Tuesday, September 7, 2010




ಉನ್ನತ ಜ್ಞಾನ ಬೋಧನೆಯನ್ನು ಉತ್ತಮ ಪಡಿಸುತ್ತದೆ.
ಚಿಕ್ಕನಾಯಕನಹಳ್ಳಿ,ಸೆ.07: ಶಿಕ್ಷಕರು ವೃತ್ತಿಗಾಗಿ ಮಾಡಿರುವ ವಿದ್ಯಾಭ್ಯಾಸದ ಜೊತೆಗೆ ಉನ್ನತ ವಿಧ್ಯಾಭ್ಯಾಸ ಮಾಡಿ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಮಕ್ಕಳಿಗೆ ಬೋಧನೆ ಮಾಡಿದರೆ ಮಕ್ಕಳಿಂದ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆಯಬಹುದು ಎಂದು ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯಿ ಅಭಿಪ್ರಾಯಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಶಿಕ್ಷಕರಲ್ಲಿ ಮುಖ್ಯವಾಗಿ ತಾಳ್ಮೆ, ಶಾಂತ ಸ್ವಭಾವದ ವ್ಯಕ್ತಿತ್ವ ಇದ್ದರೆ ದುಶ್ಚಟಗಳಿಗೆ ಬಾಗಿಯಾಗಿರುವ ವಿದ್ಯಾಥರ್ಿಯನ್ನು ಸರಿದಾರಿಗೆ ತರಬಹುದು ಎಂದರಲ್ಲದೆ, ಶಿಕ್ಷಕರು ವೃತ್ತಿಯನ್ನು ಪ್ರೀತಿಸುವುದಕ್ಕಿಂತ ಮಕ್ಕಳನ್ನು ಹೆಚ್ಚು ಪ್ರೀತಿಸಿದರೆ ಅವರು ತಂದೆ, ತಾಯಿ ಬಳಿ ಹೇಳಿಕೊಳ್ಳದಂತಹ ವಿಷಯಗಳನ್ನು ಗುರುಗಳಲ್ಲಿ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಆದ್ದರಿಂದ ಮಕ್ಕಳಿಗೆ ಸತ್ಭಾವನೆಯಿಂದ ಬೋಧಿಸಬೇಕು ಎಂದರು. ಶಿಕ್ಷಕರು ಮಕ್ಕಳ ಆಸಕ್ತಿ ಕಡೆ ಹೆಚ್ಚು ಒತ್ತು ಕೊಟ್ಟರೆ ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸವನ್ನು ಕಲಿಯುತ್ತಾರೆ, ಮತ್ತು ಮಕ್ಕಳಿಗೆ ವಿದ್ಯೆ ಬೋದಿಸುವಾಗ ಧರ್ಮ, ಆಧ್ಯಾತ್ಮ ವಿಷಯಗಳನ್ನು ತಿಳಿಸಿ ಸಮಾಜ ಸುಸ್ಥಿಯಲ್ಲಿಡುವಂತೆ ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಕರು ಮಾಡುವ ಬೋಧನೆಯಲ್ಲಿ ಭವಿಷ್ಯ ಅಡಗಿದ್ದು ಅವರು ವೇತನಕ್ಕೋಸ್ಕರ ಭೋದನೆ ಮಾಡದೆ ಒಬ್ಬ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರನ್ನು ಬೆಳೆಸುತ್ತಿದ್ದೇನೆ ಎಂದು ಅರಿತು ಬೋದಿಸಿದಾಗ ಶಿಕ್ಷಕ ವೃತ್ತಿ ಸಾರ್ಥಕವೆನಿಸುತ್ತದೆ ಎಂದರು. ವಿದ್ಯಾಥರ್ಿಗಳಿಗೆ ದೇಶಕ್ಕೆ ಕೀತರ್ಿ ತಂದ ಮೇರು ವ್ಯಕ್ತಿಯನ್ನು ಮಾದರಿಯನ್ನಾಗಿ ತೋರಿಸಿ ಅವರ ಆದರ್ಶದ ಮಾರ್ಗದಲ್ಲಿ ನಡೆಯುವಂತೆ ಬೋಧಿಸಿದರೆ, ಮಕ್ಕಳು ಉತ್ತಮ ಹಂತಕ್ಕೆ ತಲುಪಿ ವಿದ್ಯೆ ಕಲಿಸಿಕೊಟ್ಟ ಗುರುವನ್ನು ಎಲ್ಲಿದ್ದರೂ ನೆನಪಿಸಿ ತಮ್ಮಲ್ಲೇ ಗೌರವಿಸುತ್ತಾರೆ ಎಂದರು. ಆಡಳಿತದ ಮೂಲ ಉದ್ದೇಶ ಸಾರ್ವಜನಿಕ ಸೇವೆಯಾಗಿದ್ದು ಕುಂದುಕೊರತೆಗಾಗಿ ನಿವಾರಿಸಿಕೊಳ್ಳಲು ಬರುವಂತಹವರಿಗೆ ಸೌಜನ್ಯದಿಂದ ವತರ್ಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ವತಿಯಿಂದ 16ಜನ ಶಿಕ್ಷಕರಿಗೆ ಮತ್ತು ಡಾ.ಲಕ್ಷ್ಮಿಪತಿ ಬಾಬು,ಡಾ.ಸರೋಜ ಲಕ್ಷ್ಮಿಪತಿ ಪ್ರತಿಷ್ಠಾನದ ವತಿಯಿಂದ ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಶಸ್ತಿಯನ್ನು 4ಜನ ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹದೇವಮ್ಮ ಪ್ರಾಥರ್ಿಸಿ, ಬಿ.ಇ.ಓ ಸಾ.ಚಿ.ನಗೇಶ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜ್ ನಿರೂಪಿಸಿದರು.







Friday, September 3, 2010

16ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಚಿಕ್ಕನಾಯಕನಹಳ್ಳಿ,ಸೆ.03: 2010-11ನೇ ಸಾಲಿನ ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಘದ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ 16 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಸೆಪ್ಟಂಬರ್ 5ರ ಭಾನುವಾರ ನಡೆಯಲಿರುವ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 123ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಿಕ್ಷಕರಾದ ಬರಗೂರಿನ-ಹನುಮಂತಯ್ಯ, ತೀರ್ಥಪುರ-ಬಸವರಾಜು, ಕಂದಿಕೆರೆ-ರೇವಣ್ಣಎಸ್.ಬಿ, ಶೆಟ್ಟಿಕೆರೆ-ಸಿದ್ದರಾಮಯ್ಯ, ಜೆ.ಸಿ.ಪುರ-ಕೃಷ್ಣಪ್ಪ ಮತ್ತು ಅಜ್ಜಯ್ಯ, ಮತಿಘಟ್ಟ-ರಾಧಮ್ಮ, ಹುಳಿಯಾರು-ಲೀಲಾವತಿ, ಯಸ್ಮಿನಾಬಾನು, ಗಾಣಧಾಳು-ಹನುಮಂತರಾಜು, ಯಳನಡು-ಪುರಂದರ, ಹೋಯ್ಸಳಕಟ್ಟೆ-ದೇವರಾಜು, ಹಂದನಕೆರೆ-ಸೀತಮ್ಮ, ಚಿಕ್ಕನಾಯಕನಹಳ್ಳಿ-ಸಿ.ಕೆ.ಪುಟ್ಟಸ್ವಾಮಿ, ಸರ್ವಮಂಗಳ, ಜಗದಾಂಬ ಶಿಕ್ಷಕರುಗಳನ್ನು ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ.

ರಾಜಕೀಯ ಪಕ್ಷಗಳು ನಡೆಸುತ್ತಿರುವ ದಂಧೆಗಳನ್ನು ತಡೆಯಲು ಕ.ಜ.ಪಕ್ಷ
ಚಿಕ್ಕನಾಯಕನಹಳ್ಳಿ,ಸೆ.03: ಕನ್ನಡ ಹೆಸರಿನಲ್ಲಿ ನಡೆಯುತ್ತಿರುವ ದಂಧೆಗಳು ನಿಲ್ಲಬೇಕು ಅದಕ್ಕಾಗಿ ಕನರ್ಾಟಕ ಜನತಾ ಪಕ್ಷ ಎಂಬ ಪಕ್ಷವನ್ನು ರಾಜ್ಯದ್ಯಂತ ವಿಸ್ತರಿಸುತ್ತಿದ್ದೇವೆ ಎಂದು ಕನರ್ಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನರ್ಾಟಕ ರಕ್ಷಣಾ ವೇದಿಕೆಯಂತಹ ಕನ್ನಡ ಸಂಘ ಸಂಸ್ಥೆಗಳು ಭಕ್ಷಣಾ ಸಂಸ್ಥೆಗಳಾಗಿ ಮಾರ್ಪಟ್ಟಿವೆ ಎಂದರು. ರಾಜ್ಯಾದ್ಯಂತ ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿ ಅನ್ಯಾಯದ ವಿರುದ್ದ ನ್ಯಾಯಕ್ಕಾಗಿ ಹೋರಾಡಿ ಕನರ್ಾಟಕ ರಾಜ್ಯವನ್ನು ಸುವರ್ಣ ಕನರ್ಾಟಕ ಮಾಡಬೇಕಾಗಿದೆ ಎಂದರು.
ಅಕ್ರಮ ಗಣಿಗಾರಿಕೆ, ರೈತರು ಬೆಳೆದ ಉತ್ಪನ್ನಗಳಿಗೆ ಸಿಗದ ಬೆಲೆ ಮತ್ತು ರಾಜ್ಯಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಂದಾಗಿ ರಾಜ್ಯದ ಉದ್ಯಮಗಳು ನಶಿಸುತ್ತಿವೆ ಎಂದರು. 60ವರ್ಷಗಳಿಂದ ರಾಜ್ಯದಲ್ಲಿ ರೈಲ್ವೆ ಯೋಜನೆಗಳಲ್ಲಿ ಆದ ಅನ್ಯಾಯಗಳು ಮತ್ತು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಸಂಪತ್ಭರಿತವಾಗುವ ಮೂಲಕ ರಾಜ್ಯವನ್ನು ಬರಿದು ಮಾಡಲು ಹೊರಟಿವೆ ಎಂದರಲ್ಲದೆ, ಜನತಾ ಪಕ್ಷವು ಇವುಗಳನ್ನೆಲ್ಲ ತಡೆಹಿಡಿಯಲು ಪಣ ತೊಟ್ಟಿದೆ ಎಂದರು.
ಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಚೆಲುವರಾಜ್, ಸಂಚಾಲಕಿ ಜಯಪದ್ಮ, ಕಾರ್ಯದಶರ್ಿ ಜ್ಯೋತಿ ಉಪಸ್ಥಿತರಿದ್ದರು.


Thursday, September 2, 2010

ಗ್ರಾ.ಪಂ ನೌಕರರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಸೆ.02: ಗ್ರಾಮ ಪಂಚಾಯ್ತಿ ನೌಕರರ ವಿವಿಧ ಬೇಡಿಕೆಗಳನ್ನು ಇದೇ 6ರ ಸೋಮವಾರ ಪ್ರತಿಭಟನೆ ಹಾಗೂ ಅನಿಧರ್ಿಷ್ಠ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ ತಿಳಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆಯನ್ನು ನಗರದ ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ನೆಹರು ಸರ್ಕಲ್ ಮುಖಾಂತರ ತಾಲೂಕು ಪಂಚಾಯ್ತಿ ಕಛೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾದಂಬರಿಗಾತರ್ಿ ದಿ.ತ್ರಿವೇಣಿ ನೆನಪು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಸೆ.02: ಭುವನೇಶ್ವರಿ ಯುವಕ ಸಂಘ ಮತ್ತು ಜ್ಞಾನಪೀಠ ಪ್ರೌಡಶಾಲೆ ಸಂಯುಕ್ತ ಆಶ್ರಯದಲ್ಲಿ ಕಾದಂಬರಿಗಾತರ್ಿ ದಿವಂಗತ ತ್ರಿವೇಣಿಯವರ ಜನ್ಮದಿನದ ಸವಿನೆನಪನ್ನು ಇದೇ ಸೆಪ್ಟಂಬರ್ 6ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಜ್ಞಾನಪೀಠ ಪ್ರೌಡಶಾಲೆ ಆವರಣದಲ್ಲಿ ಮಧ್ಯಾಹ್ನ 3-30ಕ್ಕೆ ಹಮ್ಮಿಕೊಂಡಿದ್ದು ಮುಖ್ಯೋಪಾಧ್ಯಾಯ ಗೋವಿಂದರಾಜ್, ಸಂಘದ ಗೌರವಾಧ್ಯಕ್ಷ ಸಿ.ಕೆ.ಶಾಂತಕುಮಾರ್, ಅಧ್ಯಕ್ಷ ಸಿ.ಎಸ್.ರೇಣುಕಾಮೂತರ್ಿ ಉಪಸ್ಥಿತರಿರುವರು.
ಸೆ.08ಗುರುನಮನ
ಚಿಕ್ಕನಾಯಕನಹಳ್ಳಿ,ಸೆ.02: ತಾಲೂಕು ಕಸಾಪ, ರೋಟರಿ-ಇನ್ನರ್ವೀಲ್ ಕ್ಲಬ್ ಮತ್ತು ಕೆನರ ಬ್ಯಾಂಕ್ ವತಿಯಿಂದ ಗುರುನಮನ ಮತ್ತು ನಗರದ ಎಲ್ಲ ಪ್ರೌಡಶಾಲೆ ಮುಖ್ಯೋಪಾಧ್ಯಾಯ ಮತ್ತು ಕಾಲೇಜು ಪ್ರಾಚಾರ್ಯರಿಗೆ ಗೌರವಾಭಿನಂದನೆ ಕಾರ್ಯಕ್ರಮವನ್ನು ಇದೇ ಸೆಪ್ಟಂಬರ್ 8ರ ಬುಧವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಬಾಲಭವನದಲ್ಲಿ ಸಂಜೆ 5-30ಕ್ಕೆ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಕೆನರ ಬ್ಯಾಂಕ್ ಡಿ.ಜಿ.ಎಂ. ರವೀಂದ್ರ ಭಂಡಾರಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಜಸ್ಟೀಸ್ ಎನ್.ವೆಂಕಟಾಚಲ ಮುಖ್ಯೋಪಾಧ್ಯಾಯ ಮತ್ತು ಪ್ರಾಚಾರ್ಯರಿಗೆ ಗೌರವಾಭಿನಂದನೆ ಸಲ್ಲಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್, ಕೆನರ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಎಸ್.ಜಿ.ನಾಗರಾಜ್, ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಉಪಸ್ಥಿತರಿರುವರು.
ಸೆ.05ರಂದು ಶಿಕ್ಷಕರ ದಿನಾಚರಣೆ
ಚಿಕ್ಕನಾಯಕನಹಳ್ಳಿ,ಸೆ.02: ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 123ನೇ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟಂಬರ್ 5ರ ಭಾನುವಾರ ಬೆಳಗ್ಗೆ 9-30ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.
ತಾ.ಪಂ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಡಾ.ರಾಧಕೃಷ್ಣನ್ರವರ ಭಾವಚಿತ್ರ ಅನಾವರಣ ಮಾಡಲಿದ್ದು ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಿದ್ದಾರೆ.
ಬೆಂಗಳೂರಿನ ಭವತಾರಿಣಿ ಆಶ್ರಮ ಮಾತಾಜಿ ವಿವೇಕಮಹಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದು ವಿಧಾನ ಪರಿಷತ್ ಮುಖ್ಯ ಸಚೇತಕ ಎ.ಎಚ್.ಶಿವಯೋಗಿಸ್ವಾಮಿ ಬಹುಮಾನ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಎಂ.ಆರ್.ಹುಲಿನಾಯ್ಕರ್ ಜಿ.ತಿಮ್ಮಯ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಜಿ.ಪಂ.ಸದಸ್ಯರಾದ ಸುಶೀಲಸುರೇಂದ್ರಯ್ಯ, ಜಿ.ರಘುನಾಥ್, ಜಯಮ್ಮದಾನಪ್ಪ, ಹೊನ್ನಪ್ಪ, ಈರಣ್ಣ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಸಿ.ಪಿ.ಐ ರವಿಪ್ರಸಾದ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಪ್ರೌ.ಶಾ.ಮು.ಶಿ ಸಂಘಧ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

Wednesday, September 1, 2010

ಚಿಕ್ಕನಾಯಕನಹಳ್ಳಿ,ಸೆ.01:ತಾಲೂಕಿನ ಹಂದನಕೆರೆ ಹೋಬಳಿ ಸಕರ್ಾರಿ ಕಿರಿಯ ಪ್ರೌಡಶಾಲಾ ಆವರಣದಲಿ ್ಲಶಾಸಕ ಸಿ.ಬಿ.ಸುರೇಶ್ಬಾಬುರವರ ಅಧ್ಯಕ್ಷತೆಯಲ್ಲಿ ಇದೇ 4ರ ಶನಿವಾರ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಬೆಳಗ್ಗೆ 11ಗಂಟೆಗೆ ಏರ್ಪಡಿಸಿದ್ದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳ ಬಗ್ಗೆ ಮನವಿ ನೀಡಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಲಿತ ಸಹಾಯವಾಣಿಗೆ ಪದಾಧಿಕಾರಿಗಳ ಆಯ್ಕೆ
ಚಿಕ್ಕನಾಯಕನಹಳ್ಳಿ,ಸೆ.01: ಕನರ್ಾಟಕ ದಲಿತ ಸಹಾಯವಾಣಿ ಕೇಂದ್ರದ ತಾಲೂಕು ಶಾಖೆಯ ಸಭೆಯು ರಾಜ್ಯ ಅಧ್ಯಕ್ಷ ಜಿ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ತಾಲೂಕು ಗೌರವಾಧ್ಯಕ್ಷರಾಗಿ ನರಸಿಂಹಯ್ಯ, ಅಧ್ಯಕ್ಷರಾಗಿ ಆರ್.ಹನುಮಂತಯ್ಯ, ಪ್ರಧಾನ ಕಾರ್ಯದಶರ್ಿ ಸಿ.ನರಸಿಂಹಮೂತರ್ಿ, ಸಹಕಾರ್ಯದಶರ್ಿ ಜಿ.ಕೆ.ಮಹೇಶ್, ಖಜಾಂಚಿ ಕರಿಯಪ್ಪ, ಸಂಚಾಲಕ ನರಸಿಂಹಮೂತರ್ಿ, ನಿದರ್ೇಶಕ ಟಿ.ಎನ್.ಶಿವಣ್ಣ ಕೆಂಕೆರೆಗೆ ಕಾಳಪ್ಪ, ಹುಳಿಯಾರಿಗೆ ಮಾಸ್ತಯ್ಯ, ಗೋಪಾಲಪುರಕ್ಕೆ ಕುಮಾರಣ್ಣರವರನ್ನು ತಾಲೂಕು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದಶರ್ಿ ನರಸಿಂಹಮೂತರ್ಿ, ಸಂಘಟನಾ ಸಂಚಾಲಕ ಕಬ್ಬಡ್ಡಿ ಮಂಜುನಾಥ್, ರಾಜ್ಯ ಖಜಾಂಚಿ ಸೀಬಯ್ಯ, ಜಿಲ್ಲಾಧ್ಯಕ್ಷ ನರಸಿಂಹಮೂತರ್ಿ ಉಪಸ್ಥಿತರಿದ್ದರು.

Tuesday, August 31, 2010


ಕಲಿತವನು ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದ
ಚಿಕ್ಕನಾಯಕನಹಳ್ಳಿ,ಆ.31: ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಅನಾವರಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಎಸ್.ಎಂ.ಎಸ್. ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಹಂದನಕೆರೆ ಹೋಬಳಿಯ ಬಂದ್ರೇಹಳ್ಳಿಯ ಸಕರ್ಾರಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿತವನು ಹಾಗೂ ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದವಾಗುತ್ತದೆ ಎಂದ ಅವರು, ಕುಟುಂಬದಲ್ಲೂ ಅಷ್ಟೇ ದುಡಿಯುವ ಯುವಕರು ಅನುಭವಿ ಪೋಷಕರ ಮಾರ್ಗದರ್ಶನದಲ್ಲೂ ನಡೆಯುವ ಕುಟುಂಬಗಳು ಏಳ್ಗೆ ಹೊಂದುತ್ತದೆ ಎಂದರು.
ಇಂದಿನ ಯುವಕರು ಗಡಿಯಾರದ ಮುಳ್ಳಿನ ಹಿಂದೆ ಓಡುವುದನ್ನು ಕಲಿತಾದ ಮೇಲೆ ಒತ್ತಡದ ಬದುಕಿಗೆ ಒಳಗಾಗಿದ್ದು ಮದುವೆ ಮುಂಜಿಯಂತಹ ಬಾಂಧವ್ಯ ಬೆಸೆಯುವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸದೆ ಮುಖ ತೋರಿಸಿ ಹೋಗುವ ಪರಿಪಾಟಲಿಗೆ ಒಳಗಾಗಿದ್ದಾರೆ ಎಂದ ಅವರು ಬಂಧುಬಾಂದವ ಸಂಬಂಧಗಳನ್ನು ವೃದ್ದಿಸಿಕೊಳ್ಳುವುದನ್ನು ಈಗಿನಿಂದಲೇ ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಜಾನಪದ ಕಲಾ ಪ್ರಕಾರಗಳಿಂದ ಸೋಬಾನೆ ಪದ, ಲಾವಣಿಗಳು ಹಾಗೂ ಒಡಪುಗಳ ವೃದ್ದರ ಬಾಯಿಂದ ಮಾಯವಾಗುವ ಮುನ್ನ ಅವುಗಳು ಶಾಶ್ವತವಾಗಿ ಉಳಿಯುವಂತೆ ಮಾಡಲು ಬರೆದಿಡುವ ಅಥವಾ ಧ್ವನಿ ಮುದ್ರಿಸಿಕೊಳ್ಳುವ ಕಾರ್ಯ ನಡೆಯಬೇಕೆಂದರು.
ಹಂದನಕೆರೆ ಐತಿಹಾಸಿಕ ಸ್ಮಾರಕದ 12 ಸೋಪನಾದ ಬಾವಿಗೆ ದೊಡ್ಡ ಇತಿಹಾಸವಿದ್ದು, ಈ ಇತಿಹಾಸ ಇಂದಿಗೂ ಹಿರಿಯರು ಹೇಳುವ ಲಾವಣಿಯಲ್ಲಿ ಅಡಕವಾಗಿದೆ ಎಂದ ಅವರು, 15ನೇ ಶತಮಾನದಲ್ಲಿದ್ದ ನಾಗತಿ ಚನ್ನವ್ವ ಮಕ್ಕಳ ಫಲ ಪಡೆಯಲು ಮಾಡಿಕೊಂಡ ಹರಕೆಯಂತೆ ಈ 12 ಸೋಪನಾದ ಬಾವಿಯನ್ನು ತೋಡಿಸಿರುವುದು ಐತಿಹಾಸಿಕ ಘಟನೆ ಇಂದಿಗೂ ಈ ಬಾವಿ ಚೆನ್ನವ್ವನ ವೃತ್ತಾಂತವನ್ನು ಹೇಳುವ ಸ್ಮಾರಕವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಗೆರೆ ಗ್ರಾ.ಪಂ. ಅಧ್ಯಕ್ಷೆ ವಿಮಲಮ್ಮ ವಹಸಿದ್ದು, ಉಪಾಧ್ಯಕ್ಷ ಚಂದ್ರನಾಯ್ಕ, ಸದಸ್ಯರಾದ ರಾಜಶೇಖರ್, ನಾಗಭೂಷಣ್, ಇ.ಸಿ.ಓ ತಿಮ್ಮಬೋವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವಕುಮಾರ್, ಎಸ್.ಡಿ.ಎಂ.ಸಿ ಬಸವಲಿಂಗಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 8ರಿಂದ 14 ವರ್ಷದ ವಿದ್ಯಾಥರ್ಿಗಳು ಕಾವ್ಯವಾಚನ ಮಾಡಿದರು. ಶಾಲೆಯ ಎಚ್.ಎಂ. ಮಂಜುಳಮ್ಮ, ಸ್ವಾಗತಿಸಿದರೆ, ಶಿಕ್ಷಕ ಎ.ಸೋಮಶೇಖರಯ್ಯ ನಿರೂಪಿಸಿದರು.
ದುರಾಲೋಚನೆಯಿಂದ ದೂರವಿದ್ದು ಮುಂದಾಲೋಚನೆಗೆ ಒತ್ತು ನೀಡಿ
ಚಿಕ್ಕನಾಯಕನಹಳ್ಳಿ,ಆ.31: ಶಿಸ್ತುಬದ್ದತೆಯಿಂದ ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಉತ್ತಮ ಫಲಿತಾಂಶ ತರುವ ಮೂಲಕ ಕಾಲೇಜಿನ ಕೀತರ್ಿಯನ್ನು ಬೆಳಗಿಸಬೇಕು ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳಿಂದ ಕಿರಿಯ ವಿದ್ಯಾಥರ್ಿಗಳಿಗೆ ನಡೆದ ಸ್ನೇಹಸಂಗಮ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾಥರ್ಿಗಳು ದುರಭ್ಯಾಸ ಬಿಟ್ಟು ಉತ್ತಮ ನಡವಳಿಕೆಯಿಂದ ಕಾಲೇಜಿಗೆ ಆಗಮಿಸಿ ಗುರುವಿನ ಮಾತನ್ನು ಅಲ್ಲಗಳೆಯದೇ ಅವರ ಮಾತನ್ನು ಶಿರಸಾವಹಿಸಿ ಪಾಲಿಸಿ ಉತ್ತಮ ಫಲಿತಾಂಶ ತರಬೇಕು ಎಂದರಲ್ಲದೆ, ತಮ್ಮ ನಡವಳಿಕೆಯಿಂದ ಎಲ್ಲರ ವಿಶ್ವಾಸಗಳಿಸಬೇಕು ಎಂದ ರು. ಮುಂದೆ ಗುರಿ ಇದ್ದು ಹಿಂದೆ ಗುರು ಇದ್ದರೆ ಎಂತಹ ಕ್ಲಿಷ್ಟಕರವಾದ ಸಂಗತಿಯನ್ನು ಬಗೆಹರಿಸಿ ಯಶಸ್ಸನ್ನು ಸಾಧಿಸಬಹುದು ಎಂದರು.
ಉಪನ್ಯಾಸಕ ಶಿವಲಿಂಗಮೂತರ್ಿ ಮಾತನಾಡಿ ಹಿರಿಯ ವಿದ್ಯಾಥರ್ಿಗಳ ಉತ್ತಮ ನಡವಳಿಕೆಯನ್ನು ಕಿರಿಯ ವಿದ್ಯಾಥರ್ಿಗಳು ಪಾಲಿಸಿ ಎಲ್ಲರ ಮನಸ್ಸನ್ನು ಗೆಲ್ಲಬೇಕು ಮತ್ತು ಹಿರಿಯ ವಿದ್ಯಾಥರ್ಿಗಳು ಕಿರಿಯ ವಿದ್ಯಾಥರ್ಿಗಳಿಗೆ ಯಾವುದೇ ಅಹಿತಕರ ಘಟನೆ ನಡೆಸಿ ಮನಸ್ಸನ್ನು ನೋಯಿಸದೆ ಸ್ನೇಹ ಸಹಬಾಳ್ವೆಯಿಂದ ಬಾಳಲು ತಿಳಿಸಿದರಲ್ಲದೆ ಪ್ರಾರಂಭದಲ್ಲಿ ಪ್ರತಿ ವಿಷಯವೂ ಕಷ್ಟ ಆದರೆ ಅನುಭವದ ನಂತರ ಎಲ್ಲ ವಿಷಯವೂ ಸುಲಭವೆಂದು ತಿಳಿಸಿದರು.
ಉಪನ್ಯಾಸಕಿ ರಂಜಿತ ಮಾತನಾಡಿ ಕಿರಿಯ ವಿದ್ಯಾಥರ್ಿಗಳು ತಮ್ಮ ಹಿಂದಿನ ಜೀವನದ ಅಹಿತಕರ ಘಟನೆ, ಕೆಟ್ಟ ನಡತೆ ಮತ್ತು ಬೇಜವಬ್ದಾರಿತನದಂತಹ ದೂರಾಲೋಚನೆಗಳನ್ನು ಮರೆತು ಉತ್ತಮ ನಡತೆಯಿಂದ ಹೊಸ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ಉತ್ತಮ ಪಲಿತಾಂಶ ತರಲು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಚಂದ್ರಶೇಖರ್, ಸುರೇಶ್, ಪ್ರಸನ್ನಕುಮಾರ್, ಮಹೇಶ್, ದರ್ಶನ, ವೇದಮೂತರ್ಿ, ಲಕ್ಷೀಶ, ಶಶಿಧರ್, ನಾಗಭೂಷಣ್, ಚಿರಂಜೀವಿ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿಗಳಾದ ಲಕ್ಷ್ಮೀ ಸ್ವಾಗತಿಸಿದರೆ, ಗೌಸ್ಪಾಷ ನಿರೂಪಿಸಿ, ರಂಗಸ್ವಾಮಿ ವಂದಿಸಿದರು.

Monday, August 30, 2010

ತಾಲೂಕಿನ 48 ಶಾಲೆಗಳು ಮುಚ್ಚುವ ಅಂಚಿನಲ್ಲಿವೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಆ.30: ಉಳ್ಳವರು ಎಲ್ಲೊ ಹೋಗಿ ಓದುತ್ತಾರೆ ಬಡವರಿಗಾಗಿ ಇರುವ ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಬದ್ದತೆಯಿಂದ ಬೋಧನೆ ಮಾಡಿ, ಕಾನ್ವೆಂಟ್ ಮಕ್ಕಳಿಗಿಂತ ಪ್ರಬುದ್ದರನ್ನಾಗಿ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ರೇವಣಪ್ಪನ ಮಠ ಸಕರ್ಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶಾಲೆಗೆ ಸ್ಥಳದಾನ ಮಾಡಿದ ದಂಪತಿಗಳ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡುವುದರ ಜೊತಗೆ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತರಲು ಶ್ರಮಿಸಬೇಕು ಎಂದ ರಲ್ಲದೆ, ತಾಲೂಕಿನ 48 ಸಕರ್ಾರಿ ಶಾಲೆಗಳು ಮುಚ್ಚುವ ಅಂಚಿನಲ್ಲಿದ್ದು ಶಿಕ್ಷಕರು ಮಕ್ಕಳ ಹಾಜರಾತಿಯ ಬಗ್ಗೆ ಗಮನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು. ಸಕರ್ಾರಿ ಶಾಲೆಗಳಿಗೆ ವಿದ್ಯಾಥರ್ಿಗಳನ್ನು ಕರೆತರಲು ಸಕರ್ಾರ ಹೆಚ್ಚು ಉತ್ತೇಜನ ನೀಡುತ್ತಿದೆ, ಅದಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ವಿದ್ಯಾಥರ್ಿಗಳನ್ನು ಶಾಲೆಗೆ ನಿರಂತರವಾಗಿ ಬರುವಂತೆ ಪ್ರೇರೆಪಿಸುತ್ತಿದೆ, ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಶಿಕ್ಷಕರು ಜವಬ್ದಾರ ಹೊರಬೇಕೆಂದರು.
ವಾತರ್ಾ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ ಸಿ.ಕೆ.ಪರುಶುರಾಮಯ್ಯ ಮಾತನಾಡಿ ಶಾಲೆಗಳಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು, ಗುರು ಪ್ರಾರಂಭದಿಂದ ಅಂತ್ಯದವರೆವಿಗೂ ಅಡಿಪಾಯ ಹಾಕುವ ಒಬ್ಬ ಶಿಲ್ಪಿಯಂತೆ ಎಂದರಲ್ಲದೆ, ವಿದ್ಯಾಥರ್ಿಯ ಮನಸ್ಸನ್ನು ಅರಿತು ವಿದ್ಯೆ ಬೋದಿಸಿದಾಗ ಅವನ ಮನಸ್ಸಿನಲ್ಲಿ ಶಾಂತಿ ನೆಲಸಿ ವಿದ್ಯೆ ಕಲಿಯಲು ಮುಂದಾಗುತ್ತಾನೆ ಎಂದರು, ವಿದ್ಯಾಥರ್ಿಗಳನ್ನ ಪರಿಪೂರ್ಣತೆಗೆ ಕೊಂಡೊಯ್ಯುವಾಗ ಗುರುವು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕೆಂದರು.
ತುಮಕೂರು ಡಿ.ಡಿ.ಪಿ.ಐ.ಕಛೇರಿಯ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 12ಕ್ಕಿಂತ ಕಡಿಮೆ ವಿದ್ಯಾಥರ್ಿಗಳಿರುವ ಸಕರ್ಾರಿ ಶಾಲೆಗಳು 412 ಇದ್ದು, ಇವುಗಳ ಸ್ಥಿತಿ ಸಂಕಷ್ಟದಲ್ಲಿದೆ ಅಲ್ಲಿನ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ.ಸದಸ್ಯರು ದಾಖಲಾತಿ ಮತ್ತು ಹಾಜರಾತಿಗಳ ಹೆಚ್ಚು ಗಮನ ನೀಡಬೇಕಾಗುತ್ತದೆ ಎಂದರಲ್ಲದೆ, ನಗರೀಕರಣ ಮತ್ತು ಇಂಗ್ಲೀಷೀಕರಣದಿಂದಾಗಿ ಸಕರ್ಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಶಿಕ್ಷಕರು ತಮಗೆ ನೀಡುತ್ತಿರುವ ಸಾಮಥ್ರ್ಯ ಆಧಾರಿತ ತರಬೇತಿಗಳನ್ನು ಶಾಲೆಗಳಲ್ಲಿ ಬಳಸಿಕೊಂಡು ಬೋಧಿಸಿದರೆ ವಿದ್ಯಾಥರ್ಿಗಳ ಕಲಿಕೆ ಉತ್ತಮಗೊಂಡು ಸಕರ್ಾರಿ ಶಾಲೆಗಳ ಕಡೆ ಪೋಷಕರು ಮುಖಮಾಡತ್ತಾರೆ ಎಂದರು. ಶಿಕ್ಷಣ ಹಕ್ಕು ಕಾಯಿದೆ ಪ್ರಖರವಾಗಿದ್ದು ವಿದ್ಯಾಥರ್ಿಗಳು ತಮ್ಮ ವಿದ್ಯಾರ್ಜನೆಯ ನ್ಯೂನತೆಗಳನ್ನು ನ್ಯಾಯಾಲಯಗಳಲ್ಲೂ ಪ್ರಶ್ನಿಸಬಹುದಾದಂತಹ ದಿನಗಳು ದೂರವಿಲ್ಲವೆಂದರು.
ಕಾರ್ಯಕ್ರಮದಲ್ಲಿ ಸ್ಥಳದಾನಿಗಳದ ಚೌಡಿಕೆ ಕರಿಯಪ್ಪ ಹಾಗೂ ಸಣ್ಣಮುದ್ದಮ್ಮನವರ ಭಾವಚಿತ್ರಗಳನ್ನು ಇ.ಎನ್.ಟಿ.ತಜ್ಞ ಡಾ.ಸಿ.ಗುರುಮೂತರ್ಿ ಹಾಗೂ ಸಿ.ಎಚ್.ಹನುಮಂತಯ್ಯ ಅನಾವರಣಗೊಳಿಸಿದರು. ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಶಾಲೆಗೆ ಸ್ಥಳದಾನ ಮಾಡಿದ ಸಿ.ಕೆ.ಪರಶುರಾಮಯ್ಯ, ಸಿ.ಆರ್.ನಾಗರತ್ನ ದಂಪತಿಗಳನ್ನು ಶಾಸಕರು ಸನ್ಮಾನಿಸದರು.
ಸಮಾರಂಭದಲ್ಲಿ ಸ್ವಾತಂತ್ರ ಹೋರಾಟಗಾರ ಮುರುಡಯ್ಯ, ಪುರಸಬಾಧ್ಯಕ್ಷ ರಾಜಣ್ಣ, ಬಿ.ಇ.ಓ ಸಾ.ಚಿ.ನಾಗೇಶ್, ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾ ಸದಸ್ಯರಾದ ಸುಮಿತ್ರಾ ಕಣ್ಣಯ್ಯ, ರೇಣುಕಾಗುರುಮೂತರ್ಿ, ಸಿ.ಡಿ.ಚಂದ್ರಶೇಖರ್, ಸಿ.ಬಸವರಾಜು, ಸಿ.ಎಂ.ರಂಗಸ್ವಾಮಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ಜಿ.ರೇವಣ್ಣ, ಮಾಜಿ ಪುರಸಭಾ ಅಧ್ಯಕ್ಷ ಕೆ.ರಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಶೀಲ ರಾಮಸ್ವಾಮಿ ಪ್ರಾಥರ್ಿಸಿದರೆ, ಮುಖ್ಯ ಶಿಕ್ಷಕಿ ತಿಲೋತ್ತಮೆ ಸ್ವಾಗತಿಸಿ, ಉಪನ್ಯಾಸಕ ಕಣ್ಣಯ್ಯ ನಿರೂಪಿಸಿದರು, ಶಿಕ್ಷಕ ಬಸವರಾಜು ವಂದಿಸಿದರು.

Sunday, August 29, 2010

Friday, August 27, 2010

ಬಂದ್ರೇಹಳ್ಳಿಯಲ್ಲಿ ಚಿಗುರು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಆ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 8ರಿಂದ 14 ವರ್ಷದ ಶಾಲಾ ಮಕ್ಕಳಿಗೆ ಚಿಗುರು ಕಾರ್ಯಕ್ರಮ ಇದೇ 28(ಇಂದು)ಶನಿವಾರ ಬೆಳಿಗ್ಗೆ 11-30ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ತಾಲೂಕಿನ ಬಂದ್ರೇಹಳ್ಳಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ವಿಮಲಮ್ಮವೀರಭದ್ರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯೆ ಜಾನಕಮ್ಮ ರಾಮಚಂದ್ರಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಡಿ.ಇಡಿ.ಕಾಲೇಜ್ನ ಪ್ರಾಂಶುಪಾಲ ರಾಜ್ಕುಮಾರ್, ಮಲ್ಲಿಗೆರೆ ಗ್ರಾ.ಪಂ.ಉಪಾಧ್ಯಕ್ಷ ಚಂದ್ರನಾಯ್ಕ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ಗ್ರಾ.ಪಂ.ಸದಸ್ಯ ರಾಜಶೇಖರ, ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಮಲ್ಲಿಕಾಜರ್ುನಯ್ಯ ಉಪಸ್ಥಿತರಿದ್ದು ಶಿಕ್ಷಕ ಎ.ಸೋಮಶೇಖರಯ್ಯ ಕಾರ್ಯಕ್ರಮ ಭಾಗವಹಿಸಲಿದ್ದಾರೆ.
ಸಾಧಕನ ದೇಹಕ್ಕಷ್ಟೇ ಸಾವು, ಸಾಧನೆಗಲ್ಲ: ಗೀತಾಚಾರ್ಯ
ಚಿಕ್ಕನಾಯಕನಹಳ್ಳಿ,ಆ.27: ವಿಶ್ವದಲ್ಲಿ ಆಗಿಹೋಗಿರುವ ಮಹಾತ್ಮರೆಲ್ಲಾ ತಮ್ಮ ಸಾಧನೆಯಿಂದ ಮೇಲೆ ಬಂದವರು ಹಾಗೂ ಅವರು ಮಾಡಿರುವ ಕೆಲಸಗಳಿಂದ ಇಂದಿಗೂ ಅವರು ನಮ್ಮ ನಡುವೆ ಇದ್ದಾರೆ ಇಂತಹ ಮಹಾತ್ಮರ ಆದರ್ಶಗಳು ಇಂದಿನ ಯುವಕರಿಗೆ ದಾರಿದೀಪವಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಚಂದ್ರಮೋಹನ್ ಅಭಿಪ್ರಾಯಪಟ್ಟರು.
ಪಟ್ಟಣದ ನವೊದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನ ವತಿಯಿಂದ ನಡೆದ ಎಂ.ವೀ.ಸಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂ.ವೀ.ಸಿ, ಪು.ತೀ.ನ ರವರನ್ನು ನಾವು ನೋಡುತ್ತ ಬೆಳೆದವರು ಅಂತವರ ಆದರ್ಶವನ್ನು ನಾವು ಪಾಲಿಸುತ್ತಿದ್ದೇವೆ, ಅವರ ಆದರ್ಶವನ್ನು ನಿಮ್ಮೆಲ್ಲರಿಗೂ ತಿಳಿಸಲು ಪ್ರಯತ್ನಿಸುತ್ತೇದ್ದೇವೆ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಅವರು ಸಾಕಷ್ಟು ಕೆಲಸಮಾಡಿದ್ದಾರೆ ಎಂದರಲ್ಲದೆ, ಭಾಷೆಯ ಭಾಗವಾಗಿ ಸಾಹಿತ್ಯವೂ ಇರುತ್ತದೆ, ಸಾಹಿತ್ಯ ಗ್ರಂಥಗಳನ್ನು ವೃದ್ದಿಸುವ ಮೂಲಕ ಭಾಷೆಯ ಬೆಳವಣಿಗೆಯನ್ನು ವಿಸ್ತರಿಸಬೇಕು ಎಂದರು.
ಲೇಖಕ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ಕಾರ್ಯದಶರ್ಿ ಎಸ್.ವಿ.ಶ್ರೀನಿವಾಸರಾವ್ ಮಾತನಾಡಿ ಎಂ.ವಿ.ಸೀರವರ ಬರವಣಿಗೆಯನ್ನು ಆಧಾರವಾಗಿಟ್ಟುಕೊಂಡು ಲಕ್ಷಾಂತರ ಜನ ಲೇಖನ ಬರೆಯುವುದಕ್ಕೆ ಸ್ಪೂತರ್ಿಗೊಂಡಿದ್ದಾರೆ ಮತ್ತು ಯಾವುದೇ ವಿಷಯವನ್ನು ಪ್ರೀತಿಯಿಂದ ಸಲಹಿ ಪ್ರೋತ್ಸಾಹಿಸಿದರೆ ಅದು ಕಾಣದ ದಾರಿ ತೋರಿಸುತ್ತದೆ ಎಂದರು. ಸಾಹಿತ್ಯವನ್ನು ಬೆಳಸಬೇಕಾದರೆ ಅದರ ಹಿಂದಿನ ಮರ್ಮವನ್ನು ಹುಡುಕಿ ತೆಗೆದು ಸಾಹಿತ್ಯವನ್ನು ಕಾಣಬೇಕು ಎಂದ ಅವರು ಎಂ.ವಿ.ಸೀ ರವರ ಮಕ್ಕಳ ಸಾಹಿತ್ಯದ ಬಗ್ಗೆ ಪುಸ್ತಕ ರಚಿಸುತ್ತಿದ್ದೇವೆ ಎಂದರು.
ಡಾ.ನಾ.ಗೀತಾಚಾರ್ಯ ಮಾತನಾಡಿ ಎಂ.ವಿ.ಸೀತರಾಮಯ್ಯನವರು ಹಸ್ತಪ್ರತಿ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡಿದವರು, ಅವರು ಸಂಗ್ರಹಿಸಿ ಸಂಸ್ಕರಿಸುವ ಮೂಲಕ ವಿನಾಶದಲ್ಲಿದ್ದ ಪ್ರಕಾರದ ಬಗ್ಗೆ ಹೆಚ್ಚು ಗಮನ ನೀಡಿ ಆ ಬಗ್ಗೆ ಸಂಶೋಧನೆ ನಡೆಸಿದ ಕೆಲವೇ ಸಂಶೋಧಕರಲ್ಲಿ ಎಂ.ವಿ.ಸೀ.ಅವರು ಒಬ್ಬರು, ಇವರು ಮೈಸೂರಿನವರಾದರೂ ಅವರ ಪೂವರ್ಿಕರ ಸ್ಥಳ ಚಿಕ್ಕನಾಯಕನಹಳ್ಳಿ. ಇದೇ ಕಾರಣಕ್ಕೆ ಅವರ ಜನ್ಮ ಶತಮಾನೋತ್ಸವದ ಕೊನೆಯ ಕಾರ್ಯಕ್ರಮವನ್ನು ಈ ಊರಿನಲ್ಲಿ ಹಮ್ಮಿಕೊಂಡಿದ್ದು, ಸೆ.9ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಕುವೆಂಪು, ಎಂ.ವೀ.ಸಿ ರಂತಹ ಕನ್ನಡ ಸಾಹಿತ್ಯ ಲೋಕದ ರತ್ನತ್ರಯರನ್ನು ಎಂದಿಗೂ ಮರೆಯಬಾರದು ಮತ್ತು ಇಂತಹ ಮಹನ್ ವ್ಯಕ್ತಿಗಳ ಆದರ್ಶವನ್ನು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂಬ ಆಶಯದಿಂದ ನಮ್ಮ ಕಾಲೇಜನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.



Wednesday, August 25, 2010


ಕ.ಸಾ.ಪ.ವತಿಯಿಂದ ನವೋದಯ ಕಾಲೇಜ್ನಲ್ಲಿ ಎಂ.ವಿ.ಸೀ.ಜನ್ಮಶತಮಾನೋತ್ಸವ
ಚಿಕ್ಕನಾಯಕನಹಳ್ಳಿ,ಆ.25: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿ.ಎಂ.ಶ್ರೀ ಪ್ರತಿಷ್ಟಾನ ಸಹಯೋಗ ವತಿಯಿಂದ ಎಂ.ವಿ.ಸೀ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಇದೇ 27ರ ಶುಕ್ರವಾರ ಏರ್ಪಡಿಸಲಾಗಿದೆ ಎಂದು ತಾ.ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜರಾವ್ ತಿಳಿಸಿದ್ದಾರೆ.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಎಸ್.ವಿ ಶ್ರೀನಿವಾಸರಾವ್ , ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕನ್ನಡದ ಪ್ರಗತಿಪರ ಚಿಂತಕ ರಾ.ನಂ.ಚಂದ್ರಶೇಖರ್, ಬಿ.ಎಂ.ಶ್ರೀ ಪ್ರತಿಷ್ಠಾನ ಖಜಾಂಚಿ ಎಸ್.ಟಿ.ರಾಧಕೃಷ್ಣ ಎಂ.ವಿ.ಸೀ. ಬದುಕು ಬರಹ ಕುರಿತು ಮಾತನಾಡಲಿದ್ದಾರೆ ಎಂದು ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿ,ಆ.25: ಮಕ್ಕಳಲ್ಲಿ ಸಹಕಾರ, ಸದೃಡಮನಸ್ಸು, ಸೃಜನಾಶೀಲತೆ ಸದೃಡದೇಹ ಉತ್ತಮ ತೀಮರ್ಾನದ ಮನೋಭಾವ ಬೆಳೆಸುವಲ್ಲಿ ಕ್ರೀಡೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ತಾಲೂಕಿನ ಹಂದನಕೆರೆ ಹೋಬಳಿ ಪ್ರಾಥಮಿಕ ಪಾಠಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಥರ್ಿಗಳನ್ನು ಕುರಿತು ಪ್ರತಿಜ್ಞಾವಿಧಿ ಬೋದಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಶಿಕ್ಷಕರು ಆತ್ಮಸ್ಥೈರ್ಯ ತುಂಬಿ ಕ್ರೀಡೆಗೆ ಪ್ರೋತ್ಸಾಹಿಸಿದರೆ ಅವರ ಪ್ರತಿಭೆ ಹೊರಗೆ ಬಂದು ಉತ್ತಮ ಕ್ರೀಡಾಪಟುವಾಗಿ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಾರೆ ಎಂದರು.
ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಬಸವರಾಜು, ಉಷಾ ಕೃಷ್ಣಮೂತರ್ಿ, ಮಹೇಶ್, ಸದಸ್ಯರಾದ ಉದಯ್ಕುಮಾರ್, ಶಿವಕುಮಾರ್, ಮುಖ್ಯ ಶಿಕ್ಷಕ ಮಹಾಲಿಂಗಯ್ಯ, ನೇಮಿಚಂದ್ರ, ಎಚ್.ಬಸವರಾಜು, ನರಸಿಂಹಮೂತರ್ಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಿ.ಎಮ್.ದೇವರಾಜಯ್ಯ ಸ್ವಾಗತಿಸಿದರೆ, ಬಿ.ಎಸ್.ಶಿವಕುಮಾರ್ ನಿರೂಪಿಸಿ, ಕೆ.ಬಿ.ಶಿವಣ್ಣ ವಂದಿಸಿದರು.

ಸಂಘದ ಬೆಳವಣಿಗೆಗೆ ಸಹಕಾರ ಮುಖ್ಯವೇ ಹೊರತು ಪ್ರತಿಷ್ಠೆಯಲ್ಲ
ಚಿಕ್ಕನಾಯಕನಹಳ್ಳಿ,ಆ.25: ಸಣ್ಣ ಪುಟ್ಟ ವಿಚಾರಗಳಿಗೆ ಕಚ್ಚಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಕನಕ ಯುವ ಕ್ಷೇಮಾಭಿವೃದ್ದಿ ಸಂಘವನ್ನು ಸಂಘಟಿಸಿಕೊಂಡು ಮತ್ತು ಅಭಿವೃದ್ದಿಪಡಿಸಿಕೊಂಡು ಹೋಗಬೇಕೆಂದು ಮಸಾಲ್ತಿಗುಡ್ಲು ಗ್ರಾಮದ ಹಿರಿಯರಾದ ಲಕ್ಷ್ಮಜ್ಜಿ ಹೇಳಿದರು.
ಪಟ್ಟಣದ ಮಸಾಲ್ತಿಗುಡ್ಲು ಗ್ರಾಮದಲ್ಲಿ ನಡೆದ ಕನಕ ಯುವ ಕ್ಷೇಮಾಭಿವೃದ್ದಿ ನೂತನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಘದಲ್ಲಿ ನನ್ನಿಂದಲೇ ಎಲ್ಲಾ ಎಂಬ ಮನೋಭಾವವನ್ನು ಬಿಟ್ಟು ನಮ್ಮಿಂದ ಎಂಬ ಮನಭಾವವನ್ನು ಬೆಳಸಿಕೊಳ್ಳಬೇಕೆಂದರು.
ಹಿರಿಯರಾದ ಯೋಗಲಿಂಗಯ್ಯ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಒಗ್ಗೂಡಿದರೆ ಸಂಘ ಅಭಿವೃದ್ದಿಯಾಗುತ್ತದೆ ಮತ್ತು ನಮ್ಮ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಗ್ರಾಮವನ್ನು ಅಭಿವೃದ್ದಿಗೊಳಿಸಿ ಬಡವಿದ್ಯಾಥರ್ಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಮಾಡಬೇಕು ಎಂದರು.
ಸಮಾರಂಭದಲ್ಲಿ 75ವರ್ಷಕ್ಕೂ ಮೇಲ್ಪಟ್ಟ ನಾಗರೀಕರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬೆಟ್ಟಯ್ಯ, ಶಿವಪ್ಪ, ಲಕ್ಷ್ಮಯ್ಯ, ಯೋಗಲಿಂಗಸ್ವಾಮಿ, ಹನುಮಂತಪ್ಪ, ತೇರಪ್ಪ ಕರಿಯಪ್ಪ, ನಿಂಗಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಶಿಧರಮೂತರ್ಿ ಪ್ರಾಥರ್ಿಸಿದರೆ, ಮೋಹನ್ಕುಮಾರ್ ಸ್ವಾಗತಿಸಿ, ಸಿ.ಬಿ.ಲೋಕೇಶ್ ನಿರೂಪಿಸಿ, ರಂಗನಾಥ್ ವಂದಿಸಿದರು.
ಕಳ್ಳತನದ ಆರೋಪಿಗೆ ಶಿಕ್ಷೆ
ಚಿಕ್ಕನಾಯಕನಹಳ್ಳಿ,ಆ.25: ಕಳ್ಳತನದ ಆರೋಪಿತರು ಎಸಗಿರುವ ಅಪರಾಧವು ಸಾಬೀತಾಗಿದ್ದು ನ್ಯಾಯಾಧೀಶಾರದ ಶೀಲಾ ಆರೋಪಿಗೆ ಒಂದು ತಿಂಗಳು ಸಾಧಾರಣ ಕಾರಾಗೃಹ ವಾಸ ಹಾಗೂ 1000ರೂ. ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ 7ದಿನ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ತೀಪರ್ು ನೀಡಿದ್ದಾರೆ.
2006ರ ಏಪ್ರಿಲ್ 16ರಂದು ವಿದ್ಯಾನಗರದ 2ನೇ ಕ್ರಾಸ್ನಲ್ಲಿರುವ ಸಣ್ಣನಿಂಗಯ್ಯರ ಮನೆಗೆ ಹಾಕಿದ್ದ ಬೀಗವನ್ನು ಆರೋಪಿಗಳಾದ ಕುಮಾರ ಮತ್ತು ವರದರಾಜು ಎಂಬುವರು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯರಲ್ಲಿನ ಸುಮಾರು 20ಸಾವಿರ ಬೆಲೆಯ ಚಿನ್ನದ ವಡವೆಗಳು ಹಾಗೂ ಕ್ಯಾಮರ ಕಳವು ಮಾಡಿಕೊಂಡು ಹೋಗಿದ್ದರೆಂದು ಎಂಬ ಆರೋಪ ಸಾಬೀತಾಗಿರುತ್ತದೆ. ಸಕರ್ಾರದ ಪರವಾಗಿ ಆರ್.ಟಿ.ಆಶಾ ವಾದ ಮಂಡಿಸಿದ್ದರು.


Tuesday, August 24, 2010

ಅರಸು; ಪ್ರಧಾನಿ ಹುದ್ದೆಯನ್ನು ನಿಭಾಯಿಸುವಂತಹ ವ್ಯಕ್ತಿತ್ವಹೊಂದಿದ್ದವರು: ಮುದ್ದು
ಚಿಕ್ಕನಾಯಕನಹಳ್ಳಿ,ಆ.24: ದೇಶದ ಪ್ರಧಾನಿ ಹುದ್ದೆಯನ್ನು ನಿಭಾಯಿಸುವ ಎದೆಗಾರಿಕೆ, ಸಮರ್ಥ ನಾಯಕತ್ವ ಹಾಗೂ ವಿಚಿಕ್ಷ್ಣದೂರ ದೃಷ್ಟಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ರವರಿಗಿತ್ತು ಎಂದು ಬಿ.ಸಿ.ಎಂ ಇಲಾಖೆಯ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಉಡೇವು ಬೀದಿಯಲ್ಲಿ ದೇವರಾಜ್ ಅರಸ್ರವರ 95ನೇ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಹಾಗೂ ಹಿಂದುಳಿದ ವರ್ಗಗಳಲ್ಲಿನ ಪ್ರತಿಭೆಗಳನ್ನು ಹುಡುಕಿ ತೆಗೆದು ಅವರನ್ನೆಲ್ಲಾ ಮುಖ್ಯವಾಹಿನಿಗೆ ತರುವ ಕೆಲಸವನ್ನು ಅವರು ಆ ಸಮಯದಲ್ಲಿ ಮಾಡದೇ ಹೊಗಿದ್ದರೆ ಇಂದಿಗೂ ಹಿಂದುಳಿದ ವರ್ಗಗಳು ಸಮಾಜದಲ್ಲಿನ ನಿರ್ಲಕ್ಷತೆಯ ಜನರಾಗಿ ಉಳಿಯಬೇಕಾಗಿತ್ತು ಎಂದರು.
ಬಡವರ ಪರವಾಗಿ ಅವರು ತೆಗೆದುಕೊಂಡ ಎರಡು ದಿಟ್ಟವಾದ ನಿಧರ್ಾರಗಳೆಂದರೆ ಒಂದು 'ಉಳುವವನೇ ಭೂಮಿಯ ಒಡೆಯ' ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದದ್ದು, ಮತ್ತೊಂದು ಹಾವನೂರು ವರದಿಗೆ ಆದ್ಯತೆ ನೀಡಿದ್ದು ಎಂದರಲ್ಲದೆ ನೀರಾವರಿಯ ಬಗ್ಗೆಯೂ ಅವರು ನಿಷ್ಣಾತರಾಗಿದ್ದರಿಂದಲೇ ಘಟಪ್ರಭಾ ಯೋಜನೆ ಸಾಕಾರಗೊಳ್ಳಲು ಕಾರಣವಾಯಿತು ಎಂದರು.
ರಾಜಕೀಯವಾಗಿ ಅವರು ಬೆಳೆಸಿದ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು ಅರಸು ರವರ ಹೆಸರನ್ನು ಚಿರಸ್ಥಾಯಿಗೊಳಿಸಿವೆ ಎಂದರಲ್ಲದೆ, ರಾಜಕೀಯವಾಗಿ ಅವರು ಹುಟ್ಟುಹಾಕಿದ ಬೀಜಗಳು ಇಂದು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರಸು ಸಂಘದ ಅಧ್ಯಕ್ಷ ಶ್ರೀನಿವಾಸರಾಜ ಅರಸ್ ಮಾತನಾಡಿ ದೇವರಾಜ್ ಅರಸ್ರವರು ಹಿಂದುಳಿದ ವರ್ಗಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂಬ ವಿಶಾಲ ದೃಷ್ಟಿಯನ್ನು ಮೈಗೂಡಿಸಿಕೊಂಡಿದ್ದಾರೆ ವಿನಹ, ತನ್ನ ಜಾತಿಯೊಂದೇ ಮೇಲೇರಬೇಕೆಂಬ ಸಂಕುಚಿತ ಮನಸ್ಸಿನವರಾಗಿರಲಿಲ್ಲ ಎಂದರು.
ನಿಷ್ಠಾರವಾದಿಯಾದ ಅರಸುರವರು ತಮ್ಮ ಸ್ವಾರ್ಥಕ್ಕಾಗಿ ಎಂದೂ ತಮ್ಮ ತತ್ವ ಆದರ್ಶಗಳನ್ನು ಬಲಿಕೊಟ್ಟವರಲ್ಲ ಎಂದರಲ್ಲದೆ ಕೆಳಸ್ತರದವರನ್ನು ಮೆಲಕ್ಕೆತ್ತುವ ಸಂದರ್ಭಗಳಲೆಲ್ಲಾ ಎಂತಹ ಅಡ್ಡಿ ಆತಂಕಗಳಿಗೂ ಸೊಪ್ಪು ಆಕದೆ ಮುಂದುವರೆದವರೆದಿಂದ್ದಾಗಿ ಉಂಟಾದ ಶತ್ರುಗಳಿಗೂ ಕೇರ್ ಮಾಡಿದವರಲ್ಲ ಎಂದರು.
ಪುರಸಭೆಯ ವಿರೋಧ ಪಕ್ಷದ ನಾಯಕ ಸಿ.ಡಿ.ಚಂದ್ರಶೇಖರ್ ಮಾತನಾಡಿ ದೇವರಾಜ್ ಅರಸುರವರು ತಮ್ಮ ತಾಯಿಯ ತೌರೂರಾದ ಮಧುಗಿರಿಯಲ್ಲಿ ಜನ್ಮ ಪಡೆಯುವ ಮೂಲಕ ಜಿಲ್ಲೆಯ ಬಾಂಧವ್ಯನ್ನು ಗಟ್ಟಿಗೊಳಿಸಿ ಕೊಂಡರಲ್ಲದೆ, ನಮ್ಮ ಕ್ಷೇತ್ರದ ಆಗಿನ ಎಂ.ಎಲ್.ಎ ಬಸವಯ್ಯನವರಿಗೆ ಮಂತ್ರಿ ಸ್ಥಾನವನ್ನು ಕಲ್ಪಿಸಿಕೊಡುವ ಮೂಲಕ ರಾಜ್ಯಮಟ್ಟದಲ್ಲಿ ನಮ್ಮೂರಿಗೆ ಸ್ಥಾನಮಾನ ಕಲ್ಪಿಸಿಕೊಟ್ಟರು ಎಂದರಲ್ಲದೆ ಅದನ್ನು ಉಳಿಸಿಕೊಳ್ಳುವಲ್ಲಿ ನಾವು ಸೋತೆವು ಎಂದರು.
ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಅರಸುರವರೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು.
ಪುರಸಭಾಧ್ಯಕ್ಷ ರಾಜಣ್ಣ ಮಾತನಾಡಿ ಅರಸು ಸಂಘದವರು ಮೈಸೂರು ರಾಜರೊಬ್ಬರ ಸಮಾಧಿ ಸಂರಕ್ಷಣೆಗೆ ಮಾಡಿರುವ ಮನವಿಗೆ ಸಕಾರಾತ್ಮವಾಗಿ ಸ್ಪಂದಿಸಲಾಗುವುದು ಎಂದರು.
ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಸಿ.ಬಸವರಾಜು, ಅರಸು ಸಂಘದ ಅಧ್ಯಕ್ಷ ನಾಗರಾಜ್ ಅರಸ್ ಸೇರಿದಂತೆ ಹಲವರು ಮಾತನಾಡಿದರು.
ಸಮಾರಂಭದಲ್ಲಿ ಗೋಪಾಲರಾಜ್ ಅರಸ್ ಸ್ವಾಗತಿಸಿದರೆ, ಸ್ವಾಮಿ ರಾಜ್ ಅರಸ್ ನಿರೂಪಿಸಿದರು ಶ್ರೀನಿವಾಸ ರಾಜ್ ಅರಸ್ ಸಂಘದ ಮನವಿಯನ್ನು ವಾಚಿಸಿದರು, ಜಯರಾಮರಾಜ ಅರಸ್ ವಂದಿಸಿದರು.
ಆ.26ರಂದು ಕಾನೂನು ಅರಿವು-ನೆರವು ಕಾರ್ಯಕ್ರ
ಚಿಕ್ಕನಾಯಕನಹಳ್ಳಿ,ಆ.24: ತಾಲೂಕು ವಕೀಲರ ಸಂಘ, ಕಂದಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಇದೇ 26ರ ಗುರುವಾರ ಮಧ್ಯಾಹ್ನ 2ಗಂಟೆಗೆ ಏರ್ಪಡಿಸಲಾಗಿದೆ.
ಪಟ್ಟಣದ ತಾಲೂಕು ಆಫೀಸ್ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ, ವಕೀಲರ ಸಂಘದ ಅಧ್ಯಕ್ಷ ಎಸ್.ಗೋಪಾಲಕೃಷ್ಣ, ಉಪಾಧ್ಯಕ್ಷ ಎಂ.ಎಸ್.ಶಂಕರ್, ಸಿ.ಡಿ.ಪಿ.ಓ ಅನೀಸ್ಖೈಸರ್, ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ಟಿ.ಆಶಾ, ಸಿ.ರಾಜಶೇಖರ್, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ರೆವಿನ್ಯೂ ದಾಖಲಾತಿಗಳು ಹಾಗೂ ರಿಜಿಸ್ಟ್ರೇಷನ್ ಮತ್ತು ಕಾನೂನು ಎಂಬ ವಿಷಯವಾಗಿ ಹೆಚ್.ಎಸ್.ಚಂದ್ರಶೇಖರ್, ಮಹಿಳಾ ಹಾಗೂ ಮಕ್ಕಳ ರಕ್ಷಣೆ ಮತ್ತು ಕಾನೂನು ಎಂಬ ವಿಷಯವಾಗಿ ವೈ.ಜಿ.ಲೋಕೇಶ್ ಮಂಡಿಸಲಿದ್ದಾರೆ.


ಇಂದು ತಾಲೂಕು ಮಟ್ಟದ ಕ್ರೀಡಾ ಕೂಟ
ಚಿಕ್ಕನಾಯಕನಹಳ್ಳಿ,ಆ.24: ಹಿರಿಯ ಪ್ರಾಥಮಿಕ ಪಾಠಶಾಲೆಗಳ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಇದೇ 25ರ ಬುಧವಾರ ಬೆಳಗ್ಗೆ 9-30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಎಸ್.ರಾಜಣ್ಣ ಧ್ವಜಾರೋಹಣ ನೆರವೇರಿಸುವರು.
ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಜ್ಯೋತಿ ಸ್ವೀಕಾರ ಮಾಡುಲಿದ್ದು, ತಾ.ಪಂ. ಇ.ಓ.ವೇದಮೂತರ್ಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಜಯಮ್ಮದಾನಪ್ಪ, ಜಿ.ರಘುನಾಥ್, ಹೊನ್ನಪ್ಪ, ಈರಣ್ಣ, ಸುಶೀಲಾ ಸುರೇಂದ್ರಯ್ಯ, ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಮು.ಶಿ.ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸುರೇಶ್ ಉಪಸ್ಥಿತರಿರುವರು.

Monday, August 23, 2010

Saturday, August 21, 2010