Friday, April 9, 2010

ಕನಕ ದಾಸರ ಏಕಶಿಲೆಗೆ ಕ್ಷೀರಾಭಿಷೇಕ, ಬೈಕ್ ರ್ಯಾಲಿಯೊಂದಿಗೆ ಅದ್ದೂರಿ ಸ್ವಾಗತ

ಚಿಕ್ಕನಾಯಕನಹಳ್ಳಿ,ಏ.09: ಕನಕದಾಸರ ಏಕಶಿಲೆ ವಿಗ್ರಹವನ್ನು ರೂಪಿಸುವ ಶಿಲೆಯನ್ನು ಹೊಸದುರ್ಗ ಹೊಯ್ಯುವ ಮಾರ್ಗಮಧ್ಯೆ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಕನಕ ದಾಸರ ಅನುಯಾಯಿಗಳು ಬೈಕ್ ರ್ಯಾಲಿಯ ಮೂಲಕ ಅದ್ದೂರಿಯಿಂದ ಸ್ವಾಗತಿಸಿದರು.
ಹೊಸದುರ್ಗದ ಶಾಖಾಮಠದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕನಕ ದಾಸರ ಮೂತರ್ಿಯನ್ನು ನಿಮರ್ಿಸಲು ಯೋಜಿಸಿರುವ ಶಿಲೆಯನ್ನು ಹೊತ್ತುತಂದ 160 ಚಕ್ರದ ಬೃಹತ್ ಗಾತ್ರದ ವಾಹನಕ್ಕೆ ಹೂವಿನಿಂದ ಸಿಂಗರಿಸಿ, 300ಟನ್ ತೂಕದ 40ಅಡಿ ಉದ್ದದ ಏಕಶಿಲೆ ಹಾಗೂ ವಾಹನದಲ್ಲಿದ್ದ ಕನಕ ದಾಸರ ಕಿರು ವಿಗ್ರಹಕ್ಕೆ ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಬಳಿ ಕ್ಷೀರಾಭಿಷೇಕವನ್ನು ಮಾಡಿದರು.
ಪಟ್ಟಣಕ್ಕೆ ಗುರುವಾರ ಮಧ್ಯರಾತ್ರಿ ಆಗಮಿಸಿದ ವಾಹನ ತಾಲೂಕು ಕಛೇರಿ ಮುಂಭಾಗದಲ್ಲಿ ವಾಸ್ತವ್ಯ ಹೂಡಿದ್ದು, ಬೆಳಗ್ಗೆ 8.30ಕ್ಕೆ ಪಟ್ಟಣದಿಂದ ಹೊರಟ ವೇಳೆ ವಿವಿಧ ಪಕ್ಷದ ಮುಖಂಡರುಗಳು ಹಾಗೂ ಸಮಾಜದ ಗಣ್ಯರು ವಿವಿಧ ಮಂಗಳ ವಾದ್ಯಗಳೊಂದಿಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಬೈಕ್ ರ್ಯಾಲಿ ಮೂಲಕ ಬೀಳ್ಕೊಟ್ಟರು.
ಜೈನ ಇತಿಹಾದಲ್ಲಿ ಅಷ್ಟೇ ಏಕೆ ವಿಶ್ವದ ಪ್ರವಾಸಿ ಕ್ಷೇತ್ರವಾಗಿರುವ ಶ್ರವಣಬೆಳಗೊಳದ ಗೊಮ್ಮಟ ಮೂತರ್ಿಗೆ ವಿಶೇಷ ಸ್ಥಾನವನ್ನು ಕಲ್ಪಿಸಿದ ಚಾವುಂಡರಾಯನಂತೆ, ಕನಕ ದಾಸರ ಹೆಸರನ್ನು ಅಜರಾಮರಗೊಳಿಸಲು ಹೊರಟಿರುವ ಹೊಸದುರ್ಗದ ಮಾಜಿ ಶಾಸಕ ಹಾಗೂ ಕಾಗಿನೆಲೆ ಗುರು ಪೀಠದ ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ ನವರನ್ನು ಆಧುನಿಕ ಚಾವುಂಡರಾಯ ಎಂದು ಬಣ್ಣಿಸಿದ ಚಿ.ಲಿಂ.ರವಿಕುಮಾರ್, ಕನಕ ದಾಸರ ವಿಚಾರ ಧಾರೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಕಾಗಿನೆಲೆ ಗುರುಪೀಠ ಕೈಗೆತ್ತಿಕೊಂಡಿರುವ ಕಾರ್ಯಗಳು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಶಾಸಕ ಜಿ.ಬಿ.ಗೋವಿಂದಪ್ಪ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಿ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಸಿ.ಡಿ.ಚಂದ್ರಶೇಖರ್, ದೊರೆಮುದ್ದಯ್ಯ,ಶಿವಣ್ಣ ಮಿಲ್ಟ್ರಿ, ಸಮಾಜದ ಮುಖಂಡರುಗಳಾದ ಚಿ.ಲಿಂ.ರವಿಕುಮಾರ್, ಸೀಮೆಎಣ್ಣೆ ಕೃಷ್ಣಯ್ಯ, ರೇವಣ್ಣ ಒಡೆಯರ್, ಸಿ.ಎಂ.ಬೀರಲಿಂಗಯ್ಯ, ಸಿ.ಎಸ್.ರಾಜಣ್ಣ, ಸಿ.ಎಂ. ಗಂಗಾಧರ್, ಪರಶಿವಮೂತರ್ಿ, ಸಿ.ಎಚ್.ಗಂಗಾಧರ್ ಸೇರಿದಂತೆ ಹಲವರು ಹಾಜರಿದ್ದರು.

Thursday, April 8, 2010

ಚಿಕ್ಕನಾಯಕನಹಳ್ಳಿ,ಏ.08: ತಾಲೂಕಿನ ಕೋಡಗಲ್ ಬಸವೇಶ್ವರ ದೇವರ ದೇವಸ್ಥಾನದ ದಾರಿಗೆ ಪುರಸಭೆಯವರು ಅಡ್ಡಲಾಗಿ ಕಾಂಪೌಂಡ್ ನಿಮರ್ಿಸುತ್ತಿದ್ದಾರೆಂದು ಖಂಡಿಸಿ ತಾಲೂಕು ಕಛೇರಿ ಮುಂದೆ ದೇವಸ್ಥಾನದ ಭಕ್ತರು ಧರಣಿ ನಡೆಸಿದರು.ನೂರಾರು ವರ್ಷಗಳಿಂದ ಭಕ್ತಾಧಿಗಳು ಓಡಾಡುತ್ತಿದ್ದ ರಸ್ತೆಗೆ ಪುರಸಭೆಯವರು ಪಟ್ಟಣದ ಕಸವನ್ನು ತಂದು ಹಾಕುತ್ತಿರುವುದರಿಂದ ದೇವಾಲಯಕ್ಕೆ ಹೋಗುವ ರಸ್ತೆ ಪೂರ್ಣ ಮುಚ್ಚಿ ಹೋಗುವ ಸಂಬಂವವಿರುವುದರಿಂದ ಈ ಕೂಡಲೇ ಈ ಪ್ರದೇಶನ್ನು ಕಸದಿಂದ ತೆರವುಗೊಳಿಸುವುದು ಸೇರಿದಂತೆ ರಸ್ತೆ ಒತ್ತುವರಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ರಸ್ತೆಗೆ ಅಡ್ಡಲಾಗಿ ಕಟ್ಟುತ್ತಿರುವ ಕಾಂಪೋಸ್ಟ್ ಗೋಡೆ ಕಾಮಗಾರಿಯನ್ನು ನಿಲ್ಲಿಸಿ ದಾರಿ ಖುಲ್ಲಾ ಮಾಡಿಸುವಂತೆ ಭಕ್ತಾದಿಗಳು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್, ಪುರಸಭೆ ಮುಖ್ಯಾದಿಕಾರಿಗೆ ಈಗಾಗಲೆ ಅಜರ್ಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದ ನಾಗೇಶಯ್ಯ ಧರಣಿಯ ನಂತರೂವು ಈ ಕಾಮಗಾರಿಯನ್ನು ನಿಲ್ಲಿಸದಿದ್ದರೆ ಮುಂದೆ ನಮ್ಮ ಹೋರಾಟದ ಸರೂಪವನ್ನು ಬದಲಾಯಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಸ್ವತಂತ್ರ ಹೋರಾಟಗಾರರಾದ ಸಿ.ಎನ್.ನಾಗೇಶಯ್ಯ, ಎಸ್.ಮರುಡಯ್ಯ, ಕಾಂಗ್ರೆಸ್ ಮುಖಂಡ ಕಾಯಿ ನಾರಾಯಣಸ್ವಾಮಿ, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸಿ.ಎನ್.ವಿಜಯಕುಮಾರ್, ಪ್ರತಿಭಟನಾಕಾರರು ಶಿರಸ್ತೆದಾರ್ ಕೆ.ವಿ.ಕುಮಾರ್ ರವರಿಗೆ ಮನವಿ ಅಪರ್ಿಸಿದರು.

ಯಲ್ಲಮ್ಮನ ಜಾತ್ರೆ ಅಂಗವಾಗಿ ನಾಟಕ

ಚಿಕ್ಕನಾಯಕನಹಳ್ಳಿ,ಏ.8: ಗ್ರಾಮ ದೇವತೆ ರೇಣುಕ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಕುರುಕ್ಷೇತ್ರ ನಾಟಕವನ್ನು ಇದೇ 9ರ ರಾತ್ರಿ 8.30ಕ್ಕೆ ದೇವಾಲಯದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ರೇಣುಕ ಯಲ್ಲಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ನಾಟಕವನ್ನು ಹಮ್ಮಿಕೊಂಡಿದೆ. ಸಂಗೀತ ನಿದರ್ೇಶಕ ಸಿ.ಎಸ್.ಗಂಗಾಧರ್ ರವರ ನಿದರ್ೇಶನ, ಶಿವಣ್ಣನವರ ಮಾರ್ಗದರ್ಶನದಲ್ಲಿ ನಡೆಯಲಿದೆ, ಭಾವನಹಳ್ಳಿ ಶ್ರೀನಿವಾಸಯ್ಯ, ಭಾವನಹಳ್ಳಿ ಧನುಶ್ಕುಮಾರ್, ಗೊಡೇಕೆರೆ ಶಿವಾಚಾರ್, ಬ್ಯಾಲದಕೆರೆ ಕುಮಾರಸ್ವಾಮಿ ಸೇರಿದಂತೆ ಹಲವು ಪಾತ್ರಧಾರಿಗಳು ನಟಿಸಲಿದ್ದಾರೆ.
ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ.ರವಿಪ್ರಸಾದ್ ಭಾಗವಹಿಸಲಿದ್ದಾರೆ ಎಂದು ರೇಣುಕ ಯಲ್ಲಮ್ಮ ದೇವಾಲಯದ ಗೌಡರಾದ ಸಿ.ಬಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

Wednesday, April 7, 2010

Monday, April 5, 2010


ಅನುದಾನ ವಿತರಣೆಯಲ್ಲಿ ವಿಳಂಬ; ವಿಕಲಚೇತನರ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ಏ.05: ಅಂಗವಿಕಲ ಫಲಾನುಭವಿಗಳಿಗೆ ಸಲ್ಲಬೇಕಿರುವ ಅನುದಾನ ಮತ್ತು ಸಾಧನ ಸಲಕರಣೆಗಳನ್ನು ವಿತರಣೆ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ, ಇದುವರೆಗೂ ಯಾವುದೇ ಸಲಕರಣೆಗಳನ್ನು ಪುರಸಭಾ ಮುಖ್ಯಾಧಿಕಾರಿಗಳು ವಿತರಣೆ ಮಾಡದೆ ಅಂಗವಿಕಲರಿಗೆ ಅನ್ಯಾಯವೆಸಗಿದ್ದಾರೆಂದು ತಾಲೂಕಿನ ಅಂಗವಿಕಲರ ಒಕ್ಕೂಟ ದವರು ಆರೋಪಿಸಿದ್ದಾರೆ.
ಪಟ್ಟಣದ ಪುರಸಭಾ ಕಾಯರ್ಾಲಯದ ಮುಂದೆ ಬೆಳಗಿನಿಂದ ಸಂಜೆ ರವರೆಗೂ ಧರಣಿ ನಡೆಸಿದ ಪಟ್ಟಣ ವಿಕಲಚೇತನ ಒಕ್ಕೂಟದವರು ಪುರಸಭೆಯ ಆಡಳಿತ ವರ್ಗದ ನಿಧಾನ ದ್ರೋಹವನ್ನು ಖಂಡಿಸಿದರು.
ಕಳೆದ 2008-09ನೇ ಸಾಲಿನಲ್ಲಿ ತ್ರಿಚಕ್ರ ಸೈಕಲ್ಗಳು ಹಾಗೂ ಸಾಧನ ಸಲಕರಣೆಗಳಿಗೆ ಶೇ 3ರಷ್ಟರ ಅನುದಾನದಂತೆ 50ಸಾವಿರ ಹಣ ತೆಗೆದಿದ್ದು ಆ ಹಣ ವಿನಿಯೋಗವಾಗಿಲ್ಲ, ಹಾಗೆಯೇ 09-10ನೇ ಸಾಲಿನಲ್ಲಿ ಶೇ.3. ರ ಅನುದಾನದಂತೆ 90ಸಾವಿರ ರೂಪಾಯಿಗಳನ್ನು ತೆಗೆಯಲಾಗಿದ್ದು ಮುಖ್ಯಾಧಿಕಾರಿಗಳು ಈ ಅನುದಾನದಲ್ಲಿ 1ಲಕ್ಷದ 40ಸಾವಿರ ಹಣವನ್ನು ವಂಚನೆ ಮಾಡಿದ್ದಾರೆ ಮತ್ತು ಈ ವಿಷಯದಲ್ಲಿ ಮುಖ್ಯಾಧಿಕಾರಿಗಳು ಸಂಘಕ್ಕೆ ಮಾಹಿತಿ ನೀಡುತ್ತಿಲ್ಲ ಹಾಗೂ ಹಣ ವಿತರಣೆ ಮಾಡುವಲ್ಲಿ ಬೇಜಾವಬ್ದಾರಿತನ ತೋರುತ್ತಿದ್ದಾರೆಂದು ದೂರಿದರು.
ಸಂಘದ ಅಧ್ಯಕ್ಷೆ ಶಾಂತಮ್ಮ ಮಾತನಾಡಿ ನಮಗೆ ಸೇರಬೇಕಾಗಿರುವ ಅನುದಾನ ಪಡೆಯುವವರೆಗೂ ಧರಣಿ ನಿಲ್ಲಿಸುವುದಿಲ್ಲ ಮತ್ತು ಸಂಘದಲ್ಲಿ 500 ಸದಸ್ಯರಿದ್ದು 113 ಅಂಗವಿಕಲ ಸದಸ್ಯರಿಗೆ ಇನೂ ಅನುದಾನಕ್ಕೆ ಒಳಪಡಿಸುವ ಪಟ್ಟಿ ಬಿಡುಗಡೆ ಮಾಡಿಲ್ಲವೆಂದು ದೂರಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಭೇಟಿ ನೀಡಿ ವಿಕಲಚೇತನರೊಂದಿಗೆ ಮಾತನಾಡಿದರಲ್ಲದೆ, ಇದೇ 7(ಇಂದು)ರಂದು ತಾಲೂಕು ಕಛೇರಿಯಲ್ಲಿ ಈ ಸಂಬಂಧ ಸಭೆ ನಡೆಸುವುದಾಗಿ ತಿಳಿಸಿದರು, ಈ ಸಭೆಗೆ ಪಟ್ಟಣದ ಎಲ್ಲಾ ವಿಕಲಚೇತನರು ಭಾಗವಹಿಸುವಂತೆ ತಿಳಿಸಿದರು.
ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿ ಮುಖ್ಯಾಧಿಕಾರಿಗಳು ಸಭೆಯೊಂದರಲ್ಲಿ ಭಾಗವಹಿಸಲು ತೆರಳಿರುವುದರಿಂದ ಅವರು ಕಛೇರಿಗೆ ಬಂದ ನಂತರ ಅವರೊಂದಿಗೆ ಚಚರ್ಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ವಿಕಲಚೇತನರ ಪ್ರತಿಭಟನೆಗೆ ಪುರಸಭೆಯ ವಿರೋಧ ಪಕ್ಷದ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಪಿ.ಮಹೇಶ್, ಬಾಬು ಸಾಹೇಬ್ ಬೆಂಬಲ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಹನುಂತಯ್ಯ, ಭಾಗ್ಯಮ್ಮ, ಸಿ.ಕೆ.ನಾಗರಾಜು, ಸಿ.ಕೆ ದೀಪ,ಕರೇಹನುಮಯ್ಯ, ಎ.ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

Sunday, April 4, 2010

ಜನರ ವಿಶ್ವಾಸ,ನಂಬಿಕೆ ಉಳಿಸಿಕೊಂಡವರಿಗೆ ಗೆಲುವು ನಿಶ್ಚಿತ


ಚಿಕ್ಕನಾಯಕನಹಳ್ಳಿ,ಏ.03: ಸಹಕಾರ ಸಂಸ್ಥೆಗಳಲ್ಲಿ ರೈತರಿಗೆ ಸಾಲ ನೀಡುವಾಗ ಪಕ್ಷ ಹಾಗೂ ಜಾತಿಯನ್ನು ಕೇಳಬೇಡಿ, ಸಾಲ ಪಡೆಯುವವನಿಗೆ ನಿಜವಾಗಿ ಸಾಲದ ಅಗತ್ಯವಿದೆ ಎನಿಸಿದರೆ ಸಾಲ ಕೊಡಿಸಿ ಎಂದು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಕರೆನೀಡಿದರು.

ಪಟ್ಟಣದ ನವೋದಯ ಕಾಲೇಜಿನ ಬಳಿ ತಮ್ಮ ಗುಂಪಿನಿಂದ ಗೆಲುವು ಸಾಧಿಸಲು ನೆರವಾದ ಸಹಕಾರಿ ಬಂಧುಗಳ ಅಭಿನಂದಾನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು, ಜನರಲ್ಲಿ ವಿಶ್ವಾಸ ಮತ್ತು ನಂಬಿಕೆ, ಉಳಿಸಿಕೊಂಡವರಿಗೆ ಗೆಲುವು ನಿಶ್ಚಿತವಾಗಿದ್ದು, ತಾಲೂಕಿನಲ್ಲಿನ 21 ಸಹಕಾರಿ ಸಂಸ್ಥೆಗಳ ಪೈಕಿ 16 ರಿಂದ 18 ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ನಮ್ಮವರು ಅಸ್ತಿತ್ವಕ್ಕೆ ಬಂದಿದೆ ಎಂದ ಅವರು, ಸಮಾಜದಲ್ಲಿ ಯಾರೂ ವ್ಯಕ್ತಿಯನ್ನು ಬೆಳೆಸಬಾರದು ವ್ಯವಸ್ಥೆಯನ್ನು ಬೆಳಸಬೇಕು ಎಂದರು.

ಚುನಾವಣೆಗಳಲ್ಲಿ ಜನರ ಬಳಿ ಹೋಗಿ ಕಾಡಿ ಬೇಡಿ ತಿರುಕಂಡು ತಿನ್ನವ ರೂಪದಲ್ಲಿ ಗೆದ್ದುಬಂದವರು ನಂತರ ಎಂಜ್ಜಲು ಕಾಸಿನಾಸಿಗೆ ತಮ್ಮ ತನವನ್ನು ಮಾರಿಕೊಂಡು ಅಪ್ರಮಾಣಿಕರಾಗಬಾರದು ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ಯೋಜನೆಯನ್ನು ಇಟ್ಟು ಕೊಂಡು ಪ್ರಾಮಾಣಿಕತೆಯಿಂದ ತಮ್ಮ ಸೇವೆಗೆ ತೊಡಗಿಸಿಕೊಳ್ಳಬೇಕೆಂದರು, ಈಗ ಜಯಗಳಿಸಿರುವ ಸಹಕಾರಿ ಪ್ರತಿನಿಧಿಗಳು ಕನಿಷ್ಟ ಪಕ್ಷ ತಮ್ಮ ಸಂಸ್ಥೆಗಳ ಜಮಾ-ಖಚರ್ಿನ್ನು ಅರ್ಥ ಮಾಡಿಕೊಂಡು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳಸಿಕೊಳ್ಳಿ ಎಂದು ಸಹಕಾರಿ ಧುರೀಣರಿಗೆ ಕಿವಿ ಮಾತು ಹೇಳಿದರು.

ಇತ್ತೀಚಿನ ಚುನಾವಣೆಗಳು ಹಣವನ್ನು ಆಧರಿಸಿ ನಡೆಯುತ್ತಿವೆ ಆಗಾಗದೆ, ಕೆಲಸವನ್ನು ಆಧರಿಸಿ ಜನ ಪ್ರತಿನಿಧಿಗಳನ್ನು ಆರಿಸುವಂತಾಗಬೇಕು ಎಂದ ಅವರು, ಇಲ್ಲಿನ ಶಾಸಕರು ಬಸವೇಶ್ವರ ನಗರವನ್ನೇ ತಮ್ಮ ಮತಕ್ಷೇತ್ರವೆಂದು ತಿಳಿದುಕೊಂಡಂತಿದೆ ಎಂದರಲ್ಲದೆ, ನನಗೆ ಮುಂದಿನ ಚುನಾವಣೆಗಳಲ್ಲಿ ಸುರೇಶ್ ಬಾಬು ಬಗ್ಗೆಯಾಗಲಿ, ಕಿರಣ್ಕುಮಾರ್ ಬಗ್ಗೆಯಾಗಲಿ ಆತಂಕವಿಲ್ಲ ಎಲ್ಲಿ ಈ ಕ್ಷೇತ್ರಕ್ಕೂ ಗಣಿರೆಡ್ಡಿಗಳು, ಆನಂದ ಸಿಂಗ್ನಂತಹ ಗಣಿಗಾರಿಕೆಯವರು ಬರುತ್ತಾರೋ ಎಂಬ ಭಯವಿದೆ ಎಂದರು.

ನಾನು ಶಾಸಕನಾಗಿದ್ದಾಗ ಗಣಿಗಾರಿಕೆಯಲ್ಲಿ ಟನ್ಗೆ 15ರೂ ನಂತೆ ಸಂಗ್ರಹಿಸಿ ನೀರಾವರಿ ಯೋಜನೆಯ ಗುರಿಯನ್ನಿಟ್ಟು ಕೊಂಡು ಕೋಟಿ ಗಟ್ಟಲೆ ಸಂಗ್ರಹಿಸಿ

ಇಟ್ಟ ಹಣದಲ್ಲಿ ಅಧಿಕಾರಿಗಳು ಐಷರಾಮಿ ಕಾರುಗಳನ್ನು ಕೊಂಡು ಅದರಲ್ಲಿ ಓಡಾಡುವುದನ್ನು ನೋಡಿದರೆ, ಇವರೆಲ್ಲಾ ಲಾಗ್ ಬುಕ್ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಕೌತಕ ಒಂದಡೆಯಾದರೆ, ನೀರಾವರಿಗೆಂದು ಕೂಡಿಟ್ಟ ಹಣ ಈ ರೀತಿ ಪೋಲಾಗುತ್ತಿದೆಯೆಲ್ಲಾ ಎಂಬ ಕೊರಗು ಇದೆ ಎಂದರು.

ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ ರೈತರಿಗೆ ಸಾಲ ಕೊಡಿಸುವಾಗ ಇರುವ ಮುತುವಜರ್ಿ ಅವರ ಸಾಲವನ್ನು ತೀರಿಸುವಾಗಲೂ ಇರಬೇಕು, ಆಗಿದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಉಳಿಯುತ್ತವೆ ಹಾಗೂ ಸಾಲಕೊಡಿಸಿದವರಿಗೂ ಒಂದು ಬೆಲೆ ಬರುತ್ತದೆ ಎಂದರಲ್ಲದೆ, ಜೆ.ಸಿ.ಮಾಧುಸ್ವಾಮಿಯವರು ಶಿಫಾರಸ್ಸು ಮಾಡಿದವರನ್ನು ವಿಶೇಷವಾಗಿ ಪರಿಗಣಿಸುವುದಾಗಿ ಹೇಳಿದ ಅವರು, ರೈತರ ಯಾವುದೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತೇನೆ ಎಂದರಲ್ಲದೆ, ಇತ್ತೀಚಿಗೆ ಸಕರ್ಾರದ ಮಟ್ಟದಲ್ಲಿರುವ ಅಧಿಕಾರಸ್ಥರ ಹಂತದಲ್ಲಿ ಭ್ರಷ್ಟರು ಹೆಚ್ಚುತ್ತಿದ್ದಾರೆ ಇದನ್ನು ತಡೆಯಬೇಕು ಎಂದರು.

ಇನ್ನೊಂದು ತಿಂಗಳಲ್ಲಿ ಗ್ರಾ.ಪಂ. ಚುನಾವಣೆಗಳು ನಡೆಯುವ ಸಾಧ್ಯತೆ ಇದೆ, ಡಿಸೆಂಬರ್ ತಿಂಗಳಲ್ಲಿ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳು ನಡೆಯುತ್ತವೆ ಅವೆಲ್ಲಾಕ್ಕೂ ಈಗಿನಿಂದಲೇ ಸಿದ್ದರಾಗಬೇಕು ಎಂದರು.

ಕೆಂಚಮಾರಯ್ಯ ಮಾತನಾಡಿ ದೂರದೃಷ್ಟಿಯಿರುವಂತಹ ಜೆ.ಸಿ.ಮಾಧುಸ್ವಾಮಿ ಶಾಸಕರಾದರೆ ವಿಧಾನ ಸಭೆಯಲ್ಲಿ ನ್ಯಾಯಯುತ ಬೇಡಿಕೆಗಾಗಿ ಧ್ವನಿ ಎತ್ತುತ್ತಾರೆಂದರು.

ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ನಮ್ಮ ಪಕ್ಷದಲ್ಲಿ ಇರುವ ಸಣ್ಣ ಸಣ್ಣ ಒಡಕುಗಳನ್ನು ದೊಡ್ಡದನ್ನಾಗಿ ಮಾಡದೆ ಜೆ.ಸಿ.ಮಾಧುಸ್ವಾಮಿ ಬೆಂಬಲಿತರನ್ನು ಎಲ್ಲಾ ಚುನಾವಣೆಗಳ ಗೆಲ್ಲಿಸುವುದರ ಮೂಲಕ ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿದರು.

ಸಮಾರಂಭದಲ್ಲಿ ಸಿ.ಡಿ.ಚಂದ್ರಶೇಖರ್, ಎಚ್.ಎಂ.ಸುರೇಂದಯ್ಯ, ಶಶಿಧರ್, ನಾಗರಾಜ್, ಕಾನಕೆರೆ ಪರಮೇಶ್, ಶಂಕರಲಿಂಗಯ್ಯ, ತಾ.ಪಂ.ಸದಸ್ಯರುಗಳಾದ ಸಿ.ಶಿವಣ್ಣ, ಎಸ್.ಸಿ.ದಿನೇಶ್ ಉಪಸ್ಥಿತರಿದ್ದರು.



ಕಾಮಗಾರಿ ಸೇರಿದಂತೆ ಯಂತ್ರೋಪಕರಣ ಖರೀದಿಯಲ್ಲೂ ಕಳಪೆ: ವಿಪಕ್ಷದವರ ಆರೋಪ

ಚಿಕ್ಕನಾಯಕನಹಳ್ಳಿ,ಏ.2: ಪಟ್ಟಣದಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಕಳಪೆಗುಣಮಟ್ಟದ್ದಾಗಿದೆ ಎಂದು ವಿರೋಧ ಪಕ್ಷದ ಸದಸ್ಯರುಗಳಾದ ಬಾಬು ಸಾಹೇಬ್, ರೇಣುಕ ಗುರುಮೂತರ್ಿ ಹಾಗೂ ಧರಣಿ ಲಕ್ಕಪ್ಪ ಆರೋಪಿಸಿದರು.
ಪಟ್ಟಣದ ಪುರಸಭಾ ಕಾಯರ್ಾಲಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿರೋಧ ಪಕ್ಷದವರು ಆಡಳಿತ ಪಕ್ಷದ ರೀತಿ ನೀತಿಗಳ ಬಗ್ಗೆ ಆಪೇಕ್ಷ ವ್ಯಕ್ತಪಡಿಸಿದರು.
2006-07ರಲ್ಲಿ ನೀಡಿದ ಕಾಮಗಾರಿಗಳು 2009-10ನೇ ಸಾಲಿನಲ್ಲಿ ಪೂರ್ಣಗೊಳ್ಳುತ್ತಿವೆ, ಮತ್ತು ಪುರಸಭೆಯಲ್ಲಿ ಕೊಂಡಿರುವ ವಿದ್ಯುತ್ ಉಪಕರಣಗಳು ಸೇರಿದಂತೆ ಯಂತ್ರೋಪಕರಣಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯರು, ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ನೀಡಿ ಸಾರ್ವಜನಿಕರ ಹಣ ಪೋಲಾಗದಂತೆ ನೋಡಿಕೊಳ್ಳಬೇಕೆಂದರು.
ಆಡಳಿತ ನಡೆಸುತ್ತಿರುವವರೆಲ್ಲಾ ಅವರವರ ಸ್ವಾರ್ಥಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ, ಪಟ್ಟಣದ ಕಸ ವಿಲೇವಾರಿಗೆ ತರಿಸಿರುವ ಹೊಸ ಜೆ.ಸಿ.ಬಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಹದಿಮೂರು ಲಕ್ಷದಷ್ಟು ದುಬಾರಿ ಹಣಕೊಟ್ಟು ತಂದಹ ಯಂತ್ರೋಪಕರಣ ತಂದ ಒಂದು ದಿನದಲ್ಲೇ ಕೆಟ್ಟಿದೆ ಎಂದರೆ ಅದು ಏನ್ನೆಷ್ಟು ಕಳಪೆ ಮಟ್ಟದ್ದಾಗಿರುಬಹುದು ಎಂದು ಆಕ್ಷೇಪಿಸಿದ ಬಾಬು ಸಾಹೇಬ್, ಈ ಯಂತ್ರ ಖರೀದಿಯಿಂದಾಗಿ ನಮ್ಮ ಪುರಸಭೆ ಸಾರ್ವಜನಿಕರಿಂದ ನಗೆಗೀಡಾಗಿದೆ ಎಂದರು.
ಇಡೀ ಪಟ್ಟಣವನ್ನೇಲ್ಲಾ ಸ್ವಚ್ಚಗೊಳಿಸುವ ಜನರಿಗೆ ತಮ್ಮ ಕೇರಿಯಲ್ಲೇ ಶೌಚಾಲಯವಿಲ್ಲದೆ, ಬಯಲನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ ಎಂಬ ಲಕ್ಷ್ಮಯ್ಯನ ಆರೋಪಕ್ಕೆ, ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಉತ್ತರ ನೀಡುತ್ತಾ ಹರಿಜನ ಕಾಲೋನಿಗಳಲ್ಲಿ ಶೌಚಾಲಯ ನಿಮರ್ಿಸಲೆಂದೇ 5ಲಕ್ಷದ 80ಸಾವಿರ ರೂಗಳನ್ನು ಮೀಸಲಿಟ್ಟಿದ್ದು, ಕಾಲೋನಿಯಲ್ಲಿ ಸ್ವಂತಃ ಜಾಗ ಹೊಂದಿರುವರು ಶೌಚಾಲಯ ಕಟ್ಟಿಸಿಕೊಳ್ಳುವುದಾದರೆ ಪ್ರತಿ ಒಂದು ಮನೆಗೆ 10ಸಾವಿರದಂತೆ ಪುರಸಭೆ ವತಿಯಿಂದ ಹಣವನ್ನು ನೀಡುವುದಾಗಿ ತಿಳಿಸಿದರು ಹಾಗೂ ಕಾಲೋನಿಯಲ್ಲಿ ಪುರಸಭೆಯ ಜಾಗವಿದ್ದರೆ ಅಲ್ಲಿ ಸಾರ್ವಜನಿಕ ಶೌಚಾಲಯ ನಿಮರ್ಿಸುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ವಿದ್ಯುತ್ ಅಡಚಣೆಯಿಂದಾಗಿ ನೀರು ಸರಬರಾಜಿಗೆ ತೊಂದರೆಯಾಗಿದ್ದು, ಒಂದೇ ವಾರದಲ್ಲಿ 7 ಮೋಟರ್ಗಳು ಸುಟ್ಟು ಹೋಗಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ ಎಂದ ಅಧ್ಯಕ್ಷರು, ಕಳೆದ 2ವರ್ಷದಿಂದ ಲೈಟ್ಕಂಬಗಳು ಡ್ಯಾಮೇಜ್ ಆಗಿದ್ದು ಅದನ್ನು ಸರಿಪಡಿಸಲು ತಿಳಿಸಿದರೂ ಸಹ ಆ ಬಗ್ಗೆ ಬೆಸ್ಕಾಂನವರು ಗಮನ ನೀಡಿಲ್ಲ, ದಬ್ಬೇಘಟ್ಟದಲ್ಲಿ ಟಿ.ಸಿ.ಕೆಟ್ಟುಹೋಗಿದ್ದು ಅದನ್ನು ತುತರ್ಾಗಿ ಸರಿಪಡಿಸಲು ಸಭೆಗೆ ಆಗಮಿಸಿದ್ದ ಬೆಸ್ಕಾಂ ಅಧಿಕಾರಿ ಜಯಶಂಕರ್ರವರಿಗೆ ಸೂಚಿಸಿದರು.
ಪಟ್ಟಣದ ಸ್ವಚ್ಛತೆಯೂ ಸೇರಿದಂತೆ ಹಲವು ಕಾರ್ಯಗಳಿಗೆ ಅಗತ್ಯವಿರುವ 2 ಟ್ರ್ಯಾಕ್ಟರ್ ಹಾಗೂ ಶೌಚಾಲಯ ಸ್ವಚ್ಚಗೊಳಿಸುವ ಯಂತ್ರ ಮತ್ತು ನಿರಾಶ್ರಿತರಿಗೆ ಜಮೀನನ್ನು ವಿತರಿಸುವುದರ ಬಗ್ಗೆ ಚಚರ್ಿಸಲು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ನಿಯೋಗದಲ್ಲಿ ತೆರಳುವುದಾಗಿ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಸೇರಿದಂತೆ ಪುರಸಭಾ ಸದಸ್ಯರು, ಮುಖ್ಯಾಧಿಕಾರಿ ಪಿ.ಸಿದ್ದಮೂತರ್ಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಾಸಲಿನಲ್ಲಿ ಜನಸ್ಪಂದನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಏ.2: ತಾಲೂಕಿನ ಸಾಸಲು ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಇದೇ 3ರ ಶನಿವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಸಾಸಲು ಗ್ರಾಮದ ಸಕರ್ಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಬೇಕೆಂದು ಕೋರಿ ಕೊಂಡಿರುವ ತಹಶೀಲ್ದಾರ್ ರವರು, ಈ ಭಾಗದ ಗ್ರಾಮಸ್ಥರು ತಮ್ಮ ಕುಂದುಕೊರತೆಗಳ ಬಗ್ಗೆ ಅಜರ್ಿ ನೀಡುವ ಮೂಲಕ ತಿಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ತೀರ್ಥರಾಮೇಶ್ವರನ ರಥೋತ್ಸವ
ಚಿಕ್ಕನಾಯಕನಹಳ್ಳಿ,ಏ.2: ಪುಣ್ಯ ಕ್ಷೇತ್ರ ಶೀ ತೀರ್ಥರಾಮೇಶ್ವರ ಸ್ವಾಮಿಯವರ ರಥೋತ್ಸವವು ಯರೇಕಟ್ಟೆ ವಜ್ರ ಪುಣ್ಯಕ್ಷೇತ್ರದಲ್ಲಿ ಇದೇ 4ರ ಭಾನುವಾರ ದಿಂದ 9ರ ಶುಕ್ರವಾರದವರೆಗೆ ವೈಭವಯುತವಾಗಿ ನಡೆಯಲಿದೆ ಎಂದು ಕನ್ವೀನರ್ ಟಿ.ಎಂ.ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಏ.4ರಂದು ಧ್ವಜಾರೋಹಣ, ಗಂಗಾಪೂಜೆ, ಕುಂಭಾಬಿಷೇಕ, ಹೋಮ ಕಾರ್ಯಕ್ರಮಗಳು ನಡೆಯಲಿದ್ದು, 5ರಂದು ನವಗ್ರಹ ಪೂಜೆ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಏರ್ಪಡಿಸಲಾಗಿದೆ, 6ರಂದು ತೀರ್ಥರಾಮೇಶ್ವರನ ಪಲ್ಲಕ್ಕಿ ಉತ್ಸವ ತೀರ್ಥಪುರಕ್ಕೆ ಆಗಮನ, 7ರಂದು ಗ್ರಾಮ ಶಾಂತಿಗಾಗಿ ನವಗ್ರಹ ಪೂಜೆ ಹಾಗೂ ಪುಷ್ಪ ಮಂಟಪದ ಉತ್ಸವ, 8ರಂದು ಸ್ವಾಮಿಯವರನ್ನು ಯರೇಕಟ್ಟೆ ಗ್ರಾಮಕ್ಕೆ ಪುಷ್ಪ ಮಂಟಪದಲ್ಲಿ ಕರೆತರುವುದು, 9ರಂದು ದೊಡ್ಡರಾಂಪುರದಲ್ಲಿ ಸ್ವಾಮಿಯವರ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.