Saturday, May 17, 2014


ಲೋಕಸಭಾ ಫಲಿತಾಂಶ: ಜೆ.ಸಿ.ಎಂ, ಕೆ.ಎಸ್.ಕೆ. ಹೊಂದಾಣಿಕೆ ಮತದಾರನಿಗೆ ಸಮಾಧಾನ ತಂದಿಲ್ಲವೆ...?!
  • ಶಾಸಕ ಸಿ.ಬಿ.ಎಸ್. ನಿರೀಕ್ಷೆಗಳು ಹುಸಿಯಾಯಿತೇ ?
  • ಎರಡು ಜಾತಿಗಳ ನಡುವಿನ ರಾಜಕಾರಣ ಇನ್ನು ಇತಿಹಾಸವೇ ?
  • ಅಹಿಂದ ಜಾತಿಗಳು ನಿಣರ್ಾಯಕವೆನಿಸುತ್ತವಯೇ 
  • ಕಾಂಗ್ರೆಸ್ಗೆ ಇಲ್ಲಿ ನಿಜವಾದ ಶಕ್ತಿ ಇದೆಯೇ 
  • ಈ ಶಕ್ತಿಯನ್ನು ಚುನಾವಣೆಯ ಸಂದರ್ಭದಲ್ಲಿ ನಾಯಕರೇ ಹಾಳು ಮಾಡುತ್ತಿದ್ದರೆ?

ಚಿಕ್ಕನಾಯಕನಹಳ್ಳಿ,ಮೇ: ಈ ಭಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಈ ವಿಧಾನ ಸಭಾ ಕ್ಷೇತ್ರದ ಮಟ್ಟಿನ ಹಲವು ವಿದ್ಯಮಾನಗಳಿಗೆ ಜನಾದೇಶ ನೀಡಿದೆ. 
ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ, ಜನಪ್ರತಿನಿಧಿಗಳಾಗ ಬಯಸುವವರು ಕೇವಲ ತಮ್ಮ ಜಾತಿಗಳನ್ನಷ್ಟೇ ತೃಪ್ತಿ ಪಡಿಸಿದರೆ ಸಾಕಾಗುವುದಿಲ್ಲ, ಬೇರೆ ಜಾತಿಯ ಮತದಾರರನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಸ್ಪಷ್ಟ ಪಡಿಸಿದೆ.  ಅಲ್ಲದೆ  ಶಾಸಕ ಸಿ.ಬಿ.ಸುರೇಶ್ ಬಾಬು ಇಟ್ಟ ನಿರೀಕ್ಷೆ ಹುಸಿಯಾಗಿರುವುದು, ಮಾಜಿ ಶಾಸಕರಿಬ್ಬರು ಒಂದೇ ಪಕ್ಷದಡಿಗೆ ಬಂದಿರುವುದಕ್ಕೆ ಅಸಮಧಾನ ತೋರ್ಪಡಿಸಿರುವುದು, ಕಾಂಗ್ರೆಸ್ ಪಕ್ಷದ ಬಲವರ್ಧನೆಗೊಂಡಿರುವುದು, ಮತದಾರರ ಎಲ್ಲಾ ಚುನಾವಣೆಗಳಲ್ಲೂ ಒಂದೇ ರೀತಿ ಆಲೋಚಿಸಿದೆ ತನ್ನ ಪ್ರಜ್ಞಾವಂತಿಕೆಯನ್ನು ಮೆರೆದಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.
 ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದೀಚೆಗಿನ ಚುನಾವಣೆಗಳನ್ನು ಹೋಲಿಕೆ ಮಾಡಿದರೆ ಇರುವ ಇಬ್ಬರಲ್ಲಿ ಯಾರು ಹಿತವರು ಎಂಬಂತೆ ಆಯ್ಕೆ ಮಾಡುತ್ತಿದ್ದರು, ಮತ್ತು ಇಲ್ಲಿ ಆಯ್ಕೆಯಾಗುತ್ತಿದ್ದು ಒಮ್ಮೆ ಕುರುಬರು ಗೆದ್ದರೆ ಮತ್ತೊಮ್ಮೆ ಲಿಂಗಾಯಿತರು ಗೆಲ್ಲುತ್ತಿದ್ದರು,  ಇವರಿಬ್ಬರನ್ನು ಬಿಟ್ಟರೆ ಬೇರೆಯವರಿಗೆ ಈ ಕ್ಷೇತ್ರದಲ್ಲಿ ಅವಕಾಶವೇ ಇಲ್ಲ, ಮಿಕ್ಕ ಜಾತಿಗಳಿರುವುದು ಕೇವಲ ಮತ ಹಾಕಲಿಕ್ಕೆ ಹೊರತು ಆಯ್ಕೆ ಯಾಗುವುದಕ್ಕಲ್ಲವೇನೋ ಎಂಬಂತೆ ತೋರುತ್ತಿದ್ದು ಆದರೆ 2013ರ ವಿಧಾನ ಸಭಾ ಚುನಾವಣೆಯ ನಂತರ ಆ ಕಾಲ ಬದಲಾಗಿದೆ, ಈ ವಾದವನ್ನು 2014ರ ಲೋಕಸಭಾ ಚುನಾವಣೆ ಇನ್ನಷ್ಟು ಬಲಪಡಿಸಿದೆ. ಇಲ್ಲಿನ ನಾಯಕರು ತಮಗೆ ನಿರ್ಣಯಕ ಮತಗಳೆಂದರೆ, ಅಹಿಂದ ವರ್ಗವೂ ಸೇರಿದಂತೆ ಒಕ್ಕಲಿಗ ಮತದಾರರಿಗೂ ಮನ್ನಣೆ ನೀಡಬೇಕೆಂಬ ಆದೇಶವನ್ನು ನೀಡಿದೆ.  
 ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷಕ್ಕೆ  ನಿರೀಕ್ಷೆಗಿಂತ ಹೆಚ್ಚಿನ ಮುನ್ನಡೆ ಪಡೆದಿರುವುದು ಕಾಂಗ್ರೆಸಿಗರಲ್ಲಿ ಅದರಲ್ಲೂ ಯುವ ಕಾರ್ಯಕರ್ತರಲ್ಲಿ ಭಾರಿ ಉತ್ಸಹವನ್ನು ಮೂಡಿಸಿದ್ದರೆ, ಬಿ.ಜೆ.ಪಿ.ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ, ಇಲ್ಲಿನ ಬಿ.ಜೆ.ಪಿ. ಲೋಕಸಭಾ ಚುನಾವಣೆಗೂ ಮುನ್ನ  ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುತ್ತಿದ್ದರು ಆದರೆ ಕೆ.ಜೆ.ಪಿ. ಬಿ.ಜೆ.ಪಿ. ರಾಜ್ಯದಲ್ಲಿ ವಿಲೀನಗೊಂಡ ಬಳಿಕ ಇಲ್ಲಿಯೂ ವಿಲೀನಗೊಂಡವು,  ಕೆ.ಜೆ.ಪಿ.ಯಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ,  ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು. ಸೇರ್ಪಡೆ ಕಾರ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಾದ್ದರಿಂದ ಸಂಧಾನ ಕಾರ್ಯ ಸ್ಪಷ್ಟವಾಗಿ ನಡೆಯದೆ ಇದ್ದುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು, ಕಾರಣ ಹುಳಿಯಾರು, ಬುಕ್ಕಾಪಟ್ಟಣ ಭಾಗದಲ್ಲಿ ಕೆ.ಎಸ್.ಕೆ. ಪರವಾದ ಬೆಂಬಲಿಗರಿಗೂ, ಉಳಿದ ಭಾಗದಲ್ಲಿನ ಜೆ.ಸಿ.ಎಂ. ಅಭಿಮಾನಿಗಳಿಗೂ ತೆರದ ಹೃದಯದ ಹೊಂದಾಣಿಕೆ ಯಾಗದೆ,  ತೆರೆಯ ಮರೆಯ ಗೊಂದಲಗಳು ಹಾಗಿಯೇ ಉಳಿದುಕೊಂಡವು,  ಲೋಕಸಭಾ ಚುನಾವಣೆಯ ನಂತರ ಆ ಗೊಂದಲ ಇನ್ನಷ್ಟು ಜಾಸ್ತಿಯಾಯಿತು ಎನ್ನುತ್ತಾರೆ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತ ಧನಂಜಯ. 
  ಮತದಾರನೂ ಈ ಇಬ್ಬರ ಹೊಂದಾಣಕೆಿಯನ್ನು ನೇರವಾಗಿ ಒಪ್ಪಿಕೊಂಡಿಲ್ಲವೆಂಬುದನ್ನು ಈ ಚುನಾವಣೆಯಲ್ಲಿ ಅಲ್ಲಲ್ಲಿ ಕಂಡು ಬಂದಿತು. ಈ ಅಭಿಪ್ರಾಯ ಹೌದೇನೆ ಎಂಬಂತೆ ಫಲಿತಾಂಶವೂ ಬಂದಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಉಳಿದ ಅಬ್ಯಾಥರ್ಿಗಳಿಗಿಂತ 11.999 ಮತಗಳಷ್ಟು ಹೆಚ್ಚಿಗೆ ನೀಡುವ ಮೂಲಕ ಇದನ್ನು ಪುಷ್ಟಿಗೊಳಿಸಿದ್ದಾರೆ. 
ಈ ಚುನಾವಣೆಯಲ್ಲಿ ಬಿ.ಜೆ.ಪಿ. ಅಬ್ಯಾಥರ್ಿ ಜಿ.ಎಸ್.ಬಸವರಾಜು ಪಡೆದಿರುವ ಮತಗಳು 45.863 ಮತಗಳು ಮಾತ್ರ, ಈ ಅಂಕಿಯನ್ನು ನೋಡಿದರೆ ಜೆ.ಸಿ.ಎಂ. ಮತ್ತು ಕೆ.ಎಸ್.ಕೆ. ಹೊಂದಾಣಿಕೆ ಅಷ್ಟೇನು ಜಿ.ಎಸ್.ಬಿ. ಪರವಾಗಿ ಕೆಲಸ ಮಾಡಿಲ್ಲವೆನಿಸುತ್ತದೆ, ಕಾರಣ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಸಿ.ಎಂ. 49.620 ಮತಗಳನ್ನು ಪಡೆದಿದ್ದರು, ಕೆ.ಎಸ್.ಕಿರಣ್ಕುಮಾರ್ 29.150 ಮತಗಳನ್ನು ಪಡೆದಿದ್ದರು ಇವರಿಬ್ಬರ ಮತಗಳು ಸೇರಿಸಿದರೆ 78.770 ಮತಗಳಾಗುತ್ತವೆ ಆದರೆ ಇದರಲ್ಲಿ ಶೇ.60 ರಷ್ಟು  ಮತಗಳು ಜಿ.ಎಸ್.ಬಿ. ಬೀಳದಿರುವುದು ಇವರಿಬ್ಬರ ಹೊಂದಾಣಿಕೆ  ಮತದಾರರಿಗೂ  ಸಮಾಧಾನ ತಂದಿಲ್ಲವೆಂಬುದನ್ನು  ಸ್ಪಷ್ಟ ಪಡಿಸುತ್ತದೆ.
ಇನ್ನೂ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೆತ್ರ ವಾಲುತ್ತಿದೆ ಎಂಬುದಕ್ಕೆ ಈ ಫಲಿತಾಂಶ ಒಂದು ಒಳನೋಟವನ್ನು ಕೊಡುತ್ತದೆ. ಅಲ್ಲದೆ ಚುನಾವಣೆಯಲ್ಲಿ ವಿಜಿಯಿಯಾಗಿರುವ ಮುದ್ದುಹನುಮೇಗೌಡರು ಹಲವು ಸಲ ತಮ್ಮ ಪತ್ರಿಕಾಗೋಷ್ಠಿಗಳಲ್ಲಿ ಈ ಕ್ಷೇತ್ರವನ್ನು ನಾನು ದತ್ತು ಪಡೆಯುತ್ತೇನೆ, ಈ ಕ್ಷೇತ್ರಕ್ಕೆ ಆಗಬೇಕಾಗಿರುವ ಜನೋಪಯೋಗಿ ಕೆಲಸಗಳಿಗೆ ಒತ್ತುಕೊಟ್ಟಂತೆ  ಸಕರ್ಾರದ ಮಟ್ಟದಲ್ಲಿ ಕೆಲಸ ಮಾಡಿ ಹೆಚ್ಚಿನ ಅಭಿವೃದ್ದಿ ಕೆಲಸಕ್ಕೆ ಅನುದಾನ ತರುತ್ತೇನೆ.  ನನ್ನೆಲ್ಲಾ ಕಾರ್ಯಗಳಿಗೆ ಹೆಗಲಿಗೆ ಹೆಗಲು ಕೊಟ್ಟಿರುವ ಕಾಂಗ್ರೆಸ್ನ ಯುವ ಮುಂದಾಳು ಎಸ್.ಎನ್.ಸತೀಶ್ ಈ ಕ್ಷೇತ್ರದ ಅಭಿವೃದ್ದಿಗೆ ದುಡಿಯಲು ತೋರಿಸುತ್ತಿರುವ ಉತ್ಸಾಹ ಈ ಕ್ಷೇತ್ರವನ್ನು ಹೆಚ್ಚು ಹೆಚ್ಚು ಅಭಿವೃದ್ದಿ ಪಡಿಸಲು ಸ್ಫೂತರ್ಿ ನೀಡಿದೆ ಎನ್ನುವ ಮಾತಗಳನ್ನಾಡಿದ್ದಾರೆ.  ಈ ಎಲ್ಲವನ್ನು ಅವಲೋಕಿಸಿದಾಗ ಇಲ್ಲಿನ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಗೊಳುವ ವಿಶ್ವಾಸ ಮೂಡುತ್ತಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಗುಂಪುಗಾರಿಕೆ ಮಾಡದೆ ಒಟ್ಟಾಗಿ ಕೆಲಸ ಮಾಡಿದರೆ ಮುಂದೆ ಭವಿಷ್ಯವಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆ ಅತಿ ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿರುವ ಈ ತಾಲೂಕಿಗೆ ಸಕರ್ಾರದಿಂದ ಹೆಚ್ಚಿನ ಅನುದಾನ ತಂದು, ಇಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿ ಪಡಿಸುವ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ, ಕುಡಿಯಲು ಶುದ್ದ ನೀರು ಕೊಡುವ ಕಾರ್ಯಗಳು ಸೇರಿದಂತೆ ಕ್ಷೇತ್ರದ  ಅಭಿವೃದ್ದಿಗೆ ಎಲ್ಲರೂ  ಒಂದಾಗಿ ಕೆಲಸ ಮಾಡಿದರೆ ಕ್ಷೇತ್ರಕ್ಕೂ ಒಳ್ಳೆಯದು ಜನರು ಮತ ಹಾಕಿದ್ದಕ್ಕೂ ಸಾರ್ಥಕವೆನಿಸುತ್ತದೆ ಆದರೆ ಆಗಾಗುತ್ತದೆಯೇ . . . ?!

ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು  ವಿಜಯೋತ್ಸವ

ಚಿಕ್ಕನಾಯಕನಹಳ್ಳಿ,: ತುಮಕೂರು ಲೋಕಸಭಾ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲೂ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು,  ಈ ಫಲಿತಾಂಶವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ನಾಂದಿಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ನೆಹರು ಸರ್ಕಲ್ನಲ್ಲಿ ಎಂ.ಪಿ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಮುದ್ದುಹನುಮೇಗೌಡರು ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡರಿಗೆ ಕ್ಷೇತ್ರದಲ್ಲಿ 11999 ಹೆಚ್ಚು ಮತ ಪಡೆದಿರುವುದು ನೋಡಿದರೆ ಮುಂದಿನ ಬಾರಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ, ಮುದ್ದಹನುಮೇವಗೌಡರೇ ನಮಗೆ ಶಾಸಕರು,  ಅವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಬಲಪಡಿಸಲು ಎಲ್ಲರೂ ಒಂದಾಗಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾಂಗ್ರೆಸ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು. 
ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಮಾತನಾಡಿ ಮುದ್ದಹನುಮೇಗೌಡರ ಪರವಾಗಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ರಾಜ್ಯದ ನಾಯಕತ್ವ ಹಾಗೂ ರಾಜ್ಯ ಸಕರ್ಾರ ಹಮ್ಮಿಕೊಂಡಿರುವ ಅಭಿವೃದ್ದಿ ಯೋಜನಾ ಕಾಯಕ್ರಮಗಳಿಗೆ ತಾಲ್ಲೂಕಿನ ಹಾಗೂ ಜಿಲ್ಲಯ ಜನತೆ ಕಾಂಗ್ರೆಸ್ನ್ನು ಬೆಂಬಲಿಸಿದ್ದಾರೆ ಎಂದರು. 
ಕಾಂಗ್ರೆಸ್ ಮುಖಂಡರಾದ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ಜನತೆ ಅತಿ ಹೆಚ್ಚು ಮತ ನೀಡಿ  ಕಾಂಗ್ರೆಸ್ ಅಭ್ಯಥರ್ಿ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಕಾಂಗ್ರೆಸ್ ಮುಖಂಡರುಗಳಾದ ಹೊಸಹಳ್ಳಿ ಅಶೋಕ್, ಸಿ.ಎಂ.ಬೀರಲಿಂಗಯ್ಯ, ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ, ರಾಜಣ್ಣ, ತೀರ್ಥಪುರದ ವಾಸು, ವಕೀಲ ಪರಮೇಶ್ವರ್, ಸಜ್ಜಾದ್, ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತಿದ್ದರು.

Wednesday, April 23, 2014

ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಏ.23 : ತಾಲ್ಲೂಕಿನ ಕಂದಿಕೆರೆಯ ಶ್ರೀ ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಆರಂಭಗೊಂಡಿದ್ದು ಬುಧವಾರ ದೇವಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾಯ್ದರು.
ಬುಧವಾರ ರೇಣುಕಾಯಲ್ಲಮ್ಮದೇವಿಯವರ ಮಂಗಳಸ್ನಾನದೊಂದಿಗೆ ಗಂಗಾಪೂಜೆ ನೆರವೇರಿತು. ಈ ಜಾತ್ರೆಗೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದು, ಭಕ್ತರ ಹಷರ್ೋದ್ಘಾರದಿಂದ ದೇವಿಯ ಸ್ತುತಿ ಮಾಡುತ್ತಿದ್ದರು. 
24ರಂದು ಸಂಜೆ 6.30ಕ್ಕೆ ಸಿಡಿಮದ್ದಿನ ಸೇವೆಯೊಂದಿಗೆ ರೇಣುಕಯಲ್ಲಮ್ಮದೇವಿ, ಶ್ರೀ ಕರಿಯಮ್ಮದೇವಿ, ಶ್ರೀ ಆಂಜನೇಯಸ್ವಾಮಿವರ ಪ್ರಸನ್ನೋತ್ಸವ ನಡೆಯಲಿದೆ. 25ರಂದು ಶ್ರೀ ರೇಣುಕಯಲ್ಲಮ್ಮದೇವಿಯ ರಥೋತ್ಸವ ಮಧ್ಯಾಹ್ನ 3.30ಕ್ಕೆ ಭಕ್ತಾಧಿಗಳಿಂದ ಪ್ರಸಾದ ವಿನಿಯೋಗ ಮತ್ತು ಮಜ್ಜಿಗೆ ವಿತರಣೆ, 4.30ಕ್ಕೆ ಪಾತಪ್ಪಸ್ವಾಮಿಯವರಿಂದ ಗಾವಿನ ಸೇವೆ ಹಾಗೂ ರಾತ್ರಿ 8.30ಕ್ಕೆ ಶ್ರೀ ರಾಮ ಕಲಾಸಂಘದವರಿಂದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಲಿದೆ. 26ರಂದು ಸಂಜೆ 6ರಿಂದ 8ರವರೆಗೆ ಆರತಿಬಾನ, 6.30ಕ್ಕೆ ಶನೇಶ್ವರಸ್ವಾಮಿ ಉತ್ಸವ, ರಾತ್ರಿ 9ಕ್ಕೆ ಸಿಡಿಸೇವೆ ನಡೆಯಲಿದೆ.  27ರ ಭಾನುವಾರ ರಾತ್ರಿ 7ಕ್ಕೆ ಗುಗ್ಗರಿ ಮಾರಮ್ಮನವರ ಉತ್ಸವ, ರಾತ್ರಿ 8.30ಕ್ಕೆ ಕಂದಿಕೆರೆ ಗೆಳೆಯರ ಬಳಗದವರಿಂದ ಶ್ರೀ ರೇಣುಕಾಯಲ್ಲಮ್ಮದೇವಿಯವರ ಉಯ್ಯಾಲೋತ್ಸವ ಹಮ್ಮಿಕೊಳ್ಳಲಾಗಿದೆ.
28ರ ಬೆಳಗ್ಗೆ ರೇಣುಕಾಯಲ್ಲಮ್ಮದೇವಿಯವರೊಂದಿಗೆ ಶ್ರೀ ರಂಗನಾಥಸ್ವಾಮಿ, ಸಾದರಹಳ್ಳಿ ಶ್ರೀ ಆಂಜನೇಯಸ್ವಾಮಿ, ಸಂಗೇನಹಳ್ಳಿ, ಶ್ರೀ ಬಯಲಪ್ಪಸ್ವಾಮಿ, ಆಂಜನೇಯಸ್ವಾಮಿ ಮತ್ತು ಶ್ರೀ ಮೈಲಾರಲಿಂಗಸ್ವಾಮಿಯವರುಗಳ ಉತ್ಸವ ಹಾಗೂ ಮಧ್ಯಾಹ್ನ 3.30ಕ್ಕೆ ಕರಿಯಮ್ಮದೇವಿಯವರೊಂದಿಗೆ ಶ್ರೀ ಪಾತಪ್ಪಸ್ವಾಮಿಯವರ ಬಂಡಾರಸೇವಾ ಉತ್ಸವ ನಡೆಯಲಿದ್ದು 28ರ ಸೋಮವಾರ ಮಧ್ಯಾಹ್ನ 3.30ಕ್ಕೆ ಧ್ವಜಾವರೋಹಣ ರಾತ್ರಿ 8.30ಕ್ಕೆ ಜೋಗಿನ ಊಟ ಹಾಗೂ ಹಾಲು ಒಕ್ಕೂಟದವರಿಂದ ಮಜ್ಜಿಗೆ ವಿತರಣೆ ನಡೆಯಲಿದೆ.

ಖಾಸಗಿ ಬಸ್ಗಳ ಸಂಚಾರ ರದ್ದು: ಕೆ.ಎಸ್.ಆರ್.ಟಿ.ಸಿ.ಬಸ್ಗಳ ಕೊರತೆ, ಪ್ರಯಾಣಿಕರ ಪರದಾಟ.
ಚಿಕ್ಕನಾಯಕನಹಳ್ಳಿ,ಏ.23  : ಬಸ್ಗಾಗಿ ಕಾದೂ ಕಾದೂ ಸಾಕಾಗೋಯ್ತು, ಬಸ್ ಬಂದರೂ ಕಾಲಿಡಲು ಸ್ಥಳವಿಲ್ಲದಂತೆ ತುಂಬಿ ತುಳುಕುತ್ತಿರುತ್ತದೆಯಾದರೂ ಅದೇ ಬಸ್ನೊಳಗೆ ನುಗ್ಗಿ ಅವರಿವರನ್ನು ಗೊಣಗಿಕೊಂಡು ನಿಂತರೆ ನಮ್ಮೂರಿಗೆ ತೆರಳುವುದರೊಳಗೆ ಸಾಕಪ್ಪ ಬಸ್ನ ಸಹವಾಸ ಎನ್ನುವಷ್ಟು ಸಾಕಾಗಿ ಹೋಗುತ್ತದೆ ಎಂಬುದು ತುಮಕೂರಿನಿಂದ ಚಿಕ್ಕನಾಯಕನಹಳ್ಳಿ, ಹುಳಿಯಾರು, ಹೊಸದುರ್ಗ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ದಿನನಿತ್ಯದ ಸಮಸ್ಯೆಯಿದು.
ಪ್ರತಿನಿತ್ಯ ಸಾವಿರಾರು ಜನರು ಚಿಕ್ಕನಾಯಕನಹಳ್ಳಿ, ಹುಳಿಯಾರು ಹಾಗೂ ಹೊಸದುರ್ಗ ಮಾರ್ಗವಾಗಿ ತುಮಕೂರು ಹಾಗೂ ಬೆಂಗಳೂರಿಗೆ ಸಂಚರಿಸುವವರು ಈ ಮಾರ್ಗದಲ್ಲಿನ ಬಸ್ಗಳ ಸಮಸ್ಯೆಯ ವ್ಯವಸ್ಥೆ ಕಂಡು ಮಮ್ಮಲ ಮರುಗುತ್ತಿದ್ದಾರೆ.
ಬೆಂಗಳೂರಿನಿಂದ ಹೊಸದುರ್ಗ ಮಾರ್ಗವಾಗಿ ಹೆಚ್ಚಿನ ಖಾಸಗಿ ಬಸ್ಗಳು ಓಡಾಡುತ್ತಿದ್ದವು ಆದರೆ ಜಿಲ್ಲಾಡಳಿತದ ಬಿಗಿ ಕ್ರಮದಿಂದಾಗಿ ಖಾಸಗಿ ಬಸ್ಗಳ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ, ತುಮಕೂರಿನಿಂದ ಹೊಸದುರ್ಗ ಮಾರ್ಗವಾಗಿ ಸಂಚರಿಸಬೇಕಾದರೆ ಕೆ.ಎಸ್.ಆರ್.ಟಿ.ಸಿ ಬಸ್ಗಳನ್ನೇ ಪ್ರಯಾಣಿಕರು ಅವಲಂಬಿಸಬೇಕಾಗಿದ್ದು ತುಮಕೂರಿನಿಂದ ಈ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ಗಳು ಅಧಿಕವಾಗಿ ಇಲ್ಲದಿರುವುದರಿಂದ  ಬಸ್ಗಳಲ್ಲಿ ಕಾಲಿಡಲು ಜಾಗವಿಲ್ಲದಂತೆ ತುಂಬಿ ತುಳುಕುತ್ತಿರುತ್ತವೆ.
ಬೆಳಗಿನ ಸಮಯದಲ್ಲೂ ತಾಲ್ಲೂಕಿನ ಹಲವು ಗ್ರಾಮಗಳಿಂದ  ವಿದ್ಯಾಥರ್ಿಗಳು ತುಮಕೂರಿಗೆ ಸಂಚರಿಸಲು ಪರಿತಪಿಸುತ್ತಾರೆ, ಪರೀಕ್ಷೆ ಸಮಯದಲ್ಲಂತೂ ವಿದ್ಯಾಥರ್ಿಗಳ ಪರಿಸ್ಥಿತಿ ಹೇಳತೀರದು, ವ್ಯಾಪಾರಸ್ಥರು, ರೈತರ ಲಗೇಜುಗಳನ್ನು ಬಸ್ನಲ್ಲಿ ಹಾಕಲಾಗದೇ ಬೆಂಗಳೂರಿಗೆ ಪ್ರಯಾಣಿಸಲು ಮೇಲ್ಚಾವಣಿ(ಟಾಪ್ ಕ್ಯಾರಿಯರ್) ಖಾಲಿಯಾಗಿರುವ ಬಸ್ಗಳು ಬರುವವರೆಗೆ ಕಾಯುತ್ತಾರೆ, ಹಬ್ಬ-ಹರಿದಿನ, ಸಕರ್ಾರಿ ರಜೆ ಇನ್ನಿತರ ಜಾತ್ರಾ ಮಹೋತ್ಸವದಲ್ಲಂತೂ ಬಸ್ಗಳಿಗಾಗಿ ಪರಿತಪಿಸುವ ತಾಲ್ಲೂಕಿನ ಜನತೆ ಹಿಡಿಶಾಪ ಹಾಕುತ್ತಾರೆ. 
ಇನ್ನೂ ಚಿಕ್ಕನಾಯಕನಹಳ್ಳಿಯಿಂದ ಕುಪ್ಪೂರು, ಹಂದನಕೆರೆ, ತಿಮ್ಮನಹಳ್ಳಿ, ಕಾತ್ರಿಕೆಹಾಳ್ ಹಾಗೂ ಮುದ್ದೇನಹಳ್ಳಿ ಭಾಗಗಳಿಗೆ ಸಂಚರಿಸಲು ಬಸ್ಗಳ ಸಮಸ್ಯೆಯಿದೆ, ಈ ಭಾಗದಿಂದ ಬರುವ ವಿದ್ಯಾಥರ್ಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರಿಗೆ ಬಸ್ಗಳ ಚಿಂತೆಯಾಗಿದ್ದು ಈ ಭಾಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಹಲವಾರು ದಿನಗಳಿಂದ ಪ್ರತಿಭಟನೆ, ಮನವಿ ಅಪರ್ಿಸುತ್ತಲೇ ಇದ್ದಾರೆ. ಪ್ರಯೋಜನ ಮಾತ್ರ ಶೂನ್ಯ.

Tuesday, April 22, 2014

                                                                                                raveeshpiksp@gmail.com        
raveeshpiksp@gmail.com 


    ಏಪ್ರಿಲ್  ೨೪  ಅಣ್ಣಾವ್ರ  ಜನ್ಮ  ದಿನ ,   ಅವರು  ಚಿರಾಯುವಾಗಲಿ
ಡಾ . ರಾಜ್ ಕುಮಾರ್ - ಭಾರತ ದೇಶದಲ್ಲಿಯೇ ಚಲನ ಚಿತ್ರ ನಟನೆಗೆ ಡಾಕ್ಟರೇಟ್ ಪದವಿ ಪಡೆದವರಲ್ಲಿ ( ಮೈಸೂರು ವಿಶ್ವವಿದ್ಯಾನಿಲಯದಿಂದ ) ಮೊದಲಿಗರು   . ಡಾ . ರಾಜ್ ಕುಮಾರ್ - ಅಮೇರಿಕಾ ದೇಶದಿಂದ ಕೊಡಲ್ಪಡುವ ಉನ್ನತ ಪ್ರಶಸ್ತಿ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ರಷ್ಯಾ ಮತ್ತು ಬ್ರಿಟನ್ ಪ್ರಧಾನಮಂತ್ರಿಗಳಿಗೆ ಹೊರತಪಡಿಸಿ ನಟನೆಗೆ ಪಡೆದವರಲ್ಲಿ ಜಗತ್ತಿನಲ್ಲೇ ಇವರೊಬ್ಬರು   . ಡಾ . ರಾಜ ಕುಮಾರ್ - ದೇಶದಲ್ಲಿ ಒಂದೇ ಭಾಷೆಯಲ್ಲಿ ಸುಮಾರು   ೫೦ ವರ್ಷಗಳ ಕಾಲ ನಟನೆ ಮಾಡಿದ ಅದ್ಬುತವಾದ ವ್ಯಕ್ತಿತ್ವ  . ಡಾ . ರಾಜ್ ಕುಮಾರ್ - ಬದುಕಿದ್ದಾಗಲೇ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಏಕೈಕ ಕಲಾವಿದ    . ಡಾ . ರಾಜ ಕುಮಾರ್ - ರಾಜ್ಯದಲ್ಲಿ ಸುಮಾರು ೫೦೦೦ ಅಭಿಮಾನಿ ಸಂಘ ಹೊಂದೊದ್ದ ಅದ್ಬತವಾದ ನಾಯಕ ನಟ  . ಡಾ . ರಾಜ್ ಕುಮಾರ್ - ನಟನೆ ಮತ್ತು ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ದೇಶದಲ್ಲಿಯೇ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್ - ಪ್ರಥಮ ಚಿತ್ರದಲ್ಲಿಯೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್   - ಕನ್ನಡ ಚಿತ್ರ ರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಏಕೈಕ ತಾರೆ  . ಡಾ . ರಾಜ ಕುಮಾರ್ - ಹತ್ತಕ್ಕೂ ಹೆಚ್ಚು ಬಿರುದಾವಳಿಯನ್ನು ಪಡೆದಿರಿವ ಭಾರತ ದೇಶದ ಏಕೈಕ ನಟ ( ರಸಿಕರರಾಜ , ಗಾನಗಂಧರ್ವ , ಕನ್ನಡ ಕಣ್ಮಣಿ , ವರಪುತ್ರ , ವರನಟ , ಪದ್ಮಭೂಷಣ , ನಟಸಾರ್ವಬೌಮ , ಕೆಂಟುಕಿ ಕರ್ನಲ್ , ಡಾಕ್ಟರೇಟ್ ಮುಂತಾದವುಗಳು ) ೧೦ . ಡಾ . ರಾಜ ಕುಮಾರ್ - ಕನ್ನಡದಲ್ಲಿ ಪದ್ಮಭೂಷಣ ಪ್ರಶ್ತಿ ಪಡೆದ ಕನ್ನಡ ತಾಯಿಯ ಹೆಮ್ಮೆಯ ಪುತ್ರ  ೧೧ . ಡಾ . ರಾಜಕುಮಾರ್ - ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ರಾಜ್ಯ ಪ್ರಶಸ್ತಿ , ೧೦ ಫಿಲ್ಮ ಫೇರ್ ಅವಾರ್ಡ , ಹಾಡುಗಾರಿಕೆಗೆ ಪ್ರಶಸ್ತಿ ಪಡೆದ ಏಕೈಕ ನಟ  ೧೨ . ಒಂದೇ ವರ್ಷದಲ್ಲಿ ೧೪ ಚಲನಚಿತ್ರಗಳಿಗೆ ನಾಯಕ ನಟನಾದ ಏಕೈಕ ನಟ  ೧೩ . ಡಾ . ರಾಜ್ - ಆಂದ್ರದಿಂದ ನೀಡುವ NTR award ಪಡೆದ ಇತರೆ ಭಾಷೆಯ ಪ್ರಥಮ ನಟ  ೧೪ . ಡಾ . ರಾಜಕುಮಾರ್ - ಕನ್ನಡ ಚಲನಚಿತ್ರರಂಗದ ಹಿತಿಹಾಸದಲ್ಲಿ ಸುದೀರ್ಘವಾಗಿ ಓಡಿದ ಬಂಗಾರದಮನುಷ್ಯ ಚಿತ್ರದ ನಾಯಕ ನಟ  ೧೫ . ಡಾ . ರಾಜಕುಮಾರ್ - ಇವರ ಚಿತ್ರಗಳ ಸಕ್ಸಸ್ ರೇಟ್ ೯೫ , ಇದು ದೇಶದಲ್ಲಿಯೇ ಪ್ರಥಮ  ೧೬ . ಅಭಿಮಾನಿಗಲಿಂದ ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಸಿಕೊಳ್ಳುವ ಏಕೈಕ ನಟರು 


raveeshpiksp@gmail.com 

ತುಮಕೂರು ಜಿಲ್ಲೆಯ ಒಂದು ಶಾಪಗ್ರಸ್ತ ತಾಲ್ಲೂಕು ಕೇಂದ್ರ ಎಂದರೆ ಅದು ಚಿಕ್ಕನಾಯಕನ ಹಳ್ಳಿ ಎಂದು ಹೇಳಿದರೂ ಅದು ಅತಿಶಯೋಕ್ತಿಯೇನಲ್ಲ, ಕಾರಣ ನನ್ನ ಊರು ಹೆಸರಿಗೆ ತಾಲ್ಲೂಕು ಕೇಂದ್ರವಾದರೂ ಯಾವುದೇ ಸವಲತ್ತು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕು ಕೇಂದ್ರ. ಬೀದರ್ -ಶ್ರೀರಂಗಪಟ್ಟಣ ರಾಹೆ ಹಾದುಹೋಗಿದ್ದರೂ, ಯಾವುದೇ ರೀತಿಯಲ್ಲಿಯೂ ಏಳಿಗೆಯನ್ನು ಕಾಣಲಾರದ ಪರಿಸ್ಥಿತಿಯಲ್ಲಿ ಇದೆ ನನ್ನ ಊರು, ಮುಖ್ಯವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಮೂಲ ಸೌಕರ್ಯಗಳಂತೂ ಮರಿಚಿಕೆಯೇ ಸರಿ, ಚಿ ನಾ ಹಳ್ಳಿಯಲ್ಲಿ ಹಳೆಯ ಬಸ್ ನಿಲ್ದಾಣದಿಂದ ನೆಹರೂ ವೃತ್ತದ ವರೆಗೆ ಇರುವ ನಾಲ್ಕು ವ್ಯಾಪಾರ ನಡೆಸುವ ಮಂದಿಯಿಂದ ಊರು ಕಾಣುತ್ತದೆಯೇ ಹೋರತು ಮತ್ತೇನನ್ನು ಕಾಣದ ಅಸಹಜ ವ್ಯವಸ್ಸೆಗೆ ಊರು ಮೂಕ ಸಾಕ್ಷಿಯಾಗಿದೆ, ಚಿಕ್ಕನಾಯಕನ ಹಳ್ಳಿಯ ಇಂದಿನ ಪರಿಸ್ಥಿತಿಯ ಬಗ್ಗೆ ಕೆಳಗಿನಂತೆ ಕೆಲವು ನ್ಯೂನ್ಯತೆಗಳನ್ನು ನೋಡಬಹುದು . ಕೆ ಎಸ್ ಆರ್ ಟಿ ಸಿ ನಿಲ್38;ಾಣವಿದೆ ಆದರೆ ಬಸ್ಸುಗಳು ಅಲ್ಲಿ ಹೋಗಲ್ಲ . ಸರ್ಕಾರಿ ಆಸ್ಪತ್ರೆ ಇದೆ ಚಿಕಿತ್ಸೆಗೆ ಜನರು ಹೋಗಲ್ಲ, ಕಾರಣ ವೈದ್ಯರಿಲ್ಲ . ಕ್ರೀಡಾಂಗಣವಿದೆ ಆದರೆ ಅಲ್ಲಿ ಆಟ ಆಡಲು ಬಿಡಲ್ಲ .ವಾಯುವಿಹಾರಕ್ಕೆ ಉದ್ಯಾನವನವೇ ಇಲ್ಲ . ತಾಲ್ಲೂಕು ಕೇಂದ್ರವಾದರೂ ಯು ಜಿ ಡಿ ವ್ಯವಸ್ಥೆ ಇಲ್ಲ, ಈಗಲೂ ಊರಿನಲ್ಲಿ ಕೆಲವು ಅನಿಷ್ಠ ಪದ್ದತಿಗಳ ಮುಂದುವರಿಕೆ . ಕೊಳಾಯಿಗಳಿವೆ ೧೫ ದಿನಕ್ಕೋಮ್ಮೆಯೂ ನೀರು ಬರೊಲ್ಲ . ರಸ್ತೆಗಳಿವೆ ಆದರೆ ಡಾಮರಿಕರಣ ಕಂಡಿಲ್ಲ . ಪೋಲೀಸ್ ಠಾಣೆ ಇದೆ, ಆದರೆ ಪ್ರಕರಣ ದಾಖಲಿಸಲ್ಲ . ಪುರಸಭೆ ಇದೆ ಆದರೆ ಒತ್ತುವರಿ ತಗೆಸೊಲ್ಲ ೧೦. ಸರ್ಕಾರಿ ಕಾಲೇಜು ಇದೆ, ಆದರೆ ಬೋದಕರು ಮತ್ತು ವಿದ್ಯಾರ್ಥಿಗಳೇ ಇಲ್ಲ ೧೧. ಉತ್ತಮ ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಆದರೆ ಅಭಿವೃದ್ದಿ ಇಲ್ಲ ೧೨. ಓದುವ ಮಕ್ಕಳಿದ್ದಾರೆ ಆದರೆ ಐಟಿಐ, ಟಿಸಿಎಚ್, ಬಿಎಡ್ ಗಳಿಲ್ಲ ೧೩. ಅತ್ಯಂತ ಹೆಚ್ಚು ಕೊಬರಿ ಬೆಳೆಯುವ ನಾಡು ಆದರೆ ಮಾರುಕಟ್ಟೆ ಇಲ್ಲ (ನಮ್ಮ ರಾಜಕಾರಣಿಗಲ ಔದಾರ್ಯದಿಂದ ;ುಳಿಯಾರಿಗೆ ವರ್ಗಾವಣೆಯಾಯಿತು) ೧೪.ಶಿಕ್ಷಣದ ಬಗ್ಗೆ ಅಹವಾಲು ಸ್ವೀಕರಿಸಲು ಅಧಿಕಾರಿಗಳಿಲ್ಲ (ನಮ್ಮ ರಾಜಕಾರಣಿಗಳ ಔದಾರ್ಯದಿಂದ ಮಧುಗಿರಿಗೆ ಸ್ಥಳಾಂತರವಾಯಿತು) ೧೫.ಖಾಸಗೀ ಬಸ್ ನಿಲ್ದಾಣದಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ. ೧೬. ಜನರು ಕೂಲಿಗಾಗಿ ಬೆಂಗಳೂರು, ತುಮಕೂರು ಕಡೆ ಹೋಗುತ್ತಾರೆ ಆದರೆ ಊರಿಗೆ ಒಂದು ಉದ್ಯಮ ತರುವ ತಾಕತ್ತು ನಮ್ಮಲಿಲ್ಲ ೧೭. ಕೆ ಎಸ್ ಆರ್ ಟಿ ಸಿ ಡಿಪೋವನ್ನು ಚಿಕ್ಕನಾಯಕನ ಹಳ್ಳಿಗೆ ನೀಡಿದರೂ ನಮ್ಮ ರಾಜಕಾರಣಿಗಳ ಔದಾರ್ಯದಿಂದ ಅದು ಹಿಂದೆ ತುರುವೇಕೆರೆಗೂ, ತಿಪಟೂರಿಗೂ, ಈಗ ಹುಳಿಯಾರಿಗೂ ಸ್ಥಳಾಂತರವಾಗಿದೆ( ಇದು ಮಾಹಿತಿ) ಹೀಗೆ ಪಟ್ಟಿ ಮಾಡುತಾತಾ ಹೋದಲ್ಲಿ ಅದು ಹನುಮಂತನ ಬಾಲ ಬೆಳೆದ ಹಾಗೆ ಬೆಳೆಯುತ್ತಲೇ ಹೋಗುತ್ತವೆ, ನಮ್ಮ ಜನಪ್ರತಿನಿಧಿಗಳಿಗೆ ರೀತಿಯ ಅವ್ಯವಸ್ಥೆ ಕಣ್ಣಿಗೆ ರಾಚುವ ರೀತಿಯಲ್ಲಿ ಇದ್ದರೂ ತಾವು ಮೌನದಿಂದ ಕೇವಲ ನಗುಮುಖದಿಂದ ಮಾತನಾಡಿಸುವುದೇ ಊರಿನ ಅಭಿವೃದ್ದಿ ಎಂದುಕೊಂಡಿರುವುದು, ;ಮ್ಮ ಪಿರಪಿತ್ೃಗಳಿಗೆ ಇಲ್ಲದ ಇಚ್ಚಾಶಕ್ತಿ, ಇಷ್ಟಾದರೂ ನಮಗೇಕೆ ಬೇಕು ಎನ್ನು ನನ್ನೂರಿನ ಸತ್ ಪ್ರಜೆಗಳು, ಅಬ್ಬಾ ಚಿಕ್ಕನಾಯಕನಹಳ್ಳಿ ನಿನಗೆ ಜೈ, ಜೈ, ಜೈ


Monday, April 21, 2014


ಎ.ಟಿ.ಎಂ.ನಲ್ಲೇ ಬಿಟ್ಟು ಹೋಗಿದ್ದ ಹಣವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ತಲುಪಿಸಿ ಪ್ರಮಾಣಿಕತೆ ಮೆರೆದ ಹೇಮಂತ್ಕುಮಾರ್
ಚಿಕ್ಕನಾಯಕನಹಳ್ಳಿ,ಏ.21: ಬ್ಯಾಂಕ್ ಡಿಸ್ಪೆಂನ್ಸರ್(ಹಣ ನೀಡುವ ಯಂತ್ರ)ನಲ್ಲಿ ಎಟಿಎಂ ಮೂಲಕ ಹಣ ಪಡೆಯಲು ಹೋಗಿದ್ದ ವ್ಯಕ್ತಿಗೆ ಹಣ ದಕ್ಕದೆ ನಂತರ ಬಂದ ವ್ಯಕ್ತಿಗೆ ಹಣ ಸಿಕ್ಕಿತ್ತು.ಹಣ ಪಡೆದ ವ್ಯಕ್ತಿ ಬ್ಯಾಂಕ್ ವ್ಯವಸ್ಥಾಪಕ ಎಚ್.ಡಿ.ಶಂಕರ್ಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
  ಕಂಪ್ಯೂಟರ್ ಇಂಟರ್ನೆಟ್ ಮುಂತಾದ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಗ್ರಾಹಕರಿಗೆ ಡಿಸ್ಪೆಂಸರ್ ಲೋಪದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ರಿತಿಯಲ್ಲಿ ಎಟಿಎಂ ಯಂತ್ರ ತಂದಿರುವ ಅವಾಂತರ ಇದು.
  ಏ.16ರಂದು ಬೆಳಗ್ಗೆ 7.10ರ ಸಮಯದಲ್ಲಿ ಹಣಕಾಸಿನ ಅಗತ್ಯತೆ ಮೇರೆಗೆ ಎಟಿಎಂ ಖಾತೆದಾರ ಶೆಟ್ಟಿಕೆರೆ ಗೇಟ್ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆವರಣದಲ್ಲಿರುವ ಎಟಿಎಂಗೆ ಬಂದ ವ್ಯಕ್ತಿಗಳು ಹಣ ತೆಗೆಯಲು ಸಿಕ್ರೇಡ್ ಕೋಡ್ ನಮೂದಿಸಿ ಹಣ ಪಡೆಯಲು ಮುಂದಾಗಿದ್ದಾರೆ.ಆದರೆ ತಾಂತ್ರಿಕ ದೋಷದಿಂದಾಗಿ ಹಣ ಬಾರದೆ ಇದ್ದ ಕಾರಣ ಪಕ್ಕದಲ್ಲೇ ಇದ್ದ  ಇನ್ನೊಂದು ಡಿಸ್ಪೆಂನ್ಸರ್ ನಿಂದ ಹಣ ತೆಗೆದುಕೊಂಡು ಹೋಗಿದ್ದಾರೆ.ಕೈಕೊಟ್ಟ ಡಿಸ್ಪೆಂನ್ಸರ್ ಯಂತ್ರ ನಂತರ ರೂ.7600 ಹಣ ಹಾಚೆ ಹಾಕಿದೆ.
  ಇದೇ ಸಮಯದಲ್ಲಿ ಸರಿಯಾಗಿ.ಹೇಮಂತ್ಕುಮಾರ್ ಎಂಬುವರು ಹಣ ತೆಗೆಯಲು ಎಟಿಎಂ ಒಳಗೆ ಪ್ರವೇಶಿಸಿದ ಸಂದರ್ಭದಲ್ಲಿ ಸದರಿ ಹಣವನ್ನು ಕಂಡು ಹಣವನ್ನು ತೆಗೆದುಕೊಂಡು ಬ್ಯಾಂಕ್ ಮೇನೇಜರ್ ಕಾಣಲು ಹೋಗಿದ್ದರು ಆದರೆ ವ್ಯವಸ್ಥಾಪಕರು ಇಲ್ಲದ ಕಾರಣ ಹಣವನ್ನು ತಾವೇ ಇಟ್ಟುಕೊಂಡು ಸೋಮವಾರ ವ್ಯವಸ್ಥಾಪಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
 ಈ ಸಂಬಂಧ ಎಸ್.ಬಿ.ಎಂ. ವ್ಯವಸ್ಥಾಪಕ ಎಚ್.ಡಿ.ಶಂಕರ್ ವಿಚಾರನೆ ನಡೆಸಿದ್ದಾರೆ, ನಂತರದಲ್ಲಿ  ಮಾತನಾಡಿದ ವ್ಯವಸ್ಥಾಪಕ ಎಚ್.ಡಿ.ಶಂಕರ್,   ವಿವಿಧ ಬ್ಯಾಂಕ್ಗಳ ಎಟಿಎಂ ಕಾಡರ್್ ಬಳಸುವ ಸಂದರ್ಭದಲ್ಲಿ  ಬ್ಯಾಟರಿ ಬ್ಯಾಕಪ್ ನಿಂದ ಹಣ ತಡವಾಗಿ ಬರುವ ಸಾಧ್ಯತೆ ಇದ್ದು ಗ್ರಾಹಕರು ಆತುರಪಡದೆ ಕಾಯಬೇಕು ಎಂದರು. ಹಣದ ವ್ಯತ್ಯಯಕ್ಕೆ ಕಾಡರ್್ದಾರರೇ ಕಾರಣರಾಗುತ್ತಾರೆ. ಒಂದು ವೇಳೆ ಗ್ರಾಹಕರು ದೂರುನೀಡಿದರೆ ಪತ್ತೆಹಚ್ಚಲು ಪ್ರಯತ್ನಿಸಲಾಗುವುದು. ಈ ಹಣವನ್ನು ಸೆಂಟ್ರೀ ಡೆಪಾಸಿಟ್ ಅಕೌಂಟ್ನಲ್ಲಿ ಹಿಡಲಾಗುವುದು. ಬಾಂಬೆಯಲ್ಲಿ ಇರುವ ಸ್ವಿಥ್ ಸೆಂಟರ್ ಮಾಹಿತಿ ಪಡೆದು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಲಾಗುವುದು ಎಂದರು. ಎಟಿಎಂನಿಂದ ಹಣ ಪಡೆಯುವ ಗ್ರಾಹಕರು ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದರು.
  


ಚಿಕ್ಕನಾಯಕನಹಳ್ಳಿ,ಏ.21 : ಭೂ ಹೊದಿಕೆ ಮತ್ತು ಬಳಕೆಯ ಸಾಂಪ್ರದಾಯಿಕ ಜ್ಞಾನವನ್ನು ಹಾಳು ಮಾಡಿಕೊಂಡಿರುವುದರಿಂದ ಜಲಕ್ಷಾಮ ಆವರಿಸಿದೆ.ಬಯಲು ನಾಡಿನಲ್ಲಿ ಬೀಳುತ್ತಿರುವ ಶೇ.35ರಷ್ಟು ಮಳೆನೀರು ಮಾತ್ರ ಕೃಷಿಗೆ ಬಳಕೆಯಾಗುತ್ತಿದೆ.ಉಳಿದ ಶೇ.65ಭಾಗ ಪೋಲಾಗುತ್ತಿದೆ ಎಂದು ಪರಿಸರವಾದಿ ಪ್ರೊ.ಸಿ.ಯತಿರಾಜ್ ಆತಂಕ ವ್ಯಕ್ತಪಡಿಸಿದರು.

  
  ತಾಲ್ಲೂಕಿನ ಕಂದಿಕೆರೆ ಹೋಬಳಿ ಕಣಿವೆ ಕ್ರಾಸ್ ಬಳಿ ರಮೇಶ್ ತೊಟದಲ್ಲಿ ಸೃಜನ ಹಾಗೂ ತಾಲ್ಲೂಕು ವಿಜ್ಞಾನ ಕೇಂದ್ರ ಸಂಯುಕ್ತವಾಗಿ ಆಯೋಜಿಸಿರುದ್ದ ಸಿರಿಧಾನ್ಯಬೆಳೆ ಮಹತ್ವ ಕುರಿತಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಇದನ್ನು ಸರಿಯಾಗಿ ಬಳಸಿಕೊಳ್ಳಲು ಮುಚ್ಚಿಗೆ ಹೊದಿಕೆ ಮತ್ತು ಸರಿ ಹೊಂದುವ ಬೆಳೆ ವಿನ್ಯಾಸ ಅಳವಡಿಸಿಕೊಳ್ಳುವುದೊಂದೆ ಸರಿಯಾದ  ದಾರಿ ಎಂದರು.
ಅಂತರ್ಜಲದ ಅಪವ್ಯಯದಿಂದ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿ,ತಾಲ್ಲೂಕು ತಾಲ್ಲೂಕುಗಳಲ್ಲಿ ಜಲಸಂಘರ್ಷ ಶುರುವಾಗಲಿ,ಬಯಲು ನಡಿಗೆ ಒಗ್ಗುವ ಸರಿಯಾದ ಬೆಳೆ ವಿನ್ಯಾಸ ನೀರು ನಿರ್ವಹಣೆ ಕ್ರಮವನ್ನು ಅನುಸರಿದರೆ ಬೀಳುವ ಮಳೆಯಲ್ಲಿ ಸಮೃದ್ಧಿ ಕಾಣಬಹುದು ಎಂದರು.
ಇಂದಿನ ಕೃಷಿ ಅಧೊಗತಿಗೆ ಕೃಷಿ ವಿಜ್ಞಾನಿಗಳು ಹಾಗೂ ಇಲಾಖೆಗಳು ಕಾರಣ.ಇಲಾಖೆಯ ಸಲಹೆಯಂತೆ ರೈತರು ಅಡಿಕೆ ಮತ್ತು ತೆಂಗು ಬೆಳೆಗಳನ್ನು ಹಾಕಿದ್ದಾರೆ.ತೊಟ ಉಳಿಸಿಕೊಳ್ಳಲು ಅಂತರ್ಜಲದ ವಿಪರೀತ ಬಳಕೆಗೆ ತೊಡಗಿದ್ದಾರೆ.ರಾಜಕಾರಣಿಗಳು ಶಾಶ್ವತ ನೀರಾವರಿ ಅಂಥ ಸಮುದ್ರಕ್ಕೆ ಹೋಗುವ ನೀರನ್ನು ಬಯಲುನಾಡಿಗೆ ಹರಿಸುತ್ತೇವೆ ಅನ್ನುತ್ತಾರೆ. ಅವು ನೀರಿನ ದಾಹ ಮತ್ತು ಸಂಘರ್ಷ ಹೆಚ್ಚಿಸುತ್ತವೆ. ಆದರೆ ನಮಗೆ ನಿರಾವರಿ ಯೋಜನೆಗಳು ಬೇಡ ಬದಲಿಗೆ ಬಿದ್ದ ಮಳೆನೀರನ್ನು ಭೂಮಿಗೆ ಇಂಗಿಸಿ ಭವಿಷ್ಯದ ನೀರಿನ ನಿಧಿ ಭದ್ರಪಡಿಸಿಕೊಳ್ಳುವ ಯೋಜನೆಗಳು ಬೇಕು ಎಂದು ಅಭಿಪ್ರಾಯಪಟ್ಟರು.
  ಕಾಡು ಕೃಷಿ ಪ್ರತಿಪಾದಕ ಡಾ.ಖಾದರ್ ಮಾತನಾಡಿ,ತೋಟ ಹೊಲಗಳಲ್ಲಿ ಉಳಿವ ತ್ಯಾಜ್ಯವನ್ನು ಬೆಂಕಿ ಹಾಕಿ ಸುಡುವ ಪರಿಪಾಟ ರೈತರಲ್ಲಿದೆ ಅದು ತಪ್ಪು.ಕೃಷಿ ಉಳಿಕೆಗಳುನ್ನು ಭೂ ಹೊದಿಕೆಯನ್ನಾಗಿ ಪರಿವತರ್ಿಸುವುದರಿಂದ ಅಂತರ್ಜಲ ಹಾವಿಯಾಗದಂತೆ ತಡೆಯಬಹುದು ಮತ್ತು ಕೋಟ್ಯಾಂತರ ಸೂಕ್ಷ್ಮಾಣುಗಳ ವೃದ್ಧಿಗೂ ಕಾರಣವಾಗುತ್ತದೆ ಆದ್ದರಿಂದ ಉಳಿಕೆಗೆ ಬೆಂಕಿ ಹಾಕಬೇಡಿ. ಕಾಡು ಮತ್ತು ಗುಡ್ಡಗಳಿಗೆ ಬೆಂಕಿ ಹಾಕುವುದು ಅಕ್ಷಮ್ಯ ಅಪರಾಧ ಎಂದರು
  ಬಯಲು ನಾಡಿನ ಕೃಷಿಗೆ ಸಿರಿಧಾನ್ಯಗಳಾದ ಹಾರ್ಕ,ನವಣೆ ಸಾವೆ,ಸಜ್ಜೆ,ರಾಗಿ,ಕೊರಲೆ,ಹುರುಳಿ ಅಲಸಂದೆ ಮುಂತಾದವುಗಳು ಸೂಕ್ತವಾಗಿವೆ ರೈತರು ಉದಾಸೀನ ಮಾಡದೆ ಸಿರಿಧಾನ್ಯಗಳ ಬಿತ್ತನೆಗೆ ಮುಂದಾಗಿ ಎಂದರು.
  ಕಾರ್ಯಕ್ರಮದಲ್ಲಿ ಗ್ರೀನ್ ಇನೋವೇಟೀವ್ ಫೌಂಡೇಷನ್ನ ಚಮದ್ರಶೇಖರ್ ಬಾಳೆ, ವಿಜ್ಞಾನ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್,ರಾಮಕೃಷ್ಣಪ್ಪ,ಸೃಜನ ಕಾರ್ಯದಶರ್ಿ ಇಂದಿರಮ್ಮ, ಕಂದಿಕೆರೆ ವಲಯ ಕೃಷಿ ಅಧಿಕಾರಿ ನಾಗರಾಜು,ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮುಂತಾದವರು ಇದ್ದರು.

Thursday, April 17, 2014

ಕುಪ್ಪೂರು ಬಳಿ ಬೀಡುಬಿಟ್ಟಿರುವ ಆನೆಗಳು 
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಣೆಕಟ್ಟೆ ಬಳಿ ಇರುವ ಹಳ್ಳದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಎರಡು ಆನೆಗಳು ಸುತ್ತಮುತ್ತಲ ತೋಟಗಳಲ್ಲಿ ಸಂಚರಿಸುತ್ತಿವೆ.
ಚಿಕ್ಕನಾಯಕನಹಳ್ಳಿ : ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹೊರಟ ಆನೆಗಳ ಹಿಂಡಿನಿಂದ ಬೇರ್ಪಟ್ಟ ಎರಡು ಆನೆಗಳು ಮೊನ್ನೆ ತಾಲ್ಲೂಕಿನ ಬುಕ್ಕಾಪಟ್ಟಣ ಹಾಗೂ ಬೋರನಕಣಿವೆಯಲ್ಲಿ ತಂಗಿದ್ದು ರಾತ್ರಿ ಚಿಕ್ಕಬಿದರೆ ಮಾರ್ಗವಾಗಿ ಕುಪ್ಪೂರು ಬಳಿಯ ಹಳ್ಳದ ಬಳ್ಳಾರಿ ಜಾಲಿಯ ಪೊದೆಗಳಲ್ಲಿ ಎರಡು ಆನೆಗಳು ಬೀಡುಬಿಟ್ಟಿವೆ.
  ತಾಲ್ಲೂಕಿನ ಬೋರನಕಣಿವೆ ಜಲಾಶಯದ ಮಾರ್ಗವಾಗಿ ಚಿಕ್ಕಬಿದರೆ, ಅಣೆಕಟ್ಟೆ ಮೂಲಕ ಕುಪ್ಪೂರು ಸುತ್ತಮುತ್ತಾ ಆನೆಗಳು ಗುರುವಾರ ಬೆಳಗಿನ ಜಾವ ತಿರುಗಾಡುತ್ತಿದು ಅರಣ್ಯ ಇಲಾಖೆಯ ಸಿಬ್ಬಂದಿಯು ಆನೆಗಳನ್ನು ಓಡಿಸಲು ಹರಸಾಸಹ ಪಡುತ್ತಿದ್ದಾರೆ, ಆನೆಗಳನ್ನು ನೋಡಿದ ಜನರು ಶಿಳ್ಳೆ ಮತ್ತು ಕೇಕೇ ಹಾಕುತ್ತಿರುವುದಕ್ಕೆ ಆನೆಗಳು ಬೆದುರುವ ಸಂಭವವಿರುವುದರಿಂದ ಜನರನ್ನು ನಿಯಂತ್ರಿಸಲು ಶ್ರಮ ಪಡುತ್ತಿದ್ದಾರೆ.
ಬಿಸಿಲಿರುವುದರಿಂದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಆನೆಗಳು ಯಾವುದೇ ಸಮಯದಲ್ಲಾದರೂ ಕದಲಬಹುದು ಎಂಬ ಕಾರಣದಿಂದ ಜನರನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಸಂಜೆಯಾದ ನಂತರ ಸ್ಥಳದಿಂದ ಕದಲುವ ಸಂಭವವಿದೆ ಎಂದು ವಲಯ ಅರಣ್ಯಾಧಿಕಾರಿ ಮಾರುತಿ ತಿಳಿಸಿದ್ದಾರೆ. ಆನೆಗಳನ್ನು ನಿಯಂತ್ರಿಸಲು ಸ್ಥಳ್ಕದಲ್ಲೇ ಅರಣ್ಯ ಇಲಾಖಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಚಿ.ನಾ.ಹಳ್ಳಿ ಲೋಕಸಭಾ ಚುನಾವಣೆ ಶಾಂತಿಯುತ ಮತದಾನ

ಚಿಕ್ಕನಾಯಕನಹಳ್ಳಿ ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 222ನೇ ವಾಡರ್್ನ ಮತಗಟ್ಟೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬ ಪತ್ನಿ ಬಬಿತಾರವರೊಂದಿಗೆ ಮತಚಲಾಯಿಸಿ, ಹೆಬ್ಬೆಟ್ಟಿನ ಶಾಹಿ ತೋರಿಸುತ್ತಿರುವುದು.






ಚಿಕ್ಕನಾಯಕನಹಳ್ಳಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಪತ್ನಿ ತ್ರಿವೇಣಿ, ಮಗ ಅಭಿಗ್ನರೊಂದಿಗೆ ಮತ ಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿಯವರು ಅಬುಜಿಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 207ರಲ್ಲಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ : ಲೋಕಸಭಾ ಚುನಾವಣೆಯ ಮತದಾನ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು ನವಿಲೆ ಗ್ರಾಮದ 201ನೇ ಬೂತ್ನಲ್ಲಿ ಮತಯಂತ್ರ ಕೆಟ್ಟುಹೋದ ಪರಿಣಾಮ 15 ನಿಮಿಷ ತಡವಾಗಿ ಮತದಾನ ಪ್ರಾರಂಭವಾಯಿತು.
ಮೇಲನಹಳ್ಳಿ ಮತ್ತು ನವಿಲೆ ಸೇರಿದಂತೆ ಅಲ್ಲಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದ ವರದಿಗಳು ಬಂದಿವೆ. ಸಂಜೆ 5ಗಂಟೆಯವರೆಗೆ ಶೇ.60ರಷ್ಟು ಮತದಾನವಾಗಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ 222ನೇ ಮತಗಟ್ಟೆಯಲ್ಲಿ ಪತ್ನಿ ಬಬಿತಾರೊಂದಿಗೆ ಮತ ಚಲಾಯಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿದರು. ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಜಿ ಅಬೂಜಿಹಳ್ಳಿ ಸಕರ್ಾರಿ ಪ್ರಾಥಮಿಕ ಶಾಲೆ ಹಾಗೂ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಕುಪ್ಪೂರು ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಮನಹಳ್ಳಿ ಮತಗಟ್ಟೆಯ ಗುಂಗುರಪೆಂಟೆಯ 78 ಮತದಾರರಲ್ಲಿ ಒಬ್ಬರು ಮತಚಲಾಯಿಸಿದ್ದಾರೆ, ಉಳಿದವರು ಮತದಾನ ಬಹಿಷ್ಕರಿಸಿ ತಮಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಮತದಾನದಿಂದ ದೂರ ಉಳಿದಿದ್ದಾರೆ. ತಾಲ್ಲೂಕಿನ ಕೆಲವು ಕಡೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದವರೊಂದಿಗೆ ಮಾತಿನ ಚಕಮಕಿ ನಡೆದಿದೆ.