Monday, April 15, 2013


ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ ಈ ಬಗ್ಗೆ ಯಾವುದೇ ವೇದಿಕೆಯಲ್ಲಿ ಚಚರ್ಿಸಲು ಸಿದ್ದ: ಸಿ.ಬಿ.ಎಸ್.ಸವಾಲ್

ಚಿಕ್ಕನಾಯಕನಹಳ್ಳಿ,ಏ.15 : ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ  ಏನೇನು ಅಭಿವೃದ್ದಿಯಾಗಿದೆ ಎನ್ನುವ ಬಗ್ಗೆ ದಾಖಲೆ ಸಮೇತ  ಪ್ರದಶರ್ಿಸುತ್ತೇನೆ ಈ ಬಗ್ಗೆ ಚಚರ್ಿಸಲು ಯಾವುದೇ  ವೇದಿಕೆಗೆ ಕರೆದರೂ ಬರುತ್ತೇನೆ ಎಂದು  ಜೆಡಿಎಸ್ ಅಭ್ಯಥರ್ಿ ಸಿ.ಬಿ.ಸುರೇಶ್ಬಾಬು ಸವಾಲು ಹಾಕಿದರು.
ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಮೆರವಣಿಗೆ ಹೊರಟು, ಚುನಾವಣಾಧಿಕಾರಿ ಇ.ಪ್ರಕಾಶ್ ರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಓಟಿಗಾಗಿ ಗಂಡ ಹೆಂಡತಿಯನ್ನು ಬೇರೆ ಮಾಡುವ ರಾಜಕಾರಣಿ, ಸೋತ ನಂತರ ತಮ್ಮ ತೋಟ ಮತ್ತು ಮನೆ ಬಿಟ್ಟು ಆಚೆ ಬರದೆ ಚುನಾವಣೆ ಆರು ತಿಂಗಳು ಇದೆ ಎನ್ನುವಾಗ ಜನರ ಬಳಿ ಬರುತ್ತಾರೆ  ಎಂದು ಆರೋಪಿಸಿದರಲ್ಲದೆ, ಹುಲಿವೇಷ ಹಾಕಿದಾದ ಹುಲಿ ಯಂತೆ ಕಾಣಿಸುತ್ತಾರೇನೊ ಹೊರತು ಅವರು. ಕಾಡಿನಿಂದ ಆಚೆ ಬರದ ಅವರನ್ನು ಮತ್ತೆ ಜನರೆ ಕಾಡಿಗೆ ಕಳಿಸುತ್ತಾರೆ ಎಂದರು.
ಅವರು  ಶಾಸಕರಾಗಿದ್ದ ಸಮಯದಲ್ಲಿ ಸದನದಲ್ಲಿ ನೈಸ್, ಕಾರಿಡಾರ್ ಬಗ್ಗೆ ಮಾತನಾಡಿದರೆ ಹೊರತು ತಾಲ್ಲೂಕಿನ ಬಡ ಜನತೆಯ ಪರವಾದ ವಿಷಯದ ಬಗ್ಗೆ ಚಚರ್ಿಸಲೇ ಇಲ್ಲ, ತಾಲ್ಲೂಕಿನ ರೈತರಿಗೆ  ಹೆಚ್ಚಿಗೆ ಅನುಕೂಲವಾಗುವ  ಕೊಬ್ಬರಿ ಬೆಲೆಯ ಬಗ್ಗೆ ಹಾಗೂ ನೀರಿನ ಸಮಸ್ಯೆ ಬಗ್ಗೆ ಚಚರ್ಿಸದೆ ನಿಷ್ಕ್ರೀಯರಾಗಿ ಈಗ ನೀರು ತರುವಲ್ಲಿ ನಮ್ಮ ಪಾತ್ರವೂ  ಇದೆ ಎಂದು ಹೇಳುತ್ತಾರೆ ಎಂದರು.
ತಮ್ಮ ವಿರುದ್ದ ಅಪಪ್ರಚಾರ ಮಾಡುತ್ತಾ ಮೊದಲಿನಂತೆ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ, ಅವರು ಶಾಸಕರಾಗಿದ್ದ ಸಮಯದಲ್ಲಿ ಯಾವ ಅಭಿವೃದ್ದಿ ಕೆಲಸ ಮಾಡದೆ  ಚುನಾವಣೆ ಸಮಯದಲ್ಲಿ ಜನಗಳ ಮುಂದೆ ತಮ್ಮ ವಿರುದ್ದ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು, 
ಎಲ್ಲಾ ಬಡವರ್ಗದ ಜನತೆ ನನ್ನ ಬೆಂಬಲಕ್ಕೆ ನಿಂತಿದೆ ಕೆಜೆಪಿ ಮತ್ತು ಬಿಜೆಪಿ ಇಬ್ಬರೂ ಜೋಬುಗಳ್ಳರು ಅನುಕಂಪದಿಂದ ಬಿ.ಜೆ.ಪಿ. ಅಧಿಕಾರಕ್ಕೆ ಬಂದರೂ ಆಡಳಿತ ಸುಧಾರಣೆ ಅವರಿಂದಾಗದು ಅದಕ್ಕಾಗಿ ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ನಮ್ಮ ತಂದೆಯವರು ಶಾಸಕರಾಗಿದ್ದಾಗ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಹೋರಾಟ ಮಾಡಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನೀರಾವರಿ ಸಮಸ್ಯೆ ಬಗೆ ಹರಿಯುತ್ತದೆ ಎನ್ನುವ ಉದ್ದೇಶದಿಂದ ಕೆಸಿಪಿಯಿಂದ ಜೆಡಿಎಸ್ ಪಕ್ಷ ಸೇರಿದ್ದು, ಅಲ್ಲದೆ ತಾಲ್ಲೂಕಿನ ನೀರಿನ ಸಮಸ್ಯೆ ಬಗ್ಗೆ ನಾನೂ ಸದನದಲ್ಲಿ ಚಚರ್ಿಸಿದ್ದೇನೆ ಎಂದರು.
ಈಗಿನ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ 20ಸಾವಿರ ಹೆಣ್ಣುಮಕ್ಕಳಿಗೆ ತಾಲ್ಲೂಕಿನಲ್ಲಿಯೇ ಕೆಲಸ ಸಿಗುವಂತೆ ಗಾಮರ್ೆಂಟ್ಸ್ನ್ನು ಆರಂಭಿಸಲಾಗುವುದು, ಎಂದಿನಂತೆ ತಾಲ್ಲೂಕಿನ ಅಭಿವೃದ್ದಿಯನ್ನು ಕೊಂಡೊಯ್ಯುವತ್ತ ಗಮನ ಹರಿಸಲಿದ್ದು ಕೋಮು ಸೌಹಾರ್ಧತೆ ಕಾಪಾಡುತ್ತೇನೆ ಎಂದರಲ್ಲದೆ ಹಿಂದಿನ ಬಾರಿ ಶಾಸಕನಾಗಿದ್ದ ಸಮಯದಲ್ಲಿ ತಾಲ್ಲೂಕಿಗೆ ಅಗ್ನಿಶಾಮಕ ಠಾಣೆಗೆ ಹಣ ಮಂಜೂರಾಗಿತ್ತು ಆದರೆ ನಂತರ ಬಂದ ಶಾಸಕರು ಯೋಜನೆಗೆ ಜಾಗವನ್ನೇ ನೀಡಲಿಲ್ಲ ಮತ್ತೊಮ್ಮೆ ನಾನು ಶಾಸಕನಾಗಿ ಆಯ್ಕೆಯಾದಾಗಲೇ ಠಾಣೆ ಆರಂಭಗೊಂಡಿದ್ದು ಎಂದು ಸಮಥರ್ಿಸಿಕೊಂಡರು.
ರಾಜ್ಯದ ಸಮಸ್ಯೆ ಬಗೆಹರಿಸುವತ್ತ ನನ್ನ ಚಿಂತನೆ ಇತ್ತು: ಜೆ.ಸಿ.ಎಂ.

ಚಿಕ್ಕನಾಯಕನಹಳ್ಳಿ,ಏ.15 : ನಮ್ಮ ಕ್ಷೇತ್ರದ ಸಮಸ್ಯೆ ಮಾತ್ರ ಬಗೆ ಹರಿಸಲು ಮುಂದಾದರೆ ರಾಜ್ಯ ಸಮಸ್ಯೆ ಬಗೆಹರಿಸುವವರು ಯಾರು, ಶಾಸನ ಸಭೆಗೆ ಆಯ್ಕೆಯಾಗುವುದು ಕನರ್ಾಟಕದ ಸಮಸ್ಯೆಯನ್ನು ಬಗೆಹರಿಸಲು, ಶಾಸಕರು ತಮ್ಮ ಕ್ಷೇತ್ರದ ಜೊತೆಗೆ ರಾಜ್ಯ ಸಮಸ್ಯೆಯ ಬಗೆಹರಿಸಲು ಮುಂದಾಗಬೇಕು ಅದಕ್ಕಾಗಿಯೇ ನಾನು ನೈಸ್, ಇಸ್ಕಾನ್ ನಂತಹ ರಾಜ್ಯ ಸಮಸ್ಯೆ ಬಗ್ಗೆ ಹೋರಾಟ ಮಾಡಿದೆ ಎಂದು ಕೆಜೆಪಿ ಅಭ್ಯಥರ್ಿ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಮೆರವಣಿಗೆ ಹೊರಟು, ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ತಮ್ಮ ನಾಮಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಶಾಸನ ಸಭೆಗೆ ಆಯ್ಕೆಯಾಗುವುದು ಕನರ್ಾಟಕ ವಿಧಾನಸಭೆಗೆ ಅದಕ್ಕಾಗಿ ಕನರ್ಾಟಕದ ಪ್ರತಿಯೊಂದು ಸಮಸ್ಯೆಯನ್ನು ಚಚರ್ಿಸಿ ಆ ಸಮಸ್ಯೆಯನ್ನು ಪರಿಹರಿಸದಿದ್ದರೆ ಶಾಸನ ಸಭೆಗೆ ಗೌರವವಿರುವುದಿಲ್ಲ. ರಾಜ್ಯದಲ್ಲಿ ನೈಸ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಉಳಿದಿತ್ತು ಎಂದರಲ್ಲದೆ ನನ್ನ ಶಾಸಕತನದ ಅವಧಿಯಲ್ಲಿ ತಾಲ್ಲೂಕಿನ ಸಮಸ್ಯೆ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ತಿಳಿಸಿ ಸಮಸ್ಯೆ ಬಗೆ ಹರಿಸುತ್ತಿದ್ದೆ, ನಮಗೆ ಶಕ್ತಿ ಇದೆ ಅದಕ್ಕಾಗಿಯೇ ಅಧಿಕಾರಿಗಳಿಗೆ ಜನರ ಸಮಸ್ಯೆ ಬಗ್ಗೆ ಸ್ಥಳದಲ್ಲಿಯೇ ಬಗೆಹರಿಸುತ್ತಿದೆ ಎಂದರು.
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ  ಜಾತಿ ಸಂಘರ್ಷಕ್ಕೆ ಹೇಡೆ ಮಾಡಿಕೊಡದೆ ಕ್ಷೇತ್ರದಲ್ಲಿ ನಾಯಕತ್ವದ ಕೊರತೆ ಇಲ್ಲದಂತೆ ನೋಡಿಕೊಂಡಿದ್ದೇನೆ, ಈಗಿನ ಶಾಸಕರ ಅವಧಿಯಲ್ಲಿ ಅಧಿಕಾರಿ ಶಾಹಿ ಆಡಳಿತವಿತ್ತು  ಎಂದರಲ್ಲದೆ ಸದನದಲ್ಲಿ ಗಣಿ ವಿಚಾರದ ಬಗ್ಗೆ ಚಚರ್ಿಸುತ್ತಿದ್ದೆ ಆದರೆ ಆ ಸಮಯದಲ್ಲಿ ಗಣಿ ಸಮಸ್ಯೆ ಇಷ್ಟು ದೊಡ್ಡದಾಗಿ ಇಲ್ಲದಿದ್ದರಿಂದ ಪ್ರಚಾರವಿರಲಿಲ್ಲ ಎಂದು ತಿಳಿಸಿದರು.

ಬಿ.ಎಸ್.ಪಿ.ರಾಜ್ಯ ಪ್ರಧಾನ ಕಾರ್ಯದಶರ್ಿಯಾಗಿ ಕ್ಯಾಪ್ಟನ್ ಸೋಮಶೇಖರ್ ನೇಮಕ


ಚಿಕ್ಕನಾಯಕನಹಳ್ಳಿ,ಏ.15: ಬಿ.ಎಸ್.ಪಿ. ಪಕ್ಷದ ರಾಜ್ಯ ಪ್ರಧಾನ ಕಾರ್ಯದಶರ್ಿಯಾಗಿ ನೇಮಕ ಮಾಡಿದ್ದು, ಬುಧವಾರ ಮಧ್ಯಾಹ್ನ ವಿಧಾನ ಸಭಾ ಚುನಾವಣೆಗೆ ಈ ಕ್ಷೇತ್ರದಿಂದ ನಾನು ನಾಮಪತ್ರ ಸಲ್ಲಿಸುತ್ತಿರುವುದಾಗಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಪಿ.ಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪನವರು ಹಾಗೂ ದ್ವಾರಕನಾಥ್ ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ರಾಜ್ಯ ಮಟ್ಟದ ಸ್ಥಾನಮಾನ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಸಂಘಟನೆ ಮಾಡಿದ್ದೆ ಆದರೆ ಜಾತಿವಾರು ಪ್ರಾತಿನಿಧ್ಯದ ವಿಷಯ ಬಂದಾಗ ನನಗೆ ಹಿನ್ನಡೆಯಾಯಿತು ಎಂದರಲ್ಲದೆ, ಕಾಂಗ್ರೆಸ್ನಲ್ಲಿ ಪಕ್ಷದ ಬೆಳವಣಿಗೆಗಿಂತ ಜಾತಿಗಳ ತೃಪ್ತಿ ಪಡಿಸುವ ಅನಿವಾರ್ಯತೆ ಇದೆ ಎಂದರು.
ಸುದ್ದಿ:1


ಕಾಂಗ್ರೆಸ್ಗೆ ಕ್ಯಾಪ್ಟನ್ ಸೋಮಶೇಖರ್ ರಾಜೀನಾಮೆ


ಚಿಕ್ಕನಾಯಕನಹಳ್ಳಿ,ಏ.14: ಕಾಂಗ್ರೆಸ್ ಪಕ್ಷದ ಕ್ಯಾಪ್ಟನ್ ಸೋಮಶೇಖರ್ ಕ್ಷೇತ್ರದ ಸಂಘಟನಾ ಉಸ್ತುವಾರಿ ಹಾಗೂ ವೀಕ್ಷಕ ಸ್ಥಾನಕ್ಕೆ ಸೇರಿದಂತೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಜಿಲ್ಲಾ ಅಧ್ಯಕ್ಷ ಷಫಿ ಅಹಮದ್ ರವರಿಗೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.



ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಾಗಾರಿ ಆರಂಭ: ಕೆ.ಎಸ್.ಕಿರಣ್ಕುಮಾರ್.

  • ಬಿ.ಜೆ.ಪಿ ಸಕರ್ಾರದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಮೂನ್ನೂರು ಕೋಟಿ ರೂ ಅನುದಾನ:
  • ಸುಳ್ಳು, ಅಪಪ್ರಚಾರದಲ್ಲೇ ಕಾಲ ಕಳೆಯುವ ಮಾಜಿ ಶಾಸಕರು.
  • ಮೂರು ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬರುವ ಶಾಸಕರು  

ಚಿಕ್ಕನಾಯಕನಹಳ್ಳಿ,ಏ.14 : ತಾಲ್ಲೂಕಿನ  27ಕೆರೆಗಳ ಕುಡಿಯುವ ನೀರಿನ 102ಕೋಟಿರೂಗಳ ಕಾಮಗಾರಿ ಆರಂಭಗೊಂಡಿದೆ ಇದರಿಂದಾಗಿ ತಾಲೂಕಿನ ಬಹು ದಿನಗಳ ಬಯಕೆ ಈಡೇರಿದಂತಾಗಿದೆ, ಬಿ.ಜೆ.ಪಿ. ಸಕರ್ಾರ ಕ್ಷೇತ್ರದ ಅಭಿವೃದ್ದಿಗಾಗಿ ಮೂರು ನೂರು ಕೋಟಿ ರೂಗಳಷ್ಟು ಅನುಧಾನ ನೀಡಿದೆ ಎಂದು ಬಿ.ಜೆ.ಪಿ.ಅಭ್ಯಥರ್ಿ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು.
ಪಟ್ಟಣದ ಭಾಜಪ ಕಛೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿಯ ಆಚರಣೆ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದೆ ಬುಕ್ಕಾಪಟ್ಟಣ, ಸಿಂಗದಹಳ್ಳಿ ಕೆರೆಗಳಿಗೂ ನೀರು ತರುವುದಾಗಿ ಭರವಸೆ ನೀಡಿದ ಅವರು, ಈ ಯೋಜನೆಯ ಬಗ್ಗೆ ಮೊದಲು ಕ್ರಮ ಕೈಗೊಂಡವರು, 2005ರಲ್ಲಿ ಕೆ.ಎಸ್.ಈಶ್ವರಪ್ಪನವರು, ಅವರು ಹೇಮಾವತಿ ನಾಲೆಯಿಂದ ಗುರುತ್ವಾಕರ್ಷಣ ಬಲದಲ್ಲಿ ನೀರು ಬರುತ್ತದೆಯೋ ಹೇಗೆಂಬ ಸವರ್ೆ ಕಾರ್ಯಕ್ಕೆ ಮೂರು ಲಕ್ಷ ರೂಗಳನ್ನು ಮಂಜೂರು ಮಾಡಿದ್ದರಿಂದಾಗಿ ಈ ಕಾರ್ಯ ಅರಂಭಗೊಂಡಿತು ಎಂದ ಅವರು, ಇಲ್ಲಿಗೆ ನೀರು ತರಲು ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲರೂ ತಮ್ಮ ಅವಧಿಯಲ್ಲಿ ಅಗತ್ಯವಾದ ಸಹಕಾರವನ್ನು ನೀಡಿದ್ದಾರೆ ಎಂದರು.
ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೆತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು,  ಮೊರಾಜರ್ಿ ಶಾಲೆ, ಅಗ್ನಿಶಾಮಕ ಠಾಣೆ, ಬುಕ್ಕಾಪಟ್ಟಣ ಹಾಗೂ ಚಿ.ನಾ.ಹಳ್ಳಿಯ ಸಕರ್ಾರಿ  ಡಿಗ್ರಿ ಕಾಲೇಜುಗಳ ಕಟ್ಟಡಗಳಿಗೆ ಹಣ ಮಂಜೂರು ಮಾಡಿದ್ದು, 10 ಪ್ರೌಢಶಾಲೆಗಳಿಗೆ ಕಟ್ಟಡಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಈ ಎಲ್ಲಾ ಕಾರ್ಯಗಳು ಬಿ.ಜೆ.ಪಿ. ಸಕರ್ಾರ ಈ ಕ್ಷೇತ್ರದ ಅಭಿವೃದ್ದಿಗಾಗಿ ಮಾಡಿದ ಸಹಕಾರ ಎಂದರು. 
ಮಾಜಿ ಶಾಸಕರು ಅಪಪ್ರಚಾರದ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಈ ಕ್ಷೇತ್ರದಲ್ಲಿನ ಮಾಜಿ ಶಾಸಕರೊಬ್ಬರು ಜೆ.ಎಚ್.ಪಟೇಲ್ ರವರು ಸಿ.ಎಂ.ಆಗಿದ್ದಾಗ ಅವರು, ತುಂಬಾ ಹತ್ತಿರದವರಾಗಿದ್ದರು ಆಗ ಅವರಿಗೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಎಳ್ಳಷ್ಟೂ ಕಾಳಜಿ ತೋರಲಿಲ್ಲ, ಅವರು ಬಹಳ ಹಿಂದೆಯೇ ಇಂತಹ ಕೆಲಸವನ್ನು ಮಾಡಬಹುದಾಗಿತ್ತು ಆದರೆ ಅವರಿಗೆ ಆಗ ಇಚ್ಚಾಶಕ್ತಿ ಇರಲಿಲ್ಲವೇನೊ,  ಅವರಿಗೇನದ್ದರೂ ಕಣ್ಣಿಗೆ ಕಾಣುವುದು, ನೈಸ್, ಏಟ್ರಿಯಾ ಹೋಟೆಲ್, ಇಸ್ಕಾನ್ ನಂತಹ ಥೈಲಿ ತಂದು ಕೊಡುವವರ ಬಗ್ಗೆ ಮಾತನಾಡುತ್ತಾರೋ ಹೊರತು, ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಿಂಚಿತ್ತೂ ಯೋಚಿಸಲೂ ಇಲ್ಲ,  ವಿಶೇಷ ಅನುಧಾನಗಳನ್ನು ತರಲಿಲ್ಲವೆಂದರು. 
ಬಹಳ ಹಿಂದೆಯೇ ಹೇಮಾವತಿ ನೀರು ತರುವ ಪ್ರಯತ್ನ ಮಾಡಿದ್ದೆ ಅದಕ್ಕಾಗಿ ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗಲೇ ವಾಟರ್ ಅಲೋಕೇಶನ್ ಮಾಡಿಸಿಕೊಂಡಿದ್ದೆ ಎಂದು ಹೇಳುವ ಮಾಜಿ ಶಾಸಕರು, ಅದರ ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದಶರ್ಿಸಲಿ ಎಂದು ಸವಾಲ್ ಹಾಕಿದರು.
ಓಟು ಬ್ಯಾಂಕಿಗಾಗಿ ಯಡಿಯೂರಪ್ಪನವರ ಹಿಂದೆ ಹೋಗಿದ್ದಾರೆ ಹೊರತು, ಯಡಿಯೂರಪ್ಪನವರ ಮೇಲಿನ ನಿಜವಾದ ಕಾಳಜಿ ಇದ್ದಿದ್ದರೆ, ಅಂದು ಜೆ.ಡಿ.ಎಸ್.ನವರು ಯಡಿಯೂರಪ್ಪನವರಿಗೆ ಮೋಸ ಮಾಡಿದಾಗ, ಮಾಜಿ ಶಾಸಕರು ಯಡಿಯೂರಪ್ಪನವರನ್ನು ಕುರಿತು ಇನ್ನೂ ಏನು ಮುಖ ನೋಡುತ್ತಿದ್ದೀರಿ, ರಾಜೀನಾಮೆ ಬಿಸಾಕಿ ಎಂದು ಹೇಳಿದರೇ ಹೊರತು, ಸಹಾನೂಭೂತಿಗಾದರೂ ಯಡಿಯೂರಪ್ಪನವರ ಬೆಂಬಲಕ್ಕೆ ಮಾಜಿ ಶಾಸಕರು ನಿಲ್ಲಲಿಲ್ಲ, ಅಂದು ಒಂದು ಪಕ್ಷದ ಲೀಡರ್ ಆಗಿ ಅವರ ಬೆಂಬಲಕ್ಕೆ ನಿಲ್ಲುವ ಅವಕಾಶವಿದ್ದರೂ ಮುಖ ತಿರುಗಿಸಿಕೊಂಡ ಮಾಜಿ ಶಾಸಕರು, ಇಂದು ಯಡಿಯೂರಪ್ಪನವರನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ಛೇಡಿಸಿದರು. 
ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬರುವ ಶಾಸಕ: ಇನ್ನೂ ಈಗಿನ ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಿ.ಎಂ. ಆಗಿದ್ದಾಗ ಅವರಿಗೆ ತುಂಬಾ ಆಪ್ತರಾಗಿದ್ದವರು ಎಂದು ಹೇಳಿಕೊಳ್ಳುವ ಅವರು, ಕ್ಷೇತ್ರದ ಅಭಿವೃದ್ದಿಯನ್ನು ಮಾಡುವ ಕಿಂಚಿತ್ತೂ ದೂರದೃಷ್ಠಿ ಅವರಿಗಿಲ್ಲ, ಮೋಜು ಮೋಸ್ತಿಯಲ್ಲೇ ತಮ್ಮ ಶಾಸಕನ ಅಧಿಕಾರವನ್ನು ಪೂರೈಸಿದರು, ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬರುತ್ತಿದ್ದ ಅವರು ಕ್ರಮವಾಗಿ ಕೆ.ಡಿ.ಪಿ ಸಭೆ ನಡೆಸುತ್ತಿರಲಿಲ್ಲ, ಆಶ್ರಯ ನಿವೇಶನ ಹಂಚಲಿಲ್ಲ, ಬಗರ್ಹುಕ್ಕುಂ ಸಾಗುವಣಿ ಚೀಟಿ ನಿಡಲಿಲ್ಲ, ಬರದ ಸಂದರ್ಭದಲ್ಲಿ ರೈತರಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಅವರ ಅವಧಿಯಲ್ಲಿ ಇಡೀ ಆಡಳಿತ ಸಂಪೂರ್ಣವಾಗಿ ವಿಫಲವಾಗಿತ್ತು ಎಂದರು.
  ಈ ಕ್ಷೇತ್ರದ ಜನತೆ ನನಗೆ ಆಶೀರ್ವದಿಸಿದರೆ ಕ್ಷೇತ್ರದಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಡಿಪ್ಲಮೊ ಕಾಲೇಜ್ ಮಂಜೂರು ಮಾಡುವುದು, ಗ್ರಾಮೀಣ ಜನರ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ತಾಲೂಕಿನ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯರನ್ನು ನೇಮಿಸುವುದು, ಇಲ್ಲೊಂದು ಸಿದ್ದ ಉಡುಪುಗಳ ಫ್ಯಾಕ್ಟರಿ ಮತ್ತು ಸ್ಪಾಂಜಸ್ ಕಬ್ಬಿಣದ ಅದಿರಿನ ಕಾಖರ್ಾನೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯೊಂದು ರೂಪಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗಧೀಶ್, ಮಂಡಲ ಬಿ.ಜೆ.ಪಿ. ಅಧ್ಯಕ್ಷ ಮಿಲಿಟರಿ ಶಿವಣ್ಣ, ಹಿಂದುಳಿದ ವರ್ಗಗಳ ಘಟಕದ ಮಂಡಲ ಅಧ್ಯಕ್ಷ ಶ್ರೀನಿವಾಸಮೂತರ್ಿ, ದಲಿತ ಮುಖಂಡ ಸತೀಶ್ ಸೇರಿದಂತೆ ಹಲವರಿದ್ದರು.
( ಈ ವರದಿಗೆ ಪೊಟೊ ಇದೆ)
ಸುದ್ದಿ:2
ಫೈನಾನ್ಸ್ನವರ ಕಿರುಕುಳದಿಂದ ನೇಣಿಗೆ ಶರಣಾದ ರೈತ
ಚಿಕ್ಕನಾಯಕನಹಳ್ಳಿ,ಏ.14: ಖಾಸಗಿ ಫೈನಾನ್ಸ್ನವರ ಕಿರುಕುಳ ತಾಳಲಾರದೆ ರೈತನೊಬ್ಬನು ನೇಣಿಗೆ ಶರಣು ಹೋಗಿರುವ ಘಟನೆ ತೀರ್ಥಪುರದಲ್ಲಿ ನಡೆದಿದೆ.
ತಾಲೂಕಿನ ತೀರ್ಥಪುರದ ಹರೀಶ್(35) ಬಿನ್ ಸಣ್ಣರಂಗಯ್ಯ  ಮ್ಯಾಗಮಾ ಫೈನಾನ್ಸ್ನಿಂದ ಸಾಲ ತೆಗೆದು ಟ್ಯ್ರಾಕ್ಟರ್ನ್ನ ಕೊಂಡಿದ್ದರು, ಈ ಸಾಲದ ಪೈಕಿ ಶೇ.60ರಷ್ಟು ಹಣವನ್ನು ಹರೀಶ್ ತೀರಿಸಿದ್ದನು, ಉಳಿದ ಹಣವನ್ನು ಕಟ್ಟವಂತೆ  ಫೈನಾನ್ಸ್ನವರು ಪದೇ ಪದೇ ಕಿರುಕುಳ ನೀಡುತ್ತಿದ್ದರು, ಇವರ ಒತ್ತಡ ಹೆಚ್ಚಾಗಿ, ಗ್ರಾಮದವರ ಮುಂದೆಲ್ಲಾ ಸಾಲ ಕಟ್ಟುವಂತೆ ಒತ್ತಡತಂದು ಅಪಮಾನಿಸಿದರು ಎಂಬ ಕಾರಣಕ್ಕಾಗಿ ಹರೀಶ್ ನೇಣಿಗೆ ಶರಣಾಗಿದ್ದಾನೆ.
ಸುದ್ದಿ:3
ಯುಗಾದಿ ಸಂಭ್ರಮದ ಪ್ರಯುಕ್ತ ಪುಸ್ತಕ ಬಿಡುಗಡೆ. ಕವಿಗೋಷ್ಠಿ
ಚಿಕ್ಕನಾಯಕನಹಳ್ಳಿ,ಏ.14 : ರೋಟರಿ ಜನಕ ಪಾಲ್ ಪಿ.ಹ್ಯಾರಿಸ್ರ 146ನೇ ಜನ್ಮ ವಷರ್ೋತ್ಸವ ಮತ್ತು ಯುಗಾದಿ ಸಂಭ್ರಮಮವನ್ನು ಇದೇ 17ರ ಬುಧವಾರ ಸಂಜೆ 6.15ಕ್ಕೆ ಏರ್ಪಡಿಸಲಾಗಿದೆ.
ರೋಟರಿ ಕ್ಲಬ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರೋಟರಿ ಬಾಲಭವನದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್ ತಾ.ಕಸಾಪ ಅಧ್ಯಕ್ಷ ರವಿಕುಮಾರ್ ಯುಗಾದಿ ಶುಭಾಷಯ ಕೋರಲಿದ್ದು ರಂಗಕಮರ್ಿ ನಟರಾಜ್ಹೊನ್ನವಳ್ಳಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಜಿಲ್ಲಾ 3190ರ ಸಹಾಯಕ ಗವರ್ನರ್ ಬಿಳಿಗೆರೆ ಶಿವಕುಮಾರ್ ಪಾಲ್ ಪಿ.ಹ್ಯಾರಿಸ್ಗೆ ನಮನ ಕಾರ್ಯಕ್ರಮ ನೆರವೇರಿಸಲಿದ್ದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ರೊ.ಎಂ.ವಿ.ನಾಗರಾಜ್ರಾವ್ರವರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳ 2012ರ ಪೋಲಿಸ್ ಚಿನ್ನದ ಪದಕ ಪುರಸ್ಕೃತ ಪಿ.ಐ.ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಸಿ.ಆರ್.ರವೀಶ್ವರಿಗೆ ಹಾಗೂ ಕವಿ ಪ್ರೊ.ಸಿ.ಎಚ್.ಮರಿದೇವರುರವರಿಗೆ ಗೌರವಾಭಿನಂದನೆ ಸಲ್ಲಿಸಲಾಗುವುದು.
ಸುದ್ದಿ:3
ಚುನಾವಣಾ ನೀತಿ ಸಂಹಿತೆ ಕಟ್ಟು ನಿಟ್ಟಾದ ಜಾರಿಗೆ ಸಹಕರಿಸುವಂತೆ ಆರ್.ಓ. ಮನವಿ

ಚಿಕ್ಕನಾಯಕನಹಳ್ಳಿ,ಏ.14 : ತಾಲ್ಲೂಕು ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 258 ಮತಗಟ್ಟೆಯಿವೆ, ಅದರಲ್ಲಿ 38 ಅತಿ ಸೂಕ್ಷ್ಮ, 44 ಸೂಕ್ಷ್ಮ ಮತಗಟ್ಟೆ, 176 ಸಾಮಾನ್ಯ ಮತಗಟ್ಟೆಗಳಿವೆ ಎಂದು ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದರು.
ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಜನವರಿ 16ಕ್ಕೆ 1,92,008 ಮತದಾರರಿದ್ದು ಅದರಲ್ಲಿ 97121 ಪುರುಷ ಮತದಾರರು, 94887 ಮಹಿಳಾ ಮತದಾರರಿರುವರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ತಾಲ್ಲೂಕಿನ 5 ಹೋಬಳಿಗಳು ಹಾಗೂ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಸೇರಿದ್ದು ಕ್ಷೇತ್ರದಲ್ಲಿ 3 ಜನ ಪ್ಲೆಯಿಂಗ್ ಸ್ಕ್ವಾಡ್ಗಳನ್ನು ನೇಮಕ ಮಾಡಲಾಗಿದೆ ಹಾಗೂ 12 ರಿಂದ 13 ಮತಗಟ್ಟೆಗಳಿಗೆ ಒಬ್ಬರಂತೆ 22 ಜನ ಸೆಕ್ಟರಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆ ಗೇಟ್, ಹುಳಿಯಾರು ಪ್ರವಾಸಿ ಮಂದಿರದ ಎದುರು, ದೊಡ್ಡ ಎಣ್ಣೆಗೆರೆ ವೃತ್ತ, ಬುಕ್ಕಾಪಟ್ಟಣ ಹೋಬಳಿಯ ಬೆಂಚೆ ಗೇಟ್ ಬಳಿಯ ಒಟ್ಟು 4 ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದರಲ್ಲದೆ ಈ ಚೆಕ್ಪೋಸ್ಟ್ಗಳಲ್ಲಿ ರೆವಿನ್ಯೂ, ಪೋಲಿಸ್, ಅಬಕಾರಿ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬೆಂಚೆ ಗೇಟ್ ಚೆಕ್ ಪೋಸ್ಟ್ ಹೊರತುಪಡಿಸಿ ಉಳಿದ ಮೂರು ಚೆಕ್ ಪೋಸ್ಟ್ಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ತಾಲ್ಲೂಕು ಕಛೇರಿಯಲ್ಲಿ ಸಹಾಯವಾಣಿ ತೆರೆದಿದ್ದು ಸಹಾಯವಾಣಿ ನಂಬರ್ 08133-267242 ನಂ.ಗೆ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
( ಈ ವರದಿಗೆ ಪೊಟೊ ಇದೆ) 
ಸುದ್ದಿ:4
ಆರೋಗ್ಯ ಆಸ್ಪತ್ರೆಯಲಿಲ್ಲ ಆಹಾರದಲ್ಲಿದೆ: ಡಾ.ಖಾದರ್

ಚಿಕ್ಕನಾಯಕನಹಳ್ಳಿ,ಏ.14: ನಮ್ಮ ಆಹಾರ ಸರಳವಾದರೆ ಆರೋಗ್ಯ ತಂತಾನೆ ವೃದ್ಧಿಸುತ್ತದೆ,  ಆರೋಗ್ಯ ಆಸ್ಪತ್ರೆಯಲ್ಲಿದೆ ಎಂಬ ಭ್ರಮೆಯನ್ನು ಬಿಟ್ಟು ಸಿರಿಧಾನ್ಯಗಳನ್ನು ಊಟದಲ್ಲಿ ಯತೇಚ್ಚವಾಗಿ ಬಳಸಿ ರೋಗಮುಕ್ತರಾಗಿ ಎಂದು ಡಾ.ಖಾದರ್ ಅಭಿಪ್ರಾಯ ಪಟ್ಟರು. 
   ತಾಲ್ಲೂಕಿನ ಪ್ರಗತಿಪರ ರೈತ ಅಣೆಕಟ್ಟೆ ವಿಶ್ವನಾಥ್ ತೋಟದಲ್ಲಿ ಭಾನುವಾರ ಬಳಗ ಆಯೋಜಿಸಿದ್ದ `ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ' ಎಂಬ ವಿಷಯದಬಗ್ಗೆ ಏರ್ಪಡಿಸಿದ್ದ ಒಂದುದಿನದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   ಮಕ್ಕಳೇ ಕ್ಷಮಿಸಿ ನಾವು ನಿಮಗೆ ಆರೋಗ್ಯಕರ ಆಹಾರ ನೀಡುತ್ತಿಲ್ಲ,ಆಹಾರ ಬೆಳೆಯುವ,ಸೇವಿಸುವ ಜ್ಞಾನವನ್ನ ನೀಡುತ್ತಿಲ್ಲ.ಕುಜಗ್ರಹದಲ್ಲಿ ಬದುಕುವುದು ಹೇಗೆ ಎಂದು ತಲೆಕೆಡಿಸಿಕೊಂಡಿರುವ ನಮ್ಮ ವಿಜ್ಞಾನಿಗಳು ಭೂಮಿಯಮೇಲೆ ಆರೋಗ್ಯವಾಗಿ ಬದುಕುವುದು ಹೇಗೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಆದ್ದರಿಂದ ಜ್ಞಾನಿಗಳು,ವಿಜ್ಞಾನಿಗಳು ಮತ್ತು ದೊಡ್ಡವರೆನಿಸಿಕೊಂಡ ನಾವು  ಮಕ್ಕಳ ಕ್ಷಮೆ ಕೇಳಬೇಕು ಎಂದರು
  ಯತೇಚ್ಚವಾಗಿ ನಾರಿನ ಅಂಶವುಳ್ಳ  ಸಿರಿಧಾನ್ಯಗಳಲ್ಲಿ ಮದುಮೇಹ, ರಕ್ತಹೀನತೆಯಂತಹ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತವೆ.ಸಾವಯವ ಪದ್ದತಿಯಲ್ಲಿ ಹಾರ್ಕ, ಸಾಮೆ,ನವಣೆ,ರಾಗಿ ಸೊಪ್ಪು ತರಕಾರಿಗಳನ್ನು ಬೆಳೆಸಿ ಬಳಸುವ ಏಕೈಕ ಮಾರ್ಗವೇ ಆರೋಗ್ಯ ಭಾರತ ನಿಮರ್ಾಣಕ್ಕೆ ನಾಂದಿಯಾಗುತ್ತದೆ ಆಗ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.
   ಸಿರಿಧಾನ್ಯಗಳನ್ನು ತೃಣಧಾನ್ಯ ಕಿರುಧಾನ್ಯ ಎಂದು ಹೆಸರಿಸುವಲ್ಲೇ ಕೃಷಿಯ ವೈವಿದ್ಯತೆಯನ್ನು ಕೊಂದು ಕೇವಲ 40ವರ್ಷಗಳಲ್ಲಿ ಬಂದಂತಹ ಅಕ್ಕಿ ಸೋಯಾಬೀನ್ಸ್ ಮತ್ತು ಗೋಧಿ ರೀತಿಯ ಏಕರೂಪದ ಬೆಳೆಗಳನ್ನ ಸ್ಥಾಪಿಸುತ್ತ ಫಿಜಾ,್ಜ ಬರ್ಗರ್,ಬಿಸ್ಕೆಟ್,ಕೇಕ್,ನೂಡಲ್ಸ್ಗಳನ್ನು ಜಾಹಿರಾತುಗಳ ಮೂಲಕ ನಮ್ಮ ಅಡಿಗೆಕೋಣೆಗೆ ನುಗ್ಗಿಸಿ ಕೃಷಿ,ಆಹಾರ ಪದ್ಧತಿ ಇದರೂಟ್ಟಿಗಿನ ಜೀವನಕ್ರಮ ಎಲ್ಲವನ್ನೂ ಇಲ್ಲವಾಗಿಸುವ ಹುನ್ನಾರ ಎಂದರಲ್ಲದೆ ಈರೀತಯ ಆಹಾರ ಕ್ರಮದಿಂದ ಐದುವರ್ಷದ ಕಂದಮ್ಮಗಳನ್ನು ಡಯಾಬಿಟಿಸ್ ಮತ್ತು ಬೀಪಿಯಂತಹ ಮಾರಣಾಂತಿಕ ಕಾಯಿಲೆಗಳಿಗೆ ಬಲಿಕೊಡಲಾಗುತ್ತಿದೆ ಎಂದರು.
   ಪಾಲೀಷ್ ಅಕ್ಕಿ ಗೋಧಿ ಓಟ್ಸ್ಗಳ ಮೈದಾ,ಡಾಲ್ಡಾದಿಂದ ತಯಾರಿಸುವ ಬೇಕರಿ ತಿನಿಸುಗಳು ಸಕ್ಕರೆ ಅಂಶವನ್ನು ಕೇವಲ 40ನಿಮಿಷಗಳಲ್ಲಿ ರಕ್ತಕ್ಕೆ ಸೇರಿಸಿ ಬೀಟಾ ಸೆಲ್ಗಳನ್ನು ಕೊಲ್ಲುತ್ತದೆ.ಇದರಿಂದಾಗಿ ಶೇ.60 ಮಕ್ಕಳಲ್ಲಿ ಅಟೆಂಕ್ಷನ್ ಡಿಫಿಷಿಯನ್ಸಿ ಸಿಂಡ್ರೋಮ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಹಾಗು ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಮುಂದಿನ 20ವರ್ಷಗಳಲ್ಲಿ 700ಮಿಲಿಯನ್ ಮದುಮೇಹ ರೋಗಿಗಳು ಕಂಡುಬರುತ್ತಾರೆ ಆಹಾರವನ್ನು ಹೇಗೆ ಬೆಳೆಯಬೇಕು ಮತ್ತು ಹೇಗೆ ತಿನ್ನಬೇಕು ಎನ್ನುವ ಪಾರಂಪರಿಕ ಜ್ಞಾನವನ್ನು ಮರೆಸಿದ್ದರಿಂದ ಇಂತಹ ದುಸ್ತಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
  ಮೊಸರಿಲ್ಲದ ಊಟ ಊಟವೇ ಅಲ್ಲ ಎನ್ನುವ ಅಜ್ಜಿಯ ಮಾತು ದೊಡ್ಡ ಆಹಾರಜ್ಞಾನವನ್ನ ಅನಾವರಣ ಗೊಳಿಸುತ್ತದೆ ಬಾಳೆ ದಿಂಡಿನರಸ ಅಲಸಿನ ಎಲೆ ರಸ ಹುಣುಸೆ ಚಿಗುರು ಹೀಗೆ ಸುತ್ತಮುತ್ತಲಿನ ಎಲ್ಲಾ ಸೊಪ್ಪು ಸೆದೆಗಳು ಯಾವ ಐಟೆಕ್ ಆಸ್ಪತ್ರೆ ಮೆಡಿಸಿನ್ಗಳು ಕೊಡಲಗದ ಆರೋಗ್ಯವನ್ನು ಕೊಡುತ್ತವೆ ಎಂದು ಅಭಿಪ್ರಾಯಪಟ್ಟರು.
   ಕಾರ್ಯಕ್ರಮದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ಸಿ.ಯತಿರಾಜ್, ರಾಮಕೃಷ್ಣಪ್ಪ, ಗ್ರೀನ್ ಫಾಮರ್್ ಇನೋವೆಟರ್ಸ್ ಫೌಂಡೇಷನ್ನ ಚಂದ್ರಶೇಖರ್ ಬಾಳೆ, ರವೀಂದ್ರ ದೇಸಾಯಿ, ಕೃಷ್ಣಮೂತರ್ಿ ಬಿಳಿಗೆರೆ,ಗೋಪಾಲನಹಳ್ಳಿ ರಘು.ಭೈರಪ್ಪ ಮುಂತದವರಿದ್ದರು. ಕುಮಾರಿ ಸುಕೃತಿ,ರಾಜೇಶ್ವರಿ ಮತ್ತು ದಶರ್ಿನಿ ಹಾಡಿದ ಪರಂಪರೆಯ ಹಾಡುಗಳು ಆಕರ್ಷಣೀಯವಾಗಿದ್ದವು.
(ಈ ವರದಿಗೆ ಪೊಟೊ ಇದೆ)
ಸುದ್ದಿ:5

  

Thursday, April 11, 2013


 ಪಿ.ಐ. ಸಿ.ಆರ್.ರವೀಶ್ ರವರಿಗೆ ಸಿ.ಎಂ.ಚಿನ್ನದ ಪದಕ
                           
ಚಿಕ್ಕನಾಯಕನಹಳ್ಳಿ,ಏ.10: ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿ.ಆರ್.ರವೀಶ್ ರವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ, ಇವರು ಚಿಕ್ಕನಾಯಕನಹಳ್ಳಿಯವರಾಗಿದ್ದು, ಇವರ ಸಾಧನೆಗೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
    ಪಟ್ಟಣದ ಅಡಿಕೆ ವ್ಯಾಪಾರಿ ರೇವಣ್ಣನವರ ಮಗನಾದ ಸಿ.ಆರ್.ರವೀಶ್ ರವರು ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ 1994ರಲ್ಲಿ ನೇಮಕಗೊಂಡರು, ತಮ್ಮ ವೃತ್ತಿ ಜೀವನವನ್ನು ಕರಾವಳಿ ಭಾಗದಲ್ಲಿ ಆರಂಭಿಸಿದರು, ಪುತ್ತೂರು, ವಿಟ್ಲ, ಬೆಳ್ತಂಗಡಿ, ಮಂಗಳೂರು ನಗರಗಳಲ್ಲಿ ಸೇವೆಸಲ್ಲಿಸಿದ್ದು, 2002ರಲ್ಲಿ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದ ನಂತರ ಮಂಗಳೂರು, ಅರಸೀಕೆರೆ, ಪುತ್ತೂರು, ಕೆಂಗೇರಿಗಳಲ್ಲಿ ಸೇವೆಸಲ್ಲಿಸಿದ್ದು, ಕೆಲ ಕಾಲ ಸಿ.ಐ.ಡಿ. ಯಲ್ಲೂ ಸೇವೆ ಸಲ್ಲಿಸಿದರು, ಇವರ ಜೀವಮಾನದ ಸೇವೆಯನ್ನು ಪರಗಣಿಸಿ ಇಲಾಖೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇವರ ಸೇವೆಗೆ ಸಂದ ಬಳುವಳಿಯಾಗಿದೆ. ಡಿ.ವಿ.ಜಿ.ಯವರ ಕಗ್ಗದ ಬಗ್ಗೆ ಉಪನ್ಯಾಸ ನೀಡುವುದು ಸೇರಿದಂತೆ   ಸಾಹಿತ್ಯ, ಸಂಗೀತ ಹಾಗೂ ಲಲಿತ ಕಲೆಗಳನ್ನು ಹವ್ಯಾಸವಾಗಿಸಿಕೊಂಡಿರುವ ಇವರನ್ನು ಪಟ್ಟಣದ ರೋಟರಿ ಕ್ಲಬ್, ಕ.ಸಾ.ಪ. ಸವಿತಾ ಸಮಾಜ, ಅಕ್ಕಮಹಾದೇವಿ ಮಹಿಳಾ ಸಂಘ, ತಾ.ವೀರಶೈವ ಕ್ಷೇಮಾಭಿವೃದ್ದಿ ಸಂಘ, ತಾ.ಪ್ರಗತಿಪರರ ಮತ್ತು ಸಾಂಸ್ಕೃತಿ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರನ್ನು ಅಭಿನಂದಿಸಿವೆ.


ಸಾವಿರಾರು ಬೆಂಗಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಭಾಜಪ ಅಭ್ಯಥರ್ಿ ಕೆ.ಎಸ್.ಕಿರಣ್ ಕುಮಾರ್
ಚಿಕ್ಕನಾಯಕನಹಳ್ಳಿ,ಏ.10 : ಬಿಜೆಪಿ ಅಭ್ಯಥರ್ಿ ಕೆ.ಎಸ್.ಕಿರಣ್ ಕುಮಾರ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಬುಧವಾರ ತಾಲ್ಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ಇ.ಪ್ರಸನ್ನರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
    ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ತಮ್ಮ ಪತ್ನಿ ಕವಿತಾಕಿರಣ್ಕುಮಾರ್ರೊಂದಿಗೆ  ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗಧೀಶ್, ತಾ.ಪಂ.ಸದಸ್ಯರುಗಳಾದ ಸೀತಾರಾಮಯ್ಯ, ನವೀನ್ಕೆಂಕೆರೆ ಹಾಗೂ ಇತರ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್.ಕಿರಣ್ ಕುಮಾರ್ ರವರು, ನಮ್ಮೊಂದಿಗೆ ನಾಮಪತ್ರ ಸಲ್ಲಿಸಲು ಬಂದಿರುವ ಜನತೆಯನ್ನು ನೋಡಿದರೆ ತಿಳಿಯುತ್ತದೆ ಈ ಬಾರಿ ನನಗೆ ಗೆಲುವು ನಿಶ್ಚಿತ ಎನ್ನುವುದು ಎಂದರಲ್ಲದೆ, ಯುಗಾದಿ ಹಬ್ಬದ ಹಿಂದಿನ ಒಳ್ಳೆಯ ದಿನವಾಗಿರುವುದರಿಂದ ನಾಮಪತ್ರ ಸಲ್ಲಿಸಿದ್ದು, ಒಂದು ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದರು. ಇನ್ನು 2-3ದಿನದೊಳಗೆ ಭಾಜಪ ಪಕ್ಷದ ಭಿ ಪಾರಂನ್ನು ವರಿಷ್ಠರು ನೀಡಲಿದ್ದಾರೆ ಎಂದರು.
    ನಮ್ಮ ಭಾಜಪ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾರೊಬ್ಬರು ಆಕಾಂಕ್ಷಿಯಾಗಿಯೂ ಇಲ್ಲ, ಬಂಡಾಯವೂ ಎದ್ದಿಲ್ಲ ಎಂದು ತಿಳಿಸಿದರಲ್ಲದೆ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ  ಹೇಮಾವತಿ ತರಲು ಶ್ರಮವಹಿಸಿ ಯಶಸ್ವಿಯಾಗಿದ್ದೇನೆ, ಮುಂದೆ ಬುಕ್ಕಾಪಟ್ಟಣ ಹೋಬಳಿಯ 80ಹಳ್ಳಿಗಳಿಗೆ ಹೇಮಾವತಿ ನೀರನ್ನು ಒದಗಿಸುವುದು ಮತ್ತು ಹೊಸ ಕೆರೆಗಳ ನಿಮರ್ಾಣಕ್ಕೆ ಒತ್ತು ನೀಡುವುದು, ತಾಲ್ಲೂಕಿಗೆ ಸಕರ್ಾರಿ ಡಿಪ್ಲೊಮೋ ಕಾಲೇಜ್ ತರುವುದು ಹಾಗೂ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಬಿಜೆಪಿ ಸಕರ್ಾರ ತಂದಿರುವ ಸಕಾಲ ಯೋಜನೆಯನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುವುದು ನನ್ನ ಆಧ್ಯತೆ ಎಂದರು.
ಮಾಜಿ ಶಾಸಕರೊಬ್ಬರು ಈ ಭಾಗಕ್ಕೆ ಹೇಮಾವತಿ ತರಲು ಯಾರಾದರೂ ಯಶಸ್ವಿಯಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದರು, ಆದರೆ ಜಟ್ಟಿ ನೆಲಕ್ಕಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಮ್ಮ ನಡಯನ್ನು ಸಮಥರ್ಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೆ ಜೆಡಿಎಸ್ ತಮಗೆ ಪ್ರತಿಸ್ಪಧರ್ಿ ಎಂದರು.
   

Monday, April 8, 2013




ವಿದ್ಯೆ ಕಲಿತ ದೊಡ್ಡವನಲ್ಲ, ವಿದ್ವತ್ ಪಡೆದವನೇ ದೊಡ್ಡವ
                      
ಚಿಕ್ಕನಾಯಕನಹಳ್ಳಿ,ಏ.08 : ಪುರಂದರದಾಸರು, ಕನಕದಾಸರು ದಾಸರುಗಳಲ್ಲಿ ಶ್ರೇಷ್ಠ ದಾಸರಾದರೆ ಸಂತರಲ್ಲಿ ಶಿಶುನಾಳ ಷರೀಫರು ಶ್ರೇಷ್ಠರು ಎಂದು ಸಂತಶಿಶುನಾಳ ಷರೀಫ ಶಿವಯೋಗಿಗಳ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂತರ್ಿ ಹೇಳಿದರು.
    ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಷರೀಪರು ಜನಪದ ಸಾಹಿತ್ಯ, ತತ್ವಪದಗಳಲ್ಲದೆ ಲಾವಣಿ, ದೊಡ್ಡಾಟ, ಮಹಾಭಾರತ, ರಾಮಾಯಣ, ದೇವಿಪುರಾಣಗಳಂತಹ ನಾಟಕಗಳನ್ನು ಬರೆದು ಜನರ ಮನದಲ್ಲಿ ಅಳಿಸಲಾಗದಂತೆ ನೆಲೆಯೂರಿದ್ದಾರೆ, ಷರೀಫರು ಹುಟ್ಟಿದ್ದು ಹಜರತ್ ತತ್ವದಲ್ಲಿ, ಬೆಳೆದದ್ದು ಹರಿತ್ವದಲ್ಲಿ, ಕೊನೆಗೆ ಶಿವಯೋಗಿತ್ವದಲ್ಲಿ ಎಂದರು.
ಸಂತ ಶಿಶುನಾಳ ಷರೀಪ ಶಿವಯೋಗಿಯೆಂದರೆ, ಲೌಕಿಕವನ್ನು ಬಿಟ್ಟವನೇ ಸಂತನಾಗಿದ್ದು, ತಾಯಿ ಕರುಳು ಶಿಶುನಾಳ, ಷರೀಪ ಸದ್ಗುಣವಂತ ಹಾಗೂ ಶಿವಯೋಗಿಯೆಂದರೆ ಸನ್ಯಾಸಿಯಾಗಿರುವವನು ಎಂದರ್ಥ ಹಾಗೂ  ಶಿವಯೋಗಿಗಳಲ್ಲಿ ಸನ್ಯಾಸಿಶಿವ(ಅಘೋರಿಗಳು), ಸಂಸಾರಿಶಿವ, ಪರಶಿವವೆಂಬಂತೆ ಇದ್ದಾರೆ ಎಂದರು.
 ವಿದ್ಯೆ ಕಲಿತವನು ದೊಡ್ಡವನಲ್ಲ, ವಿದ್ವತ್ ಕಲಿತವನು ಶ್ರೇಷ್ಠ, ವೇದವನ್ನು ತಿಳಿದವರಿಗಿಂತ ಗಾದೆ ಮಾತನ್ನು ಅರಿತವನೇ ಶ್ರೇಷ್ಠ ಎಂದರಲ್ಲದೆ ಶಿಶುನಾಳರು ಬರೆದಿರುವ ಗೀತೆಗಳು, ತತ್ವಗಳನ್ನು ಯುವಕರಿಗೆ ಅವಶ್ಯಕವಿದೆ, ಇಂದಿನ ಯುವಕರು ಟಿ.ವಿ, ಮೊಬೈಲ್, ಇಂಟರ್ನೆಟ್ನ ಜೀವನದಲ್ಲಿ ಮುಳುಗುತ್ತಿದ್ದಾರೆ, ಭಾರತವನ್ನು ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ನೋಡಿದರೆ ಮಾತ್ರ ಸ್ವಾಮಿ ವಿವೇಕಾನಂದರಂತಹ ಮಹಾಪುರಷರು ನಮಗೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ವಿದ್ಯಾಥರ್ಿಗಳ ಪ್ರಗತಿಗೆ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ, ಅವರನ್ನು ಉತ್ತಮ ಪ್ರಜ್ಞಾವಂತರನ್ನಾಗಿ ಹಾಗೂ ನಾಯಕರನ್ನಾಗಿ ಪರಿವತರ್ಿಸಲು ಶಿಕ್ಷಣದಿಂದಲೇ ಸಾಧ್ಯ ಎಂದ ಅವರು ವಿದ್ಯಾಥರ್ಿಗಳು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ನವೋದಯ ವಿದ್ಯಾ ಸಂಸ್ಥೆಯ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ಯುವಕರು ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿ ಮತದಾನದ ಹಕ್ಕನ್ನು ಪಡೆಯಿರಿ, ಮತ ಚಲಾಯಿಸುವಾಗ ಪ್ರಜ್ಞಾವಂತಿಕೆಯಿಂದ ಚಲಾಯಿಸಿರಿ ಎಂದು ತಿಳಿಸಿದರು.
    ಸಮಾರಂಭದಲ್ಲಿ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ಪಧರ್ೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿರು.
ಸಮಾರಂಭದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಪ್ರಾಂಶುಪಾಲ ಕೆ.ಸಿ.ಬಸಪ್ಪ ಉಪಸ್ಥಿತರಿದ್ದರು.
 ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿ ಲಾವಣ್ಯ ಪ್ರಾಥರ್ಿಸಿದರೆ, ಪ್ರಾಂಶುಪಾಲ ಕೆ.ಸಿ.ಬಸಪ್ಪ ಸ್ವಾಗತಿಸಿದರು. ವಿದ್ಯಾಥರ್ಿನಿ ಮೋಕ್ಷ ನಿರೂಪಿಸಿ, ಉಪನ್ಯಾಸಕ ಚನ್ನಬಸಪ್ಪ ವಂದಿಸಿದರು.
    ಕಳಪೆ ವಿದ್ಯುತ್ ಕಂಬ: ಓಡಾಡಲು ಜನರಿಗೆ ಭೀತಿ

ಚಿಕ್ಕನಾಯಕನಹಳ್ಳಿ,ಏ.08 : ಕೆಪಿಟಿಸಿಎಲ್ ಇಲಾಖಾ ವತಿಯಿಂದ ನೂತನ ಕೋಡುಗಲ್ಲು ರಸ್ತೆಯಲ್ಲಿ ಹಾಕಿರುವ ವಿದ್ಯುತ್ ಕಂಬ ಕಳಪೆಯಿಂದ ಕೂಡಿದ್ದು ಕಂಬ ಅರ್ಧಕ್ಕೆ ಮುರಿದಿವರು ಗುತ್ತಿಗೆದಾರ ಕಂಬವನ್ನು ಹಾಕಿದ್ದಾರೆ ಎಂದು ಆ ಭಾಗದ ಜನರು ಆಪಾದಸಿದ್ದಾರೆ.
    ಕಂಬ ಅರ್ಧಕ್ಕೆ ಮುರಿದ ಕಬ್ಬಿಣದ ಸಲಾಕೆಗಳ ಮೇಲೆ ನಿಂತಿದ್ದು ಮಳೆಗಾಲ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಬಿರುಗಾಳಿ, ಬೀಸಿದರೆ ವಿದ್ಯುತ್ ಕಂಬ ಮುರಿದು ಬಿದ್ದು ರಸ್ತೆಯಲ್ಲಿ ಓಡಾಡುವ ಜನ ನೂರಾರು ದನಕರುಗಳು ಜಮೀನುಗಳಿಗೆ ಈ ರಸ್ತೆಯಲ್ಲೇ ಹೋಗುತ್ತಿರುವುದರಿಂದ ಆಕಸ್ಮಿಕ ಕಂಬ ಮುರಿದು ಬಿದ್ದರೆ ಪ್ರಾಣಹಾನಿ ಉಂಟಾಗುವ ಸಂಭವವಿರುವುದರಿಂದ ಕೂಡಲೇ ವಿದ್ಯುತ್ ಕಂಬ ತೆಗೆದು ಬೇರೆ ಕಂಬ ನೆಡುವಂತೆ ಈ ರಸ್ತೆಯಲ್ಲಿ ವಿಹಾರಕ್ಕೆ ತೆರಳುವ ಜನತೆ ಕೆಪಿಟಿಸಿಎಲ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
       ವಿದ್ಯುತ್ ಸಮಸ್ಯೆ ರೈತ ಸಂಘದವರಿಂದ ಅಧಿಕಾರಿಗಳಿಗೆ ಘೇರಾವ್
                   
ಚಿಕ್ಕನಾಯಕನಹಳ್ಳಿ:ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಇಲಾಖೆಗಳು ವಿದ್ಯುತ್ ಪೂರೈಸದೆ ರೈತರಿಗೆ ದ್ರೋಹವೆಸಗುತ್ತಿವೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಎರಡು ವಿದ್ಯತ್ ಪ್ರಸರಣ ಉಪಸ್ಥಾವರಗಳ ಮೇಲೆ ಸೋಮವಾರ ಅಧಿಕಾರಿಗಳಿಗೆ ಘೆರಾವ್ ಹಾಕಿದರು.
  ತಾಲ್ಲೂಕಿನ ಶೆಟ್ಟಿಕೆರೆ ಮತ್ತು ತಿಮ್ಮನಹಳ್ಳಿ ಉಪಸ್ಥಾವರಗಳಮೇಲೆ ಪ್ರತ್ಯೇಕವಾಗಿ ದಾಳಿಮಾಡಿದ ನೂರಾರು ಕಾರ್ಯಕರ್ತರು ಸ್ಥಾವರಗಳ ಕಾರ್ಯವನ್ನು ಬಲವಂತವಾಗಿ ಸ್ಥಗಿತಗೊಳಿಸಿ ಮೇಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
.ನೇತೃತ್ವ ವಹಿಸಿದ್ದ ಕೆಂಕೆರೆ ಸತೀಶ್ ಮಾತನಾಡಿ ದಿನಕ್ಕೆ ಮುಕ್ಕಾಲು ಗಂಟೆ ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಬೆಳೆಗಳೆಲ್ಲಾ ಬಾಡುತ್ತಿವೆ ಮತ್ತು ದನಕರುಗಳಿಗೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲ, ಬೋರನೀರನ್ನಾದರೂ ಕುಡಿಸೋಣವೆಂದರೆ ವಿದ್ಯುತ್ ಸಮಸ್ಯೆಯಿಂದ ಅವು ಬಾಯಾರಿ ಬಳಲುವ ಪರಿಸ್ಥಿತಿ ಬಂದಿದೆ ಎಂದರಲ್ಲದೆ, ವಿದ್ಯುತ್ ನಿರ್ವಹಣೆಯ ವ್ಯತ್ಯಯದಿಂದ ತಿಮ್ಮನಹಳ್ಳಿ ಒಂದೇ ದಿನ ಇಪ್ಪತ್ತೈದು ಬೋರ್ವೆಲ್ಗಳ ಮೋಟರ್ಗಳು ಹಾಗೂ ಹತ್ತು ಟಿ.ವಿ.ಗಳು ಸುಟ್ಟು ಹೋಗಿದೆ ಎಂದರು.   
   ಶೆಟ್ಟಿಕೆರೆ ಉಪಸ್ಥಾವರದ ಮೇಲೆ ಭಾನುವಾರವೇ ದಾಳಿಯನ್ನು ಆಯೋಜಿಸಿದ್ದ ರೈತಸಂಘ ಉಸ್ತುವಾರಿ ಎಂಜಿನಿಯರ್ ಪ್ರಸಾದ್ ಮೇಲಾಧಿಕಾರಿಗಳು ರಜೆಯಲ್ಲಿರುವಕಾರಣ ಸ್ಥಳಕ್ಕೆ ಬೇಟಿ ನೀಡಲಾಗುತ್ತಿಲ್ಲ ಆದಕಾರಣ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗುಕ್ಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರಿಂದ ಚಳವಳಿಯನ್ನು  ಸೋಮವಾರಕ್ಕೆ ಮುಂದೂಡಿದ ರೈತರು ಬೆಳಗ್ಗೆ 9ಗಂಟೆಗೆ ಸ್ಥಳದಲ್ಲಿ ಜಮಾಯಿಸಿದರು.
    11ಗಂಟೆಯಾದರೂ ಮೇಲಾಧಿಕಾರಿಗಳು ಬರದಿದ್ದಾಗ ರೈತರು ಕೆಪಿಟಿಸಿಎಲ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು. ನಂತರ ಸ್ಥಳಕ್ಕಾಗಮಿಸಿದ ಎಇಇ ರಾಜಶೇಖರ ಮೂತರ್ಿಗೆ ಘೆರಾವ್ ಹಾಕಿದರು.
 ಎ.ಇ.ಇ. ರಾಜಶೇಖರ ಮೂತರ್ಿ ಮಾತನಾಡಿ ಚಿಕ್ಕನಾಯಕನಹಳ್ಳ,ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕುಗಳಿಗೆ ದಿನಕ್ಕೆ 130 ಮೆಘಾ ವ್ಯಾಟ್ ವಿದ್ಯತ್ ಅವಷ್ಯಕವಿದ್ದು ಕೇವಲ 30 ಮೆಘಾ ವ್ಯಾಟ್ ಸರಬರಾಜಾಗುತ್ತಿದ್ದು ನಿಯಮಿತವಾಗಿ ಬೆಳಗ್ಗೆ 2ಗಂಟೆ ಮತ್ತು ರಾತ್ರಿ 3ಗಂಟೆ ವಿದ್ಯುತ್ ಪೂರೈಸಲು ಸಧ್ಯವಿಲ್ಲ ಎಂದರು.ರೈತರು ಪಟ್ಟು ಸಡಿಲಿಸದಿದ್ದಾಗ ಜಿಲ್ಲಾ ಹಂತದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ರೈತರ ಬೇಡಿಕೆಗೆ ಸಮ್ಮತಿಸಿದರು. ನಂತರ ಮದ್ಯಾಹ್ನ 1ಗಂಟೆ ಸುಮಾರಿಗೆ ತಿಮ್ಮನಹಳ್ಳಿ ಉಪಸ್ಥಾವರದ ಮೇಲೆ ಮುತ್ತಿಗೆಹಾಕಿ ತಾಲ್ಲೂಕಿನಾಧ್ಯಂತ ಏಕರೂಪದ ನಿಯಮ ಪಾಲಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ಎಇಇ ರಾಜಶೇಖರಮೂತರ್ಿ ಸಮ್ಮತಿಸಿದ ನಂತರ ಪ್ರತಿಭಟನಾಕಾರರು ಚದುರಿದರು
    ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ನಾಗರಾಜ್, ಬೋರಣ್ಣ, ನರಸಿಂಹಮೂತರ್ಿ, ಚಂದ್ರಪ್ಪ, ಮಲ್ಲೇಶ್, ಮಲ್ಲಿಕಾರ್ಜನ್, ರವಿ, ಅಶೋಕ್, ತೋಂಟಾರಾಧ್ಯ, ಶಾಂತಪ್ಪ ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Saturday, April 6, 2013

ಶಾಸಕರು ಕ್ಷೇತ್ರವನ್ನು  ಅಭಿವೃದ್ದಿ ಪಡಿಸುವಲ್ಲಿ, ಆಡಳಿತ 
               ನಡೆಸುವಲ್ಲಿ  ವಿಫಲ: ಜೆ.ಸಿ.ಎಂ.
                    
ಚಿಕ್ಕನಾಯಕನಹಳ್ಳಿ,ಏ.06 : ಈಗಿನ ಶಾಸಕರ ಆಡಳಿತದ ಅವಧಿಯಲ್ಲಿ ತಾಲ್ಲೂಕಿನಲ್ಲಿ ಯಾವುದಾದರೂ ಒಂದು ಆಸ್ಪತ್ರೆಯಾಗಲಿ, ಶಾಲಾ ಕಾಲೇಜಾಗಲಿ ಅಥವಾ ಸಕರ್ಾರಿ ಕಛೇರಿ ಕಟ್ಟಡ ಆಗಿಲ್ಲ ಆದರೆ ಯಾವ ಉದ್ದೇಶಕ್ಕಾಗಿ ಶಾಸಕ ಸ್ಥಾನದಲ್ಲಿ ಇರುವರೋ ತಿಳಿಯದು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಆರೋಪಿಸಿದ್ದಾರೆ.
    ತಾಲ್ಲೂಕಿನ ಜೆ.ಸಿ.ಪುರದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಶಾಸಕರ ಅನುದಾನ ಎಲ್ಲಾ ಶಾಸಕರಿಗೂ ಬರುತ್ತದೆ, ಆದರೆ ಹೆಚ್ಚುವರಿಯಾಗಿ ಯಾವ ಅನುದಾನ ತರಲು ಸಾಧ್ಯವಾಗಿಲ್ಲ, ತಾಲ್ಲೂಕಿನ ನೀರಿನ ಸಮಸ್ಯೆ ನೀಗಿಸಲು ದುಡ್ಡಿನ ಕೊರತೆ ಇಲ್ಲ, ಆದರೆ ಕೆಲಸ ಮಾಡುವವರೇ ಇಲ್ಲಿ ದಿಕ್ಕಿಲ್ಲದಂತಾಗಿದ್ದಾರೆ ಎಂದು ಆರೋಪಿಸಿದರು.
    ನನ್ನ ಶಾಸಕ ಅವಧಿಯಲ್ಲಿ ಬರಗಾಲ ಬಂದರೆ ಒಂದೇ ಸಮನೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ತಿಳಿಸುತ್ತಿದ್ದೆ ಆದರೆ ತಾ.ಪಂ, ಗ್ರಾ.ಪಂ ಸಭೆ ನಡೆಸದೆ ಶಾಸನ ಸಭೆಯ ಬಗ್ಗೆ ಕೇಳುವವರೆ ಇಲ್ಲದಂತಾಗಿ ಜನಪರ ಚಚರ್ೆಗಳೆ ನಡೆಯುತ್ತಿಲ್ಲವಾಗಿದೆ ಎಂದರಲ್ಲದೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ, ಪಿತೂರಿ ನಡೆಯುತ್ತಿದೆ ಆದರೂ ನಮ್ಮ ಕಾರ್ಯಕರ್ತರು ನಮ್ಮ ನಡುವೆ  ಯಾವ ವ್ಯತ್ಯಾಸವೂ ಉಂಟಾಗಿಲ್ಲ ಎಂದರು.
    ಚುನಾವಣೆ ಸಮಯದಲ್ಲಿ ಕಾರ್ಯಕರ್ತರು ಒಬ್ಬಬ್ಬರನ್ನು ಓಲೈಸುವ ಬದಲು ಗುಂಪುಗುಂಪುಗಳನ್ನೇ ಏಳಿಸಬೇಕು ಆದರೂ ಜೆಸಿಪುರ ನನ್ನ ಸ್ವಕ್ಷೇತ್ರದಲ್ಲಿ ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ ಆದರೂ ಪಿತೂರಿ ನಡೆಸುವವರಿಗೆ ಈ ಸಭೆ ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದರು.
    ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜನಪ್ರತಿನಿಧಿ ಹಾಗೂ ಜನನಾಯಕ ಇಬ್ಬರಿಗೂ ವ್ಯತ್ಯಾಸವಿದೆ ಅದರಲ್ಲಿ ಜೆಸಿಮಾಧುಸ್ವಾಮಿ ಜನನಾಯಕರ ಸ್ಥಾನದಲ್ಲಿ ನಿಲ್ಲುವರು, ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಮುಂದಾಗಬೇಕು, ಅವರ ವಿರುದ್ದವಾಗಿ ಬರುವ ಅಪಪ್ರಚಾರವನ್ನು ಬದಿಗಿಟ್ಟು ಗೆಲ್ಲಿಸಬೇಕು ಎಂದ ಅವರು ತಾಲ್ಲೂಕಿನಲ್ಲಿ ಕೆಜೆಪಿಗೆ ಪ್ರತಿಸ್ಪಧರ್ಿ ಜೆಡಿಎಸ್ ಎಂದರು.
    ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಜೆ.ಸಿ.ಮಾಧುಸ್ವಾಮಿರವರು ನಿಷ್ಠೂರ ವ್ಯಕ್ತಿಯಾದರೂ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುವ ವ್ಯಕ್ತಿ ಜನತೆ ಅವರನ್ನು ಬಿಟ್ಟು ಹಣ ಮತ್ತು ಹೆಂಡಕ್ಕೆ ಮಾರುಹೋಗಿ ತಾಲ್ಲೂಕಿನ ಏಳಿಗೆ ಕುಗ್ಗಿಸಬೇಡಿ ಎಂದರು.
    ಬಿ.ಎನ್.ಶಿವಪ್ರಕಾಶ್ ಮಾತನಾಡಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಜೆಸಿಎಂರವರು, ಬೆಂಗಳೂರಿನ ಐಷಾರಾಮಿ ಜೀವನ ಮಾಡುವ ಶಾಸಕರಿಗಿಂತ ಹಳ್ಳಿಗಳಲ್ಲಿ ಸಂಚರಿಸುವ ಶಾಸಕರ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ, ಶಿವರಾಜ್ಅಗಸರಹಳ್ಳಿ,  ಶಶಿಧರ್, ಶಂಕರಣ್ಣ, ಎಸ್.ಆರ್.ಸ್ವಾಮಿನಾಥ್, ಕೆ.ಆರ್.ಚನ್ನಬಸವಪ್ಪ, ಕೆ.ಎಮ್.ರಾಜಶೇಖರ್ ಮುಂತಾದವರಿದ್ದರು.

ಪಟ್ಟಣದ ಹಲವರು ಕೆ.ಜೆ.ಪಿ.ಯಿಂದ ಬಿ.ಜೆ.ಪಿ.ಗೆ ಸೇರ್ಪಡೆ

ಚಿಕ್ಕನಾಯಕನಹಳ್ಳಿ,ಏ.06 : ಪಟ್ಟಣದ ಕೆ.ಜಿ.ಪಿ ಪಕ್ಷದ ಮುಖಂಡರು ಕೆ.ಎಸ್.ಕಿರಣ್ಕುಮಾರ್ ಸಮ್ಮುಖದಲ್ಲಿ ಬಿ.ಜೆ.ಪಿಗೆ ಸೇರಿಕೊಂಡರು.
    ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕಿರಣ್ ಕುಮಾರ್ ಚಿಕ್ಕನಾಯಕನಹಳ್ಳಿಯನ್ನು ಹಳ್ಳಿಯಾಗೇ ಉಳಿಸಿದ್ದಾರೆ , ತಾಲ್ಲೂಕಿನ ಕೆರೆಗಳಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೇವೆ. ಹಿಂದೂ ಮುಸ್ಲಿಂ ಎಂಬ ಭಾವನೆ ಎಲ್ಲಾರನ್ನು ಪ್ರೀತಿಯಿಂದ ಅವರ ಸಮಸ್ಯೆಗೆ ಸ್ಪಂದಿಸಿದ್ದೇನೆ, ಈ ಬಾರಿ ನನ್ನನು ಗೆಲ್ಲಿಸಿದ್ದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ಮಾಡುವುದರಲ್ಲಿ ಅನುಮಾನ ಬೇಡ, ನಮ್ಮ ಕ್ಷೇತ್ರದ ಜನತೆ ಹಾಗೂ ನಮ್ಮ ಕಾರ್ಯಕರ್ತರ ಬೆಂಬಲಕ್ಕೆ ನಾನು ಸದಾ ಇರುತ್ತೆನೆ ಎಂದರಲ್ಲದೆ ಮಹೇಶ್ , ಸಾದಶಿವಯ್ಯ, ಮಂಜುನಾಥ್, ಗಾರೆಬಸವರಾಜು, ಈಶ್ವರಯ್ಯ, ರುದ್ರೇಶ್, ಹೊನ್ನಪ್ಪ, ಗೋಪಿ, ಹಾಗೂ ಹಲವರು ಬಿ.ಜೆ.ಪಿ ಸೇರಿಕೊಂಡರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ತಾಲ್ಲೂಕು ಅಧ್ಯಕ್ಷ ಮಿಲ್ಟ್ರೀ ಶಿವಣ್ಣ , ಈಶ್ವರ್ ಭಾಗವತ್ , ಚೇತನ್ ಪ್ರಸಾದ್, ಗಂಗಾಧರ್ ಉಪಸ್ಥಿತರಿದರು,
ಎಂ.ವಿ.ನಾಗರಾಜರಾವ್ ರವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ.
ಚಿಕ್ಕನಾಯಕನಹಳ್ಳಿ,ಏ.05: ಸಾಹಿತಿ ಎಂ.ವಿ.ನಾಗರಾಜ ರಾವ್ ಅವರಿಗೆ ಶಿವಮೊಗ್ಗದ ಕನರ್ಾಟಕ ಸಂಘವು,  ಅವರ ಮಕ್ಕಳ ಸಾಹಿತ್ಯ ಸೇವೆಗಾಗಿ 2012ನೇ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಿದೆ.
    ಕಳೆದ ಎಂಟು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಲೆ, ಸಾಹಿತ್ಯ, ಸಂಸ್ಕೃತಿ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಕನರ್ಾಟಕ ಸಂಘ ಪ್ರತಿ ವರ್ಷ ನಾಡಿನ ನಾಲ್ವರು ಹಿರಿಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.  ಸಂಘವು ಕೊಡಮಾಡುವ ಈ ಪ್ರಶಸ್ತಿಗೆ  ಡಾ.ಚಂದ್ರಶೇಖರ ಕಂಬಾರವರು ಭಾಜನರಾಗಿದ್ದರು.
    ಎಂ.ವಿ.ನಾಗರಾಜ್ ರವರು ಮಕ್ಕಳಿಗಾಗಿ 25ಕ್ಕೂ ಹೆಚ್ಚ ಪುಸ್ತಕಗಳನ್ನು ಬರೆದಿದ್ದು, ಮಕ್ಕಳ ನಾಟಕಗಳು, ಮಹಾನ್ ವ್ಯಕ್ತಿಗಳ ಪರಿಚಯಾತ್ಮಕ ಪುಸ್ತಕಗಳು, ಜಾನಪದ ಕಥೆಗಳು,  ವಿದ್ಯಾಥರ್ಿಗಳಿಗೆ ಜ್ಞಾನಕೋಶ, ವ್ಯಾಕರಣ, ಸೇರಿದಂತೆ ಕೃತಿ ಶ್ರೇಣಿಯನ್ನು ನೀಡಿದ್ದಾರೆ.
    1985ರಿಂದಲೂ ಸಾಹಿತ್ಯ ಸೇವೆಯನ್ನು ಮಾಡಿಕೊಂಡು ಬಂದಿರುವ ಎಂ.ವಿ.ಎನ್.ರವರು ಕಾಲೇಜ್ನ ಪ್ರಾಂಶುಪಾಲ ವೃತ್ತಿಯಿಂದ  ನಿವೃತ್ತರಾದ ನಂತರ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತೊಡಗಿಸಿಕೊಂಡಿದ್ದಾರೆ.
    ರಾಜಕೀಯದ ಅನುಭವ ಕಡಿಮೆ ಇದೆ: ಬಿ.ಎಸ್.ಆರ್.ಅಭಥರ್ಿ ದೇವರಾಜು
ಚಿಕ್ಕನಾಯಕನಹಳ್ಳಿ,ಏ.05 : ತಾಲ್ಲೂಕಿನ ತಾಲ್ಲೂಕಿನ ಕುಪ್ಪೂರು ಗ್ರಾಮದವನಾದ ನನಗೆ ಸ್ಥಳೀಯನಾಗಿರುವುದರಿಂದ ಬಿಎಸ್ಆರ್ ಪಕ್ಷದ ಅಭ್ಯಥರ್ಿಯನ್ನಾಗಿ ಪಕ್ಷದ ರಾಜ್ಯಧ್ಯಾಕ್ಷರಾದ ಶ್ರೀರಾಮುಲುರವರು ಘೋಷಿಸಿದ್ದಾರೆ.  ಎಂದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಕೆ.ಎಲ್.ದೇವರಾಜು ತಿಳಿಸಿದರು.
     ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯದ ಅನುಭವ ನನಗೆ ಕಡಿಮೆ ಇದೆ  ಎಂದರಲ್ಲದೆ, ಈಗಾಗಲೇ ತಾಲ್ಲೂಕಿನ ಹಲವು ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಎಂದರು.
    ತಾಲ್ಲೂಕಿನಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಅಧ್ಯಕ್ಷರಾದ ಶ್ರಿರಾಮುಲು, ಸೋಮಶೇಖರರೆಡ್ಡಿ, ಜೆ.ಶಾಂತ ಇನ್ನಿತರ ಮುಖಂಡರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

aPÀÌ£ÁAiÀÄPÀ£ÀºÀ½îAiÀÄ PÉeɦ ¥ÀPÀëzÀ ªÀ¸ÀAvïPÀĪÀiÁgï, ªÀİèPÁdÄð£ÀAiÀÄå, gÁªÀÄtÚ, ²ªÀtÚ ¸ÉÃjzÀAvÉ ºÀ®ªÀgÀÄ ¹.©.¸ÀÄgÉñï¨Á§Ä £ÉÃvÀÈvÀézÀ°è eÉrJ¸ï ¥ÀPÀë ¸ÉÃjzÀgÀÄ.
  ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ
ಚಿಕ್ಕನಾಯಕನಹಳ್ಳಿ,ಏ.05 : ನವೋದಯ ಪ್ರಥಮ ದಜರ್ೆ ಕಾಲೇಜಿನ 2012-13ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಇದೇ 8ರ ಸೋಮವಾರ ಏರ್ಪಡಿಸಲಾಗಿದೆ.
    ಸಮಾರಂಭವನ್ನು ಕಾಲೇಜು ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಸಂತಶಿಶುನಾಳ ಶರೀಫ, ಶಿವಯೋಗಿಗಳ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂತರ್ಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉಪಸ್ಥಿತರಿರುವರು.


 

Saturday, March 30, 2013

ಪುಂಡಾನೆಗಳ ದಾಳಿ ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಟ
ಚಿಕ್ಕನಾಯಕನಹಳ್ಳಿ,ಮಾ.30 : ಕಳೆದ ವಾರ ತಾಲ್ಲೂಕಿನ ಸುತ್ತಮುತ್ತಲಿನ ಬಾಳೆ ತೋಟಗಳಲ್ಲಿ ದಾಳಿ ನಡೆಸಿದ್ದ ಪುಂಡಾನೆಗಳು ಶನಿವಾರ ಹೊಸೂರಿನ ಶ್ರೀನಿವಾಸ್(34) ಎಂಬ ರೈತನ ಮೇಲೆ ದಾಳಿ ನಡೆಸಿದ ಪರಿಣಾಮ ಶ್ರೀನಿವಾಸ್ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
    ಪುಂಡಾನೆಗಳು ತಾಲ್ಲೂಕಿನ ಹಂದನಕೆರೆ ಹೋಬಳಿಯ ಹೊಸೂರು ಗ್ರಾಮದ ತೋಟದಲ್ಲಿ ದಾಳಿ ಇಟ್ಟಾಗ ಈ ಘಟನೆ ಸಂಭವಿಸಿದ್ದು ಗುಡ್ಡದ ಸಾಲಿನ ಆಶ್ರೀಹಾಳ್, ಜಾಣೆಹಾರ್, ಅಜ್ಜಿಗುಡ್ಡೆ, ಹೊಸಹಳ್ಳಿಯ ತೋಟಗಳಿಗೆ ನುಗ್ಗಿದ ಸಲಗಗಳು, ತೋಟವನ್ನು ಧ್ವಂಸಗೊಳಿಸಿ ನಂತರ ಬ್ಯಾಲಕೆರೆ, ಸಾಲನಕೆರೆ, ನವಿಲೆ, ತಮ್ಮಡಿಹಳ್ಳಿ ಮುಖಾಂತರ ಶುಕ್ರವಾರ ರಾತ್ರಿ ಸಂಚರಿಸಿದ ಮೂರು ಪುಂಡಾನೆಗಳು ಬೆಳಗಿನ ವೇಳೆಗೆ ಮತಿಘಟ್ಟ, ಗಾಂಧಿನಗರ, ಬರಣಾಪುರ ಮಾರ್ಗವಾಗಿ ಸಂಚರಿಸಿ ಬೆಳಗ್ಗೆ 10ಘಂಟೆ ಸುಮಾರಿಗೆ ರಂಗಾಪುರಗೊಲ್ಲರಹಟ್ಟಿ ಬಳಿಯ ಹಿರೇದೇವರ ತೋಪಿನಲ್ಲಿ ತಂಗಿದ್ದವು. ಈ ಸಂದರ್ಭದಲ್ಲಿ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹೊಸೂರಿನ ಶ್ರೀನಿವಾಸ್ ಮೇಲೆ ದಾಳಿ ಮಾಡಿದ ಆನೆಗಳು ಮಾರಣಾಂತಿಕವಾಗಿ ಗಾಯಗೊಳಿಸಿಸಿದ್ದವು. ಶ್ರೀನಿವಾಸ್ನಿಗೆ ತಿಪಟೂರು ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯಿಂದ ಗಾಯಗೊಂಡ ಶ್ರೀನಿವಾಸನ ಕುಟುಂಬಕ್ಕೆ 5ಲಕ್ಷರೂಪಾಯಿ ಪರಿಹಾರ ನೀಡುವಂತೆ ಸಕರ್ಾರವನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
    ಕಾಡಾನೆಗಳು ಕಳೆದ ಒಂದು ವಾರದಿಂದಲೂ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆಗಳ ಸುತ್ತಮುತ್ತಲೂ ನೀರನ್ನು ಹುಡುಕಿ ಅಲೆಯುತ್ತಿವೆ. ಮತ್ತು ಮಾರ್ಗ ಮಧ್ಯೆ ಸಿಗುವ ರೈತರ ಬಾಳೆ, ಅಡಕೆ, ತರಕಾರಿ ತೋಟಗಳನ್ನು ನಾಶ ಮಾಡುತ್ತಾ ಮುಂದುವರೆದಿವೆ. ಅಲ್ಲದೆ ಆನೆಗಳನ್ನು ಕಂಡ ಜನರು ಗಾಬರಿಗೊಂಡು ಆನೆಗಳನ್ನು ನಿರಂತರವಾಗಿ ಗಾಸಿಗೊಳಿಸುತ್ತಿದ್ದು ಸಲಗಗಳು ವ್ಯಾಘ್ರಗೊಳ್ಳಲು ಕಾರಣವಾಗಿದ್ದು ಕೋಪಗೊಂಡ ಆನೆಗಳು ದಾಳಿ ನಡೆಸುತ್ತಿವೆ ಎಂದು ಅರಣ್ಯಾಧಿಕಾರಿ ಮಾರುತಿ ತಿಳಿಸಿದರಲ್ಲದೆ ಜನರು ಆನೆಗಳನ್ನು ಗಾಬರಿಗೊಳಿಸದೆ ಸುರಕ್ಷಿತ ತಾಣಗಳಿಗೆ ಮರಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.  
    ಸದ್ಯ ಆನೆಗಳು ಹೊಸೂರ ಬಳಿಯ ಹಿರೆದೇವರ ತೋಪಿನಲ್ಲಿ ಬೀಡುಬಿಟ್ಟಿದ್ದು  ರಾತ್ರಿಯ ವೇಳೆಗೆ ಅಲ್ಲಿಂದ ಕದಲಬಹುದು ಎಂದು ಅರಣ್ಯಪಾಲಕರು, ವನರಕ್ಷಕರು ಮತ್ತು ಸಿಬ್ಬಂದಿವರ್ಗ ಅಲ್ಲಿಯೇ ಮೊಕ್ಕಾಂ ಹೂಡಿದೆ. ಸ್ಥಳಕ್ಕೆ ತುರುವೇಕೆರೆಯ ಆರ್.ಎಪ್ ರವಿ, ತಿಪಟೂರು ಎಎಸ್ಎಪ್ ನಾಗೇಂದ್ರರಾವ್, ಮತ್ತಿತರರು ಹಾಜರಿದ್ದರು.
  ಕಳೆದ ಶನಿವಾರ ಬೆಳ್ಳಂಬೆಳಗ್ಗೆ ಕಾಡೇನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೂರು ಸಲಗಗಳು ತಾಲ್ಲೂಕಿನ ಜನತೆಯಲ್ಲಿ ಭೀತಿ ಹುಟ್ಟಿಸಿದ್ದವು ಮತ್ತು ನಾನಾ ಭಾಗಗಳಲ್ಲಿ ಸಂಚರಿಸಿ ಲಕ್ಷಾಂತರ ರೂ ಮೌಲ್ಯದ ಬೆಳೆ ಧ್ವಂಸಗೊಳಿಸಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಮಾಡಿ ಕರಿ ಹಿಂಡನ್ನು ತುರುವೇಕೆರೆ ತಾಲ್ಲೂಕ್ಗೆ ಹಟ್ಟುವಲ್ಲಿ ಸಫಲವಾಗಿದ್ದರು ಅದೇ ಮೂರು ಸಲಗದ ಹಿಂಡು ಮತ್ತೆ ತಾಲ್ಲೂಕಿಗೆ ಮರಳಿ ದಾಳಿ ನಡೆಸಿವೆ.

 

Thursday, March 28, 2013

ಸಿ.ಬಿ.ಎಸ್, ಜೆ.ಸಿ.ಎಂ.ಇಬ್ಬರಲ್ಲೇ ಅಧಿಕಾರ ಹಂಚಿಕೆ: ಇತಿಹಾಸ  ಮರುಕಳಿಸುವುದೋ, ಬದಲಾಗುವುದೋ......!?
                                        (ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ : ಇತ್ತೀಚಿನ ಮೂವತ್ತುವರ್ಷಗಳ ರಾಜಕಾರಣದ ಇತಿಹಾಸದಲ್ಲಿ ನಡೆದಿರುವ ಎಂಟು ಚುನಾವಣೆಗಳ ಪೈಕಿ ಒಮ್ಮೆಗೆದ್ದವರು ಹಿಂದೆಯೇ ಪುನರ್ ಆಯ್ಕೆ ಬಯಸಿದರೆ ಆರಿಸಿ ಬಂದ ಉದಾಹರಣೆ ಇಲ್ಲ. ಆದರೆ ಈ ಭಾರಿ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಈ ಸಲದ ಚುನಾವಣೆ ಇಲ್ಲಿನ ಮತದಾರರ ಪಾಲಿಗಿ ದೊಡ್ಡ ಕುತೂಹಲವನ್ನೇ ಹುಟ್ಟು ಹಾಕಿದೆ.
     ಕಳೆದ ಮೂವತ್ತು ವರ್ಷಗಳ ಚುನಾವಣೆಯಲ್ಲಿ ಎರಡು ಜಾತಿಗಳು ಮಾತ್ರ ಇಡೀ ವಿಧಾನ ಸಭೆಯ ಅಧಿಕಾರವನ್ನು ಉಂಡಿವೆ ಹೊರತು ಬೇರೆ ಜಾತಿಗಳಿಗೆ ಅದರ ರುಚಿಯನ್ನೂ ತೋರಿಸಲ್ಲ. ಉಳಿದವರು ಕೇವಲ ಸಣ್ಣ ಪುಟ್ಟ ಚುನಾವಣೆಗೆ ತೃಪ್ತಿ ಪಟ್ಟಕೊಳ್ಳಬೇಕಾಗಿದೆ. ಇದು ಈ ಕ್ಷೇತ್ರದ ಅನಿವಾರ್ಯತೆಯೋ ಅಥವಾ ಅಂತಹ ಪ್ರಬಲವಾದ ನಾಯಕರು ಇನ್ನೂ ಹುಟ್ಟಿಲ್ಲವೊ...! ಹುಟ್ಟಲು ಬಿಟ್ಟಿಲ್ಲವೋ....?.     ಲಿಂಗಾಯಿತರು ಮತ್ತು ಕುರುಬರು ಅದರಲ್ಲೂ ಕಳೆದ ಎರಡು ದಶಕಗಳಿಂದ ಇಬ್ಬರು ವ್ಯಕ್ತಿಗಳು ಮಾತ್ರ ಎಂ.ಎಲ್.ಎ.ಗಳಾಗಿದ್ದಾರೆ, ಬೇರೆಯವರು ಇದರ ಕನಸೂಕಾಣದಂತೆ ಮಾಡಿಬಿಟ್ಟದೆ. ಈ ಕ್ಷೇತ್ರದ ರಾಜಕಾರಣವನ್ನು ಕಂಡವರಿಗೆ ಗೊತ್ತಿರುವ ವಿಷಯ, ಸಿ.ಬಿ.ಸುರೇಶ್ ಬಾಬು, ಇಲ್ಲಾ ಜೆ.ಸಿ.ಮಾಧುಸ್ವಾಮಿ. ಇವರಿಬ್ಬರೇ ಅಧಿಕಾರ ಮಾಡಿಕೊಂಡು ಬಂದಿದ್ದಾರೆ. ಮೂರನೇಯವರಿಗೆ ಅವಕಾಶವೇ ಸಿಕ್ಕಿಲ್ಲ. ಆದರೆ ಈ ಬಾರಿ ಆ ರೀತಿಯ ವಾತಾವರಣವಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ಹೆಚ್ಚು ಬಿರುಸಾಗಿ ಓಡಾಡುತ್ತಿದ್ದಾರೆ. ಆಗಾಗಿ ಮೂರ ಜನ ಪ್ರಬಲ ನಾಯಕರು ಹೀಗಾಗಲೇ ಕಣದಲ್ಲಿದ್ದಾರೆ. ಕಾಂಗ್ರೆಸ್ ತಮ್ಮ ಪಕ್ಷದ ಅಭ್ಯಾಥರ್ಿ ಯಾರೆಂಬುದನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡದೇ ಇರುವುದರಿಂದ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿ ಕಾಂಗ್ರೆಸ್  ಅಧಿಕಾರ ಹಿಡಿಯುವಲ್ಲಿ ವಿಫಲವಾಗಿರುವುದರಿಂದ ಕಾಂಗ್ರೆಸ್ನ್ನು ಆ ಪಕ್ಷದ ರಾಜ್ಯ ನಾಯಕರುಗಳೇ ಈ ಕ್ಷೇತ್ರದ ಮಟ್ಟಿಗೆ  ಡಮ್ಮಿ ಮಾಡಿದ್ದಾರೆ, ಹಾಗಾಗಿ ಈ ಭಾರಿಯ ಚುನಾವಣಾ ಫಲಿತಾಂಶವನ್ನು ಒಂದು ರೇಂಜಿಗೆ ನಾಮಪತ್ರ ಹಿಂತೆಗೆದುಕೊಳ್ಳುವ ದಿನದಂದೇ ಹೇಳುಬಹುದು ಎಂಬ ಮಾತುಗಳು ಬರುತ್ತಿದ್ದರೂ ಅದು ಅಷ್ಟು ಸಲುಭವಿಲ್ಲವೆಂಬುದನ್ನು ಕ್ಷೇತ್ರದ ಒಳಗೆ ಸುತ್ತಾಡಿದವರೆಗೆ ಮಾತ್ರ ತಿಳಿದ ವಿಷಯ.
     ಚಿಕ್ಕನಾಯಕನಹಳ್ಳಿ ವಿಧಾನಾ ಸಭಾ ಕ್ಷೇತ್ರದ ರಾಜಕೀಯ ವಿಶ್ಲೇಷಕರು ನೀಡುವ ಅಂಕಿ ಅಂಶವನ್ನು ಮತ್ತು ಅದರ ಹಿಮ್ಮಾಹಿತಿಯನ್ನು ಪಡೆದು ನೋಡಿದರೆ ಈ ಬಾರಿಯ ಚುನಾವಣೆ ಯಾವ ಸ್ವರೂಪವನ್ನು ಕಂಡುಕೊಳ್ಳಬಹದು ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬಹದು ಅದಕ್ಕಾಗಿ ಈ ಕೆಳಗಿನ ಮಾಹಿತಿ ನಿಮ್ಮ ಅರಿವಿಗಾಗಿ. 
    ಕಳೆದ ಮುವತ್ತು ವರ್ಷಗಳ ಚುನಾವಣೆಯಲ್ಲಿ ಜಯಗಳಿಸಿದವರೆಂದರೆ, 1983ಬಿ.ಜೆ.ಪಿ.ಯಿಂದ ಎಸ್.ಜಿ.ರಾಮಲಿಂಗಯ್ಯ, 1985ರಲ್ಲಿ ಕಾಂಗ್ರೆಸ್ನಿಂದ ಬಿ.ಲಕ್ಕಪ, 1989ರಲ್ಲಿ ಜತನಾದಳದ ಜೆ.ಸಿ.ಮಾಧುಸ್ವಾಮಿ, 1994ರಲ್ಲಿ ಕೆ.ಸಿ.ಪಿ.ಯ ಎನ್.ಬಸವಯ್ಯ, 1997ರ ಉಪಚುನಾವಣೆಯಲ್ಲಿ  ಜೆ.ಡಿ.ಯು.ನ ಜೆ.ಸಿ.ಮಾಧಸ್ವಾಮಿ, 1999ರಲ್ಲಿ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು, 2004ರಲ್ಲಿ ಜೆ.ಡಿ.ಯು.ನ ಜೆ.ಸಿ.ಮಾಧುಸ್ವಾಮಿ, 2008ರ ಚುನಾವಣೆಯಲ್ಲಿ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ ಬಾಬು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಅಂಶಗಳ ಮೇಲೆ ಜಾತಿವಾರು ಲೆಕ್ಕಾಚಾರಗಳ ಆಧಾರದ ಮೇಲೆ ನಡೆದಿರುವ ಈ ಚುನಾವಣೆಗಳನ್ನು ಒಮ್ಮೆ ವಿಶ್ಲೇಷಿಸಿದರೆ 2013 ಚುನಾವಣೆಯ ಮುನ್ನೋಟ ಸಿಗಬಹುದು. 
ಸೌಮ್ಯವಾದಿ ಎಸ್.ಜಿ.ರಾಮಲಿಂಗಯ್ಯನವರಿಗೆ ಜಯ:    1983ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಒಟ್ಟು 77514 ಮತದಾರರಿದ್ದು ಇದರಲ್ಲಿ 59016 ಮತ ಚಲಾವಣೆಗೊಂಡು ಶೇ.76.14ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಒಟ್ಟು 10ಜನ ಕಣದಲ್ಲಿದ್ದರು,  ಬಿ.ಜೆ.ಪಿ.ಯ ಎಸ್.ಜಿ.ರಾಮಲಿಂಗಯ್ಯ 29614 ಮತಗಳನ್ನು ಪಡೆದು 3371ಮತಗಳ ಅಂತರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಉಳಿದಂತೆ ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿದ್ದ ಎನ್.ಬಸವಯ್ಯನವರು 26243 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ಸ್ವತಂತ್ರ ಅಬ್ಯಾಥರ್ಿಗಳಾಗಿದ್ದ ಸಿ.ಎಸ್.ನಾರಾಯಣರಾವ್ 961 ಮತಗಳನ್ನು ಪಡೆದು ಮೂರನೇ ಸ್ಥಾನ ತೃಪ್ತಿ ಪಟ್ಟುಕೊಂಡರು, ಉಳಿದ ಏಳು ಜನ ಸ್ವತಂತ್ರ ಅಬ್ಯಾಥರ್ಿಗಳಾದ ಬಿ.ಶಂಕರಲಿಂಗಪ್ಪ, ಸಿ.ಎಸ್.ಲಕ್ಷ್ಮಮ್ಮ, ಜಿ.ಚಂದ್ರಶೇಖರ್, ಮಹಾಲಿಂಗಯ್ಯ, ಡಿ.ಜಿ.ದೇವಪ್ರಸಾದ್, ಹೆಚ್.ರಂಗಪ್ಪ, ಟಿ.ಸಿದ್ದಯ್ಯ ನವರುಗಳು  ಎರಡು ನೂರು ಮತಗಳನ್ನು ದಾಟಲಿಲ್ಲ. ಈ ಚುನಾವಣೆಯಲ್ಲಿ ಎನ್.ಬಸವಯ್ಯನವರಿಗೆ ಹಿನ್ನೆಡೆಯಾಗಲು ಕಾರಣ ಎನ್.ಬಿ.ಯವರ ಹೆಸರು ಹೇಳಿಕೊಂಡು ಅವರು ಬೆಂಬಲಿಗರು ನಡೆಸಿದ್ದ ಅವಾಂತರಗಳಿಂದ ಸೌಮ್ಯವಾಗಿದ್ದ ಎಸ್.ಜಿ.ರಾಮಲಿಂಗಯ್ಯನವರನ್ನು ಮತದಾರರು ಕೈಹಿಡಿದರು.
ಕಾಂಗ್ರೆಸ್ನಿಂದ ಬಿ.ಲಕ್ಕಪ್ಪ ಜಯ:    1985ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಎಂಟು ಜನ ಕಣದಲ್ಲಿದ್ದು ಒಟ್ಟು ಮತದಾರರ ಸಂಖ್ಯೆ 82877 ಇತ್ತು, ಇದರಲ್ಲಿ ಮತಚಲಾವಣೆಗೊಂಡಿದ್ದು 65714 ಮತಗಳು ಮಾತ್ರ ಶೇ.79.29ರಷ್ಟು ಮತದಾನ ನಡೆದಿತ್ತು, ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಬಿ.ಲಕ್ಕಪ್ಪ 20815 ಮತಗಳನ್ನು ಪಡೆದು 2518 ಮತಗಳ ಅಂತರದಿಂದ ಜಯಶೀಲರಾಗಿದ್ದರು, ಆಗ ಸ್ವತಂತ್ರ ಅಬ್ಯಾಥರ್ಿಯಾಗಿದ್ದ ಎನ್.ಬಸವಯ್ಯನವರು 18297 ಮತಗಳನ್ನು ಪಡೆದಿದ್ದರು, ಮೊದಲ ಬಾರಿಗೆ ಜನತಾಪಕ್ಷದಿಂದ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ 14513 ಮತಗಳನ್ನು ಪಡೆದರೆ ಬಿ.ಜೆ.ಪಿ.ಯಿಂದ ಸ್ಪಧರ್ಿಸಿದ್ದ ಎಸ್.ಜಿ.ರಾಮಲಿಂಗಯ್ಯ 9750 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದರು, ಉಳಿದಂತೆ ನಾಲ್ಕು ಜನ ಸ್ವತಂತ್ರ ಅಭ್ಯಾಥರ್ಿಗಳಾಗಿ ಸ್ಪಧರ್ಿಸಿದ್ದರು ಆ ಪೈಕಿ ಮುಕ್ಕಣ್ಣಪ್ಪ 761 ಮತಗಳನ್ನು ಪಡೆದರೆ ರಘುನಾಥ್ 520 ಮತಗಳನ್ನು ಪಡೆದರೆ  ಸಿ.ಎಸ್.ನಾರಾಯಣರಾವ್, ಮಹಾಲಿಂಗಯ್ಯ ಇನ್ನೂರು ಐವತ್ತು ಮತಗಳನ್ನು ದಾಟಲಿಲ್ಲ. ಬಿ.ಲಕ್ಕಪ್ಪ ಜಯಗಳಿಸಲು ಕಾರಣ ಕಾಂಗ್ರೆಸ್ ಅಲೆ.
ಜತನಾದಳ ಜೆ.ಸಿ.ಮಧುಸ್ವಾಮಿ ಜಯ: 1989ರಲ್ಲಿ ನಡೆದ ಚುನಾವಣೆಯಲ್ಲಿ 9ಜನ ಕಣದಲ್ಲಿದ್ದರು, ಕ್ಷೇತ್ರದಲ್ಲಿ 107509 ಮತದಾರರಿದ್ದರು, ಈ ಪೈಕಿ 83144 ಜನ ಮಾತ್ರ ಮತಚಲಾಯಿಸಿದ್ದು ಶೇ.77.34 ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಜತತಾದಳದಿಂದ ಜೆ.ಸಿ.ಮಾಧುಸ್ವಾಮಿ 26291 ಮತಗಳನ್ನು ಪಡೆದು 628 ಮತಗಳ ಅಂತರದಲ್ಲಿ ಮೊದಲ ಬಾರಿಗೆ  ಜಯಗಳಿಸಿದ್ದರು, ಕಾಂಗ್ರೆಸ್ನಿಂದ ಸ್ಪಧರ್ಿಸಿದ್ದ ಬಿ.ಲಕ್ಕಪ್ಪ 25663 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಜೆ.ಪಿ.ಜನತಾ ಪಕ್ಷದಿಂದ ಸ್ಪಧರ್ಿಸಿದ್ದ ಎನ್.ಬಸವಯ್ಯ 25317 ಮತಗಳನ್ನು ಪಡೆದಿದ್ದರು, ಸ್ವತಂತ್ರ ಅಭ್ಯಾಥರ್ಿ ಬಿ.ಎಸ್.ಚನ್ನಯ್ಯ 819 ಮತಗಳು, ಬಿ.ಜೆ.ಪಿ.ಯಿಂದ ಬಿ.ಬಿ.ಸಿದ್ದಲಿಂಗಮೂತರ್ಿ 624 ಮತಗಳು, ಸ್ವತಂತ್ರ ಅಭ್ಯಾಥರ್ಿಗಳಾದ ಸಿ.ಎಸ್.ನಾರಾಯಣರಾವ್, ಎಚ್.ಎನ್.ದೊಡ್ಡೇಗೌಡ, ಎಚ್.ಚನ್ನಯ್ಯ, ಯು.ಬಿ.ಚನ್ನಪ್ಪನವರುಗಳು ಐನೂರು ಮತಗಳನ್ನು ದಾಟಲಿಲ್ಲ.  ಜಯ ುತಗಳನ್ನು ಪಡೆದು 3371ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇವರ ವಿರುದ್ದ ಕಾಂಗ್ರೆಸ್ ಅಭ್ಯಥರ್ಿಯಾಗಿ ಎನ್.ಬಸವಯ್ಯ26243, ಸಿ.ಎಸ್.ನಾರಾಯಣ್ರಾವ್, ಬಿ.ಶಂಕರಲಿಂಗಪ್ಪ, ಜಿ.ಚಂದ್ರಶೇಖರ್, ಮಹಾಲಿಂಗಯ್ಯ, ಡಿ.ಜಿ.ದೇವಪ್ರಸಾದ್ ಸ್ಪಧರ್ಿಸಿದ್ದರು. ಒಟ್ಟು 77514 ಮತಗಳಿಂದ 59016 ಮತಗಳು ಚಲಾವಣೆಯಾಗಿದ್ದವು.
 ಹೊಸ ಅಬ್ಯಾಥರ್ಿ ಹುಡುಕಾಟ ಮತ್ತು ಲಿಂಗಾಯಿತ ಮತದಾರ ಒಲವು.   
ಕೆ.ಸಿ.ಪಿ.ಯಿಂದ ಎನ್.ಬಸವಯ್ಯ ಜಯ:    1994ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಂಗಾರಪ್ಪನವರ ಕೆ.ಸಿ.ಪಿಯಿಂದ ಎನ್.ಬಸವಯ್ಯ (ಕೆಸಿಪಿ)ಯಿಂದ ಸ್ಪಧರ್ಿಸಿ 38025 ಮತಗಳನ್ನು ಪಡೆದು 13885 ಮತಗಳ ಅಂತರದಿಂದ ಜಯಗಳಿಸಿದ್ದರು. ಇವರ ವಿರುದ್ದವಾಗಿ ಜೆ.ಸಿ.ಮಾಧುಸ್ವಾಮಿ24140(ಜೆಡಿ), ಬಿ.ಲಕ್ಕಪ್ಪ15587ಕಾಂಗ್ರೆಸ್, ಎಸ್.ಜಿ.ರಾಮಲಿಂಗಯ್ಯ, ಎಸ್.ಸಿದ್ದರಾಮಣ್ಣ, ಚಂದ್ರಹಾಸ ಸ್ಪಧರ್ಿಸಿದ್ದರು. ಕೆ.ಸಿ.ಪಿ.ಯಿಂದ ಎನ್.ಬಸವಯ್ಯ ಜಯಗಳಿಸಿದರೂ ನಂತರ ಜೆ.ಡಿ.ಎಸ್.ಗೆ ಸೆರ್ಪಡೆಗೊಂಡರು. ಬಸವಯ್ಯನವರ ಗೆಲುವಿಗೆ ಕಾರಣ ಮೇಲೆ ಅಭಿಮಾನ ಹೆಚ್ಚಾಗಿದ್ದು ಹಾಗೂ ಜನರ ಭಾವನೆಗಳ ಕಾರ್ಯಗಳಿಗೆ ಒತ್ತು ನೀಡಿದ್ದು,
1997ರ ಉಪಚುನಾವಣೆ: ಜೆ.ಡಿ.ಯು ಜೆ.ಸಿಮಾಧುಸ್ವಾಮಿ ಆಯ್ಕೆ: 1997ರಲ್ಲಿ ಎನ್.ಬಸವಯ್ಯನವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ನಡೆಸಬೇಕಾಯಿತು, 97ರ ಡಿಸೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆ.ಸಿ.ಮಾಧುಸ್ವಾಮಿ ಜೆ.ಡಿ.ಯು.ನಿಂದ ಸ್ಪಧರ್ಿಸಿ ಜಯಗಳಿಸಿದರು, ತಂದೆಯ ಮರಣಾನಂತರ ಸಿ.ಬಿ.ಸುರೇಶ್ ಬಾಬು, ಬಸವಯ್ಯನವರ ಉತ್ತರಾಧಿಕಾರವನ್ನು ಪಡೆಯಲು ಯತ್ನಿಸಿದರಾದರೂ ಆ ಬಾರಿ ಫಲ ದೊರೆಯಲಿಲ್ಲ, ಸಿ.ಬಿ.ಎಸ್. ಆ ಚುನಾವಣೆಯಲ್ಲಿ ಜೆ.ಡಿ.ಎಸ್.ನಿಂದ ಸ್ಪಧರ್ಿಸಿದ್ದರು, ಬಿ.ಜೆ.ಪಿ.ಯಿಂದ ತಿಪಟೂರು ತಾ.ಪಂ.ಅಧ್ಯಕ್ಷರಾಗಿದ್ದ  ಯಾದವ ಜನಾಂಗದ ಶಂಕರಪ್ಪನವರನ್ನು ಕಣಕ್ಕಿಳಿಸಿದ್ದರು, ಲಕ್ಕಪ್ಪ ಯಥಾ ಪ್ರಕಾರ ಚುನಾವಣಾ ಕಣದಲ್ಲಿದ್ದರು. ಮಾಧುಸ್ವಾಮಿ ಜಯಗಳಿಸಲು ಕಾರಣ ಅವರ ಅಭಿವೃದ್ದಿ ಕೆಲಸಗಳು, ಜಾತಿ ಲೆಕ್ಕಾಚಾರದಲ್ಲಿ ಜೆ.ಸಿ.ಎಂ.ರವರ ಚಾಕಚಕ್ಯತೆ ಹಾಗೂ ಜೆ.ಎಚ್.ಪಟೇಲರು ಬಹರಂಗ ಸಭೆಯಲ್ಲಿ ಜೆ.ಸಿ.ಎಂ.ಗೆಲ್ಲಿಸುವಂತೆ ಸೂಚ್ಯವಾಗಿ ಹೇಳಿದ ಪರಿ.
ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ಆಯ್ಕೆ:     1999ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಮತದಾದರಿದದ್ದು 118884 ಚಲಾವಣೆಗೊಂಡ ಮತಗಳು 92097, ಶೇ/77.47ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಸಿ.ಬಿ.ಸುರೇಶ್ ಬಾಬು 43961 ಮತಗಳನ್ನು ಪಡೆದು 14943 ಮತಗಳ ಅಂತರದಿಂದ ಗೆಲವನ್ನು ಕಂಡರು, ಜೆ.ಡಿ.ಯು ನಿಂದ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ 29018 ಮತಗಳನ್ನು ಪಡೆದರೆ, ಕಾಂಗ್ರೆಸ್ನಿಂದ ಸ್ಪಧರ್ಿಸಿದ್ದ ಎಚ್.ಎಂ.ಸುರೇಂದ್ರಯ್ಯ 16145 ಮತಗಳನ್ನು ಪಡೆದಿದ್ದರು. ಸುರೇಶ್ಬಾಬು ಜಯಗಳಿಸಲು ಕಾರಣ ಸಿ.ಬಿ.ಎಸ್.ರವರ ಸೌಮ್ಯ ಮಾತುಗಳು, ಆತ್ಮೀಯತೆ ಹಾಗೂ ಜೆ.ಸಿ.ಎಂ.ರವರ ನಿಷ್ಠುರ ವರ್ತನೆ ಮತ್ತು ಬಿರುನುಡಿಗಳು.
    ಜೆ.ಡಿ.ಯುನ ಜೆ.ಸಿ.ಮಾಧುಸ್ವಾಮಿ ಆಯ್ಕೆ: ನಿಂದ 2004ರ ಚುನಾವಣೆಯಲ್ಲಿ ಜೆ.ಸಿ.ಮಾಧುಸ್ವಾಮಿ 1628 ಮತಗಳ ಅಂತರದಿಂದ ಜಯಗಳಿಸಿದ್ದರು, ಜೆ.ಡಿ.ಎಸ್.ನಿಂದ ಸ್ಪಧರ್ಿಸಿದ್ದ ಸಿ.ಬಿ.ಸುರೇಶ್ ಬಾಬು 41412 ಮತಗಳನ್ನು ಪಡೆದರೆ, ಕಾಂಗ್ರೆಸ್ನಿಂದ ಸೀಮೆಣ್ಣೆ ಕೃಷ್ಣಯ್ಯ 6872 ಮತಗಳನ್ನು ಪಡೆದಿದ್ದರು, ಜತನಾ ಪಕ್ಷದಿಂದ ಬಿ.ಲಕ್ಕಪ್ಪ ಸ್ಪಧರ್ಿಸಿ 2510 ಮತಗಳನ್ನು ಪಡೆದಿದ್ದರು, ಹೆಚ್.ಟಿ.ನಾಗರಾಜು ಎಂಬವವರು 1631 ಮತಗಳನ್ನು, ಸೀಬಿ ನರಸಿಂಹಯ್ಯ 730 ಮತಗಳನ್ನು ಪಡೆದಿದ್ದರು. ಜೆ.ಸಿ.ಎಂ.ರವರ ಗೆಲುವಿಗೆ ಕಾರಣ ಸುರೇಶ್ ಬಾಬು ಆಡಳಿತದ ವೈಖರಿ ಮತ್ತು ಜಾತಿ ಲೆಕ್ಕಾಚಾರ
    ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ಜಯ: 2008ರಲ್ಲಿ ನಡೆದ ಚುನಾವಣೆ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ವಿಧಾನ ಸಭಾ ಕ್ಷೇತ್ರವಾರು ಪುನರ್ ವಿಂಗಡಣೆಯಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರ ತನ್ನ ವ್ಯಾಪ್ತಿ ವಿಸ್ತಾರವಾಯಿತು, ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಿಪಟೂರಿನ  ಕಿಬ್ಬನಹಳ್ಳಿ ಹೋಬಳಿ ಸೇರಿತ್ತು, ಈ ಚುನಾವಣೆಯಲ್ಲಿ ಅದು ತಪ್ಪಿ, ಚಿ.ನಾ.ಹಳ್ಳಿ ತಾಲೂಕಿನ ಐದು ಹೋಬಳಿಗಳ ಜೊತೆಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ಸೇರಿದ್ದರಿಂದ ಕ್ಷೇತ್ರದ ಮತದಾರ ಸಂಖ್ಯೆಗೆ ಹೆಚ್ಚಾಯಿತು, 2008ರಿಂದ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 184288 ರಷ್ಠಯಿತು, ಈ ಬಾರಿ ಸಿ.ಬಿ.ಸುರೇಶ್ಬಾಬು(ಜೆಡಿಎಸ್)67046 ಮತಗಳನ್ನು ಪಡೆದು ಅಂದರೆ 29044 ಭಾರಿ ಅಂತರದಿಂದ ಜಯಗಳಿಸಿದ್ದರು. ಕೆ.ಎಸ್.ಕಿರಣ್ಕುಮಾರ್(ಬಿಜೆಪಿ)38002, ಜೆ.ಸಿ.ಮಾಧುಸ್ವಾಮಿ24008(ಜೆಡಿಯು), ಎನ್.ರೇಣುಕಪ್ರಸಾದ್3941(ಕಾಂಗ್ರೆಸ್), ಅರುಣ.ಯಳನಡು3550(ಎಸ್ಯುಪಿ), ಕೆ.ಎಸ್.ಸತೀಶ್ಕುಮಾರ್2327(ಪಕ್ಷೇತರ), ಹೇಮಶ್ರೀ ಎಚ್.ಎನ್.1991(ಬಿಎಸ್ಪಿ), ಅನಂತಯ್ಯ1598(ಎಸ್ಪಿ), ಡಿ.ಜಯಣ್ಣಗೌಡ826(ಪಕ್ಷೇತರ) ಸ್ಪಧರ್ಿಸಿದ್ದರು. ಒಟ್ಟು 184288 ಮತಗಳಲ್ಲಿ 143589 ಮತಗಳು ಚಲಾವಣೆಗೊಂಡಿದ್ದವು.
        2013ರ ಮೇ 5ರಂದು ನಡೆಯುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸಿ.ಬಿ.ಸುರೇಶ್ಬಾಬು, ಕೆಜೆಪಿ ಪಕ್ಷದಿಂದ ಜೆ.ಸಿ.ಮಾಧುಸ್ವಾಮಿ, ಬಿಜೆಪಿಯಿಂದ ಕೆ.ಎಸ್.ಕಿರಣ್ಕುಮಾರ್ ಸ್ಪಧರ್ಿಸಲಿದ್ದು ಕಾಂಗ್ರೆಸ್ನಿಂದ ಯಾವ ಅಭ್ಯಥರ್ಿ ಸ್ಪಧರ್ಿಸಲಿದ್ದಾರೆಂಬುದು ಇನ್ನೂ ನಿಗೂಡವಾಗಿದ್ದು ಬಿಎಸ್ಆರ್ ಕಾಂಗ್ರೆಸ್ ಹಾಗೂ ಪಕ್ಷೇತರರಾಗಿ ಕೆಲವು ಅಭ್ಯಥರ್ಿಗಳು ಸ್ಪಧರ್ಿಸಲಿದ್ದು ಇವರಲ್ಲಿ ಯಾವ ಯಾವ ಜಾತಿಯವರು ಸ್ಪಧರ್ಿಸುತ್ತಾರೆ ಎಂಬ ಆಧಾರದ ಮೇಲೆ ಚುನಾವಣೆಯ ಫಲಿತಾಂಶ ನಿಂತಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರ ಪಕ್ಷಕ್ಕಿಂತ ಜಾತಿ ನೋಡಿ ಮತ ಹಾಕುವ ಪದ್ದತಿ ಇದೆ, ಅದೇ ರೀತಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆ ಅದಕ್ಕೆ ವಿರುದ್ದವಾದವರನ್ನು ಗೆಲ್ಲಿಸಿಕೊಂಡು ಬಂದಿರುವುದರಿಂದ ಈ ಕ್ಷೇತ್ರವನ್ನು ಇಂತಿಷ್ಟೇ ಸರಿ ಎಂದು ಹೇಳಲು ಕಷ್ಟಸಾಧ್ಯ. ಇನ್ನೂ ಒಂದು ತಿಂಗಳಲ್ಲಿ ನಡಿಯುವ ರಾಜಕೀಯದ ಮೇಲಾಟವನ್ನು ಗಮನಿಸುವುದೇ ಸದ್ಯಕ್ಕೆ ನಮಗಿರುವ ಕುತೂಹಲ.
   

   
   
   
 

Saturday, March 23, 2013


ಕಾಡೇನಹಳ್ಳಿಗೆ ಸಲಗಗಳ ಭೇಟಿ, ಭಯಭೀತರಾದ ಜನರು
                     
ಚಿಕ್ಕನಾಯಕನಹಳ್ಳಿ,ಮಾ.23 : ಪಟ್ಟಣದ ಹೊರವಲಯದ ಕಾಡೇನಹಳ್ಳಿಗೆ ಶನಿವಾರ ಬೆಳ್ಳಂಬೆಳಗ್ಗೆ 6.30ರ ಸುಮಾರಿನಲ್ಲಿ ಮೂರು (ಸಲಗ)ಕಾಡಾನೆಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದವು.
    ಬೆಳ್ಳಂಬೆಳಗ್ಗೆ ಕಾಡೇನಹಳ್ಳಿ ಬಳಿಯ ದಬ್ಬೇಘಟ್ಟ ಕೆರೆ ಬಳಿಯಲ್ಲಿ ಕಾಡಾನೆಗಳು ವಿಹರಿಸುತ್ತಿರುವಾಗ ಗ್ರಾಮಸ್ಥರು ಕಂಡು ಗಾಬರಿಗೊಂಡು ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದರು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
    ಕಾಡಾನೆಗಳು ಗ್ರಾಮಕ್ಕೆ ಆಗಮಿಸಿದ ಸುದ್ದಿ ತಿಳಿದು ನೂರಾರು ಜನರ ಸ್ಥಳಕ್ಕೆ ಧಾವಿಸಿ ಆನೆಗಳ ಚಲನವಲನಗಳನ್ನು ಕೂತೂಹಲದಿಂದ ವೀಕ್ಷಿಸಿದರಲ್ಲದೆ ಆನೆಗಳನ್ನು ಗ್ರಾಮದಿಂದ ಓಡಿಸಲು ಮುಂದಾದರು. ಗಾಬರಿಗೊಂಡ ಕಾಡಾನೆಗಳು ದಬ್ಬೇಘಟ್ಟದ ಹಾಗೂ ಕಾಡೇನಹಳ್ಳಿಯ ಗ್ರಾಮದ ಮುಖಾಂತರ ತರಬೇನಹಳ್ಳಿ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ಬಾಳೆಗಿಡಗಳನ್ನು ನಾಶಮಾಡಿದವು. ಅಲ್ಲಿಂದ ಗೋಡೆಕೆರೆ ಕಡೆಗೆ ಆನೆಗಳು ಪ್ರಯಾಣ ಬೆಳೆಸಿದವು.
    ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನ ಆಗಮಿಸುತ್ತಿದ್ದು, ಗ್ರಾಮದ ಕಡೆಗೆ ಎಲ್ಲಿ ಆನೆಗಳು ನುಗ್ಗುತ್ತವೋ ಎಂಬ ಆತಂಕದಲ್ಲಿ ಮುಳುಗಿದ್ದ ದೃಶ್ಯ ಕಂಡುಬಂದಿತು.
  ಗುಬ್ಬಿ ಕಡೆಯಿಂದ ತಾಲ್ಲೂಕಿನ ಗಂಟೆಹಳ್ಳಿಗೆ ಶುಕ್ರವಾರ ರಾತ್ರಿ ಆಗಮಿಸಿರುವ ಸಲಗಗಳು ಮದನಮಡು ಕೆರೆ, ತೀರ್ಥಪುರ ಮಾರ್ಗವಾಗಿ ಮದಲಿಂಗನ ಕಣಿವೆಯ ಮೂಲಕ ಸಂಚರಿಸಿದ ಕಾಡಾನೆಗಳು ಕಾಡೇನಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾದವು ವಿಷಯತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ, ಕಾಡಾನೆಗಳು ಮದ್ಯಾಹ್ನ 4ರ ಸುಮಾರಿಗೆ ಕರಿ ಹಿಂಡು ನಡುವನಹಳ್ಳಿ ಬಳಿಯ ಚೌಳಿಹಳ್ಳದಲ್ಲಿ ಬೀಡು ಬಿಟ್ಟಿದೆ. ಪ್ರಯಾಣದ ಉದ್ದಕ್ಕೂ ಸಿಕ್ಕ ಕದಳಿ ವನ, ಅಡಿಕೆ-ತೆಂಗಿನ ತೋಟಗಳ ಮೇಲೆ ದಾಳಿಮಾಡುತ್ತಾ ಸಾಗಿದ್ದು ನಷ್ಟದ ಲೆಕ್ಕ ಸಿಕ್ಕಿಲ್ಲ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಎಂದು ಆರೆಫ್ಒ ಮಾರುತಿ ತಿಳಿಸಿದರು. ತಿಪಟೂರು ವಲಯ ಅರಣ್ಯಾಧಿಕಾರಿ ಸತ್ಯನಾರಾಯಣ ಹಾಗು ಅರಣ್ಯ ಇಲಾಖಾ ಸಿಬ್ಬಂದಿ ಇದ್ದರು.

                     ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
                               
ಚಿಕ್ಕನಾಯಕನಹಳ್ಳಿ,ಮಾ.23 : ಚಿಕ್ಕನಾಯಕನಹಳ್ಳಿಯ ದೊಡ್ಡರಾಂಪುರ ಗೊಲ್ಲರಹಟ್ಟಿ ಹಾಗೂ ಹುಳಿಯಾರು ಭಾಗದ  ಕೆಜೆಪಿ, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರುಗಳು ಜೆಡಿಎಸ್ ಪಕ್ಷದ ನಾಯಕತ್ವವನ್ನು ಒಪ್ಪಿಕೊಂಡು ಶಾಸಕ ಸಿ.ಬಿ.ಸುರೇಶ್ಬಾಬುರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ದೊಡ್ಡರಾಂಪುರ ಗೊಲ್ಲರಹಟ್ಟಿಯ ಡಿ.ಎ.ರೇವಣ್ಣ, ಪೂಜಾರಿ ಕಾಟಪ್ಪ, ನಾಗಯ್ಯ, ಚಿಕ್ಕನಾಗಯ್ಯ, ಕೆಂಪಜ್ಜ, ಚಂದ್ರಶೇಖರಯ್ಯ, ರೇವಣ್ಣ, ಪ್ರಕಾಶ್, ಸಿರಿಯಪ್ಪ, ಹಾಗೂ ಹುಳಿಯಾರಿನ ಜಗದೀಶ್, ಪ್ರಸನ್ನಕುಮಾರ್, ಮಂಜುನಾಥ್ ಕದೀರ್ಅಹಮದ್, ಅಂಜನಮೂತರ್ಿ, ಮಹಮದ್ಷರೀಪ್, ಅಮೀರ್ಪಾಷ, ಕೇಶವಮೂತರ್ಿ ಸೇರಿದಂತೆ ಹಲವು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.

ಚುನಾವಣಾ ಪ್ರಚಾರಕ್ಕೆ ಚಾಲನೆ  ಪಡೆಯಲಿರುವ ಕೆ.ಎಸ್.ಕಿರಣ್ಕುಮಾರ್

ಚಿಕ್ಕನಾಯಕನಹಳ್ಳಿ,ಮಾ.23 : ಭಾಜಪ ಅಭ್ಯಾಥರ್ಿ ಕೆ.ಎಸ್.ಕಿರಣ್ಕುಮಾರ್ರವರು ಮಾ.24ರಂದು ಬೆಳಗ್ಗೆ 10 ಗಂಟೆಗೆ (ಇಂದು) ಹುಳಿಯಾರು ಹೋಬಳಿಯ ಮರೆನಡು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Friday, March 22, 2013

ಸವಿತಾ ಸಮಾಜದವರು ರಾಜಕೀಯ ಪ್ರಾತಿನಿಧ್ಯಕ್ಕೆ ಮುಂದಾಗಬೇಕು: ರಾಜ್ಯಾಧ್ಯಕ್ಷ
                         
ಚಿಕ್ಕನಾಯಕನಹಳ್ಳಿ,ಮಾ.22 : ಸವಿತಾ ಸಮಾಜ ಸಾಮಾಜಿಕ, ಶೈಕ್ಷಣಿಕ, ಆಥರ್ಿಕವಾಗಿ ಬೆಳೆದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ದೊರೆಯಲು ಸಾಧ್ಯ ಎಂದು ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಸಂಪತ್ಕುಮಾರ್ ಹೇಳಿದರು.
    ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ಸಮುದಾಯ ಭವನದ ಶಂಕುಸ್ಥಾಪನೆ ಸಂಘದ ವಾಷರ್ಿಕೋತ್ಸವ ಸಮಾರಂಭವನ್ನು ಡೋಲು ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸವಿತ ಸಮಾಜದ ಪದಾಧಿಕಾರಿಗಳು ರಾಜ್ಯಾದ್ಯಂತ ಸಂಚರಿಸಿ ಸಮಾಜವನ್ನು ಸಂಘಟಿಸುತ್ತಿದ್ದು,    ರಾಜ್ಯಾದ್ಯಾಂತ 30ಸಾವಿರ ಸದಸ್ಯರನ್ನು ಹೊಂದಿದ್ದು ಇನ್ನೂ ಹೆಚ್ಚು ಸದಸ್ಯರನ್ನು ಮಾಡುವ ಗುರಿ ಹೊಂದಿದೆ. ಸವಿತಾ ಸಮಾಜದ ವತಿಯಿಂದ ಬೆಂಗಳೂರಿನಲ್ಲಿ ಕಾಲೇಜು ಸ್ಥಾಪಿಸಿದ್ದು 60ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ವಸತಿ ನಿಲಯದಲ್ಲಿ ಊಟ ಮತ್ತು ಸ್ಥಳ ವ್ಯವಸ್ಥೆ ಮಾಡಲಾಗಿದೆ ಎಂದರು.
    ಸವಿತಾ ಸಮಾಜದ ವಿಭಾಗೀಯ ಕಾರ್ಯದಶರ್ಿ ವೇಣುಗೋಪಾಲ್ ಮಾತನಾಡಿ ಸಮಾಜದಲ್ಲಿ ಹಲವು ಅತೃಪ್ತ ಗುಂಪುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಸಂಘದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ, ಇದರ ಬಗ್ಗೆ ಸಮಾಜ ಬಾಂಧವರು ಎಚ್ಚರ ವಹಿಸಿ, ಸಮಾಜ ನನಗೆ ಏನು ಮಾಡಿದೆ ಎನ್ನುವ ಬದಲು ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂದು ಚಿಂತಿಸಬೇಕು, ಸಕರ್ಾರ ನೀಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆಥರ್ಿಕವಾಗಿ ಬೆಳೆಯುವಂತೆ ಸಲಹೆ ನೀಡಿದರು.
    ರಾಜ್ಯ ಸವಿತಾ ಸಮಾಜದ ಗೌರವಾಧ್ಯಕ್ಷ ನರಸಿಂಹಯ್ಯ ಮಾತನಾಡಿ ಸವಿತಾ ಸಮಾಜ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುವುದರಲ್ಲಿ ಮುಂಚೂಣಿಯಲ್ಲಿದೆ, ಸವಿತಾ ಸಮಾಜ ಪ್ರತಿಯೊಬ್ಬರನ್ನು ನಾಗರೀಕರನ್ನಾಗಿ ಮಾಡುತ್ತದೆ ಎಂದರು.
    ಸವಿತ ಸಮಾಜದ ಕಟ್ಟಡ ಸಮಿತಿ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಸವಿತಾ ಸಮಾಜ ಜಿಲ್ಲೆಯಲ್ಲಿ ಅಭಿವೃದ್ದಿ ಹೊಂದುವತ್ತ ಮುನ್ನಡೆದಿದ್ದು ಆ ಕಾರ್ಯ ನಮ್ಮೂರಿನಿಂದ ಮೊದಲ ಹೆಜ್ಜೆ ಇಡುತ್ತಿದೆ ಎಂದರು.
    ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸವಿತಾ ಸಮಾಜ ಮುಂದುವರಿಯಲು ಪ.ಜಾತಿ, ಪ.ಪಂಗಡಕ್ಕೆ ಸೇರಿಸಿದರೆ ಅಭಿವೃದ್ದಿಯಾಗುತ್ತದೆ, ಅಲ್ಲದೆ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಸಲಹೆ ನೀಡಿದ ಅವರು ಅದಕ್ಕಾಗಿ ಹಿಂದುಳಿದ ಜಾಗೃತಿ ವೇದಿಕೆ ಮುಂದಿರುತ್ತದೆ ಎಂದರು.
    ತುಮಕೂರು ಪ್ರಗತಿಪರ ಚಿಂತಕ ಜಿ.ಎಂ.ಶ್ರೀನಿವಾಸಯ್ಯ, ಹಿರಿಯೂರು ಪಿ.ಎಸೈ ಭಾಸ್ಕರ್ರವರನ್ನು ಸನ್ಮಾನಿಸಲಾಯಿತು.
    ಈ ಸಂದರ್ಭದಲ್ಲಿ ವೃತ್ತಿ ಬಾಂಧವರಿಗೆ ಬ್ಯೂಟಿಷಿಯನ್ ತರಬೇತಿಯನ್ನು ಬೆಂಗಳೂರಿನ ಶೇಖರ್, ನಾಗರಾಜ್, ಶಿವಕುಮಾರ್ರವರಿಂದ ನೂತನ ಶೈಲಿಯ ಹೇರ್ ಕಟಿಂಗ್, ಮಸಾಜ್, ಬ್ಲೀಚಿಂಗ್ ಮತ್ತು ಫ್ಲೇಷಿಯಲ್ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸವಿತ ಸಮಾಜದ ಗೌರವಾಧ್ಯಕ್ಷ ನರಸಿಂಹಯ್ಯ, ಬೆಂಗಳೂರು ಸವಿತ ಸಮಾಜದ ಅಧ್ಯಕ್ಷ ಯು.ಕೃಷ್ಣಮೂತರ್ಿ, ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಜಿ.ನರಸಿಂಹಯ್ಯ, ಖಜಾಂಚಿ ಟಿ.ಎನ್.ನಾಗರಾಜು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಅಶೋಕ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮತ್ತಿತರರು ಹಾಜರಿದ್ದರು.
    ಸಮಾರಂಭದಲ್ಲಿ ಸುಪ್ರೀಂ ಸುಬ್ರಹ್ಮಣ್ಯ ಸ್ವಾಗತಿಸಿದರೆ, ನಾರಾಯಣ್ ನಿರೂಪಿಸಿ, ವಂದಿಸಿದರು.
                                                          ಇಂದಿನಿಂದ ರೇಣುಕ ಜಯಂತಿ
ಚಿಕ್ಕನಾಯಕನಹಳ್ಳಿ,ಮಾ.22 : ಶ್ರೀ ಗುರು ರೇವಣಸಿದ್ದೇಶ್ವರ ಜಯಂತಿ ಮಹೋತ್ಸವವನ್ನು ಪಟ್ಟಣದ ರೇವಣಸಿದ್ದೇಶ್ವರಸ್ವಾಮಿ ಮಠದಲ್ಲಿ ಇದೇ 23ರಶನಿವಾರದಿಂದ 25ರ ಸೋಮವಾರದವರೆಗೆ  ಏರ್ಪಡಿಸಲಾಗಿದೆ.
    23ರಂದು ಸಂಜೆ 6ಕ್ಕೆ ಶ್ರೀರೇವಣಸಿದ್ದೇಶ್ವರ ಸಾಂಗತ್ಯ ಪುರಾಣ ಕಥೆ ಕಾರ್ಯಕ್ರಮ, 24ರಂದು ರಾತ್ರಿ 8.30ಕ್ಕೆ ಶ್ರೀ ಗುರುಶಾಂತ ವಿಜಯ ಅಥವಾ ಟಗರು ಪವಾಡ ಎಂಬ ನಾಟಕವನ್ನು ಶುಕ್ರವಾರದ ಬಾಗಿಲು ಬಳಿ ನಡೆಯಲಿದೆ. 25ರಂದು ಸಂಜೆ 6ಕ್ಕೆ ಗುರುರೇವಣಸಿದ್ದೇಶ್ವರಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಕನಕದಾಸರ ಉತ್ಸವ ವಿವಿಧ ಮನರಂಜನೆಗಳೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಚಿಕ್ಕನಾಯಕನಹಳ್ಳಿ,ಮಾ.22 : ಶ್ರೀ ಗುರು ಪರಪ್ಪಸ್ವಾಮಿಯವರ 22ನೇ ವರ್ಷದ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 26ರ ಮಂಗಳವಾರ ಏರ್ಪಡಿಸಲಾಗಿದೆ.
    22ರಂದು ರಾತ್ರಿ 8ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.    27ರ ಬುಧವಾರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
 

Thursday, March 21, 2013




     ಬಯೋಮೆಟ್ರಿಕ್ ಅಳವಡಿಕೆಯಿಂದಾಗಿ ಅಕ್ರಮಕ್ಕೆ       ಅವಕಾಶವಿಲ್ಲ: ಬಿ.ಸಿ.ಎಂ,ಡಿ.ಓ.ಮುದ್ದುಕುಮಾರ್
                                
ಚಿಕ್ಕನಾಯಕನಹಳ್ಳಿ,ಮಾ.21 : ಬಿ.ಸಿ.ಎಂ.ಹಾಸ್ಟೆಲ್ಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿದ ನಂತರ ಹಾಜರಿದ್ದವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡುತ್ತಿದ್ದು ಮಕ್ಕಳ ಹೆಸರಿನಲ್ಲಿ ಯಾವುದೇ ರೀತಿಯ ಅಕ್ರಮ ನಡೆಯಲು ಅವಕಾಶವಿಲ್ಲ ಎಂದು ಜಿಲ್ಲಾ ಬಿ.ಸಿ.ಎಂ.ಅಧಿಕಾರಿ ಸಿ.ಟಿ.ಮುದ್ದುಕುಮಾರ್ ತಿಳಿಸಿದ್ದಾರೆ.
    ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ಗೆ ಭೇಟಿ ನೀಡಿದ್ದ ಅವರು, ವಿದ್ಯಾಥರ್ಿಗಳೊಂದಿಗೆ ಊಟದ ವ್ಯವಸ್ಥೆ, ಸಕರ್ಾರಿ ಸವಲತ್ತುಗಳ ವಿತರಣೆಯ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
    ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಈ ಹಾಸ್ಟೆಲ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ನೀಡಿದ ಸೂಚನೆಗಳ ಅನುಷ್ಠಾನದ ಬಗ್ಗೆ ವೀಕ್ಷಿಸಲು ಆಗಮಿಸಿರುವುದಾಗಿ ತಿಳಿಸಿದ ಅವರು, ಪಟ್ಟಣದ ಈ ಹಾಸ್ಟೆಲ್ನ ವಾಡರ್್ನ್ ವಿರುದ್ದ ಶಿಸ್ತು ಕ್ರಮ ಜರುಗಿಸಿದ್ದು, ಅವರ ಜವಬ್ದಾರಿಯನ್ನು  ಪಕ್ಕದ ಹಾಸ್ಟೆಲ್ ವಾಡರ್್ನ್ಗೆ ವಹಿಸಿದೆ ಎಂದರು.
    ಸಕರ್ಾರಿ ಶಾಲೆಗಳ ಮಕ್ಕಳಿಗೆ ಈ ಶೈಕ್ಷಣಿಕ ವರ್ಷಕ್ಕೆ ಸಮವಸ್ತ್ರ ವಿತರಿಸಿದ್ದು, ಖಾಸಗಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಸಕರ್ಾರದಿಂದ ಸರಬರಾಜಾಗಿಲ್ಲ, ಸಮವಸ್ತ್ರ ಬಂದ ತಕ್ಷಣವೆ ಉಳಿದ ಮಕ್ಕಳಿಗೂ ಸಮವಸ್ತ್ರ ವಿತರಿಸಲಾಗುವುದು ಎಂದರು.
    ವಿದ್ಯಾಥರ್ಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಸಂಜೆ ಸ್ನ್ಯಾಕ್ಸ್, ಬೆಳಗ್ಗೆ ಮತ್ತು ರಾತ್ರಿ ಊಟ ವ್ಯವಸ್ಥೆ ಸಮರ್ಪಕವಾಗಿದೆ ಎಂದರಲ್ಲದೆ, ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ನಿಯಂತ್ರಿಸಲು ಗುಡ್ ನೈಟ್ ಲಿಕ್ವೀಡಿಟೇರ್ಗಳನ್ನು ಸರಬರಾಜು ಮಾಡಿದ್ದಾರೆ,  ಬೇಸಗಿಯಾದ್ದರಿಂದ ರಾತ್ರಿ ಸಮಯದಲ್ಲಿ ಸೆಕೆ ಜಾಸ್ತಿ ಎಂದರು. ವಿದ್ಯಾಥರ್ಿಗಳ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾ ಅಧಿಕಾರಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್ ರವರಿಗೆ ಸೂಚಿಸಿದರು.
       
ಕಾಂಗ್ರೆಸ್ ಅಬ್ಯಾಥರ್ಿಯಾಗಿ ಹೊರಗಿನವರು ಬಂದರೆ ಅಸಹಕಾರ: ಬ್ಲಾಕ್ ಕಾಂಗ್ರೆಸ್
                               
ಚಿಕ್ಕನಾಯಕನಹಳ್ಳಿ,ಮಾ.21 : ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ನ್ನು ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ನೀಡಿದರೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡುವ ಬದಲು ವಿರೋಧಿಸುತ್ತಾರೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ತಿಳಿಸಿದರು.
    ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿಗೆ ಹೊರ ಅಭ್ಯಥರ್ಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದು, ಹೊರಗಿನವರಿಗೆ ಏನಾದರು ಪಕ್ಷ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿ ತಲುಪುತ್ತದೆ.   ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ದುಡಿಯಬೇಕಾದವರು ಕಾರ್ಯಕರ್ತರು ಅವರ ಅಭಿಪ್ರಾಯವನ್ನು ಬಿಟ್ಟು ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದು, ಯಾರಾದರು ಸರಿಯೇ ಸ್ಥಳೀಯ ಅಭ್ಯಥರ್ಿಗೆ ಟಿಕೆಟ್ ನೀಡಬಕೇಂದ್ರ ಒತ್ತಾಯಿಸಿದ ಅವರು ತಾಲ್ಲೂಕಿನಲ್ಲಿ ಕೆಪಿಸಿಸಿ ಸದಸ್ಯರು, ಮಾಜಿ ಶಾಸಕರು, ಡಿಸಿಸಿ ಸದಸ್ಯರುಗಳು ಅಲ್ಲದೆ ಪಕ್ಷದ ಪರವಾಗಿ ಮೊದಲಿನಿಂದಲೂ ದುಡಿದ ಹಲವು ಕಾರ್ಯಕರ್ತರು ಸ್ಪಧರ್ೆಯಲ್ಲಿದ್ದಾರೆ ಎಂದರಲ್ಲದೆ,      ಚಿ.ನಾ.ಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದುವರೆ ಲಕ್ಷದಷ್ಟು ಅಹಿಂದ ಮತದಾರರಿಂದ್ದಾರೆ ಎಂದರು.
    ಕಾಂಗ್ರೆಸ್ ಪಕ್ಷದ ಮುಖಂಡ ನಾರಾಯಣಗೌಡ ಮಾತನಾಡಿ ತಾಲ್ಲೂಕಿನ ವಿಷಯದಲ್ಲಿ ವರಿಷ್ಠರು ತೆಗೆದುಕೊಳ್ಳುವ ತೀಮರ್ಾನದಿಂದಲೇ ಪಕ್ಷ ಹೀನಾಯ ಸ್ಥಿತಿ ತಲುಪಿ, ಠೇವಣಿಯು ಇಲ್ಲದಂತೆ ನರಳುತ್ತಿದೆ, ಕಾಂಗ್ರೆಸ್ ಪಕ್ಷದಲ್ಲಿ ಈ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಬಯಸುವವರು ಆಥರ್ಿಕವಾಗಿ ಸಬಲರನ್ನು ನೋಡುತ್ತಿದ್ದು ಟಿಕೆಟ್ನ್ನು ಮಾರಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ ಏನೋ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿದೆ,ರಾಜ್ಯಾಧ್ಯಕ್ಷರು ಈಗಲಾದರೂ ಎಚ್ಚೆತ್ತುಕೊಂಡು ಸ್ಥಳೀಯ ಅಭ್ಯಥರ್ಿಗಳಿಗೆ ಟಿಕೆಟ್ ನೀಡಲು ಒತ್ತಾಯಿಸಿದರು.
    ಗೋಷ್ಟಿಯಲ್ಲಿ ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಮುಖಂಡರಾದ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದರು.

ಮಳೆನೀರಿನ ಬಗ್ಗೆ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಕರೆ
                                
ಚಿಕ್ಕನಾಯಕನಹಳ್ಳಿ,ಮಾ.21 : ಮಳೆ ನೀರು ಇಂಗಿಸುವ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಜನರಲ್ಲಿ ಜಾಗೃತಿ ಮೂಡಿಸುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
    ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ ಆಹಾರ ಉತ್ಪನ್ನ ಚಟುವಟಿಕೆಗಳ ಘಟಕದಡಿ ಗೋಡೆಕೆರೆ, ಜೆ.ಸಿ.ಪುರ, ದುಗಡಿಹಳ್ಳಿ, ಶೆಟ್ಟಿಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ 34ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ವಿತರಣೆ ಮಾಡಿದ ಅವರು  ಇಂಗುಗುಂಡಿ, ಉದಿಬದು ಹಾಕುವ ಮೂಲಕ ನೀರು ಇಂಗುವಂತೆ ಮಾಡುವುದರಿಂದ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ ಅವರು ತಾಲ್ಲೂಕಿನಲ್ಲಿ 800ರಿಂದ 1000ಅಡಿ ಕೊಳವೆ ಬಾವಿ ಕೊರೆದರು ನೀರು ಬರುತ್ತಿಲ್ಲ, ಇರುವ ನೀರಿನ್ನೇ ಸದ್ಭಳಕೆ ಮಾಡುವಂತೆ ತಿಳಿಸಿದರು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಸುತ್ತುನಿಧಿಯನ್ನು ಸರಿಯಾಗಿ ಬಳಸಿಕೊಂಡು ಆಥರ್ಿಕವಾಗಿ ಸದೃಡರಾಗಬೇಕು ಎಂದು ಹೇಳಿದರು.
    ಸಂಪನ್ಮೂಲ ವ್ಯಕ್ತಿಯಾದ ಆನಂದಕುಮಾರ್ ಮಾತನಾಡಿ ಸಮಗ್ರ ಜಲಾನಯನ ಯೋಜನ ಅಡಿಯಲ್ಲಿ ಮಣ್ಣಿನ ಸಂರಕ್ಷಣೆ ಅಂತರ್ಜಲ ಹೆಚ್ಚಿಸಲು ಇಂಗುಗುಂಡಿ ಉದುಬದು ಮಳೆಯಿಂದ ಕೊಚ್ಚಿ ಹೋಗುವ ಮಣ್ಣಿನ ಸಂರಕ್ಷಣೆ ಮಾಡುವುದು ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆಳು ಅಭಿವೃದ್ದಿ ಅರಣ್ಯಕಾರಣದಂತಹ ಕಾರ್ಯಕ್ರಮವನ್ನು ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಹಾಗೂ ಸಕರ್ಾರ ಸ್ವಸಹಾಯ ಸಂಘಗಳ ಮೂಲಕ ಪ್ರತಿ ಸಂಘಗಳಿಗೆ 50ಸಾವಿರ ಸುತ್ತುನಿಧಿ ನೀಡುತ್ತಿದ್ದು ಸಂಘಗಳು ಸುತ್ತುನಿಧಿಯನ್ನು ಉಪಯೋಗಿಸಿಕೊಂಡು ಕೋಳಿಸಾಗಾಣಿಕೆ, ಕುರಿಸಾಗಾಣಿಕೆ, ಹೈನುಗಾರಿಕೆ, ಟೈಲರಿಂಗ್ ಸೇರಿದಂತೆ ನಾನಾ ಕಸುಬುಗಳನ್ನು ತಮ್ಮ ಕುಟುಂಬದ ಆಥರ್ಿಕ ಸುಧಾರಣೆಯನ್ನು ಮಾಡಿಕೊಳ್ಳಿ ಎಂದರು. ಸ್ವಸಹಾಯ ಸಂಘಗಳಿಗೆ ಕೌಶಲ್ಯಭಿವೃದ್ದಿ ಯೋಜನೆ ಅಡಿಯಲ್ಲಿ ತರಬೇತಿ ನೀಡಲಾಗುವುದು ಎಂದರು.
    ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಲೋಹಿತಬಾಯಿ, ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿದರು.
    ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ತಾ.ಪಂ.ಸದಸ್ಯರಾದ ಶಶಿಧರ್, ಜಯಣ್ಣ, ಲತಾ, ನವೀನ್ ಉಪಸ್ಥಿತರಿದ್ದರು.
    ಸಮಾರಂಭದಲ್ಲಿ ಕೃಷಿ ಇಲಾಖೆ ವತಿಯಿಂದ ಆಕಸ್ಮಿಕವಾಗಿ ಹಾವು ಕಡಿತದಿಂದ ನಿಧನ ಹೊಂದಿದ ಕುಟುಂಬದ ಸದಸ್ಯರಿಗೆ ರಾಮನಗರದ ಪಾತಲಿಂಗಯ್ಯ, ಅಂಬರಾಪುರದ ಭಾಗ್ಯಮ್ಮ, ಆಶ್ರಿಹಾಳ್ನ ಅನಿತರವರಿಗೆ ತಲಾ 1ಲಕ್ಷರೂ ಚೆಕ್ಕನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಿತರಿಸಿದರು.

ಹಿಂದುಳಿದ ಹೋಬಳಿಗಳು ನೀರಿಗಾಗಿ ಹೋರಾಟ ಮಾಡಲೇಬೇಕು: ಸಿ.ಬಿ.ಎಸ್.
                       
ಚಿಕ್ಕನಾಯಕನಹಳ್ಳಿ,ಮಾ.21 : ಹೇಮಾವತಿ ನಾಲೆಯಿಂದ ಅತ್ಯಂತ ಹಿಂದುಳಿದ ಹೋಬಳಿಗೆ ನೀರು ಬರಬೇಕಾದರೆ ಸಂಘಟಿತರಾಗಿ ಹೋರಾಟ ಮಾಡಿದರೆ ನಾನು ತಮ್ಮೊಂದಿಗೆ ಇರುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ತಾಲ್ಲೂಕಿನ ತೀರ್ಥಪುರ ಗ್ರಾಮದಲ್ಲಿ 10ಲಕ್ಷರೂ ಮಟ್ಟದ ಕಾಂಕ್ರಿಟ್ ರಸ್ತೆ ಹಾಗೂ ರಾಜ್ಯ ವಲಯ ಯೋಜನೇತರ ಅಡಿಯಲ್ಲಿ 5.36ಲಕ್ಷ ಮಟ್ಟದಲ್ಲಿ ನಿಮರ್ಿಸಿರುವ ಹೆಚ್ಚುವರಿ ಶಾಲಾ ಕೊಠಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಕರ್ಾರಿ ಕುಡಿಯುವ ನೀರಿಗೆ ಎಷ್ಟೇ ಹಣ ಬಿಡುಗಡೆ ಮಾಡಿದರು. ಭೂಮಿಯಲ್ಲಿ ನೀರಿಲ್ಲದಿದ್ದರೆ ಏನು ಪ್ರಯೋಜನ, ಈಗಾಗಲೇ ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದ್ದು ಅಲ್ಪ ಸ್ಪಲ್ಪ ನೀರು ಬರುತ್ತಿದೆ. ಇನ್ನು ಎರಡು ತಿಂಗಳಲ್ಲಿ ಮಳೆ ಬರದೇ ಇದ್ದರೆ ಕೊರೆಸಿರುವ ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ ಆದ್ದರಿಂದ ಈ ಭಾಗಕ್ಕೆ ಹೇಮಾವತಿ ನಾಲೆಯಿಂದ ನೀರು ಹರಿದರೆ ಮಾತ್ರ ರೈತರ ಬದುಕು ಹಸನಾಗುವುದು  ಈ ಭಾಗಕ್ಕೆ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ವಿದ್ಯುತ್ ಉಪಸ್ಥಾವರ ಕೇಂದ್ರಕ್ಕೂ ಚಾಲನೆ ನೀಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕೆ ಕಳಿಸುವ ಬದಲು ಗ್ರಾಮದಲ್ಲೇ ಇರುವ ಸಕರ್ಾರಿ ಶಾಲೆಗೆ ಕಳಿಸಿದರೆ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳು ಉಳಿಯಲು ಸಾಧ್ಯ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಅತ್ಯುನ್ನತ ಸ್ಥಾನ ಅಥವ ಅತ್ಯಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಬೆಳ್ಳಿ ಪದಕ ನೀಡಲಾಗುವುದು ಎಂದರು.
    ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ವಿದ್ಯೆ ಸಾಧಕನ ಸುತ್ತಿ ಹೊರೆತು ಸೋಮಾರಿಯ ಸೊತ್ತಲ್ಲ್ಲ ಇದನ್ನು ಅರಿತು ಮಕ್ಕಳ ಶಾಲೆಯ ಪ್ರಾರಂಭದಿಂದಲೂ ಓದಿದರೆ ಮಾತ್ರ ಉನ್ನತದಜರ್ೆಯಲ್ಲಿ ಪಾಸಾಗುತ್ತಾರೆ, ಪರೀಕ್ಷೆ ಸಮಯದಲ್ಲಿ ಓದಿದರೆ ಪ್ರಯೋಜನವಿಲ್ಲ ಶಿಕ್ಷಕರ ಶಾಲೆಗಳಲ್ಲಿ ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು ಶಾಲೆಗಳಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಿ ಎಂದರು. ಶಾಲೆಯ ಸಮಸ್ಯೆಗಳನ್ನು ಅರಿಯಲು ಗ್ರಾ.ಪಂ.ಅಧ್ಯಕ್ಷ ಎಸ್.ಡಿ.ಎಂ.ಸಿ ಸದಸ್ಯರು ಭೇಟಿ ನೀಡಿ ಎಂದು ಸಲಹೆ ನೀಡಿದರು.
    ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಗ್ರಾ.ಪಂ.ಅಧ್ಯಕ್ಷ ಪದ್ಮಮ್ಮಲಿಂಗರಾಜು, ಉಪಾಧ್ಯಕ್ಷೆ ಮಹಾಲಿಂಗಪ್ಪ, ಗ್ರಾ.ಪಂ.ಸದಸ್ಯರಾದ ಕೆಂಪರಾಜು, ಶಿವಣ್ಣ, ಗೋವಿಂದರಾಜು, ರಾಮಕೃಷ್ಣಪ್ಪ, ಒಬಣ್ಣರಾಜು, ಮಂಜುನಾಥ, ಮೋಹನ್ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ಶಿಕ್ಷಕ ರಮೇಶ್ ಸ್ವಾಗತಿಸಿದರು. ಮೋಹನ್ ನಿರೂಪಿಸಿ ಯೋಗೀಶ್ ವಂದಿಸಿದರು.;
 

Tuesday, March 19, 2013

                                                      ತಾತಯ್ಯನವರ ಉತ್ಸವ
                                   
ಚಿಕ್ಕನಾಯಕನಹಳ್ಳಿ,ಮಾ.19: ಕನರ್ಾಟಕದ ಕೋಮುಸೌಹಾರ್ದ ನೆಲೆಗಳಲ್ಲಿ ಒಂದಾದ ಪಟ್ಟಣದ ಸೂಫಿ ಸಂತ ಹಜರತ್ ವೂಹಿದ್ದಿನ್ ಷಾ ಖಾದ್ರಿ ತಾತನ ಉತ್ಸವ ಸಂದಲ್ ಮೆರವಣಿಗೆಯೊಟ್ಟಿಗೆ ಸೋಮವಾರ ರಾತ್ರಿ 11ಗಂಟೆಗೆ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು.
  ಸೂಫಿ ತಾತನ ಅಕ್ಕ ಚನ್ನೇನಹಳ್ಳಿ ಬೀಬಿ ಫಾತಿಮ ಸನ್ನಿಧಿಯಲ್ಲಿ ವಿವಿಧ ವಿಧಿ ವಿಧಾನಗಳೊಟ್ಟಿಗೆ ಸಂದಲ್(ನಿರಾಕಾರಿ ದೈವದ ಹೂ ಪಟದ ಅಲಂಕಾರ)ದೊಂದಿಗೆ ಸಂಜೆ ಮೆರವಣಿಗೆ ಬಂದು ಪಟ್ಟಣದ ತಾತನ ಗದ್ದುಗೆಯಲ್ಲಿ ದೈವಿ ಪ್ರಾರ್ಥನೆ ಮುಗಿಸಿ ರಾತ್ರಿ ಪಟ್ಟಣದ ಬಿ.ಹೆಚ್.ರಸ್ತೆ, ನೆಹರು ಸರ್ಕಲ್, ಪುರಸಭೆ ಮುಂಭಾಗದಿಂದ ಸಾಗಿ ಪಟ್ಟಣದ ರಾಜಬೀದಿಗಳಲ್ಲಿ ತಡರಾತ್ರಿವರೆಗೆ ಉತ್ಸವ ನಡೆಯಿತು.
 ಬಿರುಸುಬಾಣಗಳು,ಟಿಪ್ಪು ಸಾಹಸ ಸಾರುವ ಸ್ತಬ್ಧ ಚಿತ್ರ, ಮೆರವಣಿಗೆಯಲ್ಲಿ ಸಾಗಿದ ಚಿತ್ರದುರ್ಗದ ಡೋಲ್ ಆಕರ್ೆಸ್ಟ್ರಾ ಮತ್ತು ಅಲಂಕೃತ ಅಶ್ವ ಸೆಂದಲ್ ಉತ್ಸವಕ್ಕೆ ಮೆರುಗು ತಂದವು ಜಾತಿ ಮತ ಧರ್ಮಗಳನ್ನು ಒಂದುಮಾಡಿ ಸಾವಿರಗಟ್ಟಲೆ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಪ್ರಾರ್ಥನೆ ಸಲ್ಲಿಸುತ್ತ ಮೆರವಣಿಗೆಯಲ್ಲಿ ಪಲ್ಗೊಂಡರು.
     ಕಷ್ಟ ಬಂದಾಗ ಹಿಂದುಗಳು ಹರಕೆ ಹೊತ್ತು ಗದ್ದುಗೆಗೆ ತೆರಳಿ ಕಡಲೆ ಸಕ್ಕರೆ ತಿದ್ದುವುದು ಇಲ್ಲಿಯ ವಾಡಿಕೆಯಾಗಿದ್ದು ಹಿಂದು ಮುಸ್ಲೀಮರು ಒಟ್ಟಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
 ಕಳೆದ 53 ವರ್ಷಗಳಿಂದ ಸ್ಥಳೀಯ ಹಿಂದು-ಮುಸ್ಲೀಮರು ಒಂದಾಗಿ ಕಮಿಟಿ ರಚಿಸಿಕೊಂಡು ತಾತಯ್ಯನ ಉರುಸ್ ಅನ್ನು ವೈಭವಯುತವಾಗಿ ನಡೆಸಿಕೊಂಡು ಬರುತ್ತಿರುವುದು ಈ ನೆಲದ ಸೌಹಾರ್ದ ತತ್ವಕ್ಕೆ ಹಿಂಬು ನೀಡಿದೆ.
 19ರ ಮಂಗಳವಾರ ಹೈದರಾಬಾದ್ ಮತ್ತು ಹಿಂದೂರಿನ ಖವ್ವಾಲಿ ತಂಡಗಳು ಜಿದ್ದಾಜಿದ್ದಿನ ಖವ್ವಾಲಿ ಜುಗಲ್ಬಂದಿಯಲ್ಲಿ ಭಾಗವಹಿಸಲಿದ್ದು ರಾಜ್ಯದ ವಿವಿದ ಭಾಗಗಳಿಂದ ಆಗಮಿಸುವ ಭಕ್ತರು ಸೌಹಾರ್ದವನ್ನು ಸಾಕ್ಷಿಕರಿಸುತ್ತಾರೆ. ಹಾಗು 20ರ ಬುಧವಾರ ಆಕರ್ಷಣೀಯ ರಸಸಂಜೆ ಮತ್ತು ನೃತ್ಯ ವೈಭವದೊಟ್ಟಿಗೆ ತೆರೆ ಬೀಳಲಿದೆ.   
ನುರಿತ ವೈದ್ಯರುಗಳನ್ನು ಹಾಗೂ ಅಗತ್ಯ ಸಿಬ್ಬಂದಿ ವರ್ಗವನ್ನು ನೇಮಿಸಲು ಸಕರ್ಾರಿ ವಿಫಲವಾಗಿದೆ : ಸಿಬಿಎಸ್


ಚಿಕ್ಕನಾಯಕನಹಳ್ಳಿ,ಮಾ.19 : ಸಕರ್ಾರಿ ಆಸ್ಪತ್ರೆಗಳಿಗೆ ನುರಿತ ವೈದ್ಯರುಗಳನ್ನು ಹಾಗೂ ಅಗತ್ಯ ಸಿಬ್ಬಂದಿ ವರ್ಗವನ್ನು ನೇಮಿಸಲು ಸಕರ್ಾರಿ ವಿಫಲವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆರೋಪಿಸಿದರು.
    ಪಟ್ಟಣದ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಯ 50ರಿಂದ 100 ಹಾಸಿಗೆಗಳ ಮೇಲ್ದಜರ್ೆಗೆ ಏರಿಸಿದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನೂತನ ಆಸ್ಪತ್ರೆಗೆ 100ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಬೇಕಾಗಿದ್ದು ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಿಸುವಂತೆ ಸಕರ್ಾರವನ್ನು ಒತ್ತಾಯಿಸಿದರು. ವೈದ್ಯರು ಸಿಬ್ಬಂದಿವರ್ಗ ಆಸ್ಪತ್ರೆಗೆ ಬಂದಂತಹ ರೋಗಿಗಳ ಜೊತೆಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದ ಅವರು, ಪಟ್ಟಣದ ಆಸ್ಪತ್ರೆಗೆ ಅರವಳಿಕೆ(ಅನಸ್ತೇಷೇಯ) ವೈದ್ಯರನ್ನು ನೇಮಿಸಿದರೆ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಅನುಕೂಲವಾಗುತ್ತದೆ. ಸಾರ್ವಜನಿಕರು ರೋಗಿಗಳಿಗೆ ಆಸ್ಪತ್ರೆ ನಮ್ಮದು ಎಂಬ ಭಾವನೆ ಬಂದರೆ ಮಾತ್ರ ಆಸ್ಪತ್ರೆ ಸ್ವಚ್ಛವಾಗಿರಲು ಸಾಧ್ಯ ಸಕರ್ಾರಿ ಆಸ್ಪತ್ರೆಯ ನೀಡುತ್ತಿರುವುದು ಅಭಿನಂದನೀಯ. ಕುದುರೆಮುಖ ಅದಿರು ಕಂಪನಿ ಅಂಬುಲೆನ್ಸ್ ನೀಡುತ್ತಿದೆ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ, 108 ಆಂಬುಲೆನ್ಸ್ ಮಾತ್ರ ಸಾರ್ವಜನಿಕರು ಹೆಚ್ಚಿನ ಸೇವೆಗೆ ಬಳಕೆಯಾಗುತ್ತದೆ ಎಂದರು. ಸಕರ್ಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಪೈಪೋಟಿಯನ್ನು ಎದುರಿಸಲು ಸಕರ್ಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
    ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಸಕರ್ಾರಿ ಆಸ್ಪತ್ರೆಗಳು ಸ್ವಚ್ಛವಾಗಿಟ್ಟುಕೊಳ್ಳುವಂತೆ ವೈದ್ಯರು ಹಾಗೂ ಸಿಬ್ಬಂದಿವರ್ಗಕ್ಕೆ ಸಲಹೆ ನೀಡಿದರು.
    ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್ ಮಾತನಾಡಿ ಕುದುರೆಮುಖ ಕಂಪನಿ ಸಕರ್ಾರಿ ಆಸ್ಪತ್ರೆಗೆ 2ಕೃತಕ ಉಸಿರಾಟದ ಉಪಕರಣ ಹಾಗೂ ಪಟ್ಟಣದಲ್ಲಿ ಹೃದ್ರೋಗ ಖಾಯಿಲೆ ಹೆಚ್ಚಾಗಿರುವುದರಿಂದ ಇ.ಸಿ.ಜಿ ಉಪಕರಣವನ್ನು ಆಸ್ಪತ್ರೆಗೆ ನೀಡುವಂತೆ ಮನವಿ ಮಾಡಿದರು.
    ಕುದುರೆಮುಖ ಅಧಿರು ಕಂಪನಿಯ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಪಟ್ಟಣದ ಕುದುರೆಮುಖ ಕಂಪನಿಯ ಕಛೇರಿಯು 2008ರಲ್ಲಿ ಪ್ರಾರಂಭವಾಗಿದೆ, ಗಣಿಗಾರಿಕೆ ಇನ್ನೂ ಪ್ರಾರಂಭಿಸಿಲ್ಲವಾದರೂ ಕಂಪನಿ ಸಾಮಾಜಿಕ ಚಟುವಟಿಕೆಗಳು ಹಾಗೂ ವಿದ್ಯಾಭ್ಯಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಕಂಪನಿ ತೊಡಗಿಸಿಕೊಂಡಿದ್ದು ಸಕರ್ಾರಿ ಆಸ್ಪತ್ರೆಗೆ ಕೃತಿಕ ಉಸಿರಾಟದ ಉಪಕರಣ 1ಲಕ್ಷರೂ ವೆಚ್ಚದಲ್ಲಿ ನೀಡುತ್ತಿದ್ದೇವೆ ಎಂದರು.
    ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರುಗಳಾದ ಜಾನಮ್ಮರಾಮಚಂದ್ರಯ್ಯ, ಲೋಹಿತಬಾಯಿರಂಗಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾ ಸದಸ್ಯರುಗಳಾದ ಸಿ.ಟಿ.ದಯಾನಂದ, ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ಸಿ.ಎಸ್.ರಮೇಶ್, ಮಲ್ಲೇಶಯ್ಯ, ರಾಜಶೇಖರ್, ಪ್ರೇಮ, ಅಶೋಕ್, ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.

                            ಲೋಕಾಯುಕ್ತರ ಭೇಟಿ
                                
ಚಿಕ್ಕನಾಯಕನಹಳ್ಳಿ,ಮಾ.20 : ಲೋಕಾಯುಕ್ತರ ಜನಸಂಪರ್ಕ ಸಭೆಯಲ್ಲಿ ಬಂದಿರುವ ಅಜರ್ಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪೋಲೀಸ್ ನಿರೀಕ್ಷಕ ಗೌತಮ್ ತಿಳಿಸಿದರು.
    ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಅಜರ್ಿದಾರರು ಸಲ್ಲಿಸಿರುವ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಹುಳಿಯಾರಿನ ಗುರುಪ್ರಸಾದ್ರವರು ಸಲ್ಲಿಸಿರುವ ದೂರಿನ ಅನ್ವಯ ಹುಳಿಯಾರಿನ ಪ್ರತಿಷ್ಠಿತ ಆರ್.ಟಿ.ಇ ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿರುವ ಬಗ್ಗೆ ಹಾಗೂ ರಂಗಯ್ಯ ಎಂಬುವವರು ಸಲ್ಲಿಸಿರುವ ಅಜರ್ಿಯಂತೆ ಪುರಸಭಾ ವ್ಯಾಪ್ತಿಯ 7ನೇ ವಾಡರ್್ನ ಕನ್ಸ್ರ್ವೆನ್ಸಿ ಜಾಗದಲ್ಲಿ ಕಲ್ಲು ಕಂಬ ಹಾಕಿದ್ದು ಅದನ್ನು ತೆರವುಗೊಳಿಸಲು ಪುರಸಭೆಗೆ ಅಜರ್ಿ ನೀಡಿದರೂ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ಅಜರ್ಿ ಸಲ್ಲಿಸಿದ್ದಾರೆ.
    ಶೆಟ್ಟಿಕೆರೆ ಹೋಬಳಿಯ ದುಗಡಿಹಳ್ಳಿ ಗ್ರಾ.ಪಂ.ಸದಸ್ಯ ದಯಾನಂದ್ ಸಲ್ಲಿಸಿರುವ ಅಜರ್ಿಯಲ್ಲಿ ಅಜ್ಜೇನಹಳ್ಳಿ ಗ್ರಾಮದಲ್ಲಿ 63ಕೆವಿ ಟ್ರಾನ್ಸ್ಫಾರಂ ಪೆಟ್ಟಿಗೆಯು ಮೂರು ಬಾರಿ ಕೆಟ್ಟಿದ್ದರೂ ಇದರ ಬಗ್ಗೆ ದೂರು ನೀಡಿ, 100ಕೆವಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲದೆ ಬಗ್ಗೆ ದೂರು ನೀಡಿದ್ದಾರೆ.
    ಹುಳಿಯಾರು ಹೋಬಳಿಯ ಕೇಶವಾಪುರ ಗ್ರಾಮದ ಲಿಂಗರಾಜು ಹಾಗೂ  ಗ್ರಾಮಸ್ಥರು ನೀಡಿರುವ ಅಜರ್ಿಯು ಕೇಶವಾಪುರ ಗ್ರಾಮದ ಸವರ್ೆ ನಂ. 08/03 ಮತ್ತು ಸವರ್ೆ ನಂ.3/04ರಲ್ಲಿನ ಕ್ರಮವಾಗಿ 71/2 ಗುಂಟೆ ಮತ್ತು 08 ಗುಂಟೆ ಹೊಸದುರ್ಗ-ಹುಳಿಯಾರು ರಸ್ತೆಗೆ ಹೊಂದಿಕೊಂಡಿರುವ ಸಕರ್ಾರಿ ಜಮೀನನ್ನು ಕೆಲವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
    ಹುಳಿಯಾರು ಹೋಬಳಿಯ ಬರಕನಹಾಳ್ ಪಂಚಾಯ್ತಿಯಲ್ಲಿ ಆರ್.ಐ ಮತ್ತು ರೆವಿನ್ಯು ಸೆಕ್ರೆಟರಿಗಳು ಸಣ್ಣ ಹಿಡುವಳಿದಾರರಿಗೆ ನೀಡಬೇಕಾದ ಚೆಕ್ಕನ್ನು ಸರಿಯಾದ ವ್ಯಕ್ತಿಗಳಿಗೆ ನೀಡದೆ ತಮಗೆ ಬೇಕಾದ ವ್ಯಕ್ತಿಗಳಿಗೆ ಮನಸೋ ಇಚ್ಛೆ ನೀಡಿದ್ದಾರೆ ಎಂದು ಶಿಡ್ಲಘಟ್ಟದ ಕುಮಾರ್ರವರು ದೂರು ನೀಡಿದ್ದಾರೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ತಹಶೀಲ್ದಾರ್ ಕೃಷ್ಣಸ್ವಾಮಿ, ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಉಪಸ್ಥಿತರಿದ್ದರು.
 
aPÀÌ£ÁAiÀÄPÀ£ÀºÀ½îAiÀÄ°è £ÀqÉzÀ ¸ÀPÁðj vÁ.DAiÀÄĵï D¸ÀàvÉæ £ÀÆvÀ£À PÀlÖqÀªÀ£ÀÄß ±Á¸ÀPÀ ¹.©.¸ÀÄgÉñï¨Á§Ä GzÁÏn¹zÀgÀÄ. F ¸ÀAzÀ¨sÀðzÀ°è f.DAiÀÄÄµï ªÉÊzÁå¢üPÁj qÁ.¸ÀAfêïªÀÄÆwð, f.¥ÀA.¸ÀzÀ¸Éå eÁ£ÀªÀÄä, E.N.wªÀÄäAiÀÄå G¥À¹ÜvÀjzÀÝgÀÄ.

Monday, March 11, 2013



ಚಿ.ನಾ.ಹಳ್ಳಿ ಪುರಸಭೆಗೆ ಜೆಡಿಎಸ್ ಪಕ್ಷ 18 ಸ್ಥಾನ ,  ಕಾಂಗ್ರೆಸ್ 3, ಕೆ.ಜೆ.ಪಿ 2 ಸ್ಥಾನ ಬಿಜೆಪಿ ಶೂನ್ಯ ಫಲಿತಾಂಶ.
ಚಿಕ್ಕನಾಯಕನಹಳ್ಳಿ,ಮಾ.11 : ಚಿಕ್ಕನಾಯಕನಹಳ್ಳಿ ಪುರಸಭೆಯ 23 ವಾಡರ್್ಗಳಲ್ಲಿ ಜೆಡಿಎಸ್ ಪಕ್ಷ 18 ಸ್ಥಾನ, ಕಾಂಗ್ರೆಸ್ 3 ಸ್ಥಾನ, ಕೆಜೆಪಿ2 ಸ್ಥಾನಗಳನ್ನು ಪಡೆದರೆ ಬಿಜೆಪಿ ಶೂನ್ಯ ಫಲಿತಾಂಶ ಪಡೆದಿದೆ.
ಪಟ್ಟಣದ ಜೆ.ಡಿ.ಎಸ್.ಕಳೆದ ಚುನಾವಣೆಗಿಂತ ಒಂದು ಸ್ಥಾನವನ್ನು ಹೆಚ್ಚಿಗೆ ಪಡೆಯುವ ಮೂಲಕ ತನ್ನ ಪ್ರಭಾವವನ್ನು  ಉಳಿಸಿಕೊಂಡಿದ್ದು, ಪಟ್ಟಣದಲ್ಲಿ ಜೆ.ಡಿ.ಎಸ್.ಗೆ ಸುಬದ್ರಕೋಟೆಯಾಗಿ ಉಳಿಸಿಕೊಂಡಿರುವ ಬಗ್ಗೆ ಪಕ್ಷದ ವರಿಷ್ಠರಿಗೆ ಸುದ್ದಿ ರವಾನಿಸಿದ್ದಾರೆ,  17ನೇ ವಾಡರ್್ನ ಮಟ್ಟಿಗೆ ಜೆ.ಡಿ.ಎಸ್.ಗೆ ಖುಷಿಕೊಟ್ಟಿಲ್ಲ ಶಾಸಕರ ಸಹೋದರನ ವಿರುದ್ದ ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್ ತಮ್ಮ ಸಹೋದರನನ್ನು ಕಣಕ್ಕಿಳಿಸಿದ್ದರಿಂದ ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಿತ್ತು,  ಸಿ.ಪಿ.ಮಹೇಶ್ ಪುನರ್ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ರವರಿಗೆ  ವಾಡರ್್ 15ರ ಮತದಾರರು ವಿಶ್ರಾಂತಿಕೊಟ್ಟಿದ್ದಾರೆ, ಅಪ್ಪನ ಕಾಲದಿಂದಲೂ ಸೋಲನ್ನರಿಯದ ಸಿ.ಬಸವರಾಜು ಸೋಲೊಪ್ಪಿಕೊಳ್ಳಬೇಕಿದೆ, ಜೆ.ಸಿ.ಮಾಧುಸ್ವಾಮಿ ಕಳೆದ ಬಾರಿ ಒಂದು ಸ್ಥನಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಗಿತ್ತು ಆದರೆ ಈ ಬಾರಿ ಎರಡು ಸ್ಥಾನಗಳನ್ನು ಪಡೆದಿದ್ದಾರೆ. ಬಿ.ಜೆ.ಪಿ. ಖಾತೆಯನ್ನು ತೆರೆದಿಲ್ಲ.
    20ನೇ ವಾಡರ್್ನ ಜೆ.ಡಿ.ಎಸ್.ನ ಸಿ.ಆರ್.ಗೀತಾ ತನ್ನ ಎದುರಾಳಿಗಿಂತ 347 ಮತಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ಇಡೀ ಪಟ್ಟಣದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಮೊದಲ ಅಬ್ಯಾಥರ್ಿ ಎನಿಸಿಕೊಂಡಿದ್ದಾರೆ, ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಎರಡನೇ ಅಬ್ಯಾಥರ್ಿ ಜೆ.ಡಿ.ಎಸ್.ನ ಪುಷ್ಪ, ಮೂರನೇಯವರು 3ನೇ ವಾಡರ್್ನಿಂದ ಸ್ಪಧರ್ಿಸಿದ್ದ  ಜೆ.ಡಿ.ಎಸ್.ನ ಸಿ.ಡಿ.ಚಂದ್ರಶೇಖರ್ ತನ್ನ ಎದುರಾಳಿಗಿಂತ 228 ಮತಗಳನ್ನು ಪಡೆದು ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿದವರ ಪೈಕಿ ಮೂರನೇ ಸ್ಥಾನ ಪಡೆದಿದ್ದಾರೆ.
ಚುನಾವಣೆಯಲ್ಲಿ ಅಬ್ಯಥರ್ಿವಾರು ಮತ ಪಡೆದ ವಿವರ :
1ನೇ ವಾಡರ್್ : ರೂಪ 149(ಕೆಜೆಪಿ ಜಯ), ದಾಕ್ಷಾಯಣಮ್ಮ138(ಜೆಡಿಎಸ್), ವರಮಹಾಲಕ್ಷ್ಮಿ44(ಪಕ್ಷೇತರ),ಹೆಚ್.ಸಿ.ಶ್ಯಾಮಲ24(ಬಿಜೆಪಿ), ವಿಶಾಲಾಕ್ಷಿ27(ಬಿ.ಎಸ್.ಆರ್),  2ನೇ ವಾಡರ್್ ಇಂದಿರಾ452(ಜೆಡಿಎಸ್ ಜಯ), ನಿರ್ಮಲ265(ಕೆಜೆಪಿ), ಸುಕನ್ಯ53(ಕಾಂಗ್ರೆಸ್), ಕೆಂಪಮ್ಮ52(ಬಿಜೆಪಿ) 3ನೇವಾಡರ್್ ಸಿ.ಡಿ.ಚಂದ್ರಶೇಖರ್479(ಜೆಡಿಎಸ್ ಜಯ), ಸುರೇಶ್ಕುಮಾರ್.ಸಿ.ಟಿ251(ಕೆಜೆಪಿ), 4ನೇ ವಾಡರ್್ ಎಮ್.ಡಿ.ನೇತ್ರಾವತಿ 399(ಕೆಜೆಪಿ ಜಯ), ಕೆ.ಶೈಲಜ(202), ವೈ.ಎಸ್.ದೊಡ್ಡಯ್ಯ41(ಬಿಜೆಪಿ),  5ನೇ ವಾಡರ್್ ಎಂ.ಕೆ.ರವಿಚಂದ್ರ 327(ಜೆಡಿಎಸ್ ಜಯ), ನಾಗಕುಮಾರ್175(ಪಕ್ಷೇತರ), ಚೇತನ್ಪ್ರಸಾದ್50(ಬಿಜೆಪಿ) 6ನೇ ವಾಡರ್್ ಧರಣಿಲಕ್ಕಪ್ಪ328(ಕಾಂಗ್ರೆಸ್ ಜಯ), ಕೆ.ಎಸ್.ಶಾಹೇದಾ239(ಜೆಡಿಎಸ್), ಪುಷ್ಪಾವತಿ91(ಬಿ.ಎಸ್.ಆರ್), 7ನೇವಾಡರ್್ ಸಿ.ಎಮ್.ರಾಜಶೇಖರ(ಜೆಡಿಎಸ್ ಅವಿರೋಧಆಯ್ಕೆ)  8ನೇ ವಾಡರ್್ ಮಲ್ಲಿಕಾಜರ್ುನಯ್ಯ 313(ಜೆಡಿಎಸ್ ಜಯ), ಮಹಬೂಬ್162(ಕೆಜೆಪಿ), ಕೆ.ಬಿ.ಶಿವಣ್ಣ12(ಕಾಂಗ್ರೆಸ್) 9ನೇ ವಾಡರ್್ ರೇಣುಕಮ್ಮ 170(ಕಾಂಗ್ರೆಸ್ ಜಯ), ಸರಸ್ವತಿ138(ಬಿಜೆಪಿ), ಹೆಚ್.ಎಮ್.ರಾಜಮ್ಮ110(ಕೆಜೆಪಿ), ಕಮಲಮ್ಮ97(ಜೆಡಿಎಸ್), 10ನೇ ವಾಡರ್್ ಸಿ.ಎಸ್.ರಮೇಶ್320(ಜೆಡಿಎಸ್ ಜಯ), ಶ್ರೀನಿವಾಸಮೂತರ್ಿ125(ಬಿಜೆಪಿ),ಸಿ.ವಿ.ರೇಣುಕಮೂತರ್ಿ62(ಕೆಜೆಪಿ), ಸಿ.ಜಿ.ಚಂದ್ರಶೇಖರ್13(ಕಾಂಗ್ರೆಸ್),  11ನೇ ವಾಡರ್್ ಸಿ.ಕೆ.ಕೃಷ್ಣಮೂತರ್ಿ 165(ಜೆಡಿಎಸ್ ಜಯ), ಈಶ್ವರಭಾಗವತ್158(ಬಿಜೆಪಿ), ಸಿ.ಜಿ.ರೇಣುಕಾಪ್ರಸಾದ್123(ಪಕ್ಷೇತರ), ಸಿ.ಕೆ.ಕುಮಾರಸ್ವಾಮಿ09(ಕಾಂಗ್ರೆಸ್), 12ನೇವಾಡರ್್ತಿಮ್ಮಪ್ಪ320(ಜೆಡಿಎಸ್ ಜಯ), ಜಯಲಕ್ಷ್ಮಿ294(ಕಾಂಗ್ರೆಸ್),ಧನಪಾಲ್32(ಬಿಜೆಪಿ), 13ನೇವಾಡರ್್ ಸಿ.ಎಂ.ರಂಗಸ್ವಾಮಯ್ಯ311(ಜೆಡಿಎಸ್ ಜಯ), ಗೋಪಾಲಕೃಷ್ಣ178(ಕೆಜೆಪಿ),  14ನೇವಾಡರ್್ ಹೆಚ್.ಬಿ.ಪ್ರಕಾಶ್281(ಜೆಡಿಎಸ್ ಜಯ),ಸಿ.ಆರ್.ಶಶಿಶೇಖರ್133(ಕೆಜೆಪಿ), ಸಿ.ಕೆ.ಶಾಂತಕುಮಾರ್20(ಬಿಜೆಪಿ), ಕೆ.ಜಿ.ಕೃಷ್ಣೆಗೌಡ06(ಕಾಂಗ್ರೆಸ್),  15ನೇ ವಾಡರ್್ ಮಲ್ಲೇಶಯ್ಯ272(ಜೆಡಿಎಸ್ ಜಯ), ಸಿ.ಬಸವರಾಜು248(ಕಾಂಗ್ರೆಸ್), 16ನೇ ವಾಡರ್್ ಮಹಮದ್ಖಲಂದರ್312(ಜೆಡಿಎಸ್),ಬಾಬುಸಾಹೇಬ್205(ಕೆಜೆಪಿ), ಮಹಮದ್ಅಲ್ತಾಫ್26(ಕಾಂಗ್ರೆಸ್),  17ನೇ ವಾಡರ್್ ಸಿ.ಪಿ.ಮಹೇಶ್310(ಕಾಂಗ್ರೆಸ್ ಜಯ), ಸಿ.ಬಿ.ತಿಪ್ಪೇಸ್ವಾಮಿ297(ಜೆಡಿಎಸ್),ಸಿ.ಎಮ್.ಗಂಗಾಧರಯ್ಯ10(ಬಿಜೆಪಿ), ದುರ್ಗಮ್ಮ8(ಪಕ್ಷೇತರ), 18ನೇವಾಡರ್್ ಪ್ರೇಮ316(ಜೆಡಿಎಸ್ ಜಯ), ಸಿ.ಎಲ್.ಶಾಂತಮ್ಮ269(ಕಾಂಗ್ರೆಸ್),  19ನೇ ವಾಡರ್್ ಸಿ.ಟಿ.ದಯಾನಂದ್296(ಜೆಡಿಎಸ್ ಜಯ), ಸಿ.ಕೆ.ಲೋಕಶೇಶ್222(ಪಕ್ಷೇತರ), ಸಿ.ಡಿ.ಲಕ್ಷ್ಮಯ್ಯ07(ಕಾಂಗ್ರೆಸ್),  20ನೇ ವಾಡರ್್ ಸಿ.ಆರ್.ಗೀತಾ410(ಜೆಡಿಎಸ್ ಜಯ), ಶಕುಂತಲಮ್ಮ63(ಬಿಜೆಪಿ), 21ನೇವಾಡರ್್ ಪುಷ್ಪ420(ಜೆಡಿಎಸ್), ಹೇಮಾವತಿ151(ಬಿಜೆಪಿ),22ನೇವಾಡರ್್ರೇಣುಕಮ್ಮ425(ಜೆಡಿಎಸ್ ಜಯ),ಮಾಲಾ125(ಬಿಜೆಪಿ)  23ನೇವಾಡರ್್ ಅಶೋಕ್ 467(ಜೆಡಿಎಸ್ ಜಯ),ಸಿ.ಎಚ್.ನಿರುವಾಣಸಿದ್ದಯ್ಯ202(ಕಾಂಗ್ರೆಸ್), ಲಿಂಗದೇವರು94(ಬಿ.ಎಸ್.ಆರ್),ಸಿ.ಎಸ್.ಗಂಗಾಧರಯ್ಯ31(ಬಿಜೆಪಿ),ಕೆಂಚಯ್ಯ10(ಪಕ್ಷೇತರ  ಅಭ್ಯಥರ್ಿಗಳು ಮತಗಳನ್ನು ಪಡೆದಿದ್ದಾರೆ.
aPÀÌ£ÁAiÀÄPÀ£ÀºÀ½î ¥ÀÄgÀ¸À¨sÉUÉ DAiÉÄÌAiÀiÁzÀ eÉ.r.J¸ï.C§åyðUÀ¼ÀÄ «dAiÉÆÃvÀìªÀ DZÀj¹zÀgÀÄ,  F ¸ÀAzÀ¨sÀðzÀ°è «eÉÃvÀgÁzÀ ¹.n.zÀAiÀiÁ£ÀAzÀ, ¹.PÉ.PÀȵÀÚªÀÄÆwð, ¹.r.ZÀAzÀæ±ÉÃRgï, ¹.J¸ï.gÀªÉÄñï, JA.PÉ.gÀ«ZÀAzÀæ, ¹.JA.gÀAUÀ¸Áé«Ä ªÉÄgÀªÀtÂUÉ £ÀqɹzÀgÀÄ.

 
aPÀÌ£ÁAiÀÄPÀ£ÀºÀ½î 17£Éà ªÁqïð£À°è PÁAUÉæ¸ï C§åyð ¹.¦.ªÀĺÉÃ±ï «dAiÉÆÃvÀìªÀ DZÀj¹zÀgÀÄ.

Wednesday, March 6, 2013

ಚಿಕ್ಕನಾಯಕನಹಳ್ಳಿ,ಮಾ.06 : ಪುರಸಭೆ ಮತದಾನ ಕೇಂದ್ರಗಳ ಪಟ್ಟಿ
  ವಾಡರ್್ ಸಂಖ್ಯೆ.         ಮತದಾನ ಕೇಂದ್ರ                       ಒಟ್ಟುಮತಗಳು
   1.              ಸಕರ್ಾರಿ ಸ್ವತಂತ್ರ ಪದವಿಪೂರ್ವ ಕಾಲೇಜ್    537
   2.      ಸಕರ್ಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ,ಜೋಗಿಹಳ್ಳಿ    986
   3          ಸಕರ್ಾರಿ ಪ್ರೌಢಶಾಲೆ,ಚಿ.ನಾ.ಹಳ್ಳಿ                  906
   4.          ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,ದಬ್ಬೇಗಟ್ಟ   760
   5.          ದೇಶೀಯ ವಿದ್ಯಾಪಿಠ ಬಾಲಕರ ಪ್ರೌಢಶಾಲೆ,ಚಿ.ನಾ.ಹಳ್ಳಿ  671
   6       ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ಹೊಸಕಟ್ಟಡ)ಕೇದಿಗೆಹಳ್ಳಿ.  782.
   7.       ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ಹೊಸಕಟ್ಟಡ) ಕುರುಬರಹಳ್ಳಿ 873.
   8.       ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ,ಚಿ.ನಾ.ಹಳ್ಳಿ, 566.
   9.       ಟಿ.ಎ.ಪಿ.ಸಿ.ಎಂ.ಎಸ್.ಕಟ್ಟಡ,ಚಿ.ನಾ.ಹಳ್ಳಿ.           625.
   10.      ಮುನಿಸಿಪಲ್ ಸಮುದಾಯ ಭವನ,ಚಿ.ನಾ.ಹಳ್ಳಿ.     668.
   11.      ಸಕರ್ಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕುರುಬರ ಶ್ರೇಣಿ.  519.
   12.      ಎನ್.ಟಿ.ಜಿ.ಎಂ.ಎಸ್.(ಬಲಭಾಗ)                  800.
   13.      ಎನ್.ಟಿ.ಜಿ.ಎಂ.ಎಸ್.(ಎಡಭಾಗ)                  605
   14.      ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(ನೀರು ಬಾಗಿಲು)  493
   15.      ಪುರಸಭೆ ಕಟ್ಟಡ            610
   16.      ಜಿ.ಎಂ.ಪಿ.ಎಸ್.ಕುರುಬರ ಶ್ರೇಣಿ        640
   17.      ಜಿ.ಹೆಚ್.ಪಿ.ಎಸ್. ಕಂಬಳಿ ಸೊಸೈಟಿ ಹತ್ತಿರ      680
   18.      ಜಿ.ಹೆಚ್.ಪಿ.ಎಸ್.(ಹಳೆ ಕಟ್ಟಡ) ಕಂಬಳಿ ಸೊಸೈಟಿ ಹತ್ತಿರ  691.
   19.      ಸಕರ್ಾರಿ ಜನರಲ್ ಹಿರಿಯ ಪ್ರಾಥಮಿಕ ಪಾಠಶಾಲೆ(ದಕ್ಷಿಣ) ಶುಕ್ರವಾರದ  ಬಾಗಿಲು.615
   20.      ಸಕರ್ಾರಿ ಜನರಲ್ ಹಿರಿಯ ಪ್ರಾಥಮಿಕ ಪಾಠಶಾಲೆ (ಉತ್ತರ)ಶುಕ್ರವಾರದಬಾಗಿಲು.542
   21.       ಜಿ.ಹೆಚ್.ಪಿ.ಎಸ್.ನೀರುಬಾಗಿಲು (ಪೂರ್ವ)ಹೊಸಕಟ್ಟಡ    741
   22.      ಡಾ. ಅಂಬೇಡ್ಕರ್ ಪ್ರೌಢಶಾಲೆ ಹುಳಿಯಾರ್ ರಸ್ತೆ.     725
   23.      ಅಂಗನವಾಡಿ ಕೇಂದ್ರ ಅಂಬೇಡ್ಕರ್ ನಗರ      988.


ಚಿಕ್ಕನಾಯಕನಹಳ್ಳಿ,ಮಾ.06 : ತಾಲ್ಲೂಕಿನ ಕಂದಿಕೆರೆ ಶಾಲಾ ಆವರಣದಲ್ಲಿ ಸಂಜೆ ಆರು ಮೂವತ್ತರ ಸುಮಾರಿಗೆ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ 14 ಆರೋಪಿಗಳನ್ನ ದಸ್ತಗಿರಿ ಮಾಡಿದ್ದು ಆರೋಪಿಗಳಿಂದ ರೂ 7500 ವಶಪಡಿಸಿಕೊಳ್ಳಲಾಗಿದೆ ಎಂದು ಚಿ.ನಾ.ಹಳ್ಳಿ ಪೊಲೀಸರು ತಿಳಿಸಿದ್ದಾರೆ.       

 

Thursday, February 28, 2013

ಚಿ.ನಾ.ಹಳ್ಳಿ ಕ್ಷೇತ್ರದ ಮುಂದಿನ ಎಂ.ಎಲ್.ಎ.ಚುನಾವಣೆಯ ಅಬ್ಯಾಥರ್ಿಕೆ.ಎಸ್.ಕಿರಣ್ಕುಮಾರ್. ಬಿ.ಜೆ.ಪಿ.ರಾಜ್ಯಾಧ್ಯಕ್ಷ
                      
ಚಿಕ್ಕನಾಯಕನಹಳ್ಳಿ,ಜ.28 : ಮುಂದಿನ ವಿಧಾನಸಭಾ ಚುನಾವಣೆಗೆ ಭಾಜಪ ಪಕ್ಷದಿಂದ ಕೆ.ಎಸ್.ಕಿರಣ್ಕುಮಾರ್ ಸ್ಪಧರ್ಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಘೋಷಿಸಿದರು.
    ಪಟ್ಟಣದ ಪುರಸಭಾ ವಾಡರ್್ಗಳಿಗೆ ರೋಡ್ ಶೋ ಮೂಲಕ ಭೇಟಿ ನೀಡಿ ನಂತರ ಮಾತನಾಡಿದ ಅವರು ಕಳೆದ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಜಪ ಪಕ್ಷವು ರಾಜ್ಯದ 4970 ಕ್ಷೇತ್ರದಲ್ಲಿ 1400 ಸ್ಥಾನಗಳನ್ನು ಪಡೆದಿತ್ತು, ಈ ಬಾರಿ 2800ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷ ಪಡೆಯುವ ವಿಶ್ವಾಸವಿದೆ ಎಂದರು.
    ಕಳೆದ 60 ವರ್ಷದಿಂದ ರಾಜ್ಯದಲ್ಲಿ ಆಗದಿರುವ ಅಭಿವೃದ್ದಿಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಗಿದೆ, ಈ ಕಾರಣದಿಂದಲೇ ರಾಜ್ಯದ ಜನ ಮುಂದೆಯೂ ಬಿಜೆಪಿ ಸಕರ್ಾರವನ್ನು ಅಧಿಕಾರಕ್ಕೆ ತಂದರೆ ನಮ್ಮ ಎಲ್ಲಾ ಯೋಜನೆಗಳೂ ಪೂರ್ಣಗೊಳಲಿದೆ ಎಂದರದಲ್ಲ,  ದೇಶದ ಅಭಿವೃದ್ದಿಯೂ ಬಿಜೆಪಿ ಮುಖಾಂತರವೇ ಆಗಲಿದೆ ಎಂದರು.
    ರಾಜ್ಯದಲ್ಲಿ ಭಾಜಪ ಸಕರ್ಾರ ಆರಂಭಿಸಿರುವ ಕಾಮಗಾರಿಗಳನ್ನು ಪಕ್ಷ ಮತ್ತೆ ಅಧಿಕಾರ ಹಿಡಿದು ಕಾಮಗಾರಿಗಳನ್ನು ಪೂರ್ಣಗೊಳಿಸಲಿದೆ ಎಂದರು.
    ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ತಾಲ್ಲೂಕಿಗೆ ಹರಿಯಲಿರುವ ಹೇಮಾವತಿ ನೀರಿನ ಕಾಮಗಾರಿ ಕೇವಲ ಇನ್ನು ಒಂದು ವಾರದಲ್ಲಿ ಆರಂಭಗೊಳ್ಳಲಿದೆ, ಚಿಕ್ಕನಾಯಕನಹಳ್ಳಿ ಕೆರೆಗೂ ಸ್ವಾಭಾವಿಕವಾಗಿ ನೀರು ಹರಿಯಲಿದೆ ಎಂದರಲ್ಲದೆ ಪುರಸಭಾ ಚುನಾವಣೆಯಲ್ಲಿ ಭಾಜಪ ಅಭ್ಯಾಥರ್ಿಗಳನ್ನು ಚುನಾಯಿಸಬೇಕೆಂದು  ಮನವಿ ಮಾಡಿದರು.
    ಇದಕ್ಕೂ ಮುನ್ನ ಭಾಜಪ ಪಕ್ಷದ ಕಛೇರಿಯಿಂದ ಪಟ್ಟಣದ ಪುರಸಭಾ ವಾಡರ್್ಗಳಿಗೆ ಕಾರ್ಯಕರ್ತರೊಂದಿಗೆ ವಾಹನದಲ್ಲಿ ಭೇಟಿ ನೀಡಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಭಾಜಪ ಅಧ್ಯಕ್ಷ ಶಿವಪ್ರಸಾದ್, ತಾ.ಭಾಜಪ ಅಧ್ಯಕ್ಷ ಮಿಲ್ರ್ಟಿಶಿವಣ್ಣ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಶ್ರೀನಿವಾಸಮೂತರ್ಿ, ಬರಗೂರು ಬಸವರಾಜು, ಅಭಾವಿಪ ತಾ.ಪ್ರಮುಖ್ ಚೇತನ್ಪ್ರಸಾದ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯ
ಚಿಕ್ಕನಾಯಕನಹಳ್ಳಿ,ಫೆ.28:  ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯದ ಸಂಚಾರವನ್ನು ಮಾಚರ್್ 1ರಿಂದ 3ರವರೆಗೆ ತಾಲ್ಲೂಕಿನಾದ್ಯಂತ ಏರ್ಪಡಿಸಲಾಗಿದೆ.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿಯವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು 1ರ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶ ಕೆ.ಎಂ.ರಾಜಶೇಖರ್ ಉದ್ಘಾಟನೆ ನೆರವೇರಿಸಲಿದ್ದಾರೆ.
    ಪ್ರಧಾನ ಸಿವಿಲ್ ಜಡ್ಜ್ ಕೆ.ನಿರ್ಮಲ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಅಧಿಕ ಸಿವಿಲ್ ಜಡ್ಜ್ ಎನ್.ವೀಣಾ, ತಹಶೀಲ್ದಾರ್ ಕೆ.ಟಿ.ಕೃಷ್ಣಸ್ವಾಮಿ, ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ, ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆ.ನಿರಂಜನ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಬಿ.ಇ.ಓ ಎಸ್.ಸಿ.ನಾಗೇಶ್, ವೃತ್ತ ನಿರೀಕ್ಷಕ ಕೆ.ಪ್ರಭಾಕರ್ ಉಪಸ್ಥಿತರಿರುವರು.
    ಮಾಚರ್್ 1ರ ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ವಿ.ಶಿವಾನಂದ್ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ವಿಷಯ ಪ್ರಸ್ತಾಪಿಸಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ.     ಮಧ್ಯಾಹ್ನ 1.30ಕ್ಕೆ ಮುದ್ದೇನಹಳ್ಳಿ ಗ್ರಾ.ಪಂ.ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಮಾತನಾಡಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ತಿಳಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಸಿ.ಕಮಲಮ್ಮಜಯಣ್ಣ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಹೆಚ್.ಕೆ.ನಿರಂಜನ್, ಜಿ.ಎಸ್.ಚನ್ನಬಸಪ್ಪ, ಎಂ.ಮಹಾಲಿಂಗಯ್ಯ ಉಪಸ್ಥಿತರಿರುವರು. ಸಂಜೆ 4ಕ್ಕೆ ಚಿ.ನಾ.ಹಳ್ಳಿ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ಎನ್.ಶೇಖರ್ ಬಾಲ ಕಾಮರ್ಿಕ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಮೋಟಾರ್ ವಾಹನ ಕಾಯ್ದೆ ಹಾಗೂ ವಾಹನ ಪರವಾನಗಿ ಬಗ್ಗೆ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಕೆ.ಎಸ್.ಚಂದ್ರಶೇಖರ್, ಕೆ.ಸಿ.ಬಸವರಾಜು ಉಪಸ್ಥಿತರಿರುವರು.
    ಮಾಚರ್್ 2ರ ಶನಿವಾರ ತೀರ್ಥಪುರ ಗ್ರಾ.ಪಂ.ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಎರಡನೇ ದಿನದ ಕಾರ್ಯಕ್ರಮ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷೆ ಪದ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರುಗಳಾದ ಹೆಚ್.ಟಿ.ಹನುಮಂತಯ್ಯ ಕೌಟುಂಬಿಕೆ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಕೆ.ಎಸ್.ಚಂದ್ರಶೇಖರ್ ಮಧ್ಯಸ್ಥಿಕೆ ಕೇಂದ್ರದ ಮಹತ್ವ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಕೀಲರಾದ ಎಂ.ವಿ.ಶಿವಾನಂದ, ಮಾರುಮರ್ಧನ್ ಉಪಸ್ಥಿತರಿರುವರು. ಮಧ್ಯಾಹ್ನ 1.30ಕ್ಕೆ ಬರಶಿಡ್ಲೆಹಳ್ಳಿ ಶಾಲಾ ಆವರಣದಲ್ಲಿ ವಕೀಲರುಗಳಾದ ಮೋಹನ್ಕುಮಾರ್ ಜನನ ಮತ್ತು ಮರಣ ನೊಂದಣಿ ಕಾಯ್ದೆ, ಎ.ಎಂ.ಮಂಜುನಾಥ್ ಉಯಿಲ್(ವಿಲ್) ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4.30ಕ್ಕೆ ತಾಲ್ಲೂಕು ಕಛೇರಿ ಆವರಣದಲ್ಲಿ ಜಮೀನು ಮಂಜುರಾತಿ ಹಾಗೂ ನೊಂದಣಿ ಕಾಯ್ದೆ ಬಗ್ಗೆ ವಕೀಲ ಹೆಚ್.ಎಸ್.ಜ್ಞಾನಮೂತರ್ಿ ಹಾಗೂ ವಕೀಲ ಹೆಚ್.ಎ.ಹಬೀಬುಲ್ಲಾ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ. 
    ಮಾಚರ್್ 3ರಂದು ಬೆಳಗುಲಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಇರುವ ಸವಲತ್ತು, ಆಸ್ತಿ ಹಕ್ಕು ಬಗ್ಗೆ ಹಾಗೂ ಮಧ್ಯಾಹ್ನ 2ಕ್ಕೆ ಹುಳಿಯಾರಿನ ಅಭೇಡ್ಕರ್ ಭವನದಲ್ಲಿ ಮಹಿಳೆ ಮತ್ತು ಕಾನೂನು, ಹಿಂದೂ ವಿವಾಹ ಕಾಯ್ದೆ  ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಸಂಜೆ 5ಕ್ಕೆ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
 

Wednesday, February 27, 2013

ಮಹಿಳೆಯ  ರೇಪ್, ಮರ್ಡರ್: ಸುಟ್ಟು ಕರಕಲಾಗಿರುವ  ದೇಹ
                          
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಜೋಗಿಹಳ್ಳಿಯ ಹೊಲ ಒಂದರಲ್ಲಿ ಮಹಿಳೆಯೊಬ್ಬರನ್ನು ಮಾನಭಂಗ ಮಾಡಿ, ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ.
    ಜೋಗಿಹಳ್ಳಿಯ ನಂಜುಂಡಯ್ಯ ಎಂಬುವರ ಹೊಲದಲ್ಲಿ ಈ ಕುಕೃತ್ಯ ನಡೆದಿದ್ದು, ಮಹಿಳೆಯ ಮಮರ್ಾಂಗವನ್ನು ಆಸಿಡ್ ಅಥವಾ  ಪೆಟ್ರೋಲ್ ಹಾಕಿ ಸುಟ್ಟು ನಂತರ ಇಡೀ ದೇಹವನ್ನು ಗರಿ ಮತ್ತಿತರ ಕೃಷಿ ತ್ಯಾಜ್ಯದ ಜೊತೆಗೆ ಆಸಿಡ್ನಿಂದ  ಸುಟ್ಟಿರ ಬಹುದು ಎಂದು ಅಂದಾಜಿಸಲಾಗಿದ್ದು, ಮಹಿಳೆಯ ಮುಖ ಹಾಗೂ ದೇಹ ಗುರುತಿಸಲಾಗದಷ್ಟು ಕರಕಲಾಗಿದೆ. ಮೃತ ಮಹಿಳೆ ಸುಮಾರು 35 ರಿಂದ 40 ವರ್ಷದೊಳಗಿರ ಬಹುದೆಂದು ಅಂದಾಜಿಸಲಾಗಿದ್ದು, ಹೊರಗೆಲ್ಲೋ ಕೊಲೆ ಮಾಡಿ ಜೋಗಿಹಳ್ಳಿ ಈ ಹೊಲಕ್ಕೆ ತಂದು ಸುಟ್ಟು ಹಾಕಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಯುವಾಗ ಮುಷ್ಟಿ ಬಿಗಿಹಿಡಿದಿದ್ದು, ಮುಷ್ಠಿ ಒಳಗೆ ಸೀರೆಯ ತುಂಡು ಸಿಕ್ಕಿದೆ, ಕಾಲನ ಬಳಿ ನೆರಳೆ ಬಣ್ಣದ ಲಂಗದ ತುಂಡಿದೆ, ಮೂಗಿನಲ್ಲಿ ಮೂಗುತಿ, ಕೊರಳಲ್ಲಿ ಚಿನ್ನದ ಸರವಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಕೋದಂಡರಾಮ ರೆಡ್ಡಿ, ಸಿ.ಪಿ.ಐ.ಕೆ.ಪ್ರಭಾಕರ್, ಪಿ.ಎಸೈ. ಗೋವಿಂದ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು. ಸಿ.ಪಿ.ಐ, ಕೆ.ಪ್ರಭಾಕರ್ ತನಿಖೆ ಕೈಗೊಂಡಿದ್ದಾರೆ.
    ಮೃತ ಮಹಿಳೆಯ ದೇಹವನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮಹಿಳೆಯ ಗುರುತು ಬಲ್ಲವರು ಚಿ.ನಾ.ಹಳ್ಳಿ ಸಿ.ಪಿ.ಐ.ರವರನ್ನು 9480802939, 9448659311 ಸಂಪಕರ್ಿಸಲು ಕೋರಿದೆ.
ಚಿ.ನಾ.ಹಳ್ಳಿ ಪುರಸಭೆ: 10 ನಾಮಪತ್ರಗಳು ವಾಪಸ್, 72ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಪುರಸಭೆಯ 23 ವಾಡರ್್ಗಳಿಂದ 10 ಜನ ಅಬ್ಯಾಥರ್ಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.
 ನಾಮ ಪತ್ರ ವಾಪಸ್    ಪಡೆದವರೆಂದರೆ ವಾಡರ್್ ಒಂದರಲ್ಲಿ ಪಕ್ಷೇತರ ಅಬ್ಯಾಥರ್ಿಗಳಾದ ಸಲ್ಮ, ವೀಣಾಶಂಕರ್, ವಾಡರ್್5ರಲ್ಲಿ ಸಿ.ಎನ್.ವಿಜಯಕುಮಾರ್, ವಾಡರ್್11ರಲ್ಲಿ ಸಿ.ಎನ್.ಮಂಜುನಾಥ್, ವಾಡರ್್12ರಲ್ಲಿ ಸಿ.ಬಿ.ಜಯಕುಮಾರ್, ಕೆಜೆಪಿಯ ಬಾಬು ಸಾಹೇಬ್, ವಾಡರ್್13ರಲ್ಲಿ ಟಿ.ಎಲ್.ಯಶೋದಮ್ಮ, ವಾಡರ್್15ರಲ್ಲಿ ಮಹಮದ್ ಸುಹೇಲ್, ವಾಡರ್್16ರಲ್ಲಿ ಅಬ್ದುಲ್ ಸಲಾಂ, ಮಹಮದ್ ಜಹೀರ್ ಉದ್ದೀನ್ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಇದರಲ್ಲಿ 9ಜನ ಪಕ್ಷೇತರರು, ಒಂದು ಕೆಜೆಪಿ ಅಬ್ಯಾಥರ್ಿಗಳಾಗಿದ್ದಾರೆ.
ಅಂತಿಮವಾಗಿ ವಾಡರ್್ವಾರು ಕಣದಲ್ಲಿರುವವರು: ವಾಡರ್್1: ದಾಕ್ಷಾಯಣಮ್ಮ(ಜೆಡಿಎಸ್),ರೇಖಾ(ಕಾಂಗ್ರೆಸ್),ಹೆಚ್.ಸಿ.ಶಾಮಲ(ಬಿಜೆಪಿ),ರೂಪ(ಕೆಜೆಪಿ),ವಿಶಾಲಾಕ್ಷಮ್ಮ(ಬಿಎಸ್ಆರ್) ಮತ್ತು ವರಮಹಾಲಕ್ಷ್ಮಿ(ಪಕ್ಷೇತರ). ಒಟ್ಟು=6
ವಾಡರ್್ 2: ಇಂದಿರಾ(ಜೆಡಿಎಸ್),ಸುಖನ್ಯಾ(ಕಾಂಗ್ರೆಸ್),ಕೆಂಪಮ್ಮ(ಬಿಜೆಪಿ),ನಿರ್ಮಲ(ಕೆಜೆಪಿ) ಒಟ್ಟು=4
ವಾಡರ್್ 3: ಸಿ.ಡಿ.ಚಂದ್ರಶೇಖರ್(ಜೆಡಿಎಸ್)&ಸಿ.ಟಿ.ಸುರೇಶ್ ಕುಮಾರ್(ಕೆಜೆಪಿ) ಒಟ್ಟು=2
ವಾಡರ್್ 4: ಕೆ.ಶೈಲಜ(ಜೆಡಿಎಸ್),ದೊಡ್ಡಮ್ಮ(ಬಿಜೆಪಿ),&ಎಂ.ಡಿ.ನೇತ್ರಾವತಿ(ಕೆಜೆಪಿ)=3
ವಾಡರ್್ 5: ಎಮ್.ಕೆ.ರವಿಚಂದ್ರ(ಜೆಡಿಎಸ್),ಚೇತನ್ಪ್ರಸಾದ್(ಬಿಜೆಪಿ) ಮತ್ತು ಸಿ.ಆರ್.ನಾಗಕುಮಾರ್ ಚೌಕಿಮಠ=3
ವಾಡರ್್ 6: ಕೆ.ಎಸ್.ಶಹೀದಾ(ಜೆಡಿಎಸ್),ಧರಣಿ ಲಕ್ಕಪ್ಪ(ಕಾಂಗ್ರಸ್), ಮೀನಾಕ್ಷಮ್ಮ(ಬಿಜೆಪಿ)&ಎನ್.ಪುಷ್ಪವತಿ(ಬಿಎಸ್ಆರ್)=4
ವಾಡರ್್ 7: ಸಿ.ಎಮ್.ರಾಜಶೇಖರ್(ಜೆಡಿಎಸ್)=1
ವಾಡರ್್ 8: ಮಲ್ಲಿಕಾಜರ್ುನಯ್ಯ(ಜೆಡಿಎಸ್),ಕೆ.ಬಿ.ಶಿವಣ್ಣ(ಕಾಂಗ್ರಸ್)&ಮೆಹಬೂಬ್(ಕೆಜೆಪಿ)=3
ವಾಡರ್್9: ಕಮಲಮ್ಮ(ಜೆಡಿಎಸ್),ರೇಣುಕಮ್ಮ(ಕಾಂಗ್ರಸ್),ಸರಸ್ವತಿ(ಬಿಜೆಪಿ),&ರಾಜಮ್ಮ(ಕೆಜೆಪಿ)=4
ವಾಡರ್್ 10: ಸಿ.ಎಸ್.ರಮೇಶ್(ಜೆಡಿಎಸ್),ಚಂದ್ರಶೇಖರ್(ಕಾಂಗ್ರಸ್),ಶ್ರೀನಿವಾಸ ಮೂತರ್ಿ(ಬಿಜೆಪಿ) ಮತ್ತು ರೇಣುಕ್ ಪ್ರಸಾದ್(ಕೆಜೆಪಿ)=4
ವಾಡರ್್11: ಸಿ.ಕೆ.ಕೃಷ್ಣಮೂತರ್ಿ(ಜೆಡಿಎಸ್),ಸಿ.ಕೆ.ಕುಮಾರಸ್ವಾಮಿ(ಕಾಂಗ್ರೆಸ್),ಈಶ್ವರಯ್ಯ(ಬಿಜೆಪಿ) ಮತ್ತು ರೇಣುಕ ಪ್ರಸಾದ್(ಪಕ್ಷೇತರ)=4
ವಾಡರ್್ 12: ತಿಮ್ಮಪ್ಪ(ಜೆಡಿಎಸ್),ಜಯಲಕ್ಷ್ಮಿ(ಕಾಂಗ್ರೆಸ್)&ಧನಪಾಲ್(ಬಿಜೆಪಿ)=3
ವಾಡರ್್ 13: ಸಿ.ಎಮ್.ರಂಗಸ್ವಾಮಿ(ಜೆಡಿಎಸ್),&ಗೋಪಾಲಕೃಷ್ಣ(ಕೆಜೆಪಿ)=2
ವಾಡರ್್ 14: ಹೆಚ್.ಬಿ.ಪ್ರಕಾಶ್(ಜೆಡಿಎಸ್),ಕೆ.ಜಿ.ಕೃಷ್ಣೇಗೌಡ(ಕಾಂಗ್ರೆಸ್),ಸಿ.ಕೆ.ಶಾಂತಕುಮಾರ್(ಬಿಜೆಪಿ)&ಶಶಿ ಶೇಖರ್(ಕೆಜೆಪಿ)=4
ವಾಡರ್್ 15: ಮಲ್ಲೇಶಯ್ಯ(ಜೆಡಿಎಸ್)&ಸಿ.ಬಸವರಾಜು(ಕಾಂಗ್ರೆಸ್)=2
ವಾಡರ್್ 16: ಮಹಮದ್ ಖಲಂದರ್(ಜೆಡಿಎಸ್),ಮಹಮದ್ ಅಲ್ತಾಫ್(ಕಾಂಗ್ರೆಸ್)ಮತ್ತು ಬಾಬು ಸಾಹೇಬ್(ಕೆಜೆಪಿ)=3
ವಾಡರ್್ 17: ಸಿ.ಬಿ.ತಿಪ್ಪೇಸ್ವಾಮಿ(ಜೆಡಿಎಸ್),ಸಿ.ಪಿ.ಮಹೇಶ್(ಕಾಂಗ್ರೆಸ್),ಸಿ.ಎಮ್.ಗಂಗಾಧರಯ್ಯ(ಬಿಜೆಪಿ)ಮತ್ತು ದುರ್ಗಮ್ಮ(ಪಕ್ಷೇತರ)=4
ವಾಡರ್್ 18: ಪ್ರೇಮಾ(ಜೆಡಿಎಸ್)&ಶಾಂತಮ್ಮ(ಕಾಂಗ್ರೆಸ್)=2
ವಾಡರ್್ 19: ಸಿ.ಟಿ.ದಯಾನಂದ(ಜೆಡಿಎಸ್),ಸಿ.ಡಿ.ಲಕ್ಷ್ಮಯ್ಯ(ಕಾಂಗ್ರೆಸ್)&ಸಿಕ.ೆ.ಲೋಕೇಶ್(ಪಕ್ಷೇತರ)=3
ವಾಡರ್್ 20: ಸಿ.ಆರ್.ಗೀತಾ(ಜೆಡಿಎಸ್),&ಶಕುಂತಲಮ್ಮ(ಬಿಜೆಪಿ)=2
ವಾಡರ್್ 21: ಪುಷ್ಪಾ(ಜೆಡಿಎಸ್)&ಹೇಮಾವತಿ(ಬಿಜೆಪಿ)=2
ವಾಡರ್್ 22: ಕೆ.ರೇಣುಕಾ(ಜೆಡಿಎಸ್)&ಮಾಲಾ(ಬಿಜೆಪಿ)=2
ವಾಡರ್್ 23: ಅಶೋಕ್(ಜೆಡಿಎಸ್),ನಿವರ್ಾಣ ಸಿದ್ದಯ್ಯ(ಕಾಂಗ್ರೆಸ್),ಗಂಗಾಧರಯ್ಯ(ಬಿಜೆಪಿ),ಲಿಂಗದೇವರು(ಬಿಎಸ್ಆರ್)&ಕೆಂಚಯ್ಯ(ಪಕ್ಷೇತರ)=5