Saturday, September 6, 2014



30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿ : ಆರ್.ಟಿ.ಓ ಮಂಜುನಾಥ್
                           

                     
ಚಿಕ್ಕನಾಯಕನಹಳ್ಳಿ,ಸೆ.06 : ವಾಹನದ ಪರವಾನಗಿ ಪಡೆಯಲು 18ವರ್ಷವಾಗಿರಬೇಕು, 30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ತಿಪಟೂರು ಆರ್.ಟಿ.ಓ ಮಂಜುನಾಥ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆ, ರೋಟರಾಕ್ಟ್ ಸಂಸ್ಥೆ, ತಿಪಟೂರು ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ರಸ್ತೆ ಸುರಕ್ಷತಾ ಹಾಗೂ ಸಂರಕ್ಷತಾ ವಾಹನ ಚಾಲನ ನಿಯಮಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 50ವರ್ಷ ಮೇಲ್ಪಟ್ಟ ನಾಗರೀಕರು ಪ್ರತಿ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಬೇಕಾಗುತ್ತದೆ, ವಾಹನಗಳನ್ನು ಓಡಿಸಲು ರಿಜಿಸ್ಟ್ರೇಷನ್ ಕಡ್ಡಾಯವಾಗಿದ್ದು ವಾಹನಗಳು 40ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ಮಾತ್ರ ಸುರಕ್ಷಿತವಾಗಿರುತ್ತಾರೆ, ಅತಿ ವೇಗದಿಂದ ಚಲಾಯಿಸಿದರೆ ಜೀವಕ್ಕೆ ಅಪಾಯ ಎಂದು ತಿಳಿಸಿದರು.
ವಾಹನ ಚಲಾಯಿಸುವವರು ಕುಡಿದು ಹಾಗೂ ಮೊಬೈಲ್ಗಳಲ್ಲಿ ಮಾತನಾಡುತ್ತಾ ಮತ್ತು ದ್ವಿಚಕ್ರ ವಾಹನದಲ್ಲಿ ಮೂರು ಜನ ತೆರಳುವುದು ಕಾನೂನು ಪ್ರಕಾರ ಅಪರಾಧ ಎಂದರಲ್ಲದೆ, ವಾಹನ ಚಾಲಕನು ಅಗ್ನಿಶಾಮಕದಳದ ವಾಹನಗಳು ಮತ್ತು ತುತರ್ು ಚಿಕಿತ್ಸಾ ವಾಹನ, ಪೋಲಿಸ್ ವಾಹನ, ಕೆಂಪುದೀಪ ಹೊತ್ತ ವಾಹನಗಳನ್ನು ಕಂಡಾಗ ಸಾಧ್ಯವಾದಷ್ಟು ರಸ್ತೆಯ ಎಡಪಕ್ಕದಲ್ಲಿ ನಿಂತು ಅವುಗಳಿಗೆ ಚಲಿಸಲು ಆದ್ಯತೆ ನೀಡಬೇಕು, ವಾಹನವನ್ನು ನಿಲುಗಡೆ ತಾಣದಲ್ಲೇ ನಿಲ್ಲಿಸಿ ಪ್ರತಿ ಸೂಚನ ಫಲಕವನ್ನು ಗಮನಿಸುವಂತೆ ಸಲಹೆ ನೀಡಿದರು.
ಸಿ.ಪಿ.ಐ ಜಯಕುಮಾರ್ ಮಾತನಾಡಿ ಇತ್ತೀಚೆಗೆ ಪಟ್ಟಣದಲ್ಲಿ ರೋಟರಿ ಶಾಲೆಯ ಬಾಲಕ ಅತಿ ವೇಗವಾಗಿ ಚಾಲನೆ ಮಾಡಿ ಕಂಬಕ್ಕೆ ಡಿಕ್ಕೆ ಹೊಡೆದ ಪರಿಣಾಮ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ, ಪಟ್ಟಣದಲ್ಲಿ ಅಪ್ರಾಪ್ತರು, ವಾಹನ ಪರವಾನಿಗೆ ಪಡೆಯದವರ ವಿರುದ್ದ ದಂಡ ವಿಧಿಸಿ, ಎಚ್ಚರಿಕೆ ನೀಡಿ, ಲೈಸೆನ್ಸ್ ಪಡೆದು ವಾಹನ ಚಲಾಯಿಸಲು ಸೂಚನೆ ನೀಡಲಾಗಿದೆ. ಕಾಲೇಜು ಆವರಣದಲ್ಲಿ ಅಪರಿಚಿತರು ಹೆಣ್ಣು ಮಕ್ಕಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಕೀಟಲೆ ಮಾಡುತ್ತಿರುವವರ ಬಗ್ಗೆ ವಿದ್ಯಾಥರ್ಿನಿಯರು ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ವಾಹನ ನಿಯಮ ಉಲ್ಲಂಘಿಸುತ್ತಿರುವುದರಿಂದಲೇ ದೇಶದಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿದ್ದು ಇದರಿಂದ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ ಎಂದರು.
ವಾಹನ ಚಾಲಕರು ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿರುವ ವರದಿಗಳು ಬರುತ್ತಿರುವುದರಿಂದ ಅಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಪ್ರಕಾರ ಪೋಸ್ಕೋ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾಥರ್ಿಗಳು ಹಾಗೂ ಶಾಲಾ ವಿದ್ಯಾಥರ್ಿಗಳು ರಸ್ತೆ ಸುರಕ್ಷತೆ ಪಾಲನೆಯ ಬಗ್ಗೆ ಪ್ರಶ್ನಿಸಿ ಆರ್.ಟಿ.ಓ ಅಧಿಕಾರಿಯಲ್ಲಿ ಮಾಹಿತಿ ಪಡೆದಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸಿ.ಎನ್.ಮರುಳಾರಾಧ್ಯ, ಪ್ರಾಂಶುಪಾಲ ವಿ.ವರದರಾಜು, ಪಿ.ಎಸ್.ಐಗಳಾದ ಮಹಾಲಕ್ಷ್ಮಮ್ಮ ಹಾಗೂ ಸುನಿಲ್ ರೋಟರಿ ಸದಸ್ಯರಾದ ಸಿ.ಎಸ್.ಪ್ರದೀಪ್ಕುಮಾರ್, ದೇವರಾಜು ಅಶ್ವತ್ಥ್ನಾರಾಯಣ್, ಮಿಲ್ಟ್ರಿಶಿವಣ್ಣ, ದಾನಪ್ಪ ಉಪಸ್ಥಿತರಿದ್ದರು. 


ಸುಡಗಾಡು ಸಿದ್ದ ಯುವಕರ ಮೇಲೆ ಪಿ.ಎಸ್.ಐ. ಹಲ್ಲೆ: ತಹಶೀಲ್ದಾರ್ಗೆ ದೂರು.
ಚಿಕ್ಕನಾಯಕನಹಳ್ಳಿ,ಸೆ.06 : ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ವಾಸವಿರುವ ಸುಡುಗಾಡು ಸಿದ್ಧರು ಹಾಗೂ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ  ನುಗ್ಗಿ ಅಕ್ರಮವಾಗಿ ನಾಲ್ವರನ್ನು ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡಿದ ಪಿ.ಎಸ್.ಐ ರವರು ಮಾನವ ಹಕ್ಕು ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಕಾಮಾಕ್ಷಮ್ಮನವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾ ಮನವಿ ಅಪರ್ಿಸಿದರು.
ಪಟ್ಟಣದ 6ನೇ ವಾಡರ್್ನಲ್ಲಿರುವ ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಾಗಿರುವ ಸುಡುಗಾಡು ಸಿದ್ದ ಜನಾಂಗದ ಯುವಕರಾದ ಕುಮಾರ್, ಮಾರಣ್ಣ ನರಸಿಂಹ, ಮಂಜಣ್ಣ ಎಂಬುವವರನ್ನು ವಿನಾಕಾರಣವಾಗಿ ಬಂಧಿಸಿ ಹಲ್ಲೆ ಮಾಡಿ ಗಾಯಗೊಳಿಸಿದರು. ನಮ್ಮನ್ನು ಬಂಧಿಸಿರುವುದು ಏಕೆ ಎಂದು ಪ್ರಶ್ನಿಸಿದರೆ ನಿಮ್ಮ ಮೇಲೆ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಲ್ಲದೆ ಯಾವ ಮಾಧ್ಯಮದವರಿಗೂ ತಿಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ, ಇದರಿಂದ ಕೇದಿಗೆಹಳ್ಳಿ ಗುಂಡುತೋಪಿನ ಗುಡಿಸಿಲಿನಲ್ಲಿ ಇರುವ ನಮಗೆ ಜೀವ ಬೆದರಿಕೆಯಿಂದ ಕುಟುಂಬಗಳು ಭಯಭೀತರಾಗಿದ್ದು ಯಾವಾಗ ಬಂಧಿಸುತ್ತಾರೋ ಎಂಬ ಭಯದಲ್ಲಿ ಬದುಕ ಬೇಕಾಗಿದೆ, ವೈದರ ಬಳಿ ಪೋಲಿಸ್ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಚಿಕಿತ್ಸೆ ನೀಡಿ ವೈದ್ಯಕೀಯ ದೃಢೀಕರಣ ಪತ್ರ ನೀಡುವಂತೆ ಕೇಳಿದರೂ ವೈದ್ಯರು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ವಿನಃ ದೃಢೀಕರಣ ಪತ್ರ ಮಾತ್ರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾ ಸಭಾದ ಪದಾಧಿಕಾರಿಗಳಾದ ರಾಜಪ್ಪ, ಡಿ.ಶಾಂತಕುಮಾರ್, ವೆಂಕಟೇಶಯ್ಯ, ರಂಗನಾಥ್ ಸೇರಿದಂತೆ ಹಲವರಿದ್ದರು.


ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಸಹಕಾರಿ

ಚಿಕ್ಕನಾಯಕನಹಳ್ಳಿ,ಸೆ.06 : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳು ಸಹಕಾರಿ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಡಾ.ಅಂಭೇಡ್ಕರ್ ಪ್ರೌಢಶಾಲೆಯ ಆವರಣದಲ್ಲಿ 2014-15ನೇ ಸಾಲಿನ ಪರೌಢಶಾಲಾ ಹಂತದ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭಾ ಸದಸ್ಯೆ ರೇಣುಕಾ ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ, ತೀಪರ್ುಗಾರರು ಪ್ರಾಮಾಣಿಕವಾಗಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೆಂಬಾಳ್ ಸುರೇಶ್ ಸ್ವಾಗತಿಸಿದರು. ದೇವರಾಜ್ ನಿರೂಪಿಸಿದರು. ರಾಂಪ್ರಸಾದ್ ವಂದಿಸಿದರು.

Friday, September 5, 2014

ಸಾಮಾಜಿಕ  ತಾರತಮ್ಯ ಹೊಗಲಾಡಿಸಿ ಹಳ್ಳಿಗಳ ಅಭಿವೃದ್ದಿಗೆ ಶಿಕ್ಷಕರು ಶ್ರಮಿಸುವುದು ಅಪೇಕ್ಷಣೀಯ: ಶಾಸಕ ಸಿ.ಬಿ.ಎಸ್.

ಚಿಕ್ಕನಾಯಕನಹಳ್ಳಿ,ಸೆ.05 : ಸಮಾಜದ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ, ತಾವು ಹೋಗುವ ಹಳ್ಳಿಗಳ ಅಭಿವೃದ್ದಿ, ಪರಿಸರ ಹಾಗೂ ಹಳ್ಳಿಗಳಲ್ಲಿ ಇರುವ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಲು ಶ್ರಮಿಸುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಕರೆ ನೀಡಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಡಾ.ರಾಧಾಕೃಷ್ಣನ್ರವರ 127ನೇ ಜನ್ಮದಿನಾಚಾರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚಾರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಶಿಕ್ಷಕರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು, ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರನ್ನು ಹೊಂದಿದ್ದು ಸಮಾಜ ಶಿಕ್ಷಕರ ಮೇಲೆ ಅಪಾರ ನಂಬಿಕೆ ಇಟ್ಟಿದೆ, ಶಿಕ್ಷಕರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ದಿಯ ಕಡೆ ಗಮನ ಹರಿಸಿ ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ, ಶಿಕ್ಷಕಣ ತಜ್ಞರಾಗಿ, ರಾಷ್ಟ್ರಪತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರೂ ತಮ್ಮ ಜನ್ಮದಿನಾಚಾರಣೆ ಬದಲಾಗಿ ಶಿಕ್ಷಕರ ದಿನಾಚಾರಣೆ ಆಚರಿಸುವಂತೆ ಹೇಳಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ, ಭಾರತದ ಸಂಸ್ಕೃತಿ ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಎಂದ ಅವರು ಮಕ್ಕಳ ಸರಿತಪ್ಪುಗಳನ್ನು ತಿದ್ದುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ.ಅಧ್ಯಕ್ಷೆ ಲತಾ ಕೇಶವಮೂತರ್ಿ ಮಾತನಾಡಿ ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಹೇಳುವ ಮೂಲಕ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಿ, ಸರಿಯಾಗಿ ಕರ್ತವ್ಯ ನಿಭಾಯಿಸದೆ ಹೋದರೆ ಮಕ್ಕಳಿಗೆ ದ್ರೋಹ ಮಾಡಿದಂತಾಗುತ್ತದಲ್ಲದೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಡೆದು ಹಾಕುವುದು ಶಿಕ್ಷಕರ ಕರ್ತವ್ಯ ಎಂದರು.
ಪುರಸಭಾಧ್ಯಕ್ಷೆ ಪುಷ್ಟ.ಟಿ.ರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯೆ ಹೇಮಾವತಿ, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಜಿ.ಪ್ರಾ.ಶಾ.ಶಿ.ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ದೈ.ಶಿ.ಸಂಘದ ಅಧ್ಯಕ್ಷ ಚಿ.ನಾ.ಪುರುಷೋತ್ತಮ್, ಸಿಡಿಪಿಓ ಅನೀಸ್ಖೈಸರ್, ತಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಶಿಕ್ಷಕರಾದ ಹೆಚ್.ಎಂ.ಸುರೇಶ್, ತಿಮ್ಮರಾಯಪ್ಪ, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿದರೆ ಎಸ್.ಸಿ. ನಟರಾಜ್ ನಿರೂಪಿಸಿದರು. ಕೃಷ್ಣಯ್ಯ ವಂದಿಸಿದರು.
ತಾಲ್ಲೂಕು ಪ್ರವಾಸಿ ಮಂದಿರದಿಂದ ಹೊರಟ ಸರ್ವಪಲ್ಲಿ ರಾಧಾಕೃಷ್ಣನ್ರವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಬಿ.ಹೆಚ್.ರಸ್ತೆ ನೆಹರು ವೃತ್ತದ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಕರ್ಾರಿ ಪ್ರೌಢಶಾಲಾ ಆವರಣಕ್ಕೆ ತೆರಳಿತು.
ಸಮಾರಂಭದಲ್ಲಿ ನಿವೃತ್ತಿ ಹೊಂದಿದ 33 ಶಿಕ್ಷಕರನ್ನು ಹಾಗೂ 13ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ 26ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ರೈತರ ನೆರವಿಗೆ ಡಿ.ಸಿ.ಸಿ.ಬ್ಯಾಂಕ್ನಿಂದ ನೂತನ ಯೋಜನೆ: ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ,ಸೆ.05 : ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ನೆರವಾಗಲು ಸಾಲ ನೀಡಿದ ಸಹಕಾರ ಸಂಸ್ಥೆಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಒಂದು ಲಕ್ಷ ರೂಗಳನ್ನು ತುಂಬಿ ಕೊಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲ್ಲೂಕಿನ ಮತಿಘಟ್ಟದ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಡಿಸಿಸಿ ಬ್ಯಾಂಕ್ನ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಯೋಜನೆಯೂ ಈ ವರ್ಷದಿಂದಲೇ ಆರಂಭವಾಗಲಿದೆ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘದ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದೇ ಸೆಪ್ಟಂಬರ್ 10ನೇ ತಾರೀಖಿನೊಳಗೆ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅಜರ್ಿ ಸಲ್ಲಿಸುವಂತೆ ತಿಳಿಸಿದರು.
ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳಿಗೆ ಮಾತ್ರ ಸಾಲ ನೀಡುತ್ತಿದ್ದ ಡಿಸಿಸಿ ಬ್ಯಾಂಕ್, ಆರಂಭಿಸಿರುವ ಯೋಜನೆಯಲ್ಲಿ ಜಂಟಿ ಭದ್ರತಾ ಯೋಜನೆಯೂ ಒಂದಾಗಿದ್ದು ವ್ಯಾಪಾರ ಮಾಡುತ್ತಿರುವವರು ಸಂಘ ರಚಿಸಿಕೊಂಡರೆ ಅವರಿಗೂ ಸಾಲದ ನೆರವು ನೀಡುವ ಮೂಲಕ ವ್ಯಾಪಾರಸ್ಥರ ಏಳಿಗೆಗೂ ಮುಂದಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಎಂದರಲ್ಲದೆ ಮತಿಘಟ್ಟ ಸಹಕಾರ ಸಂಘಕ್ಕೆ ಸಾಲವಾಗಿ 12.90ಲಕ್ಷ ರೂ ಸಾಲವನ್ನು ವಿತರಿಸಲಾಗಿದೆ ಎಂದರು. ಹಿಂದಿನಿಂದಲೂ ಮತಿಘಟ್ಟ ಸಹಕಾರ ಸಂಘ ಉತ್ತಮ ರೀತಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಬಂದಿದ್ದು, ಒಂದಕ್ಕೊಂದು ಸಂಘ ಸಂಸ್ಥೆಗಳು ಸಹಕಾರ ನೀಡಿದಾಗ ಆ ಭಾಗದ ಸಂಘ, ಸಂಸ್ಥೆಗಳು ರೈತರು, ಬಡವರನ್ನು ಆಥರ್ಿಕವಾಗಿ ಮೇಲೆತ್ತಲು ಸಹಾಯ ಮಾಡುತ್ತವೆ ಎಂದರು.
ಮತಿಘಟ್ಟ ಭಾಗದ ಎಲ್ಲಾ ಹಳ್ಳಿಗಳ ರೈತರಿಗೂ ಸಾಲದ ಯೋಜನೆ ಅನುಕೂಲವಾಗಲು ಮುಂದೆಯೂ ಹೊಸ ಸಾಲ ನೀಡಲಾಗುವುದು, ಸಾಲ ಪಡೆದವರು ಮರು ಪಾವತಿ ಮಾಡಿದರೆ ಇನ್ನಷ್ಟು ಸಾಲವನ್ನು ನೀಡಬಹುದು ಎಂದರಲ್ಲದೆ ಹೊಸದಾಗಿ ಬಂದಂತಹ ಸಕರ್ಾರಗಳು ಸಾಲ ಪಡೆದ ರೈತರಿಗೆ ನೆರವಾಗಲೂ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ನೆರವಾಗುತ್ತಿವೆ, ಅದೇ ರೀತಿ ಪ್ರತಿ ರೈತರಿಗೂ ಬ್ಯಾಂಕ್ ವತಿಯಿಂದ ಸಾಲ ನೀಡಿ ಅವರಿಗೆ ಸಕರ್ಾರದಿಂದ ಸಿಗುವ ಅನುಕೂಲ ನೀಡುವುದು ಬ್ಯಾಂಕಿನ ಗುರಿಯಾಗಿದೆ ಎಂದರಲ್ಲದೆ ಸಾಲ ಪಡೆದವರು ವ್ಯವಸಾಯದ ಜೊತೆ ಉಪಕಸುಬುಗಳನ್ನು ಮಾಡುವಂತೆ ಅದಕ್ಕೆ ಬೇಕಾದ ಸಹಾಯವನ್ನು ಬ್ಯಾಂಕ್ ಹಾಗೂ ಸೊಸೈಟಿಯಿಂದ ನೀಡುವುದಾಗಿಯೂ ತಿಳಿಸಿದರು.
ಮತಿಘಟ್ಟ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ರೈತರು ಆಥರ್ಿಕವಾಗಿ ಸದೃಢವಾಗಲು ಜಿಲ್ಲಾ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಸಾಲ ಪಡೆದವರು ಮರುಪಾವತಿ ಮಾಡಿದರೆ ಮತ್ತಷ್ಟು ಹೆಚ್ಚಿನ ಸಾಲ ಪಡೆಯಬಹುದು ಎಂದು ತಿಳಿಸಿದ ಅವರು ಕಾಮಲಾಪುರದಲ್ಲಿ ಸಹಕಾರ ಸಂಘದ ಕಟ್ಟಡ ಕಟ್ಟಿಸುವ ಯೋಜನೆಯಿದ್ದು ಇದಕ್ಕೆ ಡಿ.ಸಿ.ಸಿ.ಬ್ಯಾಂಕ್ನ ಸಹಕಾರದ ಅಗತ್ಯವಿದೆ ಎಂದು ತಿಳಿಸಿದರು.
ತಾ.ಪಂ.ಸದಸ್ಯ ನಿರಂಜನಮೂತರ್ಿ ಮಾತನಾಡಿ ಸಹಕಾರ ಸಂಘಗಳು ಅಕ್ಕಿ, ಗೋಧಿ ಕೊಡಲು ಮಾತ್ರ ಸೀಮಿತವಲ್ಲ, ರೈತರ ಸಂಕಷ್ಟಕ್ಕೆ ನೆರವಾಗಲು ಸಾಲ ಸೌಲಭ್ಯವನ್ನು ನೀಡುತ್ತದೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಸಹಕಾರದಿಂದ ಮತಿಘಟ್ಟ ಸಹಕಾರ ಸಂಘ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರಲ್ಲದೆ ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಪರದಾಡುತ್ತಾರೆ ಆದರೆ ಜಿಲ್ಲಾ ಬ್ಯಾಂಕ್ ಮೂಲಕ ಸಹಕಾರ ಸಂಘಗಳಲ್ಲಿ ಬಡ್ಡಿರಹಿತ ಸಾಲವನ್ನು ಸುಲಭವಾಗಿ ಪಡೆಯತ್ತಿರುವ ಬಗ್ಗೆ ತಿಳಿಸಿದ ಅವರು ಸಾಲ ಪಡೆದಂತೆ ಮರುಪಾವತಿ ಮಾಡುವುದು ರೈತರ ಕರ್ತವ್ಯವಾಗಿದೆ ಎಂದರು.
ರೈತ ಕರಿಯಪ್ಪ ಮಾತನಾಡಿ ಜಿಲ್ಲಾ ಬ್ಯಾಂಕಿನಿಂದ ರೈತರಿಗೆ ಪ್ರತಿ ವರ್ಷ ನೀಡುವ ಸಾಲದ ಯೋಜನೆಯು ವಿಸ್ತಾರವಾಗುತ್ತಿದೆ, ಸಹಕಾರ ಸಂಘಗಳು ನೀಡುತ್ತಿರುವ ಸಾಲದಿಂದ ಹಲವು ಕುಟುಂಬಗಳು ಆಥರ್ಿಕವಾಗಿ ಸದೃಢವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ.ಬ್ಯಾಂಕ್ನ  ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಸ್ಥಳೀಯ ಸಹಕಾರ ಬ್ಯಾಂಕಿನ ನಿದರ್ೇಶಕರಾದ ಮಲ್ಲಿಕಣ್ಣ, ಸಿ.ಇ.ಓ ಹನುಮಂತಪ್ಪ, ಮತ್ತಿತರರು ಉಪಸ್ಥಿತರಿದ್ದರು.



ಹಾಡುಹಗಲೇ ಮನೆ ಬಾಗಿಲು ಹೊಡೆದು ಮೂರುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ನಗದು ಆಭರಣ ಕಳವು.
ಚಿಕ್ಕನಾಯಕನಹಳ್ಳಿ,ಸೆ.05:  ಪಟ್ಟಣದ ಕೋಟರ್್ ಹಿಂಭಾಗದಲ್ಲಿನ ನಸರ್್ ಮನೆಯೊಂದರಲ್ಲಿ ಹಾಡುಹಗಲೇ ಸುಮಾರು 3.5ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಾಗೂ ಬಂಗಾರದ ಆಭರಣಗಳು ಕಳವಾಗಿರುವ ಪ್ರಕರಣ ನಡೆದಿದೆ.
ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ನಸರ್್ ಆಗಿರುವ ವಿಶಾಲಕ್ಷಮ್ಮ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರು ಸೆ.5ರಂದು ಮಧ್ಯಾಹ್ನ ಸಹದ್ಯೋಗಿಯ ಮಗಳ ನಿಶ್ಚಿಥಾರ್ತಗೆಂದು  ತೆರಳಿದ್ದ ಸಂದರ್ಭದಲ್ಲಿ ಮನೆಯ ಹಿಂಭಾಗಿಲನ್ನು ಬಲವಾದ ಆಯುಧದಿಂದ ಮೀಟಿ ಬಾಗಿಲಿನ ಡೋರ್ ಲಾಕ್ ಹೊಡೆದು ಕೊಠಡಿಯಲ್ಲಿಟ್ಟಿದ್ದ ಬೀರುವಿನಲ್ಲಿದ್ದ ಎರಡುವರೆ ಲಕ್ಷ ರೂ ನಗದು ಹಾಗೂ ನಾಲ್ಕು ಜೊತೆ ಬಂಗಾರದ ಓಲೆಗಳನ್ನು ಕಳವು ಮಾಡಿದ್ದಾರೆ ಎಂದು ಮನೆಯ ಮಾಲೀಕ ಶಿವನಂದಯ್ಯ ತಿಳಿಸಿದರು.
ಈಗಿರುವ ಮನೆಯ ಮಹಡಿ ಮೇಲೆ  ಮೇಲೆ ನೂತನ ಮನೆಯನ್ನು ಕಟ್ಟಲೆಂದು ತಮ್ಮ ಉಳಿತಾಯದ ಹಣವನ್ನು  ನಿನ್ನೆಯಷ್ಟು ತಂದು ಮನೆಯಟ್ಟುಕೊಂಡಿದ್ದಾಗಿ ವಿಶಾಲಮ್ಮ ಹೇಳಿದ್ದರೆ, ಸ್ಥಳಕ್ಕೆ ಸಿ.ಪಿ.ಐ.ಜಯಕುಮಾರ್, ಪಿ.ಎಸ್.ಐ.ಮಹಾಲಕ್ಷ್ಮಮ್ಮ ಹಾಗೂ ಶ್ವಾನ ದಳ ಭೇಟಿ ನೀಡಿತ್ತು. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Thursday, September 4, 2014


ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ
ಚಿಕ್ಕನಾಯಕನಹಳ್ಳಿ,ಸೆ.04 : ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ ಆದ್ದರಿಂದ ಕಾನೂನಿನ ಬಗ್ಗೆ ಎಲ್ಲರೂ ಅರಿವು ಪಡೆದುಕೊಳ್ಳುವುದು ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ಎನ್.ಆರ್.ಲೋಕಪ್ಪ ಹೇಳಿದರು.
   ಪಟ್ಟಣದ ತಾಲ್ಲೂಕ್ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಂಯುಕ್ತ ಆಶ್ರಯದಲ್ಲಿ ಅಪೌಷ್ಠಿಕತೆ ಮತ್ತು ಮರಳಿ ಬಾ ಶಾಲೆಗೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ನಮ್ಮ ದೇಶದ ಅತ್ಯುನ್ನತ ಸಂವಿದಾನ ಪಡೆದಿದ್ದು ಪ್ರತಿಯೊಬ್ಬ ಪ್ರಜೆಯು ಗೌರವದಿಂದ ಜೀವಿಸುವ ಹಕ್ಕನ್ನು ಹೊಂದಿದ್ದು ಜಾತಿ, ಬೇದ, ಪಂಥ, ಹೆಣ್ಣು, ಗಂಡು ಎಂಬ ಬೇದಬಾವವಿಲ್ಲದೇ ಜೀವಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ತಾಯಿ ಗರ್ಭದಿಂದ ಹಿಡಿದು ಸಾಯುವವರೆಗೂ ಕಾನೂನು ನಮಗೆ ಅನ್ವಯವಾಗುತ್ತದೆ. ತಾಯಂದಿರು ಸರಿಯಾದ ಪೌಷ್ಠಿಕಾಂಶದ ಅಹಾರ ಸೇವಿಸದೆ ಹೋದರೆ ಹುಟ್ಟಿದ ಮಕ್ಕಳು ಅಂಗವಿಕಲತೆ, ಬುದ್ದಿಮಾಂದ್ಯ ಮಕ್ಕಳು ಹುಟ್ಟುವುದರಿಂದ ತಂದೆ-ತಾಯಿ ಹಾಗೂ ಸಮಾಜಕ್ಕೂ ಹೊರೆಯಾಗುತ್ತಾರೆ. 
ಉಚ್ಚನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಅಪೌಷ್ಠಿಕತೆಯಿಂದ ನರಳುತ್ತಿರುವ ಗಭರ್ಿಣಿ ಸ್ರೀಯರಿಗೆ ಮಕ್ಕಳಿಗೆ ಪೌಷ್ಠಿಕಾಂಶವಿರುವ ಅಹಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತರಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಗಭರ್ಿಣಿ ಸ್ತ್ರೀಯರಿಗೆ ಮೊಳಕೆಕಾಳು ಹಾಗೂ ಪೌಷ್ಠಿಕಾಂಶವಿರುವ ಹಣ್ಣುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಮಕ್ಕಳು ಹುಟ್ಟುತ್ತಾರೆ. ಹುಟ್ಟಿದ ಮಗುವಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಗಳಾಗುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಸರಿಯಾಗಿ ಪೋಷಿಸಿ ಇಲ್ಲದೇ ಹೋದರೆ ಮಕ್ಕಳು ಸಮಾಜ ಘಾತುಕರಾಗುತ್ತಾರೆ ಎಂದ ಅವರು ಕೆಲವರು ಹಣ ಮಾಡುವ ದೃಷ್ಠಿಯಿಂದ ಕಲಬೆರಕೆ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಅರೋಗ್ಯದ ಮೇಲೆ ದುಶ್ಟಪರಿಣಾಮ ಉಂಟಾಗುತ್ತದೆ  ಎಂದು ತಿಳಿಸಿದರು. 
ನ್ಯಾಯಾದೀಶರಾದ ಎನ್. ವೀಣಾ ಮಾತಾನಾಡಿ ಎರಡು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ಅಪೌಷ್ಠಿಕ ಮಕ್ಕಳ ಬಗ್ಗೆ ವರದಿ ಬಂದ ಹಿನ್ನಲೆಯಲ್ಲಿ ಕೆಲವು ಎನ್.ಜಿ.ಒ. ಸಂಘಟನೆಗಳು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿದ ನಂತರ ಉಚ್ಚನ್ಯಾಯಾಲಯ ನ್ಯಾಯಾಧೀಶರ ಸಮಿತಿ ರಚಿಸಿ ವರದಿಯನ್ನು ತರಿಸಿಕೊಂಡ ನಂತರ ವಿವಿಧ ಇಲಾಖೆಗಳ ಸಮಿತಿಯನ್ನು ರಚಿಸಿ ಗಭರ್ೀಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ನೀಡುವಂತೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸಕರ್ಾರ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನ್ಯಾಯಂಗ ಇಲಾಖೆ ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
   ಸಿ.ಡಿ.ಪಿ.ಓ. ಅನಿಸ್ ಖೈಸರ್ ಮಾತನಾಡಿ ತಾಲ್ಲೂಕಿನಲ್ಲಿ 205 ಮಕ್ಕಳು ಅಪೌಷ್ಠಿಕತೆಯಿಂದ ನರಳಿದ್ದು ಇವರಿಗೆ ಉತ್ತಮ ಪೌಷ್ಠಿಕಾಂಶದ ಅಹಾರ ಹಾಗೂ ಸಲಹೆ ಹಾಗೂ ಚಿಕಿತ್ಸೆ ನೀಡುವುದರಿಂದ ಮಕ್ಕಳು ಗುಣಮುಖಾರಾಗಿದ್ದು ಇನ್ನು 85 ಮಕ್ಕಳಿಗೆ ಚಿಕಿತ್ಸೆ ಹಾಗೂ ಪೌಷ್ಠಿಕ ಅಹಾರ ನೀಡಲಾಗುತ್ತಿದೆ, ಗಬರ್ಿಣಿ ಸ್ರೀಯರು ಮೂಢ ನಂಬಿಕೆಗೆ ಮಾರು ಹೋಗದೇ ಉತ್ತಮ ಅಹಾರ ಸೇವಿಸಿ, ಹುಟ್ಟಿದ ಮಗು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಸ್ತ್ರೀಯರ ಕರ್ತವ್ಯ  ಎಂದರಲ್ಲದೆ ಜಿಲ್ಲೆಯಲ್ಲಿ 1000 ಗಂಡು ಮಕ್ಕಳು 977 ಜನ ಹೆಣ್ಣುಮಕ್ಕಳಿದ್ದಾರೆ ಇದರಿಂದ ಹೆಣ್ಣು ಮಕ್ಕಳ ಕೊರತೆಯಿದೆ ಅದ್ದರಿಂದ  ತಂದೆ ತಾಯಂದಿರಿಗೆ ಹೆಣ್ಣುಮಕ್ಕಳ ಬಗ್ಗೆ ಇರುವ ತಾತ್ಸಾರ ಮನೋಭಾವ ಹೋಗಬೇಕು ಎಂದರು.
  ಕಾರ್ಯಕ್ರಮದಲ್ಲಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ, ಸಿ.ಬಿ.ಸಂತೋಷ್, ವಕೀಲರ ಸಂಘದ ಉಪಾದ್ಯಾಕ್ಷ ಹೆಚ್.ಎಸ್.ಜ್ಞಾನಮೂತರ್ಿ, ಬಿ.ಇ.ಒ.ಸಾ.ಚಿ.ನಾಗೇಶ್, ಸಿ.ಪಿ.ಐ.ಜಯಕುಮಾರ್, ಉಪತಹಸೀಲ್ದಾರ್ ದೊಡ್ಡಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.
    ಮಾಲತಿ ಪ್ರಾಥರ್ಿಸಿದರು. ವಕೀಲ ಲೋಕೇಶ್ ನಿರೂಪಿಸಿದರು. ವಕೀಲ ದಿಲೀಪ್ ಸ್ವಾಗತಿಸಿ ವಂದಿಸಿದರು.

ಸೃಜನಶೀಲ ಬರವಣಿಗೆ ನೀಡುತ್ತಿದ್ದ ಲೇಖಕ

ಯು.ಆರ್.ಅನಂತಮೂತರ್ಿ
ಚಿಕ್ಕನಾಯಕನಹಳ್ಳಿ,ಆ.04 : ಸೃಜನಶೀಲ ಬರವಣಿಗೆ, ತಮ್ಮ ಕೃತಿಗಳ ಮೂಲಕ ಸಮಕಾಲೀನ ವಾಸ್ತವಗಳನ್ನು ಓದುಗರಿಗೆ ನೀಡಿದ ಲೇಖಕ ಯು.ಆರ್.ಅನಂತಮೂತರ್ಿ ಎಂದು ನವೋದಯ ಪ್ರಥಮ ದಜರ್ೆ ಕಾಲೇಜಿನ ಕನ್ನಡ ಉಪನ್ಯಾಸಕ ರವಿಕುಮಾರ್.ಸಿ. ಹೇಳಿದರು.
ತಾಲ್ಲೂಕಿನ ಹಂದನಕೆರೆ ಜಿವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಹಂದನಕೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅನಂತ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನಾತನ ಪರಂಪರೆಯನ್ನು ಸಮಕಾಲೀನಗೊಳಿಸುವ ಪ್ರಯತ್ನದಲ್ಲಿ ಅನಂತ್ಕುಮಾರ್ರವರು ತಮ್ಮ ಕಾದಂಬರಿಗೆ ಹೊಸತನ ಅಂಶಗಳ ದಾರಿ ಮಾಡಿದರು ಎಂದ ಅವರು ಈ ನೆಲದ ಪ್ರೀತಿ, ದ್ವೇಷ ಎರಡನ್ನೂ ಕಂಡ ಅವರ ಬರವಣಿಗೆ ಪ್ರತಿಯೊಬ್ಬ ವಿದ್ಯಾಥರ್ಿಗೆ ದಾರಿದೀಪವಾಗಬೇಕೆಂದರು. ಬದುಕು ರೂಪಿಸಿಕೊಂಡ ಬಗ್ಗೆ ಅನಂತಮೂತರ್ಿಯವರ ಜೀವನ ಶೈಲಿ, ಆತ್ಮವಿಶ್ವಾಸ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದು ನುಡಿದರು. ವಿಮರ್ಶಕರಾದ ಮೂತರ್ಿಯವರು ಕನ್ನಡದ ಪಂಪನಿಂದ, ಸಾಹಿತ್ಯದ ಅನೇಕ ಬರಹಗಾರರ ಜೊತೆ ಸಂಬಂಧವಿಟ್ಟುಕೊಂಡು ಅದರ ಪಯಣ ರಾಜಕೀಯವನ್ನು ಬೆಸೆದುಕೊಂಡ ಕೊಂಡಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಸಾಹಿತ್ಯ, ವಿಚಾರಾಧಾರೆಗಳು ಇಂದಿನ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅನಂತಮೂತರ್ಿರವರ ಬರವಣಿಗೆ ಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಣ್ಣ, ಅನಂತಮೂತರ್ಿ ಈ ನಾಡು ಕಂಡ ಅನನ್ಯ ಚೇತನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೋಬಳಿ ಕಸಾಪ ಅಧ್ಯಕ್ಷ ಅನಂತಯ್ಯ, ಕಾರ್ಯದಶರ್ಿ ಮಂಜುನಾಥ್, ಆರ್.ಶಿವಣ್ಣ, ರಾಜೇಂದ್ರಕುಮಾರ್ ಮತ್ತು ಕಾಲೇಜು, ಪ್ರೌಢಶಾಲಾ ಶಿಕ್ಷಕರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.

Wednesday, September 3, 2014



ಗ್ರಾಮ ಪಂಚಾಯ್ತಿಗಳು ಸಬಲೀಕರಣವಾಗಬೇಕು : ಜಿ.ಪಂ.ಅಧ್ಯಕ್ಷ  ವೈ.ಹೆಚ್.ಹುಚ್ಚಯ್ಯ
ಚಿಕ್ಕನಾಯಕನಹಳ್ಳಿ,ಸೆ.01 : ಗ್ರಾಮ ಪಂಚಾಯ್ತಿಗಳು ಸಬಲೀಕರಣವಾಗದೇ  ಗ್ರಾಮಗಳು ಉದ್ಧಾರವಾಗುವುದಿಲ್ಲ ಎಂದು ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಮಾದಿಗ ದಂಡೋರ ಸಮಿತಿ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳಿಗೆ ಅಧಿಕಾರದ ಅರಿವಿನ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗುವುದು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಶೇ.50ರಷ್ಟು ಮಹಿಳೆಯರಿಗೆ ಮೀಸಲಾಗಿ ನೀಡಿದ್ದು ಹೊರತು ಅಕ್ಷರಸ್ಥರಿಗೆ ಮಾತ್ರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ, ಅನಕ್ಷರಸ್ಥರುಗಳ ಕೆಲಸಗಳಾಗುತ್ತಿಲ್ಲ ಎಂದು ವಿಷಾಧಿಸಿದ ಗ್ರಾಮ ಪಂಚಾಯ್ತಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಬೇಕಾದ ರೀತಿಯ ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ, ಅಧಿಕಾರಿಗಳ ಬಡ, ಅನಕ್ಷರಸ್ಥರ ಅಜರ್ಿಗಳನ್ನು ಕಛೇರಿಗೆ ತೆಗೆದುಕೊಂಡು ಬಂದರೆ ಅವರ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಿಂದ ಸ್ಪಂದಿಸದೇ ಹೋದ ಅಧಿಕಾರಿಗಳ ವಿರುದ್ದ ನಿದರ್ಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಎನ್.ಆರ್.ಇ.ಜಿ.ಎ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರೂಪಾಯಿ ಲಾಭಕ್ಕಾಗಿ ಕೆಲಸ ಮಾಡಬೇಡಿ ಉದಾಸೀನ ಮಾಡದೆ ಸಕರ್ಾರದ ಅನುದಾನ ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದರು. ಅಧಿಕಾರ ಶಾಶ್ವತವಲ್ಲ ಇರುವ ಅಧಿಕಾರವನ್ನು ಬಡವರ ದೀನ ದಲಿತರ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ,  ದಲಿತರ ಜನಾಂಗದಲ್ಲಿ 101 ಜಾತಿಗಳಿದ್ದು ಜನಸಂಖ್ಯೆ ಆಧಾರದ ಮೇಲೆ ವಗರ್ೀಕರಣ ಮಾಡುವಂತೆ 18ವರ್ಷಗಳ ದೀರ್ಘ ಹೋರಾಟದ ಫಲವಾಗಿ ಸಕರ್ಾರ ಎ.ಜಿ.ಸದಾಶಿವ ಆಯೋಗವನ್ನು ರಚಿಸಿ ಸಕರ್ಾರಕ್ಕೆ ವರದಿ ಸಲ್ಲಿಸಿದೆ ಆದರೂ ಸಕರ್ಾರ ಇದುವರೆವಿಗೂ ಮಾದಿಗ ಜನಾಂಗದ ಬೇಡಿಕೆಗಳಿಗೆ ಇದುವರೆವಿಗೇ ಸ್ಪಂದಿಸದೇ ಇರುವುದು ವಿಷಾಧದ ಸಂಗತಿ ಆದ್ದರಿಂದ ಕೂಡಲೇ ಎ.ಜಿ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು. 
ವಗರ್ೀಕರಣವಾಗದೇ ಹೋದರೆ ಮಾದಿಗ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ಸಕರ್ಾರದ ಕೆಲಸ ಸಿಗದೆ ಮಾದಿಗ ಜನಾಂಗಕ್ಕೆ ಅನ್ಯಾಯವಾಗುತ್ತದೆ, ದೇಶದಲ್ಲಿ 6500 ಸಾವಿರ ಜಾತಿಗಳಿದ್ದು ಅವರದೇ ಆದ ಜಾತಿಗಳ ಹೆಸರುಗಳನ್ನು ಸೇರಿಸುತ್ತಾ ಬಂದಿದ್ದರಿಂದಲೇ ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ, ಹಾವನೂರು ವರದಿಯಲ್ಲಿ ಮಾದಿಗರಿಗೆ ಶೇ.8ರಷ್ಟು ಮೀಸಲಾತಿ ನಂತರ ಎ.ಜೆ.ಸದಾಶಿವ ಆಯೋಗ ಶೇ.6ರಷ್ಟು ಮೀಸಲಾತಿ ನೀಡಿದ್ದರೂ ಇದುವರೆವಿಗೂ ಮೀಸಲಾತಿ ವಗರ್ೀಕರಣವಾಗದೇ ಇರುವುದರಿಂದ ಶೇ1.5ರಷ್ಟು ಮೀಸಲಾತಿ ಲಭಿಸಿದ್ದು ಇದರಿಂದ ಜನಸಂಖ್ಯಾ ಆಧಾರದಲ್ಲಿ ಸ್ಥಾನಮಾನ ಸಿಕ್ಕಿದೆ ಎಂದರಲ್ಲದೆ ಸದಾಶಿವ ಆಯೋಗದ ವರದಿ  ಜಾರಿಗೆ ತರುವಂತೆ ಉರುಳುಸೇವೆ, ಅರೆಬೆತ್ತಲೆ ಸೇವೆ, ಪಂಜಿನ ಮೆರವಣಿಗೆ ಸೇರಿದಂತೆ ಹಲವು ರೀತಿಯ ಪ್ರತಿಭಟನೆ ಮಾಡಿದ್ದೇವೆ, ಸದಾಶಿವ ಆಯೋಗದ ವರದಿಯಂತೆ ವಗರ್ೀಕರಣವಾದರೆ ಎಲ್ಲರಿಗೂ ಸಮಾನ ರೀತಿಯಲ್ಲಿ ಸೌಲಭ್ಯಗಳು ಹಂಚಿಕೆಯಾಗುತ್ತವೆ ಎಂದು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಕರ್ಾರ ಚುನಾವಣೆಯಲ್ಲಿ ಮೀಸಲಾತಿ ನೀಡಿರುವುದರಿಂದ ನಾವು ಎಲ್ಲಾ ಜನಾಂಗದವರಿಗೂ ಮೀಸಲಾತಿ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ನೀಡುತ್ತಿದ್ದು ಅದೇ ರೀತಿ ಈ ಬಾರಿ ವೈ.ಹೆಚ್.ಹುಚ್ಚಯ್ಯನವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದರು.
ರಾಜ್ಯ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ ಸಕರ್ಾರ ಬೇರೆ ಬೇರೆ ಮಹಾಪುರುಷರ ಜಯಂತಿ ಮಾಡುತ್ತಿದ್ದು ಅದೇ ರೀತಿ ಜಾಂಬುವಂತ ಹುಟ್ಟಿದ ದಿನದಂದು ಸಕರ್ಾರ ಜಯಂತಿಯನ್ನಾಗಿ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಜಿ.ಪಂ.ಸದಸ್ಯೆ ಜಾನಮ್ಮ ರಾಮಚಂದ್ರಯ್ಯ ಮಾತನಾಡಿ ಪಟ್ಟಣದಲ್ಲಿ ಮಾದಿಗ ದಂಡೋರ ಜನಾಂಗದ ಸಮುದಾಯ ಭವನಕ್ಕೆ ಜಿ.ಪಂ.ಅಧ್ಯಕ್ಷರಾದ ವೈ.ಹೆಚ್.ಹುಚ್ಚಯ್ಯನವರು ಐದು ಲಕ್ಷ ರೂಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಎಸ್.ಅಶೋಕ್, ಮಾ.ದ.ಸ.ಜಿಲ್ಲಾ ಉಪಾಧ್ಯಕ್ಷ ಈಚನೂರು ಮಹಾದೇವ್, ತಾಲ್ಲೂಕು ಅಧ್ಯಕ್ಷ ಜಯಣ್ಣ, ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ದ.ಸಂ.ಸ ಸಂಚಾಲಕ ಸಿ.ಎಸ್.ಲಿಂಗದೇವರು, ಮುಖಂಡ ತೀರ್ಥಪುರ ಆರ್.ಕುಮಾರ್, ಸಿ.ಎನ್.ಹನುಮಯ್ಯ, ರಾಜುಬೆಳಗೀಹಳ್ಳಿ,  ಗೋವಿಂದಯ್ಯ

ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕು ಮಟ್ಟದ ಚಾಂಪಿಯನ್ : ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿ ಸಿ.ಎನ್.ಮಂಜುನಾಥ್

ಚಿಕ್ಕನಾಯಕನಹಳ್ಳಿ,ಸೆ.2 : ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿ ಸಿ.ಎನ್.ಮಂಜುನಾಥ್ ತಾಲ್ಲೂಕ್ ಚಾಂಪಿಯನ್ ಸ್ಥಾನ ಅಲಂಕರಿಸಿದ್ದಾರೆ.
ಸಿ.ಎನ್.ಮಂಜುನಾಥ್ 100.ಮೀ ಓಟ, ಗುಂಡು ಎಸೆತ, ಚಕ್ರ ಎಸೆತ, ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದರೆ, ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿಗಳಾದ ಸಿ.ಎನ್.ಮಂಜುನಾಥ, ಎ.ಎನ್.ಮಧುಸೂದನ, ಮದನ್, ಸಿ.ಎನ್.ಯೋಗೀಶ್, ಜೆ.ಸಿ.ನವೀನ್, ಸುಹಾಸ್.ಸಿ.ಎಸ್, ನಾಗೇಂದ್ರ.ಕೆ.ಎಸ್, ಅಬ್ದುಲ್ರುಮಾನ್, ಗಣೇಶ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಹಾಗೂ ಭರತ್.ಕೆ.ಎನ್, ಸುದೀಪ್.ಎಲ್ ಚೆಸ್ನಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಟಿ.ಕಮಲಮ್ಮ, ದೈಹಿಕ ಶಿಕ್ಷಕಿ ಜಗದಾಂಭ.ಎ.ಎನ್. ಟೀಂ ಮ್ಯಾನೇಜರ್ ಹನುಮಂತರಾಯ,ಆರ್, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ.ಯವರು ಅಭಿನಂದಿಸಿದ್ದಾರೆ.

ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ
ಚಿಕ್ಕನಾಯಕನಹಳ್ಳಿ,ಸೆ.2 : ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ 2014-15ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್. ರೆಡ್ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 8ರ ಸೋಮವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು ಪ್ರಾಂಶುಪಾಲ ವಿ.ವರದರಾಜು ಅಧ್ಯಕ್ಷತೆ ವಹಿಸುವರು.


Thursday, August 28, 2014

ಗೌರಿ ದೇವಿಗೆ ಬಾಗಿನ ಅಪರ್ಿಸಿದ ಮಹಿಳೆಯರು
ಚಿಕ್ಕನಾಯಕನಹಳ್ಳಿ  :  ಪಟ್ಟಣದ ಹೊಸಬೀದಿಯಲ್ಲಿರುವ ವೀರಭದ್ರಸ್ವಾಮಿ   ದೇವಾಲಯದಲ್ಲಿ ಗೌರಿ ಹಬ್ಬದ ಪ್ರಯುಕ್ತ ಗೌರಮ್ಮನವರನ್ನು ಕುಳ್ಳಿರಿಸಿ ಪೂಜಿಸಲಾಯಿತು.

ಇಲ್ಲಿನ ಎಲ್ಲಾ ಹೆಣ್ಣುಮಕ್ಕಳು ದೊಡ್ಡಗೌರಮ್ಮನವರನ್ನು ಭಕ್ತಿ ಭಾವದಿಂದ ಪೂಜಿಸುತ್ತಾರೆ, ಗೌರಿ ಹಬ್ಬದಂದು ಎಲ್ಲಾ ಮಹಿಳೆಯರು ಬೆಳಗಿನ ಜಾವದಿಂದಲೇ ದೇವಿಯ ಪೂಜೆಗಾಗಿ ಸಿದ್ದರಾಗಿ ಉಪವಾಸವಿದ್ದು ನಂತರ ಗೌರಮ್ಮನವರನ್ನು ಕುಳ್ಳಿರಿಸಿರುವಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ, 
ಗೌರಿ ಹಬ್ಬದಂದು ಕುಳ್ಳಿರಿಸುವ ದೇವಿಯನ್ನ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುವುದು, ಅದೇ ರೀತಿ ಒಂಬತ್ತು ದಿನಗಳ ಕಾಲ  ಪೂಜೆ ಸಲ್ಲಿಸಲಾಗುವುದು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೆರೆಯಲ್ಲಿ ವಿಸಜರ್ಿಸಲಾಗುವುದು.
ಸುಮಾರು 400ವರ್ಷಗಳಿಂದಲೂ ದೇಶದ ಗೌರಮ್ಮನೆಂಬುದಾಗಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದು ಇದೇ ಸಂಪ್ರದಾಯದ ಆಚರಣೆಯನ್ನು ನಾವೂ ಮುಂದುವರೆಸಿಕೊಂಡು ಬರುತ್ತಿದ್ದೇವೆ.
ದೇವಿಗೆ ಪೂಜೆ ಸಲ್ಲಿಸಿದ ಭಕ್ತರು ಮಾತನಾಡಿ ಪಾಳೇಗಾರರ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವುದನ್ನು ನಾವು ಚಿಕ್ಕಮಕ್ಕಳಿಂದ ನೋಡಿ ಕಲಿತು ಅದೇ ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇವೆ, ಪ್ರತಿ ಗೌರಿ ಹಬ್ಬದಂದು ಇಲ್ಲಿ ಹೆಣ್ಣುಮಕ್ಕಳು ಗೌರಮ್ಮನವರನ್ನು ಪೂಜಿಸುತ್ತಾರೆ, ದೇವಿ ಗೌರಮ್ಮನವರಿಗೆ ಹೆಚ್ಚು ಜನರು ಬಂದು ಪೂಜೆ ಸಲ್ಲಿಸುತ್ತಾರೆ, ಹೊಸ ಬಾಗಿನ ಅಪರ್ಿಸುವವರು ವಿಶೇಷ ರೀತಿಯಲ್ಲಿ ದೇವರಿಗೆ ಬಾಗಿನ ಅಪರ್ಿಸುತ್ತಾರೆ, ಕಜರ್ಿಕಾಯಿ, ಚಕ್ಕಲಿ, ಕೋಡಬಳೆಯನ್ನು ಹಾಗೂ ಹರಿಶಿನ ದಾರ, ಗೌರಿ ಎಲೆ, ಅರಿಶಿನ ಕುಂಕುಮ , ಕೋಸುಂಬರಿ, ಹಣ್ಣು ಹಂಪಲು ನೀಡಿ ಬಾಗಿನ ಅಪರ್ಿಸುತ್ತಾರೆ.
 ಬಾಗಿನ ಅಪರ್ಿಸಲು ಬಂದ ಮುತೈದೆಯರಿಗೆ ಹರಿಶಿನ ಕುಂಕುಮ ನೀಡಿ ಪರಸ್ಪರ ಶುಭಾಷಯ ಕೋರುತ್ತೇವೆ. ನಂತರ ಗೌರಮ್ಮನವರಲ್ಲಿ ನಮ್ಮ ಮುತೈದೆ ಭಾಗ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಕೋರುತ್ತೇವೆ ಎಂದು ತಿಳಿಸಿದರು.

ವೀಶೇಷ : ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಲ್ಲಿ ದೇಶದ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲೆಡೆ ದೊಡ್ಡಗಾತ್ರದ ಗಣೇಶನ ಪಕ್ಕದಲ್ಲಿ ಪುಟ್ಟ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ ಆದರೆ ಇಲ್ಲಿ ಮಾತ್ರ ಗೌರಮ್ಮನೇ ಗಾತ್ರದಲ್ಲಿ ದೊಡ್ಡವಳು, ಅವಳ ಪಕ್ಕದಲ್ಲಿ ಗಣಪ ಪುಟ್ಟ ಕೂಸಿನಂತೆ ಕಾಣುತ್ತಾನೆ.
ಶ್ರಾವಣ ಮಾಸದಲ್ಲಿ ತವರು ಮನೆಯಿಂದ ತರುವ ಬಾಗಿನವನ್ನು ಹೆಣ್ಣು ಮಕ್ಕಳು ಗೌರಿ ಬಾಗಿನದ ದಿನದವರೆಗೆ ಬಿಚ್ಚುವುದಿಲ್ಲ, ತವರಿನಿಂದ ಬಂದ ಬಾಗಿನವನ್ನು ರುದ್ರನ ಗುಡಿಗೆ ತರುತ್ತಾರೆ, ಸೀರೆ, ಕುಪ್ಪಸ, ಬಳೆ, ಅರಿಶಿನ,ಕುಂಕುಮ ಐದು ಬಗೆಯ ಧಾನ್ಯಗಳನ್ನು ದೇಶದ ಗೌರಮ್ಮನಿಗೆ ಅಪರ್ಿಸುತ್ತಾರೆ, ನಂತರ ಒಬ್ಬರಿಗೊಬ್ಬರು ಮಡಿಲು ತುಂಬಿ ಪರಸ್ಪರ ಶುಭ ಕೋರುತ್ತಾರೆ.

Wednesday, August 27, 2014



ಪುರಸಭಾ ಸದಸ್ಯರಿಗೆ ಮಾತುಗಾರಿಕೆಯ  ಬಗ್ಗೆ ಪಾಠ ಮಾಡಿದ ಜಿಲ್ಲಾಧಿಕಾರಿ.
ಚಿಕ್ಕನಾಯಕನಹಳ್ಳಿ,ಆ.27: ಮಾತು ಮಾಣಿಕ್ಯ, ಮಾತೇ ಮೃತ್ಯು, ಎಂಬ ಭಾವರ್ಥವಿರುವ ಸರ್ವಜ್ಞನ ತ್ರಿಪದಿಯನ್ನು  ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ನಿರರ್ಗಳವಾಗಿ ಹೇಳುತ್ತಾ,  ಮೇಷ್ಟ್ರು ರೀತಿ ಪಾಠ ಮಾಡುತ್ತಿದ್ದರೆ ಸಭೆಯಲ್ಲಿದ್ದ ಪುರಸಭಾ ಸದಸ್ಯರು  ಕಮಕ್ ಕಿಮಿಕ್ ಎನ್ನದೆ, ಶ್ರದ್ದಾಭಕ್ತಿಯಿಂದ ಕೇಳುವ ವಿದ್ಯಾಥರ್ಿಗಳಂತೆ ಕೇಳುತ್ತಿದ್ದ ಸನ್ನಿವೇಶ ನೋಡಿದರೆ, ಇವರೇನಾ ನಮ್ಮ ಕೌನ್ಸಿಲರ್ಗಳು...! ಸಾಮಾನ್ಯ ಸಭೆಯಲ್ಲಿ ಆರ್ಭಟಿಸುತ್ತಿದ್ದ ಪುರ ಪಿತೃಗಳು...? ಎಂಬಂತ್ತಿತ್ತು ಆ ದೃಶ್ಯ. 
ಇದು ನಡೆದಿದ್ದು ಜಿಲ್ಲಾಧಿಕಾರಿ ಸತ್ಯಮೂತರ್ಿಯವರು ದಿಢೀರನೆ ಇಲ್ಲಿನ ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುರಸಭಾ ನೌಕರರು ಹಾಗೂ ಕೌನ್ಸಿಲರ್ಗಳೊಂದಿಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಚಚರ್ೆಸುವ ಸಂದರ್ಭದಲ್ಲಿ ಮೇಲಿನ ಸನ್ನಿವೇಶ ನಿಮರ್ಾಣವಾಗಿತ್ತು.
ಜಿಲ್ಲಾಧಿಕಾರಿಗಳು ಆರಂಭದಲ್ಲೇ ಪುರಸಭಾ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ, ಯಾರೋ ಇಲ್ಲಿನ  ವಿರೋಧ ಪಕ್ಷದ ಸದಸ್ಯರು ಜಾಸ್ತಿ ಗಲಾಟೆ ಮಾಡ್ತಾರೆ ಅಂತ  ಪತ್ರಿಕೆಗಳಲ್ಲಿ ಬರುತ್ತಲ್ಲಾ ಅವರ್ಯಾರು ಎಂದು ಕೇಳುತ್ತಿದ್ದ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದ ಸಿ.ಪಿ.ಮಹೇಶ್ ಸಭೆಗೆ ಆಗಮಿಸಿದರು, ತಕ್ಷಣವೇ ಪಕ್ಕದಲ್ಲಿದ್ದ ಸದಸ್ಯರು ಇವರೇ ಸಾರ್, ಈಗ ನೀವು ಕೇಳಿದ್ದು ಎಂದರು. ತಕ್ಷಣವೇ ಮಹೇಶ್ ತಮ್ಮ ಪರಿಚಯ ಮಾಡಿಕೊಂಡರು ನಂತರ ಕಡತ ಪರಿಶೀಲನೆಗೆ ತೊಡಗಿದ ಡಿ.ಸಿ.ಯವರು,  ಈ ಪುರಸಭೆಗೆ ಸಂಬಂಧಿಸಿದಂತೆ ನನ್ನ ಕಛೇರಿಯಲ್ಲಿ ಯಾವ ಯಾವ ಫೈಲ್ಗಳು ಬಾಕಿ ಇವೆ ಎಂದು ಪ್ರಶ್ನೆಸಿದರು, ಮುಖ್ಯಾಧಿಕಾರಿಗಳು ಈ ಬಗ್ಗೆ ಉತ್ತರಿಸಲು ಮುಂದಾದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸದಸ್ಯರು ಬೇರೆ ವಿಷಯಗಳ ಬಗ್ಗೆ ಡಿ.ಸಿ.ಯವರನ್ನು ಕೇಳಲು ಮುಂದಾದರು, ತಕ್ಷಣವೇ ಡಿ.ಸಿ. ಮಾತನಾಡಿ, ನನ್ನನ್ನು ವಿಷಯಾಂತರಗೊಳಿಸಬೇಡಿ, ನಾನು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದಾರೆ, ಸ್ವಲ್ಪ ಸಮಾಧಾನವಾಗಿರಿ ಎಂದರು.
ಫೈಲ್ಗಳ ವಿಷಯ ಇನ್ನೂ ಮುಗಿದೆ ಇರಲಿಲ್ಲ ಮತ್ತೋರ್ವ ಸದಸ್ಯರು ಮಾತನಾಡಲು ಮುಂದಾದರು ಈ ಸಂದರ್ಭದಲ್ಲಿ ಸ್ವಲ್ಪ ಅಸಮಧಾನದಂತೆ ಕಂಡ ಡಿ.ಸಿ. ತಕ್ಷಣವೇ ಮಾತಿಗೆ ಸಂಬಂಧಿಸಿದ ಸರ್ವಜ್ಞರ ವಚನವನ್ನು ಪಠಿಸಿ ಅದರ ಅರ್ಥವನ್ನು ತಿಳಿಸಿ ಸರಳವಾಗಿ, ಮೃದುವಾಗಿ, ಸೌಜನ್ಯದಿಂದ ಮಾತನಾಡ ಬೇಕು, ನೀವು ಹೇಗಂದರೆ ಹಾಗೆ ಮಾತನಾಡಿದರೆ ಅದು ಆರ್ಭಟವಾಗುತ್ತದೆ ಹೊರತು ಸಭಾ ಮಯರ್ಾದೆ ಎನಿಸಿಕೊಳ್ಳುವುದಿಲ್ಲ  ಎಂದು ಪಾಠ ಶುರು ಮಾಡಿದ ತಕ್ಷಣವೇ ಸದಸ್ಯರು ಶಾಂತರಾದರು, ಪಾಠದ ಕೊನೆಯಲ್ಲಿ ಪಕ್ಕದಲ್ಲಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಕಡೆ ತಿರುಗಿ ನಾನು ಹೇಳಿದ್ದು ಕರೆಕ್ಟಾ ಎಂದು ಕೇಳುವ ಮೂಲಕ ತಮ್ಮ ಪಾಠಕ್ಕೆ ಶಾಸಕರ ಅನುಮೋದನೆಯನ್ನು ಪಡೆದಿದ್ದು ಇಡೀ ಸಭೆ ಒಂದು ರೀತಿ ತರಗತಿ ಕೋಣೆಯಂತಹ ವಾತಾವರಣವನ್ನು ನಿಮರ್ಿಸಿತು.
ಎರಡು ದಿನಗಳೊಳಗೆ ಫೈಲ್ ಕ್ಲಿಯರ್ ಮಾಡಿಸಿಕೊಳ್ಳಿ:  ಪಟ್ಟಣದ ಸ್ವಚ್ಚತೆಗೆ ಸಂಬಂಧಿಸಿದಂತೆ ಹೊರಗುತ್ತಿಗೆ ನೇಮಕದ ವಿಷಯ, ಘನತ್ಯಾಜ್ಯ ನಿರ್ವಹಣೆಯ ವಾಹನಗಳಿಗೆ ಹೊರಗುತ್ತಿಗೆಯ ಮೇಲೆ ಚಾಲಕರನ್ನು ನೇಮಿಸಿಕೊಳ್ಳುವ ಕಡತಗಳು ತಮ್ಮ ಕಛೇರಿಯಲ್ಲಿ ಬಾಕಿ ಇವೆ ಎಂದು ಪರಿಸರ ಇಂಜಿನಿಯರ್ ತಿಳಿಸಿದರೆ,  ಯು.ಜಿ.ಡಿ.ಗೆ ಸಂಬಂಧಿಸಿದ ವಿಷಯವನ್ನು ಸದಸ್ಯ ಸಿ.ಎಸ್.ರಮೇಶ್ ಡಿ.ಸಿ.ಯವರ ಗಮನಕ್ಕೆ ತಂದರು,  ಆಶ್ರಯ ಸೈಟ್ಗಳ  ನಿಮರ್ಾಣಕ್ಕೆ ಸಂಬಂಧಿಸಿದ ವಿಷಯವನ್ನು ಸಿ.ಎಂ.ರಂಗಸ್ವಾಮಿ ಪ್ರಸ್ತಾಪಿಸಿದರು,   ಕಾಡೇನಹಳ್ಳಿಯ ಬಳಿ ಇರುವ ಜಮೀನನ್ನು ಕೆ.ಎಸ್.ಆರ್.ಟಿ.ಸಿ. ಡಿಪೋಕ್ಕೆ ಮಂಜೂರು ಮಾಡುವ ವಿಷಯದ ಬಗ್ಗೆ  ಸಿ.ಡಿ.ಚಂದ್ರಶೇಖರ್ ಡಿ.ಸಿ.ಯವರ ಗಮನ ಸೆಳೆದರು, ಅಲ್ಲದೆ ವಗರ್ಾವಣೆಗೊಂಡು ಆರು ತಿಂಗಳಾದರೂ  ಇಂಜಿನಿಯರ್ ಇನ್ನೂ ಚಾಚರ್್ ನೀಡದಿರುವ ಬಗ್ಗೆ ಸಿ.ಪಿ.ಮಹೇಶ್ ಮಾತನಾಡಿದರು    ಈ ಎಲ್ಲಾ ವಿಷಯಗಳನ್ನು ಶಾಂತ ಚಿತ್ತದಿಂದ ಆಲಿಸಿದ ಡಿ.ಸಿ., ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಫೈಲ್ಗಳನ್ನು ತಕ್ಷಣವೇ ಸಿದ್ದ ಮಾಡಿಕೊಂಡಿರುವ ಬಗ್ಗೆ ತಮ್ಮ ಕಛೇರಿಯ ಆಪ್ತ ಶಾಖೆಗೆ ದೂರವಾಣಿಯ ಮೂಲಕ  ತಿಳಿಸಿದರು,  ಇನ್ನೂ ಯಾವುದಾದರೂ ಫೈಲ್ಗಳಿದ್ದರೆ ಇನ್ನೆರಡು ದಿನಗಳೊಂದಿಗೆ ಖುದ್ದು  ಕಛೇರಿಗೆ ಬಂದು ಫೈಲ್ಗಳನ್ನು ಕ್ಲಿಯರ್ ಮಾಡಿಸಿಕೊಳ್ಳುವಂತೆ ಡಿ.ಸಿ.ಸತ್ಯಮೂತರ್ಿ ಸೂಚಿಸಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು, ಪುರಸಭಾ ಅಧ್ಯಕ್ಷೆ ಪುಷ್ಪ ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ ಶಿವಕುಮಾರ್,  ಸದಸ್ಯರುಗಳಾದ ರಾಜಶೇಖರ್,  ಮಹಮದ್ ಖಲಂದರ್, ಮಲ್ಲೇಶ್, ಪ್ರೇಮಾ ದೇವರಾಜು, ರೂಪಾ, ರೇಣುಕಾ ಸತೀಶ್, ಗೀತಾ ರಮೇಶ್, ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ ಶೆಟ್ಟಿ ಸೇರಿದಂತೆ ಪುರಸಭಾ ಸಿಬ್ಬಂದಿ ಸಭೆಯಲ್ಲಿದ್ದರು. 


ಅಪ್ರಪ್ತಾ ಯುವಕರು ಓಡಿಸುತ್ತಿದ್ದ ಬೈಕ್ಗಳು ಪೊಲೀಸರ ವಶಕ್ಕೆ.
ಚಿಕ್ಕನಾಯಕನಹಳ್ಳಿ,ಆ.27 : ಪಟ್ಟಣದಲ್ಲಿ ಅಪ್ರಪ್ತಾ ಯುವಕರು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮೂವತ್ತು ಬೈಕ್ಗಳನ್ನು ಸಿ.ಪಿ.ಐ. ಜಯಕುಮಾರ್ ನೇತೃತ್ವದ ತಂಡ ತಮ್ಮ ವಶಕ್ಕೆ ಪಡೆದುಕೊಂಡಿದೆ.
 ಪೋಲಿಸರು ಬುಧವಾರ ಮುಂಜಾನೆ 6 ಗಂಟೆಯಿಂದಲೇ ತಮ್ಮ ಕಾಯರ್ಾಚರಣೆ ಪ್ರಾರಂಭಿಸಿದ ಪೊಲೀಸರು ಅಪ್ರಾಪ್ತ ಯುವಕರು ಹಾಗೂ  ಪರವಾನಿಗೆ ಇಲ್ಲದೆ  ದ್ವಿಚಕ್ರ ವಾಹನದಲ್ಲಿ ಮನೆಪಾಠಕ್ಕೆ ತೆರಳುವ ವಿದ್ಯಾಥರ್ಿಗಳ ಬೈಕ್ಗಳನ್ನು  ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಪೋಲಿಸರು ಪಟ್ಟಣದ ನೆಹರು ಸರ್ಕಲ್, ಹೊಸ ಬಸ್ ನಿಲ್ದಾಣ, ಮತಿಘಟ್ಟ ಗೇಟ್, ಶೆಟ್ಟಿಕೆರೆ ಗೇಟ್, ಹಾಗಲವಾಡಿ ಗೇಟ್, ವೆಂಕಟರಮಣಸ್ವಾಮಿ ದೇವಸ್ಥಾನ, ಬ್ರಾಹ್ಮಣರ ಬೀದಿ, ವಿದ್ಯಾನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪೋಲಿಸ್ ಸಬ್ಇನ್ಸ್ಪೆಕ್ಟರ್, ಸಿಬ್ಬಂದಿ ಗಸ್ತು ತಿರುಗುವ ಮೂಲಕ ಪರವಾನಿಗೆ ಇಲ್ಲದೆ ಸಂಚರಿಸುತ್ತಿದ್ದ ಮೋಟಾರ್ ಸೈಕಲ್ ಸವಾರರು ಹಾಗೂ ಹದಿನೆಂಟು ವರ್ಷಕ್ಕಿಂತ ಒಳಗಿನ ಚಾಲಕರನ್ನು ಹಿಡಿದು ಅವರಿಂದ ಬೈಕ್ ವಶಪಡಿಸಿಕೊಂಡು ಪ್ರತಿಯೊಬ್ಬ ಅಪ್ರಪ್ತಾ ಬೈಕ್ ಸವಾರನ ಪೋಷಕರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲೆ, ಇನ್ನು ಮುಂದೆ ಪರವಾನಿಗೆ ಪಡೆಯುವವರಿಗೆ ವಾಹನ ಚಲಾಯಿಸದಂತೆ  ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮುಂದೆ ವಾಹನ ಚಾಲಕರು ಇದೇ ರೀತಿ ತಮ್ಮ ಬೈಕ್ಗಳು ರಸ್ತೆಗಿಳಿದರೆ  ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಚಾಲಕರಿಗೆ ತಿಳಿಸಿದ್ದಾರೆ.


ಅಭ್ಯಸಿಸಿದರೆ ಉತ್ತಮ ಫಲಿತಾಂಶ
ಚಿಕ್ಕನಾಯಕನಹಳ್ಳಿ,ಆ.27 : ವಿದ್ಯಾಥರ್ಿಗಳು ತನ್ನ ಕ್ರೀಡೆಗೆ ಸಂಬಂಧ ಪಟ್ಟಂತೆ ಪ್ರತಿ ದಿನ ಅಭ್ಯಾಸ ನಡೆಸಿದರೆ ಗೆಲುವು ಪಡೆಯಬಹುದು  ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟಗಳು ಮುಖ್ಯ ಇದರಿಂದ ಆರೋಗ್ಯದ ಜೊತೆಗೆ ಉತ್ಸಾಹವೂ ಹೆಚ್ಚುತ್ತದೆ, ಹೋಬಳಿ ಮಟ್ಟದಿಂದ ವಿಜೇತರಾಗಿ ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಿದ ಮಕ್ಕಳು ವಿಜೇತರಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಅಲ್ಲೂ ವಿಜೇತರಾಗಿ ತಾಲ್ಲೂಕಿಗೆ ಹಾಗೂ ಶಾಲೆಗೆ ಕೀತರ್ಿ ತರುವಂತೆ ಸಲಹೆ ನೀಡಿದರಲ್ಲದೆ ವಿದ್ಯಾಥರ್ಿಗಳು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಖವಾಗಿ ದೃಢಕಾಯವಾಗುವುದರ ಜೊತೆಯಲ್ಲಿ ಮನಸ್ಸು ಸದೃಢ ಮಾಡಿಕೊಳ್ಳಬಹುದು ಎಂದರು.
ಪುರಸಭಾ ಅಧ್ಯಕ್ಷೆ ಪುಷ್ಪ.ಟಿ.ರಾಮಯ್ಯ ಹಾಗೂ ದೇಶೀಯ ವಿದ್ಯಾಪೀಠ ಪ್ರೌಢಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಪಾರಿವಾಳವನ್ನು ಹಾರಿಸುವ ಮೂಲಕ ತಾಲ್ಲೂಕು ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾಲ್ಲೂಕು ಶಿಕ್ಷಕರ ಸಂಘದ ರಾಜಶೇಖರ್, ನಾಗರಾಜು, ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ದೈಹಿಕ ಶಿಕ್ಷಕರಾದ ಚಿ.ನಾ.ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.


 ಗಣಪತಿಗೆ ಡಿಮ್ಯಾಂಡ್
ಚಿಕ್ಕನಾಯಕನಹಳ್ಳಿ,ಆ.27 : ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ತಯಾರಿಸುವ ಪರಿಸರ ಸ್ನೇಹಿ ಗಣಪತಿ ಹಾಗೂ ಗೌರಮ್ಮನವರ ಪ್ರತಿಮೆಗಳನ್ನು ಪಟ್ಟಣದ ಬಿ.ಹೆಚ್.ರಸ್ತೆಯ ಅಂಗಡಿಗಳ ಮುಂಭಾಗಗಳಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರು ಸಿದ್ದರಾಗಿದ್ದಾರೆ.
ತಾಲ್ಲೂಕಿನ ಕುಪ್ಪೂರು, ಪಾಪನಕೊಣ ಭಾಗಗಳಲ್ಲಿನ ಗಣಪತಿ ಮೂತರ್ಿಯ ಕಲಾವಿದರು ಗಣೇಶ ಚತುಥರ್ಿಗಾಗಿ ಆರು ತಿಂಗಳ ಹಿಂದೆಯೇ ಮನೆಮಂದಿಯೆಲ್ಲಾ ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಮಕ್ಕಳಾಧಿಯಾಗಿ ಗಣಪತಿ ಹಾಗೂ ಗೌರಮ್ಮನವರ ಮೂತರ್ಿಯನ್ನು ತಯಾರಿಸಿ, ಮೂತರ್ಿಗೆ ವಿವಿಧ ರೀತಿಯ ಬಣ್ಣವನ್ನು ಲೇಪಿಸಿ ಮಾರಾಟಕ್ಕೆ ತಂದಿದ್ದಾರೆ.
ಗಣಪತಿಯ ಮೂತರ್ಿಗಳು ಅರ್ಧ ಅಡಿ ಎತ್ತರದಿಂದ ಹಿಡಿದು ನಾಲ್ಕು ಅಡಿಯವರೆಗೆ ಇರುವ ಮೂತರ್ಿಗಳು ಪಟ್ಟಣದಲ್ಲಿ ಮಾರಾಟಕ್ಕೆ ತಂದಿದ್ದು ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗದ ಭಕ್ತರು ಪ್ರತಿಷ್ಠಾಪಿಸುವ ಗಣಪತಿ ಮೂತರ್ಿಗಳನ್ನು ಕಾಯ್ದಿರಿಸಿದ್ದು ಪ್ರತಿಷ್ಠಾಪನಾ ದಿನದಂದು ಟ್ರಾಕ್ಟರ್, ಮೂರು ಚಕ್ರದ ಆಟೋಗಳಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ. ಚಿಕ್ಕ ಗಣಪತಿ ಮೂತರ್ಿಯ ಬೆಲೆ 50ರಿಂದ 100ರೂಗಳಿದ್ದು ಎರಡು ಅಡಿ ಗಣಪತಿ ಮೂತರ್ಿಗಳು 500ರೂ ರಿಂದ ಎರಡು ಸಾವಿರದವರೆಗೆ ಮಾರಾಟವಾಗುತ್ತಿವೆ.
ಗಣಪತಿ ಹಬ್ಬದ ಪ್ರಯುಕ್ತ ಹಣ್ಣಿನ ಹಾಗೂ ಹೂವಿನ ಬೆಲೆ ಗಗನಕ್ಕೆ ಏರಿದ್ದು ಏರಿಕೆಯ ಮಧ್ಯೆಯೂ ಭಕ್ತಾಧಿಗಳು ದುಪ್ಪಟ್ಟು ಹಣ ತೆತ್ತು ವಸ್ತುಗಳನ್ನು ಕೊಂಡೊಯುತ್ತಿರುವುದು ಸವರ್ೆ ಸಾಮಾನ್ಯವಾಗಿದೆ. 

Wednesday, August 20, 2014


ದೇವರಾಜೇಅರಸ್ರವರನ್ನು ಬಡವರು, ಕೂಲಿಕಾಮರ್ಿಕರು ಪೂಜಿಸುತ್ತಿದ್ದಾರೆ
ಚಿಕ್ಕನಾಯಕನಹಳ್ಳಿ,ಆ.20 : ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ರೈತಾಪಿ ಕೆಲಸ ಮಾಡುತ್ತಿದ್ದ ಡಿ.ದೇವರಾಜು ಅರಸ್ರವರು ಜಾರಿಗೆ ತಂದಂತಹ ಯೋಜನೆಗಳಿಂದ ಶ್ರೀಮಂತರು ತೆಗಳಿದರು, ಲಕ್ಷಾಂತರ ಬಡವರು, ಕೂಲಿ ಕಾಮರ್ಿಕರು, ಹಿಂದುಳಿದ ವರ್ಗದವರು ರಾಜ್ಯದಲ್ಲಿ ಬದಲಾವಣೆ ತಂದ ಪರಿವರ್ತನೆಯ ರೂವಾರಿ ಎಂದು ಪೂಜಿಸುತ್ತಿದ್ದಾರೆ ಎಂದು ಮೈಸೂರು ಇತಿಹಾಸ ತಜ್ಞ ಪಿ.ವಿ.ನಂಜರಾಜೇ ಅರಸ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಡಿ.ದೇವರಾಜ ಅರಸುರವರ 99ನೇ ಜನ್ಮದಿನಾಚಾರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಭೂಸ್ವಾದೀನಾ ಕಾಯೆಯಂತಹ ಕಾರ್ಯಕ್ರಮವನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ಅರಸರು ಬಡವರ ಕೆಲಸ ಮಾಡಬೇಕೆಂದು ತೀಮರ್ಾನಿಸಿದರೆ ಅದನ್ನು ಜಾರಿಗೆ ತರುವವರೆಗೂ ಬಿಡುತ್ತಿರಲಿಲ್ಲ, ದೀನ ದಲಿತ ಹಿಂದುಳಿದ ಜನಾಂಗಗಳ ಬಡಬಗ್ಗರಿಗೆ ಆಶಾಕಿರಣವಾಗಿದ್ದರು, ಹಿಂದುಳಿದವರು ದೀರ್ಘ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದ್ದವರನ್ನು ಬಡಿದೆಬ್ಬಿಸಿ ಅವರಲ್ಲಿ ಜಾಗೃತಿ ಮೂಡಿಸಿದರು, ಇಂದಿರಾಗಾಂಧಿ ಜಾರಿಗೆ ತಂದ 20ಅಂಶಗಳ ಕಾರ್ಯಕ್ರಮವನ್ನು ಕನರ್ಾಟಕದಲ್ಲಿ ಅರಸ್ರವರು ಮಾತ್ರ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದರೆ ಹೊರತು ಬೇರೆ ಯಾವ ರಾಜ್ಯದಲ್ಲೂ ಜಾರಿಗೆ ತರಲಿಲ್ಲ ಎಂದರಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಆಡಳಿತಾವಧಿಯ 1918ರಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರಮಿಸಿದ್ದರು, ಹೆಣ್ಣು ಮಕ್ಕಳಿಗೆ ಶಾಲೆ ಹಾಗೂ ಹಿಂದುಳಿದ ವರ್ಗದವರ ಮಕ್ಕಳಿಗೆ ಹಾಸ್ಟಲ್ ಸೌಲಭ್ಯವನ್ನು ಒದಗಿಸಿದರು.
ದೇವರಾಜ ಅರಸ್ರವರ ಆಡಳಿತದ ಅವಧಿಯಲ್ಲಿ ಸಾಮಾಜಿಕ ಅನಿಷ್ಠಗಳಾದ ಮಲಹೊರುವ ಪದ್ದತಿ ರದ್ದು ಮಾಡಿದರು, ಅರಸ್ರು ಮುಖ್ಯಮಂತ್ರಿಯಾಗಿದ್ದರೂ ತಮ್ಮ ಊರಿನಲ್ಲಿ ಜನರ ಜೊತೆಯಲ್ಲಿ ಹರಟೆ ಹೊಡೆಯುವುದರ ಜೊತೆಯಲ್ಲಿ ಕೃಷಿಕರಾಗಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು, ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಾಗ ಭೂ ಮಾಲೀಕರು ನ್ಯಾಯಾಲಯಕ್ಕೆ ಮೊರೆ ಹೋಗುತ್ತಾರೆಂಬ ಕಾರಣದಿಂದ ಭೂ ನ್ಯಾಯ ಮಂಡಳಿಗಳನ್ನು ರಚಿಸಿದ್ದರಿಂದ ಅಲ್ಲೇ ತೀಪರ್ು ನೀಡುತ್ತಿದ್ದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಚಚರ್ಿಸಲಾಗುವುದಲ್ಲದೆ, ಮುಷ್ಕರ ಮಾಡುವುದರಿಂದ ನೀರು ಬರುವುದಿಲ್ಲ, ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚಚರ್ಿಸಿ ನೀರು ತರಬೇಕು,  ತಾಲೂಕಿನ ಎಲ್ಲಾ ಭಾಗಗಳಿಗೆ ನೀರು ತರಲು ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದರು. 
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ದೇಶದಲ್ಲಿ ಕನರ್ಾಟಕ ರಾಜ್ಯವನ್ನು ಗಟ್ಟಿಗೊಳಿಸಿದ ಕೀತರ್ಿ ದೇವರಾಜುಅರಸುರವರಿಗೆ ಸಲ್ಲುತ್ತದೆ, ಹಿಂದುಳಿದವರ ಪರವಾಗಿ ದುಡಿದ ದೇವರಾಜು ಅರಸುರವರು ಜೀತಪದ್ದತಿ, ಜಾತಿಪದ್ದತಿಯನ್ನು ಹೋಗಲಾಡಿಸಲು ಶ್ರಮಿಸಿದವರು, ಶಿಕ್ಷಣದಿಂದಲೇ ಬಡವರ ಏಳಿಗೆಯೆಂದು ತಿಳಿದು ಅನೇಕ ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ನಾವು ಮಾಡುವ ಜಯಂತಿಗಳು ಜಾತಿಗೆ ಸೀಮಿತವಾಗದೆ ಅವರು ಬಿಟ್ಟುಹೋದ ಆದರ್ಶಗಳನ್ನು ಅನುಸರಿಸುವಂತಾಗಬೇಕು ಎಂದರು.
ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಪುಷ್ಟ.ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ, ಪುರಸಭಾ ಸದಸ್ಯರಾದ ಮಲ್ಲೇಶ್, ಇಂದಿರಾ ಪ್ರಕಾಶ್, ರೇಣುಕಮ್ಮ, ರಂಗಸ್ವಾಮಯ್ಯ, ಇ.ಓ.ಕೃಷ್ಣಮೂತರ್ಿ, ಜಿಲ್ಲಾ ಅರಸು ಸಂಘದ ಅಧ್ಯಕ್ಷ ಶ್ರೀನಿವಾಸರಾಜ ಅರಸು, ತಾಲ್ಲೂಕು ಅಧ್ಯಕ್ಷ ನಾಗರಾಜ್ ಅರಸು, ಗೋಪಾಲರಾಜ್ಅರಸ್, ವಿಜಯರಾಜ್ಅರಸ್, ಉಪತಹಶೀಲ್ದಾರ್ ದೊಡ್ಡಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜಯ್ಯನ ಪಾಳ್ಯದ ನಿವೃತ್ತ ಪ್ರಾಧ್ಯಾಪಕ ಎಸ್.ಆರ್.ಚಂದ್ರರಾಜೇಅರಸ್, ಮಹಮದ್ಗೌಸ್(ಬಾಬುಬೋರ್ವೆಲ್), ವಿದ್ಯಾಥರ್ಿನಿ ಲೇಖನರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ನಿರೂಪಿಸಿದರು. ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿದರು. ಸಮಾರಂಭದಲ್ಲಿ ಶಾಲಾ ವಿದ್ಯಾಥರ್ಿಗಳಿಗೆ ನೋಟ್ಬುಕ್ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಮೊರಾಜರ್ಿ ಶಾಲಾ ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು.
ತಾಲ್ಲೂಕು ಕಛೇರಿಯಿಂದ ಡಿ.ದೇವರಾಜು ಅರಸ್ರವರ ಭಾವಚಿತ್ರ ಬಿ.ಹೆಚ್.ರಸ್ತೆ, ನೆಹರು ಸರ್ಕಲ್, ಹೊಸ ಬಸ್ನಿಲ್ದಾಣದ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. ವೀರಗಾಸೆ, ಡೊಳ್ಳುಕುಣಿತ, ಮುಂತಾದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಬಾಕ್ಸ್-1
ಪಾರಂಪರಿಕ ಐತಿಹಾಸಿಕ ಸ್ಥಳಗಳನ್ನು ಉಳಿಸುವ ದೃಷ್ಠಿಯಿಂದ ಪಟ್ಟಣದಲ್ಲಿನ ತೀ.ನಂ.ಶ್ರೀ ಗ್ರಂಥಾಲಯದ ಹಿಂಭಾಗದಲ್ಲಿರುವ ಮೈಸೂರು ಒಡೆಯರ್ ವಂಶಸ್ಥರಾದ 13ನೇ ದೊಡ್ಡ ದೇವರಾಜ ಒಡೆಯರ್ರವರ ಸಮಾಧಿಯಿದ್ದು ಇದನ್ನು ಅರಸು ಸಂಘದವರಿಗೆ ವಹಿಸಿ ಜೀಣರ್ೋದ್ದಾರಕ್ಕೆ ಸಹಾಯ ಮಾಡಬೇಕೆಂದು ಶಾಸಕ ಸಿ.ಬಿ.ಸುರೇಶ್ಬಾಬುರವರಲ್ಲಿ ಮನವಿ.
ನಂಜರಾಜೇಅರಸ್, ಮೈಸೂರು ಇತಿಹಾಸ ತಜ್ಞ
ಬಾಕ್ಸ್-2
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಅರಸು ಭವನ ನಿಮರ್ಾಣಕ್ಕಾಗಿ ಸಿ.ಎಂ.ಸಿದ್ದರಾಮಯ್ಯನವರು ಒಂದು ಕೋಟಿ ರೂ ಬಿಡುಗಡೆ ಮಾಡಲು ಒಪ್ಪಿದ್ದಾರೆ,  ಭವನ ನಿಮರ್ಾಣಕ್ಕೆ ಶೀಘ್ರ ಸ್ಥಳ ಗುತರ್ಿಸಲಾಗುವುದು.
ಾಸಕ ಸಿ.ಬಿ.ಸುರೇಶ್ಬಾಬು, ಶಾಸಕ

ಅರಸು ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪಧರ್ೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ.

ಚಿಕ್ಕನಾಯಕನಹಳ್ಳಿ : ಡಿ.ದೇವರಾಜ್ಅರಸ್ರವರ 99ನೇ ಜನ್ಮದಿನಾಚಾರಣೆ ಅಂಗವಾಗಿ ತಾಲ್ಲೂಕಿನ ವಿದ್ಯಾಥರ್ಿ ನಿಲಯಗಳಲ್ಲಿ ಮಕ್ಕಳಿಗೆ ನಡೆದ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪಧರ್ೆಯಲ್ಲಿ ಹುಳಿಯಾರು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯದ ಎನ್.ಆರ್.ಯುವರಾಜ, ತಿಮ್ಮನಹಳ್ಳಿಯ ಎಸ್.ಎನ್.ರಾಜೇಶ್, ಚಚರ್ಾಸ್ಪದರ್ೆಯಲ್ಲಿ ಹೊಯ್ಸಳಕಟ್ಟೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯದ ಕೆ.ಜೆ.ಶ್ರೀಧರ ಹಾಗೂ ತಿಮ್ಮನಹಳ್ಳಿ ವಿದ್ಯಾಥರ್ಿ ನಿಲಯದ ಎನ್.ಅಜಯ್ಕುಮಾರ್, ಭಾವಗೀತೆ/ಜಾನಪದ ಗೀತೆ ಸ್ಪಧರ್ೆಯಲ್ಲಿ ಹುಳಿಯಾರಿನ ಮೆಟ್ರಿಕ್ ಪೂರ್ವಬಾಲಕರ ವಿದ್ಯಾಥರ್ಿ ನಿಲಯದ ಎನ್.ಜಿ.ಬಸವರಾಜು, ಚಿಕ್ಕನಾಯಕನಹಳ್ಳಿಯ ಎಸ್.ಎನ್.ಮುರಳಿ, ಪ್ರಬಂಧ ಸ್ಪದರ್ೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯದ ಕೆ.ವಿ.ಅನಿತ ಹಾಗೂ ಬಿ.ಆರ್.ಭವ್ಯ, ಚಚರ್ಾ ಸ್ಪದರ್ೆಯಲ್ಲಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯದ ಆರ್.ಎಂ.ಅಮೃತ, ಭಾವಗೀತೆ, ಜಾನಪದ ಗೀತೆ ಸ್ಪದರ್ೆಯಲ್ಲಿ ಪಟ್ಟಣದ ಮೆಟ್ರಿಕ್ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯದ ಆರ್.ಆರ್.ಸೌಮ್ಯ ಹಾಗೂ ಎಂ.ಜಿ.ತುಂಗ, ಪ್ರಬಂಧ ಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದ ಎಸ್.ಜೆ.ಯಶೋಧ, ಆರ್.ಎನ್.ಸಹನ, ಚಚರ್ಾಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದ ಸ್ವಾತಿ ಹಾಗೂ ಮಮತ, ಭಾವಗೀತೆ ಹಾಗೂ ಜಾನಪದ ಗೀತೆ ಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾಥರ್ಿ ನಿಲಯದ ಜೆ.ಕೆ.ಕುಸುಮ ಹಾಗೂ ವೈ.ಜ್ಯೋತಿ, ಪ್ರಬಂಧ ಸ್ಪಧರ್ೆಯಲ್ಲಿ ಮೊರಾಜರ್ಿ ದೇಸಾಯಿ ಶಾಲೆಯ ಎಂ.ಆರ್.ಧೃವಿಕ ಹಾಗೂ ಪ್ರೀತಿ ಚಿದಾನಂದ, ಚಚರ್ಾಸ್ಪಧರ್ೆಯಲ್ಲಿ ಮೊರಾಜರ್ಿ ಶಾಲೆಯ ಪ್ರೀತಿಚಿದಾನಂದ, ಹಾಗೂ ಎಂ.ಆರ್.ಧೃವಿಕ ಭಾವಗೀತೆ ಸ್ಪಧರ್ೆಯಲ್ಲಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಆರ್.ಕಾವ್ಯ ಹಾಗೂ ಆರ್.ಕುಸುಮ ವಿಜೇತರಾಗಿದ್ದಾರೆ.

Thursday, August 14, 2014


 ಹೊಯ್ಸಳರ ಕಾಲದ ಶಿಲ್ಪಕಲೆಗಳ ಸೌಂದರ್ಯ ಶೆಟ್ಟಿಕೆರೆಯಲ್ಲಿನ ಯೋಗಮಾಧವನಂದಸ್ವಾಮಿ ದೇವಾಲಯದಲ್ಲಿ
  ]

 ಚಿಕ್ಕನಾಯಕನಹಳ್ಳಿ : ಹೊಯ್ಸಳರ ಕಾಲದ ಶಿಲ್ಪಕಲೆಗಳ ಸೌಂದರ್ಯವನ್ನು ವೀಕ್ಷಿಸಲು ಬೇಲೂರು, ಹಳೇಬೀಡು ಪ್ರವಾಸ ತಾಣಗಳಿಗೆ ತೆರಳಿದಾಗ ಸಿಗುವ ಶಿಲ್ಪಕಲೆಗಳ ಸೊಬಗು ತಾಲ್ಲೂಕಿನ ಶೆಟ್ಟಿಕೆರೆಯಲ್ಲಿನ ಯೋಗಮಾಧವನಂದಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದಾಗಲೂ ಶಿಲ್ಪಕಲೆಗಳ ಕಲಾತ್ಮಕತೆ ಪ್ರವಾಸಿಗರಿಗೆ ದೊರೆಯುತ್ತದೆ.
    ಶೆಟ್ಟಿಕೆರೆಯ ಈ ದೇವಾಲಯವು     1262ನೇ ಇಸವಿಯಲ್ಲಿ ಹೊಯ್ಸಳರ ದೊರೆಯಾದ ಮೂರನೇ ನರಸಿಂಹ ಬಲ್ಲಾಳನ ಮಂತ್ರಿಯಾದ ಗೋಪಾಲ ದಂಡನಾಯಕ ಈ ದೇವಾಲಯ ನಿಮರ್ಿಸಿದ್ದನೆಂದು ತಿಳಿದು ಬಂದಿದ್ದು, ಆಗಿನ ಶ್ರೀಭರತ ಪ್ರಕಾಶ ಪುರಿ ಎಂಬ (ಈಗಿನ ಶೆಟ್ಟಿಕೆರೆ) ಊರಿನ ಅಗ್ರಹಾರದಲ್ಲಿ ದೇವಾಲಯ ನಿಮರ್ಿತವಾಗಿತ್ತು.
    ಈ ಯೋಗಮಾಧವ ದೇವಾಲಯ ಕಳೆದ ಕೆಲ ದಶಕದ ಹಿಂದೆ ಶಿಥಿಲಗೊಂಡಿತ್ತು, ದೇವಸ್ಥಾನದ ಜೀಣೋಧ್ದಾರಕ್ಕಾಗಿ ಹದಿಮೂರನೇ ಹಣಕಾಸಿನ ಯೋಜನೆ ಅಡಿಯಲ್ಲಿ ಒಂದು ಕೋಟಿ ಮೂವತ್ತೆರಡು ಲಕ್ಷರೂಗಳ ವೆಚ್ಚ ಬಿಡುಗಡೆಯಾಗಿ ದೇವಾಲಯದ ಜೀಣೋದ್ದಾರ ಕಾಮಗಾರಿ ಪೂರ್ಣಗೊಂಡು ಇದೇ ತಿಂಗಳ ಆಗಸ್ಟ್ 14 ಮತ್ತು 15ರಂದು ಪುನರ್ ನಿಮರ್ಾಣ ಪ್ರಯುಕ್ತ ಪುನರ್ ಪ್ರತಿಷ್ಠಾಪನೆ ನಡೆಯಲಿದೆ.
    ಶಿಥಿಲಗೊಂಡಿದ್ದ ಸಮಯದಲ್ಲಿ ದೇವಾಲಯದ ಒಳಭಾಗದಲ್ಲಿ ಗಾಳಿ-ಬೆಳಕು ಇಲ್ಲದೆ ಪೂರ್ಣ ಕತ್ತಲೆಯಿಂದ ಕೂಡಿತ್ತು, ಜೀಣರ್ೋದ್ದಾರವಾದ ನಂತರ ದೇವಸ್ಥಾನಕ್ಕೆ ವಿದ್ಯುದೀಪಾಲಂಕರವನ್ನು ಮಾಡಿಸಿದ್ದಾರೆ, ಒಳ ಹಾಗೂ ಹೊರಭಾಗದಲ್ಲಿ ಸುಂದರವಾಗಿ ಕೆತ್ತನೆಯನ್ನು ಪೂರ್ಣಗೊಳಿಸಿದ್ದಾರೆ.


        ಯೋಗಮಾಧವ ದೇವಾಲಯದ ಹಿನ್ನಲೆ ಮತ್ತು ವಿಶೇಷ :
    ಶೆಟ್ಟಿಕೆರೆ ಊರಿನ ಪಡುವಣಕ್ಕೆ ಹೊಯ್ಸಳರ ಭುಜಬಲ ವೀರಸಿಂಹನ ಕಾಲದಲ್ಲಿ ಪೂವರ್ಾಭಿಮುಖವಾಗಿ ನಿಮರ್ಿಸಲಾಗಿರುವ ದೇವಾಲಯವು ವಾಸ್ತು ವೈಖರಿ ಶಿಲ್ಪಾಲಂಕರಾದಿಂದ ಮತ್ತು ಪ್ರಧಾನವಾಗಿ ನಕ್ಷತ್ರ ಹಾಗೂ ಕಮಲ ಸಮ್ಮಿಶ್ರ ವಿನ್ಯಾಸದಲ್ಲಿ ರೂಪುಗೊಂಡಿದೆ, ದೇವಾಲಯದ ಹೊರಗಿನ ಪ್ರಕಾರ ಮಹಾದ್ವಾರ ಮಂಟಪ ಮತ್ತು ಹೊರವಲಯ ದ್ವಾರದ ಎದುರು ಗರುಡ ಸ್ತಂಭ ವಿಜಯನಗರ ಪಾಳೇಗಾರನ ಕಾಲದಲ್ಲಿನ ಡ್ರಾವಿಡ ಶೈಲಿಯಲ್ಲಿ ನಿಮರ್ಿತವಾಗಿದೆ.  
    ಮಹಾದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿದರೆ ಮೊದಲು ಸಿಗುವುದು ಹೊರ ನವರಂಗದ ಪೂರ್ವ ದ್ವಾರದ ನೈರುತ್ಯ ಮೂಲೆಯಲ್ಲಿ ಒಂದು ಕೋಣೆಯನ್ನು ಜೋಡಿಸಿ ಅದರಲ್ಲಿ ದುಗರ್ಾದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.
    ದಕ್ಷಿಣ ಗರ್ಭಗುಡಿಯಲ್ಲಿ ಕೊಳಲು ಗೋಪಾಲ, ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನಾರಾಯನ ದಂಪತಿಗಳ ಸುಂದರ ವಿಗ್ರಹಗಳು ಹಾಗೂ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.
 ದೇವಸ್ಥಾನದ ಪ್ರಧಾನವಾದ ಮೂಲದೇವರು ಯೋಗಮಾಧವನ ಗರ್ಭಗುಡಿಯು ಬಾಗಿಲು ವೈಷ್ಣವ ದ್ವಾರಪಾಲಕರಿಂದ ಅಲಂಕೃಗೊಂಡು ಗರ್ಭಗುಡಿಯಲ್ಲಿನ ಯೋಗ ಮಾಧವನ ಶಿಲಾವಿಗ್ರಹವನ್ನು ಗರಡ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಯೋಗನಾಥ ಅತ್ಯಂತ ಶಾಂತಿ ಹಾಗೂ ಅಪರೂಪದ ಶಿಲಾ ಮೂತರ್ಿಯಾಗಿದೆ.
    ಯೋಗಮಾಧವ ಚತುಭರ್ುಜ ಹೊಂದಿದ್ದು ಪದ್ಮಾಸನ ಅಥವಾ ಬ್ರ್ರಹ್ಮಾಸನದಲ್ಲಿ ಕುಳಿತಿದ್ದಾನೆ, ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದು, ಮುಂದಿನ ಕೈಯಲ್ಲಿ ಬಲಹಸ್ತದ ಮೇಲೆ ಎಡಹಸ್ತವನ್ನಿಟ್ಟು ಯೋಗಮುದ್ರೆಯಿಂದ ಸೂಚಿತವಾಗಿದೆ. ಮಾಧವ ಧ್ಯಾನ ಮುದ್ರೆಯಲ್ಲೂ ಆಯುಧ ದಾರಿಯಾಗಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ, ಯೋಗಶಾಸ್ತ್ರ ತಿಳಿಸುವಂತೆ ಪ್ರತಿಬಿಂಬಿಸುವ ನೇತ್ರಗಳು, ನಾಸಿಕಾಗ್ರಹದಲ್ಲಿ ತೋರದೆ ಪೂರ್ಣತೆರೆದು ಎದುರು ನೋಟದಲ್ಲಿ ದಿಟ್ಟಭಾವವನ್ನು ಸೂಚಿಸುವಂತಿದೆ.
    ಅಗ್ರಹಾರದ ಮೂವತ್ತೇಳು ಪ್ರಕಾರವನ್ನು ಒಡಂಬಡಿಸಿ ದೇವಸ್ಥಾನವನ್ನು ನಡೆಸಲೆಂದು ಸಾಕಷ್ಟು ವ್ಯವಸ್ಥೆ ಮಾಡಿದನೆಂಬ ಇತಿಹಾಸ ಪುಟದಲ್ಲಿ ಉಲ್ಲೇಖಿಸಿದ್ದಾರೆ, ದೇವಸ್ಥಾನದ ನಿಮರ್ಾಣದ ಶಿಲ್ಪಕಲೆಗಳ ಕೆತ್ತನೆಗೆ ಬಳಪದ ಕಲ್ಲುಗಳನ್ನು ಬಳಸಲಾಗಿದೆ.

ಶೈಲಿ : ದೇವಾಲಯವು ಡ್ರಾವಿಡ ವೇಸರ ಶೈಲಿಯನ್ನು ಒಳಗೊಂಡಿದ್ದು ನಕ್ಷತ್ರಾಕಾರದ ಜಗತಿಯನ್ನು ಒಳಗೊಂಡಿದೆ, ದೇವಾಲಯವು ಮುಖ್ಯವಾಗಿ ನಾಲ್ಕು ಭಾಗಗಳನ್ನು ಒಳಗೊಂಡಿದೆ, ಮೂಲ ದೇವರ ಮೂತರ್ಿಯಿರುವ ಜಾಗ ಗರ್ಭಗೃಹ, ನಂತರದ ಸ್ಥಳ ಶುಕನಾಸಿ ಅಥವಾ ಅಂತರಾಳ, ಮೂರನೆಯದು ನವರಂಗ ಅಥವಾ ಸಭಾಮಂಟಪ, ನಾಲ್ಕನೆಯದು ವಾಹನ ಮಂಟಪ, ಗರ್ಭಗುಡಿಯಲ್ಲಿ ಮೂಲವಿಗ್ರಹ, ಅಂತರಾಳ ಅಥವಾ ಶುಕನಾಸಿಯು ವಿಶೇಷ ಪ್ರಾರ್ಥನೆಗೆ ರಾಜರಿಗೆ, ದೇವಾಲಯಕ್ಕೆ ಸಂಬಂಧಪಟ್ಟ ಧಾಮರ್ಿಕ ಅಧಿಕಾರಿಗಳು ಪ್ರಾರ್ಥನೆ ಸಲ್ಲಿಸಲು ಮತ್ತು ಉತ್ಸವ ದೇವರುಗಳನ್ನು ಇಟ್ಟು ಪೂಜಿಸುವ ಸ್ಥಳ, ಸಭಾಮಂಟಪ ಅಥವಾ ನವರಂಗವು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುತ್ತದೆ, ನವರಂಗ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು, ವಿಶೇಷ ಸಭೆಗಳನ್ನು ನಡಸುವುದಕ್ಕಾಗಿ ರಚನೆಯಾಗಿದೆ, ವಾಹನ ಮಂಟಪದಲ್ಲಿ ಸಂಬಂಧಿಸಿದ ದೇವರ ವಾಹನವನ್ನು ಕೆತ್ತಲಾಗಿದೆ.
    ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ :  14ರ ಗುರುವಾರ ಗಂಗಾಪೂಜೆ, ಪುಣ್ಯಾಹ, ದೇವನಾಂದಿ, ಕಳಶ ಸ್ಥಾಪನೆ, ಗಣಪತಿ, ನವಗ್ರಹ, ಮೃತ್ಯುಂಜಯ, ಲಕ್ಷ್ಮಿನಾರಾಯಣ ಹೋಮಗಳು ನಂತರ ಮಂಗಳಾರತಿ ವಾಸ್ತುಪೂಜೆ, ರಾಮೋಘ್ಮ ಹೋಮ, ಬಲಿ ಪ್ರಧಾನ, ಕದಳಿ ಛೇದನ, ಸೂತ್ರ ಬಂಧನ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಾಗಲಿದೆ. ಪ್ರಾತಃಕಾಲ ನೇತ್ರೋನ್ಮಿಲನ, ಕಳಾಹೋಮ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆಯಲಿದೆ. ಸಂಜೆ 4ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ, ಶ್ರೀ ಕೆಂಪಮ್ಮದೇವರು, ಶ್ರೀ ಧರ್ಮರಾಯಸ್ವಾಮಿ ದೇವರುಗಳ ಆಗಮನವಾಗಲಿದೆ.
    15ರ ಮಧ್ಯಾಹ್ನ ಶ್ರೀ ಯೋಗಮಾಧ್ವಸ್ವಾಮಿ ದೇವಾಲಯದಲ್ಲಿ ನೆಲೆಸಿರುವ ದೇವರುಗಳ ಪುನರ್ ಪ್ರತಿಷ್ಠಾಪನೆ, 12ಕ್ಕೆ ಪೂಣರ್ಾಹುತಿ ನಂತರ ಕಳಶ ಸ್ಥಾಪನೆ, ಕುಂಭಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಕಾಲಭೈರವಸ್ವಾಮಿ, ಶ್ರೀ ಕೆಂಪಮ್ಮದೇವರು ಮತ್ತು ಶ್ರೀ ಧರ್ಮರಾಯಸ್ವಾಮಿ ದೇವರುಗಳ ಉತ್ಸವವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮದ್ದಿನ ಸೇವೆ, ಕಪರ್ೂರದ ಸೇವೆಗಳೊಂದಿಗೆ ನಡೆಯಲಿದೆ.


ತಪ್ಪಿಗೆ ತಕ್ಕ ಶಾಸ್ತಿ ಎಂಬಂತೆ, ಅನ್ನ ನೀರು ಬಿಟ್ಟು ಬೀದಿ ಪಾಲಾಗಿರುವ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೆದಾರ್.
ಚಿಕ್ಕನಾಯಕನಹಳ್ಳಿ,: ಕಟ್ಟಿಕೊಂಡ ಹೆಂಡ್ತೀರನ್ನು ಬಿಟ್ಟು ಇಟ್ಕೊಂಡೋಳ ಹಿಂದೆ ಬಿದ್ದ ಪರಿಣಾಮ  ಇದ್ದಬದ್ದ ಆಸ್ತಿ ಅಡವುಗಳನ್ನೇಲ್ಲಾ ದೋಚಿಕೊಂಡು ಕೊನೆಗೆ ಲಕ್ವ ಹೊಡೆದಿರುವ ವ್ಯಕ್ತಿಯನ್ನು ಬಸ್ಸ್ಟಾಂಡ್ನಲ್ಲಿ ಎಸೆದು ಹೋಗಿರುವ ಕರುಣಾಜನಕ ಸ್ಥಿತಿ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೆದಾರ್ ಒಬ್ಬರಿಗೆ ಒದಗಿಬಂದಿದೆ.
    ಈತನ ಸ್ಥಿತಿ ನೋಡಿದರೆ ಶತ್ರುವಿಗೂ ಬೇಡ ಎನ್ನಿಸುತ್ತದೆ, ಪಟ್ಟಣದ ಖಾಸಗಿ ಬಸ್ಸ್ಟಾಂಡ್ನಲ್ಲಿ ಕಳೆದ ಹತ್ತು ದಿನಗಳಿಂದ ಅನ್ನ ನೀರು ಇಲ್ಲದೆ ಜೀವಂತ ಶವದಂತೆ ಬಿದ್ದಿರುವ ಲಕ್ಕಣ್ಣ ಎಂಬಾತ ಒಂದು ಕಾಲಕ್ಕೆ ಚಿ.ನಾ.ಹಳ್ಳಿ, ಗುಬ್ಬಿ, ತುರುವೇಕೆರೆಯ ನ್ಯಾಯಾಲಯಗಳಲ್ಲಿ ಶಿರಸ್ತೆದಾರ್ ಆಗಿ ಕರ್ತವ್ಯ ನಿರ್ವಹಿಸಿದವರು. ಆದರೆ ಇಂದು ಬೀದಿ ಬಿಕಾರಿಯಂತಾಗಿದ್ದಾರೆ.
    ಹಾಗೆ ನೋಡಿದರೆ ಇವರು ದವರ್ೇಸಿಯೂ ಅಲ್ಲ, ಬೇವಸರ್ಿಯೂ ಅಲ್ಲ ಆದರೆ ಸ್ವಯಂಕೃತ ಅಪರಾಧ, ಎಲ್ಲಾ ಇದ್ದು ಏನೂ ಇಲ್ಲದೆ ಸಾಯುವ ಕಾಲದಲ್ಲಿ ತನ್ನವರೆನ್ನಲೂ ಯಾರೂ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಇವರು ಈ ಸ್ಥಿತಿಗೆ ಕಾರಣ ತಾನೇ ಮಾಡಿಕೊಂಡ ಯಡವಟ್ಟುಗಳು,  ಹಾಗಾಗಿ ತಾನು ಮಾಡಿರುವ ತಪ್ಪಿಗೆ ತಕ್ಕ ಶಾಸ್ತಿಯಾಗಿದೆ ಎಂದು,  ಅನ್ನ ನೀರು ಸೇವೆಸದೆ ಸಾಯಬೇಕು ಎನ್ನುವ ಹಠಕ್ಕೆ ಬಿದ್ದವರಂತೆ, ಬಸ್ಸ್ಟಾಂಡ್ನಲ್ಲಿ ಕಳೆದ ಹತ್ತು ದಿನಗಳಿಂದ ಮಲಗಿದ್ದ ಸ್ಥಳದಲ್ಲೇ ಮಲಗಿದ್ದಾರೆ, ಆ ಸ್ಥಳವನ್ನು ಬಿಟ್ಟು ಕಿಂಚಿತ್ತೂ ಕದಲಿಲ್ಲ. ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ, ಅವರ ಆ ಸ್ಥಿತಿಯನ್ನು ನೋಡಿ, ಜನ ತಿನ್ನಲು ಏನೂ ಕೊಟ್ಟರು ಸ್ವೀಕರಿಸೋದಿಲ್ಲ. ಇಡೀ ಹತ್ತು ದಿನಗಳಲ್ಲಿ ಒಮ್ಮೆ ಮಾತ್ರ ನೀರು ಎಂದು ಕನವರಿಸಿರುವುದು ಬಿಟ್ಟು  ಬೇರೇನನ್ನೂ ಮಾತನಾಡಿಲ್ಲ. ಇಂತಹ ಲಕ್ಕಣ್ಣ ನಾಲ್ಕು ಮನೆಯ ಒಡೆಯ, ಐದಾರು ಎಕರೆ ಜಮೀನು ಇದ್ದವ, ತಿಂಗಳಿಗೆ ಇಪ್ಪತ್ತು ಸಾವಿರದ ವರೆಗೂ ಪೆನ್ಷ್ನ್ ಪಡೆಯುವ ಈತ ಈಗ ಬೀದಿ ಪಾಲು.
ಈ ಸ್ಥತಿಗೆ ಬರಲು ಕಾರಣ: ಈತನಿಗೆ ಇಬ್ಬರು ಪತ್ನಿಯರಿದ್ದರು, ಅದರಲ್ಲಿ ಒಬಾಕೆ ವೃತ್ತಿಯಲ್ಲಿ ನಸರ್್ ಆಗಿದ್ದವರು, ನಸರ್್ನ ತಂಗಿಯನ್ನೇ ಎರಡನೇ ಮದುವೆಯಾಗಿದ್ದರು, ಈ ಸಂಸಾರಕ್ಕೆ ಒಬ್ಬ ಮಗನೂ ಇದ್ದಾನೆ, ಆತ ಗೋವಾದಲ್ಲಿ ಸಾಫ್ಟ್ವೇರ್ ಇಂಜಿನಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ, ಆದರೆ ಇವರ ಸಂಬಂಧವನ್ನು ದಶಕಗಳ ಹಿಂದಯೇ ಕಡಿದುಕೊಂಡಿರುವ ಈತ,  ಅವರತ್ತ ಕಣ್ಣೇತ್ತೂ ನೋಡಲಿಲ್ಲ. ಕುಣಿಗಲ್ ಕಡೆಯ ಮಹಿಳೆಯೊಂದಿಗೆ ಚಿ.ನಾ.ಹಳ್ಳಿಯಲ್ಲಿ ವಾಸವಿದ್ದ, ಆಕೆ ಸಾವನ್ನಪ್ಪಿದ ನಂತರ ಮತ್ತೊಬ್ಬಳೊಂದಿಗೆ ಸಂಬಂಧವಿಟ್ಟುಕೊಂಡ. ಈಕೆ ಇವರ ಆಸ್ತಿ ಅಡವುಗಳನ್ನೇಲ್ಲಾ ತನ್ನ ಹೆಸರಿಗೆ ಬರಸಿಕೊಂಡು ಬರುತ್ತಿದ್ದ ಪೆನ್ಷ್ನ್ ಹಣವನ್ನು ತಾನೇ ಪಡೆಯುತ್ತಿರುವ ಆ ಮಹಿಳೆ, ಲಕ್ಕಣ್ಣನಿಗೆ ಲಕ್ವ ಹೊಡೆದ(ಸ್ಟ್ರೋಕ್) ದಿನ ದಿಂದ ಆತನನ್ನು ಬಸ್ ಸ್ಟಾಂಡ್ನಲ್ಲಿ ಬಿಟ್ಟು ಹೋಗಿದ್ದಾರೆ.
    ಕಳೆದ ಹತ್ತು ದಿನಗಳಿಂದ ಅಲ್ಲೇ ಮಲಗಿರುವ ಲಕ್ಕಣ್ಣ ತನ್ನಿಂದ ಅನುಕೂಲ ಪಡೆದವರಿಗೇ ನಾನು ಬೇಡವಾಗಿರುವಾಗ,  ನಾನು ಇದ್ದೇನು ಪ್ರಯೋಜನವೆನ್ನುವಂತೆ ಅನ್ನ ನೀರು ಬಿಟ್ಟಿದ್ದಾರೆ,  ಅಲ್ಲಿರುವ ಅಂಗಡಿಯವರು ಏನಾದರೂ ಆಹಾರ ಕೊಟ್ಟರೂ  ತಿನ್ನುವುದಿಲ್ಲ. ಮಲಗಿದ್ದ ಸ್ಥಳದಿಂದ ಕದಲದ ಈತನ ಸುತ್ತಾ ನೋಣಗಳು ಜುಯ್ಯೋ ಎನ್ನುತ್ತವೆ, ಗಬ್ಬು ವಾಸನೆ ಬರುತ್ತಿದೆ, ಈತನ ಈ ಸ್ಥಿತಿಯನ್ನು ಸಂಸಾರ ಮರೆತವರು,  ಅನೈತಿಕ ಸಂಬಂಧಗಳಿಗೆ ಹಲ್ಲುಗಿಂಜುವವರು ನೋಡಿದರೆ ಕ್ಷಣ ಕಾಲ ಯೋಚಿಸುವಂತೆ ಮಾಡಲೂ ಬಹುದು, ಬುದ್ದಿಯೂ ಬರಬಹುದು...!
                      

ಕೆಪಿಎಸ್ಸಿಯ ಪರೀಕ್ಷೆಯ ನಿಧರ್ಾರದಿಂದ ಪ್ರತಿಭಾನ್ವಿತ ಹಾಗೂ ಬಡವಿದ್ಯಾಥರ್ಿಗಳಿಗೆ ಅನುಕೂಲ
ಚಿಕ್ಕನಾಯಕನಹಳ್ಳಿ,ಆ.12 ; ಕೆಪಿಎಸ್ಸಿ ಪರೀಕ್ಷೆಯಲ್ಲಿ ಆದಂತಹ ಭ್ರಷ್ಠಾಚಾರವು ಸಿಐಡಿ ವರದಿಯಿಂದ ಬಹಿರಂಗವಾಗಿದ್ದು ಸಿ.ಎಂ.ಸಿದ್ದರಾಮಯ್ಯನವರು ಸಚಿವ ಸಂಪುಟದ ಒತ್ತಡವಿದ್ದರೂ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಮತ್ತೊಮ್ಮೆ ಪರೀಕ್ಷೆ ನಡೆಸಲು ತೀಮರ್ಾನಿಸಿರುವುದು ಪ್ರತಿಭಾನ್ವಿತ ಹಾಗೂ ಬಡ ವಿದ್ಯಾಥರ್ಿಗಳಿಗೆ ಸಹಾಯವಾಗಲಿದೆ ಎಂದು ರಾಜ್ಯ ಅಹಿಂದ ಸಂಚಾಲಕ ಸಿ.ಎಲ್.ರವಿಕುಮಾರ್ ಹೇಳಿದರು.
    ಪಟ್ಟಣದ ರೇವಣಪ್ಪನ ಮಠದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 67ನೇ ಹುಟ್ಟುಹಬ್ಬದ ಪ್ರಯುಕ್ತ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣು ಹಾಗೂ ಶಾಲಾ ವಿದ್ಯಾಥರ್ಿಗಳಿಗೆ ನೋಟ್ಬುಕ್, ಸಮವಸ್ತ್ರ ವಿತರಿಸಿ ಮಾತನಾಡಿದರು.
    ಕನರ್ಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿದ ನೇಮಕಾತಿಯ ಬಗ್ಗೆ ಸಚಿವ ಸಂಪುಟದಲ್ಲಿ ನಾಲ್ಕೈದು ಬಾರಿ ಚಚರ್ೆಯಾಯಿತು, ನಂತರ ಈ ವಿಷಯದ ಬಗ್ಗೆ ಸಿಐಡಿ ನೀಡಿದ ವರದಿಯನ್ನು ಆಧಾರವಾಗಿಟ್ಟುಕೊಂಡು  ಮುಖ್ಯಮಂತ್ರಿಗಳು ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಲು ಕೆಪಿಎಸ್ಸಿ ನೇಮಕಾತಿ ಪಟ್ಟಿಯನ್ನು ಸಚಿವ ಸಂಪುಟ ರದ್ದುಗೊಳಿಸಿರುವುದು ಉತ್ತಮ ನಿಧರ್ಾರ ಎಂದರು.
    ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಗುರುಸಿದ್ದಯ್ಯ ಮಾತನಾಡಿ ಸಿದ್ದರಾಮಯ್ಯನವರ ಆದರ್ಶಗಳನ್ನು ಒಪ್ಪಿಕೊಂಡು ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ರೇವಣಸಿದ್ದೇಶ್ವರ ಮಠದಲ್ಲಿ ವಿದ್ಯಾಥರ್ಿಗಳಿಗೆ ನೋಟ್ಬುಕ್ ನೀಡುತ್ತಿರುವ  ಕಾರ್ಯ ಶ್ಲಾಘನೀಯವಾದುದು ಎಂದರಲ್ಲದೆ ರಾಜ್ಯದಲ್ಲಿ ಉತ್ತಮ ಆಡಳಿತ ನಿರ್ವಹಿಸುತ್ತಿರುವ ಸಿದ್ದರಾಮಯ್ಯನವರು ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರವ ಬಗ್ಗೆ ವಿಷಾಧಿಸಿದರು.
    ಕಾಂಗ್ರೆಸ್ ಮುಖಂಡ ನಾರಾಯಣಗೌಡ ಮಾತನಾಡಿ ಸಿ.ಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಉತ್ತಮ ಯೋಜನೆಗಳನ್ನು ತರುತ್ತಿದ್ದಾರೆ, ಈ ಯೋಜನೆಗಳ ಬಗ್ಗೆ ವಿದ್ಯಾಥರ್ಿಗಳು ಪತ್ರಿಕೆಯಲ್ಲಿ ಓದಿ ತಿಳಿಯಬೇಕು ಎಂದರು.
    ಮುಖಂಡ ಕೆ.ಜಿ.ಕೃಷ್ಣೆಗೌಡ ಮಾತನಾಡಿ ಕೆಪಿಎಸ್ಸಿ ಭ್ರಷ್ಠಾಚಾರದಲ್ಲಿ ಉತ್ತಮ ನಿಧರ್ಾರ ತೆಗೆದುಕೊಂಡಿರುವ ಮುಖ್ಯಮಂತ್ರಿಗಳ ವಿರುದ್ದ ಜೆ.ಡಿ.ಎಸ್ ಹಾಗೂ ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ, ಭ್ರಷ್ಠಾಚಾರ ತೊಡೆದು ಹಾಕಲು ಸಿದ್ದರಾಮಯ್ಯನವರು ಉತ್ತಮ ನಿಧರ್ಾರ ತೆಗೆದುಕೊಂಡಿದ್ದಾರೆ ಎಂದರಲ್ಲದೆ ಹೋರಾಟದಿಂದ ಬೆಳೆದು ಬಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಬೇಕೆಂಬ ಕನಸನ್ನು ನನಸಾಗಿ ಮಾಡಿಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
    ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸಿ.ಎಂ.ಬೀರಲಿಂಗಯ್ಯ, ಸಿ.ಟಿ.ಗುರುಮೂತರ್ಿ, ಸಿದ್ದರಾಮಯ್ಯ, ಸಣ್ಣಪ್ಪ, ಉಪಸ್ಥಿತರಿದ್ದರು.

ಆಗಸ್ಟ್ 15ರಂದು ತುಮಕೂರಿನ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಬಳಿ ಬೆಳಗ್ಗೆ 8ಕ್ಕೆ ಕಪ್ಪುಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ.12 : ನಿವೃತ್ತ ನ್ಯಾಯಮೂತರ್ಿ ಎ. ಜೆ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕನರ್ಾಟಕ ಮಾದಿಗ ದಂಡೋರ ಜಿಲ್ಲಾ ಶಾಖೆ ವತಿಯಿಂದ ಆಗಸ್ಟ್ 15ರಂದು ತುಮಕೂರಿನ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಬಳಿ ಬೆಳಗ್ಗೆ 8ಕ್ಕೆ ಕಪ್ಪುಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
    ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನರ್ಾಟಕ ಮಾದಿಗ ದಂಡೋರ ಸಂಘಟನೆಯು ಮಾದಿಗ ಜಾತಿಯ ಬಂಧುಗಳಿಗೆ ಆಥರ್ಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಎ.ಜೆ.ಸದಾಶಿವ ವರದಿಯ ಪ್ರಕಾರ ಶೇ.6ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವಂತೆ ರಾಜ್ಯ ಸಕರ್ಾರಕ್ಕೆ ಶಿಫಾರಸ್ಸು ಮಾಡಿದೆ, ಆದರೆ ಆಯೋಗದ ವರದಿಯನ್ನು ಜಾರಿಗೆ ತರುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿಯನ್ನು ಪ್ರದಶರ್ಿದೆ ನಿರ್ಲಕ್ಷ ವಹಿಸಿವೆ ಆದ್ದರಿಂದ ಕನರ್ಾಟಕ ಮಾದಿಗ ದಂಡೋರ ಸಂಘಟನೆ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಸಕರ್ಾರದ ಮೇಲೆ ಒತ್ತಡ ತರಲು ಆಗಸ್ಟ್ 15ರಂದು ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಸೋಮನಹಳ್ಳಿ ಜಗದೀಶ್, ಉಪಾಧ್ಯಕ್ಷ ಈಚನೂರು ಮಹದೇವ್, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಅಶೋಕ್, ಸಂಘಟನೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಸಣ್ಣಮ್ಮ ಉಪಸ್ಥಿತರಿದ್ದರು.

ಕೊಲೆ ಮಾಡಿದ್ದ ಆರೋಪಿಗಳ ಬಂಧನ
ಚಿಕ್ಕನಾಯಕನಹಳ್ಳಿ,ಆ.13: ತಾಲೂಕಿನ ಚಿಕ್ಕೇಣ್ಣೆಗೆರೆಯಲ್ಲಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಪರ್ಕವಿಟ್ಟುಕೊಂಡಿದ್ದ ವ್ಯಕ್ತಿಯನ್ನು ಪ್ರಶ್ನೆಸಿದ್ದ ಹಿನ್ನೆಲೆಯಲ್ಲಿ ಲಿಂಗರಾಜು ಎಂಬುವನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ಜಯಕುಮಾರ್ ನೇತೃತ್ವ ತಂಡ ಪ್ರಕರಣವನ್ನು ಭೇದಿಸಿ ಬಂಧಿಸಿದ್ದಾರೆ.
    ಮೃತ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅದೇ ಗ್ರಾಮದ ಹನುಮಂತಯ್ಯ ಎಂಬುವನು ಲಿಂಗರಾಜುವಿಗೆ  ಮಧ್ಯದಂಗಡಿಯಲ್ಲಿ ಭೇಟಿಯಾಗಿದ್ದು ಇಬ್ಬರೂ ಕುಡಿದ ಅಮಲಿನಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ, ನಂತರ ಹನುಮಂತಯ್ಯ ಉಪಾಯವಾಗಿ ಲಿಂಗರಾಜುವನ್ನು ಗ್ರಾಮದ ಕೆರೆಯ ಹಿಂಭಾಗಕ್ಕೆ ಕರೆದೊಯ್ದು ಅಲ್ಲಿ ಟವಲ್ನಿಂದ ಲಿಂಗರಾಜುವಿನ ಕೊರಳಿಗೆ ಬಿಗಿದು ಕೊಲೆ ಮಾಡಿದ್ದನ್ನೆನ್ನಲಾಗಿದೆ, ನಂತರ ತನ್ನ ಸಂಬಂಧಿಯಾದ ಯೋಗೀಶ್ನ ಸಹಾಯದಿಂದ ಮರಕ್ಕೆ ನೇಣು ಬಿಗಿದಂತೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ, ಆದರೆ ಮೃತನ ಕೊರಳಿನಲ್ಲಿ ಆದ ಗಾಯಗಳಿಂದ ಪ್ರಕರಣ ಬೆಳಕಿಗೆ ಬಂದಿದೆ.
    ಈ ಸಂಬಂಧ ಹನುಮಂತಯ್ಯ, ಯೋಗೀಶ್ ಹಾಗೂ ಇವರಿಬ್ಬರಿಗೂ ರಕ್ಷಣೆ ನೀಡಿದ್ದ ಗಿರೀಶ್ ಎಂಬುವರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಇಸ್ಪೀಟ್ ಆಡುತ್ತಿದ್ದ ಐವರ ಬಂಧನ: ತಾಲೂಕಿನ ರಂಗನಾಥ ಪುರದ ಬಳಿ ಇಸೀಟ್ ಆಡುತ್ತಿದ್ದ ಐವರನ್ನು ಬಂಧಿಸಿ ಅವರಿಂದ ಒಂದು ಮಾರುತಿ ಓಮ್ನಿ ವಾಹನ, ಮೂರು ಮೋಬೈಲ್ ಹಾಗೂ ಪಣಕ್ಕಿಟ್ಟ ಒಂದು ಮುಕ್ಕಾಲು ಸಾವಿರ ರೂಗಳ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಜಗಳ ಬಿಡಿಸಲು ಹೋಗಿ ಚೂರಿ ತಿವಿಸಿಕೊಂಡವನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ: ತಾಲೂಕಿನ ಶೆಟ್ಟೀಕೆರೆಯಲ್ಲಿ ಆಟೋ ಚಾಲಕ ಕೆಂಪಯ್ಯ ಹಾಗೂ ರವಿ ಎಂಬುವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು, ಜಗಳ ಬಿಡಿಸಲು ಹೋದ ಯತೀಶ್ನಿಗೆ ಕೆಂಪಯ್ಯ ಚೂರಿಯಿಂದ ತಿವಿದಿದ್ದಾನೆ, ಇದರಿಂದ ತೀವ್ರ ಗಾಯಗೊಂಡ ಯತೀಶ್ನಿಗೆ ಶ್ವಾಸಕೋಶಕ್ಕೆ ಹಾನಿಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾನೆ, ಕೆಂಪಯ್ಯನನ್ನು ಚಿ.ನಾ.ಹಳ್ಳಿ ಪೊಲೀಸರು ಬಂದಿಸಿದ್ದಾರೆ.
ಬಸ್ನಿಂದ ಬಿದ್ದು ವ್ಯಕ್ತಿ ಸಾವು: ಪಟ್ಟಣದ ಕೇದಿಗೆಹಳ್ಳಿ ಪಾಳ್ಯದ ಬಳಿ ವ್ಯಕ್ತಿಯೊಬ್ಬ ಬಸ್ನ ಟಾಪ್ನಲ್ಲಿ ಕುಳಿತು ಪ್ರಯಣಿಸುತ್ತಿರುವಾಗ, ಮರದ ಕೊಂಬೆಯೊಂದು ಕೃಷ್ಣಪ್ಪ(50) ಎಂಬಾತನಿಗೆ ತಗುಲಿದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಬಸ್ನಿಂದ ಕೆಳಕ್ಕೆ ಬಿದ್ದಿದ್ದಾನೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಪ್ರಾಣಬಿಟ್ಟಿದ್ದಾನೆ.
ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


 ಸಾಹಿತಿ ಎಂ.ವಿ.ನಾಗರಾಜ್ರಾವ್ರವರ 74ನೇ ಹುಟ್ಟುಹಬ್ಬ
ಚಿಕ್ಕನಾಯಕನಹಳ್ಳಿ,ಆ.13: ಸಾಹಿತಿ ಎಂ.ವಿ.ನಾಗರಾಜ್ರಾವ್ರವರ 74ನೇ ಹುಟ್ಟುಹಬ್ಬ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ರೋಟರಿ ಸೇವಾ ಪ್ರಶಸ್ತಿ ಸಮಾರಂಭವನ್ನು ಇದೇ 16ರಂದು ಬೆಳಗ್ಗೆ 10.30ಕ್ಕೆ ಕೋ.ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಕಾರ್ಯಕ್ರಮ ಉದ್ಘಾಟಿಸುವರು. ಲೇಖಕ ಪ್ರೊ.ನಾ.ದಯಾನಂದ ಪ್ರಾಸ್ತಾವಿಕ ನುಡಿಯುವರು, ಪ್ರೊ.ನಾ.ದಯಾನಂದರವರು ರಚಿಸಿರುವ ಎಂ.ವಿ.ನಾಗರಾಜ್ರಾವ್ ಬದುಕು-ಬರಹ 'ವಷರ್ಾನುಕಾಲ' ಕೃತಿ ಬಿಡುಗಡೆಯನ್ನು ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನೆರವೇರುಸುವರು.
    ಎಂ.ವಿ.ನಾಗರಾಜ್ರಾವ್ರವರ ಸಾರ್ಥಕ ಬದುಕಿನ ನೂರು ಸ್ಪೂತರ್ಿ ಕಥೆಗಳು ಪುಸ್ತಕದ ಇಂಗ್ಲೀಷ್ ಅನುವಾದ 'ಲಿಟಲ್ ಲ್ಯಾಮ್ಸ್' ಪುಸ್ತಕ ಬಿಡುಗಡೆಯನ್ನು ಸಕರ್ಾರಿ ದಂತ ಮಹಾವಿದ್ಯಾಲಯದ ನಿವೃತ್ತ ನಿದರ್ೇಶಕ ಡಾ.ಎಸ್.ಎಸ್.ಹಿರೇಮಠ್ ಬಿಡುಗಡೆ ಮಾಡುವರು, ಎಂ.ವಿ.ಎನ್ರವರ 74ನೇ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ರೋಟರಿಯ ಪ್ರತಿಷ್ಠಿತ ಅಂತರಾಷ್ಟ್ರೀಯ ಸೇವಾ ಪ್ರಶಸ್ತಿ ಪ್ರಧಾನ ಹಾಗೂ ಸಾಹಿತ್ಯ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.
    ಜಿಲ್ಲಾ ರೋಟರಿ ಆರ್.ಐ ಪಿಡಿಜಿ ಕೆ.ಎಸ್.ನಾಗೇಂದ್ರ, ರೋಟರಿ ಅಧ್ಯಕ್ಷ ಸಿ.ಎನ್.ಮರುಳಾರಾಧ್ಯ, ಪೂವರ್ಾಧ್ಯಕ್ಷರು ಸಿ.ಎಸ್.ಪ್ರದೀಪ್ಕುಮಾರ್,  ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಇನ್ನರ್ವೀಲ್ ಅಧ್ಯಕ್ಷೆ ಶಶಿಕಲಾ ಜಯದೇವ್, ಡಾ.ಕವಿತಾಕೃಷ್ಣ, ಗೌಡನಕಟ್ಟೆ ತಿಮ್ಮಯ್ಯ, ಬಾಳೆಕಾಯಿ ಶಿವನಂಜಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

 ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ  ಶ್ರೀ ಕೃಷ್ಣ ಜನ್ಮಾಷ್ಠಮಿ,

ಚಿಕ್ಕನಾಯಕನಹಳ್ಳಿ,ಆ.13 : ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ  ಶ್ರೀ ಕೃಷ್ಣ ಜನ್ಮಾಷ್ಠಮಿ, ಪ್ರಥಮ ವರ್ಷದ ತಾಲ್ಲೂಕು ಮಟ್ಟದ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಮತ್ತು ಉಚಿತ ನೋಟ್ ಪುಸ್ತಕಗಳ ವಿತರಣಾ ಸಮಾರಂಭ ಹಾಗೂ ರುಕ್ಮಿಣಿ ಮಹಿಳಾ ಸ್ವಸಹಾಯ ಸಂಘದ ಪ್ರಥಮ ವಾಷರ್ಿಕ ಸಮಾರಂಭವನ್ನು ಇದೇ 17ರ ಭಾನುವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
     ಪಟ್ಟಣದ ತಾಲ್ಲೂಕು ಕಛೇರಿ ಎದುರಿನ ಶ್ರೀ ಪಾಂಡುರಂಗಸ್ವಾಮಿ ನಿವೇಶನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗೋಡೆಕೆರೆ ಚಮಠದ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶೀಕೇಂದ್ರಸ್ವಾಮಿಗಳು ಉದ್ಘಾಟನೆ ನೆರವೇರಿಸುವರು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
    ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪೂಜಾ ಕಾರ್ಯಕ್ರಮ ಮತ್ತು ಪ್ರಸಾದ ವಿನಿಯೋಗವಿದೆ, ಎಲ್ಲಾ ಮಕ್ಕಳೂ ಕೃಷ್ಣನ ವೇಶ ಹಾಕಿಕೊಂಡು ಬರುವುದು, ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

 

Monday, August 11, 2014



ದಶಕದ ಹಿಂದಿನ ಸ್ಥಿತಿಯಲ್ಲಿ ಹಿಂದುಳಿಯುತ್ತಿರುವ ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ,ಆ.11 : ದಶಕದ ಹಿಂದೆ ಚಿಕ್ಕನಾಯಕನಹಳ್ಳಿ ಯಾವ ಸ್ಥಿತಿಯಲ್ಲಿ ಇತ್ತೋ ಅದೇ ರೀತಿಯಲ್ಲಿ ಈಗಲೂ ಇದೆ,  ಯಾವ ಅಭಿವೃದ್ದಿಯನ್ನೂ ಕಾಣದೆ ಹಿಂದುಳಿಯುತ್ತಿದೆ ಎಂದು ಕಿರುತರೆ ಕಲಾವಿದ ಹನುಮಂತೆಗೌಡ ವಿಷಾಧಿಸಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ 2014-15ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ. ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಬೇಸಿಗೆಯಲ್ಲಿ ಮಾತ್ರವಲ್ಲ ಇತರ ಕಾಲಗಳಲ್ಲೂ ನೀರಿನ ಸಮಸ್ಯೆ ದೊಡ್ಡದಾಗಿ ಪರಿಣಮಿಸಿದೆ ಎಂದ ಅವರು ಮುಂದೆ ಹೇಗೆ ಎಂಬುದರ ಬಗ್ಗೆ ನಾಗರೀಕರು ಈಗಿನಿಂದಲೇ ಚಿಂತನೆ ನಡೆಸಿ ತಾಲ್ಲೂಕಿನ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸಿ ಎಂದರು.
ಮನೆಯ ಹಿರಿಯರು ಹೇಗೆ ಇರುತ್ತಾರೋ ಅದೇ ರೀತಿಯಲ್ಲಿ ಕಿರಿಯರು ಜೀವಿಸುತ್ತಾರೆ, ಅದೇ ರೀತಿಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ದಾರಿಯನ್ನು ತೋರಿಸಿದರೆ ಮಕ್ಕಳು ಸಮಾಜದ ಒಳ್ಳೆಯ ವ್ಯಕ್ತಿಗಳಾಗಿ ಬದುಕುತ್ತಾರೆ, ಇಂತಹದರ ನಡುವೆ ನಾವು ಜೀವನವನ್ನು ಕಳೆಯಬೇಕಿದ್ದು ನಾಡನ್ನು ಕಟ್ಟುವ ಪ್ರಯತ್ನದಲ್ಲಿ ಮುಂದುವರೆಯೋಣ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ನಮ್ಮನ್ನು ನಾವು ನಮ್ಮ ಪ್ರತಿಭೆಯ ಮೂಲಕ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಾಗ ಗೌರವಕ್ಕೆ ಒಳಗಾಗುತ್ತೇವೆ, ಒಂದೇ ಕ್ಷೇತ್ರದಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿದರೆ ಆ ಸೇವೆಯು ಸಾಧನೆಯಾಗಿ ಪರಿವರ್ತನೆಯಾಗಿ ಗೆಲುವು ಪಡೆಯಬಹುದು ಎಂದರು.
 ಬಿ.ಎ ಪದವಿಗೆ ಮುಂದಿನ ವರ್ಷಗಳಲ್ಲಿ ಒಳ್ಳೆಯ ಪ್ರಾತಿನಿಧ್ಯ ದೊರಕಲಿದೆ, ಕಂಪನಿಗಳ ಮಾಲೀಕರು ಆಡಳಿತ ಸೇವೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ,  ಇಂಜನಿಯರಿಂಗ್, ಕಾಮಸರ್್ ಪದವಿಗಳಿಗೆ ಹೆಚ್ಚಿನದಾಗಿ ವಿದ್ಯಾಥರ್ಿಗಳು ದಾಖಲಾಗಿರುವುದು ಹಾಗೂ ಆ ಪದವಿಗಳ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಬಿ.ಎ ಪದವಿಯ ಬಗ್ಗೆ ಅಸೆಡ್ಡೆ ತೋರದೆ ವಿದ್ಯಾಭ್ಯಾಸ ಮುಂದುವರೆಸಿ ಬಿ.ಎ ಪದವಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ದೊರಕಲಿದೆ ಎಂದರು.
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಕೇಂದ್ರ ಸಕರ್ಾರ ಹಿಂದಿ ಭಾಷೆಯ ಬಗ್ಗೆ ಒಲವು ತೋರಿರುವುದರಿಂದ ದಕ್ಷಿಣ ಭಾರತದ ಜನತೆಗೆ ಸಮಸ್ಯೆಯುಂಟಾಗುತ್ತದೆ, ಯುಪಿಎಸ್ಸಿ ಪರೀಕ್ಷೆಗೆ ಹಿಂದಿ ಕಡ್ಡಾಯವಾದರೆ ಪರೀಕ್ಷೆ ಬರೆಯುವವರು ಹಿಂದಿ ಭಾಷೆ ಕಲಿಯುವುದು ಅನಿವಾರ್ಯವಾಗುತ್ತದೆ ಎಂದರಲ್ಲದೆ ವಿದ್ಯಾಥರ್ಿಗಳಿಗೆ ಗುಣಮಟ್ಟ ಬೋಧನೆ ನೀಡಿದಾಗ ಉತ್ತಮ ಅಂಕ ದೊರೆಯಲಿದೆ ಎಂದರು.
ನವೋದಯ ವಿದ್ಯಾಸಂಸ್ಥೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ವಿದ್ಯಾಥರ್ಿಗಳ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಮುಂದೊಂದು ದಿನ ಅದು ಪ್ರತಿಭೆಗಳಿಗೆ ನೆರವಾಗಲಿದೆ ಎಂದರು.
 ಕಾರ್ಯಕ್ರಮದಲ್ಲಿ ಪ್ರಥಮ ದಜರ್ೆ ಕಾಲೇಜ್ನ ಪ್ರಾಂಶುಪಾಲರಾದ ಬಿ.ಎಸ್.ಬಸವಲಿಂಗಪ್ಪ, ಪಿ.ಯು.ಕಾಲೇಜ್ನ ಪ್ರಾಂಶುಪಾಲರಾದ ಮೋಹನ್ ಉಪಸ್ಥಿತರಿದ್ದರು.



ಕುಪ್ಪೂರು ಶ್ರೀಗಳ ರಜತ ಮಹೋತ್ಸವಕ್ಕೆ ಸಿದ್ದತೆ:
ಚಿಕ್ಕನಾಯಕನಹಳ್ಳಿ,ಆ.11: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ 25ನೇ ವರ್ಷದ ಪಟ್ಟಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಂಜೃಂಭಣೆಯಾಗಿ ನೆರವೇರಿಸಲು ಭಕ್ತರ ಸಮೂಹ ತಿಮರ್ಾನಿಸಿತು.
  ಕುಪ್ಪೂರು ಗದ್ದಿಗೆಯ ಪೀಠಾಧ್ಯಕ್ಷರಾಗಿ ಇಪ್ಪತೈದು ವರ್ಷದ ಸೇವೆಯನ್ನು ಸ್ಮರಿಸಿಕೋಂಡು ಭಕ್ತರ ಸಮೂಹ,  ಸ್ವಾಮೀಜಿಯವರ ಪಟ್ಟಾಧಿಕಾರದ  ರಜತಾ ಮಹೋತ್ಸವವನ್ನು ನೆರವೇರಿಸಲು ಪೂರ್ವಭಾವಿ ಸಭೆಯನ್ನು ಏರ್ಪಡಿಸಿತ್ತು.
 ಸಭೆಯ ಅಧ್ಯಕ್ಷತೆ ವಹಿಸಿ ಎಸ್.ಪಿ.ಗಂಗಾಧರಪ್ಪ ಮಾತನಾಡಿ ಗದ್ದಿಗೆ ಮಠದಲ್ಲಿ ಹಿರಿಯ ಶ್ರೀಗಾಳಾದ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಇಷ್ಟ ಪಟ್ಟು ಅತಿ ಚಿಕ್ಕ ವಯಸ್ಸಿನಲ್ಲಿ ಯತೀಶ್ವರ ಶಿವಾಚಾರ್ಯ ಸ್ವಾಮಿಗಳಿಗೆಪಟ್ಟಾಧಿಕಾರವನ್ನು ನೀಡಿದರು. ಅವರ ಮಾರ್ಗ ದರ್ಶನದಂತೆ ಮಠದ ಅಭಿವೃದ್ದಿ ಹಾಗೂ ಸಮಾಜದಲ್ಲಿ ಅವರದೇ ಆದ ಶೈಲಿಯಲ್ಲಿ ಶ್ರೀಗಳು ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು. 
ಡಿಸೆಂಬರ್ 05,06 ಮತ್ತು07ರಂದು  ನೆಡೆಯಲಿರುವ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅಭಿವಂದನಾ ಗ್ರಂಥವನ್ನು ಶ್ರೀಗಳಿಗೆ ಅಪರ್ಿಸಲಾಗುವುದು, ಸ್ವಾಮೀಜಿ ಯವರ ಸಾಧನೆಗಳ ಚಿತ್ರ ಸಂಪುಟವನ್ನು ಬಿಡುಗಡೆ ಮಾಡಲಾಗುವುದು. ಎಂದು ವಕೀಲ ಶಿವಲಿಂಗಪ್ಪ ತೀಳಿಸಿದರು. ಮೂರು ದಿವಸ ನೆಡೆಯುವ ಬೃಹತ್ ಕಾರ್ಯಕ್ರಮದಲ್ಲಿ  ನಾಡಿನ ಜಗದ್ಗುರುಗಳು, ಶಿವಾಚಾರ್ಯರು, ಸಮಾಜದ ಚಿಂತಕರು, ಕವಿಗಳು, ಕಲಾವಿದರು, ರಾಜಕೀಯ ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದು ಭಕ್ತರ ಸಮೂಹ ತಿಳಿಸಿತು. ಸಭೆಯಲ್ಲಿ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಿದ್ದರು, ತಿಪಟೂರು ಬಿಜೆಪಿ ಮುಂಖಡ ಹೆಚ್.ಎನ್.ಗಂಗಾಧರಪ್ಪ, ಶೆಟ್ಟಿಕೆರೆ ಡಾ.ಶಿವಕುಮಾರ್, ಆರ್.ಮಹೇಶ್, ಆರ್.ಬಿ.ಕೊಟ್ಟೂರಪ್ಪ, ಕೆ.ಎಸ್.ಶಿವಶಂಕರಪ್ಪ, ಸಾಸಲು ಶಾಂತವೀರಪ್ಪ, ಮುಂತಾದ ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಅಂತಹ ಕಲಹ ಎಲ್ಲೆ ಮೀರಿದಾಗ ಮೀಸಲಾತಿಗೆ ಮುನ್ನಡಿ ಬರೆದವರು ಬ್ರಾಹ್ಮಣರೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಆ11: ಕನರ್ಾಟಕದಲ್ಲಿ ಮೀಸಲಾತಿಗೆ ಮುನ್ನುಡಿ ಬರೆದವರು ಬ್ರಾಹ್ಮಣರು. ಮೈಸೂರು ಅರಸರ ಆಳ್ವಿಕೆಯಲ್ಲಿ ಉನ್ನತ ಹುದ್ದೆಗಳು ತಮಿಳುನಾಡು ಬ್ರಾಹ್ಮಣರ ಪಾಲಾಗುತ್ತಿದ್ದಾಗ ಕನರ್ಾಟಕದ ಬ್ರಾಹ್ಮಣರಿಗೆ ಮೀಸಲಾತಿ ಕೊಡಿ ಎಂದು ಪಟ್ಟು ಹಿಡಿದಿದ್ದವರು ಇವರೆ. ಅಂದು ಮೀಸಲಾತಿಗೆ ಮುಗಿಬಿದ್ದ ಬ್ರಾಹ್ಮಣರು ಇಂದು ಪ್ರತಿಭೆ ಹೆಸರಿನಲ್ಲಿ ಮೀಸಲಾತಿ ವಿರೋಧಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು. 
ತಾಲ್ಲೂಕಿನ ಜೆ.ಸಿ.ಪುರದಲ್ಲಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಳ್ಳವರು ಇಲ್ಲದವರಿಗೆ ಸಹಾಯ ಹಸ್ತ ಚಾಚುವುದು ಸಂಘಟನೆಯ ಧ್ಯೇಯ ಆಗಬೇಕು ಎಂದರು.
  ಕನರ್ಾಟಕದಲ್ಲಿ ಶಿಕ್ಷಣದ ಮಾತು ಬಂದಾಗ ಶಿಕ್ಷಣವನ್ನು ಸಾರ್ವತ್ರೀಕರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸಂಸ್ಥೆಗಳನ್ನು ಕಟ್ಟಿ ಶಿಕ್ಷಣವನ್ನು ವಿಸ್ತರಿಸಿದ ಮಠಗಳನ್ನು ಸ್ಮರಿಸಬೇಕು, ಮೀಸಲಾತಿ ಲಾಭ ಪಡೆದು ಮೇಲೆ ಬಂದವರು ಸಮುದಾಯದ ಮಕ್ಕಳಿಗೆ ಸೂಕ್ತ ಸಹಾಯ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಋಣ ತೀರಿಸಬೇಕು ಎಂದರು. ಆಥರ್ಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮಾನ ಹಂಚಿಕೆಗೆ ಮೀಸಲಾತಿ ಬೇಕು. ಆದರಲ್ಲಿ ಇನ್ಫೋಸಿಸ್ ಹಾಗೂ ವಿಪ್ರೋದಂತಹ  ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಗಳು ಪ್ರತಿಭೆ ಹೆಸರಿನಲ್ಲಿ ಮೀಸಲಾತಿ ವಿರೋಧಿ ಚಳುವಳಿಯನ್ನು ರೂಪಿಸುತ್ತಿವೆ  ಪ್ರತಿಭೆಗೂ ಉದ್ಯೋಗಕ್ಕೂ ಸಂಬಂಧ ಇಲ್ಲ. ಕೆಲಸಕ್ಕೆ ಬೇಕಿರುವುದು ಪರಿಶ್ರಮ ಮತ್ತು ಶ್ರದ್ಧೆ.ಅಂಕಗಳಿಂದ ಅಳೆಯಲ್ಪಡುತ್ತಿರುವ ಪ್ರತಿಭೆ ಒಳ್ಳೆಯ ಉದ್ಯೋಗಿಯನ್ನು ರೂಪಿಸಲಾರದು ಎಂದರು.
ಜಾತಿ, ಧರ್ಮ ಶ್ರೇಷ್ಠ ಅಲ್ಲ ಮಾನವಿಯತೆ ಶ್ರೇಷ್ಠ, ಮಾನವೀಯತೆ ಸಮಾಜ ಸೃಷಿಸಿದ್ಠ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
    ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್.ಸದಾಶಿವಯ್ಯ ಮಾತನಾಡಿ, ಯಶಸ್ಸಿಗೆ ಶೇ.95 ಭಾಗ ಶ್ರಮ ಹಾಗೂ ಉಳಿದ ಶೆ.5ಭಾಗ ಪ್ರೇರಣೆ ಕಾರಣವಾಗುತ್ತದೆ. ಕಷ್ಟವೇ  ಸಾಧನೆಗೆ ಸ್ಪೂತರ್ಿಯಾಗುತ್ತದೆ.ಹಳ್ಳಿಯ ಮಕ್ಕಳು ತಮ್ಮಲ್ಲಿ ಹಡಗಿರುವ ಸುಪ್ತ ಶಕ್ತಿಯನ್ನು ಹೊರ ಹೊಮ್ಮಿಸಲು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಕಿವಿಮಾತು ಹೇಳಿದರು.
  ಗೋಡೆಕೆರೆ ಕ್ಷೇತ್ರದ ಸ್ಥಿರ ಪಟ್ಟಾಧ್ಯಕ್ಷ ಶ್ರೀ ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಎಸ್.ಸಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ,ತಾಪಂ ಸದಸ್ಯರಾದ ಎಂ.ಎಂ.ಜಗದೀಶ್ ಮತ್ತು ಎಚ್.ಆರ್.ಶಶಿಧರ್, ಡಿಡಿಪಿಐ ಈಶ್ವರಯ್ಯ, ತುಮುಲ್ ನಿದರ್ೇಶಕ ಹಳೇಮನೆ ಶಿವನಂಜಪ್ಪ ಮಾತನಾಡಿದರು.   
ವೀರಶೈವಮುಖಂಡರುಗಳಾದ ಬಾಲಚಂದ್ರ, ಪ್ರಸನ್ನಕುಮಾರ್, ನಿಜಗುಣಯ್ಯ, ಶಿವರಾಜ್,ಶಂಕರಲಿಂಗಪ್ಪ. ಜಯಣ್ಣ, ಮಾ.ಚಿ.ಕೈಲಾಸನಾಥ್, ಎಸ್.ಎಲ್.ಶಾಂತಕುಮಾರ್, ನಿರಂಜನ್ ಮುಂತಾದವರು ಇದ್ದರು. 
ಮರುಳಸಿದ್ಧಯ್ಯ ವಾಷರ್ಿಕ ವರದಿ ವಾಚಿಸಿದರು.ಕೆ.ಎಸ್.ನವೀನ್ಕುಮಾರ್ ಸ್ವಾಗತಿಸಿ ಎಂ.ಎಸ್.ಈಶ್ವರಪ್ಪ ನಿರೂಪಿಸಿದರು. ಶಿಕ್ಷಕ ಮಲ್ಲಿಕಾಜರ್ುನ್ರ ವಚನ ಗಾಯನ ಮಾಡಿದರು.

ರಾಗಿ ಬಿತ್ತನೆಗೆ ಸಜ್ಜಾದ ರೈತರು
ಚಿಕ್ಕನಾಯಕನಹಳ್ಳಿ,ಆ.11 : ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ರೈತರು ತಮ್ಮ ಹೊಲಗಳಲ್ಲಿ ರಾಗಿ ಬೆಳೆಯನ್ನು ಬಿತ್ತನೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.
ಜುಲೈ ತಿಂಗಳಿನಲ್ಲಿ ಮಳೆಯನ್ನೇ ಕಾಣದ ಜನತೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಿದ್ದ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ, ತಾಲ್ಲೂಕಿನಲ್ಲಿ ಮುಂಗಾರು ಮಳೆಯು ಕೈಕೊಟ್ಟ ಪರಿಣಾಮ ಹೆಸರುಕಾಳು, ಹಲಸುಂಡೆ ಹಾಗೂ ದ್ವಿದಳ ಧಾನ್ಯಗಳ ಬೆಳೆಯನ್ನು ಹಾಕಿ ಕೈಸುಟ್ಟುಕೊಂಡಿದ್ದರು. ಕಳೆದ ಎರಡು ತಿಂಗಳಿನಿಂದಲೂ ಸರಿಯಾಗ ಮಳೆಯಾಗದೇ ಇದ್ದ ಪರಿಣಾಮ ಸಾಲ ಮಾಡಿ ಮುಂಗಾರು ಬೆಳೆ ಬೆಳೆಯಲು ಗೊಬ್ಬರ ಮತ್ತು ಬೀಜಗಳನ್ನು ತಂದು ಹೊಲಗಳಿಗೆ ಬಿತ್ತನೆ ಮಾಡಿದರೂ ಉತ್ತಮ ಫಸಲು ದೊರೆಯದ ಕಾರಣ ರೈತರು ನೋವನ್ನು ಅನುಭವಿಸುತ್ತಿದ್ದರು, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯಿಂದ ದ್ವಿದಳ ಬೆಳೆಗಳನ್ನು ಬಿತ್ತಿದ್ದ ರೈತರು ಹೊಲಗಳನ್ನು ಸ್ವಚ್ಛಗೊಳಿಸಿ, ರಾಗಿ ಬೆಳೆಯ ಭಿತ್ತನೆ ನೆಡೆಸುತ್ತಿದ್ದಾರೆ.
ಕುರುಬರಹಳ್ಳಿ ರೈತ ಮಹಿಳೆ ಗೌರಮ್ಮ ಮಾತನಾಡಿ ಕಳೆದ ಎರಡು ದಿನಗಳಿಂದ ಬಿದ್ದ ಮಳೆಯನ್ನು ನೆಚ್ಚಿಕೊಂಡು ಮನೆಮಂದಿಯೆಲ್ಲಾ ರಾಗಿ ಬಿತ್ತನೆಗೆ ಮುಂದಾಗಿದ್ದೇವೆ, ನೆನ್ನೆ ಬಂದಂತಹ ಮಳೆಯಿಂದ ಹೊಲದ ಪೂರ್ಣಭಾಗ ಸಸಿ ಹಾಕುತ್ತಿದ್ದೇವೆ ಎಂದರಲ್ಲದೆ, ಮುಂಗಾರು ಮಳೆಯಲ್ಲಿ ಹಾಕಿದಂತಹ ಬೆಳೆ ನಷ್ಟವಾಗಿ ರೈತರಿಗೆ ಏನೂ ಸಿಗದಂತಾಗಿದೆ, ರೈತರು ಏನೇ ಕಷ್ಟ ಪಟ್ಟು ಮಾಡಿದರೂ ಉತ್ತಮ ಫಸಲು ದೊರೆಯುತ್ತಿಲ್ಲ, ಗೊಬ್ಬರದ ಮತ್ತು ಬೀಜಗಳ ಬೆಲೆ ಗಗನಕ್ಕೇರಿದೆ, ಕೊಟ್ಟಿಗೆ ಗೊಬ್ಬರ ಸಿಂಪಡಿಸೋಣವೆಂದರೆ ಪಶುಗಳಿಗೆ ಮೇವೂ ಹಾಗೂ ಕುಡಿಯಲೂ ನೀರಿಲ್ಲದೆ ಕೊಟ್ಟಿಗೆ ಗೊಬ್ಬರ ಎಲ್ಲಿಯೋ ದೊರೆಯುತ್ತಿಲ್ಲ, ಅಂಗಡಿಗಳಲ್ಲಿ ಗೊಬ್ಬರದ ಬೆಲೆ ಹೆಚ್ಚಿರುವುದರಿಂದ ಹಣ ನೀಡಿ ತರಲು ಸಾಧ್ಯವಾಗುತ್ತಿಲ್ಲ ಇದರಿಂದ ಗೊಬ್ಬರದ ಸಮಸ್ಯೆಯೂ ತಲೆದೂರಿದೆ, ಸಕರ್ಾರ ಗೊಬ್ಬರದ ಬೆಲೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. 
ರೈತ ಕೃಷ್ಣಪ್ಪ ಮಾತನಾಡಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಡಿಮೆ ಬೆಲೆಯಲ್ಲಿ ಅಂಗಡಿಗಳ ವ್ಯಾಪಾರಸ್ಥರು ಕೇಳುತ್ತಾರೆ, ಆದರೆ ನಾವು ಬೆಳೆದ ಬೆಳೆಯನ್ನೇ ಅನಿವಾರ್ಯವಾಗಿ ಅಂಗಡಿಗಳಲ್ಲಿ ತರಲು ಹೋದರೆ ದುಪ್ಪಟ್ಟು ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಗುರು ರಾಘವೇಂದ್ರಸ್ವಾಮಿಯ 343 ನೇ ಆರಾಧನೆ  

ಚಿಕ್ಕನಾಯಕನಹಳ್ಳಿ : ಪಟ್ಟಣದ ಜೋಗಿಹಳ್ಳಿ ಬಳಿ ಇರುವ  ಆದಿಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಯ 343 ನೇ ಆರಾಧನಾ ಮಹೋತ್ಸವ ಆಗಸ್ಟ್12 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
 ಬೆಳಿಗ್ಗೆ 8 ಗಂಟ್ಟೆಗೆ ಆದಿಆಂಜನೇಯಸ್ವಾಮಿಗೆ ಅಭಿಷೇಕ ಹಾಗೂ ಬೆಳಿಗ್ಗೆ 8 ಘಂಟ್ಟೆಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 6 ಘಂಟೆಗೆ ಪ್ರಸಾಧ ವಿನಿಯೋಗ ಸಂಜೆ 7 ಗಂಟ್ಟೆಗೆ ಮಾರುತಿ ಭಜನ ಸಂಘದವರಿಂದ ಹಾಗೂ ವಾಸವಿ ಭಜನಾ ಮಂಡಳಿ ಮತ್ತು ಇತರೆ  ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಆದ್ದರಿಂದ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣಿಯಲ್ಲಿ ತಿಳಿಸಿದೆ.














Friday, August 8, 2014



ಮಗುವಿಗೆ ತಾಯಿಯ ಹಾಲು ಮುಖ್ಯ
ಚಿಕ್ಕನಾಯಕನಹಳ್ಳಿ,: ಮಗುವಿಗೆ ತಾಯಿಯ ಹಾಲು ಹೆಚ್ಚಾಗಿ ಕುಡಿಸಿದಷ್ಟು ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು, ಕ್ಷಯ, ಟಿ.ಬಿ. ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳು ಬರುವುದಿಲ್ಲ ಎಂದು ಡಾ.ಚಂದನ ಹೇಳಿದರು.
ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖಾ, ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ, ಶಿಶು ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಗಸ್ಟ್ ಮೊದಲ ವಾರದಲ್ಲಿ ವಿಶ್ವ ಸ್ತನ್ಯಪಾನ ದಿನಾಚಾರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ, ತಾಯಿಯ ಹಾಲು ಅಮೃತವಿದ್ದಂತೆ ಇದು ದೇವರ ಕೊಡುಗೆ  ತಾಯಿ ಹಾಲಿನಲ್ಲಿ ಮಗುವಿಗೆ ಬೇಕಾದ ಪೋಷ್ಠಿಕಾಂಶವಿದ್ದು ಮಗು ತಾಯಿಯ ಹಾಲು ಕುಡಿದಷ್ಟು ಆರೋಗ್ಯವಾಗಿರುತ್ತದೆ, ಈ ಹಾಲಿನಲ್ಲಿ ಮಗು ಹಾಲು ಕುಡಿದಷ್ಟು ತಾಯಿಯ ಸೌಂದರ್ಯ ಕಡಿಮೆಯಾಗುವುದು ಎಂಬ ಕಲ್ಪನೆ ನಮ್ಮ ನಗರ ಪ್ರದೇಶದ ತಾಯಂದಿರಲ್ಲಿದೆ, ಇದು ತಪ್ಪು ಕಲ್ಪನೆಯಾಗಿದೆ ಎಂದ ಅವರು ಮಗು ತಾಯಿಯ ಹಾಲು ಕುಡಿದಷ್ಟು ತಾಯಿಯ ಸೌಂದರ್ಯ ಹೆಚ್ಚಾಗುತ್ತದೆ ಇದರಿಂದ ಗಭರ್ಿಣಿ ಸ್ತ್ರೀಯರು ಹೆಚ್ಚು ಹೆಚ್ಚಾಗಿ ಹಾಲು ಪಡೆಯಲು ದ್ವಿದಳ ಧಾನ್ಯಗಳು, ಗೋಧಿ ಪಾಯಸ, ಸೊಪ್ಪು, ಸಬಾಕ್ಸಿ ಸೊಪ್ಪು ಕಡಲೆ ಕಾಯಿ, ನುಗ್ಗೆಕಾಯಿ ಮುಂತಾದ ಆಹಾರ ಸೇವಿಸುವಂತೆ ಸಲೆಹ ನೀಡಿದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ತಾಯಿಯ ಎದೆ ಹಾಲು ಮಗುವಿಗೆ ದಿವ್ಯ ಔಷಧಿ, ಮಗುವಿನ ದೈಹಿಕ ಮಾನಸಿಕ ಸದೃಢವಾಗಲು ಮಗುವಿಗೆ ತಾಯಿಯ ಹಾಲು ನೀಡಿದರೆ ಮಗು ಅನಾರೋಗ್ಯಕ್ಕೆ ತುತ್ತಾಗದೆ ಆರೋಗ್ಯವಂತವಾಗಿರುತ್ತದೆ, ಇಂದಿನ ವಿದ್ಯಾವಂತ ಹೆಣ್ಣು ಮಕ್ಕಳು ಮಗುವಿಗೆ ಹಾಲುನ್ನು ಕುಡಿಸಲು ಮೀನಾಮೇಶ ಎಣಿಸುತ್ತಿದ್ದಾರೆ ಇದು ಅಕ್ಷಮ್ಯ ಅಪರಾಧ ಇದನ್ನು ಕಾರ್ಯಕ್ರಮದಲ್ಲಿ ಅರಿತವರು ತಮ್ಮ ಅಕ್ಕಪಕ್ಕದ ಮನೆಯವರಿಗೆ ತಿಳಿ ಹೇಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಅನೀಸ್ಖೈಸರ್, ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಉಪಾಧ್ಯಕ್ಷ ವಸಂತಯ್ಯ, ಎಸಿಡಿಪಿಓ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಜಾನುವಾರು ತಪಾಸಣಾ ಶಿಬಿರ 
ಚಿಕ್ಕನಾಯಕನಹಳ್ಳಿ,: ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ ಉಚಿತ ಜಾನುವಾರು ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಏಪಡರ್ಿಸಲಾಗಿತ್ತು.
ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಏರ್ಪಡಿಸಿದ್ದ  ಈ ಶಿಬಿರದಲ್ಲಿ  ಅರಳಿಕೆರೆ ಗ್ರಾಮದ ರ್ಯತರಿಗೆ ಜಾನುವಾರುಗಳಿಗೆ ಬರುವ ವಿವಿಧ ರೋಗಗಳು ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಈ ಶಿಬಿರದಲ್ಲಿ 142 ಜಾನುವಾರುಗಳಿಗೆ ಲಸಿಕೆ ಹಾಕಿ, 450 ಕುರಿ, ಮೇಕೆ ಮತ್ತು ಕರುಗಳಿಗೆ  ಜಂತು ನಿವಾರಕ ಔಷದಿ ಕುಡಿಸಲಾಯಿತು ಮತ್ತು 8 ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಶಿಬಿರದಲ್ಲಿ ಪಶು ವೈದ್ಯರಾದ ಡಾ. ಅಜಿತ್ ಮತ್ತು ಪಶು ಪರೀಕ್ಷಕರಾದ ಶಾಂತಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು
ಹೇಮಾವತಿ ನಾಲೆ ಒಡೆದ ದುಷ್ಕಮರ್ಿಗಳ ವಿರುದ್ದ ಸಿಐಡಿ ತನಿಖೆಗೆ ಒತ್ತಾಯ
ಚಿಕ್ಕನಾಯಕನಹಳ್ಳಿ,: ಹೇಮಾವತಿ ನಾಲೆಯನ್ನು ಒಡೆದ ದುಷ್ಕಮರ್ಿಗಳ ವಿರುದ್ದ ಸಿ.ಐ.ಡಿ. ತನಿಖೆಗೆ ಒತ್ತಾಯಿಸಿ ಇದೇ 9ರಂದು(ಇಂದು) ಕೆ.ಬಿ.ಕ್ರಾಸ್ನಲ್ಲಿ ಭಾರಿ ಬಹಿರಂಗ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ತಾಲೂಕಿನ ಎಲ್ಲಾ ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಬೇಕೆಂದು ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಸಿಂಗದಹಳ್ಳಿ ರಾಜ್ಕುಮಾರ್ ಮನವಿ ಮಾಡಿದ್ದಾರೆ.
ಶನಿವಾರದಂದು ಹಮ್ಮಿಕೊಂಡಿರುವ ಭಾರಿ ಪ್ರತಿಭಟನೆಯಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಮುಖರುಗಳು ಭಾಗವಹಿಸಲಿದ್ದು, ಈ ಸಂಧರ್ಭದಲ್ಲಿ ನಾಲೆ ಒಡೆಯುವಂತಹ ದುಷ್ಕೃತ್ಯದಲ್ಲಿ ಹಾಸನ ಜಿಲ್ಲೆಯ ಚೀಫ್ ಇಂಜಿನಿಯರ್ ಮತ್ತಿತರ ಅಧಿಕಾರಿಗಳು ಸಹ ಶಾಮೀಲ್ ಆಗಿರುವುದು ಹೊರನೋಟಕ್ಕೆ ಕಂಡು ಬರುತ್ತದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ನಮ್ಮ ಜಿಲ್ಲೆಯ ಜನರ ನೀರಿನ ಭವಣೆ ತಿರಲು ಅನುಕೂಲ ಮಾಡಿಕೊಡಬೇಕು ಹಾಗೂ  ನಾವು ಇಂತಹ ಸಮಯದಲ್ಲಿ  ಸಹನೆಯಿಂದಿದ್ದರೆ ಅದನ್ನು ನಮ್ಮ ಅಸಹಾಯಕತೆ ಎಂದು ತಿಳಿಯುವ ದುಷ್ಕಮರ್ಿಗಳು ತಮ್ಮ ಉಪಠಳವನ್ನು ಅಧಿಕಗೊಳಿಸುವುದರಿಂದ ನಾವು ನಮ್ಮ ಇಚ್ಚಾ ಶಕ್ತಿಯನ್ನು ತೋರ್ಪಡಿಸಲೋಸ್ಕರ ಈ ಪ್ರತಿಭಟನೆಯಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ ಆದ್ದರಿಂದ ಆಸಕ್ತರೆಲ್ಲರೂ ಭಾಗವಹಿಸಬೇಕೆಂದು ಸಿಂಗದಹಳ್ಳಿ ರಾಜ್ಕುಮಾರ್ ಕೋರಿದ್ದಾರೆ.

ದೇವಾಲಯಗಳ ಜೀಣರ್ೋದ್ದಾರಕ್ಕಾಗಿ ಧಮೋತ್ಧಾನ ಸಂಸ್ಥೆ
ಚಿಕ್ಕನಾಯಕನಹಳ್ಳಿ,: ಪುರಾತನ ಕಾಲದ ದೇವಸ್ಥಾನ ಹಾಗೂ ಜೀಣೋಧ್ದಾರ ಆಗಬೇಕಿರುವ ದೇವಸ್ಥಾನಗಳಿಗೆ ಸಹಾಯ ಮಾಡುವಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಧಮರ್ೋತ್ಧಾನ ಟ್ರಸ್ಟ್ ಸ್ಥಾಪಿಸಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಜಿಲ್ಲಾ ಯೋಜನಾಧಿಕಾರಿ ಪಿ.ಕೆ.ಪುರುಷೋತ್ತಮ್ ತಿಳಿಸಿದರು.
ಪಟ್ಟಣದ ಕುರುಬರಹಳ್ಳಿಯಲ್ಲಿ ಅರಿವಿಲಕ್ಕಮ್ಮ ದೇವಾಲಯದ ಜೀಣೋಧ್ದಾರಕ್ಕಾಗಿ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಸಂಸ್ಥೆ ವತಿಯಿಂದ ಎರಡು ಲಕ್ಷ ರೂ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಧಮರ್ೋತ್ಥಾನ ಟ್ರಸ್ಟ್ ವತಿಯಿಂದ ಪ್ರಸಾದದ ರೂಪದಲ್ಲಿ ದೇವಾಲಯಗಳ ಜೀಣರ್ೋದ್ದಾರಕ್ಕಾಗಿ ಹಣ ನೀಡಲಾಗುತ್ತಿದೆ, ಧಮರ್ೋತ್ಥಾನ ಟ್ರಸ್ಟ್ ದೇವಾಲಯಗಳ ಅಭಿವೃದ್ದಿಗಾಗಿಯೇ ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ್ದಾರೆ. ಸಂಸ್ಥೆ ವತಿಯಿಂದ ಹಣ ನೀಡಿದ ಮೇಲೆ ಅರ್ಧಕ್ಕೆ ನಿಂತಿದ್ದ ದೇವಾಲಯಗಳು ಪೂರ್ಣವಾಗುತ್ತಿರುವ ಬಗ್ಗೆ ತಿಳಿಸಿದರಲ್ಲದೆ ಧರ್ಮಸ್ಥಳ ಸಂಸ್ಥೆ ಆರಂಭವಾಗಿ 32ವರ್ಷವಾಗಿದೆ, ತುಮಕೂರು ಜಿಲ್ಲೆಯಲ್ಲಿ ಆರಂಭವಾಗಿ ಮೂರುವರೆ ವರ್ಷವಾಗಿದ್ದು ಜಿಲ್ಲೆಯಲ್ಲಿ ಸಂಸ್ಥೆ ಅಡಿಯಲ್ಲಿ ಆರಂಭವಾಗಿರುವ ಸಂಘ-ಸಂಸ್ಥೆಗಳಿಗೆ ಒಟ್ಟು 250ಕೋಟಿ ರೂನಷ್ಟು ಸಾಲ ನೀಡಲಾಗಿದೆ ಎಂದರು.
ಧ.ಗ್ರಾ.ಸಂ.ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡಿ ಊರಿನ ದೇವಾಲಯಗಳು ಜೀಣರ್ೋದ್ದಾರವಾದರೆ ಅಲ್ಲಿನ ಜನರು ಆಧ್ಯಾತ್ಮಿಕ ನೆಮ್ಮದಿಯ ಜೊತೆಗೆ ವಿವಿಧ ರೀತಿಯಲ್ಲಿ ಅಭಿವೃದ್ದಿಯಾಗುತ್ತಾರೆ ಎಂಬುದಾಗಿ ತಿಳಿಸಿದರು.
ನಿವೃತ್ತ ಉಪನ್ಯಾಸಕ ದೊಡ್ಡಯ್ಯ ಮಾತನಾಡಿ ಧರ್ಮಸ್ಥಳ ಸಂಸ್ಥೆಯಿಂದ ಹಲವಾರು ಸಂಘ-ಸಂಸ್ಥೆಗಳಿಗೆ, ವಿದ್ಯಾಥರ್ಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಾಯ ದೊರೆಯುತ್ತಿರುವ ಬಗ್ಗೆ ಶ್ಲಾಘಿಸಿದರು.
ಸಮಾರಂಭದಲ್ಲಿ ಸ್ಪಂದನ ಪ್ರಗತಿಪರ ಜನಸೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್, ಊರಿನ ಪ್ರಮುಖರಾದ ಸಿದ್ದಯ್ಯ, ಕೆ.ಬಿ.ಲಕ್ಕಣ್ನ ಮುಂತಾದವರು ಉಪಸ್ಥಿತರಿದ್ದರು.



ಡಿ.ದೇವರಾಜು ಅರಸು ರವರ ಜನ್ಮದಿನಾಚಾರಣೆಯನ್ನು 
ವಿಜೃಂಭಣೆಯಾಗಿ ಆಚರಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ: ಕನಕದಾಸರ ಜಯಂತಿ, ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ ರೀತಿಯಲ್ಲೇ ಡಿ.ದೇವರಾಜು ಅರಸು ರವರ 99ನೇ ಜನ್ಮದಿನಾಚಾರಣೆಯನ್ನು ತಾಲ್ಲೂಕಿನಲ್ಲಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯ ಸಭೆ ತೀಮರ್ಾನಿಸಿತು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಡಿ.ದೇವರಾಜು ಅರಸುರವರ ಜನ್ಮದಿನಾಚಾರಣೆ ಆಚರಿಸುವ ಬಗ್ಗೆ ಜನಪ್ರತಿನಿಧಿಗಳ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಅರಸು ಜನಾಂಗದ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಲಾಗಿತ್ತು.
ಆಗಸ್ಟ್ 20ರಂದು ಬೆಳಗ್ಗೆ 10.30ಕ್ಕೆ ತಾಲ್ಲೂಕು ಕಛೇರಿಯಿಂದ ಹೊರಟ ವಿವಿಧ ಕಲಾ ತಂಡಗಳ ಮೆರವಣಿಗೆ ನೆಹರು ಸರ್ಕಲ್ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸುವುದು ನಂತರ ಉಪನ್ಯಾಸ, ಸ್ಪಧರ್ೆಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ ಪುರಸ್ಕಾರ, ಅಲ್ಪಸಂಖ್ಯಾತ ಇಲಾಖೆಗೆ ಸೇರಿದ ಚೆಕ್ಗಳನ್ನು ಫಲಾನುಭವಿಗಳಿಗೆ ನೀಡುವುದು, ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಶೇ.91ರಷ್ಟು ಅಂಕ ಪಡೆದ ಹಾಸ್ಟೆಲ್ಗಳಲ್ಲಿ ಓದಿದ ವಿದ್ಯಾಥರ್ಿ, ಹಾಗೂ ದೇವರಾಜ್ ಅರಸ್ರವರಿಗೆ ಬಾಡಿಗಾಡರ್್ ಆಗಿದ್ದ ಮಹಮದ್ಗೌಸ್(ಬೋರ್ವೆಲ್ ಬಾಬು), ಅರಸು ಜನಾಂಗ ರಾಜಯ್ಯನಪಾಳ್ಯದ ನಿವೃತ್ತ ಪ್ರಾಂಶುಪಾಲ ಚಂದ್ರರಾಜಅರಸ್ ಮೂವರಿಗೆ ಸನ್ಮಾನಿಸುವ ಬಗ್ಗೆ ಚಚರ್ಿಸಲಾಯಿತು.
ಕಾರ್ಯಕ್ರಮದ ಉಪನ್ಯಾಸಕ್ಕಾಗಿ ಮೈಸೂರಿನ ಪಿ.ವಿ.ನಾಗರಾಜುಅರಸ್ರವರನ್ನು ಆಹ್ವಾನಿಸುವ ಬಗ್ಗೆ ಅರಸು ಜನಾಂಗದ ಮುಖಂಡ ಗೋಪಾಲರಾಜ್ಅರಸ್ ಸಭೆಗೆ ತಿಳಿಸಿದರು. 
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ.ಕೃಷ್ಣನಾಯ್ಕ್, ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಮಲ್ಲೇಶಪ್ಪ, ಬಿ.ಇಂದಿರಾ, ರೇಣುಕಮ್ಮ, ಬಿ.ಇ.ಓ ಸಾ.ಚಿ.ನಾಗೇಶ್,  ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಕನ್ನಡ ಸಂಘದ ಸಿ.ಬಿ.ರೇಣುಕಸ್ವಾಮಿ, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಅರಸು ಜನಾಂಗದ ಅಧ್ಯಕ್ಷ ನಾಗರಾಜ್ಅರಸ್, ಗೋಪಾಲರಾಜ್ಅರಸ್, ದಲಿತ ಮುಖಂಡ ಲಿಂಗದೇವರು, ನಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.