Wednesday, December 2, 2015


ಚಿಕ್ಕನಾಯಕನಹಳ್ಳಿಯನ್ನು ಚಿಕ್ಕನಾಯಕನಗರ ಮಾಡುವ ಬಗ್ಗೆ ಸ್ಪಷ್ಟ ಅಭಿಪ್ರಾಯಕ್ಕೆ ಸಕರ್ಾರದ ಕಂದಾಯ ಇಲಾಖೆಯಿಂದ ಪತ್ರ 
ಚಿಕ್ಕನಾಯಕನಹಳ್ಳಿ, : ಚಿಕ್ಕನಾಯಕನಹಳ್ಳಿಯನ್ನು ಚಿಕ್ಕನಾಯಕನಗರ ಎಂದು ಬದಲಾವಣೆ ಮಾಡುವ ಬಗ್ಗೆ  ಸಕರ್ಾರದ ಪ್ರಧಾನ ಕಾರ್ಯದಶರ್ಿಗಳಿಂದ ತುಮಕೂರು ಜಿಲ್ಲಾಧಿಕಾರಿಗಳವರಿಗೆ ಈ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ನಿಗದಿತ ನಮೂನೆಯಲ್ಲಿ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ಪತ್ರ ಬರೆದಿದೆ ಎಂದು  ಕ.ರ.ವೇ ತಾಲೂಕು ಘಟಕದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.
ಚಿಕ್ಕನಾಯಕನಗರ ಎಂದು ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ತಾಲ್ಲೂಕಿನ ಕನರ್ಾಟಕ ರಕ್ಷಣಾ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ವಿರೋಧ ಪಕ್ಷದ ನಾಯಕರಾದ ಜಗದೀಶ್ಶೆಟ್ಟರ್ರವರಿಗೆ, ಹೆಚ್.ಡಿ.ಕುಮಾರಸ್ವಾಮಿಯವರಿಗೆ, ತುಮಕೂರಿನ ಜಿಲ್ಲಾಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದರು,
 ಸ್ಥಳ ಬದಲಾವಣೆಯ ಬಗ್ಗೆ ಭಾರತ ಸಕರ್ಾರದ ಗೃಹ ಮಂತ್ರಾಲಯ ಮಾರ್ಗಸೂಚಿಯನ್ನು ಹೊರಡಿಸಿದ್ದು ಈ ಮಾರ್ಗಸೂಚಿಗಳನ್ವಯ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯದೊಂದಿಗೆ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಕಂದಾಯ ಇಲಾಖೆಯ ಅಧಿಕಾರಿಗಳು  ತಹಶೀಲ್ದಾರ್ರವರಿಗೆ ಪತ್ರವನ್ನು ಕಳುಹಿಸಿದ್ದಾರೆ. 
ಈ ವಿಚಾರವಾಗಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಾದ ತಾ.ಕನ್ನಡ ಸಾಹಿತ್ಯ ಪರಿಷತ್, ದಲಿತ ಸಂಘರ್ಷ ಸಮಿತಿ, ಕನರ್ಾಟಕ ರಾಜ್ಯ ನೌಕರರ ಸಂಘ ತಾಲ್ಲೂಕು ಘಟಕ, ಸುಭಾಷ್ ಚಂದ್ರಬೋಸ್ ಆಟೋಚಾಲಕರ ಮತ್ತು ಮಾಲೀಕರ ಸಂಘ, ಪತ್ರಕರ್ತರ ಸಂಘ, ರೈತ ಸಂಘ ಹಸಿರು ಸೇನೆ, ವಿವಿಧ ಸಾಹಿತಿಗಳು, ತಾಲ್ಲೂಕು ದಿನಸಿವರ್ತಕರ ಸಂಘ, ಕಾಮರ್ಿಕ ಸಂಘಟನೆ, ಶ್ರೀ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಗಳು ತಮ್ಮಡಿಹಳ್ಳಿ ಮಠ, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘ, ರಸ್ತೆಬದಿ ವ್ಯಾಪಾರಿಗಳ ಸಂಘ, ವಿದ್ಯಾಥರ್ಿ ಸಂಘಟನೆಗಳು, ನೇಕಾರರ ಒಕ್ಕೂಟ, ಕಂಬಳಿ ನೇಕಾರರು, ರೇಷ್ಮೆನೇಕಾರರ ಒಕ್ಕೂಟ, ಸವಿತಾ ಸಮಾಜ, ಕನರ್ಾಟಕ ರಕ್ಷಣಾ ವೇದಿಕೆ, ನಾಡಜಾಗೃತಿ ವೇದಿಕೆ, ಟಿಪ್ಪುಸುಲ್ತಾನ್ ಕಮಿಟಿ ಮುಂತಾದ ಸಂಘ ಸಂಸ್ಥೆಗಳ 2ಸಾವಿರ ಜನರ ಸಹಿಗಳು ಫೆಬ್ರವರಿ 20ರ 2015ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಯಚಂದ್ರರವರು ಹಾಗೂ ಸಂಸದ ಮುದ್ದಹನುಮೇಗೌಡರಿಗೂ ಮನವಿ ಸಲ್ಲಿಸಿದ್ದರು.


ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ,ಡಿ.02 : ತಾಲ್ಲೂಕಿನ ಗೋಡೆಕೆರೆಯ ಗುರುಸಿದ್ದರಾಮೇಶ್ವರಸ್ವಾಮಿ ಕಾತರ್ಿಕ ಮಾಸದ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದೊಂದಿಗೆ ಜಗೋಸಿರಾ ಕಪ್-2015 ರಾಜ್ಯಮಟ್ಟದ ಪುರುಷರ ಖಾಸಗಿ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಡಿ.7ರಿಂದ 9ರವರೆಗೆ ನಡೆಯಲಿದೆ.
ಗೋಡೆಕೆರೆಯ ತಪೋವನದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ 40ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 25ಸಾವಿರ ಹಾಗೂ ಟ್ರೋಪಿ, ಸೆಮಿಫೈನಲ್ನಲ್ಲಿ ಪರಾಜಿತ ತಂಡಗಳಿಗೆ ತಲಾ 10ಸಾವಿರ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ಇದೆ ಎಂದು ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮ ಡಿ.7ರಂದು ಬೆಳಗ್ಗೆ 7.30ಕ್ಕೆ ಉದ್ಘಾಟನೆ ನೆರವೇರಲಿದ್ದು ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ಹಾಗೂ ಸಿದ್ದರಾಮದೇಶೀಕೇಂದ್ರಸ್ವಾಮಿಗಳು ದಿವ್ಯ ಸಾನಿದ್ಯ ವಹಿಸುವರು. ಮಾಜಿ ಸಂಸದ ಜಿ.ಎಸ್.ಬಸವರಾಜು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಗೋಡೆಕೆರೆಯ ಎಲ್.ಬಿ.ಎಸ್.ಸಿ ಗೌರವಾಧ್ಯಕ್ಷ ಎನ್.ಆರ್.ಆದರ್ಶಕುಮಾರ್ರವರಿಂದ ಆಶಯ ನುಡಿ. ನಿವೃತ್ತ ಐ.ಎ.ಎಸ್.ಅಧಿಕಾರಿ ಡಾ.ಸಿ.ಸೋಮಶೇಖರ್, ಮಾಜಿ ಶಾಸಕಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ..ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ್, ಎ.ಬಿ.ರಮೇಶ್ಕುಮಾರ್, ತುಮಕೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಸುರೇಶ್ ಹಳೆಮನೆ ಮತ್ತಿತರರು ಭಾಗವಹಿಸುವರು.
ಡಿ.8ರಂದು ಸಂಜೆ 7.30ಕ್ಕೆ ಸಮಾರಂಭ ನಡೆಯಲಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಧ್ಯಕ್ಷತೆ ವಹಿಸುವರು. ತು.ಜಿ.ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ, ಟೂಡಾ ಅಧ್ಯಕ್ಷ ಶಿವಮೂತರ್ಿ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ದ್ರಾಕ್ಷಾಯಿಣಿ ಕೆಂಪರಾಜು ಹಾಗೂ ಚಲನಚಿತ್ರ ಹಾಸ್ಯ ನಟ ಚಿಕ್ಕಣ್ಣ ಮತ್ತಿತರರು ಭಾಗವಹಿಸುವರು.
ಡಿ.9ರಂದು ನಡೆಯುವ ಸಮಾರೋಪ ಸಮಾರಂಭ ರಾತ್ರಿ 9ಕ್ಕೆ ಆರಂಭವಾಗಲಿದೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಜೆ.ಡಿ.ಎಸ್ ಮುಖಂಡ ಬಿ.ಎಂ.ಎಲ್ ಕಾಂತರಾಜು, ಜೆಡಿಎಸ್ ಜಿ.ಪ್ರ.ಕಾರ್ಯದಶರ್ಿ ಜಿ.ನಾರಾಯಣ್ ಬಹುಮಾನ ವಿತರಿಸುವರು. ಮುಖಂಡರುಗಳಾದ ಕಲ್ಲೇಶ್, ಹನುಮಂತೇಗೌಡ, ಶ್ರೀಕಾಂತ್, ಬಿ.ಎನ್.ಶಿವಪ್ರಕಾಶ್, ವಿ.ಜಯರಾಂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ  ಕಬಡ್ಡಿ ತಂಡಗಳು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.


                                   
ಚಿಕ್ಕನಾಯಕನಹಳ್ಳಿ ಪಟ್ಟಣದ ರೋಟರಿ ಶಾಲೆ ವತಿಯಿಂದ ಸಕರ್ಾರಿ ಉದರ್ು ಶಾಲೆ ಹಾಗೂ ನೀರಬಾಗಿಲು ಶಾಲೆಯ ವಿದ್ಯಾಥರ್ಿಗಳಿಗೆ ಉಚಿತ ಪುಸ್ತಕ, ಪೆನ್ನು ಜಾಮಿಟ್ರಿ ಬಾಕ್ಸ್ ವಿತರಿಸಲಾಯಿತು. ರೋಟರಿ ಟ್ರಸ್ಟ್ನ  ನಿದರ್ೇಶಕ ಚಾಂದ್ಪಾಷ, ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಕೆ.ಮಂಜುನಾಥ್, ಶಿಕ್ಷಕರಾದ ಅಪ್ರೋಜಾ, ರಿಜ್ವಾನ್ ಉಪಸ್ಥಿತರಿದ್ದರು.


ರಾಜ್ಯಮಟ್ಟದ ಇನ್ಸ್ಪೈರ್ ಅವಾಡರ್್ಗೆ ತಾಲ್ಲೂಕಿನ ಬರಕನಾಳು ವಿದ್ಯಾಥರ್ಿ ದರ್ಶನ್ಕುಮಾರ್
ಚಿಕ್ಕನಾಯಕನಹಳ್ಳಿ,: ರಾಜ್ಯ ಮಟ್ಟದ ಇನ್ಸ್ಪೈರ್ ಅವಾಡರ್್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಬರಕನಾಳು ಗ್ರಾಮದ  ಶ್ರೀ ವಿಶ್ವಭಾರತಿ ಪ್ರೌಢಶಾಲೆಯ ವಿದ್ಯಾಥರ್ಿ ದರ್ಶನ್ಕುಮಾರ್ ಕೆ.ಆರ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ   ಬಿ.ಇ.ಓ.ಕೃಷ್ಣಮೂತರ್ಿ ವಿದ್ಯಾಥರ್ಿಯನ್ನು ಅಭಿನಂದಿಸಿದ್ದಾರೆ.
ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ನಡೆಸಿದ ಈ ಸ್ಪಧರ್ೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದು,  10ನೇ ತರಗತಿ ಓದುತ್ತಿರುವ ದರ್ಶನ್ಕುಮಾರ್ ಡೆಲ್ಲಿಯಲ್ಲಿ ನಡೆಯುವ ಸ್ಪಧರ್ೆಯಲ್ಲಿ ಭಾಗವಹಿಸಲಿದ್ದಾನೆ.
ಈತ ತಯಾರಿಸಿರುವ ಬಹು ಉಪಯೋಗಿ ಕೃಷಿ ಯಂತ್ರ(ರೈತ ಮಿತ್ರ) ಎಂಬ ಸಲಕರಣೆಯು ಐದು ಯಂತ್ರಗಳು ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡಲಿದ್ದು, ಈ ಯಂತ್ರವು  ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ಮೆಚ್ಚುಗೆ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.  ಈ ಯಂತ್ರವು ಹೈಡ್ರಾಲಿಕ್ ತತ್ವದ ಆಧಾರದ ಮೇಲೆ ಕೆಲಸ ನಿರ್ವಹಿಸಲಿದ್ದು, ಪ್ಯಾಸ್ಕಲ್ ನಿಯಮದ ತತ್ವವನ್ನು ಹೊಂದಿದೆ.
ಈ ಯಂತ್ರದಿಂದ ಹೊಲಗಳಲ್ಲಿ ಗೊಬ್ಬರ ಚೆಲ್ಲುವುದು, ಉಳುಮೆ ಮಾಡುವುದು, ಹುಲ್ಲನ್ನು ಕತ್ತರಿಸುವುದು, ಗುಂಡಿ ತೋಡುವುದು, ಔಷಧಿ ಸಿಂಪಡಣೆ ಮಾಡುವುದು. ಈ ಐದು ಕೆಲಸಗಳನ್ನು ಈ ಒಂದು ಯಂತ್ರವೇ  ನಿರ್ವಹಿಸುವುದರಿಂದ ಕೂಲಿ ಕಾಮರ್ಿಕರ ಬಳಕೆಯನ್ನು ಕಡಿಮೆ ಮಾಡಬಹುದು, ಕಾಮರ್ಿಕರ ಕೊರತೆಯನ್ನು ನಿವಾರಣೆ ಮಾಡುವುದು ಹಾಗೂ ಆಥರ್ಿಕ ತೊಂದರೆಯನ್ನು ನಿವಾರಣೆ ಮಾಡಲು ಇದೊಂದು ಒಳ್ಳೆಯ ಸಾಧನವಾಗಿದೆ. ಈ ವಿದ್ಯಾಥರ್ಿಗೆ ಶಿಕ್ಷಕ ಉಮೇಶ್ ಕೆ.ಎಂ. ಮಾರ್ಗದರ್ಶನ ಮಾಡಿದ್ದಾರೆ. ವಿದ್ಯಾಥರ್ಿಯನ್ನು ಶಾಲೆಯ ಮುಖ್ಯೋಪಾಧ್ಯಾಯ ಅನಂತರಾಜು ಅಭಿನಂದಿಸಿದ್ದಾರೆ. 

 

Monday, November 30, 2015


ಪಟ್ಟಣದಲ್ಲಿ ಕಂಬಳಿ ಸಮುದಾಯ ಭವನ ಶೀಘ್ರ ಆರಂಭ 
ಚಿಕ್ಕನಾಯಕನಹಳ್ಳಿ,ನ.30 : ಪಟ್ಟಣದಲ್ಲಿ ಕಂಬಳಿ ಭವನ ನಿಮರ್ಿಸಲು ಸಕರ್ಾರ ಹಣ ಬಿಡುಗಡೆ ಮಾಡಿದ್ದು ಶೀಘ್ರವೇ ಪಟ್ಟಣದಲ್ಲಿ ಕಂಬಳಿ ಸಮುದಾಯ ಭವನ ನಿಮರ್ಾಣವಾಗಲಿದೆ ಎಂದು ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟಗಾರರ ಸೊಸೈಟಿಯ ನಿದರ್ೇಶಕ ಸಿ.ಡಿ.ಚಂದ್ರಶೇಖರ್ ತಿಳಿಸಿದರು. 
ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟಗಾರರ ಸೊಸೈಟಿಯಲ್ಲಿ ನಡೆದ ಅರ್ಹ ನೇಕಾರರಿಗೆ ಕುಂಚಿಗೆ ವಿತರಣಾ ಸಮಾರಂಭ, ಸನ್ಮಾನ ಕಾರ್ಯಕ್ರಮ ಹಾಗೂ ಕನಕದಾಸರ ಜಯಂತ್ಯೋತ್ಸವದ ಉದ್ಘಾಟನೆ ನೆರವೇರಿಸಿ  ಮಾತನಾಡಿದ ಅವರು ಕಂಬಳಿ ಸೊಸೈಟಿಗೆ ಅಗತ್ಯವಾಗಿರುವ ಕಟ್ಟಡ ನಿಮರ್ಿಸಲು ಸಕರ್ಾರಕ್ಕೆ ಸೊಸೈಟಿಯ ಅಧ್ಯಕ್ಷರು ಹಾಗೂ ನಿದರ್ೇಶಕರುಗಳು ಮನವಿ ಸಲ್ಲಿಸಿದ್ದು ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸಮುದಾಯ ಭವನ ನೀಡಿದ್ದಾರೆ ಹಾಗೂ ಸೊಸೈಟಿಗಾಗಿ ಬುಲೆರೋ ಕಾರು ವಾಹನವನ್ನು ನೀಡಿದ್ದಾರೆ, ಸಮುದಾಯ ಭವನಕ್ಕೆ ಹಣ ಬಿಡುಗಡೆಯಾಗಿದ್ದು ಭವನ ನಿಮರ್ಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ, ನಿಮರ್ಾಣವಾಗುವ ಕಂಬಳಿ ಭವನದಲ್ಲಿ ಕಂಬಳಿ ತಯಾರಿಕೆಗೆ ನೆರವಾಗುವ ಸೌಕರ್ಯಗಳನ್ನು ಇರಿಸಲಾಗುವುದು, ನೇಕಾರರಿಗೆ ಅನುಕೂಲವಾಗುವಂತೆ ಕಟ್ಟಡ ನಿಮರ್ಾಣವಾಗುವುದು ಎಂದರಲ್ಲದೆ  2009ರಲ್ಲಿ ಕಂಬಳಿ ಸೊಸೈಟಿಗೆ ಇದೇ ತಂಡದ ಸದಸ್ಯರು ಆಯ್ಕೆಯಾದ ಸಂದರ್ಭ ಅಧ್ಯಕ್ಷರಾಗಿದ್ದಾಗ 16300 ರೂ ಹಣ ಶೇಖರಣೆಯಾಗಿದ್ದು ಸೊಸೈಟಿಯ ಎಲ್ಲರ ಉತ್ತಮ ಕಾರ್ಯದಿಂದ ಇಂದು 12.50ಲಕ್ಷ ಹಣ ಉಳಿತಾಯವಾಗಿದೆ  ಎಂದ ಅವರು ಸಕರ್ಾರ ಕಂಬಳಿ ನೇಕಾರರ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು. 
ಕಂಬಳಿ ಸೊಸೈಟಿ ಅಧ್ಯಕ್ಷ ಕೆ.ಪಿ.ಧೃವಕುಮಾರ್ ಮಾತನಾಡಿ, ಕಂಬಳಿ ನೇಕಾರರಿಗೆ ವಿವಿಧ ರೀತಿಯ ಅಲಂಕಾರಿಕೆಯ ಕಂಬಳಿ ತಯಾರಿಸುವ ಬಗ್ಗೆ ತರಬೇತಿ ಅಗತ್ಯವಾಗಿದ್ದು, ಅಲಂಕಾರಿಕಾ ಕಂಬಳಿಗಳಿಗೆ ಉತ್ತಮ ಬೆಲೆ ಸಿಗಲಿದೆ, ಕಂಬಳಿ ನೇಕಾರರು ತಾವು ತಯಾರಿಸಿದ ಕಂಬಳಿಗಳನ್ನು ಮಾರಾಟ ಮಾಡಲು ಕಂಬಳಿ ಸೊಸೈಟಿಗೆ ತಂದು ಮಾರಾಟ ಮಾಡಿದರೆ ನೇಕಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಇದರಿಂದ ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಬಹುದು ಎಂದರಲ್ಲದೆ ಕಂಬಳಿ ಸೊಸೈಟಿಗೆ ನಿಮರ್ಾಣವಾಗುವ ನೂತನ ಕಟ್ಟಡ ಶೀಘ್ರವೇ ಪ್ರಾರಂಭವಾಗುವುದು ಎಂದ ಅವರು ನೇಕಾರರಿಗೆ ಈಗ ಉಚಿತವಾಗಿ ಕುಂಚಿಗೆ ನೀಡಿದ್ದು ಇನ್ನು ಮುಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಕುಂಚಿಗೆ, ಭಂಡ, ಹುಣಸೆಹಿಟ್ಟು ಹಾಗೂ ಕಂಬಳಿ ತಯಾರಿಕೆಗೆ ಅವಶ್ಯವಿರುವ ವಸ್ತುಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಸಿ.ಬಿ.ಲೋಕೇಶ್, ನೇಕಾರರ ಮಕ್ಕಳು ತುಂಬ ಕಡುಬಡವರಾಗಿದ್ದಾರೆ ತಮ್ಮ ಜೀವನ ರೂಪಿಸಿಕೊಳ್ಳಲು ಇಂದು ಗುಳೇ ಹೋಗುತ್ತಿದ್ದಾರೆ ಅದನ್ನು ತಡೆಗಟ್ಟಲು ನೇಕಾರರಿಗೆ ಹಾಗೂ ಅವರ ಮಕ್ಕಳಿಗೆ ಸಕರ್ಾರದಿಂದ ಸಿಗುವಂತಹ ಸೌಲಭ್ಯವನ್ನು ನಿದರ್ೇಶಕರುಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ ನೇಕಾರರಿಗೆ ಸೌಲಭ್ಯ ದೊರಕಿಸಿಕೊಡಬೇಕು ಇದರಿಂದ ನೇಕಾರರ ಮಕ್ಕಳು ವಿದ್ಯಾಭ್ಯಾಸದತ್ತ ಗಮನ ಹರಿಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಂಬಳಿ ಸೊಸೈಟಿ ಉಪಾಧ್ಯಕ್ಷ ಶಶಿಧರ್, ನಿದರ್ೇಶಕರುಗಳಾದ ಭಾರತಮ್ಮ, ಸಿ.ಹೆಚ್.ಅಳವೀರಯ್, ಗೋವಿಂದಯ್ಯ, ವಿಜಯ್ಕುಮಾರ್, ಸಿ.ಜಿ.ಬೀರಲಿಂಗಯ್ಯ, ಸಿ.ಪಿ.ಗಂಗಾಧರಯ್ಯ, ಪಂಕಜಮ್ಮ, ಕಾರ್ಯದಶರ್ಿ ಎ.ಕೋದಂಡರಾಮಯ್ಯ , ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಜಯದೇವ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ಶೀಷರ್ಿಕೆ : 

ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭದ ಮುನ್ಸೂಚನೆ 
ಚಿಕ್ಕನಾಯಕನಹಳ್ಳಿ,ನ.30 : ಕಳೆದ 3 ದಿನಗಳಿಂದ ಮಳೆ ಬಿಡುವು ಕೊಟಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು, ತಾಲ್ಲೂಕಿನಾಧ್ಯಂತ ಕೊಯ್ಲು ಭರದಿಂದ ಸಾಗಿತ್ತು, ತಾಲ್ಲೂಕಿನಲ್ಲಿ ಶೇ.40 ಭಾಗ ಬೆಲೆ ಕಟಾವು ಕಾರ್ಯ ಮುಗಿದಿದೆ ಮತ್ತೆ ಮೋಡಗಳು ನೆಳ್ಳಂಜಿ ಆಟ ಶುರುಮಾಡಿದ್ದು ರೈತರನ್ನು ಕಂಗೆಡಿಸಿದೆ.
    ಈಗಾಗಲೆ ಕೊಯ್ಲು ಮಾಡಿರುವ ಸಾವೆಯನ್ನು ರಸ್ತೆ ಮೇಲೆ ಹರಡಿ ಅಚ್ಚುಕಟ್ಟು ಮಾಡುತ್ತಿದ್ದ ದೃಶ್ಯ ವ್ಯಾಪಕವಾಗಿ ಕಂಡುಬಂತು. ಕೊಯ್ಲಾಗಿರುವ ರಾಗಿಯನ್ನು ಹೊಲಗಳಲ್ಲೇ ಗುಪ್ಪೆ ಹಾಕುತ್ತಿದ್ದ ದೃಶ್ಯ ಕೆಲವೆಡೆ ಕಂಡುಬಂತು. ಕಟಾವು ಮುಂದುವರೆಸುವುದೋ ಬೇಡವೋ ಎಂಬ ಗೊಂದಲದಲ್ಲೇ ಕೆಲವರು ರಾಗಿ ಕಟಾವಿಗೆ ಮುಂದಾದರು.
  ತೋಯ್ದು ಹಾಳಾಗಿದ್ದ ನವಣೆ ಸಿವುಡುಗಳನ್ನು ಟಾಪರ್ಾಲಿನ್ ಹರಡಿ ಒಣಗಿಸುತ್ತಿದ್ದ, ಹೊಸಹಟ್ಟಿ ಶಿವಣ್ಣ ಮಾತನಾಡಿ, ಬೆಳೆ ಚನ್ನಾಗಿ ಬಂದಿತ್ತು ಸೈಕ್ಲೋನ್ ಬಂದು ಎಲ್ಲಾ ಹಾಳು ಮಾಡಿತು, ಹೇಗೋ  ಬಿಡ್ತು ಅಂದ್ಕೊಳೋ ಹೊತ್ಗೆ ಮತ್ತೆ ಮೊಡಗಳು ಊದ್ಕಂಡ್ ಬತರ್ಿದಾವೆ. ಈಗಾಗ್ಲೆ ನವಣೆ ನೆಂದು ತೆನೆ ಕಪ್ಪು ಗಟ್ಟಿವೆ. ಎಲ್ಲಿ ಮೊಳಕೆ ಬಂದ್ ಬಿಡುತ್ತೋ ಅನ್ನೋ ಭಯದಿಂದ ದಿನಾಲೂ ಒಣಗುಸ್ಥಿದೀನಿ. ಮತ್ತೆ ಮಳೆ ಶುರುವಾದ್ರೆ ದೇವರೇ ಗತಿ ಎಂದರು.
  ರೈತ ಮಹಿಳೆ ತಿಮ್ಮಕ್ಕ ಮಾತನಾಡಿ, ಬೆಳಗ್ಗಿನಿಂದ ಮಳೆ ಮೋಡ ಕಾಣಿಸ್ಕಂತಿದಾವೆ, ಕಾನ್ಕೆರೆಯಿಂದ ಆಳುಗಳನ್ನ ಕರೆತಂದಿದ್ದೀವಿ. ಈಗ ಕೊಯ್ಲು ಮಾಡುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಕೊಯ್ದರೆ ರಾಗಿ ಮಳೆಗೆ ನೆನೆಯುತ್ತದೆ. ಬಿಟ್ಟರೆ ಬಂದ ಆಳುಗಳಿಗೆ ಪುಗುಸಟ್ಟೆ ಕೂಲಿ ಕೊಡಬೇಕು. 2 ದಿನಗಳಿಂದ ಕೊಯ್ಲು ಮಾಡಿದ್ದೀವಿ. ಮಳೆ ಬಂದರೆ ಎಲ್ಲಾ ಹಾಳು. ಎರಡು ಎಕರೆ ರಾಗಿ ಬೆಳೆಯಲು, ಉಳುಮೆ, ಅತರ್ೆ, ಗೊಬ್ಬರ ಅಂತ ರೂ.6 ಸಾವಿರ ಕಚರ್ಾಗೈತೆ. ಮಳೆ ಬರವು ನೀಡಿದ್ದರೆ 8-10ಪಲ್ಲ ರಾಗಿ ಆಗಿರುತ್ತಿತ್ತು, ಮಳೆಯಿಂದ ಎಲ್ಲಾ ಹಾಳು ಎಂದು ನಿಟ್ಟುಸಿರು ಬಿಟ್ಟರು.
  ರೈತ ದಾಸಪ್ಪ ಮಾತನಾಡಿ, ಈಗಾಗಲೇ ಸಾವೆ, ನವಣೆ, ಕೊರಲೆ  ಮಳೆಗೆ ಹಾಳಾಗಿವೆ. ಮೊದಲ ಹಂತದಲ್ಲಿ ಬಿತ್ತನೆಯಾಗಿರುವ ರಾಗಿಯೂ ತೆನೆಯಲ್ಲಿ ಮೊಳಕೆಯೊಡೆದಿದೆ. ಎರಡನೇ ಹಂತದಲ್ಲಿ ಬಿತ್ತನೆಯಾಗಿರುವ  ರಾಗಿಯಾದರೂ  ಕೈ ಸೇರಬಹುದು ಎಂಬ ಆಸೆಯಿಂದ ಜನ ಕೊಯ್ಲು ಶುರು ಮಾಡಿದ್ದಾರೆ. ಮತ್ತೆ ಮಳೆ ಬಂದರೆ ಎಲ್ಲಾ ಮುಗಿಯಿತು ಎಂದು ಆಕಾಶ ದಿಟ್ಟಿಸಿದರು.
 ಅಜರ್ಿ ಸಲ್ಲಿಸಿ: ಮತ್ತೆ ಮುಂದಿನ 4 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳುತ್ತಿದೆ. ಆದ್ದರಿಂದ ರೈತರು ನೋಡಿಕೊಂಡು ಕಟಾವು ಮಾಡಬೇಕು. ಮತ್ತೆ ಮಳೆ ಬಂದರೆ ಸಂಪೂರ್ಣ ಬೆಲೆ ಹಾನಿ ಸಂಭವಿಸುತ್ತದೆ. ಬೆಳೆ ಹಾನಿಯ ಬಗ್ಗೆ  ಪ್ರತ್ಯೇಕ ಸಮೀಕ್ಷೆ ಮಾಡಲು ಇಲಾಖೆಗೆ ಅಧಿಕಾರ ಇಲ್ಲ. ಆದ್ದರಿಂದ ಬೆಳೆ ಹಾನಿ ಬಗ್ಗೆ ರೈತರಿಂದ ಮನವಿ ಸ್ವೀಕರಿಸಲಾಗುತ್ತಿದೆ. ರೈತರು ಹಾಳಾಗಿರುವ ಬೆಳೆ ತಾಕಿನ ಫೋಟೋ, ಪಹಣಿ ಹಾಗೂ ಬ್ಯಾಂಕ್ ಅಕೌಂಟ್ ಛಾಯಾ ಪ್ರತಿಯೊಂದಿಗೆ ಕಛೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ಹಾನಿ ಪರಿಹಾರಕ್ಕಾಗಿ ಮನವಿ ಸಲ್ಲಿಸಬಹುದು ಎಂದು ತಾಲ್ಲೂಕು ಕೃಷಿ ಇಲಾಖೆ ಉಪನಿದರ್ೇಶಕ ಎಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ. 

:ಶ್ರಮ ಸಂಸ್ಕೃತಿಯ ಭಾಗವಾಗಿ ರಚನೆಯಾಗಿರುವ ಕನಕ ಕೀರ್ತನೆಗಳು ಸಾರ್ವಕಾಲಿಕ
ಚಿಕ್ಕನಯಕನಹಳ್ಳಿ,ನ.30 : :ಶ್ರಮ ಸಂಸ್ಕೃತಿಯ ಭಾಗವಾಗಿ ರಚನೆಯಾಗಿರುವ ಕನಕ ಕೀರ್ತನೆಗಳು ಸಾರ್ವಕಾಲಿಕ, ಅವು ದೈವೀ ನಿವೇಧನೆಯಂತೆ ಕಂಡರೂ ಸಮಾಜದ ಪಿಡುಗನ್ನು ಸರಿಮಾಡುವ ಚಿಕಿತ್ಸಕ ಮನೋಧೋರಣೆ ಹೊಂದಿರುವಂಥವು ಎಂದು ಉಪನ್ಯಾಸಕ ಸಿ.ರವಿಕುಮಾರ್ ಹೇಳಿದರು.
  ಪಟ್ಟಣದ ಸುಭಾಸ್ಚಂದ್ರಬೋಸ್ ಆಟೋ ಚಾಲಕ ಹಾಗೂ ಮಾಲೀಕರ ಸಂಘ ಮತ್ತು ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ 'ಕನಕನ ತಾತ್ವಿಕ ಚಿಂತನೆ' ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕನ ಚಿಂತನೆಗಳು ಸರ್ವಕಾಲಕ್ಕೂ ಸಲ್ಲುವಂಥವು ಎಂದರು.
   ಕಸಾಪ ಜಿಲ್ಲಾ ಸಂಚಾಲಕ ಸಿ.ಗುರುಮೂತರ್ಿ ಕೊಟ್ಟಿಗೆಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಸಂಘಟಿತ ಸಮುದಾಯಗಳ ಪ್ರತಿನಿಧಿಯಾಗಿರುವ ಕನಕನ ಚಿಂತನೆಗಳು ತಳ ಸಮುದಾಯಗಳಿಗೆ ಆಸರೆಯಾಗಬಲ್ಲವು. ಕನಕದಾಸರ ಒಡಪು ಹಾಗೂ ಮಂಡಿಗೆಗಳ ಮೇಲೆ ಬೆಳಕು ಚಲ್ಲುವ ಸಂಶೋಧನೆಗಳು ನಡೆಯಬೇಕಿದೆ ಎಂದರು.
   ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ,ವರ್ಗ ಹಾಗೂ ಜಾತಿ ಸಂಘರ್ಷಗಳನ್ನು ಮೆಟ್ಟಿನಿಂತು ಸಮ ಸಮಾಜ ನಿಮರ್ಾಣಕ್ಕೆ ದುಡಿದವರ ದೊಡ್ಡ ಪರಂಪರೆ ಬುದ್ಧನಿಂದ ಆರಂಭಗೊಂಡು ಬಸವಣ್ಣ, ಕನಕದಾಸ ಹಾಗೂ ಅಂಬೇಡ್ಕರ್ ಹೀಗೆ ಸಾಗಿಬರುತ್ತದೆ ಎಂದರು. 
   ಆಟೋಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಸಂಗೋಳ್ಳಿ ರಾಯಣ್ಣ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿದ್ಧು.ಜಿ.ಕೆರೆ ಮುಂತಾದವರು ಉಪಸ್ಥಿತರಿದ್ದರು.


ಗೋಡೆಕೆರೆಯಲ್ಲಿ ಡಿ.8ರಂದು ಲಕ್ಷ ದೀಪೋತ್ಸವ
ಚಿಕ್ಕನಾಯಕನಹಳ್ಳಿ,ನ.30 : ತಾಲ್ಲೂಕಿನ ಗೋಡೆಕೆರೆಯ ಸಿದ್ದರಾಮೇಶ್ವರ ದೇವಾಲಯದಲ್ಲಿ ಕಾತರ್ಿಕ ಮಾಸದ ಅಂಗವಾಗಿ ಡಿ.8ರಂದು ಬೆಳಗಿನ 5.30ಕ್ಕೆ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಕೈಂಕರ್ಯ ಸೇವಾ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಲಕ್ಷದೀಪೋತ್ಸವದ ಅಂಗವಾಗಿ ಡಿ. 7ರಂದು ರಾತ್ರಿ 8.ಕ್ಕೆ ಅನ್ನದಾಸೋಹ ನಡೆಯಲಿದೆ. ಡಿ.8ರಂದು ಲಕ್ಷದೀಪೋತ್ಸವ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 7.30ಕ್ಕೆ ಶ್ರೀ ಬಸವಲಿಂಗಪ್ರಭು ಸಭಾ ಭವನದಲ್ಲಿ ಬೆಂಗಳೂರಿನ ಶಿವಶಂಕರಶಾಸ್ತ್ರಿಗಳು ಮತ್ತು ಸಂಗಡಿಗರಿಂದ ಭಕ್ತಿಪ್ರಧಾನವಾದ ಶಿಶುನಾಳ ಷರೀಫರ ತತ್ವಪದಗಳನ್ನು ಏರ್ಪಡಿಸಲಾಗಿದೆ.


Friday, November 27, 2015



ಮತ್ತೆ ಗುಂಡಿಬಿದ್ದ ಚಿಕ್ಕನಾಯಕನಹಳ್ಳಿ ರಸ್ತೆಗಳು

ಚಿಕ್ಕನಾಯಕನಹಳ್ಳಿ,ನ.26 : ಪಟ್ಟಣದ ಮೂಲಕ ಹಾದು ಹೋಗಿರುವ ಚಾಮರಾಜನಗರ-ಜೇವಗರ್ಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು ಪ್ರತೀ ದಿನ ಅಪಘಾತಗಳು ಸಂಭವಿಸುತ್ತಿವೆ.
ಗುರುವಾರ ಸರಕು ತುಂಬಿದ್ದ ಎರಡು ಲಾರಿಗಳು ಗುಂಡಿ ತಪ್ಪಿಸಲು ಹೋಗಿ ಒಂದು ಲಾರಿ ಮಗುಚಿ ಬಿದಿದ್ದು, ಇನ್ನೊಂದು ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಕೊಲ್ಲಾಪುರದಿಂದ ಕೇರಳಕ್ಕೆ ಸ್ಪಿರಿಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ತಾಲ್ಲೂಕಿನ ಮಾಳಿಗೆಹಳ್ಳಿ ಬಳಿ ಮಗುಚಿ ಬಿದ್ದಿದೆ.ಶ್ಯಾವಿಗೆಹಳ್ಳಿ ಬಳಿ ಲಾರಿಯೊಂದು ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಪಕ್ಕದ ಮರಕ್ಕೆ  ಢಿಕ್ಕಿ ಹೊಡೆದಿದೆ.
   ತಾಲ್ಲೂಕಿನ ಗಡಿ ಕೆ.ಬಿ.ಕ್ರಾಸ್ನಿಂದ ಹುಳಿಯಾರು  ವರೆಗಿನ  35 ಕಿಮಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆಯಲ್ಲಿ ಗುಂಡಿಗಳಿವೆಯೇ ಅಥವಾ ಗುಂಡಿಗಳಲ್ಲಿ ರಸ್ತೆಯಿದೆಯೇ ಎಂಬ ಅನುಮಾನ ಪ್ರಯಾಣಿಕರಲ್ಲಿದೆ. ದ್ವಿಚಕ್ರ ಹಾಗೂ ತ್ರಿಚಕ್ರ, ಕಾರು ಹಾಗೂ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.  ಗುಂಡಿಗಳ ಜೊತೆಯಲ್ಲಿ ರಸ್ತೆಯಲ್ಲಿರುವ ಉಬ್ಬು ಮತ್ತು ತಗ್ಗುಗಳಿಂದಲೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
  ತಾಲ್ಲೂಕಿನ ಹಾಲಗೊಣ, ಜೆ.ಸಿ.ಪುರ, ಗೋಡೆಕೆರೆ ಗೇಟ್, ತರಬೇನಹಳ್ಳಿ, ಕಾಡೇನಹಳ್ಳಿ, ಚಿಕ್ಕನಾಯಕನಹಳ್ಳಿ, ಮಾಳಿಗೆಹಳ್ಳಿ, ಶ್ಯಾವಿಗೆಹಳ್ಳಿ, ಎನ್ಆರ್ ಫ್ಯಾಕ್ಟರಿ, ಅವಳಗೆರೆ, ಚಿಕ್ಕಬಿದರೆ, ದೊಡ್ಡಬಿದರೆ, ಪೋಚಕಟ್ಟೆ, ಬಳ್ಳೇಕಟ್ಟೆ ಹುಳಿಯಾರ್ ಹೀಗೆ ಹತ್ತಾರುಕಡೆ ಅರ್ಧ ಅಡಿಯಿಂದ ಒಂದು ಅಡಿಯವರೆಗೂ ಗುಂಡಿಗಳು ಬಿದ್ದಿದ್ದು ಸರಣಿ ಅಪಘಾತಗಳು ಸಂಭವಿಸುತ್ತಿವೆ.
    ಪಟ್ಟಣ ವ್ಯಾಪ್ತಿಯ ತಾಲ್ಲೂಕು ಕಛೇರಿ, ಸಕರ್ಾರಿ ಆಸ್ಪತ್ರೆ, ಕೋಟರ್್, ಲೋಕೋಪಯೋಗಿ ಇಲಾಖೆ ಕಛೇರಿ ಮುಂಭಾಗ,ಜೋಗಿಹಳ್ಳೀ ಗೇಟ್,ತಾಲ್ಲೂಕು ಪಂಚಾಯ್ತಿ, ಪ್ರವಾಸಿ ಮಂದಿರ, ಶೆಟ್ಟಿಕೆರೆ ಗೇಟ್, ಎಂ.ಎಚ್.ಪಿ.ಎಸ್ ಶಾಲೆ ಮುಂಭಾಗ, ಕೆಎಸ್ಆರ್ಟಿಸಿ ನಿಲ್ದಾಣದ ಮುಂಭಾಗ, ನೆಹರು ಸರ್ಕಲ್, ಹುಳಿಯಾರ್ ಗೇಟ್ ಬಳಿ ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದಿದ್ದು ಪ್ರಯಾಣಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಳೆದ ವರ್ಷವೂ ಇದೇ ರೀತಿ ಈ ಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದದ್ದು ರಾಷ್ಟ್ರೀಯ ಹೆದ್ದಾರಿ 150(ಎ) ಇಲಾಖೆ ರಸ್ತೆಗೆ ನಾಮಕಾವಸ್ತೆ ತೇಪೆ ಹಾಕಿ ಕೈ ಚೆಲ್ಲಿ ಕುಳಿತಿರುತ್ತದೆ. 
    20 ದಿನಗಳ ಹಿಂದಷ್ಟೇ ರೂ. 9 ಲಕ್ಷ ವ್ಯಚ್ಚದಲ್ಲಿ ರಸ್ತೆ ರಿಪೇರಿ ಕಾರ್ಯ ನಡೆದಿದೆ.ದುರಸ್ತಿ ಕಾರ್ಯ ಕಳಪೆ ಗುಣಮಟ್ಟದಿಂದಾಗಿ ಕಿತ್ತು ಹೋಗಿದೆ. ದುರಸ್ತಿಯಾದ 3 ದಿನಕ್ಕೆ ಗುಂಡಿ ಮುಚ್ಚಲು ಹಾಕಿದ್ದ ಡಾಂಬಾರ್ ಹಾಗೂ ಜೆಲ್ಲಿಕಲ್ಲುಗಳು ಕಿತ್ತು ಹೋಗಲು ಪ್ರಾರಂಭವಾಯಿತು.15 ದಿನಗಳ ಕಾಲ ಸತತವಾಗಿ ಸುರಿದ ಜಡಿಮಳೆಗೆ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿದ್ದು ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದರು.






ಬಾಲ್ಯದಿಂದಲೇ ಮಕ್ಕಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ : ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ :  ಬಾಲ್ಯದಿಂದಲೇ ಮಕ್ಕಳು  ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವೈಜ್ಞಾನಿಕ ಪ್ರಜ್ಞೆ ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಿಂದ ಗುರುವಾರ ಹೊರಟ ತಾಲ್ಲೂಕಿನ ಬಾಲ ವಿಜ್ಞಾನಿಗಳ ತಂಡಗಳಿಗೆ ಶುಭಕೋರಿ ಮಾತನಾಡಿದರು. ತಾಲ್ಲೂಕಿನಿಂದ ಮಕ್ಕಳ 6 ತಂಡಗಳು ಜಿಲ್ಲಾ ಮಟ್ಟದಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದರು.   ನ. 27ರಿಂದ ಬೆಳಗಾಂ ಜಿಲ್ಲೆಯ ಗೋಕಾಕ್ದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಾವೇಶಕ್ಕೆ ತಾಲೂಕಿನ ಬಾಲವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಈ ತಂಡದಲ್ಲಿ 6 ಮಾರ್ಗದಶರ್ಿ ಶಿಕ್ಷಕರು  ಜೊತೆಯಲ್ಲಿ 30 ಬಾಲ ವಿಜ್ಞಾನಿಗಳು ತೆರಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿನಿಯರು ಮಂಡಿಸಿದ ಕಷಾಯದ ಉಪಯುಕ್ತತೆಗಳು, ಕುಪ್ಪೂರು ಶಾಲೆಯ ವಿದ್ಯಾಥರ್ಿಗಳು ಸಿದ್ದಪಡಿಸಿರುವ ಅಡವಿ ಸೊಪ್ಪಿನ ಮೇಲಿನ ಪ್ರಬಂಧ, ಹೆಸರಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳು ಸಿದ್ದಪಡಿಸಿರುವ ಚಂಡು ಹೂವಿನ ಮಹಾತ್ಮೆ ಕುರಿತ ಪ್ರಬಂಧ ನವೋದಯ ಶಾಲೆಯ ಮಕ್ಕಳು ಸಿದ್ದಪಡಿಸಿರುವ ತೆಂಗಿನ ಎಣ್ಣೆ ಮಹತ್ವ ಕುರಿತ ಪ್ರಬಂಧಗಳು ತುಮಕೂರಿನಲ್ಲಿ ನಡೆದ 23ನೇ  ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದವು, ಈ ಸಂದರ್ಭದಲ್ಲಿ  ತಾಲ್ಲೂಕು ವಿಜ್ಞಾನ  ಪರಿಷತ್ ಕಾರ್ಯದಶರ್ಿ ಈಶ್ವರಪ್ಪ, ಮಾರ್ಗದಶರ್ಿ ಶಿಕ್ಷಕರಾದ ಕೆ.ಎಸ್.ನಾಗರಾಜ್, ವಿಶ್ವೇಶ್ವರಯ್ಯ, ರಮೇಶ್, ಕೃಷ್ಣಮೂತರ್ಿ, ಭಾರತಿ, ದಿವ್ಯ ಮುಂತಾದವರು ಉಪಸ್ಥಿತರಿದ್ದರು.


ಕನಕ ಜಯಂತಿಗೆ ತಾಲ್ಲೂಕು ಆಡಳಿತ ತಯಾರಿ
ಚಿಕ್ಕನಾಯಕನಹಳ್ಳಿ,ನ.26 : ತಾಲ್ಲೂಕು ಆಡಳಿತ ಕನಕ ಯುವಕ ಸಂಘ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀಕನಕದಾಸರ ಜಯಂತೋತ್ಸವ ಸಮಾರಂಭ ನವಂಬರ್28 ರಂದು ಶನಿವಾರ ಮದ್ಯಾಹ್ನ 12.30ಕ್ಕೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿದೆ.
 ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ.ಅಧ್ಯಕ್ಷೆ ಜಯಲಕ್ಷ್ಮಮ್ಮ ಉದ್ಘಾಟಿಸುವರು. ಪುರಸಭಾ ಅಧ್ಯಕ್ಷೆ ಪ್ರೇಮದೇವರಾಜ್ ಕನಕದಾಸರ ಭಾವಚಿತ್ರ ಅನಾವರಣಗೊಳಿಸುವರು. ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ  ಸಂಶೋಧಕ ಡಾ.ರಾಮಲಿಂಗಪ್ಪ ಟಿ.ಬೇಗೂರು ಕನಕದಾಸರ ಕುರಿತು ಉಪನ್ಯಾಸ ನೀಡುವರು. ದಾಸ್ಕೆರೆ ಭಾಗವತ ರಂಗಪ್ಪ. ಹೊಯ್ಸಲಕಟ್ಟೆ ಸಾಮಾಜ ಸೇವಕ ರಾಮದಾಸಪ್ಪ, ಯಾದವ ಸಮಾಜದ ಅಧ್ಯಕ್ಷ ಶಿವಣ್ಣ, ಸಿ.ಕೆ.ಘನಸಾಬ್, ಕಂಬಳಿ ನೇಕಾರ ರಾಮಯ್ಯ, ಯಳನಡು ಪ್ರಗತಿಪರ ರೈತ ಮಹಿಳೆ ಸಿದ್ದರಾಮಕ್ಕ, ಸಿದ್ದರಾಮಯ್ಯ ಉಂಡಾಡಯ್ಯನವರ, ರಾಜಣ್ಣ ಪುರಿಭಟ್ಟಿ, ಪರಮೇಶ್ವರಯ್ಯ, ನಂದಿಹಳ್ಳಿ ಶಿವಣ್ಣ, ಹಂದನಕೆರೆ ಅನಂತಯ್ಯನವರನ್ನು  ಸನ್ಮಾನಿಸಲಾಗುವುದು.
ಕನಕ ದಾಸರ ಭಾವಚಿತ್ರವಿರುವ ಮೆರವಣಿಗೆಯನ್ನು ತಹಶೀಲ್ದಾರ್ ಗಂಗೇಶ್ ಉದ್ಘಾಟಸಲಿದ್ದು, ಉತ್ಸವದಲ್ಲಿ ಸ್ಥಳೀಯ ಜಾನಪದ ಕಲಾತಂಡಗಳೊಂದಿಗೆ ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸುವ ಪುರಷರ ಡೊಳ್ಳು ಕುಣಿತ, ಪಟ್ಟದ ಕುಣಿತ, ಮಹಿಳಾ ಡೊಳ್ಳು ಕುಣಿತ, ಗೊರವರ ಕುಣಿತ, ಮಹಿಳಾ ವೀರಗಾಸೆ, ನಾಸಿಕ್ ಡೋಲು, ಭಕ್ತ ಕನಕದಾಸರ ವೇಷಗಾರಿಕೆ, ಕನಕನ ಕಿಂಡಿ ದೃಶ್ಯಾವಳಿ, ಸಂಗೊಳ್ಳಿ ರಾಯಣ್ಣ ಸ್ಥಬ್ದಚಿತ್ರ, ಕವಿರತ್ನ ಕಾಳಿದಾಸ ಸ್ಥಬ್ದಚಿತ್ರ, ಪಾಳೇಗಾರರ ವೇಷ, ಕಂಬಳಿ ನೇಕಾರಿಕೆಯ ದೃಶ್ಯಾವಳಿಗಳು ಸೇರಿದಂತೆ ಇನ್ನೂ ಹಲವು ತಂಡಗಳು ಭಾಗವಹಿಲಿವೆ. 
ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ.ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ. ತಾ.ಪಂ. ಉಪಾಧ್ಯಕ್ಷ ಎ.ನಿರಂಜನಮೂತರ್ಿ. ಪುರಸಭಾ ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ. ಜಿ.ಪಂ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ. ಲೋಹಿತಬಾಯಿ. ಹೆಚ್.ಬಿ ಪಂಚಾಕ್ಷರಯ್ಯ. ಎನ್.ಜಿ.ಮಂಜುಳ. ನಿಂಗಮ್ಮ. ಮಾಜಿ ಶಾಸಕರಾದ ಬಿ.ಲಕ್ಕಪ್ಪ. ಜೆ.ಸಿ ಮಾಧುಸ್ವಾಮಿ. ಕೆ.ಎಸ್.ಕಿರಣ್ಕುಮಾರ್. ರಾಜ್ಯ ಸಕರ್ಾರ ನೌಕರರ ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ. ಕನಕ ಯುವಕ ಸಂಘದ ಅಧ್ಯಕ್ಷ ವಿಜಯಕುಮಾರ್ ಮತ್ತಿತ್ತರರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.




    
   




Friday, June 12, 2015


ತಾಲ್ಲೂಕಿನ 28 ಗ್ರಾಮ ಪಂಚಾಯತ್ಗಳ  ಅಧ್ಯಕ್ಷ, ಉಪಾಧ್ಯಕ್ಷರುಗಳ ಮೀಸಲಾತಿ ವಿವರಗಳು
ಚಿಕ್ಕನಾಯಕನಹಳ್ಳಿ,ಜೂ.12 : ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷಗಳ ಸ್ಥಾನಗಳಿಗೆ  ಮೀಸಲಾತಿಯನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ಲಾಟರಿ ಮೂಲಕ ನಿಗಧಿಪಡಿಸಿದರು.
ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ನಡೆದ ಪ್ರಕ್ರಿಯೆಯಲ್ಲಿ 28 ಗ್ರಾ.ಪಂ.ಗಳ ಎಲ್ಲಾ ಸದಸ್ಯರು ಭಾಗವಹಿಸಿದ್ದು,  ಸಕರ್ಾರ ನಿಗಧಿಪಡಿಸಿದ್ದ ಮೀಸಲು ಪಟ್ಟಿ ಪ್ರಕಟಗೊಳಿಸಿದ  ಜಿಲ್ಲಾಧಿಕಾರಿಗಳು, ಮಾತನಾಡಿ, ಪಂಚಾಯತ್ ರಾಜ್ ಅಧಿನಿಯಮ 1993ರ ಚುನಾವಣೆ ನಂತರ ಮೊದಲ ಮೀಸಲಾತಿ ಪ್ರಕಟಗೊಂಡಿದ್ದು ಅಲ್ಲಿಂದ 2000, 2002, 2005, 2007, 2010, 2012ನ ಸಾಲಿನ ನಿಗದಿತ ಮೀಸಲಾತಿ ಪರಿಗಣಿಸಿ ಅಂದರೆ ಈ ಹಿಂದೆ ಮೀಸಲಾತಿ ದೊರೆತ ಕ್ಯಾಟಗರಿಯನ್ನು ಬಿಟ್ಟು ಅಧ್ಯಕ್ಷ, ಉಪಾಧ್ಯಕ್ಷ ಗಳಿಗೆ ಜಾತಿವಾರು ಮೀಸಲಾತಿ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ನೇತೃತ್ವದಲ್ಲಿ ಎಡಿಸಿ ಡಾ.ಅನುರಾಧ ಘೋಷಿಸಿದರು. ತಹಶೀಲ್ದಾರ್ ಕಾಮಾಕ್ಷಮ್ಮ, ವಿಜಯ್ರಾಜ್, ಅಧಿಕಾರಿಗಳಾದ ಅಡಪದ್ ಮತ್ತು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಸೂಡಿ, ಬರಗೂರು, ಗಾಣದಾಳು ಹೊಯ್ಳಳಕಟ್ಟೆ, ತೀರ್ಥಪುರ, ಹೊನ್ನೆಬಾಗಿ, ಶೆಟ್ಟಿಕೆರೆ ಈ ಭಾಗಗಳಲ್ಲಿ ಮೀಸಲಾತಿ ಪಟ್ಟಿಯಲ್ಲಿ ಅಭ್ಯಥರ್ಿಗಳು ಬದಲಿಸುವಂತೆ ಹಾಗೂ ಮಹಿಳಾ ಮೀಸಲಾತಿಗೆ ಬದಲಾಗಿ ಸಾಮಾನ್ಯರಿಗೆ ಆದ್ಯತೆ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಅಹವಾಲು ಸಲ್ಲಿಸಿದರು, ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಸಕರ್ಾರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಶೇ.50ರಷ್ಟು ಮೀಸಲಾತಿ ಕಾಯ್ದಿರಿಸಿದ್ದು  ಈ ಉದ್ದೇಶದ ಅನುಸಾರವಾಗಿ ಹಲವು ಜಾತಿಗಳ ಅನುಗುಣವಾಗಿ ಮಾನದಂಡಗಳನ್ನು ಇಟ್ಟುಕೊಂಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು. 

ತಾಲ್ಲೂಕಿನ 28 ಗ್ರಾಮ ಪಂಚಾಯತ್ಗಳ ಮೀಸಲಾತಿ ವಿವರಗಳು
ಕ್ರ.ಸಂ ಗ್ರಾಮ ಪಂಚಾಯಿತಿ ಹೆಸರು ಅಧ್ಯಕ್ಷ ಮೀಸಲಾತಿ ಉಪಾಧ್ಯಕ್ಷ ಮೀಸಲಾತಿ
1                    ದಸೂಡಿ ಪರಿಶಿಷ್ಠ ಜಾತಿ(ಮಹಿಳೆ)                    ಸಾಮಾನ್ಯ
2                 ಹೊಯ್ಸಳಕಟ್ಟೆ            ಸಾಮಾನ್ಯ(ಮಹಿಳೆ)        ಪರಿಶಿಷ್ಠ ಜಾತಿ(ಮಹಿಳೆ)
3                  ಗಾಣದಾಳು ಪರಿಶಿಷ್ಠ ಜಾತಿ(ಮಹಿಳೆ)            ಸಾಮಾನ್ಯ
4                     ಕೆಂಕೆರೆ          ಹಿಂದುಳಿದ ವರ್ಗ ಬ(ಮಹಿಳೆ)            ಸಾಮಾನ್ಯ
5                    ಹುಳಿಯಾರು      ಸಾಮಾನ್ಯ(ಮಹಿಳೆ)                   ಪರಿಶಿಷ್ಠ ಜಾತಿ
6                     ಯಳನಡು             ಸಾಮಾನ್ಯ                     ಸಾಮಾನ್ಯ(ಮಹಿಳೆ)
7                     ಕೋರಗೆರೆ             ಸಾಮಾನ್ಯ                    ಪರಿಶಿಷ್ಠಪಂಗಡ(ಮಹಿಳೆ)
8                    ದೊಡ್ಡ ಎಣ್ಣೆಗೆರೆ       ಸಾಮಾನ್ಯ (ಮಹಿಳೆ)              ಪರಿಶಿಷ್ಠ ಜಾತಿ
9                  ಹಂದನಕೆರೆ      ಪರಿಶಿಷ್ಠ ಜಾತಿ        ಹಿಂದುಳಿದ ವರ್ಗ ಅ (ಮಹಿಳೆ)
10                 ಚೌಳಕಟ್ಟೆ              ಸಾಮಾನ್ಯ                ಪರಿಶಿಷ್ಠ ಪಂಗಡ (ಮಹಿಳೆ)
11                 ತಿಮ್ಲಾಪುರ              ಸಾಮಾನ್ಯ                  ಹಿಂದುಳಿದ ವರ್ಗ ಅ
12                 ದೊಡ್ಡಬಿದರೆ ಸಾಮಾನ್ಯ (ಮಹಿಳೆ)              ಸಾಮಾನ್ಯ
13               ಬರಕನಾಳು           ಪರಿಶಿಷ್ಠ ಜಾತಿ               ಸಾಮಾನ್ಯ (ಮಹಿಳೆ)
14              ಘಮ್ಮನಹಳ್ಳಿ               ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ (ಮಹಿಳೆ)
15               ರಾಮನಹಳ್ಳಿ                ಪರಿಶಿಷ್ಠ ಜಾತಿ (ಮಹಿಳೆ)      ಸಾಮಾನ್ಯ
16                  ಕಂದಿಕೆರೆ              ಸಾಮಾನ್ಯ (ಮಹಿಳೆ)        ಪರಿಶಿಷ್ಠ ಜಾತಿ
17                 ಬೆಳಗುಲಿ              ಹಿಂದುಳಿದ ವರ್ಗ ಅ           ಸಾಮಾನ್ಯ (ಮಹಿಳೆ)
18              ಬರಗೂರು                    ಸಾಮಾನ್ಯ                  ಸಾಮಾನ್ಯ(ಮಹಿಳೆ)
19               ಮತಿಘಟ್ಟ                ಹಿಂದುಳಿದ ವರ್ಗ ಅ           ಸಾಮಾನ್ಯ (ಮಹಿಳೆ)
20              ಮಲ್ಲಿಗೆರೆ          ಹಿಂದುಳಿದ ವರ್ಗ ಅ (ಮಹಿಳೆ)             ಸಾಮಾನ್ಯ
21             ಕುಪ್ಪೂರು                ಸಾಮಾನ್ಯ                         ಹಿಂದುಳಿದ ವರ್ಗ ಅ
22               ಶೆಟ್ಟಿಕೆರೆ           ಪರಿಶಿಷ್ಠ ಪಂಗಡ                 ಹಿಂದುಳಿದ ವರ್ಗ ಬ (ಮಹಿಳೆ)
23             ದುಗಡಿಹಳ್ಳಿ       ಹಿಂದುಳಿದ ವರ್ಗ ಅ(ಮಹಿಳೆ)          ಪರಿಶಿಷ್ಠ ಪಂಗಡ
24          ಮುದ್ದೇನಹಳ್ಳಿ             ಸಾಮಾನ್ಯ                    ಪರಿಶಿಷ್ಠ ಜಾತಿ (ಮಹಿಳೆ)
25       ಹೊನ್ನೆಬಾಗಿ                   ಪರಿಶಿಷ್ಠ ಪಂಗಡ (ಮಹಿಳೆ)              ಸಾಮಾನ್ಯ
26        ತೀರ್ಥಪುರ                      ಸಾಮಾನ್ಯ                         ಸಾಮಾನ್ಯ  (ಮಹಿಳೆ)
27 ಗೋಡೆಕೆರೆ                         ಪರಿಶಿಷ್ಠ ಪಂಗಡ (ಮಹಿಳೆ)                   ಸಾಮಾನ್ಯ
28 ಜೆ.ಸಿ.ಪುರ                               ಪರಿಶಿಷ್ಠ ಜಾತಿ                      ಹಿಂದುಳಿದ ವರ್ಗ ಅ (ಮಹಿಳೆ)

ಚಿತ್ರ ಶೀಷರ್ಿಕೆ
12ಚಿಕ್ಕನಾಯಕನಹಳ್ಳಿ ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ, ಎಡಿಸಿ ಡಾ.ಅನುರಾಧ ಘೋಷಿಸಿದರು. ತಹಶೀಲ್ದಾರ್ ಕಾಮಾಕ್ಷಮ್ಮ, ವಿಜಯ್ರಾಜ್, ಅಧಿಕಾರಿಗಳಾದ ಅಡಪದ್ ಮತ್ತು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ,ಜು.12 : ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ 5 ವರ್ಷಗಳ ಅವಧಿಗೆ ಮೀಸಲು ಪಟ್ಟಿ ಪ್ರಕಟಗೊಂಡಿದ್ದು ಇವುಗಳಲ್ಲಿ ಕೆಲವು ಅವಿರೋಧವಾಗಿ ಆಯ್ಕೆಯಾಗುವಂತಹ ಲಕ್ಷಣಗಳು ಕಂಡುಬಂದಿದೆ.
  ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ ಹೊರತು ಪಡಿಸಿದರೆ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ,  ಹಿಂದುಳಿದ ವರ್ಗ ಅ ಮತ್ತು ಬ ಇವುಗಳಲ್ಲಿ ಮೀಸಲು ಪಟ್ಟಿಯಲ್ಲಿ ಕೆಲವು ಪಂಚಾಯಿತಿಗಳಲ್ಲಿ ಮೀಸಲಿರುವ ಅಭ್ಯಥರ್ಿಗಳು ಒಂದಕ್ಕಿಂತ ಹೆಚ್ಚಿಲ್ಲದ ಕಡೆ ಅವಿರೋಧವಾಗಿ ಆಯ್ಕೆಯಾಗುವ ಸಂಭವನೀಯತೆ ಇದೆ. 
ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಅನುಸೂಚಿತ ಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಈ ಕ್ಷೇತ್ರದಲ್ಲಿ ಶೆಟ್ಟಿಕೆರೆ ಬ್ಲಾಕ್ 1ರಲ್ಲಿ ಬಿ ನಾಗಮಣಿ ಬಿಟ್ಟರೆ ಈ ಪಂಗಡಲ್ಲಿ ಯಾರೊಬ್ಬರೂ ಇಲ್ಲದ ಕಾರಣ ಅವರ ಆಯ್ಕೆ ಖಚಿತವಾಗಿದೆ.
ಗೋಡೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಎಸ್.ಟಿ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಸೋಮನಹಳ್ಳಿ ಬ್ಲಾಕಿನ ದ್ರಾಕ್ಷಾಯಿಣಿ ಎಂಬುವವರು ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಇವರ ಆಯ್ಕೆ ಖಚಿತವಾಗಿದೆ.
  ಕೆಂಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗ ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಗೌಡಗೆರೆ ಬ್ಲಾಕಿನ ಜಯಮ್ಮ ಎಂಬುವವರು ಈ ವರ್ಗಕ್ಕೆ ಸೇರಿದ ಏಕೈಕ ಮಹಿಳೆಯಾಗಿದ್ದು ಸಾಮಾನ್ಯ ಮಹಿಳೆ ಸ್ಥಾನದಲ್ಲಿ ಅಭ್ಯಥರ್ಿಗಳು ಈ ವರ್ಗಕ್ಕೆ ಸೇರಿದ್ದರೆ ಮಾತ್ರ ಸ್ಪಧರ್ೆ ಸಂಭವಿಸುತ್ತದೆ ಇಲ್ಲದೆ ಹೋದಲ್ಲಿ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಕೋರಗೆರೆ ಪಂಚಾಯ್ತಿ ಪರಿಶಿಷ್ಠ ಪಂಗಡದ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಿದ್ದು ಈ ಪಂಚಾಯ್ತಿಯಲ್ಲಿ ಭಟ್ಟರಳ್ಳಿ ಬ್ಲಾಕಿನ ಗೀತಮ್ಮ ಎಂಬುವವರು ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿದ್ದು ಇವರಿಗೆ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ.
ಚೌಳಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರಿಶಿಷ್ಠ ಪಂಗಡ ಮಹಿಳೆಗೆ ಉಪಾಧ್ಯಕ್ಷ ಸ್ಥಾನ  ಮೀಸಲಿದ್ದು ಈ ಕ್ಷೇತ್ರದ ಅಧಿಕೃತ ಅಭ್ಯಥರ್ಿಯಾಗಿ ಎಸ್.ಕಾಂತಲಕ್ಷ್ಮಿಯವರು ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದರು ಉಪಾಧ್ಯಕ್ಷ ಸ್ಥಾನ ಕೂಡ ಅವರಿಗೆ ಅದೃಷ್ಠ ಲಕ್ಷ್ಮೀಯಾಗಿ ಒಲಿಯಲಿದ್ದಾಳೆ. ಈ ಕ್ಷೇತ್ರದಲ್ಲಿ ಸಾಮಾನ್ಯ ಮಹಿಳೆ ನಾಲ್ಕು ಸದಸ್ಯರಿದ್ದು ಈ ನಾಲ್ವರಲ್ಲಿ  ಪರಿಶಿಷ್ಠ ಪಂಗಡದವರು ಸೇರಿದ್ದರೆ ಮಾತ್ರ ಚುನಾವಣೆ ಸಂಭವಿಸಲಿದೆ.
ಮತಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗ ಎ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಈ ವರ್ಗದಿಂದ ಮಾದಾಪುರ ಬ್ಲಾಕಿನ ವಿಮಲ ಏಕೈಕ ಅಭ್ಯಥರ್ಿಯಾಗಿದ್ದು  ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಇಬ್ಬರು ಮಹಿಳೆಯರು ಇರುವ ಕಾರಣ ಈ ವರ್ಗಕ್ಕೆ ಸೇರಿದ್ದರೆ ಮಾತ್ರ ಚುನಾವಣೆ ನಡೆಯಲಿದೆ.
ದುಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗ ಅ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಕಾರೆಹಳ್ಳಿ ಬ್ಲಾಕ್ನ ವಿಜಯಮ್ಮ ಈ ವರ್ಗಕ್ಕೆ ಸೇರಿದವರಾಗಿದ್ದು ಸಾಮಾನ್ಯ ಕ್ಷೇತ್ರದಿಂದ ಹಿಂದುಳಿದ ವರ್ಗ ಎ ವರ್ಗಕ್ಕೆ ಸೇರಿದ ಮಹಿಳೆಯರಿದ್ದರೆ ಮಾತ್ರ ಚುನಾವಣೆ ನಡೆಯಲಿದ್ದು ಉಪಾಧ್ಯಕ್ಷ ಸ್ಥಾನ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಿರುವ ಕಾರಣ ಗೌಡನಹಳ್ಳಿ ಕ್ಷೇತ್ರದ ಪಾರ್ವತಮ್ಮ ಮೀಸಲಾತಿ ಹೊಂದಿರುವ ಕಾರಣ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಹೊನ್ನೆಬಾಗಿ ಗ್ರಾಮ ಪಂಚಾಯಿತಿ ಪರಿಶಿಷ್ಠ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿರುವ ಕಾರಣ ಈ ವರ್ಗದ ಬಾವನಹಳ್ಳಿ ಕ್ಷೇತ್ರದಿಂದ ಲೋಕಮ್ಮ ಈ ಪಂಚಾಯಿತಿಯಲ್ಲಿ ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿರುವುದರಿಂದ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಒಟ್ಟಾರೆ ಈ ಮೀಸಲು ನಿಗಧಿ ಪಡಿಸಿದ ಆಧಾರದ ಮೇಲೆ ಸಾಮಾನ್ಯ ಸ್ಥಾನದಲ್ಲಿ ಸಂಬಂಧಿಸಿದ ಜಾತಿಗೆ ಸೇರಿದವರು ಇಲ್ಲದಿದ್ದರೆ,  ಇವರ ಆಯ್ಕೆ ಅವಿರೋಧವಾಗಲಿದ್ದು ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಡಿವಿಪಿ ಶಾಲೆಯ ಮುಂಭಾಗ ಧರಣಿ 



ಚಿಕ್ಕನಾಯಕನಹಳ್ಳಿ,ಜೂ.12 : ಡಿವಿಪಿ ಶಾಲೆಯಲ್ಲಿ ಓದುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಹೇಳಿದ್ದಲ್ಲದೆ ಅವರ ಆಹಾರ ಪದ್ದತಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದರಿಂದ ಆಕ್ರೋಶಗೊಂಡ ಸಮುದಾಯದ ವಿದ್ಯಾಥರ್ಿಗಳು ಹಾಗೂ ಪೋಷಕರು  ಡಿವಿಪಿ ಶಾಲೆ ಮುಂಭಾಗ ಕೆಲಕಾಲ ಧರಣಿ ನಡೆಸಿದರು.
ಪಟ್ಟಣದ ಡಿವಿಪಿ ಶಾಲೆಯಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ಮಕ್ಕಳು ಓದಿನ ಕಡೆ ಹೆಚ್ಚು ಗಮನ ನೀಡುವುದಿಲ್ಲ, ಶಾಲೆಗೆ ನಿತ್ಯ ಹಾಜರಾಗುವುದಿಲ್ಲ ಇದರಿಂದ ನಮ್ಮ ಶಾಲೆಯ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುತ್ತದೆ ನೀವು ಬೇರೆ ಶಾಲೆಗೆ ಟಿ.ಸಿ.ತೆಗೆದುಕೊಂಡು ಹೋಗಿ ಎಂದು ಹೇಳಿದ್ದಲ್ಲದೆ, ಅವರ ಆಹಾರ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಿದ ಮು.ಶಿ.ಹಾಗೂ ಶಿಕ್ಷಕರೊಬ್ಬರ ಮೇಲೆ ಪೋಷಕರು ಹರಿಹಾಯ್ದರು. 
ಕೆಲ ಕಾಲ ಶಾಲೆಯ ಮುಂದೆ ಷಾಮಿಯಾನ ಹಾಕಿ ಪ್ರತಿಭಟಿಸಿದ ಘಟನೆಯೂ ನಡೆಯಿತು, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಬರುವವರೆಗೆ ಕದಲುವುದಿಲ್ಲವೆಂದು ಕುಳಿತಿದ್ದರು, ಸ್ಥಳಕ್ಕೆ ಬಂದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಬಿ.ಸುರೇಶ್ಬಾಬು ಪೋಷಕರನ್ನು ಸಮಾಧಾನ ಪಡಿಸಿದ್ದಲ್ಲದೆ, ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆದರು.
ಶಿಕ್ಷಕರಿಗೆ ನೋಟೀಸ್:  ಪೋಷಕರ ದೂರಿನ ಮೇರೆಗೆ ಸಂಬಂಧಿಸಿದ ಇಬ್ಬರು ಶಿಕ್ಷಕರಿಗೆ ಆಡಳಿತ ಮಂಡಳಿ ನೋಟೀಸ್ ನೀಡಲಾಗಿದೆ. ಎಂದು ತಿಳಿದು ಬಂದಿದೆ.




Friday, June 5, 2015


ಚಿಕ್ಕನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಎಣಿಕೆಯ ವಿಶೇಷಣೆಗಳು






ಚಿಕ್ಕನಾಯಕನಹಳ್ಳಿ,ಜೂ.5: ಗಂಡ ಹೆಂಡತಿ ಇಬ್ಬರೂ ಜಯಗಳಿಸುವ ಮೂಲಕ ಜನರಲ್ಲಿ ಹುಬ್ಬೇರಿಸುವಂತೆ ಮಾಡಿದರೆ, ಮೂರು ಮತ ಕ್ಷೇತ್ರಗಳಲ್ಲಿ  ಲಾಟರಿ ಮೂಲಕ ಅದೃಷ್ಟ ಲಕ್ಷ್ಮಿಯನ್ನು ತಮ್ಮದಾಗಿಸಿಕೊಂಡದ್ದೂ ನಡೆಯಿತು, ಎಣಿಕೆಯ ಟೇಬಲ್ಗೆ ಕುಂಕುಮ, ಒಣಗಿದ ಹೂವಿರುವ ಪೊಟ್ಟಣ ಇಟ್ಟಿರುವುದು ಪಟ್ಟಣದಲ್ಲಿ ನಡೆದ ಎಣಿಕೆ ಕೇಂದ್ರದಲ್ಲಿ ಸಿಕ್ಕ ವಿಶೇಷ ಘಟನೆಗಳು.
ಚಿಕ್ಕನಾಯಕನಹಳ್ಳಿಯ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್ನಲ್ಲಿ ನಡೆದ ಮತ ಎಣಿಕೆಯು ಬೆಳಗ್ಗೆ 8.30 ರಿಂದ ಆರಂಭವಾಯಿತು, ಮೊದಲ ಸುತ್ತಿನ ಎಣಿಕೆಯಲ್ಲಿ, ತಾಲೂಕಿನ ಹೊನ್ನೇಬಾಗಿ ಗ್ರಾ.ಪಂ.ಯ ಹೊನ್ನೆಬಾಗಿ ಕ್ಷೇತ್ರದಿಂದ ಮೋಹನ್ ಕುಮಾರ್ ಜಯಗಳಿಸಿದರೆ ಅದೇ ಗ್ರಾ.ಪಂ.ಯ ಬುಳ್ಳೇನಹಳ್ಳಿ ಕ್ಷೇತ್ರದಿಂದ ಮೋಹನ್ ಪತ್ನಿ ಬಿ.ತೇಜಸ್ವಿನಿ ಜಯಗಳಿಸುವ ಮೂಲಕ ಗಂಡ ಹೆಂಡತಿ ಇಬ್ಬರೂ ಜಯಭೇರಿ ಬಾರಿಸಿದರು.
ಲಾಟರಿ ಮೂಲಕ ಜಯಗಳಿಸಿದವರು:  ಬರಗೂರು ಗ್ರಾ.ಪಂ.ಯ ರಂಗೇನಹಳ್ಳಿ ಕ್ಷೇತ್ರದಿಂದ ಮಹದೇವಮ್ಮ ಹಾಗೂ ಲತಾ ತಲಾ 252 ಮತ ಪಡೆದರು, ನಂತರ ಲಾಟರಿ ಮೂಲಕ  ಮಹದೇವಮ್ಮನವರು ಜಯಗಳಿಸಿದ್ದಾರೆ ಎಂದು ಘೋಷಿಸಲಾಯಿತು. ಇದೇ ಪಂಚಾಂಯ್ತಿಯ ಉಪ್ಪಾರಹಳ್ಳಿ ಮತ ಕ್ಷೇತ್ರದಲ್ಲಿ ಹನುಮಂತಯ್ಯ ಕೆ ಹಾಗೂ ಬಿ.ಯಶವಂತ ತಲಾ 257 ಮತ ಪಡೆದರು ನಂತರ ನಡೆದ ಲಾಟರಿ ಪರೀಕ್ಷೆಯಲ್ಲಿ ಹನುಮಂತಯ್ಯನಿಗೆ ಅದೃಷ್ಟ ಲಕ್ಷ್ಮಿ ಕೈಹಿಡಿದಳು.
ಚೌಳಕಟ್ಟೆ ಗ್ರಾ.ಪಂ.ಯ ಸೋರಲಮಾವು ಕ್ಷೇತ್ರದಲ್ಲಿ ರಂಗಸ್ವಾಮಿ ಹಾಗೂ ವಿಶ್ವನಾಥ್ ತಲಾ 410 ಸಮ ಮತ ಪಡೆದರು ಕೊನೆಯಲ್ಲಿ ಅದೃಷ್ಟ ಪರೀಕ್ಷೆಯಲ್ಲಿ ರಂಗಸ್ವಾಮಿ ಜಯಗಳಿಸಿದರು.
ಒಂದು ಮತ ಅಂತರದಲ್ಲಿ ಜಯಗಳಿಸಿದವರು: ಹೊಯ್ಸಳಕಟ್ಟೆ ಗ್ರಾ.ಪಂ.ಯ 13ನೇ ಬ್ಲಾಕ್ ಕಲ್ಲೇನಹಳ್ಳಿ ಕ್ಷೇತ್ರದಲ್ಲಿ ಆಶಾ ಕೆ.ಎನ್.349 ಮತಗಳನ್ನು ಪಡೆದು ಜಯಗಳಿಸಿದರೆ,  ಕವಿತ ಕೆ 348 ಮತಗಳನ್ನು ಪಡೆದು ಒಂದು ಮತಗಳ ಅಂತರದಲ್ಲಿ ಸೋಲುಂಡರು.
ಅದೇ ರೀತಿ ಬೆಳಗುಲಿ ಗ್ರಾ.ಪಂ.ಯ ನಿರುವಗಲ್ ಕ್ಷೇತ್ರದಲ್ಲಿ ಎಂ ನಾಗರಾಜ್ 268 ಮತಗಳನ್ನು ಪಡೆದು ಜಯಶೀಲರಾದರೆ ಎಂ.ಕೆ.ಮಧು 267 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಗಲಾಟೆಯಿಂದ ಲಾಭ ಪಡೆದ ಕಾಂಗ್ರೆಸ್: ಜೆ.ಸಿ.ಪುರ ಗ್ರಾ.ಪಂ.ಯ ಸಾಸಲು ಹಾಗೂ ಸಾಸಲು ಗೊಲ್ಲರಹಟ್ಟಿಯ 205 ಮತ್ತು 206 ಮತಗಟ್ಟೆಯಲ್ಲಿ ಮತದಾನದಂದು  ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಮೇಲೆ ನಡೆದ ಹಲ್ಲೆಯಿಂದ ಉಂಟಾದ ಅನುಕಂಪದಿಂದಾಗಿ ಈ ಮತಗಟ್ಟೆಗಳ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಬ್ಯಾಥರ್ಿಗಳಾದ ಉಮೇಶ್, ಸಿ.ಕೆ.ಮಂಜುಳ, ಜಯಲಕ್ಷ್ಮಿ, ಶಿವಗಂಗಾ ಜಯಗಳಿಸಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಸತ್ಯಕ್ಕೆ ಎಂದಿಗೂ ಜಯ ದೊರೆಯುತ್ತದೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ ಎಂದ ಅವರು, ಕಾಂಗ್ರೆಸ್ ಪಕ್ಷ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇಕಡ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಬ್ಯಾಥರ್ಿಗಳು ಜಯಗಳಿಸಿರುವುದು ನಮ್ಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತುಂಬುತ್ತಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದು  ಇವರೆಲ್ಲಾ ಮುಂದಿನ ದಿನಗಳಲ್ಲಿ ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ತಮ್ಮನ್ನು ಅಭಿನಂದಿಸಲು ಬಂದಿದ್ದ ವಿಜೇತರಿಗೆ ತಿಳಿ ಹೇಳಿದರು.
 ಆಯ್ಕೆಯಾದ ಅಭ್ಯಥರ್ಿಗಳು : ಬರಗೂರು ಗ್ರಾಮ ಪಂಚಾಯಿತಿ ಓಟಿಕೆರೆ ತಿಮ್ಲಾಪುರ ಗೋಪಾಲನಾಯ್ಕ, ಓಟಿಕೆರೆ ಕಾಂತರಾಜು, ದುಗಡಿಹಳ್ಳಿ ಗ್ರಾ.ಪಂ. ಸಿದ್ದರಾಮನಗರ ರಮ್ಯ,  ಡಿ.ಬಿ.ಅಶ್ವಿನ್, ತೀರ್ಥಪುರ ಗ್ರಾ.ಪಂ.ಯರೇಕಟ್ಟೆ ನಾಗಯ್ಯ, ಕೋರಗೆರೆ ಗ್ರಾ.ಪಂ.ಕೋರಗೆರೆ  ದುರ್ಗಮ್ಮ, ಮೋಟಿಹಳ್ಳಿಯಿಂದ ಹನುಮಂತಪ್ಪ ಕೆ.ಕೆ. ಧರಣೀಶ್, ಕೆ.ಎಮ್.ಮಂಜಣ್ಣ, ಉಪ್ಪಾರಹಳ್ಳಿ ರಂಗಸ್ವಾಮಿ, ಮರಳಯ್ಯ, ಚಿಕ್ಕಬಿದರೆ ಗ್ರಾ.ಪಂ. ಈಶ್ವರಯ್ಯ, ರಂಗತಾಯಮ್ಮ, ಬರಕನಹಾಳ್ ಗ್ರಾ.ಪಂ. ಬ್ಯಾಡರಹಳ್ಳಿ ಮಹದೇವಯ್ಯ, ಬಿ.ಟಿ.ಗೋವಿಂದರಾಜು, ಬೆಳಗುಲಿ ಗ್ರಾ.ಪಂ. ಪಾಪನಕೊಣ ಸುನಿತ, ಮತಿಘಟ್ಟ ಗ್ರಾ.ಪಂ.ಗಾಂಧಿನಗರ ಲತಾ, ತಿಮ್ಮನಹಳ್ಳಿ ಗ್ರಾ.ಪಂ.ಸಿದ್ದನಕಟ್ಟೆ ರಾಮಯ್ಯ, ದೊಡ್ಡೇಣ್ಣೆಗೆರೆ ಗ್ರಾ.ಪಂ. ಚಂದ್ರಮ್ಮ, ಡಿ.ಎಲ್.ಚಂದ್ರಶೇಖರ್, ದೊಡ್ಡ ಎಣ್ಣೆಗೆರೆ-3 ಉಪ್ಪಿನಕಟ್ಟೆ ಸಿ.ಎಮ್.ಪರಮೇಶ್ವರಪ್ಪ, ಎಸ್.ಗೀತಾ ಶಿವಕುಮಾರ್, ಬರಗೂರು ಗ್ರಾ.ಪಂ.ಸಿದ್ದರಾಮಯ್ಯ, ಪ್ರೇಮಾ.ಬಿ.ಎಸ್, ಹೊಯ್ಸಳಕಟ್ಟೆ ಗ್ರಾ.ಪಂ. ರಘುವೀರ್, ಶೈಲ, ಹೊಯ್ಸಳಕಟ್ಟೆ-2 ಮಲ್ಲೇಶ್, ನರಸಿಂಹರಾಜು,  ಗ್ರಾಮ ಪಂಚಾಯಿತಗೆ ಆಯ್ಕೆಯಾಗಿದ್ದಾರೆ.
ಹುಳಿಯಾರು ಗ್ರಾ.ಪಂ. ಬ್ಲಾಕ್-2 ಜಬೀವುಲ್ಲಾ, ಸಿದ್ದಗಂಗಮ್ಮ, ಬ್ಲಾಕ್-4 ಶಂಕರ್, ರಂಗನಾಥ್, ಮುದ್ದೇನಹಳ್ಳಿ ಗ್ರಾ.ಪಂ. ಕ್ಯಾತನಾಯಕನಹಳ್ಳಿ ರಂಗಸ್ವಾಮಿ(296), ಮಂಜುನಾಥ್(290), ದುಗಡಿಹಳ್ಳಿ ಗ್ರಾ.ಪಂ. ಚುಂಗನಹಳ್ಳಿ ಗಂಗಮ್ಮ(188), ಸಿ.ಹೆಚ್.ದಯಾನಂದ್(260), ಕುಪ್ಪೂರು ಗ್ರಾ.ಪಂ.-1 ಕೆ.ಬಿ.ಶಿವಕುಮಾರ್(394),
 ಕುಪ್ಪೂರು-2 ಕಮಲಮ್ಮ(368), ಮಂಜುಳಮ್ಮ(373), ಮಲ್ಲಿಗೆರೆ ಗ್ರಾ.ಪಂ. ದಾವನದಹೊಸಹಳ್ಳಿ ಕ್ಷೇತ್ರ ಆರ್.ವಸಂತ್ಕುಮಾರ್(349), ಸೌಭಾಗ್ಯಮ್ಮ(323) ಕಂದಿಕೆರೆ ಗ್ರಾ.ಪಂ.ಬ್ಲಾಕ್-1 ಲಲಿತಮ್ಮ, ಗೀತಾ, ಮಂಜುನಾಥ್(ಕೋಳಿ) ಮತ ಪಡೆದು ಗೆಲುವು ಸಾಧಿಸಿದ್ದಾರೆ..

Thursday, May 21, 2015


ಉಚಿತ ಬೇಸಿಗೆ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು 


ಚಿಕ್ಕನಾಯಕನಹಳ್ಳಿ,ಏ.21 : ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ.
ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಡ್ರಾಯಿಂಗ್, ಪೇಪರ್ ಕಟಿಂಗ್, ಪೇಂಟಿಂಗ್, ಸಂಗೀತ, ಭರತನಾಟ್ಯ, ಜೇಡಿಮಣ್ಣಿನಿಂದ ಅಟಿಕೆ ತಯಾರಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಬಾಲವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬದುಕು ಎನ್.ಜಿ.ಓ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಅಂಗನವಾಡಿ ಶಿಕ್ಷಕಿ ಕವಿತಾ ಮಕ್ಕಳಿಗೆ ಪೇಪರ್ ಕಟ್ಟಿಂಗ್ ಹಾಗೂ ಆಟಿಕೆಗಳನ್ನು ತಯಾರಿಸುವುದು ಹೇಳಿಕೊಡುತ್ತಿದ್ದಾರೆ, ಶಿಕ್ಷಕ ಕುಮಾರ್ ಮಕ್ಕಳಿಗೆ ಯೋಗಾಸನ, ಧ್ಯಾನ, ಡ್ರಾಯಿಂಗ್, ಕಲಿಸುವುದು, ಬಸವರಾಜು ರವರು ಪೇಂಟಿಂಗ್, ಪೇಪರ್ ಕಟ್ಟಿಂಗ್ ಹಾಗೂ ಮಹದೇವಮ್ಮ ನವರು ಸಂಗೀತ, ನೃತ್ಯ ಹಾಡು ಮುಂತಾದ ಕಲೆಗಳನ್ನು ಕಲಿಸುತ್ತಿದ್ದಾರೆ.
ಈ ಶಿಬಿರದಲ್ಲಿ ಮಕ್ಕಳು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಇದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಿದೆ. 8 ವರ್ಷದಿಂದ 15 ವರ್ಷದ ವರೆಗಿನ ಮಕ್ಕಳ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಪೋಷಕರಿಗೆ ತುಂಬ ಖುಷಿ ಕೊಟ್ಟಿದೆ ಎನ್ನುತ್ತಾರೆ ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು. 
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆ ನೀಡಲಾಗುತ್ತಿದೆ. ಲೇಖನಿ ಸಾಮಗ್ರಿಗಳು ಹಾಗೂ ಶಿಬಿರಕ್ಕೆ ಬೇಕಾಗಿರುವ ಪರಿಕರಗಳನ್ನು ಧಾರವಾಡದ ಬಾಲವಿಕಾಸ ಅಕಾಡೆಮಿ ನೀಡುತ್ತಿದ್ದು ಇದರ ಉಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿ.ನಾ.ಹಳ್ಳಿ ಶಾಖೆ ನೋಡಿಕೊಳ್ಳುತ್ತಿದೆ.


ಕಾತ್ರಿಕೆಹಾಳ್-ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತಿಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಶೇ.71.40 ರಷ್ಟು ಫಲಿತಾಂಶ 
ಚಿಕ್ಕನಾಯಕನಹಳ್ಳಿ,ಮೇ.21 : ತಾಲ್ಲೂಕಿನ ಕಾತ್ರಿಕೆಹಾಳ್-ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತಿಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಶೇ.71.40 ರಷ್ಟು ಫಲಿತಾಂಶ ದೊರಕಿದೆ.
ಕಾಲೇಜಿನ ವಿದ್ಯಾಥರ್ಿ ಷಡಕ್ಷರಿ 512 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಪ್ರಥಮ ದಜರ್ೆಯಲ್ಲಿ ಎಂಟು ವಿದ್ಯಾಥರ್ಿಗಳು, ದ್ವಿತೀಯ ದಜರ್ೆಯಲ್ಲಿ ಆರು ಮತ್ತು ತೃತೀಯ ದಜರ್ೆಯಲ್ಲಿ ಒಬ್ಬ ವಿದ್ಯಾಥರ್ಿ ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದ ಎಲ್ಲಾ ವಿದ್ಯಾಥರ್ಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಎನ್.ಇಂದಿರಮ್ಮ ಹಾಗೂ ಉಪನ್ಯಾಸಕ ವರ್ಗ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

Friday, May 15, 2015

ಗ್ರಾಮದ  ರಸ್ತೆ ಸರಿಯಾಗುವವರೆಗೂ  ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ :  ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಮೇ.14 : ಗ್ರಾಮದಲ್ಲಿ ಸಂಚರಿಸಲು ತೊಂದರೆಯಾಗಿರುವ ರಸ್ತೆ ಸರಿಯಾಗುವವರೆಗೂ ಗ್ರಾಮದ ಯಾರೊಬ್ಬರೂ ಕೂಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಮತ ಬಹಿಷ್ಕರಿಸುತ್ತೇವೆ ಎಂದು ತಾಲ್ಲೂಕಿನ ಮಲ್ಲೇನಹಳ್ಳಿತಾಂಡ್ಯದ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟಿಸಿದರು.
ತಾಲ್ಲೂಕಿನ ಕುಪ್ಪೂರು ಬೇವಿನಹಳ್ಳಿ ಗೇಟ್ನಿಂದ ಸಮೀಪದ ಗೊಲ್ಲರಹಟ್ಟಿ, ಎ.ಕೆ.ಕಾಲೋನಿ, ಕೋಡಿಹಟ್ಟಿ, ಜೋಗಿಹಟ್ಟಿ, ಬಲ್ಲೇನಹಳ್ಳಿ, ಉಪ್ಪಾರಹಳ್ಳಿ ತಾಂಡ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚರಿಸಲು ಬಹಳ ತೊಂದರೆಯಾಗಿದೆ,  ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ, ಚುನಾವಣೆ ಸಂದರ್ಭದಲ್ಲಿ ಮಾತ್ರ ಓಟನ್ನು ಕೇಳಿಕೊಂಡು ಬರುವವರು ನಂತರ ನಮ್ಮಗಳ ಸಮಸ್ಯೆಯನ್ನೇ ನೋಡುವುದಿಲ್ಲ ಆದ್ದರಿಂದ ಈ ಬಾರಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವು ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಗ್ರಾಮಸ್ಥ ಸೋಮಶೇಖರ್ ಮಾತನಾಡಿ, ಸುಮಾರು 25 ವರ್ಷಗಳಿಂದಲೂ ಈ ಭಾಗದಲ್ಲಿ ರಸ್ತೆ ಸಂಚಾರದ ಸಮಸ್ಯೆ ಹಾಗೆ ಇದೆ, ಮಳೆ ಬಂದರಂತೂ ಸಂಚರಿಸಲು ಕಷ್ಟಕರವಾಗುತ್ತದೆ, ಶಾಲೆಗೆ ತೆರಳುವ ವಿದ್ಯಾಥರ್ಿಗಳು ಮಳೆ ಬಂದರೆ ಶಾಲೆಗೆ ಹೋಗುವುದಿಲ್ಲ, ಪ್ರತಿನಿತ್ಯ ಕೆಲಸಕ್ಕೆ ತೆಳುವವರು ಪಟ್ಟಣಕ್ಕೆ ತೆರಳಲು ರಸ್ತೆ ಸಂಚಾರ ತೊಂದರೆಯಾಗಿರುವುದರಿಂದ ಈ ಭಾಗದಲ್ಲಿ ರಸ್ತೆ ಸಂಚಾರ ಸರಿಯಾಗುವವರೆಗೂ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದರು.
ಗ್ರಾ.ಪಂ.ಮಾಜಿ ಸದಸ್ಯ ರಘುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯನಾಗಿದ್ದ ಸಂದರ್ಭದಲ್ಲಿ ರಸ್ತೆ ಸರಿಪಡಿಸಲು ಸುಮಾರು 10 ಬಾರಿ ಆಕ್ಷನ್ ಪ್ಲ್ಯಾನ್ ಮಾಡಿದ್ದೆವು ಆದರೆ ಗ್ರಾ.ಪಂ.ಅಧ್ಯಕ್ಷರು, ಪಿಡಿಓರವರು ಪರ್ಸಂಟೇಜ್ ಕೇಳುತ್ತಾರೆ ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಶಾಸಕರು, ಸಂಸದರಿಗೆ ತಿಳಿಸಿದರೂ ಯಾರು ಈ ಬಗ್ಗೆ ಗಮನ ಹರಿಸಿಲ್ಲ ಆದ್ದರಿಂದ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥೆ ಸುಶೀಲಮ್ಮ ಮಾತನಾಡಿ ಮಲ್ಲೇನಹಳ್ಳಿ ತಾಂಡ್ಯದಲ್ಲಿ ಮಳೆ ಬಂದರೆ ಸಂಚರಿಸಲು ಕಷ್ಟಕರವಾಗುತ್ತದೆ, ಶಾಲಾ ವಿದ್ಯಾಥರ್ಿಗಳಿಗಂತು ರಸ್ತೆ ಸಮಸ್ಯೆಯೇ ದೊಡ್ಡದಾಗಿದೆ, ಬೇವಿನಹಳ್ಳಿಯಿಂದ ನಮ್ಮ ಗ್ರಾಮಕ್ಕೆ ಸಂಚರಿಸಲು ಆಟೋ ಚಾಲಕರನ್ನು ಕೇಳಿದರೆ ನಿಮ್ಮ ಗ್ರಾಮದಲ್ಲಿ ರಸ್ತೆ ಸರಿಯಿಲ್ಲ ರಸ್ತೆ ಸರಿಯಾದ ಮೇಲೆ ಬರುತ್ತೇವೆ ಎಂದು ಹೇಳುತ್ತಾರೆ ಆದ್ದರಿಂದ ಈ ಭಾಗದಲ್ಲಿ ರಸ್ತೆ ಸರಿಯಾಗುವವರೆಗೂ ಚುನಾವಣೆಯಲ್ಲಿ ನಾವು ಮತ ಚಲಾಯಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಾಮಾನಾಯ್ಕ, ಗೋಪಾಲನಾಯ್ಕ, ಶೈಲಜ, ಬಲರಾಮನಾಯ್ಕ, ಪುರುಷೋತ್ತಮ್, ದಿಲೀಪ್, ಉಮೇಶ್, ಚಂದ್ರು, ಕುಮಾರ್, ದಯಾನಂದ್, ಸಂತೋಷ್ಕುಮಾರ್, ದೇವರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.


ತಾಲ್ಲೂಕಿನ 2014-15ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರೌಡಶಾಲೆಗಳ ಪಲಿತಾಂಶ 
ಚಿಕ್ಕನಾಯಕನಹಳ್ಳಿ,ಏ.13 : ತಾಲ್ಲೂಕಿನ 2014-15ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಕರ್ಾರಿ ಪ್ರೌಡಶಾಲೆ, ಅನುದಾನಿತ ಪ್ರೌಡಶಾಲೆ ಹಾಗೂ ಅನುದಾನ ರಹಿತ ಪ್ರೌಡಶಾಲೆಗಳ ಒಟ್ಟು 2665 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು 2235 ವಿದ್ಯಾಥರ್ಿಗಳು ಉತ್ತೀರ್ಣರಾಗಿ ತಾಲ್ಲೂಕಿಗೆ ಶೇ83.86 ರಷ್ಟು ಪಲಿತಾಂಶ ದೊರಕಿದೆ ಎಂದು ಬಿ.ಇ.ಓ ಕೃಷ್ಣಮೂತರ್ಿ ತಿಳಿಸಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಫಲಿತಾಂಶ ತಾಲ್ಲೂಕಿಗೆ ದೊರೆತಿದ್ದು ತಾಲ್ಲೂಕಿನಲ್ಲಿ 1294 ವಿದ್ಯಾಥರ್ಿಗಳು, 1371 ವಿದ್ಯಾಥರ್ಿನಿಯರು ಪರೀಕ್ಷೆ ಬರೆದಿದ್ದು 1021ವಿದ್ಯಾಥರ್ಿಗಳು, 1214 ವಿದ್ಯಾಥರ್ಿನಿಯರು ತೇರ್ಗಡೆಯಾಗಿದ್ದು ಈ ಬಾರಿಯೂ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದ ವಿದ್ಯಾಥರ್ಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಶೇ.78.90.ರಷ್ಟು ವಿದ್ಯಾಥರ್ಿಗಳು, ಶೇ.88.25.ರಷ್ಟು ವಿದ್ಯಾಥರ್ಿನಿಯರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಒಟ್ಟು ಶೇ.83.86.ರಷ್ಟು ಫಲಿತಾಂಶ ತಾಲ್ಲೂಕಿಗೆ ದೊರಕಿದೆ. ಇದರಲ್ಲಿ 60 ವಿದ್ಯಾಥರ್ಿಗಳು ಅತ್ಯುನ್ನತ, 204 ಪ್ರಥಮ, 396 ದ್ವಿತೀಯ, 636 ತೃತೀಯ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಖಡವಾರು ಫಲಿತಾಂಶ ಪಡೆದ ಶಾಲೆಗಳು 
ಅನುದಾನಿತ ಶಾಲೆಗಳು:  ಚಿತ್ರಲಿಂಗೇಶ್ವರ ಪ್ರೌಢಶಾಲೆ ಹರೇನಹಳ್ಳಿಗೇಟ್ ಶೇ.100%, ಜಯಭಾರತಿ ಪ.ಪೂ.ಕಾಲೇಜು ಮತಿಘಟ್ಟ ಶೇ.98%, ಬಸವೇಶ್ವರ ಪ್ರೌಢಶಾಲೆ ಅಣೇಕಟ್ಟೆ ಶೇ.96.55, ಟಿ.ಆರ್.ಎಸ್.ಆರ್.ಬಾ. ಪ್ರೌಢಶಾಲೆ ಹುಳಿಯಾರು ಶೇ.96, ಗವಿರಂಗನಾಥ ಪ್ರೌಢಶಾಳೆ ದೊಡ್ಡೆಣ್ಣೆಗೆರೆ ಶೇ.94%, ಜನತಾ.ಪ.ಪೂ.ಕಾಲೇಜು ಶೇ.93.33, ಜಿವಿಪಿ ಬಾಲಿಕಾ ಪ್ರೌಢಶಾಲೆ ಸೀಗೇಬಾಗಿ 93.10, ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆ ಕುಪ್ಪೂರು ಶೇ.92.73, ಕಾಳಿದಾಸ ಪ್ರೌಢಶಾಲೆ ಹಂದನಕೆರೆ ಶೇ.88.10, ದೇವರಾಜೇಅರಸ್ ಪ್ರೌಢಶಾಲೆ ಮಲಗೊಂಡನಹಳ್ಳಿ ಶೇ.88.00, ಶ್ರೀ ಕನಕದಾಸ ಪ್ರೌಢಶಾಲೆ ಹುಳಿಯಾರು ಶೇ.87.88, ಜಿವಿಪಿ ಬಾಲಿಕಾ ಪ್ರೌಢಶಾಲೆ ಹಂದನಕೆರೆ ಶೇ87.10, ವಿಶ್ವಭಾರತಿ ಪ್ರೌಢಶಾಲೆ ಬರಕನಹಾಳ್ ಶೇ.85.71, ಶ್ರೀ ಮಾರುತಿ ಗ್ರಾ.ಪ್ರೌಢಶಾಲೆ ಚಿಕ್ಕಬಿದರೆ ಶೇ.84.44, ಸಾಕ್ಷರತಾ ಮಹಿಳಾ ಮ.ಪ್ರೌ.ಶಾಲೆ ಗುರುವಾಪುರ ಶೇ.84, ಶ್ರೀ ರಂಗನಾಥ ಪ್ರೌಢಶಾಲೆ ಬೆಳಗುಲಿ ಶೇ83.93, ಬಸವೇಶ್ವರ ಪ್ರೌಢಶಾಲೆ ಹುಳಿಯಾರು ಶೇ83.02, ಜ್ಞಾನಪೀಠ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.81.82, ಜಿವಿಪಿ ಕಿರಿಯ ಕಾಲೇಜು ಹಂದನಕೆರೆ ಶೇ.ಶೇ80.00, ಡಿವಿಪಿ ಬಾಲಕಿಯರ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ78.57, ಡಾ.ಅಂಬೇಡ್ಕರ್ ಪ್ರೌಢಶಾಲೆ ತೀರ್ಥಪುರ-ಕಾತ್ರಿಕೆಹಾಳ್ ಶೇ.78.38, ಮಾರಮ್ಮದೇವರ ಪ್ರೌಢಶಾಲೆ ದೊಡ್ಡರಾಂಪುರ ಶೇ77.27, ನಿವರ್ಾಣೇಶ್ವರ ಬಾಲಿಕಾ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ75.00, ಶಾರದಾ.ಪ.ಪೂ.ಕಾಲೇಜು ತಿಮ್ಮನಹಳ್ಳಿ ಶೇ.75.00, ವಿದ್ಯಾಭಾರತಿ ಪ್ರೌಢಶಾಲೆ ಗಾಣದಾಳು ಶೇ.72.73, ಶ್ರೀ ಲಕ್ಷ್ಮೀನರಸಿಂಹ ಪ್ರೌಢಶಾಲೆ ಬೈಲಪ್ಪನಮಠ ಶೇ.72.00, ಸಿದ್ದಗಂಗಾ ಪ್ರೌಢಶಾಲೆ ಕಂದಿಕೆರೆ ಶೇ.70.45, ವಿದ್ಯಾರಣ್ಯ ಪ್ರೌಢಶಾಲೆ ಬೊಮ್ಮೇನಹಳ್ಳಿ ಶೇ.70.37, ಬಾಪೂಜಿ ಪ್ರೌಢಶಾಲೆ ಬೇವಿನಹಳ್ಳಿ ಶೇ.68.00, ಡಾ.ಅಂಬೇಡ್ಕರ್ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.68.00, ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ರಾಮನಹಳ್ಳಿ ಶೇ.67.74, ಡಿವಿಪಿ ಬಾಲಕರ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.67.06, ಬೂದೇವಿ ಗ್ರಾಮಾಂತರ ಪ್ರೌಢಶಾಲೆ ಬರಗೀಹಳ್ಳಿ ಶೇ.18.75 ಪಡೆದಿದೆ.
ಅನುದಾನರಹಿತ ಶಾಲೆಗಳು  : ರಾಮಾಂಜನೇಯ ಪ್ರೌಢಶಾಲೆ ಗೂಬೆಹಳ್ಳಿ ಶೇ.40.00, ವಾಸವಿ ಆಂಗ್ಲ ಪ್ರೌಡಶಾಲೆ ಹುಳಿಯಾರು ಶೇ.95.83, ರೋಟರಿ ಆಂಗ್ಲ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.100.00, ಶ್ರೀ ಶಾರದವಿದ್ಯಾಪೀಠ ಪ್ರೌಢಶಾಲೆ ಶೇ.92.59, ಇಂದಿರಾಗಾಂಧಿ ಪ್ರೌಢಶಾಲೆ ಮುದ್ದೇನಹಳ್ಳಿ ಶೇ.20.00, ನವೋದಯ ಪ್ರೌಢಶಾಲೆ ಆಂಗ್ಲ ಚಿ.ನಾ.ಹಳ್ಳಿ ಶೇ.97.30, ಜ್ಞಾನಜ್ಯೋತಿ ಪ್ರೌಢಶಾಲೆ ಆಂಗ್ಲ.ಹುಳಿಯಾರು ಶೇ.100.00 ಪಡೆದಿವೆ.
ಸಕರ್ಾರಿ ಶಾಲೆಗಳು : ಸಕರ್ಾರಿ ಪ.ಪೂ.ಕಾಲೇಜು ಗೋಡೆಕೆರೆ ಶೇ.82.26, ಹುಳಿಯಾರು ಕೆಂಕೆರೆ ಕಾಲೇಜು ಶೇ.91.19, ಸ.ಪ.ಪೂ.ಕಾಲೇಜು ಬೋರನಕಣಿವೆ ಶೇ.81.25, ಸಕರ್ಾರಿ ಪ್ರೌಢಶಾಲೆ ಯಳನಡು ಶೇ.84.29, ಸಕರ್ಾರಿ ಪ್ರೌಢಶಾಲೆ ದಸೂಡಿ ಶೇ.69.35, ಸಕರ್ಾರಿ ಪ್ರೌಢಶಾಲೆ ಸಾಸಲು ಶೇ.96.88, ಸಕರ್ಾರಿ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.77.50, ಸಕರ್ಾರಿ ಪ್ರೌಢಶಾಲೆ ಉದರ್ು ಹುಳಿಯಾರು ಶೇ.85.71, ಸಕರ್ಾರಿ ಪ್ರೌಢಶಾಲೆ ಬರಗೂರು ಶೇ.92.50, ಸಕರ್ಾರಿ ಪ್ರೌಢಶಾಲೆ ಬರಶಿಡ್ಲಹಳ್ಳಿ ಶೇ.100.00, ಸಕರ್ಾರಿ ಪ್ರೌಢಶಾಲೆ ದಬ್ಬಗುಂಟೆ ಶೇ.88.25, ಸಕರ್ಾರಿ ಪ್ರೌಢಶಾಲೆ ಜೆ.ಸಿ.ಪುರ ಶೇ.79.59, ಸಕರ್ಾರಿ ಪ್ರೌಢಶಾಲೆ ಕಾಮಲಾಪುರ ಶೇ.90.91, ಸಕರ್ಾರಿ ಪ್ರೌಢಶಾಲೆ ಬಡಕೇಗುಡ್ಲು ಶೇ.77.78, ಸಕರ್ಾರಿ ಪ್ರೌಢಶಾಲೆ ಕೆಂಕೆರೆ ಶೇ.83.33, ಸಕರ್ಾರಿ ಪ್ರೌಢಶಾಲೆ ಗೂಬೆಹಳ್ಳಿ-ನಂದಿಹಳ್ಳಿ ಶೇ.86.67, ಸಕರ್ಾರಿ ಪ್ರೌಢಶಾಲೆ ಹೆಚ್.ತಮ್ಮಡಿಹಳ್ಳಿ ಶೇ.83.33, ಸಕರ್ಾರಿ ಪ್ರೌಢಶಾಲೆ ತೀರ್ಥಪುರ ಶೇ.94.44, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ ಶೇ.100.00, ಯುಪಿಆರ್ಎಮ್ಎಸ್ಎ ಜಿಹೆಚ್ಎಸ್ ಬೆಳ್ಳಾರ ಶೇ.95.65, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಶೇ.100.00 ಫಲಿತಾಂಶ ಪಡೆದಿವೆ.



Wednesday, May 13, 2015

ೆಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಪ್ರಥಮ ಚಿಕ್ಕನಾಯಕನಹಳ್ಳಿ ವಿದ್ಯಾಥರ್ಿನಿ ಎಂ.ಆರ್.ಧೃವಿಕ
                                                                       ಚಿತ್ರ ಶೀಷರ್ಿಕೆ :
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೊರಾಜರ್ಿ ಶಾಲೆಯ ವಿದ್ಯಾಥರ್ಿನಿ ಎಂ.ಆರ್.ಧೃವಿಕ 619 ಅಂಕಗಳಿಸಿ ಜಿಲ್ಲೆಗೆ ಪ್ರಥಮರೆನಿಸಿದ್ದಾರೆ. ಚಿತ್ರದಲ್ಲಿ ವಿದ್ಯಾಥರ್ಿನಿ ತಾಯಿ ನಾಗಮಣಿ, ಶಾಲೆಯ ಪ್ರಾಂಶುಪಾಲ ಸತೀಶ್ ಇದ್ದಾರೆ.

ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಮೊರಾಜರ್ಿ ದೇಸಾಯಿ ವಸತಿ ನಿಲಯದ ವಿದ್ಯಾಥರ್ಿನಿ ಎಂ.ಆರ್.ಧೃವಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಂ.ಆರ್.ಧೃವಿಕ ಎಸ್.ಎಸ್ಎಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ 124, ಇಂಗ್ಲೀಷ್ 98, ಹಿಂದಿ 99, ಗಣಿತ 100, ವಿಜ್ಞಾನ 99, ಸಮಾಜವಿಜ್ಞಾನ 99 ಅಂಕಗಳನ್ನು ಪಡೆದು ಎ+ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ. ಎಂ.ಆರ್.ಧೃವಿಕ ಕೃಷಿ ಕುಟುಂಬದ ತಂದೆ ಎಚ್.ರಂಗನಾಥಸ್ವಾಮಿ, ತಾಯಿ ನಾಗಮಣಿ ಮಗಳಾಗಿದ್ದಾರೆ. ವಿದ್ಯಾಥರ್ಿನಿ ಎಂ.ಆರ್.ಧೃವಿಕ ಪಠ್ಯಪುಸ್ತಕ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ದೆಯಿಂದ ಕಲಿತಿದ್ದು ಓಸ್ವಾಲ್ ಪ್ರಶ್ನೆಪುಸ್ತಕವನ್ನು ನಿತ್ಯ ನೋಡುವ ಅಭ್ಯಾಸ ಮಾಡಿಕೊಂಡಿದ್ದೆ, ಶಾಲೆಯಲ್ಲಿ ನೀಡುವ ಪ್ರಶ್ನೆಪತ್ರಿಕೆಯನ್ನು ಚಾಚೂ ತಪ್ಪದೆ ಬರೆಯುತ್ತಿದ್ದೆ ಎಂದರಲ್ಲದೆ ಮುಂದೆ ಐ.ಎ.ಎಸ್ ಮಾಡುವ ಬಯಕೆಯಿದೆ ಎಂದರು.
ಪ್ರಾಂಶುಪಾಲ ಸತೀಶ್ ಮಾತನಾಡಿ, ಎಂ.ಆರ್.ಧೃವಿಕ ಪ್ರತಿಭಾನ್ವಿತ ವಿದ್ಯಾಥರ್ಿನಿಯಾಗಿದ್ದರು. ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಶಿಕ್ಷಕರು ವಿದ್ಯಾಥರ್ಿಗಳಿಗೆ ಮೂರು ತಿಂಗಳ ಮುಂಚೆಯೇ ಪರೀಕ್ಷೆಯ ಬಗ್ಗೆ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾಥರ್ಿಗಳಿಗೆ ತಯಾರಿ ನಡೆಸಿದ್ದರು ಹಾಗೂ ಪರೀಕ್ಷೆಯಲ್ಲಿ ಬರೆಯಲು ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರು. ಈ ಕಾರಣದಿಂದಲೇ ಧೃವಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಲು ಕಾರಣ ಹಾಗೂ ಶಾಲೆಯ ಎಲ್ಲಾ ವಿದ್ಯಾಥರ್ಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬರಲು ಸಾಧ್ಯವಾಯಿತು ಎಂದರು.
ಮೊರಾಜರ್ಿ ದೇಸಾಯಿ  ಶಾಲೆಯಿಂದ 47 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು ಎಂ.ಎಆರ್.ಧೃವಿಕ 619, ಪ್ರೀತಿ 600, ಕಾವ್ಯ 576, ಮಧುಶ್ರೀ 574, ಭಾಸ್ಕರ್ ಡಿ.ಎಸ್.569, ಸುಕ್ಷಿತ್ 563, ಅಂಕ ಹಾಗೂ 10 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ, 26 ಮಕ್ಕಳು ಪ್ರಥಮ ದಜರ್ೆಯಲ್ಲಿ, 5 ಮಕ್ಕಳು ದ್ವಿತಿಯ ದಜರ್ೆಯಲ್ಲಿ ಪಾಸಾಗುವ ಮೂಲಕ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದರು.
 
ರೋಟರಿ ಶಾಲೆಯ ವಿದ್ಯಾಥರ್ಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ
ಚಿಕ್ಕನಾಯಕನಹಳ್ಳಿ,ಮೇ.13 : ನಿರೀಕ್ಷಯಂತೆ ಅಂಕ ಬಂದಿರುವುದು ಸಂತಸ ತಂದಿದೆ, ಈ ನಿಟ್ಟಿನಲ್ಲೇ ಮುಂದೆ ಡಾಕ್ಟರ್ ಆಗುವ ನಿರೀಕ್ಷೆಯಿದೆ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 611 ಅಂಕ ಪಡೆದಿರುವ ಸಿ.ವಿ.ದಶರ್ಿನಿ ಹೇಳಿದರು.
ಪಟ್ಟಣದ ರೋಟರಿ ಶಾಲೆಯ ವಿದ್ಯಾಥರ್ಿನಿ ಸಿ.ವಿ.ದಶರ್ಿನಿ ಮಾತನಾಡಿ, ತಂದೆ ತಾಯಿಯ ಕನಸು ನನಸು ಮಾಡುವುದು ನನ್ನ ಧ್ಯೇಯ, ತಂದೆ ವಕೀಲರಾದ ವೆಂಕಟೇಶ್, ತಾಯಿ ಲಕ್ಷ್ಮೀಲತಾ ಇವರು ಕೃಷಿ ಕುಟುಂಬದಿಂದ ಬಂದವರಾಗಿದ್ದು ಮಗಳ ಯಶಸ್ಸಿಗೆ ಸಂತಸ ಹಂಚಿಕೊಂಡರು.
ಗಣಿತದಲ್ಲಿ 100ಕ್ಕೆ 100 ಅಂಕಗಳಿಸಿದರೆ, ಕನ್ನಡದಲ್ಲಿ 122, ಇಂಗ್ಲೀಷ್ 97, ಹಿಂದಿ 98, ವಿಜ್ಞಾನ 97, ಸಮಾಜ 97, ಪಡೆದು ಒಟ್ಟು 611 ಅಂಕ ಪಡೆದು ಶೇ.97ರಷ್ಟು ಅಂಕ ಪಡೆದಿದ್ದಾರೆ.


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರೋಟರಿ ಶಾಲೆಗೆ 100% ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.13 : ಪಟ್ಟಣದ ರೋಟರಿ ಆಂಗ್ಲ ಪ್ರೌಢಶಾಲೆಯ ವಿದ್ಯಾಥರ್ಿ ಮೋಹಿತ್.ಎಸ್. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರೋಟರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 15 ವಿದ್ಯಾಥರ್ಿಗಳು, ಪ್ರಥಮ ದಜರ್ೆಯಲ್ಲಿ 40 ವಿದ್ಯಾಥರ್ಿಗಳು ಪಾಸಾಗಿದ್ದಾರೆ, ಶೇ.100 ರಷ್ಟು ಫಲಿತಾಂಶ ಬಂದಿದೆ. 
1) ಎಸ್.ಮೋಹಿತ್ 619.(ಶೇ.99.4,) 2) ದಶರ್ಿನಿ 611.(97.11), ಜಿ.ಕೆ.ಸಂದೀಪ್606(96.96), ಬಿಂದುರಾಜಶೇಖರ್ 597(95.52), ದೊರೈರಾಜ್588(94.08), ಬಿ.ಎಸ್.ಚೇತನ 577(92.32), ಸಹನ ಸಿ.ಎಸ್(577(92.32), ಪಾವನಗಂಗ 576(92.16), ಕೆ.ಆರ್.ಶ್ರೀಲಕ್ಷ್ಮೀ 573(91.68), ಹೆಚ್.ಬಿ.ಯಶವಂತ್573(91.68), ಟಿ.ವಿನಯ್568(90.88), ಆಶಾ.ಕೆ.ಎಸ್567(90.72), ಸಹನ.ಕೆ.566(90.56), ಮಧು.ಬಿ.ಎನ್.565(90.40), ಸುಪ್ರಿತ.ಸಿ.565(90.40) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
(1ರಿಂದ 15ರವರೆಗಿನ ಪೋಟೋಗಳು).
ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು.


















Tuesday, May 5, 2015


ಕಟ್ಟಡ ಕಾಮರ್ಿಕರ ನೂತನ ಸಂಘ ಉದ್ಘಾಟನೆ
ಚಿಕ್ಕನಾಯಕನಹಳ್ಳಿ : ಕಟ್ಟಡ ಕಾಮರ್ಿಕರ ಬಗ್ಗೆ ಸಂಸತ್ತಿನಲ್ಲಾಗಲಿ, ವಿಧಾನಸಭೆಯಲ್ಲಾಗಲಿ, ಜಿ.ಪಂ.ಸಭೆಯಲ್ಲಾಗಲಿ, ಯಾರು ಪ್ರಸ್ತಾಪಿಸದೇ ಇರುವುದು ದುರದೃಷ್ಠಕರ ಎಂದು ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ತುಮಕೂರು ಜಿಲ್ಲಾ ಖಜಾಂಚಿ ಅಶ್ವತ್ಥ್ನಾರಾಯಣ್ ವಿಷಾಧಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ದೇವಾಲಯದ ಬಳಿ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ನೂತನ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಧಾನಸಭಾ ಸದಸ್ಯರು ತಮ್ಮ ಸಂಬಳ ಸಾರಿಗೆ ವ್ಯವಸ್ಥೆಗೆ 8 ನಿಮಿಷಗಳಲ್ಲಿ ಹೆಚ್ಚಿಸಿಕೊಂಡರು. ಆದರೆ ಅಸಂಘಟಿತ ಕಾಮರ್ಿಕರ ಬಗ್ಗೆ ಗಮನ ಹರಿಸಲಿಲ್ಲ ಎಂದು ವಿಷಾಧಿಸಿದ ಅವರು ಸಕರ್ಾರ ಪ್ರತಿ ಕಟ್ಟಡ ಕಟ್ಟುವವ ಶೇ.1ರಷ್ಟು ಸೆಸ್ ವಸೂಲಿ ಮಾಡುತ್ತಿದ್ದು, ಈ ಹಣ 3280 ಕೋಟಿ ರೂಪಾಯಿಗಳಾಷ್ಟಾಗಿದೆ ಆದರೆ ಕಾಮರ್ಿಕರಿಗೆ ಮಾತ್ರ ಸರಿಯಾದ ಸವಲತ್ತುಗಳು ನೀಡುತ್ತಿಲ್ಲ ಎಂದ ಅವರು ಕೇಂದ್ರ ಸಕರ್ಾರ ಬಂಡವಾಳ ಶಾಹಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆಯನ್ನು ಮನ್ನ ಮಾಡುತ್ತಿದ್ದಾರೆ, ಈಗಿನ ಕೇಂದ್ರ ಸಕರ್ಾರ ಅಭಿವೃದ್ದಿಯ ಹೆಸರಿನಲ್ಲಿ ರೈತರಿಂದ ಜಮೀನುಗಳನ್ನು ವಶಪಡಿಸಿಕೊಂಡು ರೈತರಿಗೆ ವಂಚಿಸುತ್ತಿದ್ದಾರೆಂದು ಹೇಳಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್ ಮಾತನಾಡಿ, ದೇಶದ ಕಟ್ಟಡದ ಕಾಮರ್ಿಕರು  5ಕೋಟಿ ಜನರಿದ್ದು ರಾಜ್ಯದಲ್ಲಿ 25ಲಕ್ಷ ಕಾಮರ್ಿಕರಿದ್ದಾರೆ, ಸಂಸತ್ತಿನ ಪಾಲರ್ಿಮೆಂಟ್, ವಿಧಾನಸೌದ ಸಕರ್ಾರಿ ಕಛೇರಿಗಳು ಸೇರಿದ್ದು ನಾನಾ ಕಟ್ಟಡಗಳು ಕಾಮರ್ಿಕರೇ ಕಟ್ಟಿದ್ದಾರೆ ಆದರೆ ಅವರಿಗೆ ಸವಲತ್ತುಗಳನ್ನು ನೀಡುತ್ತಿದೆ, ಸಕರ್ಾರಿ ನೌಕರರಿಗೆ ಕಂಪನಿಗಳ ಕಾಮರ್ಿಕರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು ಅಸಂಘಟಿತ ಕಾಮರ್ಿಕರಿಗೆ ಸವಲತ್ತು ನೀಡುತ್ತಿಲ್ಲ ಎಂದ ಅವರು ರಾಜ್ಯದಲ್ಲಿ 7.45ಲಕ್ಷ ಕಾಮರ್ಿಕರು ನೊಂದಣಿ ಮಾಡಿಸಿಕೊಂಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಕಾಮರ್ಿಕರೂ ಕಾಮರ್ಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳುವ ಮೂಲಕ ಸಕರ್ಾರದ ನಾನಾ ಸವಲತ್ತುಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಮರ್ಿಕರು ಮೋಟಾರ್ ಬೈಕ್ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಮಹಮದ್ಖಲಂದರ್ ಮತ್ತಿತರರು ಉಪಸ್ಥಿತರಿದ್ದರು.





ಕನ್ನಡ ಸಾಹಿತ್ಯ ಪರಿಷತ್ ಆರಂಭಗೊಂಡು ನೂರವಸಂತಗಳು 
ಚಿಕ್ಕನಾಯಕನಹಳ್ಳಿ : ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಲು ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಇಂದಿಗೆ ನೂರು ವಸಂತಗಳು ತುಂಬುತ್ತಿರುವುದರಲ್ಲಿ ಹಲವರ ಶ್ರಮವಿದೆ ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿ ನೂರು ವಸಂತಗಳು ತುಂಬಿದ ಹಿನ್ನಲೆಯಲ್ಲಿ ಪಟ್ಟಣದ ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತನ್ನದೇ ಆದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಆರಂಭವಾಯಿತು ಅಂದಿನಿಂದ ಇಂದಿನವರೆಗೂ ಸಾಹಿತ್ಯ ಪರಿಷತ್ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಕನ್ನಡ ಮನಸ್ಸುಗಳನ್ನು ಕಟ್ಟುತ್ತಿದೆ ಎಂದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ, ಕನ್ನಡ ಮನಸ್ಸುಗಳು ಹಾಗೂ ಪಟ್ಟಣದ ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್ನ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ  ಕಾರ್ಯಕ್ರಮ ಹಮ್ಮಿಕೊಂಡಿರುವುದು ಕನ್ನಡದ ಬಗ್ಗೆ ಇರುವ ಅಭಿಮಾನವಾಗಿದೆ, ಕೇಂದ್ರ ಸಕರ್ಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ ಎಂದರಲ್ಲದೆ ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಹಾಗೂ ಕನ್ನಡ ಕಾರ್ಯಕ್ಕೆ ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಜಯಲಕ್ಷ್ಮಮ್ಮ, ಸಿದ್ದಲಿಂಗಮ್ಮ, ಜಯರಾಮ್, ಸಿ.ಡಿ.ಚಂದ್ರಶೇಖರ್, ಪಾರ್ಥಸಾರಥಿರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ, ದಲಿತ ಸಂಘರ್ಷ ಸಮಿತಿ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಸಂಘ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಯಕನರ್ಾಟಕ ವೇದಿಕೆ, ಭೋದಿವೃಕ್ಷ, ಚಿಕ್ಕನಾಯಕ ಯೂತ್ ಕ್ಲಬ್, ಸ್ನೇಹಕೂಟ, ನಡೆನುಡಿ, ಕುಂಚಾಂಕುರ ಕಲಾಸಂಘ, ಭುವನೇಶ್ವರಿ ಸಂಘ, ಆಟೋಚಾಲಕರ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಕನ್ನಡ ಬಾವುಟದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಿದ್ದುಜಿ.ಕೆರೆ, ನಿರೂಪ್ರಾವತ್, ಮಂಜುನಾಥ್, ರವಿಕುಮಾರ್, ಜಯಮ್ಮ, ಗೋವಿಂದರಾಜು, ಲಿಂಗದೇವರು, ಬಸವರಾಜು, ನಂಜುಂಡಪ್ಪ, ಸುಪ್ರಿಂಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.




ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ  ಎಂಟು ಜನ ಅವಿರೋಧವಾಗಿ ಆಯ್ಕೆ ಇನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಮೇ.5: ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ 10 ಜನ ಚುನಾಯಿತ ನಿದರ್ೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ್ದು ಇದರಲ್ಲಿ ಎಂಟು ಜನ ಅವಿರೋಧವಾಗಿ ಆಯ್ಕೆಯಾದರೆ ಎನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿದ್ದಾರೆ.
ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ (ಟಿ.ಎ.ಪಿ.ಸಿ.ಎಂ.ಎಸ್)ಕ್ಕೆ ಎ ವರ್ಗದಿಂದ ಅವಿರೋಧವಾಗಿ ಆಯ್ಕೆಯಾದವರೆಂದರೆ, ಷಡಾಕ್ಷರಿ ಮಾಳಿಗೆಹಳ್ಳಿ, ಜಯದೇವಮೂತರ್ಿ ತೀರ್ಥಪುರ, ಲಿಂಗದರಾಜು ಹಂದನಕೆರೆ, ಜಯದೇವಪ್ಪ ಗಾಣಧಾಳು, ವಕೀಲ ಎನ್.ಎನ್.ಶ್ರೀಧರ್ ವಿವಿಧ ವಿ.ಎಸ್.ಎಸ್.ಎನ್.ಸೊಸೈಟಿಗಳನ್ನು ಪ್ರತಿನಿಧಿಸಿದ್ದಾರೆ, ಮೀಸಲು ಕ್ಷೇತ್ರದಿಂದ ಶಶಿಶೇಖರ್, ಮಹಿಳಾ ಕ್ಷೇತ್ರದಿಂದ ಮಂಜುಳ ನಾಗರಾಜ್ ಗೋಪಾಲನಹಳ್ಳಿ, ಕಲ್ಪನಾ ರಾಮಲಿಂಗಯ್ಯ ಮಾರಸಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿ.ಸಿ.ಎಂ.ನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಎರಡು ಸ್ಥಾನಕ್ಕೆ ಎರಡು ಸಾವಿರ ಷೇರುದಾರರು ಮತಚಲಾಯಿಸಬೇಕಿದೆ.
ಟಿ.ಎ.ಪಿ.ಸಿ.ಎಂ.ಎಸ್.ಗೆ ಒಟ್ಟು 13 ಜನ ನಿದರ್ೇಶಕರಿದ್ದು, ಇದರಲ್ಲಿ 10 ಜನ ಚುನಾವಣೆ ಮೂಲಕ ಆಯ್ಕೆಯಾದರೆ ಇಬ್ಬರು ಅಧಿಕಾರಿ ವರ್ಗದಿಂದ ನಿದರ್ೇಶಕರಾಗಿ ನಿಯೋಜನೆಗೊಳ್ಳುವರು, ಒಬ್ಬರು ಸಕರ್ಾರದಿಂದ ನೇಮಕಗೊಳ್ಳುವರು.




ಚಿಕ್ಕನಾಯಕನಹಳ್ಳಿ ಬಿಜೆಪಿ ಪಕ್ಷದ ವತಿಯಿಂದ ನೇಪಾಳ ಸಂತ್ರಸ್ಥರಿಗಾಗಿ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು. ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಬುಳ್ಳೇನಹಳ್ಳಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.


Saturday, May 2, 2015


ವಕೀಲರ ಸಂಘದ ನೂತನ ಅಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ, : ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆರ್.ಕರಿಯಪ್ಪ, ಕಾರ್ಯದಶರ್ಿಯಾಗಿ ಬಿ.ಜಿ.ಆದರ್ಶ,ಉಪಾಧ್ಯಕ್ಷರಾಗಿ ಸಿ.ರಾಜಶೇಖರ್ ಸಹಕಾರ್ಯದಶರ್ಿಯಾಗಿ ಟಿ.ರವೀಂದ್ರಕುಮಾರ್, ಖಜಾಂಚಿಯಾಗಿ ಮೋಹನ್ಪೃಥ್ವಿಪ್ರಸಾದ್ ಆಯ್ಕೆಯಾಗಿದ್ದಾರೆ.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ
ಚಿಕ್ಕನಾಯಕನಹಳ್ಳಿ : ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ, ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸುಕರಾಗಿರುವುದನ್ನು ಸ್ವಾಗತಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಗೋ.ನಿ.ವಸಂತ್ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಪರಿಶಿಷ್ಠ ಜಾತಿಯಲ್ಲಿನ ಶೇಕಡಾ 15ರ ಮೀಸಲಾತಿಯನ್ನು ಸಂವಿಧಾನದತ್ತವಾಗಿ, ಜನಸಂಖ್ಯಾ ಆಧಾರಿತವಾಗಿ ಪರಿಶಿಷ್ಠ ಜಾತಿಯ ಒಳಗಿನ ಮಾದಿಗರಿಗೆ ಶೇ.6%, ಛಲವಾಧಿಗಳಿಗೆ ಶೇ.5%, ಉಳಿದ ಇತರೆಯವರಿಗೆ ಶೇ.3% ಹಾಗೂ ಅಲೆಮಾರಿಗಳಿಗೆ ಶೇ.1% ಒಳ ಮೀಸಲಾತಿಯಲ್ಲಿ ವಗರ್ೀಕರಣ ಮಾಡಿ ಸಕರ್ಾರಕ್ಕೆ ಶಿಫಾರಸ್ಸು ಮಾಡಿದ್ದು, ಅಸ್ಪೃಶ್ಯತೆಯ ಅಸಮಾನತೆಯ ಬದುಕನ್ನು ಸವೆಸುತ್ತಿರುವ ಮಾದಿಗರು ಮತ್ತು ಛಲವಾದಿ(ಹೊಲೆಯ) ಸಮುದಾಯಗಳಿಗೆ ನ್ಯಾ.ಸದಾಶಿವ ವರದಿ ಜಾರಿಗೊಂಡರೆ ಈ ಸಮುದಾಯಗಳು ಸಾಮಾಜಿಕ ಮುಖ್ಯ ವಾಹಿನಿಗೆ ಬರಲು ಸಹಾಯಕವಾಗುತ್ತದೆ ತಕ್ಷಣ ಸದಾಶಿವ ವರದಿ ಜಾರಿಯಾಗಬೇಕೆಂದು ಒತ್ತಾಯಿಸಿ, ದಲಿತ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಸಿ.ಎಸ್.ಲಿಂಗದೇವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಂಡ ನಿವಾಸಿಗಳಿಗೆ ದುಶ್ಚಟಗಳಿಂದ ದೂರವಿರಲು
                                                          
ಜಾಗೃತಿ ಶಿಬಿರ
                             

ಚಿಕ್ಕನಾಯಕನಹಳ್ಳಿಮೇ.02 : ಯುವಕ, ಯುವತಿಯರು ಮಧ್ಯಪಾನ, ಬೀಡಿ ಸಿಗರೇಟು, ಗುಟುಕದಂತಹ ದುಷ್ಚಟಗಳಿಗೆ ಒಳಗಾಗುವುದರಿಂದ ಅವರ ಆರೋಗ್ಯದ ಮೇಲೆ ಬೀರುವ ದುಷ್ಪಣಾಮದ ಬಗ್ಗೆ ತಾಂಡ ನಿವಾಸಿಗಳಿಗೆ ಅರಿವು, ಜಾಗೃತಿ ಮೂಡಿಸಲು ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನರ್ಾಟಕ ಸಕರ್ಾರದ, ಕನರ್ಾಟಕ ತಾಂಡಾ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದ್ದು ಕನರ್ಾಟಕದಲ್ಲಿರುವ ವಿವಿಧ ತಾಂಡಗಳಿಗೆ ಮತ್ತು ತಾಂಡ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕಿನ ಬರಗೂರು ಗ್ರಾಮ ಪಂಚಾಯಿತಿಗೆ ಸೇರಿದ ಟಿ.ತಾಂಡಾ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥಯ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನರ್ಾಟಕದ ತಾಂಡಾ ಅಭಿವೃದ್ದಿ ನಿಗಮದಿಂದ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳು, ತಾಂಡದಲ್ಲಿ ಸಿ.ಸಿ.ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರು, ಬೀದಿ ದೀಪಗಳು, ವಿದ್ಯುತ್ ಸಂಪರ್ಕ, ಬಸ್ ನಿಲುಗಡೆ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಆರೋಗ್ಯ ಮತ್ತು ಶೈಕ್ಷಣಿಕ ಮೂಲ ಸೌಕರ್ಯ ಯೋಜನೆಗಳು ಆರೋಗ್ಯ ಕೇಂದ್ರಗಳು, ಆರೋಗ್ಯ ತಪಾಸಣಾ ಶಿಬಿರ ಮತ್ತು ಶೈಕ್ಷಣಿಕವಾಗಿ ಅಂಗನವಾಡಿ ಕೇಂದ್ರ ಮತ್ತು ಖುತುಮಾನ ಶಾಲೆಗಳು, ತಾಂಡ ನಿವಾಸಿಗಳಿಗಾಗಿ ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕೃತಿಕ ಆಚಾರ ವಿಚಾರ ಸಂಪ್ರದಾಯಗಳಿಗೆ ಉತ್ತೇಜನ, 2006 ಅರಣ್ಯ ಹಕ್ಕು ಕಾಯ್ದೆ ಅನ್ವಯ ತಾಂಡಾದ ನಿವಾಸಿಗಳು ಸಕರ್ಾರಿ ಜಮೀನು, ಗೋಮಾಳ, ಅರಣ್ಯ ಭೂಮಿ ಉಳುಮೆ ಮಾಡುವವರಿಗೆ ಹಕ್ಕು ಪತ್ರ ವಿತರಣೆ ಮಾಡಿಸುವ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು ಹಾಗೂ ಪ್ರತಿಯೊಂದು ತಾಂಡಾ ಮಟ್ಟದಲ್ಲಿ ತಾಂಡಾ ವಿಕಾಸ ಸಮಿತಿಯನ್ನು ರಚನೆ ಮಾಡುವುದು, ಅದರಲ್ಲಿ ತಾಂಡಾದ ವಂಶಪಾರಂಪಾರಿಕರಾದ ನಾಯಕ, ಡಾವೂ, ಕಾರುಭಾರಿ & ಒಬ್ಬ ವಿದ್ಯಾವಂತ ಯುವಕ/ಯುವತಿ ಹಾಗೂ ಸ್ಥಳಿಯ ಚುನಾಯಿತಿ ಪ್ರತಿನಿಧಿಗಳು ತಾಂಡಾ ವಿಕಾಸ ಸಮಿತಿಯಲ್ಲಿ ಪದಮಿತ ಸದಸ್ಯರಾಗಿರುವುದು ತಾಂಡಾ ವಿಕಾಸ ಸಮಿತಿಯ ಮುಖ್ಯ ಉದ್ದೇಶ ತಾಂಡಾವನ್ನು ನಾವೇ ಅಭಿವೃದ್ದಿ ಮಾಡವುದು ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಚೇತನಗಂಗಾಧರ್, ರಾಜ್ಯ ತಾಂಡ ಅಭಿವೃದ್ದಿ ನಿಗಮದ ಸಂಪನ್ಮೂಲ ವ್ಯಕ್ತಿಗಳಾದ ಹರಿಯಾನಾಯ್ಕ, ಕೃಷ್ಣನಾಯ್ಕ, ಶಶಿಧರನಾಯ್ಕ, ಗ್ರಾ.ಪಂ.ಮಾಜಿ ಸದಸ್ಯರಾದ ಚಂದ್ರನಾಯ್ಕ, ಶಿಕ್ಷಕ ಮೂತರ್ಿನಾಯ್ಕ, ಗಂಗಾದರ್, ಬಡ್ಸರ್್ ಸಂಸ್ಥೆಯ ಸಿಬ್ಬಂದಿ ಶಿವಾನಂದನಾಯಕ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಚಿಕ್ಕನಾಯಕನಹಳ್ಳಿಯಲ್ಲಿ ಜಯಕನರ್ಾಟಕ ಸಂಘಟೆನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪರೈರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ ತಾ.ಜಯಕನರ್ಾಟಕ ಸಂಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಉಚಿತ ಹಣ್ಣು, ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ತಾ.ಜಯಕನರ್ಾಟಕ ಸಂಘಟನೆ ಅಧ್ಯಕ್ಷ ಹೆಚ್.ಎನ್.ವೆಂಕಟೇಶ್, ಕುಮಾರಸ್ವಾಮಿ, ಲೋಕೇಶ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.