Tuesday, January 12, 2016

ಸಾಹಿತ್ಯ ಪರಿಷತ್ ಕೆಲಸ ಮಾಡಲು ಪೂಣರ್ಾವಧಿ ಕಾರ್ಯಕರ್ತರಾಗಿರಬೇಕು

ಚಿಕ್ಕನಾಯಕನಹಳ್ಳಿ,ಜ.11 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಮಾಡಲು ಪೂರ್ಣವಧಿ ಕಾರ್ಯಕರ್ತರಾಗಿದ್ದರೆ ಮಾತ್ರ ಸಾಧ್ಯ ಎಂದು ಜಿಲ್ಲಾ ಕಸಾಪ ಆಕಾಂಕ್ಷಿ ಅಭ್ಯಥರ್ಿ ಮೇಜರ್ ಡಿ.ಚಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಗಳಿದ್ದು ಉಳಿದ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಪಾವಗಡ, ಗುಬ್ಬಿ, ಕೊರಟಗೆರೆಯಲ್ಲಿ  ಕನ್ನಡ ಸಾಹಿತ್ಯ ಭವನಗಳಾಗಬೇಕಾಗಿದೆ ಈ ಬಗ್ಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕಟ್ಟಡ ನಿಮರ್ಿಸಲು ಶ್ರಮಿಸುವುದಾಗಿ ತಿಳಿಸಿದರು.
 ವರ್ಷಕ್ಕೊಮ್ಮೆ ಜಿಲ್ಲಾ ಕೇಂದ್ರದಲ್ಲಿ ಪುಸ್ತಕ ಮೇಳ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಿರಿಯ ಸಾಹಿತಿಗಳ, ಕಲಾವಿದರ, ಸಮಾಜ ಸುಧಾರಕರ, ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಮುಖಿ ಮುಖ್ಯ ಚಿಂತಕರ, ಕಲೆ, ಕ್ರೀಡೆ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾಧನೆ ಮಾಡಿರುವವರ ಕಿರು ಹೊತ್ತಿಗೆಯನ್ನು ಹೊರತರಲಾಗುವು ಎಂದರು.
 ಜಿಲ್ಲಾ ಕ.ಸ.ಪ ಚಟುವಟಿಕೆಗಳನ್ನು ಅಜೀವ ಸದಸ್ಯರಿಗೆ ತಲುಪಿಸಲು ಕಲ್ಪತರು ಕನ್ನಡ ನುಡಿ ತ್ರೈಮಾಸಿಕ ಪತ್ರಿಕೆಯನ್ನು ಹೊರತರುವ ಪ್ರಯತ್ನ ಕಸಾಪ ಚುನಾವಣೆಯ ನಂತರ ಮಾಡಲಿದ್ದೇವೆ,  1970ರಿಂದಲೂ ಅಧ್ಯಕ್ಷರ ಮನೆಗಳೇ ಸಾಹಿತ್ಯ ಪರಿಷತ್ತಿನ ಕಛೇರಿಗಳಾಗಿದ್ದವು, ನಮ್ಮ ಅವಧಿಯಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಡಾ|| ಸಿ. ಸೋಮಶೇಖರ್ರವರ ಹೃದಯಸ್ಪಶರ್ಿ ಸಾಹಿತ್ಯಾಭೀಮಾನದಿಂದ ಜಿಲ್ಲಾಡಳಿತದ ಮಿನಿ ವಿಧಾನಸೌಧದ 2ನೇ ಮಹಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ತಿನ ಕಛೇರಿಗೆ ಕೊಠಡಿ ನೀಡಿದ್ದು ಒಂದು ಐತಿಹಾಸಿಕ ಸಂಗತಿಯಾಗಿದೆ ಎಂದರು.
ಗುಬ್ಬಿ ಮಾಜಿ ಕಸಾಪ ಅಧ್ಯಕ್ಷ ಸಿ.ಚಂದ್ರಯ್ಯ ಮಾತನಾಡಿ, ಕನ್ನಡಕ್ಕೆ ಸಕರ್ಾರದಿಂದ ಹೆಚ್ಚು ಪ್ರೋತ್ಸಾಹ ಸಿಗುತ್ತಿಲ್ಲ ಆದ್ದರಿಂದ ಕನ್ನಡ ಸಂಘಗಳು ಹಾಗೂ ಕಸಾಪ ಕನ್ನಡ ಉಳಿವಿಗಾಗಿ ಹೋರಾಡಲಿದೆ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಪದಾಧಿಕಾರಿಗಳು ಹಾರತುರಾಯಿಗಳಿಗೆ ಸೀಮಿತವಾಗಿರುವುದು ವಿಷಾಧದ ಸಂಗತಿ ಎಂದರು.
ನಿವೃತ್ತ ಪ್ರಾಧ್ಯಪಕ ಸಿದ್ದಲಿಂಗಪ್ಪ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಹಣದ ಪ್ರಭಾವ ಇರಬಾರದು, 2ಸಾವಿರದಷ್ಟು ಇತಿಹಾಸವಿರುವ ಕನ್ನಡ ಭಾಷೆ ಅಳಿವಿನ ಅಂಚಿಗೆ ಬಂದಿದೆ ಆದ್ದರಿಂದ ನಾವೆಲ್ಲರೂ ಕನ್ನಡ ಉಳಿಸಿ ಬೆಳೆಸಬೇಕು ಈ ಬಗ್ಗೆ ಪ್ರಾಮಾಣಿಕವಾಗಿ ಪರಿಷತ್ತಿನ ಮೂಲಕ ಹೋರಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುಬ್ಬಿ ರೋಟರಿ ಮಾಜಿ ಅಧ್ಯಕ್ಷ ರಾಜಣ್ಣ, ನಿವೃತ್ತ ಪ್ರೌಢಶಾಲಾ ಶಿಕ್ಷಕ ಲಿಂಗಪ್ಪ, ಪ್ರಕಾಶ್ ಉಪಸ್ಥಿತರಿದ್ದರು.
ಸ್ಥಳೀಯ ಜನರ ಅಭಿಪ್ರಾಯದಂತೆ ಜಿ.ಪಂ, ತಾ.ಪಂ. ಟಿಕೆಟ್ ಹಂಚಿಕೆ
ಚಿಕ್ಕನಾಯಕನಹಳ್ಳಿ,ಜ.11 : ಸದಾನಂದಗೌಡರು, ಯಡಿಯೂರಪ್ಪನವರಿಂದ ಪೋನ್ ಮಾಡಿಸಿದರೆ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವುದಿಲ್ಲ,  ಆಕಾಂಕ್ಷಿಗಳ ಬಗ್ಗೆ ಆಯಾ ಕ್ಷೇತ್ರಗಳಲ್ಲಿನ ಸ್ಥಳೀಯ ಜನರ ಬಳಿ ಚಚರ್ಿಸಿ ಅವರ ಅಭಿಪ್ರಾಯದಂತೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು. 
ಪಟ್ಟಣದ ಹೊರವಲಯದ ದಬ್ಬೆಘಟ್ಟದ ಮರುಳಸಿದ್ದೇಶ್ವರ ಪ್ರಾರ್ಥನಾ ಮಂದಿರದಲ್ಲಿ ನಡೆದ  ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  ಈ ಬಾರಿಯ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪಧರ್ಿಸಲು ಅಭ್ಯಥರ್ಿಗಳ ಪೈಪೋಟಿ ಇದೆ, ಆದ್ದರಿಂದ ಸ್ಥಳೀಯರ ಅಭಿಪ್ರಾಯ ಪಡೆದು ಟಿಕೆಟ್ ನೀಡುವುದಾಗಿ ತಿಳಿಸಿದರಲ್ಲದೆ, 1995ರಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸ್ಪಧರ್ಿಸಿ ಎಂದು ನಾವೇ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಬೇಕಾಗಿತ್ತು,  ಆದರೆ ಈಗ ಚುನಾವಣೆಯಲ್ಲಿ ಸ್ಪಧರ್ಿಸಲು ಪೈಪೋಟಿ ಏರ್ಪಟ್ಟಿದೆ ಪ್ರತಿ ಕ್ಷೇತ್ರದಲ್ಲೂ ಐದರಿಂದ ಆರು ಮಂದಿ ಕಾರ್ಯಕರ್ತರು ಅಜರ್ಿ ಸಲ್ಲಿಸಿದ್ದಾರೆ ಎಂದರು.
ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ  24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು, 6ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ನಮ್ಮ ಪಕ್ಷದ ಅಭ್ಯಥರ್ಿಗಳೇ ಹೆಚ್ಚು ಗೆಲುವು ಸಾಧಿಸಿದ್ದು,  ಮುಂಬರಲಿರುವ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷದ ಅಭ್ರ್ಯಥರ್ಿಗಳೇ ಹೆಚ್ಚಿನ ಮಟ್ಟದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದ ಅವರು,  ಜಿ.ಪಂ ಮತ್ತು ತಾ.ಪಂ. ಚುನಾವಣೆಗಾಗಿ ಆಕಾಂಕ್ಷಿ ಅಭ್ಯಥರ್ಿಗಳು ಸಲ್ಲಿಸಿರುವ ಅಜರ್ಿಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷರವರೆಗೆ ಕಳುಹಿಸಿ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಮುಖಂಡರು ಸ್ಥಳೀಯರ ಸಭೆ ಸೇರಿ ಟಿಕೆಟ್ ನೀಡಲಾಗುವುದು ಅಲ್ಲಿಯೂ ಒಮ್ಮತ ಅಭಿಪ್ರಾಯ ಮೂಡದಿದ್ದರೆ ಕೋರ್ ಕಮಿಟಿ ಮೂಲಕ ಟಿಕೆಟ್ ನೀಡಲಾಗುವುದು ಎಂದರು.
ತಳಮಟ್ಟದ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ  ಚುನಾವಣೆ ಇದಾಗಿದ್ದು, ಕಾರ್ಯಕರ್ತರು ಈ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಬೇಕು, ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಹಲವು ಮುಖಂಡರು ಸೇರ್ಪಡೆಗೊಳ್ಳುತ್ತಿದ್ದಾರೆ ಮುಂದೆಯೂ ಇದೇ ರೀತಿ ಮುಂದುವರೆಯಲಿದೆ ಎಂಬ ಅಭಿಪ್ರಾಯವಿದೆ ಎಂದ ಅವರು ಚುನಾವಣೆಗಾಗಿ ಅಜರ್ಿ ಸಲ್ಲಿಸುವ ಅಭ್ಯಥರ್ಿಗಳು ಜನವರಿ 15ರವರೆಗೆ ಬಿಜೆಪಿ ಕಛೇರಿಯಲ್ಲಿ ಅಜರ್ಿ ಸಲ್ಲಿಸಬಹುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇದೆ, ಪಕ್ಷದ ಅಭ್ಯಥರ್ಿಗಳು ಎಲ್ಲಾ ಕಡೆಗಳಲ್ಲೂ ಗೆಲುವು ಸಾಧಿಸಬೇಕು ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡಿದ್ದು ಪಕ್ಷ ಜನಾಭಿಪ್ರಾಯದಂತೆ ಟಿಕೆಟ್ ನೀಡುವುದು, ಪಕ್ಷದ ಅಧಿಕೃತ ಅಭ್ಯಥರ್ಿಗೆ ಪರವಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ, ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು ಪಕ್ಷ ನೀಡುವ ಅಧಿಕೃತ ಅಭ್ಯಥರ್ಿಗೆ ಕಾರ್ಯಕರ್ತರು ಶ್ರಮಿಸಬೇಕು, ಪಕ್ಷದಲ್ಲಿ ಯಾರೊಂದಿಗೆ ಒಡಕು ಇದ್ದರೆ ಅದು ಬೇರೆಯವರಿಗೆ ಲಾಭವಾಗಬಾರದು ಕಾಯರ್ತಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಲು ತಿಳಿಸಿದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥರ್ಿಗಳಿಂದ ಹೆಚ್ಚಿನ ಅಜರ್ಿ ಬಂದಿವೆ, ಬಿಜೆಪಿ ಪಕ್ಷ ತಾಲ್ಲೂಕಿನ ಹೆಚ್ಚಿನ ಪಕ್ಷಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್ ಮಾತನಾಡಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಪೆಟ್ಟಿಗೆ ಅಂಗಡಿ, ಟೀ ಅಂಗಡಿಗಳಲ್ಲಿ ಚಚರ್ಿತವಾಗುತ್ತಿದ್ದು ಎಲ್ಲಾ ಕಡೆಯಲ್ಲೂ ಪಕ್ಷದಿಂದ ಯಾರು ಸ್ಪಧರ್ಿಸಬಹುದು ಎಂಬ ಗುಸುಗುಸು ಚಚರ್ೆ ನಡೆಯುತ್ತಿದೆ, ಮುಂದೆ ಬರಲಿರುವ ತಾ.ಪಂ. ಚುನಾವಣೆಯಲ್ಲಿ 15ರಿಂದ 16 ಸ್ಥಾನಗಳನ್ನು ಪಕ್ಷ ಗೆಲುವು ಸಾಧಿಸಲಿದೆ ಎಂದರು. 
ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಮಾತನಾಡಿ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಬೆಂಬಲಿಸುವಂತೆ ತಿಳಿಸಿದರು. 
ಸಭೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಜಿ.ಪಂ 6ಕ್ಷೇತ್ರಗಳಲ್ಲಿ 5 ಸ್ಥಾನವನ್ನು 24 ತಾ.ಪಂ.ಕ್ಷೇತ್ರಗಳಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜಿಪಿ ಪಕ್ಷವನ್ನು ಗೆಲ್ಲಿಸುವುದಾಗಿ ತಿಳಿಸಿದ ಅವರು,  ತಾಲ್ಲೂಕಿನಲ್ಲಿ ಎಲ್ಲಾ ಜಿ.ಪಂ. ತಾ.ಪಂ.ಕ್ಷೇತ್ರಗಲ್ಲೂ ಬಿಜಿಪಿ ಪಕ್ಷದಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಕುಪ್ಪೂರು ಹಾಗೂ ಕೆಂಕೆರೆ ತಾ.ಪಂ.ಕ್ಷೇತ್ರಗಳಿಗೆ ತಲಾ 20ಜನ ಆಕಾಂಕ್ಷಿಗಳಿದ್ದು ಹೊಯ್ಸಳಕಟ್ಟೆ ಒಂದು ಜಿ.ಪಂ.ಕ್ಷೇತ್ರಕ್ಕೆ 10ಜನ ಆಕಾಂಕ್ಷಿಗಳಿದ್ದಾರೆ ಆದ್ದರಿಂದ ಅಭ್ಯಥರ್ಿಗಳ ಆಯ್ಕೆಯನ್ನು ಆಯಾ ಬೂತ್ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಆಯ್ಕೆಮಾಡಲಾಗುವುದು ಎಂದ ಅವರು ಪಟ್ಟಣದಲ್ಲಿರುವ ಬಿಜಿಪಿ ಕಛೇರಿಯಲ್ಲಿ ಆಕಾಂಕ್ಷಿಗಳ ಅಜರ್ಿಗಳನ್ನು ಸ್ವಿಕರಿಸಲಿದ್ದು ಇನ್ನು ಆಕಾಂಕ್ಷಿಗಳಿದ್ದರೆ ಅಜರ್ಿಸಲ್ಲಿಸ ಬಹುದು ಎಂದರು.
ಇಂದಿನ ಅಜರ್ಿ ಬಿಜಿಪಿ ಪಕ್ಷದ ಅಜರ್ಿ ಸ್ವಿಕರಿಸುವ ಸಭೆಯಲ್ಲಿ ಒಟ್ಟು 6ಜಿ.ಪಂ.ಕ್ಷೇತ್ರಗಳಲ್ಲಿ ಶೆಟ್ಟಿಕೆರೆ ಕ್ಷೇತ್ರಕ್ಕೆ 6 ಜನ ಆಕಾಂಕ್ಷಿಗಳು ಅಜರ್ಿ ಸಲ್ಲಿಸಿದ್ದು, ಕಂದಿಕೆರೆ ಕ್ಷೇತ್ರಕ್ಕೆ 4, ಹಂದನಕೆರೆ ಕ್ಷೇತ್ರಕ್ಕೆ 6, ಹುಳಿಯಾರು ಕ್ಷೇತ್ರಕ್ಕೆ 8, ಹೊಯ್ಸಳಕಟ್ಟೆ ಕ್ಷೇತ್ರಕ್ಕೆ 10, ಬುಕ್ಕಾಪಟ್ಟಣ ಕ್ಷೇತ್ರಕ್ಕೆ 8 ಜನರಂತ ಒಟ್ಟು 42 ಜನ ಆಕಾಂಕ್ಷಿಗಳು ಅಜರ್ಿಸಲ್ಲಿಸಿದ್ದಾರೆ, ಹಾಗೂ 24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಒಟ್ಟು 90 ಆಕಾಂಕ್ಷಿಗಳು ಅಜರ್ಿಗಳನ್ನು ಸಲ್ಲಿಸಿದ್ದಾರೆ.
ತಾಲ್ಲೂಕಿನ ಜಿ.ಪಂ.ಹಾಗೂ ತಾ.ಪಂ.ಕ್ಷೇತ್ರಗಳಿಂದ ಆಗಮಿಸಿದ್ದ ಚುನಾವಣಾ ಆಕಾಂಕ್ಷಿಗಳಿಂದ ಅಜರ್ಿ ಸ್ವೀಕರಿಸಿದರು.
ಸಭೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಸೀತಾರಾಮಯ್ಯ, ನೇತ್ರಾವತಿ, ಕೆಂಕೆರೆನವೀನ್, ವಸಂತಯ್ಯ, ಜಯಣ್ಣ, ರಮೇಶ್ಕುಮಾರ್, ರೂಪ ಮತ್ತಿತರರು ಉಪಸ್ಥಿತರಿದ್ದರು. 
ಬಾಕ್ಸ ಕಾಲಂ:  
ಇಂದು ನಡೆದ ಅಜರ್ಿ ಸ್ವಿಕಾರ ಸಭೆಗೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬಾರದಿರುವುದು ಅನೇಕರಲ್ಲಿ ಗೊಂದಲ ಉಂಟು ಮಾಡಿತ್ತು,  ಆದರೂ ಜಿ.ಸಿ.ಮಾಧುಸ್ವಾಮಿ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಅಜರ್ಿಸಲ್ಲಿಸಿದ್ದು ಹಾಗೂ ಕೆ.ಎಸ್.ಕಿರಣ್ಕುಮಾರ್ ತಮ್ಮ ಭಾಷಣದಲ್ಲಿ ಜೆ.ಸಿ.ಎಂ. ಪಕ್ಷದ ಮತ್ತೊಂದು ಕಾರ್ಯದಲ್ಲಿ ತೊಡಗಿರುವ ಬಗ್ಗೆ ನೀಡಿದ ಹೇಳಿಕೆ ಕಾರ್ಯಕರ್ತರಲ್ಲಿದ್ದ ಗೊಂದಲವನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿರಬಹುದು ಎನ್ನಲಾಗಿದೆ.   

ಎಲ್ಲಾ ಸಮಾಜದಲ್ಲೂ ಒಡಕಿದೆ ಸಂಘಟನೆ ಮೂಲಕ ಬೆಳಸಬೇಕು
ಚಿಕ್ಕನಾಯಕನಹಳ್ಳಿ,ಜ.11 :  ತಮ್ಮ ಒಳ ಒಡಕುಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಸಮಾಜ ಮುಖಿಯಾಗಿ ಕಾರ್ಯಗಳನ್ನು ಮಾಡಿದರೆ ಅದು ದೇವರ ಪಾತ್ರಕ್ಕೆ ಪಾತ್ರರಾಗುತ್ತಾರೆ ಜೊತೆಗೆ ಸಮಾಜವು ಸಂಘಟಿತವಾಗುತ್ತದೆ  ಎಂದು ಶ್ರೀಪರಮಹಂಸ ಪಾರಿವ್ರಾಕಾಚಾರ್ಯ ನಾಮದೇವಾನಂದಭಾರತಿ ಸ್ವಾಮಿಜಿ ತಿಳಿಸಿದರು.
ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಸಮಾಜ, ಯುವಕ ಮಂಡಳಿ, ಮತ್ತು ರುಕ್ಮಣಿ ಮಹಿಳಾ ಸಮಾಜದವರು ಆಯೋಜಿಸಿದ್ದ ವಿಠ್ಠಲ ರುಖುಮಾಯಿಯವರ ದಿಂಡಿ 6ನೇ ವರ್ಷದ ಉತ್ಸವ ಹಾಗೂ ಧಾಮರ್ಿಕ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಇವರು,  ಎಲ್ಲಾ ಸಮಾಜಗಳಲ್ಲೂ ಒಳ ಒಡಕುಗಳು ಇದ್ದದ್ದೇ ಅದರೂ ಸಮಾಜದಲ್ಲಿ ಎಲ್ಲರೂ ಒಟ್ಟಾಗಿ ಸಮಾಜ ಮುಖಿಯಾಗಬೇಕು ಎಂದರು.
ಗೋಡೆಕೆರೆಯ ಚರಪಟ್ಟಾದ್ಯಕ್ಷರಾದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಜಿಗಳು ಮಾತನಾಡಿ ಇಂದಿನ ಸಮಾಜದಲ್ಲಿ ವಿಭಕ್ತ ಕುಟುಂಬಗಗಳೇ ಹೆಚ್ಚಾಗುತ್ತಿದ್ದ,  ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ ಆದ್ದರಿಂದ ಕುಟುಂಬದಲ್ಲಿ ನಂಬಿಕೆ ಇಟ್ಟು ಜೀವನ ನಡೆಸ ಬೇಕು ಎಲ್ಲರೂ ಒಟ್ಟಾಗಿ ಬಾಳ ಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ಸಮಾಜದಲ್ಲಿನ ಎಲ್ಲಾ ಜಾತಿಗಳು ಒಂದೇ ಎಲ್ಲರೂ ಪ್ರಿತಿ ವಿಶ್ವಾಸಗಳಿಂದ ಹಾಗೂ ಸಮಾನತೆಯಿಂದ ಬದುಕಿದರೆ ಯಾವುದೇ ಗೊಂದಲಗಳು ಬರುವುದಿಲ್ಲ ಎಂದ ಅವರು ವಿಠ್ಠಲ ರುಖುಮಾಯಿ ದೇವಾಲಯಕ್ಕೆ ಶಾಸಕರ ನಿಧಿಯಿಂದ 3ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ತುಮಕೂರಿನ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಪಿ.ಎಸ್.ಗುರುಪ್ರಸಾದ್ ಪಿಸ್ಸೆ, ಹೊಸದುರ್ಗದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಉಮೇಶ ಗುಜರೆ ತುಮಕೂರಿನನ ಭಾ.ಕ್ಷ.ಸಮಾಜದ ಸತ್ಯನಾರಾಯಣ, ಪುರಸಭಾ ಸದಸ್ಯ ಮಲ್ಲೇಶಯ್ಯ, ಜೆಡಿಎಸ್ ಮುಖಂಡ ಕಲ್ಲೇಶ, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ, ಭಾಗವಹಿಸದ್ದರು.
ಕಾರ್ಯಕ್ರಮದಲ್ಲಿ ಶ್ರೀ ತುಕಾರಾಂ ರಾವ್, ಜಗದೀಶ್ಬಾಬು ಇವರಿಂದ ಭಜನಾ ಕಾರ್ಯಕ್ರಮ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಭಾರತೀಯ ಪರಂಪರೆ ಉಳಿಸುವುದು ಯುವ ಪೀಳಿಗೆ ಕೈಯಲ್ಲಿದೆ
ಚಿಕ್ಕನಾಯಕನಹಳ್ಳಿ, : ಭಾರತೀಯ ಪರಂಪರೆ ಉಳಿಸುವ ರಾಯಭಾರಿಗಳಾಗಿ ಭರತ ಖಂಡದ ಬಗೆಗಿನ ಅಭಿಪ್ರಾಯವನ್ನು ವಿಶ್ವದಾದ್ಯಂತ ಪಸರಿಸುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಪಟ್ಟಣದ ಡಿವಿಪಿ ಶಾಲೆಯ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ, ಶಿಲ್ಪಕಲೆ, ಪರಂಪರೆಗಳನ್ನು ಉಳಿಸುವುದು ಅಗತ್ಯವಾಗಿದೆ ಎಂದ ಅವರು ಯುವಕರು ತಮ್ಮ ಮನಸ್ಸನ್ನು ವಿಶಾಲಗೊಳಿಸಿ ದೊಡ್ಡ ಮಟ್ಟದ ಯಶಸ್ಸು ಕಾಣುವಲ್ಲಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 2014-15ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಶಾಲೆಯ ವತಿಯಿಂದ ನಡೆದ ಸಾಂಸ್ಕೃತಿಕ, ಕ್ರೀಡೆ, ಕಲೆ ಇನ್ನಿತರ ವಿವಿಧ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು. ವಾಷರ್ಿಕೋತ್ಸವದ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಬೆಂಗಳೂರು ಡಿವೈಎಸ್ಪಿ ಸಿ.ಆರ್.ರವೀಶ್ರವರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಪುರಸಭಾಧ್ಯಕ್ಷೆ ಪ್ರೇಮದೇವರಾಜು, ಸದಸ್ಯರಾದ ಎಂ.ಕೆ.ರವಿಚಂದ್ರ, ಹೆಚ್.ಬಿ.ಪ್ರಕಾಶ್, ಮಾಜಿ ಪುರಸಭಾಧ್ಯಕ್ಷ ಎಂ.ಎನ್.ಸುರೇಶ್, ಡಿವಿಪಿ ಶಾಲಾ ಸಂಸ್ಥೆ ಕಾರ್ಯದಶರ್ಿ ಸಿ.ಎಸ್.ನಟರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ದೊರೆಮುದ್ದಯ್ಯ, ಸಿ.ಪಿ.ಚಂದ್ರಶೇಖರಶೆಟ್ಟಿ, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಗ್ಯಾಸ್ ಸಂಪರ್ಕ ಬಳಸುವ ಮೂಲಕ ನೈಸಗರ್ಿಕ ಸಂಪನ್ಮೂಲ ಉಳಿಸಿ
ಚಿಕ್ಕನಾಯಕನಹಳ್ಳಿ,ಜ.12 : ಮರಗಳನ್ನು ಕಡಿಯದೇ ಗ್ಯಾಸ್ ಸಂಪರ್ಕ ಬಳಸಿ ಅಡುಗೆ ಮಾಡುವ ಮೂಲಕ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸಾಮಾಜಿಕ ಅರಣ್ಯ ಇಲಾಖೆ ಕಛೇರಿ ಆವರಣದಲ್ಲಿ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಅಭಿವೃದ್ದಿ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಈ ಯೋಜನೆಯಡಿ 220 ಫಲಾನುಭವಿಗಳಿಗೆ ಸೌಲಭ್ಯ ದೊರೆಯಲಿದ್ದು ಈಗ 46 ಮಂದಿ ಫಲಾನುಭವಿಗೆ ವಿತರಿಸುತ್ತಿದ್ದೇವೆ, ಉಳಿದ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿರುವುದಿಲ್ಲ, ಅಗತ್ಯ ದಾಖಲಾತಿ ಸಲ್ಲಿಸಿದ ನಂತರ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕದ ಸೌಲಭ್ಯ ನೀಡಲಾಗುವುದು ಎಂದರಲ್ಲದೆ ಈ ಮೂಲಕ ಹೆಣ್ಣಮಕ್ಕಳು ಒಲೆಯ ಮುಂದೆ ಹೊಗೆ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುವುದನ್ನು ತಪ್ಪಿಸಲಾಗುವುದು ಹಾಗೂ ಪರಿಸರವನ್ನು ಉಳಿಸುವ ಕಾರ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಗ್ಯಾಸ್ ಸಂಪರ್ಕ ಬಳಸುವ ವಿಧಾನದ ಬಗ್ಗೆ ಮಾದರಿಯನ್ನು ತಿಳಿಸಲಾಯಿತು. 
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಎಂ.ಕೆ.ರವಿಚಂದ್ರ, ಸಿ.ಟಿ.ದಯಾನಂದ್, ಅಕ್ಷರ ದಾಸೋಹದ ಸಹಾಯಕ ನಿದರ್ೇಶಕ ತಿಮ್ಮರಾಜು, ಅರಣ್ಯ ಇಲಾಖೆಯ ಅಧಿಕಾರಿ ಲಕ್ಷ್ಮೀನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ವಿವೇಕಾನಂದರು ಯುವ ಪೀಳಿಗೆಯನ್ನು ಶಕ್ತಿಯನ್ನಾಗಿ ಪರಿವತರ್ಿಸುತ್ತಿದ್ದರು
ಚಿಕ್ಕನಾಯಕನಹಳ್ಳಿ,ಜ.12 : ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಸಲುವಾಗಿ ಯುವ ಶಕ್ತಿಯನ್ನು ಸಂಘಟಿಸಿ ದೇಶ ಕಟ್ಟುವ ಸಂಕಲ್ಪವನ್ನು ಸ್ವಾಮಿವಿವೇಕಾನಂದರು ಹೊಂದಿದ್ದರು ಎಂದು ಪ್ರಾಂಶುಪಾಲರಾದ ಸಿದ್ದಗಂಗಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವೇಕಾನಂದರ 154ನೇ ಜನ್ಮ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾನತೆಯ ಮೂಲಕ ಸ್ವಾವಲಂಬಿಗಳಾಗಿರುವಂತೆ ಭಾರತೀಯರಿಗೆ ವಿವೇಕಾನಂದರು ಸಂದೇಶ ಸಾರಿದ ಮಹಾನ್ ಚೇತನರಾಗಿದ್ದರು, ಮಕ್ಕಳು ಸ್ವಾಮಿವಿವೇಕಾನಂದರ ಬದುಕನ್ನು ಅರಿತು ನಿಶ್ಚಿತ ಮನಸ್ಸಿನಿಂದ ಶಿಕ್ಷಣವನ್ನು ಚೆನ್ನಾಗಿ ಅಭ್ಯಸಿಸಿದರೆ ಸ್ವಾವಲಂಭಿಗಳಾಗುವುದರ ಜೊತೆಗೆ ದೇಶವು ಅಭ್ಯುದಯ ಸಾದನೆಯ ಹಾದಿ ಕಾಣುತ್ತದೆ ಎಂದರು.
ರಾಜ್ಯ ಎ.ಬಿ.ವಿ.ಪಿ ಕಾರ್ಯದಶರ್ಿ ಅಮರೇಶ್ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಉತ್ತಮ ನಡತೆಯ ಪ್ರತೀಕವಾದರೆ ಅಂತಹ ಮಕ್ಕಳಲ್ಲಿ ನಿಸ್ವಾರ್ಥ ಸೇವೆಯನ್ನು ಕಾಣಲಾಗುತ್ತದೆ, ಸ್ವಾಮಿ ವಿವೇಕಾನಂದರು ಆತ್ಮ ವಿಶ್ವಾಸದ ಪಾಠದಲ್ಲಿ ಸ್ವದೇಶಿ ಸಂಸ್ಕೃತಿಯನ್ನು ವಿದೇಶಿಯರಿಗೆ ಆನಾವರಣಗೊಳಿಸಿ ಭಾರತ ಒಂದು ಸ್ವಾಭಿಮಾನ ದೇಶ ಎಂಬುದನ್ನು ಪ್ರಚುರ ಪಡಿಸಿದ ಮಹಾನ್ ಸನ್ಯಾಸಿ ವಿವೇಕಾನಂದರು, ಸ್ವದೇಶದ ಮಣ್ಣಿನಲ್ಲಿ ಹೊರಲಾಡಿ ನನ್ನ ದೇಹ ಅಪವಿತ್ರಗೊಂಡಿತ್ತು ಈಗ ಪ್ರವಿತ್ರನಾದೆನು ಎಂದು ನಮ್ಮ ದೇಶದ ಮಣ್ಣಿನ ಪವಿತ್ರತೆಯನ್ನು ಸಾರಿ ಹೇಳಿದ ಮಹಾನ್ ಜ್ಞಾನಿ ಇವರ ಜೀವನ ಚರಿತ್ರೆ ಎಂದೆದಿಗೂ ಅಭ್ಯಸಿಸುವುದು ಪ್ರಸ್ಥುತವಾದದ್ದು ಎಂದರು.
ಪಂಚನಹಳ್ಳಿ ಸಕರ್ಾರಿ ಕಾಲೇಜಿನ ಪ್ರಾಂಶುಪಾಲ ಸಿ.ಡಿ.ಷಣ್ಮುಖಸ್ವಾಮಿ ಮಾತನಾಡಿ ವಿವೇಕಾನಂದರಿಗೆ ವಿದೇಶಿ ಮಹಿಳೆಯೊಬ್ಬರು ಮದುವೆಯಾಗುವಂತೆ ನೀಡಿದ್ದ ಬೇಡಿಕೆಗೆ ಚಕಿತರಾದ ಅವರು, ಆಕೆಯಿಂದ ವಿವರಣೆ ಪಡೆದು ನನ್ನನ್ನೇ ಮಗ ಎಂದು ತಿಳಿದುಕೋ ತಾಯೇ ಎನ್ನುವುದರ ಮೂಲಕ  ನಮ್ಮ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದರಲ್ಲದೆ ವಿದ್ಯಾಥರ್ಿಗಳು ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡರೆ ಈ ದೇಶವನ್ನು ವಿದೇಶಿಯರು ಇನ್ನು ಹೆಚ್ಚು ಗೌರವಿಸುವಂತಾಗುತ್ತದೆ ಎಂದರು. 
ಈ ಸಂದರ್ಭದಲ್ಲಿ ಜಿಲ್ಲಾ ಎ.ಬಿ.ವಿ.ಪಿ ಕಾರ್ಯದಶರ್ಿ ಜನಾರ್ಧನ್, ಉಪನ್ಯಾಸಕರಾದ ಪರಮೇಶ್ವರಪ್ಪ, ಗಿರೀಶ್, ಧನಂಜಯ್, ರವೀಂದ್ರ ಉಪಸ್ಥಿತರಿದ್ದರು.
ತಾಲ್ಲೂಕಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಗಣನೀಯ ಸಾಧನೆ ಮಾಡುತ್ತಿದ್ದಾರೆ. 
ಚಿಕ್ಕನಾಯಕನಹಳ್ಳಿ,ಜ.12 : ಕ್ರೀಡೆ, ವಿಜ್ಞಾನ ಪ್ರತಿಭಾ ಕಾರಂಜಿ ಮುಂತಾದ ಕ್ಷೇತ್ರಗಳಲ್ಲಿ ತಾಲ್ಲೂಕಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಗಣನೀಯ ಸಾಧನೆ ಮಾಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿ ಬೆಂಗಳೂರು, ಶಿಕ್ಷಣ ಇಲಾಖೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ 9ರಿಂದ 16ವರ್ಷದ ಮಕ್ಕಳಿಗಾಗಿ ಕಲಾಶ್ರೀ ಶಿಬಿರ ವಿವಿಧ ಸ್ಪಧರ್ೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾಶ್ರೀ ಸ್ಪಧರ್ೆಗಳು ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಇರುವ ಒಂದು ಉತ್ತಮ ವೇದಿಕೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಡಿ.ಪಿ.ಓ ಅನೀಸ್ಖೈಸರ್, ಮಕ್ಕಳು ಒಂದಲ್ಲ ಒಂದು ವಿಧದಲ್ಲಿ ಪ್ರಜ್ವಲಿಸಬೇಕಿದೆ ಎಂದರು.  ಕಾರ್ಯಕ್ರಮದಲ್ಲಿ ಎಸಿಡಿಪಿಓ ಪರಮೇಶ್ವರಪ್ಪ, ಇಸಿಓ ಕೆ.ಪಿ.ಚೇತನ, ಎನ್.ಪಿ.ಕುಮಾರಸ್ವಾಮಿ,  ಸಿಆರ್ಪಿ ಲೀಲಾವತಿ, ಶಿಕ್ಷಕರಾದ ಎಸ್.ಬಿ.ಕುಮಾರ್, ಗುರುಪ್ರಸಾದ್, ರುಕ್ಮಿಣಿ, ಸಿ.ಟಿ.ರೇಖಾ ಇತರರು ಉಪಸ್ಥಿತರಿದ್ದರು.
ಕಲಾಶ್ರೀ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳು :
ಪ್ರಬಂಧ ಸ್ಪದರ್ೆ : ಅನುಷ ಎಂ.ವಿ-ಪ್ರಥಮ ರೋಟರಿ ಶಾಲೆ, ಮಧುಸೂಧನ್-ದ್ವಿತೀಯ ಸಕರ್ಾರಿ ಪ್ರೌಡಶಾಲೆ.
ಚಿತ್ರಕಲೆ ಸ್ಪಧರ್ೆ : ತಸ್ವಿನ್ಸಿಂಹ-ಪ್ರಥಮ, ಸಕರ್ಾರಿ ಪ್ರೌಡಶಾಲೆ, ಅಯನ್ಪಾಷ-ದ್ವಿತಿಯ ನವೋದಯ ಶಾಲೆ.
ಏಕಪಾತ್ರಾಭಿನಯ : ಪ್ರಶಾಂತ್ ಸಿ.ಜಿ-ಪ್ರಥಮ, ಡಿವಿಪಿ ಶಾಲೆ, ಹರೀಶ್.ಕೆ-ದ್ವಿತೀಯ ಜಿ.ಹೆಚ್.ಎಸ್.ಬಡಕೇಗುಡ್ಲು.
ವಿಜ್ಞಾನ ಪ್ರಯೋಗ : ರೀತುನಂದ್-ಪ್ರಥಮ ನವೋದಯ ಶಾಲೆ, ಬೀರೇಶ್.ಸಿ.ಬಿ-ದ್ವಿತಿಯ ಅಂಬೇಡ್ಕರ್ ಶಾಲೆ.





Thursday, January 7, 2016


ಪೌರಕಾಮರ್ಿಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ 
ಚಿಕ್ಕನಾಯಕನಹಳ್ಳಿ,: ಪೌರ ಕಾಮರ್ಿಕರಿಗೆ ಬೆಳಗಿನ ಉಪಹಾರ ನೀಡುವ ಯೋಜನೆಯನ್ನು ಪೌರಕಾಮರ್ಿಕರು ಸರಿಯಾಗಿ ಬಳಸಿಕೊಳ್ಳುವ ಮೂಲಕ ಕರ್ತವ್ಯದ ಜೊತೆಗೆ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ನೀಡಬೇಕೆಂದು  ತಹಶೀಲ್ದಾರ್ ಆರ್.ಗಂಗೇಶ್ ಸಲಹೆ ನೀಡಿದರು.
ಪಟ್ಟಣದ ಪುರಸಭಾ ಕಾಯರ್ಾಲಯದಲ್ಲಿ ಪೌರಕಾಮರ್ಿಕರಿಗೆ ನೀಡುವ ಬೆಳಗಿನ ಉಪಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಾತನಾಡಿ, ಈಗಾಗಲೇ ಶೇ.24.10%ರ ಅನುದಾನದ ಹಣದಲ್ಲಿ ಪೌರಕಾಮರ್ಿಕರಿಗೆ ಉಪಹಾರ ನೀಡಲು 5ಲಕ್ಷ ರೂ ಅನುದಾನವನ್ನು ಮೀಸಲಿಟ್ಟಿದ್ದು ಪೌರಕಾಮರ್ಿಕರು ತಮಗೆ ನೀಡಿರುವ ಪರಿಕರಗಳಾದ ಶೂ, ಹ್ಯಾಂಡ್ಗ್ಲೌಸ್, ಮಾಸ್ಕ್ ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಪುರಸಭಾ ಸದಸ್ಯ ಮಲ್ಲೇಶಯ್ಯ ಮಾತನಾಡಿ, ಬೆಳಗಿನ ಜಾವ ಪಟ್ಟಣದ ಸ್ವಚ್ಛತೆಗೆ ಪೌರಕಾಮರ್ಿಕರು ಬರುತ್ತಾರೆ,  ಈ ಸಮಯದಲ್ಲಿ ಹಸಿವಿನಿಂದ ಬಳಲುತ್ತಾರೆ ಎಂಬ ಕಾರಣದಿಂದ ಪುರಸಭೆ ವತಿಯಿಂದ ಬೆಳಗಿನ ಉಪಹಾರ ನೀಡುವಂತೆ ಎರಡು ವರ್ಷಗಳಿಂದ ಸಾಮಾನ್ಯ ಸಭೆಗಳಲ್ಲಿ ಚಚರ್ೆ ನಡೆದಿದ್ದರೂ ಜಾರಿಗೆ ತಂದಿರಲಿಲ್ಲ,  ಈಗ ಬೆಳಗಿನ ಉಪಹಾರ ವ್ಯವಸ್ಥೆ ಜಾರಿಗೆ ತರಲಾಗಿದ್ದು,  ಈ ಕಾರ್ಯಕ್ರಮವನ್ನು ಉಪಯೋಗಿಸಿಕೊಳ್ಳುವ ಪೌರಕಾಮರ್ಿಕರು ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಹಕರಿಸಿ ಎಂದರು.  ಟೆಂಡರ್ದಾರರು ಪೌರಕಾಮರ್ಿಕರಿಗೆ ನೀಡುವ ಆಹಾರದಲ್ಲಿ ವ್ಯತ್ಯಾಸವಾಗದಂತೆ ಉತ್ತಮ ಗುಣಮಟ್ಟದ ಆಹಾರ ಸರಬರಾಜು ಮಾಡುವಂತೆ ಸಲಹೆ ನೀಡಿದರು.
ವೈದ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಪೌರಕಾಮರ್ಿಕರು ರಕ್ಷ ಕವಚ, ಪೂರ್ಣ ಮಾಸ್ಕ್, ಹ್ಯಾಂಡ್ಗ್ಲೌಸ್, ಶೂಗಳನ್ನು ಹಾಕಿಕೊಂಡು ಸ್ವಚ್ಛತಾ ಕೆಲಸ ಮಾಡುವಂತೆ ಸಲಹೆ ನೀಡಿದ ಅವರು ಪ್ರತಿ ತಿಂಗಳು ಪೌರಕಾಮರ್ಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮಾತನಾಡಿ, ಪಟ್ಟಣದ ಸ್ವಚ್ಛತೆಗೆ ಬರುವ ಪೌರಕಾಮರ್ಿಕರಿಗೆ ಕುಟುಂಬದ ಸದಸ್ಯರು ಬೆಳಗ್ಗೆ ಎದ್ದು ಉಪಹಾರ ಮಾಡಲು ಸಾಧ್ಯವಿಲ್ಲ ಆದ್ದರಿಂದ ಸಕರ್ಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಪ್ರೇಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರೇಣುಕಮ್ಮ, ರೂಪ, ಪುಷ್ಪ.ಟಿ.ರಾಮಯ್ಯ, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ ಅಧಿಕಾರಿಗಳಾದ ಯೋಗಾನಂದಬಾಬು, ಚಂದ್ರಶೇಖರ್, ಜಯರಾಂ ಉಪಸ್ಥಿತರಿದ್ದರು.


ವೆಟ್ಲಿಪ್ಟಿಂಗ್ ಸ್ಪಧರ್ೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಜ.07 :   ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಅಂತರಕಾಲೇಜು ಪುರುಷರ ಮತ್ತು ಮಹಿಳೆಯರ ಭಾರ ಎತ್ತುವ ಸ್ಫಧರ್ೆ ಹಾಗೂ ಕುಸ್ತಿ ಸ್ಪಧರ್ೆಯಲ್ಲಿ  ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು ಭಾಗವಹಿಸಿ 8 ಚಿನ್ನದಪದಕ,   7 ಬೆಳ್ಳಿಪದಕ,  3ಕಂಚಿನಪದಕ ಸೇರಿದಂತೆ ಒಟ್ಟು 18   ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿನ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿದರ್ೇಶಕರಾದ ಶೈಲೇಂದ್ರಕುಮಾರ್.ಎಸ್.ಜೆ. ಇವರ ತರಬೇತಿಯಲ್ಲಿ ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರ ವಿಭಾಗದಲ್ಲಿ ಸತತವಾಗಿ 3ನೇ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಹಾಗೂ ಪುರುಷರ ವಿಭಾಗದಲ್ಲಿ ಸತತವಾಗಿ 2ನೇ ಬಾರಿ ತಂಡ ಸಮಗ್ರ ಪ್ರಶಸ್ತಿ ಪಡೆದು ಕಾಲೇಜಿಗೆ ಹಾಗೂ ತಾಲ್ಲೂಕಿಗೆ ಕೀತರ್ಿ ತಂದಿದ್ದಾರೆ.
    ಭಾರ ಎತ್ತುವ ಸ್ಪಧರ್ೆಗೆ ಆಯ್ಕೆ : 
ಕಾಲೇಜಿನ ದ್ವಿತೀಯ ಪದವಿ ವಿದ್ಯಾಥರ್ಿನಿ ರಮ್ಯಶ್ರೀ.ಎಸ್. ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಪಡೆದು ವೈಯಕ್ತಿಕ ಸಾಧನೆ ಮಾಡಿದ್ದಾರೆ ಹಾಗೂ ಆಂದ್ರ ಪ್ರದೇಶದ ಆಚಾರ್ಯ ನಾಗಾಜರ್ುನ ವಿಶ್ವವಿದ್ಯಾಲಯದಲ್ಲಿ  ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಭಾರ ಎತ್ತುವ ಸ್ಪಧರ್ೆಗೆ 1) ರಮ್ಯಶ್ರೀ.ಎಸ್. 2) ಕಾವ್ಯ ಕೆ.ಬಿ. 3) ತೇಜಸ್ವಿನಿ.ಸಿ.ಆರ್, 4) ಕರಿಷ್ಮಾ 5) ನವೀನ್ಕುಮಾರ್.ಸಿ.ಆರ್. 6) ದರ್ಶನ್ ಬಿ.ಯು. ಆಯ್ಕೆಯಾಗಿದ್ದಾರೆ.
    ಕುಸ್ತಿ ಸ್ಪಧರ್ೆಗೆ ಆಯ್ಕೆ : 
ತುಮಕೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕುಸ್ತಿ ಸ್ಪಧರ್ೆಯಲ್ಲಿ ಶ್ರೀನಿವಾಸ್.ವಿ. ಚಿನ್ನದ ಪದಕ, ರವಿ.ಎಂ. ಕಂಚಿನ ಪದಕ ಹಾಗೂ ಬರ್ಕತ್ಉಲ್ಲಾ ಕಂಚಿನ ಪದಕ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕುಸ್ತಿ ಸ್ಪಧರ್ೆಗೆ ಶ್ರೀನಿವಾಸ್.ವಿ. ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾಥರ್ಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರಾದ ಸಿ.ಜಿ.ಸುರೇಶ್ ಹಾಗೂ ಬೋಧಕ, ಬೋಧಕೇತರ ವೃಂದ, ವಿದ್ಯಾಥರ್ಿ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
   ಪದಕ ಪಡೆದ ವಿದ್ಯಾಥರ್ಿಗಳು : 
ಚಿನ್ನದ ಪದಕ:1) ಕಾವ್ಯ ಕೆ.ಬಿ. 2) ತೇಜಸ್ವಿನಿ.ಸಿ.ಆರ್. 3) ಸೌಂದರ್ಯ.ಆರ್.ಎನ್.4) ವಿದ್ಯ, 5) ಕರಿಷ್ಮಾ 6) ರಮ್ಯಶ್ರೀ.ಎಸ್. 7) ನವೀನ್ಕುಮಾರ್.ಸಿ.ಆರ್. 8) ದರ್ಶನ್ ಬಿ.ಯು. 
ಬೆಳ್ಳಿಪದಕ:  1) ದಾಕ್ಷಾಯಿಣಿ 2) ಮೇಘನ ಎಂ.ಬಿ. 3) ಸಂಗೀತ.ಎಂ 4) ಪೂಣರ್ಿಮ 5) ಭಾಮಿನಿ.ಎ.ಸಿ. 6) ನಿರಂಜನ್  7) ಬರ್ಕತ್ಉಲ್ಲಾ
ಕಂಚಿನ ಪದಕ: 1) ಕುಂಜುರಾಣಿ   2) ರಜನೀಕಾಂತ್   3) ಗುರುಪ್ರಸಾದ್ ಪಡೆದಿದ್ದಾರೆ.


ಗೋಡೆಕೆರೆ ಗ್ರಾಮಸ್ಥರು ವಿದ್ಯುತ್ಗಾಗಿ ಬೆಸ್ಕಾಂ ಇಲಾಖೆಗೆ ಮುತ್ತಿಗೆ
ಚಿಕ್ಕನಾಯಕನಹಳ್ಳಿ,ಜ.07 : ಗೋಡೆಕೆರೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಆಗ್ರಹಿಸಿ ಗೋಡೆಕೆರೆ ಗ್ರಾಮಸ್ಥರು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಹಕ ಅಭಿಯಂತರರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗೋಡೆಕೆರೆ ಗ್ರಾಮಸ್ಥರು ಕಛೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ  ಮಾತನಾಡಿದ ರೇಣುಕಪ್ಪ,  ಸಂಜೆ 6ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿದ್ಯುತ್ ನೀಡುತ್ತಾರೆ ಈ ಅವಧಿಯಲ್ಲಿಯೂ ನಾಲ್ಕರಿಂದ ಐದು ಬಾರಿ ವಿದ್ಯುತ್ ತೆಗೆಯುತ್ತಾರೆ, ಗೋಡೆಕೆರೆ ಸುತ್ತಮುತ್ತಲಿನಲ್ಲಿ ವಿದ್ಯುತ್ ಸರಿಯಾಗಿ ಸರಬರಾಜು ಆಗದೇ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ ಇದರ ಬಗ್ಗೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪಕರ್ಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಗೋಡೆಕೆರ ಗೇಟ್ ಹಾಗೂ ಜೆ.ಸಿ.ಪುರದಲ್ಲಿ 24ಗಂಟೆಯೂ ವಿದ್ಯುತ್ ಇರುತ್ತದೆ ನಮಗೇಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ನಮಗೇಕೆ ಈ ತಾರತಮ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ಅಲ್ಲದೆ ಲೈನ್ ಎಳೆಯಲು ವಿದ್ಯುತ್ ಪರಿವರ್ತಕ ನೀಡಲು ಹಣ ಕೇಳುತ್ತಾರೆ ಈಗಾದರೆ ರೈತರು ಬದುಕಲು ಸಾಧ್ಯವೇ ಎಂದರು.
ಅಲ್ಲದೆ ಗೋಡೆಕೆರೆ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿರುವವರಿಗೆ   ವಿದ್ಯುತ್ ಇಲ್ಲದೆ ತೀವ್ರ ತೊಂದರೆಯಾಗಿದೆ, ವಿದ್ಯುತ್ ಇಲ್ಲದೆ ಇರುವುದರಿಂದ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿ ವಿಷ ಜಂತುಗಳು ಸಹ ಮನೆಗಳಿಗೆ ಬರುವುದರಿಂದ ಜಮೀನುಗಳಲ್ಲಿರುವ ರೈತರಿಗೆ ಆತಂಕ ಹೆಚ್ಚಾಗಿದೆ ಎಂದರಲ್ಲದೆ, ಇಂಧನ ಸಚಿವರು ಗ್ರಾಮೀಣ ಭಾಗಗಳಿಗೆ 7ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಇದರ ಬಗ್ಗೆ ಏನು ಹೇಳುತ್ತೀರ ಎಂದು ಗ್ರಾಮಸ್ಥರು ಎಇಇ ರಾಜಶೇಖರ್ರವರನ್ನು ಪ್ರಶ್ನಿಸಿದರು.
ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಬೆಸ್ಕಾಂ ಎಇಇ ರಾಜಶೇಖರ್, ಇಂಧನ ಸಚಿವರು 7ಗಂಟೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದಾರೆ, ನಾನೂ ಸಹ ಪತ್ರಿಕೆಗಳಲ್ಲಿ ಓದಿದ್ದೇನೆ ಇದುವರೆವಿಗೂ ಸಕರ್ಾರದ ಆದೇಶ ಬಂದಿಲ್ಲ, ಈಗ ಎಂದಿನಂತೆ ವಿದ್ಯುತ್ ಸರಬರಾಜು ಆಗುತ್ತಿದೆ , ಸಕರ್ಾರದ ಆದೇಶ ಬಂದ ತಕ್ಷಣ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿದ ಅವರು ಲೈನ್ಮೇನ್ಗಳು ಲೈನ್ ಎಳೆಯಲು ಹಣ ಕೇಳುವುದರ ಬಗ್ಗೆ ದೂರು ನೀಡಿದರೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ರೇಣುಕಪ್ರಸಾದ್, ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ, ಅಡಿಕೆ ರೇಣುಕಯ್ಯ, ರವೀಶ, ಸಿದ್ದರಾಮಯ್ಯ, ಮರಿಯಣ್ಣ, ಆನಂದಯ್ಯ ಸೇರಿದಂತೆ ಗೋಡೆಕೆರೆ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದಿಂಡಿ ಉತ್ಸವ 
ಚಿಕ್ಕನಾಯಕನಹಳ್ಳಿ.ಜ.07: ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀವಿಠ್ಠಲ ರುಖುಮಾಯಿಯವರ 6ನೇ ವರ್ಷದ ದಿಂಡಿ ಉತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಪಟ್ಟಣದಲ್ಲಿ ಏರ್ಪಡಿಸಲಾಗಿದೆ.
ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಇದೇ ತಿಂಗಳ 9 ಹಾಗೂ 10ನೇ ತಾರೀಕಿನಂದು ಭಾವಸಾರ ಕ್ಷತ್ರಿಯ ಸಮಾಜ ಹಾಗೂ ರುಕ್ಮೀಣಿ ಮಹಿಳಾ ಸಮಾಜದವರು,  ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  ಇದೇ 9ರಂದು ಸಂಜೆ 6-30ಕ್ಕೆ ಪೋತಿ ಸ್ಥಾಪನೆ ಹಾಗೂ ತುಕಾರಾಮ್ ರಾವ್, ಜಗದೀಶಬಾಬು ಇವರಿಂದ ಕೀರ್ತನಾ ಕಾರ್ಯಕ್ರಮ ನಡೆಯಲಿದೆ.
ಇದೇ ಹತ್ತರ ಭಾನುವಾರ ಬೆಳಗ್ಗೆ 12ಗಂಟೆಗೆ ವಿಠ್ಠಲ ರುಖುಮಾಯಿಯವರ ದಿಂಡಿ ಉತ್ಸವ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ನಡೆಯಲಿದ್ದು ಅಂದು 1ಗಂಟೆಗೆ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಲಾಗಿದ್ದು ಶ್ರೀ ನಾಮದೇವಾನಂದಭಾರತಿ ಸ್ವಾಮಿಗಳು ದಿವ್ಯ ಸಾನಿದ್ಯವನ್ನು ವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸುವರು. ವಿಶೇಷ ಆಹ್ವಾನಿತರಾಗಿ ತುಮಕೂರಿನ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಪಿ.ಎಸ್.ಗುರುಪ್ರಸಾದ್ ಪಿಸ್ಸೆ, ಹೊಸದುರ್ಗದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಉಮೇಶ ಗುಜರೆ ಬಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.


ನವೋದಯ ಶಾಲೆಯ ವಾಷರ್ಿಕೋತ್ಸವ ಸಮಾರಂಭ
ಚಿಕ್ಕನಾಕಯಕನಹಳ್ಳಿ07:-ಪಟ್ಟಣದ ನವೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾಷರ್ಿಕೋತ್ಸವ ಸಮಾರಂಭ ಇದೇ ತಿಂಗಳ 9 ಶನಿವಾರ ಸಂಜೆ 4-30ಕ್ಕೆ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ವಿಶೇಷಾಧಿಕಾರಿ ಪಾಲಾಕ್ಷಯ್ಯ ನೆರೆವೆರಿಸುವರು.
 ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಬಹುಮಾನ ವಿತರಿಸಲಿದ್ದು ಮುಖ್ಯ ಅತಿಥಿಗಳಾಗಿ ನವೋದಯ ಸಂಸ್ಥೆಯ ಉಪಾಧ್ಯಕ್ಷ ಎಂ,ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ನವೋದಯ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಎಸ್.ಎಲ್.ಶಿವಕುಮಾರಸ್ವಾಮಿ, ನವೋದಯ ಪಿಯುಸಿ ಕಾಲೇಜಿನ ಪ್ರಾಂಶುಪಾಲ ಮೋಹನ್ ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Wednesday, January 6, 2016


ವಿದ್ಯುತ್ ಪರಿವರ್ತಕಕ್ಕೆ ಮರದ ಊರುಗೋಲೇ ಬೆಂಗಾವಲು
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಮಾಕುವಳ್ಳಿ ಗ್ರಾಮದ ಹತ್ತಿರವಿರುವ 100ಕೆ.ವಿ ವಿದ್ಯುತ್ ಪರಿವರ್ತಕವನ್ನು  ಎರಡು ವಿದ್ಯುತ್ ಕಂಬಕ್ಕೆ ಅಳವಡಿಸಿದ್ದು ಕಂಬಗಳು ಬಿರುಕುಬಿಟ್ಟುಕೊಂಡಿದ್ದು, ಮುರಿದು ಹೋಗುವ ಸ್ಥಿತಿಯಲ್ಲಿರುವ  ಪರಿಣಾಮ, ವಿದ್ಯುತ್ ಪರಿವರ್ತಕ ಅತಿ ಭಾರದಿಂದ ಕುಸಿಯುತ್ತದೆ ಎಂಬ ಭೀತಿಯಿಂದ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಮರದ ಊರುಗೋಲು ಇಟ್ಟು ಎರಡು ತಿಂಗಳಾಗಿದೆ. ಈ ಬಗ್ಗೆ ಇಲಾಖೆಗೆ ದೂರು ಕೊಟ್ಟರೂ ಇನ್ನೂ ಸರಿಪಡಿಸಿದ ವಿದ್ಯುತ್ ಇಲಾಖೆಯ ಮೇಲೆ ಗ್ರಾಮಸ್ಥರು ಹರಿಹಾಯುತ್ತಿದ್ದಾರೆ.
ಗ್ರಾಮದ ಹತ್ತಿರವಿರುವ 100.ಕೆ.ವಿ. ವಿದ್ಯುತ್ ಪರಿವರ್ತಕದಿಂದ ಒಟ್ಟು 7 ವಿದ್ಯುತ್ ಪರಿವರ್ತಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು,  ಗ್ರಾಮದ 180 ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ,  ಆಕಸ್ಮಿಕವಾಗಿ 100.ಕೆ.ವಿ ವಿದ್ಯುತ್ ಪರಿವರ್ತಕ ಕುಸಿದು ಬಿದ್ದರೆ ಈ ಭಾಗದ ರೈತರ ಜಮೀನಿನಲ್ಲಿರುವ ಪಂಪ್ಸೆಟ್ಗಳು ಹಾಗೂ ಮನೆಗಳ ಸಂಪರ್ಕ ಕಡಿತವಾಗಿ ಲಕ್ಷಾಂತರ ರೂಪಾಯಿ ನಷ್ಠವಾಗಲಿದೆ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದು,  ಸ್ಥಳಕ್ಕೆ ಭೇಟಿ ನೀಡಿ ಹೋದ ಅಧಿಕಾರಿಗಳು ಇಲ್ಲಿಯವರಿಗೂ ಕ್ರಮ ಕೈಗೊಂಡಿಲ್ಲವೆಂದು  ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ವಿದ್ಯುತ್ ಪರಿವರ್ತಕಕ್ಕೆ ಉತ್ತಮ ಕಂಬಗಳನ್ನು ಒದಗಿಸಿ ಜನ-ಜಾನುವಾರುಗಳ ಪ್ರಾಣ ಉಳಿಸುವಂತೆ ಗ್ರಾಮಸ್ಥರು ಸಂಬಂಧಿಸಿದ  ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. 
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾ.ಪಂ.ಸದಸ್ಯ ಲಿಂಗರಾಜು ಮಾತನಾಡಿ, ವಿದ್ಯುತ್ ಪರಿವರ್ತಕದ ಕಂಬ ಮುರಿದಿರುವ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದೇವೆ, ಅಧಿಕಾರಿಗಳು ತಿಪಟೂರಿನಲ್ಲಿ ಎಸ್ಟಿಮೇಟ್ ಆಗಬೇಕು ನೀವೇ ಹೋಗಿ ಎಂದು ಹೇಳುತ್ತಾರೆ, ತಿಪಟೂರಿಗೂ ಊರಿನ ಗ್ರಾಮಸ್ಥರು ಸೇರಿ ಹೋದೆವು ಅಲ್ಲಿ  ಅಧಿಕಾರಿಗಳು ನಮಗೆ ಸ್ಪಂದಿಸುವುದಿಲ್ಲ, ಅಧಿಕಾರಿಗಳು  ಕಛೇರಿಯಲ್ಲಿದ್ದರೂ ನಮ್ಮ ಸಮಸ್ಯೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಗ್ರಾಮಸ್ಥ ಕುಮಾರಸ್ವಾಮಿ ಮಾತನಾಡಿ, ಕೆ.ಇ.ಬಿಗೆ ಹೋಗಿ ಊರಿನ ವಿದ್ಯುತ್ ಸಮಸ್ಯೆ ಬಗ್ಗೆ ಹಲವಾರು ಬಾರಿ ತಿಳಿಸಿದ್ದೇವೆ, ಯಾವ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥ ಚಂದ್ರಯ್ಯ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಕಛೇರಿಗೆ ಹೋಗಿ ಸಮಸ್ಯೆ ಬಗ್ಗೆ ತಿಳಿಸಿದರೆ ವಾರದೊಳಗೆ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ ಆದರೆ ತಿಂಗುಳುಗಳು ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದರು.


ನವಂಬರ್ ತಿಂಗಳಿನಲ್ಲೇ ವಿದ್ಯುತ್ ಪರಿವರ್ತಕ ಮುರಿದಿರುವ ಬಗ್ಗೆ ಬೆಸ್ಕಾಂ ಸಹಾಯಕ ಇಂಜನಿಯರ್ರವರಿಗೆ ಕಛೇರಿಗೆ ಹೋಗಿ ತಿಳಿಸಿದರೂ ಯಾರೂ ಕೂಡ ಇತ್ತ ಗಮನ ಹರಿಸಿಲ್ಲ, ತಾತ್ಕಾಲಿಕವಾಗಿ ಇರಲಿ ಎಂದು ಗ್ರಾಮಸ್ಥರೇ ಸೇರಿ ಪರಿವರ್ತಕಕ್ಕೆ ಮರದ ಊರುಗೋಲನ್ನು ಸಹಾಯಕ್ಕೆ ನಿಲ್ಲಿಸಿದ್ದೇವೆ, ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಾದರೆ ಲೈನ್ಮೆನ್ ಕೂಡ ಬರುವುದಿಲ್ಲ, ಲೈನ್ಮೆನ್ಗೆ  ಈ ಬಗ್ಗೆ ಕೇಳಿದರೆ ಅಧಿಕಾರಿಗಳ ಬಳಿ ವಿಚಾರಿಸಿ ಎನ್ನುತ್ತಾರೆ ಎಂದು ದೂರಿದರು.
 (ಗ್ರಾಮಸ್ಥ ನಿಜಾನಂದಮೂತರ್ಿ 

ಶೆಟ್ಟಿಕೆರೆಯಲ್ಲಿ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.06 : ತಾಲ್ಲೂಕಿನ ಶೆಟ್ಟಿಕೆರೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದ್ದು ಮನೆಯಲ್ಲಿದ್ದ  1ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳರು ದೋಚಿದ್ದಾರೆ.
ಶೆಟ್ಟಿಕೆರೆವಾಸಿ  ಪ್ರಕಾಶ್ ಎಂಬುವವರು ಹೊಸದುರ್ಗಕ್ಕೆ ಸಂಬಂಧಿಕರ ಮನೆಗೆ ಕುಟುಂಬ ಸಮೇತರಾಗಿ ಮದುವೆಗೆ ಹೋದಾಗ ಈ ಕೃತ್ಯ ನಡೆದಿದೆ.  ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಧೃಡಪಡಿಸಿಕೊಂಡು, ಮಂಗಳವಾರ ರಾತ್ರಿ ಮನೆಯ ಮುಂಭಾಗದ ಬಾಗಿಲು ಹೊಡೆದು ಒಳನುಗಿರುವ ಕಳ್ಳರು ಮನೆಯಲ್ಲಿ 5ಚಿನ್ನದ ಉಂಗುರ, ಬೆಳ್ಳಿಯ ಒಡವೆಗಳು ಹಾಗೂ ನಗದು ದೋಚಿಕೊಂಡು  ಪರಾರಿಯಾಗಿದ್ದಾರೆ. ಚಿಕ್ಕನಾಯಕನಹಳ್ಳಿಯ ಉಪ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ಪತ್ರ ಬರಹಗಾರರಾಗಿರುವ ಪ್ರಕಾಶ್, ಪೊಲೀಸರಿಗೆ ದೂರು ನೀಡಿದ್ದಾರೆ. 
ಸ್ಥಳಕ್ಕೆ ಸಿಪಿಐ ಮಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂದಿಕೆರೆಯ ಗೌರಸಾಗರ ರಸ್ತೆ ಗುಂಡಿಗಳ ತಾಣ
ಚಿಕ್ಕನಾಯಕನಹಳ್ಳಿ06:  ಕಂದಿಕೆರೆ ಹೋಬಳಿಯ ಗೌರಸಾಗರ ರಸ್ತೆ ಹದಿನೈದು ವರ್ಷಗಳಿಂದ ಯಾವುದೇ ದುರಸ್ಥಿಯನ್ನೇ ಕಾಣದೆ,  ಗುಂಡಿಗಳಿಂದ ಕೂಡಿರುವ ರಸ್ತೆಯಿಂದ ಜನ ಬೇಸತ್ತು ಹೋಗಿದ್ದಾರೆ. 
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಗೌರಸಾಗರ, ಉಪಲೀಕನಹಳ್ಳಿ, ರಾಮಪ್ಪನ ಹಟ್ಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳು ದುರಸ್ಥಿಯನ್ನು ಕಾಣದೇ ಕೂಡಿದ್ದು ಸುಮಾರು 15ವರ್ಷದಿಂದ ಯಾವುದೇ ದುರಸ್ಥಿಯನ್ನು ಕಂಡಿಲ್ಲ.  ಈ ಗ್ರಾಮಗಳಿಗೆ ಒಂದ ಸುವ್ಯವಸ್ಥಿತವಾದ ರಸ್ತೆ ಇಲ್ಲದೇ ಪ್ರತಿದಿನ ವೃದ್ದರು, ಮಕ್ಕಳು, ಅಪಘಾತಕ್ಕಿಡಾಗುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ತಲೆಕೆಡಿಸಿಕೊಂಡಿಲ್ಲ ಈ ಬಗ್ಗೆ ಗ್ರಾಮಸ್ಥರು ಅನೇಕಬಾರಿ ಮನವಿ ಮಾಡಿರುವುದಾಗಿ ತಿಳಿಸಿದರು.
ಮಾಧ್ಯಮದೊಂದಿಗೆ  ಮಾತನಾಡಿದ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಜಯರಾಮಯ್ಯ ನಾವು ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಗ್ರಾಮಗಳಿಗೆ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲ ರಸ್ತೆಯು ಸರಿಯಾಗಿಲ್ಲ ರಸ್ತೆಯಲ್ಲಿ ನಡೆದು ಕೊಂಡು ಹೋಗಲು ಸಾದ್ಯವಾಗದಷ್ಟು ಹಾಳಾಗಿದ್ದು, ದ್ವಿಚಕ್ರ ವಾಹನದವರು, ಆಟೋದವರು ಪ್ರತಿನಿತ್ಯ ಹರಸಾಸಹ ಪಡುವಂತಾಗಿದೆ. ಆದ್ದರಿಂದ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಸರಿಪಡಿಸ ಬೇಕೆಂದು ಒತ್ತಾಯಿಸಿದರು.
ಈ ಭಾಗದ ಕಂದಿಕೆರೆ ಗ್ರಾಮಪಂಚಾಯಿತಿ ಸದಸ್ಯ ಶಾನುವುಲ್ಲಾಖಾನ್ ಪ್ರತಿಕ್ರಿಯಿಸಿ ರಸ್ತೆಯ ದುರಸ್ಥಿಯ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಮುಂದಿನ ದಿನಗಳಲ್ಲಿ ನಮ್ಮಊರು ನಮ್ಮ ರಸ್ತೆಯಡಿ ದುರಸ್ಥಿ ಮಾಡಿಸಿರುವುದಾಗಿ ತಿಳಿಸಿದರು.
ಗ್ರಾಮಸ್ಥ ಜಿ.ಹೆಚ್ ರಂಗಚಾರ್ ಮಾತನಾಡಿ ಪ್ರತಿನಿತ್ಯ ಯಾರಾದರೊಬ್ಬರು ಈ ರಸ್ಥೆಯಲ್ಲಿ ಬಿಳುತ್ತಲೇ ಇರುತ್ತಾರೆ ಯಾವುದಾದರು ತೊಂದರೆಯಾದರೆ ಇಲ್ಲಿಂದ ಮುಖ್ಯರಸ್ಥೆಯಾದ ಹುಳಿಯಾರು ರಸ್ತೆಗೆ ಇಲ್ಲವೇ ಕಂದಿಕೆರೆ ರಸ್ತೆಗೆ ಹೋಗಲು ಸುಮಾರು 1ಗಂಟೆಯಾಗುತ್ತದೆ ಅದ್ದರಿಂದ ಕೂಡಲೇ ಈ ರಸ್ಥೆಯನ್ನು ಸರಿಪಡಿಸ ಬೇಕು ಈ ಬಗ್ಗೆ ತಿಳಿಸಿದ್ದು ರಸ್ತೆ ದುರಸ್ಥಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದರು.

ಮಗಳ ಮದುವೆಯ ಮುನ್ನಾದಿನ ವಧುವಿನ ತಾಯಿ 


ಆತ್ಮಹತ್ಯೆ
ಚಿಕ್ಕನಾಯಕನಹಳ್ಳಿ06: ಮಗಳ ಮದುವೆಯ ಮುನ್ನಾದಿನ ವಧುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಮ್ಮನಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಖಮರುನ್ನೀಸಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,  ಮಗಳ ಮದುವೆಯನ್ನು ತನ್ನ ತಂಗಿಯ ಮಗನ ಜೊತೆ ನಿಶ್ಚಿಯಿಸಿದ್ದರು, ಆದರೆ ವಧು ಬೀಬಿ ಆಯಿಷಾಳಿಗೆ ಒಪ್ಪಿಗೆ ಇಲ್ಲದಿದ್ದರಿಂದ ಮದುವೆಯ ವಿಷಯದಲ್ಲಿ ಕುಟುಂಬದಲ್ಲಿ ಉಂಟಾದ ಕಲಹದಿಂದ ಬೇಸತ್ತು ಖಮರುನ್ನೀಸಾ ವಿಷ ಸೇವಿಸಿದ್ದಾಳೆ.  
ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನ ಹೊಂದಿದ್ದಾರೆ ಈ ಸಂಬಂಧ ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Wednesday, December 30, 2015


2015ನೇ ವರ್ಷದಲ್ಲಿನ ಚಿಕ್ಕನಾಯಕನಹಳ್ಳಿಯ ಹೈಲೈಟ್ಸ್
ಚಿಕ್ಕನಾಯಕನಹಳ್ಳಿ,ಡಿ.30 : 2015ನೇ ವರ್ಷ ತಾಲ್ಲೂಕಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿತ್ತು, ಈ ವರ್ಷದಲ್ಲಿ ಸಂಘ ಸಂಸ್ಥೆಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ನಡೆಸಿ ಸಾರ್ವಜನಿಕರಿಗೆ ಮನರಂಜನೆ ನೀಡಿದವು, ತಾಲ್ಲೂಕಿಗೆ ರಾಜ್ಯ ಮಟ್ಟದ ನಾಯಕರು ಆಗಮಿಸಿದ್ದರು, ಕಳ್ಳತನ, ಕೊಲೆ ಅಪರಾಧಗಳು, ಜಾತಿ ವೈಷಮ್ಯದಿಂದಾದ ಗಲಭೆ ಪ್ರಕರಣಗಳು ನಡೆದವು, ಕುರಿಗಳಿಗೆ ಉಂಟಾದ ನೀಲಿನಾಲಿಗೆ ರೋಗ, ಇಪ್ಪತ್ತು ದಿನಗಳ ಕಾಲ ಸುರಿದ ಮಳೆಯಿಂದಾಗಿ ರಾಗಿ ಬೆಳೆ ನಾಶವಾಗಿ ರೈತರಿಗೆ ಆಥರ್ಿಕ ಸಮಸ್ಯೆ ಎದುರಾಯಿತು. 
ಜನವರಿ-2015 : ಜನವರಿಯಲ್ಲಿ ಅಂತರ್ಜಿಲ್ಲಾ ಹೊನಲು ಬೆಳಕಿನ ಚಿಕ್ಕನಾಯಕ ಕಪ್ ಕಬಡ್ಡಿ ಲೀಗ್ ನಡೆದು ಅತ್ಯುತ್ತಮವಾಗಿ ನಡೆದು ಬೆಂಗಳೂರಿನ ಹೆಚ್.ಎ.ಎಲ್. ತಂಡ ಪ್ರಶಸ್ತಿ ಗಳಿಸಿತು, ರೈತರ ಬೇಡಿಕೆ ಈಡೇರಿಸುವಂತೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ, ಸಾಹಿತಿಗಳು, ಪ್ರಗತಿಪರ ಹೋರಾಟಗಾರರ ಬೆಂಬಲ, ಸಚಿವ ಜಯಚಂದ್ರರ ಭರವಸೆ ನಂತರ ಹಿಂಪಡೆದ ಧರಣಿ,  ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಯಶಸ್ವಿ, ಗಣರಾಜ್ಯೋತ್ಸವದಲ್ಲಿ ಪ್ರತಿಭಾವಂತರಿಗೆ ಸನ್ಮಾನ, 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಗಂಗಾಧರಯ್ಯ ಆಯ್ಕೆ, ಯಶಸ್ವಿಯಾದ ಸಮ್ಮೇಳನ.
ಫೆಬ್ರವರಿ-2015 : ತಾಲ್ಲೂಕಿನ ರೈತರ ಮನೆಗಳಿಗೆ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವಿರೇಂದ್ರಹೆಗ್ಗಡೆ ಭೇಟಿ, ಬೆಳೆಯ ಪರಿಶೀಲನೆ, ಪಟ್ಟಣದ ಕಂಬಳಿ ಸೊಸೈಟಿಯ ಬಳಿಯಲ್ಲಿರುವ ತಂಗುದಾಣದಲ್ಲಿ ವ್ಯಕ್ತಿಯ ನಿಗೂಡ ಕೊಲೆ, ಬ್ರಾಹ್ಮಣರ ಬೀದಿಯ ವೃದ್ದೆಯ ಮೇಲಿದ್ದ ವಡವೆಗಳ ಕಳ್ಳತನ, ತಾಲ್ಲೂಕು ಪಂಚಾಯ್ತಿಯಲ್ಲಿ ತಾ.ಪಂ.ಸದಸ್ಯರ ಕೋರಂ ಕೊರತೆಯಿಂದಾಗಿ ಸಭೆ ನಡೆಯದೇ ಹೋಳಿಗೆ ಊಟ ಮಾಡಿ ವಾಪಾಸದ ತಾ.ಪಂ.ಸದಸ್ಯರು, ಜಾತಿ ಧರ್ಮಗಳ ಆಚೆಗಿನ ವಿಚಾರ ಎಂಬ ಕಾರ್ಯಕ್ರಮ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಕಾರ್ಯಕ್ರಮದಲ್ಲಿ ಭಾಗಿ, 
ಮಾಚರ್್-2015 : ಗೋಡೆಕೆರೆಯ ಸಿದ್ದರಾಮೇಶ್ವರ ದೇವಾಲಯದಲ್ಲಿ ವ್ಯಕ್ತಿ ಕೊಲೆ, ಹುಂಡಿ ಹಣ ಕಳ್ಳತನ, ಸಹಕಾರಿ ಸಂಘಗಳ ಚುನಾಯಿತ ಸದಸ್ಯರಿಗೆ ಅಭಿನಂದನಾ ಸಮಾರಂಭ, ಪಂಡಿತ್ ಪುಟ್ಟರಾಜಗವಾಯಿಗಳವರ ಜನ್ಮಶತಮಾನೋತ್ಸವ ಕಾರ್ಯಕ್ರಮ, ಸಿ.ಡಿ.ರವಿ ಹತ್ಯೆ ಖಂಡಿಸಿ ಹಲವು ಸಂಘ ಸಂಸ್ಥೆಗಳ ಪ್ರತಿಭಟನೆ. ಹಂದನಕೆರೆಯಲ್ಲಿ ಅಕ್ರಮ ಮರಳು ಸಾಗಾಣಿಕೆ.
ಏಪ್ರಿಲ್-2015 : ಕುರುಬರಹಳ್ಳಿಯಲ್ಲಿ ವಿದ್ಯುತ್ ಶಾಕ್ನಿಂದ ಲೈನ್ಮೆನ್ ಸಾವು, ನಾನು ಅವನಲ್ಲ ಅವಳು ಖ್ಯಾತಿಯ ನಟ ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಜಯ್ ಮತ್ತು ಬಿ.ಎಸ್.ಲಿಂಗದೇವರಿಗೆ ನವೋದಯ ಕಾಲೇಜ್ನಲ್ಲಿ ಸನ್ಮಾನ, ಹೇಮಾವತಿ ನೀರಿಗಾಗಿ ದಬ್ಬೆಘಟ್ಟ ಬಸವರಾಜುರವರಿಂದ ಅರೆಬೆತ್ತಲೆ ಪ್ರತಿಭಟನೆ, ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ, ಕನ್ನಡ ಸಂಘದ ವೇದಿಕೆಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅನುದಾನದಲ್ಲಿ ಮೇಲ್ಚಾವಣಿ ನಿಮರ್ಾಣ.
ಮೇ-2015 : ತಿಮ್ಮನಹಳ್ಳಿಯಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಎಸ್.ಪಿ.ಕಾತರ್ಿಕ್ರೆಡ್ಡಿ ಭೇಟಿ, ಸೋಮನಹಳ್ಳಿಗೆ ಆನಂದಗುರೂಜಿ ಭೇಟಿ, ವೃದ್ದೆ ಮೇಲೆ ಕರಡಿ ದಾಳಿ, ತಾಲ್ಲೂಕಿನ ರೋಟರಿ ಶಾಲೆಯ ಹಾಗೊ ಮೊರಾಜರ್ಿ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ಕೇಂದ್ರ ವಲಯ ಐಜಿಪಿ ಅರುಣ್ಚಕ್ರವತರ್ಿ ತಾಲ್ಲೂಕಿನ ಪೋಲಿಸ್ ಠಾಣೆಗಳಿಗೆ ಭೇಟಿ, ಪರಿಶೀಲನೆ, ಪಟ್ಟಣದ ದೇವಾಲಯಗಳಲ್ಲ ಸರಣಿ ಕಳ್ಳತನ.
ಜೂನ್-2015 : ಗ್ರಾಮ ಪಂಚಾಯಿತಿ ಚುನಾವಣೆ, ಕಂದಿಕೆರೆಯಲ್ಲಿ ಸಮರ್ಪಕ ವಿದ್ಯುತ್ಗಾಗಿ ಪ್ರತಿಭಟನೆ, ಜಿಲ್ಲಾ ಡಿಸಿಸಿ ಬ್ಯಾಂಕ್ಗೆ ಅವಿರೋಧವಾಗಿ ಸಿಂಗದಹಳ್ಳಿರಾಜ್ಕುಮಾರ್ ಪುನರಾಯ್ಕೆ, ಸಾಲ್ಕಟ್ಟೆಯಲ್ಲಿ ಮೀನುಗಳ ಮಾರಣ ಹೋಮ, ತಿಮ್ಮನಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥೆ ಯುವತಿಯನ್ನು ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಚಿಕಿತ್ಸೆಗೆ , ಹಂದನಕೆರೆಯಲ್ಲಿ ಕುರಿಆಡು ಸಾಕಾಣಿಕೆ ಸವಾಲುಗಳ ಕಾರ್ಯಕ್ರಮ, ಪಟ್ಟಣದ ಕುರುಬರಹಳ್ಳಿಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಕುರಿಗಳ ಮಾರಣ ಹೋಮ, ಚಿಕ್ಕನಾಯಕ ಪ್ರೀಮಿಯರ್ ಲೀಗ್ ಗೆದ್ದ ಯದುಯಾಕರ್್ಸರ್್ ಕ್ರಿಕೆಟ್ ಟೀಮ್, ಸಮಾಜ ಸೇವಕ ಕಣ್ಣಯ್ಯ ನಿಧನ, ಗಣ್ಯರ ಸಂತಾಫ, ಹಳೆಕುರುಬರಶ್ರೇಣಿ ಶಾಲೆ ಬೀದಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರಸ್ತೆ ನಾಮಕರಣ. 
ಜುಲೈ-2015 : ಗ್ರಾಮ ಪಂಚಾಯಿತಿಗೆ ನೂತನ ಸದಸ್ಯರ ಆಯ್ಕೆ, ಮಳೆಗಾಗಿ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಕೆಂಕೆರೆ ಪುರದ ಮಠದಲ್ಲಿ ಡಾ.ಯತೀಶ್ವರಶಿವಾಚಾರ್ಯಸ್ವಾಮಿಗಳ ವಿಶೇಷ ಪೂಜೆ, ಬಿಜೆಪಿ ಕಾರ್ಯಕರ್ತರ ಸಭೆಗೆ ಯಡಿಯೂರಪ್ಪ ಭೇಟಿ, ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ, ಸಂಘ-ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮ. 
ಆಗಸ್ಟ್-2015 : ಎ.ಪಿ.ಜೆ ಅಬ್ದುಲ್ ಕಲಾಂ ನಿಧನಕ್ಕೆ ಸಂಘ, ಸಂಸ್ಥೆಗಳ ಸಂತಾಪ, ಪಟ್ಟಣದ ಶಿಕ್ಷಕ ಶಿವಣ್ಣರವರ ಮನೆ ಕಳ್ಳತನ, ಜೆ.ಸಿ.ಪುರದಲ್ಲಿ ಪೈಲ್ಲೈನ್ ರಂದ್ರಕ್ಕೆ ಪಟ್ಟಣದ ಪುರಸಭೆಯಲ್ಲಿ ಗದ್ದಲ, ಸ್ವಾಮೀಜಿಗಳ ನೇತೃತ್ವದಲ್ಲಿ ಹೇಮಾವತಿ ನಾಲಾ ಕಾಮಗಾರಿ ಪ್ರಾರಂಭಿಸಲು ಚಿ.ನಾ.ಹಳ್ಳಿಯಿಂದ ಕೆ.ಬಿ.ಕ್ರಾಸ್ವರೆಗೆ ಪಾದಯಾತ್ರೆ, ಬೈಪಾಸ್ ರಸ್ತೆ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಾರ್ವಜನಿಕರ ಸಭೆ, ಎಂ.ವಿ.ನಾಗರಾಜ್ರಾವ್ರವರ ಅಮೃತಮಹೋತ್ಸವ ಕಾರ್ಯಕ್ರಮ.  
ಸೆಪ್ಟೆಂಬರ್-2015 : ಶ್ರೀ ಕೃಷ್ಣ ಜಯಂತಿ ಅಂಗವಾಗಿ ಯುವಕರಿಗೆ ಮಡಕೆ ಹೊಡೆಯುವ ಸ್ಪಧರ್ೆ, ಮಕ್ಕಳ ಕೃಷ್ಣ ವೇಷ ಸ್ಪಧರ್ೆ, ಮಹಾಲಕ್ಷ್ಮೀ ಬಡಾವಣೆಯಲ್ಲಿ ರಸ್ತೆಗೆ ಅಡ್ಡಲಾಗಿ ಸುರಿದಿದ್ದ ಮಣ್ಣನ್ನು ತೆರವುಗೊಳಿಸಿದ ಅಧಿಕಾರಿಗಳು, ಕನರ್ಾಟಕ ಸಾಹಿತ್ಯ ಅಕಾಡೆಮಿ ನೀಡುವ ಮಧುರ ಚೆನ್ನ ದತ್ತಿ ನಿಧಿ ಪ್ರಶಸ್ತಿಯನ್ನು ತಾಲ್ಲೂಕಿನ ಮಾಕಳ್ಳಿ ಗ್ರಾಮದ ಯುವ ಬರಹಗಾತರ್ಿ ಸ್ಮಿತರವರಿಗೆ ನೀಡಲಾಗಿತ್ತು. ಪೋಲಿಸ್ ಸಮುದಾಯ ಭವನ ಉದ್ಘಾಟನೆ ಐಜಿಪಿ ಅರುಣ್ಚಕ್ರವತರ್ಿ ಭೇಟಿ, ಜೆ.ಸಿ.ಪುರದಲ್ಲಿ ಹೊಡೆದಿದ್ದ ಹೇಮಾವತಿ ಪೈಪ್ಲೈನ್ಗೆ ಪುರಸಭೆಯಿಂದ ವೆಲ್ಡಿಂಗ್, ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ, ನಾನು ಅವನಲ್ಲ ಅವಳು ಚಿತ್ರ ವೀಕ್ಷಿಸಿದ ತಾಲ್ಲೂಕಿನ ಸ್ವಾಮಿಜಿಗಳು.
ಅಕ್ಟೋಬರ್-2015 : ತುಮಕೂರಲ್ಲಿ ಕೊಲೆಯಾದ ವ್ಯಕ್ತಿಯ ಪೋಸ್ಟ್ಮಾಟಂ ಆಗದೆ ಚಿ.ನಾ.ಹಳ್ಳಿಯಲ್ಲಿ ಸಮಾಧಿ ಮಾಡಿದ್ದ ಶವವನ್ನು ಹೊರತೆಗೆದ ಪೋಲಿಸರು, ಪಟ್ಟಣದಲ್ಲಿ ದೇವರ ಮೆರವಣಿಗೆ ಕೊಂಡೊಯ್ಯಲು ಕುರುಬ-ಬಲಿಜ ಜನಾಂಗದ ನಡುವೆ ಘರ್ಷಣೆ, ಗಲಭೆ ವ್ಯಕ್ತಿಗಳ ಬಂಧನ, ಎರಡು ಸಮಾಜಗಳ ನಡುವೆ ಪೋಲಿಸರ ಶಾಂತಿ ಸಭೆ, ರೈತ ಅನುವುಗಾರರ ಪ್ರತಿಭಟನೆ, ಸರ್ವಧಮರ್ೋತ್ಸವ ಸಮ್ಮೇಳನ, ಲೋಕಾಯುಕ್ತರ ಕುಂದುಕೊರತೆ ಸಭೆ.
ನವಂಬರ್-2015 : ಹಂದನಕೆರೆಯಲ್ಲಿ ವೃದ್ದ ದಂಪತಿ ನಿಗೂಡ ಕೊಲೆ, ತಾಲ್ಲೂಕಿನ ಗ್ರಾಮ ರಸ್ತೆ ಡಾಂಬರೀಕರಣಕ್ಕೆ ಚಾಲನೆ, ಮಕ್ಕಳ ದಿನಾಚಾರಣೆ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಮಕ್ಕಳಿಂದ ಭಾಷಣ, ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಮುಖಂಡರುಗಳಿಂದ ತಾಲ್ಲೂಕು ಭೇಟಿ, ಅಗ್ನಿಶಾಮಕ ಸಿಬ್ಬಂದಿಯಿಂದ ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ, ಹೆಚ್ಚು ಮಳೆ ರಾಗಿ ಬೆಳೆ ನಾಶ.
ಡಿಸಂಬರ್-2015 :  ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ತಾಲ್ಲೂಕಿನ ಮಕ್ಕಳು ಆಯ್ಕೆ, ವ್ಯಾಪಕವಾಗಿ ಹರಡಿದ ಕುರಿಗಳಿಗೆ ನೀಲಿನಾಲಗೆ ರೋಗ, ವಿಧಾನ ಪರಿಷತ್ ಚುನಾವಣೆಯ ಅಭ್ಯಥರ್ಿಗಳಿಂದ ಪ್ರಚಾರ ಭರಾಟೆ, ಕಾತರ್ಿಕಮಾಸದ ಅಂಗವಾಗಿ ದೇವಾಲಯಗಳಲ್ಲಿ ದೀಪೋತ್ಸವ, ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವ, ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚುನಾವಣಾ ಪ್ರಚಾರ, ಕುಪ್ಪೂರು ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಿತು. ಜೆಡಿಎಸ್ ಅಭ್ಯಥರ್ಿ ಬೆಮೆಲ್ ಕಾಂತರಾಜು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು.


ರೈತರು ಮೇವು ಸ್ವಾವಲಂಬನೆ ಸಾಧಿಸಬೇಕು
ಚಿಕ್ಕನಾಯಕನಹಳ್ಳಿ,ಡಿ.30 : ರೈತರು ಮೇವು ಸ್ವಾವಲಂಭನೆ ಸಾಧಿಸಿದಾಗ ಮಾತ್ರ ಹೈನುಗಾರಿಕೆ ಲಾಭದಾಯಕ ಕಸುಬು ಆಗಬಲ್ಲದು ಎಂದು ಕೇಂದ್ರೀಯ ಮೇವು ಬೀಜ ಉತ್ಪಾಧನಾ ಕೇಂದ್ರ ನಿದರ್ೇಶಕ ಎ.ಬಾಲಸುಬ್ರಮಣ್ಯನ್ ಹೇಳಿದರು.
  ತಾಲ್ಲೂಕಿನ ಮುದ್ದೇನಹಳ್ಳಿ ರೈತ ವಿರಭದ್ರಯ್ಯ ಅವರ ತೋಟದಲ್ಲಿ ಬುಧವಾರ ಸುಧಾರಿತ ಮೇವು ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ರೈತರು ಹಾಲು ಉತ್ಪಾಧನೆಯಿಂದ ಬರುವ ಆಧಾಯದ ಶೇ.70 ಭಾಗ ಕೃತಕ ಆಹಾರ ಕಂಪನಿಗಳ ಪಾಲಾಗುತ್ತಿದೆ, ರಾಸುಗಳ ಲಾಲನೆ-ಪಾಲನೆ, ರೈತರ ಶ್ರಮ ಲೆಕ್ಕ ಹಾಕಿದರೆ ರೈತರು ಶೇ.15ರಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದರು.
  1979ರಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ ಸ್ಥಾಪಿತವಾಗಿರುವ ಕೇಂದ್ರೀಯ ಮೇವು ಬೀಜ ಉತ್ಪಾಧನೆ ಕೇಂದ್ರ ಮೇವು ಸ್ವಾವಲಂಭನೆ ಸಾಧಿಸಲು ರೈತರಿಗೆ ನೆರವು ಆಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ, ಈ ವರ್ಷ ದಕ್ಷಿಣ ಭಾರತದ 5 ರಾಜ್ಯಗಳಾದ ಕನರ್ಾಟಕ, ಕೇರಳ, ತಮಿಳುನಾಡು, ಆಂದ್ರ ಮಧ್ಯಪ್ರದೇಶಗಳಲ್ಲಿ 1200 ಮಾಧರಿ ಮೇವು ತಾಕುಗಳನ್ನು ನಿಮರ್ಾಣ ಮಾಡುವ ಗುರಿ ಹೊಂದಿದೆ. ಕನರ್ಾಟಕದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಈ ಯೋಜನೆಗೆ ಆಯ್ಕೆಯಾಗಿದ್ದು 200 ಮಾಧರಿ ತಾಕುಗಳನ್ನು ತಾಲ್ಲೂಕಿನಲ್ಲಿ ನಿಮರ್ಿಸಲಾಗಿದೆ ಎಂದರು.
   ಮಳೆ ಆಶ್ರಿತ ಪ್ರದೇಶಕ್ಕೆ ಸೂಕ್ತವಾದ ಗಿನಿಯಾ ಮೆಕುನಿ ಹಾಗೂ ಕೆಲಿಡಿ ಕೊತ್ತಂಬರಾ ಜಾತಿಯ ಮೇವಿನ ಬೀಜವನ್ನು ತಾಲ್ಲೂಕಿನ ಮಾಧರಿ ತಾಕುಗಳಲ್ಲಿ ಬಿತ್ತಲಾಗಿದೆ. ಬಿತ್ತನೆ ಮಾಡಿದ 50 ದಿವಸಕ್ಕೆ ಕಟಾವಿಗೆ ಬರುತ್ತದೆ. ಕಟಾವು ಮಾಡಿದಂತೆ ಮತ್ತೆ ಚಿಗುರುವ ಗುಣ ಇರುವ ಈ ಪ್ರಬೇಧ ನಿರಂತರವಾಗಿ 15ರಿಂದ 20 ವರ್ಷ ರಾಸುಗಳಿಗೆ ಮೇವ ಒದಗಿಸಬಲ್ಲದು. ನೀರಾವರಿ ಹಾಗೂ ಮಳೆ ಆಶ್ರಿತ ತಾಕುಗಳಲ್ಲಿ ಬೆಳೆಯಬಲ್ಲ ಈ ಮೇವು ಬಯಲು ನಾಡಿನ ರೈತರ ಮೇವು ಸ್ವಾವಲಂಭನೆಗೆ ಸಹಕಾರಿಯಾಗಲಿದೆ ಎಂದರು. 
   ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಶು ಇಲಾಖೆ ಸಹಾಯಕ ನಿದರ್ೇಶಕ ಡಾ.ಜಿ.ಕೆ.ನಾಗರಾಜು ಮಾತನಾಡಿ, ಮೇವಿನ ಕ್ರಾಂತಿ ಕ್ಷೀರಕ್ರಾಂತಿಯ ತಾಯಿ, ಈ ಯೋಜನೆಯನ್ನು ಪಶು ಇಲಾಖೆ ಹಾಗೂ ಹಂದನಕೆರೆ ರೇವಣಸಿದ್ಧೇಶ್ವರ ಕುರಿಗಾಹಿಗಳ ಸಹಕಾರ ಸಂಘ ಸೋಯುಕ್ತವಾಗಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುತ್ತಿವೆ ಎಂದರು.
 ಈ ಸಂದರ್ಭದಲ್ಲಿ ರೈತ ವೀರಭದ್ರಪ್ಪ, ಡಾ.ಅಜಿತ್, ಡಾ.ಸಂಜಯ್, ಡಾ.ತಿಮ್ಮರಾಜು, ಡಾ.ರಘುಪತಿ, ಹುಳಿಯಾರ್ ರಾಜಪ್ಪ ಮುಂತಾದವರು ಇದ್ದರು.




Tuesday, December 29, 2015


ಓದು, ಬರಹ ಅಭಿವ್ಯಕ್ತಿಗೆ ಪೂರಕವಾದ ವಾತಾವರಣ ಅಗತ್ಯ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಡಿ.29 : :ಶಾಲಾ ಕಲಿಕೆ ಓದು, ಬರಹ ಹಾಗೂ ಅಭಿವ್ಯಕ್ತಿಗೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸಲು ಶಿಕ್ಷಕರು ಸೃಜನಾತ್ಮಕವಾಗಿ ಚಿಂತಿಸುವ ಅಗತ್ಯ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಬಿಆರ್ಸಿ ಸಭಾಂಗಣದಲ್ಲಿ ನಡೆದ ಓದು ಬರಹ ಮತ್ತು ಅಭಿವ್ಯಕ್ತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಮಾಹಿತಿ ತುಂಬುವುದಕ್ಕಿಂತ ಭಾವನಾತ್ಮಕ ವಾತಾವರಣ ನಿಮರ್ಿಸಿವುದು ಮುಖ್ಯ, ಚಿಕ್ಕಂದಿನಲ್ಲೇ ಭಾವನೆಗಳನ್ನು ಸಂಭಾಳಿಸುವ ಕಲೆ ಕರಗತ ಮಾಡಿಕೊಂಡ ಮಕ್ಕಳು ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದರು.
ಸಕರ್ಾರ ಜಾರಿಗೆ ತಂದಿರುವ ನಲಿ-ಕಲಿ ಪದ್ದತಿ ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ಒತ್ತು ಕೊಡಲು ರೂಪಿಸಿರುವ ಪದ್ದತಿ, ಪ್ರಾಥಮಿಕ ಹಂತದಲ್ಲಿ ಕಲಿಸುವ ಜವಾಬ್ಧಾರಿ ಹೊತ್ತಿರುವ ಶಿಕ್ಷಕರು ಇದನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು. 
     ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಪರಶಿವಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.


ರೈತ ಅನುವುಗಾರರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮನವಿ
ಚಿಕ್ಕನಾಯಕನಹಳ್ಳಿ,ಡಿ.29 : ಕೃಷಿ ಇಲಾಖೆ ಮತ್ತು ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಅನುವುಗಾರರ ಜೀವನ ಮತ್ತು ಅವರ ಕುಟುಂಬಗಳ ಪರಿಸ್ಥಿತಿ ಅತಂತ್ರವಾಗಿದೆ ಎಂದು ರೈತ ಅನುವುಗಾರರ ಸಂಘದ ಜಿಲ್ಲಾ ಕಾರ್ಯದಶರ್ಿ ಗಂಗಪ್ಪ ಹೇಳಿದರು.
ಇತ್ತೀಚೆಗೆ ತಾಲ್ಲೂಕಿನ ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತ ಅನುವಾಗರರ ಸಂಘ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯ ಪುಟ್ಟರಾಜು ಮಾತನಾಡಿ ರಾಜ್ಯದಲ್ಲಿ 9617 ರೈತ ಅನುವುಗಾರರಿದ್ದು ಇಲಾಖೆಯ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಅನುವುಗಾರರನ್ನು ತೆಗೆದುಹಾಕಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮುಂದಾಗಿರುವ ಸಕರ್ಾರದ ಕ್ರಮದಿಂದ ರೈತ ಅನುವುಗಾರರ ಸ್ಥಿತಿ ಅತಂತ್ರಗೊಂಡಿದೆ ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಇತ್ತ ಗಮನ ಹರಿಸಿ ಅನುವುಗಾರರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಅನುವುಗಾರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಸಿ.ನಾಗರಾಜು, ಕಾರ್ಯದಶರ್ಿ ಶ್ರೀನಿವಾಸ್, ಖಜಾಂಚಿ ಜಯಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗುರುಸ್ಪಂದನ ಕಾರ್ಯಕ್ರಮ ಜನವರಿ 2
ಚಿಕ್ಕನಾಯಕನಹಳ್ಳಿ,ಡಿ.29 : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಿಆರ್ಸಿ ಸಭಾಂಗಣದಲ್ಲಿ ಜನವರಿ,2 ಶನಿವಾರ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಗುರುಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದ್ದಾರೆ.
  ತಾಲ್ಲೂಕಿನ ಕಂದಿಕೆರೆ, ತೀರ್ಥಪುರ, ಬರಗೂರು ಹಾಗೂ ಮತಿಘಟ್ಟ ಕ್ಲಸ್ಟರ್ಗಳ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಗುರುಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಂಬಂಧಿಸಿದ ಕಾರ್ಯನಿವರ್ಾಕರಿಗೆ ಸಲ್ಲಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಧರ್ಮದಲ್ಲಿನ ವೈಚಾರಿಕತೆ ಪಾಲಿಸುತ್ತಿರುವ ಪಂಚಪೀಠಗಳು
ಚಿಕ್ಕನಾಯಕನಹಳ್ಳಿ,ಡಿ.29 : ಪಂಚಪೀಠಗಳಾದ ಬಾಳೆ ಹೊನ್ನೂರು ಮಠ, ಶ್ರೀಶೈಲ ಮಠ, ಕಾಶಿ ಮಠ, ಉಜ್ಜಯನಿ ಮಠ ಹಾಗೂ ಕೇದಾರ ಮಠಗಳು ವೀರಶೈವ ಧರ್ಮದಲ್ಲಿನ ವೈಚಾರಿಕತೆಯನ್ನು ಪಾಲಿಸುತ್ತಾ ಬರುತ್ತಿವೆ ಎಂದು ಹಿಮಾಚಲ ಪ್ರದೇಶದ ಕೇದಾರ ಪೀಠದ ಹಿಮವಂತ್ ರಾವಲ್ ಭೀಮಾಶಂಕರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಈಚೆಗೆ ನಡೆದ ವಿಶೇಷ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ ಮಾತನಾಡಿ, ಸಕಲ ಜೀವ ರಾಶಿಗಳಲ್ಲೇ ಮನಷ್ಯನ ಮೇಲೆಯೆ ಶಿವನ ಒಲುಮೆಯು ಹೆಚ್ಚಾಗಿದೆ, ಗಂಡಾಗಲಿ ಹೆಣ್ಣಾಗಲಿ ಬಾಳಿನಲ್ಲಿ ಸುಖ ಶಾಂತಿಯನ್ನು ಪಡೆಯಲು ಹಣ, ಅಧಿಕಾರದಿಂದ ಸಾದ್ಯವಾಗುವುದಿಲ್ಲ ಎಂದ ಅವರು ಇಷ್ಟಲಿಂಗ ಪೂಜೆ ಪಂಚಾಚಾರ್ಯ ಪರಂಪರೆ ಅಡಿಪಾಯ, ಪಂಚಾಚಾರ್ಯ ಪರಂಪರೆ ರಕ್ಷಣಾ ಸಮಿತಿ ರಚಿಸುವ ಮೂಲಕ ಶರಣ ತತ್ವವನ್ನು ಪಸರಿಸುವ ಕೆಲಸ ಆಗಬೇಕು ಎಂದರು. 
ವಿಭೂತಿಪುರ ಮಠಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಧರ್ಮವಿರುವವರೆಗೂ ದೇಶ ಮೃತ್ಯುಂಜಯವಾಗಿರುತ್ತದೆ, ಧರ್ಮವನ್ನು ಬಿಟ್ಟ ದೇಶ ನಾಶವಾಗುತ್ತದೆ ಎಂದರು.
  ಕುಪ್ಪೂರು ಗದ್ದಿಗೆಯ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠಾಧ್ಯಕ್ಷ ಚನ್ನ ಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿ ಮಠಾಧ್ಯಕ್ಷ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.




Thursday, December 24, 2015


ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವಿಕೇಂದ್ರಿಕರಣಕ್ಕೆ ಬದ್ಧವಾಗಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ



ಚಿಕ್ಕನಾಯಕನಹಳ್ಳಿ : ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವೀಕೇಂದ್ರಿಕರಣಕ್ಕೆ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪಕ್ಷದ ಕಾಂಗ್ರೆಸ್ ಅಭ್ಯಥರ್ಿ ಆರ್.ರಾಜೇಂದ್ರ ಪರವಾಗಿ ಚುನಾವಣಾ ಪ್ರಚಾರದ ಸಮಾವೇಶವನ್ನು ಉದ್ಘಾಟಸಿ ಮಾತನಾಡಿ, ಬಿ.ಜೆ.ಪಿ, ಜೆ.ಡಿ.ಎಸ್ ಪಕ್ಷಗಳು ಬಂದು ದಿನವಾದರೂ ಸಾಮಾಜಿಕ ನ್ಯಾಯ ಅಧಿಕಾರ ವೀಕೇಂದ್ರಿಕರಣದ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು ದಿ.ರಾಜೀವ್ಗಾಂಧಿಯವರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳನ್ನು ತರುವ ಮೂಲಕ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿಯನ್ನು ತಂದು ಸ್ಥಳಿಯ ಸಂಸ್ಥೆಗಳಲ್ಲಿ ಅಧಿಕಾರ ಸಿಗಲು ಕಾರಣವಾದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮಾಜೋಯಿಸ್ರವರು ಮೀಸಲಾತಿ ತಿದ್ದುಪಡಿ ವಿರೋಧಿಸಿ ಸುಪ್ರೀಂ ಕೋಟರ್್ಗೆ ರಿಟ್ ಅಜರ್ಿ ಸಲ್ಲಿಸಿದರು ಇದರಿಂದ ಅಲ್ಪಸಂಖ್ಯಾಂತರು. ಮಹಿಳೆಯರು, ದಲಿತರು ಹಿಂದುಳಿದ ವರ್ಗಗಳು. ಸಾಮಾಜಿಕ ನ್ಯಾಯದಲ್ಲಿ ಸಮಾನತೆ ಮೂಲಕ ಪರಿವರ್ತನೆ ಆಗಬಾರದು ಎಂಬ ಉದ್ದೇಶವಿತ್ತು ಆ ಸಂದರ್ಭದಲ್ಲಿ ಈ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರು, ಜಗದೀಶಶೆಟ್ಟರು ಇದರ ಬಗ್ಗೆ ಚಕಾರವೆತ್ತಲಿಲ್ಲ, ಅದೃಷ್ಠವಶಾತ್ ಅಜರ್ಿ ತಿರಸ್ಕೃತಗೊಂಡ ಪರಿಣಾಮ ಮೀಸಲಾತಿ ಉಳಿಯಿತು. 
ಬಿ.ಜೆ.ಪಿ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ, ಜೆ.ಡಿ.ಎಸ್. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿದ್ದಾರೆ, ದೇವೇಗೌಡರು ಹೋರಾಟಗಾರರು ಆದರೆ ಆ ಹೋರಾಟವೆಲ್ಲಾ ಅವರ ಕುಟುಂಬಕ್ಕೆ ರಾಜಕೀಯ ಅಧಿಕಾರ ಕೊಡಿಸುವುದಕ್ಕೆ ಸೀಮಿತವಾಗಿದೆ ಎಂಬುದರಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ ಎಂದ ಅವರು, ಹಣವಿಲ್ಲದೆ ರಾಜಕಾರಣ ಮಾಡುವುದಿಲ್ಲ, ಹಣದಿಂದಲೇ ಎಲ್ಲವನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಜೊತೆಗೆ ಈ ಎರಡು ಪಕ್ಷಗಳೂ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿವೆ, ಈ ಪಕ್ಷಗಳು ಪಂಚಾಯಿತಿ ವ್ಯವಸ್ಥೆ ಅಡಿಯಲ್ಲಿ ಮತ ಕೇಳಲು ನೈತಿಕತೆ ಇಲ್ಲ ಅದು ಕಾಂಗ್ರೇಸ್ಗೆ ಮಾತ್ರ ಇದೆ ಎಂದರು.
ಡಾ||ಎಂ.ಆರ್ ಹುಲಿನಾಯ್ಕರ್ ನಮ್ಮ ಜೊತೆಯಲ್ಲಿದ್ದು, ನಂತರ ಜೆ.ಡಿ.ಎಸ್. ಸೇರಿ ವಿಧಾನ ಪರಿಷತ್ ಸದಸ್ಯರಾದರು, ನಂತರ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಬಿ.ಜೆ.ಪಿ ಸೇರಿದ್ದಾರೆ ಎಂದರು. ಕಾಂಗ್ರೇಸ್ ಸಕರ್ಾರ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾಗಿದೆ ವಿಧಾನ ಸಭೆಯಲ್ಲಿ ಬಹುಮತಬೇಕಾಗಿದೆ,  25 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ನಡೆಯುವ 20 ಸ್ಥಾನಗಳಿಗೆ ಸ್ಪಧರ್ಿಸಿದ್ದೇವೆ 20ಸ್ಥಾನಗಳಲ್ಲೂ ಕಾಂಗ್ರೇಸ್ ಅಭ್ಯಥರ್ಿಗಳು ಗೆಲ್ಲಲಿದ್ದಾರೆ ಎಂಬ ಭರವಸೆ ಇದೆ. ಬಿ.ಜೆ.ಪಿಯ ವಿರೋದ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಹರಕು ನಾಲಿಗೆಯ ನಾಯಕ. ಇವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕವೆ ಇಲ್ಲ ನಾನು ಏನು ಮಾತಾನಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಹೇಳುವ ಅವರು, ತಪ್ಪೊಪು ಕೊಳ್ಳವಲ್ಲಿಯೂ ನಿಸ್ಸೀಮರು, ಅವರೊಬ್ಬ ಮೂರ್ಖ, ಅವಿವೇಕಿ ಎಂದು ಜರಿದರು,  ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಬಿ.ಜೆ.ಪಿಗಿಂತ ಹೆಚ್ಚು ಸ್ಥಾನ ಪಡೆದು ನೂರಕ್ಕೆ ನೂರು ರಾಜಕೀಯ ಸನ್ಯಾಸತ್ವ ಪಡೆಯುವುದು ಗ್ಯಾರಂಟಿ ಎಂದರು.
10 ಸಾವಿರ ಜನಸಂಖ್ಯೆಗೆ ಕಡಿಮೆ ಇರುವ ಪಂಚಾಯಿತಿಗಳಿಗೆ 6 ಲಕ್ಷ ಅನುದಾನವನ್ನು 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ, ದೇಶದಲ್ಲಿ ಶೇ.50% ರಷ್ಟು ಮೀಸಲಾತಿಯನ್ನು  ಹೆಚ್ಚಿಸಲು ಸೋನಿಯಾ ಗಾಂಧಿ ಕಾಂಗ್ರೇಸ್ ಕಾರಣ. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ನಿಯಮಗಳನ್ನು  ಮಾಡುವ ಅಧಿಕಾರ ನೀಡಿದೆ ರಾಜ್ಯದಲ್ಲಿ ಕಾಂಗ್ರೇಸ್ ಜನತೆಗೆ ಅಧೀಕಾರ ನೀಡಿದರೆ 165 ಭರವಸೆಗಳನ್ನು ನೀಡಿತ್ತು ಇದರಲ್ಲಿ 100ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಕಾಂಗ್ರೇಸ್ ಸಕರ್ಾರ ಬಂದ ಮೇಲೆ ಅನ್ನಭಾಗ್ಯ, ಕ್ಷೀರಭಾಗ್ಯದ ಮೂಲಕ 1 ಕೋಟಿ ಮಕ್ಕಳಿಗೆ ಶಾಲೆಗಳಲ್ಲಿ ಹಾಲು ನೀಡುತ್ತಿದ್ದೇವೆ. ರೈತರಿಗೆ ಸಾಲ ಮನ್ನಾ ರೈತರಿಗೆ 3 ಲಕ್ಷದವರಿಗೆ ಬಡ್ಡಿ ರಹಿತ ಸಾಲ,  ಮೈತ್ರಿ,  ಮನಸ್ವಿನಿ ಕಾರ್ಯಕ್ರಮವನ್ನು ಎಲ್ಲ ವರ್ಗದವರಿಗೂ ನೀಡಿದ್ದೇವೆ. ಕಾಂಗ್ರೇಸ್ ಸಕರ್ಾರ ನೀರಾವರಿ  ಹಾಗೂ ರಸ್ತೆ ನಿಮರ್ಾಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಬೇಕು ಆದ್ದರಿಂದ ಜಿ.ಪಂ ಗ್ರಾ.ಪಂ ತಾ.ಪಂ, ಸದಸ್ಯರು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಿಗೆ ಮತ ಚಲಾಯಿಸಿ ಅವರನ್ನು ಗೆಲ್ಲಿಸಿ ವಿಧಾನ ಪರಿಷತ್ಗೆ  ಕಳಿಸಿ ಎಂದರು.
ಗೃಹ ಸಚಿವ ಡಾ|| ಜಿ. ಪರಮೇಶ್ವರ್ ಮಾತನಾಡಿ,  ದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರ  ಸಕರ್ಾರ ಬಿಡಿಕಾಸನ್ನು  ಬಿಡುಗಡೆ ಮಾಡಿಲ್ಲ ಇದರ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು,  ಕೇಂದ್ರ ಸಕರ್ಾರ ಬರಗಾಲ ಪರಿಹಾರಕ್ಕೆ 1500 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ, ಆದರೂ ಬಿಡುಗಡೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಮುಂದುವರೆಸಲು 10 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ದೇಶದಲ್ಲಿನ ರೈತರ ಸಾಲ 72 ಸಾವಿರ ಕೋಟಿಗಳನ್ನು ಮನ್ನಾ ಮಾಡಿದ್ದಾರೆ. ಮುಖ್ಯಮಂತ್ರಿಗಳು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿಧಾನ ಸಭೆಯ ಜೊತೆಯಲ್ಲಿ ವಿಧಾನ ಪರಿಷತ್ನಲ್ಲೂ ಸಂಖ್ಯಾಬಲ ಅಗತ್ಯ ಆದ್ದರಿಂದ ಯುವಕರಾದ ಆರ್,ರಾಜೇಂದ್ರರವರಿಗೆ ಮತ ನೀಡಿಗೆಲುವಿಗೆ ಶ್ರಮಿಸಿ ಎಂದು ಹೇಳಿದರು.
ಜಿಲ್ಲಾ ಉಸುವಾರಿ ಸಚಿವ ಟಿ.ಬಿ ಜಯಚಂದ್ರ ಮಾತನಾಡಿ,  ರಾಜ್ಯದಲ್ಲಿ ಅಂತರ್ಜಲ ಕಡಿಮೆಯಾಗಿ ಕುಡಿಯಲು ನೀರಿಲ್ಲ ಸಮಸ್ಯೆ ಜಾಸ್ತಿಯಾಗಿದೆ ಆದರಿಂದ ಹುಳಿಯಾರು ಭಾಗಕ್ಕೆ ಬೋರನ ಕಣಿವೆ ಜಲಾಶಯದಿಂದ  4 ಕೋಟಿ ವೆಚ್ಚದಲ್ಲಿ ಹುಳಿಯಾರಿಗೆ  ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಆದರೆ ಅಧಿಕಾರಿಗಳೂ ಅಥವಾ ಗ್ರಾಮ ಪಂಚಾಯಿತಿ ನೀರನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದೆ. ಹಸಿದ ಹೊಟ್ಟೆಗೆ ಅನ್ನ ಬರಡು ಭೂಮಿಗೆ  ನೀರುಬೇಕಾಗಿದೆ ಆದ್ದರಿಂದ ಭದ್ರಮೆಲ್ದಂಡೆ ಯೋಜನೆಗೆ ಒತ್ತು ನೀಡಿದ್ದೇವೆ ಎಂದರಲ್ಲದೆ,  ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜು ಅರಸ್ ಚಾಲನೆ ನೀಡಿದರು 12360ಕೋಟಿ ರೂ ವೆಚ್ಚದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಕರ್ಾರ ಹಣ ಬಿಡುಗಡೆ ಮಾಡಿದೆ ಎಂದರು, ಕಾಂಗ್ರೆಸ್ ನಡಿಗೆ, ಕೃಷ್ಣೆ ಕಡೆಗೆ ಎಂಬ ಪಾದಯಾತ್ರೆಯಲ್ಲಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಪ್ರತಿ ವರ್ಷ ನೀರಿಗಾಗಿ ಬಜೆಟ್ನಲ್ಲಿ 10 ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗುತ್ತಿದೆ ಎಂದರು.
ಇಂದನ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ,  ಕಾಂಗ್ರೇಸ್ ಪಕ್ಷ ಜಾತ್ಯಾತೀತ ಪಕ್ಷ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಎಲ್ಲ ಜಾತಿಗಳು ಅಧಿಕಾರಕ್ಕೆ ಬಂದ ಹಾಗೆ ಎಂದ ಅವರು ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗ ಜಿಲ್ಲಾ ಪಂಚಾಯಿತ್ ತಾಲ್ಲೂಕು ಪಂಚಾಯಿತ್ಗಳಿಗೆ  ಅಧಿಕಾರ ನೀಡಿದ್ದೇವೆ. ಜೆ.ಡಿ.ಎಸ್, ಬಿ.ಜೆ.ಪಿ ಸಕರ್ಾರಗಳು  ಗ್ರಾಮ ಪಂಚಾಯಿತ್ಗಳಿಗೆ ಅಧಿಕಾರ ನೀಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಚಿಕ್ಕನಾಯಕನಹಳ್ಳಿ ಕ್ಷೇತ್ರ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತದಾರರಿವವ ಕ್ಷೇತ್ರ, ಇಲ್ಲಿ ಪಕ್ಷವನ್ನು ಕಟ್ಟಲು ಸಾಕಷ್ಟು ಅವಕಾಶವಿದೆ, ಮೊದಲು ನಾವು ಇಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಇಲ್ಲಿನ ಮೊದಲ ಸಮಸ್ಯೆ ತಾಲೂಕಿಗೆ ಹೇಮಾವತಿ ಕುಡಿಯುವ ನೀರು ಯೋಜನೆಗೆ ಪುನರ್ ಚಾಲನೆ ನೀಡುವುದು, ರಸ್ತೆಗಳ ಅಭಿವೃದ್ದಿ, ಹುಳಿಯಾರನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದಜರ್ೆಗೇರಿಸುವುದು, ಬುಕ್ಕಾಪಟ್ಟಣ ಹೋಬಳಿಯ ಅಭಿವೃದ್ದಿಗೆ ಒತ್ತು ನೀಡುವುದು ಸೇರಿದಂತೆ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೀರಿಸಿದರೆ ಹಾಗೂ  ಜಿಲ್ಲಾ ಸಚಿವರು ನಮಗೆ ಹೆಚ್ಚು ಒತ್ತು ನೀಡಿವುದು ಸೇರಿದಂತೆ ಕಾಂಗ್ರೆಸ್ ಪಕ್ಷದವರು ಜೆ.ಡಿ.ಎಸ್.ಪಕ್ಷ ಬೆಳೆಸುವುದನ್ನು ಬಿಟ್ಟರೆ ನಾವು ಇಲ್ಲಿ ಜೆ.ಡಿ.ಎಸ್.ಗೆ ಬಾವುಟ ಕಟ್ಟಲು ಜನವಿಲ್ಲದಂತೆ ಮಾಡಬಹುದು ಎಂದರು.
ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ ಬಿ.ಜೆ.ಪಿ. ಮುಖಂಡರಾದ ಸುಬ್ರಮಣ್ಯ ಸ್ವಾಮಿಯವರನ್ನು ಮುಂದಿಟ್ಟುಕೊಂಡು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಯ ಮೇಲೆ ರಾಹುಲ್ಗಾಂಧಿ ಹಾಗೂ ಸೋನಿಯಾಗಾಂಧಿಯವರ ಮೇಲೆ ಸುಳ್ಳು ಮೊಖದ್ದಮೆ ದಾಖಲಿಸಿದ್ದಾರೆ. ಇದರ ವಿರುದ್ದ ದೇಶಾದ್ಯಾಂತ ಮುಷ್ಕರ ನಡೆಸಿದ್ದೇವೆ ತಾಲ್ಲೂಕಿನ ಹೇಮಾವತಿ ನಾಲೆ ಕಾಮಗಾರಿ ಪೂರ್ಣಗೊಳಿಸಲು ಇರುವ ಅಡೆತಡೆಗಳನ್ನು ತೊಲಗಿಸಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿಮಾಡಿದರು,
 ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಚಂದ್ರಪ್ಪ ವಿಧಾನ ಸಭಾ ಸದಸ್ಯರಾದ ಬಿ.ಜಿ.ಗೋವಿಂದಪ್ಪ, ಕೆ.ಷಡಾಕ್ಷರಿ, ರಫೀಕ್ ಅಹಮದ್, ಕೆ.ಎನ್ ರಾಜಣ್ಣ, ವಿಧಾನ ಪರಿಷತ್ ಸದಸ್ಯ ಎಮ್ ಡಿ. ಲಕ್ಷ್ಮೀನಾರಾಯಣ್, ಮಾಜಿ ಶಾಸಕರಾದ ಹೆಚ್ ಲಿಂಗಪ್ಪ, ಕಾಂಗ್ರೇಸ್ ಮುಂಖಡ ಸಾಸಲು ಸತೀಶ್, ಬಿ.ಲಕ್ಕಪ್ಪ, ಅಭ್ಯಾಥರ್ಿ ಆರ್.ರಾಜೇಂದ್ರ, ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ರಿಜ್ವಾನ್ಹರ್ಷದ್ ಕಾಂಗ್ರೆಸ್ ಮುಖಂಡರುಗಳಾದ ಜಿ.ರಘುನಾಥ್ .ಸಿ. ಬಸವರಾಜು, ವೈ.ಸಿ ಸಿದ್ದರಾಮಯ್ಯ. ಅಶೋಕ, ಮತ್ತಿತ್ತರರು ಉಪಸ್ಥಿತರಿದ್ದರು.

Wednesday, December 23, 2015


ರಸ್ತೆ ಗುಂಡಿ ಮುಚ್ಚುತ್ತಿರುವುದು ಕಳಪೆಯಾಗಿದೆ ಸಾರ್ವಜನಿಕರ ಆಕ್ರೋಶ
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹುಳಿಯಾರಿಗೆ ಚುನಾವಣಾ ಪ್ರಚಾರಕ್ಕಾಗಿ ಡಿ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತು ತರಾತುರಿಯಲ್ಲಿ ಪಟ್ಟಣದಲ್ಲಿನ ಮುಖ್ಯರಸ್ತೆಯ ಗುಂಡಿಗಳನ್ನು ಮುಚ್ಚುತ್ತಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಿಂದ ಕೆ.ಬಿ.ಕ್ರಾಸ್, ಚಿಕ್ಕನಾಯಕನಹಳ್ಳಿ, ಹುಳಿಯಾರು ಮಾರ್ಗವಾಗಿ ಬೀದರ್ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯಲ್ಲಿ ಬರುವ ಚಿಕ್ಕನಾಯಕನಹಳ್ಳಿ ಪಟ್ಟಣದ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಕಳೆದ ತಿಂಗಳು ಡಾಂಬರು ಹಾಕಿ ಗುಂಡಿಗಳನ್ನು ಮುಚ್ಚಲಾಗಿತ್ತು ಕಳಪೆ ಕಾಮಗಾರಿಯಿಂದ ಡಾಂಬರು ಕಿತ್ತು ಹೋಗಿ ರಸ್ತೆ ಪ್ರಯಾಣಕ್ಕೆ ತೊಂದರೆಯಾಗಿತ್ತು, ಗುತ್ತಿಗೆದಾರರು ರಸ್ತೆಗೆ ಜೆಲ್ಲಿಕಲ್ಲು ಹಾಕಿ ಹದಿನೈದು ದಿನಗಳ ಹಿಂದೆ ಮುಚ್ಚಿದ್ದರು ವಾಹನ ದಟ್ಟಣೆಯಿಂದ ಜೆಲ್ಲಿಕಲ್ಲುಗಳು ಚೆಲ್ಲಾಪಿಲ್ಲಿಯಾಗಿತ್ತು,  ಪುನಹ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ, ಜೆಲ್ಲಿಕಲ್ಲುಗಳು ರಸ್ತೆ ತುಂಬೆಲ್ಲಾ ಬಿದ್ದಿರುವುದರಿಂದ ಸಾರ್ವಜನಿಕರಿಗೆ, ದ್ವಿಚಕ್ರ ವಾಹನ, ಭಾರಿ ವಾಹನ ಹೋಗುವಾಗ ಕಲ್ಲುಗಳು ಟೈರಿಗಳಿಗೆ ಸಿಲುಕಿ ಚಿಮ್ಮುವುದರಿಂದ ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ, ಈಗ ಮುಖ್ಯಮಂತ್ರಿ ಆಗಮನ ಹಿನ್ನಲೆಯಲ್ಲಿ ರಾಜ್ಯ ಸಚಿವರು ಚಿಕ್ಕನಾಯಕನಹಳ್ಳಿ ಮೂಲಕ ಹುಳಿಯಾರಿಗೆ ತೆರಳುವುದರಿಂದ ಗುತ್ತಿಗೆದಾರರು ನಾಮಕಾವಸ್ತೆ ಡಾಂಬರು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ ಈ ಬಗ್ಗೆ ಸಾರ್ವಜನಿಕರು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ತಮಗೆ ಇಷ್ಟ ಬಂದಂತೆ ಗುಂಡಿಗಳನ್ನು ಮುಚ್ಚುತ್ತೇವೆ ಇದರ ಬಗ್ಗೆ ಕೇಳಲು ನಿಮಗೆ ಸಂಬಂದವೇನು ಎಂದು ಗುತ್ತಿಗೆದಾರರು ವಿಚಾರಣೆ ಮಾಡಿದ ನಾಗರೀಕರಿಗೆ ಧಮಕಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಹಗಲು ಸಮಯದಲ್ಲಿ ಮಾಡದೆ ರಾತ್ರಿ ವೇಳೆಯಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಕಾಮಗಾರಿಯ ಬಗ್ಗೆ ಶಂಕೆಯಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ, ಅಧಿಕಾರಿಗಳು ಮಾತ್ರ ಡಾಂಬರೀಕರಣ ಮಾಡುವ ಸ್ಥಳಕ್ಕೆ ಬಾರದೆ ತುಮಕೂರಿನಲ್ಲಿ ಕುಳಿತೇ ದೂರವಾಣಿ ಮೂಲಕ ಗುತ್ತಿಗೆದಾರರಿಗೆ ಸೂಚನೆಗಳನ್ನು ನೀಡುತ್ತಿರುವುದು ಸಾರ್ವಜನಿಕರನ್ನು ಕೆರಳಿಸಿದೆ.


ರೈತರ ಆತ್ಮಹತ್ಯೆ ತಡೆಯುವ ಸಲುವಾಗ ಜಾಗೃತಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,: ರೈತರ ಆತ್ಮಹತ್ಯೆ ತಡೆ ಜಾಗೃತಿ ಅಂಗವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಬ್ಧಚಿತ್ರ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ಹೊನ್ನದಾಸೇಗೌಡ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯ ಸಂಭಾಗಣದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಕುಟುಂಬದವರಿಗೆ ಪರಿಹಾರ ನೀಡಿದ್ದೇವೆ ಹಾಗೂ ಎರಡು ಸಾವಿರ ಮಾಶಾಸನ ನೀಡಲು ಸಕರ್ಾರ ಆದೇಶಿಸಿದೆ ಎಂದರು.  
ರಾಜ್ಯ ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿ, ರೈತರು ಕೃಷಿ ಮಾಡಿ ಒಳ್ಳೆಯ ಬೆಳೆ ಬಂದಾಗ ಖುಷಿ ಪಡುತ್ತಾರೆ ಆದರೆ ಮಾರುಕಟ್ಟೆಗೆ ತಮ್ಮ ಬೆಳೆ ಮಾರಲು ಹೋದಾಗ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರ ಕಣ್ಣಿನಲ್ಲಿ ನೀರು ಬರುತ್ತದೆ ಎಂದು ವಿಷಾದಿಸಿದರು. 
ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ತಿಮ್ಲಾಪುರ ಶಂಕರಪ್ಪ ಮಾತನಾಡಿ ರೈತರಲ್ಲಿ ಇಚ್ಛಾಶಕ್ತಿ ಕೊರತೆಯಿಂದಲೇ ಸಕರ್ಾರಗಳು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ, ಸಕರ್ಾರ ಹಾಗೂ ರಾಜಕಾರಣಿಗಳು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆಯೇ ಹೊರತು ರೈತರ ಅಭಿವೃದ್ದಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದರಲ್ಲದೆ ತಾಲ್ಲೂಕಿನ ಹೇಮಾವತಿ ನಾಲೆಯಿಂದ 26 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರೂ ಸಹ ಕಾಮಗಾರಿ ಕುಂಟುತ್ತ ಸಾಗಿ ಸ್ಥಗಿತಗೊಂಡಿದೆ ಆದರೆ ರಾಜಕಾರಣಿಗಳು ಮಾತ್ರ ಕಾಮಗಾರಿ ನಡೆಯುತ್ತಿದೆ ಎಂದು ಸುಳ್ಳು ಹೇಳಿ ವಂಚಿಸುತ್ತಿದ್ದಾರೆ ಎಂದರು.
ಕಾಖರ್ಾನೆಗಳು ತಯಾರಿಸಿದ ಪದಾರ್ಥಗಳಿಗೆ ತಾವೇ ಬೆಲೆ ಕಟ್ಟುತ್ತಾರೆ ಆದರೆ ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆ ಕಟ್ಟಲಾಗದೆ ಸಕರ್ಾರಗಳು ನಿಗದಿ ಪಡಿಸಿದ ಬೆಲೆಗಳಿಗೆ ಮಾರಬೇಕಾಗಿದೆ ಎಂದು ವಿಷಾಧಿಸಿದ ಅವರು ಸ್ವಾತಂತ್ರ್ಯ ಬಂದು 60ವರ್ಷ ಕಳೆದರು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ರೈತರಿಗೆ ಬೆಂಬಲ ಬೆಲೆ ನಿಗದಿ ಪಡಿಸದೇ ಅನ್ಯಾಯ ಮಾಡುತ್ತಿವೆ ಇದರಿಂದ ರೈತರು ಪಟ್ಟಣಗಳಿಗೆ ವಲಸೇ ಹೋಗುತ್ತಿದ್ದಾರೆ ಇದನ್ನು ತಡೆಗಟ್ಟಲು ಸಕರ್ಾರಗಳು ಮುಂದಾದರೇ ಮಾತ್ರ  ಗುಳೇ ಹೋಗುವುದು ತಪ್ಪಿಸಬಹುದು ಎಂದರು. 
ರೈತರು ದೇಶದ ಮಾಲೀಕರು ಅನ್ನದಾತ ಎಂದೆಲ್ಲಾ ಹೊಗಳುತ್ತಾರೆ ರೈತರಿಗೆ ಯಾವುದೇ ಸವಲತ್ತು ನೀಡುತ್ತಿಲ್ಲ ಇದರಿಂದ ರೈತರು ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ರೈತರ ದಿನಾಚಾರಣೆಯನ್ನು ತಾಲ್ಲೂಕು ಮಟ್ಟದಲ್ಲಿ ಮಾಡದೇ ಹಳ್ಳಿ ಹಳ್ಳಿಗಳಲ್ಲೂ ಮಾಡುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರೆ ರೈತರು ಸಹಕಾರ ನೀಡುತ್ತಾರೆ ಎಂದರು.
ಕೃಷಿಕ ಸಮಾಜದ ಕಾರ್ಯದಶರ್ಿ ಶಂಕರಪ್ಪ ಮಾತನಾಡಿ, ರಾಜಕಾರಣಿಗಳು ಚುನಾವಣೆಗಳು ಬಂದಾಗ ರೈತರ ಮನೆಗೆ ಬಂದು ಹೋಗುತ್ತಾರೆಯೇ ವಿನಹ ಗೆದ್ದ ನಂತರ ಹಳ್ಳಿಗಳ ಕಡೆ ತಿರುಗಿಯೂ ನೋಡುವುದಿಲ್ಲ, ರೈತರು, ಗೆದ್ದ ಪ್ರತಿನಿಧಿಗಳನ್ನು ಹುಡುಕಿಕೊಂಡು ಹೋಗುವ ಬದಲು ಅವರೇ ರೈತರನ್ನು ಹುಡುಕಿಕೊಂಡು ಬರುವಂತೆ ಮಾಡಿದರೆ ರೈತರಿಗೆ ಬೆಲೆ ಬರುತ್ತದೆ, ತಾಲ್ಲೂಕು ಕೃಷಿಕ ಸಮಾಜಕ್ಕೆ ಹದಿನೆಂಟು ಸಕರ್ಾರಿ ಇಲಾಖೆಗಳನ್ನು ಪ್ರಶ್ನಿಸುವ ಹಕ್ಕಿದೆ ಆದರೆ ರೈತರಿಗೆ ಅಧಿಕಾರ ಚಲಾಯಿಸಲು ಬರುತ್ತಿಲ್ಲ ಎಲ್ಲಾ ರೈತರು ಒಗ್ಗಟ್ಟಾದರೆ ಮಾತ್ರ ಅಧಿಕಾರಿಗಳನ್ನು ಪ್ರಶ್ನಿಸಬಹುದು ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶಪ್ಪ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಮ್ಮದು ರೈತರ ಸಕರ್ಾರ, ಗ್ರಾಮೀಣ ಜನರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನಂತರ ರೈತರ ಮೇಲೆ ಪ್ರಮಾಣವಚನ ಸ್ವೀಕರಿಸುತ್ತಾರೆ ಆದರೆ ರಾಜಕಾರಣಿಗಳು ಅಧಿಕಾರ ಬಂದ ತಕ್ಷಣ ರೈತರನ್ನು ಕಡೆಗಣಿಸುತ್ತಾರೆ, ಈ ವರ್ಷ ಮಳೆ ಹೆಚ್ಚಾಗಿ ರೈತರು ಬೆಳೆದ ರಾಗಿ, ನವಣೆ, ಸಾವೆ ಬೆಳೆಗಳು ಮಣ್ಣು ಪಾಲಾಗಿದ್ದು ಇದರ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ರೈತರಿಗೆ ಬೆಳೆ ವಿಮೆ ಬರುವಂತೆ ನೋಡಿಕೊಳ್ಳಬೇಕು ಎಂದರಲ್ಲದೆ ರೈತ ಸಂಘದ ಮೂಲಕ ತಾಲ್ಲೂಕು ಕಛೇರಿ ಬಳಿ ಹನ್ನೊಂದು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿ ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವ ಕಾಮಗಾರಿ ಪ್ರಾರಂಭಿಸಲು ಒತ್ತಾಯಿಸಿದರೂ ಸಾವಿರಾರು ಸಂಖ್ಯೆಯಲ್ಲಿ ಬರಬೇಕಾದ ರೈತರು ಕೇವಲ ಬೆರಳಣಿಕಯಷ್ಟೇ ಬಂದರು ಈಗಾದರೇ ರೈತರಿಗೆ ನ್ಯಾಯ ದೊರಕುವುದೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




Thursday, December 17, 2015


                        ಡಿ.24 ಹುಳಿಯಾರಿಗೆ ಮುಖ್ಯಂತ್ರಿಗಳ ಆಗಮನ
                           
ಚಿಕ್ಕನಾಯಕನಹಳ್ಳಿ,  : ಚುನಾವಣಾ ಸಮಯದಲ್ಲಿ ಜೆಡಿಎಸ್ ಪಕ್ಷ ಅಭ್ಯಥರ್ಿಗಳನ್ನು ವ್ಯಾಪಾರ ಮಾಡುವಂತಹ ವ್ಯಕ್ತಿಗಳನ್ನು ಹೊರಗಿನಿಂದ ಕರೆತಂದು ಚುನಾವಣೆಗೆ ನಿಲ್ಲಿಸುತ್ತಿದೆ ಇದರಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರ ಪಾತ್ರ ಹೆಚ್ಚಾಗಿದೆ ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು. 
  ಪಟ್ಟಣದ ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ರವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಎ.ಕೃಷ್ಣಪ್ಪರವರನ್ನು ನಿಲ್ಲಿಸಿದ್ದರು ಈಗ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ ಜೆಡಿಎಸ್ ಪಕ್ಷದ ಅಭ್ಯಥರ್ಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ, ಜೆಡಿಎಸ್ ಪಕ್ಷದಲ್ಲಿ ಸಮರ್ಥವಾದ ಅಭ್ಯಥರ್ಿಗಳಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಸ್ಪಧರ್ಿಸಿರುವ ಡಾ.ಹುಲಿನಾಯ್ಕರ್ ಸಭ್ಯ ವ್ಯಕ್ತಿ ಆದರೆ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಜಿಲ್ಲೆಯಲ್ಲಿ ಯಾವ ಅಭಿವೃದ್ದಿಯನ್ನೂ ಮಾಡಿಲ್ಲ, ಚುನಾವಣಾ ಸಮಯದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತಮ್ಮ ಹಿತಾಸಕ್ತಿಗಾಗಿ ಹಾರುತ್ತಾರೆ ಎಂದರು.
ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತ ನೀಡಿ ಎಸ್.ಪಿ.ಮುದ್ದಹನುಮೇಗೌಡರವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ, ಇದೇ ರೀತಿ ಈ ಬಾರಿಯೂ ಜನಪ್ರತಿನಿಧಿಗಳು ಹೆಚ್ಚು ಮತ ನೀಡಿ ಆರ್.ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ, ರಾಜೇಂದ್ರ ತಮ್ಮ ಮಗ ಎಂಬ ಕಾರಣದಿಂದ ವಿಧಾನ ಪರಿಷತ್ ಚುನಾವಣೆಗೆ ಟೀಕೆಟ್ ನೀಡಿಲ್ಲ ಅವರು 10 ವರ್ಷಗಳ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದರಿಂದ ಟಿಕೆಟ್ ನೀಡಲಾಗಿದೆ. ತಾಲ್ಲೂಕಿನಲ್ಲಿ ಕಾಂಗ್ರೇಸ್ ಗುಂಪುಗಾರಿಕೆ ಇಲ್ಲ, ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಎಲ್ಲರೂ ಒಂದಾಗಿ ಪಕ್ಷದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜೇಂದ್ರರವರನ್ನು ಮತದಾರರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಷಫಿ ಅಹಮದ್ ಮಾತನಾಡಿ,  ಡಿಸೆಂಬರ್ 24ರಂದು ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಪರಿಷತ್ ಅಭ್ಯಥರ್ಿ ಆರ್.ರಾಜೇಂದ್ರರವರ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ 5976 ಜನ ಪ್ರತಿನಿಧಿಗಳಲ್ಲಿ ಹೆಚ್ಚಿನ ಪ್ರತಿನಿಧಿಗಳು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆಯುವ ಸಮಾವೇಶಕ್ಕೆ ಬೇಟಿ ನೀಡಿ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದಲ್ಲಿ  ಸಂಸದ ಮುದ್ದೇಹನುಮೇಗೌಡ,  ಚಿತ್ರದುರ್ಗ ಸಂಸದ ಚಂದ್ರಯ್ಯ ಹಾಗೂ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದರು. 
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ರಾಹುಲ್ಗಾಂಧಿ ಯುವಕರಾಗಿದ್ದು ಯುವಕರಿಗೆ ಆಧ್ಯತೆ ನೀಡಬೇಕೇಂಬ ಕಾರಣದಿಂದ ಆರ್.ರಾಜೇಂದ್ರ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸಕರ್ಾರವಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ರಾಜೇಂದ್ರ ಜಯಗಳಿಸಿದರೆ ಗ್ರಾ.ಪಂ, ಜಿ.ಫಂ,  ತಾ.ಪಂ.ಗಳಿಗೆ ಹೆಚ್ಚಿನ ಅನುದಾನ ಬರುವುದರಿಂದ ಹಳ್ಳಿಗಳು ಅಭಿವೃದ್ದಿ ಹೊಂದಲು  ಆರ್.ರಾಜೇಂದ್ರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಜನತೆ ಕಾಂಗ್ರೆಸ್ ಪರವಾಗಿ ಸ್ಪಧರ್ಿಸಿದ್ದ ಎಸ್.ಪಿ ಮುದ್ದಹನುಮೇಗೌಡರಿಗೆ ಹೆಚ್ಚು ಮತ ನೀಡಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ ಅದೇ ರೀತಿ ಈ ಬಾರಿಯು ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ  ಮತ ನೀಡಿ ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ ಆರ್.ರಾಜೇಂದ್ರ ಎರಡು ಬಾರಿ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸಿ ಪಕ್ಷದ ಬಲವರ್ದನೆಗೆ ಶ್ರಮಿಸಿದ ಪ್ರಯುಕ್ತ ರಾಜೀವ್ ಗಾಂಧಿಯವರು ರಾಜೇಂದ್ರರವರಿಗೆ ವಿಧಾನ ಪರಿಷತ್ಗೆ ಟಿಕೆಟ್ ನೀಡಿದ್ದಾರೆ, ರಾಜೇಂದ್ರರವರ ಗೆಲುವಿಗೆ ಯುವಕರು ಹೆಚ್ಚಿನದಾಗಿ ಶಕ್ತಿ ಮೀರಿ ಇವರ ಗೆಲುವಿಗೆ ಶ್ರಮಿಸುತ್ತಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಜಿ.ರಘುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಎ.ಪಿ.ಎಂ.ಸಿ.ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ,  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಶೇಷಾನಾಯ್ಕ, ವೆಂಕಟೇಶ್ , ದಸೂಡಿ ರಂಗಸ್ವಾಮಿ, ಅಶೋಕ, ಪುರಸಭಾ ಸದಸ್ಯರಾದ ರೇಣುಕಮ್ಮ. ಸಿ.ಪಿ.ಮಹೇಶ್, ಮುಖಂಡ ಕೆ.ಜಿ.ಕೃಷ್ಣಗೌಡ ಮತ್ತಿತರರು  ಉಪಸ್ಥಿತರಿದ್ದರು. 

 ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಪಡೆದರೆ ರಾಜಕೀಯ ನಿವೃತ್ತಿ : ಕೆ.ಎಸ್.ಈಶ್ವರಪ್ಪ
ಚಿಕ್ಕನಾಯಕನಹಳ್ಳಿ, : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಗೆ ಪಡೆದರೂ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ, ದೇವರೇ ಅಡ್ಡ ಬಂದರೂ ಡಾ.ಹುಲಿನಾಯ್ಕರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
   ಪಟ್ಟಣದ ಬಳಿ ಇರುವ ದಬ್ಬೆಘಟದ ಶ್ರೀ ಮರಳುಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಪ್ರಚಾರ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿ ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಅತ್ಯಾಚಾರ, ಮರಳುದಂದೆ, ಕೊಲೆಗಳು ನಡೆಯುತ್ತಿದ್ದರೂ ತಲೆ ಕೆಡಸಿಕೊಳ್ಳದ ಕಾಂಗ್ರೇಸ್ ಸಕರ್ಾರ ನಾಚಿಕೆ ಗೇಡಿನ ಆಡಳಿತ ನಡೆಸುತ್ತಿದೆ ಎಂದರು.
  ಮೊದಲು ತಲೆ ಕೆಟ್ಟಿತ್ತು: ಮೊದಲು ನಮಗೆ ತಲೆ ಕೆಟ್ಟಿತ್ತು ಹಾಗಾಗಿ ಕೆಜೆಪಿ,ಬಿಜೆಪಿ ಎಂದು ಛಿದ್ರವಾಗಿದ್ದೆವು ಈಗ ಬುದ್ಧಿ ಬಂದಿದೆ ಒಂದಾಗಿದ್ದೇವೆ. ಈಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಮುಂದಿನ ಬಿಜೆಪಿ ಸಕರ್ಾರದ ಅಧಿಕಾರಕ್ಕೆ ಅಡಿಗಲ್ಲು ಆಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ 20 ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ 10ಕ್ಕಿಂತ ಹೆಚ್ಚು ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. 
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಇಡೀ ವಿಶ್ವವೇ ಕೊಂಡಾಡುತ್ತಿದೆ. ಪಾಕಿಸ್ಥಾನ ಮತ್ತು ಸಿದ್ಧರಾಮಯ್ಯ ಇಬ್ಬರು ಮಾತ್ರ ಟೀಕಿಸುತ್ತಿದ್ದಾರೆ ಎಂದರು.
   ಈಗ ಮುಖ್ಯಮಂತ್ರಿ ತಲೆ ಕೆಟ್ಟಿದೆ : ಬರಪೀಡಿತ ಕನರ್ಾಟಕಕ್ಕೆ  ಕೇಂದ್ರ ಸಕರ್ಾರ ರೂ.1650 ಕೋಟಿ ಹಣ ಬಿಡುಗಡೆ ಮಾಡಿದೆ. 40 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ರೂ.500 ಕೋಟಿಗಿಂತ ಹೆಚ್ಚು ಹಣವನ್ನು ರಾಜ್ಯಕ್ಕೆ ಎಂದೂ ಎಂದು ನೀಡಿಲ್ಲ.ಬಂದಿರುವ ಹಣವನ್ನು ಬಳಸಿಕೊಳ್ಳಲಾಗದ  ಕನರ್ಾಟಕ ಸಕರ್ಾರ ಮೋದಿರವರ ಮೇಲೆ ಗೂಬೆ ಕೂರಿಸುತ್ತಿದೆ. ಈಗ ಸಿದ್ಧರಾಮಯ್ಯ ಅವರ ತಲೆ ಕೆಟ್ಟಿದರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮರಳುದಂಧೆ ವ್ಯಾಪಕವಾಗಿ ನಡೆಯುತ್ತಿದೆ, ಪ್ರಾಮಾಣಿಕ ಅಧಿಕಾರಿಗಳ ಕಗ್ಗೊಲೆಯಾಗುತ್ತಿದೆ ಇದರಿಂದ ಅಧಿಕಾರಿಗಳಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಕಾಂಗ್ರೆಸ್ ಸಕರ್ಾರದಲ್ಲಿ ಗೂಂಡಾಗಳು, ಸಮಾಜ ಘಾತುಕ ಶಕ್ತಿಗಳು ತಲೆಯುತ್ತುತ್ತಿವೆ ಎಂದು ಆರೋಪಿಸಿದರು.
ಹುಲಿನಾಯ್ಕರ್ ಬಿಜೆಪಿಯ ಕೃಷ್ಣಪರಮಾತ್ಮ : ಶಾಸಕ ಸುರೇಶ್ಗೌಡ ಮಾತನಾಡಿ, ವಿಧಾನ ಪರಿಷತ್ ಚುನಾವಣೆಗೆ ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ನೀಡುವುದು ಎಂದು ನಿಧರ್ಾರವಾಗಿತ್ತು. ಜೆಸಿಎಂ ಕಡೆ ಕ್ಷಣದಲ್ಲಿ ಹಿಂದೆ ಸರಿದರು ಇದರಿಂದ ನಮಗೆ ದಿಕ್ಕು ತೋಚದಂತಾಗಿತ್ತು. ಕಷ್ಟದಲ್ಲಿರುವ ಪಾಂಡವರಿಗೆ ಕೃಷ್ಣಪರಮಾತ್ಮ ಆಸರೆ ನೀಡಿದಂತೆ ಡಾ.ಹುಲಿನಾಯ್ಕರ್ ಕಮಲದ ಕೈ ಹಿಡಿದರು. ದುಡ್ಡಿನ ಥೈಲಿ ಇದೆ ಎಂಬ ಕಾರಣಕ್ಕೆ ಜೆಡಿಎಸ್ ಹೊರಗಿನವರಿಗೆ ಮಣೆ ಹಾಕಿದೆ.ಹುಲಿನಾಯ್ಕರ್ ಕೂಡ ಇವರಿಗಿಂತ ಹತ್ತುಪಟ್ಟು ಸ್ಟ್ರಾಂಗ್ ಎಂದರಲ್ಲದೆ  ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಲ್ಕು ತಾಲ್ಲೂಕುಗಳಲ್ಲಿ ಜೆಸಿಎಂ ಸಂಚರಿಸಿ, ಅಭ್ಯಥರ್ಿ ಎಂ.ಆರ್.ಹುಲಿನಾಯ್ಕರ್ ಪರ ಮತ ಕ್ರೂಡೀಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆ ದುಡ್ಡಿಗೆ ಹಡ : ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರತೀ ಚುನಾವಣೆಯಲ್ಲೂ ದೇವೇಗೌಡರು ಹೊರಗಿನವರನ್ನು ಕಣಕ್ಕಿಳಿಸುವ ಮೂಲಕ ತುಮಕೂರು ಜಿಲ್ಲೆಯನ್ನು  ದುಡ್ಡಿಗೆ ಹಡವಿಟ್ಟಿದೆ ಎಂದರು. 
ಮುಖ್ಯಮಂತ್ರಿ ಸುತ್ತ ಭಟ್ಟಂಗಿಗಳು :ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ನೋಡಿ ಸಹಿಸಲಾರದ ಕಾಂಗ್ರೆಸ್ ಕ್ಷುಲ್ಲಕ ನೆಪವೊಡ್ಡಿ ಸಂಸತ್ ಕಲಾಪ ನಡೆಯದಂತೆ ಗಲಾಟೆ ಎಬ್ಬಿಸುತ್ತಿರುವುದು ವಿಷಾದದ ಸಂಗತಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸುತ್ತಮುತ್ತ ಕೆಲವು ಭಟ್ಟಂಗಿಗಳನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ, ತಾಲ್ಲೂಕಿಗೆ ಹೇಮಾವತಿ ನಾಲಾ ಕಾಮಗಾರಿ ಕಳೆದ 2 ವರ್ಷದಿಂದ ನೆನೆಗುದಿಗೆ ಬಿದ್ದಿದೆ ಶಾಸಕರು ಹಾಗೂ ಉಸ್ತುವಾರಿ ಸಚಿವರಿಗೆ ಕಾಮಗಾರಿ ಪೂರ್ಣಗೊಳಿಸುವ ಇಚ್ಚಾಶಕ್ತಿ ಇಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಹಾಗೂ ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ರಾಜಣ್ಣ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಪರಿಶಿಷ್ಠಜಾತಿ ಮೋಚರ್ಾ ರಾಜ್ಯ ಘಟಕದ ಉಪಾಧ್ಯಕ್ಷ ಗಂಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ರಾಮಾಂಜಿನಯ್ಯ,  ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷೆ ಜಯಕ್ಷ್ಮಮ್ಮ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ತಾ.ಪಂ.ಉಪಾಧ್ಯಕ್ಷ ನಿರಂಜನಮೂತರ್ಿ, ಶ್ರೀನಿವಾಸಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.

ಕಳಸಾ ಬಂಡೂರಿ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ಮೂಲಕ                           ಇತ್ಯರ್ಥಗೊಳಿಸಲಿ : ಕೆ.ಎಸ್.ಈಶ್ವರಪ್ಪ
                             
ಚಿಕ್ಕನಾಯಕನಹಳ್ಳಿ,ಡಿ.16 : ಮಹದಾಯಿ ಕಳಸಾ ಬಂಡೂರಿ ವಿಚಾರವನ್ನು ಕಾಂಗ್ರೆಸ್ ಸಕರ್ಾರ ಪ್ರಚಾರಕ್ಕೆ ಬಳಸಿಕೊಳ್ಳದೆ ನಾಲ್ಕು ರಾಜ್ಯಗಳ ಸರ್ವಪಕ್ಷಗಳ ಸಭೆ ಕರೆದು ಇತ್ಯರ್ಥಗೊಳಿಸಲಿ  ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನ ಪರಿಷತ್ ಬಿಜೆಪಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಚುನಾವಣಾ ಪ್ರಚಾರಕ್ಕೆಂದು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಇಟ್ಟಿಗೆ ರಂಗಸ್ವಾಮಯ್ಯನವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಕಳಸಾ ಬಂಡೂರಿ ಸಮಸ್ಯೆ ನೆನ್ನೆ ಮೊನ್ನೆದಲ್ಲ  35ವರ್ಷಗಳ ಸಮಸ್ಯೆ ರಾಜ್ಯದಲ್ಲಿ ಜೆ.ಡಿ.ಎಸ್, ಬಿ.ಜೆಪಿ. ಸಮ್ಮಿಶ್ರ ಸಕರ್ಾರವಿದ್ದಾಗ ನಾನು ನೀರಾವರಿ ಸಚಿವನಾಗಿ ಶಂಕುಸ್ಥಾಪನೆ ನೆರವೇರಿಸಿದ್ದೇನೆ, ಕೇಂದ್ರಾಡಳಿತ ಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲೂ ಕಾಂಗ್ರೆಸ್ ಸಕರ್ಾರವಿದ್ದಾಗಲೂ ಕೂಡ ಕಳಸಾ ಬಂಡೂರಿ ಚಚರ್ೆ ಕೂಡ ಮಾಡಲಿಲ್ಲ, ಯು.ಪಿ.ಎ ಸಕರ್ಾರದ ನಾಯಕಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ಕನರ್ಾಟಕದಲ್ಲಿ ಗೋವಾಕ್ಕೆ ಒಂದು ಹನಿ ನೀರು ಬಿಡಲ್ಲ ಅಂತಲೂ ಗೋವಾದಲ್ಲಿ ಕನರ್ಾಟಕಕ್ಕೆ ಒಂದನಿ ನೀರು ಬಿಡುವುದಿಲ್ಲ ಎಂಬ ಒಳಗಡೆ ಒಂದು ರೀತಿ ಹೊರಗಡೆ ಮತ್ತೊಂದು ರೀತಿ ಮಾತುಗಳನ್ನು ಹೇಳುತ್ತಾ ರಾಜಕೀಯ ಮಾಡುತ್ತಿದ್ದಾರೆ, ನಮ್ಮ ಪಾಲಿನ ಮಹದಾಯಿ ನೀರು ಹಂಚಿಕೆ ವಿಚಾರ ಸುಪ್ರಿಂಕೋಟರ್್ ಮೆಟ್ಟಿಲೇರುವಂತೆ ಮಾಡಿದ್ದು ಕಾಂಗ್ರೇಸ್ನವರೇ ಈಗ ನ್ಯಾಯಾಧೀಕರಣದ ಹೊರಗಿಟ್ಟು ಮಾತಾಡೋಣ ಅಂತ ಹೇಳುತ್ತಿರುವವರೂ ಕಾಂಗ್ರೇಸ್ನವರೇ.
ಸರ್ವ ಪಕ್ಷ ಪ್ರಧಾನಿ ಬಳಿ ನಿಯೋಗ ಕೊಂಡೊಯ್ದ ವೇಳೆ ನರೇಂದ್ರ ಮೋದಿಯವರೇ ನ್ಯಾಯಾಧಿಕರಣದಲ್ಲಿದ್ದರು ಈ ವಿಚಾರವಾಗಿ ಹೊರಗಿಟ್ಟು ಮಾತಾಡೋಣ ಅಂತ ಹೇಳಿದ್ದ ಅವರು ಎಲ್ಲಾ ಪಕ್ಷಗಳು ಬಿ.ಜೆ.ಪಿ. ಜೆ.ಡಿ.ಎಸ್ ಕಾಂಗ್ರೆಸ್ ಸೇರಿ ಕುಳಿತು ಬಗೆಹರಿಸಬೇಕಾಗುತ್ತದೆ ಎಂದು ಮೋದಿಯವರ ಮಾತಿಗೆ ಒಪ್ಪಿದ ಸಿ.ಎಂ ಮಾಧ್ಯಮಗಳ ಮುಂದೆ ಬಂದು ಪ್ರಧಾನಿ ಆಸಕ್ತಿ ತೋರುತ್ತಿಲ್ಲ ಅಂತ ಕೀಳು ಮಟ್ಟದ ರಾಜಕೀಯ ಮಾಡುತ್ತಾರೆ, ರಾಜಕೀಯ ಮಾಡೋಕು ಒಂದು ಲಿಮಿಟ್ ಬೇಕು, ನಾವು ಗೋವಾ ಮಹಾರಾಷ್ಟ್ರ ಸಕರ್ಾರಗಳನ್ನು ಕರೆಯುತ್ತೇವೆ ಕಾಂಗ್ರೇಸ್ನವರು ಅ ರಾಜ್ಯಗಳ ವಿರೋಧ ಪಕ್ಷಗಳನ್ನು ಸಹ ಸೇರಿಸಬೇಕು ಎಲ್ಲಾ ಪಕ್ಷಗಳು ಇಚ್ಛಾಶಕ್ತಿ ಹೊಂದಿದ್ದರೆ ಸಮಸ್ಯೆ ಇರುವುದಿಲ್ಲ ಎಂದ ಅವರು ಈಗ ಮುಖ್ಯಮಂತ್ರಿಗಳು ಸಭೆ ಕರೆದು ಗೋವಾ ಮಹಾರಾಷ್ಟ್ರಕ್ಕೆ ಹೋಗೋಣ ಅಂತ ಹೇಳಿದ್ದಾರೆ ಅಲ್ಲಿ ಎಲ್ಲಾ ಪಕ್ಷಗಳು ಕುಳಿತು ಚಚರ್ಿಸಿದ ನಂತರ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ತಾಲ್ಲೂಕಿನ 26ಕೆರೆಗಳಿಗೆ ನೀರು ಹರಿಸುವ ಯೋಜನೆ ಸೇರಿದಂತೆ ಕನರ್ಾಟಕದಲ್ಲಿ ನಾವು ಉಪಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ ಯಾವುದೇ ನೀರಾವರಿ ಯೋಜನೆಗಳು ಚಾಲನೆಯಾಗುತ್ತಿಲ್ಲ ಎಂದರು.
 ತುಮಕೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಂದಂತಹ ಹುಲಿನಾಯ್ಕರ್ರವರಿಗೆ ಟಿಕೆಟ್ ನೀಡಿದ್ದರ ಬಗ್ಗೆ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಂತಹ ಸಮರ್ಥಕವಾದ ವ್ಯಕ್ತಿ ಇಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪನವರು, ರಾಜಕೀಯ ನಿಂತ ನೀರಲ್ಲ, ಮೊದಲು ನಮಗೆ ರಾಜಕೀಯ ಮಾಡಲು ಬರುತ್ತಿರಲಿಲ್ಲ, ಈಗ ರಾಜಕೀಯದಲ್ಲಿ ಪಕ್ಷಕ್ಕೆ ಯಾರು ಅಗತ್ಯ ಪಕ್ಷಕ್ಕೆ ಯಾರನ್ನು ಕರೆಯಬೇಕು, ಯಾರನ್ನು ಸ್ಪಧರ್ೆಗೆ ನಿಲ್ಲಿಸಬೇಕು ಎಂಬುದು ನಮಗೂ ತಿಳಿದಿದೆ, ಬಿಜೆಪಿ ಪಕ್ಷ ಎಲ್ಲಾ ಕಡೆಯಲ್ಲೂ ಗೆಲ್ಲುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಸುರೇಶ್ಗೌಡ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ನೀಲಿ ನಾಲಗೆ ರೋಗ 
                               

ಚಿಕ್ಕನಾಯಕನಹಳ್ಳಿ,ಡಿ.16 : ನೀಲಿನಾಲಗೆ ರೋಗ ತಾಲ್ಲೂಕಿನಾಧ್ಯಂತ ವ್ಯಾಪಕವಾಗಿ ಹರಡುತ್ತಿದ್ದರೂ,ಪಶು ವೈದ್ಯ ಸಿಬ್ಬಂದಿ ರೊಗನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಸತ್ತ ಕುರಿಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಿಮೆ ಪಡೆಯಲೂ ವೈದ್ಯರು ಸಿಗುತ್ತಿಲ್ಲ ಎಂದು ತಾಲ್ಲೂಕಿನ ಕುರಿಗಾಹಿಗಳು ಇಲಾಖೆ ಹಾಗೂ ಪಶು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.
   ರೇವಣಸಿದ್ಧೇಶ್ವರ ಕುರಿಸಾಕಣೆದಾರರ ಸಂಘದ ಅಧ್ಯಕ್ಷ ಹಂದನಕೆರೆ ಸಿದ್ಧಣ್ಣ ಮಾತನಾಡಿ, ರೋಗವ್ಯಾಪಕವಾಗಿ ಹರಡುತ್ತಿದೆ. ಸಾಲು ಸಾಲಾಗಿ ಕುರಿಗಳು ಸಾಯುತ್ತಿವೆ. ಒದೊಂದು ಹಟ್ಟಿಯಲ್ಲೂ ಪ್ರತಿನಿತ್ಯ ಹತ್ತಾರು ಕುರಿಗಳು ರೊಗಕ್ಕೆ ತುತ್ತಾಗುತ್ತಿವೆ. ಸತ್ತ ಕುರಿಗಳನ್ನು ಒಂದೆಡೆ ಗುಂಡಿ ತೋಡಿ ಸಾಮೂಹಿಕವಾಗಿ ಮಣ್ಣು ಮುಚ್ಚುತ್ತಿದ್ದಾರೆ. ಇದರಿಂದ  ರೋಗಾಣುಗಳು ಆರೋಗ್ಯವಂತ ಕುರಿಗಳಿಗೂ ಹರಡುತ್ತಿವೆ. ತಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಈಗಾಗಲೇ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದರ ಜೊತೆಯಲ್ಲಿ ಕುರಿಗಾಹಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ  ಎಂದರು.
    ಕುರಿಗಾಹಿ ಗಂಗಾಭೋವಿ ಮಾತನಾಡಿ, ಸಕರ್ಾರ ಕುರಿಗಳಿಗೆ ನೀಲಿ ನಾಲಿಗೆ ರೋಗಕ್ಕೆ ಔಷಧಿ ಒದಗಿಸಿದ್ದೇವೆ ಎಂದು ಹೇಳುತ್ತಿದೆ, ಆಸ್ಪತ್ರೆಯಲ್ಲಿ ವಿಚಾರಿಸಿದರೆ  ಔಷಧಿ ಸರಬರಾಜು ಆಗಿಲ್ಲ ಎಂದು ಹೇಳುತ್ತಾರೆ. ನಾವು ಯಾರನ್ನು ನಂಬುವುದು? ಕುರಿ ಸತ್ತರೆ ಪರಿಹಾರ ನೀಡಲು ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುತ್ತಾರೆ. ಸತ್ತ ಕುರಿಯ ಭಾವಚಿತ್ರ ಬೇಕು ಎನ್ನುತ್ತಾರೆ. ಆಸ್ಪತ್ರೆ ಬಳಿ ತೆಗೆದುಕೊಂಡು ಹೋದರೆ ವೈದ್ಯರು ಇರುವುದಿಲ್ಲ ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಅಸಹಾಯಕತೆ ತೊಡಿಕೊಂಡರು.
  ಈ ಕುರಿತು ಹೆಸರು ಬಹಿರಂಗಪಡಿಸಲಿಚ್ಚಿಸದ ಪಶುವೈದ್ಯಾಧಿಕಾರಿಯೊಬ್ಬರು ಮಾತನಾಡಿ,ಕಳೆದ ಒಂದೂವರೆ ತಿಂಗಳಿಗೆ ಮುಂಚಿತವಾಗಿಯೇ ತಾಲ್ಲೂಕಿನಲ್ಲಿ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದ್ದು ಸೂಕ್ತ ಔಷಧಿ ಒದಗಿಸುವಂತೆ ಇಲಾಖೆಗೆ ಮನವಿ ಮಾಡಿಕೊಂಡಿದ್ದೆವು. ಪ್ರಾಥಮಿಕ ಹಂತದಲ್ಲೇ ಉನ್ನತ ಅಧಿಕಾರಿಗಳು ಸ್ಪಂದಿಸಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
    ಪಶು ವೈದ್ಯಾಧಿಕಾರಿ ಕಾಂತರಾಜು ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು1.6ಲಕ್ಷ ಕುರಿಗಳಿವೆ.ಶೇ.60ರಷ್ಟು ಕುರಿಗಳಿಗೆ ರೋಗಲಕ್ಷಣ ಕಾಣಿಸಿಕೊಂಡಿದೆ. ಇಲಾಖೆಯಿಂದ ತಾಲ್ಲೂಕಿಗೆ 32 ಸಾವಿರ ಡೋಸ್ ಔಷಧಿ ವಿತರಣೆಯಾಗಿದೆ. ಇದು ಶೇ.20ರಷ್ಟು ಕುರಿಗಳಿಗೂ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ರೋಗ ಬಂದಿರುವ ಕುರಿಗಳಿಗೆ ಲಸಿಕೆ ಹಾಕಿದರೆ ಔಷಧಿಗೆ ಸ್ಪಂದಿಸುವುದಿಲ್ಲ. ರೊಗದಿಂದ ಮುಕ್ತವಾಗಿರುವ ಕುರಿಗಳನ್ನು ಬೇರ್ಪಡಿಸಿ ಸಾಮೂಹಿಕವಾಗಿ ರಿಂಗ್ ವ್ಯಾಕ್ಸಿನೇಷನ್ ನೀಡಬೇಕು ಆದರೆ ಕುರಿಗಾಹಿಗಳು ಇದನ್ನು ಒಪ್ಪುತ್ತಿಲ್ಲ. ಈ ಗೊಂದಲದಿಂದಾಗಿ ಲಸಿಕೆ ಪ್ರಾರಂಭಿಸಿಲ್ಲ. ಉನ್ನತ ಮಟ್ಟದ ಅಧಿಕಾರಿಗಳ ಜತೆ ಚಚರ್ಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
  ತಾಲ್ಲೂಕಿನಲ್ಲಿ ಪಶು ವೈದ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯಿಂದಾಗಿ ಸಾವನ್ನಪ್ಪುತ್ತಿರುವ ಕುರಿಗಳ ಮರಣೋತ್ತರ ಪರೀಕ್ಷೆ ಹಾಗೂ ದಾಖಲೀಕರಣ ಸವಾಲಾಗಿ ಪರಿಣಮಿಸಿದೆ. ಹುಳಿಯಾರು ಹಾಗೂ ಹಂದನಕೆರೆ ಭಾಗದಲ್ಲಿ ಹೆಚ್ಚು ಕುರಿಗಳಿಗೆ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದೆ, ಆದರೆ ಎಲ್ಲಾ ಕುರಿಗಳು ದಾಖಲೆಗೆ ಸಿಕ್ಕಿಲ್ಲ. ಈ ವರೆಗೆ ಕೇವಲ 183 ಪ್ರಕರಣಗಳು ದಾಖಲಾಗಿವೆ. ಬಹಳಷ್ಟು ಕುರಿಗಾಹಿಗಳು ಸತ್ತಕುರಿಗಳನ್ನು ಮರಣೋತ್ತರಪರೀಕ್ಷೆಗೆ ಒಳಪಡಿಸದೇ ಮಣ್ಣು ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದರು.
   ತಾಲ್ಲೂಕಿನ ಆಲದಕಟ್ಟೆ ಬಳಿ ಕುರಿ ಹಿಂಡಿನೊಂದಿಗೆ ಸಾಗುತ್ತಿದ್ದ ಕುರಿಗಾಹಿ ದಬ್ಬಕುಂಟೆ ಲೋಕೇಶ್ ಮಾತನಾಡಿ, ಪ್ರತೀ ವರ್ಷ ಸುಗ್ಗಿ ಮುಗಿಸಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದು, ಈ ಬಾರಿ ಕುರಿಗಳಿಗೆ ರೋಗ ಬಂದೈತೆ ಅದುಕ್ಕೆ 1ತಿಂಗಳು ಮುಂಚಿತವಾಗೇ ಹಾಸನದ ಕಡೆ ಹೋಗುತ್ತಿದ್ದೇವೆ,  ಆಸ್ಪತ್ರೆಯಲ್ಲಿ  ವೈದ್ಯರನ್ನು ನಂಬಿಕೊಂಡರೆ ಅಷ್ಟೇ. ಒಂದು ಕುರೀನೂ ಉಳಿಯೋದಿಲ್ಲ. ಔಷಧಿ ಅಂಗಡಿನಲ್ಲಿ ರೂ.4000 ಔಷಧಿ ತೆಗೆದುಕೊಂಡು, ಈಗ ನಮ್ಮಲ್ಲಿರೋ 400 ಕುರಿಗಳಿಗೂ ಇಂಜೆಕ್ಷನ್ ಮಾಡಿಸಿದ್ದೇನೆ ಕುರಿಗೆ ಕಾಯಿಲೆ ಬಂದರೆ ಮುಂಚಿತವಾಗಿಯೇ ಇನ್ನೂ ಎರಡು ಸಾವಿರ ರೂಪಾಯಿಗಳ ಔಷದಿಯನ್ನು ಸಂಗ್ರಹಿಸಿದ್ದೇನೆ ಎಂದು ರೋಗದ ಕಾರಣಕ್ಕಾಗಿ ಅಕಾಲಿಕ ಗುಳೆ ಹೊರಟಿರುವುದನ್ನು ವಿವರಿಸಿದರು.
  ಪಶು ವೈದ್ಯಾಧಿಕಾರಿ ಡಾ.ರಘುಪತಿ ಮಾತನಾಡಿ,ಸಾಮಾನ್ಯ ಕುರಿಗಾಹಿಗಳು ಜಂತುನಾಶಕ ಔಷಧಿಗಳೇ ಸರ್ವರೋಗಕ್ಕೂ ಮದ್ದು ಎಂದು ಭಾವಿಸಿದ್ದಾರೆ. ಕಾಯಿಲೆಗೆ ತುತ್ತಾಗಿರುವ ಕುರಿಗಳಿಗೆ ಕುರಿಗಾಹಿಗಳೇ ಸ್ವತಃ ಔಷದಿ ನೀಡುವ ಪರಿಪಾಟ ಇಟ್ಟುಕೊಂಡಿದ್ದಾರೆ. ಇದು ಕೆಲವೊಮ್ಮೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರ ಸಲಹೆ ಮೇರಗೇ ಔಷದೋಪಚಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಿಬ್ಬಂದಿ ಕೊರತೆ:ತಾಲ್ಲೂಕು ಪಶು ಇಲಾಖೆಯಲ್ಲಿ ಶೇ.38 ಭಾಗ ಸಿಬ್ಬಂದಿ ಕೊರತೆ ಇದೆ. ಒಟ್ಟು 22 ಪಶುಚಿಕಿತ್ಸಾ ಕೇಂದ್ರಗಳಿದ್ದು 82 ಹುದ್ದೆಗಳು ಮುಂಜೂರಾಗಿವೆ. 43ಸಿಬ್ಬಂದಿ ಮಾತ್ರ ಇದ್ದು 39 ಹುದ್ದೆಗಳು ಖಾಲಿ ಇವೆ. 2 ಪಶು ಆಸ್ಪತ್ರೆ, 11ಪಶು ಚಿಕಿತ್ಸಾಲಯಗಳು ಹಾಗೂ 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 1 ಸಹಾಯಕ ನಿದರ್ೇಶಕರ ಹುದ್ದೆ, 6 ಪಶುವೈದ್ಯಾಧಿಕಾರಿಗಳ ಹುದ್ದೆ, 1 ಪಶು ಪರೀಕ್ಷಕ, 22 ಸಹಾಯಕ ಹುದ್ದೆಗಳು ಖಾಲಿ ಇವೆ.
ಲಸಿಕೆ ಕಾರ್ಯಕ್ರಮ ಆರಂಭ: ಡಿ.16 ರಿಂದ ನೀಲಿ ನಾಲಿಗೆ ರೋಗಕ್ಕೆ ಲಸಿಕಾ ಕಾರ್ಯಕ್ರಮ ಆರಂಭವಾಗುತ್ತಿದೆ. ಲಸಿಕೆ ಕೊಡಿಸುವಾಗ ಕುರಿಗಾಹಿಗಳು ರೋಗಪೀಡಿತ ಕುರಿಗಳನ್ನು ಪ್ರತ್ಯೇಕಿಸಿ ಲಸಿಕೆ ಹಾಕಿಸಬೇಕು .ಇದರಿಂದ ಆರೋಗ್ಯವಂತ ಕುರಿಗಳಿಗೆ ರೋಗ ಹರಡದಂತೆ ಕಾಯ್ದುಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ. 
ಖಡ್ಡಾಯವಾಗಿ ದಾಖಲಿಸಿ: ಮರಣಹೊಂದಿದ ಕುರಿಗಳನ್ನು ಸಮೀಪವಿರುವ ಪಶು ವೈದ್ಯ ಆಸ್ಪತ್ರೆಯಲ್ಲಿ ಖಡ್ಡಾಯವಾಗಿ ದಾಖಲಿಸಿ .6 ತಿಂಗಳು ಮೇಲ್ಪಟ್ಟ ಕುರಿಗಳಿಗೆ ಸಕರ್ಾರ ರೂ.5000 ಪರಿಹಾರ ಘೋಷಿಸಿದೆ. ಉದಾಸೀನ ಮಾಡದೆ ದಾಖಲಿಸುವುದರಿಂದ ಪರಿಹಾರದ ಮೊತ್ತ ಲಭಿಸಲಿದ್ದು ನಷ್ಟವನ್ನು ಸ್ವಲ್ಪಮಟ್ಟಿಗಾದರೂ ತುಂಬಿಕೊಳ್ಳಬಹುದು ಎಂದು ಪಶು ವೈದ್ಯಾಧೀಕಾರಿ ಕಾಂತರಾಜು ಮನವಿ ಮಾಡಿದ್ದಾರೆ.

ಜಿ.ಪಂ, ತಾ.ಪಂ. ಚುನಾವಣೆ ಬಗ್ಗೆ ಪಂಚಾಯ್ತಿ ಕಟ್ಟೆಗಳಲ್ಲಿ ಮಾತುಕತೆ 
ಚಿಕ್ಕನಾಯಕನಹಳ್ಳಿ,ಡಿ.16 : ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮೀಸಲಾತಿ ಘೋಷಣೆಯಾಗಿದೆ ಆದರೆ ಇನ್ನು ಅಜರ್ಿ ಸಲ್ಲಿಸಲು ದಿನಾಂಕ ನಿಗಧಿಯಾಗಿಲ್ಲ, ಆದರೂ ಆಕಾಂಕ್ಷಿಗಳ ಬೆಂಬಲಿಗರು ಟೀ ಅಂಗಡಿ, ಹೋಟೆಲ್, ಪಂಚಾಯ್ತಿ ಕಟ್ಟೆ, ಅರಳೀಮರದ ಕಟ್ಟೆಗಳಲ್ಲಿ ಮಾತುಕತೆ ನಡೆಸುವ ಮೂಲಕ ಇಂತಹವರು ಸ್ಪಧರ್ಿಸಿದರೆ ಗೆಲುವು ನಿಶ್ಚಿತ ಎಂಬ ಊಹಾಪೋಹಗಳು ಮಾತುಗಳು ಬರುತ್ತಿವೆ.
ಆಯಾ ಪಕ್ಷದ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಮೂರು ಪಕ್ಷಗಳಲ್ಲೂ ನಾಯಕರ ಮೇಲೆ ಮುಖಂಡರ ಬೆಂಬಲಿಗರು ಒತ್ತಡ ತರುತ್ತಿದ್ದಾರೆ, ಕೆಲವು ಪಕ್ಷಗಳಲ್ಲಿ ಹೊಸಬರು, ಹಳಬರು ಎಂದು ವಿಂಗಡಿಸಿ ಟಿಕೆಟ್ಗೆ ಲಾಭಿ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚು ಖಚರ್ು ಮಾಡುವ ಅಭ್ಯಥರ್ಿಗಳನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಮುಂದಾಗುತ್ತಿದ್ದಾರೆ. ಇದರಿಂದ ಪಕ್ಷಗಳಲ್ಲಿ ನಿಷ್ಠಾವಂತ ಕಾರ್ಯಕರ್ತರು ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ಸಿಗದೆ ನಿರಾಸೆಯಿಂದ ಬೇರೆ ಪಕ್ಷಗಳಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ.
ಕಳೆದ ಬಾರಿ ಜಿಲ್ಲಾ ಪಂಚಾಯಿತಿಗೆ ಇದ್ದ ಮೀಸಲಾತಿ ಈ ಬಾರಿ ಇಲ್ಲದೇ ಇರುವುದರಿಂದ ಚುನಾವಣೆಗೆ ತಯಾರಿ ನಡೆಸಿದ್ದ ಕೆಲವು ಆಕಾಂಕ್ಷಿ ಅಭ್ಯಥರ್ಿಗಳು ಮೀಸಲಾತಿ ಬರದೇ ನಿರಾಸೆಯಾಗಿದ್ದು ಇದರಿಂದ ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯ ಕೆಲವು ಕ್ಷೇತ್ರಗಳಲ್ಲಿ ಹೊಸ ಮೀಸಲಾತಿಯಿಂದ ಎಲ್ಲಾ ಪಕ್ಷಗಳಲ್ಲೂ ಸಮರ್ಥವಾದ ಅಭ್ಯಥರ್ಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಜಿಲ್ಲಾ ಪಂಚಾಯ್ತಿಯಲ್ಲಿ ಹುಳಿಯಾರು ಸಾಮಾನ್ಯ ವರ್ಗ, ಹೊಯ್ಸಳಕಟ್ಟೆ ಅನುಸೂಚಿತ ಜಾತಿ, ಕಂದಿಕೆರೆ ಸಾಮಾನ್ಯ ಮಹಿಳೆ, ಹಂದನಕೆರೆ ಸಾಮಾನ್ಯ, ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ.
ಜಿ.ಪಂ. ಚುನಾವಣೆಯಲ್ಲಿ ಸ್ಪಧರ್ಿಸಲು ಮೂರು ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು : 
ಕಂದಿಕೆರೆ ಜಿ.ಪಂ.ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಶಶಿಕಲಾಸ್ವಾಮಿನಾಥ್, ಲಕ್ಷ್ಮೀದೇವಮ್ಮಸಣ್ಣಯ್ಯ, ಬಿಜೆಪಿಯಿಂದ : ತಿಮ್ಮನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಮ್ಮ, ತಾ.ಪಂ.ಮಾಜಿ ಅಧ್ಯಕ್ಷೆ ಲತಾಕೇಶವಮೂತರ್ಿ, ಮೀನಾ ಪಾನಿಪುರಿಶ್ರೀನಿವಾಸ್, ಕಮಲಮ್ಮ ರಾಜಕುಮಾರ್, ಜೆಡಿಎಸ್ ಪಕ್ಷದಿಂದ : ಸವಿತಾಸತೀಶ್ ಸಿದ್ದನಕಟ್ಟೆ, ಕನಕಮ್ಮ ಮೋಹನ್ಕುಮಾರ್ ಅಜ್ಜಿಗುಡ್ಡೆ, ಪದ್ಮಮ್ಮಲಿಂಗರಾಜು, ಸುನಿತಾಮಂಜುನಾಥ್ ಆಕಾಂಕ್ಷಿಗಳಾಗಿದ್ದಾರೆ.
ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಮಾಜಿ ಶಾಸಕ ಬಿ.ಲಕ್ಕಪ್ಪ, ಬಿಜೆಪಿ ಪಕ್ಷದಿಂದ : ಮಾಜಿ ತಾ.ಪಂ.ಸದಸ್ಯ ಶಿವಣ್ಣ, ತಾ.ಪಂ.ಸದಸ್ಯ ಎ.ಬಿ.ರಮೇಶ್ಕುಮಾರ್, ವಕೀಲ ಶಶಿಧರ, ಜೆಡಿಎಸ್ಪಕ್ಷದಿಂದ ಬಿಜೆಪಿಗೆ ತೆರಳಿ ಆಕಾಂಕ್ಷಿಯಾದ ಸಿ.ಆರ್.ಗಿರೀಶ್, ಜೆಡಿಎಸ್ಪಕ್ಷದಿಂದ : ರಿಯಲ್ ಎಸ್ಟೇಟ್ ವ್ಯವಹಾರದ ಕಲ್ಲೇಶ್, ದಾಸೀಹಳ್ಳಿ ಗಂಗಾಧರಪ್ಪ, ಆಕಾಂಕ್ಷಿಗಳಾಗಿದ್ದಾರೆ.
ಹುಳಿಯಾರು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ಧನುಷ್ ರಂಗನಾಥ್, ಬಿಜೆಪಿ ಪಕ್ಷ : ದಿಂದ ಮಾಜಿ ತಾ.ಪಂ.ಸದಸ್ಯ ವೈ.ಆರ್.ಮಲ್ಲಿಕಾಜರ್ುನಯ್ಯ, ಬ್ಯಾಂಕ್ ಮರುಳಪ್ಪ, ತಾ.ಪಂ.ಸದಸ್ಯ ಹೊಸಹಳ್ಳಿ ಜಯಣ್ಣ, ವಕೀಲ ರಮೇಶ್ಬಾಬು, ಹನುಮಂತಯ್ಯ, ಕೆಂಕೆರೆ ನವೀನ್, ಜೆಡಿಎಸ್ ಪಕ್ಷದಿಂದ : ಪಟಾಕಿ ಶಿವಣ್ಣ, ಪೆಟ್ರೋಲ್ ಬಂಕ್ ರೇಣುಕಪ್ಪ, ನಂದಿಹಳ್ಳಿ ಶಿವಣ್ಣ, ವಕೀಲ ಬಿ.ಕೆ.ಸದಾಶಿವು, ಜಹೀರ್ಸಾಬ್, ಶಿವನಂಜಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹೊಯ್ಸಳಕಟ್ಟೆ ಅನುಸೂಚಿತ ಜಾತಿಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ರೇವಾನಾಯ್ಕ್, ದೊಡ್ಡಬಿದರೆ ತಾಂಡ್ಯದ ವೀರಸಿಂಗ್ ಬಿಜೆಪಿಯಿಂದ : ಲಚ್ಚಾನಾಯ್ಕ, ಯರೇಹಳ್ಳಿ ಮೂತರ್ಿನಾಯ್ಕ, ದಬ್ಬಗುಂಟೆ ಗಂಗಣ್ಣ, ರಾಜಶೇಖರನಾಯ್ಕ, ಜೆಡಿಎಸ್ ಪಕ್ಷದಿಂದ : ಮಾಜಿ ಜಿ.ಪಂ.ಸದಸ್ಯ ಈರಣ್ಣ, ದಸೂಡಿ ಮರಿಯಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹಂದನಕೆರೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್, ಜೆ.ಡಿ.ಎಸ್ ಪಕ್ಷದಿಂದ :  ಜಿ.ಪಂ.ಮಾಜಿ ಉಪಾಧ್ಯಕ್ಷೆ ಜಾನಮ್ಮ ಪತಿ ರಾಮಚಂದ್ರಯ್ಯ, ಬಿಜೆಪಿ ಪಕ್ಷದಿಂದ : ಕೋಡಿಹಳ್ಳಿ ಶಿವಕುಮಾರ್, ಉಪ್ಪಿನಕಟ್ಟೆ ಶಿವಕುಮಾರ್, ಕಾಂಕೆರೆ ಪರಮೇಶ್, ಮೈಸೂರಪ್ಪ, ಬರಗೂರು ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ವಕೀಲ ಶ್ರೀಧರ್ ಆಕಾಂಕ್ಷಿಗಳಾಗಿದ್ದಾರೆ.
ತಾಲ್ಲೂಕಿನಲ್ಲಿ ಜಿ.ಪಂ.ಟಿಕೆಟ್ ಸಿಗದೇ ಇರುವ ಆಕಾಂಕ್ಷಿಗಳು ಮಾತ್ರ ಪಕ್ಷವನ್ನು ತೊರೆದು ಪಕ್ಷಾಂತರ ತಯಾರಿ ನಡೆಸಿದ್ದು ಇದರಿಂದ ತಾಲ್ಲೂಕಿನಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.



Monday, December 14, 2015

ಅಪರಾಧ ತಡೆಗೆ ಸಾರ್ವಜನಿಕರೂ ಸಹಕರಿಸಬೇಕು :     ಡಿವೈಎಸ್ಪಿ ಕೆ.ಪಿ.ರವಿಕುಮಾರ್



ಚಿಕ್ಕನಾಯಕನಹಳ್ಳಿ : ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಮೈಗುಡಿಸಿಕೊಂಡು ಅಪರಾಧ ತಡೆಯುವಲ್ಲಿ ಸಾರ್ವಜನಿಕರು ಹಾಗೂ ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಸಿದರೆ ಮಾತ್ರ ಉತ್ತಮ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಪಟೂರು ಉಪವಿಭಾಗದ ಡಿವೈಎಸ್.ಪಿ ಕೆ.ಪಿ ರವಿಕುಮಾರ್ ಹೇಳಿದರು. 
ಪಟ್ಟಣದಲ್ಲಿ ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ನಡೆದ ಪೋಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಚರಣೆ ಅಂಗವಾಗಿ ವಿದ್ಯಾಥರ್ಿಗಳಿಗೆ ಅಪರಾಧ ತಡೆಗಟ್ಟಲು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಲೀಸ್ ಇಲಾಖೆ ಒಂದು ಶಿಸ್ತು ಬದ್ದವಾಗಿರುತ್ತದೆ, ವಿದ್ಯಾಥರ್ಿ ಜೀವನದಲ್ಲಿ ಮಕ್ಕಳು ಶಿಸ್ತು ಮೈಗೂಡಿಸಿಕೊಂಡು ಉನ್ನತ ಹುದ್ದೆಗಳಾದ ಐ.ಎ.ಎಸ್. ಐ.ಪಿ.ಎಸ್ಗಳಂತ ಹುದ್ದೆಗಳಿಗೆ ಆರಿಸಿಕೊಂಡು ಉತ್ತಮ ಅಧಿಕಾರಗಳಾಗಿ ಸೇವೆ ಮಾಡಿ ಎಂದರಲ್ಲದೆ ಪೋಲಿಸ್ ಇಲಾಖೆಯಲ್ಲಿ ಮುಂದಿನ ಎರಡು ವರ್ಷದಲ್ಲಿ ರಾಜ್ಯದಲ್ಲಿ 8 ಸಾವಿರ ಪೋಲೀಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಅವಕಾಶವಿದ್ದು ವಿದ್ಯಾಥರ್ಿಗಳು ಹೆಚ್ಚಿನದಾಗಿ ಸೇರಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾಥರ್ಿಗಳು ಜೀವನದಲ್ಲಿ ಗುರಿಯನ್ನಟ್ಟುಕೊಂಡು ಸಾಧನೆ ಮಾಡುವ ಆತ್ಮಸ್ಥೆರ್ಯ ಬೆಳಸಿಕೊಳ್ಳಬೇಕು ಅದಕ್ಕಾಗಿ ಶಿಸ್ತು ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ, ಅಪರಾಧ ನಡೆಯುವುದನ್ನು ಪೋಲಿಸ್ ಇಲಾಖೆಯಿಂದ ಮಾತ್ರ ಸಾದ್ಯವಿಲ್ಲ, ಸಾರ್ವಜನಿಕರು, ಸಮಾಜದಲ್ಲಿ ಸಾಮಾನ್ಯ ಜ್ಞಾನ ಹೊಂದಿರುವವರು, ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಬೇಕು, ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಪೋಲಿಸರಿಗೆ ಮಾಹತಿ ನೀಡುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು ಎಂದರು.
ವೃತ್ತ ನೀರಿಕ್ಷಣಾಧಿಕಾರಿ ಎ.ಮಾರಪ್ಪ ಮಾತನಾಡಿ, ಅಪರಾಧ ತಡೆಯುವ ಕೆಲಸ ಪೋಲೀಸರಿಗೆ ಮಾತ್ರ ಸೀಮಿತವಲ್ಲ ಸಾರ್ವಜನಿಕರಾದ ನಿಮ್ಮಗಳ ಜವಬ್ದಾರಿಯೂ ಹೌದು,  ನಿಮ್ಮಗಳ ಮನೆಯ ಸುತ್ತಮುತ್ತ ಅಪರಿಚಿತರು ಅನುಮಾನಸ್ಪದವಾಗಿ ಓಡಾಡುವುದು, ಪರಿಚಯಸ್ಥರಂತೆ ಮನೆಗೆ ಬರುವುದು. ಮುಂಜಾನೆ ಮನೆ ಬಾಗಿಲಿನಲ್ಲಿ ರಂಗೋಲೆ ಹಾಗೂ ನೀರು ಹಾಕುವಾಗ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಮೇಲೆ ನೀಗ ವಹಿಸುವುದು ಸಾರ್ವಜನಿಕರ ಜವಬ್ದಾರಿಯಾಗಿದೆ, ಕಾಖರ್ಾನೆ ಹಾಗೂ ಗಾಮರ್ೇಂಟ್ಸ್ ಇತರೆ ಕಡೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುವಂತಹ ಅಪರಿಚಿತ ವ್ಯಕ್ತಿಗಳೊಂದಿಗೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವುದು ಇವೆಲ್ಲವೂ ಅಪರಾಧಗಳು ಇಂತಹ ಕಾರ್ಯಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳ ಮೇಲೆ ನೀಗಾ ವಹಿಸಿ ಸುತ್ತ ಮುತ್ತ ಹಾಗೂ ನೆರೆ ಹೊರೆ ಜನರಿಗೆ ತಿಳಿಸುವುದಾಗಲಿ ಅಥವಾ ಹತ್ತಿರದ ಪೋಲೀಸರಿಗೆಗಾಗಲಿ ತಿಳಿಸುವುದರಿಂದ ಮಾತ್ರ ಅಪರಾಧಗಳನ್ನು ತಡೆಯಲು ಸಾದ್ಯವಾಗುತ್ತದೆ ಇಂತಹ ಕೆಲಸಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕು ಎಂದರು.
ಪಿಎಸ್.ಐ ಮಹಾಲಕ್ಷ್ಮಮ್ಮ ಮಾತನಾಡಿ ಪೋಲಿಸರೊಂದಿಗೆ ಸಾರ್ವಜನಿಕರು ಪೋಲಿಸರ ಬಗ್ಗೆ ಹೊಂದಿರುವ ಆತಂಕ ಹಾಗೂ ಭಯವನ್ನು  ದೂರ ಮಾಡುವ ಉದ್ದೇಶದಿಂದ ಅಪರಾಧ ತಡೆ ಮಾಸಚಾರಣೆ ಹಮ್ಮಿಕೊಂಡಿರುವುದು ಇದರ ಸದುದ್ದೇಶವನ್ನು ಸಾರ್ವಜನಿಕರು ಹೊಂದಬೇಕು ಎಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ ಹುಳಿಯಾರು ಪೋಲಸ್ ಠಾಣೆ ಪಿ.ಎಸ್.ಐ ಪ್ರವೀಣ್ಕುಮಾರ್, ಶಿಕ್ಷಕರುಗಳಾದ ವೇಣುಗೊಪಾಲ್, ಗುರುಸ್ವಾಮಿ, ರಂಗಸ್ವಾಮಿ, ಕೋದಂಡರಾಮು. ಶಿವಾನಂದ್ ಮತ್ತಿತ್ತರರು ಉಪಸ್ಥಿತರಿದ್ದರು.