Saturday, March 30, 2013

ಪುಂಡಾನೆಗಳ ದಾಳಿ ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಟ
ಚಿಕ್ಕನಾಯಕನಹಳ್ಳಿ,ಮಾ.30 : ಕಳೆದ ವಾರ ತಾಲ್ಲೂಕಿನ ಸುತ್ತಮುತ್ತಲಿನ ಬಾಳೆ ತೋಟಗಳಲ್ಲಿ ದಾಳಿ ನಡೆಸಿದ್ದ ಪುಂಡಾನೆಗಳು ಶನಿವಾರ ಹೊಸೂರಿನ ಶ್ರೀನಿವಾಸ್(34) ಎಂಬ ರೈತನ ಮೇಲೆ ದಾಳಿ ನಡೆಸಿದ ಪರಿಣಾಮ ಶ್ರೀನಿವಾಸ್ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
    ಪುಂಡಾನೆಗಳು ತಾಲ್ಲೂಕಿನ ಹಂದನಕೆರೆ ಹೋಬಳಿಯ ಹೊಸೂರು ಗ್ರಾಮದ ತೋಟದಲ್ಲಿ ದಾಳಿ ಇಟ್ಟಾಗ ಈ ಘಟನೆ ಸಂಭವಿಸಿದ್ದು ಗುಡ್ಡದ ಸಾಲಿನ ಆಶ್ರೀಹಾಳ್, ಜಾಣೆಹಾರ್, ಅಜ್ಜಿಗುಡ್ಡೆ, ಹೊಸಹಳ್ಳಿಯ ತೋಟಗಳಿಗೆ ನುಗ್ಗಿದ ಸಲಗಗಳು, ತೋಟವನ್ನು ಧ್ವಂಸಗೊಳಿಸಿ ನಂತರ ಬ್ಯಾಲಕೆರೆ, ಸಾಲನಕೆರೆ, ನವಿಲೆ, ತಮ್ಮಡಿಹಳ್ಳಿ ಮುಖಾಂತರ ಶುಕ್ರವಾರ ರಾತ್ರಿ ಸಂಚರಿಸಿದ ಮೂರು ಪುಂಡಾನೆಗಳು ಬೆಳಗಿನ ವೇಳೆಗೆ ಮತಿಘಟ್ಟ, ಗಾಂಧಿನಗರ, ಬರಣಾಪುರ ಮಾರ್ಗವಾಗಿ ಸಂಚರಿಸಿ ಬೆಳಗ್ಗೆ 10ಘಂಟೆ ಸುಮಾರಿಗೆ ರಂಗಾಪುರಗೊಲ್ಲರಹಟ್ಟಿ ಬಳಿಯ ಹಿರೇದೇವರ ತೋಪಿನಲ್ಲಿ ತಂಗಿದ್ದವು. ಈ ಸಂದರ್ಭದಲ್ಲಿ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹೊಸೂರಿನ ಶ್ರೀನಿವಾಸ್ ಮೇಲೆ ದಾಳಿ ಮಾಡಿದ ಆನೆಗಳು ಮಾರಣಾಂತಿಕವಾಗಿ ಗಾಯಗೊಳಿಸಿಸಿದ್ದವು. ಶ್ರೀನಿವಾಸ್ನಿಗೆ ತಿಪಟೂರು ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯಿಂದ ಗಾಯಗೊಂಡ ಶ್ರೀನಿವಾಸನ ಕುಟುಂಬಕ್ಕೆ 5ಲಕ್ಷರೂಪಾಯಿ ಪರಿಹಾರ ನೀಡುವಂತೆ ಸಕರ್ಾರವನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
    ಕಾಡಾನೆಗಳು ಕಳೆದ ಒಂದು ವಾರದಿಂದಲೂ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆಗಳ ಸುತ್ತಮುತ್ತಲೂ ನೀರನ್ನು ಹುಡುಕಿ ಅಲೆಯುತ್ತಿವೆ. ಮತ್ತು ಮಾರ್ಗ ಮಧ್ಯೆ ಸಿಗುವ ರೈತರ ಬಾಳೆ, ಅಡಕೆ, ತರಕಾರಿ ತೋಟಗಳನ್ನು ನಾಶ ಮಾಡುತ್ತಾ ಮುಂದುವರೆದಿವೆ. ಅಲ್ಲದೆ ಆನೆಗಳನ್ನು ಕಂಡ ಜನರು ಗಾಬರಿಗೊಂಡು ಆನೆಗಳನ್ನು ನಿರಂತರವಾಗಿ ಗಾಸಿಗೊಳಿಸುತ್ತಿದ್ದು ಸಲಗಗಳು ವ್ಯಾಘ್ರಗೊಳ್ಳಲು ಕಾರಣವಾಗಿದ್ದು ಕೋಪಗೊಂಡ ಆನೆಗಳು ದಾಳಿ ನಡೆಸುತ್ತಿವೆ ಎಂದು ಅರಣ್ಯಾಧಿಕಾರಿ ಮಾರುತಿ ತಿಳಿಸಿದರಲ್ಲದೆ ಜನರು ಆನೆಗಳನ್ನು ಗಾಬರಿಗೊಳಿಸದೆ ಸುರಕ್ಷಿತ ತಾಣಗಳಿಗೆ ಮರಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.  
    ಸದ್ಯ ಆನೆಗಳು ಹೊಸೂರ ಬಳಿಯ ಹಿರೆದೇವರ ತೋಪಿನಲ್ಲಿ ಬೀಡುಬಿಟ್ಟಿದ್ದು  ರಾತ್ರಿಯ ವೇಳೆಗೆ ಅಲ್ಲಿಂದ ಕದಲಬಹುದು ಎಂದು ಅರಣ್ಯಪಾಲಕರು, ವನರಕ್ಷಕರು ಮತ್ತು ಸಿಬ್ಬಂದಿವರ್ಗ ಅಲ್ಲಿಯೇ ಮೊಕ್ಕಾಂ ಹೂಡಿದೆ. ಸ್ಥಳಕ್ಕೆ ತುರುವೇಕೆರೆಯ ಆರ್.ಎಪ್ ರವಿ, ತಿಪಟೂರು ಎಎಸ್ಎಪ್ ನಾಗೇಂದ್ರರಾವ್, ಮತ್ತಿತರರು ಹಾಜರಿದ್ದರು.
  ಕಳೆದ ಶನಿವಾರ ಬೆಳ್ಳಂಬೆಳಗ್ಗೆ ಕಾಡೇನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೂರು ಸಲಗಗಳು ತಾಲ್ಲೂಕಿನ ಜನತೆಯಲ್ಲಿ ಭೀತಿ ಹುಟ್ಟಿಸಿದ್ದವು ಮತ್ತು ನಾನಾ ಭಾಗಗಳಲ್ಲಿ ಸಂಚರಿಸಿ ಲಕ್ಷಾಂತರ ರೂ ಮೌಲ್ಯದ ಬೆಳೆ ಧ್ವಂಸಗೊಳಿಸಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಮಾಡಿ ಕರಿ ಹಿಂಡನ್ನು ತುರುವೇಕೆರೆ ತಾಲ್ಲೂಕ್ಗೆ ಹಟ್ಟುವಲ್ಲಿ ಸಫಲವಾಗಿದ್ದರು ಅದೇ ಮೂರು ಸಲಗದ ಹಿಂಡು ಮತ್ತೆ ತಾಲ್ಲೂಕಿಗೆ ಮರಳಿ ದಾಳಿ ನಡೆಸಿವೆ.

 

Thursday, March 28, 2013

ಸಿ.ಬಿ.ಎಸ್, ಜೆ.ಸಿ.ಎಂ.ಇಬ್ಬರಲ್ಲೇ ಅಧಿಕಾರ ಹಂಚಿಕೆ: ಇತಿಹಾಸ  ಮರುಕಳಿಸುವುದೋ, ಬದಲಾಗುವುದೋ......!?
                                        (ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ : ಇತ್ತೀಚಿನ ಮೂವತ್ತುವರ್ಷಗಳ ರಾಜಕಾರಣದ ಇತಿಹಾಸದಲ್ಲಿ ನಡೆದಿರುವ ಎಂಟು ಚುನಾವಣೆಗಳ ಪೈಕಿ ಒಮ್ಮೆಗೆದ್ದವರು ಹಿಂದೆಯೇ ಪುನರ್ ಆಯ್ಕೆ ಬಯಸಿದರೆ ಆರಿಸಿ ಬಂದ ಉದಾಹರಣೆ ಇಲ್ಲ. ಆದರೆ ಈ ಭಾರಿ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಈ ಸಲದ ಚುನಾವಣೆ ಇಲ್ಲಿನ ಮತದಾರರ ಪಾಲಿಗಿ ದೊಡ್ಡ ಕುತೂಹಲವನ್ನೇ ಹುಟ್ಟು ಹಾಕಿದೆ.
     ಕಳೆದ ಮೂವತ್ತು ವರ್ಷಗಳ ಚುನಾವಣೆಯಲ್ಲಿ ಎರಡು ಜಾತಿಗಳು ಮಾತ್ರ ಇಡೀ ವಿಧಾನ ಸಭೆಯ ಅಧಿಕಾರವನ್ನು ಉಂಡಿವೆ ಹೊರತು ಬೇರೆ ಜಾತಿಗಳಿಗೆ ಅದರ ರುಚಿಯನ್ನೂ ತೋರಿಸಲ್ಲ. ಉಳಿದವರು ಕೇವಲ ಸಣ್ಣ ಪುಟ್ಟ ಚುನಾವಣೆಗೆ ತೃಪ್ತಿ ಪಟ್ಟಕೊಳ್ಳಬೇಕಾಗಿದೆ. ಇದು ಈ ಕ್ಷೇತ್ರದ ಅನಿವಾರ್ಯತೆಯೋ ಅಥವಾ ಅಂತಹ ಪ್ರಬಲವಾದ ನಾಯಕರು ಇನ್ನೂ ಹುಟ್ಟಿಲ್ಲವೊ...! ಹುಟ್ಟಲು ಬಿಟ್ಟಿಲ್ಲವೋ....?.     ಲಿಂಗಾಯಿತರು ಮತ್ತು ಕುರುಬರು ಅದರಲ್ಲೂ ಕಳೆದ ಎರಡು ದಶಕಗಳಿಂದ ಇಬ್ಬರು ವ್ಯಕ್ತಿಗಳು ಮಾತ್ರ ಎಂ.ಎಲ್.ಎ.ಗಳಾಗಿದ್ದಾರೆ, ಬೇರೆಯವರು ಇದರ ಕನಸೂಕಾಣದಂತೆ ಮಾಡಿಬಿಟ್ಟದೆ. ಈ ಕ್ಷೇತ್ರದ ರಾಜಕಾರಣವನ್ನು ಕಂಡವರಿಗೆ ಗೊತ್ತಿರುವ ವಿಷಯ, ಸಿ.ಬಿ.ಸುರೇಶ್ ಬಾಬು, ಇಲ್ಲಾ ಜೆ.ಸಿ.ಮಾಧುಸ್ವಾಮಿ. ಇವರಿಬ್ಬರೇ ಅಧಿಕಾರ ಮಾಡಿಕೊಂಡು ಬಂದಿದ್ದಾರೆ. ಮೂರನೇಯವರಿಗೆ ಅವಕಾಶವೇ ಸಿಕ್ಕಿಲ್ಲ. ಆದರೆ ಈ ಬಾರಿ ಆ ರೀತಿಯ ವಾತಾವರಣವಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ಹೆಚ್ಚು ಬಿರುಸಾಗಿ ಓಡಾಡುತ್ತಿದ್ದಾರೆ. ಆಗಾಗಿ ಮೂರ ಜನ ಪ್ರಬಲ ನಾಯಕರು ಹೀಗಾಗಲೇ ಕಣದಲ್ಲಿದ್ದಾರೆ. ಕಾಂಗ್ರೆಸ್ ತಮ್ಮ ಪಕ್ಷದ ಅಭ್ಯಾಥರ್ಿ ಯಾರೆಂಬುದನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡದೇ ಇರುವುದರಿಂದ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿ ಕಾಂಗ್ರೆಸ್  ಅಧಿಕಾರ ಹಿಡಿಯುವಲ್ಲಿ ವಿಫಲವಾಗಿರುವುದರಿಂದ ಕಾಂಗ್ರೆಸ್ನ್ನು ಆ ಪಕ್ಷದ ರಾಜ್ಯ ನಾಯಕರುಗಳೇ ಈ ಕ್ಷೇತ್ರದ ಮಟ್ಟಿಗೆ  ಡಮ್ಮಿ ಮಾಡಿದ್ದಾರೆ, ಹಾಗಾಗಿ ಈ ಭಾರಿಯ ಚುನಾವಣಾ ಫಲಿತಾಂಶವನ್ನು ಒಂದು ರೇಂಜಿಗೆ ನಾಮಪತ್ರ ಹಿಂತೆಗೆದುಕೊಳ್ಳುವ ದಿನದಂದೇ ಹೇಳುಬಹುದು ಎಂಬ ಮಾತುಗಳು ಬರುತ್ತಿದ್ದರೂ ಅದು ಅಷ್ಟು ಸಲುಭವಿಲ್ಲವೆಂಬುದನ್ನು ಕ್ಷೇತ್ರದ ಒಳಗೆ ಸುತ್ತಾಡಿದವರೆಗೆ ಮಾತ್ರ ತಿಳಿದ ವಿಷಯ.
     ಚಿಕ್ಕನಾಯಕನಹಳ್ಳಿ ವಿಧಾನಾ ಸಭಾ ಕ್ಷೇತ್ರದ ರಾಜಕೀಯ ವಿಶ್ಲೇಷಕರು ನೀಡುವ ಅಂಕಿ ಅಂಶವನ್ನು ಮತ್ತು ಅದರ ಹಿಮ್ಮಾಹಿತಿಯನ್ನು ಪಡೆದು ನೋಡಿದರೆ ಈ ಬಾರಿಯ ಚುನಾವಣೆ ಯಾವ ಸ್ವರೂಪವನ್ನು ಕಂಡುಕೊಳ್ಳಬಹದು ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬಹದು ಅದಕ್ಕಾಗಿ ಈ ಕೆಳಗಿನ ಮಾಹಿತಿ ನಿಮ್ಮ ಅರಿವಿಗಾಗಿ. 
    ಕಳೆದ ಮುವತ್ತು ವರ್ಷಗಳ ಚುನಾವಣೆಯಲ್ಲಿ ಜಯಗಳಿಸಿದವರೆಂದರೆ, 1983ಬಿ.ಜೆ.ಪಿ.ಯಿಂದ ಎಸ್.ಜಿ.ರಾಮಲಿಂಗಯ್ಯ, 1985ರಲ್ಲಿ ಕಾಂಗ್ರೆಸ್ನಿಂದ ಬಿ.ಲಕ್ಕಪ, 1989ರಲ್ಲಿ ಜತನಾದಳದ ಜೆ.ಸಿ.ಮಾಧುಸ್ವಾಮಿ, 1994ರಲ್ಲಿ ಕೆ.ಸಿ.ಪಿ.ಯ ಎನ್.ಬಸವಯ್ಯ, 1997ರ ಉಪಚುನಾವಣೆಯಲ್ಲಿ  ಜೆ.ಡಿ.ಯು.ನ ಜೆ.ಸಿ.ಮಾಧಸ್ವಾಮಿ, 1999ರಲ್ಲಿ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು, 2004ರಲ್ಲಿ ಜೆ.ಡಿ.ಯು.ನ ಜೆ.ಸಿ.ಮಾಧುಸ್ವಾಮಿ, 2008ರ ಚುನಾವಣೆಯಲ್ಲಿ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ ಬಾಬು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಅಂಶಗಳ ಮೇಲೆ ಜಾತಿವಾರು ಲೆಕ್ಕಾಚಾರಗಳ ಆಧಾರದ ಮೇಲೆ ನಡೆದಿರುವ ಈ ಚುನಾವಣೆಗಳನ್ನು ಒಮ್ಮೆ ವಿಶ್ಲೇಷಿಸಿದರೆ 2013 ಚುನಾವಣೆಯ ಮುನ್ನೋಟ ಸಿಗಬಹುದು. 
ಸೌಮ್ಯವಾದಿ ಎಸ್.ಜಿ.ರಾಮಲಿಂಗಯ್ಯನವರಿಗೆ ಜಯ:    1983ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಒಟ್ಟು 77514 ಮತದಾರರಿದ್ದು ಇದರಲ್ಲಿ 59016 ಮತ ಚಲಾವಣೆಗೊಂಡು ಶೇ.76.14ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಒಟ್ಟು 10ಜನ ಕಣದಲ್ಲಿದ್ದರು,  ಬಿ.ಜೆ.ಪಿ.ಯ ಎಸ್.ಜಿ.ರಾಮಲಿಂಗಯ್ಯ 29614 ಮತಗಳನ್ನು ಪಡೆದು 3371ಮತಗಳ ಅಂತರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಉಳಿದಂತೆ ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿದ್ದ ಎನ್.ಬಸವಯ್ಯನವರು 26243 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ಸ್ವತಂತ್ರ ಅಬ್ಯಾಥರ್ಿಗಳಾಗಿದ್ದ ಸಿ.ಎಸ್.ನಾರಾಯಣರಾವ್ 961 ಮತಗಳನ್ನು ಪಡೆದು ಮೂರನೇ ಸ್ಥಾನ ತೃಪ್ತಿ ಪಟ್ಟುಕೊಂಡರು, ಉಳಿದ ಏಳು ಜನ ಸ್ವತಂತ್ರ ಅಬ್ಯಾಥರ್ಿಗಳಾದ ಬಿ.ಶಂಕರಲಿಂಗಪ್ಪ, ಸಿ.ಎಸ್.ಲಕ್ಷ್ಮಮ್ಮ, ಜಿ.ಚಂದ್ರಶೇಖರ್, ಮಹಾಲಿಂಗಯ್ಯ, ಡಿ.ಜಿ.ದೇವಪ್ರಸಾದ್, ಹೆಚ್.ರಂಗಪ್ಪ, ಟಿ.ಸಿದ್ದಯ್ಯ ನವರುಗಳು  ಎರಡು ನೂರು ಮತಗಳನ್ನು ದಾಟಲಿಲ್ಲ. ಈ ಚುನಾವಣೆಯಲ್ಲಿ ಎನ್.ಬಸವಯ್ಯನವರಿಗೆ ಹಿನ್ನೆಡೆಯಾಗಲು ಕಾರಣ ಎನ್.ಬಿ.ಯವರ ಹೆಸರು ಹೇಳಿಕೊಂಡು ಅವರು ಬೆಂಬಲಿಗರು ನಡೆಸಿದ್ದ ಅವಾಂತರಗಳಿಂದ ಸೌಮ್ಯವಾಗಿದ್ದ ಎಸ್.ಜಿ.ರಾಮಲಿಂಗಯ್ಯನವರನ್ನು ಮತದಾರರು ಕೈಹಿಡಿದರು.
ಕಾಂಗ್ರೆಸ್ನಿಂದ ಬಿ.ಲಕ್ಕಪ್ಪ ಜಯ:    1985ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಎಂಟು ಜನ ಕಣದಲ್ಲಿದ್ದು ಒಟ್ಟು ಮತದಾರರ ಸಂಖ್ಯೆ 82877 ಇತ್ತು, ಇದರಲ್ಲಿ ಮತಚಲಾವಣೆಗೊಂಡಿದ್ದು 65714 ಮತಗಳು ಮಾತ್ರ ಶೇ.79.29ರಷ್ಟು ಮತದಾನ ನಡೆದಿತ್ತು, ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಬಿ.ಲಕ್ಕಪ್ಪ 20815 ಮತಗಳನ್ನು ಪಡೆದು 2518 ಮತಗಳ ಅಂತರದಿಂದ ಜಯಶೀಲರಾಗಿದ್ದರು, ಆಗ ಸ್ವತಂತ್ರ ಅಬ್ಯಾಥರ್ಿಯಾಗಿದ್ದ ಎನ್.ಬಸವಯ್ಯನವರು 18297 ಮತಗಳನ್ನು ಪಡೆದಿದ್ದರು, ಮೊದಲ ಬಾರಿಗೆ ಜನತಾಪಕ್ಷದಿಂದ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ 14513 ಮತಗಳನ್ನು ಪಡೆದರೆ ಬಿ.ಜೆ.ಪಿ.ಯಿಂದ ಸ್ಪಧರ್ಿಸಿದ್ದ ಎಸ್.ಜಿ.ರಾಮಲಿಂಗಯ್ಯ 9750 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದರು, ಉಳಿದಂತೆ ನಾಲ್ಕು ಜನ ಸ್ವತಂತ್ರ ಅಭ್ಯಾಥರ್ಿಗಳಾಗಿ ಸ್ಪಧರ್ಿಸಿದ್ದರು ಆ ಪೈಕಿ ಮುಕ್ಕಣ್ಣಪ್ಪ 761 ಮತಗಳನ್ನು ಪಡೆದರೆ ರಘುನಾಥ್ 520 ಮತಗಳನ್ನು ಪಡೆದರೆ  ಸಿ.ಎಸ್.ನಾರಾಯಣರಾವ್, ಮಹಾಲಿಂಗಯ್ಯ ಇನ್ನೂರು ಐವತ್ತು ಮತಗಳನ್ನು ದಾಟಲಿಲ್ಲ. ಬಿ.ಲಕ್ಕಪ್ಪ ಜಯಗಳಿಸಲು ಕಾರಣ ಕಾಂಗ್ರೆಸ್ ಅಲೆ.
ಜತನಾದಳ ಜೆ.ಸಿ.ಮಧುಸ್ವಾಮಿ ಜಯ: 1989ರಲ್ಲಿ ನಡೆದ ಚುನಾವಣೆಯಲ್ಲಿ 9ಜನ ಕಣದಲ್ಲಿದ್ದರು, ಕ್ಷೇತ್ರದಲ್ಲಿ 107509 ಮತದಾರರಿದ್ದರು, ಈ ಪೈಕಿ 83144 ಜನ ಮಾತ್ರ ಮತಚಲಾಯಿಸಿದ್ದು ಶೇ.77.34 ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಜತತಾದಳದಿಂದ ಜೆ.ಸಿ.ಮಾಧುಸ್ವಾಮಿ 26291 ಮತಗಳನ್ನು ಪಡೆದು 628 ಮತಗಳ ಅಂತರದಲ್ಲಿ ಮೊದಲ ಬಾರಿಗೆ  ಜಯಗಳಿಸಿದ್ದರು, ಕಾಂಗ್ರೆಸ್ನಿಂದ ಸ್ಪಧರ್ಿಸಿದ್ದ ಬಿ.ಲಕ್ಕಪ್ಪ 25663 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಜೆ.ಪಿ.ಜನತಾ ಪಕ್ಷದಿಂದ ಸ್ಪಧರ್ಿಸಿದ್ದ ಎನ್.ಬಸವಯ್ಯ 25317 ಮತಗಳನ್ನು ಪಡೆದಿದ್ದರು, ಸ್ವತಂತ್ರ ಅಭ್ಯಾಥರ್ಿ ಬಿ.ಎಸ್.ಚನ್ನಯ್ಯ 819 ಮತಗಳು, ಬಿ.ಜೆ.ಪಿ.ಯಿಂದ ಬಿ.ಬಿ.ಸಿದ್ದಲಿಂಗಮೂತರ್ಿ 624 ಮತಗಳು, ಸ್ವತಂತ್ರ ಅಭ್ಯಾಥರ್ಿಗಳಾದ ಸಿ.ಎಸ್.ನಾರಾಯಣರಾವ್, ಎಚ್.ಎನ್.ದೊಡ್ಡೇಗೌಡ, ಎಚ್.ಚನ್ನಯ್ಯ, ಯು.ಬಿ.ಚನ್ನಪ್ಪನವರುಗಳು ಐನೂರು ಮತಗಳನ್ನು ದಾಟಲಿಲ್ಲ.  ಜಯ ುತಗಳನ್ನು ಪಡೆದು 3371ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇವರ ವಿರುದ್ದ ಕಾಂಗ್ರೆಸ್ ಅಭ್ಯಥರ್ಿಯಾಗಿ ಎನ್.ಬಸವಯ್ಯ26243, ಸಿ.ಎಸ್.ನಾರಾಯಣ್ರಾವ್, ಬಿ.ಶಂಕರಲಿಂಗಪ್ಪ, ಜಿ.ಚಂದ್ರಶೇಖರ್, ಮಹಾಲಿಂಗಯ್ಯ, ಡಿ.ಜಿ.ದೇವಪ್ರಸಾದ್ ಸ್ಪಧರ್ಿಸಿದ್ದರು. ಒಟ್ಟು 77514 ಮತಗಳಿಂದ 59016 ಮತಗಳು ಚಲಾವಣೆಯಾಗಿದ್ದವು.
 ಹೊಸ ಅಬ್ಯಾಥರ್ಿ ಹುಡುಕಾಟ ಮತ್ತು ಲಿಂಗಾಯಿತ ಮತದಾರ ಒಲವು.   
ಕೆ.ಸಿ.ಪಿ.ಯಿಂದ ಎನ್.ಬಸವಯ್ಯ ಜಯ:    1994ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಂಗಾರಪ್ಪನವರ ಕೆ.ಸಿ.ಪಿಯಿಂದ ಎನ್.ಬಸವಯ್ಯ (ಕೆಸಿಪಿ)ಯಿಂದ ಸ್ಪಧರ್ಿಸಿ 38025 ಮತಗಳನ್ನು ಪಡೆದು 13885 ಮತಗಳ ಅಂತರದಿಂದ ಜಯಗಳಿಸಿದ್ದರು. ಇವರ ವಿರುದ್ದವಾಗಿ ಜೆ.ಸಿ.ಮಾಧುಸ್ವಾಮಿ24140(ಜೆಡಿ), ಬಿ.ಲಕ್ಕಪ್ಪ15587ಕಾಂಗ್ರೆಸ್, ಎಸ್.ಜಿ.ರಾಮಲಿಂಗಯ್ಯ, ಎಸ್.ಸಿದ್ದರಾಮಣ್ಣ, ಚಂದ್ರಹಾಸ ಸ್ಪಧರ್ಿಸಿದ್ದರು. ಕೆ.ಸಿ.ಪಿ.ಯಿಂದ ಎನ್.ಬಸವಯ್ಯ ಜಯಗಳಿಸಿದರೂ ನಂತರ ಜೆ.ಡಿ.ಎಸ್.ಗೆ ಸೆರ್ಪಡೆಗೊಂಡರು. ಬಸವಯ್ಯನವರ ಗೆಲುವಿಗೆ ಕಾರಣ ಮೇಲೆ ಅಭಿಮಾನ ಹೆಚ್ಚಾಗಿದ್ದು ಹಾಗೂ ಜನರ ಭಾವನೆಗಳ ಕಾರ್ಯಗಳಿಗೆ ಒತ್ತು ನೀಡಿದ್ದು,
1997ರ ಉಪಚುನಾವಣೆ: ಜೆ.ಡಿ.ಯು ಜೆ.ಸಿಮಾಧುಸ್ವಾಮಿ ಆಯ್ಕೆ: 1997ರಲ್ಲಿ ಎನ್.ಬಸವಯ್ಯನವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ನಡೆಸಬೇಕಾಯಿತು, 97ರ ಡಿಸೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆ.ಸಿ.ಮಾಧುಸ್ವಾಮಿ ಜೆ.ಡಿ.ಯು.ನಿಂದ ಸ್ಪಧರ್ಿಸಿ ಜಯಗಳಿಸಿದರು, ತಂದೆಯ ಮರಣಾನಂತರ ಸಿ.ಬಿ.ಸುರೇಶ್ ಬಾಬು, ಬಸವಯ್ಯನವರ ಉತ್ತರಾಧಿಕಾರವನ್ನು ಪಡೆಯಲು ಯತ್ನಿಸಿದರಾದರೂ ಆ ಬಾರಿ ಫಲ ದೊರೆಯಲಿಲ್ಲ, ಸಿ.ಬಿ.ಎಸ್. ಆ ಚುನಾವಣೆಯಲ್ಲಿ ಜೆ.ಡಿ.ಎಸ್.ನಿಂದ ಸ್ಪಧರ್ಿಸಿದ್ದರು, ಬಿ.ಜೆ.ಪಿ.ಯಿಂದ ತಿಪಟೂರು ತಾ.ಪಂ.ಅಧ್ಯಕ್ಷರಾಗಿದ್ದ  ಯಾದವ ಜನಾಂಗದ ಶಂಕರಪ್ಪನವರನ್ನು ಕಣಕ್ಕಿಳಿಸಿದ್ದರು, ಲಕ್ಕಪ್ಪ ಯಥಾ ಪ್ರಕಾರ ಚುನಾವಣಾ ಕಣದಲ್ಲಿದ್ದರು. ಮಾಧುಸ್ವಾಮಿ ಜಯಗಳಿಸಲು ಕಾರಣ ಅವರ ಅಭಿವೃದ್ದಿ ಕೆಲಸಗಳು, ಜಾತಿ ಲೆಕ್ಕಾಚಾರದಲ್ಲಿ ಜೆ.ಸಿ.ಎಂ.ರವರ ಚಾಕಚಕ್ಯತೆ ಹಾಗೂ ಜೆ.ಎಚ್.ಪಟೇಲರು ಬಹರಂಗ ಸಭೆಯಲ್ಲಿ ಜೆ.ಸಿ.ಎಂ.ಗೆಲ್ಲಿಸುವಂತೆ ಸೂಚ್ಯವಾಗಿ ಹೇಳಿದ ಪರಿ.
ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ಆಯ್ಕೆ:     1999ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಮತದಾದರಿದದ್ದು 118884 ಚಲಾವಣೆಗೊಂಡ ಮತಗಳು 92097, ಶೇ/77.47ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಸಿ.ಬಿ.ಸುರೇಶ್ ಬಾಬು 43961 ಮತಗಳನ್ನು ಪಡೆದು 14943 ಮತಗಳ ಅಂತರದಿಂದ ಗೆಲವನ್ನು ಕಂಡರು, ಜೆ.ಡಿ.ಯು ನಿಂದ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ 29018 ಮತಗಳನ್ನು ಪಡೆದರೆ, ಕಾಂಗ್ರೆಸ್ನಿಂದ ಸ್ಪಧರ್ಿಸಿದ್ದ ಎಚ್.ಎಂ.ಸುರೇಂದ್ರಯ್ಯ 16145 ಮತಗಳನ್ನು ಪಡೆದಿದ್ದರು. ಸುರೇಶ್ಬಾಬು ಜಯಗಳಿಸಲು ಕಾರಣ ಸಿ.ಬಿ.ಎಸ್.ರವರ ಸೌಮ್ಯ ಮಾತುಗಳು, ಆತ್ಮೀಯತೆ ಹಾಗೂ ಜೆ.ಸಿ.ಎಂ.ರವರ ನಿಷ್ಠುರ ವರ್ತನೆ ಮತ್ತು ಬಿರುನುಡಿಗಳು.
    ಜೆ.ಡಿ.ಯುನ ಜೆ.ಸಿ.ಮಾಧುಸ್ವಾಮಿ ಆಯ್ಕೆ: ನಿಂದ 2004ರ ಚುನಾವಣೆಯಲ್ಲಿ ಜೆ.ಸಿ.ಮಾಧುಸ್ವಾಮಿ 1628 ಮತಗಳ ಅಂತರದಿಂದ ಜಯಗಳಿಸಿದ್ದರು, ಜೆ.ಡಿ.ಎಸ್.ನಿಂದ ಸ್ಪಧರ್ಿಸಿದ್ದ ಸಿ.ಬಿ.ಸುರೇಶ್ ಬಾಬು 41412 ಮತಗಳನ್ನು ಪಡೆದರೆ, ಕಾಂಗ್ರೆಸ್ನಿಂದ ಸೀಮೆಣ್ಣೆ ಕೃಷ್ಣಯ್ಯ 6872 ಮತಗಳನ್ನು ಪಡೆದಿದ್ದರು, ಜತನಾ ಪಕ್ಷದಿಂದ ಬಿ.ಲಕ್ಕಪ್ಪ ಸ್ಪಧರ್ಿಸಿ 2510 ಮತಗಳನ್ನು ಪಡೆದಿದ್ದರು, ಹೆಚ್.ಟಿ.ನಾಗರಾಜು ಎಂಬವವರು 1631 ಮತಗಳನ್ನು, ಸೀಬಿ ನರಸಿಂಹಯ್ಯ 730 ಮತಗಳನ್ನು ಪಡೆದಿದ್ದರು. ಜೆ.ಸಿ.ಎಂ.ರವರ ಗೆಲುವಿಗೆ ಕಾರಣ ಸುರೇಶ್ ಬಾಬು ಆಡಳಿತದ ವೈಖರಿ ಮತ್ತು ಜಾತಿ ಲೆಕ್ಕಾಚಾರ
    ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ಜಯ: 2008ರಲ್ಲಿ ನಡೆದ ಚುನಾವಣೆ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ವಿಧಾನ ಸಭಾ ಕ್ಷೇತ್ರವಾರು ಪುನರ್ ವಿಂಗಡಣೆಯಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರ ತನ್ನ ವ್ಯಾಪ್ತಿ ವಿಸ್ತಾರವಾಯಿತು, ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಿಪಟೂರಿನ  ಕಿಬ್ಬನಹಳ್ಳಿ ಹೋಬಳಿ ಸೇರಿತ್ತು, ಈ ಚುನಾವಣೆಯಲ್ಲಿ ಅದು ತಪ್ಪಿ, ಚಿ.ನಾ.ಹಳ್ಳಿ ತಾಲೂಕಿನ ಐದು ಹೋಬಳಿಗಳ ಜೊತೆಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ಸೇರಿದ್ದರಿಂದ ಕ್ಷೇತ್ರದ ಮತದಾರ ಸಂಖ್ಯೆಗೆ ಹೆಚ್ಚಾಯಿತು, 2008ರಿಂದ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 184288 ರಷ್ಠಯಿತು, ಈ ಬಾರಿ ಸಿ.ಬಿ.ಸುರೇಶ್ಬಾಬು(ಜೆಡಿಎಸ್)67046 ಮತಗಳನ್ನು ಪಡೆದು ಅಂದರೆ 29044 ಭಾರಿ ಅಂತರದಿಂದ ಜಯಗಳಿಸಿದ್ದರು. ಕೆ.ಎಸ್.ಕಿರಣ್ಕುಮಾರ್(ಬಿಜೆಪಿ)38002, ಜೆ.ಸಿ.ಮಾಧುಸ್ವಾಮಿ24008(ಜೆಡಿಯು), ಎನ್.ರೇಣುಕಪ್ರಸಾದ್3941(ಕಾಂಗ್ರೆಸ್), ಅರುಣ.ಯಳನಡು3550(ಎಸ್ಯುಪಿ), ಕೆ.ಎಸ್.ಸತೀಶ್ಕುಮಾರ್2327(ಪಕ್ಷೇತರ), ಹೇಮಶ್ರೀ ಎಚ್.ಎನ್.1991(ಬಿಎಸ್ಪಿ), ಅನಂತಯ್ಯ1598(ಎಸ್ಪಿ), ಡಿ.ಜಯಣ್ಣಗೌಡ826(ಪಕ್ಷೇತರ) ಸ್ಪಧರ್ಿಸಿದ್ದರು. ಒಟ್ಟು 184288 ಮತಗಳಲ್ಲಿ 143589 ಮತಗಳು ಚಲಾವಣೆಗೊಂಡಿದ್ದವು.
        2013ರ ಮೇ 5ರಂದು ನಡೆಯುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸಿ.ಬಿ.ಸುರೇಶ್ಬಾಬು, ಕೆಜೆಪಿ ಪಕ್ಷದಿಂದ ಜೆ.ಸಿ.ಮಾಧುಸ್ವಾಮಿ, ಬಿಜೆಪಿಯಿಂದ ಕೆ.ಎಸ್.ಕಿರಣ್ಕುಮಾರ್ ಸ್ಪಧರ್ಿಸಲಿದ್ದು ಕಾಂಗ್ರೆಸ್ನಿಂದ ಯಾವ ಅಭ್ಯಥರ್ಿ ಸ್ಪಧರ್ಿಸಲಿದ್ದಾರೆಂಬುದು ಇನ್ನೂ ನಿಗೂಡವಾಗಿದ್ದು ಬಿಎಸ್ಆರ್ ಕಾಂಗ್ರೆಸ್ ಹಾಗೂ ಪಕ್ಷೇತರರಾಗಿ ಕೆಲವು ಅಭ್ಯಥರ್ಿಗಳು ಸ್ಪಧರ್ಿಸಲಿದ್ದು ಇವರಲ್ಲಿ ಯಾವ ಯಾವ ಜಾತಿಯವರು ಸ್ಪಧರ್ಿಸುತ್ತಾರೆ ಎಂಬ ಆಧಾರದ ಮೇಲೆ ಚುನಾವಣೆಯ ಫಲಿತಾಂಶ ನಿಂತಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರ ಪಕ್ಷಕ್ಕಿಂತ ಜಾತಿ ನೋಡಿ ಮತ ಹಾಕುವ ಪದ್ದತಿ ಇದೆ, ಅದೇ ರೀತಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆ ಅದಕ್ಕೆ ವಿರುದ್ದವಾದವರನ್ನು ಗೆಲ್ಲಿಸಿಕೊಂಡು ಬಂದಿರುವುದರಿಂದ ಈ ಕ್ಷೇತ್ರವನ್ನು ಇಂತಿಷ್ಟೇ ಸರಿ ಎಂದು ಹೇಳಲು ಕಷ್ಟಸಾಧ್ಯ. ಇನ್ನೂ ಒಂದು ತಿಂಗಳಲ್ಲಿ ನಡಿಯುವ ರಾಜಕೀಯದ ಮೇಲಾಟವನ್ನು ಗಮನಿಸುವುದೇ ಸದ್ಯಕ್ಕೆ ನಮಗಿರುವ ಕುತೂಹಲ.
   

   
   
   
 

Saturday, March 23, 2013


ಕಾಡೇನಹಳ್ಳಿಗೆ ಸಲಗಗಳ ಭೇಟಿ, ಭಯಭೀತರಾದ ಜನರು
                     
ಚಿಕ್ಕನಾಯಕನಹಳ್ಳಿ,ಮಾ.23 : ಪಟ್ಟಣದ ಹೊರವಲಯದ ಕಾಡೇನಹಳ್ಳಿಗೆ ಶನಿವಾರ ಬೆಳ್ಳಂಬೆಳಗ್ಗೆ 6.30ರ ಸುಮಾರಿನಲ್ಲಿ ಮೂರು (ಸಲಗ)ಕಾಡಾನೆಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದವು.
    ಬೆಳ್ಳಂಬೆಳಗ್ಗೆ ಕಾಡೇನಹಳ್ಳಿ ಬಳಿಯ ದಬ್ಬೇಘಟ್ಟ ಕೆರೆ ಬಳಿಯಲ್ಲಿ ಕಾಡಾನೆಗಳು ವಿಹರಿಸುತ್ತಿರುವಾಗ ಗ್ರಾಮಸ್ಥರು ಕಂಡು ಗಾಬರಿಗೊಂಡು ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದರು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
    ಕಾಡಾನೆಗಳು ಗ್ರಾಮಕ್ಕೆ ಆಗಮಿಸಿದ ಸುದ್ದಿ ತಿಳಿದು ನೂರಾರು ಜನರ ಸ್ಥಳಕ್ಕೆ ಧಾವಿಸಿ ಆನೆಗಳ ಚಲನವಲನಗಳನ್ನು ಕೂತೂಹಲದಿಂದ ವೀಕ್ಷಿಸಿದರಲ್ಲದೆ ಆನೆಗಳನ್ನು ಗ್ರಾಮದಿಂದ ಓಡಿಸಲು ಮುಂದಾದರು. ಗಾಬರಿಗೊಂಡ ಕಾಡಾನೆಗಳು ದಬ್ಬೇಘಟ್ಟದ ಹಾಗೂ ಕಾಡೇನಹಳ್ಳಿಯ ಗ್ರಾಮದ ಮುಖಾಂತರ ತರಬೇನಹಳ್ಳಿ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ಬಾಳೆಗಿಡಗಳನ್ನು ನಾಶಮಾಡಿದವು. ಅಲ್ಲಿಂದ ಗೋಡೆಕೆರೆ ಕಡೆಗೆ ಆನೆಗಳು ಪ್ರಯಾಣ ಬೆಳೆಸಿದವು.
    ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನ ಆಗಮಿಸುತ್ತಿದ್ದು, ಗ್ರಾಮದ ಕಡೆಗೆ ಎಲ್ಲಿ ಆನೆಗಳು ನುಗ್ಗುತ್ತವೋ ಎಂಬ ಆತಂಕದಲ್ಲಿ ಮುಳುಗಿದ್ದ ದೃಶ್ಯ ಕಂಡುಬಂದಿತು.
  ಗುಬ್ಬಿ ಕಡೆಯಿಂದ ತಾಲ್ಲೂಕಿನ ಗಂಟೆಹಳ್ಳಿಗೆ ಶುಕ್ರವಾರ ರಾತ್ರಿ ಆಗಮಿಸಿರುವ ಸಲಗಗಳು ಮದನಮಡು ಕೆರೆ, ತೀರ್ಥಪುರ ಮಾರ್ಗವಾಗಿ ಮದಲಿಂಗನ ಕಣಿವೆಯ ಮೂಲಕ ಸಂಚರಿಸಿದ ಕಾಡಾನೆಗಳು ಕಾಡೇನಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾದವು ವಿಷಯತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ, ಕಾಡಾನೆಗಳು ಮದ್ಯಾಹ್ನ 4ರ ಸುಮಾರಿಗೆ ಕರಿ ಹಿಂಡು ನಡುವನಹಳ್ಳಿ ಬಳಿಯ ಚೌಳಿಹಳ್ಳದಲ್ಲಿ ಬೀಡು ಬಿಟ್ಟಿದೆ. ಪ್ರಯಾಣದ ಉದ್ದಕ್ಕೂ ಸಿಕ್ಕ ಕದಳಿ ವನ, ಅಡಿಕೆ-ತೆಂಗಿನ ತೋಟಗಳ ಮೇಲೆ ದಾಳಿಮಾಡುತ್ತಾ ಸಾಗಿದ್ದು ನಷ್ಟದ ಲೆಕ್ಕ ಸಿಕ್ಕಿಲ್ಲ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಎಂದು ಆರೆಫ್ಒ ಮಾರುತಿ ತಿಳಿಸಿದರು. ತಿಪಟೂರು ವಲಯ ಅರಣ್ಯಾಧಿಕಾರಿ ಸತ್ಯನಾರಾಯಣ ಹಾಗು ಅರಣ್ಯ ಇಲಾಖಾ ಸಿಬ್ಬಂದಿ ಇದ್ದರು.

                     ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
                               
ಚಿಕ್ಕನಾಯಕನಹಳ್ಳಿ,ಮಾ.23 : ಚಿಕ್ಕನಾಯಕನಹಳ್ಳಿಯ ದೊಡ್ಡರಾಂಪುರ ಗೊಲ್ಲರಹಟ್ಟಿ ಹಾಗೂ ಹುಳಿಯಾರು ಭಾಗದ  ಕೆಜೆಪಿ, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರುಗಳು ಜೆಡಿಎಸ್ ಪಕ್ಷದ ನಾಯಕತ್ವವನ್ನು ಒಪ್ಪಿಕೊಂಡು ಶಾಸಕ ಸಿ.ಬಿ.ಸುರೇಶ್ಬಾಬುರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ದೊಡ್ಡರಾಂಪುರ ಗೊಲ್ಲರಹಟ್ಟಿಯ ಡಿ.ಎ.ರೇವಣ್ಣ, ಪೂಜಾರಿ ಕಾಟಪ್ಪ, ನಾಗಯ್ಯ, ಚಿಕ್ಕನಾಗಯ್ಯ, ಕೆಂಪಜ್ಜ, ಚಂದ್ರಶೇಖರಯ್ಯ, ರೇವಣ್ಣ, ಪ್ರಕಾಶ್, ಸಿರಿಯಪ್ಪ, ಹಾಗೂ ಹುಳಿಯಾರಿನ ಜಗದೀಶ್, ಪ್ರಸನ್ನಕುಮಾರ್, ಮಂಜುನಾಥ್ ಕದೀರ್ಅಹಮದ್, ಅಂಜನಮೂತರ್ಿ, ಮಹಮದ್ಷರೀಪ್, ಅಮೀರ್ಪಾಷ, ಕೇಶವಮೂತರ್ಿ ಸೇರಿದಂತೆ ಹಲವು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.

ಚುನಾವಣಾ ಪ್ರಚಾರಕ್ಕೆ ಚಾಲನೆ  ಪಡೆಯಲಿರುವ ಕೆ.ಎಸ್.ಕಿರಣ್ಕುಮಾರ್

ಚಿಕ್ಕನಾಯಕನಹಳ್ಳಿ,ಮಾ.23 : ಭಾಜಪ ಅಭ್ಯಾಥರ್ಿ ಕೆ.ಎಸ್.ಕಿರಣ್ಕುಮಾರ್ರವರು ಮಾ.24ರಂದು ಬೆಳಗ್ಗೆ 10 ಗಂಟೆಗೆ (ಇಂದು) ಹುಳಿಯಾರು ಹೋಬಳಿಯ ಮರೆನಡು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Friday, March 22, 2013

ಸವಿತಾ ಸಮಾಜದವರು ರಾಜಕೀಯ ಪ್ರಾತಿನಿಧ್ಯಕ್ಕೆ ಮುಂದಾಗಬೇಕು: ರಾಜ್ಯಾಧ್ಯಕ್ಷ
                         
ಚಿಕ್ಕನಾಯಕನಹಳ್ಳಿ,ಮಾ.22 : ಸವಿತಾ ಸಮಾಜ ಸಾಮಾಜಿಕ, ಶೈಕ್ಷಣಿಕ, ಆಥರ್ಿಕವಾಗಿ ಬೆಳೆದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ದೊರೆಯಲು ಸಾಧ್ಯ ಎಂದು ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಸಂಪತ್ಕುಮಾರ್ ಹೇಳಿದರು.
    ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ಸಮುದಾಯ ಭವನದ ಶಂಕುಸ್ಥಾಪನೆ ಸಂಘದ ವಾಷರ್ಿಕೋತ್ಸವ ಸಮಾರಂಭವನ್ನು ಡೋಲು ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸವಿತ ಸಮಾಜದ ಪದಾಧಿಕಾರಿಗಳು ರಾಜ್ಯಾದ್ಯಂತ ಸಂಚರಿಸಿ ಸಮಾಜವನ್ನು ಸಂಘಟಿಸುತ್ತಿದ್ದು,    ರಾಜ್ಯಾದ್ಯಾಂತ 30ಸಾವಿರ ಸದಸ್ಯರನ್ನು ಹೊಂದಿದ್ದು ಇನ್ನೂ ಹೆಚ್ಚು ಸದಸ್ಯರನ್ನು ಮಾಡುವ ಗುರಿ ಹೊಂದಿದೆ. ಸವಿತಾ ಸಮಾಜದ ವತಿಯಿಂದ ಬೆಂಗಳೂರಿನಲ್ಲಿ ಕಾಲೇಜು ಸ್ಥಾಪಿಸಿದ್ದು 60ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ವಸತಿ ನಿಲಯದಲ್ಲಿ ಊಟ ಮತ್ತು ಸ್ಥಳ ವ್ಯವಸ್ಥೆ ಮಾಡಲಾಗಿದೆ ಎಂದರು.
    ಸವಿತಾ ಸಮಾಜದ ವಿಭಾಗೀಯ ಕಾರ್ಯದಶರ್ಿ ವೇಣುಗೋಪಾಲ್ ಮಾತನಾಡಿ ಸಮಾಜದಲ್ಲಿ ಹಲವು ಅತೃಪ್ತ ಗುಂಪುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಸಂಘದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ, ಇದರ ಬಗ್ಗೆ ಸಮಾಜ ಬಾಂಧವರು ಎಚ್ಚರ ವಹಿಸಿ, ಸಮಾಜ ನನಗೆ ಏನು ಮಾಡಿದೆ ಎನ್ನುವ ಬದಲು ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂದು ಚಿಂತಿಸಬೇಕು, ಸಕರ್ಾರ ನೀಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆಥರ್ಿಕವಾಗಿ ಬೆಳೆಯುವಂತೆ ಸಲಹೆ ನೀಡಿದರು.
    ರಾಜ್ಯ ಸವಿತಾ ಸಮಾಜದ ಗೌರವಾಧ್ಯಕ್ಷ ನರಸಿಂಹಯ್ಯ ಮಾತನಾಡಿ ಸವಿತಾ ಸಮಾಜ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುವುದರಲ್ಲಿ ಮುಂಚೂಣಿಯಲ್ಲಿದೆ, ಸವಿತಾ ಸಮಾಜ ಪ್ರತಿಯೊಬ್ಬರನ್ನು ನಾಗರೀಕರನ್ನಾಗಿ ಮಾಡುತ್ತದೆ ಎಂದರು.
    ಸವಿತ ಸಮಾಜದ ಕಟ್ಟಡ ಸಮಿತಿ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಸವಿತಾ ಸಮಾಜ ಜಿಲ್ಲೆಯಲ್ಲಿ ಅಭಿವೃದ್ದಿ ಹೊಂದುವತ್ತ ಮುನ್ನಡೆದಿದ್ದು ಆ ಕಾರ್ಯ ನಮ್ಮೂರಿನಿಂದ ಮೊದಲ ಹೆಜ್ಜೆ ಇಡುತ್ತಿದೆ ಎಂದರು.
    ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸವಿತಾ ಸಮಾಜ ಮುಂದುವರಿಯಲು ಪ.ಜಾತಿ, ಪ.ಪಂಗಡಕ್ಕೆ ಸೇರಿಸಿದರೆ ಅಭಿವೃದ್ದಿಯಾಗುತ್ತದೆ, ಅಲ್ಲದೆ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಸಲಹೆ ನೀಡಿದ ಅವರು ಅದಕ್ಕಾಗಿ ಹಿಂದುಳಿದ ಜಾಗೃತಿ ವೇದಿಕೆ ಮುಂದಿರುತ್ತದೆ ಎಂದರು.
    ತುಮಕೂರು ಪ್ರಗತಿಪರ ಚಿಂತಕ ಜಿ.ಎಂ.ಶ್ರೀನಿವಾಸಯ್ಯ, ಹಿರಿಯೂರು ಪಿ.ಎಸೈ ಭಾಸ್ಕರ್ರವರನ್ನು ಸನ್ಮಾನಿಸಲಾಯಿತು.
    ಈ ಸಂದರ್ಭದಲ್ಲಿ ವೃತ್ತಿ ಬಾಂಧವರಿಗೆ ಬ್ಯೂಟಿಷಿಯನ್ ತರಬೇತಿಯನ್ನು ಬೆಂಗಳೂರಿನ ಶೇಖರ್, ನಾಗರಾಜ್, ಶಿವಕುಮಾರ್ರವರಿಂದ ನೂತನ ಶೈಲಿಯ ಹೇರ್ ಕಟಿಂಗ್, ಮಸಾಜ್, ಬ್ಲೀಚಿಂಗ್ ಮತ್ತು ಫ್ಲೇಷಿಯಲ್ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸವಿತ ಸಮಾಜದ ಗೌರವಾಧ್ಯಕ್ಷ ನರಸಿಂಹಯ್ಯ, ಬೆಂಗಳೂರು ಸವಿತ ಸಮಾಜದ ಅಧ್ಯಕ್ಷ ಯು.ಕೃಷ್ಣಮೂತರ್ಿ, ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಜಿ.ನರಸಿಂಹಯ್ಯ, ಖಜಾಂಚಿ ಟಿ.ಎನ್.ನಾಗರಾಜು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಅಶೋಕ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮತ್ತಿತರರು ಹಾಜರಿದ್ದರು.
    ಸಮಾರಂಭದಲ್ಲಿ ಸುಪ್ರೀಂ ಸುಬ್ರಹ್ಮಣ್ಯ ಸ್ವಾಗತಿಸಿದರೆ, ನಾರಾಯಣ್ ನಿರೂಪಿಸಿ, ವಂದಿಸಿದರು.
                                                          ಇಂದಿನಿಂದ ರೇಣುಕ ಜಯಂತಿ
ಚಿಕ್ಕನಾಯಕನಹಳ್ಳಿ,ಮಾ.22 : ಶ್ರೀ ಗುರು ರೇವಣಸಿದ್ದೇಶ್ವರ ಜಯಂತಿ ಮಹೋತ್ಸವವನ್ನು ಪಟ್ಟಣದ ರೇವಣಸಿದ್ದೇಶ್ವರಸ್ವಾಮಿ ಮಠದಲ್ಲಿ ಇದೇ 23ರಶನಿವಾರದಿಂದ 25ರ ಸೋಮವಾರದವರೆಗೆ  ಏರ್ಪಡಿಸಲಾಗಿದೆ.
    23ರಂದು ಸಂಜೆ 6ಕ್ಕೆ ಶ್ರೀರೇವಣಸಿದ್ದೇಶ್ವರ ಸಾಂಗತ್ಯ ಪುರಾಣ ಕಥೆ ಕಾರ್ಯಕ್ರಮ, 24ರಂದು ರಾತ್ರಿ 8.30ಕ್ಕೆ ಶ್ರೀ ಗುರುಶಾಂತ ವಿಜಯ ಅಥವಾ ಟಗರು ಪವಾಡ ಎಂಬ ನಾಟಕವನ್ನು ಶುಕ್ರವಾರದ ಬಾಗಿಲು ಬಳಿ ನಡೆಯಲಿದೆ. 25ರಂದು ಸಂಜೆ 6ಕ್ಕೆ ಗುರುರೇವಣಸಿದ್ದೇಶ್ವರಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಕನಕದಾಸರ ಉತ್ಸವ ವಿವಿಧ ಮನರಂಜನೆಗಳೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಚಿಕ್ಕನಾಯಕನಹಳ್ಳಿ,ಮಾ.22 : ಶ್ರೀ ಗುರು ಪರಪ್ಪಸ್ವಾಮಿಯವರ 22ನೇ ವರ್ಷದ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 26ರ ಮಂಗಳವಾರ ಏರ್ಪಡಿಸಲಾಗಿದೆ.
    22ರಂದು ರಾತ್ರಿ 8ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.    27ರ ಬುಧವಾರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
 

Thursday, March 21, 2013




     ಬಯೋಮೆಟ್ರಿಕ್ ಅಳವಡಿಕೆಯಿಂದಾಗಿ ಅಕ್ರಮಕ್ಕೆ       ಅವಕಾಶವಿಲ್ಲ: ಬಿ.ಸಿ.ಎಂ,ಡಿ.ಓ.ಮುದ್ದುಕುಮಾರ್
                                
ಚಿಕ್ಕನಾಯಕನಹಳ್ಳಿ,ಮಾ.21 : ಬಿ.ಸಿ.ಎಂ.ಹಾಸ್ಟೆಲ್ಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿದ ನಂತರ ಹಾಜರಿದ್ದವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡುತ್ತಿದ್ದು ಮಕ್ಕಳ ಹೆಸರಿನಲ್ಲಿ ಯಾವುದೇ ರೀತಿಯ ಅಕ್ರಮ ನಡೆಯಲು ಅವಕಾಶವಿಲ್ಲ ಎಂದು ಜಿಲ್ಲಾ ಬಿ.ಸಿ.ಎಂ.ಅಧಿಕಾರಿ ಸಿ.ಟಿ.ಮುದ್ದುಕುಮಾರ್ ತಿಳಿಸಿದ್ದಾರೆ.
    ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ಗೆ ಭೇಟಿ ನೀಡಿದ್ದ ಅವರು, ವಿದ್ಯಾಥರ್ಿಗಳೊಂದಿಗೆ ಊಟದ ವ್ಯವಸ್ಥೆ, ಸಕರ್ಾರಿ ಸವಲತ್ತುಗಳ ವಿತರಣೆಯ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
    ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಈ ಹಾಸ್ಟೆಲ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ನೀಡಿದ ಸೂಚನೆಗಳ ಅನುಷ್ಠಾನದ ಬಗ್ಗೆ ವೀಕ್ಷಿಸಲು ಆಗಮಿಸಿರುವುದಾಗಿ ತಿಳಿಸಿದ ಅವರು, ಪಟ್ಟಣದ ಈ ಹಾಸ್ಟೆಲ್ನ ವಾಡರ್್ನ್ ವಿರುದ್ದ ಶಿಸ್ತು ಕ್ರಮ ಜರುಗಿಸಿದ್ದು, ಅವರ ಜವಬ್ದಾರಿಯನ್ನು  ಪಕ್ಕದ ಹಾಸ್ಟೆಲ್ ವಾಡರ್್ನ್ಗೆ ವಹಿಸಿದೆ ಎಂದರು.
    ಸಕರ್ಾರಿ ಶಾಲೆಗಳ ಮಕ್ಕಳಿಗೆ ಈ ಶೈಕ್ಷಣಿಕ ವರ್ಷಕ್ಕೆ ಸಮವಸ್ತ್ರ ವಿತರಿಸಿದ್ದು, ಖಾಸಗಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಸಕರ್ಾರದಿಂದ ಸರಬರಾಜಾಗಿಲ್ಲ, ಸಮವಸ್ತ್ರ ಬಂದ ತಕ್ಷಣವೆ ಉಳಿದ ಮಕ್ಕಳಿಗೂ ಸಮವಸ್ತ್ರ ವಿತರಿಸಲಾಗುವುದು ಎಂದರು.
    ವಿದ್ಯಾಥರ್ಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಸಂಜೆ ಸ್ನ್ಯಾಕ್ಸ್, ಬೆಳಗ್ಗೆ ಮತ್ತು ರಾತ್ರಿ ಊಟ ವ್ಯವಸ್ಥೆ ಸಮರ್ಪಕವಾಗಿದೆ ಎಂದರಲ್ಲದೆ, ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ನಿಯಂತ್ರಿಸಲು ಗುಡ್ ನೈಟ್ ಲಿಕ್ವೀಡಿಟೇರ್ಗಳನ್ನು ಸರಬರಾಜು ಮಾಡಿದ್ದಾರೆ,  ಬೇಸಗಿಯಾದ್ದರಿಂದ ರಾತ್ರಿ ಸಮಯದಲ್ಲಿ ಸೆಕೆ ಜಾಸ್ತಿ ಎಂದರು. ವಿದ್ಯಾಥರ್ಿಗಳ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾ ಅಧಿಕಾರಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್ ರವರಿಗೆ ಸೂಚಿಸಿದರು.
       
ಕಾಂಗ್ರೆಸ್ ಅಬ್ಯಾಥರ್ಿಯಾಗಿ ಹೊರಗಿನವರು ಬಂದರೆ ಅಸಹಕಾರ: ಬ್ಲಾಕ್ ಕಾಂಗ್ರೆಸ್
                               
ಚಿಕ್ಕನಾಯಕನಹಳ್ಳಿ,ಮಾ.21 : ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ನ್ನು ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ನೀಡಿದರೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡುವ ಬದಲು ವಿರೋಧಿಸುತ್ತಾರೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ತಿಳಿಸಿದರು.
    ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿಗೆ ಹೊರ ಅಭ್ಯಥರ್ಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದು, ಹೊರಗಿನವರಿಗೆ ಏನಾದರು ಪಕ್ಷ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿ ತಲುಪುತ್ತದೆ.   ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ದುಡಿಯಬೇಕಾದವರು ಕಾರ್ಯಕರ್ತರು ಅವರ ಅಭಿಪ್ರಾಯವನ್ನು ಬಿಟ್ಟು ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದು, ಯಾರಾದರು ಸರಿಯೇ ಸ್ಥಳೀಯ ಅಭ್ಯಥರ್ಿಗೆ ಟಿಕೆಟ್ ನೀಡಬಕೇಂದ್ರ ಒತ್ತಾಯಿಸಿದ ಅವರು ತಾಲ್ಲೂಕಿನಲ್ಲಿ ಕೆಪಿಸಿಸಿ ಸದಸ್ಯರು, ಮಾಜಿ ಶಾಸಕರು, ಡಿಸಿಸಿ ಸದಸ್ಯರುಗಳು ಅಲ್ಲದೆ ಪಕ್ಷದ ಪರವಾಗಿ ಮೊದಲಿನಿಂದಲೂ ದುಡಿದ ಹಲವು ಕಾರ್ಯಕರ್ತರು ಸ್ಪಧರ್ೆಯಲ್ಲಿದ್ದಾರೆ ಎಂದರಲ್ಲದೆ,      ಚಿ.ನಾ.ಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದುವರೆ ಲಕ್ಷದಷ್ಟು ಅಹಿಂದ ಮತದಾರರಿಂದ್ದಾರೆ ಎಂದರು.
    ಕಾಂಗ್ರೆಸ್ ಪಕ್ಷದ ಮುಖಂಡ ನಾರಾಯಣಗೌಡ ಮಾತನಾಡಿ ತಾಲ್ಲೂಕಿನ ವಿಷಯದಲ್ಲಿ ವರಿಷ್ಠರು ತೆಗೆದುಕೊಳ್ಳುವ ತೀಮರ್ಾನದಿಂದಲೇ ಪಕ್ಷ ಹೀನಾಯ ಸ್ಥಿತಿ ತಲುಪಿ, ಠೇವಣಿಯು ಇಲ್ಲದಂತೆ ನರಳುತ್ತಿದೆ, ಕಾಂಗ್ರೆಸ್ ಪಕ್ಷದಲ್ಲಿ ಈ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಬಯಸುವವರು ಆಥರ್ಿಕವಾಗಿ ಸಬಲರನ್ನು ನೋಡುತ್ತಿದ್ದು ಟಿಕೆಟ್ನ್ನು ಮಾರಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ ಏನೋ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿದೆ,ರಾಜ್ಯಾಧ್ಯಕ್ಷರು ಈಗಲಾದರೂ ಎಚ್ಚೆತ್ತುಕೊಂಡು ಸ್ಥಳೀಯ ಅಭ್ಯಥರ್ಿಗಳಿಗೆ ಟಿಕೆಟ್ ನೀಡಲು ಒತ್ತಾಯಿಸಿದರು.
    ಗೋಷ್ಟಿಯಲ್ಲಿ ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಮುಖಂಡರಾದ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದರು.

ಮಳೆನೀರಿನ ಬಗ್ಗೆ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಕರೆ
                                
ಚಿಕ್ಕನಾಯಕನಹಳ್ಳಿ,ಮಾ.21 : ಮಳೆ ನೀರು ಇಂಗಿಸುವ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಜನರಲ್ಲಿ ಜಾಗೃತಿ ಮೂಡಿಸುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
    ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ ಆಹಾರ ಉತ್ಪನ್ನ ಚಟುವಟಿಕೆಗಳ ಘಟಕದಡಿ ಗೋಡೆಕೆರೆ, ಜೆ.ಸಿ.ಪುರ, ದುಗಡಿಹಳ್ಳಿ, ಶೆಟ್ಟಿಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ 34ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ವಿತರಣೆ ಮಾಡಿದ ಅವರು  ಇಂಗುಗುಂಡಿ, ಉದಿಬದು ಹಾಕುವ ಮೂಲಕ ನೀರು ಇಂಗುವಂತೆ ಮಾಡುವುದರಿಂದ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ ಅವರು ತಾಲ್ಲೂಕಿನಲ್ಲಿ 800ರಿಂದ 1000ಅಡಿ ಕೊಳವೆ ಬಾವಿ ಕೊರೆದರು ನೀರು ಬರುತ್ತಿಲ್ಲ, ಇರುವ ನೀರಿನ್ನೇ ಸದ್ಭಳಕೆ ಮಾಡುವಂತೆ ತಿಳಿಸಿದರು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಸುತ್ತುನಿಧಿಯನ್ನು ಸರಿಯಾಗಿ ಬಳಸಿಕೊಂಡು ಆಥರ್ಿಕವಾಗಿ ಸದೃಡರಾಗಬೇಕು ಎಂದು ಹೇಳಿದರು.
    ಸಂಪನ್ಮೂಲ ವ್ಯಕ್ತಿಯಾದ ಆನಂದಕುಮಾರ್ ಮಾತನಾಡಿ ಸಮಗ್ರ ಜಲಾನಯನ ಯೋಜನ ಅಡಿಯಲ್ಲಿ ಮಣ್ಣಿನ ಸಂರಕ್ಷಣೆ ಅಂತರ್ಜಲ ಹೆಚ್ಚಿಸಲು ಇಂಗುಗುಂಡಿ ಉದುಬದು ಮಳೆಯಿಂದ ಕೊಚ್ಚಿ ಹೋಗುವ ಮಣ್ಣಿನ ಸಂರಕ್ಷಣೆ ಮಾಡುವುದು ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆಳು ಅಭಿವೃದ್ದಿ ಅರಣ್ಯಕಾರಣದಂತಹ ಕಾರ್ಯಕ್ರಮವನ್ನು ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಹಾಗೂ ಸಕರ್ಾರ ಸ್ವಸಹಾಯ ಸಂಘಗಳ ಮೂಲಕ ಪ್ರತಿ ಸಂಘಗಳಿಗೆ 50ಸಾವಿರ ಸುತ್ತುನಿಧಿ ನೀಡುತ್ತಿದ್ದು ಸಂಘಗಳು ಸುತ್ತುನಿಧಿಯನ್ನು ಉಪಯೋಗಿಸಿಕೊಂಡು ಕೋಳಿಸಾಗಾಣಿಕೆ, ಕುರಿಸಾಗಾಣಿಕೆ, ಹೈನುಗಾರಿಕೆ, ಟೈಲರಿಂಗ್ ಸೇರಿದಂತೆ ನಾನಾ ಕಸುಬುಗಳನ್ನು ತಮ್ಮ ಕುಟುಂಬದ ಆಥರ್ಿಕ ಸುಧಾರಣೆಯನ್ನು ಮಾಡಿಕೊಳ್ಳಿ ಎಂದರು. ಸ್ವಸಹಾಯ ಸಂಘಗಳಿಗೆ ಕೌಶಲ್ಯಭಿವೃದ್ದಿ ಯೋಜನೆ ಅಡಿಯಲ್ಲಿ ತರಬೇತಿ ನೀಡಲಾಗುವುದು ಎಂದರು.
    ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಲೋಹಿತಬಾಯಿ, ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿದರು.
    ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ತಾ.ಪಂ.ಸದಸ್ಯರಾದ ಶಶಿಧರ್, ಜಯಣ್ಣ, ಲತಾ, ನವೀನ್ ಉಪಸ್ಥಿತರಿದ್ದರು.
    ಸಮಾರಂಭದಲ್ಲಿ ಕೃಷಿ ಇಲಾಖೆ ವತಿಯಿಂದ ಆಕಸ್ಮಿಕವಾಗಿ ಹಾವು ಕಡಿತದಿಂದ ನಿಧನ ಹೊಂದಿದ ಕುಟುಂಬದ ಸದಸ್ಯರಿಗೆ ರಾಮನಗರದ ಪಾತಲಿಂಗಯ್ಯ, ಅಂಬರಾಪುರದ ಭಾಗ್ಯಮ್ಮ, ಆಶ್ರಿಹಾಳ್ನ ಅನಿತರವರಿಗೆ ತಲಾ 1ಲಕ್ಷರೂ ಚೆಕ್ಕನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಿತರಿಸಿದರು.

ಹಿಂದುಳಿದ ಹೋಬಳಿಗಳು ನೀರಿಗಾಗಿ ಹೋರಾಟ ಮಾಡಲೇಬೇಕು: ಸಿ.ಬಿ.ಎಸ್.
                       
ಚಿಕ್ಕನಾಯಕನಹಳ್ಳಿ,ಮಾ.21 : ಹೇಮಾವತಿ ನಾಲೆಯಿಂದ ಅತ್ಯಂತ ಹಿಂದುಳಿದ ಹೋಬಳಿಗೆ ನೀರು ಬರಬೇಕಾದರೆ ಸಂಘಟಿತರಾಗಿ ಹೋರಾಟ ಮಾಡಿದರೆ ನಾನು ತಮ್ಮೊಂದಿಗೆ ಇರುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ತಾಲ್ಲೂಕಿನ ತೀರ್ಥಪುರ ಗ್ರಾಮದಲ್ಲಿ 10ಲಕ್ಷರೂ ಮಟ್ಟದ ಕಾಂಕ್ರಿಟ್ ರಸ್ತೆ ಹಾಗೂ ರಾಜ್ಯ ವಲಯ ಯೋಜನೇತರ ಅಡಿಯಲ್ಲಿ 5.36ಲಕ್ಷ ಮಟ್ಟದಲ್ಲಿ ನಿಮರ್ಿಸಿರುವ ಹೆಚ್ಚುವರಿ ಶಾಲಾ ಕೊಠಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಕರ್ಾರಿ ಕುಡಿಯುವ ನೀರಿಗೆ ಎಷ್ಟೇ ಹಣ ಬಿಡುಗಡೆ ಮಾಡಿದರು. ಭೂಮಿಯಲ್ಲಿ ನೀರಿಲ್ಲದಿದ್ದರೆ ಏನು ಪ್ರಯೋಜನ, ಈಗಾಗಲೇ ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದ್ದು ಅಲ್ಪ ಸ್ಪಲ್ಪ ನೀರು ಬರುತ್ತಿದೆ. ಇನ್ನು ಎರಡು ತಿಂಗಳಲ್ಲಿ ಮಳೆ ಬರದೇ ಇದ್ದರೆ ಕೊರೆಸಿರುವ ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ ಆದ್ದರಿಂದ ಈ ಭಾಗಕ್ಕೆ ಹೇಮಾವತಿ ನಾಲೆಯಿಂದ ನೀರು ಹರಿದರೆ ಮಾತ್ರ ರೈತರ ಬದುಕು ಹಸನಾಗುವುದು  ಈ ಭಾಗಕ್ಕೆ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ವಿದ್ಯುತ್ ಉಪಸ್ಥಾವರ ಕೇಂದ್ರಕ್ಕೂ ಚಾಲನೆ ನೀಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕೆ ಕಳಿಸುವ ಬದಲು ಗ್ರಾಮದಲ್ಲೇ ಇರುವ ಸಕರ್ಾರಿ ಶಾಲೆಗೆ ಕಳಿಸಿದರೆ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳು ಉಳಿಯಲು ಸಾಧ್ಯ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಅತ್ಯುನ್ನತ ಸ್ಥಾನ ಅಥವ ಅತ್ಯಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಬೆಳ್ಳಿ ಪದಕ ನೀಡಲಾಗುವುದು ಎಂದರು.
    ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ವಿದ್ಯೆ ಸಾಧಕನ ಸುತ್ತಿ ಹೊರೆತು ಸೋಮಾರಿಯ ಸೊತ್ತಲ್ಲ್ಲ ಇದನ್ನು ಅರಿತು ಮಕ್ಕಳ ಶಾಲೆಯ ಪ್ರಾರಂಭದಿಂದಲೂ ಓದಿದರೆ ಮಾತ್ರ ಉನ್ನತದಜರ್ೆಯಲ್ಲಿ ಪಾಸಾಗುತ್ತಾರೆ, ಪರೀಕ್ಷೆ ಸಮಯದಲ್ಲಿ ಓದಿದರೆ ಪ್ರಯೋಜನವಿಲ್ಲ ಶಿಕ್ಷಕರ ಶಾಲೆಗಳಲ್ಲಿ ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು ಶಾಲೆಗಳಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಿ ಎಂದರು. ಶಾಲೆಯ ಸಮಸ್ಯೆಗಳನ್ನು ಅರಿಯಲು ಗ್ರಾ.ಪಂ.ಅಧ್ಯಕ್ಷ ಎಸ್.ಡಿ.ಎಂ.ಸಿ ಸದಸ್ಯರು ಭೇಟಿ ನೀಡಿ ಎಂದು ಸಲಹೆ ನೀಡಿದರು.
    ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಗ್ರಾ.ಪಂ.ಅಧ್ಯಕ್ಷ ಪದ್ಮಮ್ಮಲಿಂಗರಾಜು, ಉಪಾಧ್ಯಕ್ಷೆ ಮಹಾಲಿಂಗಪ್ಪ, ಗ್ರಾ.ಪಂ.ಸದಸ್ಯರಾದ ಕೆಂಪರಾಜು, ಶಿವಣ್ಣ, ಗೋವಿಂದರಾಜು, ರಾಮಕೃಷ್ಣಪ್ಪ, ಒಬಣ್ಣರಾಜು, ಮಂಜುನಾಥ, ಮೋಹನ್ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ಶಿಕ್ಷಕ ರಮೇಶ್ ಸ್ವಾಗತಿಸಿದರು. ಮೋಹನ್ ನಿರೂಪಿಸಿ ಯೋಗೀಶ್ ವಂದಿಸಿದರು.;
 

Tuesday, March 19, 2013

                                                      ತಾತಯ್ಯನವರ ಉತ್ಸವ
                                   
ಚಿಕ್ಕನಾಯಕನಹಳ್ಳಿ,ಮಾ.19: ಕನರ್ಾಟಕದ ಕೋಮುಸೌಹಾರ್ದ ನೆಲೆಗಳಲ್ಲಿ ಒಂದಾದ ಪಟ್ಟಣದ ಸೂಫಿ ಸಂತ ಹಜರತ್ ವೂಹಿದ್ದಿನ್ ಷಾ ಖಾದ್ರಿ ತಾತನ ಉತ್ಸವ ಸಂದಲ್ ಮೆರವಣಿಗೆಯೊಟ್ಟಿಗೆ ಸೋಮವಾರ ರಾತ್ರಿ 11ಗಂಟೆಗೆ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು.
  ಸೂಫಿ ತಾತನ ಅಕ್ಕ ಚನ್ನೇನಹಳ್ಳಿ ಬೀಬಿ ಫಾತಿಮ ಸನ್ನಿಧಿಯಲ್ಲಿ ವಿವಿಧ ವಿಧಿ ವಿಧಾನಗಳೊಟ್ಟಿಗೆ ಸಂದಲ್(ನಿರಾಕಾರಿ ದೈವದ ಹೂ ಪಟದ ಅಲಂಕಾರ)ದೊಂದಿಗೆ ಸಂಜೆ ಮೆರವಣಿಗೆ ಬಂದು ಪಟ್ಟಣದ ತಾತನ ಗದ್ದುಗೆಯಲ್ಲಿ ದೈವಿ ಪ್ರಾರ್ಥನೆ ಮುಗಿಸಿ ರಾತ್ರಿ ಪಟ್ಟಣದ ಬಿ.ಹೆಚ್.ರಸ್ತೆ, ನೆಹರು ಸರ್ಕಲ್, ಪುರಸಭೆ ಮುಂಭಾಗದಿಂದ ಸಾಗಿ ಪಟ್ಟಣದ ರಾಜಬೀದಿಗಳಲ್ಲಿ ತಡರಾತ್ರಿವರೆಗೆ ಉತ್ಸವ ನಡೆಯಿತು.
 ಬಿರುಸುಬಾಣಗಳು,ಟಿಪ್ಪು ಸಾಹಸ ಸಾರುವ ಸ್ತಬ್ಧ ಚಿತ್ರ, ಮೆರವಣಿಗೆಯಲ್ಲಿ ಸಾಗಿದ ಚಿತ್ರದುರ್ಗದ ಡೋಲ್ ಆಕರ್ೆಸ್ಟ್ರಾ ಮತ್ತು ಅಲಂಕೃತ ಅಶ್ವ ಸೆಂದಲ್ ಉತ್ಸವಕ್ಕೆ ಮೆರುಗು ತಂದವು ಜಾತಿ ಮತ ಧರ್ಮಗಳನ್ನು ಒಂದುಮಾಡಿ ಸಾವಿರಗಟ್ಟಲೆ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಪ್ರಾರ್ಥನೆ ಸಲ್ಲಿಸುತ್ತ ಮೆರವಣಿಗೆಯಲ್ಲಿ ಪಲ್ಗೊಂಡರು.
     ಕಷ್ಟ ಬಂದಾಗ ಹಿಂದುಗಳು ಹರಕೆ ಹೊತ್ತು ಗದ್ದುಗೆಗೆ ತೆರಳಿ ಕಡಲೆ ಸಕ್ಕರೆ ತಿದ್ದುವುದು ಇಲ್ಲಿಯ ವಾಡಿಕೆಯಾಗಿದ್ದು ಹಿಂದು ಮುಸ್ಲೀಮರು ಒಟ್ಟಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
 ಕಳೆದ 53 ವರ್ಷಗಳಿಂದ ಸ್ಥಳೀಯ ಹಿಂದು-ಮುಸ್ಲೀಮರು ಒಂದಾಗಿ ಕಮಿಟಿ ರಚಿಸಿಕೊಂಡು ತಾತಯ್ಯನ ಉರುಸ್ ಅನ್ನು ವೈಭವಯುತವಾಗಿ ನಡೆಸಿಕೊಂಡು ಬರುತ್ತಿರುವುದು ಈ ನೆಲದ ಸೌಹಾರ್ದ ತತ್ವಕ್ಕೆ ಹಿಂಬು ನೀಡಿದೆ.
 19ರ ಮಂಗಳವಾರ ಹೈದರಾಬಾದ್ ಮತ್ತು ಹಿಂದೂರಿನ ಖವ್ವಾಲಿ ತಂಡಗಳು ಜಿದ್ದಾಜಿದ್ದಿನ ಖವ್ವಾಲಿ ಜುಗಲ್ಬಂದಿಯಲ್ಲಿ ಭಾಗವಹಿಸಲಿದ್ದು ರಾಜ್ಯದ ವಿವಿದ ಭಾಗಗಳಿಂದ ಆಗಮಿಸುವ ಭಕ್ತರು ಸೌಹಾರ್ದವನ್ನು ಸಾಕ್ಷಿಕರಿಸುತ್ತಾರೆ. ಹಾಗು 20ರ ಬುಧವಾರ ಆಕರ್ಷಣೀಯ ರಸಸಂಜೆ ಮತ್ತು ನೃತ್ಯ ವೈಭವದೊಟ್ಟಿಗೆ ತೆರೆ ಬೀಳಲಿದೆ.   
ನುರಿತ ವೈದ್ಯರುಗಳನ್ನು ಹಾಗೂ ಅಗತ್ಯ ಸಿಬ್ಬಂದಿ ವರ್ಗವನ್ನು ನೇಮಿಸಲು ಸಕರ್ಾರಿ ವಿಫಲವಾಗಿದೆ : ಸಿಬಿಎಸ್


ಚಿಕ್ಕನಾಯಕನಹಳ್ಳಿ,ಮಾ.19 : ಸಕರ್ಾರಿ ಆಸ್ಪತ್ರೆಗಳಿಗೆ ನುರಿತ ವೈದ್ಯರುಗಳನ್ನು ಹಾಗೂ ಅಗತ್ಯ ಸಿಬ್ಬಂದಿ ವರ್ಗವನ್ನು ನೇಮಿಸಲು ಸಕರ್ಾರಿ ವಿಫಲವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆರೋಪಿಸಿದರು.
    ಪಟ್ಟಣದ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಯ 50ರಿಂದ 100 ಹಾಸಿಗೆಗಳ ಮೇಲ್ದಜರ್ೆಗೆ ಏರಿಸಿದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನೂತನ ಆಸ್ಪತ್ರೆಗೆ 100ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಬೇಕಾಗಿದ್ದು ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಿಸುವಂತೆ ಸಕರ್ಾರವನ್ನು ಒತ್ತಾಯಿಸಿದರು. ವೈದ್ಯರು ಸಿಬ್ಬಂದಿವರ್ಗ ಆಸ್ಪತ್ರೆಗೆ ಬಂದಂತಹ ರೋಗಿಗಳ ಜೊತೆಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದ ಅವರು, ಪಟ್ಟಣದ ಆಸ್ಪತ್ರೆಗೆ ಅರವಳಿಕೆ(ಅನಸ್ತೇಷೇಯ) ವೈದ್ಯರನ್ನು ನೇಮಿಸಿದರೆ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಅನುಕೂಲವಾಗುತ್ತದೆ. ಸಾರ್ವಜನಿಕರು ರೋಗಿಗಳಿಗೆ ಆಸ್ಪತ್ರೆ ನಮ್ಮದು ಎಂಬ ಭಾವನೆ ಬಂದರೆ ಮಾತ್ರ ಆಸ್ಪತ್ರೆ ಸ್ವಚ್ಛವಾಗಿರಲು ಸಾಧ್ಯ ಸಕರ್ಾರಿ ಆಸ್ಪತ್ರೆಯ ನೀಡುತ್ತಿರುವುದು ಅಭಿನಂದನೀಯ. ಕುದುರೆಮುಖ ಅದಿರು ಕಂಪನಿ ಅಂಬುಲೆನ್ಸ್ ನೀಡುತ್ತಿದೆ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ, 108 ಆಂಬುಲೆನ್ಸ್ ಮಾತ್ರ ಸಾರ್ವಜನಿಕರು ಹೆಚ್ಚಿನ ಸೇವೆಗೆ ಬಳಕೆಯಾಗುತ್ತದೆ ಎಂದರು. ಸಕರ್ಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಪೈಪೋಟಿಯನ್ನು ಎದುರಿಸಲು ಸಕರ್ಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
    ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಸಕರ್ಾರಿ ಆಸ್ಪತ್ರೆಗಳು ಸ್ವಚ್ಛವಾಗಿಟ್ಟುಕೊಳ್ಳುವಂತೆ ವೈದ್ಯರು ಹಾಗೂ ಸಿಬ್ಬಂದಿವರ್ಗಕ್ಕೆ ಸಲಹೆ ನೀಡಿದರು.
    ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್ ಮಾತನಾಡಿ ಕುದುರೆಮುಖ ಕಂಪನಿ ಸಕರ್ಾರಿ ಆಸ್ಪತ್ರೆಗೆ 2ಕೃತಕ ಉಸಿರಾಟದ ಉಪಕರಣ ಹಾಗೂ ಪಟ್ಟಣದಲ್ಲಿ ಹೃದ್ರೋಗ ಖಾಯಿಲೆ ಹೆಚ್ಚಾಗಿರುವುದರಿಂದ ಇ.ಸಿ.ಜಿ ಉಪಕರಣವನ್ನು ಆಸ್ಪತ್ರೆಗೆ ನೀಡುವಂತೆ ಮನವಿ ಮಾಡಿದರು.
    ಕುದುರೆಮುಖ ಅಧಿರು ಕಂಪನಿಯ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಪಟ್ಟಣದ ಕುದುರೆಮುಖ ಕಂಪನಿಯ ಕಛೇರಿಯು 2008ರಲ್ಲಿ ಪ್ರಾರಂಭವಾಗಿದೆ, ಗಣಿಗಾರಿಕೆ ಇನ್ನೂ ಪ್ರಾರಂಭಿಸಿಲ್ಲವಾದರೂ ಕಂಪನಿ ಸಾಮಾಜಿಕ ಚಟುವಟಿಕೆಗಳು ಹಾಗೂ ವಿದ್ಯಾಭ್ಯಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಕಂಪನಿ ತೊಡಗಿಸಿಕೊಂಡಿದ್ದು ಸಕರ್ಾರಿ ಆಸ್ಪತ್ರೆಗೆ ಕೃತಿಕ ಉಸಿರಾಟದ ಉಪಕರಣ 1ಲಕ್ಷರೂ ವೆಚ್ಚದಲ್ಲಿ ನೀಡುತ್ತಿದ್ದೇವೆ ಎಂದರು.
    ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರುಗಳಾದ ಜಾನಮ್ಮರಾಮಚಂದ್ರಯ್ಯ, ಲೋಹಿತಬಾಯಿರಂಗಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾ ಸದಸ್ಯರುಗಳಾದ ಸಿ.ಟಿ.ದಯಾನಂದ, ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ಸಿ.ಎಸ್.ರಮೇಶ್, ಮಲ್ಲೇಶಯ್ಯ, ರಾಜಶೇಖರ್, ಪ್ರೇಮ, ಅಶೋಕ್, ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.

                            ಲೋಕಾಯುಕ್ತರ ಭೇಟಿ
                                
ಚಿಕ್ಕನಾಯಕನಹಳ್ಳಿ,ಮಾ.20 : ಲೋಕಾಯುಕ್ತರ ಜನಸಂಪರ್ಕ ಸಭೆಯಲ್ಲಿ ಬಂದಿರುವ ಅಜರ್ಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪೋಲೀಸ್ ನಿರೀಕ್ಷಕ ಗೌತಮ್ ತಿಳಿಸಿದರು.
    ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಅಜರ್ಿದಾರರು ಸಲ್ಲಿಸಿರುವ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಹುಳಿಯಾರಿನ ಗುರುಪ್ರಸಾದ್ರವರು ಸಲ್ಲಿಸಿರುವ ದೂರಿನ ಅನ್ವಯ ಹುಳಿಯಾರಿನ ಪ್ರತಿಷ್ಠಿತ ಆರ್.ಟಿ.ಇ ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿರುವ ಬಗ್ಗೆ ಹಾಗೂ ರಂಗಯ್ಯ ಎಂಬುವವರು ಸಲ್ಲಿಸಿರುವ ಅಜರ್ಿಯಂತೆ ಪುರಸಭಾ ವ್ಯಾಪ್ತಿಯ 7ನೇ ವಾಡರ್್ನ ಕನ್ಸ್ರ್ವೆನ್ಸಿ ಜಾಗದಲ್ಲಿ ಕಲ್ಲು ಕಂಬ ಹಾಕಿದ್ದು ಅದನ್ನು ತೆರವುಗೊಳಿಸಲು ಪುರಸಭೆಗೆ ಅಜರ್ಿ ನೀಡಿದರೂ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ಅಜರ್ಿ ಸಲ್ಲಿಸಿದ್ದಾರೆ.
    ಶೆಟ್ಟಿಕೆರೆ ಹೋಬಳಿಯ ದುಗಡಿಹಳ್ಳಿ ಗ್ರಾ.ಪಂ.ಸದಸ್ಯ ದಯಾನಂದ್ ಸಲ್ಲಿಸಿರುವ ಅಜರ್ಿಯಲ್ಲಿ ಅಜ್ಜೇನಹಳ್ಳಿ ಗ್ರಾಮದಲ್ಲಿ 63ಕೆವಿ ಟ್ರಾನ್ಸ್ಫಾರಂ ಪೆಟ್ಟಿಗೆಯು ಮೂರು ಬಾರಿ ಕೆಟ್ಟಿದ್ದರೂ ಇದರ ಬಗ್ಗೆ ದೂರು ನೀಡಿ, 100ಕೆವಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲದೆ ಬಗ್ಗೆ ದೂರು ನೀಡಿದ್ದಾರೆ.
    ಹುಳಿಯಾರು ಹೋಬಳಿಯ ಕೇಶವಾಪುರ ಗ್ರಾಮದ ಲಿಂಗರಾಜು ಹಾಗೂ  ಗ್ರಾಮಸ್ಥರು ನೀಡಿರುವ ಅಜರ್ಿಯು ಕೇಶವಾಪುರ ಗ್ರಾಮದ ಸವರ್ೆ ನಂ. 08/03 ಮತ್ತು ಸವರ್ೆ ನಂ.3/04ರಲ್ಲಿನ ಕ್ರಮವಾಗಿ 71/2 ಗುಂಟೆ ಮತ್ತು 08 ಗುಂಟೆ ಹೊಸದುರ್ಗ-ಹುಳಿಯಾರು ರಸ್ತೆಗೆ ಹೊಂದಿಕೊಂಡಿರುವ ಸಕರ್ಾರಿ ಜಮೀನನ್ನು ಕೆಲವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
    ಹುಳಿಯಾರು ಹೋಬಳಿಯ ಬರಕನಹಾಳ್ ಪಂಚಾಯ್ತಿಯಲ್ಲಿ ಆರ್.ಐ ಮತ್ತು ರೆವಿನ್ಯು ಸೆಕ್ರೆಟರಿಗಳು ಸಣ್ಣ ಹಿಡುವಳಿದಾರರಿಗೆ ನೀಡಬೇಕಾದ ಚೆಕ್ಕನ್ನು ಸರಿಯಾದ ವ್ಯಕ್ತಿಗಳಿಗೆ ನೀಡದೆ ತಮಗೆ ಬೇಕಾದ ವ್ಯಕ್ತಿಗಳಿಗೆ ಮನಸೋ ಇಚ್ಛೆ ನೀಡಿದ್ದಾರೆ ಎಂದು ಶಿಡ್ಲಘಟ್ಟದ ಕುಮಾರ್ರವರು ದೂರು ನೀಡಿದ್ದಾರೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ತಹಶೀಲ್ದಾರ್ ಕೃಷ್ಣಸ್ವಾಮಿ, ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಉಪಸ್ಥಿತರಿದ್ದರು.
 
aPÀÌ£ÁAiÀÄPÀ£ÀºÀ½îAiÀÄ°è £ÀqÉzÀ ¸ÀPÁðj vÁ.DAiÀÄĵï D¸ÀàvÉæ £ÀÆvÀ£À PÀlÖqÀªÀ£ÀÄß ±Á¸ÀPÀ ¹.©.¸ÀÄgÉñï¨Á§Ä GzÁÏn¹zÀgÀÄ. F ¸ÀAzÀ¨sÀðzÀ°è f.DAiÀÄÄµï ªÉÊzÁå¢üPÁj qÁ.¸ÀAfêïªÀÄÆwð, f.¥ÀA.¸ÀzÀ¸Éå eÁ£ÀªÀÄä, E.N.wªÀÄäAiÀÄå G¥À¹ÜvÀjzÀÝgÀÄ.

Monday, March 11, 2013



ಚಿ.ನಾ.ಹಳ್ಳಿ ಪುರಸಭೆಗೆ ಜೆಡಿಎಸ್ ಪಕ್ಷ 18 ಸ್ಥಾನ ,  ಕಾಂಗ್ರೆಸ್ 3, ಕೆ.ಜೆ.ಪಿ 2 ಸ್ಥಾನ ಬಿಜೆಪಿ ಶೂನ್ಯ ಫಲಿತಾಂಶ.
ಚಿಕ್ಕನಾಯಕನಹಳ್ಳಿ,ಮಾ.11 : ಚಿಕ್ಕನಾಯಕನಹಳ್ಳಿ ಪುರಸಭೆಯ 23 ವಾಡರ್್ಗಳಲ್ಲಿ ಜೆಡಿಎಸ್ ಪಕ್ಷ 18 ಸ್ಥಾನ, ಕಾಂಗ್ರೆಸ್ 3 ಸ್ಥಾನ, ಕೆಜೆಪಿ2 ಸ್ಥಾನಗಳನ್ನು ಪಡೆದರೆ ಬಿಜೆಪಿ ಶೂನ್ಯ ಫಲಿತಾಂಶ ಪಡೆದಿದೆ.
ಪಟ್ಟಣದ ಜೆ.ಡಿ.ಎಸ್.ಕಳೆದ ಚುನಾವಣೆಗಿಂತ ಒಂದು ಸ್ಥಾನವನ್ನು ಹೆಚ್ಚಿಗೆ ಪಡೆಯುವ ಮೂಲಕ ತನ್ನ ಪ್ರಭಾವವನ್ನು  ಉಳಿಸಿಕೊಂಡಿದ್ದು, ಪಟ್ಟಣದಲ್ಲಿ ಜೆ.ಡಿ.ಎಸ್.ಗೆ ಸುಬದ್ರಕೋಟೆಯಾಗಿ ಉಳಿಸಿಕೊಂಡಿರುವ ಬಗ್ಗೆ ಪಕ್ಷದ ವರಿಷ್ಠರಿಗೆ ಸುದ್ದಿ ರವಾನಿಸಿದ್ದಾರೆ,  17ನೇ ವಾಡರ್್ನ ಮಟ್ಟಿಗೆ ಜೆ.ಡಿ.ಎಸ್.ಗೆ ಖುಷಿಕೊಟ್ಟಿಲ್ಲ ಶಾಸಕರ ಸಹೋದರನ ವಿರುದ್ದ ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್ ತಮ್ಮ ಸಹೋದರನನ್ನು ಕಣಕ್ಕಿಳಿಸಿದ್ದರಿಂದ ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಿತ್ತು,  ಸಿ.ಪಿ.ಮಹೇಶ್ ಪುನರ್ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ರವರಿಗೆ  ವಾಡರ್್ 15ರ ಮತದಾರರು ವಿಶ್ರಾಂತಿಕೊಟ್ಟಿದ್ದಾರೆ, ಅಪ್ಪನ ಕಾಲದಿಂದಲೂ ಸೋಲನ್ನರಿಯದ ಸಿ.ಬಸವರಾಜು ಸೋಲೊಪ್ಪಿಕೊಳ್ಳಬೇಕಿದೆ, ಜೆ.ಸಿ.ಮಾಧುಸ್ವಾಮಿ ಕಳೆದ ಬಾರಿ ಒಂದು ಸ್ಥನಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಗಿತ್ತು ಆದರೆ ಈ ಬಾರಿ ಎರಡು ಸ್ಥಾನಗಳನ್ನು ಪಡೆದಿದ್ದಾರೆ. ಬಿ.ಜೆ.ಪಿ. ಖಾತೆಯನ್ನು ತೆರೆದಿಲ್ಲ.
    20ನೇ ವಾಡರ್್ನ ಜೆ.ಡಿ.ಎಸ್.ನ ಸಿ.ಆರ್.ಗೀತಾ ತನ್ನ ಎದುರಾಳಿಗಿಂತ 347 ಮತಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ಇಡೀ ಪಟ್ಟಣದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಮೊದಲ ಅಬ್ಯಾಥರ್ಿ ಎನಿಸಿಕೊಂಡಿದ್ದಾರೆ, ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಎರಡನೇ ಅಬ್ಯಾಥರ್ಿ ಜೆ.ಡಿ.ಎಸ್.ನ ಪುಷ್ಪ, ಮೂರನೇಯವರು 3ನೇ ವಾಡರ್್ನಿಂದ ಸ್ಪಧರ್ಿಸಿದ್ದ  ಜೆ.ಡಿ.ಎಸ್.ನ ಸಿ.ಡಿ.ಚಂದ್ರಶೇಖರ್ ತನ್ನ ಎದುರಾಳಿಗಿಂತ 228 ಮತಗಳನ್ನು ಪಡೆದು ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿದವರ ಪೈಕಿ ಮೂರನೇ ಸ್ಥಾನ ಪಡೆದಿದ್ದಾರೆ.
ಚುನಾವಣೆಯಲ್ಲಿ ಅಬ್ಯಥರ್ಿವಾರು ಮತ ಪಡೆದ ವಿವರ :
1ನೇ ವಾಡರ್್ : ರೂಪ 149(ಕೆಜೆಪಿ ಜಯ), ದಾಕ್ಷಾಯಣಮ್ಮ138(ಜೆಡಿಎಸ್), ವರಮಹಾಲಕ್ಷ್ಮಿ44(ಪಕ್ಷೇತರ),ಹೆಚ್.ಸಿ.ಶ್ಯಾಮಲ24(ಬಿಜೆಪಿ), ವಿಶಾಲಾಕ್ಷಿ27(ಬಿ.ಎಸ್.ಆರ್),  2ನೇ ವಾಡರ್್ ಇಂದಿರಾ452(ಜೆಡಿಎಸ್ ಜಯ), ನಿರ್ಮಲ265(ಕೆಜೆಪಿ), ಸುಕನ್ಯ53(ಕಾಂಗ್ರೆಸ್), ಕೆಂಪಮ್ಮ52(ಬಿಜೆಪಿ) 3ನೇವಾಡರ್್ ಸಿ.ಡಿ.ಚಂದ್ರಶೇಖರ್479(ಜೆಡಿಎಸ್ ಜಯ), ಸುರೇಶ್ಕುಮಾರ್.ಸಿ.ಟಿ251(ಕೆಜೆಪಿ), 4ನೇ ವಾಡರ್್ ಎಮ್.ಡಿ.ನೇತ್ರಾವತಿ 399(ಕೆಜೆಪಿ ಜಯ), ಕೆ.ಶೈಲಜ(202), ವೈ.ಎಸ್.ದೊಡ್ಡಯ್ಯ41(ಬಿಜೆಪಿ),  5ನೇ ವಾಡರ್್ ಎಂ.ಕೆ.ರವಿಚಂದ್ರ 327(ಜೆಡಿಎಸ್ ಜಯ), ನಾಗಕುಮಾರ್175(ಪಕ್ಷೇತರ), ಚೇತನ್ಪ್ರಸಾದ್50(ಬಿಜೆಪಿ) 6ನೇ ವಾಡರ್್ ಧರಣಿಲಕ್ಕಪ್ಪ328(ಕಾಂಗ್ರೆಸ್ ಜಯ), ಕೆ.ಎಸ್.ಶಾಹೇದಾ239(ಜೆಡಿಎಸ್), ಪುಷ್ಪಾವತಿ91(ಬಿ.ಎಸ್.ಆರ್), 7ನೇವಾಡರ್್ ಸಿ.ಎಮ್.ರಾಜಶೇಖರ(ಜೆಡಿಎಸ್ ಅವಿರೋಧಆಯ್ಕೆ)  8ನೇ ವಾಡರ್್ ಮಲ್ಲಿಕಾಜರ್ುನಯ್ಯ 313(ಜೆಡಿಎಸ್ ಜಯ), ಮಹಬೂಬ್162(ಕೆಜೆಪಿ), ಕೆ.ಬಿ.ಶಿವಣ್ಣ12(ಕಾಂಗ್ರೆಸ್) 9ನೇ ವಾಡರ್್ ರೇಣುಕಮ್ಮ 170(ಕಾಂಗ್ರೆಸ್ ಜಯ), ಸರಸ್ವತಿ138(ಬಿಜೆಪಿ), ಹೆಚ್.ಎಮ್.ರಾಜಮ್ಮ110(ಕೆಜೆಪಿ), ಕಮಲಮ್ಮ97(ಜೆಡಿಎಸ್), 10ನೇ ವಾಡರ್್ ಸಿ.ಎಸ್.ರಮೇಶ್320(ಜೆಡಿಎಸ್ ಜಯ), ಶ್ರೀನಿವಾಸಮೂತರ್ಿ125(ಬಿಜೆಪಿ),ಸಿ.ವಿ.ರೇಣುಕಮೂತರ್ಿ62(ಕೆಜೆಪಿ), ಸಿ.ಜಿ.ಚಂದ್ರಶೇಖರ್13(ಕಾಂಗ್ರೆಸ್),  11ನೇ ವಾಡರ್್ ಸಿ.ಕೆ.ಕೃಷ್ಣಮೂತರ್ಿ 165(ಜೆಡಿಎಸ್ ಜಯ), ಈಶ್ವರಭಾಗವತ್158(ಬಿಜೆಪಿ), ಸಿ.ಜಿ.ರೇಣುಕಾಪ್ರಸಾದ್123(ಪಕ್ಷೇತರ), ಸಿ.ಕೆ.ಕುಮಾರಸ್ವಾಮಿ09(ಕಾಂಗ್ರೆಸ್), 12ನೇವಾಡರ್್ತಿಮ್ಮಪ್ಪ320(ಜೆಡಿಎಸ್ ಜಯ), ಜಯಲಕ್ಷ್ಮಿ294(ಕಾಂಗ್ರೆಸ್),ಧನಪಾಲ್32(ಬಿಜೆಪಿ), 13ನೇವಾಡರ್್ ಸಿ.ಎಂ.ರಂಗಸ್ವಾಮಯ್ಯ311(ಜೆಡಿಎಸ್ ಜಯ), ಗೋಪಾಲಕೃಷ್ಣ178(ಕೆಜೆಪಿ),  14ನೇವಾಡರ್್ ಹೆಚ್.ಬಿ.ಪ್ರಕಾಶ್281(ಜೆಡಿಎಸ್ ಜಯ),ಸಿ.ಆರ್.ಶಶಿಶೇಖರ್133(ಕೆಜೆಪಿ), ಸಿ.ಕೆ.ಶಾಂತಕುಮಾರ್20(ಬಿಜೆಪಿ), ಕೆ.ಜಿ.ಕೃಷ್ಣೆಗೌಡ06(ಕಾಂಗ್ರೆಸ್),  15ನೇ ವಾಡರ್್ ಮಲ್ಲೇಶಯ್ಯ272(ಜೆಡಿಎಸ್ ಜಯ), ಸಿ.ಬಸವರಾಜು248(ಕಾಂಗ್ರೆಸ್), 16ನೇ ವಾಡರ್್ ಮಹಮದ್ಖಲಂದರ್312(ಜೆಡಿಎಸ್),ಬಾಬುಸಾಹೇಬ್205(ಕೆಜೆಪಿ), ಮಹಮದ್ಅಲ್ತಾಫ್26(ಕಾಂಗ್ರೆಸ್),  17ನೇ ವಾಡರ್್ ಸಿ.ಪಿ.ಮಹೇಶ್310(ಕಾಂಗ್ರೆಸ್ ಜಯ), ಸಿ.ಬಿ.ತಿಪ್ಪೇಸ್ವಾಮಿ297(ಜೆಡಿಎಸ್),ಸಿ.ಎಮ್.ಗಂಗಾಧರಯ್ಯ10(ಬಿಜೆಪಿ), ದುರ್ಗಮ್ಮ8(ಪಕ್ಷೇತರ), 18ನೇವಾಡರ್್ ಪ್ರೇಮ316(ಜೆಡಿಎಸ್ ಜಯ), ಸಿ.ಎಲ್.ಶಾಂತಮ್ಮ269(ಕಾಂಗ್ರೆಸ್),  19ನೇ ವಾಡರ್್ ಸಿ.ಟಿ.ದಯಾನಂದ್296(ಜೆಡಿಎಸ್ ಜಯ), ಸಿ.ಕೆ.ಲೋಕಶೇಶ್222(ಪಕ್ಷೇತರ), ಸಿ.ಡಿ.ಲಕ್ಷ್ಮಯ್ಯ07(ಕಾಂಗ್ರೆಸ್),  20ನೇ ವಾಡರ್್ ಸಿ.ಆರ್.ಗೀತಾ410(ಜೆಡಿಎಸ್ ಜಯ), ಶಕುಂತಲಮ್ಮ63(ಬಿಜೆಪಿ), 21ನೇವಾಡರ್್ ಪುಷ್ಪ420(ಜೆಡಿಎಸ್), ಹೇಮಾವತಿ151(ಬಿಜೆಪಿ),22ನೇವಾಡರ್್ರೇಣುಕಮ್ಮ425(ಜೆಡಿಎಸ್ ಜಯ),ಮಾಲಾ125(ಬಿಜೆಪಿ)  23ನೇವಾಡರ್್ ಅಶೋಕ್ 467(ಜೆಡಿಎಸ್ ಜಯ),ಸಿ.ಎಚ್.ನಿರುವಾಣಸಿದ್ದಯ್ಯ202(ಕಾಂಗ್ರೆಸ್), ಲಿಂಗದೇವರು94(ಬಿ.ಎಸ್.ಆರ್),ಸಿ.ಎಸ್.ಗಂಗಾಧರಯ್ಯ31(ಬಿಜೆಪಿ),ಕೆಂಚಯ್ಯ10(ಪಕ್ಷೇತರ  ಅಭ್ಯಥರ್ಿಗಳು ಮತಗಳನ್ನು ಪಡೆದಿದ್ದಾರೆ.
aPÀÌ£ÁAiÀÄPÀ£ÀºÀ½î ¥ÀÄgÀ¸À¨sÉUÉ DAiÉÄÌAiÀiÁzÀ eÉ.r.J¸ï.C§åyðUÀ¼ÀÄ «dAiÉÆÃvÀìªÀ DZÀj¹zÀgÀÄ,  F ¸ÀAzÀ¨sÀðzÀ°è «eÉÃvÀgÁzÀ ¹.n.zÀAiÀiÁ£ÀAzÀ, ¹.PÉ.PÀȵÀÚªÀÄÆwð, ¹.r.ZÀAzÀæ±ÉÃRgï, ¹.J¸ï.gÀªÉÄñï, JA.PÉ.gÀ«ZÀAzÀæ, ¹.JA.gÀAUÀ¸Áé«Ä ªÉÄgÀªÀtÂUÉ £ÀqɹzÀgÀÄ.

 
aPÀÌ£ÁAiÀÄPÀ£ÀºÀ½î 17£Éà ªÁqïð£À°è PÁAUÉæ¸ï C§åyð ¹.¦.ªÀĺÉÃ±ï «dAiÉÆÃvÀìªÀ DZÀj¹zÀgÀÄ.

Wednesday, March 6, 2013

ಚಿಕ್ಕನಾಯಕನಹಳ್ಳಿ,ಮಾ.06 : ಪುರಸಭೆ ಮತದಾನ ಕೇಂದ್ರಗಳ ಪಟ್ಟಿ
  ವಾಡರ್್ ಸಂಖ್ಯೆ.         ಮತದಾನ ಕೇಂದ್ರ                       ಒಟ್ಟುಮತಗಳು
   1.              ಸಕರ್ಾರಿ ಸ್ವತಂತ್ರ ಪದವಿಪೂರ್ವ ಕಾಲೇಜ್    537
   2.      ಸಕರ್ಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ,ಜೋಗಿಹಳ್ಳಿ    986
   3          ಸಕರ್ಾರಿ ಪ್ರೌಢಶಾಲೆ,ಚಿ.ನಾ.ಹಳ್ಳಿ                  906
   4.          ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,ದಬ್ಬೇಗಟ್ಟ   760
   5.          ದೇಶೀಯ ವಿದ್ಯಾಪಿಠ ಬಾಲಕರ ಪ್ರೌಢಶಾಲೆ,ಚಿ.ನಾ.ಹಳ್ಳಿ  671
   6       ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ಹೊಸಕಟ್ಟಡ)ಕೇದಿಗೆಹಳ್ಳಿ.  782.
   7.       ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ಹೊಸಕಟ್ಟಡ) ಕುರುಬರಹಳ್ಳಿ 873.
   8.       ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ,ಚಿ.ನಾ.ಹಳ್ಳಿ, 566.
   9.       ಟಿ.ಎ.ಪಿ.ಸಿ.ಎಂ.ಎಸ್.ಕಟ್ಟಡ,ಚಿ.ನಾ.ಹಳ್ಳಿ.           625.
   10.      ಮುನಿಸಿಪಲ್ ಸಮುದಾಯ ಭವನ,ಚಿ.ನಾ.ಹಳ್ಳಿ.     668.
   11.      ಸಕರ್ಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕುರುಬರ ಶ್ರೇಣಿ.  519.
   12.      ಎನ್.ಟಿ.ಜಿ.ಎಂ.ಎಸ್.(ಬಲಭಾಗ)                  800.
   13.      ಎನ್.ಟಿ.ಜಿ.ಎಂ.ಎಸ್.(ಎಡಭಾಗ)                  605
   14.      ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(ನೀರು ಬಾಗಿಲು)  493
   15.      ಪುರಸಭೆ ಕಟ್ಟಡ            610
   16.      ಜಿ.ಎಂ.ಪಿ.ಎಸ್.ಕುರುಬರ ಶ್ರೇಣಿ        640
   17.      ಜಿ.ಹೆಚ್.ಪಿ.ಎಸ್. ಕಂಬಳಿ ಸೊಸೈಟಿ ಹತ್ತಿರ      680
   18.      ಜಿ.ಹೆಚ್.ಪಿ.ಎಸ್.(ಹಳೆ ಕಟ್ಟಡ) ಕಂಬಳಿ ಸೊಸೈಟಿ ಹತ್ತಿರ  691.
   19.      ಸಕರ್ಾರಿ ಜನರಲ್ ಹಿರಿಯ ಪ್ರಾಥಮಿಕ ಪಾಠಶಾಲೆ(ದಕ್ಷಿಣ) ಶುಕ್ರವಾರದ  ಬಾಗಿಲು.615
   20.      ಸಕರ್ಾರಿ ಜನರಲ್ ಹಿರಿಯ ಪ್ರಾಥಮಿಕ ಪಾಠಶಾಲೆ (ಉತ್ತರ)ಶುಕ್ರವಾರದಬಾಗಿಲು.542
   21.       ಜಿ.ಹೆಚ್.ಪಿ.ಎಸ್.ನೀರುಬಾಗಿಲು (ಪೂರ್ವ)ಹೊಸಕಟ್ಟಡ    741
   22.      ಡಾ. ಅಂಬೇಡ್ಕರ್ ಪ್ರೌಢಶಾಲೆ ಹುಳಿಯಾರ್ ರಸ್ತೆ.     725
   23.      ಅಂಗನವಾಡಿ ಕೇಂದ್ರ ಅಂಬೇಡ್ಕರ್ ನಗರ      988.


ಚಿಕ್ಕನಾಯಕನಹಳ್ಳಿ,ಮಾ.06 : ತಾಲ್ಲೂಕಿನ ಕಂದಿಕೆರೆ ಶಾಲಾ ಆವರಣದಲ್ಲಿ ಸಂಜೆ ಆರು ಮೂವತ್ತರ ಸುಮಾರಿಗೆ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ 14 ಆರೋಪಿಗಳನ್ನ ದಸ್ತಗಿರಿ ಮಾಡಿದ್ದು ಆರೋಪಿಗಳಿಂದ ರೂ 7500 ವಶಪಡಿಸಿಕೊಳ್ಳಲಾಗಿದೆ ಎಂದು ಚಿ.ನಾ.ಹಳ್ಳಿ ಪೊಲೀಸರು ತಿಳಿಸಿದ್ದಾರೆ.       

 

Thursday, February 28, 2013

ಚಿ.ನಾ.ಹಳ್ಳಿ ಕ್ಷೇತ್ರದ ಮುಂದಿನ ಎಂ.ಎಲ್.ಎ.ಚುನಾವಣೆಯ ಅಬ್ಯಾಥರ್ಿಕೆ.ಎಸ್.ಕಿರಣ್ಕುಮಾರ್. ಬಿ.ಜೆ.ಪಿ.ರಾಜ್ಯಾಧ್ಯಕ್ಷ
                      
ಚಿಕ್ಕನಾಯಕನಹಳ್ಳಿ,ಜ.28 : ಮುಂದಿನ ವಿಧಾನಸಭಾ ಚುನಾವಣೆಗೆ ಭಾಜಪ ಪಕ್ಷದಿಂದ ಕೆ.ಎಸ್.ಕಿರಣ್ಕುಮಾರ್ ಸ್ಪಧರ್ಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಘೋಷಿಸಿದರು.
    ಪಟ್ಟಣದ ಪುರಸಭಾ ವಾಡರ್್ಗಳಿಗೆ ರೋಡ್ ಶೋ ಮೂಲಕ ಭೇಟಿ ನೀಡಿ ನಂತರ ಮಾತನಾಡಿದ ಅವರು ಕಳೆದ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಜಪ ಪಕ್ಷವು ರಾಜ್ಯದ 4970 ಕ್ಷೇತ್ರದಲ್ಲಿ 1400 ಸ್ಥಾನಗಳನ್ನು ಪಡೆದಿತ್ತು, ಈ ಬಾರಿ 2800ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷ ಪಡೆಯುವ ವಿಶ್ವಾಸವಿದೆ ಎಂದರು.
    ಕಳೆದ 60 ವರ್ಷದಿಂದ ರಾಜ್ಯದಲ್ಲಿ ಆಗದಿರುವ ಅಭಿವೃದ್ದಿಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಗಿದೆ, ಈ ಕಾರಣದಿಂದಲೇ ರಾಜ್ಯದ ಜನ ಮುಂದೆಯೂ ಬಿಜೆಪಿ ಸಕರ್ಾರವನ್ನು ಅಧಿಕಾರಕ್ಕೆ ತಂದರೆ ನಮ್ಮ ಎಲ್ಲಾ ಯೋಜನೆಗಳೂ ಪೂರ್ಣಗೊಳಲಿದೆ ಎಂದರದಲ್ಲ,  ದೇಶದ ಅಭಿವೃದ್ದಿಯೂ ಬಿಜೆಪಿ ಮುಖಾಂತರವೇ ಆಗಲಿದೆ ಎಂದರು.
    ರಾಜ್ಯದಲ್ಲಿ ಭಾಜಪ ಸಕರ್ಾರ ಆರಂಭಿಸಿರುವ ಕಾಮಗಾರಿಗಳನ್ನು ಪಕ್ಷ ಮತ್ತೆ ಅಧಿಕಾರ ಹಿಡಿದು ಕಾಮಗಾರಿಗಳನ್ನು ಪೂರ್ಣಗೊಳಿಸಲಿದೆ ಎಂದರು.
    ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ತಾಲ್ಲೂಕಿಗೆ ಹರಿಯಲಿರುವ ಹೇಮಾವತಿ ನೀರಿನ ಕಾಮಗಾರಿ ಕೇವಲ ಇನ್ನು ಒಂದು ವಾರದಲ್ಲಿ ಆರಂಭಗೊಳ್ಳಲಿದೆ, ಚಿಕ್ಕನಾಯಕನಹಳ್ಳಿ ಕೆರೆಗೂ ಸ್ವಾಭಾವಿಕವಾಗಿ ನೀರು ಹರಿಯಲಿದೆ ಎಂದರಲ್ಲದೆ ಪುರಸಭಾ ಚುನಾವಣೆಯಲ್ಲಿ ಭಾಜಪ ಅಭ್ಯಾಥರ್ಿಗಳನ್ನು ಚುನಾಯಿಸಬೇಕೆಂದು  ಮನವಿ ಮಾಡಿದರು.
    ಇದಕ್ಕೂ ಮುನ್ನ ಭಾಜಪ ಪಕ್ಷದ ಕಛೇರಿಯಿಂದ ಪಟ್ಟಣದ ಪುರಸಭಾ ವಾಡರ್್ಗಳಿಗೆ ಕಾರ್ಯಕರ್ತರೊಂದಿಗೆ ವಾಹನದಲ್ಲಿ ಭೇಟಿ ನೀಡಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಭಾಜಪ ಅಧ್ಯಕ್ಷ ಶಿವಪ್ರಸಾದ್, ತಾ.ಭಾಜಪ ಅಧ್ಯಕ್ಷ ಮಿಲ್ರ್ಟಿಶಿವಣ್ಣ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಶ್ರೀನಿವಾಸಮೂತರ್ಿ, ಬರಗೂರು ಬಸವರಾಜು, ಅಭಾವಿಪ ತಾ.ಪ್ರಮುಖ್ ಚೇತನ್ಪ್ರಸಾದ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯ
ಚಿಕ್ಕನಾಯಕನಹಳ್ಳಿ,ಫೆ.28:  ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯದ ಸಂಚಾರವನ್ನು ಮಾಚರ್್ 1ರಿಂದ 3ರವರೆಗೆ ತಾಲ್ಲೂಕಿನಾದ್ಯಂತ ಏರ್ಪಡಿಸಲಾಗಿದೆ.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿಯವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು 1ರ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶ ಕೆ.ಎಂ.ರಾಜಶೇಖರ್ ಉದ್ಘಾಟನೆ ನೆರವೇರಿಸಲಿದ್ದಾರೆ.
    ಪ್ರಧಾನ ಸಿವಿಲ್ ಜಡ್ಜ್ ಕೆ.ನಿರ್ಮಲ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಅಧಿಕ ಸಿವಿಲ್ ಜಡ್ಜ್ ಎನ್.ವೀಣಾ, ತಹಶೀಲ್ದಾರ್ ಕೆ.ಟಿ.ಕೃಷ್ಣಸ್ವಾಮಿ, ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ, ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆ.ನಿರಂಜನ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಬಿ.ಇ.ಓ ಎಸ್.ಸಿ.ನಾಗೇಶ್, ವೃತ್ತ ನಿರೀಕ್ಷಕ ಕೆ.ಪ್ರಭಾಕರ್ ಉಪಸ್ಥಿತರಿರುವರು.
    ಮಾಚರ್್ 1ರ ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ವಿ.ಶಿವಾನಂದ್ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ವಿಷಯ ಪ್ರಸ್ತಾಪಿಸಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ.     ಮಧ್ಯಾಹ್ನ 1.30ಕ್ಕೆ ಮುದ್ದೇನಹಳ್ಳಿ ಗ್ರಾ.ಪಂ.ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಮಾತನಾಡಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ತಿಳಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಸಿ.ಕಮಲಮ್ಮಜಯಣ್ಣ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಹೆಚ್.ಕೆ.ನಿರಂಜನ್, ಜಿ.ಎಸ್.ಚನ್ನಬಸಪ್ಪ, ಎಂ.ಮಹಾಲಿಂಗಯ್ಯ ಉಪಸ್ಥಿತರಿರುವರು. ಸಂಜೆ 4ಕ್ಕೆ ಚಿ.ನಾ.ಹಳ್ಳಿ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ಎನ್.ಶೇಖರ್ ಬಾಲ ಕಾಮರ್ಿಕ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಮೋಟಾರ್ ವಾಹನ ಕಾಯ್ದೆ ಹಾಗೂ ವಾಹನ ಪರವಾನಗಿ ಬಗ್ಗೆ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಕೆ.ಎಸ್.ಚಂದ್ರಶೇಖರ್, ಕೆ.ಸಿ.ಬಸವರಾಜು ಉಪಸ್ಥಿತರಿರುವರು.
    ಮಾಚರ್್ 2ರ ಶನಿವಾರ ತೀರ್ಥಪುರ ಗ್ರಾ.ಪಂ.ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಎರಡನೇ ದಿನದ ಕಾರ್ಯಕ್ರಮ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷೆ ಪದ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರುಗಳಾದ ಹೆಚ್.ಟಿ.ಹನುಮಂತಯ್ಯ ಕೌಟುಂಬಿಕೆ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಕೆ.ಎಸ್.ಚಂದ್ರಶೇಖರ್ ಮಧ್ಯಸ್ಥಿಕೆ ಕೇಂದ್ರದ ಮಹತ್ವ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಕೀಲರಾದ ಎಂ.ವಿ.ಶಿವಾನಂದ, ಮಾರುಮರ್ಧನ್ ಉಪಸ್ಥಿತರಿರುವರು. ಮಧ್ಯಾಹ್ನ 1.30ಕ್ಕೆ ಬರಶಿಡ್ಲೆಹಳ್ಳಿ ಶಾಲಾ ಆವರಣದಲ್ಲಿ ವಕೀಲರುಗಳಾದ ಮೋಹನ್ಕುಮಾರ್ ಜನನ ಮತ್ತು ಮರಣ ನೊಂದಣಿ ಕಾಯ್ದೆ, ಎ.ಎಂ.ಮಂಜುನಾಥ್ ಉಯಿಲ್(ವಿಲ್) ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4.30ಕ್ಕೆ ತಾಲ್ಲೂಕು ಕಛೇರಿ ಆವರಣದಲ್ಲಿ ಜಮೀನು ಮಂಜುರಾತಿ ಹಾಗೂ ನೊಂದಣಿ ಕಾಯ್ದೆ ಬಗ್ಗೆ ವಕೀಲ ಹೆಚ್.ಎಸ್.ಜ್ಞಾನಮೂತರ್ಿ ಹಾಗೂ ವಕೀಲ ಹೆಚ್.ಎ.ಹಬೀಬುಲ್ಲಾ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ. 
    ಮಾಚರ್್ 3ರಂದು ಬೆಳಗುಲಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಇರುವ ಸವಲತ್ತು, ಆಸ್ತಿ ಹಕ್ಕು ಬಗ್ಗೆ ಹಾಗೂ ಮಧ್ಯಾಹ್ನ 2ಕ್ಕೆ ಹುಳಿಯಾರಿನ ಅಭೇಡ್ಕರ್ ಭವನದಲ್ಲಿ ಮಹಿಳೆ ಮತ್ತು ಕಾನೂನು, ಹಿಂದೂ ವಿವಾಹ ಕಾಯ್ದೆ  ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಸಂಜೆ 5ಕ್ಕೆ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
 

Wednesday, February 27, 2013

ಮಹಿಳೆಯ  ರೇಪ್, ಮರ್ಡರ್: ಸುಟ್ಟು ಕರಕಲಾಗಿರುವ  ದೇಹ
                          
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಜೋಗಿಹಳ್ಳಿಯ ಹೊಲ ಒಂದರಲ್ಲಿ ಮಹಿಳೆಯೊಬ್ಬರನ್ನು ಮಾನಭಂಗ ಮಾಡಿ, ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ.
    ಜೋಗಿಹಳ್ಳಿಯ ನಂಜುಂಡಯ್ಯ ಎಂಬುವರ ಹೊಲದಲ್ಲಿ ಈ ಕುಕೃತ್ಯ ನಡೆದಿದ್ದು, ಮಹಿಳೆಯ ಮಮರ್ಾಂಗವನ್ನು ಆಸಿಡ್ ಅಥವಾ  ಪೆಟ್ರೋಲ್ ಹಾಕಿ ಸುಟ್ಟು ನಂತರ ಇಡೀ ದೇಹವನ್ನು ಗರಿ ಮತ್ತಿತರ ಕೃಷಿ ತ್ಯಾಜ್ಯದ ಜೊತೆಗೆ ಆಸಿಡ್ನಿಂದ  ಸುಟ್ಟಿರ ಬಹುದು ಎಂದು ಅಂದಾಜಿಸಲಾಗಿದ್ದು, ಮಹಿಳೆಯ ಮುಖ ಹಾಗೂ ದೇಹ ಗುರುತಿಸಲಾಗದಷ್ಟು ಕರಕಲಾಗಿದೆ. ಮೃತ ಮಹಿಳೆ ಸುಮಾರು 35 ರಿಂದ 40 ವರ್ಷದೊಳಗಿರ ಬಹುದೆಂದು ಅಂದಾಜಿಸಲಾಗಿದ್ದು, ಹೊರಗೆಲ್ಲೋ ಕೊಲೆ ಮಾಡಿ ಜೋಗಿಹಳ್ಳಿ ಈ ಹೊಲಕ್ಕೆ ತಂದು ಸುಟ್ಟು ಹಾಕಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಯುವಾಗ ಮುಷ್ಟಿ ಬಿಗಿಹಿಡಿದಿದ್ದು, ಮುಷ್ಠಿ ಒಳಗೆ ಸೀರೆಯ ತುಂಡು ಸಿಕ್ಕಿದೆ, ಕಾಲನ ಬಳಿ ನೆರಳೆ ಬಣ್ಣದ ಲಂಗದ ತುಂಡಿದೆ, ಮೂಗಿನಲ್ಲಿ ಮೂಗುತಿ, ಕೊರಳಲ್ಲಿ ಚಿನ್ನದ ಸರವಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಕೋದಂಡರಾಮ ರೆಡ್ಡಿ, ಸಿ.ಪಿ.ಐ.ಕೆ.ಪ್ರಭಾಕರ್, ಪಿ.ಎಸೈ. ಗೋವಿಂದ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು. ಸಿ.ಪಿ.ಐ, ಕೆ.ಪ್ರಭಾಕರ್ ತನಿಖೆ ಕೈಗೊಂಡಿದ್ದಾರೆ.
    ಮೃತ ಮಹಿಳೆಯ ದೇಹವನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮಹಿಳೆಯ ಗುರುತು ಬಲ್ಲವರು ಚಿ.ನಾ.ಹಳ್ಳಿ ಸಿ.ಪಿ.ಐ.ರವರನ್ನು 9480802939, 9448659311 ಸಂಪಕರ್ಿಸಲು ಕೋರಿದೆ.
ಚಿ.ನಾ.ಹಳ್ಳಿ ಪುರಸಭೆ: 10 ನಾಮಪತ್ರಗಳು ವಾಪಸ್, 72ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಪುರಸಭೆಯ 23 ವಾಡರ್್ಗಳಿಂದ 10 ಜನ ಅಬ್ಯಾಥರ್ಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.
 ನಾಮ ಪತ್ರ ವಾಪಸ್    ಪಡೆದವರೆಂದರೆ ವಾಡರ್್ ಒಂದರಲ್ಲಿ ಪಕ್ಷೇತರ ಅಬ್ಯಾಥರ್ಿಗಳಾದ ಸಲ್ಮ, ವೀಣಾಶಂಕರ್, ವಾಡರ್್5ರಲ್ಲಿ ಸಿ.ಎನ್.ವಿಜಯಕುಮಾರ್, ವಾಡರ್್11ರಲ್ಲಿ ಸಿ.ಎನ್.ಮಂಜುನಾಥ್, ವಾಡರ್್12ರಲ್ಲಿ ಸಿ.ಬಿ.ಜಯಕುಮಾರ್, ಕೆಜೆಪಿಯ ಬಾಬು ಸಾಹೇಬ್, ವಾಡರ್್13ರಲ್ಲಿ ಟಿ.ಎಲ್.ಯಶೋದಮ್ಮ, ವಾಡರ್್15ರಲ್ಲಿ ಮಹಮದ್ ಸುಹೇಲ್, ವಾಡರ್್16ರಲ್ಲಿ ಅಬ್ದುಲ್ ಸಲಾಂ, ಮಹಮದ್ ಜಹೀರ್ ಉದ್ದೀನ್ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಇದರಲ್ಲಿ 9ಜನ ಪಕ್ಷೇತರರು, ಒಂದು ಕೆಜೆಪಿ ಅಬ್ಯಾಥರ್ಿಗಳಾಗಿದ್ದಾರೆ.
ಅಂತಿಮವಾಗಿ ವಾಡರ್್ವಾರು ಕಣದಲ್ಲಿರುವವರು: ವಾಡರ್್1: ದಾಕ್ಷಾಯಣಮ್ಮ(ಜೆಡಿಎಸ್),ರೇಖಾ(ಕಾಂಗ್ರೆಸ್),ಹೆಚ್.ಸಿ.ಶಾಮಲ(ಬಿಜೆಪಿ),ರೂಪ(ಕೆಜೆಪಿ),ವಿಶಾಲಾಕ್ಷಮ್ಮ(ಬಿಎಸ್ಆರ್) ಮತ್ತು ವರಮಹಾಲಕ್ಷ್ಮಿ(ಪಕ್ಷೇತರ). ಒಟ್ಟು=6
ವಾಡರ್್ 2: ಇಂದಿರಾ(ಜೆಡಿಎಸ್),ಸುಖನ್ಯಾ(ಕಾಂಗ್ರೆಸ್),ಕೆಂಪಮ್ಮ(ಬಿಜೆಪಿ),ನಿರ್ಮಲ(ಕೆಜೆಪಿ) ಒಟ್ಟು=4
ವಾಡರ್್ 3: ಸಿ.ಡಿ.ಚಂದ್ರಶೇಖರ್(ಜೆಡಿಎಸ್)&ಸಿ.ಟಿ.ಸುರೇಶ್ ಕುಮಾರ್(ಕೆಜೆಪಿ) ಒಟ್ಟು=2
ವಾಡರ್್ 4: ಕೆ.ಶೈಲಜ(ಜೆಡಿಎಸ್),ದೊಡ್ಡಮ್ಮ(ಬಿಜೆಪಿ),&ಎಂ.ಡಿ.ನೇತ್ರಾವತಿ(ಕೆಜೆಪಿ)=3
ವಾಡರ್್ 5: ಎಮ್.ಕೆ.ರವಿಚಂದ್ರ(ಜೆಡಿಎಸ್),ಚೇತನ್ಪ್ರಸಾದ್(ಬಿಜೆಪಿ) ಮತ್ತು ಸಿ.ಆರ್.ನಾಗಕುಮಾರ್ ಚೌಕಿಮಠ=3
ವಾಡರ್್ 6: ಕೆ.ಎಸ್.ಶಹೀದಾ(ಜೆಡಿಎಸ್),ಧರಣಿ ಲಕ್ಕಪ್ಪ(ಕಾಂಗ್ರಸ್), ಮೀನಾಕ್ಷಮ್ಮ(ಬಿಜೆಪಿ)&ಎನ್.ಪುಷ್ಪವತಿ(ಬಿಎಸ್ಆರ್)=4
ವಾಡರ್್ 7: ಸಿ.ಎಮ್.ರಾಜಶೇಖರ್(ಜೆಡಿಎಸ್)=1
ವಾಡರ್್ 8: ಮಲ್ಲಿಕಾಜರ್ುನಯ್ಯ(ಜೆಡಿಎಸ್),ಕೆ.ಬಿ.ಶಿವಣ್ಣ(ಕಾಂಗ್ರಸ್)&ಮೆಹಬೂಬ್(ಕೆಜೆಪಿ)=3
ವಾಡರ್್9: ಕಮಲಮ್ಮ(ಜೆಡಿಎಸ್),ರೇಣುಕಮ್ಮ(ಕಾಂಗ್ರಸ್),ಸರಸ್ವತಿ(ಬಿಜೆಪಿ),&ರಾಜಮ್ಮ(ಕೆಜೆಪಿ)=4
ವಾಡರ್್ 10: ಸಿ.ಎಸ್.ರಮೇಶ್(ಜೆಡಿಎಸ್),ಚಂದ್ರಶೇಖರ್(ಕಾಂಗ್ರಸ್),ಶ್ರೀನಿವಾಸ ಮೂತರ್ಿ(ಬಿಜೆಪಿ) ಮತ್ತು ರೇಣುಕ್ ಪ್ರಸಾದ್(ಕೆಜೆಪಿ)=4
ವಾಡರ್್11: ಸಿ.ಕೆ.ಕೃಷ್ಣಮೂತರ್ಿ(ಜೆಡಿಎಸ್),ಸಿ.ಕೆ.ಕುಮಾರಸ್ವಾಮಿ(ಕಾಂಗ್ರೆಸ್),ಈಶ್ವರಯ್ಯ(ಬಿಜೆಪಿ) ಮತ್ತು ರೇಣುಕ ಪ್ರಸಾದ್(ಪಕ್ಷೇತರ)=4
ವಾಡರ್್ 12: ತಿಮ್ಮಪ್ಪ(ಜೆಡಿಎಸ್),ಜಯಲಕ್ಷ್ಮಿ(ಕಾಂಗ್ರೆಸ್)&ಧನಪಾಲ್(ಬಿಜೆಪಿ)=3
ವಾಡರ್್ 13: ಸಿ.ಎಮ್.ರಂಗಸ್ವಾಮಿ(ಜೆಡಿಎಸ್),&ಗೋಪಾಲಕೃಷ್ಣ(ಕೆಜೆಪಿ)=2
ವಾಡರ್್ 14: ಹೆಚ್.ಬಿ.ಪ್ರಕಾಶ್(ಜೆಡಿಎಸ್),ಕೆ.ಜಿ.ಕೃಷ್ಣೇಗೌಡ(ಕಾಂಗ್ರೆಸ್),ಸಿ.ಕೆ.ಶಾಂತಕುಮಾರ್(ಬಿಜೆಪಿ)&ಶಶಿ ಶೇಖರ್(ಕೆಜೆಪಿ)=4
ವಾಡರ್್ 15: ಮಲ್ಲೇಶಯ್ಯ(ಜೆಡಿಎಸ್)&ಸಿ.ಬಸವರಾಜು(ಕಾಂಗ್ರೆಸ್)=2
ವಾಡರ್್ 16: ಮಹಮದ್ ಖಲಂದರ್(ಜೆಡಿಎಸ್),ಮಹಮದ್ ಅಲ್ತಾಫ್(ಕಾಂಗ್ರೆಸ್)ಮತ್ತು ಬಾಬು ಸಾಹೇಬ್(ಕೆಜೆಪಿ)=3
ವಾಡರ್್ 17: ಸಿ.ಬಿ.ತಿಪ್ಪೇಸ್ವಾಮಿ(ಜೆಡಿಎಸ್),ಸಿ.ಪಿ.ಮಹೇಶ್(ಕಾಂಗ್ರೆಸ್),ಸಿ.ಎಮ್.ಗಂಗಾಧರಯ್ಯ(ಬಿಜೆಪಿ)ಮತ್ತು ದುರ್ಗಮ್ಮ(ಪಕ್ಷೇತರ)=4
ವಾಡರ್್ 18: ಪ್ರೇಮಾ(ಜೆಡಿಎಸ್)&ಶಾಂತಮ್ಮ(ಕಾಂಗ್ರೆಸ್)=2
ವಾಡರ್್ 19: ಸಿ.ಟಿ.ದಯಾನಂದ(ಜೆಡಿಎಸ್),ಸಿ.ಡಿ.ಲಕ್ಷ್ಮಯ್ಯ(ಕಾಂಗ್ರೆಸ್)&ಸಿಕ.ೆ.ಲೋಕೇಶ್(ಪಕ್ಷೇತರ)=3
ವಾಡರ್್ 20: ಸಿ.ಆರ್.ಗೀತಾ(ಜೆಡಿಎಸ್),&ಶಕುಂತಲಮ್ಮ(ಬಿಜೆಪಿ)=2
ವಾಡರ್್ 21: ಪುಷ್ಪಾ(ಜೆಡಿಎಸ್)&ಹೇಮಾವತಿ(ಬಿಜೆಪಿ)=2
ವಾಡರ್್ 22: ಕೆ.ರೇಣುಕಾ(ಜೆಡಿಎಸ್)&ಮಾಲಾ(ಬಿಜೆಪಿ)=2
ವಾಡರ್್ 23: ಅಶೋಕ್(ಜೆಡಿಎಸ್),ನಿವರ್ಾಣ ಸಿದ್ದಯ್ಯ(ಕಾಂಗ್ರೆಸ್),ಗಂಗಾಧರಯ್ಯ(ಬಿಜೆಪಿ),ಲಿಂಗದೇವರು(ಬಿಎಸ್ಆರ್)&ಕೆಂಚಯ್ಯ(ಪಕ್ಷೇತರ)=5
 

Tuesday, February 26, 2013

         ದೇವಾಲಯದ   ಅಭಿವೃದ್ದಿಗಾಗಿ ಮತದಾನದ ಹಕ್ಕನ್ನೇ ಕಳೆದುಕೊಂಡ ಜನ
                   ಮಾಮೂಲಿನಂತೆ ಹಣದ ತೈಲಿ, ಗುಂಡು ತುಂಡಗಳ ಅಬ್ಬರ
                                                                  (ಚಿಗುರು ಕೊಟಿಗೆಮನೆ)
    •     5ಲಕ್ಷ ರೂ ಕೊಟ್ಟು ಅವಿರೋಧವಾಗಿ ಆಯ್ಕೆಯಾದ  ಸದಸ್ಯ
    •     ಟಿಕೆಟ್ಗಾಗಿ 2 ಲಕ್ಷ ರೂ ದೇವಾಲಯಕ್ಕೆ ಕೊಟ್ಟರು
    •     ಅಬ್ಯಾಥರ್ಿಗಳಿಗಾಗಿ ಕೊನೆ ಕ್ಷಣದಲ್ಲಿ ಪರದಾಡಿದ ರಾಷ್ಟ್ರೀಯ ಪಕ್ಷಗಳು
    •     ಜೆ.ಡಿ.ಎಸ್.ಗೆ ಬಂಡಾಯದ ಬಿಸಿ ತಟ್ಟುತ್ತದೆಯೇ........!?
ಚಿಕ್ಕನಾಯಕನಹಳ್ಳಿ,ಫೆ.24: ಇಲ್ಲಿನ ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಣದ ತೈಲಿ, ಬಾಡೂಟದ ಗಮ್ಮತ್ತು ಗುಂಡಿನ ಕರಾಮತ್ತು ಯಥೇಚ್ಚವಾಗಿದ್ದು, ಯುವಕರುಗಳಂತೂ ಬಿಡುವಿಲ್ಲದೆ ಪಾಟರ್ಿಗಳಲ್ಲಿ ಮುಳುಗೇಳುತ್ತಿದ್ದಾರೆ. ಚುನಾವಣೆ ಎಂದ ಮೇಲೆ ಇವೆಲ್ಲಾ ಮಾಮೂಲಿ, ಇಷ್ಟೂ ಇಲ್ಲದೆ ಮೇಲೆ ಅದೆಂತಹ ಚುನಾವಣೆ ಎಂಬಾತ್ತಾಗಿದೆ.! ಆದರೆ ವಿಷಯ ಅದಲ್ಲಾ....... ಇಲ್ಲಿನ ವಾಡರ್್ ಒಂದರಲ್ಲಿ ಅಬ್ಯಾಥರ್ಿಯೊಬ್ಬರಿಂದ 5 ಲಕ್ಷ ರೂ ಪಡೆದು ಅವಿರೋಧವಾಗಿ ಆಯ್ಕೆ ಮಾಡಿದ್ದರೆ, ಇನ್ನೊಂದು ವಾಡರ್್ನಲ್ಲಿ ನಿಧರ್ಿಷ್ಟ ಪಕ್ಷ ಒಂದರಲ್ಲಿ ಟಿಕೆಟ್ ಪಡೆಯಲು ಗ್ರಾಮದವರಿಗೆ 2 ಲಕ್ಷ ರೂಗಳನ್ನು ದೇಣಿಗೆಯಾಗಿ ಕೊಟ್ಟಿರುವ ಪ್ರಸಂಗವೂ ಕೇಳಿ ಬರುತ್ತಿದೆ.   
ದೇವಾಲಯದ ಅಭಿವೃದ್ದಿಗೆ ದುಡ್ಡು ಪಡೆಯುವ ವಾಡರ್ಿನ ಮತದಾರರು:  ಇಲ್ಲೊಂದು ವಾಡರ್ಿನಲ್ಲಿ ಚುನಾವಣೆಯ ಸಹವಾಸವೇ ಬೇಡ, ನಮಗೆ ಸ್ಪಧರ್ಿಸಲು ಅವಕಾಶವಿಲ್ಲವೆಂದ ಮೇಲೆ, ಯಾರು ಗೆದ್ದು ನಮಗೇನಾಗಬೇಕು ಎಂಬ ಮನೋಧೋರಣೆ ತೆಳೆದಿದ್ದಾರೆ, ಹಾಗಂತ ಅವರು ತೀಮರ್ಾನಿಸಲು ಕಾರಣವೂ ಇಲ್ಲದಿಲ್ಲ, ಅಲ್ಲಿರುವ ಬಹುತೇಕರು ಒಂದು ವರ್ಗಕ್ಕೆ ಸೇರಿದವರು.  ಆದರೆ ಆ ವಾಡರ್ಿಗೆ  ಸಕರ್ಾರ ಮೀಸಲಿಟ್ಟಿರುವ ವರ್ಗವೇ ಬೇರೆ, ಮೀಸಲಾತಿಯಿಂದಾಗಿ  ನಮಗೆ ಚುನಾವಣೆಗೆ ಸ್ಪಧರ್ಿಸುವ ಹಕ್ಕಿಲ್ಲವೆಂದ ಮೇಲೆ, ನಮಗೆ ಮತದಾನದ ಹಕ್ಕೂ ಬೇಡವೆಂಬ ತೀಮರ್ಾನಕ್ಕೆ ಬಂದಿರುವ ಜನ   ಹೇಗಿದ್ದರೂ ನಮ್ಮದು ಹಳ್ಳಿ ಜೀವನ, ನಮಗೆ ಇದೇ ಬೇಕು, ಅದೇ ಬೇಕು ಎಂದು ಕೇಳಿದರೆ ಗೆದ್ದವರ್ಯಾರು ನಮಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಿಲ್ಲ, ಆದ್ದರಿಂದ  ಏನಿದೆಯೋ ಅದಕ್ಕೆ ಹೊಂದಿಕೊಂಡು ಹೋಗುವ ಬಾಳು ನಮ್ಮದು, ಅಂತಹ ಸಂಪತ್ತಿಗೆ ನಾವ್ಯಾಕೆ ಚುನಾವಣೆ ಅಂತ ಕಿತ್ತಾಡಿಕೊಳ್ಳಬೇಕು ಎಂದು ತೀಮರ್ಾನಿಸಿರುವ 7ನೇ ವಾಡರ್ಿನ ಜನ ಚುನಾವಣೆಯ ಸಂದರ್ಭದಲ್ಲಾದರೂ  ಗ್ರಾಮದಲ್ಲಿರುವ ದೇವಾಲಯಗಳ ಅಭಿವೃದ್ದಿ ಪಡಿಸೋಣ ಎಂದು ತೀಮರ್ಾನಿಸಿ, ಕಳೆದ ಬಾರಿಯಿಂದ ಅಲ್ಲಿ ಚುನಾವಣೆ ನಡೆಯದ ರೀತಿ ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದಾರೆ. ಕಳೆದ ಬಾರಿ ಎರಡು ಲಕ್ಷ ರೂಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡಿದ್ದರೆ, ಈ ಬಾರಿ ಏಳು ಲಕ್ಷ ರೂಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದಾರೆ. ಈ ಹಣವನ್ನೆಲ್ಲಾ ಆ ವಾಡರ್್ನಲ್ಲಿರುವ ದೇವಾಲಯಗಳಾದ ಬಸವೇಶ್ವರ, ಮೈಲಾರಲಿಂಗೇಶ್ವರ, ಅರವೇಲಕಮ್ಮ  ದೇವಾಲಯಗಳ ಅಭಿವೃದ್ದಿಗೆ ಬಳಸುತ್ತಿದ್ದಾರೆ. ದೇವಾಲಯದ ಅಭಿವೃದ್ದಿಯೇನೋ ಆಗುತ್ತದೆ...... ಆದರೆ ಪ್ರಜಾಪ್ರಭುತ್ವದ ಗತಿ.!?
ಟಿಕೆಟ್ಗಾಗಿ ಎರಡು ಲಕ್ಷ ರೂ ಕೊಟ್ಟ ಪ್ರಸಂಗ: ಇಲ್ಲಿನ ಪುರಸಭೆಯ ಕೆಲವು ವಾಡರ್್ಗಳ ಮಟ್ಟಿಗೆ ಜೆ.ಡಿ.ಎಸ್. ಬೇರೆ ಪಕ್ಷಗಳಿಗೆ ಹೊಲಿಸಿಕೊಂಡರೆ ಸ್ಟ್ರಾಂಗ್. ಹೀಗಾಗಿ ಜೆ.ಡಿ.ಎಸ್. ಪಕ್ಷದಿಂದ ಟಿಕೆಟ್ ಪಡೆಯುವುದೆಂದರೆ ಒಂದು ರೀತಿ ಅರ್ಧ ಚುನಾವಣೆ ಗೆದ್ದುಕೊಂಡಂತೆ ಹಾಗಾಗಿ ವಾಡರ್್ 2ರಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಯಿತು, ಈ ತಲೆ ಬಿಸಿ ಕಡಿಮೆ ಮಾಡಿಕೊಳ್ಳಲು ಸ್ಥಳೀಯ ಜೆ.ಡಿ.ಎಸ್ ವರಿಷ್ಟ ಸಿ.ಬಿ.ಸುರೇಶ್ ಬಾಬು ಕೆಲವು ತಂತ್ರಗಾರಿಕೆ ಕಲಿತಿದ್ದಾರೆ. ಕೆಲವು ನಿಧರ್ಿಷ್ಟ ವಾಡರ್್ಗಳಿಗೆ ಟಿಕೆಟ್ ಕೇಳಿದರೆ ಅಲ್ಲಿಯ ಗುಂಪುಗಳನ್ನು ಒಪ್ಪಿಸಿಕೊಂಡು ಅವರನ್ನು ಜೊತೆಯಲ್ಲಿ ಕರೆತರ ಬೇಕು ಆಗ ಮಾತ್ರ ಜೆ.ಡಿ.ಎಸ್. ವರಿಷ್ಟರ ಕೃಪಕಟಾಕ್ಷ ಅವರ ಮೇಲೆ ಬೀಳುತ್ತದೆ, ಅಲ್ಲಿಯವರೆಗೆ ಯಾರು ಎಷ್ಟೇ ಆಪ್ತರಿದ್ದರೂ ಸರಿಯೇ ನಯವಾಗಿ ಸಾಗಾಕುತ್ತಾರೆ. ಅಂತಹ ಸನ್ನಿವೇಶವೇ ವಾಡರ್್ 2ರಲ್ಲೂ ನಿಮರ್ಾಣವಾಯಿತು, ವರಿಷ್ಟರ ಇಷ್ಟಕಷ್ಟಗಳನ್ನು ಹತ್ತಿರದಿಂದ ಬಲ್ಲವರೊಬ್ಬರು ಸೀದಾ ಜೋಗಿಹಳ್ಳಿಗೆ ಹೋಗಿ ಅಲ್ಲಿಯ ಜೆ.ಡಿ.ಎಸ್. ಪಕ್ಷದ ಪ್ರಮುಖರನ್ನೆಲ್ಲಾ ಒಂದೆಡೆ ಸೇರಿಸಿ ಟಿಕೆಟ್ಗಾಗಿ ಹರಾಜು ಕೂಗಿದರು ಆ ಹರಾಜು 2 ಲಕ್ಷ ರೂಗಳಿಗೆ ನಿಂತಿತು. ಆ ಹಣವನ್ನು ಸಂಗ್ರಹಿಸಿಕೊಂಡು ಅಲ್ಲಿಯ ದೇವಾಲಯಕ್ಕೆ ಕೊಟ್ಟರು ಎಂಬುದು ಬಲವಾಗಿ ಕೇಳಿ ಬರುತ್ತಿರುವ ಸುದ್ದಿ.
     ಸದ್ಯದ ಮಟ್ಟಿಗೆ ನಿಜವಾದ ಕಾಳಗವಿರುವುದು 17ನೇ ವಾಡರ್್ನಲ್ಲಿ ಪುನರ್ ಆಯ್ಕೆ ಬಯಸಿ ಕಾಂಗ್ರೆಸ್ನ ಸಿ.ಪಿ.ಮಹೇಶ್ ಇದ್ದರೆ, ಜೆ.ಡಿ.ಎಸ್ನಿಂದ ಸಿ.ಬಿ.ತಿಪ್ಪೇಸ್ವಾಮಿ, ಶಾಸಕ ಸಿ.ಬಿ.ಸುರೇಶ್ ಬಾಬು ರವರು ತಮ್ಮ ಸಹೋದರ ತಿಪ್ಪೇಸ್ವಾಮಿಯವರನ್ನು ಕಣದಲ್ಲಿರಿಸಿದ್ದಾರೆ, ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್ರವರ ಸಹೋದರ ಸಿ.ಪಿ.ಮಹೇಶ್, ಸಹೋದರರ ಸಲುವಾಗಿ ಮುಖಂಡರಿಗೆ ಇದು ಪ್ರತಿಷ್ಟೆಯ ಕಣ. ಬಿ.ಜೆ.ಪಿ.ಯಿಂದ ಸಿ.ಎಂ.ಗಂಗಾಧರ್ ಅಜರ್ಿ ಸಲ್ಲಿಸಿದ್ದಾರೆ.
    ಇನ್ನು ವಾಡರ್್ ಒಂದರಲ್ಲಿ ಎಂಟು ಜನ ಅಬ್ಯಾಥರ್ಿಗಳು ಸ್ಪಧರ್ಿಸಿದ್ದು ಅಂತಿಮವಾಗಿ ಕಣದಲ್ಲಿ ಎಷ್ಟು ಮಂದಿ ಇರುತ್ತರೆಂಬುದನ್ನು ಕಾದು ನೋಡಬೇಕಿದೆ, ವಾಡರ್್ 3ರಲ್ಲಿ ಇಬ್ಬರು ಸ್ಪಧರ್ಿಗಳಿದ್ದು ಇಬ್ಬರ ಸೆಣಸಾಟ ನಿಗಧಿಯಾಗಿರುವುದರಿಂದ ಇಲ್ಲಿ ಪಟ್ಟು ಪ್ರತಿ ಪಟ್ಟುಗಳು ಹೇಗಿರುತ್ತವೆ ನೋಡಬೇಕು,
    ಚಿಕ್ಕನಾಯಕನಹಳ್ಳಿ ಪುರಸಭಾ ವ್ಯಾಪ್ತಿಗೆ ಮೂರು ಹಳ್ಳಿಗಳು ಸೇರಿಕೊಳ್ಳುತ್ತವೆ, ಜೋಗಿಹಳ್ಳಿ, ಕುರುಬರಹಳ್ಳಿ, ದಬ್ಬೆಘಟ್ಟ ಈ ಮೂರರಲ್ಲಿ ದಬ್ಬೆಘಟ್ಟ ವಾಡರ್್4, ಇದೊಂದೇ ಗ್ರಾಮದಲ್ಲಿ ಹರಾಜು ಪ್ರಕ್ರಿಯೆ ಇಲ್ಲದೆ, ದೂರ ಉಳಿದಿರುವುದು ಇಲ್ಲಿ ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ.
    5ನೇ ವಾಡರ್್ಗೆ ಹಣದ ತೈಲಿಯನ್ನೇ ಹಿಡಿದು ಹೊರಟಿರುವ ಧೂಳಿನ ಧಣಿ ಇದ್ದಾರೆ, ಪ್ರಗತಿಪರ ಹೋರಾಟದ ನಾಗಕುಮಾರ್ ಇದ್ದಾರೆ, ಎ.ಬಿ.ವಿ.ಪಿ.ಯ ತಾಲೂಕು ಪ್ರಮುಖ್ ಚೇತನ್ ಪ್ರಸಾದ್ ಬಿ.ಜೆ.ಪಿ.ಯಿಂದ ಕಣದಲ್ಲಿದ್ದಾರೆ.
    6ನೇ ವಾಡರ್್ ಮಾಜಿ ಎಂ.ಎಲ್.ಎ. ಲಕ್ಕಪ್ಪನವರ ಪತ್ನಿ ಧರಣಿ  ಪುನರ್ ಆಯ್ಕೆ ಬಯಸಿರುವವರು, ಬಿ.ಜೆ.ಪಿ.ಯ ರೇವಣ್ಣನವರ ಪತ್ನಿ ಮೀನಾಕ್ಷಮ್ಮ ಇದ್ದರೆ ಜೆ.ಡಿ.ಎಸ್.ನವರು ಇಲ್ಲಿ ಮುಸ್ಲಿಂ ಮಹಿಳೆಯ ಮೂಲಕ ಚುನಾವಣೆಗೆ ಹೊರಟಿದ್ದಾರೆ.
    ವಾಡರ್್ 8ರಲ್ಲಿ ಮೂರು ಜನರಿದ್ದು ಇಬ್ಬರು ಒಂದೇ ಕೋಮಿನವರು ಮತ್ತೊಬ್ಬರು ಮುಸ್ಲಿಂ, ವಾಡರ್್ 9 ಇಲ್ಲಿ ರೇಣುಕಮ್ಮ ಪುನರ್ ಆಯ್ಕೆ ಬಯಸಿದ್ದರೆ ಮಾಜಿ ಕೌನ್ಸಿಲರ್ಗಳಾದ ಬಸ್ ರಾಜಣ್ಣ, ಗಾರೆ ಬೀರಪ್ಪ ತಮ್ಮ ಮಡದಿಯನ್ನು ನಿಲ್ಲಿಸಿದ್ದಾರೆ, ಬೋವಿ ಸಮಾಜದ ಸರಸ್ವತಿ ಸತೀಶ್ ಇಲ್ಲಿ ಸ್ಪಧರ್ಿಸಿದ್ದಾರೆ. 10ನೇ ವಾಡರ್ಿನಲ್ಲಿ ಪುನರ್ ಆಯ್ಕೆ ಬಯಸಿ ಜೆ.ಡಿ.ಎಸ್.ನ ರಮೇಶ್ ಸ್ಪಧರ್ಿಸಿದ್ದರೆ, ಹಿರಿಯ ಬಿ.ಜೆ.ಪಿ.ಮುಖಂಡ ಶ್ರೀನಿವಾಸಮೂತರ್ಿ, ಕೆಜೆಪಿಯ ರೇಣುಕಮೂತರ್ಿ, ಕಾಂಗ್ರೆಸ್ನವರೂ ಇಲ್ಲೊಂದು ಅಬ್ಯಾಥರ್ಿಯನ್ನು ಹಾಕಿದ್ದಾರೆ. 11ನೇ ವಾಡರ್್ನಲ್ಲಿ ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂತರ್ಿ ಆಯ್ಕೆ ಬಯಸಿದ್ದರೆ, ಕಳೆದ ಸಲ ಅಲ್ಪ ಮತಗಳಲ್ಲಿ ಸೋಲುಂಡ ಬಿ.ಜೆ.ಪಿ.ಯ ಈಶ್ವರಯ್ಯ, ಕಾಂಗ್ರೆಸ್ನ ಕುಮಾರಸ್ವಾಮಿ ಸ್ಪಧರ್ಿಸಿದ್ದಾರೆ.
    12ನೇ ವಾಡರ್್ನಲ್ಲಿ ಕೆ.ಜೆ.ಪಿ.ಯ ಬಾಬು ಸಾಹೇಬ್ ಎರಡನೇ ಬಾರಿಗೆ ಸದಸ್ಯನಾಗವು ಕನಸು ಕಂಡಿದ್ದರೆ, ಜೆ.ಡಿ.ಎಸ್ನಲ್ಲಿ ದೇವಾಂಗ ಸಮಾಜದ ಹಿರಿಯರಾದ  ತಿಮ್ಮಪ್ಪನವರನ್ನು ನಿಲ್ಲಿಸಿದ್ದಾರೆ, ಬಿ.ಜೆ.ಪಿ.ಯ ಧನಪಾಲ್, ಕಾಂಗ್ರೆಸ್ನ ಜಯಲಕ್ಷ್ಮಿ ತೊಡರಗಾಲು ಸ್ಕಿಂನವರು. 13ನೇ ವಾಡರ್್ನ ಜೆ.ಡಿ.ಎಸ್ನ ಹಳೇ ಹುಲಿ ಸಿ.ಎಂ.ರಂಗಸ್ವಾಮಿ ಕಣದಲ್ಲಿದ್ದಾರೆ, ಗೋಪಾಲಕೃಷ್ಣ, ಯಶೋಧಮ್ಮ ಏನು ಮಾಡುತ್ತಾರೊ ನೋಡಬೇಕು. 14ನೇ ವಾಡರ್್ನಿಂದ ಜೆ.ಡಿ.ಎಸ್ನಿಂದ ಎಚ್.ಬಿ.ಪ್ರಕಾಶ್ ಇದ್ದಾರೆ ಕಳೆದ ಬಾರಿ ಇಲ್ಲಿ ಸೋಲುಂಡವರು, ಬಿ.ಜೆ.ಪಿ.ಯ ಸಿ.ಕೆ.ಶಾಂತಕುಮಾರ್, ಕಾಂಗ್ರೆಸ್ನ ಕೃಷ್ಣೇಗೌಡ, ಕೆಜೆಪಿಯಿಂದ ಶಶಿಕುಮಾರ್  ಅಜರ್ಿ ಸಲ್ಲಿಸಿದ್ದಾರೆ. 15ನೇ ವಾಡರ್್ನಲ್ಲಿ ಕಾಂಗ್ರೆಸ್ನ ಸಿ.ಬಸವರಾಜು ಅಪ್ಪನ ಕಾಲದಿಂದ ಪುರಸಭೆ ಪ್ರವೇಶವನ್ನು ಮಿಸ್ ಮಾಡಿಕೊಂಡವರಲ್ಲ, ಜೆ.ಡಿ.ಎಸ್.ನ ಮಲ್ಲೇಶಯ್ಯ ಕೆ.ಜೆ.ಪಿ.ಯ ಮಹಮದ್ ಸುಹೇಲ್ ಇದ್ದಾರೆ.
    16ನೇ ವಾಡರ್್ ಮುಸ್ಲಿಂರೇ ಅಧಿಕವಾಗಿರುವ ಈ ವಾಡರ್್ನಲ್ಲಿ ಮೂರು ಪಾಟರ್ಿಯವರು  ಒಂದೇ ಧರ್ಮದವರನ್ನೇ ಕಣಕ್ಕಿಳಿಸಿದ್ದಾರೆ. 18ನೇ ವಾಡರ್್ ಇಲ್ಲಿನ ದೇವಿ ನಾಟಕ ಸಂಘದವರು ಪ್ರಬಲಬಹುತೇಕ ಜೆ.ಡಿ.ಎಸ್. ವಾಡರ್್ ಎಂದೇ ಗುರುತಿಸಿಕೊಂಡಿದೆ ಎಲ್ ಪ್ರೇಮ ಅಬ್ಯಾಥರ್ಿ ಆದ್ದರಿಂದ ಕಾಂಗ್ರೆಸ್ನ ಸಿ.ಎಲ್.ಶಾಂತಮ್ಮ ಯಾವ ತಂತ್ರ ಮಾಡುತ್ತಾರೆ ನೋಡಬೇಕು.19 ನೇ ವಾಡರ್್ನಿಂದ ಸಿ.ಟಿ.ದಯಾನಂದ್ ಜೆ.ಡಿ.ಎಸ್ ಅಬ್ಯಾಥರ್ಿ ಇವರು ಶಾಸಕ ಸಿ.ಬಿ.ಸುರೇಶ್ ಬಾಬು ರವರ ದಾಯಾದಿ, ಪಕ್ಷೇತರರಾಗಿ ಲೋಕೇಶ್ ಕಾಂಗ್ರೆಸ್ನಿಂದ ಕಳೆದ ಬಾರಿ ಸೋಲುಂಡ ಲಕ್ಷ್ಮಯ್ಯ ಅಬ್ಯಾಥರ್ಿ. 20ನೇ ವಾಡರ್್ ಇಲ್ಲಿ ಜೆ.ಡಿ.ಎಸ್.ನ ಸಿ.ಆರ್.ಗೀತ ಸ್ಟ್ರಾಂಗ್, ಬಿ.ಜೆ.ಪಿ.ಯ ಶಕುಂತಲಮ್ಮ ಅಜರ್ಿ ಹಾಕಿದ್ದಾರೆ. 21ನೇ ವಾಡರ್್ನಲ್ಲಿ ಜೆ.ಡಿ.ಎಸ್.ನ  ಪುಷ್ಪಾವತಿ, ಬಿ.ಜೆ.ಪಿ.ಯ ಹೇಮಾವತಿ ಸ್ಪಧರ್ಿಸಿದ್ದಾರೆ.22ನೇ ವಾಡರ್್ನಿಂದ ಜೆ.ಡಿ.ಎಸ್.ನ ರೇಣುಕಮ್ಮ ಸ್ಟ್ರಾಂಗ್, ಬಿ.ಜೆ.ಪಿ.ಯ ಮಾಲ ಏನು ಮಾಡುತ್ತಾರೆ ನೋಡಬೇಕು, 23ನೇ ವಾಡರ್್ನಲ್ಲಿ ಜೆ.ಡಿ.ಎಸ್ನಿಂದ ಅಶೋಕ, ಬಿ.ಜೆ.ಪಿ.ಯಿಂದ ಗಂಗಾಧರಯ್ಯ, ಕಾಂಗ್ರೆಸ್ನ ನಿವರ್ಾಣಸಿದ್ದಯ್ಯ, ಬಿ.ಎಸ್.ಆರ್ನಿಂದ ಲಿಂಗದೇವರು ಸ್ಪಧರ್ಿಸಿದ್ದಾರೆ ಇದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ.
 


ಗುಡ್ಡಕ್ಕೆ ಬೆಂಕಿ ಇಡಬೇಡಿ, ಜೀವ ಪ್ರಭೇದಗಳನ್ನು                 ಸುಡಬೇಡಿ: ಪರಿಸರ ಕಾರ್ಯಕರ್ತರು
                                   
ಚಿಕ್ಕನಾಯಕನಹಳ್ಳಿ,ಫೆ.24:ತಾಲ್ಲೂಕಿನ ಮದಲಿಂಗನ ಕಣಿವೆ ಮತ್ತು ತೀರ್ಥ ರಾಮಲಿಂಗೇಶ್ವರ ಅರಣ್ಯ ಪ್ರದೇಶಗಳು ನೈಸಗರ್ಿಕ ಕಾವಲುಗಾರರಂತಿದ್ದು ನಿರಂತರ ಗಣಿಗಾರಿಕೆ ಮತ್ತು ಬೇಸಿಗೆಯಲ್ಲಿ ಬೆಂಕಿ ಆಹುತಿಯಿಂದ ಜರ್ಜರಿತವಾಗಿವೆ.  ಅನಾಹುತವನ್ನು ಅರಿವು ಮಾಡಿಕೊಂಡು ಇದರ ವಿರುದ್ದ ಧ್ವನಿ ಎತ್ತಬೇಕು ಎಂದು ಡಿಸಿಸಿ ಬ್ಯಾಂಕ್ ನಿದೇಶಕ ಸಿಂಗದಹಳ್ಳಿ ರಾಜಕುಮಾರ್ ಹೇಳಿದರು.
  ಭಾನುವಾರ ಗುಡ್ಡಗಳನ್ನು ಬೆಂಕಿಯಿಂದ ಕಾಪಾಡಿ ಎಂಬ ಜನಜಾಗೃತಿ ಮೋಟಾರ್ ಸೈಕಲ್ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.   ಗುಡ್ಡದ ತಪ್ಪಲಿನ ಜನರು ತಮಗೆ ಗೊತ್ತಿಲ್ಲದೆ ಬೀಡಿಕಟ್ಟಲು ತೂಬರೆ ಎಲೆ ಚನ್ನಾಗಿ ಬರುತ್ತವೆ,ಭಾದೆ ಹುಲ್ಲು ಚಿಗುರುತ್ತದೆ ಎಂಬ ಮೂಡನಂಬಿಕೆಯಿಂದ ಗುಡ್ಡಗಳಿಗೆ ಬೆಂಕಿ ಹಾಕುತ್ತಿದ್ದು ನೂರಾರು ಬಗೆಯ ಪ್ರಾಣಿ ಪಕ್ಷಿಗಳು,ಸಾವಿರಾರು ಸಸ್ಯ ಪ್ರಭೇದಗಳು,ಲಕ್ಷಾಂತರ ಕೀಟ ವೈವಿಧ್ಯಗಳು ಮತ್ತು ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿದ್ದು ಕಾಡುಪ್ರಾಣಿಗಳು ಆಶ್ರಯ ಅರಸಿ ಹಳ್ಳಿಗಳಿಗೆ ನುಗ್ಗುತ್ತಿವೆ ಮತ್ತು ತೆಂಗಿನ ತೋಟಗಳಿಗೆ ನುಸಿಪೀಡೆಯಂತಹ ರೋಗಗಳು ತಗುಲಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
 ಪ್ರಾಸ್ತಾವಿಕ ಮಾತುಗಳನ್ನಾಡಿದ ಸೃಜನಾ ಸಂಘಟನೆಯ ಎನ್. ಇಂದಿರಮ್ಮ ಅರಣ್ಯ ಇಲಾಖೆ,ಸಾರ್ವಜನಿಕ ಅರಣ್ಯ ಸಮಿತಿಗಳು ಕಣ್ಣುಮುಚ್ಚಿಕುಳಿತಿದ್ದು ರಾಷ್ಟೀಯ ಉಧ್ಯಾನಗಳು ಮತ್ತು ಅಭಯಾರಣ್ಯಗಳಿಗೆ ಬೆಂಕಿ ಬಿದ್ದಾಗ ಮಾತ್ರ ಕಣ್ಣು ಬಿಡುತ್ತವೆ ಆದ್ದರಿಂದ ಎಚ್ಚರದಿಂದಿದ್ದು ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕು ಈ ಸದುದ್ದೇಶದಿಂದ ಗುಡ್ಡಗಲ ಹೆಬ್ಬಾಗಿಲಿನಂತಿರುವ ಹೊಸಹಳ್ಳಿಯಿಂದ ಜಾಥಾ ಪ್ರಾರಂಭವಾಗುತ್ತಿದೆ ಎಂದರು.
 ಪರಿಸರ ಗೀತೆಗಳನ್ನು ಹಾಡುತ್ತ,ಘೋಣೆಗಳನ್ನು ಕೂಗುತ್ತ,ಮದಲಿಂಗನ ಕಣಿವೆ ತಪ್ಪಲಲ್ಲಿ ಬರುವ ಹಳ್ಳಿಗಳಲ್ಲಿ ಪರಿಸರ ಜಾಗೃತಿ ಸಭೆಗಳನ್ನು ನಡೆಸುತ್ತ ಜಾಣೇಹಾರ್,ಕೆಂಪರಾಯನಹಟ್ಟಿ,ಅಜ್ಜೀಗುಡ್ಡೆ, ಕಾತ್ರಿಕೆಹಾಳ್ ಮೂಲಕ ಸಾಗಿದ ಜಾಥಾ ತೀರ್ಥರಾಮೇಶ್ವರ ವಜ್ರದಲ್ಲಿ ಸಭೇ ನಡೆಸಿತು.ಸಭೆಯಲ್ಲಿ ಅರಣ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸುಲು ತೀಮರ್ಾನಿಸಲಾಯಿತು. ಮತ್ತು ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗು ಯುವಕರಿಗೆ ವಿಚಾರ ಸಂಕಿರಣ ಆಯೋಜಿಸುವ ತೀಮರ್ಾನ ಕೈಗೊಳ್ಳಲಾಯಿತು.
  ಕೆಂಪರಾಯನಹಟ್ಟಿಯ ಲಕ್ಮಣ ಅರಣ್ಯ ಇಲಾಖೆಯವರೇ ಗುಡ್ಡಕ್ಕೆ ಬೆಂಕಿ ಇಡುತ್ತಾರೆ ಎಂದು ದೂರಿದರು. ಈ ಸಂಬಂಧ ಪತ್ರಿಕೆ ಅರಣ್ಯ ಇಲಾಖೆಯನ್ನು ಸಂಪಕರ್ಿಸಿದಾಗ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಫೈರ್ ಲೈನ್ ಮಾಡುತ್ತೇವೆ. ಒಬ್ಬ ವನಪಾಲಕ ಇದ್ದು ಬೆಂಕಿ ಅನಾಹುತವನ್ನು ಮಾನೀಟರಿಂಗ್ ಮಾಡುವುದು ಕಷ್ಟವಾಗುತ್ತಿದೆ ಎಂದು ಎಎಫ್ಒ ಮಾರುತಿ ಸ್ವಷ್ಟೀಕರಣ ನೀಡಿದರು ನಂತರ ಯರೇಕಟ್ಟೆ,ತೀರ್ಥಪುರ,ದೊಡ್ಡರಾಂಪುರ,ದೊ.ಗೊಲ್ಲರಹಟ್ಟಿ,ಚಿಕ್ಕರಾಂಪುರ ಮಾರ್ಗವಾಗಿಸಾಗಿ ಸುಮಾರು 50 ಕಿ.ಮಿ.ಸಾಗಿ ಸಂಜೆ 8.30ಕ್ಕೆ ಚಿಕ್ಕರಾಂಪುರ ಗೊಲ್ಲರಹಟ್ಟಿಯಲ್ಲಿ ಸಮಾರೋಪಗೊಂಡಿತು.
     ಜಾಥಾದಲ್ಲಿ ತಾ.ಪಂ.ಉಪಾಧ್ಯಕ್ಷೆ ಲತಾ ಕೇಶವಮೂತರ್ಿ,ವಿಜ್ಷಾನ ಸಂಘದ ರಾಮಕೃಷ್ಣಪ್ಪ, ಸೃಜನಾ ಅಧ್ಯಕ್ಷೆ ಜಯ್ಯಮ್ಮ, ಎಂ.ಎಸ್.ರವಿಕುಮಾರ್,ಸಿ.ಬಿ.ರೇಣುಕಸ್ವಾಮಿ,ಜಯದೇವ ಮೂತರ್ಿ,ಕವಿಯತ್ರಿ ಪುಷ್ಪಾಶಿವಣ್ಣ, ರಾಧಾಕೃಷ್ಣ, ಕವಿತಾ ಚನ್ನಬಸಪ್ಪ,ರಾಮಕುಮಾರ್,ಈಶ್ವರಪ್ಪ,ದಿನಕರ್ ಲೇಖಕ ಅಣೇಕಟ್ಟೆ ವಿಶ್ವನಾಥ್ ಮುಂತಾದವರು ಹಾಗು ಶಾಲಾ ಕಾಲೇಜು ವಿದ್ಯಾಥರ್ಿಗಳು ಭಾಗವಹಿಸಿದ್ದರು.
ರಸಗೊಬ್ಬರ ಸಬ್ಸಿಡಿ ನೀಡಲು ಬ್ಯಾಂಕ್ ಖಾತೆಗೆ ಆಧಾರ್ ಕಾಡರ್್ ಸೇರಿಸಲು ರೈತರಿಗೆ ಸೂಚನೆ
ಚಿಕ್ಕನಾಯಕನಹಳ್ಳಿ,ಫೆ.26 : 2013-14 ನೇ ಸಾಲಿನಿಂದ ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ರಸಗೊಬ್ಬರ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಆಧಾರ್ ಕಾಡರ್್ ಕೋರ್ ಬ್ಯಾಂಕಿಂಗ್ ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದ್ದು ರೈತ ಭಾಂದವರು ಆಧಾರ್ ಕಾಡರ್್ ನಮೂದಿಸಿ ಬ್ಯಾಂಕ್ ಖಾತೆ ತೆರೆಯುವುದು ಅವಶ್ಯಕವಾಗಿರುತ್ತದೆ ಎಂದು ಸಹಾಯಕ ಕೃಷಿ ನಿದರ್ೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ರಸಗೊಬ್ಬರಗಳ ಪೂರ್ಣದರ ಪಾವತಿಸಿ ಹೊಂದಿದ ಹಾಗೂ ಟಜಿಟ  ನಲ್ಲಿ ನೊಂದಾಯಿತ ರಸಗೊಬ್ಬರ ಮಾರಾಟಗಾರರಿಂದ ಖರೀದಿಸಬಹುದಾಗಿದೆ. ಆದುದರಿಂದ ಖಾತೆ ಹೊಂದಿರುವವರು ಮಾತ್ರ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ, ಆದುದರಿಂದ ಕೋರ್ ಆಧಾರ್ ಲಿಂಕ್ ಖಾತೆಗಳನ್ನು ಆದಷ್ಟು ಬೇಗ ಮಾಡಿಸಿಕೊಳ್ಳಲು ರೈತ ಭಾಂದವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
   ತೋಟಕ್ಕೆ ಬೆಂಕಿ: ಅಡಿಕೆ, ತೆಂಗು, ಬಾಳೆ ಗಿಡಗಳು ಭಸ್ಮ
                                       
ಚಿಕ್ಕನಾಯಕನಹಳ್ಳಿ,ಫೆ.26: ಪಟ್ಟಣದ ಹೊರವಲಯದಲ್ಲಿರುವ ದಾಸಿಹಳ್ಳಿ ಗ್ರಾಮದ ತೋಟಕ್ಕೆ ಬೆಂಕಿ ತಗಲಿ ಸುಮಾರು ಮೂರು ಲಕ್ಷ ರೂಗಳಿಗೂ ಹೆಚ್ಚು ಬೆಲೆ ಬಾಳು ಮರ,ಗಿಡ ಮತ್ತು ಫಸಲುಗಳು ಬೆಂಕಿಗಾಹುತಿಯಾಗಿದೆ.
    ಪಟ್ಟಣದ ಗುಡಿದಾಸಿ ಮಂಜುನಾಥ್ ಎಂಬುವರಿಗೆ ಸೇರಿದ ತೋಟಕ್ಕೆ ಇದೇ 25ರಂದು ಆಕಸ್ಮಿಕವಾಗಿ ಬೆಂಕಿ ತಗಲಿದ್ದರಿಂದ ತೋಟದಲ್ಲಿದ್ದ ಐದು ನೂರು ಅಡಿಕೆ ಮರ, ನಾಲ್ಕು ನೂರು ಬಾಳೆ ಗಿಡ ಮತ್ತು ಐವತ್ತು ತೆಂಗಿನ ಮರಗಳು ಬೆಂಕಿ ಆಹುಯಾಗಿದೆ. ಜೊತೆಗೆ ಪಕ್ಕದ ತೋಟಕ್ಕೂ ಬೆಂಕಿ ತಗಲಿದ್ದು ಆ ತೋಟದಲ್ಲಿನ ಅಡಿಕೆ ಮರ, ಹಾಗೂ ಎಲೆ ಬಳ್ಳಿಗಳಿಗೂ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಸಕರ್ಾರಿ ಪ್ರೌಢಶಾಲಾ ಸ.ಶಿ.ಗಳ ಜೇಷ್ಠತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಫೆ.26: ಸಕರ್ಾರಿ ಪ್ರೌಢಶಾಲೆ ಸಹ ಶಿಕ್ಷಕರ ಗ್ರೇಡ್-2ರ ಜೇಷ್ಠತಾ ಪಟ್ಟಿಯನ್ನು ಇಲಾಖೆಯ ವೆಬ್ ಸೈಟ್ನಲ್ಲಿ ಪ್ರಕಟಸಿಲಾಗಿದೆ, ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಮಾಚರ್ಿ 4ರೊಳಗೆ ಕಛೇರಿಗೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ಬಿ.ಇ.ಓ.ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
    ಜೇಷ್ಠತಾ ಪಟ್ಟಿಯನ್ನು 01.01.2008 ರಿಂದ 31.02.2010 ರವರೆಗೆ ಅಂತಿಮಗೊಳಿಸಿದ್ದು ಪಟ್ಟಿಯಲ್ಲಿ ಬಿಟ್ಟುಹೋಗಿರುವ ಪ್ರಕರಣಗಳನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದ್ದು ಇಲಾಖೆಯ ವೆಬ್ ಸೈಟ್ ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ <ಣಣಠಿ://ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ>  ಪರಿಶೀಲಿಸಲು ಸಂಬಂಧಿಸಿದ ಶಿಕ್ಷಕರಿಗೆ ತಿಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Friday, February 22, 2013


ಕಾವೇರಿಗಾಗಿ ಸಂಸದರು ಒಗ್ಗಟ್ಟಾಗಿ ಪ್ರಧಾನಿಗೆ                   ರಾಜೀನಾಮೆ ನೀಡಬೇಕು
ಚಿಕ್ಕನಾಯಕನಹಳ್ಳಿ,ಫೆ.22 : ಕಾವೇರಿ ಐತೀಪರ್ು ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷಿಯಿಂದ ನಾಡಿನ ಎಲ್ಲಾ ಸಂಸದರು ಒಗ್ಗಟ್ಟಾಗಿ ಪ್ರಧಾನಿಗೆ ರಾಜೀನಾಮೆ ನೀಡುವ ಮೂಲಕ ತಮ್ಮ ನಿಲುವನ್ನು ಕೇಂದ್ರಕ್ಕೆ ಸ್ಪಷ್ಟ ಪಡಿಸಬೇಕಿತ್ತು  ಆದರೆ ರಾಜ್ಯ ಸಕರ್ಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ತಾಲೂಕಿನ ಸುಂಟರೆಮೆಳೆ ಶ್ರಿ ಸಿದ್ದರಾಮೇಶ್ವರ ಸ್ವಾಮಿ ದೇವಾಲಯದ ಜೀಣರ್ೋದ್ದಾರ, ಪುನರ್ ಪ್ರಾಣ ಪ್ರತಿಷ್ಟಾಪನೆ ಹಾಗೂ ನೂತನ ಶಿಖರ  ಕಳಶಾರೋಹಣ ಪ್ರಯುಕ್ತ ಹಮ್ಮಿಕೊಂಡಿದ್ದ ಧಾಮರ್ಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಕೇಂದ್ರ ಸಕರ್ಾರದ ಅಧಿಸೂಚನೆ ತಮಿಳುನಾಡಿನ ಮುಖ್ಯಮಂತ್ರಿಗೆ ಹುಟ್ಟು ಹಬ್ಬದ ಕೊಡುಗೆಯಾಗಿದ್ದರೆ, ರಾಜ್ಯದ ಪಾಲಿಗೆ ಕರಾಳ ದಿನವಾಗಿದೆ ಎಂದ ಅವರು, ಈ ಅಧಿಸೂಚನೆಯಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಲಿದ್ದು, ರಾಜ್ಯದಲ್ಲಿ ಮಳೆ ಬರಲಿ ಬಿಡಲಿ ಇನ್ನು ಮುಂದೆ ತಮಿಳುನಾಡಿಗೆ ನೀರು ಬಿಡಲೇಬೇಕಾದ ಪರಿಸ್ಥಿತಿ ಒದಗಿದೆ ಎಂದರು.
    ಕೆ.ಜೆ.ಪಿ. ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸುವುದಲ್ಲದೆ, ಈ ಭಾಗದ 9 ಜಿಲ್ಲೆಗಳಿಗೆ ನೀರು ಹರಿಸಲು 25 ಸಾವಿರ ಕೋಟಿ ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು.
    ರಾಜ್ಯದ ಬಜೆಟ್ನ ಗಾತ್ರ  ಕೇವಲ 40 ಸಾವಿರ ಕೋಟಿಗೆ ಸೀಮಿತವಾಗಿದ್ದನ್ನು ನಾನು ಸಿ.ಎಂ.ಆಗಿದ್ದಾಗ ರಾಜ್ಯದ ಜನತೆಯ ಮೇಲೆ ಯಾವೊಂದು ಹೊಸ ತೆರಿಗೆಯನ್ನು ಹಾಕದೆ  ಬಜೆಟ್ನ ಗಾತ್ರವನ್ನು  ಒಂದು ಲಕ್ಷ ಕೋಟಿ ರೂಗಳಿಗೆ ಏರಿಸುವ ಮೂಲಕ, ನಾಡಿನ  ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟಿರುವುದಾಗಿ ತಿಳಿಸಿದರಲ್ಲದೆ, ರೈತರ ಪರವಾಗಿ ಬಜೆಟ್ ಮಂಡಿಸಿ ಅವರ ಕಷ್ಟಕ್ಕೆ ಸ್ಪಂದಿಸಿದ್ದೇನೆ, ವಾಷರ್ಿಕ ಶೇ. 14 ರೂ ದರದಲ್ಲಿ ಬಡ್ಡಿ ಕಟ್ಟುತ್ತಿದ್ದ ರೈತರಿಗೆ ಅವರ ಬವಣೆ ತಪ್ಪಿಸಲು ಅದನ್ನು ಶೇ.1ಕ್ಕೆ ಇಳಿಸಿ ಸುಲಭವಾಗಿ ಸಾಲ ಸಿಗುವಂತೆ ಮಾಡಿದ್ದೇನೆ ಎಂದರು.
    ನಮ್ಮ ಪಕ್ಷ  ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ 200 ಸಣ್ಣ ಪುಟ್ಟ ಮಠಗಳನ್ನು ಗುತರ್ಿಸಿ ಅವುಗಳ ಅಭಿವೃದ್ದಿಗೆ ತಲಾ ಒಂದು ಕೋಟಿಯಂತೆ ಬಜೆಟ್ನಲ್ಲಿ 200 ಕೋಟಿ ರೂಗಳನ್ನು ಮೀಸಲಿಡುವುದಾಗಿ ತಿಳಿಸಿದರು.
 ಮಾಜಿ ಶಾಸಕ  ಜೆ.ಸಿ. ಮಾಧುಸ್ವಾಮಿ ಹಾಗೂ ಸಂಸದ ಜಿ .ಎಸ್ ಬಸವರಾಜು ನಮ್ಮ ಜೊತೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುವಂತೆ ಹೇಳಿದರು.
 ಬಿ.ಎಸ್ ಯೂಡಿಯೂರಪ್ಪನವರು  ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರಿಗೆ  ಹೂವಿನ ಹಾರ ಹಾಕುವ ಮೂಲಕ  ಕೆ.ಜೆ.ಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
    ಸಂಸದ ಜಿ.ಎಸ್.ಬಸವರಾಜು ನೇತ್ರಾವತಿ ತಿರುವು ಯೋಜನೆ, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿ ನಾಲಾ ಯೋಜನೆಗಳಿಂದ 9ಜಿಲ್ಲೆಗಳ 10,200 ಕೆರೆಗಳಿಗೆ ಶಾಶ್ವತ ನೀರನ್ನು ಹರಿಸುವುದಕ್ಕೆ ಸಾಧ್ಯವೆಂಬದನ್ನು ನೀರಾವತಿ ತಜ್ಞ ಪರಮಶಿವಯ್ಯನವರ ವರದಿಯಲ್ಲಿ ತಿಳಿಸಿದೆ, ಈ ವರದಿ ಅನುಷ್ಠಾನಗೊಳ್ಳುವುದಕ್ಕೆ 25 ಸಾವಿರ ಕೋಟಿ ರೂಗಳ ಅನುದಾನ ಅವಶ್ಯಕ, ಇದು  ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರೆ ಸಾಧ್ಯವಾಗುವುದು ಎಂದರು.
    ತಾಲೂಕಿಗೆ ಹೇಮಾವತಿ ನಾಲೆಯಿಂದ ನೀರು ಹರಿಸಲು ಯಡಿಯೂರಪ್ಪ 120 ಕೋಟಿ ರೂಗಳ ಯೋಜನೆ ಜಾರಿಗೆ ತಂದು, ಈ ಕಾರ್ಯಕ್ಕೆ 40 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ ಶೀಘ್ರವೇ ಈ ಯೋಜನೆ ಕಾಯರ್ಾರಂಭಗೊಳ್ಳುವುದು ಎಂದರು.
    ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜೆ.ಎಚ್ ಪಟೇಲ್ರವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಮಂತ್ರಿಯಾಗುವ ಅವಕಾಶವಿತ್ತು, ಆದರೆ ನಾನು ಅವರನ್ನು ನಮ್ಮ ತಾಲೂಕಿಗೆ ನೀರು ಕೊಡಿ ಎಂದು ಕೇಳಿದೆನೇ ಹೊರತು, ಮಂತ್ರಿಗಿರಿ ಬೇಡವೆಂದೆ ಆದ್ದರಿಂದ್ದಲ್ಲೇ ಆಗ ನಮಗೆ ನೀರಿನ ಅಲೋಕೇಷನ್ ಸಿಕ್ಕಿದ್ದು, ನಾನು ಕಾನೂನಿಗೆ ಬೆಲೆ ಕೊಡುವವನು ಆದರಿಂದಾಗಿ ಕೃಷ್ಣ ಬೇಸಿನ್ಗೆ ನೀರು ಸಿಗುವುದು ಕಷ್ಟವೆಂದು ಹೇಳಿದ್ದೆ ಎಂದರು.
     ವಿಧಾನ ಸಭೆಯಿಂದ ಪುರಸಭೆವರೆಗೆ ಎಲ್ಲರೂ ಬಂಡವಾಳ ಶಾಹಿಗಳು ಸ್ಪಂಧರ್ಿಸುತ್ತಿದ್ದು, ಸೇವೆ ಮಾಡವ ಬದಲು ಲಾಭ ಮಾಡಿಕೊಳ್ಳಲು ಬರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ, ಕುಪ್ಪೂರು ಗದ್ದುಗೆ ಮಠ ಡಾ. ಯತೀಶ್ವರ ಶಿವಾಚಾರ್ಯಸ್ವಾಮಿ, ಗೋಡೆಕೆರೆ ಸಂಸ್ಥಾನದ ಮಠದ ಪೀಠಾಧ್ಯಕ್ಷರುಗಳಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ಸಿದ್ದರಾಮದೇಶಿ ಕೇಂದ್ರ ಸ್ವಾಮಿ ಆಶರ್ೀವಚನ ನೀಡಿದರು.
    ತಾ.ಪಂ.ಸದಸ್ಯ ಎಚ್.ಆರ್.ಶಶಿಧರ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ಎ.ಪಿ.ಎಂ.ಸಿ. ಅಧ್ಯಕ್ಷ ಎಂ.ಎನ್.ಶಿವರಾಜ್, ತಾ.ಪಂ. ಮಾಜಿ ಅಧ್ಯಕ್ಷರಾದ ಎಚ್.ಎಂ.ಸುರೇಂದ್ರಯ್ಯ, ಸಿದ್ದರಾಮಣ್ಣ, ಸಾಹಿತಿ ಸಿ.ಎಚ್.ಮರಿದೇವರು ಗ್ರಾ.ಪಂ.ಅಧ್ಯಕ್ಷ ಬಸವೇಗೌಡ ಸೇರಿದಂತೆ ಹಲವರಿದ್ದರು.
    ಈ ಸಂದರ್ಭದಲ್ಲಿ ದೇವಾಲಯ ನಿಮರ್ಾತೃ ಹಾಗೂ ದಾನಿ ಎಸ್.ಎಲ್.ಶಾಂತಕುಮಾರ್ರವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು.
    ದೇವಾಲಯದ ಟ್ರಸ್ಟಿ ಎಸ್.ರಾಜಶೇಖರ್ ಸ್ವಾಗತಿಸಿದರು,
              36 ಅಭ್ಯಥರ್ಿಗಳು ನಾಮಪತ್ರ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಫೆ.22 : ಪಟ್ಟಣದ ಪುರಸಭೆಯ 23 ವಾಡರ್್ಗಳಲ್ಲಿ ಜೆಡಿಎಸ್ನಿಂದ 22, ಬಿಜೆಪಿಯಿಂದ 9, ಕಾಂಗ್ರೆಸ್ನಿಂದ ಇಬ್ಬರು, ಕೆಜೆಪಿಯಿಂದ ಒಬ್ಬರು ಹಾಗೂ ಪಕ್ಷೇತರರಾಗಿ ಇಬ್ಬರು ಸೇರಿ ಒಟ್ಟು  36 ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದಾರೆ.
    1ನೇವಾಡರ್್: ಎಚ್.ಸಿ.ಶ್ಯಾಮಲ(ಬಿಜೆಪಿ), ದಾಕ್ಷಾಯಣಮ್ಮ(ಜೆಡಿಎಸ್, 2ನೇ ವಾಡರ್್ : ಇಂದ್ರಮ್ಮ(ಜೆಡಿಎಸ್), 3ನೇ ವಾಡರ್್ ಸಿ.ಡಿ.ಚಂದ್ರಶೇಖರ್(ಜೆಡಿಎಸ್), 4ನೇ ವಾಡರ್್ ಎಂ.ಡಿ.ನೇತ್ರಾವತಿ(ಕೆಜೆಪಿ), ಕೆ.ಶೈಲಜ(ಜೆಡಿಎಸ್), 5ನೇ ವಾಡರ್್ ಚೇತನ್ಪ್ರಸಾದ್(ಬಿಜೆಪಿ), ರವಿಚಂದ್ರ ಎಂ.ಕೆ(ಜೆಡಿಎಸ್), 6ನೇ ವಾಡರ್್ ಶಾಹೇದ ಕೆ.ಎಸ್(ಜೆಡಿಎಸ್), 7ನೇ ವಾಡರ್್ ಸಿ.ಎಮ್.ರಾಜಶೇಖರ್(ಜೆಡಿಎಸ್), 8ನೇ ವಾಡರ್್ ಮಲ್ಲಿಕಾಜರ್ುನಯ್ಯ(ಜೆಡಿಎಸ್), 9ನೇವಾಡರ್್ ಸರಸ್ವತಿ(ಬಿಜೆಪಿ), ಕಮಲಮ್ಮ(ಜೆಡಿಎಸ್), 10ನೇವಾಡರ್್ ಸಿ.ಎಸ್.ರಮೇಶ್(ಜೆಡಿಎಸ್),  11ನೇವಾಡರ್್ ಸಿ.ಕೆ.ಕೃಷ್ಣಮೂತರ್ಿ(ಜೆಡಿಎಸ್), ಈಶ್ವರಯ್ಯ(ಬಿಜೆಪಿ), 12ನೇವಾಡರ್್ ಧನಪಾಲ್(ಬಿಜೆಪಿ), ಸಿ.ಆರ್.ತಿಮ್ಮಪ್ಪ(ಜೆಡಿಎಸ್, 13ನೇವಾಡರ್್ ಯಶೋಧಮ್ಮ(ಪಕ್ಷೇತರ), ಸಿ.ಎಮ್.ರಂಗಸ್ವಾಮಯ್ಯ(ಜೆ.ಡಿ.ಎಸ್), 14ನೇ ವಾಡರ್್ ಎಚ್.ಬಿ.ಪ್ರಕಾಶ್(ಜೆಡಿಎಸ್), 15ನೇ ವಾಡರ್್ ಮಲ್ಲೇಶಯ್ಯ(ಜೆಡಿಎಸ್), 16ನೇ ವಾಡರ್್ ಮಹಮದ್ಖಲಂದರ್ (ಜೆಡಿಎಸ್), 17ನೇ ವಾಡರ್್ ಸಿ.ಪಿ.ಮಹೇಶ್(ಕಾಂಗ್ರೆಸ್), ಸಿ.ಬಿ.ತಿಪ್ಪೇಸ್ವಾಮಿ(ಜೆಡಿಎಸ್), ಸಿ.ಎಂ.ಗಂಗಾಧರಯ್ಯ(ಬಿಜೆಪಿ), 18ನೇವಾಡರ್್ ಎಲ್.ಪ್ರೇಮ(ಜೆಡಿಎಸ್), ಸಿ.ಎಲ್.ಶಾಂತಮ್ಮ(ಕಾಂಗ್ರೆಸ್), 19ನೇವಾಡರ್್ ಸಿ.ಟಿ.ದಯಾನಂದ(ಜೆಡಿಎಸ್), ಲೋಕೇಶ(ಪಕ್ಷೇತರ), 20ನೇವಾಡರ್್ ಶಕುಂತಲಮ್ಮ(ಬಿಜೆಪಿ), ಗೀತ ರಮೇಶ್ (ಜೆಡಿಎಸ್), 22ನೇ ವಾಡರ್್ ಮಾಲ(ಬಿಜೆಪಿ), ರೇಣುಕಾ(ಜೆಡಿಎಸ್), 23ನೇ ವಾಡರ್್ ಅಶೋಕ(ಜೆಡಿಎಸ್), ಗಂಗಾಧರಯ್ಯ(ಬಿಜೆಪಿ) ಅಭ್ಯಥರ್ಿಗಳು ಕಣಕ್ಕಿಳಿದಿದ್ದಾರೆ. 21ನೇ ವಾಡರ್್ನಲ್ಲಿ ಇದುವರೆಗೂ ಯಾವ ಅಭ್ಯಥರ್ಿಯು ಇನ್ನೂ ನಾಮ ಪತ್ರ ಸಲ್ಲಿಸಿಲ್ಲ.

 

Wednesday, February 20, 2013

ಸುಂಟರಮಳೆ ಸಿದ್ದರಾಮೇಶ್ವರ ದೇವಾಲಯ ಪ್ರವೇಶಕ್ಕೆ                  ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಫೆ.19 : ಸುಂಟರಮೆಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿ ಜೀಣರ್ೋದ್ಧಾರ ನೂತನ ದೇವಾಲಯ ಪ್ರವೇಶ, ಪುನರ್ ಪ್ರಾಣ ಪ್ರತಿಷ್ಠಾನಪನಾ, ಹಾಗೂ ನೂತನ ಶಿಖರ ಕಳಶಾರೋಹಣವನ್ನು ಇದೇ 21, 22ರ ಗುರವಾರ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    21ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿ, ಹೆಂಜಾರು ಭೈರವೇಶ್ವರಸ್ವಾಮಿ, ಅತ್ತಿಮರದಮ್ಮ ಹಾಗೂ ಆಲದಮರದಮ್ಮದೇವಿಯವರ ಆಗಮನದೊಂದಿಗೆ ದೇವಾಲಯದ ಪ್ರಮೇಶ ನಡೆಯಲಿದೆ.
    22ರಂದು ನಡೆಯುವ ಧಾಮರ್ಿಕ ಸಮಾರಂಭದ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮಿಯವರು ಶಿವಾಲಯದ ಗೋಪುರಕ್ಕೆ ಕಳಶಾರೋಹಣ ನೆರವೇರಲ್ಪಡುತ್ತದೆ.
    22ರಂದು ಬೆಳಗ್ಗೆ 11ಕ್ಕೆ ನಡೆಯುವ  ಧಾಮರ್ಿಕ ಸಭೆಗೆ ಕಾಯಕಯೋಗಿ ಡಾ.ಶಿವಕುಮಾರಸ್ವಾಮಿಯವರು ಆಗಮಿಸಲಿದ್ದು,  ದೇವಾಲಯದ ಉದ್ಘಾಟನೆ ನೆರವೇರಿಸಲಿದ್ದಾರೆ. ಧಾಮಿರ್ಕ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆಡೆಸಲಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು  ಕೆರಗೋಡಿ ರಂಗಾಪುರದ ಗುರುಪರದೇಶಿಕೇಂದ್ರಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ, ಗೋಡೆಕೆರೆ ಮಠದ ಸ್ಥಿರಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ, ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶಿಕೇಂದ್ರಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಉಪಸ್ಥಿತರಿರಲಿದ್ದು,
ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ದೇವಾಲಯದ ನಿಮರ್ಾತೃ ಎಸ್.ಎಲ್.ಶಾಂತಕುಮಾರ್ರವರಿಗೆ ಸನ್ಮಾನ ನಡೆಯಲಿದೆ ಎಂದರು.
    ಈ ಸಂದರ್ಭದಲ್ಲಿ ದಾನಿ ಎಸ್.ಎಲ್.ಶಾಂತಕುಮಾರ್, ತಾ.ಪಂ.ಸದಸ್ಯ ಶಶಿಧರ್, ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ ಉಪಸ್ಥಿತರಿದ್ದರು.

ಯಾವ ಪಕ್ಷಕ್ಕೆ ಸೇರಬೆಕೆಂಬ ವಿಷಯದಲ್ಲಿ  ನಮ್ಮ ಕಾರ್ಯಕರ್ತರು ನನ್ನನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಫೆ.19 : ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಮೂಲಕವೇ ಚುನಾವಣೆಗೆ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದು, ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷವು ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
    ನವೋದಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸ ಮಾತನಾಡಿದ ಅವರು ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪದರ್ಿಸಬೇಕೆಂಬ ನಮ್ಮ ನಿಧರ್ಾರವನ್ನೇ ಕಾರ್ಯಕರ್ತರು ಗೊಂದಲ ಮಾಡಿದ್ದಾರೆ, ಕೆಲವರು ಕೆಜೆಪಿ ಪಕ್ಷದಿಂದ ಸ್ಪಧರ್ಿಸಿ ಎಂದರೆ,  ಇನ್ನು ಕೆಲವರು ಕಾಂಗ್ರೆಸ್ ಪಕ್ಷದಿಂದ ಸ್ಪಧರ್ಿಸಿ ಎಂಬ ನಿಲುವನ್ನು ತಿಳಿಸುತ್ತಿರುವುದರಿಂದ ಚುನಾವಣೆಗೆ ಗೊಂದಲ ಏರ್ಪಟ್ಟಿದೆ ಎಂದರು.
 ಸುಂಟರಮಳೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯ ನೂತನ ದೇವಾಲಯಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಗಮನದಿಂದ ಯಾವುದೇ ರಾಜಕೀಯ ಬೆಳವಣಿಗೆಯಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕಂದಿಕೆರೆ ಶ್ರೀ ಗವಿಶಾಂತ ವೀರಸ್ವಾಮಿಗಳ ವೈಭವದ ಜಾತ್ರೋತ್ಸವ ಆರಂಭ
ಚಿಕ್ಕನಾಯಕನಹಳ್ಳಿ,ಫೆ.19 : ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 23ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ ಫೆಬ್ರವರಿ 18ರಿಂದ 26ರವರಗೆ ಕಂದಿಕೆರೆಯಲ್ಲಿ ನಡೆಯಲಿದೆ.
18ರಂದು ವಿಘ್ನೇಶ್ವರ ಸ್ವಾಮಿಯವರಿಗೆ ಅಭಿಷೇಕ ಪೂಜೆ, 19ರಂದು ಭಜನಾಸಪ್ತಾಹ, 20ರಂದು ನವಗ್ರಹ ಸ್ವಾಮಿಗಳಿಗೆ ಮಹಾಮಂಗಳಾರತಿ, 21ರಂದು ಸುಬ್ರಹ್ಮಣ್ಯಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ, 22ರಂದು ಅಂಭಾದೇವಿಗೆ ಕುಂಕುಮಾರ್ಚನೆ ಮಹಾಮಂಗಳಾರತಿ, 23ರಂದು ಜಡೇಸಿದ್ದೇಶ್ವರಸ್ವಾಮಿಗೆ ರುದ್ರಾಭಿಷೇಕ, ಸಹಸ್ತ್ರ ನಾಮಪೂಜೆ, 24ರಂದು ಅವಧೂತ ಶಾಂತವೀರಸ್ವಾಮಿಗಳಿಗೆ ಗಂಗಾಸ್ನಾನ, ರುದ್ರಾಭಿಷೇಕ, ಸಹಸ್ತ್ರನಾಮಪೂಜಾ, 101ಪೂಜಾಧಿಗಳು ನಡೆಯಲಿದ್ದು 25ರಂದು ಬೆಳಗ್ಗೆ ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲಿಗಳಿಗೆ ಅಭಿಷೇಕ, ಪೂಜೆ ನಿಬೂರು ಗ್ರಾಮಸ್ಥರಿಂದ ಬೆಳಗ್ಗೆ 10ಗಂಟೆಗೆ ರಥೋತ್ಸವಕ್ಕೆ ಕಳಸ ಸ್ಥಾಪನೆ ನೆರವೇರಲಿದೆ. 
26ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಸಾಧು ಸಂತರಿಗೆ ಕವದಿ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.

ಪ್ರಸನ್ನ ರಾಮೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ
ಚಿಕ್ಕನಾಯಕನಹಳ್ಳಿ,ಫೆ.19 : ಶ್ರೀ ಪಾರ್ವತಿ ಪ್ರಸನ್ನ ರಾಮೇಶ್ವರಸ್ವಾಮಿಯವರ ಗಿರಿಜಾ ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವವು ಇದೇ ಫೆಬ್ರವರಿ 23ರಿಂದ ಮಾಚರ್್ 1ರವರೆಗೆ ನಡೆಯಲಿದೆ.
23ರಂದು ಮಹಾಗಣಪತಿ ಪೂಜೆ, 24ರಂದು ಪ್ರಕಾರೋತ್ಸವ, 25ರಂದು ಮಂಟಪೋತ್ಸವ, 26ರಂದು ನಿತ್ಯಹೋಮ, ಬಲಿದಾನ, ಪ್ರಾಕಾರೋತ್ಸವ, 27ರಂದು ಅವಭೃತಸ್ನಾನ, 28ರಂದು ಅನ್ನಸಂತರ್ಪಣೆ ನಡೆಯಲಿದ್ದು 1ರಂದು ಪ್ರಸನ್ನರಾಮೇಶ್ವರಸ್ವಾಮಿಯವರಿಗೆ ವಿಭೂತಿ ಅಲಂಕಾರ, ಅರಿಶಿನ ಅಲಂಕಾರ ಹಾಗೂಸಂಜೆ 6.30ಕ್ಕೆ ಭೂಕೈಲಾಸೋತ್ಸವ ನಡೆಯಲಿದೆ.

              ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ
ಚಿಕ್ಕನಾಯಕನಹಳ್ಳಿ, :ಧಾಮರ್ಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರತ ಕಾರಣ ವಿವಿಧ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದ ಘಟನೆ ತಾಲ್ಲೂಕಿನ ಬೆಳಗುಲಿ ರಂಗನಾಥ ಸ್ವಾಮಿ ಬೆಟ್ಟದದಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ಬೆಳಗುಲಿ ಬೆಟ್ಟದ ಮೇಲೆ ಶ್ರೀ ಹೊನ್ನಮರಡಿ ರಂಗನಾಥಸ್ವಾಮಿಯ ದೇಗುಲಕ್ಕೆ ಈಚೆಗೆ ಭಕ್ತರ ನೆರವಿನಿಂದ ನೂತನ ಗೋಪುರ ನಿಮರ್ಾಣ ಮಾಡಲಾಗಿತ್ತು. ಈ ಗೋಪುರದ ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಕಾರ್ಯಕ್ರಮವನ್ನು ಭಾನುವಾರ ಆಲಯದವತಿ ಹಾಗೂ ಏಳುಹಳ್ಳಿಗಳ ಭಕ್ತಾದಿಗಳ ನೆರವಿನಿಂದ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಭಾನವಾರ ತಾಲ್ಲೂಕಿನ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರುಗಳನ್ನು ಆಹ್ವಾನಿಸಲಾಗಿತ್ತು.  ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಮುಖ ನಾಯಕರುಗಳು ಯಾವುದೇ ಸಾರ್ವಜನಿಕ ಸಂಪರ್ಕಗಳ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಇದೇರೀತಿ ಈ ಧಾಮರ್ಿಕ ಕಾರ್ಯಕ್ರಮಕ್ಕೆ ಮೊದಲಿಗೆ ಮಾಜಿ ಶಾಸಕ ಕೆ.ಎಸ್ಕಿರಣ್ಕುಮಾರ್  ಭಾನುವಾರ ಮಧ್ಯಾಹ್ನ 1-30 ಸಮಯದಲ್ಲಿ ಆಗಮಸಿದರು. ಅವರ ಹಿಂದೆ  ಸ್ಥಳೀಯ ಹಾಗೂ ಅವರ ಜೊತೆಯಲ್ಲಿದ್ದ ಬೆಂಬಲಿಗರೂ ಸಹ ಜೊತೆಗೂಡಿ ದೇವಸ್ಥಾನದ ಕಳಸಕ್ಕೆ ನಮನ ಸಲ್ಲಿಸಿ ಪೂಜೆ ಸಲ್ಲಿಸಿ ಸ್ವಲ್ಪಸಮಯವಿದ್ದು ವಾಪಸ್ ತೆರಳಿದರು. ನಂತರ ಅರ್ಧತಾಸಿನ ನಂತರ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರು ತಮ್ಮ ಸಂಗಡಿಗರೊಂದಿಗೆ  ಸಹ ಬೆಟ್ಟಕ್ಕೆ ಆಗಮಿಸಿದರು.  ಅವರು ದೇವಾಲಯಕ್ಕೆ ಆಗಮಿಸಿದಾಗ ಸ್ಥಳೀಯವಾಗಿ ಅಲ್ಲಿದ್ದ ಅವರ ಬೆಂಬಲಿಗರು ಅವರನ್ನು ಸುತ್ತುವರೆದು ಆಲಯಕ್ಕೆ ಕರೆದೊಯ್ದರು. ಈ ಸಂದರ್ಭದಲ್ಲಿ ಕೆಲ ಅಭಿಮಾನಿಗಳು ಅವರಗೆ ಜೈಕಾರ ಹಾಕಲು ಮುಂದಾದಾಗ ಮಾಧುಸ್ವಾಮಿಯವರೇ ಅದಕ್ಕೆ ತಡೆಒಡ್ಡಿದರು. ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಹಿಂತಿರುಗಿದರು. ಅವರು ಹೋದ ಸ್ವಲ್ಪ ಸಮಯಕ್ಕೆ ಹಾಲಿ ಶಾಸಕ ಸಿ.ಬಿ. ಸುರೇಶ್ಬಾಬು ಬೆಟ್ಟಕ್ಕೆ ಬರುತ್ತಿದ್ದಂತಯೇ ಅಲ್ಲಿನ ವಾತಾವರಣವೇ ಬದಲಾಗಿ ಶಾಸಕರನ್ನು ವಿವಿಧ ವಾದ್ಯ ಗೋಷ್ಠಿ ಹಾಗೂ ಪರಾಕು ಮತ್ತು ಜೈಕಾರದೊಂದಿಗೆ ದೇವಾಲಯಕ್ಕೆ ಸ್ವಾಗತಿಸಿ ಪೂಜೆ ಸಲ್ಲಿಸುವವರೆಗೂ ಅವರನ್ನು ಆದರದಿಂದ ನೋಡಿಕೊಳ್ಳಲಾಗಿತ್ತು. ಪೂಜೆ ಸಲ್ಲಿಸಿ ದೇವಾಲಯದಿಂದ ಹಿಂತಿರುಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆಯಿದ್ದ ಮಾಜಿ ಶಾಸಕರುಗಳ ಬೆಂಬಲಿಗರು ಹಾಲಿ ಶಾಸಕರಿಗೆ ವಿಶೇಷ ಸ್ವಾಗತ ಕೋರಿದ ಬಗ್ಗೆ ತಗಾದೆ ತೆಗೆದರು. ಮಾತಿನ ಚಕಮಕಿ ಎರಡೂ ಕಡೆಯಲ್ಲೂ  ನಡೆದು ಅದು ಮಿತಿಮೀರಿತು. ಅತೃಪ್ತರ ಒಂದು ಗುಂಪು ವಾದ್ಯ ನುಡಿಸುತ್ತಿದ್ದವರ ಮೇಲೆ ಮುಗಿಬಿದ್ದು ನಾದಸ್ವರ , ತಮಟೆ ಹಾಗೂ ಇನ್ನಿತರ ವಾದ್ಯಗಳನ್ನು ಕಿತ್ತೆಸೆದು ಅವರ ಮೇಲೆ ಕೈ ಮಾಡಿದರು. ಈ ಮಾರಾಮರಿಯು ಹಾಲಿ ಶಾಸಕರ  ಸಮ್ಮುಖದಲ್ಲಿ ನಡೆಯಿತು. ನಂತರ ಎರಡೂ ಗುಂಪುಗಳು ಸಮಾಧಾನಪಟ್ಟರೂ ಹಲವು ಮಂದಿ ಬೆಟ್ಟದ ಕೆಳಗೆ ನಡೆದ ಧಾಮರ್ಿಕ ಕಾರ್ಯಕ್ರಮಕ್ಕೆ ಹಾಜರಾಗದ ಕಾರಣ ವಿರಳ ಭಕ್ತಾದಿಗಳ ನಡುವೆ ಸಭೆ ಮುಗಿಯಿತು.
ಈ ಧಾಮರ್ಿಕ ಕಾರ್ಯಕ್ರಮದ ಅಂಗವಾಗಿ ಬೆಳಗುಲಿ ಗ್ರಾಮ ಹಾಗೂ ಬೆಟ್ಟದ ಸನಿಹದಲ್ಲಿ ವಿವಿಧ ಪಕ್ಷದ ಮುಖಂಡರು ಹಾಗೂ ಬೆಂಬಲಿಗರ ಫ್ಲೆಕ್ಸ್ಗಳು ಎಲ್ಲೆಲ್ಲಿಯೂ ರಾರಾಜಿಸುತ್ತಿದ್ದವು. ಈ ನಡುವೆ ಕಳಸ ಪ್ರತಿಷ್ಠಾಪನೆಯ ಅಂಗವಾಗಿ ಗ್ರಾಮದೇವತೆಗಳನ್ನು ಉತ್ಸವದ ಮೂಲಕ ಬೆಟ್ಟಕ್ಕೆ ಬರಮಾಡಿಕೊಂಡಿದ್ದು ವಾದ್ಯದವರನ್ನು ಥಳಿಸಿದ ಹಿನ್ನಲೆಯಲ್ಲಿ ವಾದ್ಯ ಕಲಾವಿದರು ಉತ್ಸವ ಮೂತರ್ಿಯನ್ನು ವಾಪಸ್ ಕರೆತರುವ ಸಮಯದಲ್ಲಿ ವಾದ್ಯ ನುಡಿಸುವುದಿಲ್ಲ ನಮಗೆ ಅವಮಾನವಾಗಿದೆ ಎಂದು ಪಟ್ಟುಹಿಡಿದ ಕಾರಣ ಸೋಮವಾರ ಸಂಜೆಯವರೆಗೂ  ಉತ್ಸವಮೂತರ್ಿಗಳು ಬೆಟ್ಟದ ಆಲಯದಲ್ಲಿಯೇ ಉಳಿಯಬೇಕಾಯಿತು. ಸಂಜೆ ಊರಿನ ಗಣ್ಯರ ಮನವೊಲಿಕೆಯಿಂದ ಉತ್ಸವಮೂತರ್ಿಗಳನ್ನು ಆಯಾ ಊರಿಗೆ ವಾದ್ಯಗೋಷ್ಠಿಯೊಂದಿಗೆ ಬಿಡಲಾಯಿತು. ಒಟ್ಟಿನಲ್ಲಿ ಧಾಮರ್ಿಕ ಕಾರ್ಯಕ್ರಮದಲ್ಲಿ ಕೆಟ್ಟ ರಾಜಕೀಯ ನುಸುಳಿದ ಪರಿಣಾಮ ಧಾಮರ್ಿಕತೆಯು ತನ್ನ ಅರ್ಥವನ್ನು ಕಳೆದುಕೊಂಡು ಘಟನೆ ಹಾಗೇ ಉಳಿಯಿತು.
 

Saturday, February 16, 2013


                        ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ    ಯೋಜನೆಗಳನ್ನು ಜಾರಿಗೆ: ಹೆಚ್.ಡಿ.ಕೆ

ಚಿಕ್ಕನಾಯಕನಹಳ್ಳಿ,ಪೆ.16 : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
    ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಯೋಗ ಮೇಳ, ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬುರವರ 43ನೇ ವರ್ಷದ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ ವಿಧವೆಯರಿಗೆ, ವಿಕಲಚೇತನರಿಗೆ ಹಾಗೂ  ಮದುವೆಯಾಗದೆ ಇರುವ ಹೆಣ್ಣುಮಕ್ಕಳಿಗೆ ಒಂದುವರೆ ಸಾವಿರ ರೂಪಾಯಿ ಮಾಸಶಾಸನ, ಗಭರ್ಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರಕ್ಕಾಗಿ ಒಂದು ವರ್ಷಗಳ ಕಾಲ ತಿಂಗಳ 5ಸಾವಿರ ರೂನಂತೆ ಭತ್ಯೆ ನೀಡುವುದಾಗಿ ತಿಳಿಸಿದರಲದಲ್ಲದೆ,  ಹೈನುಗಾರಿಕೆ ಮಾಡುವ ರೈತರಿಗೆ ಸಬ್ಸಿಡಿ ದರದಲ್ಲಿ ಪಶುಆಹಾರ ನೀಡಲಾಗುದು ಎಂದರು.
 ತಮ್ಮ ಅಧಿಕಾರಾವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸಕರ್ಾರ ವಿವಿಧ ಸವಲತ್ತುಗಳ 9ಲಕ್ಷಕ್ಕೂ ಹೆಚ್ಚು ಮಾಸಾಶಸನಗಳನ್ನ ನಿಲ್ಲಿಸಿದೆ ನಮ್ಮ ಸಕರ್ಾರ ಅಧಿಕಾರಕ್ಕೆ ಬಂದರೆ ಪುನಃ ಆ ಎಲ್ಲಾ ಯೋಜನೆಗಳನ್ನು  ಜಾರಿಗೆ ತರುವುದಾಗಿ ತಿಳಿಸಿದರು.
    ಕೇಂದ್ರ ಸಕರ್ಾರದ ತಪ್ಪು ಆಥರ್ಿಕ ನೀತಿಯ ಕಾರಣ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರು ಜೀವನ ನಡೆಸಲು ತತ್ತರಿಸುತ್ತಿದ್ದಾರೆ, ಖಾಸಗಿಕರಣ, ಉದಾರೀಕರಣದ ಇಂತಹ ಸಂದರ್ಭದಲ್ಲಿ ಉದ್ಯೋಗ ಸೃಷ್ಠಿಸುವುದು ಅಷ್ಟೋಂದು ಕಷ್ಟದ ಕೆಲಸವಲ್ಲ, ಖಾಸಗಿ ಕಂಪನಿಗಳಲ್ಲಿ ನಿರುದ್ಯೋಗಿ ಯುವಕರಿಗೆ ಎಂಟು ಸಾವಿರದಿಂದ ಹತ್ತು ಸಾವಿರ ಸಂಬಳ ದೊರೆಯುತ್ತದೆ ಎಂದರಲ್ಲದೆ, ನಗರಗಳಲ್ಲಿನ ಸಿದ್ದ ಉಡುಪು ಕಾಖರ್ಾನೆಗಳಿಗೆ ಗುಳೆ ಹೋಗದಂತೆ ತಡೆಯಲು ಹೆಣ್ಣು ಮಕ್ಕಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಕಾಖರ್ಾನೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂದರು.
    ಮಾಜಿ ಸಚಿವ ಬಂಡೆಪ್ಪಕಾಶೆಂಪೂರ್ ಮಾತನಾಡಿ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೂ ಜೆಡಿಎಸ್ ಪಕ್ಷಕ್ಕೆ ಜನಬೆಂಬಲ ದೊರೆತಿದ್ದು ಮುಂದಿನ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಶಾಸಕರು ಆಯ್ಕೆಯಾಗಿ ಸಕರ್ಾರ ರಚಿಸುವುದಾಗಿ ತಿಳಿಸಿದರು.
    ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಭ್ರಷ್ಠಾಚಾರ ನಡೆಸಿ ಜೈಲಿಗೆ ಹೋಗಿದ್ದು ರಾಜ್ಯದಲ್ಲಿಯೇ ಪ್ರಥಮ. ರಾಜ್ಯ ಹಾಗೂ ಕೇಂದ್ರ ಸಕರ್ಾರಗಳ ದುರಾಡಳಿತದಿಂದ ಅಕ್ಕಿ ಬೆಲೆ ಗಗನಕ್ಕೇರಿದೆ, ಕುಮಾರಸ್ವಾಮಿಯವರ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಸಂಧ್ಯಾ ಸುರಕ್ಷಾ, ವಿಕಲಚೇತನರಿಗೆ ವಿಧಾನಸೌದದಲ್ಲಿ ಕೆಲಸ ನೀಡಿ ಅಭಿವೃದ್ದಿ ಕಾರ್ಯಗಳಿಗೆ ಗಮನ ಹರಿಸಿದರು ಎಂದರು.
    ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸ್ಥಳೀಯ ಪುರಸಭಾ ಚುನಾವಣೆಯನ್ನು ಸಕರ್ಾರ ಘೋಷಿಸಿದರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ನಡೆಯಬೇಕಿದ್ದ ಉದ್ಯೋಗಮೇಳ, ಆರೋಗ್ಯತಪಾಸಣಾ ಶಿಬಿರವನ್ನು ಗೋಡೆಕೆಗೆ ಸ್ಥಳಾಂತರಿಸಲಾಯಿತು. ಇದರಿಂದ ರೋಗಿಗಳಿಗೆ ಹಾಗೂ ನಿರುದ್ಯೋಗಿ ಯುವರಿಕಗೆ ತೊಂದರೆಯಾಗಿರುವುದಕ್ಕೆ  ವಿಷಾದಿಸುತ್ತೇನೆ ಎಂದರು.   
    ಕಾರ್ಯಕ್ರಮದಲ್ಲಿ ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷೆಪ್ರೇಮಮಹಾಲಿಂಗಯ್ಯ, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಮಾಜಿ ಜಿ.ಪಂ.ಅಧ್ಯಕ್ಷ ಆನಂದರವಿ, ಜೆಡಿಎಸ್ ಮುಖಂಡರಾದ ಮೈಲಾರಪ್ಪ, ಲಿಂಗರಾಜು, ಮಹದೇವಪ್ಪ, ಚೌಡಾರೆಡ್ಡಿ, ಶಿರಾ ತಾ.ಪಂ.ಅಧ್ಯಕ್ಷೆ ಗಂಗಮ್ಮ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕೋ ಆಪರೆಟೀವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್, ತಾ.ಪಂ.ಸದಸ್ಯರಾದ ಹೇಮಾವತಿ, ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    ಕಣ್ಣಯ್ಯ ನಿರೂಪಿಸಿದರು, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ರಘುನಾಥ್ ಸ್ವಾಗತಿಸಿದರು. 

ಚಿಕ್ಕನಾಯಕನಹಳ್ಳಿ,ಫೆ.16 : ರಾಜ್ಯದಲ್ಲಿ ಸ್ಥಳೀಯ ಪುರಸಭೆ ನಗರಸಭೆ ಅಧಿಸೂಚನೆ ಸಕಾರ ಹೊರಡಿಸಿದ ಹಿನ್ನಲೆಯಲ್ಲಿ ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆಯಬೇಕಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ ಹಾಗೂ ಸಿ.ಬಿ.ಸುರೇಶ್ಬಾಬುರವರ ಹುಟ್ಟುಹಬ್ಬವನ್ನು ಗ್ರಾಮೀಣ ಪ್ರದೇಶವಾದ ಗೋಡೆಕೆರೆಗೆ ಸ್ಥಳಾಂತರಿಸಲಾಯಿತು.
    ಇದರಿಂದ ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಾವಿರಾರು ರೋಗಿಗಳಿಗೆ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸುವರಿಗೆ ತೊಂದರೆಯಾಗಬಾರದು ಎಂದು ಮಿನಿ ವಾಹನಗಳು, ಬಸ್ಸುಗಳು ಹಾಗೂ ಲಾರಿಗಳಲ್ಲಿ ಗೋಡೆಕೆರೆಗೆ ಕರೆದೊಯ್ದು ಚಿಕಿತ್ಸೆ ಹಾಗೂ ಉದ್ಯೊಗ ಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು.