Saturday, May 18, 2013


ತಾಲೂಕಿನ ಸಕರ್ಾರಿ ಆಸ್ಪತ್ರೆಗಳಲ್ಲಿ ಶೇ.45ರಷ್ಟು ಸಿಬ್ಬಂದಿಗಳ ಕೊರತೆ
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ಆಸ್ಪತ್ರೆಗಳಲ್ಲಿ ಶೇ.45 ಸಿಬ್ಬಂದಿಗಳ ಕೊರತೆ ಇದ್ದು, ಜನಸಂಖ್ಯೆಗೆ ಅನುಗಣವಾಗಿ ಆಸ್ಪತ್ರೆಗಳಲ್ಲಿ ಮೂಲಭೂತ ಅಗತ್ಯಗಳಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.
ತಾಲೂಕಿನ ಶೆಟ್ಟೀಕೆರೆಯಲ್ಲಿ ನಡೆದ ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ  ಮೂಲಭೂತ ಸೌಕರ್ಯಗಳಿಲ್ಲದೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ ಎಂದರಲ್ಲದೆ, ಈ ಬಗ್ಗೆ ಜನರಿಗೆ ಆರೋಗ್ಯ ಶಿಕ್ಷಣ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಜನರೇ ಇರುವುದಿಲ್ಲವೆಂದ ಅವರು, ಅದೇ ಹಣ ಹಂಚುವ ಕಾರ್ಯಕ್ರಮ ಹಮ್ಮಿಕೊಂಡರೆ ನಾ ಮುಂದು, ತಾ ಮುಂದು ಎಂದು ಒಬ್ಬರ ಮೇಲೊಬ್ಬರು ಬರುತ್ತರೆ, ಶಿಕ್ಷಣ ನೀಡುತ್ತವೆಂದರೆ ಬೆರಳೆಣಿಕೆಯಷ್ಟು ಜನರು ಇರುವುದಿಲ್ಲವೆಂದರು. ಆನರು ಆಸ್ಪತ್ರೆಯಿಂದ ಹೇಗೆ ತಮ್ಮ ಕಾಯಿಲೆ ನಿವಾರಣೆಗೆ ಸ್ಪಂದಿಸಬೇಕೆಂದು ಅಪೇಕ್ಷಿಸುತ್ತಾರೋ ಅದೇರೀತಿ ಇಲಾಖೆಯು ಸಮುದಾಯದಿಂದ ಕೆಲವೊಂದು ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಬೇಕೆಂಬ ಹಂಬಲವನ್ನು ಹೊಂದಿರುತ್ತದೆ ಎಂದರು.
ತಾ.ಪಂ.ಸದಸ್ಯ ರಮೇಶ್ ಕುಮಾರ್ ಮಾತನಾಡಿ,ಇಲ್ಲಿನ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು, ಇಲ್ಲಿನ ನಸರ್್ಗಳು ಹೆರಿಗೆ ಮಾಡಿ ಅವರ ಕಡೆಯಿಂದ ಹಣವನ್ನು ವಸೂಲಿ ಮಾಡಿ ಹಂಚಿಕೊಳ್ಳಲು ಕಿತ್ತಾಟಮಾಡುತ್ತಾರೆ, ಒಂದಿಬ್ಬರು ನಸರ್್ಗಳು ರೋಗಿಗಳ ಜೊತೆ ಅಸಭ್ಯವಾಗಿ ವತರ್ಿಸುತ್ತಾರೆ ಎಂದರಲ್ಲದೆ, ನಾನು ಈ ರೀತಿ ನೇರವಾಗಿ ಮಾತನಾಡುವುದು ಹಾಗೂ ಈ ಸಭೆಗೆ ಬಂದಿರುವುದೇ ಅವರಿಗೆ ಅಪಥ್ಯವಾಗಿದೆ ಎಂದರು.
ಗ್ರಾಮಸ್ವರಾಜ್ಯ ಚಿಂತಕ ರಘು ಗೋಪಾಲನಹಳ್ಳಿ ಮಾತನಾಡಿ, ರಕ್ತದಾನ, ಮರಣದ ನಂತರ ನೇತ್ರದಾನ ಹಾಗೂ ವೈದ್ಯಕೀಯ ಕಾಲೇಜ್ಗಳಿಗೆ ದೇಹದಾನ ಮಾಡುವುದರಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಜೊತೆಗೆ ದಾನದ ಮಹತ್ವವನ್ನು ಮುಂದಿನ ಪೀಳಿಗೆಗೆ  ಒಳ್ಳೆಯ ಮಾರ್ಗವನ್ನು ತೋರಿಸಿಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಗಣೇಶ್, ನೂತನ ವೈದ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಡಾ.ರಾಧಿಕ ಉಪಸ್ಥಿತರಿದ್ದರು.
ಫಾರ್ಮಸಿಸ್ಟ್ ರಘುನಾಥ್ ಸ್ವಾಗತಿಸಿ ನಿರೂಪಿಸಿದರೆ, ಆರೋಗ್ಯ ಸಹಾಯಕ ನರೇಂದ್ರ ವಂದಿಸಿದರು.
13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣವನ್ನು ಕುಡಿಯುವ ನೀರಿಗೆ ಮೀಸಲಿಡಿ
           

ಚಿಕ್ಕನಾಯಕನಹಳ್ಳಿ,ಮೇ.18 : 13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣದಲ್ಲಿ ಶೇ.90ರಷ್ಟು ಕಟ್ಟಡಗಳ ಅಭಿವೃದ್ದಿ ಕಾರ್ಯಗಳಿಗೆ ಕಾಯ್ದಿರಿಸಿ ಸುತ್ತೋಲೆ ಹೊರಡಿಸಿರುವುದನ್ನು ಪ್ರಶ್ನಿಸಿದ ತಾ.ಪಂ.ಸದಸ್ಯರು ಕುಡಿಯುವ ನೀರಿನ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಲು ಸಕರ್ಾರ ಕ್ರಮ ಕೈಗೊಳ್ಳುವಂತೆ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಜಿಲ್ಲೆಯಲ್ಲಿ ಮಳೆ ಇಲ್ಲದೆ ಕುಡಿಯುವ ನೀರಿಗಾಗಿ ಹಳ್ಳಿಗಳಲ್ಲಿ ತೀವ್ರ ನೀರಿನ ಕೊರತೆಯಿಂದ ಜನ ತತ್ತರಿಸುವ ಸಂದರ್ಭದಲಿ ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ, ತೆಂಗು ಅಡಿಕೆ ಬೆಳೆಗೆ ನೀರಿಲ್ಲದೆ ಮರಗಳು ಒಣಗುತ್ತಿವೆ, ತೆಂಗು ಅಡಿಕೆ ಬೆಳೆಗಾರರ ನೆರವಿಗೆ ಬರಬೇಕಾದ ಸಕರ್ಾರ ಕುಡಿಯುವ ನೀರಿಗೆ ಆದ್ಯತೆ ನೀಡದೇ, ಕಟ್ಟಡಗಳಿಗೆ ಆದ್ಯತೆ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ತಾ.ಪಂ.ಸದಸ್ಯರು ಸಕರ್ಾರವನ್ನು ಒತ್ತಾಯಿಸಿದ್ದಾರೆ. ಅದ್ದೂರಿಯಾಗಿ ಆಚರಿಸಬೇಕಾದ ಬಸವಜಯಂತಿ ಕಾರ್ಯಕ್ರಮಕ್ಕೆ ಕೆಲವು ತಾ.ಪಂ.ಸದಸ್ಯರಿಗೆ ತಿಳಿಸದೆ ತಾಲ್ಲೂಕು ಆಡಳಿತ ಅವಮಾನಿಸಿದೆ ಎಂದು ಸದಸ್ಯ ಶಶಿಧರ್ ಆರೋಪಿಸಿದರು.
ಜಿಲ್ಲಾ ಪಂಚಾಯತ್ನಲ್ಲಿ ತಾಲ್ಲೂಕಿನ ಯಾವುದೇ ಅಭಿವೃದ್ದಿಗೆ ಅನುದಾನವನ್ನು ಪಡೆಯಬೇಕಾದರೆ ಪ್ರತಿಯೊಂದು ಹಂತದಲ್ಲೂ ಶೇ.35ರಷ್ಟು ಕಮಿಷನ್ಗೆ ಹಣ ಹೋಗುತ್ತದೆ, ಕಳಪೆ ಕಾಮಗಾರಿ ಮಾಡಿದರೆ ಜನ ನಮ್ಮನ್ನು ದೂರುತ್ತಾರೆ, ಆಕ್ಷನ್ ಪ್ಲಾನ್ ಮಾಡಿ ಅನುಮೋದನೆಗೆ ಕಳಿಸಿದರೆ ಎರಡು ತಿಂಗಳಾದರೂ ಮಂಜೂರಾತಿ ನೀಡುವುದಿಲ್ಲ, ಆಕ್ಷನ್ ಪ್ಲಾನ್ ಬದಲಾಯಿಸಿಲು ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರ ಮಂಜೂರಾತಿ ನೀಡುತ್ತಾರೆ ಎಂದರಲ್ಲದೆ ಟ್ರಜರಿಯಲ್ಲಿ ಬಿಲ್ ತೆಗೆದುಕೊಳ್ಳಬೇಕಾದರೆ ಶೇ.1ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಆಕ್ಷೇಪಿಸಿ ಟ್ರಜರಿ ಕ್ಲಕರ್್ನ್ನು ಸಭೆಗೆ ಕರೆಸಿ ಛೀಮಾರಿ ಹಾಕಿದ ಪ್ರಸಂಗ ನಡೆಯಿತು.
ತಾಲ್ಲೂಕಿನಲ್ಲಿ ಎನ್.ಬಿ.ಎ ಹಾಗೂ ಎನ್.ಆರ್.ಇ.ಜಿ.ಇ ಯೋಜನೆ ಅಡಿಯಲ್ಲಿ ನಿಮರ್ಿಸಿದ ಶೌಚಾಲಯಕ್ಕೆ ಒಟ್ಟು 1,36,22,400 ರೂ ಬಿಡುಗಡೆಯಾಗಿದ್ದು ಇದರಲ್ಲಿ 67,84,300ರೂ ಖಚರ್ಾಗಿದೆ, ತಾಲ್ಲೂಕಿನಲ್ಲಿ 4800 ಶೌಚಾಲಯ ನಿಮರ್ಿಸಲು ನಿಗದಿಪಡಿಸಲಾಗಿತ್ತು 5039 ಶೌಚಾಲಯಗಳನ್ನು ನಿಮರ್ಿಸಲಾಗಿದೆ, ಜಿಲ್ಲೆಯಲ್ಲಿ ನಾವು ಪ್ರಥಮಸ್ಥಾನದಲ್ಲಿದ್ದೇವೆ ಎಂದು ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ತಿಳಿಸಿದರು.
ಕನ್ನಡ ಸಂಘದ ವೇದಿಕೆ ಬಳಿ ಕಳೆದ 5ವರ್ಷಗಳ ಹಿಂದೆ 5ಮಳಿಗೆಯನ್ನು  ತಾ.ಪಂ.ವತಿಯಿಂದ ನಿಮರ್ಿಸಿದ್ದು ಅದನ್ನು ಇದುವರೆಗೆ ಬಾಡಿಗೆಗೆ ನೀಡದೇ ಇರುವುದರಿಂದ ಸಕರ್ಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಠ ಉಂಟಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾ.ಪಂ.ಸದಸ್ಯ ಶಶಿಧರ್ ಒತ್ತಾಯಿಸಿದರು.
ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದ್ದು ಕೊಳವೆ ಬಾವಿಗಳನ್ನು ಕೊರೆಸಿ ಎಂದು ಶಶಿಧರ್ ಆಗ್ರಹಿಸಿದರು. ಸಮಾಜ ಕಲ್ಯಾಣಿ ಇಲಾಖೆ ಅಧಿಕಾರಿಗಳು ಯಾವಾಗಲೂ ಕಛೇರಿಯಲ್ಲಿ ಇರುವುದಿಲ್ಲ ಎಂದು ತಾ.ಪಂ.ಸದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ತಿಪಟೂರಿನಿಂದ ಸಮಾಜ ಕಲ್ಯಾಣಾಧಿಕಾರಿಯನ್ನು ನಿಯೋಜಿಸಲಾಗಿದೆ ಆದರೂ ಇದುವರೆಗೂ ಅವರು ರಿಪೋಟ್ ಮಾಡಿಕೊಂಡಿಲ್ಲ ಆದ್ದರಿಂದ ಇವರಿಗೆ ನೋಟಿಸ್ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗೆ ಸಲಹೆ ನೀಡಿದರು.
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಇ.ಓ. ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚೇತನಗಂಗಾಧರ್, ಹೇಮಾವತಿ, ಲತಾ, ಸೀತಾರಾಮಯ್ಯ, ನವೀನ್, ರಮೇಶ್ಕುಮಾರ್, ಜಯಣ್ಣ  ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಕಿ ಆಕಸ್ಮಿಕದಿಂದ ಸಾವನ್ನಪ್ಪಿದ ನಾಗರತ್ನಮ್ಮ ಕುಟುಂಬದವರಿಗೆ ಸಕರ್ಾರದಿಂದ ಪರಿಹಾರ: ಶಾಸಕ ಸಿ.ಬಿ.ಎಸ್.
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ದೊಡ್ಡೇಣ್ಣೆಗೆರೆ ಗ್ರಾಮದಲ್ಲಿ ಇತ್ತೀಚೆಗೆ ಅಗ್ನಿ ದುರಂತ ನಡೆದು ಮೂರು ಮನೆ ಸುಟ್ಟು ಹೋಗಿದ್ದು, ನಾಗರತ್ನಮ್ಮ ಎಂಬುವರು ಅಸುನೀಗಿದ್ದು ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ಸಾಂತ್ವಾನ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು, ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದರಲ್ಲದೆ, ಪರಿಹಾರದ ವಿಷಯವಾಗಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಕರ್ಾರದಿಂದ ಹೆಚ್ಚಿನ ಪರಿಹಾರವನ್ನು ನೀಡುವಂತೆ ಒತ್ತಾಯಿಸದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಘಟನೆ ನಡೆದ 24 ಗಂಟೆ ಒಳಗೆ ನಾಗರತ್ನಮ್ಮ ಕುಟುಂಬದವರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಒಂದುವರೆ ಲಕ್ಷ ರೂಗಳ ಚೆಕ್ನ್ನು ನೀಡುವಂತೆ ತಹಶೀಲ್ದಾರ್ ರವರಿಗೆ ನೀಡಿದ ಆದೇಶದ ಮೇರೆಗೆ ತಹಶೀಲ್ದಾರ್ ಕಾಮಾಕ್ಷಮ್ಮ ಶಾಸಕರ ನೇತೃತ್ವದಲ್ಲಿ ನಾಗರತ್ನಮ್ಮ ಕುಟುಂಬದವರಿಗೆ ಚೆಕ್ ವಿತರಿಸಿದರು.
 ಬೆಂಕಿ ಅವಘಡದಿಂದಾದ ನಷ್ಟ: ಬಸಮ್ಮ ಎಂಬವರ ಮನೆಯಲ್ಲಿದ್ದ ಒಂದು ಜೊತೆ ಬಂಗಾರದ  ಓಲೆ, 50 ಸಾವಿರ ರೂ ಬೆಲೆ ಬಾಳುವ ವಸ್ತುಗಳು ಹಾಗೂ ವರದಯ್ಯನವರ ಮನೆ ಮತ್ತು ಅದರಲ್ಲಿದ್ದ ಒಂದುವರೆ ಲಕ್ಷ ರೂಗಳಷ್ಟು ವಸ್ತುಗಳ ನಾಶವಾಗಿವೆ ಹಾಗೂ ಮಕ್ಕಳ ಎಸ್.ಎಸ್.ಎಲ್.ಸಿ.ಯ ಅಂಕಪಟ್ಟಿ ಸೇರಿದಂತೆ ಶಾಲಾ ದಾಖಲಾತಿಗಳು ನಾಶವಾಗಿವೆ.
ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ದೊಡ್ಡಬಿದರೆ ಪಂಚಾಯಿತಿಯ ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಕರೆಯಲಾಗಿದೆ ಎಂದು ಸಿ.ಡಿ.ಪಿ.ಓ. ಅನೀಸ್ ಖೈಸರ್ ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರ ವ್ಯಾಪ್ತಿಯ ಸಾಮಾನ್ಯ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳೊಂದಿಗೆ ಜೂನ್ 15ರ ಸಂಜೆ 5.30ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿ ಸಭೆ

ಚಿಕ್ಕನಾಯಕನಹಳ್ಳಿ,ಮೇ.18: ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಶಾಸಕ ಸಿ.ಬಿ.ಸುರೇಶ್ಬಾಬು ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಇದೇ 20ರ ಸೋಮವಾರ ಮಧ್ಯಾಹ್ನ 3ಗಂಟೆಗೆ ತಾಲೂಕು ಕಛೇರಿಯಲ್ಲಿ ಕರೆಯಲಾಗಿದೆ ಎಂದು ಕಾರ್ಯದಶರ್ಿ ಮಂಜುನಾಥರಾಜ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಲೋಕಾಯುಕ್ತ ನಿರೀಕ್ಷಕರ ಜನ ಸಂಪರ್ಕ ಸಭೆ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇದೇ 21ರಂದು ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆಯವರೆಗೆ ತುಮಕೂರು ಲೋಕಾಯುಕ್ತ ಪೋಲಿಸ್ ನಿರೀಕ್ಷಕರು ಜನಸಂಪರ್ಕ ಸಭೆಯನ್ನು ನಡೆಸಲಿದ್ದು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಹಶೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, May 17, 2013

ಬಿಸಿಎಂ ವಿದ್ಯಾಥರ್ಿ ನಿಲಯಕ್ಕೆ ಪ್ರವೇಶವಕಾಶ
ಚಿಕ್ಕನಾಯಕನಹಳ್ಳಿ,ಮೇ.17 : 2013-14ನೇ ಸಾಲಿಗೆ ಸಕರ್ಾರಿ ಹಾಗೂ ಅನುದಾನಿತ ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಬಿಸಿಎಂ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ತಾಲ್ಲೂಕಿನ ಚಿಕ್ಕನಾಯಕನಹಳ್ಳಿ, ಕಂದಿಕೆರೆ, ಹುಳಿಯಾರು, ತಿಮ್ಮನಹಳ್ಳಿ, ಹೊಯ್ಸಳಕಟ್ಟೆಯ ಸಕರ್ಾರಿ ಬಿ.ಸಿ.ಎಂ. ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿನಿಲಯಗಳಲ್ಲಿ ಅಜರ್ಿ ಆಹ್ವಾನಿಸಿದ್ದು ನಿಗದಿತ ಅಜರ್ಿನಮೂನೆಗಳನ್ನು ಉಚಿತವಾಗಿ ಬಿ.ಸಿ.ಎಂ ಇಲಾಖೆಯ ವಿಸ್ತರಣಾಧಿಕಾರಿಗಳು ಇವರಿಂದ ಪಡೆಯಬಹುದಾಗಿದ್ದು ಭತರ್ಿ ಮಾಡಿದ ಅಜರ್ಿಗಳನ್ನು ಜೂನ್ 5ರ ಸಂಜೆ 5.30ರೊಳಗಾಗಿ ಕಛೇರಿಗೆ ಸಂಬಂಧಿಸಿದ ನಿಲಯ ಮೇಲ್ವಿಚಾರಕರಿಗೆ ದಾಖಲಾತಿಗಳೊಂದಿಗೆ ಸಲ್ಲಿಸಬೇಕು, ಅಪೂರ್ಣವಾದ ಹಾಗೂ ತಡವಾಗಿ ಬಂದಂತಹ ಅಜರ್ಿಗಳನ್ನು ತಿರಸ್ಕರಿಸಲಾಗುವುದು, ನವೀಕರಣ ವಿದ್ಯಾಥರ್ಿಗಳು ಮೇ 29ರೊಳಗೆ ಅಜರ್ಿಯನ್ನು ಸಲ್ಲಿಸಲುಬೇಕು.
ಪ್ರವೇಶ ಬಯಸುವ ವಿದ್ಯಾಥರ್ಿ ತಹಶೀಲ್ದಾರ್ರವರಿಂದ ಪಡೆದ ಜಾತಿ/ಆದಾಯ ಪ್ರಮಾಣ ಪತ್ರ, ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರವೇಶ ದೃಢೀಕರಣ ಪತ್ರ, ಗ್ರಾಮ ಪಂಚಾಯಿತಿ ಕಾರ್ಯದಶರ್ಿಯಿಂದ ಪಡೆದ ವಸತಿ ನಿಲಯಕ್ಕೂ ವಿದ್ಯಾಥರ್ಿಯ ಸ್ವಂತ ಸ್ಥಳಕ್ಕೂ ಇರುವ ಅಂತರದ ಸಟರ್ಿಫಿಕೇಟ್, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ ಪ್ರತಿ, ವಿದ್ಯಾಥರ್ಿಯ ಪಾಸ್ಪೋಟರ್್ ಅಳತೆಯ ಇತ್ತೀಚಿನ ಎರಡು ಭಾವಚಿತ್ರಗಳು ಸಲ್ಲಿಸಬೇಕು.
ಅಜರ್ಿ ಸಲ್ಲಿಸ ಬಯಸುವ ವಿದ್ಯಾಥರ್ಿಗಳು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತೀರ್ಣರಾಗಿರತಕ್ಕದ್ದು, ಅಭ್ಯಥರ್ಿಯ ಪೋಷಕರ ವಾಷರ್ಿಕ ವರಮಾನ 2ಎ, 2ಬಿ, 3ಎ, 3ಬಿ ವರ್ಗದವರು 44500/-ರೊಳಗೆ, ಪ್ರವರ್ಗ-1ರ ವಿದ್ಯಾಥರ್ಿಗಳಿಗೆ 100000/-ರೊಳಗೆ ಹಾಗೂ ಪರಿಶಿಷ್ಠ ಜಾತಿ/ ಪರಿಶಿಷ್ಟವರ್ಗಕ್ಕೆ ಸೇರಿದ ವಿದ್ಯಾಥರ್ಿಗಳಿಗೆ ರೂ.200000/-ರೊಳಗೆ ವರಮಾನ ಇರಬೇಕು, ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪ್ರವೇಶಕ್ಕೆ ಅರ್ಹರಾಗಿದ್ದು ಶೈಕ್ಷಣಿಕ ಸಂಸ್ಥೆಯಿಂದ 5.ಕಿ.ಮೀ ದೂರದ ಸ್ಥಳಗಳಿಂದ ಬರುವ ವಿದ್ಯಾಥರ್ಿಗಳಿಗೆ ಪ್ರವೇಶವನ್ನು ನೀಡಲಾಗುವುದು, ವಿದ್ಯಾಥರ್ಿನಿಲಯಗಳಲ್ಲಿ ಪ್ರವೇಶ ಪಡೆದವರು ಯಾವುದೇ ರೀತಿಯ ವಿದ್ಯಾಥರ್ಿ ವೇತನ ಪಡೆಯಲು ಅರ್ಹರಿರುವುದಿಲ್ಲ, ನವೀಕರಣ ವಿದ್ಯಾಥರ್ಿಗಳು ಪೇಲ್ ಆಗಿದ್ದಲ್ಲಿ ಅಂತಹ ವಿದ್ಯಾಥರ್ಿಗಳನ್ನು ವಿದ್ಯಾಥರ್ಿ ನಿಲಯದಲ್ಲಿ ಮುಂದುವರೆಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 


Monday, May 13, 2013



ಬೆಂಕಿಗಾಹುತಿಯಾದ ಕಾಯಿ, ಕೊಬ್ಬರಿ
ಚಿಕ್ಕನಾಯಕನಹಳ್ಳಿ,ಮೇ.13 : ತಾಲೂಕಿನ ಅಣೆಕಟ್ಟೆಯ ಶಿವಣ್ಣ ಎಂಬವರ ತೋಟದಲ್ಲಿ ಸಂಗ್ರಹಿಸಲಾಗಿದ್ದ ತೆಂಗಿನ ಕಾಯಿ ಹಾಗೂ ಕೊಬ್ಬರಿಗೆ ಬೆಂಕಿ ಬಿದ್ದರಿಂದ ಸುಮಾರು ಒಂದುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ಕಾಯಿ, ಕೊಬ್ಬರಿ ಬೆಂಕಿಗೆ ಆಹುತಿಯಾಗಿದೆ.
ಸೋಮವಾರ ಮಧ್ಯಾಹ್ನ 1.30ರ ಸುಮಾರಿನಲ್ಲಿ ತೊಟದಲ್ಲಿ ತೆರೆದ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಕಾಯಿ-ಕೊಬ್ಬರಿ ರಾಶಿಗೆ ಬೆಂಕಿ ಕಾಣಿಸಿಕೊಂಡಿದೆ, ಸುತ್ತ ಮುತ್ತಲಿನ ತೋಟದವರು ಹಾಗೂ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಬೆಂಕಿ ಹತೋಟಿಗೆ ಬರಲಿಲ್ಲ ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲವಾಯಿತು. 
ರೋಗಗಳ ಭರಾಟೆಯಲ್ಲಿ ತತ್ತರಿಸಿರುವ ತೆಂಗಿನ ಬೆಳೆಗಾರರಿಗೆ, ಬರದ ಬರೆ, ವೈಜ್ಞಾನಿಕ ಬೆಲೆಯಿಲ್ಲದೆ, ಬರದಾಡುತ್ತಿರುವ ಜೊತೆಗೆ ಮಳೆಗಾಳಿಯಂತಹ ಪ್ರಾಕೃತಿಕ ಮುನಿಸು ಜೊತೆಗೆ ಅಗ್ನಿ ಹಾವುತಿ ಇಂತಹ ಘಟನೆಗಳಿಂದ  ರೈತರ ಬದುಕು ಅತಂತ್ರವಾಗಿದೆ, ಇಂತಹ  ಅವಘಡಗಳಿಗೆಲ್ಲಾ ಪರಿಹಾರವನ್ನು  ನೀಡಲು ಸಕರ್ಾರ ಚಿಂತನೆ ನಡೆಸಬೇಕೆಂದು ಪಿ.ಎಲ್.ಡಿ.ಬ್ಯಾಂಕ್ ನಿದರ್ೇಶಕ ಎಂ.ಬಿ.ನಾಗರಾಜ್ ಒತ್ತಾಯಿಸಿದ್ದಾರೆ.

Friday, May 10, 2013



ಪಟಾಕಿ ಸಿಡಿಸಿ, ಘೋಷಣೆ ಕೂಗಿದ ಸಿದ್ದರಾಮಯ್ಯನವರ ಅಭಿಮಾನಿಗಳು

ಚಿಕ್ಕನಾಯಕನಹಳ್ಳಿ,ಮೇ.10 : ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಆಯ್ಕೆಗೊಂಡಿದ್ದಾರೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಪಟ್ಟಣದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ, ರಾಜ್ಯದ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯಿಂದ ಉತ್ಸಾಹಗೊಂಡು ಸಿದ್ದರಾಮಯ್ಯನವರಿಗೆ ಜೈಕಾರಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳಾದ   ಸಿ.ಎಂ.ಬೀರಲಿಂಗಯ್ಯ, ಸಿ.ಟಿ.ಗುರುಮೂತರ್ಿ, ಓಂಕಾರಮೂತರ್ಿ, ರವಿಕುಮಾರ್(ಲ್ಯಾಬ್), ಸಿ.ಎಸ್.ಬಸವರಾಜು, ನಾಗರಾಜು ಸೇರಿದಂತೆ ಹಲವರಿದ್ದರು.

ಜೋರು ಬಿರುಗಾಳಿಗೆ ಎದರಿ ಎರಡು ದಿನದಿಂದ ಹಾಲು ನೀಡದ ಹಸುಗಳು

ಚಿಕ್ಕನಾಯಕನಹಳ್ಳಿ,ಮೇ.10 :  ಜೋರು ಮಳೆಗಾಳಿಯಿಂದ  ದನದಕೊಟ್ಟಿಗೆಗೆ ಹಾಕಲಾಗಿದ್ದ ಶೆಡ್ ಹಾರಿಹೋಗಿ, ಬೀಸುತ್ತಿದ್ದ ಭಾರಿ ಶಬ್ದಕ್ಕೆ ಹೆದರಿ ಹಸುವು ಎರಡು ದಿನದಿಂದ ಹಾಲು ನೀಡದೆ ಭಯಭೀತವಾಗಿವೆ, ಶೆಡ್ ಹಾರಿಹೋದ ಪರಿಣಾಮ  ಸಾವಿರಾರು ರೂಪಾಯಿ ನಷ್ಟ ಸಂಭವಿರುವ ಘಟನೆ ಪಟ್ಟಣದ 1ನೇ ವಾಡರ್್ನ, ಪಿ.ಯು.ಕಾಲೇಜ್ನ ಹಿಂಭಾಗದ  ಕೆ.ಎಮ್.ವಠಾರದಲ್ಲಿ ನಡೆದಿದೆ.
ಭಾರಿ ಬಿರುಗಾಳಿಗೆ ತಮ್ಮ ಜಮೀನಿನಲ್ಲಿ ಹಾಕಲಾಗಿದ್ದ ಶೆಡ್ ಬಿರುಗಾಳಿಗೆ ನೆಲಕ್ಕುರುಳಿದೆ, ಶೆಡ್ನಲ್ಲಿ ದನದಕೊಟ್ಟಿಗೆ, ಕಾಯಿ ಹಾಗೂ ಅಡಕೆ ದಾಸ್ತಾನು ಮಾಡಲಾಗಿತ್ತು, ಗಾಳಿಗೆ ಶೆಡ್ ಹಾರಿದ ಪರಿಣಾಮ ದಾಸ್ತಾನು ಮಾಡಿದ್ದ ವಸ್ತುಗಳಿಗೆ ಹಾನಿಯಾಗಿದ್ದು ಹಸುಕರುಗಳು ಭಯಭೀತವಾಗಿವೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ, ಹಾನಿಯಾಗಿರುವ ಸಾವಿರಾರು ರೂಪಾಯಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಮಾಲೀಕ ಸಿ.ಎಸ್ ನಾಗರಾಜು ಒತ್ತಾಯಿಸಿದ್ದಾರೆ.

ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮೇ.10 : 19ನೇ ವರ್ಷದ ಶ್ರೀ ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವವು ಇದೇ 11ರ ಶನಿವಾರ ತಾಲ್ಲೂಕಿನ ಕಾಡೇನಹಳ್ಳಿಯಲ್ಲಿ ನಡೆಯಲಿದೆ.
11ರ ಬೆಳಗ್ಗೆ 7.30ಕ್ಕೆ ಶನಿದೇವರಿಗೆ ಪಂಚಾಮೃತ ಅಭಿಷೇಕ ಮತ್ತು ನವಗ್ರಹ ಪೂಜೆ, ಹೋಮಾದಿಗಳು ಹಾಗೂ ಗ್ರಾಮಸ್ಥರಿಂದ ಆರತಿ, ದೇವರ ಉತ್ಸವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನೆಡಯಲಿದೆ.




ರೋಟರಿ ಶಾಲೆಗೆ 96.87ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ರೋಟರಿ ಆಂಗ್ಲ ಪ್ರೌಡಶಾಲೆಗೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.87ರಷ್ಟು ಪಲಿತಾಂಶ ದೊರೆತಿದೆ.
ಶಾಲೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 64 ವಿದ್ಯಾಥರ್ಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅದರಲ್ಲಿ ಒಟ್ಟು 62 ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. 11ಮಂದಿ ವಿದ್ಯಾಥರ್ಿಗಳು ಅತ್ಯುನ್ನತದಜರ್ೆ, 34ವಿದ್ಯಾಥರ್ಿಗಳು ಪ್ರಥಮದಜರ್ೆ, 11ದ್ವಿತೀಯದಜರ್ೆ ಹಾಗೂ 6ವಿದ್ಯಾಥರ್ಿಗಳು ತೇರ್ಗಡೆ ಹೊಂದಿದ್ದಾರೆ.
ಹೀನಾ.ಎ561(89.76), ನಿದಾ557(89.12), ಅನುಷಾ552(88.32), ದೀಕ್ಷಿತ.ಡಿ.546(87.36), ನವ್ಯಶ್ರೀ.ಸಿ.ಕೆ540(86.40) ಶಾಮ್ಪ್ರಸಾದ್.ಎಸ್.ವಿ.539(86.24), ಶಿಲ್ಪ.ಎಮ್.537(85.92), ಪಲ್ಲವಿ.ಎನ್.537(85.92), ಗೌತಮಿ ಡಿ.ಕೆ.535(85.60), ಪೂಜಾಜೈನ್533(85.28), ಲಾವಣ್ಯ.ಎಮ್.ಪಿ.533(58.28) ಅಂಕಗಳನ್ನು ಪಡೆದಿದ್ದಾರೆ.

ಎಸ್.ಎಮ್.ಎಸ್.ಕಾಲೇಜಿಗೆ 90.42ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ಎಸ್.ಎಮ್.ಎಸ್.ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90.42ರಷ್ಟಿ ಪಲಿತಾಂಶ ದೊರೆತಿದೆ.
ಮಾಚರ್್ 2013ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಳಿದ 94 ವಿದ್ಯಾಥರ್ಿಗಳಲ್ಲಿ 85ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ.        
ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಸಿ.ಜಿ.ರೋಜಾ543(90.5), ಬಿ.ಎನ್.ಕೀರ್ತನಕುಮಾರಿ504(84.00), ಸಿ.ಆರ್.ನವೀನ್ಕುಮಾರ್489(81.55), ವಾಣಿಜ್ಯ ವಿಭಾಗದಲ್ಲಿ ವಿದ್ಯಾ.ಎಮ್.ಎನ್.476(79.3), ಅರುಣ್ಕುಮಾರ್.ಡಿ.ಆರ್.453(75.5) ಅಂಕಗಳನ್ನು ಪಡೆದಿದ್ದಾರೆ.

ಕ್ಷೇತ್ರದ ಜನತೆ ಗುಳೇ ಹೋಗುವುದನ್ನು ತಪ್ಪಿಸಲು ಗಾಮರ್ೇಂಟ್ಸ್ಗೆ ಮೊರೆಹೋದ ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಮೇ.9 : ಕ್ಷೇತ್ರದ ಮತದಾರರ ಆಶೀವರ್ಾದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದು, ಈ ಗೆಲುವು ತಾಲ್ಲೂಕಿನ ಕ್ಷೇತ್ರದ ಜನತೆಯ ಗೆಲುವಾಗಿದ್ದು ಕ್ಷೇತ್ರದ ಜನತೆಗೆ ಎಂದೆಂದು ನಾನು ಚಿರಋಣಿಯಾಗಿರುವೆ ಎಂದು ಚುನಾವಣೆಯಲ್ಲಿ ಮರು ಆಯ್ಕೆಗೊಂಡ ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಗೆಲುವಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಸುರೇಶ್ಬಾಬು, ಜ್ಯಾತ್ಯಾತೀತ ಮನೋಭಾವನೆಯಿಂದ  ಎಲ್ಲ ವರ್ಗಗಳಿಗೂ ಸ್ಥಾನಮಾನ ಕಲ್ಪಿಸಿ ತಾಲ್ಲೂಕಿನ ಅಭಿವೃದ್ದಿ ಕಡೆ ಯೋಚಿಸಿದ್ದರಿಂದಲೇ ತಾಲ್ಲೂಕಿನ ಎಲ್ಲಾ ವರ್ಗಗಳ ಮತದಾರರು ನನ್ನನ್ನು ಮರು ಆಯ್ಕೆಮಾಡಿದ್ದಾರೆ. ಶಾಸಕನಾದ ಮೇಲೆ ನಾವು ಮಾಡಿರುವ ಅಭಿವೃದ್ದಿ ಕೆಲಸಗಳು ಹಾಗೂ ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮ ಗೆಲುವಿಗೆ ಸಹಾಯಕವಾಯಿತು ಎಂದರಲ್ಲದೆ ಈ ಮೂಲಕ ತಾಲ್ಲೂಕಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನನ್ನ ಕ್ಷೇತ್ರದಿಂದ ಪಟ್ಟಣಕ್ಕೆ ಗುಳೇ ಹೋಗುವವರು ಹೆಚ್ಚಾಗಿದ್ದಾರೆ, ಅದಕ್ಕಾಗಿ ಇಲ್ಲಿ ಗಾಮರ್ೆಂಟ್ಸ್ ಅನ್ನು ತೆರೆದು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿ ಅವರನ್ನು ಕ್ಷೇತ್ರದಲ್ಲಿಯೇ ಜೀವನ ನಡೆಸುವಂತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವುದಾಗಿ ತಿಳಿಸಿದರು, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ಕ್ಷೇತ್ರದ ಜನತೆಯ ಸಮಸ್ಯೆ ನಿವಾರಿಸಲು ಮುಂದಾಗುವೆ ಎಂದರು.
ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಪಟ್ಟಣದನ ಜನರಿಗೆ ಕೃತಜ್ಞತೆ ತಿಳಿಸಲು ರಾಜ ಬೀದಿಗಳಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮಳೆಯ ನಡುವೆಯೂ ಅಪಾರ ಅಭಿಮಾನಿಗಳೊಂದಿಗೆ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಮೇ.12ರಂದು ತಾ.ಕ.ಸಾ.ಪ ಆಜೀವ ಸದಸ್ಯರ ಸಭೆ
ಚಿಕ್ಕನಾಯಕನಹಳ್ಳಿ,ಮೇ.9: ತಾಲೂಕು ಸಾಹಿತ್ಯ ಪರಿಷತ್ನ ಎಲ್ಲಾ ಆಜೀವ ಸದಸ್ಯರ ಸಭೆಯನ್ನು ಇದೇ 12ರ ಭಾನುವಾರ ಮಧ್ಯಾಹ್ನ 2ಗಂಟೆಗೆ ಪಟ್ಟಣದ ಜ್ಞಾನಪೀಠ ಪ್ರೌಢಶಾಲೆಯ ಆವರಣದಲ್ಲಿ ಕರೆಯಲಾಗಿದೆ ಎಂದು ತಾ.ಕ.ಸಾ.ಪ. ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ  ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಈ ಸಭೆಯನ್ನು ಕರೆದಿದ್ದು ಸಭೆಯಲ್ಲಿ ಜಿಲ್ಲಾ.ಕ.ಸಾ.ಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್ ಉಪಸ್ಥಿತರಿರುವವರು ಆದ್ದರಿಂದ ಎಲ್ಲಾ ಆಜೀವ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.



Wednesday, May 8, 2013


ತಂದೆಯ ದಾಖಲೆ ಸರಿಗಟ್ಟಿದ ಚಿ.ನಾ.ಹಳ್ಳಿ ಶಾಸಕ ಸಿ.ಬಿ.ಸುರೇಶ್ಬಾಬು.
ಚಿಕ್ಕನಾಯಕನಹಳ್ಳಿ,ಮೇ.8: ಈ ಬಾರಿಯ ಚುನಾವಣೆ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬುವಿನ ಮುಖದಲ್ಲಿ ನಗೆಯ ಹೊನಲನ್ನು ತಂದಿದ್ದರೆ, ಕೆ.ಜೆ.ಪಿ. ಯ ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ರವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ ಅದೇನೆಂದರೆ ಈ ಕ್ಷೇತ್ರದ ಚುನಾವಣಾ ಕಣದಲ್ಲಿ ಜೆ.ಸಿ.ಎಂ. ಇರಬೇಕು ಇಲ್ಲ, ಕೆ.ಎಸ್.ಕೆ ಇರಬೇಕು. ಇಬ್ಬರಲ್ಲೊಬ್ಬರು ಇರಬೇಕು ಎಂಬುದನ್ನು ದೃಡಪಡಿಸಿದೆ.
ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ತಮ್ಮ ತಂದೆಯ ದಾಖಲೆಗೆ ಸರಿಸಮನಾಗಿ, ತಂದೆಗೆ ತಕ್ಕ ಮಗ, ನಾನು ತಂದೆಯಂತೆಯೇ ಜನನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ, 1974ರ ಚುನಾವಣೆಯಲ್ಲಿ ಮಾಜಿ ಸಚಿವ ದಿ.
ಎನ್.ಬಸವಯ್ಯ ಸಂಸ್ಥಾ ಕಾಂಗ್ರೆಸ್ನಿಂದ ಗೆಲವು ಸಾಧಿಸಿದ್ದರು,  ನಂತರ 1979ರಲ್ಲಿ ನಡೆದ ಚುನಾವಣೆಯಲ್ಲೂ ಇಂದಿರಾ ಕಾಂಗ್ರೆಸ್ನಲ್ಲಿ ಗೆಲುವು ಸಾಧಿಸಿದ್ದರು. ಅದೇ ರೀತಿ ಸಿ.ಬಿ.ಸುರೇಶ್ಬಾಬು 2008ರಲ್ಲಿ ಹಾಗೂ 2013ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಪ್ಪನಿಗೆ ತಕ್ಕ ಮಗ ಎಂಬುದನ್ನು ಸಾಬೀತು ಮಾಡಿದ್ದರೆ, ಆದರೆ ಎನ್.ಬಿ.ಯವರು ಪಕ್ಷ ಬದಲಾಯಿಸಿ ಜಯಪಡೆದಿದ್ದರು, ಸಿ.ಬಿ.ಎಸ್. ಎರಡೂ ಬಾರಿಯೂ ಹೊರೆಹೊತ್ತ ಮಹಿಳೆಯನ್ನೇ ನಂಬಿ ಜಯಶೀಲರಾಗಿದ್ದಾರೆ. 

ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಇತ್ತೀಚಿನ ಇತಿಹಾಸದಲ್ಲಿ ಒಮ್ಮೆ ಗೆದ್ದವರು ಮತ್ತೇ ಹಿಂದೆಯೇ ಆಯ್ಕೆ ಬಯಸಿದರೆ ಅದು ಸಾಧ್ಯವಾಗದ ಮಾತು ಎಂಬ ಪ್ರತೀತಿ ಇತ್ತು ಅದನ್ನು ಈ ಚುನಾವಣೆಯಲ್ಲಿ ಸಿ.ಬಿ.ಎಸ್. ಸುಳ್ಳು ಮಾಡಿದ್ದಾರೆ. ಅದೇ ರೀತಿ ಈ ಕ್ಷೇತ್ರದಲ್ಲಿ ಜಯಗಳಿಸಿದ ಪಕ್ಷ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದಿಲ್ಲವೆಂಬ ಮಾತು ಮಾತ್ರ ಸುಳ್ಳಾಗಿಲ್ಲ ಎಂಬುದು ಇಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
2008ರ ಚುನಾವಣೆಗೆ ಹೊಲಿಸಿದರೆ ಸಿ.ಬಿ.ಸುರೇಶ್ಬಾಬು ಪಡೆದಿರುವ ಓಟುಗಳು 6,287 ಕಡಿಮೆಯಾಗಿದೆ.  ಕಳೆದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,84,288 ಇತ್ತು ಇದರಲ್ಲಿ ಚಲಾವಣೆಗೊಂಡಿದ್ದ ಮತಗಳು 1,43,589 ಮತಗಳು.  ಈ ಬಾರಿ ಕ್ಷೇತ್ರದಲ್ಲಿದ್ದ ಒಟ್ಟು ಮತಗಳು 1,98,349, ಇದರಲ್ಲಿ ಚಲಾವಣೆಗೊಂಡವು 1,60,041 ಮತಗಳು ಮಾತ್ರ, ಸಿ.ಬಿ.ಸುರೇಶ್ ಬಾಬು 60,759 ಮತಗಳನ್ನು ಪಡೆದು 11,139 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 
 ಜೆ.ಸಿ.ಮಾಧುಸ್ವಾಮಿ 49,620 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಬಂದಿದ್ದರೆ, ಕಳೆದ ಬಾರಿ ಜೆ.ಡಿ.ಯುನಲ್ಲಿ ಸ್ಪಧರ್ಿಸಿದ್ದ ಜೆ.ಸಿ.ಎಂ. 24308 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.
ಈ ಬಾರಿ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ 29150 ಮತಗಳನ್ನು ಪಡೆದು ಮೂರನೇ ಸ್ಥಾನ ತಲುಪಿದ್ದಾರೆ. ಕಳೆದ ಬಾರಿ ಕೆ.ಎಸ್.ಕಿರಣಕುಮಾರ್ 38,002 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು.
ಕಳೆದ ಬಾರಿಯ ಚುನಾವಣೆಗೆ ಹೊಲಿಸಿದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹಳಷ್ಟು ಚೇತರಿಸಿಕೊಂಡಿದೆ, ಕಾಂಗ್ರೆಸ್ನ ಸಾಸಲು ಸತೀಶ್ 10,344 ಮತಗಳನ್ನು ಪಡೆದಿದ್ದಾರೆ, ಕಳೆದ ಬಾರಿ ಕಾಂಗ್ರೆಸ್ನ ಎನ್. ರೇಣುಕಪ್ರಸಾದ್ 3941 ಮತಗಳನ್ನು ಪಡೆದಿದ್ದರು.
 ರೈತ ಸಂಘದ ಕೆಂಕೆರೆ ಸತೀಶ್ 2086 ಮತಗಳು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್ 1743 ಮತಗಳು, ಬಿ.ಎಸ್.ಆರ್.ನ ದೇವರಾಜ್ 1624 ಮತಗಳು, ಸಿ.ಎಂ.ಮಂಜುಳಾ ನಾಗರಾಜ್ 1725, ಬರಗೂರು ರಾಮಚಂದ್ರಯ್ಯ 1648, ಜೆ.ಡಿ.ಯು.ನ ಜಿ.ಪ್ರಕಾಶ್ 1108, ಹನುಮಂತ ರಾಮನಾಯಕ್ 1019 ಮತಗಳನ್ನು ಪಡೆದಿದ್ದಾರೆ. 
 

Tuesday, May 7, 2013


ಆಟೋರಿಕ್ಷಾ ಚಾಲಕನ ಮಗ ಎಸ್.ಎಸ್.ಎಲ್.ಸಿ.ಯಲ್ಲಿ
ತಾಲೂಕಿಗೆ ಮೊದಲು


ಚಿಕ್ಕನಾಯಕನಹಳ್ಳಿ,ಮೇ.7; ಸಕರ್ಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಂದಿಗೆ ಇಲ್ಲೊಂದು ಸಾಧನೆಯ ಸುದ್ದಿ ಇದೆ, ಟ್ಯೂಶನ್ಗೆ ಹೋಗದೆ, ಆಟೋರಿಕ್ಷಾ ಚಾಲಕನ ಮಗನಾಗಿ ಅತ್ಯಲ್ಪ ಸೌಲತ್ತುಗಳಲ್ಲೇ, ಸಕರ್ಾರಿ ಪ್ರೌಢಶಾಲೆಯಲ್ಲಿ ಓದಿರುವ ಆರ್. ಮಧುಸೂಧನ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 590 (ಶೇ.94.40)ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮನೆನಿಸಿಕೊಂಡಿದ್ದಾನೆ.
ಸ್ವಾಮಿ ವಿವೇಕನಂದರೇ ನನ್ನ ಗುರುಗಳು, ಅವರೇ ನನಗೆ ಸ್ಪೂತರ್ಿ, ತಂದೆ-ತಾಯಿಗಳ ಪೋಷಣೆ, ಗುರುಗಳ ಮಾರ್ಗದರ್ಶನದಿಂದಾಗಿ ನಾನು ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳುವ ಮಧುಸೂಧನನ ಕಣ್ಣಲ್ಲಿ ಐ.ಎ.ಎಸ್.ಮಾಡುವ ಕನಸಿದೆ.
ಶಾಲೆಯಲ್ಲಿ ಏಕಾಗ್ರಚಿತ್ತದಿಂದ ಕೇಳುವ, ಅಂದಿನ ಪಾಠವನ್ನು ಅಂದೇ ಓದುವ ಪ್ರವೃತ್ತಿನನಗೆ ಸಹಾಯವೆನಿಸುತು ಎನ್ನುವ ಮಧು, ಸಕರ್ಾರಿ ಶಾಲೆಯಲ್ಲಿ ಉತ್ತಮ ಕೌಶಲ್ಯವಿರುವ ಶಿಕ್ಷಕರಿದ್ದಾರೆ ಅವರ ಮಾರ್ಗದರ್ಶನ ಯಶಸ್ಸಿಗೆ ರಾಜಮಾರ್ಗವಾಯಿತು ಎನ್ನುವ ಹೊತ್ತಿನಲ್ಲೇ, ಗ್ರಾಮೀಣ ಹಾಗೂ ಬಡ ಮಕ್ಕಳಿರುವ ಇಂತಹ ಸಕರ್ಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿ ಮುಂದಿನ ಬಡ ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಿ ಎಂಬುದಷ್ಟೇ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ನನ್ನ ವಿನಮ್ರ ಮನವಿ ಎನ್ನುತ್ತಾನೆ ಮಧು.
ತನ್ನ ಮಗನ ಸಾಧನೆಯಿಂದ ಉಲ್ಲಾಸಿತರಾಗಿರುವ ಆಟೋರಿಕ್ಷಾ ಚಾಲಕ ಸಿ.ಎನ್.ರವಿಕುಮಾರ್, ನನಗೆ ಎಷ್ಟೇ ಕಷ್ಟವಾಗಲಿ ಅವನು ಅಂದುಕೊಂಡಿದ್ದನ್ನು ಓದುಸುತ್ತೇನೆ ಎಂದು ಹೇಳುವಷ್ಟರಲ್ಲಿ ಗದ್ಗಿತರಾಗುವ ಅವರು, ಅವನು ಒಳ್ಳೆಯ ಸ್ಥಾನಕ್ಕೆ ಮುಟ್ಟಿದ ಮೇಲೆ ಅವನಿಂದ ಹೆಚ್ಚಿನದೇನು  ಬಯಸುವುದಿಲ್ಲ, ಒಂದು ಬ್ಯಾಕ್ ಇಂಜಿನ್ ಆಟೋ ಕೊಡಿಸಿದರೆ ಸಾಕು, ಅದನ್ನು ಓಡಿಸಿಕೊಂಡು ಆನಂದವಾಗಿರುತ್ತೇನೆ ಎನ್ನುವಷ್ಟರಲ್ಲಿ ರವಿಯವರ ಕಣ್ಣಲ್ಲಿದ್ದ ನೀರು ಜಳ ಜಳನೆ ಕೆನ್ನೆ ಮೇಲೆ ಬಂದೇ ಬಿಟ್ಟವು.
ಪಡೆದ ಅಂಕಗಳು: ಕನ್ನಡ-119, ಇಂಗ್ಲೀಷ್ 96, ಹಿಂದಿ-95, ಗಣಿತ-90, ವಿಜ್ಞಾನ-93, ಸಮಾಜವಿಜ್ಞಾನ-97 ಅಂಕಗಳು ಒಟ್ಟು 590(ಶೇ.94.4) ತಾಲೋಕಿಗೆ ಪ್ರಥಮ


ಚಿ.ನಾ.ಹಳ್ಳಿ: ಎಸ್.ಎಸ್.ಎಲ್.ಸಿ.ಯಲ್ಲಿ ಶೇ.75.63 ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.7: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.75.63ರಷ್ಟು ಫಲಿತಾಂಶ ದೊರೆತಿದ್ದು, ಒಟ್ಟು ಮೂರು ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ, 44 ವಿದ್ಯಾಥರ್ಿಗಳು ಅತ್ಯುನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿ.ಇ.ಓ, ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 59 ಶಾಲೆಗಳಿದ್ದು,  ಒಟ್ಟು 2577  ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ 1949ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 1072ಹೆಣ್ಣುಮಕ್ಕಳು ಹಾಗೂ 877ಗಂಡುಮಕ್ಕಳು ತೇರ್ಗಡೆಯಾಗಿದ್ದಾರೆ, ತಾಲೂಕಿನಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳೆಂದರೆ, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 44 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ತಿಮ್ಮನಹಳ್ಳಿ ಶ್ರೀ ಶಾರದ ವಿದ್ಯಾಪೀಠ ಪ್ರೌಡಶಾಲೆಯಲ್ಲಿ 30 ವಿದ್ಯಾಥರ್ಿಗಳು, ಚಿ.ನಾ.ಹಳ್ಳಿ ನವೋದಯ ಪ್ರೌಡಶಾಲೆ(ಆಂಗ್ಲ) ಶಾಲೆಯಲ್ಲಿ 16 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ಈ ಮೂರು ಶಾಲೆಗಳು ಆಂಗ್ಲಮಾಧ್ಯಮ ಶಾಲೆಗಳು.
 ಸಕರ್ಾರಿ ಪ್ರೌಢಶಾಲೆಗಳ ಪೈಕಿ ಸಾಸಲು ಸಕರ್ಾರಿ ಪ್ರೌಢಶಾಲೆ ಶೇ.94.59 ಫಲಿತಾಂಶ ಪಡೆದಿದೆ. ಬರಗೀಹಳ್ಳಿಯ ಬೂದೇವಿ ಗ್ರಾಮಾಂತರ ಪ್ರೌಢಶಾಲೆ 6.67 ಪಡೆದಿದೆ, ಮುದ್ದೇನಹಳ್ಳಿಯ ಇಂದಿರಾಗಾಂಧಿ ಪ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದಿದೆ,  ಈ ಶಾಲೆಯಲ್ಲಿ 25 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು. 
ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳು:  ಸಕರ್ಾರಿ ಪ್ರೌಡಶಾಲೆ ವಿದ್ಯಾಥರ್ಿ ಮಧುಸೂದನ್.ಆರ್ 590 (94.40) ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಳಿಯಾರಿನ ವಾಸವಿ(ಆಂಗ್ಲ) ಶಾಲೆಯ ಸೀಮ.ಎಸ್584(93.44), ತನುಶ್ರೀ ಬಿ.ಎಂ.580(92.80), ಕನಕದಾಸ ಪ್ರೌಡಶಾಲೆ ಹುಳಿಯಾರು ಮಸ್ತಾನ್.ಎಂ.566(90.56), ವಾಸವಿ ಪ್ರೌಡಶಾಲೆ(ಆಂಗ್ಲ)ಹುಳಿಯಾರು ಸಚಿನ್.ಪಿ564(90.24), ಸ.ಪ.ಪೂ.ಕಾ(ಪ್ರೌ.ವಿ) ಹುಳಿಯಾರು-ಕೆಂಕೆರೆ ಸೋನಿಯ ಕೆ.ಎಂ.563(90.08) , ಶ್ರೀ ವಿಶ್ವಭಾರತಿ ಪ್ರೌಡಶಾಲೆ ಬರಕನಹಾಳ್ ಪ್ರಮೋದ್ಕುಮಾರ್.ಹೆಚ್.ಎಲ್563(90.08) ಸೇರಿದಂತೆ ಉಳಿದ 37ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ತಾಲ್ಲೂಕಿನ ಸಕರ್ಾರಿ ಶಾಲೆಗಳ ಶೇಕಡಾವಾರು ಫಲಿತಾಂಶದ ವಿವರ :ಸ.ಪ.ಪೂ.ಕಾಲೇಜು ಗೋಡೆಕೆರೆ ಶೇ.73.58, ಸ.ಪ.ಪೂ.ಕಾಲೇಜು ಹುಳಿಯಾರು ಕೆಂಕೆರೆ80.56, ಸ.ಪ.ಪೂ.ಕಾಲೇಜು ಬೋನಕಣಿವೆ 69.23, ಸಕರ್ಾರಿ ಪ್ರಡಶಾಲೆ ಯಳನಡು 76.92, ಸಕರ್ಾರಿ ಪ್ರೌಢಶಾಲೆ ದಸೂಡಿ 91.18, ಸಕರ್ಾರಿ ಪ್ರೌಢಶಾಲೆ ಸಾಸಲು 94.59, ಸಕರ್ಾರಿ ಪೌಢಶಾಲೆ ಚಿಕ್ಕನಾಯಕನಹಳ್ಳಿ 82.35, ಸಕರ್ಾರಿ ಪ್ರೌಡಶಾಲೆ ಉದರ್ು ಹುಳಿಯಾರು 83.33, ಸಕರ್ಾರಿ ಪ್ರೌಡಶಾಲೆ ಬರಗೂರು 92.11, ಸಕರ್ಾರಿ ಪ್ರೌಡಶಾಲೆ ಬರಶಿಡ್ಲಹಳ್ಳಿ 87.50, ಸಕರ್ಾರಿ ಪ್ರೌಡಶಾಲೆ ದಬ್ಬಗುಂಟೆ 90.00, ಸಕರ್ಾರಿ ಪ್ರೌಡಶಾಲೆ ಜೆ.ಸಿ.ಪುರ 86.96, ಸಕರ್ಾರಿ ಪ್ರೌಡಶಾಲೆ ಕಾಮಲಾಪುರ 60.00, ಸಕರ್ಾರಿ ಪ್ರೌಡಶಾಲೆ ಬಡಕೆಗುಡ್ಲು 86.96, ಸಕರ್ಾರಿ ಪ್ರೌಡಶಾಲೆ ಕೆಂಕೆರೆ 61.11, ಸಕರ್ಾರಿ ಪ್ರೌಡಶಾಲೆ ಗೂಬೆಹಳ್ಳಿ-ನಂದಿಹಳ್ಳಿ 93.75, ಸಕರ್ಾರಿ ಪ್ರೌಡಶಾಲೆ ಹೆಚ್.ತಮ್ಮಡಿಹಳ್ಳಿ 88.00, ಸಕರ್ಾರಿ ಪ್ರೌಡಶಾಲೆ ತೀರ್ಥಪುರ 85.71, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 100.00, ಯು.ಪಿ.ಆರ್.ಎಮ್.ಎಸ್.ಸಿ ಜಿಎಚ್ಎಸ್ಬೆಳ್ಳಾರ 68.42, 
 ತಾಲ್ಲೂಕಿನ ಅನುದಾನಿತ ಶಾಲೆಗಳ ಶೇ.ಫಲಿತಾಂಶದ ವಿವರ: ಡಿವಿಪಿಬಾಲಕರ ಪ್ರೌಡಶಾಲೆ ಚಿ.ನಾ.ಹಳ್ಳಿ ಶೇ.74.75, ಶಾರದ.ಪ.ಪೂ.ಕಾಲೇಜು ತಿಮ್ಮನಹಳ್ಳಿ 72.22, ಶ್ರೀ ಜಯಬಾರತಿ ಪ.ಪೂ.ಕಾಲೇಜು ಮತಿಘಟ್ಟ 71.43, ಜಿ.ವಿ.ಪಿ.ಕಿರಿಯ ಕಾಲೇಜು ಹಂದನಕೆರೆ 58.62, ಜನತಾಪ.ಪೂ.ಕಾಲೇಜು ಶೆಟ್ಟಿಕೆರೆ 62.86, ಡಿವಿಪಿ ಬಾಲಕಿಯರ ಪ್ರೌಡಶಾಲೆಚಿ.ನಾ.ಹಳ್ಳಿ 86.49, ಶ್ರೀ ಸಿದ್ದಗಂಗಾ ಪ್ರೌಡಶಾಲೆ ಕಂದಿಕೆರೆ 63.16, ಟಿ.ಆರ್.ಎಸ್.ಆರ್.ಬಾ.ಪ್ರೌಡಶಾಲೆ ಹುಳಿಯಾರು 89.47,  ಶ್ರೀ ರಂಗನಾಥ ಪ್ರೌಡಶಾಲೆ ಬೆಳಗುಲಿ 83.56, ಡಾ.ಅಂಭೇಡ್ಕರ್ ಪ್ರೌಡಶಾಲೆ ಚಿ.ನಾ.ಹಳ್ಳಿ 58.33, ಶ್ರೀಗವಿರಂಗನಾಥ ಪ್ರೌಡಶಾಲೆ ದೊಡ್ಡೆಣ್ಣಗೆರೆ 86.79, ಶ್ರೀ ಸ್ವಾಮಿವಿವೇಕಾನಂದ ಪ್ರೌಡಶಾಲೆ ಕುಪ್ಪೂರು 68.89, ಡಾ.ಅಂಭೇಡ್ಕರ್ ಪ್ರೌಡಶಾಲೆ ತೀರ್ಥಪುರ-ಕಾತ್ರಿಕೆಹಾಳ್ 78.13, ಶ್ರೀ ಕನಕದಾಸ ಪ್ರೌಡಶಾಲೆ ಹುಳಿಯಾರು 73.68, ಕಾಳಿದಾಸ ಪ್ರೌಡಶಾಲೆ ಹಂದನಕೆರೆ 81.25, ಶ್ರೀ ಮಾರುತಿ ಗ್ರಾಮಾಂತರ ಪ್ರೌಡಶಾಲೆ ಚಿಕ್ಕಬಿದರೆ 73.02, ಶ್ರೀ ಜ್ಞಾನಪೀಠ ಪ್ರೌಡಶಾಲೆ ಚಿ.ನಾ.ಹಳ್ಳಿ 63.83, ನಿವರ್ಾಣೇಶ್ವರ ಬಾಲಿಕ ಪ್ರೌಡಶಾಲೆ ಚಿ.ನಾ.ಹಳ್ಳಿ 78.72, ಶ್ರೀ ಲಕ್ಷ್ಮೀನರಸಿಂಹಸ್ವಾಮಿಬೈಲಪ್ಪನಮಠ 66.67, ದೇವರಾಜುಅರಸ್ ಪ್ರೌಡಶಾಲೆ ಮಲಗೊಂಡನಹಳ್ಳಿ 96.77, ವಿಶ್ವಭಾರತಿ ಪ್ರೌಡಶಾಲೆ ಗಾಣದಾಳು 57.89, ಬಸವೇಶ್ವರ ಪ್ರೌಡಶಾಲೆ ಅಣೇಕಟ್ಟೆ79.41, ಶ್ರೀ ರಾಮಲಿಂಗೇಶ್ವರ ಪ್ರೌಡಶಾಲೆ ರಾಮನಹಳ್ಳಿ 68.75, ವಿಶ್ವಭಾರತಿ ಪ್ರೌಡಶಾಳೆ ಬರಕನಹಾಳ್ 52.17, ಬಸವೇಶ್ವರ ಪ್ರೌಡಶಾಲೆ ಹುಳಿಯಾರು 70.00, ಜಿ.ವಿ.ಪಿ.ಬಾಲಿಕ ಪ್ರೌಡಶಾಲೆ ಹಂದನಕೆರೆ 60.00, ಜಿ.ವಿ.ಪಿ.ಪ್ರೌಡಶಾಲೆ ಸೀಗೇಬಾಗಿ 60.00, ವಿದ್ಯಾರಣ್ಯಾ ಪ್ರೌಡಶಾಲೆ ಬೊಮ್ಮೇನಹಳ್ಳಿ 62.50, ಶ್ರೀ ಚಿತ್ರಲಿಂಗೇಶ್ವರ ಪ್ರೌಡಶಾಲೆ ಹರೇನಹಳ್ಳಿಗೇಟ್ 58.33, ಬಾಪೂಜಿ ಪ್ರೌಡಶಾಲೆ ಬೇವನಹಳ್ಳಿ 40.00, ಮಾರಮ್ಮದೇವರ ಪ್ರೌಡಶಾಲೆ ದೊಡ್ಡರಾಂಪುರ 67.74, ಭೂದೇವಿ ಗ್ರಾಮಾಂತರ ಪ್ರೌಡಶಾಲೆ ಬರಗೀಹಳ್ಳಿ 6.67.
 ತಾಲ್ಲೂಕಿನ ಅನುದಾನ ರಹಿತ ಶಾಲೆಗಳ ಶೇಕಡವಾರು ಫಲಿತಾಂಶದ ವಿವರ: ರಾಮಾಂಜನೇಯ ಪ್ರೌಡಶಾಳೆ ಗೂಬೇಹಳ್ಳಿ 32.00, ಸಾಕ್ಷರತಾ ಮಹಿಳಾ ಪ್ರೌಡಶಾಲೆ ಗುರುವಾಪುರ 56.00, ವಾಸವಿ ಆಂಗ್ಲ ಪ್ರೌಡಶಾಲೆ ಹುಳಿಯಾರು 91.57, ರೋಟರಿ ಆಂಗ್ಲ ಪ್ರೌಡಶಾಲೆ ಚಿ.ನಾ.ಹಳ್ಳಿ 96.88, ಶ್ರೀ ಶಾರದ ವಿದ್ಯಾಪೀಠ ಪ್ರೌಡಶಾಲೆ ಆಂಗ್ಲ ತಿಮ್ಮನಹಳ್ಳಿ 100.00, ಇಂದಿರಾಗಾಂಧಿ ಪ್ರೌಡಶಾಲೆ ಮುದ್ದೇನಹಳ್ಳಿ 00.00, ನವೋದಯ ಪ್ರೌಡಶಾಲೆ(ಆಂಗ್ಲ)ಚಿ.ನಾ.ಹಳ್ಳಿ 100.00, ಒಟ್ಟು ತಾಲ್ಲೂಕು ಶೇಖಡ.76.87 ಫಲಿತಾಂಶ ಪಡೆದಿದೆ. 







Monday, May 6, 2013


ಚಿ.ನಾ.ಹಳ್ಳಿ ಮತದಾನ: ಎರೆಕಟ್ಟೆ ಅತಿಹೆಚ್ಚು, ಮರನಡುಪಾಳ್ಯ ಅತಿಕಡಿಮೆ
ಚಿಕ್ಕನಾಯಕನಹಳ್ಳಿ,ಮೇ.6: ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 1,98,398 ಮತದಾರರಲ್ಲಿ 1,60,041 ಮತದಾರರು ತಮ್ಮ ಹಕ್ಕುಚಲಾಯಿಸಿದ್ದಾರೆ. ಇದರಲ್ಲಿ ಪುರಷರು 81,880 ಮಹಿಳಾ ಮತದಾರರು78,161 ಪಾಲ್ಗೊಂಡಿದ್ದರು. ಇ.ಡಿ.ಸಿ.ಸೇರಿದಂತೆ ಒಟ್ಟು ಶೇ.81,13 ಮತಚಲಾವಣೆಗೊಂಡಿದೆ.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಕಂದಿಕೆರೆ ಹೋಬಳಿಯ ಎರೆಕಟ್ಟೆಯಲ್ಲಿ ಶೇ.93.23ರಷ್ಟು ಮತಚಲಾವಣೆಗೊಂಡಿದ್ದರೆ, ಅತಿ ಕಡಿಮೆ ಹುಳಿಯಾರು ಹೋಬಳಿಯ ಮರೆನಡು ಪಾಳ್ಯದಲ್ಲಿ 62.61 ಮತಗಳು ಚಲಾವಣೆಗೊಂಡಿದೆ.
ಚಿ.ನಾ.ಹಳ್ಳಿ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 17,568 ಮತದಾರರಿದ್ದು 13,157 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ, ಹುಳಿಯಾರಿನಲ್ಲಿ 10,774ಮತದಾರರಲ್ಲಿ 8,115 ಮತ ಚಲಾವಣೆಗೊಂಡಿದೆ.
ಬೆಟ್ಟಿಂಗ್ ಭರಾಟೆ: ಕ್ಷೇತ್ರದಾದ್ಯಂತ ಬೆಟ್ಟಿಂಗ್ ಭರಾಟೆ ಹೆಚ್ಚಾಗಿದ್ದು, ಮೊದಲ ಸ್ಥಾನಕ್ಕೆ ಜೆ.ಡಿ.ಎಸ್.ಕೆ.ಜೆ.ಪಿ, ಬಿ.ಜೆ.ಪಿ. ಈ ಮೂರು ಪಕ್ಷಗಳಲ್ಲಿ  ಯಾರೆಂಬುದಕ್ಕೆ ಲಕ್ಷ ರೂಗಳಿಗೂ ಅಧಿಕ ಹಣವನ್ನು ಕಟ್ಟುತ್ತಿದ್ದರೆ, ಕೆ.ಜೆ.ಪಿ. ಮತ್ತು ಬಿ.ಜೆ.ಪಿ. ವಲಯದಲ್ಲೂ ಹೆಚ್ಚು ಕುತೂಹಲವನ್ನು ಇಟ್ಟುಕೊಂಡಿರುವ ಅಭಿಮಾನಿಗಳು ಹಣವನ್ನು ಕಟ್ಟುತ್ತಿದ್ದಾರೆ. ಇದು ಒಂದು ರೀತಿ ಥ್ರಿಲ್ ಕೊಡುವ ಸಂಗತಿ ಕೆಲವರಿಗೆ ಅನ್ನಿಸಿದರೆ, ಇನ್ನೂ ಕೆಲವರಿಗೆ ಇದು ಜೂಜಿಗೆ ಸರುಕಾಗಿದೆ, ಈ ದಂಧೆಗೆ ಲಕ್ಷಾಂತರ ಹಣವನ್ನು ವ್ಯಯಿಸುತ್ತಿರುವುದು ತಾಲೂಕಿನಾದ್ಯಂತ ನಡೆಯುತ್ತಿದೆ. 

ಹಸುವಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವು

 ಚಿಕ್ಕನಾಯಕನಹಳ್ಳಿ, ತಾಲೂಕಿನ ಚಿಕ್ಕರಾಂಪುರ ಗ್ರಾಮದ ಹೊಲದಲ್ಲಿ ಮೇಯುತ್ತಿದ್ದ ಹಸುವಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರಿಗೆ ತೀವ್ರತರದ ಪೆಟ್ಟಾಗಿ ಚಿ.ನಾ.ಹಳ್ಳಿಯ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಹಲವು ಭಾಗಗಳಲ್ಲಿ ಸೋನೆ ಮಳೆಯಾಗಿದ್ದು ಗುಡ್ಡಪ್ರದೇಶವಾದ  ಕಂದಿಕೆರೆ ಹೋಬಳಿಯ ಚಿಕ್ಕರಾಂಪುದಲ್ಲಿ ಮಧ್ಯಾಹ್ನ ಎರಡು ಘಂಟೆ ಸುಮಾರಿನಲ್ಲಿ ಅದೇ ಗ್ರಾಮದ ಲೆಂಕಪ್ಪ ಹೋಲದಲ್ಲಿ ಹಸು ಮೇಯಿಸುತ್ತಿದ್ದು  ಸಂದರ್ಭದಲ್ಲಿ ಗುಡುಗು ಸಹಿತ ಹೊಡೆದ ಸಿಡಿಲಿಗೆ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ, ಅಲ್ಲದೆ ಅಲ್ಲಿಯೇ ಇದ್ದ ಲೆಂಕಪ್ಪ(50), ಪ್ರದೀಪ್(10), ತಿಮ್ಮದಾಸಯ್ಯ(55) ರವರಿಗೆ ತೀವ್ರತರವಾದ ಆಘಾತವಾಗಿದ್ದು, ಮೆಂಟಲ್ ಶಾಕ್ ಆಗಿದೆ ಎನ್ನಲಾಗಿದೆ, ಈ ಮೂವರಿಗೆ ಚಿ.ನಾ.ಹಳ್ಳಿಯ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಆಸ್ಪತ್ರೆಗೆ ಶಾಸಕ ಸಿ.ಬಿ.ಸುರೇಶ್ಬಾಬು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬವರ್ಗ ಪರಿಹಾರಕ್ಕಾಗಿ ಆಗ್ರಹಿಸಿತು.
ಚಿಕ್ಕನಾಯಕನಹಳ್ಳಿ, ವಿಧಾನ ಸಭಾ ಚುನಾವಣೆಯಲ್ಲಿ ಶೇ.77ರಷ್ಟು ಮತದಾನವಾಗಿದೆ, ಒಂದೆರಡು ಕಡೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುವುದು ಬಿಟ್ಟರೆ ಬಹುತೇಕ ಎಲ್ಲಾ ಕಡೆ ಶಾಂತವಾಗಿದೆ.
ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಒಂದು ಲಕ್ಷದ ತೊಂಭತ್ತೆಂಟು ಸಾವಿರದ ಮೂರು ನೂರ ನಲವತ್ತೊಂಭತ್ತು ಮತದಾರರಿದ್ದು ಇದರಲ್ಲಿ ಒಂದು ಲಕ್ಷದ ಒಂದು ನೂರ ಮೂವತ್ತೊಂದು ಪುರಷರು, ತೊಂಭತ್ತೆಂಟು ಸಾವಿರದ ಇನ್ನೂರ ಹದಿನೆಂಟು ಮಹಿಳಾ ಮತದಾರಿದ್ದಾರೆ.
ಬೆಳಗ್ಗೆ 7ಗಂಟೆಯಿಂದ 10ಗಂಟೆಯವರೆಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ವಿರಳವಾಗಿತ್ತು. 10ಗಂಟೆ ನಂತರ ಮತದಾರರು ಮತಗಟ್ಟೆಗೆ ಬರಲಾರಂಭಿಸಿದರು 12ರವೇಳೆಗೆ ಮತದಾನ ಚುರುಕುಗೊಂಡು 1.30ರ ಸುಮಾರಿನಲ್ಲಿ ಜನ ಓಟು ಹಾಕಲು ಉದ್ದನೆಯ ಸಾಲುಗಳಲ್ಲಿ ನಿಂತಿರುವುದು ಕಾಣಬರುತ್ತಿತ್ತು. ಸುಮಾರು 2ಗಂಟೆಯ ವೇಳೆಯಲ್ಲಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಮತದಾನ ಮಂದಗತಿ ಕಂಡುಕೊಂಡಿತು. ಮೂರರ ನಂತರ ಬಿರುಸಿನ ಮತದಾನ ನಡೆಯಿತು.
ನವಿಲೆ, ಗೋಡೆಕೆರೆ, ಭರಣಾಪುರ, ಶೆಟ್ಟೀಕೆರೆಯ ಮತಕೇಂದ್ರದಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೆ, ಜೆ.ಸಿ.ಪುರದ ಮತಕೇಂದ್ರದಲ್ಲಿ ಭೂತ್ ಏಜೆಂಟ್ ಒಬ್ಬರು ಪಕ್ಷದ ಪರವಾಗಿ ಸಂಜ್ಞೆ ನೀಡಿದನೆಂಬ ಕಾರಣಕ್ಕೆ ಕೆಲವು ನಿಮಿಷ ಗೊಂದಲವಾಯಿತೆನ್ನಲಾಗಿದೆ.

Saturday, May 4, 2013



ಅಕ್ರಮ ಮರಳು ಸಾಗಾಣಿಕೆ: ಗ್ರಾಮಸ್ಥರಿಂದ  ದಿಬಂಧನ
 
ಚಿಕ್ಕನಾಯಕನಹಳ್ಳಿ,ಮೇ.3 : ಚುನಾವಣಾ ಗಲಾಟೆಯಲ್ಲಿ ಎಲ್ಲರೂ ಮತಪ್ರಚಾರ ಕಾರ್ಯದಲ್ಲಿ ತೊಡಗಿರುತ್ತಾರೆ, ಇದೇ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬ ಕೆರೆಯಲ್ಲಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ತಮ್ಮ ತೋಟಕ್ಕೆ ರಾಶಿರಾಶಿ ಮರಳನ್ನು ದಾಸ್ತಾನು ಮಾಡಿದ್ದನ್ನು ಕಂಡ ಗ್ರಾಮಸ್ಥರು ಈ ಕೃತ್ಯವನ್ನು ಗಮನಿಸಿ ಮಾಧ್ಯಮದವರಿಗೆ ಸಾಕ್ಷಿ ಸಮೇತವಾಗಿ ಹಿಡಿದುಕೊಟ್ಟ ಘಟನೆ ಕಾಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಡೇನಹಳ್ಳಿ  ಕೆರೆಯಲ್ಲಿ ನರಸಿಂಹಮೂತರ್ಿ ಎಂಬ ವ್ಯಕ್ತಿ ಜೆಸಿಬಿಯಿಂದ ಮರಳನ್ನು ಎತ್ತೊಯ್ದು ತಮ್ಮ ಸ್ವಂತ ತೋಟದ ಸುಮಾರು ನೂರು ತೆಂಗಿನ ಮರಗಳ ಬದಿಯಲ್ಲಿ ಮರಳ ರಾಶಿಯನ್ನು ಅಕ್ರಮವಾಗಿ ಮಾಡಿಕೊಂಡಿದ್ದ ಮರಳನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಸಾಕ್ಷಿ ಸಮೇತವಾಗಿ ಮಾಧ್ಯಮದವರಿಗೆ ತೋರಿಸಿದರು.
ಈ ಸಂದರ್ಭದಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ನರಸಿಂಹಮೂತರ್ಿ ಮತ್ತು ಗ್ರಾಮಸ್ಥರಲ್ಲಿ ಮಾತಿನ ಚಕಮಕಿ ನಡೆಯುತ್ತಿತ್ತು. ಆಗ ಗ್ರಾಮಸ್ಥರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಯಾರು ಇಲ್ಲದ ಸಂದರ್ಭವನ್ನು ಕಾಯ್ದಿದ್ದು ಬೆಳಗಿನ 10ರಿಂದ ಸಂಜೆ 3ರವರೆಗೆ ನಿರಂತರವಾಗಿ ಅಕ್ರಮವಾಗಿ ಮರಳನ್ನು ತಮ್ಮ ತೋಟದಲ್ಲಿ ಸಂಗ್ರಹ ಮಾಡಿ ನಿಧಾನವಾಗಿ ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ಅಕ್ರಮವಾಗಿ ತಮ್ಮ ತೋಟದಲ್ಲಿ ಸಂಗ್ರಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
 ಈ ವಿಚಾರವನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಸುಮಾರು ಐವತ್ತು ಲೋಡಿನಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಘಟನೆ ಬೆಳಕಿಗೆ ಬಂದಿತು.
ಈ ಸಂದರ್ಭ ನರಸಿಂಹಮೂತರ್ಿಯವರು ಈ ವಿಚಾರವನ್ನು ತಳ್ಳಿ ಹಾಕಿ ನಾನು ತೋಟಕ್ಕೆ ಮಣ್ಣು ಹೊಡೆಯುವ ಉದ್ದೇಶದಿಂದ ಮರಳು ಮಿಶ್ರಿತ ಮಣ್ಣನ್ನು ತೋಟಕ್ಕೆ ಹೊಡೆದಿದ್ದೇನೆ ಯಾವುದೇ ಕಾರಣಕ್ಕೂ ಅಕ್ರಮ ಮರಳು ಸಾಗಾಣಿಕೆ ಮಾಡಿಲ್ಲ ಎಂದು ಗ್ರಾಮಸ್ಥರ ಮಾತನ್ನು ತಿರಸ್ಕರಿಸಿದರು. 
ಅದೇ ಸಂದರ್ಭಕ್ಕೆ ಸ್ಥಳಕ್ಕಾಗಮಿಸಿದ ಕಸಬಾ ಹೋಬಳಿಯ ಕಾರ್ಯದಶರ್ಿಹನುಮಂತನಾಯಕ್ರವರು ಸ್ಥಳ ಪರಿಶೀಲನೆ ಮಾಡಿ ನಡೆದಿರುವ ಘಟನೆಯನ್ನು ವೀಕ್ಷಿಸಿ ಈ ಅಕ್ರಮ ದಂಧೆಗೆ ಬಳಸಿದ ಜೆಸಿಬಿಯನ್ನು ಹಾಗೂ ಮರಳು ದಂಧೆಯ ವಿಚಾರವನ್ನು ತಹಶೀಲ್ದಾರ್ರವರಿಗೆ ದೂರು ಸಲ್ಲಿಸುತ್ತೇನೆಂದು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮದ ಪ್ರತ್ಯಕ್ಷದಶರ್ಿಗಳಾದ ನವೀನ್, ಪ್ರತಾಪ್, ಶರತ್, ಗೋವಿಂದಯ್ಯ, ಕೋದಂಡರಾಮಯ್ಯ, ರುದ್ರಪ್ಪ, ಮೂರ್ತಣ್ಣ ಮುಂತಾದವರಿದ್ದರು.
 ಇದೇ ರೀತಿ ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಅಂತರ್ಜಲ ಕುಸಿದಿದೆ, ಈ ದಂಧೆಯ ಬಗ್ಗೆ ಗ್ರಾ.ಪಂ.ಕಾರ್ಯದಶರ್ಿಗಳು, ಪೋಲಿಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕಂಡೂ ಕಾಣದಂತೆ ಜಾಣಕುರುಡನ್ನು ಪ್ರದಶರ್ಿಸುತ್ತಿದೆ ಎಂದು ಜನರು ದೂರಿದರು.

ಚಿ.ನಾ.ಹಳ್ಳಿ: 258 ಮತಗಟ್ಟೆಗಳಿಗೆ 1032 ಜನ ಚುನಾವಣಾ ಸಿಬ್ಬಂದಿ: ಆರ್.ಓ. ಇ.ಪ್ರಕಾಶ್
ಚಿಕ್ಕನಾಯಕನಹಳ್ಳಿ,ಮೇ.4 : ವಿಧಾನಸಭಾ ಕ್ಷೇತ್ರದಲ್ಲಿನ  258 ಮತಗಟ್ಟೆಯಲ್ಲಿ 44 ಸೂಕ್ಷ್ಮ, 38 ಅತಿಸೂಕ್ಷ್ಮ ಮತಗಟ್ಟೆಗಳಿದ್ದು ಶಾಂತಿಯುತ ಮತದಾನಕ್ಕಾಗಿ 1032 ಚುನಾವಣಾ ಸಿಬ್ಬಂದಿ, 379 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರದಾದ್ಯಂತ ಚುನಾವಣಾ ಕಾರ್ಯಕ್ಕಾಗಿ ಸಿಬ್ಬಂದಿಗಳನ್ನು ವಾಹನಗಳಲ್ಲಿ  ಸಂಬಂಧಪಟ್ಟ ಮತಗಟ್ಟೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಚುನಾವಣಾ ಸಿಬ್ಬಂದಿಯು ತುಮಕೂರು ಗ್ರಾಮಾಂತರ, ತುರುವೇಕೆರೆ, ತಿಪಟೂರು ತಾಲ್ಲೂಕುಗಳಿಂದ ನಮ್ಮ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ. ಕ್ಷೇತ್ರದಾದ್ಯಂತ 1244 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದು ಅದರಲ್ಲಿ 212ಮಂದಿ ಚುನಾವಣಾ ಸಿಬ್ಬಂದಿಯನ್ನು ಕಾಯ್ದಿರಿಸಿದ್ದು 1032 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಹಾಗೂ  ಒಟ್ಟು 45 ವಾಹನಗಳನ್ನು ಬಳಸಿದ್ದು ಅವುಗಳಲ್ಲಿ 36 ಬಸ್ಸುಗಳು, 2ಮಿನಿಬಸ್ ಹಾಗೂ 7ಜೀಪ್ಗಳನ್ನು ಏಪರ್ಾಟು ಮಾಡಲಾಗಿದೆ. 
ಕ್ಷೇತ್ರದಲ್ಲಿ 258 ಮತಗಟ್ಟೆಗಳಿಗೆ 22ಜನ ಸೆಕ್ಟ್ರಲ್ ಆಫೀಸ್ರ್ಗಳನ್ನು ನೇಮಿಸಲಾಗಿದೆ. ಪ್ರತಿಯೊಬ್ಬ ಸೆಕ್ಟ್ರಲ್ ಆಫೀಸರ್ 10ರಿಂದ 12 ಬೂತ್ಗಳ ಮೇಲ್ವಿಚಾರಣೆ ವಹಿಸಿದ್ದಾರೆ ಹಾಗೂ ಚುನಾವಣಾ ಅಕ್ರಮವನ್ನು ತಡೆಯಲು 12 ತನಿಖಾ ದಳಗಳಿದ್ದು ಕ್ಷೇತ್ರದಾದ್ಯಂತ ಎಲ್ಲಾ ಪಂಚಾಯತ್ ಮಟ್ಟದ ವಿಭಾಗಗಳನ್ನು ಮಾಡಿ ಒಂದೊಂದು ವಿಭಾಗಗಳಲ್ಲಿ ಒಂದೊಂದು ತನಿಖಾದಳವನ್ನು ನೇಮಿಸಲಾಗಿದೆ ಎಂದರು. ಯಾವುದೇ ಚುನಾವಣಾ ಅಕ್ರಮಗಳು ನಡೆದಲ್ಲಿ ತನಿಖಾದಳು ವಿಷಯದ ತಿಳಿಸಿದ 15ನಿಮಿಷದಲ್ಲಿ ಹಾಜರಿರುತ್ತಾರೆಂದು ಚುನಾವಣಾಧಿಕಾರಿ ಇ.ಪ್ರಕಾಶ್ ಮಾಧ್ಯಮದವರಿಗೆ ತಿಳಿಸಿದರು. 
ವೃತ್ತ ನಿರೀಕ್ಷಕರಾದ ಕೆ.ಪ್ರಭಾಕರ್ರವರು ಪೋಲಿಸ್ ಸಿಬ್ಬಂದಿಯ ನಿಯೋಜನೆ ಬಗ್ಗೆ ತಿಳಿಸಿ, ಚುನಾವಣಾ ಕಾರ್ಯಕ್ಕಾಗಿ 2 ಸಿಪಿಐ, 7ಪಿಎಸ್ಐ, 15ಎ.ಎಸೈ, 47ಹೆಡ್ಕಾನ್ಸೇಟಬಲ್, 106ಪಿಸಿಗಳನ್ನು, 10ಹೋಮ್ಗಾಡ್ಸರ್್ ಹಾಗೂ 84 ಸಿಐಎಸ್ಎಫ್ಗಳನ್ನು ನಿಯೋಜಿಸಲಾಗಿದೆ ಒಟ್ಟಾರೆಯಾಗಿ ತಾಲ್ಲೂಕಿನಾದ್ಯಂತ 379 ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.







Friday, April 26, 2013


ಸಿ.ಗುರುಮೂತರ್ಿ ಕೊಟಿಗೆಮನೆ.
ಬಿಸಿಲಿನ ಧಗೆಯಲ್ಲಿ ಅಭ್ಯಥರ್ಿಗಳಿಂದ ಚುನಾವಣಾ ಕಾವು



ಚಿಕ್ಕನಾಯಕನಹಳ್ಳಿ,ಏ.26: ಜಾತಿ ಮತ್ತು ವ್ಯಕ್ತಿ ಆಧಾರಿತವಾಗಿರುವ ಇಲ್ಲಿನ ವಿಧಾನ ಸಭಾ ಚುನಾವಣೆಯ ಕಾವು ಬಿಸಲಿನ ಧಗೆಯ ಜೊತೆ ಪೈಪೋಟಿಗಿಳಿದಿದೆ. ಕುಡಿಯುವ ನೀರಿಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕಿ.ಲೋ.ಮೀಟರ್ ಗಟ್ಟಲೆ ಬಿಂದಿಗೆ ಹಿಡಿದು ಓಡಾಡುತ್ತಿದ್ದರೆ, ಇವರ ಹಿಂದೆ ರಾಜಕಾರಣಿಗಳು ಜಾತಿಯ ಲೇಬಲ್ ಹಿಡಿದುಕೊಂಡು ಅಲೆದಾಡುತ್ತಿದ್ದಾರೆ.
'ಜಾತಿ'ಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಮುಂದಾಗಿರುವ ಉರಿಯಾಳುಗಳು ತಮ್ಮ ಮತಬ್ಯಾಂಕ್ಗಳನ್ನು ಹೆಚ್ಚಿಸಿಕೊಳ್ಳಲು ಪ್ರಬಲ ಕೋಮಿನ ಪ್ರಭಾವಿ ನಾಯಕರುಗಳನ್ನು ಕ್ಷೇತ್ರಕ್ಕೆ ಕರೆಸಿ ಅವರ ಮೂಲಕ ತಮ್ಮ ಗೆಲುವಿನ ಕನಸುಕಾಣುತ್ತಿದ್ದಾರೆ. ಆ ಪ್ರಭಾವಿ ನಾಯಕರುಗಳು ಅಷ್ಟೇ ನಮ್ಮ ಶಕ್ತಿಯನ್ನು ರಾಜ್ಯದ ಜನತೆಗೆ ತೋರಿಸಬೇಕೆಂದರೆ ನಮ್ಮನ್ನು ಆಶೀರ್ವದಿಸಿ, ಎಂದು ಹಿಗ್ಗೂಸಿಗ್ಗಿಲ್ಲದೆ, ನೇರವಾಗಿ 'ಜಾತಿ' ರಾಜಕೀಯದ ಮಾತನಾಡುತ್ತಿದ್ದರೆ, ಸಣ್ಣಪುಟ್ಟ ಜಾತಿಯವರು ನಮ್ಮಗ್ಯಾರು ಗತಿ ಎಂಬಂತೆ ಪ್ರಶ್ನೆ ಹಾಕಿಕೊಳ್ಳುತ್ತಿದ್ದರೆ, ಇವರನ್ನು ಹಿಡಿದುಕೊಳ್ಳಲು ದುಡ್ಡು ಹೆಂಡದ ರುಚಿ ತೋರಿಸಿ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಹವಣಿಸುತ್ತಿದ್ದಾರೆ. ಇಲ್ಲಿಗೆ ಬಂದಿದೆ ಪ್ರಜಾ(ಜಾತಿ)ಪ್ರಭುತ್ವದ ಸ್ಥಿತಿ.
ಕ್ಷೇತ್ರದಲ್ಲಿನ ಜನರ ಬದುಕು ದುಸ್ತರವಾಗಿ ಜೀವನ ನಡೆಸಲು ಫ್ಯಾಕ್ಟ್ರಿಗಳನ್ನು ಹುಡುಕಿಕೊಂಡು ಅಕ್ಷರಸ್ಥ ವರ್ಗ ನಗರದ ಕಡೆಗೆ ಹೊರಟರೆ, ಕಾಫಿ ತೋಟಗಳಲ್ಲಿ ಜೀತ ಮಾಡಲು ಇನ್ನೊಂದು ವರ್ಗ ಹೋಗಿದೆ, ಒಳ್ಳೆಯ ಕೋಸರ್್ಗಳಿಲ್ಲದೆ ತಮ್ಮ ಮಕ್ಕಳ ಬಗ್ಗೆ ಚಿಂತಿಸುತ್ತಾ ಮಗದೊಂದು ವರ್ಗ ಪಟ್ಟಣ ಸೇರಿದ್ದಾರೆ. ಈಗಾಗಿ ಹಳ್ಳಿಗಳು ವೃದ್ದಾಶ್ರಮಗಳಾಗಿವೆ. ಇನ್ನೂ ಇಲ್ಲಿ ನೆಲೆಸಿರುವ ಜನರಿಗೆ ನೀರಿನ ಸಮಸ್ಯೆ, ರಸ್ತೆ, ವಿದ್ಯುತ್ ಸೇರಿದಂತೆ ಒಳ್ಳೆಯ ಆದಾಯ ಕೊಡುವ ಹಾಗೂ ನಿರಂತರ ಕೆಲಸ ಸಿಗುವಂತಹ ಕೆಲಸದ ಸಮಸ್ಯೆ ಅಪಾರವಾಗಿದ್ದರೂ ಈ ಬಗ್ಗೆ ಎಳ್ಳೆಷ್ಟು ಕಾಳಜಿಯಿಲ್ಲದ ನಾಯಕರುಗಳು, ನಮ್ಮನ್ನು ಗೆಲ್ಲಿಸಿದರೆ ಮಾತ್ರ ನಿಮ್ಮ ಸೇವೆಗೆ ನಾವು ಸಿದ್ದ ಎಂದು ಬೊಗಳೆ ಬಿಡುತ್ತಿದ್ದಾರೆ. 
ಕಣದಲ್ಲಿರುವ 11 ಅಭ್ಯಥರ್ಿಗಳ ಪೈಕಿ, ಕೆ.ಜೆ.ಪಿ.ಯ ಜೆ.ಸಿ.ಮಾಧುಸ್ವಾಮಿ, ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್, ರೈತ ಸಂಘದ ಕೆಂಕೆರೆ ಸತೀಶ್ ಈ ಮೂರು ಜನ ಲಿಂಗಾಯಿತರಾದರೆ,  ಜೆ.ಡಿ.ಎಸ್.ನ ಸಿ.ಬಿ.ಸುರೇಶ್ ಬಾಬು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್, ಪಕ್ಷೇತರ ಅಭ್ಯಥರ್ಿ ಮಂಜುಳಾ ನಾಗರಾಜ್ ಇವರು  ಕುರುಬ ಸಮಾಜಕ್ಕೆ ಸೇರಿದವರಾಗಿದ್ದಾರೆ, ಕಾಂಗ್ರೆಸ್ನ ಸತೀಶ್ ಸಾಸಲು, ಜೆ.ಡಿ.ಯು.ನ ಜಿ.ಪ್ರಕಾಶ್ ಇಬ್ಬರೂ ಗೊಲ್ಲ ಸಮಾಜದವರು, ಬಿ.ಎಸ್.ಆರ್ ಪಕ್ಷದ ಕೆ.ಎಲ್.ದೇವರಾಜು ನಾಯಕ ಸಮಾಜದವರಾದರೆ, ವೆಲ್ಫೇರ್ ಪಾಟರ್ಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯಕ್ ಮತ್ತು ಪಕ್ಷೇತರ ರಾಮಚಂದ್ರಯ್ಯ ಬರಗೂರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ, ತಾಲೂಕಿನ ಐದು ಹೋಬಳಿಗಳ ಜೊತೆಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸೇರಿಸಿಕೊಂಡು ಆರು ಹೋಬಳಿಗಳಿರುವ ದೊಡ್ಡ ಕ್ಷೇತ್ರವಾಗಿದೆ. ಒಂದು ಲಕ್ಷದ ತೊಂಭತ್ತೆಂಟು ಸಾವಿರ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಲಿಂಗಾಯಿತರು 45 ಸಾವಿರ, ಕುರುಬರು 38 ಸಾವಿರ, ಒಕ್ಕಲಿಗರು 18 ಸಾವಿರ, ಗೊಲ್ಲರು 16ಸಾವಿರ, ಮುಸ್ಲಿಂ ಮತ್ತು ಅಲ್ಪಸಂಖ್ಯಾತರು 15ಸಾವಿರ, ಪರಿಶಿಷ್ಟಜಾತಿ ಮತ್ತು ಪಂಗಡ ಸೇರಿ 40 ಸಾವಿರ, ಮಡಿವಾಳರು 4ಸಾವಿರ, ಬಲಿಜ 6ಸಾವಿರ, ಉಪ್ಪಾರರು 10ಸಾವಿರ ಮತ್ತು ಇತರೆ ಜಾತಿಯವರು 6 ಸಾವಿರ ಹೀಗೆ ಹಂಚಿ ಹೋಗಿದ್ದು ಸ್ಫಧರ್ೆಯಲ್ಲಿ ಮುಂಚೂಣಿಯಲ್ಲಿರುವ ಉರಿಯಾಳುಗಳು  ನಿಣರ್ಾಯಕ ಮತಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡ, ಮುಸ್ಲಿಂ ಮತ್ತು ಇತರೆ ಸಣ್ಣ ಪುಟ್ಟ ಜಾತಿಗಳ ಮೇಲೆ  ಕಣ್ಣಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಜಾತಿ ರಾಜಕಾರಣದ ಜತೆಗೆ ಚೆಲ್ಲುವ ಕೋಟಿಗಳ ಲೆಕ್ಕದ ಹಣವೂ ನಿಣರ್ಾಯಕವಾಗಲಿದೆ.
ಜೆ.ಸಿ.ಎಂ. ಓಟಕ್ಕೆ ಕೆ.ಎಸ್.ಕೆ. ಅಡ್ಡಗಾಲೇ. . . ?
ಜೆ.ಸಿ.ಮಾಧುಸ್ವಾಮಿಯವರ ಜೊತೆ ಲಿಂಗಾಯಿತ ಲೀಡರ್ಗಳಿದ್ದಾರೆ, ಯಡಿಯೂರಪ್ಪನವರ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾರೆ ಜೊತೆಗೆ ಅವರದೇ ಆದ 25 ಸಾವಿರ ಮತಗಳಿವೆ ಇವುಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಜೆ.ಸಿ.ಎಂ.ರವರ ನಿಷ್ಠೂರ ವರ್ತನೆ, ಅಧಿಕಾರಯುತವಾದ ಮಾತುಗಳು, ಯಾರಿಗೂ ಕೇರ್ ಮಾಡದ ನಡವಳಿಕೆಗಳಿಂದ ಹಲವರು ಬೇಸತ್ತಿದ್ದಾರೆ. ಇವುಗಳನ್ನೆಲ್ಲಾ ತನ್ನ ಪರವಾಗಿಸಿಕೊಂಡಿರುವ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಜೊತೆಗೆ  ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಹುಳಿಯಾರು ಮತ್ತು ಬುಕ್ಕಾಪಟ್ಟಣಕ್ಕೆ ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಈಗಲೂ ಸ್ಮರಿಸುವ ಆ ಭಾಗದ ಹಲವರು ಇವರ ಜೊತೆಯಲ್ಲಿದ್ದಾರೆ. ಹೇಮಾವತಿ ನೀರನ್ನು ತಾಲೂಕಿನ 27 ಕೆರೆಗಳಿಗೆ ಮಂಜೂರಾತಿ ಮಾಡಿಸುವಲ್ಲಿ ಶ್ರಮವಹಿಸಿರುವ ಕಿರಣ್ಕುಮಾರ್ ತಮ್ಮ ಶ್ರಮಕ್ಕೆ ಕೂಲಿ ಕೇಳುತ್ತಿದ್ದಾರೆ.
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗಿನ ಆಶೀವರ್ಾದ ಯಾರಿಗೆ. . .?  
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗೆ ಎಲ್ಲರ ಹೆಗಲ ಮೇಲೆ ಕೈ ಹಾಕಿ ಭಾವನಾತ್ಮಕವಾಗಿ ಮಾತನಾಡಿಸುವ ಸಿ.ಬಿ.ಸುರೇಶ್ ಬಾಬು ಸೌಮ್ಯ ಸ್ವಭಾವ, ಬಡವರಾದಿಯಾಗಿ ಅಧಿಕಾರಿಗಳವರೆಗೆ  ಎಲ್ಲರನ್ನೂ ಅಣ್ಣ, ಅಕ್ಕ, ಎಂದು ಮಾತನಾಡಿಸುತ್ತಾ ಯುವಕರ ಕಣ್ಮಣಿಯಾಗಿರುವ ಸಿ.ಬಿ.ಎಸ್. ಆಡಳಿತ ನಡೆಸುವಲ್ಲಿ ಬಿಗಿ ನಿಲುವುಗಳಿಲ್ಲವೆಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿದ್ದಾರೆ, ಇವರ ಓಟದ ಓಘಕ್ಕೆ ಕಾಂಗ್ರೆಸ್ನ ಸತೀಶ್ ಅಡ್ಡಗಾಲು ಹಾಕುತ್ತಾರಾ ಎಂಬುದೇ ಈಗಿನ ಪ್ರಶ್ನೆ.
ಒಂದು ಹಂತದಲ್ಲಿ ಇಲ್ಲಿನ ಕಾಂಗ್ರೆಸ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿತ್ತು. ಅದಕ್ಕೆ ಸ್ವಲ್ಪ ಚೇತರಿಕೆ ಕೊಟ್ಟವರು ಸತೀಶ್ ಸಾಸಲು, ಗೆಲ್ಲುವಷ್ಟು ತಾಕತ್ತು ಇಲ್ಲದಿದ್ದರೂ ತೊಡರುಗಾಲು ಕೊಡುವಷ್ಟು ಇಕ್ಕಮತ್ತು ಇದೆ. 
ಇವೆಲ್ಲಾ ಸದ್ಯದ ಲೆಕ್ಕಾಚಾರಗಳಷ್ಟೇ, ಇನ್ನೂ  ಮುಂದೈತೆ ಮಾರಿಹಬ್ಬ ಅಷ್ಟು ಹೊತ್ತಿಗೆ ಏನೇನು ಬದಲಾಗುತ್ತೋ ಕಾದುನೋಡಣ. . . . . ! 


ತಾಲೂಕಿನ 27 ಕೆರೆಗಳಿಗೆ ಹೇಮೆ ಹರಿಯುವ ಕಾಮಗಾರಿ ಬರದಿಂದ ಸಾಗುತ್ತಿದೆ.

ಚಿಕ್ಕನಾಯಕನಹಳ್ಳಿ,ಏ.26 : ತಾಲ್ಲೂಕಿನ 27 ಕೆರೆಗೆ ನೀರುಣಿಸಲಿರುವ ಹೇಮಾವತಿ ನೀರಿನ ಯೋಜನೆಯ ಕಾಮಗಾರಿಯು ಬಿಳಿಗೆರೆಯಲ್ಲಿ ಆರಂಭವಾಗಿ ಒಂದು ಕಿ.ಮೀ.ಉದ್ದದವರೆಗೆ ಕಾಮಗಾರಿಯ ಕೆಲಸ ನಡೆದಿದ್ದು  ಬಿರುಸಿನಿಂದ ಕಾಮಗಾರಿ ಮುಂದುವರೆಯುತ್ತಿದೆ.
ತಾಲ್ಲೂಕಿಗೆ ಬಿಡುಗಡೆಯಾಗಿರುವ 102ಕೋಟಿ ರೂಗಳ  ಅನುದಾನದ ಕಾಮಗಾರಿಯು ತಿಪಟೂರು ತಾಲ್ಲೂಕಿನ ಬಿಳಿಗೆರೆಯಿಂದ ಆರಂಭವಾಗಿದ್ದು ಕಾಮಗಾರಿಯು ತಾಲ್ಲೂಕಿನ ಕಡೆ ಮುಖ ಮಾಡಿದೆ. ಕಾಮಗಾರಿಯಲ್ಲಿ  ಇಟಾಚಿಗಳು ಸೇರಿದಂತೆ ಕೆಲಸಗಾರರು ಬಿರುಸಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ.
ಈಗ ನಡೆದಿರುವ ಕಾಮಗಾರಿಯಲ್ಲಿ 24 ಅಡಿವರೆಗೆ ಭೂಮಿ ಅಗೆದಿದ್ದು, ಇನ್ನೂ  2ಮೀಟರ್ ಆಳ ಇದೆ. ಕೊರೆದಿರುವ ನೆಲಕ್ಕೆ ಸಿಮೆಂಟ್ ಕಾಂಕ್ರೆಟ್ ಹಾಗೂ ಎರಡು ಕಡೆ ಭಾಗಕ್ಕೆ ಸ್ಟೋನ್ ಸ್ಟಿಚಿಂಗ್ ಹಾಕಲಾಗುವುದು. 
ಬಿಳಿಗೆರೆಯಲ್ಲಿರುವ ಸಕರ್ಾರಿ ಜಮೀನಿನಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಮುಂದಿನ ಖಾಸಗಿ ಜಮೀನಿನಲ್ಲಿ ಕಾಮಗಾರಿ ಆರಂಭವಾಗಬೇಕಿದೆ, ಖಾಸಗಿ ಜಮೀನುಗಳ ನಂತರ ಮುಂದೆ ಇರುವ ಸಕರ್ಾರಿ ಜಮೀನಿನಲ್ಲಿ ಕಾಮಗಾರಿ ಆರಂಭವಾಗಿ ಕೆಲಸ ಮುಂದುವರೆಯಲಿದೆ, ನೀರು ಹರಿಯುವ ಅನುಸಾರವಾಗಿ ಆಳ ತೆಗೆಯಲಾಗುವುದು ಹಾಗೂ ಕಾಮಗಾರಿಯು ಹದಿನೆಂಟು ತಿಂಗಳ ಟೆಂಡರ್ಗೆ ನಿಗದಿಯಾದ್ದು ಅಷ್ಟರೊಳಗೆ ಪೂರ್ಣಗೊಳಿಸಲಾಗುವುದೆಂದು ಸಂಬಂಧಪಟ್ಟ ಗುತ್ತಿಗೆದಾರರು ತಿಳಿಸಿದ್ದಾರೆ.
ಕೆಲ ರಾಜಕೀಯ ಮುಖಂಡರು ಕೆಲಸವನ್ನು ಸ್ಥಗಿತಗೊಳಿಸಲು ಗಲಾಟೆ ಮಾಡಿದ್ದರಿಂದ ಎ.ಸಿಯವರಿಂದ ಪಮರ್ಿಷನ್ ಪಡೆದು ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ತಾಲೂಕ್ ಪ್ರಮುಖ್ ಚೇತನ್ಪ್ರಸಾದ್, ಮಾಜಿ ನಾಮಿನಿ ಪುರಸಭಾ ಸದಸ್ಯ ಲಕ್ಷ್ಮಯ್ಯ ಮುಂತಾದವರಿದ್ದರು.

aPÀÌ£ÁAiÀÄPÀ£ÀºÀ½îAiÀİè eÉrJ¸ï C¨sÀåyð ¹.©.¸ÀÄgÉñï¨Á§ÄgÀªÀgÀ ZÀÄ£ÁªÀuÁ ¥ÀæZÁgÀPÉÌ  gÁ¶ÖçÃAiÀÄ CzsÀåPÀë ºÉZï.r.zÉêÉÃUËqÀ DUÀ«Ä¹zÀÝ ¸ÀAzÀ¨sÀðzÀ°è £ÀUÀgÀ PÁAUÉæ¸ï PÁAiÀÄðzÀ²ð PÉ.f.PÀȵÉÚUËqÀ ¥ÀPÀëPÉÌ ¸ÉÃ¥ÀðqÉUÉÆAqÀgÀÄ. F ¸ÀAzÀ¨sÀðzÀ°è eÉrJ¸ï C¨sÀåyð ¹.©.¸ÀÄgÉñï¨Á§Ä, ¥ÀÄgÀ¸À¨sÁ ¸ÀzÀ¸Àå ¹.r.ZÀAzÀæ±ÉÃRgï G¥À¹ÜvÀjzÀÝgÀÄ

aPÀÌ£ÁAiÀÄPÀ£ÀºÀ½î «zsÁ£À ¸À¨sÁ PÉëÃvÀæzÀ gÁªÀİAUÁ¥ÀÄgÀ UÁæ.¥ÀA.¸ÀzÀ¸Àå ©.PÉ.UÀÄgÀÄgÁeï, ªÀiÁf ¸ÀzÀ¸Àå ©.PÉ.ªÀÄAdÄ£Áxï, J¯ÉQÖçPÀ¯ï PÀAmÁæPÀÖgï dAiÀÄtÚ ªÀÄvÀÄÛ zÀ°vÀ ªÀÄÄRAqÀ ZÀAzÀæ¥Àà EªÀgÀÄUÀ¼ÀÄ PÁAUÉæ¸ï¤AzÀ eÉ.r.J¸ï.UÉ ¹.©.¸ÀÄgÉñï¨Á§Ä ¸ÀªÀÄÄäRzÀ°è ¸ÉÃ¥ÀðqÉUÉÆAqÀgÀÄ. F ¸ÀAzÀ¨sÀðzÀ°è PÉ.J¯ï.ªÀĺÀzÉêÀ¥Àà, dAiÀÄ¥ÀæPÁ±ï, vÁ.¥ÀA.¸ÀzÀ¸Àå ºÉÆ£ÉßñÀ¥Àà G¥À¹ÜvÀjzÀÝgÀÄ.


Friday, April 19, 2013


ಬಿ.ಎಸ್.ಪಿ ಪಕ್ಷ ದುಡ್ಡ ಹಂಚುವುದಿಲ್ಲ, ಎಣ್ಣೆಯನ್ನು ಹಂಚುವುದಿಲ್ಲ
ಚಿಕ್ಕನಾಯಕನಹಳ್ಳಿ,ಏ.19 : ಬಿ.ಎಸ್.ಪಿ ಪಕ್ಷ ದುಡ್ಡ ಹಂಚುವುದಿಲ್ಲ, ಎಣ್ಣೆಯನ್ನು ಹಂಚುವುದಿಲ್ಲ, ಪಕ್ಷದಲ್ಲಿ ಖುಷಿಯಿಂದ ಸೇವೆ ಮಾಡುವ ಮನೋಭಾವ ಇರುವವರೆಗೆ ಸ್ವಾಗತಿಸುತ್ತೇವೆ ಎಂದು ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಬಿಎಸ್ಪಿ ಕಛೇರಿಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ತಾ.ಬಿಜೆಪಿ ಅಧ್ಯಕ್ಷ ಸಿ.ಎಸ್.ರಾಜಣ್ಣ, ಮಾಜಿ ಗ್ರಾ.ಪಂ.ಸದಸ್ಯ ರೋಜೆಗೌಡ್ರು, ಮಾಜಿ ಪಿಎಲ್ಡಿ ಬ್ಯಾಂಕ್ ನಿದರ್ೇಶಕ ರೇವಣ್ಣರವರನ್ನು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಪತ್ರಿಕಾಗೋಷ್ಠಿಯನ್ನು ಕುರಿತು ಮಾತನಾಡಿದರು. 
ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಬಳಿಕ ಬಿಎಸ್ಪಿ ಪಕ್ಷದಲ್ಲಿ ರಾಜ್ಯ ಮಟ್ಟದ ಹುದ್ದೆ ದೊರಕಿದ್ದು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರೊಂದಿಗೆ ಚಚರ್ಿಸಿರುವುದಾಗಿ ತಿಳಿಸಿದರಲ್ಲದೆ ನಮಗೆ ಜನಸೇವೆ ಮಾಡುವ ಮನೋಭಾವ ಇದೆ ಅದಕ್ಕಾಗಿ ರಾಜಕೀಯಕ್ಕೆ ಇಳಿದಿದ್ದೇವೆ ಎಂದರು.
ಪ್ರಚಾರಕ್ಕೆಂದು ಹಳ್ಳಿಗಳಿಗೆ ತೆರಳಿದಾಗ ಅಲ್ಲಿನ ಸಾರ್ವಜನಿಕರೇ ನಮಗೆ ಸ್ವಾಗತ ಕೋರಿ ನಿಮ್ಮ ವ್ಯಕ್ತಿತ್ವ, ಕಾರ್ಯಶೈಲಿಯನ್ನು ಗುರುತಿಸಿ ನಿಮಗೆ ಮತ ಹಾಕಿ ಗೆಲುವು ದೊರಕಿಸುತ್ತೇವೆ ಎಂದಿದ್ದಾರೆ, ವಿಧಾನಸಭೆ ಚುನಾವಣೆ ನಂತರ ಮುಂದೆ ಬರುವ ಲೋಕಸಭಾ ಚುನಾವಣೆಗೂ ಪಕ್ಷದಿಂದ ಸ್ಪಧರ್ಿಸುವುದಾಗಿ ತಿಳಿಸಿದರು.
ತಾವು ಪ್ರಚಾರ ಕೈಗೊಂಡಾಗ ಜನಗಳಿಂದ ಬಂದ ಮಾತುಗಳನ್ನು ಕೇಳಿ ಮಾಜಿ ಶಾಸಕರುಗಳು ತಾಲ್ಲೂಕಿನಲ್ಲಿ ಯಾವ ಅಭಿವೃದ್ದಿಯನ್ನು ಮಾಡದೇ ಇರುವುದರಿಂದ ಒಬ್ಬ ಭಿನ್ನವಾದ ಕಾರ್ಯವೈಖರಿ ಹೊಂದಿರುವ ವ್ಯಕ್ತಿ ತಾಲ್ಲೂಕಿಗೆ ಅಗತ್ಯ ಅದಕ್ಕಾಗಿ ನಿಮಗೆ ಬೆಂಬಲಿಸುತ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಿಎಸ್ಪಿ ಪಕ್ಷದ ಜಿಲ್ಲಾ ಕಾರ್ಯದಶರ್ಿ ಸತೀಶ್ಕಂಟಲಗೆರೆ, ತಾಲ್ಲೂಕು ಅಧ್ಯಕ್ಷ ನಾರಾಯಣರಾಜು ಉಪಸ್ಥಿತರಿದ್ದರು.
ಏಳು ದಿನಗಳ ಕಾಲ ರಾಮ ಸಪ್ತಾಹ ಮಹೋತ್ಸ
ಚಿಕ್ಕನಾಯಕನಹಳ್ಳಿ,ಏ.19 : ಶ್ರೀರಾಮನವಮಿ ಪ್ರಯುಕ್ತ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಶ್ರೀ ರಾಮ ಸಪ್ತಾಹ ಮಹೋತ್ಸವವನ್ನು ಏಳು ದಿನಗಳ ಕಾಲ ವಿಜೃಂಭಣೆಯಾಗಿ ನೆರವೇರಲಿದೆ.
 ನವಗ್ರಹ ಸ್ಥಾಪನೆ, ಹೋಮ, ಮಂಗಳಾರತಿ ಅಖಂಡ ಶ್ರೀ ರಾಮ ಭಜನೆಯನ್ನು ಏರ್ಪಡಿಸಿದ್ದು ಪ್ರತಿದಿನ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಚುನಾವಣೆ ಸಂಬಂಧ ಆಕ್ಷೇಪಣೆಗಳಿಗೆ ಸಂಪಕರ್ಿಸಿ
ಚಿಕ್ಕನಾಯಕನಹಳ್ಳಿ,ಏ.19 : ವಿಧಾನಸಭಾ ಚುನಾವಣೆ ಸಂಬಂಧ ಏನಾದರೂ ಆಕ್ಷೇಪಣೆಗಳು/ಸಲಹೆಗಳು ಇದ್ದಲ್ಲಿ ಚುನಾವಣಾ ವೀಕ್ಷಕ ಚಂದ್ರಕಾಂತ್ ಕಾಡೆರವರನ್ನು ಸಂಪಕರ್ಿಸಲಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿದಿನ ಸಂಜೆ 4ರಿಂದ 5ಗಂಟೆಯವರೆಗೆ ಚುನಾವಣಾ ವೀಕ್ಷಕರನ್ನು ಸಂದಶರ್ಿಸಬಹುದಾಗಿದೆ, ವೀಕ್ಷಕರನ್ನು ಸಂಪಕರ್ಿಸಲು 8277310941 ಮೊಬೈಲ್ ನಂಬರ್ನ್ನು ನೀಡಿದ್ದಾರೆ.
aPÀÌ£ÁAiÀÄPÀ£ÀºÀ½îAiÀÄ ¥ÀÄgÀ¸À¨sÁ PÁAiÀiÁð®AiÀÄzÀ ªÀÄÄSÁå¢üPÁj ºÁUÀÆ ªÀÄvÀUÀmÉÖ C¢üPÁjUÀ¼ÀÄ ªÀÄvÀzÁ£ÀzÀ ºÀQÌ£À §UÉÎ ¸ÁªÀðd¤PÀgÀ°è CjªÀÅ ªÀÄÆr¸À®Ä ¥ÀlÖtzÀ°è eÁxÁ £ÀqɹzÀgÀÄ. 

aPÀÌ£ÁAiÀÄPÀ£ÀºÀ½î ¸À«ÄÃ¥ÀzÀ ªÀĸÁ°ÛUÀÄqÀÄè UÁæªÀÄzÀ°è ²æÃ gÁªÀÄ£ÀªÀ«Ä ºÀ§âzÀ ¥ÀæAiÀÄÄPÀÛ UÁæªÀĸÀÜgÀÄ ²æÃgÁªÀĤUÉ «±ÉõÀ ¥ÀÆeÉ ¸À°è¹zÀgÀÄ. ¥Á£ÀPÀ, ¥À®ºÁgÀªÀ£ÀÄß ¨sÀPÁÛ¢üUÀ½UÉ ºÀAZÀ¯Á¬ÄvÀÄ.
                                      

Thursday, April 18, 2013


ಸಮಾಜ ದಿನೇ ದಿನೇ ಸಾಂಸ್ಕೃತಿಕವಾಗಿ ಬಡವಾಗುತ್ತಿದೆ: ನಟರಾಜ್ ಹೊನ್ನವಳ್ಳಿ

aPÀÌ£ÁAiÀÄPÀ£ÀºÀ½îAiÀİè gÉÆÃlj ¨Á®¨sÀªÀ£ÀzÀ°è £ÀqÉzÀ AiÀÄÄUÁ¢ ¸ÀA¨sÀæªÀiÁZÀgÀuÉUÁV £ÀqÉzÀ PÀ«UÉÆÃ¶×AiÀİè JA.«.£ÁUÀgÁeïgÀªÀgÀ PÀ£ÀßqÀ ¸Á»vÀå ªÀÄvÀÄÛ ¸ÀA¸ÀÌøw PÉÆÃ±À ªÀ£ÀÄß «zÁåªÁZÀ¸Ààw PÀ«vÁPÀȵÀÚ ©qÀÄUÀqÉ ªÀiÁrzÀgÀÄ. gÉÆÃlj CzsÀåPÀë JA.«.£ÁUÀgÁeïgÁªï, gÀAUÀPÀ«Äð £ÀlgÁeïºÉÆ£ÀߪÀ½î, PÀ« ¹.JZï.ªÀÄjzÉêÀgÀÄ, ¦.L.ºÉÊUËæAqïì E£ïì¥ÉPÀÖgï gÀ«Ã±ï, ZÀ®£ÀavÀæ ¤zÉÃð±ÀPÀ °AUÀzÉêÀgÀÄ qÁ.¹.JA.¸ÀÄgÉñï PÀ¸Á¥À CzsÀåPÀë gÀ«PÀĪÀiÁgï  ªÀÄwÛvÀgÀgÀÄ G¥À¹ÜvÀjzÀÝgÀÄ.

aPÀÌ£ÁAiÀÄPÀ£ÀºÀ½îAiÀİè gÉÆÃlj ¨Á®¨sÀªÀ£ÀzÀ°è £ÀqÉzÀ AiÀÄÄUÁ¢ ¸ÀA¨sÀæªÀiÁZÀgÀuÉUÁV £ÀqÉzÀ PÀ«UÉÆÃ¶× PÁAiÀÄðPÀæªÀÄzÀ°è ¯ÉÃRPÀ ¹.UÀÄgÀĪÀÄÆwð PÉÆnUɪÀÄ£É ªÀiÁvÀ£ÁrzÀgÀÄ. F ¸ÀAzÀ¨sÀðzÀ° gÉÆÃlj CzsÀåPÀë JA.«.£ÁUÀgÁeïgÁªï, gÀAUÀPÀ«Äð £ÀlgÁeïºÉÆ£ÀߪÀ½î, PÀ« ¹.JZï.ªÀÄjzÉêÀgÀÄ, «zÁåªÁZÀ¸Ààw PÀ«vÁPÀȵÀÚ ¦.L.ºÉÊUËæAqïì E£ïì¥ÉPÀÖgï gÀ«Ã±ï, ZÀ®£ÀavÀæ ¤zÉÃð±ÀPÀ °AUÀzÉêÀgÀÄ,  qÁ.¹.JA.¸ÀÄgÉñï PÀ¸Á¥À CzsÀåPÀë gÀ«PÀĪÀiÁgï  ªÀÄwÛvÀgÀgÀÄ G¥À¹ÜvÀjzÀÝgÀÄ.
ಚಿಕ್ಕನಾಯಕನಹಳ್ಳಿ,ಏ.18 : ಸಮಾಜ ದಿನೇ ದಿನೇ ಸಾಂಸ್ಕೃತಿಕವಾಗಿ ಬಡವಾಗುತ್ತಿದೆ, ಮಾತಿನಲ್ಲಿ ಸಂಸ್ಕೃತಿಯನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಮಾತುಗಳನ್ನಾಡುತ್ತಾರೆಯೇ  ಹೊರತು ಪಾಲನೆಗೆ ತರುತ್ತಿಲ್ಲ ಎಂದು ಕವಿ-ರಂಗಕಮರ್ಿ ನಟರಾಜ್ ಹೊನ್ನವಳ್ಳಿ ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಯುಗಾದಿ ಸಂಭ್ರಮ, ಕವಿಗೋಷ್ಠಿ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ಇತಿಹಾಸದ ಸಂಸ್ಕೃತಿ ಅಪಾಯದ ಅಂಚಿನಲ್ಲಿದೆ, ಇತಿಹಾಸವನ್ನು ಮರು ಓದಿಗೆ ಒಳಪಡಿಸಬೇಕು ಎಂದರಲ್ಲದೆ ಉಳುಮೆ ಮಾಡುವ ರೈತ ತಪ್ಪಸ್ಸು ಮಾಡುವ ಯೋಗಿಯಂತೆಯೇ ಶ್ರೇಷ್ಠ, ಅದಕ್ಕಾಗಿಯೇ ನೇಗಿಲಯೋಗಿಯೆಂದು ಕುವೆಂಪುರವರು ತಮ್ಮ ಕಾವ್ಯದಲ್ಲಿ ಬಣ್ಣಿಸಿದ್ದು, ಕಾವ್ಯಕ್ಕೆ  ಹೆಚ್ಚಿನ ಶಕ್ತಿ ಅಡಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಸಿ.ಆರ್.ರವೀಶ್ ಮಾತನಾಡಿ ಸಾಧನೆ ಮಾಡಲು  ಉತ್ತಮವಾದ ಹುದ್ದೆಯೇ ಬೇಕಿಲ್ಲ, ಸಾಧಿಸುವ ಛಲ, ಗೆಲ್ಲುವ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದರಲ್ಲದೆ  ಯಾವುದೇ ಉತ್ತಮ ಕೆಲಸ ಮಾಡಲು ಅಧಿಕಾರ ಬೇಕೆಂದು ಕಾಯುವುದಕ್ಕಿಂತ ಇರುವ ಸಾಮಥ್ರ್ಯದಲ್ಲೇ ಸಾಧನೆ ಮಾಡಲು ಹೊರಟರೆ  ಯಶಸ್ಸು ದೊರಕಲಿದೆ, ಅದಕ್ಕಾಗಿ ಶ್ರಮಿಸಬೇಕು ಎಂದರು. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗಲೇ ಮಾತ್ರ ಸಮಾಜ ಸೇವಕರಾಗಲು ಸಾಧ್ಯ ಎಂದರಲ್ಲದೆ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕೃತಿಯ ಬಗ್ಗೆ ವಿವರಿಸಿದರು.
ವಿದ್ಯಾವಾಚಸ್ಪತಿ ಕವಿತಾಕೃಷ್ಣ ಮಾತನಾಡಿ ಎಂ.ವಿ.ನಾಗರಾಜ್ರವರು ಬರೆದಿರುವ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಕೋಶ ಕನ್ನಡ ಸಾಹಿತ್ಯದ ಅರ್ಥಕೋಶದ ಜೊತೆಗೆ ಕನ್ನಡ ಭಾಷೆಯ ಎಲ್ಲಾ ಮಾಹಿತಿಗಳ ಕೋಶದಲ್ಲಿವೆ ಈ ಪುಸ್ತಕವನ್ನು ಓದಿ ಹಲವು ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದರು.
ಕವಿ-ಲೇಖಕ ಸಿ.ಎಚ್.ಮರಿದೇವರು ಮಾತನಾಡಿ ಮನುಷ್ಯ ಒಳ್ಳೆಯ ಚಿಂತನೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕಾಗಿದೆ ಎಂದರು.  
ಸಮಾರಂಭದಲ್ಲಿ ಮುಖ್ಯಮಂತ್ರಿಗಳ 2012ರ ಪೋಲಿಸ್ ಚಿನ್ನದ ಪದಕ ಪುರಸ್ಕೃತ, ಸಿ.ಆರ್.ರವೀಶ್ ಮತ್ತು ಪ್ರೊ.ಸಿ.ಎಚ್.ಮರಿದೇವರು ರವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ರವರು ಬರೆದಿರುವ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷ ರವಿಕುಮಾರ್, ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್ ಮಾತನಾಡಿದರು.
ನಡೆದ ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಕವಿತೆಯನ್ನು ವಾಚಿಸಿದರು. ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸ್ವಾಗತಿಸಿದರೆ ಸಿ.ಬಿ.ಪರಮೇಶ್ ನಿರೂಪಿಸಿದರು. ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಕವಿಗಳನ್ನು ಪರಿಚಯಿಸಿದರೆ, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ವಂದಿಸಿದರು.
ವಿಧಾನಸಭೆ ಚುನಾವಣೆಗೆ 15 ಅಭ್ಯಥರ್ಿಗಳಿಂದ 21 ನಾಮಪತ್ರಗಳು ಸಲ್ಲಿಕೆ

ಚಿಕ್ಕನಾಯಕನಹಳ್ಳಿ,ಏ.18 : ಚಿಕ್ಕನಾಯಕನಹಳ್ಳಿ ವಿಧಾನಸಭೆ ಚುನಾವಣೆಗೆ 15 ಅಭ್ಯಥರ್ಿಗಳಿಂದ 21 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಿದವರ ವಿವರ : ಜೆಡಿಎಸ್-ಸಿ.ಬಿ.ಸುರೇಶ್ಬಾಬು 2ನಾಮಪತ್ರ, ಕೆಜೆಪಿ-ಜೆ.ಸಿ.ಮಾಧುಸ್ವಾಮಿ3ನಾಮಪತ್ರ, ಬಿಜೆಪಿ-ಕೆ.ಎಸ್.ಕಿರಣ್ಕುಮಾರ್1, ಕಾಂಗ್ರೆಸ್-ಎಸ್.ಎನ್.ಸತೀಶ್1, ಬಿಜೆಪಿ-ಕವಿತಾಕಿರಣ್ಕುಮಾರ್1, ಜೆಡಿಯು-ಪ್ರಕಾಶ್ಯಾದವ್3, ಬಿಎಸ್ಪಿ-ಕ್ಯಾಪ್ಟನ್ಸೋಮಶೇಖರ್1, ಬಂಡಾಯಬಿಜೆಪಿ-  ಎನ್.ಶಿವಕುಮಾರ್2, ರೈತಸಂಘ-ಸತೀಶ್ಕೆಂಕೆರೆ1, ರೈತಸಂಘ-ಚಂದ್ರಕಲಾ1, ಪಕ್ಷೇತರ-ರಾಮಚಂದ್ರಯ್ಯ1, ಪಕ್ಷೇತರ-ಆರ್.ಕುಮಾರ್1, ಬಿಎಸ್ಆರ್ಕಾಂಗ್ರೆಸ್-ದೇವರಾಜುಕೆ.ಎಲ್1, ವೆಲ್ಪೇರ್ಪಾಟರ್ಿಆಫ್ಇಂಡಿಯಾ ಹನುಮಂತರಾಮನಾಯ್ಕ1, ಪಕ್ಷೇತರ ಮಂಜುಳನಾಗರಾಜು1 ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ಸಲ್ಲಿಸಿದ್ದಾರೆ.  
ಪಟ್ಟಣದಲ್ಲಿ ಸಿಐಎಸ್ಎಪ್ ಪಡೆ ಪಥಸಂಚಲನ
aPÀÌ£ÁAiÀÄPÀ£ÀºÀ½îAiÀÄ°è ¥ÉÆÃ°¸ï ºÁUÀÆ ¹.L.J¸ï.J¥sï 608PÁåA¥ï vÀAqÀ ZÀÄ£ÁªÀuÉ ¸ÀªÀÄAiÀÄzÀ°è ªÀÄÄ£ÉßZÀjPÉ PÀæªÀĪÁV ¹.¦.L PÉ.¥Àæ¨sÁPÀgï £ÉÃvÀÈvÀézÀ°è £ÀUÀgÀ ¥ÀæzÀQëuÉ ªÀiÁqÀ¯Á¬ÄvÀÄ.
ಚಿಕ್ಕನಾಯಕನಹಳ್ಳಿ,ಏ.18 :  ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಗಲಭೆ ಆಗದಂತೆ ನೋಡಿಕೊಳ್ಳಲು 84 ಜನ ಕೇಂದ್ರಿಯ ಕೈಗಾರಿಕಾ ಮೀಸಲು ಭದ್ರತಾ ಪಡೆ ಗುರುವಾರ ಪಟ್ಟಣದಲ್ಲಿ ಸಹಾಯಕ ಕಮಾಂಡ್ ಅಜಯ್ ಸಿಂಗ್  ನೇತ್ವತದಲ್ಲಿ ಪಥಸಂಚಲನ ನಡೆಸಿದರು. 
ಪಟ್ಟಣದ ಪ್ರವಾಸಿ ಮಂದಿರಯಿಂದ ಹೋರಾಟ ಕೇಂದ್ರಿಯ ಭದ್ರತಾ ಪಡೆ ದ ಸೈನಿಕರು ಬಿ.ಹೆಚ್. ರಸ್ತೆ, ಅಂಭೇಡ್ಕರ್ ನಗರ, ಹೊಸಬೀದಿ, ಮಹಾಲಕ್ಷ್ಮಿ ಬಡಾವಣೆ, ವಿದ್ಯಾನಗರ, ಜೋಗಿಹಳ್ಳಿಯಲ್ಲಿ ಪಥ ಸಂಚಲನ ನಡೆಸಿದರು. ಚುನಾವಣಾ ಸಂದರ್ಭದಲ್ಲಿ ಅಪರಾಧ ತಡೆಗಟ್ಟುವ ಹಿನ್ನೆಲೆಯಲ್ಲಿ ಪಥಸಂಚಲನ ನಡೆಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ಕೆ.ಪ್ರಭಾಕರ್, ಪಿ.ಎಸ್.ಐ ಗೋವಿಂದ್ ಹಾಗೂ ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

aPÀÌ£ÁAiÀÄPÀ£ÀºÀ½îAiÀÄ »AzÀĽzÀ ªÀUÀðUÀ¼À ªÉÄnæPï £ÀAvÀgÀzÀ «zÁåyð¤AiÀÄgÀ ªÀ¸Àw¤®AiÀÄzÀ°è 2£Éà ºÀAvÀzÀ ¸ÀªÀðgÀÆ ªÀÄvÀzÁ£À ¥ÀæQæAiÉÄAiÀÄ°è ¥Á¯ÉÆÎ¼ÀÄîªÀAvÉ CjªÀÅ ªÀÄÆr¸ÀĪÀ PÁAiÀÄðPÀæªÀÄ £ÀqɬÄvÀÄ. «¸ÀÛgÀuÁ¢üPÁj ªÀ£ÀªÀiÁ® ¨sÀƪÀÄÌgï ªÀÄvÀzÁ£ÀzÀ ¥À«vÀævÉ ºÁUÀÆ dªÀ¨ÁÝj PÀÄjvÀÄ «zÁåyð¤AiÀÄjUÉ CjªÀÅ ªÀÄÆr¹zÀgÀÄ. ªÉÄðéZÁgÀPÀgÁzÀ eÉÆåÃw n, dUÀ£ÁßxÀ, ±À²zsÀgï, ²ªÀªÀÄÆwð G¥À¹ÜvÀjzÀÝgÀÄ.
aPÀÌ£ÁAiÀÄPÀ£ÀºÀ½îAiÀÄ°è £ÀqÉzÀ ©eɦ ¸À¨sÉAiÀÄ°è ¥ÀlÖtzÀ eÉ.r.J¸ï ºÁUÀÆ PÉ.eÉ.¦¬ÄAzÀ ºÀ®ªÀgÀÄ ©eɦ ¥ÀæzsÁ£À PÁAiÀÄðzÀ²ð PÀ«vÀQgÀuïPÀĪÀiÁgï gÀªÀgÀ £ÉÃvÀÈvÀézÀ°è ©.eÉ.¦ ¥ÀPÀë ¸ÉÃjPÉÆAqÀgÀÄ. F ¸ÀAzÀ¨sÀðzÀ°è f.¥ÀA ¸ÀzsÀ¸Àå ¥ÀAZÁPÀëj, vÁ.¥ÀA CzsÀåPÀë dUÀ¢Ã±ï, vÁ ©.eÉ.¦ CzsÀåPÀë «Ä°Öç ²ªÀtÚ. ºÁUÀÆ ©.eÉ.¦ PÁAiÀÄðPÀvÀðgÀÄ G¥À¹ÜvÀjzÀÝgÀÄ.

Wednesday, April 17, 2013


ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಎಸ್.ಎನ್.ಸತೀಶ್ ನಾಮಪತ್ರ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಏ.17 : ಈಗ ಕಣದಲ್ಲಿ ಮುಂಚೂಣಿಯಲ್ಲಿರುವವರು ಅಧಿಕಾರ ಉಂಡವರೆ ಅವರಿಗೆ ಗೆಲ್ಲುವ ತನಕ ಜನ ಬೇಕಷ್ಟೇ ನಂತರ ಜನರತ್ತ ತಿರಿಗಿಯೂ ನೋಡುವುದಿಲ್ಲ ಇದನ್ನರಿತು ಕ್ಷೇತ್ರದ ಜನತೆ ನನಗೆ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಸಾಸಲು ಸತೀಶ್ ಹೇಳಿದರು.
ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ನಾಮಪತ್ರ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ತಾವು ಈಗಾಗಲೇ ಹಲವು ಹಳ್ಳಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದ್ದು ಅಲ್ಲಿನ ಜನತೆ ಹೊಸ ಅಭ್ಯಥರ್ಿ ಯುವಕನಿಗೆ ಸ್ಪಂದಿಸುತ್ತೇವೆ, ಚುನಾವಣೆಗೆ ಸ್ಪಧರ್ಿಸಿ ಬೆಂಬಲಿಸುವೆವು ಎಂಬ ಮಾತುಗಳನ್ನು ತಿಳಿಸುತ್ತಿದ್ದಾರೆ, ಹಲವು ನಾಯಕರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಜನರ ಬಳಿಯೇ ಆಗಮಿಸುವುದಿಲ್ಲ ಸಿಕ್ಕ ಅವಕಾಶವನ್ನು ಬಳಸದೆ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ ಎಂದರು.
ರಾಜ್ಯದಲ್ಲಿ ಈ  ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಕರ್ಾರವೆ ಅಧಿಕಾರಕ್ಕೆ ಬರಲಿದ್ದು ತಾಲ್ಲೂಕಿನಲ್ಲಿಯೂ ಕಾಂಗ್ರೆಸ್ ಪಕ್ಷವೇ ಜಯಗಳಿಸಿದರೆ ಜನತೆಯ ಕಷ್ಟ, ಸುಖಗಳಿಗೆ ಸ್ಪಂದಿಸುವುದರ ಜೊತೆಗೆ ತಾಲ್ಲೂಕನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಚಿಂತನೆ ಇದೆ ಎಂದರಲ್ಲದೆ ಇಷ್ಟು ವರ್ಷಗಳ ಚುನಾವಣೆಯಲ್ಲಿ ಯುವ ಅಭ್ಯಥರ್ಿಯನ್ನು ಕಡೆಗಣಿಸುತ್ತಿದ್ದ ಜನತೆ ಈ ಬಾರಿ ಯುವಕನಾದ ನನಗೆ ಪ್ರಥಮ ಆಧ್ಯತೆ ನೀಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಬಸವರಾಜು ಮಾತನಾಡಿ ಕಳೆದ ಎಂ.ಪಿ ಚುನಾವಣೆಯಲ್ಲಿ 25ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷ, ವಿಧಾನಸಭಾ ಚುನಾವಣೆಯಲ್ಲಿ 50ಸಾವಿರಕ್ಕೂ ಹೆಚ್ಚಿನ ಮತಗಳಿಸಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಿ.ಲಕ್ಕಪ್ಪ, ಗೋವಿಂದರಾಜು, ಕೆ.ಜಿ.ಕೃಷ್ಣೇಗೌಡ, ರೆಹಮುತುಲ್ಲಾ, ನೆರಲಗುಡ್ಡ ಶಿವಕುಮಾರ್ ಸೇರಿದಂತೆ ಹಲವರಿದ್ದರು.

ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ನಾಮಪತ್ರ ಸಲ್ಲಿಕೆ
                             
ಚಿಕ್ಕನಾಯಕನಹಳ್ಳಿ,ಏ.17 : ಇಪ್ಪತ್ತು ವರ್ಷದ ಹಿಂದೆ ಪುರಸಭಾ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದ ನನ್ನ ಸೇವೆಯನ್ನು ಮತ್ತೆ ತಾಲ್ಲೂಕಿನಾದ್ಯಂತ ಮುಂದುವರೆಸಲು ಎಂ.ಎಲ್.ಎ ಚುನಾವಣೆಗೆ ಸ್ಪಧರ್ಿಸಿದ್ದು ನನ್ನ ಸೇವೆಯನ್ನು ಜನರಿಗೆ ಎಂದೂ ಕಟ್ಟಿಬದ್ದರಾಗಿ ನಿರ್ವಹಿಸುತ್ತೇನೆ ಎಂದು ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ನಾಮಪತ್ರ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಬಹುಜನಾ ಸಮಾಜ ಪಾಟರ್ಿ ಪಕ್ಷದ ಸಿದ್ದಂತವಾದ ಶೋಷಣೆ ವಿರುದ್ದ ಹೋರಾಟ ತತ್ವ ಸಿದ್ದಾಂತವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸ್ಪಧರ್ಿಸಿದ್ದು, ವಾರದ ಏಳು ದಿನವೂ ಸಾರ್ವಜನಿಕರಿಗೆ ನಮ್ಮ ಪಕ್ಷದ ಸೇವೆಯನ್ನು ಮುಂದುವರೆಯುತ್ತಿರುತ್ತದೆ ಎಂದರಲ್ಲದೆ ಪಕ್ಷದ ರಾಜ್ಯ ಮತ್ತು ಜಿಲ್ಲಾ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಲಿದ್ದಾರೆ ಅಲ್ಲದೆ ಶೋಷಣೆ ವಿರುದ್ದ ನಮ್ಮ ಹೋರಾಟ ಅವಿರತವಾಗಿ ಇರುತ್ತದೆ ಎಂದರು.

Tuesday, April 16, 2013


ಬಿ.ಸಿ.ಸಿ.ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಸೀಮೆಣ್ಣೆ ಕೃಷ್ಣಯ್ಯನವರ ಮೇಲೆ ಹಲ್ಲೆ.

ಚಿಕ್ಕನಾಯಕನಹಳ್ಳಿ,ಏ.16 : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಕಾಂಗ್ರೆಸ್ ಮುಖಂಡರು ಕೈಕೈ ಮಿಲಾಯಿಸುವ ಹಂತ ತಲುಪಿ ಸಿ.ಬಸವರಾಜು ರವರು ಸೀಮೆಣ್ಣೆ ಕೃಷ್ಣಯ್ಯನವರ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು  ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಘಟನೆ ನಡೆಯಿತು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸೀಮೆಣ್ಣೆ ಕೃಷ್ಣಯ್ಯನವರನ್ನು ನೇಮಿಸಿರುವ ವಿಷಯ ಪ್ರಸ್ತಾಪವಾಗಿ ಸಭೆಯಲ್ಲಿದ್ದ ಮುಖಂಡರಲ್ಲೇ ಗೊಂದಲವೇರ್ಪಟ್ಟಿತ್ತು. ಗೊಂದಲಕ್ಕೆ ಇನ್ನಷ್ಟು ಇಂಬುಕೊಡುವಂತೆ ಸಿ.ಬಸವರಾಜುರವರ ಬೆಂಬಲಿಗರು ಏರಿದ ಧ್ವನಿಯಲ್ಲಿ ಅಲ್ಲಿದ್ದ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಯಾರು ಯಾರಿಗೆ ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಗಲಾಟೆ ಗದ್ದಲ ಅತಿಯಾಗಿ ಯಾರ ಮಾತನ್ನು ಯಾರೂ ಕೇಳುವಂತಿರಲಿಲ್ಲ.
ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ವಿಧಾನ ಸಭೆಯ ಅಧಿಕೃತ ಅಭ್ಯಥರ್ಿ ಎಸ್.ಎನ್.ಸತೀಶ್ ಸಾಸಲು ಮಧ್ಯ ಪ್ರವೇಶಿಸಿ  ಸೀಮೆಣ್ಣೆ ಕೃಷ್ಣಯ್ಯನವರ ನೇಮಕಾತಿ ವಿಷಯವಾಗಿ ಗೊಂದಲವಾಗಿರುವುದರಿಂದ ಈ ವಿಷಯವನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಕ್ಷದ ವರಿಷ್ಠರಿಗೆ ತಿಳಿಸುವುದಾಗಿ ಹೇಳಿದರಲ್ಲದೆ,  ಈ ಬಗ್ಗೆ ಸೂಕ್ತ ಆದೇಶ ಬರುವವರೆಗೆ ಸಿ.ಬಸವರಾಜು ರವರೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಈ ವಿಷಯವಾಗಿ ಗೊಂದಲ ಬೇಡ ಪಕ್ಷದ ವರಿಷ್ಠರ ಆದೇಶ ಪಾಲಿಸೋಣ ಎಂದು ಹೇಳುತ್ತಿದ್ದ ಸಮಯದಲ್ಲೇ ಮಧ್ಯೆ ಪ್ರವೇಶಿಸಿದ ಸೀಮೆಣ್ಣೆ ಕೃಷ್ಣಯ್ಯ, ವರಿಷ್ಠರು ನನ್ನನ್ನು ಬಿ.ಸಿ.ಸಿ. ಅಧ್ಯಕ್ಷನಾಗಿ ನೇಮಿಸಿರುವುದರಿಂದ ನಾನೇ ಮುಂದುವರೆಯುತ್ತೇನೆ ಎಂದಾಕ್ಷಣ ಹಿಂದೆ ನಿಂತಿದ್ದ ಸಿ.ಬಸವರಾಜು ಸೀಮೆಣ್ಣೆ ಕೃಷ್ಣಯ್ಯ ನವರನ್ನು ತಳ್ಳಿದರು. 
ಈ ಘಟನೆಯಿಂದ ವಿಚಲಿತರಾದ ಸೀಮೆಣ್ಣೆ ಕೃಷ್ಣಯ್ಯ ನವರು ತಮ್ಮನ್ನು ತಳ್ಳಿದವರು ಯಾರೆಂಬುದನ್ನು ನೋಡುವುದರೊಳಗಾಗಿ ಬಸವರಾಜು ಬೆಂಬಲಿಗರು ಕೈ ಮೇಲೆತ್ತಿದ್ದರು. ಪರಿಸ್ಥಿತಿಯನ್ನು ಅರಿತ ಸೀಮ್ಮೆಣ್ಣೆ ಕೃಷ್ಣಯ್ಯ ಕೆಲವರ ದೌರ್ಜನ್ಯಕ್ಕೆ ಧಿಕ್ಕಾರವಿರಲಿ ಎಂದು ಘೋಷಣೆ ಕೂಗುತ್ತಾ ಹೊರಟು ಹೋದರು.
ಕೊರಳಪಟ್ಟಿ ಹಿಡಿದು ಎಳೆದಾಡಿ ಹೊಡೆದರು: ಪರಿಸ್ಥಿತಿ ತಿಳಿಯಾಯಿತು ಎಂಬುವಷ್ಟರಲ್ಲಿ ಮನೆಗೆ ತೆರಳಿದ್ದ ಸೀಮೆಣ್ಣೆಕೃಷ್ಣಯ್ಯ ಪುನಃ ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಬಂದು ಕೆ.ಪಿ.ಸಿ.ಸಿ. ಕಛೇರಿಯಿಂದ ತನ್ನನ್ನು ನೇಮಕ ಮಾಡಿರುವ ಒಕ್ಕಣೆ ಇರುವ ಆದೇಶ ಪ್ರತಿಯನ್ನು ತಂದು ಸ್ಥಳದಲ್ಲಿದ್ದ ಮಾಧ್ಯಮದವರಿಗೂ ಸೇರಿದಂತೆ ಎಲ್ಲರಿಗೂ ಹಂಚುತ್ತಿದ್ದರು ಇದರಿಂದ ಕುಪಿತಗೊಂಡ ಸಿ.ಬಸವರಾಜು ಬಂದು ಬಂದವರೆ, ನನ್ನ ಬಗ್ಗೆ ವರಿಷ್ಠರಿಗೆ ಇಲ್ಲಸಲ್ಲದ ಚಾಡಿ ಚುಚ್ಚಿರುವುದಲ್ಲದೆ, ನನ್ನ ಮೇಲೆ ಪಿತೂರಿ ಮಾಡುತ್ತೀಯ ಎಂದು ಸೀಮೆಣ್ಣೆ ಕೃಷ್ಣಯ್ಯ ನವರ ಕೊರಳ ಪಟ್ಟಿ ಹಿಡಿದು ಎಳೆದಾಡಿದರಲ್ಲದೆ, ಸಿ.ಬಸವರಾಜು ರವರ ಕೈ ಸೀಮೆಣ್ಣೆ ಕೃಷ್ಣಯ್ಯನವರ ಕೆನ್ನೆಗೆ ತಾಕೀತು ಇಬ್ಬರೂ ಕ್ಷಣಕಾಲ ಸೆಣೆಸಾಡಿದರು, ನಂತರ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ.ಪ್ರಭಾಕರ್ ರವರಿಗೆ  ಸೀಮೆಣ್ಣೆ ಕೃಷ್ಣಯ್ಯ ನನ್ನ ಮೇಲೆ ಹಲ್ಲೆಯಾಗಿದೆ ಈ ಬಗ್ಗೆ ದೂರು ಕೊಡುವುದಾಗಿ ತಿಳಿಸಿದರು.
( ಈ ವರದಿಗೆ ಪೊಟೊ ಇದೆ)

ತಾಲೂಕಿನ ಹೋರಾಟಗಳಿಗೆ ಸದಾ ಸ್ಪಂದಿಸುತ್ತೇನೆ ರೈತ ಸಂಘದ ಅಭ್ಯಥರ್ಿ ಸತೀಶ್ ಕೆಂಕೆರೆ

ಚಿಕ್ಕನಾಯಕನಹಳ್ಳಿ,ಏ.16: ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ, ಸೋತರೂ ರೈತರ ಪರವಾಗಿನ ಹೋರಾಟ ಮುಂದುವರಿಯುತ್ತಲೇ ಇರುತ್ತದೆ ಎಂದು ರೈತ ಸಂಘದ ಅಧಿಕೃತ ಅಭ್ಯಥರ್ಿ ಸತೀಶ್ಕೆಂಕೆರೆ ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಮ್ಮ ಬೆಂಬಲಿಗರ ಜೊತೆ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
 ರೈತರ ಪರವಾಗಿ ಮಾಡಿದ ಹೋರಾಟದಿಂದಲೇ ತಾಲ್ಲೂಕಿನ ಜನತೆಗೆ ಪರಿಚಿತನಾಗಿದ್ದೇನೆ, ಆದ್ದರಿಂದ ಈ ಬಾರಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರಲ್ಲದೆ ಓಟು ಕೊಡಿ ನೋಟು ಕೊಡಿ ಎಂಬ ಸಂದೇಶವನ್ನಿಟ್ಟುಕೊಂಡು ರೈತ ಸಂಘ ಚುನಾವಣೆಯಲ್ಲಿ ಸ್ಪದರ್ಿಸುತ್ತಿದೆ ಎಂದರು.
ತಾಲ್ಲೂಕಿನಲ್ಲಿ ನೀರಾವರಿ ಹೋರಾಟದ ಬಗ್ಗೆ ಹಾಗೂ ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಹೋರಾಟ ಮಾಡುವವರೇ ಇಲ್ಲದಂತಾಗಿದ್ದ ಸಂದರ್ಭದಲ್ಲಿ ನಮ್ಮ ಸಂಘ ರೈತರ ಪರವಾಗಿ ಧ್ವನಿ ಎತ್ತಿ ತಾಲ್ಲೂಕಿಗೆ ನೀರು ತರುವಲ್ಲಿ ಶ್ರಮಿಸಿದೆ ಎಂದರು. ರೈತ ಸಂಘದ ಅಭ್ಯಥರ್ಿಗಳು ವಿಧಾನಸಭೆಗೆ ಆಯ್ಕೆಯಾದರೆ ಹುಳಿಯಾರು ಹೋಬಳಿಯನ್ನು ತಾಲ್ಲೂಕನ್ನಾಗಿ ಪರಿವತರ್ಿಸಲು ಹಾಗೂ ಕೊಬ್ಬರಿಗೆ ವೈಜಾನಿಕ ಬೆಲೆ ತರಲು ಸದನದಲ್ಲಿ ಹೋರಾಟ ಮಾಡಲಾಗುವುದು ಎಂದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ರೈತರ 1ಲಕ್ಷ ರೂ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ ಆದರೆ ರೈತ ಸಂಘ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ರಾಜ್ಯ ರೈತ ಸಂಘ ತೀಮರ್ಾನಿಸಿದೆ ಎಂದರಲ್ಲದೆ ರಾಜ್ಯದ ಹಲವು ಪಕ್ಷಗಳು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ ಆದರೆ ನಮ್ಮ ಸಂಘ ಯಾವುದೇ ಪ್ರಣಾಳಿಕೆ ಬಿಡಗಡೆ ಮಾಡದೆ ಕೆಲಸ ಮಾಡಿ ತೋರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಅಣೆಕಟ್ಟೆ ವಿಶ್ವನಾಥ್, ಬೆನ್ನಾಯ್ಕನಹಳ್ಳಿ ದೇವರಾಜು, ಮಲ್ಲೇಶ್ ಕೆಂಕೆರೆ. ತಿಮ್ಲಾಪುರ ಶಂಕರಪ್ಪ , ಗಂಗಾಧರಪ್ಪ ದಬ್ಬೇಘಟ್ಟ, ಷಣ್ಮುಖ ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿಯಲ್ಲಿ ಕವಿಗೋಷ್ಠಿ

ಚಿಕ್ಕನಾಯಕನಹಳ್ಳಿ,ಏ.16: ಪಟ್ಟಣದ ಯಗಾದಿ ಸಂಭ್ರಮದ ಪ್ರಯುಕ್ತ ಯುಗಾದಿ ಸಂಭ್ರಮಾಚರಣೆಗಾಗಿ ರೋಟರಿ ಬಾಲಭವನದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಗೋಷ್ಠಿಯನ್ನು ಕವಿ-ರಂಗಕಮರ್ಿ ನಟರಾಜ್ ಹೊನ್ನವಳ್ಳಿ ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜರಾವ್ ತಿಳಿಸಿದ್ದಾರೆ.
ಸ್ಥಳೀಯ ಕವಿಗಳಾದ ಶಬ್ಬೀರ್, ಗುರುಪ್ರಸಾದ್ ಕಂಟಲಗೆರೆ, ನವೀನ್ ಹಳೇಮನೆ, ಬಿ.ಪಿ.ನಾಗರಾಜ್, ಮೇ.ನಾ.ತರಂಗಿಣಿ, ಶ್ರೀಧರ್ ದೇವರಹಳ್ಳಿ, ಧನಂಜಯ ದೇವರಹಳ್ಳಿ, ಎಸ್.ಬಿ.ಕುಮಾರ್, ಸಿ.ರವಿಕುಮಾರ್, ವಿಜಯಹಾಲುಗೊಣ, ಪುಷ್ಪ ಶಿವಣ್ಣ, ಟಿ.ಎಲ್.ರಂಗನಾಥ ಶೆಟ್ಟಿ, ಸಿ.ಪಿ.ರಾಧಾಮಣಿ, ಸುರೇಶ್ ಎಚ್, ಡಿ.ಎಲ್.ರಮೇಶ್ ಭಾಗವಹಿಸಲಿದ್ದು, ಸಿ.ಗುರುಮೂತರ್ಿ ಕೊಟಿಗೆಮನೆ ಕವಿಗಳನ್ನು ಪರಿಚಯಿಸಲಿದ್ದಾರೆ.