Thursday, December 17, 2015


                        ಡಿ.24 ಹುಳಿಯಾರಿಗೆ ಮುಖ್ಯಂತ್ರಿಗಳ ಆಗಮನ
                           
ಚಿಕ್ಕನಾಯಕನಹಳ್ಳಿ,  : ಚುನಾವಣಾ ಸಮಯದಲ್ಲಿ ಜೆಡಿಎಸ್ ಪಕ್ಷ ಅಭ್ಯಥರ್ಿಗಳನ್ನು ವ್ಯಾಪಾರ ಮಾಡುವಂತಹ ವ್ಯಕ್ತಿಗಳನ್ನು ಹೊರಗಿನಿಂದ ಕರೆತಂದು ಚುನಾವಣೆಗೆ ನಿಲ್ಲಿಸುತ್ತಿದೆ ಇದರಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರ ಪಾತ್ರ ಹೆಚ್ಚಾಗಿದೆ ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು. 
  ಪಟ್ಟಣದ ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ರವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಎ.ಕೃಷ್ಣಪ್ಪರವರನ್ನು ನಿಲ್ಲಿಸಿದ್ದರು ಈಗ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ ಜೆಡಿಎಸ್ ಪಕ್ಷದ ಅಭ್ಯಥರ್ಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ, ಜೆಡಿಎಸ್ ಪಕ್ಷದಲ್ಲಿ ಸಮರ್ಥವಾದ ಅಭ್ಯಥರ್ಿಗಳಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಸ್ಪಧರ್ಿಸಿರುವ ಡಾ.ಹುಲಿನಾಯ್ಕರ್ ಸಭ್ಯ ವ್ಯಕ್ತಿ ಆದರೆ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಜಿಲ್ಲೆಯಲ್ಲಿ ಯಾವ ಅಭಿವೃದ್ದಿಯನ್ನೂ ಮಾಡಿಲ್ಲ, ಚುನಾವಣಾ ಸಮಯದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತಮ್ಮ ಹಿತಾಸಕ್ತಿಗಾಗಿ ಹಾರುತ್ತಾರೆ ಎಂದರು.
ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತ ನೀಡಿ ಎಸ್.ಪಿ.ಮುದ್ದಹನುಮೇಗೌಡರವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ, ಇದೇ ರೀತಿ ಈ ಬಾರಿಯೂ ಜನಪ್ರತಿನಿಧಿಗಳು ಹೆಚ್ಚು ಮತ ನೀಡಿ ಆರ್.ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ, ರಾಜೇಂದ್ರ ತಮ್ಮ ಮಗ ಎಂಬ ಕಾರಣದಿಂದ ವಿಧಾನ ಪರಿಷತ್ ಚುನಾವಣೆಗೆ ಟೀಕೆಟ್ ನೀಡಿಲ್ಲ ಅವರು 10 ವರ್ಷಗಳ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದರಿಂದ ಟಿಕೆಟ್ ನೀಡಲಾಗಿದೆ. ತಾಲ್ಲೂಕಿನಲ್ಲಿ ಕಾಂಗ್ರೇಸ್ ಗುಂಪುಗಾರಿಕೆ ಇಲ್ಲ, ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಎಲ್ಲರೂ ಒಂದಾಗಿ ಪಕ್ಷದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜೇಂದ್ರರವರನ್ನು ಮತದಾರರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಷಫಿ ಅಹಮದ್ ಮಾತನಾಡಿ,  ಡಿಸೆಂಬರ್ 24ರಂದು ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಪರಿಷತ್ ಅಭ್ಯಥರ್ಿ ಆರ್.ರಾಜೇಂದ್ರರವರ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ 5976 ಜನ ಪ್ರತಿನಿಧಿಗಳಲ್ಲಿ ಹೆಚ್ಚಿನ ಪ್ರತಿನಿಧಿಗಳು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆಯುವ ಸಮಾವೇಶಕ್ಕೆ ಬೇಟಿ ನೀಡಿ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದಲ್ಲಿ  ಸಂಸದ ಮುದ್ದೇಹನುಮೇಗೌಡ,  ಚಿತ್ರದುರ್ಗ ಸಂಸದ ಚಂದ್ರಯ್ಯ ಹಾಗೂ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದರು. 
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ರಾಹುಲ್ಗಾಂಧಿ ಯುವಕರಾಗಿದ್ದು ಯುವಕರಿಗೆ ಆಧ್ಯತೆ ನೀಡಬೇಕೇಂಬ ಕಾರಣದಿಂದ ಆರ್.ರಾಜೇಂದ್ರ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸಕರ್ಾರವಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ರಾಜೇಂದ್ರ ಜಯಗಳಿಸಿದರೆ ಗ್ರಾ.ಪಂ, ಜಿ.ಫಂ,  ತಾ.ಪಂ.ಗಳಿಗೆ ಹೆಚ್ಚಿನ ಅನುದಾನ ಬರುವುದರಿಂದ ಹಳ್ಳಿಗಳು ಅಭಿವೃದ್ದಿ ಹೊಂದಲು  ಆರ್.ರಾಜೇಂದ್ರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಜನತೆ ಕಾಂಗ್ರೆಸ್ ಪರವಾಗಿ ಸ್ಪಧರ್ಿಸಿದ್ದ ಎಸ್.ಪಿ ಮುದ್ದಹನುಮೇಗೌಡರಿಗೆ ಹೆಚ್ಚು ಮತ ನೀಡಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ ಅದೇ ರೀತಿ ಈ ಬಾರಿಯು ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ  ಮತ ನೀಡಿ ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ ಆರ್.ರಾಜೇಂದ್ರ ಎರಡು ಬಾರಿ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸಿ ಪಕ್ಷದ ಬಲವರ್ದನೆಗೆ ಶ್ರಮಿಸಿದ ಪ್ರಯುಕ್ತ ರಾಜೀವ್ ಗಾಂಧಿಯವರು ರಾಜೇಂದ್ರರವರಿಗೆ ವಿಧಾನ ಪರಿಷತ್ಗೆ ಟಿಕೆಟ್ ನೀಡಿದ್ದಾರೆ, ರಾಜೇಂದ್ರರವರ ಗೆಲುವಿಗೆ ಯುವಕರು ಹೆಚ್ಚಿನದಾಗಿ ಶಕ್ತಿ ಮೀರಿ ಇವರ ಗೆಲುವಿಗೆ ಶ್ರಮಿಸುತ್ತಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಜಿ.ರಘುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಎ.ಪಿ.ಎಂ.ಸಿ.ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ,  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಶೇಷಾನಾಯ್ಕ, ವೆಂಕಟೇಶ್ , ದಸೂಡಿ ರಂಗಸ್ವಾಮಿ, ಅಶೋಕ, ಪುರಸಭಾ ಸದಸ್ಯರಾದ ರೇಣುಕಮ್ಮ. ಸಿ.ಪಿ.ಮಹೇಶ್, ಮುಖಂಡ ಕೆ.ಜಿ.ಕೃಷ್ಣಗೌಡ ಮತ್ತಿತರರು  ಉಪಸ್ಥಿತರಿದ್ದರು. 

 ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಪಡೆದರೆ ರಾಜಕೀಯ ನಿವೃತ್ತಿ : ಕೆ.ಎಸ್.ಈಶ್ವರಪ್ಪ
ಚಿಕ್ಕನಾಯಕನಹಳ್ಳಿ, : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಗೆ ಪಡೆದರೂ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ, ದೇವರೇ ಅಡ್ಡ ಬಂದರೂ ಡಾ.ಹುಲಿನಾಯ್ಕರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
   ಪಟ್ಟಣದ ಬಳಿ ಇರುವ ದಬ್ಬೆಘಟದ ಶ್ರೀ ಮರಳುಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಪ್ರಚಾರ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿ ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಅತ್ಯಾಚಾರ, ಮರಳುದಂದೆ, ಕೊಲೆಗಳು ನಡೆಯುತ್ತಿದ್ದರೂ ತಲೆ ಕೆಡಸಿಕೊಳ್ಳದ ಕಾಂಗ್ರೇಸ್ ಸಕರ್ಾರ ನಾಚಿಕೆ ಗೇಡಿನ ಆಡಳಿತ ನಡೆಸುತ್ತಿದೆ ಎಂದರು.
  ಮೊದಲು ತಲೆ ಕೆಟ್ಟಿತ್ತು: ಮೊದಲು ನಮಗೆ ತಲೆ ಕೆಟ್ಟಿತ್ತು ಹಾಗಾಗಿ ಕೆಜೆಪಿ,ಬಿಜೆಪಿ ಎಂದು ಛಿದ್ರವಾಗಿದ್ದೆವು ಈಗ ಬುದ್ಧಿ ಬಂದಿದೆ ಒಂದಾಗಿದ್ದೇವೆ. ಈಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಮುಂದಿನ ಬಿಜೆಪಿ ಸಕರ್ಾರದ ಅಧಿಕಾರಕ್ಕೆ ಅಡಿಗಲ್ಲು ಆಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ 20 ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ 10ಕ್ಕಿಂತ ಹೆಚ್ಚು ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. 
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಇಡೀ ವಿಶ್ವವೇ ಕೊಂಡಾಡುತ್ತಿದೆ. ಪಾಕಿಸ್ಥಾನ ಮತ್ತು ಸಿದ್ಧರಾಮಯ್ಯ ಇಬ್ಬರು ಮಾತ್ರ ಟೀಕಿಸುತ್ತಿದ್ದಾರೆ ಎಂದರು.
   ಈಗ ಮುಖ್ಯಮಂತ್ರಿ ತಲೆ ಕೆಟ್ಟಿದೆ : ಬರಪೀಡಿತ ಕನರ್ಾಟಕಕ್ಕೆ  ಕೇಂದ್ರ ಸಕರ್ಾರ ರೂ.1650 ಕೋಟಿ ಹಣ ಬಿಡುಗಡೆ ಮಾಡಿದೆ. 40 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ರೂ.500 ಕೋಟಿಗಿಂತ ಹೆಚ್ಚು ಹಣವನ್ನು ರಾಜ್ಯಕ್ಕೆ ಎಂದೂ ಎಂದು ನೀಡಿಲ್ಲ.ಬಂದಿರುವ ಹಣವನ್ನು ಬಳಸಿಕೊಳ್ಳಲಾಗದ  ಕನರ್ಾಟಕ ಸಕರ್ಾರ ಮೋದಿರವರ ಮೇಲೆ ಗೂಬೆ ಕೂರಿಸುತ್ತಿದೆ. ಈಗ ಸಿದ್ಧರಾಮಯ್ಯ ಅವರ ತಲೆ ಕೆಟ್ಟಿದರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮರಳುದಂಧೆ ವ್ಯಾಪಕವಾಗಿ ನಡೆಯುತ್ತಿದೆ, ಪ್ರಾಮಾಣಿಕ ಅಧಿಕಾರಿಗಳ ಕಗ್ಗೊಲೆಯಾಗುತ್ತಿದೆ ಇದರಿಂದ ಅಧಿಕಾರಿಗಳಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಕಾಂಗ್ರೆಸ್ ಸಕರ್ಾರದಲ್ಲಿ ಗೂಂಡಾಗಳು, ಸಮಾಜ ಘಾತುಕ ಶಕ್ತಿಗಳು ತಲೆಯುತ್ತುತ್ತಿವೆ ಎಂದು ಆರೋಪಿಸಿದರು.
ಹುಲಿನಾಯ್ಕರ್ ಬಿಜೆಪಿಯ ಕೃಷ್ಣಪರಮಾತ್ಮ : ಶಾಸಕ ಸುರೇಶ್ಗೌಡ ಮಾತನಾಡಿ, ವಿಧಾನ ಪರಿಷತ್ ಚುನಾವಣೆಗೆ ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ನೀಡುವುದು ಎಂದು ನಿಧರ್ಾರವಾಗಿತ್ತು. ಜೆಸಿಎಂ ಕಡೆ ಕ್ಷಣದಲ್ಲಿ ಹಿಂದೆ ಸರಿದರು ಇದರಿಂದ ನಮಗೆ ದಿಕ್ಕು ತೋಚದಂತಾಗಿತ್ತು. ಕಷ್ಟದಲ್ಲಿರುವ ಪಾಂಡವರಿಗೆ ಕೃಷ್ಣಪರಮಾತ್ಮ ಆಸರೆ ನೀಡಿದಂತೆ ಡಾ.ಹುಲಿನಾಯ್ಕರ್ ಕಮಲದ ಕೈ ಹಿಡಿದರು. ದುಡ್ಡಿನ ಥೈಲಿ ಇದೆ ಎಂಬ ಕಾರಣಕ್ಕೆ ಜೆಡಿಎಸ್ ಹೊರಗಿನವರಿಗೆ ಮಣೆ ಹಾಕಿದೆ.ಹುಲಿನಾಯ್ಕರ್ ಕೂಡ ಇವರಿಗಿಂತ ಹತ್ತುಪಟ್ಟು ಸ್ಟ್ರಾಂಗ್ ಎಂದರಲ್ಲದೆ  ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಲ್ಕು ತಾಲ್ಲೂಕುಗಳಲ್ಲಿ ಜೆಸಿಎಂ ಸಂಚರಿಸಿ, ಅಭ್ಯಥರ್ಿ ಎಂ.ಆರ್.ಹುಲಿನಾಯ್ಕರ್ ಪರ ಮತ ಕ್ರೂಡೀಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆ ದುಡ್ಡಿಗೆ ಹಡ : ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರತೀ ಚುನಾವಣೆಯಲ್ಲೂ ದೇವೇಗೌಡರು ಹೊರಗಿನವರನ್ನು ಕಣಕ್ಕಿಳಿಸುವ ಮೂಲಕ ತುಮಕೂರು ಜಿಲ್ಲೆಯನ್ನು  ದುಡ್ಡಿಗೆ ಹಡವಿಟ್ಟಿದೆ ಎಂದರು. 
ಮುಖ್ಯಮಂತ್ರಿ ಸುತ್ತ ಭಟ್ಟಂಗಿಗಳು :ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ನೋಡಿ ಸಹಿಸಲಾರದ ಕಾಂಗ್ರೆಸ್ ಕ್ಷುಲ್ಲಕ ನೆಪವೊಡ್ಡಿ ಸಂಸತ್ ಕಲಾಪ ನಡೆಯದಂತೆ ಗಲಾಟೆ ಎಬ್ಬಿಸುತ್ತಿರುವುದು ವಿಷಾದದ ಸಂಗತಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸುತ್ತಮುತ್ತ ಕೆಲವು ಭಟ್ಟಂಗಿಗಳನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ, ತಾಲ್ಲೂಕಿಗೆ ಹೇಮಾವತಿ ನಾಲಾ ಕಾಮಗಾರಿ ಕಳೆದ 2 ವರ್ಷದಿಂದ ನೆನೆಗುದಿಗೆ ಬಿದ್ದಿದೆ ಶಾಸಕರು ಹಾಗೂ ಉಸ್ತುವಾರಿ ಸಚಿವರಿಗೆ ಕಾಮಗಾರಿ ಪೂರ್ಣಗೊಳಿಸುವ ಇಚ್ಚಾಶಕ್ತಿ ಇಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಹಾಗೂ ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ರಾಜಣ್ಣ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಪರಿಶಿಷ್ಠಜಾತಿ ಮೋಚರ್ಾ ರಾಜ್ಯ ಘಟಕದ ಉಪಾಧ್ಯಕ್ಷ ಗಂಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ರಾಮಾಂಜಿನಯ್ಯ,  ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷೆ ಜಯಕ್ಷ್ಮಮ್ಮ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ತಾ.ಪಂ.ಉಪಾಧ್ಯಕ್ಷ ನಿರಂಜನಮೂತರ್ಿ, ಶ್ರೀನಿವಾಸಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.

ಕಳಸಾ ಬಂಡೂರಿ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ಮೂಲಕ                           ಇತ್ಯರ್ಥಗೊಳಿಸಲಿ : ಕೆ.ಎಸ್.ಈಶ್ವರಪ್ಪ
                             
ಚಿಕ್ಕನಾಯಕನಹಳ್ಳಿ,ಡಿ.16 : ಮಹದಾಯಿ ಕಳಸಾ ಬಂಡೂರಿ ವಿಚಾರವನ್ನು ಕಾಂಗ್ರೆಸ್ ಸಕರ್ಾರ ಪ್ರಚಾರಕ್ಕೆ ಬಳಸಿಕೊಳ್ಳದೆ ನಾಲ್ಕು ರಾಜ್ಯಗಳ ಸರ್ವಪಕ್ಷಗಳ ಸಭೆ ಕರೆದು ಇತ್ಯರ್ಥಗೊಳಿಸಲಿ  ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನ ಪರಿಷತ್ ಬಿಜೆಪಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಚುನಾವಣಾ ಪ್ರಚಾರಕ್ಕೆಂದು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಇಟ್ಟಿಗೆ ರಂಗಸ್ವಾಮಯ್ಯನವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಕಳಸಾ ಬಂಡೂರಿ ಸಮಸ್ಯೆ ನೆನ್ನೆ ಮೊನ್ನೆದಲ್ಲ  35ವರ್ಷಗಳ ಸಮಸ್ಯೆ ರಾಜ್ಯದಲ್ಲಿ ಜೆ.ಡಿ.ಎಸ್, ಬಿ.ಜೆಪಿ. ಸಮ್ಮಿಶ್ರ ಸಕರ್ಾರವಿದ್ದಾಗ ನಾನು ನೀರಾವರಿ ಸಚಿವನಾಗಿ ಶಂಕುಸ್ಥಾಪನೆ ನೆರವೇರಿಸಿದ್ದೇನೆ, ಕೇಂದ್ರಾಡಳಿತ ಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲೂ ಕಾಂಗ್ರೆಸ್ ಸಕರ್ಾರವಿದ್ದಾಗಲೂ ಕೂಡ ಕಳಸಾ ಬಂಡೂರಿ ಚಚರ್ೆ ಕೂಡ ಮಾಡಲಿಲ್ಲ, ಯು.ಪಿ.ಎ ಸಕರ್ಾರದ ನಾಯಕಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ಕನರ್ಾಟಕದಲ್ಲಿ ಗೋವಾಕ್ಕೆ ಒಂದು ಹನಿ ನೀರು ಬಿಡಲ್ಲ ಅಂತಲೂ ಗೋವಾದಲ್ಲಿ ಕನರ್ಾಟಕಕ್ಕೆ ಒಂದನಿ ನೀರು ಬಿಡುವುದಿಲ್ಲ ಎಂಬ ಒಳಗಡೆ ಒಂದು ರೀತಿ ಹೊರಗಡೆ ಮತ್ತೊಂದು ರೀತಿ ಮಾತುಗಳನ್ನು ಹೇಳುತ್ತಾ ರಾಜಕೀಯ ಮಾಡುತ್ತಿದ್ದಾರೆ, ನಮ್ಮ ಪಾಲಿನ ಮಹದಾಯಿ ನೀರು ಹಂಚಿಕೆ ವಿಚಾರ ಸುಪ್ರಿಂಕೋಟರ್್ ಮೆಟ್ಟಿಲೇರುವಂತೆ ಮಾಡಿದ್ದು ಕಾಂಗ್ರೇಸ್ನವರೇ ಈಗ ನ್ಯಾಯಾಧೀಕರಣದ ಹೊರಗಿಟ್ಟು ಮಾತಾಡೋಣ ಅಂತ ಹೇಳುತ್ತಿರುವವರೂ ಕಾಂಗ್ರೇಸ್ನವರೇ.
ಸರ್ವ ಪಕ್ಷ ಪ್ರಧಾನಿ ಬಳಿ ನಿಯೋಗ ಕೊಂಡೊಯ್ದ ವೇಳೆ ನರೇಂದ್ರ ಮೋದಿಯವರೇ ನ್ಯಾಯಾಧಿಕರಣದಲ್ಲಿದ್ದರು ಈ ವಿಚಾರವಾಗಿ ಹೊರಗಿಟ್ಟು ಮಾತಾಡೋಣ ಅಂತ ಹೇಳಿದ್ದ ಅವರು ಎಲ್ಲಾ ಪಕ್ಷಗಳು ಬಿ.ಜೆ.ಪಿ. ಜೆ.ಡಿ.ಎಸ್ ಕಾಂಗ್ರೆಸ್ ಸೇರಿ ಕುಳಿತು ಬಗೆಹರಿಸಬೇಕಾಗುತ್ತದೆ ಎಂದು ಮೋದಿಯವರ ಮಾತಿಗೆ ಒಪ್ಪಿದ ಸಿ.ಎಂ ಮಾಧ್ಯಮಗಳ ಮುಂದೆ ಬಂದು ಪ್ರಧಾನಿ ಆಸಕ್ತಿ ತೋರುತ್ತಿಲ್ಲ ಅಂತ ಕೀಳು ಮಟ್ಟದ ರಾಜಕೀಯ ಮಾಡುತ್ತಾರೆ, ರಾಜಕೀಯ ಮಾಡೋಕು ಒಂದು ಲಿಮಿಟ್ ಬೇಕು, ನಾವು ಗೋವಾ ಮಹಾರಾಷ್ಟ್ರ ಸಕರ್ಾರಗಳನ್ನು ಕರೆಯುತ್ತೇವೆ ಕಾಂಗ್ರೇಸ್ನವರು ಅ ರಾಜ್ಯಗಳ ವಿರೋಧ ಪಕ್ಷಗಳನ್ನು ಸಹ ಸೇರಿಸಬೇಕು ಎಲ್ಲಾ ಪಕ್ಷಗಳು ಇಚ್ಛಾಶಕ್ತಿ ಹೊಂದಿದ್ದರೆ ಸಮಸ್ಯೆ ಇರುವುದಿಲ್ಲ ಎಂದ ಅವರು ಈಗ ಮುಖ್ಯಮಂತ್ರಿಗಳು ಸಭೆ ಕರೆದು ಗೋವಾ ಮಹಾರಾಷ್ಟ್ರಕ್ಕೆ ಹೋಗೋಣ ಅಂತ ಹೇಳಿದ್ದಾರೆ ಅಲ್ಲಿ ಎಲ್ಲಾ ಪಕ್ಷಗಳು ಕುಳಿತು ಚಚರ್ಿಸಿದ ನಂತರ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ತಾಲ್ಲೂಕಿನ 26ಕೆರೆಗಳಿಗೆ ನೀರು ಹರಿಸುವ ಯೋಜನೆ ಸೇರಿದಂತೆ ಕನರ್ಾಟಕದಲ್ಲಿ ನಾವು ಉಪಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ ಯಾವುದೇ ನೀರಾವರಿ ಯೋಜನೆಗಳು ಚಾಲನೆಯಾಗುತ್ತಿಲ್ಲ ಎಂದರು.
 ತುಮಕೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಂದಂತಹ ಹುಲಿನಾಯ್ಕರ್ರವರಿಗೆ ಟಿಕೆಟ್ ನೀಡಿದ್ದರ ಬಗ್ಗೆ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಂತಹ ಸಮರ್ಥಕವಾದ ವ್ಯಕ್ತಿ ಇಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪನವರು, ರಾಜಕೀಯ ನಿಂತ ನೀರಲ್ಲ, ಮೊದಲು ನಮಗೆ ರಾಜಕೀಯ ಮಾಡಲು ಬರುತ್ತಿರಲಿಲ್ಲ, ಈಗ ರಾಜಕೀಯದಲ್ಲಿ ಪಕ್ಷಕ್ಕೆ ಯಾರು ಅಗತ್ಯ ಪಕ್ಷಕ್ಕೆ ಯಾರನ್ನು ಕರೆಯಬೇಕು, ಯಾರನ್ನು ಸ್ಪಧರ್ೆಗೆ ನಿಲ್ಲಿಸಬೇಕು ಎಂಬುದು ನಮಗೂ ತಿಳಿದಿದೆ, ಬಿಜೆಪಿ ಪಕ್ಷ ಎಲ್ಲಾ ಕಡೆಯಲ್ಲೂ ಗೆಲ್ಲುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಸುರೇಶ್ಗೌಡ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ನೀಲಿ ನಾಲಗೆ ರೋಗ 
                               

ಚಿಕ್ಕನಾಯಕನಹಳ್ಳಿ,ಡಿ.16 : ನೀಲಿನಾಲಗೆ ರೋಗ ತಾಲ್ಲೂಕಿನಾಧ್ಯಂತ ವ್ಯಾಪಕವಾಗಿ ಹರಡುತ್ತಿದ್ದರೂ,ಪಶು ವೈದ್ಯ ಸಿಬ್ಬಂದಿ ರೊಗನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಸತ್ತ ಕುರಿಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಿಮೆ ಪಡೆಯಲೂ ವೈದ್ಯರು ಸಿಗುತ್ತಿಲ್ಲ ಎಂದು ತಾಲ್ಲೂಕಿನ ಕುರಿಗಾಹಿಗಳು ಇಲಾಖೆ ಹಾಗೂ ಪಶು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.
   ರೇವಣಸಿದ್ಧೇಶ್ವರ ಕುರಿಸಾಕಣೆದಾರರ ಸಂಘದ ಅಧ್ಯಕ್ಷ ಹಂದನಕೆರೆ ಸಿದ್ಧಣ್ಣ ಮಾತನಾಡಿ, ರೋಗವ್ಯಾಪಕವಾಗಿ ಹರಡುತ್ತಿದೆ. ಸಾಲು ಸಾಲಾಗಿ ಕುರಿಗಳು ಸಾಯುತ್ತಿವೆ. ಒದೊಂದು ಹಟ್ಟಿಯಲ್ಲೂ ಪ್ರತಿನಿತ್ಯ ಹತ್ತಾರು ಕುರಿಗಳು ರೊಗಕ್ಕೆ ತುತ್ತಾಗುತ್ತಿವೆ. ಸತ್ತ ಕುರಿಗಳನ್ನು ಒಂದೆಡೆ ಗುಂಡಿ ತೋಡಿ ಸಾಮೂಹಿಕವಾಗಿ ಮಣ್ಣು ಮುಚ್ಚುತ್ತಿದ್ದಾರೆ. ಇದರಿಂದ  ರೋಗಾಣುಗಳು ಆರೋಗ್ಯವಂತ ಕುರಿಗಳಿಗೂ ಹರಡುತ್ತಿವೆ. ತಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಈಗಾಗಲೇ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದರ ಜೊತೆಯಲ್ಲಿ ಕುರಿಗಾಹಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ  ಎಂದರು.
    ಕುರಿಗಾಹಿ ಗಂಗಾಭೋವಿ ಮಾತನಾಡಿ, ಸಕರ್ಾರ ಕುರಿಗಳಿಗೆ ನೀಲಿ ನಾಲಿಗೆ ರೋಗಕ್ಕೆ ಔಷಧಿ ಒದಗಿಸಿದ್ದೇವೆ ಎಂದು ಹೇಳುತ್ತಿದೆ, ಆಸ್ಪತ್ರೆಯಲ್ಲಿ ವಿಚಾರಿಸಿದರೆ  ಔಷಧಿ ಸರಬರಾಜು ಆಗಿಲ್ಲ ಎಂದು ಹೇಳುತ್ತಾರೆ. ನಾವು ಯಾರನ್ನು ನಂಬುವುದು? ಕುರಿ ಸತ್ತರೆ ಪರಿಹಾರ ನೀಡಲು ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುತ್ತಾರೆ. ಸತ್ತ ಕುರಿಯ ಭಾವಚಿತ್ರ ಬೇಕು ಎನ್ನುತ್ತಾರೆ. ಆಸ್ಪತ್ರೆ ಬಳಿ ತೆಗೆದುಕೊಂಡು ಹೋದರೆ ವೈದ್ಯರು ಇರುವುದಿಲ್ಲ ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಅಸಹಾಯಕತೆ ತೊಡಿಕೊಂಡರು.
  ಈ ಕುರಿತು ಹೆಸರು ಬಹಿರಂಗಪಡಿಸಲಿಚ್ಚಿಸದ ಪಶುವೈದ್ಯಾಧಿಕಾರಿಯೊಬ್ಬರು ಮಾತನಾಡಿ,ಕಳೆದ ಒಂದೂವರೆ ತಿಂಗಳಿಗೆ ಮುಂಚಿತವಾಗಿಯೇ ತಾಲ್ಲೂಕಿನಲ್ಲಿ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದ್ದು ಸೂಕ್ತ ಔಷಧಿ ಒದಗಿಸುವಂತೆ ಇಲಾಖೆಗೆ ಮನವಿ ಮಾಡಿಕೊಂಡಿದ್ದೆವು. ಪ್ರಾಥಮಿಕ ಹಂತದಲ್ಲೇ ಉನ್ನತ ಅಧಿಕಾರಿಗಳು ಸ್ಪಂದಿಸಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
    ಪಶು ವೈದ್ಯಾಧಿಕಾರಿ ಕಾಂತರಾಜು ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು1.6ಲಕ್ಷ ಕುರಿಗಳಿವೆ.ಶೇ.60ರಷ್ಟು ಕುರಿಗಳಿಗೆ ರೋಗಲಕ್ಷಣ ಕಾಣಿಸಿಕೊಂಡಿದೆ. ಇಲಾಖೆಯಿಂದ ತಾಲ್ಲೂಕಿಗೆ 32 ಸಾವಿರ ಡೋಸ್ ಔಷಧಿ ವಿತರಣೆಯಾಗಿದೆ. ಇದು ಶೇ.20ರಷ್ಟು ಕುರಿಗಳಿಗೂ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ರೋಗ ಬಂದಿರುವ ಕುರಿಗಳಿಗೆ ಲಸಿಕೆ ಹಾಕಿದರೆ ಔಷಧಿಗೆ ಸ್ಪಂದಿಸುವುದಿಲ್ಲ. ರೊಗದಿಂದ ಮುಕ್ತವಾಗಿರುವ ಕುರಿಗಳನ್ನು ಬೇರ್ಪಡಿಸಿ ಸಾಮೂಹಿಕವಾಗಿ ರಿಂಗ್ ವ್ಯಾಕ್ಸಿನೇಷನ್ ನೀಡಬೇಕು ಆದರೆ ಕುರಿಗಾಹಿಗಳು ಇದನ್ನು ಒಪ್ಪುತ್ತಿಲ್ಲ. ಈ ಗೊಂದಲದಿಂದಾಗಿ ಲಸಿಕೆ ಪ್ರಾರಂಭಿಸಿಲ್ಲ. ಉನ್ನತ ಮಟ್ಟದ ಅಧಿಕಾರಿಗಳ ಜತೆ ಚಚರ್ಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
  ತಾಲ್ಲೂಕಿನಲ್ಲಿ ಪಶು ವೈದ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯಿಂದಾಗಿ ಸಾವನ್ನಪ್ಪುತ್ತಿರುವ ಕುರಿಗಳ ಮರಣೋತ್ತರ ಪರೀಕ್ಷೆ ಹಾಗೂ ದಾಖಲೀಕರಣ ಸವಾಲಾಗಿ ಪರಿಣಮಿಸಿದೆ. ಹುಳಿಯಾರು ಹಾಗೂ ಹಂದನಕೆರೆ ಭಾಗದಲ್ಲಿ ಹೆಚ್ಚು ಕುರಿಗಳಿಗೆ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದೆ, ಆದರೆ ಎಲ್ಲಾ ಕುರಿಗಳು ದಾಖಲೆಗೆ ಸಿಕ್ಕಿಲ್ಲ. ಈ ವರೆಗೆ ಕೇವಲ 183 ಪ್ರಕರಣಗಳು ದಾಖಲಾಗಿವೆ. ಬಹಳಷ್ಟು ಕುರಿಗಾಹಿಗಳು ಸತ್ತಕುರಿಗಳನ್ನು ಮರಣೋತ್ತರಪರೀಕ್ಷೆಗೆ ಒಳಪಡಿಸದೇ ಮಣ್ಣು ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದರು.
   ತಾಲ್ಲೂಕಿನ ಆಲದಕಟ್ಟೆ ಬಳಿ ಕುರಿ ಹಿಂಡಿನೊಂದಿಗೆ ಸಾಗುತ್ತಿದ್ದ ಕುರಿಗಾಹಿ ದಬ್ಬಕುಂಟೆ ಲೋಕೇಶ್ ಮಾತನಾಡಿ, ಪ್ರತೀ ವರ್ಷ ಸುಗ್ಗಿ ಮುಗಿಸಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದು, ಈ ಬಾರಿ ಕುರಿಗಳಿಗೆ ರೋಗ ಬಂದೈತೆ ಅದುಕ್ಕೆ 1ತಿಂಗಳು ಮುಂಚಿತವಾಗೇ ಹಾಸನದ ಕಡೆ ಹೋಗುತ್ತಿದ್ದೇವೆ,  ಆಸ್ಪತ್ರೆಯಲ್ಲಿ  ವೈದ್ಯರನ್ನು ನಂಬಿಕೊಂಡರೆ ಅಷ್ಟೇ. ಒಂದು ಕುರೀನೂ ಉಳಿಯೋದಿಲ್ಲ. ಔಷಧಿ ಅಂಗಡಿನಲ್ಲಿ ರೂ.4000 ಔಷಧಿ ತೆಗೆದುಕೊಂಡು, ಈಗ ನಮ್ಮಲ್ಲಿರೋ 400 ಕುರಿಗಳಿಗೂ ಇಂಜೆಕ್ಷನ್ ಮಾಡಿಸಿದ್ದೇನೆ ಕುರಿಗೆ ಕಾಯಿಲೆ ಬಂದರೆ ಮುಂಚಿತವಾಗಿಯೇ ಇನ್ನೂ ಎರಡು ಸಾವಿರ ರೂಪಾಯಿಗಳ ಔಷದಿಯನ್ನು ಸಂಗ್ರಹಿಸಿದ್ದೇನೆ ಎಂದು ರೋಗದ ಕಾರಣಕ್ಕಾಗಿ ಅಕಾಲಿಕ ಗುಳೆ ಹೊರಟಿರುವುದನ್ನು ವಿವರಿಸಿದರು.
  ಪಶು ವೈದ್ಯಾಧಿಕಾರಿ ಡಾ.ರಘುಪತಿ ಮಾತನಾಡಿ,ಸಾಮಾನ್ಯ ಕುರಿಗಾಹಿಗಳು ಜಂತುನಾಶಕ ಔಷಧಿಗಳೇ ಸರ್ವರೋಗಕ್ಕೂ ಮದ್ದು ಎಂದು ಭಾವಿಸಿದ್ದಾರೆ. ಕಾಯಿಲೆಗೆ ತುತ್ತಾಗಿರುವ ಕುರಿಗಳಿಗೆ ಕುರಿಗಾಹಿಗಳೇ ಸ್ವತಃ ಔಷದಿ ನೀಡುವ ಪರಿಪಾಟ ಇಟ್ಟುಕೊಂಡಿದ್ದಾರೆ. ಇದು ಕೆಲವೊಮ್ಮೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರ ಸಲಹೆ ಮೇರಗೇ ಔಷದೋಪಚಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಿಬ್ಬಂದಿ ಕೊರತೆ:ತಾಲ್ಲೂಕು ಪಶು ಇಲಾಖೆಯಲ್ಲಿ ಶೇ.38 ಭಾಗ ಸಿಬ್ಬಂದಿ ಕೊರತೆ ಇದೆ. ಒಟ್ಟು 22 ಪಶುಚಿಕಿತ್ಸಾ ಕೇಂದ್ರಗಳಿದ್ದು 82 ಹುದ್ದೆಗಳು ಮುಂಜೂರಾಗಿವೆ. 43ಸಿಬ್ಬಂದಿ ಮಾತ್ರ ಇದ್ದು 39 ಹುದ್ದೆಗಳು ಖಾಲಿ ಇವೆ. 2 ಪಶು ಆಸ್ಪತ್ರೆ, 11ಪಶು ಚಿಕಿತ್ಸಾಲಯಗಳು ಹಾಗೂ 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 1 ಸಹಾಯಕ ನಿದರ್ೇಶಕರ ಹುದ್ದೆ, 6 ಪಶುವೈದ್ಯಾಧಿಕಾರಿಗಳ ಹುದ್ದೆ, 1 ಪಶು ಪರೀಕ್ಷಕ, 22 ಸಹಾಯಕ ಹುದ್ದೆಗಳು ಖಾಲಿ ಇವೆ.
ಲಸಿಕೆ ಕಾರ್ಯಕ್ರಮ ಆರಂಭ: ಡಿ.16 ರಿಂದ ನೀಲಿ ನಾಲಿಗೆ ರೋಗಕ್ಕೆ ಲಸಿಕಾ ಕಾರ್ಯಕ್ರಮ ಆರಂಭವಾಗುತ್ತಿದೆ. ಲಸಿಕೆ ಕೊಡಿಸುವಾಗ ಕುರಿಗಾಹಿಗಳು ರೋಗಪೀಡಿತ ಕುರಿಗಳನ್ನು ಪ್ರತ್ಯೇಕಿಸಿ ಲಸಿಕೆ ಹಾಕಿಸಬೇಕು .ಇದರಿಂದ ಆರೋಗ್ಯವಂತ ಕುರಿಗಳಿಗೆ ರೋಗ ಹರಡದಂತೆ ಕಾಯ್ದುಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ. 
ಖಡ್ಡಾಯವಾಗಿ ದಾಖಲಿಸಿ: ಮರಣಹೊಂದಿದ ಕುರಿಗಳನ್ನು ಸಮೀಪವಿರುವ ಪಶು ವೈದ್ಯ ಆಸ್ಪತ್ರೆಯಲ್ಲಿ ಖಡ್ಡಾಯವಾಗಿ ದಾಖಲಿಸಿ .6 ತಿಂಗಳು ಮೇಲ್ಪಟ್ಟ ಕುರಿಗಳಿಗೆ ಸಕರ್ಾರ ರೂ.5000 ಪರಿಹಾರ ಘೋಷಿಸಿದೆ. ಉದಾಸೀನ ಮಾಡದೆ ದಾಖಲಿಸುವುದರಿಂದ ಪರಿಹಾರದ ಮೊತ್ತ ಲಭಿಸಲಿದ್ದು ನಷ್ಟವನ್ನು ಸ್ವಲ್ಪಮಟ್ಟಿಗಾದರೂ ತುಂಬಿಕೊಳ್ಳಬಹುದು ಎಂದು ಪಶು ವೈದ್ಯಾಧೀಕಾರಿ ಕಾಂತರಾಜು ಮನವಿ ಮಾಡಿದ್ದಾರೆ.

ಜಿ.ಪಂ, ತಾ.ಪಂ. ಚುನಾವಣೆ ಬಗ್ಗೆ ಪಂಚಾಯ್ತಿ ಕಟ್ಟೆಗಳಲ್ಲಿ ಮಾತುಕತೆ 
ಚಿಕ್ಕನಾಯಕನಹಳ್ಳಿ,ಡಿ.16 : ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮೀಸಲಾತಿ ಘೋಷಣೆಯಾಗಿದೆ ಆದರೆ ಇನ್ನು ಅಜರ್ಿ ಸಲ್ಲಿಸಲು ದಿನಾಂಕ ನಿಗಧಿಯಾಗಿಲ್ಲ, ಆದರೂ ಆಕಾಂಕ್ಷಿಗಳ ಬೆಂಬಲಿಗರು ಟೀ ಅಂಗಡಿ, ಹೋಟೆಲ್, ಪಂಚಾಯ್ತಿ ಕಟ್ಟೆ, ಅರಳೀಮರದ ಕಟ್ಟೆಗಳಲ್ಲಿ ಮಾತುಕತೆ ನಡೆಸುವ ಮೂಲಕ ಇಂತಹವರು ಸ್ಪಧರ್ಿಸಿದರೆ ಗೆಲುವು ನಿಶ್ಚಿತ ಎಂಬ ಊಹಾಪೋಹಗಳು ಮಾತುಗಳು ಬರುತ್ತಿವೆ.
ಆಯಾ ಪಕ್ಷದ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಮೂರು ಪಕ್ಷಗಳಲ್ಲೂ ನಾಯಕರ ಮೇಲೆ ಮುಖಂಡರ ಬೆಂಬಲಿಗರು ಒತ್ತಡ ತರುತ್ತಿದ್ದಾರೆ, ಕೆಲವು ಪಕ್ಷಗಳಲ್ಲಿ ಹೊಸಬರು, ಹಳಬರು ಎಂದು ವಿಂಗಡಿಸಿ ಟಿಕೆಟ್ಗೆ ಲಾಭಿ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚು ಖಚರ್ು ಮಾಡುವ ಅಭ್ಯಥರ್ಿಗಳನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಮುಂದಾಗುತ್ತಿದ್ದಾರೆ. ಇದರಿಂದ ಪಕ್ಷಗಳಲ್ಲಿ ನಿಷ್ಠಾವಂತ ಕಾರ್ಯಕರ್ತರು ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ಸಿಗದೆ ನಿರಾಸೆಯಿಂದ ಬೇರೆ ಪಕ್ಷಗಳಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ.
ಕಳೆದ ಬಾರಿ ಜಿಲ್ಲಾ ಪಂಚಾಯಿತಿಗೆ ಇದ್ದ ಮೀಸಲಾತಿ ಈ ಬಾರಿ ಇಲ್ಲದೇ ಇರುವುದರಿಂದ ಚುನಾವಣೆಗೆ ತಯಾರಿ ನಡೆಸಿದ್ದ ಕೆಲವು ಆಕಾಂಕ್ಷಿ ಅಭ್ಯಥರ್ಿಗಳು ಮೀಸಲಾತಿ ಬರದೇ ನಿರಾಸೆಯಾಗಿದ್ದು ಇದರಿಂದ ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯ ಕೆಲವು ಕ್ಷೇತ್ರಗಳಲ್ಲಿ ಹೊಸ ಮೀಸಲಾತಿಯಿಂದ ಎಲ್ಲಾ ಪಕ್ಷಗಳಲ್ಲೂ ಸಮರ್ಥವಾದ ಅಭ್ಯಥರ್ಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಜಿಲ್ಲಾ ಪಂಚಾಯ್ತಿಯಲ್ಲಿ ಹುಳಿಯಾರು ಸಾಮಾನ್ಯ ವರ್ಗ, ಹೊಯ್ಸಳಕಟ್ಟೆ ಅನುಸೂಚಿತ ಜಾತಿ, ಕಂದಿಕೆರೆ ಸಾಮಾನ್ಯ ಮಹಿಳೆ, ಹಂದನಕೆರೆ ಸಾಮಾನ್ಯ, ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ.
ಜಿ.ಪಂ. ಚುನಾವಣೆಯಲ್ಲಿ ಸ್ಪಧರ್ಿಸಲು ಮೂರು ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು : 
ಕಂದಿಕೆರೆ ಜಿ.ಪಂ.ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಶಶಿಕಲಾಸ್ವಾಮಿನಾಥ್, ಲಕ್ಷ್ಮೀದೇವಮ್ಮಸಣ್ಣಯ್ಯ, ಬಿಜೆಪಿಯಿಂದ : ತಿಮ್ಮನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಮ್ಮ, ತಾ.ಪಂ.ಮಾಜಿ ಅಧ್ಯಕ್ಷೆ ಲತಾಕೇಶವಮೂತರ್ಿ, ಮೀನಾ ಪಾನಿಪುರಿಶ್ರೀನಿವಾಸ್, ಕಮಲಮ್ಮ ರಾಜಕುಮಾರ್, ಜೆಡಿಎಸ್ ಪಕ್ಷದಿಂದ : ಸವಿತಾಸತೀಶ್ ಸಿದ್ದನಕಟ್ಟೆ, ಕನಕಮ್ಮ ಮೋಹನ್ಕುಮಾರ್ ಅಜ್ಜಿಗುಡ್ಡೆ, ಪದ್ಮಮ್ಮಲಿಂಗರಾಜು, ಸುನಿತಾಮಂಜುನಾಥ್ ಆಕಾಂಕ್ಷಿಗಳಾಗಿದ್ದಾರೆ.
ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಮಾಜಿ ಶಾಸಕ ಬಿ.ಲಕ್ಕಪ್ಪ, ಬಿಜೆಪಿ ಪಕ್ಷದಿಂದ : ಮಾಜಿ ತಾ.ಪಂ.ಸದಸ್ಯ ಶಿವಣ್ಣ, ತಾ.ಪಂ.ಸದಸ್ಯ ಎ.ಬಿ.ರಮೇಶ್ಕುಮಾರ್, ವಕೀಲ ಶಶಿಧರ, ಜೆಡಿಎಸ್ಪಕ್ಷದಿಂದ ಬಿಜೆಪಿಗೆ ತೆರಳಿ ಆಕಾಂಕ್ಷಿಯಾದ ಸಿ.ಆರ್.ಗಿರೀಶ್, ಜೆಡಿಎಸ್ಪಕ್ಷದಿಂದ : ರಿಯಲ್ ಎಸ್ಟೇಟ್ ವ್ಯವಹಾರದ ಕಲ್ಲೇಶ್, ದಾಸೀಹಳ್ಳಿ ಗಂಗಾಧರಪ್ಪ, ಆಕಾಂಕ್ಷಿಗಳಾಗಿದ್ದಾರೆ.
ಹುಳಿಯಾರು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ಧನುಷ್ ರಂಗನಾಥ್, ಬಿಜೆಪಿ ಪಕ್ಷ : ದಿಂದ ಮಾಜಿ ತಾ.ಪಂ.ಸದಸ್ಯ ವೈ.ಆರ್.ಮಲ್ಲಿಕಾಜರ್ುನಯ್ಯ, ಬ್ಯಾಂಕ್ ಮರುಳಪ್ಪ, ತಾ.ಪಂ.ಸದಸ್ಯ ಹೊಸಹಳ್ಳಿ ಜಯಣ್ಣ, ವಕೀಲ ರಮೇಶ್ಬಾಬು, ಹನುಮಂತಯ್ಯ, ಕೆಂಕೆರೆ ನವೀನ್, ಜೆಡಿಎಸ್ ಪಕ್ಷದಿಂದ : ಪಟಾಕಿ ಶಿವಣ್ಣ, ಪೆಟ್ರೋಲ್ ಬಂಕ್ ರೇಣುಕಪ್ಪ, ನಂದಿಹಳ್ಳಿ ಶಿವಣ್ಣ, ವಕೀಲ ಬಿ.ಕೆ.ಸದಾಶಿವು, ಜಹೀರ್ಸಾಬ್, ಶಿವನಂಜಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹೊಯ್ಸಳಕಟ್ಟೆ ಅನುಸೂಚಿತ ಜಾತಿಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ರೇವಾನಾಯ್ಕ್, ದೊಡ್ಡಬಿದರೆ ತಾಂಡ್ಯದ ವೀರಸಿಂಗ್ ಬಿಜೆಪಿಯಿಂದ : ಲಚ್ಚಾನಾಯ್ಕ, ಯರೇಹಳ್ಳಿ ಮೂತರ್ಿನಾಯ್ಕ, ದಬ್ಬಗುಂಟೆ ಗಂಗಣ್ಣ, ರಾಜಶೇಖರನಾಯ್ಕ, ಜೆಡಿಎಸ್ ಪಕ್ಷದಿಂದ : ಮಾಜಿ ಜಿ.ಪಂ.ಸದಸ್ಯ ಈರಣ್ಣ, ದಸೂಡಿ ಮರಿಯಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹಂದನಕೆರೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್, ಜೆ.ಡಿ.ಎಸ್ ಪಕ್ಷದಿಂದ :  ಜಿ.ಪಂ.ಮಾಜಿ ಉಪಾಧ್ಯಕ್ಷೆ ಜಾನಮ್ಮ ಪತಿ ರಾಮಚಂದ್ರಯ್ಯ, ಬಿಜೆಪಿ ಪಕ್ಷದಿಂದ : ಕೋಡಿಹಳ್ಳಿ ಶಿವಕುಮಾರ್, ಉಪ್ಪಿನಕಟ್ಟೆ ಶಿವಕುಮಾರ್, ಕಾಂಕೆರೆ ಪರಮೇಶ್, ಮೈಸೂರಪ್ಪ, ಬರಗೂರು ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ವಕೀಲ ಶ್ರೀಧರ್ ಆಕಾಂಕ್ಷಿಗಳಾಗಿದ್ದಾರೆ.
ತಾಲ್ಲೂಕಿನಲ್ಲಿ ಜಿ.ಪಂ.ಟಿಕೆಟ್ ಸಿಗದೇ ಇರುವ ಆಕಾಂಕ್ಷಿಗಳು ಮಾತ್ರ ಪಕ್ಷವನ್ನು ತೊರೆದು ಪಕ್ಷಾಂತರ ತಯಾರಿ ನಡೆಸಿದ್ದು ಇದರಿಂದ ತಾಲ್ಲೂಕಿನಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.



Monday, December 14, 2015

ಅಪರಾಧ ತಡೆಗೆ ಸಾರ್ವಜನಿಕರೂ ಸಹಕರಿಸಬೇಕು :     ಡಿವೈಎಸ್ಪಿ ಕೆ.ಪಿ.ರವಿಕುಮಾರ್



ಚಿಕ್ಕನಾಯಕನಹಳ್ಳಿ : ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಮೈಗುಡಿಸಿಕೊಂಡು ಅಪರಾಧ ತಡೆಯುವಲ್ಲಿ ಸಾರ್ವಜನಿಕರು ಹಾಗೂ ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಸಿದರೆ ಮಾತ್ರ ಉತ್ತಮ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಪಟೂರು ಉಪವಿಭಾಗದ ಡಿವೈಎಸ್.ಪಿ ಕೆ.ಪಿ ರವಿಕುಮಾರ್ ಹೇಳಿದರು. 
ಪಟ್ಟಣದಲ್ಲಿ ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ನಡೆದ ಪೋಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಚರಣೆ ಅಂಗವಾಗಿ ವಿದ್ಯಾಥರ್ಿಗಳಿಗೆ ಅಪರಾಧ ತಡೆಗಟ್ಟಲು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಲೀಸ್ ಇಲಾಖೆ ಒಂದು ಶಿಸ್ತು ಬದ್ದವಾಗಿರುತ್ತದೆ, ವಿದ್ಯಾಥರ್ಿ ಜೀವನದಲ್ಲಿ ಮಕ್ಕಳು ಶಿಸ್ತು ಮೈಗೂಡಿಸಿಕೊಂಡು ಉನ್ನತ ಹುದ್ದೆಗಳಾದ ಐ.ಎ.ಎಸ್. ಐ.ಪಿ.ಎಸ್ಗಳಂತ ಹುದ್ದೆಗಳಿಗೆ ಆರಿಸಿಕೊಂಡು ಉತ್ತಮ ಅಧಿಕಾರಗಳಾಗಿ ಸೇವೆ ಮಾಡಿ ಎಂದರಲ್ಲದೆ ಪೋಲಿಸ್ ಇಲಾಖೆಯಲ್ಲಿ ಮುಂದಿನ ಎರಡು ವರ್ಷದಲ್ಲಿ ರಾಜ್ಯದಲ್ಲಿ 8 ಸಾವಿರ ಪೋಲೀಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಅವಕಾಶವಿದ್ದು ವಿದ್ಯಾಥರ್ಿಗಳು ಹೆಚ್ಚಿನದಾಗಿ ಸೇರಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾಥರ್ಿಗಳು ಜೀವನದಲ್ಲಿ ಗುರಿಯನ್ನಟ್ಟುಕೊಂಡು ಸಾಧನೆ ಮಾಡುವ ಆತ್ಮಸ್ಥೆರ್ಯ ಬೆಳಸಿಕೊಳ್ಳಬೇಕು ಅದಕ್ಕಾಗಿ ಶಿಸ್ತು ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ, ಅಪರಾಧ ನಡೆಯುವುದನ್ನು ಪೋಲಿಸ್ ಇಲಾಖೆಯಿಂದ ಮಾತ್ರ ಸಾದ್ಯವಿಲ್ಲ, ಸಾರ್ವಜನಿಕರು, ಸಮಾಜದಲ್ಲಿ ಸಾಮಾನ್ಯ ಜ್ಞಾನ ಹೊಂದಿರುವವರು, ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಬೇಕು, ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಪೋಲಿಸರಿಗೆ ಮಾಹತಿ ನೀಡುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು ಎಂದರು.
ವೃತ್ತ ನೀರಿಕ್ಷಣಾಧಿಕಾರಿ ಎ.ಮಾರಪ್ಪ ಮಾತನಾಡಿ, ಅಪರಾಧ ತಡೆಯುವ ಕೆಲಸ ಪೋಲೀಸರಿಗೆ ಮಾತ್ರ ಸೀಮಿತವಲ್ಲ ಸಾರ್ವಜನಿಕರಾದ ನಿಮ್ಮಗಳ ಜವಬ್ದಾರಿಯೂ ಹೌದು,  ನಿಮ್ಮಗಳ ಮನೆಯ ಸುತ್ತಮುತ್ತ ಅಪರಿಚಿತರು ಅನುಮಾನಸ್ಪದವಾಗಿ ಓಡಾಡುವುದು, ಪರಿಚಯಸ್ಥರಂತೆ ಮನೆಗೆ ಬರುವುದು. ಮುಂಜಾನೆ ಮನೆ ಬಾಗಿಲಿನಲ್ಲಿ ರಂಗೋಲೆ ಹಾಗೂ ನೀರು ಹಾಕುವಾಗ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಮೇಲೆ ನೀಗ ವಹಿಸುವುದು ಸಾರ್ವಜನಿಕರ ಜವಬ್ದಾರಿಯಾಗಿದೆ, ಕಾಖರ್ಾನೆ ಹಾಗೂ ಗಾಮರ್ೇಂಟ್ಸ್ ಇತರೆ ಕಡೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುವಂತಹ ಅಪರಿಚಿತ ವ್ಯಕ್ತಿಗಳೊಂದಿಗೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವುದು ಇವೆಲ್ಲವೂ ಅಪರಾಧಗಳು ಇಂತಹ ಕಾರ್ಯಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳ ಮೇಲೆ ನೀಗಾ ವಹಿಸಿ ಸುತ್ತ ಮುತ್ತ ಹಾಗೂ ನೆರೆ ಹೊರೆ ಜನರಿಗೆ ತಿಳಿಸುವುದಾಗಲಿ ಅಥವಾ ಹತ್ತಿರದ ಪೋಲೀಸರಿಗೆಗಾಗಲಿ ತಿಳಿಸುವುದರಿಂದ ಮಾತ್ರ ಅಪರಾಧಗಳನ್ನು ತಡೆಯಲು ಸಾದ್ಯವಾಗುತ್ತದೆ ಇಂತಹ ಕೆಲಸಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕು ಎಂದರು.
ಪಿಎಸ್.ಐ ಮಹಾಲಕ್ಷ್ಮಮ್ಮ ಮಾತನಾಡಿ ಪೋಲಿಸರೊಂದಿಗೆ ಸಾರ್ವಜನಿಕರು ಪೋಲಿಸರ ಬಗ್ಗೆ ಹೊಂದಿರುವ ಆತಂಕ ಹಾಗೂ ಭಯವನ್ನು  ದೂರ ಮಾಡುವ ಉದ್ದೇಶದಿಂದ ಅಪರಾಧ ತಡೆ ಮಾಸಚಾರಣೆ ಹಮ್ಮಿಕೊಂಡಿರುವುದು ಇದರ ಸದುದ್ದೇಶವನ್ನು ಸಾರ್ವಜನಿಕರು ಹೊಂದಬೇಕು ಎಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ ಹುಳಿಯಾರು ಪೋಲಸ್ ಠಾಣೆ ಪಿ.ಎಸ್.ಐ ಪ್ರವೀಣ್ಕುಮಾರ್, ಶಿಕ್ಷಕರುಗಳಾದ ವೇಣುಗೊಪಾಲ್, ಗುರುಸ್ವಾಮಿ, ರಂಗಸ್ವಾಮಿ, ಕೋದಂಡರಾಮು. ಶಿವಾನಂದ್ ಮತ್ತಿತ್ತರರು ಉಪಸ್ಥಿತರಿದ್ದರು. 

Thursday, December 10, 2015


ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾವಳಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಾಗಲಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಂಗಳೂರು ಬಿವೈಎಸ್ ತಂಡಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಬಹುಮಾನ ಹಾಗೂ ಜಗೋಸಿರಾ-2015 ಟ್ರೋಫಿ ವಿತರಿಸಿದರು.
 ಚಿಕ್ಕನಾಯಕನಹಳ್ಳಿ, : ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವ ಅಂಗವಾಗಿ ಪ್ರತಿ ವರ್ಷ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ ಹಾಗೂ ಈ ಕಬಡ್ಡಿ ಪಂದ್ಯಾವಳಿ ಅಖಿಲ ಭಾರತ ಮಟ್ಟದಲ್ಲಿ ನಡೆಸಲು  ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಸಲಹೆ ನೀಡಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡೆಕೆರೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಸಂಘ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಸಹಯೋಗದೊಂದಿಗೆ ನಡೆಯುತ್ತಿರುವ ಜಗೋಸಿರಾ-2015 ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕ್ರಿಕೆಟ್ಗಿಂತಲೂ ಅಪ್ಪಟ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಲಕ್ಷಾಂತರ ಮಂದಿ ನೋಡುತ್ತಿದ್ದಾರೆ, ಮುಂದೆ ಪುರುಷರ ತಂಡಗಳ ಜೊತೆ ಮಹಿಳಾ ಕಬಡ್ಡಿ ತಂಡಗಳನ್ನು ರಚಿಸುವಂತೆ ಸಲಹೆ ನೀಡಿದರು.
ರಾಜ್ಯದಿಂದ 8ಕಬಡ್ಡಿ ತಂಡಗಳು ಭಾಗವಹಿಸಿದ್ದು ರಾಜ್ಯದಲ್ಲಿ ಒಟ್ಟು 23 ಜಿಲ್ಲೆಗಳಲ್ಲಿ ಬಲಿಷ್ಠ ಕಬಡ್ಡಿ ತಂಡಗಳಿದ್ದು ಮುಂದೆ ಎಲ್ಲಾ ತಂಡಗಳು ಕಬಡ್ಡಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದ ಅವರು ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಶೇ.70% ರಷ್ಟು ಕಬಡ್ಡಿ ಆಟಗಾರರು ಹರಿಯಾಣದವರಾಗಿದ್ದು ಮಹರಾಷ್ಟ್ರದವರು ಶೇ.15% ರಷ್ಠಿದ್ದು ಕನರ್ಾಟಕ ಶೇ.5ರಿಂದ 6% ರಷ್ಠಿದ್ದಾರೆ. ರಾಜ್ಯದ ಯುವಕರು ಹೆಚ್ಚಾಗಿ ಕಬಡ್ಡಿ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಶೇ.35%ರಷ್ಟಾದರೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಯುವಕರು ಉತ್ಸಾಹ ತೋರುವಂತೆ ಹೇಳಿದರು. 
ಉತ್ತಮ ಆಟಗಾರರಿಗೆ ಕೇಂದ್ರ ಹಾಗೂ ರಾಜ್ಯ ಸಕರ್ಾರದ ಉದ್ಯೋಗಗಳಲ್ಲಿ ಮೀಸಲಾತಿ ಇರುತ್ತದೆ ಅದೇ ರೀತಿ ವಿದ್ಯಾಭ್ಯಾಸದಲ್ಲೂ ಕ್ರೀಡೆಗೆ ಮೀಸಲಾತಿ ಇದ್ದು ಇದರ ಪ್ರಯೋಜನ ಪಡೆಯಲು ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಎಂದರು.
ಯುವಕರು ದುಷ್ಠಟಗಳಿಂದ ಬಲಿಯಾಗುತ್ತಿದ್ದು ಇದರಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಯುವಕರು ಕ್ರೀಡೆ ಹಾಗೂ ಸೇನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಬಿ.ಸುರೇಶ್ಬಾಬು, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಅಭ್ಯಥರ್ಿ ಎಂ.ಎಲ್.ಕಾಂತರಾಜು, ಜಿ.ಪಂ.ಮಾಜಿ ಸದಸ್ಯ ಬಿ.ಎನ್.ಶಿವಪ್ರಕಾಶ್, ರಾಜ್ಯ ಅಮೆಚೂರ್ ಕಬಡ್ಡಿ ಕ್ಲಬ್ ಉಪಾಧ್ಯಕ್ಷ ಶಿವಮೂತರ್ಿ ಹಾಗೂ ಕಾರ್ಯದಶರ್ಿ ಜಯರಾಂ, ಬೆಂಗಳೂರು ಕಬಡ್ಡಿ ಅಮೆಚೂರ್ ಆಟಗಾರ ಷಣ್ಮುಗಂ, ನಿವೃತ್ತ ಸಿಇಓ ಸಿದ್ದರಾಮಣ್ಣ, ಜೆಡಿಎಸ್ ಮುಖಂಡ ಕಲ್ಲೇಶ್, ಜೆಟ್ಟಿ ಗಂಗಾಧರ ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಪುರುಷ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ ತಂಡಗಳು : ಬೆಂಗಳೂರಿನ ಬಿವೈಎಸ್ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು 40ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಿತು. ಮಂಡ್ಯ ಬಾಯ್ಸ್ ಕಬಡ್ಡಿ ತಂಡ ದ್ವಿತಿಯ ಸ್ಥಾನ ಪಡೆದು 25ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ತೃತೀಯ ಬಹುಮಾನ ಬೆಂಗಳೂರು ಹೂಡಿ ಸ್ಪೋಟ್ಸ್ ಕ್ಲಬ್, ಕೇಶವ ಕ್ಲಬ್ ಬೆಂಗಳೂರು ತಂಡ ತಲಾ 10ಸಾವಿರ ನಗದು ಹಾಗೂ ಟ್ರೋಪಿ ಪಡೆಯಿತು.
ಮಹಿಳಾ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ ತಂಡಗಳು : ಬೆಂಗಳೂರು ಬಿವೈಎಸ್ ಹೆಣ್ಣುಮಕ್ಕಳ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು 12ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಬೆಂಗಳೂರು ಮಾತಾ ಕಬಡ್ಡಿ ತಂಡ 8ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ಶಿವಮೊಗ್ಗ ಜಿಲ್ಲಾ ಕಬಡ್ಡಿ ತಂಡ ತೃತೀಯ ಬಹುಮಾನ 4ಸಾವಿರ, ಟ್ರೋಫಿ, ಬೆಂಗಳೂರು ವಿಜಯನಗರ ಕ್ಲಬ್ ಕಬಡ್ಡಿ ತಂಡ 4ಸಾವಿರ ನಗದು ಟ್ರೋಪಿ ಪಡೆಯಿತು.
ಕಬಡ್ಡಿ ತಂಡದ ಉತ್ತಮ ದಾಳಿಕಾರನಾಗಿ ಬಿವೈಎಸ್ ತಂಡದ ಗೋಪಾಲ್ ಪಡೆದರು. ಉತ್ತಮ ಹಿಡಿತಗಾರನಾಗಿ(ಬೆಸ್ಟ್ ಕ್ಯಾಚರ್) ಹೂಡಿ ಕ್ಲಬ್ನ ಕಬಡ್ಡಿ ತಂಡದ ರಘು ಪಡೆದರು. ಆಲ್ರೌಂಡರ್ ಆಗಿ ಮಂಡ್ಯದ ಅಜರ್ುನ್ ಹೊರ ಹೊಮ್ಮಿದರು. 
ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು, ಕೊಡಗು, ಬೆಳಗಾಂ ಸೇರಿದಂತೆ ಒಟ್ಟು 30 ತಂಡಗಳು ಭಾಗವಹಿಸಿದ್ದವು. ಮಹಿಳಾ ತಂಡದಲ್ಲಿ ಶಿವಮೊಗ್ಗ, ಬೆಂಗಳೂರು ಸೇರಿದಂತೆ 5ಕಬಡ್ಡಿ ತಂಡಗಳು ಭಾಗವಹಿಸಿದ್ದವು.

ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಬದುಕುವ ಹಕ್ಕು ಇದೆ 
ಚಿಕ್ಕನಾಯಕನಹಳ್ಳಿಡಿ.10 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದಲ್ಲಿರುವ ಕಟ್ಟಕಡೆಯ ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಬದುಕುವ ಹಕ್ಕು ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿ, ಜಾತಿ, ಮತ, ಧರ್ಮ ಎಲ್ಲವನ್ನೂ ಮರೆತು ಮನುಷ್ಯರಲ್ಲಿ ವರ್ಗಬೇದವಾಗಲಿ, ಬಡವ ಬಲ್ಲಿದ ಎಂಬ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನೋಡಬೇಕೆಂಬ ಉದ್ದೇಶದಿಂದಲೇ ಮಾನವ ಹಕ್ಕುಗಳು ರಚನೆಯಾಯಿತು. ದೇಶದಲ್ಲಿ ಹಸಿವಿನಿಂದ ಯಾರು ಸಾಯಬಾರದು, ಎಲ್ಲರೂ ಸಮಾನರು, ಪ್ರತಿಯೊಬ್ಬ ವ್ಯಕ್ತಿಗೂ ಸ್ಥಾನಮಾನ, ಗೌರವ ನೀಡುವಂತಹ ಮಾನವ ಹಕ್ಕುಗಳು ನಿರಂತರವಾಗಿ ಜಾರಿಯಲ್ಲಿರುತ್ತವೆ, ಇದರ ಜವಬ್ದಾರಿಯನ್ನು ನ್ಯಾಯಾಂಗಕ್ಕೆ ನೀಡಿದ್ದು ನ್ಯಾಯಾಂಗ ಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದರು.
ವಕೀಲ ಹನುಮಂತಪ್ಪ ಮಾತನಾಡಿ, ನಮ್ಮ ದೇಶದ ಸಂವಿಧಾನದಡಿಯಲ್ಲಿ ರಚನೆಯಾದ ಮಾನವ ಹಕ್ಕು ಉಲ್ಲಂಘನೆಯಾಗುವುದನ್ನು ತಡೆಯಲೆಂದೇ ಕಾನೂನು ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಆದರೆ ಸಮಾಜದಲ್ಲಿ ಬದುಕುವ ನಾವುಗಳು ನಮ್ಮ ಜವಬ್ದಾರಿಯನ್ನು ಅರಿಯದೇ ಜಾತಿ, ಮತ, ಧರ್ಮ, ಪಂಥ ಎಲ್ಲವನ್ನು ಮೀರಿ ಕಟ್ಟಕಡೆಯ ವ್ಯಕ್ತಿಯೂ ಸಹ ಎಲ್ಲರಂತೆ ಬದುಕುವ ಹಕ್ಕಿದೆ, ಧರ್ಮ, ಧರ್ಮಗಳ ನಡುವಿನಲ್ಲಿ ಸಂಘರ್ಷ ಉಂಟುಮಾಡುವ ಮೂಲಕ ಪ್ರತಿಯೊಂದು ಪಕ್ಷಗಳು ಮುಗ್ಧ ಜನರನ್ನು ಸಂಘರ್ಷಕ್ಕೆ ತಳ್ಳುವ ಮೂಲಕ ಅಧಿಕಾರ ಮಾಡಲು ಪ್ರಯತ್ನಿಸುತ್ತಿವೆ ಎಂದು ವಿಷಾಧಿಸಿದರು ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಕರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಅನ್ಯಾಯ ನಡೆದಾಗ ನಮಗೆ ಸಂಬಂದವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ, ಜವಬ್ದಾರಿಯುತ ನಾಗರೀಕರಾದ ನಾವು ಕಾನೂನನ್ನು ಅರಿತು ಬಾಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ನಾಯಕ್, ಸೋಮನಾಥ್, ಸಕರ್ಾರಿ ಅಭಿಯೋಜಕರಾದ ರವಿಚಂದ್ರ, ವಕೀಲರ ಸಂಘದ ಉಪಾಧ್ಯಕ್ಷ ಆರ್.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.



Wednesday, December 9, 2015


ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ, : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಗೋಡೆಕೆರೆ ಸಿದ್ದರಾಮೇಶ್ವರಸ್ವಾಮಿ ಕಾತರ್ಿಕ ಮಾಸದ ಲಕ್ಷದೀಪೋತ್ಸವದ ಅಂಗವಾಗಿ ನಡೆಯುತ್ತಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ, ಜಗೋಸಿರಾ ಕಪ್ 2015ರ ಪಂದ್ಯಾವಳಿಗಳು ರೋಚಕ ಘಟ್ಟ ತಲುಪಿತು.
ಕನರ್ಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದೊಂದಿಗೆ ಗೋಡೆಕೆರೆಯ ಶ್ರೀ ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾ ಸಂಘ 3ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಒಟ್ಟು 30 ಪುರುಷ ಹಾಗೂ 7 ಮಹಿಳಾ ತಂಡಗಳು ಭಾಗವಹಿಸಿವೆ.
 ಆಡಿದ ಎಲ್ಲಾ ತಂಡಗಳ್ಲಲೂ ಗೆಲುವು ಸಾಧಿಸುವ ಮೂಲಕ 2ನೇ ದಿನದ ಅಂತ್ಯಕ್ಕೆ ಮಂಡ್ಯ ತಂಡ ಫೇವರೇಟ್ ತಂಡವಾಗಿ ಹೊರಹೊಮ್ಮಿತು.
  ಉದ್ಘಾಟನಾ ಪಂದ್ಯದಲ್ಲಿ ಹಿರಿಯೂರು ಸ್ಪೋಟ್ಸ್ ಕ್ಲಬ್ ಹಾಗೂ ಮಂಡ್ಯ ಕಬ್ಬಡ್ಡಿ ಕ್ಲಬ್ ಗೆಲುವಿಗಾಗಿ ಹೋರಾಡಿದವು. ಮಂಡ್ಯ ತಂಡ ಗೆಲವು ಸಾಧಿಸಿತು. 
3ಬಾರಿ  ಸತತವಾಗಿ ಜಗೋಸಿರಾ ಕಪ್ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ ಬೆಂಗಳೂರು ಮಾರುತಿ ಕಬಡ್ಡಿ ಬಾಯ್ಸ್ಗೆ ಬೈಸ್ ಸಿಕ್ಕಿತ್ತು. ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ತಂಡವನ್ನು ಮಣಿಸಿ ಮಂಡ್ಯ ತಂಡ ಗೆಲುವಿನ ಓಟವನ್ನು ಮುಂದುವರೆಸಿದೆ.
ದಿನದ ಅಂತ್ಯಕ್ಕೆ ಮಂಡ್ಯ ಕ್ಲಬ್, ಊಡಿ ಸ್ಪೋಟ್ಸ್ ಕ್ಲಬ್, ಕೇಶವ ಸ್ಪೋಟ್ಸ್ ಕ್ಲಬ್ ಬೆಂಗಳೂರು ಹಾಗೂ ವಿಜಯನಗರ ಕ್ಲಬ್ ಬೆಂಗಳೂರು ಸೆಮಿ ಫೈನಲ್ಸ್ ಪ್ರವೇಶಿಸಿವೆ.
ಬುಧವಾರ ಬೆಂಗಳೂರಿನ ಅಮೃತ್ ಹಾಗೂ ಮಂಡ್ಯ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು. ಮೊದಲ ಅರ್ಧದಲ್ಲಿ ಎರಡೂ ತಂಡಗಳು ಸಮಬಲ ಕಾಯ್ದುಕೊಂಡವು. ಮಂಡ್ಯ ತಂಡದ ದಾಂಡಿಗರು ಅಮೃತ್ನ ಸ್ಟಾರ್ ರೈಡರ್ ರವೀಂದ್ರ ಅವರನ್ನು ಕ್ಯಾಚ್ ಹಾಕುವ ಮೂಲಕ ಮುನ್ನಡೆ ಸಾಧಿಸಿದರು. ಕಡೆಯ 2 ನಿಮಿಷಗಳ ಆಟ ಇರುವಾಗ ಅಮೃತ್ ತಂಡದ ಚಂದನ್ ಔಟ್ ಆದರು. ಮಂಡ್ಯ ತಂಡದ ನಾಯಕ ರವಿ ಸೂಪರ್ ಟ್ಯಾಕಲ್ನಲ್ಲಿ 2ಅಂಕ ಗಳಿಸಿದರು. 3-6 ಅಂತರದಲ್ಲಿ ಮಂಡ್ಯ ತಂಡ ಜಯಗಳಿಸಿತು.
ಅತಿಥೇಯ ಲಾಲ್ಬಹದ್ದೂರ್ ಶಾಸ್ತ್ರಿ ಕಬಡ್ಡಿ ತಂಡದ ಹುಡಗರು ಬಲಿಷ್ಠ ಕೊಡಗು ತಂಡವನ್ನು ಮಣಿಸಿದರು. 2ನೇ ಅಂಕಣದಲ್ಲಿ ಬಿವೈಎಸ್ ಬೆಂಗಳೂರು ತಂಡ ಜರಗನಹಳ್ಳಿಯ ವೈಎಪ್ಎ ತಂಡವನ್ನು ಸೋಲಿಸಿ ಗೆಲುವು ಸಾಧಿಸಿತು.
ಮಹಿಳೆಯರ ವಿಭಾಗ : ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಮಾತಾ ಸ್ಪೋಟ್ಸ್ ಕ್ಲಬ್,ಕ್ಲಾಸಿಕ್ ನ್ಯಾಷಿನಲ್ ಸ್ಪೋಟ್ಸ್ ಕ್ಲಬ್, ವಿಜಯನಗರ ಸ್ಪೋಟ್ಸ್ ಕ್ಲಬ್, ಬಿವೈಎಸ್, ಶಿವಮೊಗ್ಗ, ಮೈಸೂರು ಹಾಗೂ ತುಮಕೂರು ತಂಡಗಳು ಭಾಗವಹಿಸಿವೆ. ಆರಂಭಿಕ ಪಂದ್ಯದಲ್ಲಿ ಶಿವಮೊಗ್ಗ ಅಮೆಚ್ಚೂರ್ ಕಬ್ಬಡ್ಡಿ ತಂಡ ಹಾಗೂ ಬೆಂಗಳೂರು ತಂಡಗಳು ಸೆಣಸಿದವು, ಶಿವಮೊಗ್ಗ ತಂಡ ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿತು.
ಬೆಳ್ಳಿ ಕಡಗ: ಒಮ್ಮೆಲೆ 4ಅಂಕ ತರುವ ಕ್ರೀಡಾಪಟುಗಳಿಗೆ ಬೆಳ್ಳಿ ಕಡಗದ ಆಕರ್ಷಣೆಯಿದ್ದು ಬೆಂಗಳೂರಿನ ಬಿವೈಎಸ್ ತಂಡದ ಕ್ರೀಡಾಪಟುಗಳಾದ ಲೋಕೇಶ್, ಬಸವರಾಜು, ಬೆಂಗಳೂರು ಮಾರುತಿ ತಂಡದ ಮಹೇಶ್ ಹಾಗೂ ಅತಿಥೇಯ ಗೋಡೆಕೆರೆ ತಂಡದ ಮಹೇಶ್ ಬೆಳ್ಳಿ ಕಡಗಗಳನ್ನು ಪಡೆದುಕೊಂಡರು.
45 ವರ್ಷಗಳಿಂದ ಪಂದ್ಯಾವಳಿ ಆಯೋಜನೆ : ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘದ ಸದಸ್ಯ ಮರಿಸ್ವಾಮಿ ಮಾತನಾಡಿ, ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರಸಿದ್ದಗೊಳಿಸುವ ಹಂಬಲದಿಂದ ಕಳೆದ 45 ವರ್ಷಗಳ ಹಿಂದೆ ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘವನ್ನು ಸ್ಥಾಪಿಸಿದೆವು, ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಕ್ರೀಡೆಯಲ್ಲಿ ಆಯೋಜಿಸಿದ್ದು ಬರುತ್ತಿದ್ದೇವೆ ಎಂದರು.
ರಾಷ್ಟ್ರಮಟ್ಟದ ಆಟಗಾರರನ್ನು ನೀಡಿದ ಕೀತರ್ಿ : ಹಿರಿಯ ಕ್ರೀಡಾಪಟು ಮಲ್ಲಿಕಾಜರ್ುನ್ ಮಾತನಾಡಿ, ಸ್ಥಳೀಯ ಕ್ರೀಡಾಸಕ್ತರ ನೆರವಿನಿಂದ ಪ್ರಾರಂಭವಾದ ಕ್ಲಬ್ ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ, ಅಲ್ಲದೇ ಕ್ಲಬ್ನ ಕ್ರೀಡಾಪಟುಗಳಾದ ಸಿದ್ದರಾಮಯ್ಯ(ಟೈಸನ್), ಮಲ್ಲಿಕಾಜರ್ುನಯ್ಯ, ವೇದಮೂತರ್ಿ, ಶಾಂತಕುಮಾರ್, ಮರಿಸ್ವಾಮಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಬಡ್ಡಿ ಆಡುವ ಮೂಲಕ ತಾಲ್ಲೂಕಿಗೆ ಹಮ್ಮೆ ತಂದಿದ್ದಾರೆ ಎಂದರು.

ಕಾತರ್ಿಕ ಮಾಸದ ಅಂಗವಾಗಿ ಲಕ್ಷದೀಪೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಗೋಡೆಕೆರೆಯಲ್ಲಿ ಲಿಂಗೈಕ್ಯ ಚಂದ್ರಶೇಖರಾನಂದ ಭಾರತಿ ಸ್ವಾಮೀಜಿಯವರ ಪುಣ್ಯಸ್ಮರಣೆ ನಿಮಿತ್ತ ಮಂಗಳವಾರ ಮುಂಜಾನೆ ಸಾವಿರಾರು ಭಕ್ತರು ಸಂಭ್ರಮದಿಂದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೋಮವಾರ ಸಂಜೆಯೇ ಸನ್ನಿಧಿಗೆ ಆಗಮಿಸುವ ಭಕ್ತರು ದೀಪ ಹಚ್ಚಲು ತಾಲ್ಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ರಾತ್ರಿ ಇಡೀ ಕಾದುಕುಳಿತುಕೊಳಿತಿದ್ದರು. ಹರಕೆ ಹೊತ್ತ ಭಕ್ತರು ಚಂಡುಹೂ ದಂಡೆ ಕಟ್ಟಿ ದೇವಸ್ಥಾನವನ್ನು ಅಲಂಕರಿಸಿದರು.ಸಿದ್ಧರಾಮೇಶ್ವರ ಮೂತರ್ಿಗೆ ಹಣ್ಣಿನ ಅಲಂಕಾರ ಮಾಡಿದ್ದರು. ಭಕ್ತರು ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ಅಣಿಗೊಳಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
    ಸಿದ್ದರಾಮೇಶ್ವರ ದೇವರಮೂತರ್ಿಯ ಅಡ್ಡ ಪಲ್ಲಕ್ಕಿ ನಡೆಮುಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕೊಂಬು, ಕಹಳೆ, ನಗಾರಿ, ನಂದಿಕೋಲು, ಬಿಂಗಿ ಕುಣಿತ ಮತ್ತು ವೀರಭದ್ರನ ಕುಣಿತ ನಡೆಮುಡಿಗೆ ಮೆರಗು ತಂದವು. ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ಮೆರವಣಿಗೆಯ ಮುಂದಾಳತ್ವ ವಹಿಸಿದ್ದರು.
ಮುಂಜಾನೆ 4ಗಂಟೆಯ ಮಹಾಮಂಗಳಾರತಿಯೊಟ್ಟಿಗೆ ಸಂಭ್ರಮ ಹಿಮ್ಮಡಿಯಾಯಿತು. ಮತಾಪು, ಬಾಣ ಬಿರುಸು ಆಕಾಶದಲ್ಲಿ ಬೆಳಕಿನ ಚಿತ್ತಾರ ಬರೆದವು. ಪಟಾಕಿ ಸದ್ದು ಕಿವಿ ಗಡುಚಿಕ್ಕಿತು. ಭಕ್ತರು ಮಂಟಪದಲ್ಲಿ ಏರಿಸಿಟ್ಟಿದ್ದ ದೀಪಗಳನ್ನು ಹಚ್ಚಲು ಮುಗಿಬಿದ್ದರು. ಸಂಭ್ರಮ ಬೆಳಗ್ಗೆ ವರೆಗೂ ಮುಂದುವರೆಯಿತು.
ಗೋಡೆಕೆರೆ, ಸುಂಟರಮಳೆ ಮತ್ತು ಯಳನಡು ಭಾಗಗಳಲ್ಲಿ ನೆಲೆಸಿ ತಾಲ್ಲೂಕಿನ ನಾನಾ ಭಾಗಗಳಲ್ಲಿ ಸಿದ್ಧರಾಮೇಶ್ವರ ಸಂಚರಿಸಿ ಕೆರೆ ಕಟ್ಟೆ ನಿಮರ್ಿಸಿದ್ದಾರೆ. ಇದರ ಸ್ಮರಣಾರ್ಥವಾಗಿ 16ನೇ ಶತಮಾನದಿಂದಲೇ ಈ ಭಾಗಗಳಲ್ಲಿ ದೀಪೋತ್ಸವ ಮತ್ತು ತೆಪ್ಪೋತ್ಸವಗಳು ನಡೆದುಕೊಂಡು ಬರುತ್ತಿವೆ.  ಚಂದ್ರಶೇಖರಾನಂದ ಭಾರತಿ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಜ್ಞಾಪಕಾರ್ಥವಾಗಿ ಕಳೆದ 13 ವರ್ಷಗಳಿಂದ ಲಕ್ಷದೀಪೋತ್ಸವವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
    ಎಣ್ಣೆ ದೀಪ ತುಂಬಿದ ಕೆರೆಯ ಸಂಕೇತ. ಸೊಡರು ಅರಿವಿನ ಸಂಕೇತ. ಲಕ್ಷದೀಪೋತ್ಸವ ಒಗ್ಗಟ್ಟಿನಿಂದ ಜೀವಜಾಲ ಜಲಮೂಲವನ್ನು ಉಳಿಸೋಣ ಎನ್ನುವ ಸಂದೇಶವನ್ನೂ ಸಾರುತ್ತದೆ. ದೀಪಾರಾಧನೆಯನ್ನು ಬೆಳಗಿನ ಸೂಯರ್ೋದಯದೊಟ್ಟಿಗೆ ನೆರವೇರಿಸುವುದು ತೋಜೋಮಯ ಸೂರ್ಯದೇವನ ಬೆಳಕಿಗೆ ನಮ್ಮ ಅರಿವಿನ ಹಣತೆಯ ಬೆಳಕನ್ನೂ ಸೇರಿಸೋಣ ಎನ್ನುವ ಸಂದೇಶ ಸಾರಲು ಬೆಳಗಿನ ಜಾವವೇ ಲಕ್ಷದೀಪ ಬೆಳಗಿಸಲಾಗುತ್ತದೆ ಎಂದು ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಆಚರಣೆಯ ಹಿನ್ನೆಲೆಯನ್ನು  ವಿವರಿಸಿದರು.
ಕಡೆ ಕಾತರ್ಿಕ ಆಚರಣೆಯ ಅಂಗವಾಗಿ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಮಂಗಳವಾರ ಆರಂಭವಾದವು. ಪಂದ್ಯಾವಳಿಗೆ 31 ತಂಡಗಳು ಭಾಗವಹಿಸಿವೆ ಎಂದು ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾ ಸಂಘದ ಅಧ್ಯಕ್ಷ ನಿರಂಜನಮೂತರ್ಿ ತಿಳಿಸಿದರು.
ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಡಿ.09 : ಚಿಕ್ಕನಾಯಕನಹಳ್ಳಿ: ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವಾರು ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಲು ಜಿಲ್ಲಾವಾರು ಹಾಗೂ ವಿಷಯವಾರು ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಆಕ್ಷೇಪಣೆಯಿದ್ದಲ್ಲಿ ಡಿ.19ರ ಒಳಗೆ ಕಛೇರಿಗೆ ಲಿಖಿತವಾಗಿ ಬರೆದು ತಿಳಿಸುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದ್ದಾರೆ. 
ಮಾನವ ಹಕ್ಕು ದಿನಾಚಾರಣೆ ಕಾನೂನು ಅರಿವು ನೆರವು ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ, : ಮಾನವ ಹಕ್ಕು ದಿನಾಚಾರಣೆ ಅಂಗವಾಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಇದೇ 10ರ ಗುರುವಾರ ಬೆಳಗ್ಗೆ 10.30ಕ್ಕೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಸಿವಿಲ್ ನ್ಯಾಯದೀಶ ಎನ್.ಆರ್.ಲೋಕಪ್ಪ ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಆರ್.ಕರಿಯಣ್ಣ ಅಧ್ಯಕ್ಷತೆ ವಹಿಸುವರು.
ವಕೀಲ ಹೆಚ್.ಟಿ.ಹನುಮಂತಯ್ಯ ಮಾನವ ಹಕ್ಕುಗಳ ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರುಗಳಾದ ಪ್ರಕಾಶ್ನಾಯಕ್, ಸೋಮನಾಥ್, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಉಪಾಧ್ಯಕ್ಷ ಆರ್.ರಾಜಶೇಖರ್, ಕಾರ್ಯದಶರ್ಿ ಜೆ.ಬಿ.ಆದರ್ಶ ಉಪಸ್ಥಿತರಿರುವರು.


Monday, December 7, 2015


ರೋಗ ಹೆಚ್ಚಾಗುವ ಮುನ್ನ ತಪಾಸಣೆಗೆ ಒಳಗಾಗಿ : ಡಾ.ಎಸ್.ಜಿ.ಪರಮೇಶ್ವರಪ್ಪ.
ಚಿಕ್ಕನಾಯಕನಹಳ್ಳಿ,: ರೋಗ ಉಲ್ಭಣಿಸುವ ಮುನ್ನ ತಪಾಸಣೆಗೆ ಒಳಗಾಗಿ ರೋಗ ದೂರ ಮಾಡಬೇಕು ಜೊತೆಗೆ ಮನಸ್ಸಿಗೆ ಒತ್ತಡ ಉಂಟಾಗದಂತೆ ಜಾಗೃತಿ ವಹಿಸಿದರೆ ಆರೋಗ್ಯ ವೃದ್ದಿಯಾಗುತ್ತದೆ ಎಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಬೆಂಗಳೂರಿನ ಫೋಟರ್ಿಸ್ ಆಸ್ಪತ್ರೆ ಹಾಗೂ ತುಮಕೂರು ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆ, ಔಷಧಿ ಮಾರಾಟಗಾರರ ಸಂಘ, ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಫೋಟರ್ಿಸ್ ಆಸ್ಪತ್ರೆ ಹಾಗೂ ತುಮಕೂರು ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆಯ 30ಕ್ಕೂ ಹೆಚ್ಚು ವೈದ್ಯಕೀಯ ತಂಡ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದಲ್ಲಿ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಕರೆದೊಯ್ದು ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ರೋಟರಿ ಶಾಲೆಯಲ್ಲಿ ನಡೆಯುತ್ತಿರುವ ಉಚಿತ ಮೆಘಾ ಆರೋಗ್ಯ ಶಿಬಿರಕ್ಕೆ ಶಾಲಾ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತಿರುವುದು ಸಂತಸದ ವಿಷಯವಾಗಿದ್ದು ರೋಟರಿ ಕ್ಲಬ್ 40 ವರ್ಷಗಳಿಂದ ಹಲವಾರು ಜನಪರ ಸೇವೆ ಸಲ್ಲಿಸುತ್ತಿದ್ದು ಅದೇ ರೀತಿ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಉಚಿತ ಔಷಧಿಯನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲಾ ರೋಟರಿ ಕ್ಲಬ್ನ ಕಾರ್ಯದಶರ್ಿ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯ ಎಲ್ಲಾ ಸದಸ್ಯರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಬಿರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ರೋಟರಿ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದರಲ್ಲದೆ ಕನರ್ಾಟಕ ಔಷಧಿ ಮಾರಾಟಗಾರರ ಸಂಘ ಈ ಶಿಬಿರಕ್ಕೆ 2ಲಕ್ಷದ 35ಸಾವಿರದಷ್ಟು ಉಚಿತವಾಗಿ ಔಷಧಿಗಳನ್ನು ನೀಡುತ್ತಿದೆ ಎಂದರು.
ಜಿಲ್ಲಾ ರೋಟರಿ ಸಂಸ್ಥೆಯ ಬಿಳಿಗೆರೆ ಶಿವಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದಕ್ಕೆ ಎಲ್ಲರಿಂದ ಉತ್ತಮ ಪ್ರಶಂಸೆ ದೊರಕಿದೆ 17ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವಿದ್ದು ಸಂಸ್ಥೆ ಪೋಲಿಯೋ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.
ಶಿಬಿರದಲ್ಲಿ ಸ್ತ್ರೀರೋಗ ತಜ್ಞರು, ಹೃದಯರೋಗ ತಜ್ಞರು, ಮೂಳೆ ಹಾಗೂ ಕಣ್ಣಿನ ತಜ್ಞರು, ಮಕ್ಕಳ ತಜ್ಞರು, ಚರ್ಮವ್ಯಾಧಿ, ಎಕೋ, ಇಸಿಜಿ, ರಕ್ತದೊತ್ತಡ, ಮಧುಮೇಹ ಸಂಬಂಧಪಟ್ಟ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ 750ಕ್ಕೂ ಹೆಚ್ಚು ರೋಗಿಗಳು ನೊಂದಾಯಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಪೋಟರ್ಿಸ್ ಆಸ್ಪತ್ರೆಯ ಡಾ.ನವೀನ್ ವೈದ್ಯರುಗಳಾದ ಭಾನುಪ್ರಕಾಶ್, ದ್ವಾರಕಿನಾಥ್, ಶ್ರಿನಿವಾಸ್ಅರ್ವ, ಸುದರ್ಶನ್, ಸಂದೀಪ್, ಲೋಕೇಶ್, ಸತ್ಯ.ಕೆ, ಅಶ್ವಿನ್, ಪ್ರೇಮನಾಗರಾಜ್, ಶಿವಕುಮಾರ್, ಹರೀಶ್, ಮಹೇಶ್, ಗೌರಿ, ಡಾ.ನಾಗರಾಜು, ಗುರುನಾಥ್ ಶಿಬಿರದಲ್ಲಿ ಚಿಕಿತ್ಸೆ ನೀಡಿದರು.  
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಚಾಂದ್ಪಾಷ, ಎಂ.ಎಲ್.ಮಲ್ಲಿಕಾಜರ್ುನಯ್ಯ, ದೇವರಾಜು, ಅಶ್ವತ್ಥ್ನಾರಾಯಣ್, ಮಿಲ್ಟ್ರಿಶಿವಣ್ಣ, ಡಾ.ನಾಗರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯ ಬಿ.ಕೆ.ಮಂಜುನಾಥ್, ಶಾಲಾ ಶಿಕ್ಷಕರುಗಳು, ವಿದ್ಯಾಥರ್ಿಗಳು ಸಿಬ್ಬಂದಿ ಉಪಸ್ಥತರಿದ್ದರು.


 ಆಡಳಿತದ ಅಧಿಕಾರಕ್ಕಾಗಿ ಅಸಹಿಷ್ಣುತೆ ಸೃಷ್ಠಿಯಾಗುತ್ತಿದೆ : ಲೇಖಕಿ ಕಂಪಾರಹಟ್ಟಿ ಶಾಂತ 
ಚಿಕ್ಕನಾಯಕನಹಳ್ಳಿ,ಡಿ.06 : ಜಾತಿ ರಾಜಕಾರಣ ಹಾಗೂ ಅಧಿಕಾರದ ಆಡಳಿತ ಹಿಡಿಯಲು ಕೆಲವರು ದೇಶದಲ್ಲಿ ಅಸಹಿಷ್ಣುತೆ ಸೃಷ್ಠಿಸುತ್ತಿದ್ದಾರೆ ಎಂದು ಲೇಖಕಿ ಕಂಪಾರಹಟ್ಟಿ ಶಾಂತ ವಿಷಾಧಿಸಿದರು.
ಪಟ್ಟಣದ ಡಿವಿಪಿ ಬಾಲಕಿಯರ ಶಾಲೆಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿವರ್ಾಣ ದಿನ, ಬೋಧಿವೃಕ್ಷ ಟ್ರಸ್ಟ್ನ ವಾಷರ್ಿಕ ಸಂಭ್ರಮ ದಿನಾಚಾರಣೆಯಲ್ಲಿ ನಡೆದ ಸಮಕಾಲೀನ ಸಮಾಜ ಮತ್ತು ಅಸಹಿಷ್ಣತೆ ಕುರಿತಾದ ಚಚರ್ೆ ಮತ್ತು ಸಂವಾದದಲ್ಲಿ ಮಾತನಾಡಿದ ಅವರು ಯಾವುದನ್ನು ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ಅಸಹಿಷ್ಣುತೆಯಾಗಿದೆ, ದೇಶದಲ್ಲಿ ಸೃಷ್ಠಿಸಲಾಗುತ್ತಿರುವ ಅಸಹಿಷ್ಣುತೆಯಿಂದ ದೇಶ ತಲ್ಲಣವಾಗುತ್ತಿದೆ, ಒಬ್ಬರನ್ನು ವಿರೋಧಿಸಲು ಇನ್ನೊಬ್ಬರ ಬಗ್ಗೆ ಮಾತನಾಡುವುದು, ಅತ್ತೆ ಸೊಸೆಯರಲ್ಲಿ ನಡೆಯುತ್ತಿರುವ ಜಗಳ ಎಲ್ಲವೂ ಕೂಡ ಅಸಹಿಷ್ಣುತೆಗೆ ತಿರುಚಲಾಗುತ್ತಿದ್ದು ಅಸಹಿಷ್ಣುತೆಗೆ ರಾಜಕೀಯ ಪಿತೂರಿಯೇ ಮುಖ್ಯ ಕಾರಣವಾಗಿದೆ, ಬ್ರಹ್ಮನ ಕಾಲಿನಿಂದ ಹುಟ್ಟಿದವರು ಶೂದ್ರರು ಎಂದು, ರಾಮಧಾನ್ಯ ಚರಿತ್ರೆ ಕಥಾಹಂದರದಲ್ಲಿಯೂ ಭತ್ತ, ರಾಗಿಯ ನಡುವೆ ಇತಹಾಸದಿಂದಲೇ ಅಸಹಿಷ್ಣುತೆ ಸೃಷ್ಠಿಸಿದರು, ಅಂದಿನಿಂದ ಇಂದಿನವರೆವಿಗೂ ಧರ್ಮ, ಜಾತಿ, ಜಯಂತಿಗಳ ನಡುವೆ ರಾಜಕೀಯ ಹಿತಾಸಕ್ತಿಗಾಗಿ ಅಸಹಿಷ್ಣುತೆ ಸೃಷ್ಠಿಸಲಾಗುತ್ತಿದೆ ಎಂದರು. ಪುಸ್ತಕಗಳ ನಡುವೆ ಪ್ರಾಣ ತೊರೆದ ಅಂಬೇಡ್ಕರ್ರವರು ಸಮಾನತೆಗಾಗಿ ಹೋರಾಡಿದವರಲ್ಲಿ ಪ್ರಮುಖರು, ಬಡವರಿಗೆ, ನೊಂದವರಿಗೆ, ದೀನ-ದಲಿತರಿಗೆ, ಅಂಗವಿಕಲರಿಗೆ ಅಂಬೇಡ್ಕರ್ರವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೋಧಿವೃಕ್ಷ ಟ್ರಸ್ಟ್ನ ನಾರಾಯಣರಾಜು, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ನಾಗಕುಮಾರ್, ಕಂಟಲಗೆರೆ ಗುರುಪ್ರಸಾದ್, ಮಲ್ಲಿಕಾಜರ್ುನ್, ಎಂ.ಎಸ್.ರವಿಕುಮಾರ್, ರವಿಕುಮಾರ್ ಸೇರಿದಂತೆ ಪ್ರಗತಿಪರ ಸಂಘಟನೆಯವರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಯಡಿಯೂರಿಗೆ ಚಿ.ನಾ.ಹಳ್ಳಿ ಮೂಲಕ ಪಾದಯಾತ್ರೆ ತೆರಳಿದ ದಾರವಾಡ, ಗದಗ. ಭಾಗಲಕೋಟೆ  ಭಕ್ತರು 
 ಚಿಕ್ಕನಾಯಕನಹಳ್ಳಿ : ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದ ಕಾತರ್ೀಕ ಮಾಸದ ಅಂಗವಾಗಿ ನಡೆಯುವ ಲಕ್ಷದೀಪೋತ್ಸವಕ್ಕೆಂದು ದಾರವಾಡ, ಗದಗ. ಭಾಗಲಕೋಟೆ ಜಿಲ್ಲೆಗಳಿಂದ  ಪಾದಯಾತ್ರೆ ಮೂಲಕ ಸಾಗುತ್ತಿದ್ದ 500ಕ್ಕೂ ಹೆಚ್ಚು ಭಕ್ತಾಧಿಗಳಿಗೆ ಪಟ್ಟಣದ ಜೆ.ಡಿ.ಗ್ರಾಫಿಕ್ಸ್ ಮಾಲೀಕ ರಮೇಶ್ ಮತ್ತವರ ತಂಡದಿಂದ ಪ್ರಸಾದ ಮಜ್ಜಿಗೆ ವಿತರಿಸಲಾಯಿತು.
ಈ ಭಕ್ತರು ಕಳೆದ 40ವರ್ಷಗಳಿಂದ ಪಾದಯಾತ್ರೆ ಮೂಲಕವೇ ತೆರಳಿ ತಮ್ಮಲ್ಲಿರುವ ಅಚಲವಾದ ಭಕ್ತಿಯನ್ನು ಪ್ರದಶರ್ಿಸುತ್ತಲೇ ಇರುವ ಭಕ್ತರು ಗದಗ ಜಿಲ್ಲೆಯ ಡಂಬಳ ಸಂಸ್ಥಾನ ಮಠದ ಡಾ|| ಸಿದ್ದಲಿಂಗಸ್ವಾಮೀಜಿ, ಹರಿಹರದ ಶಲವಡಿ ವಿರಕ್ತಮಠದ ಗುರುಶಾಂತಸ್ವಾಮೀಜಿ, ನವಲಗುಂದ ಹಿಂಗಳೆಯ ಶಿವಯೋಗಿ ಮಂದಿರ ಮೂಲದಿಂದ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದವರೆಗೆ ಪಾದಯಾತ್ರೆ ಮಂಡಳಿ ರಚಿಸಿಕೊಂಡಿದ್ದಾರೆ, ಪಾದಯಾತ್ರೆಗೆ ಇಚ್ಛೆಯಿರುವ ಭಕ್ತರನ್ನು ಒಗ್ಗೂಡಿಸಿಕೊಂಡು ನಿತ್ಯ 35ರಿಂದ 40 ಕಿ.ಮೀ ಪಾದಯಾತ್ರೆ ಕೈಗೊಂಡು 15ದಿನಗಳವರೆಗೆ ನಿರಂತರ ಪಾದಯಾತ್ರೆ ಮೂಲಕ ಎಡೆಯೂರು ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಾರೆ.
ಯಡಿಯೂರಿಗೆ ತೆರಳುತ್ತಿರುವ ಭಕ್ತರಿಗೆ ದಣಿವಾರಿಸಿಕೊಳ್ಳಲು ಭಕ್ತರನ್ನು ಬರಮಾಡಿಕೊಂಡು ಅವರಿಗೆ ಕಡ್ಲೆಕಾಳುಉಸ್ಲಿ. ಮಜ್ಜಿಗೆ, ಬಾಳೆಹಣ್ಣು, ಎಲೆ ಅಡಿಕೆ, ನೀಡಿ ಗೌರವಿಸುವ ಸಂಪ್ರಾದಯವನ್ನು ಮಾಡಿಕೊಂಡು ಬಂದಿರುವ ರಮೇಶ್ರವರ ಪ್ರಸಾದ ಸ್ವೀಕರಿಸಿ ಹತ್ತಿರದ ಚೌಕಿಮಠದಲ್ಲಿ ವಿಶ್ರಾಂತಿ ಪಡೆದು ಸಂಜೆಯಾಗುತ್ತಲೇ ಪಾದಯಾತ್ರೆಯನ್ನು ಆರಂಭಿಸಿ ತುರುವೇಕೆರೆ ಮಾರ್ಗವಾಗಿ ಮಾಯಾಸಂದ್ರ ಮೂಲಕ ಎಡೆಯೂರಿನ ಸಿದ್ದಲಿಂಗೇಶ್ವರಸ್ವಾಮಿಗೆ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ಕೆ ತಲುಪುವರಿದ್ದಾರೆ.

ಕಾತರ್ಿಕ ಮಾಸದ ಅಂಗವಾಗಿ ದಶಸಹಸ್ತ್ರ ದೀಪೋತ್ಸವ
                            
ಚಿಕ್ಕನಾಯಕನಹಳ್ಳಿ : ಪಟ್ಟಣದ ಹೊಸಬೀದಿಯ ಶ್ರೀ ರಾಮ ಮಂದಿರ ದೇವಾಲಯದಲ್ಲಿ ಕಾತರ್ಿಕ ಮಾಸದ ಅಂಗವಾಗಿ ಭಕ್ತ ಸಮೂಹದಿಂದ ದಶ ಸಹಸ್ರ ದೀಪೋತ್ಸವ ಏರ್ಪಡಿಸಲಾಗಿತ್ತು.
ದಶಸಹಸ್ತ್ರ ದೀಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿ ಮಾತನಾಡಿದರು. ದೀಪಗಳ ಬೆಳಕು ಜ್ಞಾನದ ಪ್ರತೀಕವಾಗಿದ್ದು, ಅಂದಕಾರವೆಂಬ ಕತ್ತಲೆಯನ್ನು ಸರಿಸಲು ದೀಪಾರಾಧನೆ ಶತ ಶತ ಮಾನಗಳಿಂದ ನಡೆದುಕೊಂಡು ಬರುತ್ತಿದೆ, ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಕಾತರ್ಿಕ ಮಾಸದಲ್ಲಿ ಸುತ್ತಮುತ್ತಲ ನಿವಾಸಿಗಳು ಮಣ್ಣಿನ ದೀಪಗಳನ್ನು ತಂದು ಎಣ್ಣೆ ಬತ್ತಿಗೆ ದೀಪ ಹೆಚ್ಚುವ ಮೂಲಕ ಜ್ಞಾನ ಜ್ಯೋತಿ ಬೆಳಗುವಂತೆ ಮಾಡುತ್ತಿದ್ದಾರೆ  ಇಂತಹ ದಾಮರ್ೀಕ  ಕಾರ್ಯಗಳನ್ನು ಆಚರಿಸುವುದರಿಂದ ಸಮಾಜದಲ್ಲಿ ಗಟ್ಟಿತನ ಮೂಡುತ್ತದೆ ಎಂದರಲ್ಲದೆ ದಶ ಸಹಸ್ರ ದೀಪಗಳನ್ನು ಹಚ್ಚಲು ಶ್ರಮ ವಹಿಸಿದ ಸಕಲ ಭಕ್ತರಿಗೂ ಸಹ ದೀಪ ಬೆಳಗಿಸಿದ ಪ್ರತಿಫಲ ದೊರಕಲಿ ಎಂದು ಆಶಿಸಿದರು.
ಆರ್ಚಕ ರಮೇಶ್ ಮಾತನಾಡಿ ಕಳೆದ 5ವರ್ಷಗಳಿಂದ ದೀಪಗಳನ್ನು ಹಚ್ಚುವ ಮೂಲಕ ಕಾತರ್ಿಕ ಮಾಸಾಚರಣೆ ಮಾಡಿಕೊಂಡು ಬರುತ್ತಿದ್ದೇವೆ ಇಂತಹ ದಾಮರ್ಿಕ ಕಾರ್ಯಕ್ಕೆ ಅನೇಕ ಸಂಘಟನೆಗಳು ಅಡಿಕೆಮರ ತಂದು ಪಟ್ಟಿ ಸಿದ್ದಪಡಿಸಿದ್ದಾರೆ,  ಅನ್ನದಾಸೋಹ ಕಾರ್ಯಕ್ಕೆ ಎಲ್ಲರು ಕೈಜೋಡಿಸಿ ಮುಂದಿನ ದಿನಗಳಲ್ಲಿ ಲಕ್ಷದೀಪೋತ್ಸವ ಆಚರಣೆ ಮಾಡಬೇಕೆಂಬ ಬಯಕೆ ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಾಮರ್ಿಕ ಕಾರ್ಯಗಳಿಗೆ ಶ್ರಮಿಸಿದ ಭಕ್ತಾಧಿಗಳಿಗೆ ಶಾಸಕರು ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ದೀಪೋತ್ಸವ ಕಾರ್ಯಕ್ರಮದಲ್ಲಿ  ಮಹಿಳೆಯರು ಹಾಗೂ ಮಕ್ಕಳು ಸೇರಿ ದೀಪ ಬೆಳಗಿಸಿ ಸಂತಸಪಟ್ಟರು. 

ಮೇಲ್ವರ್ಗದ ಸಮುದಾಯಗಳಿಂದ ಅಸಮಾನತೆ ಮೂಲಕ ಅಶಾಂತಿ 
ಚಿಕ್ಕನಾಯಕನಹಳ್ಳಿ,ಡಿ.07  : ಮೆಲ್ವರ್ಗದ  ಸಮುದಾಯಗಳಿಂದ ಅಸಮಾನತೆ ಮೂಡಿಸುವ ಮೂಲಕ ಅಶಾಂತಿ ಉಂಟಾಗುತ್ತಿದೆ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಿಷಾಧಿಸಿದರು.
ಪಟ್ಟಣದ ಬಿ.ಆರ್ ಅಂಬೇಡ್ಕರ್ ಫ್ರೌಢಶಾಲೆಯಲ್ಲಿ ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ರ ವರ 59ನೇ ಮಹಾಪರಿನಿವರ್ಾಣ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ರಚನೆಯ ರೀತಿಯಲ್ಲಿಯೇ ಮೀಸಲಾತಿ ಎಂಬುದು ಯತಾವತ್ ಜಾರಿಯಾಗಿದ್ದರೆ ಅಸಮಾನತೆ ದೂರಾಗಿ ಎಲ್ಲರಿಗೂ ಸಮಪಾಲು, ಸಮಬಾಳು ಸಿಗುತ್ತಿತ್ತು,  ಶಿಕ್ಷಣ, ಆರೋಗ್ಯ, ವ್ಯಾಪಾರೀಕರಣದಿಂದಾಗಿ ಕೆಲವೇ ಮಂದಿ ಅಥರ್ಿಕವಾಗಿ ಬಲಾಡ್ಯರಾಗುತ್ತಿದ್ದಾರೆ ನಮ್ಮನ್ನಾಳುವ ಸಾಮಾಜಿಕ ನ್ಯಾಯ ನೀಡುವ ಸಕರ್ಾರಗಳು ದಲಿತರಿಗೆ ಇನ್ನೂ ಮುಜರಾಯಿ ದೇವಾಲಯಗಳಲ್ಲಿ ಪ್ರವೇಶ ನೀಡದೆ ಅಸಮಾನತೆ ಹುಟ್ಟಿಹಾಕುತ್ತಿವೆ ಎಂದರು.
 ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ವಿದ್ಯಾಥರ್ಿ ಜೀವನದುದ್ದಕ್ಕೂ ಅಸೃಶ್ಯತೆಯ ಕರಿನೆಗಳಲ್ಲಿ ಬದುಕಿದವರು, ಇಂದು ಮುಂದುವರಿದ ಸಮಾಜ  ನಮ್ಮ ಆಹಾರ ಪದ್ದತಿ ಕಿತ್ತುಕೊಳ್ಳುವ ಹೊನ್ನಾರ ನಡೆಸುತ್ತಿವೆ, ಸಂವಿಧಾನ ರಚನೆಗೆ ಮುನ್ನ ಕರುಡು ಪ್ರತಿ ರಚನೆಯ ಸಮಿತಿ ಸದಸ್ಯರನ್ನಾಗಿಸುವಲ್ಲಿ ಮೇಲ್ವರ್ಗದವರಿಂದ ಸೋಲಿಸುವ ಮೂಲಕ ಸದಸ್ಯರನ್ನಾಗದಂತೆ ಮಾಡುವಲ್ಲಿ ಪಿತೂರಿ ನಡೆದರೂ ಇವರ ವಿದ್ವತ್ನಿಂದ ಕರಡು ಸಮಿತಿಯ ಸದಸ್ಯರಾಗಿ ಸಂವಿಧಾನವನ್ನು ಈ ದೇಶಕ್ಕೆ ನೀಡುವಂತಾಯಿತು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಹಾಗೂ ಕ್ರಿಯಾತ್ಮಕ ಶಿಕ್ಷಣ ನೀಡದರೆ ಗುಣವುಳ್ಳ ಮಕ್ಕಳನ್ನು ಈ ಸಮಾಜಕ್ಕೆ ನೀಡಬಹುದು ಎಂದರು.
ಸಮಾಜ ಪರಿವರ್ತನಾ ಸಮುದಾಯದ ಮುಖಂಡ ನಂಜುಂಡಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಸೀಮಿತರಲ್ಲ ಅವರಲ್ಲಿದ್ದ ದೂರದೃಷ್ಟಿಯವುಳ್ಳ ಯೋಜನೆಗಳಿಂದ ಸಮಾಜಕ್ಕೆ ಒಳಿತು ಬಯಿಸಿದವರು, ಅಂಬೇಡ್ಕರ್ರವರ ಉದ್ದೇಶಗಳನ್ನು ಈಡೇರಿಸಲು ಶಾಲಾ ಮಕ್ಕಳಿಂದ ಮಾತ್ರ ಸಾಧ್ಯ, ಶಾಲಾ ಮಕ್ಕಳ ಮೊದಲು ಹಿರಿಯರನ್ನು ಗೌರವಿಸುವುದು ಕಲಿಯಬೇಕು, ನಾಡಿನ ಸುತ್ತಮುತ್ತಲಿನ ಪರಿಸರ ಹಾಗೂ ದೇಶದ ಸಂಪತ್ತು ಕಾಪಾಡಲು ಜಾಗೃತಿವಹಿಸಿ ಮುಂದಿನ ಪೀಳಿಗೆ ಉಳಿಯುವಂತೆ ಮಾಡಬೇಕು ನಮ್ಮ ಕುಟುಂಬಗಳ ಸುತ್ತಮುತ್ತ ಮದ್ಯಮಾರಾಟ ತಡೆಯುವಲ್ಲಿ ನಿಯಂತ್ರಿಸಿ ಮದ್ಯ ಕುಡಿಯುವುದು ನಿಲ್ಲಿಸಿ ಸಮಾಜ ಸುಧಾರಿಸಬೇಕು ಎಂದರು.
ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ಗೋ.ನಿ.ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಹುಟ್ಟದಿದ್ದರೆ ದಲಿತ ಸಮಾಜಗಳು ಇನ್ನೂ ಬಹಳಷ್ಟು ಕಷ್ಟ ಅನುಭವಿಸಬೇಕಿತ್ತು, ದಲಿತ ಸಮಾಜಗಳನ್ನು ಹಿಂದುಳಿದ ವರ್ಗಗಳೇ ಅವರ ಸಮಸ್ಯೆಗಳನ್ನು ಹೆಚ್ಚು ಅರಿತಿದ್ದವು. ಅದಕ್ಕೆ 1924ರಲ್ಲಿ ಬರೋಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಸಿದಣ್ಣ ಕಂಬಳಿ ಇವರು ಅಂಬೇಡ್ಕರ್ ಅವರಿಗೆ ಉಪನ್ಯಾಸಕ ವೃತ್ತಿ ನೀಡಿದ್ದರ ಪರಿಣಾಮ ಅವರ ಬದುಕಿನ ವಿವಿದ ಮಜಲು ಅನಾವರಣಗೊಂಡವು ಎಂದರು.
ಸಭೆಯಲ್ಲಿ ರಾಮ್ಕುಮಾರ್, ಮುಖಂಡ ತಿಮ್ಮೆಗೌಡ, ಮುದ್ದರಂಗಪ್ಪ. ಮತ್ತಿತ್ತರರು ಉಪಸ್ಥಿತರಿದ್ದರು.

Thursday, December 3, 2015


ವಿಕಲ ಚೇತನ ಮಕ್ಕಳಿಗೆ ಧೈರ್ಯ, ಆತ್ಮಸ್ಥೈರ್ಯ ತುಂಬಿ : ಬಿ.ಇ.ಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ : ವಿಕಲ ಚೇತನ ಮಕ್ಕಳಲ್ಲಿ ದೈರ್ಯ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಬಿ.ಆರ್.ಸಿ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಪೋಷಕರು ವಿಕಲಚೇತನ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆ ನೀಡುವುದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ, ಸಕರ್ಾರ  ವಿಕಲಚೇತನರ ಮಕ್ಕಳಿಗೆ ನೀಡುವ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
  ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ ಗ್ರಾಮೀಣ ವಿಕಲಚೇತನ ಮಕ್ಕಳಿಗೆ ರೋಟರಿ ಕ್ಲಬ್ ಮುಖಾಂತರ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದಲ್ಲಿ ವಿಕಲಚೇತನ ಮಕ್ಕಳಿಗೆ ಅನೇಕ ಸೌಲಭ್ಯಗಳು ಸಿಗುತ್ತಿವೆ ಗ್ರಾಮೀಣ ಪ್ರದೇಶ ಮಕ್ಕಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಸಿ.ಡಿ.ಪಿ.ಓ ಅನಿಸ್ ಕೈಸರ್ ಮಾತನಾಡಿ ವಿಕಲಚೇತನ ಮಕ್ಕಳು ಶಾಪವಲ್ಲ ತಾಯಿ ಗರ್ಭದರಿಸಿರುವ ಸಮಯದಲ್ಲಿ ತಮ್ಮ ಆರೋಗ್ಯ ಹಾಗೂ ಉತ್ತಮ ಆಹಾರ ಸೇವಿಸದೆ ಇರುವುದರಿಂದ ವಿಕಲಚೇತನ ಮಕ್ಕಳು ಹುಟ್ಟುತ್ತಾರೆ ಆದ್ದರಿಂದ ತಾಯಂದಿರು ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಕರ್ಾರಿ ನೌಕರರ ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ತಾ. ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಬಿ.ಆರ್.ಸಿ. ತಿಮ್ಮರಾಯಪ್ಪ, ಆರೋಗ್ಯ ಇಲಾಖೆಯ ಶ್ರೀನಿವಾಸ್ ಹಾಗೂ ಮಧುಸೂಧನ್ ಉಪಸ್ಥಿತರಿದ್ದರು.
ಬೆಂಗಳೂರಿನ ಸೌಭಾಗ್ಯಮ್ಮರವರು ಕ್ರೀಡೆಯಲ್ಲಿ ಭಾಗವಹಿಸಿದ್ದ ವಿಕಲಚೇತನ ಮಕ್ಕಳಿಗೆ ಬಹುಮಾನ ವಿತರಿಸದರು. ಹಿಮಾಲಯ ಗಾಮರ್ೆಂಟ್ಸ್ ಮಾಲೀಕ ಗೀಸೂಲಾಲ್ ಮಕ್ಕಳಿಗೆ ಬಟ್ಟೆ ವಿತರಿಸಿದರು. ಶಿಕ್ಷಕಿ ಸರ್ವಮಂಗಳ ಪ್ರಾಥರ್ಿಸಿದರು, ದಾದಾಪೀರ್ ಸ್ವಾಗರಿಸಿದರು. ವಿಶ್ವೇಶ್ವರ ನಿರೂಪಿಸಿದರು.


ನಿರಂತರವಾಗಿ ಸಾಯುತ್ತಿರುವ ಕುರಿಗಳು : ಬೇಸೆತ್ತ ಕುರಿಗಾಹಿಗಳು ಕುರಿಗಳನ್ನು ಬಾವಿಗೆ ಎಸೆದ ಪ್ರಸಂಗ 
ಚಿಕ್ಕನಾಯಕನಹಳ್ಳಿ : ಕಳೆದ 20 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುರಿ, ಮೇಕೆಗಳಿಗೆ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ, ಇದರಿಂದ ನಿರಂತರವಾಗಿ ಕುರಿಗಳು ಸಾಯುತ್ತಿದ್ದು ಬೇಸತ್ತ ಕುರಿಗಾಹಿಗಳು ಸತ್ತ ಕುರಿಗಳನ್ನು ಬಾವಿಗೆ ಎಸೆದಿರುವ ಪ್ರಸಂಗ ತಾಲ್ಲೂಕಿನ ದೊಡ್ಡ ಬಾಲದೇವರಹಟ್ಟಿಯಲ್ಲಿ ನಡೆದಿದೆ.  
  ಇತ್ತೀಚೆಗೆ ಬಿದ್ದ ಮಳೆಯಿಂದ ವಾತಾವರಣ ಕೂಡ ಶೀತಮಯವಾದ್ದರಿಂದಾಗಿ ಕುರಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿವೆ. ಕೆಲವು ದಿನಗಳಿಂದ ಕುರಿಗಳಿಗೆ ಜ್ವರದ ಬಾದೆಯ ತೀವ್ರತೆಯಿಂದಾಗಿ ನೀಲಿನಾಲಿಗೆ ರೋಗ, ಗೆಣ್ಣುಹುಣ್ಣು ಕುಂಡುರೋಗ, ಗಂಡಲುಬೇನೆ, ಕರಳುಬೇನೆಯಂತಹ ರೋಗಗಳಿಗೆ ತುತ್ತಾಗಿ ದಿನಂಪ್ರತಿ ಕುರಿಗಳು ಸಾವನ್ನಪ್ಪುತ್ತಿವೆ. 
ಕುರಿ, ಆಡು, ಮೇಕೆ ಸಾಕಾಣಿಕೆ ಪ್ರೋತ್ಸಾಹಿಸುತ್ತಿರುವ ಸಕರ್ಾರ ನುರಿತ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳದೆ ಚಿಕಿತ್ಸೆಗೆ ಬೇಕಾದ ಔಷಧಿ ಪೂರೈಸದೆ ಕುರಿಗಾಹಿಗಳನ್ನು ನಿರ್ಲಕ್ಷಿಸಿ ಕುರಿಗಳ ಮಾರಣ ಹೋಮಕ್ಕೆ ಸಕರ್ಾರ ನೇರಕಾರಣ ಎಂದು ಕುರಿಗಾಹಿಗಳು ಆರೋಪಿಸಿದ್ದಾರೆ. 
ತಾಲ್ಲೂಕಿನ ದೊಡ್ಡ ಬಾಲದೇವರಹಟ್ಟಿ ಗ್ರಾಮದ ಕುರಿಗಾಹಿ ಜಗದೀಶ್ ಹೇಳುವಂತೆ ನಮ್ಮ ಗ್ರಾಮದಲ್ಲಿ 60 ಮನೆಗಳಿದ್ದು ಎಲ್ಲರೂ ಕುರಿಗಾಹಿಗಳಾಗಿದ್ದೇವೆ ನಮ್ಮ ಬದುಕು ನಿರ್ವಹಣೆ ಕುರಿ ಸಾಕಾಣಿಕೆಯಿಂದ ನಡೆಯಬೇಕಿದೆ ಒಂದೊಂದು ಕುಟುಂಬದಲ್ಲಿ 100ರಿಂದ 150 ಕುರಿಗಳಿದ್ದು ಇವುಗಳಿಗೆ ರೋಗ ಕಾಣಿಸಿಕೊಂಡಿದೆ, ಈ ವಿಷಯವನ್ನು ಪಶು ಇಲಾಖೆಯ ಗಮನಕ್ಕೂ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಸೂಕ್ತ ಲಸಿಕೆ ಹಾಕುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕುರಿಗಾಯಿ ಬಸವಯ್ಯ ಮಾತನಾಡಿ ನಮ್ಮ ಕುರಿಗಳನ್ನು ರಕ್ಷಿಸಿಕೊಳ್ಳಲು ಹತ್ತಿರದ ಪಶು ಆಸ್ಪತ್ರೆಗೆ  ಹೋದರೆ ವೈದ್ಯರಿರೋಲ್ಲ ಆಸ್ಪತ್ರೆಯಲ್ಲಿ ಔಷಧಿ ಕೇಳಿದರೂ ಬಂದಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ,  ಹೆಚ್ಚು ಬೆಲೆ ನೀಡಿ ಖಾಸಗಿ ಔಷಧಿ ಅಂಗಡಿಗಳಲ್ಲಿ ಔಷಧಿ ತರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಕುರಿ ಮತ್ತು ಉಣ್ಣೆ ಸಹಕಾರಿ ಸಂಘದ ಅಧ್ಯಕ್ಷ ಹಾಲ್ದೇವರಹಟ್ಟಿ ಗೋವಿಂದಪ್ಪ ಮಾತನಾಡಿ, ಔಷಧಿ ಬಂದಿದ್ದರೂ ಸಕರ್ಾರದ ಮಟ್ಟದಲ್ಲಿ ಸರಬರಾಜು ಆಗುತ್ತಿಲ್ಲ ಸಕರ್ಾರಗಳ ಪರಿಶಿಷ್ಟ ಜಾತಿ ಪಂಗಡದ ವರ್ಗಗಳಿಗೆ ತಾಲ್ಲೂಕಿನಾದ್ಯಾಂತ 1 ಲಕ್ಷದ 60ಸಾವಿರಕ್ಕೂ ಹೆಚ್ಚು ಕುರಿಗಳಿದ್ದು ಅತಿ ಮಳೆಯಿಂದಾಗಿ ಕುರಿ ಮೇಕೆಗೆ ಕಾಲುಬಾಯಿ ಜ್ವರ ತಾಲ್ಲೂಕಿನಾದ್ಯಂತ ಕಾಣಿಸಿಕೊಂಡಿದೆ, ರೋಗ ನಿಯಂತ್ರಣಕ್ಕೆ ಬೇಕಾದ ಔಷಧಿಯನ್ನು ಸರಬರಾಜು ಮಾಡದೇ ಇರುವುದರಿಂದ ಕುರಿಗಳು ನಿರಂತರವಾಗಿ ಸಾವನ್ನಪ್ಪುತ್ತಿವೆ.
ಸಕರ್ಾರ ನೀಲಿ ನಾಲಿಗೆ ರೋಗ ನಿಯಂತ್ರಣಕ್ಕೆ ರಕ್ಷಾ ಬ್ಲೂವ್ಯಾಕ್ಸಿನ ಎಂಬ ಔಷಧಿ ಸರಬರಾಜು ಮಾಡುತ್ತಿಲ್ಲ, ಜಾನುವಾರುಗಳಿಗೆ ಕೆಚ್ಚಲು ಬಾಯಿ ರೋಗ ಬಂದು ಸಾಯುವಂತಾದರೂ ಇದಕ್ಕೂ ಅಗತ್ಯ ಔಷಧಿಗಳನ್ನು ಪೂರೈಸುತ್ತಿಲ್ಲ, ಪಶು ಆಸ್ಪತ್ರೆಗೆ ಔಷಧಿ ಸರಬರಾಜು ಮಾಡುವುದಾಗಲಿ, ವೈದ್ಯರ ನೇಮಿಸುವುದಾಗಲೀ, ಇದಾವುದನ್ನೂ ಮಾಡದೇ ಕುರಿಗಾಹಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ, ಹೀಗಾಗಿ ರೈತರು ನೆಮ್ಮದಿಯ ಜೀವನ ನಡೆಸುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಸ್ಥಳಕ್ಕೆ ಪಶು ಆಸ್ಪತ್ರೆಯ ವಿಸ್ತರಣಾಧಿಕಾರಿ ಡಾ.ಕಾಂತರಾಜು ಭೇಟಿ ನೀಡಿ, ತಾಲ್ಲೂಕಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಮಳೆ ನೀರಿನಿಂದ ನೀರಿನಿಂದ ಕ್ಯೂಲಿಕೈಡ್ ಮಿಡ್ಜಿಸ್ ಎಂಬ ನೊಣ ಉತ್ಪತ್ತಿಯಾಗಿ ನೀರು ಕುಡಿಯುವುದರಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗ, ಗಂಟಲುಬೇನೆ, ಗೆಣ್ಣುಹುಣ್ಣು ಮುಂತಾದ ರೋಗ ಕಾಣಿಸಿಕೊಳ್ಳುತ್ತಿದೆ, ರೋಗಗಳಿಗೆ ಲಸಿಕೆ ಕೊರತೆಯಿಂದಾಗಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ, 10 ತಿಂಗಳಿನಿಂದ ಪಶು ವೈದ್ಯ ಆಸಪತ್ರೆಗೆ ಔಷಧಿ  ಸರಬರಾಜಾಗಿಲ್ಲ, ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು ಏಕಕಾಲದಲ್ಲಿ ತಾಲ್ಲೂಕಿನ ಎಲ್ಲಾ ಕಡೆ ಸಂಚರಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ, ರೈತರು ಕೂಡ ನಮ್ಮೊಂದಿಗೆ ಸಹಕರಿಸಬೇಕು, ಜೋಗು ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುವುದು, ನಿಂತ ನೀರನ್ನು ಕುಡಿಸದಂತೆ ಕುರಿಗಾಯಿಗಳು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

 ರೈತ ಆತ್ಮಹತ್ಯೆ

ಚಿಕ್ಕನಾಯಕನಹಳ್ಳಿ,ಡಿ.03 : ತಾಲ್ಲೂಕಿನ ಪಂಕಜನಹಳ್ಳಿಯಲ್ಲಿ ರೈತ ಮಲ್ಲೇಶ್(33) ಸಾಲ ಭಾದೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಮಲ್ಲೇಶ್ ಜೆ.ಸಿ.ಪರ ಕೆ.ಜಿ.ಬಿ.ಯಲ್ಲಿ 30ಸಾವಿರ ರೂ, ಜೆ.ಸಿ.ಪುರ ವಿ.ಎಸ್.ಎಸ್.ಎನ್ಲ್ಲಿ 15ಸಾವಿರ ಹಾಗೂ ಕೈ ಸಾಲ 75ಸಾವಿರ ಮಾಡಿಕೊಂಡು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


Wednesday, December 2, 2015


ಚಿಕ್ಕನಾಯಕನಹಳ್ಳಿಯನ್ನು ಚಿಕ್ಕನಾಯಕನಗರ ಮಾಡುವ ಬಗ್ಗೆ ಸ್ಪಷ್ಟ ಅಭಿಪ್ರಾಯಕ್ಕೆ ಸಕರ್ಾರದ ಕಂದಾಯ ಇಲಾಖೆಯಿಂದ ಪತ್ರ 
ಚಿಕ್ಕನಾಯಕನಹಳ್ಳಿ, : ಚಿಕ್ಕನಾಯಕನಹಳ್ಳಿಯನ್ನು ಚಿಕ್ಕನಾಯಕನಗರ ಎಂದು ಬದಲಾವಣೆ ಮಾಡುವ ಬಗ್ಗೆ  ಸಕರ್ಾರದ ಪ್ರಧಾನ ಕಾರ್ಯದಶರ್ಿಗಳಿಂದ ತುಮಕೂರು ಜಿಲ್ಲಾಧಿಕಾರಿಗಳವರಿಗೆ ಈ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ನಿಗದಿತ ನಮೂನೆಯಲ್ಲಿ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ಪತ್ರ ಬರೆದಿದೆ ಎಂದು  ಕ.ರ.ವೇ ತಾಲೂಕು ಘಟಕದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.
ಚಿಕ್ಕನಾಯಕನಗರ ಎಂದು ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ತಾಲ್ಲೂಕಿನ ಕನರ್ಾಟಕ ರಕ್ಷಣಾ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ವಿರೋಧ ಪಕ್ಷದ ನಾಯಕರಾದ ಜಗದೀಶ್ಶೆಟ್ಟರ್ರವರಿಗೆ, ಹೆಚ್.ಡಿ.ಕುಮಾರಸ್ವಾಮಿಯವರಿಗೆ, ತುಮಕೂರಿನ ಜಿಲ್ಲಾಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದರು,
 ಸ್ಥಳ ಬದಲಾವಣೆಯ ಬಗ್ಗೆ ಭಾರತ ಸಕರ್ಾರದ ಗೃಹ ಮಂತ್ರಾಲಯ ಮಾರ್ಗಸೂಚಿಯನ್ನು ಹೊರಡಿಸಿದ್ದು ಈ ಮಾರ್ಗಸೂಚಿಗಳನ್ವಯ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯದೊಂದಿಗೆ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಕಂದಾಯ ಇಲಾಖೆಯ ಅಧಿಕಾರಿಗಳು  ತಹಶೀಲ್ದಾರ್ರವರಿಗೆ ಪತ್ರವನ್ನು ಕಳುಹಿಸಿದ್ದಾರೆ. 
ಈ ವಿಚಾರವಾಗಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಾದ ತಾ.ಕನ್ನಡ ಸಾಹಿತ್ಯ ಪರಿಷತ್, ದಲಿತ ಸಂಘರ್ಷ ಸಮಿತಿ, ಕನರ್ಾಟಕ ರಾಜ್ಯ ನೌಕರರ ಸಂಘ ತಾಲ್ಲೂಕು ಘಟಕ, ಸುಭಾಷ್ ಚಂದ್ರಬೋಸ್ ಆಟೋಚಾಲಕರ ಮತ್ತು ಮಾಲೀಕರ ಸಂಘ, ಪತ್ರಕರ್ತರ ಸಂಘ, ರೈತ ಸಂಘ ಹಸಿರು ಸೇನೆ, ವಿವಿಧ ಸಾಹಿತಿಗಳು, ತಾಲ್ಲೂಕು ದಿನಸಿವರ್ತಕರ ಸಂಘ, ಕಾಮರ್ಿಕ ಸಂಘಟನೆ, ಶ್ರೀ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಗಳು ತಮ್ಮಡಿಹಳ್ಳಿ ಮಠ, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘ, ರಸ್ತೆಬದಿ ವ್ಯಾಪಾರಿಗಳ ಸಂಘ, ವಿದ್ಯಾಥರ್ಿ ಸಂಘಟನೆಗಳು, ನೇಕಾರರ ಒಕ್ಕೂಟ, ಕಂಬಳಿ ನೇಕಾರರು, ರೇಷ್ಮೆನೇಕಾರರ ಒಕ್ಕೂಟ, ಸವಿತಾ ಸಮಾಜ, ಕನರ್ಾಟಕ ರಕ್ಷಣಾ ವೇದಿಕೆ, ನಾಡಜಾಗೃತಿ ವೇದಿಕೆ, ಟಿಪ್ಪುಸುಲ್ತಾನ್ ಕಮಿಟಿ ಮುಂತಾದ ಸಂಘ ಸಂಸ್ಥೆಗಳ 2ಸಾವಿರ ಜನರ ಸಹಿಗಳು ಫೆಬ್ರವರಿ 20ರ 2015ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಯಚಂದ್ರರವರು ಹಾಗೂ ಸಂಸದ ಮುದ್ದಹನುಮೇಗೌಡರಿಗೂ ಮನವಿ ಸಲ್ಲಿಸಿದ್ದರು.


ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ,ಡಿ.02 : ತಾಲ್ಲೂಕಿನ ಗೋಡೆಕೆರೆಯ ಗುರುಸಿದ್ದರಾಮೇಶ್ವರಸ್ವಾಮಿ ಕಾತರ್ಿಕ ಮಾಸದ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದೊಂದಿಗೆ ಜಗೋಸಿರಾ ಕಪ್-2015 ರಾಜ್ಯಮಟ್ಟದ ಪುರುಷರ ಖಾಸಗಿ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಡಿ.7ರಿಂದ 9ರವರೆಗೆ ನಡೆಯಲಿದೆ.
ಗೋಡೆಕೆರೆಯ ತಪೋವನದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ 40ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 25ಸಾವಿರ ಹಾಗೂ ಟ್ರೋಪಿ, ಸೆಮಿಫೈನಲ್ನಲ್ಲಿ ಪರಾಜಿತ ತಂಡಗಳಿಗೆ ತಲಾ 10ಸಾವಿರ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ಇದೆ ಎಂದು ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮ ಡಿ.7ರಂದು ಬೆಳಗ್ಗೆ 7.30ಕ್ಕೆ ಉದ್ಘಾಟನೆ ನೆರವೇರಲಿದ್ದು ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ಹಾಗೂ ಸಿದ್ದರಾಮದೇಶೀಕೇಂದ್ರಸ್ವಾಮಿಗಳು ದಿವ್ಯ ಸಾನಿದ್ಯ ವಹಿಸುವರು. ಮಾಜಿ ಸಂಸದ ಜಿ.ಎಸ್.ಬಸವರಾಜು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಗೋಡೆಕೆರೆಯ ಎಲ್.ಬಿ.ಎಸ್.ಸಿ ಗೌರವಾಧ್ಯಕ್ಷ ಎನ್.ಆರ್.ಆದರ್ಶಕುಮಾರ್ರವರಿಂದ ಆಶಯ ನುಡಿ. ನಿವೃತ್ತ ಐ.ಎ.ಎಸ್.ಅಧಿಕಾರಿ ಡಾ.ಸಿ.ಸೋಮಶೇಖರ್, ಮಾಜಿ ಶಾಸಕಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ..ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ್, ಎ.ಬಿ.ರಮೇಶ್ಕುಮಾರ್, ತುಮಕೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಸುರೇಶ್ ಹಳೆಮನೆ ಮತ್ತಿತರರು ಭಾಗವಹಿಸುವರು.
ಡಿ.8ರಂದು ಸಂಜೆ 7.30ಕ್ಕೆ ಸಮಾರಂಭ ನಡೆಯಲಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಧ್ಯಕ್ಷತೆ ವಹಿಸುವರು. ತು.ಜಿ.ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ, ಟೂಡಾ ಅಧ್ಯಕ್ಷ ಶಿವಮೂತರ್ಿ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ದ್ರಾಕ್ಷಾಯಿಣಿ ಕೆಂಪರಾಜು ಹಾಗೂ ಚಲನಚಿತ್ರ ಹಾಸ್ಯ ನಟ ಚಿಕ್ಕಣ್ಣ ಮತ್ತಿತರರು ಭಾಗವಹಿಸುವರು.
ಡಿ.9ರಂದು ನಡೆಯುವ ಸಮಾರೋಪ ಸಮಾರಂಭ ರಾತ್ರಿ 9ಕ್ಕೆ ಆರಂಭವಾಗಲಿದೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಜೆ.ಡಿ.ಎಸ್ ಮುಖಂಡ ಬಿ.ಎಂ.ಎಲ್ ಕಾಂತರಾಜು, ಜೆಡಿಎಸ್ ಜಿ.ಪ್ರ.ಕಾರ್ಯದಶರ್ಿ ಜಿ.ನಾರಾಯಣ್ ಬಹುಮಾನ ವಿತರಿಸುವರು. ಮುಖಂಡರುಗಳಾದ ಕಲ್ಲೇಶ್, ಹನುಮಂತೇಗೌಡ, ಶ್ರೀಕಾಂತ್, ಬಿ.ಎನ್.ಶಿವಪ್ರಕಾಶ್, ವಿ.ಜಯರಾಂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ  ಕಬಡ್ಡಿ ತಂಡಗಳು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.


                                   
ಚಿಕ್ಕನಾಯಕನಹಳ್ಳಿ ಪಟ್ಟಣದ ರೋಟರಿ ಶಾಲೆ ವತಿಯಿಂದ ಸಕರ್ಾರಿ ಉದರ್ು ಶಾಲೆ ಹಾಗೂ ನೀರಬಾಗಿಲು ಶಾಲೆಯ ವಿದ್ಯಾಥರ್ಿಗಳಿಗೆ ಉಚಿತ ಪುಸ್ತಕ, ಪೆನ್ನು ಜಾಮಿಟ್ರಿ ಬಾಕ್ಸ್ ವಿತರಿಸಲಾಯಿತು. ರೋಟರಿ ಟ್ರಸ್ಟ್ನ  ನಿದರ್ೇಶಕ ಚಾಂದ್ಪಾಷ, ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಕೆ.ಮಂಜುನಾಥ್, ಶಿಕ್ಷಕರಾದ ಅಪ್ರೋಜಾ, ರಿಜ್ವಾನ್ ಉಪಸ್ಥಿತರಿದ್ದರು.


ರಾಜ್ಯಮಟ್ಟದ ಇನ್ಸ್ಪೈರ್ ಅವಾಡರ್್ಗೆ ತಾಲ್ಲೂಕಿನ ಬರಕನಾಳು ವಿದ್ಯಾಥರ್ಿ ದರ್ಶನ್ಕುಮಾರ್
ಚಿಕ್ಕನಾಯಕನಹಳ್ಳಿ,: ರಾಜ್ಯ ಮಟ್ಟದ ಇನ್ಸ್ಪೈರ್ ಅವಾಡರ್್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಬರಕನಾಳು ಗ್ರಾಮದ  ಶ್ರೀ ವಿಶ್ವಭಾರತಿ ಪ್ರೌಢಶಾಲೆಯ ವಿದ್ಯಾಥರ್ಿ ದರ್ಶನ್ಕುಮಾರ್ ಕೆ.ಆರ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ   ಬಿ.ಇ.ಓ.ಕೃಷ್ಣಮೂತರ್ಿ ವಿದ್ಯಾಥರ್ಿಯನ್ನು ಅಭಿನಂದಿಸಿದ್ದಾರೆ.
ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ನಡೆಸಿದ ಈ ಸ್ಪಧರ್ೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದು,  10ನೇ ತರಗತಿ ಓದುತ್ತಿರುವ ದರ್ಶನ್ಕುಮಾರ್ ಡೆಲ್ಲಿಯಲ್ಲಿ ನಡೆಯುವ ಸ್ಪಧರ್ೆಯಲ್ಲಿ ಭಾಗವಹಿಸಲಿದ್ದಾನೆ.
ಈತ ತಯಾರಿಸಿರುವ ಬಹು ಉಪಯೋಗಿ ಕೃಷಿ ಯಂತ್ರ(ರೈತ ಮಿತ್ರ) ಎಂಬ ಸಲಕರಣೆಯು ಐದು ಯಂತ್ರಗಳು ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡಲಿದ್ದು, ಈ ಯಂತ್ರವು  ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ಮೆಚ್ಚುಗೆ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.  ಈ ಯಂತ್ರವು ಹೈಡ್ರಾಲಿಕ್ ತತ್ವದ ಆಧಾರದ ಮೇಲೆ ಕೆಲಸ ನಿರ್ವಹಿಸಲಿದ್ದು, ಪ್ಯಾಸ್ಕಲ್ ನಿಯಮದ ತತ್ವವನ್ನು ಹೊಂದಿದೆ.
ಈ ಯಂತ್ರದಿಂದ ಹೊಲಗಳಲ್ಲಿ ಗೊಬ್ಬರ ಚೆಲ್ಲುವುದು, ಉಳುಮೆ ಮಾಡುವುದು, ಹುಲ್ಲನ್ನು ಕತ್ತರಿಸುವುದು, ಗುಂಡಿ ತೋಡುವುದು, ಔಷಧಿ ಸಿಂಪಡಣೆ ಮಾಡುವುದು. ಈ ಐದು ಕೆಲಸಗಳನ್ನು ಈ ಒಂದು ಯಂತ್ರವೇ  ನಿರ್ವಹಿಸುವುದರಿಂದ ಕೂಲಿ ಕಾಮರ್ಿಕರ ಬಳಕೆಯನ್ನು ಕಡಿಮೆ ಮಾಡಬಹುದು, ಕಾಮರ್ಿಕರ ಕೊರತೆಯನ್ನು ನಿವಾರಣೆ ಮಾಡುವುದು ಹಾಗೂ ಆಥರ್ಿಕ ತೊಂದರೆಯನ್ನು ನಿವಾರಣೆ ಮಾಡಲು ಇದೊಂದು ಒಳ್ಳೆಯ ಸಾಧನವಾಗಿದೆ. ಈ ವಿದ್ಯಾಥರ್ಿಗೆ ಶಿಕ್ಷಕ ಉಮೇಶ್ ಕೆ.ಎಂ. ಮಾರ್ಗದರ್ಶನ ಮಾಡಿದ್ದಾರೆ. ವಿದ್ಯಾಥರ್ಿಯನ್ನು ಶಾಲೆಯ ಮುಖ್ಯೋಪಾಧ್ಯಾಯ ಅನಂತರಾಜು ಅಭಿನಂದಿಸಿದ್ದಾರೆ. 

 

Monday, November 30, 2015


ಪಟ್ಟಣದಲ್ಲಿ ಕಂಬಳಿ ಸಮುದಾಯ ಭವನ ಶೀಘ್ರ ಆರಂಭ 
ಚಿಕ್ಕನಾಯಕನಹಳ್ಳಿ,ನ.30 : ಪಟ್ಟಣದಲ್ಲಿ ಕಂಬಳಿ ಭವನ ನಿಮರ್ಿಸಲು ಸಕರ್ಾರ ಹಣ ಬಿಡುಗಡೆ ಮಾಡಿದ್ದು ಶೀಘ್ರವೇ ಪಟ್ಟಣದಲ್ಲಿ ಕಂಬಳಿ ಸಮುದಾಯ ಭವನ ನಿಮರ್ಾಣವಾಗಲಿದೆ ಎಂದು ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟಗಾರರ ಸೊಸೈಟಿಯ ನಿದರ್ೇಶಕ ಸಿ.ಡಿ.ಚಂದ್ರಶೇಖರ್ ತಿಳಿಸಿದರು. 
ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟಗಾರರ ಸೊಸೈಟಿಯಲ್ಲಿ ನಡೆದ ಅರ್ಹ ನೇಕಾರರಿಗೆ ಕುಂಚಿಗೆ ವಿತರಣಾ ಸಮಾರಂಭ, ಸನ್ಮಾನ ಕಾರ್ಯಕ್ರಮ ಹಾಗೂ ಕನಕದಾಸರ ಜಯಂತ್ಯೋತ್ಸವದ ಉದ್ಘಾಟನೆ ನೆರವೇರಿಸಿ  ಮಾತನಾಡಿದ ಅವರು ಕಂಬಳಿ ಸೊಸೈಟಿಗೆ ಅಗತ್ಯವಾಗಿರುವ ಕಟ್ಟಡ ನಿಮರ್ಿಸಲು ಸಕರ್ಾರಕ್ಕೆ ಸೊಸೈಟಿಯ ಅಧ್ಯಕ್ಷರು ಹಾಗೂ ನಿದರ್ೇಶಕರುಗಳು ಮನವಿ ಸಲ್ಲಿಸಿದ್ದು ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸಮುದಾಯ ಭವನ ನೀಡಿದ್ದಾರೆ ಹಾಗೂ ಸೊಸೈಟಿಗಾಗಿ ಬುಲೆರೋ ಕಾರು ವಾಹನವನ್ನು ನೀಡಿದ್ದಾರೆ, ಸಮುದಾಯ ಭವನಕ್ಕೆ ಹಣ ಬಿಡುಗಡೆಯಾಗಿದ್ದು ಭವನ ನಿಮರ್ಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ, ನಿಮರ್ಾಣವಾಗುವ ಕಂಬಳಿ ಭವನದಲ್ಲಿ ಕಂಬಳಿ ತಯಾರಿಕೆಗೆ ನೆರವಾಗುವ ಸೌಕರ್ಯಗಳನ್ನು ಇರಿಸಲಾಗುವುದು, ನೇಕಾರರಿಗೆ ಅನುಕೂಲವಾಗುವಂತೆ ಕಟ್ಟಡ ನಿಮರ್ಾಣವಾಗುವುದು ಎಂದರಲ್ಲದೆ  2009ರಲ್ಲಿ ಕಂಬಳಿ ಸೊಸೈಟಿಗೆ ಇದೇ ತಂಡದ ಸದಸ್ಯರು ಆಯ್ಕೆಯಾದ ಸಂದರ್ಭ ಅಧ್ಯಕ್ಷರಾಗಿದ್ದಾಗ 16300 ರೂ ಹಣ ಶೇಖರಣೆಯಾಗಿದ್ದು ಸೊಸೈಟಿಯ ಎಲ್ಲರ ಉತ್ತಮ ಕಾರ್ಯದಿಂದ ಇಂದು 12.50ಲಕ್ಷ ಹಣ ಉಳಿತಾಯವಾಗಿದೆ  ಎಂದ ಅವರು ಸಕರ್ಾರ ಕಂಬಳಿ ನೇಕಾರರ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು. 
ಕಂಬಳಿ ಸೊಸೈಟಿ ಅಧ್ಯಕ್ಷ ಕೆ.ಪಿ.ಧೃವಕುಮಾರ್ ಮಾತನಾಡಿ, ಕಂಬಳಿ ನೇಕಾರರಿಗೆ ವಿವಿಧ ರೀತಿಯ ಅಲಂಕಾರಿಕೆಯ ಕಂಬಳಿ ತಯಾರಿಸುವ ಬಗ್ಗೆ ತರಬೇತಿ ಅಗತ್ಯವಾಗಿದ್ದು, ಅಲಂಕಾರಿಕಾ ಕಂಬಳಿಗಳಿಗೆ ಉತ್ತಮ ಬೆಲೆ ಸಿಗಲಿದೆ, ಕಂಬಳಿ ನೇಕಾರರು ತಾವು ತಯಾರಿಸಿದ ಕಂಬಳಿಗಳನ್ನು ಮಾರಾಟ ಮಾಡಲು ಕಂಬಳಿ ಸೊಸೈಟಿಗೆ ತಂದು ಮಾರಾಟ ಮಾಡಿದರೆ ನೇಕಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಇದರಿಂದ ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಬಹುದು ಎಂದರಲ್ಲದೆ ಕಂಬಳಿ ಸೊಸೈಟಿಗೆ ನಿಮರ್ಾಣವಾಗುವ ನೂತನ ಕಟ್ಟಡ ಶೀಘ್ರವೇ ಪ್ರಾರಂಭವಾಗುವುದು ಎಂದ ಅವರು ನೇಕಾರರಿಗೆ ಈಗ ಉಚಿತವಾಗಿ ಕುಂಚಿಗೆ ನೀಡಿದ್ದು ಇನ್ನು ಮುಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಕುಂಚಿಗೆ, ಭಂಡ, ಹುಣಸೆಹಿಟ್ಟು ಹಾಗೂ ಕಂಬಳಿ ತಯಾರಿಕೆಗೆ ಅವಶ್ಯವಿರುವ ವಸ್ತುಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಸಿ.ಬಿ.ಲೋಕೇಶ್, ನೇಕಾರರ ಮಕ್ಕಳು ತುಂಬ ಕಡುಬಡವರಾಗಿದ್ದಾರೆ ತಮ್ಮ ಜೀವನ ರೂಪಿಸಿಕೊಳ್ಳಲು ಇಂದು ಗುಳೇ ಹೋಗುತ್ತಿದ್ದಾರೆ ಅದನ್ನು ತಡೆಗಟ್ಟಲು ನೇಕಾರರಿಗೆ ಹಾಗೂ ಅವರ ಮಕ್ಕಳಿಗೆ ಸಕರ್ಾರದಿಂದ ಸಿಗುವಂತಹ ಸೌಲಭ್ಯವನ್ನು ನಿದರ್ೇಶಕರುಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ ನೇಕಾರರಿಗೆ ಸೌಲಭ್ಯ ದೊರಕಿಸಿಕೊಡಬೇಕು ಇದರಿಂದ ನೇಕಾರರ ಮಕ್ಕಳು ವಿದ್ಯಾಭ್ಯಾಸದತ್ತ ಗಮನ ಹರಿಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಂಬಳಿ ಸೊಸೈಟಿ ಉಪಾಧ್ಯಕ್ಷ ಶಶಿಧರ್, ನಿದರ್ೇಶಕರುಗಳಾದ ಭಾರತಮ್ಮ, ಸಿ.ಹೆಚ್.ಅಳವೀರಯ್, ಗೋವಿಂದಯ್ಯ, ವಿಜಯ್ಕುಮಾರ್, ಸಿ.ಜಿ.ಬೀರಲಿಂಗಯ್ಯ, ಸಿ.ಪಿ.ಗಂಗಾಧರಯ್ಯ, ಪಂಕಜಮ್ಮ, ಕಾರ್ಯದಶರ್ಿ ಎ.ಕೋದಂಡರಾಮಯ್ಯ , ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಜಯದೇವ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ಶೀಷರ್ಿಕೆ : 

ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭದ ಮುನ್ಸೂಚನೆ 
ಚಿಕ್ಕನಾಯಕನಹಳ್ಳಿ,ನ.30 : ಕಳೆದ 3 ದಿನಗಳಿಂದ ಮಳೆ ಬಿಡುವು ಕೊಟಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು, ತಾಲ್ಲೂಕಿನಾಧ್ಯಂತ ಕೊಯ್ಲು ಭರದಿಂದ ಸಾಗಿತ್ತು, ತಾಲ್ಲೂಕಿನಲ್ಲಿ ಶೇ.40 ಭಾಗ ಬೆಲೆ ಕಟಾವು ಕಾರ್ಯ ಮುಗಿದಿದೆ ಮತ್ತೆ ಮೋಡಗಳು ನೆಳ್ಳಂಜಿ ಆಟ ಶುರುಮಾಡಿದ್ದು ರೈತರನ್ನು ಕಂಗೆಡಿಸಿದೆ.
    ಈಗಾಗಲೆ ಕೊಯ್ಲು ಮಾಡಿರುವ ಸಾವೆಯನ್ನು ರಸ್ತೆ ಮೇಲೆ ಹರಡಿ ಅಚ್ಚುಕಟ್ಟು ಮಾಡುತ್ತಿದ್ದ ದೃಶ್ಯ ವ್ಯಾಪಕವಾಗಿ ಕಂಡುಬಂತು. ಕೊಯ್ಲಾಗಿರುವ ರಾಗಿಯನ್ನು ಹೊಲಗಳಲ್ಲೇ ಗುಪ್ಪೆ ಹಾಕುತ್ತಿದ್ದ ದೃಶ್ಯ ಕೆಲವೆಡೆ ಕಂಡುಬಂತು. ಕಟಾವು ಮುಂದುವರೆಸುವುದೋ ಬೇಡವೋ ಎಂಬ ಗೊಂದಲದಲ್ಲೇ ಕೆಲವರು ರಾಗಿ ಕಟಾವಿಗೆ ಮುಂದಾದರು.
  ತೋಯ್ದು ಹಾಳಾಗಿದ್ದ ನವಣೆ ಸಿವುಡುಗಳನ್ನು ಟಾಪರ್ಾಲಿನ್ ಹರಡಿ ಒಣಗಿಸುತ್ತಿದ್ದ, ಹೊಸಹಟ್ಟಿ ಶಿವಣ್ಣ ಮಾತನಾಡಿ, ಬೆಳೆ ಚನ್ನಾಗಿ ಬಂದಿತ್ತು ಸೈಕ್ಲೋನ್ ಬಂದು ಎಲ್ಲಾ ಹಾಳು ಮಾಡಿತು, ಹೇಗೋ  ಬಿಡ್ತು ಅಂದ್ಕೊಳೋ ಹೊತ್ಗೆ ಮತ್ತೆ ಮೊಡಗಳು ಊದ್ಕಂಡ್ ಬತರ್ಿದಾವೆ. ಈಗಾಗ್ಲೆ ನವಣೆ ನೆಂದು ತೆನೆ ಕಪ್ಪು ಗಟ್ಟಿವೆ. ಎಲ್ಲಿ ಮೊಳಕೆ ಬಂದ್ ಬಿಡುತ್ತೋ ಅನ್ನೋ ಭಯದಿಂದ ದಿನಾಲೂ ಒಣಗುಸ್ಥಿದೀನಿ. ಮತ್ತೆ ಮಳೆ ಶುರುವಾದ್ರೆ ದೇವರೇ ಗತಿ ಎಂದರು.
  ರೈತ ಮಹಿಳೆ ತಿಮ್ಮಕ್ಕ ಮಾತನಾಡಿ, ಬೆಳಗ್ಗಿನಿಂದ ಮಳೆ ಮೋಡ ಕಾಣಿಸ್ಕಂತಿದಾವೆ, ಕಾನ್ಕೆರೆಯಿಂದ ಆಳುಗಳನ್ನ ಕರೆತಂದಿದ್ದೀವಿ. ಈಗ ಕೊಯ್ಲು ಮಾಡುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಕೊಯ್ದರೆ ರಾಗಿ ಮಳೆಗೆ ನೆನೆಯುತ್ತದೆ. ಬಿಟ್ಟರೆ ಬಂದ ಆಳುಗಳಿಗೆ ಪುಗುಸಟ್ಟೆ ಕೂಲಿ ಕೊಡಬೇಕು. 2 ದಿನಗಳಿಂದ ಕೊಯ್ಲು ಮಾಡಿದ್ದೀವಿ. ಮಳೆ ಬಂದರೆ ಎಲ್ಲಾ ಹಾಳು. ಎರಡು ಎಕರೆ ರಾಗಿ ಬೆಳೆಯಲು, ಉಳುಮೆ, ಅತರ್ೆ, ಗೊಬ್ಬರ ಅಂತ ರೂ.6 ಸಾವಿರ ಕಚರ್ಾಗೈತೆ. ಮಳೆ ಬರವು ನೀಡಿದ್ದರೆ 8-10ಪಲ್ಲ ರಾಗಿ ಆಗಿರುತ್ತಿತ್ತು, ಮಳೆಯಿಂದ ಎಲ್ಲಾ ಹಾಳು ಎಂದು ನಿಟ್ಟುಸಿರು ಬಿಟ್ಟರು.
  ರೈತ ದಾಸಪ್ಪ ಮಾತನಾಡಿ, ಈಗಾಗಲೇ ಸಾವೆ, ನವಣೆ, ಕೊರಲೆ  ಮಳೆಗೆ ಹಾಳಾಗಿವೆ. ಮೊದಲ ಹಂತದಲ್ಲಿ ಬಿತ್ತನೆಯಾಗಿರುವ ರಾಗಿಯೂ ತೆನೆಯಲ್ಲಿ ಮೊಳಕೆಯೊಡೆದಿದೆ. ಎರಡನೇ ಹಂತದಲ್ಲಿ ಬಿತ್ತನೆಯಾಗಿರುವ  ರಾಗಿಯಾದರೂ  ಕೈ ಸೇರಬಹುದು ಎಂಬ ಆಸೆಯಿಂದ ಜನ ಕೊಯ್ಲು ಶುರು ಮಾಡಿದ್ದಾರೆ. ಮತ್ತೆ ಮಳೆ ಬಂದರೆ ಎಲ್ಲಾ ಮುಗಿಯಿತು ಎಂದು ಆಕಾಶ ದಿಟ್ಟಿಸಿದರು.
 ಅಜರ್ಿ ಸಲ್ಲಿಸಿ: ಮತ್ತೆ ಮುಂದಿನ 4 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳುತ್ತಿದೆ. ಆದ್ದರಿಂದ ರೈತರು ನೋಡಿಕೊಂಡು ಕಟಾವು ಮಾಡಬೇಕು. ಮತ್ತೆ ಮಳೆ ಬಂದರೆ ಸಂಪೂರ್ಣ ಬೆಲೆ ಹಾನಿ ಸಂಭವಿಸುತ್ತದೆ. ಬೆಳೆ ಹಾನಿಯ ಬಗ್ಗೆ  ಪ್ರತ್ಯೇಕ ಸಮೀಕ್ಷೆ ಮಾಡಲು ಇಲಾಖೆಗೆ ಅಧಿಕಾರ ಇಲ್ಲ. ಆದ್ದರಿಂದ ಬೆಳೆ ಹಾನಿ ಬಗ್ಗೆ ರೈತರಿಂದ ಮನವಿ ಸ್ವೀಕರಿಸಲಾಗುತ್ತಿದೆ. ರೈತರು ಹಾಳಾಗಿರುವ ಬೆಳೆ ತಾಕಿನ ಫೋಟೋ, ಪಹಣಿ ಹಾಗೂ ಬ್ಯಾಂಕ್ ಅಕೌಂಟ್ ಛಾಯಾ ಪ್ರತಿಯೊಂದಿಗೆ ಕಛೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ಹಾನಿ ಪರಿಹಾರಕ್ಕಾಗಿ ಮನವಿ ಸಲ್ಲಿಸಬಹುದು ಎಂದು ತಾಲ್ಲೂಕು ಕೃಷಿ ಇಲಾಖೆ ಉಪನಿದರ್ೇಶಕ ಎಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ. 

:ಶ್ರಮ ಸಂಸ್ಕೃತಿಯ ಭಾಗವಾಗಿ ರಚನೆಯಾಗಿರುವ ಕನಕ ಕೀರ್ತನೆಗಳು ಸಾರ್ವಕಾಲಿಕ
ಚಿಕ್ಕನಯಕನಹಳ್ಳಿ,ನ.30 : :ಶ್ರಮ ಸಂಸ್ಕೃತಿಯ ಭಾಗವಾಗಿ ರಚನೆಯಾಗಿರುವ ಕನಕ ಕೀರ್ತನೆಗಳು ಸಾರ್ವಕಾಲಿಕ, ಅವು ದೈವೀ ನಿವೇಧನೆಯಂತೆ ಕಂಡರೂ ಸಮಾಜದ ಪಿಡುಗನ್ನು ಸರಿಮಾಡುವ ಚಿಕಿತ್ಸಕ ಮನೋಧೋರಣೆ ಹೊಂದಿರುವಂಥವು ಎಂದು ಉಪನ್ಯಾಸಕ ಸಿ.ರವಿಕುಮಾರ್ ಹೇಳಿದರು.
  ಪಟ್ಟಣದ ಸುಭಾಸ್ಚಂದ್ರಬೋಸ್ ಆಟೋ ಚಾಲಕ ಹಾಗೂ ಮಾಲೀಕರ ಸಂಘ ಮತ್ತು ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ 'ಕನಕನ ತಾತ್ವಿಕ ಚಿಂತನೆ' ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕನ ಚಿಂತನೆಗಳು ಸರ್ವಕಾಲಕ್ಕೂ ಸಲ್ಲುವಂಥವು ಎಂದರು.
   ಕಸಾಪ ಜಿಲ್ಲಾ ಸಂಚಾಲಕ ಸಿ.ಗುರುಮೂತರ್ಿ ಕೊಟ್ಟಿಗೆಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಸಂಘಟಿತ ಸಮುದಾಯಗಳ ಪ್ರತಿನಿಧಿಯಾಗಿರುವ ಕನಕನ ಚಿಂತನೆಗಳು ತಳ ಸಮುದಾಯಗಳಿಗೆ ಆಸರೆಯಾಗಬಲ್ಲವು. ಕನಕದಾಸರ ಒಡಪು ಹಾಗೂ ಮಂಡಿಗೆಗಳ ಮೇಲೆ ಬೆಳಕು ಚಲ್ಲುವ ಸಂಶೋಧನೆಗಳು ನಡೆಯಬೇಕಿದೆ ಎಂದರು.
   ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ,ವರ್ಗ ಹಾಗೂ ಜಾತಿ ಸಂಘರ್ಷಗಳನ್ನು ಮೆಟ್ಟಿನಿಂತು ಸಮ ಸಮಾಜ ನಿಮರ್ಾಣಕ್ಕೆ ದುಡಿದವರ ದೊಡ್ಡ ಪರಂಪರೆ ಬುದ್ಧನಿಂದ ಆರಂಭಗೊಂಡು ಬಸವಣ್ಣ, ಕನಕದಾಸ ಹಾಗೂ ಅಂಬೇಡ್ಕರ್ ಹೀಗೆ ಸಾಗಿಬರುತ್ತದೆ ಎಂದರು. 
   ಆಟೋಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಸಂಗೋಳ್ಳಿ ರಾಯಣ್ಣ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿದ್ಧು.ಜಿ.ಕೆರೆ ಮುಂತಾದವರು ಉಪಸ್ಥಿತರಿದ್ದರು.


ಗೋಡೆಕೆರೆಯಲ್ಲಿ ಡಿ.8ರಂದು ಲಕ್ಷ ದೀಪೋತ್ಸವ
ಚಿಕ್ಕನಾಯಕನಹಳ್ಳಿ,ನ.30 : ತಾಲ್ಲೂಕಿನ ಗೋಡೆಕೆರೆಯ ಸಿದ್ದರಾಮೇಶ್ವರ ದೇವಾಲಯದಲ್ಲಿ ಕಾತರ್ಿಕ ಮಾಸದ ಅಂಗವಾಗಿ ಡಿ.8ರಂದು ಬೆಳಗಿನ 5.30ಕ್ಕೆ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಕೈಂಕರ್ಯ ಸೇವಾ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಲಕ್ಷದೀಪೋತ್ಸವದ ಅಂಗವಾಗಿ ಡಿ. 7ರಂದು ರಾತ್ರಿ 8.ಕ್ಕೆ ಅನ್ನದಾಸೋಹ ನಡೆಯಲಿದೆ. ಡಿ.8ರಂದು ಲಕ್ಷದೀಪೋತ್ಸವ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 7.30ಕ್ಕೆ ಶ್ರೀ ಬಸವಲಿಂಗಪ್ರಭು ಸಭಾ ಭವನದಲ್ಲಿ ಬೆಂಗಳೂರಿನ ಶಿವಶಂಕರಶಾಸ್ತ್ರಿಗಳು ಮತ್ತು ಸಂಗಡಿಗರಿಂದ ಭಕ್ತಿಪ್ರಧಾನವಾದ ಶಿಶುನಾಳ ಷರೀಫರ ತತ್ವಪದಗಳನ್ನು ಏರ್ಪಡಿಸಲಾಗಿದೆ.


Friday, November 27, 2015



ಮತ್ತೆ ಗುಂಡಿಬಿದ್ದ ಚಿಕ್ಕನಾಯಕನಹಳ್ಳಿ ರಸ್ತೆಗಳು

ಚಿಕ್ಕನಾಯಕನಹಳ್ಳಿ,ನ.26 : ಪಟ್ಟಣದ ಮೂಲಕ ಹಾದು ಹೋಗಿರುವ ಚಾಮರಾಜನಗರ-ಜೇವಗರ್ಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು ಪ್ರತೀ ದಿನ ಅಪಘಾತಗಳು ಸಂಭವಿಸುತ್ತಿವೆ.
ಗುರುವಾರ ಸರಕು ತುಂಬಿದ್ದ ಎರಡು ಲಾರಿಗಳು ಗುಂಡಿ ತಪ್ಪಿಸಲು ಹೋಗಿ ಒಂದು ಲಾರಿ ಮಗುಚಿ ಬಿದಿದ್ದು, ಇನ್ನೊಂದು ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಕೊಲ್ಲಾಪುರದಿಂದ ಕೇರಳಕ್ಕೆ ಸ್ಪಿರಿಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ತಾಲ್ಲೂಕಿನ ಮಾಳಿಗೆಹಳ್ಳಿ ಬಳಿ ಮಗುಚಿ ಬಿದ್ದಿದೆ.ಶ್ಯಾವಿಗೆಹಳ್ಳಿ ಬಳಿ ಲಾರಿಯೊಂದು ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಪಕ್ಕದ ಮರಕ್ಕೆ  ಢಿಕ್ಕಿ ಹೊಡೆದಿದೆ.
   ತಾಲ್ಲೂಕಿನ ಗಡಿ ಕೆ.ಬಿ.ಕ್ರಾಸ್ನಿಂದ ಹುಳಿಯಾರು  ವರೆಗಿನ  35 ಕಿಮಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆಯಲ್ಲಿ ಗುಂಡಿಗಳಿವೆಯೇ ಅಥವಾ ಗುಂಡಿಗಳಲ್ಲಿ ರಸ್ತೆಯಿದೆಯೇ ಎಂಬ ಅನುಮಾನ ಪ್ರಯಾಣಿಕರಲ್ಲಿದೆ. ದ್ವಿಚಕ್ರ ಹಾಗೂ ತ್ರಿಚಕ್ರ, ಕಾರು ಹಾಗೂ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.  ಗುಂಡಿಗಳ ಜೊತೆಯಲ್ಲಿ ರಸ್ತೆಯಲ್ಲಿರುವ ಉಬ್ಬು ಮತ್ತು ತಗ್ಗುಗಳಿಂದಲೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
  ತಾಲ್ಲೂಕಿನ ಹಾಲಗೊಣ, ಜೆ.ಸಿ.ಪುರ, ಗೋಡೆಕೆರೆ ಗೇಟ್, ತರಬೇನಹಳ್ಳಿ, ಕಾಡೇನಹಳ್ಳಿ, ಚಿಕ್ಕನಾಯಕನಹಳ್ಳಿ, ಮಾಳಿಗೆಹಳ್ಳಿ, ಶ್ಯಾವಿಗೆಹಳ್ಳಿ, ಎನ್ಆರ್ ಫ್ಯಾಕ್ಟರಿ, ಅವಳಗೆರೆ, ಚಿಕ್ಕಬಿದರೆ, ದೊಡ್ಡಬಿದರೆ, ಪೋಚಕಟ್ಟೆ, ಬಳ್ಳೇಕಟ್ಟೆ ಹುಳಿಯಾರ್ ಹೀಗೆ ಹತ್ತಾರುಕಡೆ ಅರ್ಧ ಅಡಿಯಿಂದ ಒಂದು ಅಡಿಯವರೆಗೂ ಗುಂಡಿಗಳು ಬಿದ್ದಿದ್ದು ಸರಣಿ ಅಪಘಾತಗಳು ಸಂಭವಿಸುತ್ತಿವೆ.
    ಪಟ್ಟಣ ವ್ಯಾಪ್ತಿಯ ತಾಲ್ಲೂಕು ಕಛೇರಿ, ಸಕರ್ಾರಿ ಆಸ್ಪತ್ರೆ, ಕೋಟರ್್, ಲೋಕೋಪಯೋಗಿ ಇಲಾಖೆ ಕಛೇರಿ ಮುಂಭಾಗ,ಜೋಗಿಹಳ್ಳೀ ಗೇಟ್,ತಾಲ್ಲೂಕು ಪಂಚಾಯ್ತಿ, ಪ್ರವಾಸಿ ಮಂದಿರ, ಶೆಟ್ಟಿಕೆರೆ ಗೇಟ್, ಎಂ.ಎಚ್.ಪಿ.ಎಸ್ ಶಾಲೆ ಮುಂಭಾಗ, ಕೆಎಸ್ಆರ್ಟಿಸಿ ನಿಲ್ದಾಣದ ಮುಂಭಾಗ, ನೆಹರು ಸರ್ಕಲ್, ಹುಳಿಯಾರ್ ಗೇಟ್ ಬಳಿ ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದಿದ್ದು ಪ್ರಯಾಣಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಳೆದ ವರ್ಷವೂ ಇದೇ ರೀತಿ ಈ ಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದದ್ದು ರಾಷ್ಟ್ರೀಯ ಹೆದ್ದಾರಿ 150(ಎ) ಇಲಾಖೆ ರಸ್ತೆಗೆ ನಾಮಕಾವಸ್ತೆ ತೇಪೆ ಹಾಕಿ ಕೈ ಚೆಲ್ಲಿ ಕುಳಿತಿರುತ್ತದೆ. 
    20 ದಿನಗಳ ಹಿಂದಷ್ಟೇ ರೂ. 9 ಲಕ್ಷ ವ್ಯಚ್ಚದಲ್ಲಿ ರಸ್ತೆ ರಿಪೇರಿ ಕಾರ್ಯ ನಡೆದಿದೆ.ದುರಸ್ತಿ ಕಾರ್ಯ ಕಳಪೆ ಗುಣಮಟ್ಟದಿಂದಾಗಿ ಕಿತ್ತು ಹೋಗಿದೆ. ದುರಸ್ತಿಯಾದ 3 ದಿನಕ್ಕೆ ಗುಂಡಿ ಮುಚ್ಚಲು ಹಾಕಿದ್ದ ಡಾಂಬಾರ್ ಹಾಗೂ ಜೆಲ್ಲಿಕಲ್ಲುಗಳು ಕಿತ್ತು ಹೋಗಲು ಪ್ರಾರಂಭವಾಯಿತು.15 ದಿನಗಳ ಕಾಲ ಸತತವಾಗಿ ಸುರಿದ ಜಡಿಮಳೆಗೆ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿದ್ದು ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದರು.






ಬಾಲ್ಯದಿಂದಲೇ ಮಕ್ಕಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ : ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ :  ಬಾಲ್ಯದಿಂದಲೇ ಮಕ್ಕಳು  ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವೈಜ್ಞಾನಿಕ ಪ್ರಜ್ಞೆ ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಿಂದ ಗುರುವಾರ ಹೊರಟ ತಾಲ್ಲೂಕಿನ ಬಾಲ ವಿಜ್ಞಾನಿಗಳ ತಂಡಗಳಿಗೆ ಶುಭಕೋರಿ ಮಾತನಾಡಿದರು. ತಾಲ್ಲೂಕಿನಿಂದ ಮಕ್ಕಳ 6 ತಂಡಗಳು ಜಿಲ್ಲಾ ಮಟ್ಟದಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದರು.   ನ. 27ರಿಂದ ಬೆಳಗಾಂ ಜಿಲ್ಲೆಯ ಗೋಕಾಕ್ದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಾವೇಶಕ್ಕೆ ತಾಲೂಕಿನ ಬಾಲವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಈ ತಂಡದಲ್ಲಿ 6 ಮಾರ್ಗದಶರ್ಿ ಶಿಕ್ಷಕರು  ಜೊತೆಯಲ್ಲಿ 30 ಬಾಲ ವಿಜ್ಞಾನಿಗಳು ತೆರಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿನಿಯರು ಮಂಡಿಸಿದ ಕಷಾಯದ ಉಪಯುಕ್ತತೆಗಳು, ಕುಪ್ಪೂರು ಶಾಲೆಯ ವಿದ್ಯಾಥರ್ಿಗಳು ಸಿದ್ದಪಡಿಸಿರುವ ಅಡವಿ ಸೊಪ್ಪಿನ ಮೇಲಿನ ಪ್ರಬಂಧ, ಹೆಸರಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳು ಸಿದ್ದಪಡಿಸಿರುವ ಚಂಡು ಹೂವಿನ ಮಹಾತ್ಮೆ ಕುರಿತ ಪ್ರಬಂಧ ನವೋದಯ ಶಾಲೆಯ ಮಕ್ಕಳು ಸಿದ್ದಪಡಿಸಿರುವ ತೆಂಗಿನ ಎಣ್ಣೆ ಮಹತ್ವ ಕುರಿತ ಪ್ರಬಂಧಗಳು ತುಮಕೂರಿನಲ್ಲಿ ನಡೆದ 23ನೇ  ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದವು, ಈ ಸಂದರ್ಭದಲ್ಲಿ  ತಾಲ್ಲೂಕು ವಿಜ್ಞಾನ  ಪರಿಷತ್ ಕಾರ್ಯದಶರ್ಿ ಈಶ್ವರಪ್ಪ, ಮಾರ್ಗದಶರ್ಿ ಶಿಕ್ಷಕರಾದ ಕೆ.ಎಸ್.ನಾಗರಾಜ್, ವಿಶ್ವೇಶ್ವರಯ್ಯ, ರಮೇಶ್, ಕೃಷ್ಣಮೂತರ್ಿ, ಭಾರತಿ, ದಿವ್ಯ ಮುಂತಾದವರು ಉಪಸ್ಥಿತರಿದ್ದರು.


ಕನಕ ಜಯಂತಿಗೆ ತಾಲ್ಲೂಕು ಆಡಳಿತ ತಯಾರಿ
ಚಿಕ್ಕನಾಯಕನಹಳ್ಳಿ,ನ.26 : ತಾಲ್ಲೂಕು ಆಡಳಿತ ಕನಕ ಯುವಕ ಸಂಘ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀಕನಕದಾಸರ ಜಯಂತೋತ್ಸವ ಸಮಾರಂಭ ನವಂಬರ್28 ರಂದು ಶನಿವಾರ ಮದ್ಯಾಹ್ನ 12.30ಕ್ಕೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿದೆ.
 ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ.ಅಧ್ಯಕ್ಷೆ ಜಯಲಕ್ಷ್ಮಮ್ಮ ಉದ್ಘಾಟಿಸುವರು. ಪುರಸಭಾ ಅಧ್ಯಕ್ಷೆ ಪ್ರೇಮದೇವರಾಜ್ ಕನಕದಾಸರ ಭಾವಚಿತ್ರ ಅನಾವರಣಗೊಳಿಸುವರು. ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ  ಸಂಶೋಧಕ ಡಾ.ರಾಮಲಿಂಗಪ್ಪ ಟಿ.ಬೇಗೂರು ಕನಕದಾಸರ ಕುರಿತು ಉಪನ್ಯಾಸ ನೀಡುವರು. ದಾಸ್ಕೆರೆ ಭಾಗವತ ರಂಗಪ್ಪ. ಹೊಯ್ಸಲಕಟ್ಟೆ ಸಾಮಾಜ ಸೇವಕ ರಾಮದಾಸಪ್ಪ, ಯಾದವ ಸಮಾಜದ ಅಧ್ಯಕ್ಷ ಶಿವಣ್ಣ, ಸಿ.ಕೆ.ಘನಸಾಬ್, ಕಂಬಳಿ ನೇಕಾರ ರಾಮಯ್ಯ, ಯಳನಡು ಪ್ರಗತಿಪರ ರೈತ ಮಹಿಳೆ ಸಿದ್ದರಾಮಕ್ಕ, ಸಿದ್ದರಾಮಯ್ಯ ಉಂಡಾಡಯ್ಯನವರ, ರಾಜಣ್ಣ ಪುರಿಭಟ್ಟಿ, ಪರಮೇಶ್ವರಯ್ಯ, ನಂದಿಹಳ್ಳಿ ಶಿವಣ್ಣ, ಹಂದನಕೆರೆ ಅನಂತಯ್ಯನವರನ್ನು  ಸನ್ಮಾನಿಸಲಾಗುವುದು.
ಕನಕ ದಾಸರ ಭಾವಚಿತ್ರವಿರುವ ಮೆರವಣಿಗೆಯನ್ನು ತಹಶೀಲ್ದಾರ್ ಗಂಗೇಶ್ ಉದ್ಘಾಟಸಲಿದ್ದು, ಉತ್ಸವದಲ್ಲಿ ಸ್ಥಳೀಯ ಜಾನಪದ ಕಲಾತಂಡಗಳೊಂದಿಗೆ ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸುವ ಪುರಷರ ಡೊಳ್ಳು ಕುಣಿತ, ಪಟ್ಟದ ಕುಣಿತ, ಮಹಿಳಾ ಡೊಳ್ಳು ಕುಣಿತ, ಗೊರವರ ಕುಣಿತ, ಮಹಿಳಾ ವೀರಗಾಸೆ, ನಾಸಿಕ್ ಡೋಲು, ಭಕ್ತ ಕನಕದಾಸರ ವೇಷಗಾರಿಕೆ, ಕನಕನ ಕಿಂಡಿ ದೃಶ್ಯಾವಳಿ, ಸಂಗೊಳ್ಳಿ ರಾಯಣ್ಣ ಸ್ಥಬ್ದಚಿತ್ರ, ಕವಿರತ್ನ ಕಾಳಿದಾಸ ಸ್ಥಬ್ದಚಿತ್ರ, ಪಾಳೇಗಾರರ ವೇಷ, ಕಂಬಳಿ ನೇಕಾರಿಕೆಯ ದೃಶ್ಯಾವಳಿಗಳು ಸೇರಿದಂತೆ ಇನ್ನೂ ಹಲವು ತಂಡಗಳು ಭಾಗವಹಿಲಿವೆ. 
ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ.ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ. ತಾ.ಪಂ. ಉಪಾಧ್ಯಕ್ಷ ಎ.ನಿರಂಜನಮೂತರ್ಿ. ಪುರಸಭಾ ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ. ಜಿ.ಪಂ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ. ಲೋಹಿತಬಾಯಿ. ಹೆಚ್.ಬಿ ಪಂಚಾಕ್ಷರಯ್ಯ. ಎನ್.ಜಿ.ಮಂಜುಳ. ನಿಂಗಮ್ಮ. ಮಾಜಿ ಶಾಸಕರಾದ ಬಿ.ಲಕ್ಕಪ್ಪ. ಜೆ.ಸಿ ಮಾಧುಸ್ವಾಮಿ. ಕೆ.ಎಸ್.ಕಿರಣ್ಕುಮಾರ್. ರಾಜ್ಯ ಸಕರ್ಾರ ನೌಕರರ ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ. ಕನಕ ಯುವಕ ಸಂಘದ ಅಧ್ಯಕ್ಷ ವಿಜಯಕುಮಾರ್ ಮತ್ತಿತ್ತರರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.




    
   




Friday, June 12, 2015


ತಾಲ್ಲೂಕಿನ 28 ಗ್ರಾಮ ಪಂಚಾಯತ್ಗಳ  ಅಧ್ಯಕ್ಷ, ಉಪಾಧ್ಯಕ್ಷರುಗಳ ಮೀಸಲಾತಿ ವಿವರಗಳು
ಚಿಕ್ಕನಾಯಕನಹಳ್ಳಿ,ಜೂ.12 : ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷಗಳ ಸ್ಥಾನಗಳಿಗೆ  ಮೀಸಲಾತಿಯನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ಲಾಟರಿ ಮೂಲಕ ನಿಗಧಿಪಡಿಸಿದರು.
ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ನಡೆದ ಪ್ರಕ್ರಿಯೆಯಲ್ಲಿ 28 ಗ್ರಾ.ಪಂ.ಗಳ ಎಲ್ಲಾ ಸದಸ್ಯರು ಭಾಗವಹಿಸಿದ್ದು,  ಸಕರ್ಾರ ನಿಗಧಿಪಡಿಸಿದ್ದ ಮೀಸಲು ಪಟ್ಟಿ ಪ್ರಕಟಗೊಳಿಸಿದ  ಜಿಲ್ಲಾಧಿಕಾರಿಗಳು, ಮಾತನಾಡಿ, ಪಂಚಾಯತ್ ರಾಜ್ ಅಧಿನಿಯಮ 1993ರ ಚುನಾವಣೆ ನಂತರ ಮೊದಲ ಮೀಸಲಾತಿ ಪ್ರಕಟಗೊಂಡಿದ್ದು ಅಲ್ಲಿಂದ 2000, 2002, 2005, 2007, 2010, 2012ನ ಸಾಲಿನ ನಿಗದಿತ ಮೀಸಲಾತಿ ಪರಿಗಣಿಸಿ ಅಂದರೆ ಈ ಹಿಂದೆ ಮೀಸಲಾತಿ ದೊರೆತ ಕ್ಯಾಟಗರಿಯನ್ನು ಬಿಟ್ಟು ಅಧ್ಯಕ್ಷ, ಉಪಾಧ್ಯಕ್ಷ ಗಳಿಗೆ ಜಾತಿವಾರು ಮೀಸಲಾತಿ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ನೇತೃತ್ವದಲ್ಲಿ ಎಡಿಸಿ ಡಾ.ಅನುರಾಧ ಘೋಷಿಸಿದರು. ತಹಶೀಲ್ದಾರ್ ಕಾಮಾಕ್ಷಮ್ಮ, ವಿಜಯ್ರಾಜ್, ಅಧಿಕಾರಿಗಳಾದ ಅಡಪದ್ ಮತ್ತು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಸೂಡಿ, ಬರಗೂರು, ಗಾಣದಾಳು ಹೊಯ್ಳಳಕಟ್ಟೆ, ತೀರ್ಥಪುರ, ಹೊನ್ನೆಬಾಗಿ, ಶೆಟ್ಟಿಕೆರೆ ಈ ಭಾಗಗಳಲ್ಲಿ ಮೀಸಲಾತಿ ಪಟ್ಟಿಯಲ್ಲಿ ಅಭ್ಯಥರ್ಿಗಳು ಬದಲಿಸುವಂತೆ ಹಾಗೂ ಮಹಿಳಾ ಮೀಸಲಾತಿಗೆ ಬದಲಾಗಿ ಸಾಮಾನ್ಯರಿಗೆ ಆದ್ಯತೆ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಅಹವಾಲು ಸಲ್ಲಿಸಿದರು, ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಸಕರ್ಾರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಶೇ.50ರಷ್ಟು ಮೀಸಲಾತಿ ಕಾಯ್ದಿರಿಸಿದ್ದು  ಈ ಉದ್ದೇಶದ ಅನುಸಾರವಾಗಿ ಹಲವು ಜಾತಿಗಳ ಅನುಗುಣವಾಗಿ ಮಾನದಂಡಗಳನ್ನು ಇಟ್ಟುಕೊಂಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು. 

ತಾಲ್ಲೂಕಿನ 28 ಗ್ರಾಮ ಪಂಚಾಯತ್ಗಳ ಮೀಸಲಾತಿ ವಿವರಗಳು
ಕ್ರ.ಸಂ ಗ್ರಾಮ ಪಂಚಾಯಿತಿ ಹೆಸರು ಅಧ್ಯಕ್ಷ ಮೀಸಲಾತಿ ಉಪಾಧ್ಯಕ್ಷ ಮೀಸಲಾತಿ
1                    ದಸೂಡಿ ಪರಿಶಿಷ್ಠ ಜಾತಿ(ಮಹಿಳೆ)                    ಸಾಮಾನ್ಯ
2                 ಹೊಯ್ಸಳಕಟ್ಟೆ            ಸಾಮಾನ್ಯ(ಮಹಿಳೆ)        ಪರಿಶಿಷ್ಠ ಜಾತಿ(ಮಹಿಳೆ)
3                  ಗಾಣದಾಳು ಪರಿಶಿಷ್ಠ ಜಾತಿ(ಮಹಿಳೆ)            ಸಾಮಾನ್ಯ
4                     ಕೆಂಕೆರೆ          ಹಿಂದುಳಿದ ವರ್ಗ ಬ(ಮಹಿಳೆ)            ಸಾಮಾನ್ಯ
5                    ಹುಳಿಯಾರು      ಸಾಮಾನ್ಯ(ಮಹಿಳೆ)                   ಪರಿಶಿಷ್ಠ ಜಾತಿ
6                     ಯಳನಡು             ಸಾಮಾನ್ಯ                     ಸಾಮಾನ್ಯ(ಮಹಿಳೆ)
7                     ಕೋರಗೆರೆ             ಸಾಮಾನ್ಯ                    ಪರಿಶಿಷ್ಠಪಂಗಡ(ಮಹಿಳೆ)
8                    ದೊಡ್ಡ ಎಣ್ಣೆಗೆರೆ       ಸಾಮಾನ್ಯ (ಮಹಿಳೆ)              ಪರಿಶಿಷ್ಠ ಜಾತಿ
9                  ಹಂದನಕೆರೆ      ಪರಿಶಿಷ್ಠ ಜಾತಿ        ಹಿಂದುಳಿದ ವರ್ಗ ಅ (ಮಹಿಳೆ)
10                 ಚೌಳಕಟ್ಟೆ              ಸಾಮಾನ್ಯ                ಪರಿಶಿಷ್ಠ ಪಂಗಡ (ಮಹಿಳೆ)
11                 ತಿಮ್ಲಾಪುರ              ಸಾಮಾನ್ಯ                  ಹಿಂದುಳಿದ ವರ್ಗ ಅ
12                 ದೊಡ್ಡಬಿದರೆ ಸಾಮಾನ್ಯ (ಮಹಿಳೆ)              ಸಾಮಾನ್ಯ
13               ಬರಕನಾಳು           ಪರಿಶಿಷ್ಠ ಜಾತಿ               ಸಾಮಾನ್ಯ (ಮಹಿಳೆ)
14              ಘಮ್ಮನಹಳ್ಳಿ               ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ (ಮಹಿಳೆ)
15               ರಾಮನಹಳ್ಳಿ                ಪರಿಶಿಷ್ಠ ಜಾತಿ (ಮಹಿಳೆ)      ಸಾಮಾನ್ಯ
16                  ಕಂದಿಕೆರೆ              ಸಾಮಾನ್ಯ (ಮಹಿಳೆ)        ಪರಿಶಿಷ್ಠ ಜಾತಿ
17                 ಬೆಳಗುಲಿ              ಹಿಂದುಳಿದ ವರ್ಗ ಅ           ಸಾಮಾನ್ಯ (ಮಹಿಳೆ)
18              ಬರಗೂರು                    ಸಾಮಾನ್ಯ                  ಸಾಮಾನ್ಯ(ಮಹಿಳೆ)
19               ಮತಿಘಟ್ಟ                ಹಿಂದುಳಿದ ವರ್ಗ ಅ           ಸಾಮಾನ್ಯ (ಮಹಿಳೆ)
20              ಮಲ್ಲಿಗೆರೆ          ಹಿಂದುಳಿದ ವರ್ಗ ಅ (ಮಹಿಳೆ)             ಸಾಮಾನ್ಯ
21             ಕುಪ್ಪೂರು                ಸಾಮಾನ್ಯ                         ಹಿಂದುಳಿದ ವರ್ಗ ಅ
22               ಶೆಟ್ಟಿಕೆರೆ           ಪರಿಶಿಷ್ಠ ಪಂಗಡ                 ಹಿಂದುಳಿದ ವರ್ಗ ಬ (ಮಹಿಳೆ)
23             ದುಗಡಿಹಳ್ಳಿ       ಹಿಂದುಳಿದ ವರ್ಗ ಅ(ಮಹಿಳೆ)          ಪರಿಶಿಷ್ಠ ಪಂಗಡ
24          ಮುದ್ದೇನಹಳ್ಳಿ             ಸಾಮಾನ್ಯ                    ಪರಿಶಿಷ್ಠ ಜಾತಿ (ಮಹಿಳೆ)
25       ಹೊನ್ನೆಬಾಗಿ                   ಪರಿಶಿಷ್ಠ ಪಂಗಡ (ಮಹಿಳೆ)              ಸಾಮಾನ್ಯ
26        ತೀರ್ಥಪುರ                      ಸಾಮಾನ್ಯ                         ಸಾಮಾನ್ಯ  (ಮಹಿಳೆ)
27 ಗೋಡೆಕೆರೆ                         ಪರಿಶಿಷ್ಠ ಪಂಗಡ (ಮಹಿಳೆ)                   ಸಾಮಾನ್ಯ
28 ಜೆ.ಸಿ.ಪುರ                               ಪರಿಶಿಷ್ಠ ಜಾತಿ                      ಹಿಂದುಳಿದ ವರ್ಗ ಅ (ಮಹಿಳೆ)

ಚಿತ್ರ ಶೀಷರ್ಿಕೆ
12ಚಿಕ್ಕನಾಯಕನಹಳ್ಳಿ ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ, ಎಡಿಸಿ ಡಾ.ಅನುರಾಧ ಘೋಷಿಸಿದರು. ತಹಶೀಲ್ದಾರ್ ಕಾಮಾಕ್ಷಮ್ಮ, ವಿಜಯ್ರಾಜ್, ಅಧಿಕಾರಿಗಳಾದ ಅಡಪದ್ ಮತ್ತು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ,ಜು.12 : ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ 5 ವರ್ಷಗಳ ಅವಧಿಗೆ ಮೀಸಲು ಪಟ್ಟಿ ಪ್ರಕಟಗೊಂಡಿದ್ದು ಇವುಗಳಲ್ಲಿ ಕೆಲವು ಅವಿರೋಧವಾಗಿ ಆಯ್ಕೆಯಾಗುವಂತಹ ಲಕ್ಷಣಗಳು ಕಂಡುಬಂದಿದೆ.
  ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ ಹೊರತು ಪಡಿಸಿದರೆ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ,  ಹಿಂದುಳಿದ ವರ್ಗ ಅ ಮತ್ತು ಬ ಇವುಗಳಲ್ಲಿ ಮೀಸಲು ಪಟ್ಟಿಯಲ್ಲಿ ಕೆಲವು ಪಂಚಾಯಿತಿಗಳಲ್ಲಿ ಮೀಸಲಿರುವ ಅಭ್ಯಥರ್ಿಗಳು ಒಂದಕ್ಕಿಂತ ಹೆಚ್ಚಿಲ್ಲದ ಕಡೆ ಅವಿರೋಧವಾಗಿ ಆಯ್ಕೆಯಾಗುವ ಸಂಭವನೀಯತೆ ಇದೆ. 
ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಅನುಸೂಚಿತ ಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಈ ಕ್ಷೇತ್ರದಲ್ಲಿ ಶೆಟ್ಟಿಕೆರೆ ಬ್ಲಾಕ್ 1ರಲ್ಲಿ ಬಿ ನಾಗಮಣಿ ಬಿಟ್ಟರೆ ಈ ಪಂಗಡಲ್ಲಿ ಯಾರೊಬ್ಬರೂ ಇಲ್ಲದ ಕಾರಣ ಅವರ ಆಯ್ಕೆ ಖಚಿತವಾಗಿದೆ.
ಗೋಡೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಎಸ್.ಟಿ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಸೋಮನಹಳ್ಳಿ ಬ್ಲಾಕಿನ ದ್ರಾಕ್ಷಾಯಿಣಿ ಎಂಬುವವರು ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಇವರ ಆಯ್ಕೆ ಖಚಿತವಾಗಿದೆ.
  ಕೆಂಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗ ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಗೌಡಗೆರೆ ಬ್ಲಾಕಿನ ಜಯಮ್ಮ ಎಂಬುವವರು ಈ ವರ್ಗಕ್ಕೆ ಸೇರಿದ ಏಕೈಕ ಮಹಿಳೆಯಾಗಿದ್ದು ಸಾಮಾನ್ಯ ಮಹಿಳೆ ಸ್ಥಾನದಲ್ಲಿ ಅಭ್ಯಥರ್ಿಗಳು ಈ ವರ್ಗಕ್ಕೆ ಸೇರಿದ್ದರೆ ಮಾತ್ರ ಸ್ಪಧರ್ೆ ಸಂಭವಿಸುತ್ತದೆ ಇಲ್ಲದೆ ಹೋದಲ್ಲಿ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಕೋರಗೆರೆ ಪಂಚಾಯ್ತಿ ಪರಿಶಿಷ್ಠ ಪಂಗಡದ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಿದ್ದು ಈ ಪಂಚಾಯ್ತಿಯಲ್ಲಿ ಭಟ್ಟರಳ್ಳಿ ಬ್ಲಾಕಿನ ಗೀತಮ್ಮ ಎಂಬುವವರು ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿದ್ದು ಇವರಿಗೆ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ.
ಚೌಳಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರಿಶಿಷ್ಠ ಪಂಗಡ ಮಹಿಳೆಗೆ ಉಪಾಧ್ಯಕ್ಷ ಸ್ಥಾನ  ಮೀಸಲಿದ್ದು ಈ ಕ್ಷೇತ್ರದ ಅಧಿಕೃತ ಅಭ್ಯಥರ್ಿಯಾಗಿ ಎಸ್.ಕಾಂತಲಕ್ಷ್ಮಿಯವರು ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದರು ಉಪಾಧ್ಯಕ್ಷ ಸ್ಥಾನ ಕೂಡ ಅವರಿಗೆ ಅದೃಷ್ಠ ಲಕ್ಷ್ಮೀಯಾಗಿ ಒಲಿಯಲಿದ್ದಾಳೆ. ಈ ಕ್ಷೇತ್ರದಲ್ಲಿ ಸಾಮಾನ್ಯ ಮಹಿಳೆ ನಾಲ್ಕು ಸದಸ್ಯರಿದ್ದು ಈ ನಾಲ್ವರಲ್ಲಿ  ಪರಿಶಿಷ್ಠ ಪಂಗಡದವರು ಸೇರಿದ್ದರೆ ಮಾತ್ರ ಚುನಾವಣೆ ಸಂಭವಿಸಲಿದೆ.
ಮತಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗ ಎ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಈ ವರ್ಗದಿಂದ ಮಾದಾಪುರ ಬ್ಲಾಕಿನ ವಿಮಲ ಏಕೈಕ ಅಭ್ಯಥರ್ಿಯಾಗಿದ್ದು  ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಇಬ್ಬರು ಮಹಿಳೆಯರು ಇರುವ ಕಾರಣ ಈ ವರ್ಗಕ್ಕೆ ಸೇರಿದ್ದರೆ ಮಾತ್ರ ಚುನಾವಣೆ ನಡೆಯಲಿದೆ.
ದುಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗ ಅ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು ಕಾರೆಹಳ್ಳಿ ಬ್ಲಾಕ್ನ ವಿಜಯಮ್ಮ ಈ ವರ್ಗಕ್ಕೆ ಸೇರಿದವರಾಗಿದ್ದು ಸಾಮಾನ್ಯ ಕ್ಷೇತ್ರದಿಂದ ಹಿಂದುಳಿದ ವರ್ಗ ಎ ವರ್ಗಕ್ಕೆ ಸೇರಿದ ಮಹಿಳೆಯರಿದ್ದರೆ ಮಾತ್ರ ಚುನಾವಣೆ ನಡೆಯಲಿದ್ದು ಉಪಾಧ್ಯಕ್ಷ ಸ್ಥಾನ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಿರುವ ಕಾರಣ ಗೌಡನಹಳ್ಳಿ ಕ್ಷೇತ್ರದ ಪಾರ್ವತಮ್ಮ ಮೀಸಲಾತಿ ಹೊಂದಿರುವ ಕಾರಣ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಹೊನ್ನೆಬಾಗಿ ಗ್ರಾಮ ಪಂಚಾಯಿತಿ ಪರಿಶಿಷ್ಠ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿರುವ ಕಾರಣ ಈ ವರ್ಗದ ಬಾವನಹಳ್ಳಿ ಕ್ಷೇತ್ರದಿಂದ ಲೋಕಮ್ಮ ಈ ಪಂಚಾಯಿತಿಯಲ್ಲಿ ಮೀಸಲಾತಿ ಹೊಂದಿರುವ ಏಕೈಕ ಸದಸ್ಯರಾಗಿರುವುದರಿಂದ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಒಟ್ಟಾರೆ ಈ ಮೀಸಲು ನಿಗಧಿ ಪಡಿಸಿದ ಆಧಾರದ ಮೇಲೆ ಸಾಮಾನ್ಯ ಸ್ಥಾನದಲ್ಲಿ ಸಂಬಂಧಿಸಿದ ಜಾತಿಗೆ ಸೇರಿದವರು ಇಲ್ಲದಿದ್ದರೆ,  ಇವರ ಆಯ್ಕೆ ಅವಿರೋಧವಾಗಲಿದ್ದು ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಡಿವಿಪಿ ಶಾಲೆಯ ಮುಂಭಾಗ ಧರಣಿ 



ಚಿಕ್ಕನಾಯಕನಹಳ್ಳಿ,ಜೂ.12 : ಡಿವಿಪಿ ಶಾಲೆಯಲ್ಲಿ ಓದುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಹೇಳಿದ್ದಲ್ಲದೆ ಅವರ ಆಹಾರ ಪದ್ದತಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದರಿಂದ ಆಕ್ರೋಶಗೊಂಡ ಸಮುದಾಯದ ವಿದ್ಯಾಥರ್ಿಗಳು ಹಾಗೂ ಪೋಷಕರು  ಡಿವಿಪಿ ಶಾಲೆ ಮುಂಭಾಗ ಕೆಲಕಾಲ ಧರಣಿ ನಡೆಸಿದರು.
ಪಟ್ಟಣದ ಡಿವಿಪಿ ಶಾಲೆಯಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ಮಕ್ಕಳು ಓದಿನ ಕಡೆ ಹೆಚ್ಚು ಗಮನ ನೀಡುವುದಿಲ್ಲ, ಶಾಲೆಗೆ ನಿತ್ಯ ಹಾಜರಾಗುವುದಿಲ್ಲ ಇದರಿಂದ ನಮ್ಮ ಶಾಲೆಯ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುತ್ತದೆ ನೀವು ಬೇರೆ ಶಾಲೆಗೆ ಟಿ.ಸಿ.ತೆಗೆದುಕೊಂಡು ಹೋಗಿ ಎಂದು ಹೇಳಿದ್ದಲ್ಲದೆ, ಅವರ ಆಹಾರ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಿದ ಮು.ಶಿ.ಹಾಗೂ ಶಿಕ್ಷಕರೊಬ್ಬರ ಮೇಲೆ ಪೋಷಕರು ಹರಿಹಾಯ್ದರು. 
ಕೆಲ ಕಾಲ ಶಾಲೆಯ ಮುಂದೆ ಷಾಮಿಯಾನ ಹಾಕಿ ಪ್ರತಿಭಟಿಸಿದ ಘಟನೆಯೂ ನಡೆಯಿತು, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಬರುವವರೆಗೆ ಕದಲುವುದಿಲ್ಲವೆಂದು ಕುಳಿತಿದ್ದರು, ಸ್ಥಳಕ್ಕೆ ಬಂದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಬಿ.ಸುರೇಶ್ಬಾಬು ಪೋಷಕರನ್ನು ಸಮಾಧಾನ ಪಡಿಸಿದ್ದಲ್ಲದೆ, ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆದರು.
ಶಿಕ್ಷಕರಿಗೆ ನೋಟೀಸ್:  ಪೋಷಕರ ದೂರಿನ ಮೇರೆಗೆ ಸಂಬಂಧಿಸಿದ ಇಬ್ಬರು ಶಿಕ್ಷಕರಿಗೆ ಆಡಳಿತ ಮಂಡಳಿ ನೋಟೀಸ್ ನೀಡಲಾಗಿದೆ. ಎಂದು ತಿಳಿದು ಬಂದಿದೆ.