, ಭುವನೇಶ್ವರಿ ಯುವ ಸಂಘ, ಕುಂಚಾಂಕುರ ಕಲಾ ಸಂಘ, ಕನ್ನಡ ಸಾಹಿತ್ಯ ಪರಿಷತ್, ಛಾಯಾಗ್ರಾಹಕರ ಸಂಘ, ಸುಭಾಷ್ ಚಂದ್ರಬೋಸ್ ಆಟೋಚಾಲಕರ ಸಂಘ, ಕನ್ನಡಭಿಮಾನಿಗಳು ಕನರ್ಾಟಕ ಬಂದ್ಗೆ ಬೆಂಬಲಿಸಿ ಧರಣಿ ಸತ್ಯಾಗ್ರಹ ಹಾಗೂ  ಪ್ರತಿಭಟನೆ ನಡೆಸಿದವು.
ಆಸ್ಪತ್ರೆಗಳು, ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿದರು.
ಪ್ರತಿಭಟನೆಯ ವೇಳೆ ಸಂಚರಿಸುತ್ತಿದ್ದ ವಾಹನಗಳನ್ನು ಕನ್ನಡಪರ ಸಂಘಟನೆಗಳು ತಡೆದು ಬಂದ್ಗೆ ಸಹಕರಿಸುವಂತೆ ಒತ್ತಾಯಿಸಿದವು.
ಈ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಎಸ್.ಮುರುಡಯ್ಯ ಮಾತನಾಡಿ ರಾಜ್ಯದಲ್ಲಿ ಈಗಾಗಲೇ ಮಳೆ ಇಲ್ಲದೆ  ಬರ ಬಂದು ರೈತರು ಕಂಗಾಲಾಗಿದ್ದಾರೆ, ರೈತರು ಬಿತ್ತಿರುವ ಬೆಳೆಗಳು ಅರ್ಧಕ್ಕೆ ಒಣಗಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಸುಪ್ರಿಂಕೋಟರ್್ ಅವೈಜ್ಞಾನಿಕ ತೀಪರ್ು ನೀಡಿದ್ದು ಈ ತೀರ್ಪನ್ನು ಕೂಡಲೇ   ಮರುಪರಿಶೀಲಿಸಿ ಕನರ್ಾಟಕ ರಾಜ್ಯದ ಸಮಸ್ಯೆಯ ಕಡೆಯೂ ಗಮನ ಹರಿಸಿ ತೀಪರ್ು ನೀಡಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ ರಾವ್ ಮಾತನಾಡಿ, ಕಾವೇರಿ ನಮ್ಮವಳು, ಕೇಂದ್ರ ಸಕರ್ಾರ ಯಾರನ್ನೊ ಮೆಚ್ಚುಸುವುದಕ್ಕಾಗಿ ಕನರ್ಾಟಕದವರಿಗೆ ನೋವುಂಟು ಮಾಡಬಾರದು, ನಮ್ಮ ರಾಜ್ಯದಲ್ಲಿ ಬರದ ಈ ಸಂದರ್ಭದಲ್ಲಿ ಕುಡಿಯಲು  ನೀರಿಲ್ಲದೆ ಹಾಹಾಕಾರ ಪಡುತ್ತಿರುವಾಗ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡುತ್ತಿದ್ದಾರೆ, ಆ ನೀರಾದರೂ ಬೆಳೆಗೆ ಹೋಗುತ್ತಿದೆಯೇ ಎಂದರೆ  ಅದೂ ಇಲ್ಲ. ಪ್ರಾಧಿಕಾರದ ತೀಪರ್ು ಅವೈಜ್ಞಾನಿಕ ಎಂದು ಜರಿದರು.
ಪ್ರತಿಭಟನೆಯಲ್ಲಿ  ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಶೆಟ್ಟೀಕೆರೆ ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ದಬ್ಬೆಘಟ್ಟ ಜಗದೀಶ್,  ತಾ.ಭಾಜಪ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಕಾರ್ಯದಶರ್ಿ ಸುರೇಶ್,  ಪುರಸಭಾ ಸದಸ್ಯರುಗಳಾದ ವರದರಾಜು, ದೊರೆಮುದ್ದಯ್ಯ, ಸಿ.ಎಂ.ರಂಗಸ್ವಾಮಯ್ಯ, ಎಂ.ಎನ್.ಸುರೇಶ್, ಸಿ.ಎಸ್.ರಮೇಶ್, ರಾಜಣ್ಣ, ರುಕ್ಮಿಣಮ್ಮ,  ತಾ.ಭಾಜಪ ಹಿಂದುಳಿದ ವರ್ಗಗಳ ಅಧ್ಯಕ್ಷ  ಶ್ರೀನಿವಾಸಮೂತರ್ಿ, ತಾ.ಕ.ಸಾ.ಪ.ಅಧ್ಯಕ್ಷ ಎಂ.ಎಸ್.ರವಿಕುಮಾರ್, ನಗರ ಕೇಂದ್ರಿತ ಘಟಕದ ಅಧ್ಯಕ್ಷ ಸುನಿಲ್ಕುಮಾರ್,  ಕೃಷ್ಣೆಗೌಡ, ಸಿದ್ದರಾಮಯ್ಯ, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಎಚ್.ಗಂಗಾಧರ್, ಸೇರಿದಂತೆ ಕನ್ನಡ ಪರ ಅಭಿಮಾನಿಗಳು ಪಾಲ್ಗೊಂಡಿದ್ದರು.

Tuesday, July 3, 2012







ತಾಲ್ಲೂಕು  ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ತವರೂರು
ಚಿಕ್ಕನಾಯಕನಹಳ್ಳಿ,ಜು.03 :  ತಾಲ್ಲೂಕು  ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ತವರೂರಾಗಿದ್ದು ಇವುಗಳ ಅಭಿವೃಧ್ಧಿಗೆ ಸಂಘ ಸಂಸ್ಥೆಗಳು ಹೆಚ್ಚು ಗಮನ ಹರಿಸಿ ಎಂದು  ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲಿ  ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂದಿನ ವರ್ಷದಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು ಕನ್ನಡ ಸಂಘದ ವೇದಿಕೆಯಲ್ಲಿ ನೆಡೆಸಲಾಗುವುದು ಎಂದರು.
ಸಮಾರಂಭದ ಉದ್ಗಾಟನೆಯನ್ನು ಅನ್ನಪೂಣರ್ೇಶ್ವರಿ ಕಲಾ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ನೆರೆವೆರಿಸಿದರು.
ಕಾರ್ಯಕ್ರಮದಲ್ಲಿ ಕೋ-ಅಪರೇಟಿವ್ ಬ್ಯಾಂಕ್ ಅದ್ಯಕ್ಷ ಸಿ ಎಸ್ ನಟರಾಜ್ , ಪುರಸಬಾದ್ಯಕ್ಷ ದೊರೆ ಮುದ್ದಯ್ಯ, ಕರವೇ ಅಧ್ಯಕ್ಷ ಸಿ ಟಿ ಗುರುಮೂತರ್ಿ, ಪುರಸಭಾ ಸದಸ್ಯ ಎಂ ಎನ್ ಸುರೇಶ್, ಜಿ.ಪಂ. ಸದಸ್ಯೆ ಜಾನಮ್ಮ ರಾಮಚಂದ್ರಯ್ಯ ,ತಾ.ಪಂ. ಸದಸ್ಯೆ ಚೇತನ್ ಗಂಗಾಧರ್ ಮುಂತಾದವರಿದ್ದರು.
ಜೂನಿಯರ್ ಸಿಂಗಲ್ಸ್ನಲ್ಲಿ ಹರಿಹರದ ಹರ್ಷಪಚ್ಚಿ ಪ್ರಥಮ ಸ್ಥಾನ, ರಾಯಚೂರು ಬಿಷಾ ದ್ವಿತೀಯ ಸ್ಥಾನ , ಜಾವಗಲ್ ರೂಪ ತೃತೀಯ ಸ್ಥಾನ ಪಡೆದರು.
ಸೀನಿಯರ್ ಸಿಂಗಲ್ಸ್  ತುಮಕೂರು ಸಂಸ್ಕ್ರುತಿ ಪ್ರಥಮ ಸ್ಥಾನ, ಬೆಂಗಳೂರಿನ ಪ್ರಶಾಂತ್ ದ್ವಿತೀಯ , ತುಮಕೂರು ಮನೋಜ್ ಕುಮಾರ್ ತೃತೀಯ ಸ್ಥಾನ ಪಡೆದರು.
   ಜೂನಿಯರ್ ಗ್ರೂಪ್ಸ್ ನಲ್ಲಿ ಭಟ್ಕಳದ ಸಾಗರ್ ಡ್ಯಾನ್ಸ್ ಗ್ರೂಪ್ ಪ್ರಥಮ ಸ್ಥಾನ, ಬೆಂಗಳೂರಿನ ದೀಶ ತಂಡ ದ್ವಿತೀಯ ,ಮಡಿಕೇರಿ ಗ್ರೂಪ್ಸ್ ಮೂರನೇ ಸ್ಥಾನ.
   ಹಿರಿಯರ ವಿಭಾಗದಲ್ಲಿ ಉಡುಪಿಯ ಸಾಗರ್ ಗೇಮ್ ಪ್ರಥಮ ಸ್ಥಾನ , ಆನೇಕಲ್ನ ನ್ಯೂ ಸ್ಟೀರೀಸ್ ತಂಡ ದ್ವಿತೀಯ ಸ್ಥಾನ , ಕೊಡಗು ಕೂರಗಿ ಫೈಲ್ ತೃತಿಯ ಸ್ಥಾನ ಪಡೆದರು.
ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಲ್ಲಿ 150 ತಂಡಗಳು ಭಾಗವಹಿಸಿದ್ದವು.


ಸಕರ್ಾರ ಮಲ ಹೊರುವ ಪದ್ದತಿಯನ್ನು ತಡೆಗಟ್ಟಲು  ನೂತನವಾಗಿ ಸೆಪ್ಟಿಕ್ ಟ್ಯಾಂಕರ್ ಯೋಜನೆ
ಚಿಕ್ಕನಾಯಕನಹಳ್ಳಿ,ಜು.02 : ಸಕರ್ಾರ ಮಲ ಹೊರುವ ಪದ್ದತಿಯನ್ನು ತಡೆಗಟ್ಟಲು  ನೂತನವಾಗಿ ಸೆಪ್ಟಿಕ್ ಟ್ಯಾಂಕರ್ ಬಳಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಇದನ್ನು ಪಟ್ಟಣದಲ್ಲಿ ಪುರಸಭಾ ವ್ಯಾಪ್ತಿಗೆ ಬರುವ ಎಲ್ಲಾ ವಾಡರ್್ಗಳ ಜನಸಾಮಾನ್ಯರು ಬಳಸಲು ಇಂದು ಚಾಲನೆ ನೀಡಲಾಗಿದೆ ಎಂದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ತಿಳಿಸಿದರು.
ನೂತನವಾಗಿ ಬಂದಿರುವ ಸೆಪ್ಟಿಕ್ ಟ್ಯಾಂಕರ್ 6.5ಲಕ್ಷದ್ದಾಗಿದ್ದು, ಈ ಟ್ಯಾಂಕರ್ 3ಸಾವಿರ ಲೀಟರ್ ನೀರು ತುಂಬವಷ್ಟು ಸಾಮಥ್ರ್ಯ ಹೊಂದಿದೆ, ಇದನ್ನು ಸಾರ್ವಜನಿಕರು ಬಾಡಿಗೆ ಆಧಾರದ ಮೇಲೆ ಪಡೆಯಬಹುದಾಗಿದ್ದು ಅದಕ್ಕಾಗಿ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ನೂತನ ಸೆಪ್ಟಿಕ್ ಟ್ಯಾಂಕರ್ನ್ನು ಸಾರ್ವಜನಿಕರು ಬಾಡಿಗೆ ಆಧಾರದ ಮೇಲೆ  ಬಳಸಿಕೊಳ್ಳಲು ಮುಕ್ತಗೊಳಿಸುವ  ಕಾರ್ಯಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿಯ್ಯ, ಸದಸ್ಯ ಸಿ.ಎಸ್.ರಮೇಶ್, ಸಿ.ಪಿ.ಮಹೇಶ್, ಬಾಬುಸಾಹೇಬ್, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ ಶೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು. 




2012-13ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 37ನೇ ಪದವಿ ಸ್ವೀಕಾರ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.03 : 2012-13ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 37ನೇ ಪದವಿ ಸ್ವೀಕಾರ ಸಮಾರಂಭವನ್ನು ಇದೇ 8ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದು ಚಲನಚಿತ್ರ ಸಾಹಿತಿ ಸಿ.ವಿ.ಶಿವಶಂಕರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಡಿಸ್ಟ್ರಿಕ್ಟ್ ಟ್ರೈನರ್ ಜಿಲ್ಲಾ ಗವರ್ನರ್ ಪಿಡಿಜಿ ರೊ.ಯು.ಬಿ.ಭಟ್ ಪದವಿ ಪ್ರದಾನ, ಹೊಸ ಸದಸ್ಯರ ಸೇರ್ಪಡೆ, ಸನ್ಮಾನ ಹಾಗೂ ಎಸ್.ಎ.ನಭಿ ಜ್ಞಾಪಕಾರ್ಥ ರೋಟರಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಲಿದ್ದು ಗ್ರೂಪ್-1 ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ರೋಟರಿ ಪತ್ರಿಕೆ ನಾಯಕ ಬಿಡುಗಡೆ ಮಾಡಲಿದ್ದು 319ರ ಅಸೋಸಿಯೇಷನ್ ಪ್ರೆಸಿಡೆಂಟ್ ಶೈಲಜ ಭಟ್ ಸೇವಾಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಡಾ.ಬಿ.ಎಸ್.ರವೀಂದ್ರ, ಎಚ್.ಎಸ್.ಶಾಮಸುಂದರ್, ಎಚ್.ಎನ್.ಸುರೇಶಕುಮಾರ, ರಮೇಶಬಾಬು, ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಎಸ್.ಜಗದೀಶಯ್ಯ, ಸಿ.ಎಸ್.ಚಂದ್ರಶೇಖರ್, ಸಿ.ಎಂ.ಮುದ್ದುಕುಮಾರ್ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

Thursday, June 28, 2012



ಜಾತ್ರೆಯ ಪ್ರಯುಕ್ತ ಫ್ಲಕ್ಸ್ಗಳ ಹಾವಳಿ: ಕಿರಿಕಿರಿ ಅನುಭವಿಸುತ್ತಿರುವ ಸಾರ್ವಜನಿಕರು

                                 ಚಿಕ್ಕನಾಯಕನಹಳ್ಳಿ,ಜೂ.28 : ಪ್ರತಿ ಬಾರಿ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಹಾಕಲಾಗುತ್ತಿದ್ದ ಪ್ಲೆಕ್ಸ್ಗಳಿಗಿಂತ ಈ ಬಾರಿ 50ಕ್ಕೂ ಹೆಚ್ಚು ಪ್ಲೆಕ್ಸ್ಗಳು ಪಟ್ಟಣದ ನೆಹರು ಸರ್ಕಲ್ ಬಳಿ ರಾರಾಜಿಸುತ್ತಿವೆ.
ಪಟ್ಟಣದ ನೆಹರು ಸರ್ಕಲ್ನಲ್ಲಿ  ರಾಜಕೀಯ ಮುಖಂಡರ ಅಭಿಮಾನಿಗಳ ಹೆಸರಿನಲ್ಲಿ, ಕೆಲವು ಸಂಘಗಳ ಹೆಸರಿನಲ್ಲಿ ಶುಭಕೋರುವ ಪ್ಲೆಕ್ಸ್ಗಳು ಇವೆ, ಜೆ.ಡಿ.ಎಸ್ ಶಾಸಕ ಸಿ.ಬಿ.ಸುರೇಶ್ಬಾಬು ಅಭಿಮಾನಿಗಳ ಬಳಗ, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಭಿಮಾನಿ ಬಳಗ, ಬಿಜೆಪಿಯ ಮುಖಂಡರು ಹಾಗೂ ಕಾಂಗ್ರೆಸ್ನ ಮುಖಂಡರುಗಳ ಪ್ಲೆಕ್ಸ್ಗಳು ಬಿಎಸ್ಆರ್ ಪಕ್ಷದ ಶ್ರೀರಾಮುಲು ಅಭಿಮಾನಿ ಬಳಗ, ಜಾತ್ರೆಯ ಪ್ರಯುಕ್ತವೆಂಬುದು ನೆಪ ಮಾತ್ರ ಆದರೆ ಇದು ಮುಂಬರುವ ಎಂ.ಎಲ್.ಎ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಈಗಿನಿಂದಲೇ ಹವಾ ಸೃಷ್ಟಿಸುತ್ತಿದ್ದಾರೆ. ಇದು ಒಂದು ರೀತಿಯ ಪ್ರತಿಷ್ಠೆಯ ಪ್ರಶ್ನೆಯಾಗು ಕಾಡುತ್ತಿರುವ ಈ ಸಂದರ್ಭದಲ್ಲಿ ಸಂಕಟ ಅನುಭವಿಸುತ್ತಿರುವವರು ಮಾತ್ರ ನಗರದ ಹೃದಯ ಭಾಗದಲ್ಲಿರುವ ಅಂಗಡಿ ಮುಂಗ್ಗಟ್ಟುಗಳ ಮಾಲೀಕರು.
ಪ್ಲೆಕ್ಸ್ಗಳಿಂದ ಅಂಗಡಿಯವರಿಗೆ ಕಿರಿಕಿರಿಯುಂಟಾಗಿದ್ದು, ಸರ್ಕಲ್ನಲ್ಲಿರುವ ಅಂಗಡಿಗಳು ಪ್ಲೆಕ್ಸ್ಗಳ ಹಾವಳಿಯಿಂದ ಮುಚ್ಚಿದಂತೆ ಕಾಣುತ್ತಿದ್ದು ನೆಹರು ಸರ್ಕಲ್ನ ಅಂಗಡಿಯವರು ಪ್ಲೆಕ್ಸ್ ಹಾಕಿರುವವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. 
ಈ ಹಿಂದೆ ನಡದಿದ್ದ  ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ಲೆಕ್ಸ್ ಕಟ್ಟಲು ಇಂತಿಷ್ಟು ಹಣ ಎಂದು ನಿಗಧಿ ಪಡಿಸಿ, ಅನುಮತಿ ಪಡೆಯಬೇಕೆಂಬ ನಿಯಮವನ್ನು ಮಾಡಲಾಗಿತ್ತು. ಆದರೆ ಈಗ ಹಾಕಲಾಗಿರುವ ಪ್ಲೆಕ್ಸ್ಗಳಲ್ಲಿ 17 ಪ್ಲೆಕ್ಸ್ಗಳಿಗೆ ಮಾತ್ರ ಅನುಮತಿ ಪಡೆಯಲಾಗಿದೆ ಉಳಿದ 35ಕ್ಕೂ ಹೆಚ್ಚಿನ ಫ್ಲಕ್ಸ್ಗಳು ಅನಧಿಕೃತ  ಎಂದು ತಿಳಿದು ಬಂದಿದೆ.

ಜಾತ್ರೆಯ ಪ್ರಯುಕ್ತ ಎರಡು ಪೌರಾಣಿಕ ನಾಟಕಗಳು
ಚಿಕ್ಕನಾಯಕನಹಳ್ಳಿ,ಜೂ.28 : ದುಶ್ಯಾಸನ ಕಥೆ ಅಥವಾ ದ್ರೌಪತಿ ವಸ್ತ್ರಾಪಹರಣ ಎಂಬ ಪೌರಾಣಿಕ ನಾಟಕವನ್ನು ಶ್ರೀ ಹಳೆಯೂರು ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ಇದೇ 30ರ ಶನಿವಾರ ರಾತ್ರಿ 7.30ಕ್ಕೆ ಏರ್ಪಡಿಸಲಾಗಿದೆ.
ನಾಟಕವನ್ನು ಚಿಕ್ಕಮ್ಮದೇವಿ ಕಲಾ ಸಂಘದ ವತಿಯಿಂದ ಡಾ.ಅಂಬೇಡ್ಕರ್ ನಗರ ಶ್ರೀ ರಾಮಮಂದಿರದ ಮುಂಭಾಗ ಏರ್ಪಡಿಸಲಾಗಿದೆ.
ಕುರುಕ್ಷೇತ್ರ: ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಶ್ರೀ ಹಳೆಯೂರು ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ಇದೇ ಜುಲೈ1ರ ಭಾನುವಾರ ರಾತ್ರಿ 8.30ಕ್ಕೆ ಏರ್ಪಡಿಸಲಾಗಿದೆ. 
ನಾಟಕವನ್ನು ಶ್ರೀ ರೇಣುಕ ಯಲ್ಲಮ್ಮ ಕೃಪಾಪೋಷಿತ ಕಲಾ ಸಂಘದ ವತಿಯಿಂದ ಶ್ರೀ  ಯಲ್ಲಮ್ಮದೇವಿ ದೇವಾಲಯದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.

Friday, June 22, 2012


ವೀರಶೈವ ಧರ್ಮಗ್ರಂಥ ಸಿದ್ದಾಂತ ಶಿಖಾಮಣಿ ರಷ್ಯಾ ಭಾಷೆಯಲ್ಲಿ ಬಿಡುಗಡೆ
    
ಚಿಕ್ಕನಾಯಕನಹಳ್ಳಿ,ಜೂ.22 : ಇದುವರೆಗೂ ಹಿಂದಿ, ಇಂಗ್ಲೀಷ್, ತಮಿಳು, ಮರಾಠಿ ಭಾಷೆಗಳಲ್ಲಿ ಇದ್ದ ಶ್ರೀ ಸಿದ್ದಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥವನ್ನು ರಷ್ಯಾ ಭಾಷೆಗೆ ತಜರ್ುಮೆಗೊಳಿಸುವ ಮೂಲಕ ರಷ್ಯಾ ದೇಶದ ಜನರಿಗೆ ವೀರಶೈವ ಧರ್ಮದ ಪವಿತ್ರ ಗ್ರಂಥದ ಆಚಾರ ವಿಚಾರ ಹಾಗೂ ಶಿವಯೋಗಗಳನ್ನು ಅರಿಯುವ ಮೌಲ್ಯ ದೊರಕಿದೆ ಎಂದು ಕಾಶಿ ಜಗದ್ಗುರು ಜಂಗಮವಾಡಿ ಮಠದ ಡಾ.ಚಂದ್ರಶೇಖರ ಶಿವಾಚಾರ್ಯಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನ ಕುಪ್ಪೂರು ಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಷ್ಯಾ ದೇಶದ ಮಾಸ್ಕೋ ನಗರದಲ್ಲಿ ಇದೇ ಜೂನ್ 2ರ 2012ರಂದು ತಜರ್ುಮೆಗೊಂಡ ಭಾರತೀಯ ಮೂಲ ಸಂಸ್ಕೃತಿ ಗ್ರಂಥವಾದ ಸಿದ್ದಾಂತ ಶಿಖಾಮಣಿ ಬಿಡುಗಡೆಗೊಂಡಿದೆ, ಈ ಗ್ರಂಥಕ್ಕೆ ರಷ್ಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಗ್ರಂಥದಲ್ಲಿರುವ ಯೋಗದ ಆಕರ್ಷಣೆಗೆ ಪಾಶ್ಚಿಮಾತ್ಯ ದೇಶಗಳಲ್ಲೂ ಆಕರ್ಷಣೆ ಹೆಚ್ಚುತ್ತಿದೆ. 
ಕಳೆದ 2ವರ್ಷದಿಂದ ಈ ಗ್ರಂಥದ ಬಗ್ಗೆ ಅನುವಾದ ಮಾಡಿದ ಉಗಂಡ ದೇಶದ ಯೂಲಿಯಾ ಗ್ರಂಥವನ್ನು ರಷ್ಯಾ ಭಾಷೆಗೆ ತಜರ್ುಮೆಗೊಳಿಸಿದ್ದಾರೆ. ಇವರು ಮೂಲತಹ ಸಾಪ್ಟ್ವೇರ್ ಇಂಜನಿಯರ್ ಆಗಿದ್ದು ಭಾರತ ದೇಶದ ಸಂಸ್ಕೃತ, ಹಿಂದಿ ಭಾಷೆಯ ಬಗ್ಗೆ ತಿಳಿದಿದ್ದಾರೆ.
ಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ಆರತಿ ಯೋಗ ವಿದ್ಯೆ ಬಗ್ಗೆ ತಿಳಿಸಲಾಗಿದೆ, ರಷ್ಯಾದಲ್ಲಿ ದೀಕ್ಷೆ ಪಡೆದ ಎಲ್ಲರೂ ಮಾಸ ಶಿವರಾತ್ರಿಯಂದು ಒಂದು ಕಡೆ ಸೇರಿ ಸಾಮೂಹಿಕ ಲಿಂಗ ಪೂಜೆ ಮಾಡುವ ಪರಿಪಾಠ ಮಾಡಿಕೊಂಡಿದ್ದಾರೆ.
ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ದೇಶ-ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಇರುವ ಗ್ರಂಥವನ್ನು ಆ ಭಾಷೆಗೆ ತಜರ್ುಮೆಗೊಳಿಸುವ ಮೂಲಕ ಸಂಸ್ಕೃತಿ ಹೆಚ್ಚಾಗಿ ಪ್ರಚಾರವಾಗಬೇಕು ಎಂದರು.
ಬೆಳೆಸಿರಿ ಟ್ರಸ್ಟ್ವತಿಯಿಂದ ನೋಟ್ ಬುಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.22 : ತಾಲ್ಲೂಕಿನ ಲಕ್ಮೇನಹಳ್ಳಿ ಜನತಾ ಕಾಲೋನಿಯ 1ರಿಂದ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಶಾಲಾ ವಿದ್ಯಾಥರ್ಿಗಳಿಗೆ ಬೆಳೆಸಿರಿ ಟ್ರಸ್ಟ್ ವತಿಯಿಂದ ನೋಟ್ ಬುಕ್ ವಿತರಣೆ ಮಾಡಲಾಯಿತು.
ನಿವೃತ್ತ ನೌಕರರ ಸಂಘದ ಉಪಾದ್ಯಕ್ಷ ನಂಜುಂಡಪ್ಪ, ನಿವೃತ್ತ ಶಿಕ್ಷಣ ತರಬೇನಹಳ್ಳಿ ಕುಮಾರಸ್ವಾಮಿ, ಮುಖ್ಯೋಪಾಧ್ಯಾಯ ಮಂಜುನಾಥ್, ಟ್ರಸ್ಟ್ನ ನಿದರ್ೇಶಕ ಸಿ.ಹೆಚ್.ನಾಗರಾಜು, ನಿವೃತ್ತ ಸಹಾಯಕ ನಿದರ್ೇಶಕರು ಬಡವಿದ್ಯಾಥರ್ಿಗಳಿಗೆ  ನೋಟ್ಬುಕ್ ವಿತರಿಸಿದರು.
ಕನಕ ವಿದ್ಯಾಭಿವೃದ್ದಿ ನಿಧಿಯಿಂದ ವಿದ್ಯಾಥರ್ಿಗಳಿಗೆ ವಿವಧ ಸವಲತ್ತು ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.22 : ಪ್ರತಿಭಾ ಪುರಸ್ಕಾರ, ಉಚಿತ ನೋಟ್ಬುಕ್ ವಿತರಣೆ, ಕಾಲೇಜು ಶುಲ್ಕ ಪಾವತಿ ಸಹಾಯಧನ ವಿತರಣಾ ಸಮಾರಂಭವನ್ನು ಇದೇ 24ರ ಭಾನುವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ ಎಂದು ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಸಮಾರಂಭವನ್ನು ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ವತಿಯಿಂದ ಪಟ್ಟಣದ ಕನಕ ಭವನದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಬಿ.ಸಿ.ಎಂ. ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್, ಬಿ.ಇ.ಓ ಸಾ.ಚಿ.ನಾಗೇಶ್, ಮಾಜಿ ಪುರಸಭಾಧ್ಯಕ್ಷ ಸಿ.ಬಸವರಾಜು, ಕಂಬಳಿ ಸೊಸೈಟಿ  ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕನಕ ವಿದ್ಯಾಭಿವೃದ್ದಿ ಸಮಿತಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಉಪಸ್ಥಿತರಿರುವರು.
ಪುರಸಭೆಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಚಾಲನೆಗೆ ಗೃಹ ಸಚಿವರು ಚಿ.ನಾ.ಹಳ್ಳಿಗೆ
ಚಿಕ್ಕನಾಯಕನಹಳ್ಳಿ,ಜೂ.22 : ಪಟ್ಟಣದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ಇದೇ 27ರ ಬುಧವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಅಂದು ವಾಡರ್್ ನಂ.23ರಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನ ಶಂಕುಸ್ಥಾಪನೆ, ಸಂತೆ ಮೈದಾನ ಕಾಮಾಗಾರಿ ಶಂಕುಸ್ಥಾಪನೆ, ಪುರಸಭೆ ಸಭಾಂಗಣ ಕಟ್ಟಡ ನಿಮರ್ಾಣ ಶಂಕುಸ್ಥಾಪನೆ, ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳ ಮತ್ತು ಸುಲಭ ಶೌಚಾಲಯ ಉದ್ಘಾಟನೆ, ವಾಡರ್್ ನಂ.17ರ ಮುಸ್ಲಿಂ ಬ್ಲಾಕ್ ಮಾಂಸ ಮಾರಾಟದ ಮಾರುಕಟ್ಟೆ ಮತ್ತು 19ನೇ ವಾಡರ್್ನ ಸಾರ್ವಜನಿಕ ಶೌಚಾಲಯ ಉದ್ಘಾಟನೆ ನೆರವೇರಲಿದೆ. 
ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ನೆರವೇರಿಸಲಿದ್ದು, ಗೃಹ ಸಚಿವ ಆರ್. ಅಶೋಕ, ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ,  ಸಂಸದ ಜಿ.ಎಸ್.ಬಸವರಾಜು ಆಗಮಿಸಲಿರುವ ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸುವರು ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರುಗಳು, ಜಿ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಶಾಸಕರುಗಳು, ಪುರಸಭಾ ಸದಸ್ಯರುಗಳು ಸೇರಿದಂತೆ ಹಲವರು ಗಣ್ಯರು  ಸಭೆಯಲ್ಲಿ ಹಾಜರಿರುವರು ಎಂದು ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ ತಿಳಿಸಿದ್ದಾರೆ.

ತಾ.ಬಿ.ಜೆ.ಪಿ ವತಿಯಿಂದ ಕೇಂದ್ರ ಸಕರ್ಾರದ ಆಥರ್ಿಕ ನೀತಿಯ ವಿರುದ್ದ ರಸ್ತ ತಡೆ 


ಚಿಕ್ಕನಾಯಕನಹಳ್ಳಿ,ಜೂ.22 : ಬ್ರಿಟೀಷರ ಆಳ್ವಿಕೆಯ ದಬ್ಬಾಳಿಕೆಯು ಕೇಂದ್ರದ ಯುಪಿಎ ಸಕರ್ಾರದ ಮೂಲಕ ಮತ್ತೆ ಮುಂದುವರಿದೆ, ಪೆಟ್ರೋಲ್ ಬೆಲೆ ಹೆಚ್ಚಳ, ಹಾಗೂ ತಪ್ಪು ಆಥರ್ಿಕ ನೀತಿಯನ್ನು ಜಾರಿಗೊಳಿಸುತ್ತಾ ದೇಶದ ಜನರಿಗೆ ಬರೆ ಎಳೆಯುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕೇಂದ್ರ ಸಕರ್ಾರದ ವಿರುದ್ದ ಕಿಡಿಕಾರಿದರು.
ಪಟ್ಟಣದ ನೆಹರು ಸರ್ಕಲ್ ಬಳಿ ಭಾಜಪ ಕಾರ್ಯಕರ್ತರು ಕೇಂದ್ರ ಸಕರ್ಾರದ ಆಥರ್ಿಕ ನೀತಿ ಹಾಗೂ ರಾಜಕೀಯ ನಿದರ್ಾರಗಳನ್ನು ವಿರೋಧಿಸಿ ಜನಸಂಘರ್ಷ ಅಭಿಯಾನ ಹಾಗೂ ಜೈಲ್ ಭರೋ ಕಾರ್ಯಕ್ರಮದ ಮೂಲಕ ಪಟ್ಟಣದಲ್ಲಿ ರಸ್ತೆ ತಡೆ ಏರ್ಪಡಿಸಿದ್ದರು.
ಪೆಟ್ರೋಲ್ ಬೆಲೆ ಜಾಸ್ತಿ ಆದಂತೆಲ್ಲಾ ಪ್ರತಿ ಬೆಲೆಯೂ ಹೆಚ್ಚುತ್ತಿದೆ, ಇದಕ್ಕೆ  ದೇಶದ ಎಲ್ಲಾ ಸಂಘ ಸಂಸ್ಥೆಗಳು, ಜನಸಾಮಾನ್ಯರು ಖಂಡಿಸಬೇಕು ಎಂದು ಕೆ.ಎಸ್.ಕೆ ತಿಳಿಸಿದರು.
ತಾಲ್ಲೂಕು ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬೆಲೆ ಏರಿಕೆಯಾಗುತ್ತಿದೆ, 2004ರಿಂದ ಯುಪಿಎ ಸಕರ್ಾರ ದಿನನಿತ್ಯ ವಸ್ತುಗಳ ಬೆಲೆ ಏರಿಸಿರುವುದು ಸಕರ್ಾರದ ಸಾಧನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಜಪ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತರಾಮಯ್ಯ, ಪಕ್ಷದ ಕಾರ್ಯದಶರ್ಿಗಳಾದ ಕವಿತಾಕಿರಣ್ಕುಮಾರ್, ಸುರೇಶ್ಹಳೆಮನೆ, ತಾ.ಪಂ.ಸದಸ್ಯ ಕೆಂಕೆರೆ ನವೀನ್, ಎಂ.ಎಂ.ಜಗದೀಶ್, ಎಂ.ಎಸ್.ರವಿಕುಮಾರ್  ಎಬಿವಿಪಿ ಚೇತನ್ಪ್ರಸಾದ್ ಸೇರಿದಂತೆ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು.


Wednesday, June 20, 2012


ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಮಾದಿಗ ದಂಡೋರ ಸಮಿತಿಯ ಒತ್ತಾಯ

        ಚಿಕ್ಕನಾಯಕನಹಳ್ಳಿ,ಜೂ.20: ಮಾದಿಗ ಜನಾಂಗಕ್ಕೆ ಪರಿಶಿಷ್ಠ ಜಾತಿಯಲ್ಲಿ ಶೇ.15ರಷ್ಟರ ಸರಿಯಾದ ಮೀಸಲಾತಿ ದೊರೆಯದೇ ಇರುವುದರಿಂದ  ಜನಾಂಗಕ್ಕೆ ಎ.ಬಿ.ಸಿ.ಡಿ ಮೀಸಲಾತಿ ವಗರ್ೀಕರಣ ಆಗಬೇಕೆಂದು ಸಕರ್ಾರಕ್ಕೆ ಸದಾಶಿವ ಆಯೋಗ ವರದಿ ಸಲ್ಲಿಸಿರುವುದನ್ನು ತಕ್ಷಣವೇ ಸಕರ್ಾರ ಲೋಕಸಭೆಗೆ ಶಿಫಾರಸ್ಸು ಮಾಡಿ ಜನಾಂಗದ ಬೇಡಿಕೆಯನ್ನು ಈಡೇರಿಸಬೇಕೆಂದು ರಾಜ್ಯ ಮಾದಿಗ ದಂಡೋರ ಸಮಿತಿಯ ಜಂಟಿ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಸದಾಶಿವ ಆಯೋಗ ಪರಿಶಿಷ್ಠ ಜಾತಿಗಳ ಸ್ಥಿತಿಗತಿ ಕುರಿತು ಸಕರ್ಾರಕ್ಕೆ 200 ಪುಟಗಳ ವರದಿ ಸಲ್ಲಿಸಿದೆ, ಶೇ.6 ಎಡಗೈ(ಮಾದಿಗರಿಗೆ), ಶೇ.5 ಬಲಗೈ, ಶೇ.3 ಪರಿಶಿಷ್ಠರಲ್ಲಿ ಸ್ಪೃಷ್ಯರಿಗೆ, ಶೇ.1ರಷ್ಟು ಒಳಮೀಸಲಾತಿಗಾಗಿ ನೀಡಲು ಆಯೋಗ ಶಿಫಾರಸ್ಸು ಮಾಡಿ ಸಕರ್ಾರಕ್ಕೆ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಸಕರ್ಾರ ಪುರಸ್ಕರಿಸಿ ಜನಾಂಗದ ಸುಮಾರು 96.60ಲಕ್ಷ ಜನರ ಮೀಸಲಾತಿಯನ್ನು ನೀಡುವ ಬಗ್ಗೆ ಸಕರ್ಾರ ಜಾರಿಗೊಳಿಸಲು ಸಂಪುಟದಲ್ಲಿ ತೀಮರ್ಾನಿಸಿ ಲೋಕಸಭೆಗೆ ಶಿಫಾರಸ್ಸು ಮಾಡಿ ಜನಾಂಗದ ಅಭಿವೃದ್ದಿಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹಾಗೂ ಸಚಿವರಾದ ಗೋವಿಂದ ಕಾರಜೋಳ, ಎ.ನಾರಾಯಣಸ್ವಾಮಿಯವರಿಗೆ ಒತ್ತಾಯಿಸಿದ್ದು, ತತ್ಕ್ಷಣ ಸಕರ್ಾರ ಶಿಫಾರಸ್ಸು ಮಾಡಿ ಲೋಕಸಭೆಗೆ ಕಳುಹಿಸಲು ಒತ್ತಾಯಿಸಿದರು ಎಂದ ಅವರು ಜನಾಂಗದ ಸುಮಾರು 6ಲಕ್ಷ ಜನರು ಸರಿಯಾಗಿ ಜಾತಿ ಹೆಸರು ಹೇಳದೆ ಶೇ.1ರ ಮೀಸಲಾತಿಯನ್ನು ಕಳೆದುಕೊಂಡಿರುವುದು ವಿಷಾದನೀಯವಾಗಿದ್ದು ಜನಂಗದವರು ದಯಮಾಡಿ ಜಾತಿ ಹೆಸರನ್ನು ಪ್ರಸ್ತಾಪಿಸಲು ಕೋರಿದರು.
ಗೋಷ್ಠಿಯಲ್ಲಿ ತಾಲ್ಲೂಕು ಮಾದಿಗ ಸಂಘದ ಅಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದಶರ್ಿ ರಾಜು ಬೆಳಗಿಹಳ್ಳಿ, ಸಿ.ಎನ್.ಹನುಮಯ್ಯ, ರಾಮಯ್ಯ, ನೀಲಕಂಠಯ್ಯ, ಸಿದ್ದರಾಮಣ್ಣ ಉಪಸ್ಥಿತರಿದ್ದರು.

ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ

ಚಿಕ್ಕನಾಯಕನಹಳ್ಳಿ,ಜೂ.20 ; ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಇದೇ 30 ಮತ್ತು 1 ಮತ್ತು 2ರಂದು ನಡೆಯಲಿದೆ, 30ರ ಶನಿವಾರ ಬೆಳ್ಳಿಪಲ್ಲಕ್ಕಿ, ಜುಲೈ1ರಂದು ಬ್ರಹ್ಮ ರಥೋತ್ಸವ, ಜುಲೈ2ರಂದು ರಥೋತ್ಸವ ಹಮ್ಮಿಕೊಳ್ಳಲಾಗಿದೆ.
 ಜಾತ್ರೆಯ ಪ್ರಯುಕ್ತ ಪಟ್ಟಣದಲ್ಲಿ ಅದ್ದೂರಿ ತಯಾರಿ ನಡೆಯುತ್ತಿದೆ, ರಸ್ತೆಗಳಿಗೆ ಡಾಂಬರೀಕರಣ, ವಿದ್ಯುತ್ ಕಂಬಗಳ ಮರು ಜೋಡಣೆ, ಶುಭಕೋರುವ ಪ್ಲೆಕ್ಸ್ಗಳ ಮೂಲಕ ಜಾತ್ರೆಗೆ ಆಗಮಿಸುವವರಿಗೆ ಕಂಗೊಳಿಸಲು ಬೇಕಾಗುವ ಎಲ್ಲಾ ರೀತಿಯ ತಯಾರಿ ಹೆಚ್ಚಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವವು ಪ್ರತಿ ವರ್ಷಕ್ಕಿಂತ ಈ ವರ್ಷದ ತಯಾರಿ ಜೋರಾಗಿ ನಡೆಯುತ್ತಿದೆ. 
ಆಷಾಡ ಮಾಸದ ಸಮಯದಲ್ಲಿ ನಡೆಯುವ ಈ ಜಾತ್ರೆಗೆ ನವದಂಪತಿಗಳು ಒಟ್ಟಾಗಿ ಪಾಲ್ಗೊಂಡು ತೇರಿಗೆ ಬಾಳೆಹಣ್ಣು ಎಸೆಯುತ್ತಾರೆ.
ಇನ್ನು ಜಾತ್ರೆಗೆ ಕುಂಚಾಂಟಿಗರ ಸಂಘವು ಚಿತ್ರಕಲೆಯನ್ನು ಪ್ರದಶರ್ಿಸುವ, ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ ನವದಂಪತಿಗಳ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಹಾಗೂ ಮಾರುತಿ ವ್ಯಾಯಾಮ ಸಂಘ ಕುಸ್ತಿ ಪಂದ್ಯವನ್ನು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದಾರೆ. 


ಕಿರುಧಾನ್ಯವಾದ ಹಾರಕ ಬೆಳೆಗಾರರ ಗುಂಪಿಗೆ ತರಬೇತಿ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.20: ತಾಲೂಕಿನ ಗೋಪಾಲನಹಳ್ಳಿಯಲ್ಲಿ ಕಿರುಧಾನ್ಯವಾದ ಹಾರಕ ಬೆಳೆಗಾರರ ಗುಂಪಿಗೆ ತರಬೇತಿ ಕಾರ್ಯಕ್ರಮವನ್ನು ಶ್ರೀ ಕಾಲಭೈರವೇಶ್ವರ ಬನಶಂಕರಿ ಕೆರೆ ಅಭಿವೃದ್ದಿ ಸಂಘದ ಕಛೇರಿಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಶ್ವ ವಿದ್ಯಾನಿಲಯದ ಸಹ ಪ್ರಧ್ಯಾಪಕರಾದ ಸಿ.ಸೋಮಶೇಖರ್ ರವರು ಹಾರಕ ಬೆಳೆಯ ಬೇಸಾಯಕ್ರಮ ಮತ್ತು ಕೃಷಿ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದರಲ್ಲದೆ, ಕೃಷಿ ವಿಶ್ವವಿದ್ಯಾಲಯ ವತಿಯಿಂದ ಕಿರು ಧಾನ್ಯ ಯೋಜನೆಯಡಿಯಲ್ಲಿ ಹಾರಕದ ತಳಿಗಳಾದ ಜಿ.ಪಿ.ಯು.ಕೆ.-3 ಹಾಗೂ ಆರ್.ಬಿ.ಕೆ.-155ರ ಬೀಜಗಳನ್ನು ಗುಂಪಿನ ಸದಸ್ಯರಿಗೆ ವಿತರಿಸಲಾಯಿತು.
ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಶಂಕರ್ ರವರು ಮಾತನಾಡಿ ಹಾರಕ ಬೆಳೆಗೆ ತಗಲುವ ಕೀಟ ಬಾದೆಗಳ ಬಗ್ಗೆ ಮಾಹಿತಿ ನೀಡಿದರು
ತಾಲೂಕಿನ 'ಆತ್ಮ' ಯೋಜನೆಯ ತಾಂತ್ರಿಕ ವ್ಯವಸ್ಥಾಪಕರಾದ ಜಗನಾಥ್ ರವರು ಸರಕು ಆಸಕ್ತರ ಗುಂಪುಗಳನ್ನು ರಚನೆ ಅವುಗಳ ಕಾರ್ಯ ಮಹತ್ವದ ಬಗ್ಗೆ ತಿಳಿಸಲು ಈ ಯೋಜನೆಯಡಿಯಲ್ಲಿ ಪ್ರವಾಸಗಳ ಮೂಲಕ ತರಬೇತಿ ನೀಡಲು ಅವಕಾಶ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ಎಮ್.ಬಸವರಾಜು ವಹಿಸದ್ದರು. ಕಾರ್ಯಕ್ರಮದಲ್ಲಿ ಹಾರಕ ಬೆಳೆಗಾರರ ಸಂಘದ ಅಧ್ಯಕ್ಷರಾದ ಜಿ.ಎಸ್.ಚಂದ್ರಶೇಖರಯ್ಯ ಭಾಗವಹಿಸಿದ್ದರು. ಜಿಲ್ಲಾ ಸಂಯೋಜಕ ಡಾ.ಗೋಪಿನಾಥ್ ಕಾರ್ಯಕ್ರಮ ನಿರೂಪಿಸಿದರೆ ಉಪನ್ಯಾಸಕ ಜಿ.ಎಸ್.ರಘು ಸ್ವಾಗತಿಸಿ ವಂದಿಸಿದರು.

 

Saturday, April 21, 2012


ಅಕ್ರಮ ಮರಳು : ಸಾಗಾಣಿಕೆ ತಡೆಯಲು ಕೆರೆ ಅಂಗಳಕ್ಕೆ ನಿಷೇದಾಜ್ಞೆ ಜಾರಿ. ಎನ್.ಆರ್.ಉಮೇಶ್ಚಂದ್ರ
ಚಿಕ್ಕನಾಯಕನಹಳ್ಳಿ,ಏ.21 : ತಾಲ್ಲೂಕಿನ ಶೆಟ್ಟಿಕೆರೆ ಕೆರೆಯಲ್ಲಿನ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಕೆರೆಯ ಒಳಗೆ ಅತಿಕ್ರಮ ಪ್ರವೇಶ ಮಾಡದಂತೆ  ಐ.ಪಿ.ಸಿ ಸೆಕ್ಷನ್ 133ರ ಪ್ರಕಾರ  ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇದೇ ಏಪ್ರಿಲ್ 23ರಿಂದ ಈ ಆದೇಶ ಜಾರಿಗೆ ಬರಲಿದ್ದು  ಈ ಮೂಲಕ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ, 2011 ಮೇ 5ರಿಂದ 2012 ಏಪ್ರಿಲ್ 1ರವರೆಗೆ ವಿವಿಧ ಸ್ಥಳಗಳಲ್ಲಿ ಅಕ್ರಮ ಮರಳು ಸಾಗಾಣಿಕೆಯಯನ್ನು ಸೀಜ್ ಮಾಡಲಾಗಿದ್ದು ಈ ಸಂಬಂಧ ವಿಧಿಸಿದ ದಂಡವು  ಒಂದು ಲಕ್ಷದ ಏಳು ಸಾವಿರದ ಐದುನೂರು ರೂಪಾಯಿಯನ್ನು ಸಕರ್ಾರಕ್ಕೆ ಜಮಾ ಮಾಡಲಾಗಿದೆ. ನಲವತ್ಮೂರು ಸಾವಿರದ ಐದುನೂರು ರೂ ಮರಳನ್ನು ಹರಾಜು ಮಾಡಲಾಗಿದೆ ಈ ಮೂಲಕ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಕಾನೂನಿನ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು  ಕೆಲವು ಕಡೆ ನಡೆಯುತ್ತಿದ್ದ ಮರಳು ಸಾಗಾಣಿಕೆಯನ್ನು ಸೀಜ್ ಮಾಡಲು ಹೋದಾಗ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಬೇಕಾಯಿತು, ಇಂತಹ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಶ್ನಿಸಿದರೆ ನಮಗೆ ಮನೆ ಕಟ್ಟಿಕೊಳ್ಳಲು ಮರಳು ಲಭ್ಯವಾಗದ್ದರಿಂದ ಮರಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬ ವಿಷಯಗಳನ್ನು ತಿಳಿಸಿತ್ತಾರೆ ಎಂದ ಅವರು ಹೊರಗಡೆಯಿಂದ ತಂದಂತಹ ಮರಳನ್ನು ಶೇಖರಿಸಿಡಲು ತಾಲ್ಲೂಕಿನ ಪ್ರತಿ ಹೋಬಳಿಗೂ 2ಎಕರೆ ಜಮೀನು ಕಲ್ಪಿಸಿದ್ದು ಇದರ ಉಸ್ತುವಾರಿಯನ್ನು ಪಿ.ಡಬ್ಯೂ.ಡಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತಾಲ್ಲೂಕು ರೈತ ಸಂಘ, ಹಸಿರು ಸೇನೆ ಬೆಂಬಲ
ಚಿಕ್ಕನಾಯಕನಹಳ್ಳಿ,ಏ.21 : ರಾಜ್ಯ ಸಕರ್ಾರ ರೈತರಿಗೆ ವಿದ್ಯುತ್ ಶಕ್ತಿ ಸರಬರಾಜು, ಸಾಲ ಮನ್ನಾ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವುದರ ವಿರುದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದೇ 25ರ ಬುಧುವಾರ ಹಮ್ಮಿಕೊಂಡಿರುವ  ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತಾಲ್ಲೂಕು ರೈತ ಸಂಘ, ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿದೆ.
ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದಲ್ಲಿ ಹಲವು ಬೇಡಿಕೆಗಳನ್ನಿಟ್ಟಿದ್ದು ಅದರಲ್ಲಿ ಬರಗಾಲ ಪ್ರದೇಶದ ರೈತರ ಎಲ್ಲಾ ಸಾಲಗಳನ್ನು ತಕ್ಷಣ ರದ್ದು ಮಾಡಬೇಕು, ಟ್ರಾಕ್ಟರ್ ಸಾಲ ಮನ್ನ ಮಾಡಿ  ಹೊಸದಾಗಿ ಸಾಲ ಕೊಡಬೇಕು, ಪ್ರತಿ ಜಿಲ್ಲೆಗೆ ತಕ್ಷಣ 5ಕೋಟಿ ಮೊದಲನೆ ಕಂತಿನಲ್ಲಿ ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲೆಗೊಬ್ಬರಂತೆ ರಾಜ್ಯ ಮಟ್ಟದ ಅಧಿಕಾರಿ ಮತ್ತು ಮಂತ್ರಿಗಳನ್ನು ನೇಮಿಸಿ ಜನಗಳಿಗೆ ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು, ನೀರು ಒದಗಿವುದು ಇವುಗಳು ಸೇರಿದಂತೆ ರೈತರಿಗೆ ನೆರವಾಗುವಂತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕಾರ್ಯಕ್ರಮ ಬೆಂಬಲಿಸಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಪಿ.ಮಲ್ಲೇಶ್, ಗೌರವಾಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ, ಉಪಾಧ್ಯಕ್ಷ ಗಂಗಣ್ಣ ಕಾಡೇನಹಳ್ಳಿ, ಕಾರ್ಯದಶರ್ಿ ಮರುಳಪ್ಪ ಕಾರ್ಯಕ್ರಮಕ್ಕೆ ಬೆಂಬಲ ತಿಳಿಸಿದ್ದಾರೆ.

ಬಸವೇಶ್ವರರ ಜಯಂತ್ಯೋತ್ಸವ
ಚಿಕ್ಕನಾಯಕನಹಳ್ಳಿ,ಏ.21 : ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಹಾಗೂ ಶ್ರೇಷ್ಠ ವಚನಕಾರ ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 24ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಆಡಳಿತ ಮತ್ತು ಬಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.
ತಾ.ಪಂ.ಅಧ್ಯಕ್ಷ ಸೀತರಾಮಯ್ಯ ಬಸವೇಶ್ವರರ ಭಾವಚಿತ್ರ ಅನಾವರಣಗೊಳಿಸಲಿದ್ದು, ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಜಿ.ಪಂ.ಸದಸ್ಯತು, ಮಾಜಿ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿರುವರು.

Monday, April 2, 2012




ಬರಪರಿಹಾರ ಕಾರ್ಯದಲ್ಲಿ  ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವ ಡಿ.ಸಿ.: ಶಾಸಕ ಸಿ.ಬಿ.ಎಸ್. ಆರೋಪ
ಚಿಕ್ಕನಾಯಕನಹಳ್ಳಿ,ಏ.02 : ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ ಅಲ್ಲದೆ ತಾಲ್ಲೂಕು  ಬರಪೀಡಿತ ಪ್ರದೇಶವೆಂದು ಸಕರ್ಾರ ಘೋಷಿಸಿದೆ ಆದರೂ ಜಿಲ್ಲಾಧಿಕಾರಿಗಳು ಸೌಜನ್ಯಕ್ಕಾದರೂ ತಾಲ್ಲೂಕಿನಲ್ಲಿ ಒಂದು ಬಾರಿಯಾದರೂ ಜನಪ್ರತಿನಿಧಿಗಳ ಸಭೆ ಕರೆದು ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಚಚರ್ಿಸದೆ, ಜನಪ್ರತಿನಿದಿಗಳನ್ನು ಕಡೆಗಣಿಸಿ ಜಿಲ್ಲೆಯಲ್ಲಿ ಪ್ರೆಸಿಡೆಂಟ್ನಂತೆ ಮಾದರಿಯಲ್ಲಿ ಅವರ ಪಾಡಿಗೆ ಅವರು ವತರ್ಿಸುತ್ತಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಬರಪರಿಹಾರ ಕಾರ್ಯ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸಕರ್ಾರ ಈ ಹಿಂದೆ ಕೂಲಿಗಾಗಿ ಕಾಳು ಯೋಜನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಜನತೆಯ ಜೀವನ ಸುಧಾರಿಸಿತ್ತು,  ಅದೇ ರೀತಿ ಈಗ ನೀರಿನ ಬವಣೆ ನಿವಾರಿಸಲು ಹೆಚ್ಚಿನ ರೀತಿಯಲ್ಲಿ ಬೋರ್ವೆಲ್ಗಳನ್ನು ಕೊರೆಸಿ ನೀರಿನ ದಾಹ ತೀರಿಸುವ ಅಗತ್ಯವಿದೆ ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿ ತಾಲ್ಲೂಕಿನ ಸಮಸ್ಯೆಗಳನ್ನು ಸಕರ್ಾರಕ್ಕೆ ಸಲ್ಲಿಸಬೇಕು, ಆದರೆ ಜಿಲ್ಲಾಧಿಕಾರಿಗಳು ಇಲ್ಲಿಯ ಸಮಸ್ಯೆ ಬಗ್ಗೆ ಒಂದು ಬಾರಿಯೂ  ಈ ಕಡೆ ಗಮನ ಹರಿಸುತ್ತಿಲ್ಲದಿರುವುದರಿಂದ ತಾಲೂಕಿನಲ್ಲಿ ಸಮಸ್ಯೆ ಹೆಚ್ಚುತ್ತಿದೆ, 
ಬರಪರಿಹಾರ ಸಮಿತಿಗೆ  ಶಾಸಕರುಗಳನ್ನು ಅಧ್ಯಕ್ಷರನ್ನಾಗಿ ಸಕರ್ಾರ ಮಾಡಿದೆ, ಆದರೆ ಜಿಲ್ಲಾಧಿಕಾರಿಗಳು ಶಾಸಕರನ್ನು ಹಾಗೂ ಜನಪ್ರತಿನಿಧಿಗಳನ್ನು ಲೆಕ್ಕಿಸದಿರುವುದು ಶೋಚನೀಯವಾಗಿದೆ ಎಂದ ಅವರು,  ಜಾನುವಾರುಗಳಿಗೆ ಮೇವಿನ ಸಮಸ್ಯೆ  ಹಾಗೂ ಜನರ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ, ಕೆಲವು ಕಡೆ ಬೋರ್ವೆಲ್ ಮತ್ತು ಪೈಪ್ಲೈನ್ ಇರುವ ಕಡೆ  ನೀರು ತಳಮಟ್ಟಕ್ಕೆ ಹೋಗುತ್ತಿದೆ,  ಇದರಿಂದ ಜನರು ಜೀವನೋಪಾಯಕ್ಕಾಗಿ ಕುಟುಂಬ ಸಮೇತ ಪಟ್ಟಣಗಳತ್ತ ಗುಳೇ ಹೋಗುತ್ತಿದ್ದಾರೆ.  ಸಕರ್ಾರ ಬರಪೀಡಿತ ಪ್ರದೇಶಗಳಿಗೆ ಅನುದಾನ ನೀಡುತ್ತಿರುವುದು ಸಾಲುತ್ತಿಲ್ಲ ಇದಕ್ಕಾಗಿ ಜಿಲ್ಲಾಧಿಕಾರಿಗಳು ತಾಲ್ಲೂಕಿಗೆ ಆಗಮಿಸಿ ಸಮಸ್ಯೆಗಳನ್ನು ತಿಳಿಯಬೇಕು,  ಸಕರ್ಾರ ಬರಪೀಡಿತ ಪ್ರದೇಶಗಳ ಸಮಸ್ಯೆ ನಿವಾರಿಸಲು ಉತ್ತಮ ರೀತಿಯಲ್ಲಿ ಹಣ ಮಂಜೂರು ಮಾಡಬೇಕು ಎಂದು ತಿಳಿಸಿದರು. 



ಸಕಾಲ ದಿಂದ ಜನರಿಗೆ ಸಕರ್ಾರಿ ಸೇವೆಗಳು ಶೀಘ್ರ ಸಿಗುವಂತಾಗಲಿ
ಚಿಕ್ಕನಾಯಕನಹಳ್ಳಿ,ಏ.02 : ಸಕರ್ಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಯಾರ ಒತ್ತಡಕ್ಕೂ ಮಣಿಯದೇ, ಸಾರ್ವಜನಿಕರ ಸೇವೆಯನ್ನು ವಿಳಂಬಗೊಳಿಸದೆ ಶೀಘ್ರವಾಗಿ ಪರಿಹರಿಸಬೇಕು ಎಂಬ ಉದ್ದೇಶದಿಂದ ಸಕಾಲ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದ್ದು ಇದರಿಂದ ಸಾರ್ವಜನಿಕರ ಸೇವೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಕಾಲ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಸಕರ್ಾರದ ಕೆಲಸ ಪೂರ್ಣಗೊಳ್ಳಲು ದಿನವಿಡಿ ಕಾಯುವ ಸಾರ್ವಜನಿಕರು ಇನ್ನು ಮುಂದೆ ಶೀಘ್ರವಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು, ತಡವಾದರೆ ಅದರ ಬದಲಾಗಿ ಪರಿಹಾರ ಧನ ಪಡೆಯಬಹುದಾಗಿದೆ, ಅದಕ್ಕಾಗಿ ಸಾರ್ವಜನಿಕರು ತಮ್ಮ ಸಮಸ್ಯೆ ಬಗ್ಗೆ ಅಧಿಕಾರಿಗಳಲ್ಲಿ ಅಜರ್ಿ ನೀಡಿ, ಅಜರ್ಿ ನೀಡಿದಕ್ಕಾಗಿ ಸ್ವೀಕೃತಿ ಪತ್ರ ಪಡೆಯಬೇಕು, ಅಜರ್ಿ ನೀಡಿಯೂ ತಮ್ಮ ಕೆಲಸ ತಾವು ಪಡೆದ ಕಾಲವಕಾಶದೊಳಗೆ ಪೂರ್ಣಗೊಳ್ಳದಿದ್ದರೆ ಸ್ವೀಕೃತಿ ಪತ್ರ ನೀಡಿದ ಅಧಿಕಾರಿಯೂ ತಮ್ಮ ವೇತನದಲ್ಲಿ 20ರೂ ನಿಂದ 500ರೂ ವರೆಗೆ ಪರಿಹಾರ ನೀಡಲಿದ್ದಾರೆ ಎಂದು  ತಿಳಿಸಿದ ಅವರು  ಈ ಸಕಾಲ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡು ಈ ಯೋಜನೆಯ ಬಗ್ಗೆ ಗ್ರಾಮದ ಜನರಿಗೂ ತಿಳಿಸಬೇಕು, ಹಾಗೂ ಅಧಿಕಾರಿಗಳು ಸಕಾಲ ಯೋಜನೆಯನ್ನು ಮರೆಯದೆ ಸರಿಯಾದ ವೇಳೆಯಲ್ಲಿ ಸಾರ್ವಜನಿಕರ ಕಾರ್ಯ ಪೂರ್ಣಗೊಳಿಸಲು ತಿಳಿಸಿದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಸಕರ್ಾರ ಹಮ್ಮಿಕೊಂಡಿರುವ ಸಕಾಲ ಯೋಜನೆಯಿಂದ ಅಧಿಕಾರಿಗಳ ಹಾಗೂ ಜನಸಾಮಾನ್ಯರ ಭಾಂದವ್ಯ ಬೆಳೆಯುತ್ತದೆ ಎಂದ ಅವರು ಈ ಯೋಜನೆಯಿಂದ ಸಾರ್ವಜನಿಕರು ಪ್ರತಿ ದಿನ ಕಛೇರಿಗಳನ್ನು ಅಲೆಯುವುದು ತಪ್ಪುತ್ತದೆ ಎಂಬ ಅಭಿಪ್ರಾಯವಿದೆ, ಅಲ್ಲದೆ ಅಧಿಕಾರಿಗಳು ಕಛೇರಿಯಲ್ಲಿ ಏನಾದರೂ ತೊಂದರೆ ಇದ್ದರೆ ಸಾರ್ವಜನಿಕರಲ್ಲಿ ನೇರವಾಗಿ ತಿಳಿಸಿ ನಿಮ್ಮ ಕೆಲಸ ಯಾವಗ ಪೂರ್ಣಗೊಳ್ಳುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿ, ಅವರನ್ನು ಕಛೇರಿಯಿಂದ ಕಛೇರಿಗೆ ಅಲೆಸಬೇಡಿ ಎಂದು ಸಲಹೆ ನೀಡಿದರು.
ಸಕಾಲದ ಸಂಪನ್ಮೂಲ ವ್ಯಕ್ತಿ ಹಾಗೂ, ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಸಕಾಲ ಯೋಜನೆಯಲ್ಲಿ ಅಧಿಕಾರಿಗಳು ತಮ್ಮ ಕೆಲಸವನ್ನು ನಿಗದಿತ ದಿನಾಂಕದೊಳಗೆ ಮಾಡಿಕೊಡದಿದ್ದರೆ ಪರಿಹಾರ ಹಣ ಕೊಡಬೇಕು, ಪರಿಹಾರ ಹಣ ನೀಡಿದ ನಂತರವೂ ಕೆಲಸವನ್ನು ಪೂರ್ಣಗೊಳಿಸುವುದು ಈ ಯೋಜನೆಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯ ಉದ್ಘಾಟನೆ ಗ್ರಾ.ಪಂ.ಕಛೇರಿಗಳಲ್ಲೂ ನಡೆಯಲಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕಾಲ ಯೋಜನೆಯಲ್ಲಿ ಅಧಿಕಾರಿಗಳು ಮಾತ್ರ ಕರ್ತವ್ಯಯತೆಯಿಂದ ಕೂಡಿರಬೇಕೆಂದಲ್ಲ ಜನಪ್ರತಿನಿಧಿಗಳು ಈ ಯೋಜನೆಯ ಉದ್ದೇಶ ತಿಳಿದುಕೊಂಡು ತಮ್ಮ ವ್ಯಾಪ್ತಿಗೆ ಬರುವ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು, ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳು ಯಾವಾಗ ತಮ್ಮ ಕಾರ್ಯಚಟುವಟಿಕೆಯನ್ನು ಸರಿಯಾಗಿ ನಿರ್ವಹಿಸುತ್ತವೆಯೋ ಆ ಸಮಯದಲ್ಲಿ ಸಕರ್ಾರದ ಯೋಜನೆ, ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ,  ತಹಶೀಲ್ದಾರ್ ಉಮೇಶ್ಚಂದ್ರ,  ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿಫಾತೀಮ, ಸದಸ್ಯೆ ಚೇತನಗಂಗಾಧರ್, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ರೇಣುಕಗುರುಮೂತರ್ಿ,  ಇ.ಓ ಎನ್.ಎಂ.ದಯಾನಂದ್ ಸೇರಿದಂತೆ ಮುಂತಾದವರಿದ್ದರು.


ಮರಳು ಮಾಫಿಯಾಕ್ಕೆ ಬಲಿಯಾದ ಗ್ರಾಮ ಸಹಾಯಕ ವಿಜಯ್ ಕುಮಾರ್

ಚಿಕ್ಕನಾಯಕನಹಳ್ಳಿ,ಏ.02 : ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಮರಳು ಮಾಫಿಯಾಕ್ಕೆ ಗ್ರಾಮ ಸಹಾಯಕ ವಿಜಯ್ಕುಮಾರ್(48)ನನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ.       ವಿಜಯ್ಕುಮಾರ್ ಶೆಟ್ಟಿಕೆರೆಯ ಗ್ರಾಮಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದು ಶೆಟ್ಟಿಕೆರೆಯ ಕೆರೆಯಲ್ಲಿ ಮರಳು ತುಂಬಲು ಬಂದ ಜನರನ್ನು ತಡೆಯಲು ಹೋದಾಗ ಈ ಘಟನೆ ನಡೆದಿರಬಹುದೆನ್ನೆಲಾಗಿದೆ. ಮೃತ ವಿಜಯ ಕುಮಾರ್ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಮಾರಕಸ್ತ್ರಾಗಳಿಂದ ಹೊಡೆದಿರುವ ಗುರುತುಗಳಿವೆ, ಜೊತೆಗೆ ಕುತ್ತಿಗೆಯ ಬಳಿ ಕಾಲಿನಿಂದ ತುಳಿದಿರುವ ಕುರುಹಗಳಿವೆ.
  ಭಾನುವಾರ ರಾತ್ರಿ ಈ ಕೃತ್ಯ ನಡೆದಿದ್ದು ಸೋಮವಾರ ಗ್ರಾಮಸ್ಥರಿಗೆ ತಿಳಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 
 ಘಟನಾ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು, ಎಸ್.ಪಿ.ಮೋಹನ್ ರೆಡ್ಡಿ, ಪ್ರಭಾರ ಡಿವೈಎಸ್ಪಿ ಶಿವರುದ್ರ ಸ್ವಾಮಿ,  ತಹಶೀಲ್ದಾರ್ ಉಮೇಶ್ಚಂದ್ರ, ಸಿ.ಪಿ.ಐ ಕೆ.ಪ್ರಭಾಕರ್ ಭೇಟಿ ನೀಡಿ ಪರಿಶೀಲಿಸಿದರು. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಮಾಫಿಯಾ: ತಾಲೂಕಿನ ಶೆಟ್ಟೀಕೆರೆ, ಕಾಡೇನಹಳ್ಳಿ, ಬರಗೂರು, ಹೊಸಕೆರೆ, ಬಳ್ಳೆಕಟ್ಟೆ ಸೇರಿದಂತೆ ಹಲವು ಕಡೆ ಮರಳು ಮಾಫಿಯಾ ನಡೆಯುತ್ತಿದೆ.  ಈ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳದೆ, ಅಧೀನ ನೌಕರರನ್ನು ಬಿಟ್ಟು ಆಟನೋಡುವ ಅಧಿಕಾರಿಗಳ ಕಾಟಕ್ಕೆ ವಿಜಯಕುಮಾರ್ ಬಲಿಯಾಗಿದ್ದಾನೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪರಿಹಾರಕ್ಕೆ ಒತ್ತಾಯ:  ಮರಳು ಮಾಫಿಯಾಕ್ಕೆ ಬಲಿಯಾಗಿರುವ ಗ್ರಾಮ ಸಹಾಯಕ ನಾಯಕ ಜನಾಂಗದವನಾಗಿದ್ದು, ಹೆಂಡತಿ, ಎರಡು ಹೆಣ್ಣು, ಒಬ್ಬ ಗಂಡು ಮಗನ ತಂದೆ, ಅವನ ಸಾವಿನಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ,  ಆದ್ದರಿಂದ ಸಕರ್ಾರ ಶೀಘ್ರ ಆರೋಪಿಗಳನ್ನು ಬಂಧಿಸಬೇಕು ಹಾಗೂ ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಹಾಗೂ ಅಹಿಂದ ತಾಲೂಕು ಅಧ್ಯಕ್ಷ ಸಿಂಗದಹಳ್ಳಿ ರಾಜ್ಕುಮಾರ್ ಒತ್ತಾಯಿಸಿದ್ದಾರೆ.

ಸುಪ್ರಿಂ ಸೆಲೂನ್ನಲ್ಲಿ ಮಟ್ ಮಂಗ್ಳವಾರದ ಕವಿಗೋಷ್ಠಿ
ಚಿಕ್ಕನಾಯಿಕನಹಳ್ಳಿ,ಏ.02: ಪಟ್ಟಣದ ಸುಪ್ರಿಂ ಸೆಲೂನ್ನಲ್ಲಿ ಸಾಹಿತ್ಯ ಎಂಬ ನೂತನ ಕಲ್ಪನೆಯೊಂದಿಗೆ ಸಾಹಿತ್ಯದ ಕೆಲಸವನ್ನು ತನ್ನ ಕಾಯಕದೊಂದಿಗೆ ನೆಡೆಸಿಕೊಡುತ್ತಿರುವ ಸುಪ್ರಿಂ ಸುಬ್ರಹ್ಮಣ್ಯ  ಅವರು, ಇದೇ ಏ.3ರಂದು ಸಂಜೆ 5.30ಕ್ಕೆ ತನ್ನ ಸೆಲೂನ್ನಲ್ಲಿ ಕವಿಗೋಷ್ಠಿ ಏರ್ಪಡಿಸಿದ್ದಾರೆ.
ಜಾಡು ವೇದಿಕೆಯೊಂದಿಗೆ ನಡೆಯುತ್ತಿರುವ ಈ ಕವಿಗೋಷ್ಠಿಯಲ್ಲಿ ಚಿಂತಕ ಕೆ.ದೊರೈರಾಜ್, ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್, ಜಿ.ವಿ.ಆನಂದಮೂತರ್ಿ, ಬಿಳಿಗೆರೆ ಕೃಷ್ಣಮೂತರ್ಿ, ಅಬ್ದುಲ್ ಹಮೀದ್, ಎನ್.ನಾಗಪ್ಪ, ಎನ್.ಇಂದಿರಮ್ಮ, ಎಸ್.ಗಂಗಾಧರಯ್ಯ, ಉಗಮ ಶ್ರೀನಿವಾಸ್, ಸಿ.ಗುರುಮೂತರ್ಿ ಕೊಟಿಗೆಮನೆ,  ಅಣೆಕಟ್ಟೆ ವಿಶ್ವನಾಥ್, ದೇವರಹಳ್ಳಿ ಧನಂಜಯ, ರಾಧಕೃಷ್ಣ, ಸಿ.ಪಿ.ಗಿರೀಶ್, ಸಿ.ಎ.ಸೋಮಶೇಖರ್ ಸೇರಿದಂತೆ ಹಲವು ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. 
ಅಂಬೇಡ್ಕರ್ ಜಯಂತಿ ಅಂಗವಾಗಿ ಉಚಿತ ಬ್ಯೂಟಿ ಪಾರ್ಲರ್ ತರಬೇತಿ
ಚಿಕ್ಕನಾಯಕನಹಳ್ಳಿ,ಏ.02: ಡಾ.ಅಂಬೇಡ್ಕರ್ ಜನ್ಮದಿನಾಚರಣೆಯ ಅಂಗವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ವಿಧವೆಯರಿಗೆ ಉಚಿತವಾಗಿ 10 ದಿನಗಳ  ಬ್ಯೂಟಿ ಪಾರ್ಲರ್ ತರಬೇತಿಯನ್ನು ನೀಡಲಾಗುವುದು ಎಂದು ಸುಪ್ರಿಂ ಬ್ಯೂಟಿಪಾರ್ಲರ್ ತರಬೇತಿ ಸಂಸ್ಥೆಯ ಕಾರ್ಯದಶರ್ಿ ವನಜ ಸುಬ್ರಹ್ಮಣ್ಯ ತಿಳಿಸಿದ್ದಾರೆ.
 ತರಬೇತಿಗೆ ಅಜರ್ಿ ಸಲ್ಲಿಸುವವರು 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರಾಗಿರಬೇಕು, ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ತರಬೇತಿಯನ್ನು ನೀಡಲಾಗುವುದು, ತರಬೇತಿಯ ನಂತರ ಸಟರ್ಿಫಿಕೇಟ್ ನೀಡಲಾಗುವುದು. ಈ ತರಬೇತಿಗೆ ಆಯ್ದ 10 ಮಹಿಳೆಯರನ್ನು ಮಾತ್ರ ಆಯ್ಕೆಮಾಡಿಕೊಳ್ಳಲಾಗುವುದು. ಹೆಚ್ಚಿನ ವಿಷಯಗಳಿಗೆ ತರಬೇತಿ ಸಂಸ್ಥೆಯ ಅಧ್ಯಕ್ಷೆ ರತ್ನಮ್ಮ ರೇಣುಕಸ್ವಾಮಿ ಮೊ.9741752827 ಕಾರ್ಯದಶರ್ಿ ವನಜ ಸುಬ್ರಹ್ಮಣ್ಯ ಮೊ.9742316759 ಸಂಪಕರ್ಿಸಬಹುದು.

Wednesday, March 28, 2012


ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಮಾ.28 : ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆ ಏರ್ಪಡಿಸುವ ಬಗ್ಗೆ ಕ್ಷೇತ್ರದ ವಿಧಾನಸಭಾ ವ್ಯಾಪ್ತಿಯ ಸಮಸ್ತ ಕಾಂಗ್ರೆಸ್ ಮುಖಂಡರುಗಳ ಮತ್ತು ಕಾರ್ಯಕರ್ತರುಗಳ ಪೂರ್ವಭಾವಿ ಸಭೆಯನ್ನು ಇದೇ 29ರ ಗುರವಾರ ಸಂಜೆ 4ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದೆ ಎಂದು ಚಿನಾಹಳ್ಳಿ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾದ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏಪ್ರಿಲ್ 10ರ ಮಂಗಳವಾರ ಸಂಜೆ 4ಗಂಟೆಗೆ ನಡೆಯಲಿರುವ ಚಿನಾಹಳ್ಳಿ ವಿಧಾನಸಭಾ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಮತ್ತು ಇತರ ನಾಯಕರುಗಳು, ಭಾಗವಹಿಸಲಿರುವ ಸಭೆಯ ರೂಪು ರೇಷೆಗಳನ್ನು ಚಚರ್ಿಸಿ ನಿರ್ಧರಿಸಲಾಗುವುದು. ಈ ಸಭೆಯು ಅಚ್ಚುಕಟ್ಟಾಗಿ ರೂಪಿಸಲು ಕಾರ್ಯಕರ್ತರು ಮತ್ತು ಮುಖಂಡರುಗಳು ಈ ಪೂರ್ವಭಾವಿ ಸಭೆಯಲ್ಲಿ  ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.

ವಿದ್ಯುತ್ ವ್ಯತ್ಯಯ
ಚಿಕ್ಕನಾಯಕಹಳ್ಳಿ,ಮಾ.28 : ತಾಲ್ಲೂಕಿನ ಉಪವಿಭಾಗದ ತಿಮ್ಮನಹಳ್ಳಿ 110/11 ಕೆ.ವಿ ಉಪಕೇಂದ್ರದಲ್ಲಿ ಮತ್ತು ಹಂದನಕೆರೆ 110/11 ಕೆ.ವಿ ಉಪಕೇಂದ್ರದಲ್ಲಿ ಇದೇ ಮಾಚರ್್ 30 ಮತ್ತು 31ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ತುತರ್ು ನಿರ್ವಹಣಾ ಕಾರ್ಯವಿರುವುದರಿಂದ, ಈ ಎರಡೂ ಉಪಕೇಂದ್ರಗಳಿಂದ ಪೂರಕವಾಗುತ್ತಿರುವ 11.ಕೆ.ವಿ ಮಾರ್ಗಗಳಿಗೆ ಬೆಳಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವಾಗಿದ್ದು ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಬೆವಿಕಂ. ಸಹಾಯಕ ಕಾರ್ಯನಿವರ್ಾಹಕ ಇಂಜನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.