Thursday, January 21, 2016


5ನೇ ವಾಡರ್್ನಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ : ಸಾರ್ವಜನಿಕರ ಆರೋಪ 
ಚಿಕ್ಕನಾಯಕನಹಳ್ಳಿಜ.21 : ಪಟ್ಟಣದ 5ನೇ ವಾಡರ್್ನ ಪೋಲಿಸ್ ಕ್ವಾಟ್ರಸ್ ಬಳಿಯಿಂದ ರೋಟರಿ ಶಾಲೆಯ ಸುತ್ತಮುತ್ತಲೂ ಸ್ವಚ್ಛತೆಯಿಲ್ಲದೆ ಅನೈರ್ಮಲ್ಯ ಹೆಚ್ಚಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ.
  ಪಟ್ಟಣಕ್ಕೆ ಹೊಂದಿಕೊಂಡಂತೆ ವಿಸ್ತಾರಗೊಂಡಿರುವ  ಪೋಲಿಸ್ ಕ್ವಾಟ್ರಸ್ ಬಳಿ  ಯಾವುದೇ ಮೂಲಭೂತ  ಸೌಕಾರ್ಯವಿಲ್ಲದೆ ಇಲ್ಲಿನ ನಾಗರೀಕರು ಪರದಾಡುವಂತಾಗಿದೆ, ಈ ಭಾಗಕ್ಕೆ ಪುರಸಭೆ ವತಿಯಿಂದ ಸರಸ್ವತಿಪುರ ಎಂಬ ಹೆಸರಿಡಲಾಗಿದೆ.  ಇಲ್ಲಿ ಸುಮಾರು 6 ರಿಂದ 8 ಶಾಲಾ ಕಾಲೇಜುಗಳಿದ್ದು ಪ್ರತಿನಿತ್ಯ ಈ ಶೆಟ್ಟಿಕೆರೆ ರಸ್ತೆಯಲ್ಲಿ ಸುಮಾರು 5000ಮಕ್ಕಳು ಶಾಲಾ ಕಾಲೇಜಿಗೆ ಬಂದು ಹೋಗುತ್ತಾರೆ. ಹಾಗೂ ತಿಪಟೂರು ರಸ್ತೆಯಾದ್ದರಿಂದ ಹೆಚ್ಚಿನ ವಾಹನಗಳು ಶಾಲಾ ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ ಜೊತೆಗೆ ತಾಲ್ಲೂಕು ಸಬ್ ರಿಜಿಸ್ಟಾರ್ರವರ  ಕಛೇರಿಯು ಸಹ ಈ ವಾಡರ್್ನಲ್ಲಿದ್ದು ಗ್ರಾಮಾಂತರ ಜನರು ಸಹ ಹೆಚ್ಚಿನದಾಗಿ ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಬಂದು ಹೋಗುವ ಜಾಗವಾಗಿದೆ.
 ಈ ವಾಡರ್್ನಲ್ಲಿ ಪುರಸಭಾ ವತಿಯಿಂದ ಯಾವುದೇ ಚರಂಡಿಗಳ ವ್ಯವಸ್ಥೆಯಾಗಲಿ ರಸ್ತೆ ದೀಪಗಳ ವ್ಯವಸ್ಥೆಯಾಗಲಿ ನೀರಿನ ವ್ಯವಸ್ಥೇಯಾಗಲಿ ಇಲ್ಲವಾಗಿದೆ, ಕಾರಣ ವಾಡರ್್ನಲ್ಲಿರುವ ಜನರು ತಮ್ಮ ಮನೆಗಳ, ಹೋಟೆಲ್ಗಳ ಹಾಗೂ ಗ್ಯಾರೇಜ್ಗಳ ಕಲುಷಿತ ನೀರನ್ನು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬಿಡುವುದರಿಂದ ವಾಹನ ಸವಾರರು ರಸ್ತೆ ಮೇಲಿನ ಚರಂಡಿ ನೀರಿನಲ್ಲಿ ವಾಹನ ಹರಿಸಿದಾಗ ಆ ಕಲುಷಿತ ನೀರು ಪಾದಚಾರಿಗಳಿಗೆ ಸಿಡಿಯುತ್ತದೆ. ಇನ್ನು ಶಾಲಾ ಮಕ್ಕಳೂ ಸ್ವಚ್ಛತೆಯಿಂದ ಶಾಲೆಗೆ ಹೋಗಬೇಕಾದರೆ ಆ ನೀರನ್ನು ಮೈಗೆ ಸಿಡಿಸಿಕೊಂಡು ಸಮವಸ್ತ್ರ ಕೊಳಕು ಮಾಡಿಕೊಂಡು ಉದಾಹರಣೆಗಳೆಷ್ಟೊ,  ಶಾಲಾ ಆವರಣವಾಗಿದ್ದರು ಯಾವುದೇ ಸೂಚನಾ ಫಲಕಗಳಿಲ್ಲದಿರುವುದರಿಂದ,  ವಾಹನ ಸವಾರರು ಅಡ್ಡದಿಡ್ಡಿಯಾಗಿ ಚಲಿಸುವುದರಿಂದ ಈ ಭಾಗದಲ್ಲಿ ಅಪಘಾತಗಳು ಸವರ್ೆ ಸಾಮಾನ್ಯವಾಗಿದೆ ಇನ್ನೂ ಹೊಸ ಬಡಾವಣೆಗಳಾಗಿದ್ದು ಬೀದಿ ದೀಪಗಳ ವ್ಯವಸ್ಥೆ ಹಾಗೂ ಅವುಗಳ ನಿರ್ವಹಣೆ ಯಾರು ಕೇಳದಂತಾಗಿದೆ. ಇನ್ನೂ ಕುಡಿಯುವ ನೀರಿನ ಸರಬರಾಜು  10 ರಿಂದ 15 ದಿನಗಳಿಗೊಮ್ಮೆಬಿಡುತ್ತಾರೆ,  ಬೀದಿದೀಪ ಸರಿಪಡಿಸಿ ಎಂದು ಪುರಸಭೆಯವರಿಗೆ ತಿಳಿಸಿದರೆ 1 ತಿಂಗಳಾದರೂ ಈ ಕಡೆ ಬರುವುದಿಲ್ಲ ಇಲ್ಲಿ ಉಳಉಪ್ಪಟಗಳ ಕಾಟ ಹೆಚ್ಚಾಗಿದ್ದು ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು  ಕಾಯುವಂತಾಗಿದೆ ಒಟ್ಟಾರೆ ಸರಸ್ವತಿ ಪುರದ ಜನರ ಕಷ್ಟ ಹೇಳತೀರದಾಗಿದೆ ಈಗಲಾದರೂ ಸಂಬಂದಿಸಿದವರು ಇತ್ತ ಗಮನ ಹರಿಸುವರೇ ಎಂದು ಆ ಭಾಗದ ನಿವಾಸಿಗಳು ತಮ್ಮ ಅಳಲನ್ನು ಮಾಧ್ಯಮದವರೆದರು ತೋಡಿಕೊಂಡಿದ್ದಾರೆ. 

ಜ.24ರಂದು ಬನದ ಹುಣ್ಣಿಮೆ
ಚಿಕ್ಕನಾಯಕನಹಳ್ಳಿ,ಜ,21 : ಶ್ರೀ ಬನಶಂಕರಿ ಮತ್ತು ಚೌಡೇಶ್ವರಿ ಅಮ್ಮನವರ ಬನದ ಹುಣ್ಣಿಮೆ ಹಾಗೂ ಬೆಳ್ಳಿ ಕವಚ ಅಲಂಕಾರ ಮಹೋತ್ಸವವನ್ನು ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಇದೇ 24ರ ಭಾನುವಾರ ನಡೆಯಲಿದೆ ಎಂದು ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್ ತಿಳಿಸಿದ್ದಾರೆ.
ಬನದ ಹುಣ್ಣಿಮೆ ಪ್ರಯುಕ್ತ ಕೆರೆ ಬಾವಿಯಿಂದ ಅಮ್ಮನವರ ಕಳಸವನ್ನು ಮಂಗಳವಾದ್ಯದೊಂದಿಗೆ ವೀರಮಕ್ಕಳ ಜೊತೆಗೂಡಿ ದೇವಾಲಯಕ್ಕೆ ಕರೆತರುವುದು ನಂತರ ಬನಶಂಕರಿ ಅಮ್ಮನವರ ರಥೋತ್ಸವ ನಡೆಯಲಿದೆ, ಮಧ್ಯಾಹ್ನ 2.30ಕ್ಕೆ ಶ್ರೀ ಬನಶಂಕರಿ ಅಮ್ಮನವರ ಉಯ್ಯಾಲೆ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಂಗ ಸಂಘದ ನಿದರ್ೇಶಕ ನಟರಾಜು ತಿಳಿಸಿದ್ದಾರೆ.

ದೇಶ ಸುತ್ತಿ ನೋಡು ಇಲ್ಲ ಕೋಶ ಓದಿ ನೋಡು : ಬಿಇಓ ಕೃಷ್ಣಮೂತರ್ಿ
ಚಿಕ್ಕನಾಯಕನಹಳ್ಳಿ,ಜ.20 : ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಓದಿನ ಜತೆಗೆ ಪ್ರವಾಸ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
  ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಿಂದ ಉತ್ತರ ಕನರ್ಾಟಕ ಪ್ರವಾಸ ಹೊರಟ ಮಕ್ಕಳ ತಂಡಕ್ಕೆ ಶುಭಕೋರಿ ಮಾತನಾಡಿ, ಪರಿಶಿಷ್ಠ ಜಾತಿ ಹಾಗೂ ಪಂಗಡದ ಪ್ರೌಢಶಾಲಾ ಮಕ್ಕಳ ಸವರ್ಾಂಗೀಣ ಅಭಿವೃದ್ಧಿಗೆ ಸಕರ್ಾರ ಹಲವಾರು ಕಾರ್ಯಕ್ರಮ ಹಾಕಿಕೊಂಡಿದೆ, ಮಕ್ಕಳು ಸವಲತ್ತುಗಳನ್ನು ಬಳಸಿಕೊಂಡು ಜವಾಬ್ಧಾರಿಯುತ ಪ್ರಜೆಗಳಾಗಿ ಬೆಳೆಯಬೇಕು ಎಂದರು.
  ತಾಲ್ಲೂಕಿನ ಸಕರ್ಾರಿ ಶಾಲೆಗಳಿಂದ ಆಯ್ಧ 98 ಪ್ರೌಢಶಾಲೆ ಮಕ್ಕಳು ಪ್ರವಾಸಕ್ಕೆ ತೆರಳಿದರು. 4 ಶಿಕ್ಷಕರು, 2 ಮಾರ್ಗದಶರ್ಿಗಳು, 2 ಸಹಾಯಕರು ತಂಡದಲ್ಲಿ ಇದ್ದರು.


 ವಿವೇಕಾನಂದರ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಿದ ಶಾಲಾ ಮಕ್ಕಳು 
ಚಿಕ್ಕನಾಯಕನಹಳ್ಳಿ,ಜ.21 : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಸಾಸಲು ಸಕರ್ಾರಿ ಪ್ರೌಢಶಾಲೆಯಲ್ಲಿ ಈಚೆಗೆ ಸಾಂಪ್ರದಾಯಿಕ ಉಡುಗೆ ಹಾಗೂ ಪೂರ್ಣಕುಂಭದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ವಿವೇಕಾನಂದರ ಭಾವಚಿತ್ರ ಹಿಡಿದು ಮೆರವಣಿಗೆ ಮಾಡುವ ಮೂಲಕ  ವಿವೇಕಾನಂದರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
 ವಿದ್ಯಾಥರ್ಿಗಳು ಸೀರೆ, ಶೆಲ್ಯ, ಪಂಚೆ ತೊಟ್ಟು ಗಮನ ಸೆಳೆದರು. ದೊಡ್ಡವರು ಹಾಗೂ ಶಿಕ್ಷಕರು ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಗ್ರಾಮಸ್ಥರು ವಿವೇಕಾನಂದರ ಭಾವಚಿತ್ರಕ್ಕೆ ಆರತಿ ಬೆಳಗಿದರು. ವಿವೇಕಾನಂದರ ಸ್ಫೂತರ್ಿ ಘೋಷಗಳನ್ನು ಕೂಗುತ್ತ ಮಕ್ಕಳು ಮೆರವಣಿಗೆಯಲ್ಲಿ ಸಾಗಿಬಂದರು.
   ನಂತರ ನಡೆದ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಜಿ.ಸಂತೋಷ್ ಮಾತನಾಡಿ, ದೀನ ದಲಿತರಲ್ಲಿ ದೇವರನ್ನು ಕಾಣು ಎಂದು ಹೇಳಿದ ವಿವೇಕಾನಂದರ ಮಾತನ್ನು ಪ್ರತಿಯೊಬ್ಬ ಬಾಲ್ಯದಲ್ಲೇ ಅರ್ಥಮಾಡಿಕೊಂಡರೆ ಸಮಾಜ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಗ್ರಾಮದ ಮುಖಂಡ ಆಡಿಟರ್ ಚಂದ್ರಣ್ಣ ಮಾತನಾಡಿ, ವಿವೇಕಾನಂದರ ವಿಚಾರಧಾರೆಯನ್ನು ಯುವಕರಿಗೆ ದಾಟಿಸುವುದು ಮುಖ್ಯ ಎಂದರು. ತಮ್ಮಡಿಹಳ್ಳಿ ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಟಿ.ಜಯಣ್ಣ ಮಾತನಾಡಿದರು. ಶಿಕ್ಷಕರಾದ ರಾಜಶೇಖರಯ್ಯ ನಿರೂಪಿಸಿ, ಲೋಕೇಶ್ ಸ್ವಾಗತಿಸಿದರು. ಕುಮಾರಸ್ವಾಮಿ ಪ್ರಗತಿ ವರದಿ ವಾಚಿಸಿದರು. ಜೆ.ಪ್ರವೀಣ್ ವಂದಿಸಿದರು.

ಹಿಂದಿ ಭಾಷೆ ನೆಪದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರ ಧಾವಿಸುತ್ತಿದ್ದರು
ಚಿಕ್ಕನಾಯಕನಹಳ್ಳಿ,ಜ.21 : ಮಹಾತ್ಮಾಗಾಂಧೀಜಿ 1914ರಿಂದಲೂ ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಮುಂದಾದವರು, ಏಕೆಂದರೆ ಭಾರತದಲ್ಲಿ ಹಿಂದಿ ಭಾಷೆ ಹೆಚ್ಚಿನ ಜನ ಮಾತನಾಡುತ್ತಿದ್ದರು, ಭಾಷೆಯ ನೆಪದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿ ಜನರನ್ನು ಕರೆತರುತ್ತಿದ್ದರು  ಎಂದು ಬಿ.ಇ.ಓ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಡಿವಿಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಹಿಂದಿ ಶಿಕ್ಷಕರಿಗೆ ಕಾಯರ್ಾಗಾರ, ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ರವರು ಬರೆದಿರುವ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಹಿಂದಿ ಭಾಷೆಯ ಸಿ.ಡಿ.ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿರುವ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಹಿಂದಿ ಶಿಕ್ಷಕರು ಕಡ್ಡಾಯವಾಗಿ ಖರೀದಿಸಿ ಪುಸ್ತಕದಲ್ಲಿರುವ ಅಂಶಗಳನ್ನು ತಿಳಿದುಕೊಂಡು ಮಕ್ಕಳಿಗೆ ಬೋಧಿಸಿ ಎಂದು ಸಲಹೆ ನೀಡಿದರು.
ಎಂ.ವಿ.ನಾಗರಾಜ್ರವರು ಹಿರಿಯರು, ಅನುಭವಸ್ಥರು ಅವರು ಬರೆದಿರುವ ಪುಸ್ತಕ ಕನ್ನಡದಲ್ಲಿ ಉತ್ತಮವಾಗಿ ಮೂಡಿ ಬಂದಿದ್ದು ಪ್ರತಿಯೊಬ್ಬರಿಗೂ ಅರ್ಥವಾಗಲಿದೆ, ಶಾಲಾ ಶಿಕ್ಷಕರು ಪುಸ್ತಕವನ್ನು ಖರೀದಿಸಿ, ಕಛೇರಿಗೆ ಅಜರ್ಿ ನೀಡಿದರೆ ಶಾಲಾ ಸಂಚಿತ ನಿಧಿಯಿಂದ ಪುಸ್ತಕ ತೆಗೆದುಕೊಳ್ಳಲು ಅನುಮತಿ ನೀಡುತ್ತೇನೆ ಎಂದ ಅವರು ತಾಲ್ಲೂಕಿನ ಹಿಂದಿ ಭಾಷಾ ಬೋಧಕರ ಸಂಘ ಕ್ರಿಯಾಶೀಲವಾಗಿದೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆಯಾಗಿ ಸಾವಿರ ಪ್ರತಿಗಳು ಖಚರ್ಾಗಿವೆ, ಈಗ ಬಿಡುಗಡೆಯಾಗುತ್ತಿರುವ ಪುಸ್ತಕ ಎರಡನೇ ಮುದ್ರಣವಾಗಿದೆ, ಪುಸ್ತಕದಲ್ಲಿರುವ ಅಂಶಗಳನ್ನು ತಿಳಿದುಕೊಂಡು ಶಿಕ್ಷಕರು ಟೀಕೆ, ಪ್ರಶಂಸೆ ಮಾಡಬಹುದಾಗಿದೆ ಎಂದರು.
ಬಿಆರ್ಸಿ ತಿಮ್ಮರಾಯಪ್ಪ ಮಾತನಾಡಿ, ಹಿಂದಿ ಭಾಷೆ ಜೋಡಣೆ ಭಾಷೆ, ಶಿಕ್ಷಕರು ಮಕ್ಕಳಿಗೆ ಮನಮುಟ್ಟುವಂತೆ ಭಾಷೆಯ ಬಗ್ಗೆ ಬೋಧನೆ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಸಿ.ಜಿ.ಸುರೇಶ್, ನೋಡಲ್ ಅಧಿಕಾರಿ ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯ ಬೋಧನೆ ಬಗ್ಗೆ ಇರುವ ಸಿ.ಡಿ.ಬಿಡುಗಡೆ ಮಾಡಲಾಯಿತು. ತಾಲ್ಲೂಕು ಪ್ರೌಡಶಾಲಾ ಹಿಂದಿ ಭಾಷಾ ಬೋಧಕರ ಸಂಘದ ವತಿಯಿಂದ ತಾಲ್ಲೂಕಿನ ಹಿಂದಿ ಶಿಕ್ಷಕರುಗಳಿಗೆ ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರೌಡಶಾಲಾ ಹಿಂದಿ ಭಾಷಾ ಬೋಧಕರ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪುಟ್ಟಣ್ಣ ಸ್ವಾಗತಿಸಿದರು. ಸೌಭಾಗ್ಯಮ್ಮ ನಿರೂಪಿಸಿದರು, ಗಂಗಾಧರ್ ವಂದಿಸಿದರು. ಶಿಕ್ಷಕರಾದ ಅರುಣ್, ಗುರುಸ್ವಾಮಿನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ವಿದ್ಯುತ್ ಉಳಿಸಿ ತರಬೇತಿ ಕಾಯರ್ಾಗಾರ



ಚಿಕ್ಕನಾಯಕನಹಳ್ಳಿ,ಜ.21 : ಜನಸಂಖ್ಯೆ ಹೆಚ್ಚಳ, ಕೈಗಾರಿಕೀಕರಣ ಹಾಗೂ ಯಾಂತ್ರಿಕ ಬಳಕೆಯಿಂದ ದಿನದಿಂದ ದಿನಕ್ಕೆ ವಿದ್ಯುತ್ ಉತ್ಪಾದನೆಗಿಂತ ಬಳಕೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಅವಶ್ಯಕತೆ ಹಾಗೂ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಕೆ ಮಾಡುವುದನ್ನು ಕಲಿತು ವಿದ್ಯುತ್ ಉಳಿತಾಯ ಮಾಡಬೇಕಿದೆ ಎಂದು ಸಂಪನ್ಮೂಲ ವ್ಯಕ್ತಿ ಈರಣ್ಣ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆಸ್ಕಾಂ ಮತ್ತು ಮಹಾತ್ಮಗಾಂಧಿ ರೂರಲ್ ಡೆವಲಪ್ಮೆಂಟ್ ಅಂಡ್ ಯೂತ್ ವೆಲ್ಫೇರ್ ಸೆಂಟರ್ ವತಿಯಿಂದ ವಿದ್ಯುತ್ ಸುರಕ್ಷತೆ ಹಾಗೂ ಉಳಿತಾಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಮನುಷ್ಯನಿಗೆ ಆಹಾರ, ನೀರು, ಗಾಳಿ ಬೆಳಕು ಹೇಗೆ ಮೂಲಭೂತ ಅವಶ್ಯಕತೆಗಳಾಗಿದೆ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಇಲ್ಲದೇ ಸಾರ್ವಜನಿಕರು ಬದುಕುವುದು ಕಷ್ಟವಾಗಿದೆ, ಆಧುನಿಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ಮನುಷ್ಯನ ದಿನನಿತ್ಯದ ಪ್ರತಿಯೊಂದು ಚಟುವಟಿಕೆಗೂ ವಿದ್ಯುತ್ ಅಗತ್ಯವಾಗಿದೆ, ಗೃಹಬಳಕೆಗೆ, ಕೃಷಿ ವಲಯಕ್ಕೆ, ಸಾರ್ವಜನಿಕ ಉಪಯೋಗಕ್ಕೆ, ರಕ್ಷಣಾ ವಲಯಕ್ಕೆ, ಕೈಗಾರಿಕೆಗೆ, ಶೈಕ್ಷಣಿಕ ವಲಯಕ್ಕೆ, ವಾಣಿಜ್ಯೋದ್ಯಮಕ್ಕೆ ಹೀಗೆ ಪ್ರತಿಯೊಂದಕ್ಕೂ ವಿದ್ಯುತ್ ಅವಲಂಬಿತರಾಗಿದ್ದೇವೆ ಆದ್ದರಿಂದ ವಿದ್ಯುತ್ ಉಳಿತಾಯ ಮಾಡುವುದು ಅಗತ್ಯವಾಗಿದೆ ಎಂದರು.
ಉಪನ್ಯಾಸಕ ಶೈಲೇಂದ್ರಕುಮಾರ್ ಮಾತನಾಡಿ, ವಿದ್ಯುತ್ ಮಿತವಾಗಿ ಬಳಕೆ ಮಾಡುವುದರ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭವಾನಿ ಸ್ತ್ರೀಶಕ್ತಿ ಸಂಘದ ಶುಭಾ, ವಿದ್ಯಾಥರ್ಿನಿ ಜ್ಯೋತಿ, ಗ್ರಾ.ಪಂ.ನೌಕರ ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ನಟೇಶ್ಬಾಬು, ರವೀಂದ್ರಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.





Tuesday, January 19, 2016


ವಿವೇಕಾನಂದರು ಭಾರತದ ಪರಂಪರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ಚೇತನ  ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ
 ಚಿಕ್ಕನಾಯಕನಹಳ್ಳಿ,: ಭಾರತದ ಪರಂಪರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು, ನಮ್ಮ ಸಂಸ್ಕೃತಿ, ಗುರುಹಿರಿಯರು ಹಾಗೂ ಪೂರ್ವಜರನ್ನು ಮರೆತಾಗ ಭಾರತ ನಾಶವಾದಂತೆ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಅಭಾವಿಪಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 154ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ಯುವ ಘರ್ಜನೆಯ ಸಮಾವೇಶದಲ್ಲಿ ಮಾತನಾಡಿ, ವಿದ್ಯಾಥರ್ಿಗಳು ತಮ್ಮಲ್ಲಿರುವ ಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೇ ದೇಶಕ್ಕಾಗಿ ಉಪಯೋಗಿಸಿ, ದೇಶ ನಮಗೆ ಏನು ಮಾಡಿದೆ ಎಂಬುವುದಕ್ಕಿಂತ ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಮೂಡಿಬರಬೇಕಾಗಿದೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುಲು ಶ್ರಮಿಸಿದವರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು ಎಂದರು. ವಿಶ್ವದಾದ್ಯಂತ ತಮ್ಮ ಅಪಾರ ಪಾಂಡಿತ್ಯದ ಮೂಲಕ ಜ್ಞಾನವನ್ನು ವಿಶ್ವಕ್ಕೆ ಹರಡಿ ಮಾದರಿಯಾದವರು ಸ್ವಾಮಿವಿವೇಕಾನಂದರು
ಅಂಕಣಕಾರ ಗಿರೀಶ್ಭಾರಧ್ವಾಜ್ ಮಾತನಾಡಿ, ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಚಂದ್ರಶೇಖರ್ ಆಜಾದ್, ಮದನ್ಲಾಲ್ದಿಂಗ್ರ, ದಿ.ರಾಷ್ಟ್ರಪತಿ ಅಬ್ದುಲ್ಕಲಾಂ, ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೂ ಸ್ವಾಮಿ ವಿವೇಕಾನಂದರು ಆದರ್ಶವಾಗಿದ್ದಾರೆ, ಸ್ವಾಮಿ ವಿವೇಕಾನಂದರು ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ, ಸ್ವಾಮಿ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚರಿಸಿ ಇಲ್ಲಿನ ಬಡತನವನ್ನು ನೆನೆದು ಕಣ್ಣೀರಿಟ್ಟು ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಪ್ರಪಂಚದಾದ್ಯಂತ ಸಂಚರಿಸಿ ಭಾರತದ ಸಂಸ್ಕೃತಿಯನ್ನು ಬೆಳೆಸಿದರು, ಭಾರತ ಇಂಗ್ಲೀಷರ ಮೆಕಾಲೆ ಶಿಕ್ಷಣ ಪದ್ದತಿ ಜಾರಿಗೆ ಇದೆ ಇದನ್ನು ತೊಡೆದು ಹಾಕಿ ಸ್ವಾಮಿವಿವೇಕಾನಂದರ ಶಿಕ್ಷಣ ಪದ್ದತಿಯನ್ನು ತಂದಾಗ ಮಾತ್ರ ಭಾರತ ಪುನಹ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ಎಬಿವಿಪಿ ಸಂಘಟನಾ ಕಾರ್ಯದಶರ್ಿ ಸಿದ್ದುಮದನಕಂಡಿ ಮಾತನಾಡಿ, ಯುವಕರು ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಚಿಂತಿಸಬೇಕಾಗಿದೆ, ಮಹಿಳೆಯರನ್ನು ಗೌರವಿಸಬೇಕು, ಮಹಿಳೆಯರು ವಿಶ್ವಸುಂದರಿಯಾಗುವ ಬದಲು ವಿಶ್ವಕ್ಕೆ ಮಾದರಿಯಾಗಬೇಕು, ಯುವಕರು ಸಿನಿಮಾದಲ್ಲಿ ನಾಯಕರಾಗುವ ಬದಲು ದೇಶ ಕಟ್ಟುವ ನಾಯಕರಾಗಬೇಕು ಎಂದರು.
ಉಪನ್ಯಾಸಕ ಧನಂಜಯ್ ಮಾತನಾಡಿ, ಇನ್ನೂರು ವರ್ಷಗಳು ನಾವು ಪರಕೀಯರ ಅಡಿಯಾಳಾಗಿ ಬದುಕಿರುವುದರಿಂದ ಇನ್ನೂ ನಾವು ವಿದೇಶಿ ಸಂಸ್ಕೃತಿಯಿಂದ ಹೊರಬಂದಿಲ್ಲ, ಪ್ರಪಂಚದ ಹಲವಾರು ನಾಗರೀಕತೆಗಳು ನಶಿಸಿಹೋಗಿದ್ದರೂ,  ಭಾರತ ಮಾತ್ರ ಹಿಂದೂ ನಾಗರೀಕತೆಯನ್ನು ಉಳಿಸಿಕೊಂಡು ಬಂದಿದ್ದೇವೆ, ದೇಶದಲ್ಲಿ ಸಂತರು, ಋಷಿ ಮುನಿಗಳು ಮಹನೀಯರು ನಮ್ಮ ಸ್ವತಂತ್ರಕ್ಕಾಗಿ ಹೋರಾಟ ಮಾಡಿ ಸ್ವತಂತ್ರ್ಯ ತಂದುಕೊಟ್ಟಿದ್ದಾರೆ, ಹಿಂದು ದೇಶ ಕಟ್ಟವು ಜವಬ್ದಾರಿ ಯುವಕರ ಮೇಲಿದೆ ಎಂದರು.
ಸಬ್ಇನ್ಸ್ಪೆಕ್ಟರ್ ವಿಜಯಕುಮಾರ್,  ಕಾಶಿಪ್ರಜ್ವಲ್, ದರ್ಶನ್, ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಜಾಗತೀಕರಣದ ಬದುಕಿನಲ್ಲಿ ಕೃಷಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ
ಚಿಕ್ಕನಾಯಕನಹಳ್ಳಿ,ಜ.19:   ಮಿತಿಮೀರಿ ಬೆಳೆಯುತ್ತಿರುವ ಜಾಗತೀಕರಣದ ಬದುಕು ಹಾಗೂ ಮನುಷ್ಯನ ವೇಗದ ಬದುಕಿನ ನಡುವೆ ಸುಸ್ಥಿರ ಕೃಷಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಹುಳಿಯಾರು ಬಿ.ಎಂ.ಎಸ್. ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂತರ್ಿ ಬಿಳಿಗೆರೆ ಹೇಳಿದರು.
       ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ಯುವಸಪ್ತಾಹ ದಿನದ ಸಮಾರೋಪ ಸಮಾರಂಭದಲ್ಲಿ ಸುಸ್ಥಿರ ಕೃಷಿ-ಸುಸ್ಥಿರ ಜೀವನ ವಿಷಯವನ್ನು ಕುರಿತು ಮಾತನಾಡಿದರು.  ವಿದ್ಯಾಥರ್ಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಬದಲಾಗಲು ಸಾಧ್ಯ.  ನಮ್ಮಲ್ಲಿನ ಆಲೋಚನಾ ಕ್ರಮಗಳು ಬದಲಾಗಿ ನಾವು ಸಾಗುತ್ತಿರುವ ದಾರಿ ಮುಖ್ಯವಾಗುವ ಜೊತೆ ಗುರಿಯೂ ಬಹಳ ಮುಖ್ಯ ಎಂದು ತಿಳಿಸಿದರು.  ಎಲ್ಲರನ್ನು ಬದುಕಲು ಬಿಡುವುದೇ ಸುಸ್ಥಿರ ಜೀವನದ ಉದ್ದೇಶವಾಗಿದ್ದು, ಇಂದು ನೀರಾವರಿ ಭೂಮಿ ಕಣ್ಮರೆಯಾಗುತ್ತಿದ್ದು, ನಾವು ಸೇವಿಸುವ ಗಾಳಿ, ನೀರು ಮಲೀನಗೊಳ್ಳುತ್ತಿದ್ದು ಅನ್ನದ ಗುಣ ಸರ್ವನಾಶವಾಗಿದೆ ಎಂದು ಹೇಳುತ್ತಾ, ಮುಂದಿನ ಯುವ ಸಮುದಾಯ ಕೃಷಿಯುತ್ತ ತಮ್ಮ ಗಮನವನ್ನು ಹರಿಸಿದ್ದಲ್ಲಿ ಮುಂದಿನ ದಿನದಲ್ಲಿ ಆಶಾದಾಯಕ ಬೆಳವಣಿಗೆಯಾಗುತ್ತದೆ.  ಇಂತಹ ಆಲೋಚನೆಯನ್ನು ಇವತ್ತಿನ ಯುವಕರು ಮಾಡಬೇಕು ಎಂದು ತಿಳಿಸಿದರು.
       ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ಎಸ್. ಶಿವಕುಮಾರಸ್ವಾಮಿ ಮಾತನಾಡಿ ವಿದ್ಯಾಥರ್ಿಗಳಿಗೆ ಬದುಕಿನ ಪಾಠ ಅತ್ಯಗತ್ಯ.  ಅವರು ತಮ್ಮ ನೈತಿಕವಾದ ಹಕ್ಕುಗಳನ್ನು ತಿಳಿದುಕೊಂಡು ಮನುಷ್ಯತ್ವದ ಗುಣ ಬೆಳೆಸಿಕೊಂಡು ವಿವೇಕ ಕುರಿತು ಬದುಕಿನಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ನುಡಿದರು.
       ಸಮಾರಂಭದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಹೆಚ್.ಎಸ್. ಶಿವಯೋಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ರವಿಕುಮಾರ್. ಸಿ ಮತ್ತು ಡಾ. ಸಿ.ಕೆ. ಶೇಖರ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದು, ಕು. ರೋಜಾ ನಿರೂಪಿಸಿ, ಕು. ಜಯಲಕ್ಷ್ಮಿ ಸ್ವಾಗತಿಸಿ, ಶ್ರೀನಿವಾಸ. ಎ.ಎನ್ ವಂದಿಸಿದರು.


Saturday, January 16, 2016

ಪುರಸಭೆ ಸಭೆಯಲ್ಲಿ ಅಭಿವೃದ್ದಿ ಮಾತು ಶೂನ್ಯ, ಕಿತ್ತಾಟದ್ದೇ ಮೇಲಾಟ




  • 11 ಗಂಟೆಗೆ ಆರಂಭವಾದ ಸಭೆ ಮಧ್ಯದಲ್ಲಿ ಮೊಟಕುಗೊಂಡು 1ಗಂಟೆಗೆ ಪುನರಾರಂಭ.
  • ಏಕವಚನದಲ್ಲಿ ಸದಸ್ಯರ ಚೀರಾಟ, ಕೂಗಾಟ
  • ಮುಖ್ಯಾಧಿಕಾರಿ ಹಜಾಮ ಪದಬಳಕೆ, ಸದಸ್ಯರ ಆಕ್ರೋಶ. ಕ್ಷಮೆಯಾಚಿಸಿದ ಮುಖ್ಯಾಧಿಕಾರಿ.
  • ಕೆಲವಿಷಯಗಳ ಬಗ್ಗೆ ಮಾತ್ರ ಚಚರ್ೆ, ಉಳಿದ ವಿಷಯ ಮುಂದೂಡಿಕೆ.

ಚಿಕ್ಕನಾಯಕನಹಳ್ಳಿ,ಜ.16 : ಸದಸ್ಯರುಗಳೇ ಒಂದು ತಿಳಿದುಕೊಳ್ಳಿರಿ ಕಾನೂನು ಇಲ್ಲಿ ಹೇಗೆ ಹೇಳುತ್ತೀರೋ ಕಛೇರಿಯಲ್ಲಿಯೂ ಅದೇ ರೀತಿ ಇರಬೇಕು, ಸಭೆಯಲ್ಲಿ ಒಂದು ರೀತಿ ಮಾತನಾಡುತ್ತೀರಿ ಛೇಂಬರ್ನಲ್ಲಿ ಇನ್ನೊಂದು ರೀತಿ ಮಾತನಾಡುತ್ತೀರಿ ಎಂದು ಮುಖ್ಯಾಧಿಕಾರ ಪಿ.ಶಿವಪ್ರಸಾದ್ ನೇರವಾಗಿ ಆರೋಪಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಪ್ರೇಮದೇವರಾಜುರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಟ್ಟಡ ಪರವಾನಿಗೆ ವಿಚಾರ ಬಂದಾಗ, ಸದಸ್ಯರು ಪರವಾನಿಗೆ ನೀಡದೆ ಮುಖ್ಯಾಧಿಕಾರಿ ಸತಾಯಿಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದಾಗ ಮೇಲಿನಂತೆ ಮುಖ್ಯಾಧಿಕಾರಿ ಖಾರವಾಗಿ ಹೇಳಿದರು.
ಸದಸ್ಯ ರಾಜಶೇಖರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ, ಪಿಡಬ್ಲ್ಯೂಡಿ ಕಛೇರಿ ಮುಂಭಾಗದಲ್ಲಿ ಗ್ಯಾರೇಜ್ಗೆ ಹಣ ಪಡೆದು ಶಾಶ್ವತ ಪರವಾನಿಗೆ ನೀಡಿದ್ದೀರಿ ಆದರೆ ಜನಸಂದಣಿಯೇ ಇಲ್ಲದ ಹಾಗಲವಾಡಿ ಗೇಟ್ ಬಳಿ ಇರುವ ಕ್ಷೌರಿಕ ಅಂಗಡಿಗೆ ತಾತ್ಕಾಲಿಕವಾಗಿ ಪರವಾನಿಗೆ ನೀಡಿದ್ದೀರಿ ಏಕೆ ಎಂದು ಪ್ರಶ್ನಿಸಿದರು ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಅವರು ಮಾತಿನ ಭರಾಟೆಯಲ್ಲಿ ಮಾನವೀಯತೆ ದೃಷ್ಠಿಯಿಂದ ಅಜಾಮರಿಗೆ ತೊಂದರೆ ಕೊಡಬಾರದು ಎಂದು ತಾತ್ಕಾಲಿಕ ಪರವಾನಿಗೆ ನೀಡಿದ್ದೇನೆ ಎಂದರು.
ಮುಖ್ಯಾಧಿಕಾರಿಯ ಅಜಾಮ ಎಂಬ ಪದದ ಬಳಕೆಗೆ ಸದಸ್ಯರೆಲ್ಲರೂ ಆಕ್ರೋಶ ವ್ಯಕ್ತಪಡಿಸಿದರು, ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸುಶಿಕ್ಷಿತ ಅಧಿಕಾರಿ ಬಾಯಲ್ಲಿ ಈ ರೀತಿಯ ಜಾತಿ ನಿಂದನೆಯ ಮಾತು ಬಂದಿರುವುದು ಅಕ್ಷಮ್ಯ ಕೂಡಲೇ ಅಧಿಕಾರಿ ಸಭೆಯಿಂದ ಹೊರನಡೆಯಬೇಕು ಹಾಗೂ ಈ ಹೇಳಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ಈ ಎಲ್ಲಾ ಘಟನೆ ನಂತರ ಮುಖ್ಯಾಧಿಕಾರಿ ಮಾತನಾಡಿ, ಬಾಯ್ತಪ್ಪಿನಿಂದಾಗಿ ಇಂತಹ ಮಾತು ಹೊರಬಂದಿದ್ದು ಎಲ್ಲರಲ್ಲೂ ಪದದ ಬಳಕೆಯ ಬಗ್ಗೆ ಕ್ಷಮೆ ಕೋರುತ್ತಿದ್ದೇನೆ ಎಂದರು.
ಸದಸ್ಯ ಮಹಮದ್ಖಲಂದರ್ ಮಾತನಾಡಿ, ಜೋಗಿಹಳ್ಳಿಯ ರವಿ ಎಂಬುವವರಿಗೆ ಮನೆ ಕಟ್ಟುವ ಪರವಾನಿಗೆ ನೀಡಲು ಮೊದಲು ತಿರಸ್ಕರಿಸಿದ್ದ ಮುಖ್ಯಾಧಿಕಾರಿ ನಂತರ ಹಣ ಪಡೆದು ಪರವಾನಿಗೆ ನೀಡಿದ್ದಾರೆ, ದುಡ್ಡು ಕೊಟ್ಟಾಗ ಕಾನೂನು ಬದಲಾಗುತ್ತದೆಯೇ ಎಂದು ಆರೋಪಿಸಿದರು.
ಪುರಸಭೆ ಕಾಮಗಾರಿ ಹಾಗೂ ಆದಾಯದ ಖಚರ್ು ವೆಚ್ಚವನ್ನು ಸಭೆಗೆ ನೀಡುತ್ತಿಲ್ಲ, ಸದಸ್ಯರಿಗೆ ನೀಡುವ ಮಾಹಿತಿಯಲ್ಲಿ ಕಾಮಗಾರಿಯ ಹೆಸರು ಇರುತ್ತದೆಯೇ ಹೊರತು ನಿಗದಿತ ಹಣ ನಮೂದಾಗಿರುವುದಿಲ್ಲ ಇದು ಸದಸ್ಯರನ್ನೇ ಮರಳು ಮಾಡುವ ಅಧಿಕಾರಿಗಳ ತಂತ್ರ ಎಂದು ಸದಸ್ಯರುಗಾಳದ ರೇಣುಕಾಗುರುಮೂತರ್ಿ, ಸಿ.ಡಿ.ಚಂದ್ರಶೇಖರ್, ಸಿ.ಟಿ.ದಯಾನಂದ್, ಎಂ.ಕೆ.ರವಿಚಂದ್ರ ಆರೋಪಿಸಿದರು.
ಪೌರಕಾಮರ್ಿಕರಿಗೆ ನೀಡುತ್ತಿರುವ ಬೆಳಗಿನ ಉಪಹಾರ ಸಮರ್ಪಕವಾಗಿಲ್ಲ, ನಿಯಮದಂತೆ ಒಬ್ಬ ಕಾಮರ್ಿಕನಿಗೆ 450ಗ್ರಾಂ ಆಹಾರ ನೀಡಬೇಕು ಆದರೆ ಎರಡು ಗುಂಡು ಇಡ್ಲಿ, ಒಂದು ವಡೆ ನೀಡಲಾಗುತ್ತಿದೆ ಇದನ್ನು ಆರೋಗ್ಯ ನಿರೀಕ್ಷಕರು ತಪಾಸಣೆಗೆ ಒಳಪಡುಸುತ್ತಿಲ್ಲ ಎಂದು ಸದಸ್ಯ ಸಿ.ಡಿ.ಚಂದ್ರಶೇಖರ್ ಆರೋಪಿಸಿದರು.
ಪುರಸಭೆಗೆ ಸಕರ್ಾರ ನೀಡುವ ಎಸ್.ಏಪ್.ಸಿ, ಐಡಿಎಸ್ಎಮ್ಟಿ ಶೇ.24% ಹಾಗೂ 14% ರಲ್ಲಿ ಪುರಸಭೆಗೆ ಎಷ್ಟು ಹಣ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡುವಂತೆ ಸದಸ್ಯ ಎಂ.ಕೆ.ರವಿಚಂದ್ರ ಹಾಗೂ ಸಿ.ಟಿ.ದಯಾನಂದ್ ಆಗ್ರಹಿಸಿದರು.
ಪಟ್ಟಣದಲ್ಲಿ ಪುರಸಭೆ ವತಿಯಿಂದ ವಿವಿಧ ಯೋಜನಗಳಿಗೆ ರಸ್ತೆ, ಅಭಿವೃದ್ದಿ ಕಾಮಗಾರಿ ನಡೆದಿದೆ, ಸಿ.ಸಿ.ರಸ್ತೆ ಕಳಪೆ ಕಾಮಗಾರಿಯಿಂದ ಜಲ್ಲಿಕಲ್ಲುಗಳು ಎದ್ದು ಹೋಗಿವೆ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯ ಸಿ.ಡಿ.ಚಂದ್ರಶೇಖರ್ ಪುರಸಭಾ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಕಾಮಗಾರಿ ವೀಕ್ಷಣೆಗೆ ಪ್ರತ್ಯೇಕ ವಿಭಾಗವಿದೆ ಈ ಬಗ್ಗೆ ತಪಾಸಣೆಗೆ ಜಿಲ್ಲಾಧಿಕಾರಿಗೆ ವರದಿ ಕಳುಹಿಸುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಎಲ್ಲಾ ವಾಡರ್್ಗಳಲ್ಲಿ ಕಸದ ರಾಶಿ ಬಿದ್ದಿದೆ ಕೂಡಲೇ ತೆರವುಗೊಳಿಸುವಂತೆ ಸದಸ್ಯ ಎಂ.ಕೆ.ರವಿಚಂದ್ರ ಆಗ್ರಹಿಸಿದರು. ಪುರಸಭೆಯ ಟ್ರಾಕ್ಟರ್ಗಳು ಕೆಟ್ಟುಹೋಗಿದ್ದು ರಿಪೇರಿಯಾದ ನಂತರ ಕಸವಿಲೇವಾರಿ ಮಾಡಲಾಗುವುದು ಎಂದಾಗ ಕಸವಿಲೇವಾರಿಗೆ ಬಾಡಿಗೆ ಟ್ರಾಕ್ಟರ್ ತೆಗೆದು ಕೊಂಡು ವಿಲವೇರಿ ಮಾಡುವಂತೆ ಸಲಹೆ ನೀಡಿದರು.
ಪುರಸಭೆ ವತಿಯಿಂದ ನೂತನವಾದ ಟ್ರಾಕ್ಟರ್ ಖರೀದಿಗೆ ಸಂಬಂಧಿಸಿದಂತೆ ಸ್ವರಾಜಮಜ್ಡ್ ಟ್ರಾಕ್ಟರ್ ಖರೀದಿಸಿ ಉತ್ತಮ ಕ್ಷಮತೆಯ ಟ್ರಾಕ್ಟರ್ ಆಗಿದೆ ಇದನ್ನೇ ಖರೀದಿಸುವಂತೆ ಸದಸ್ಯರು ಹೇಳಿದರು. 

ಮಧ್ಯದಲ್ಲೇ ಎದ್ದು ಹೋದ ಸದಸ್ಯರು.
ವಿರೋಧ ಪಕ್ಷದ ಸದಸ್ಯ ಸಿ.ಪಿ.ಮಹೇಶ್ ಜಗಜೀವನರಾಂ ನಗರದ ಕೆಲವರ ನಿವೇಶನದಲ್ಲಿ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೆ ಎಂದು ಸಭೆಯ ಮಧ್ಯದಲ್ಲಿ ಕೆಲವರನ್ನು ಅನುಮತಿ ಪಡೆಯದೇ ಕರೆದುಕೊಂಡು ಬಂದಿದ್ದಾರೆ ಎಂದು ಅಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಮಾತಿನ ಚಕಮಕಿ ನಡೆಸಿ, ಸಭೆಯಿಂದ ಹೊರನಡೆದ ಪ್ರಸಂಗ ನಡೆಯಿತು, ಇದರಿಂದ ಪುರಸಭಾ ಅಧ್ಯಕ್ಷೆ ಪ್ರೇಮದೇವರಾಜ್ ಸಹ ಸಭೆಯಿಂಧ ಹೊರ ನಡೆದರು ನಂತರ ಪುರಸಭಾಧ್ಯಕ್ಷೆ ಪ್ರೇಮಾದೇವರಾಜ್ ಕಛೇರಿಯಲ್ಲಿ ಸದಸ್ಯರು, ಹಾಗೂ ವಿರೋಧ ಪಕ್ಷದ ಸದಸ್ಯ ಸಿ.ಪಿ.ಮಹೇಶ್ ಹಿಂದಿನ ಸಭೆಗಳ ಸಮಯದಲ್ಲಿ ಇದೇ ರೀತಿ ಸಭೆ ನಡೆಯುವಾಗ ಸಾರ್ವಜನಿಕ ಸಮಸ್ಯೆಗೆ ಸದಸ್ಯರು ಸಭೆಗೆ ಕರೆದುಕೊಂಡು ಬಂದು ಸಮಸ್ಯೆ ಬಗೆಹರಿಸಿದ್ದರು ಎಂಬ ವಾದ ಆಡಳಿತ ಪಕ್ಷದ ಸದಸ್ಯರು ಸಭೆ ನಡೆಯುವಾಗ ಸಾರ್ವಜನಿಕರು ಸಭೆ ನಡೆಯುವಾಗ ಪ್ರವೇಶವಿಲ್ಲ ಎಂಬ ವಾದವಿವಾದ ನಡೆಸಿ ಸುಮಾರು ಒಂದುವರೆ ಗಂಟೆಗಳ ಕಾಲ ಸಮಯ ಕಾಲಹರಣವಾಯಿತು, ಈ ವಾದವಿವಾದದ ಸಮಯದಲ್ಲಿ ಪುರಸಭಾ ಸದಸ್ಯೆ ಜೆ.ಡಿ.ಎಸ್.ನ ರೇಣುಕಮ್ಮ ಹಾಗೂ ಕಾಂಗ್ರೆಸ್ ಸಿ.ಪಿ.ಮಹೇಶ್ ಏಕವಚನದಲ್ಲಿ ಬೈದಾಡಿದರು. ಸದಸ್ಯರ ಒಪ್ಪಿಗೆ ನಂತರ ಪುನಃ 1 ಗಂಟೆಗೆ ಸಭೆ ಆರಂಭವಾಯಿತು.
ಹೇಮಾವತಿ ನಾಲೆಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಕುಂದರನಹಳ್ಳಿ ಬಳಿಯ ಪಂಪ್ ಹೌಸ್ ಮೋಟಾರು ಕೆಟ್ಟು ಹೋಗಿದ್ದು ಇದನ್ನೇ ರೀಪೇರಿ ಮಾಡಿಸುವಂತೆ ಸದಸ್ಯರು ಹೇಳಿದ್ದರೂ 250 ಹೆಚ್.ಪಿ. ಮೋಟಾರು ಅಳವಡಿಸುವಂತೆ ರೇಕಾಡರ್್ ಮಾಡಿದ್ದೀರಿ ಎಂದು ಸದಸ್ಯರು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿನ ಸಭೆ ನಡುವಳಿಯಲ್ಲಿ ಹೊಸತು ಖರೀದಿ ಮಾಡುವಂತೆ ಸದಸ್ಯರು ಹೇಳಿಲ್ಲ ಈಗಿರುವ ಪೈಪ್ ಲೈನ್ 250  ಹೆಚ್.ಪಿ ಮೋಟಾರು ಅಳವಡಿಸಿದರೆ ಹೆಚ್ಚು ಪ್ರಸರ್ ನೀರು ಬರುವುದರಿಂದ ಪೈಪ್ಲೈನ್ ತಡೆಯುವುದಿಲ್ಲ ಎಂಬ ಕಾರಣದಿಂದ 175ಹೆಚ್.ಪಿ. ಮೋಟಾರು ರೀಪೇರಿ ಮಾಡಿಸಿ ಎಂದು ಹೇಳಿದ್ದೇವೆ ಎಂದರು.
ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ ಅಧಿಕಾರಿಗಳು ಸದಸ್ಯರು ಹೇಳಿದಂತೆ ರೇಕಾಡರ್್ ಮಾಡದೇ ತಮಗೆ ಇಷ್ಟ ಬಂದಂತೆ ಬರೆದುಕೊಂಡರೇ ಹೇಗೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ಮಹಮದ್ಖಲಂದರ್, ರಾಜಶೇಖರ್, ಸಿ.ಡಿ.ಚಂದ್ರಶೇಖರ್, ಸಿ.ಪಿ.ಮಹೇಶ್, ಸಿ.ಟಿ.ದಯಾನಂದ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಅಶೋಕ್, ಹೆಚ್.ಬಿ.ಪ್ರಕಾಶ್, ಇಂದಿರಾಪ್ರಕಾಶ್, ಪುಷ್ಪ.ಟಿ.ರಾಮಯ್ಯ, ಧರಣಿ.ಬಿ.ಲಕ್ಕಪ್ಪ, ರೇಣುಕಾಗುರುಮೂತರ್ಿ, ರೇಣುಕಮ್ಮಸಣ್ಣಮುದ್ದಯ್ಯ, ರೂಪಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 
ತಾಲ್ಲೂಕು ಸವಿತಾ ಸಮಾಜದಿಂದ ಖಂಡನೆ: ಪುರಸಭೆ ಸಾಮಾನ್ಯ ಸಭೆ ನಡೆಯುತ್ತಿದ್ದಾಗ ಮುಖ್ಯಾಧಿಕಾರಿ ಪಿ.ಶಿವಪ್ರಕಾಶ್, ಹಜಾಮ ಎಂಬ ಪದ ಬಳಸಿ ಜನಾಂಗಕ್ಕೆ ಅವಹೇಳನ ಮಾಡಿದ್ದಾರೆ,  ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಿರುವ ಅಧಿಕಾರಿಯೇ ಅಮಾನವೀಯವಾಗಿ ಮಾತನಾಡಿರುವುದು ಖಂಡನೀಯ. ಈ ಘಟನೆಯನ್ನು ಖಂಡಿಸಿ ಸಮಾಜದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಪ್ರೀಂ ಸುಬ್ರಮಣ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Tuesday, January 12, 2016

ಸಾಹಿತ್ಯ ಪರಿಷತ್ ಕೆಲಸ ಮಾಡಲು ಪೂಣರ್ಾವಧಿ ಕಾರ್ಯಕರ್ತರಾಗಿರಬೇಕು

ಚಿಕ್ಕನಾಯಕನಹಳ್ಳಿ,ಜ.11 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಮಾಡಲು ಪೂರ್ಣವಧಿ ಕಾರ್ಯಕರ್ತರಾಗಿದ್ದರೆ ಮಾತ್ರ ಸಾಧ್ಯ ಎಂದು ಜಿಲ್ಲಾ ಕಸಾಪ ಆಕಾಂಕ್ಷಿ ಅಭ್ಯಥರ್ಿ ಮೇಜರ್ ಡಿ.ಚಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಗಳಿದ್ದು ಉಳಿದ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಪಾವಗಡ, ಗುಬ್ಬಿ, ಕೊರಟಗೆರೆಯಲ್ಲಿ  ಕನ್ನಡ ಸಾಹಿತ್ಯ ಭವನಗಳಾಗಬೇಕಾಗಿದೆ ಈ ಬಗ್ಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕಟ್ಟಡ ನಿಮರ್ಿಸಲು ಶ್ರಮಿಸುವುದಾಗಿ ತಿಳಿಸಿದರು.
 ವರ್ಷಕ್ಕೊಮ್ಮೆ ಜಿಲ್ಲಾ ಕೇಂದ್ರದಲ್ಲಿ ಪುಸ್ತಕ ಮೇಳ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಿರಿಯ ಸಾಹಿತಿಗಳ, ಕಲಾವಿದರ, ಸಮಾಜ ಸುಧಾರಕರ, ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಮುಖಿ ಮುಖ್ಯ ಚಿಂತಕರ, ಕಲೆ, ಕ್ರೀಡೆ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾಧನೆ ಮಾಡಿರುವವರ ಕಿರು ಹೊತ್ತಿಗೆಯನ್ನು ಹೊರತರಲಾಗುವು ಎಂದರು.
 ಜಿಲ್ಲಾ ಕ.ಸ.ಪ ಚಟುವಟಿಕೆಗಳನ್ನು ಅಜೀವ ಸದಸ್ಯರಿಗೆ ತಲುಪಿಸಲು ಕಲ್ಪತರು ಕನ್ನಡ ನುಡಿ ತ್ರೈಮಾಸಿಕ ಪತ್ರಿಕೆಯನ್ನು ಹೊರತರುವ ಪ್ರಯತ್ನ ಕಸಾಪ ಚುನಾವಣೆಯ ನಂತರ ಮಾಡಲಿದ್ದೇವೆ,  1970ರಿಂದಲೂ ಅಧ್ಯಕ್ಷರ ಮನೆಗಳೇ ಸಾಹಿತ್ಯ ಪರಿಷತ್ತಿನ ಕಛೇರಿಗಳಾಗಿದ್ದವು, ನಮ್ಮ ಅವಧಿಯಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಡಾ|| ಸಿ. ಸೋಮಶೇಖರ್ರವರ ಹೃದಯಸ್ಪಶರ್ಿ ಸಾಹಿತ್ಯಾಭೀಮಾನದಿಂದ ಜಿಲ್ಲಾಡಳಿತದ ಮಿನಿ ವಿಧಾನಸೌಧದ 2ನೇ ಮಹಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ತಿನ ಕಛೇರಿಗೆ ಕೊಠಡಿ ನೀಡಿದ್ದು ಒಂದು ಐತಿಹಾಸಿಕ ಸಂಗತಿಯಾಗಿದೆ ಎಂದರು.
ಗುಬ್ಬಿ ಮಾಜಿ ಕಸಾಪ ಅಧ್ಯಕ್ಷ ಸಿ.ಚಂದ್ರಯ್ಯ ಮಾತನಾಡಿ, ಕನ್ನಡಕ್ಕೆ ಸಕರ್ಾರದಿಂದ ಹೆಚ್ಚು ಪ್ರೋತ್ಸಾಹ ಸಿಗುತ್ತಿಲ್ಲ ಆದ್ದರಿಂದ ಕನ್ನಡ ಸಂಘಗಳು ಹಾಗೂ ಕಸಾಪ ಕನ್ನಡ ಉಳಿವಿಗಾಗಿ ಹೋರಾಡಲಿದೆ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಪದಾಧಿಕಾರಿಗಳು ಹಾರತುರಾಯಿಗಳಿಗೆ ಸೀಮಿತವಾಗಿರುವುದು ವಿಷಾಧದ ಸಂಗತಿ ಎಂದರು.
ನಿವೃತ್ತ ಪ್ರಾಧ್ಯಪಕ ಸಿದ್ದಲಿಂಗಪ್ಪ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಹಣದ ಪ್ರಭಾವ ಇರಬಾರದು, 2ಸಾವಿರದಷ್ಟು ಇತಿಹಾಸವಿರುವ ಕನ್ನಡ ಭಾಷೆ ಅಳಿವಿನ ಅಂಚಿಗೆ ಬಂದಿದೆ ಆದ್ದರಿಂದ ನಾವೆಲ್ಲರೂ ಕನ್ನಡ ಉಳಿಸಿ ಬೆಳೆಸಬೇಕು ಈ ಬಗ್ಗೆ ಪ್ರಾಮಾಣಿಕವಾಗಿ ಪರಿಷತ್ತಿನ ಮೂಲಕ ಹೋರಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುಬ್ಬಿ ರೋಟರಿ ಮಾಜಿ ಅಧ್ಯಕ್ಷ ರಾಜಣ್ಣ, ನಿವೃತ್ತ ಪ್ರೌಢಶಾಲಾ ಶಿಕ್ಷಕ ಲಿಂಗಪ್ಪ, ಪ್ರಕಾಶ್ ಉಪಸ್ಥಿತರಿದ್ದರು.
ಸ್ಥಳೀಯ ಜನರ ಅಭಿಪ್ರಾಯದಂತೆ ಜಿ.ಪಂ, ತಾ.ಪಂ. ಟಿಕೆಟ್ ಹಂಚಿಕೆ
ಚಿಕ್ಕನಾಯಕನಹಳ್ಳಿ,ಜ.11 : ಸದಾನಂದಗೌಡರು, ಯಡಿಯೂರಪ್ಪನವರಿಂದ ಪೋನ್ ಮಾಡಿಸಿದರೆ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವುದಿಲ್ಲ,  ಆಕಾಂಕ್ಷಿಗಳ ಬಗ್ಗೆ ಆಯಾ ಕ್ಷೇತ್ರಗಳಲ್ಲಿನ ಸ್ಥಳೀಯ ಜನರ ಬಳಿ ಚಚರ್ಿಸಿ ಅವರ ಅಭಿಪ್ರಾಯದಂತೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು. 
ಪಟ್ಟಣದ ಹೊರವಲಯದ ದಬ್ಬೆಘಟ್ಟದ ಮರುಳಸಿದ್ದೇಶ್ವರ ಪ್ರಾರ್ಥನಾ ಮಂದಿರದಲ್ಲಿ ನಡೆದ  ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  ಈ ಬಾರಿಯ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪಧರ್ಿಸಲು ಅಭ್ಯಥರ್ಿಗಳ ಪೈಪೋಟಿ ಇದೆ, ಆದ್ದರಿಂದ ಸ್ಥಳೀಯರ ಅಭಿಪ್ರಾಯ ಪಡೆದು ಟಿಕೆಟ್ ನೀಡುವುದಾಗಿ ತಿಳಿಸಿದರಲ್ಲದೆ, 1995ರಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸ್ಪಧರ್ಿಸಿ ಎಂದು ನಾವೇ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಬೇಕಾಗಿತ್ತು,  ಆದರೆ ಈಗ ಚುನಾವಣೆಯಲ್ಲಿ ಸ್ಪಧರ್ಿಸಲು ಪೈಪೋಟಿ ಏರ್ಪಟ್ಟಿದೆ ಪ್ರತಿ ಕ್ಷೇತ್ರದಲ್ಲೂ ಐದರಿಂದ ಆರು ಮಂದಿ ಕಾರ್ಯಕರ್ತರು ಅಜರ್ಿ ಸಲ್ಲಿಸಿದ್ದಾರೆ ಎಂದರು.
ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ  24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು, 6ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ನಮ್ಮ ಪಕ್ಷದ ಅಭ್ಯಥರ್ಿಗಳೇ ಹೆಚ್ಚು ಗೆಲುವು ಸಾಧಿಸಿದ್ದು,  ಮುಂಬರಲಿರುವ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷದ ಅಭ್ರ್ಯಥರ್ಿಗಳೇ ಹೆಚ್ಚಿನ ಮಟ್ಟದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದ ಅವರು,  ಜಿ.ಪಂ ಮತ್ತು ತಾ.ಪಂ. ಚುನಾವಣೆಗಾಗಿ ಆಕಾಂಕ್ಷಿ ಅಭ್ಯಥರ್ಿಗಳು ಸಲ್ಲಿಸಿರುವ ಅಜರ್ಿಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷರವರೆಗೆ ಕಳುಹಿಸಿ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಮುಖಂಡರು ಸ್ಥಳೀಯರ ಸಭೆ ಸೇರಿ ಟಿಕೆಟ್ ನೀಡಲಾಗುವುದು ಅಲ್ಲಿಯೂ ಒಮ್ಮತ ಅಭಿಪ್ರಾಯ ಮೂಡದಿದ್ದರೆ ಕೋರ್ ಕಮಿಟಿ ಮೂಲಕ ಟಿಕೆಟ್ ನೀಡಲಾಗುವುದು ಎಂದರು.
ತಳಮಟ್ಟದ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ  ಚುನಾವಣೆ ಇದಾಗಿದ್ದು, ಕಾರ್ಯಕರ್ತರು ಈ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಬೇಕು, ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಹಲವು ಮುಖಂಡರು ಸೇರ್ಪಡೆಗೊಳ್ಳುತ್ತಿದ್ದಾರೆ ಮುಂದೆಯೂ ಇದೇ ರೀತಿ ಮುಂದುವರೆಯಲಿದೆ ಎಂಬ ಅಭಿಪ್ರಾಯವಿದೆ ಎಂದ ಅವರು ಚುನಾವಣೆಗಾಗಿ ಅಜರ್ಿ ಸಲ್ಲಿಸುವ ಅಭ್ಯಥರ್ಿಗಳು ಜನವರಿ 15ರವರೆಗೆ ಬಿಜೆಪಿ ಕಛೇರಿಯಲ್ಲಿ ಅಜರ್ಿ ಸಲ್ಲಿಸಬಹುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇದೆ, ಪಕ್ಷದ ಅಭ್ಯಥರ್ಿಗಳು ಎಲ್ಲಾ ಕಡೆಗಳಲ್ಲೂ ಗೆಲುವು ಸಾಧಿಸಬೇಕು ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡಿದ್ದು ಪಕ್ಷ ಜನಾಭಿಪ್ರಾಯದಂತೆ ಟಿಕೆಟ್ ನೀಡುವುದು, ಪಕ್ಷದ ಅಧಿಕೃತ ಅಭ್ಯಥರ್ಿಗೆ ಪರವಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ, ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು ಪಕ್ಷ ನೀಡುವ ಅಧಿಕೃತ ಅಭ್ಯಥರ್ಿಗೆ ಕಾರ್ಯಕರ್ತರು ಶ್ರಮಿಸಬೇಕು, ಪಕ್ಷದಲ್ಲಿ ಯಾರೊಂದಿಗೆ ಒಡಕು ಇದ್ದರೆ ಅದು ಬೇರೆಯವರಿಗೆ ಲಾಭವಾಗಬಾರದು ಕಾಯರ್ತಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಲು ತಿಳಿಸಿದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥರ್ಿಗಳಿಂದ ಹೆಚ್ಚಿನ ಅಜರ್ಿ ಬಂದಿವೆ, ಬಿಜೆಪಿ ಪಕ್ಷ ತಾಲ್ಲೂಕಿನ ಹೆಚ್ಚಿನ ಪಕ್ಷಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್ ಮಾತನಾಡಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಪೆಟ್ಟಿಗೆ ಅಂಗಡಿ, ಟೀ ಅಂಗಡಿಗಳಲ್ಲಿ ಚಚರ್ಿತವಾಗುತ್ತಿದ್ದು ಎಲ್ಲಾ ಕಡೆಯಲ್ಲೂ ಪಕ್ಷದಿಂದ ಯಾರು ಸ್ಪಧರ್ಿಸಬಹುದು ಎಂಬ ಗುಸುಗುಸು ಚಚರ್ೆ ನಡೆಯುತ್ತಿದೆ, ಮುಂದೆ ಬರಲಿರುವ ತಾ.ಪಂ. ಚುನಾವಣೆಯಲ್ಲಿ 15ರಿಂದ 16 ಸ್ಥಾನಗಳನ್ನು ಪಕ್ಷ ಗೆಲುವು ಸಾಧಿಸಲಿದೆ ಎಂದರು. 
ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಮಾತನಾಡಿ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಬೆಂಬಲಿಸುವಂತೆ ತಿಳಿಸಿದರು. 
ಸಭೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಜಿ.ಪಂ 6ಕ್ಷೇತ್ರಗಳಲ್ಲಿ 5 ಸ್ಥಾನವನ್ನು 24 ತಾ.ಪಂ.ಕ್ಷೇತ್ರಗಳಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜಿಪಿ ಪಕ್ಷವನ್ನು ಗೆಲ್ಲಿಸುವುದಾಗಿ ತಿಳಿಸಿದ ಅವರು,  ತಾಲ್ಲೂಕಿನಲ್ಲಿ ಎಲ್ಲಾ ಜಿ.ಪಂ. ತಾ.ಪಂ.ಕ್ಷೇತ್ರಗಲ್ಲೂ ಬಿಜಿಪಿ ಪಕ್ಷದಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಕುಪ್ಪೂರು ಹಾಗೂ ಕೆಂಕೆರೆ ತಾ.ಪಂ.ಕ್ಷೇತ್ರಗಳಿಗೆ ತಲಾ 20ಜನ ಆಕಾಂಕ್ಷಿಗಳಿದ್ದು ಹೊಯ್ಸಳಕಟ್ಟೆ ಒಂದು ಜಿ.ಪಂ.ಕ್ಷೇತ್ರಕ್ಕೆ 10ಜನ ಆಕಾಂಕ್ಷಿಗಳಿದ್ದಾರೆ ಆದ್ದರಿಂದ ಅಭ್ಯಥರ್ಿಗಳ ಆಯ್ಕೆಯನ್ನು ಆಯಾ ಬೂತ್ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಆಯ್ಕೆಮಾಡಲಾಗುವುದು ಎಂದ ಅವರು ಪಟ್ಟಣದಲ್ಲಿರುವ ಬಿಜಿಪಿ ಕಛೇರಿಯಲ್ಲಿ ಆಕಾಂಕ್ಷಿಗಳ ಅಜರ್ಿಗಳನ್ನು ಸ್ವಿಕರಿಸಲಿದ್ದು ಇನ್ನು ಆಕಾಂಕ್ಷಿಗಳಿದ್ದರೆ ಅಜರ್ಿಸಲ್ಲಿಸ ಬಹುದು ಎಂದರು.
ಇಂದಿನ ಅಜರ್ಿ ಬಿಜಿಪಿ ಪಕ್ಷದ ಅಜರ್ಿ ಸ್ವಿಕರಿಸುವ ಸಭೆಯಲ್ಲಿ ಒಟ್ಟು 6ಜಿ.ಪಂ.ಕ್ಷೇತ್ರಗಳಲ್ಲಿ ಶೆಟ್ಟಿಕೆರೆ ಕ್ಷೇತ್ರಕ್ಕೆ 6 ಜನ ಆಕಾಂಕ್ಷಿಗಳು ಅಜರ್ಿ ಸಲ್ಲಿಸಿದ್ದು, ಕಂದಿಕೆರೆ ಕ್ಷೇತ್ರಕ್ಕೆ 4, ಹಂದನಕೆರೆ ಕ್ಷೇತ್ರಕ್ಕೆ 6, ಹುಳಿಯಾರು ಕ್ಷೇತ್ರಕ್ಕೆ 8, ಹೊಯ್ಸಳಕಟ್ಟೆ ಕ್ಷೇತ್ರಕ್ಕೆ 10, ಬುಕ್ಕಾಪಟ್ಟಣ ಕ್ಷೇತ್ರಕ್ಕೆ 8 ಜನರಂತ ಒಟ್ಟು 42 ಜನ ಆಕಾಂಕ್ಷಿಗಳು ಅಜರ್ಿಸಲ್ಲಿಸಿದ್ದಾರೆ, ಹಾಗೂ 24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಒಟ್ಟು 90 ಆಕಾಂಕ್ಷಿಗಳು ಅಜರ್ಿಗಳನ್ನು ಸಲ್ಲಿಸಿದ್ದಾರೆ.
ತಾಲ್ಲೂಕಿನ ಜಿ.ಪಂ.ಹಾಗೂ ತಾ.ಪಂ.ಕ್ಷೇತ್ರಗಳಿಂದ ಆಗಮಿಸಿದ್ದ ಚುನಾವಣಾ ಆಕಾಂಕ್ಷಿಗಳಿಂದ ಅಜರ್ಿ ಸ್ವೀಕರಿಸಿದರು.
ಸಭೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಸೀತಾರಾಮಯ್ಯ, ನೇತ್ರಾವತಿ, ಕೆಂಕೆರೆನವೀನ್, ವಸಂತಯ್ಯ, ಜಯಣ್ಣ, ರಮೇಶ್ಕುಮಾರ್, ರೂಪ ಮತ್ತಿತರರು ಉಪಸ್ಥಿತರಿದ್ದರು. 
ಬಾಕ್ಸ ಕಾಲಂ:  
ಇಂದು ನಡೆದ ಅಜರ್ಿ ಸ್ವಿಕಾರ ಸಭೆಗೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬಾರದಿರುವುದು ಅನೇಕರಲ್ಲಿ ಗೊಂದಲ ಉಂಟು ಮಾಡಿತ್ತು,  ಆದರೂ ಜಿ.ಸಿ.ಮಾಧುಸ್ವಾಮಿ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಅಜರ್ಿಸಲ್ಲಿಸಿದ್ದು ಹಾಗೂ ಕೆ.ಎಸ್.ಕಿರಣ್ಕುಮಾರ್ ತಮ್ಮ ಭಾಷಣದಲ್ಲಿ ಜೆ.ಸಿ.ಎಂ. ಪಕ್ಷದ ಮತ್ತೊಂದು ಕಾರ್ಯದಲ್ಲಿ ತೊಡಗಿರುವ ಬಗ್ಗೆ ನೀಡಿದ ಹೇಳಿಕೆ ಕಾರ್ಯಕರ್ತರಲ್ಲಿದ್ದ ಗೊಂದಲವನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿರಬಹುದು ಎನ್ನಲಾಗಿದೆ.   

ಎಲ್ಲಾ ಸಮಾಜದಲ್ಲೂ ಒಡಕಿದೆ ಸಂಘಟನೆ ಮೂಲಕ ಬೆಳಸಬೇಕು
ಚಿಕ್ಕನಾಯಕನಹಳ್ಳಿ,ಜ.11 :  ತಮ್ಮ ಒಳ ಒಡಕುಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಸಮಾಜ ಮುಖಿಯಾಗಿ ಕಾರ್ಯಗಳನ್ನು ಮಾಡಿದರೆ ಅದು ದೇವರ ಪಾತ್ರಕ್ಕೆ ಪಾತ್ರರಾಗುತ್ತಾರೆ ಜೊತೆಗೆ ಸಮಾಜವು ಸಂಘಟಿತವಾಗುತ್ತದೆ  ಎಂದು ಶ್ರೀಪರಮಹಂಸ ಪಾರಿವ್ರಾಕಾಚಾರ್ಯ ನಾಮದೇವಾನಂದಭಾರತಿ ಸ್ವಾಮಿಜಿ ತಿಳಿಸಿದರು.
ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಸಮಾಜ, ಯುವಕ ಮಂಡಳಿ, ಮತ್ತು ರುಕ್ಮಣಿ ಮಹಿಳಾ ಸಮಾಜದವರು ಆಯೋಜಿಸಿದ್ದ ವಿಠ್ಠಲ ರುಖುಮಾಯಿಯವರ ದಿಂಡಿ 6ನೇ ವರ್ಷದ ಉತ್ಸವ ಹಾಗೂ ಧಾಮರ್ಿಕ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಇವರು,  ಎಲ್ಲಾ ಸಮಾಜಗಳಲ್ಲೂ ಒಳ ಒಡಕುಗಳು ಇದ್ದದ್ದೇ ಅದರೂ ಸಮಾಜದಲ್ಲಿ ಎಲ್ಲರೂ ಒಟ್ಟಾಗಿ ಸಮಾಜ ಮುಖಿಯಾಗಬೇಕು ಎಂದರು.
ಗೋಡೆಕೆರೆಯ ಚರಪಟ್ಟಾದ್ಯಕ್ಷರಾದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಜಿಗಳು ಮಾತನಾಡಿ ಇಂದಿನ ಸಮಾಜದಲ್ಲಿ ವಿಭಕ್ತ ಕುಟುಂಬಗಗಳೇ ಹೆಚ್ಚಾಗುತ್ತಿದ್ದ,  ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ ಆದ್ದರಿಂದ ಕುಟುಂಬದಲ್ಲಿ ನಂಬಿಕೆ ಇಟ್ಟು ಜೀವನ ನಡೆಸ ಬೇಕು ಎಲ್ಲರೂ ಒಟ್ಟಾಗಿ ಬಾಳ ಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ಸಮಾಜದಲ್ಲಿನ ಎಲ್ಲಾ ಜಾತಿಗಳು ಒಂದೇ ಎಲ್ಲರೂ ಪ್ರಿತಿ ವಿಶ್ವಾಸಗಳಿಂದ ಹಾಗೂ ಸಮಾನತೆಯಿಂದ ಬದುಕಿದರೆ ಯಾವುದೇ ಗೊಂದಲಗಳು ಬರುವುದಿಲ್ಲ ಎಂದ ಅವರು ವಿಠ್ಠಲ ರುಖುಮಾಯಿ ದೇವಾಲಯಕ್ಕೆ ಶಾಸಕರ ನಿಧಿಯಿಂದ 3ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ತುಮಕೂರಿನ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಪಿ.ಎಸ್.ಗುರುಪ್ರಸಾದ್ ಪಿಸ್ಸೆ, ಹೊಸದುರ್ಗದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಉಮೇಶ ಗುಜರೆ ತುಮಕೂರಿನನ ಭಾ.ಕ್ಷ.ಸಮಾಜದ ಸತ್ಯನಾರಾಯಣ, ಪುರಸಭಾ ಸದಸ್ಯ ಮಲ್ಲೇಶಯ್ಯ, ಜೆಡಿಎಸ್ ಮುಖಂಡ ಕಲ್ಲೇಶ, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ, ಭಾಗವಹಿಸದ್ದರು.
ಕಾರ್ಯಕ್ರಮದಲ್ಲಿ ಶ್ರೀ ತುಕಾರಾಂ ರಾವ್, ಜಗದೀಶ್ಬಾಬು ಇವರಿಂದ ಭಜನಾ ಕಾರ್ಯಕ್ರಮ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಭಾರತೀಯ ಪರಂಪರೆ ಉಳಿಸುವುದು ಯುವ ಪೀಳಿಗೆ ಕೈಯಲ್ಲಿದೆ
ಚಿಕ್ಕನಾಯಕನಹಳ್ಳಿ, : ಭಾರತೀಯ ಪರಂಪರೆ ಉಳಿಸುವ ರಾಯಭಾರಿಗಳಾಗಿ ಭರತ ಖಂಡದ ಬಗೆಗಿನ ಅಭಿಪ್ರಾಯವನ್ನು ವಿಶ್ವದಾದ್ಯಂತ ಪಸರಿಸುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಪಟ್ಟಣದ ಡಿವಿಪಿ ಶಾಲೆಯ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ, ಶಿಲ್ಪಕಲೆ, ಪರಂಪರೆಗಳನ್ನು ಉಳಿಸುವುದು ಅಗತ್ಯವಾಗಿದೆ ಎಂದ ಅವರು ಯುವಕರು ತಮ್ಮ ಮನಸ್ಸನ್ನು ವಿಶಾಲಗೊಳಿಸಿ ದೊಡ್ಡ ಮಟ್ಟದ ಯಶಸ್ಸು ಕಾಣುವಲ್ಲಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 2014-15ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಶಾಲೆಯ ವತಿಯಿಂದ ನಡೆದ ಸಾಂಸ್ಕೃತಿಕ, ಕ್ರೀಡೆ, ಕಲೆ ಇನ್ನಿತರ ವಿವಿಧ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು. ವಾಷರ್ಿಕೋತ್ಸವದ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಬೆಂಗಳೂರು ಡಿವೈಎಸ್ಪಿ ಸಿ.ಆರ್.ರವೀಶ್ರವರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಪುರಸಭಾಧ್ಯಕ್ಷೆ ಪ್ರೇಮದೇವರಾಜು, ಸದಸ್ಯರಾದ ಎಂ.ಕೆ.ರವಿಚಂದ್ರ, ಹೆಚ್.ಬಿ.ಪ್ರಕಾಶ್, ಮಾಜಿ ಪುರಸಭಾಧ್ಯಕ್ಷ ಎಂ.ಎನ್.ಸುರೇಶ್, ಡಿವಿಪಿ ಶಾಲಾ ಸಂಸ್ಥೆ ಕಾರ್ಯದಶರ್ಿ ಸಿ.ಎಸ್.ನಟರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ದೊರೆಮುದ್ದಯ್ಯ, ಸಿ.ಪಿ.ಚಂದ್ರಶೇಖರಶೆಟ್ಟಿ, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಗ್ಯಾಸ್ ಸಂಪರ್ಕ ಬಳಸುವ ಮೂಲಕ ನೈಸಗರ್ಿಕ ಸಂಪನ್ಮೂಲ ಉಳಿಸಿ
ಚಿಕ್ಕನಾಯಕನಹಳ್ಳಿ,ಜ.12 : ಮರಗಳನ್ನು ಕಡಿಯದೇ ಗ್ಯಾಸ್ ಸಂಪರ್ಕ ಬಳಸಿ ಅಡುಗೆ ಮಾಡುವ ಮೂಲಕ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸಾಮಾಜಿಕ ಅರಣ್ಯ ಇಲಾಖೆ ಕಛೇರಿ ಆವರಣದಲ್ಲಿ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಅಭಿವೃದ್ದಿ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಈ ಯೋಜನೆಯಡಿ 220 ಫಲಾನುಭವಿಗಳಿಗೆ ಸೌಲಭ್ಯ ದೊರೆಯಲಿದ್ದು ಈಗ 46 ಮಂದಿ ಫಲಾನುಭವಿಗೆ ವಿತರಿಸುತ್ತಿದ್ದೇವೆ, ಉಳಿದ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿರುವುದಿಲ್ಲ, ಅಗತ್ಯ ದಾಖಲಾತಿ ಸಲ್ಲಿಸಿದ ನಂತರ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕದ ಸೌಲಭ್ಯ ನೀಡಲಾಗುವುದು ಎಂದರಲ್ಲದೆ ಈ ಮೂಲಕ ಹೆಣ್ಣಮಕ್ಕಳು ಒಲೆಯ ಮುಂದೆ ಹೊಗೆ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುವುದನ್ನು ತಪ್ಪಿಸಲಾಗುವುದು ಹಾಗೂ ಪರಿಸರವನ್ನು ಉಳಿಸುವ ಕಾರ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಗ್ಯಾಸ್ ಸಂಪರ್ಕ ಬಳಸುವ ವಿಧಾನದ ಬಗ್ಗೆ ಮಾದರಿಯನ್ನು ತಿಳಿಸಲಾಯಿತು. 
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಎಂ.ಕೆ.ರವಿಚಂದ್ರ, ಸಿ.ಟಿ.ದಯಾನಂದ್, ಅಕ್ಷರ ದಾಸೋಹದ ಸಹಾಯಕ ನಿದರ್ೇಶಕ ತಿಮ್ಮರಾಜು, ಅರಣ್ಯ ಇಲಾಖೆಯ ಅಧಿಕಾರಿ ಲಕ್ಷ್ಮೀನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ವಿವೇಕಾನಂದರು ಯುವ ಪೀಳಿಗೆಯನ್ನು ಶಕ್ತಿಯನ್ನಾಗಿ ಪರಿವತರ್ಿಸುತ್ತಿದ್ದರು
ಚಿಕ್ಕನಾಯಕನಹಳ್ಳಿ,ಜ.12 : ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಸಲುವಾಗಿ ಯುವ ಶಕ್ತಿಯನ್ನು ಸಂಘಟಿಸಿ ದೇಶ ಕಟ್ಟುವ ಸಂಕಲ್ಪವನ್ನು ಸ್ವಾಮಿವಿವೇಕಾನಂದರು ಹೊಂದಿದ್ದರು ಎಂದು ಪ್ರಾಂಶುಪಾಲರಾದ ಸಿದ್ದಗಂಗಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವೇಕಾನಂದರ 154ನೇ ಜನ್ಮ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾನತೆಯ ಮೂಲಕ ಸ್ವಾವಲಂಬಿಗಳಾಗಿರುವಂತೆ ಭಾರತೀಯರಿಗೆ ವಿವೇಕಾನಂದರು ಸಂದೇಶ ಸಾರಿದ ಮಹಾನ್ ಚೇತನರಾಗಿದ್ದರು, ಮಕ್ಕಳು ಸ್ವಾಮಿವಿವೇಕಾನಂದರ ಬದುಕನ್ನು ಅರಿತು ನಿಶ್ಚಿತ ಮನಸ್ಸಿನಿಂದ ಶಿಕ್ಷಣವನ್ನು ಚೆನ್ನಾಗಿ ಅಭ್ಯಸಿಸಿದರೆ ಸ್ವಾವಲಂಭಿಗಳಾಗುವುದರ ಜೊತೆಗೆ ದೇಶವು ಅಭ್ಯುದಯ ಸಾದನೆಯ ಹಾದಿ ಕಾಣುತ್ತದೆ ಎಂದರು.
ರಾಜ್ಯ ಎ.ಬಿ.ವಿ.ಪಿ ಕಾರ್ಯದಶರ್ಿ ಅಮರೇಶ್ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಉತ್ತಮ ನಡತೆಯ ಪ್ರತೀಕವಾದರೆ ಅಂತಹ ಮಕ್ಕಳಲ್ಲಿ ನಿಸ್ವಾರ್ಥ ಸೇವೆಯನ್ನು ಕಾಣಲಾಗುತ್ತದೆ, ಸ್ವಾಮಿ ವಿವೇಕಾನಂದರು ಆತ್ಮ ವಿಶ್ವಾಸದ ಪಾಠದಲ್ಲಿ ಸ್ವದೇಶಿ ಸಂಸ್ಕೃತಿಯನ್ನು ವಿದೇಶಿಯರಿಗೆ ಆನಾವರಣಗೊಳಿಸಿ ಭಾರತ ಒಂದು ಸ್ವಾಭಿಮಾನ ದೇಶ ಎಂಬುದನ್ನು ಪ್ರಚುರ ಪಡಿಸಿದ ಮಹಾನ್ ಸನ್ಯಾಸಿ ವಿವೇಕಾನಂದರು, ಸ್ವದೇಶದ ಮಣ್ಣಿನಲ್ಲಿ ಹೊರಲಾಡಿ ನನ್ನ ದೇಹ ಅಪವಿತ್ರಗೊಂಡಿತ್ತು ಈಗ ಪ್ರವಿತ್ರನಾದೆನು ಎಂದು ನಮ್ಮ ದೇಶದ ಮಣ್ಣಿನ ಪವಿತ್ರತೆಯನ್ನು ಸಾರಿ ಹೇಳಿದ ಮಹಾನ್ ಜ್ಞಾನಿ ಇವರ ಜೀವನ ಚರಿತ್ರೆ ಎಂದೆದಿಗೂ ಅಭ್ಯಸಿಸುವುದು ಪ್ರಸ್ಥುತವಾದದ್ದು ಎಂದರು.
ಪಂಚನಹಳ್ಳಿ ಸಕರ್ಾರಿ ಕಾಲೇಜಿನ ಪ್ರಾಂಶುಪಾಲ ಸಿ.ಡಿ.ಷಣ್ಮುಖಸ್ವಾಮಿ ಮಾತನಾಡಿ ವಿವೇಕಾನಂದರಿಗೆ ವಿದೇಶಿ ಮಹಿಳೆಯೊಬ್ಬರು ಮದುವೆಯಾಗುವಂತೆ ನೀಡಿದ್ದ ಬೇಡಿಕೆಗೆ ಚಕಿತರಾದ ಅವರು, ಆಕೆಯಿಂದ ವಿವರಣೆ ಪಡೆದು ನನ್ನನ್ನೇ ಮಗ ಎಂದು ತಿಳಿದುಕೋ ತಾಯೇ ಎನ್ನುವುದರ ಮೂಲಕ  ನಮ್ಮ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದರಲ್ಲದೆ ವಿದ್ಯಾಥರ್ಿಗಳು ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡರೆ ಈ ದೇಶವನ್ನು ವಿದೇಶಿಯರು ಇನ್ನು ಹೆಚ್ಚು ಗೌರವಿಸುವಂತಾಗುತ್ತದೆ ಎಂದರು. 
ಈ ಸಂದರ್ಭದಲ್ಲಿ ಜಿಲ್ಲಾ ಎ.ಬಿ.ವಿ.ಪಿ ಕಾರ್ಯದಶರ್ಿ ಜನಾರ್ಧನ್, ಉಪನ್ಯಾಸಕರಾದ ಪರಮೇಶ್ವರಪ್ಪ, ಗಿರೀಶ್, ಧನಂಜಯ್, ರವೀಂದ್ರ ಉಪಸ್ಥಿತರಿದ್ದರು.
ತಾಲ್ಲೂಕಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಗಣನೀಯ ಸಾಧನೆ ಮಾಡುತ್ತಿದ್ದಾರೆ. 
ಚಿಕ್ಕನಾಯಕನಹಳ್ಳಿ,ಜ.12 : ಕ್ರೀಡೆ, ವಿಜ್ಞಾನ ಪ್ರತಿಭಾ ಕಾರಂಜಿ ಮುಂತಾದ ಕ್ಷೇತ್ರಗಳಲ್ಲಿ ತಾಲ್ಲೂಕಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಗಣನೀಯ ಸಾಧನೆ ಮಾಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿ ಬೆಂಗಳೂರು, ಶಿಕ್ಷಣ ಇಲಾಖೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ 9ರಿಂದ 16ವರ್ಷದ ಮಕ್ಕಳಿಗಾಗಿ ಕಲಾಶ್ರೀ ಶಿಬಿರ ವಿವಿಧ ಸ್ಪಧರ್ೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾಶ್ರೀ ಸ್ಪಧರ್ೆಗಳು ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಇರುವ ಒಂದು ಉತ್ತಮ ವೇದಿಕೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಡಿ.ಪಿ.ಓ ಅನೀಸ್ಖೈಸರ್, ಮಕ್ಕಳು ಒಂದಲ್ಲ ಒಂದು ವಿಧದಲ್ಲಿ ಪ್ರಜ್ವಲಿಸಬೇಕಿದೆ ಎಂದರು.  ಕಾರ್ಯಕ್ರಮದಲ್ಲಿ ಎಸಿಡಿಪಿಓ ಪರಮೇಶ್ವರಪ್ಪ, ಇಸಿಓ ಕೆ.ಪಿ.ಚೇತನ, ಎನ್.ಪಿ.ಕುಮಾರಸ್ವಾಮಿ,  ಸಿಆರ್ಪಿ ಲೀಲಾವತಿ, ಶಿಕ್ಷಕರಾದ ಎಸ್.ಬಿ.ಕುಮಾರ್, ಗುರುಪ್ರಸಾದ್, ರುಕ್ಮಿಣಿ, ಸಿ.ಟಿ.ರೇಖಾ ಇತರರು ಉಪಸ್ಥಿತರಿದ್ದರು.
ಕಲಾಶ್ರೀ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳು :
ಪ್ರಬಂಧ ಸ್ಪದರ್ೆ : ಅನುಷ ಎಂ.ವಿ-ಪ್ರಥಮ ರೋಟರಿ ಶಾಲೆ, ಮಧುಸೂಧನ್-ದ್ವಿತೀಯ ಸಕರ್ಾರಿ ಪ್ರೌಡಶಾಲೆ.
ಚಿತ್ರಕಲೆ ಸ್ಪಧರ್ೆ : ತಸ್ವಿನ್ಸಿಂಹ-ಪ್ರಥಮ, ಸಕರ್ಾರಿ ಪ್ರೌಡಶಾಲೆ, ಅಯನ್ಪಾಷ-ದ್ವಿತಿಯ ನವೋದಯ ಶಾಲೆ.
ಏಕಪಾತ್ರಾಭಿನಯ : ಪ್ರಶಾಂತ್ ಸಿ.ಜಿ-ಪ್ರಥಮ, ಡಿವಿಪಿ ಶಾಲೆ, ಹರೀಶ್.ಕೆ-ದ್ವಿತೀಯ ಜಿ.ಹೆಚ್.ಎಸ್.ಬಡಕೇಗುಡ್ಲು.
ವಿಜ್ಞಾನ ಪ್ರಯೋಗ : ರೀತುನಂದ್-ಪ್ರಥಮ ನವೋದಯ ಶಾಲೆ, ಬೀರೇಶ್.ಸಿ.ಬಿ-ದ್ವಿತಿಯ ಅಂಬೇಡ್ಕರ್ ಶಾಲೆ.





Thursday, January 7, 2016


ಪೌರಕಾಮರ್ಿಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ 
ಚಿಕ್ಕನಾಯಕನಹಳ್ಳಿ,: ಪೌರ ಕಾಮರ್ಿಕರಿಗೆ ಬೆಳಗಿನ ಉಪಹಾರ ನೀಡುವ ಯೋಜನೆಯನ್ನು ಪೌರಕಾಮರ್ಿಕರು ಸರಿಯಾಗಿ ಬಳಸಿಕೊಳ್ಳುವ ಮೂಲಕ ಕರ್ತವ್ಯದ ಜೊತೆಗೆ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ನೀಡಬೇಕೆಂದು  ತಹಶೀಲ್ದಾರ್ ಆರ್.ಗಂಗೇಶ್ ಸಲಹೆ ನೀಡಿದರು.
ಪಟ್ಟಣದ ಪುರಸಭಾ ಕಾಯರ್ಾಲಯದಲ್ಲಿ ಪೌರಕಾಮರ್ಿಕರಿಗೆ ನೀಡುವ ಬೆಳಗಿನ ಉಪಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಾತನಾಡಿ, ಈಗಾಗಲೇ ಶೇ.24.10%ರ ಅನುದಾನದ ಹಣದಲ್ಲಿ ಪೌರಕಾಮರ್ಿಕರಿಗೆ ಉಪಹಾರ ನೀಡಲು 5ಲಕ್ಷ ರೂ ಅನುದಾನವನ್ನು ಮೀಸಲಿಟ್ಟಿದ್ದು ಪೌರಕಾಮರ್ಿಕರು ತಮಗೆ ನೀಡಿರುವ ಪರಿಕರಗಳಾದ ಶೂ, ಹ್ಯಾಂಡ್ಗ್ಲೌಸ್, ಮಾಸ್ಕ್ ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಪುರಸಭಾ ಸದಸ್ಯ ಮಲ್ಲೇಶಯ್ಯ ಮಾತನಾಡಿ, ಬೆಳಗಿನ ಜಾವ ಪಟ್ಟಣದ ಸ್ವಚ್ಛತೆಗೆ ಪೌರಕಾಮರ್ಿಕರು ಬರುತ್ತಾರೆ,  ಈ ಸಮಯದಲ್ಲಿ ಹಸಿವಿನಿಂದ ಬಳಲುತ್ತಾರೆ ಎಂಬ ಕಾರಣದಿಂದ ಪುರಸಭೆ ವತಿಯಿಂದ ಬೆಳಗಿನ ಉಪಹಾರ ನೀಡುವಂತೆ ಎರಡು ವರ್ಷಗಳಿಂದ ಸಾಮಾನ್ಯ ಸಭೆಗಳಲ್ಲಿ ಚಚರ್ೆ ನಡೆದಿದ್ದರೂ ಜಾರಿಗೆ ತಂದಿರಲಿಲ್ಲ,  ಈಗ ಬೆಳಗಿನ ಉಪಹಾರ ವ್ಯವಸ್ಥೆ ಜಾರಿಗೆ ತರಲಾಗಿದ್ದು,  ಈ ಕಾರ್ಯಕ್ರಮವನ್ನು ಉಪಯೋಗಿಸಿಕೊಳ್ಳುವ ಪೌರಕಾಮರ್ಿಕರು ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಹಕರಿಸಿ ಎಂದರು.  ಟೆಂಡರ್ದಾರರು ಪೌರಕಾಮರ್ಿಕರಿಗೆ ನೀಡುವ ಆಹಾರದಲ್ಲಿ ವ್ಯತ್ಯಾಸವಾಗದಂತೆ ಉತ್ತಮ ಗುಣಮಟ್ಟದ ಆಹಾರ ಸರಬರಾಜು ಮಾಡುವಂತೆ ಸಲಹೆ ನೀಡಿದರು.
ವೈದ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಪೌರಕಾಮರ್ಿಕರು ರಕ್ಷ ಕವಚ, ಪೂರ್ಣ ಮಾಸ್ಕ್, ಹ್ಯಾಂಡ್ಗ್ಲೌಸ್, ಶೂಗಳನ್ನು ಹಾಕಿಕೊಂಡು ಸ್ವಚ್ಛತಾ ಕೆಲಸ ಮಾಡುವಂತೆ ಸಲಹೆ ನೀಡಿದ ಅವರು ಪ್ರತಿ ತಿಂಗಳು ಪೌರಕಾಮರ್ಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮಾತನಾಡಿ, ಪಟ್ಟಣದ ಸ್ವಚ್ಛತೆಗೆ ಬರುವ ಪೌರಕಾಮರ್ಿಕರಿಗೆ ಕುಟುಂಬದ ಸದಸ್ಯರು ಬೆಳಗ್ಗೆ ಎದ್ದು ಉಪಹಾರ ಮಾಡಲು ಸಾಧ್ಯವಿಲ್ಲ ಆದ್ದರಿಂದ ಸಕರ್ಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಪ್ರೇಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರೇಣುಕಮ್ಮ, ರೂಪ, ಪುಷ್ಪ.ಟಿ.ರಾಮಯ್ಯ, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ ಅಧಿಕಾರಿಗಳಾದ ಯೋಗಾನಂದಬಾಬು, ಚಂದ್ರಶೇಖರ್, ಜಯರಾಂ ಉಪಸ್ಥಿತರಿದ್ದರು.


ವೆಟ್ಲಿಪ್ಟಿಂಗ್ ಸ್ಪಧರ್ೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಜ.07 :   ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಅಂತರಕಾಲೇಜು ಪುರುಷರ ಮತ್ತು ಮಹಿಳೆಯರ ಭಾರ ಎತ್ತುವ ಸ್ಫಧರ್ೆ ಹಾಗೂ ಕುಸ್ತಿ ಸ್ಪಧರ್ೆಯಲ್ಲಿ  ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು ಭಾಗವಹಿಸಿ 8 ಚಿನ್ನದಪದಕ,   7 ಬೆಳ್ಳಿಪದಕ,  3ಕಂಚಿನಪದಕ ಸೇರಿದಂತೆ ಒಟ್ಟು 18   ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿನ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿದರ್ೇಶಕರಾದ ಶೈಲೇಂದ್ರಕುಮಾರ್.ಎಸ್.ಜೆ. ಇವರ ತರಬೇತಿಯಲ್ಲಿ ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರ ವಿಭಾಗದಲ್ಲಿ ಸತತವಾಗಿ 3ನೇ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಹಾಗೂ ಪುರುಷರ ವಿಭಾಗದಲ್ಲಿ ಸತತವಾಗಿ 2ನೇ ಬಾರಿ ತಂಡ ಸಮಗ್ರ ಪ್ರಶಸ್ತಿ ಪಡೆದು ಕಾಲೇಜಿಗೆ ಹಾಗೂ ತಾಲ್ಲೂಕಿಗೆ ಕೀತರ್ಿ ತಂದಿದ್ದಾರೆ.
    ಭಾರ ಎತ್ತುವ ಸ್ಪಧರ್ೆಗೆ ಆಯ್ಕೆ : 
ಕಾಲೇಜಿನ ದ್ವಿತೀಯ ಪದವಿ ವಿದ್ಯಾಥರ್ಿನಿ ರಮ್ಯಶ್ರೀ.ಎಸ್. ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಪಡೆದು ವೈಯಕ್ತಿಕ ಸಾಧನೆ ಮಾಡಿದ್ದಾರೆ ಹಾಗೂ ಆಂದ್ರ ಪ್ರದೇಶದ ಆಚಾರ್ಯ ನಾಗಾಜರ್ುನ ವಿಶ್ವವಿದ್ಯಾಲಯದಲ್ಲಿ  ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಭಾರ ಎತ್ತುವ ಸ್ಪಧರ್ೆಗೆ 1) ರಮ್ಯಶ್ರೀ.ಎಸ್. 2) ಕಾವ್ಯ ಕೆ.ಬಿ. 3) ತೇಜಸ್ವಿನಿ.ಸಿ.ಆರ್, 4) ಕರಿಷ್ಮಾ 5) ನವೀನ್ಕುಮಾರ್.ಸಿ.ಆರ್. 6) ದರ್ಶನ್ ಬಿ.ಯು. ಆಯ್ಕೆಯಾಗಿದ್ದಾರೆ.
    ಕುಸ್ತಿ ಸ್ಪಧರ್ೆಗೆ ಆಯ್ಕೆ : 
ತುಮಕೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕುಸ್ತಿ ಸ್ಪಧರ್ೆಯಲ್ಲಿ ಶ್ರೀನಿವಾಸ್.ವಿ. ಚಿನ್ನದ ಪದಕ, ರವಿ.ಎಂ. ಕಂಚಿನ ಪದಕ ಹಾಗೂ ಬರ್ಕತ್ಉಲ್ಲಾ ಕಂಚಿನ ಪದಕ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕುಸ್ತಿ ಸ್ಪಧರ್ೆಗೆ ಶ್ರೀನಿವಾಸ್.ವಿ. ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾಥರ್ಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರಾದ ಸಿ.ಜಿ.ಸುರೇಶ್ ಹಾಗೂ ಬೋಧಕ, ಬೋಧಕೇತರ ವೃಂದ, ವಿದ್ಯಾಥರ್ಿ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
   ಪದಕ ಪಡೆದ ವಿದ್ಯಾಥರ್ಿಗಳು : 
ಚಿನ್ನದ ಪದಕ:1) ಕಾವ್ಯ ಕೆ.ಬಿ. 2) ತೇಜಸ್ವಿನಿ.ಸಿ.ಆರ್. 3) ಸೌಂದರ್ಯ.ಆರ್.ಎನ್.4) ವಿದ್ಯ, 5) ಕರಿಷ್ಮಾ 6) ರಮ್ಯಶ್ರೀ.ಎಸ್. 7) ನವೀನ್ಕುಮಾರ್.ಸಿ.ಆರ್. 8) ದರ್ಶನ್ ಬಿ.ಯು. 
ಬೆಳ್ಳಿಪದಕ:  1) ದಾಕ್ಷಾಯಿಣಿ 2) ಮೇಘನ ಎಂ.ಬಿ. 3) ಸಂಗೀತ.ಎಂ 4) ಪೂಣರ್ಿಮ 5) ಭಾಮಿನಿ.ಎ.ಸಿ. 6) ನಿರಂಜನ್  7) ಬರ್ಕತ್ಉಲ್ಲಾ
ಕಂಚಿನ ಪದಕ: 1) ಕುಂಜುರಾಣಿ   2) ರಜನೀಕಾಂತ್   3) ಗುರುಪ್ರಸಾದ್ ಪಡೆದಿದ್ದಾರೆ.


ಗೋಡೆಕೆರೆ ಗ್ರಾಮಸ್ಥರು ವಿದ್ಯುತ್ಗಾಗಿ ಬೆಸ್ಕಾಂ ಇಲಾಖೆಗೆ ಮುತ್ತಿಗೆ
ಚಿಕ್ಕನಾಯಕನಹಳ್ಳಿ,ಜ.07 : ಗೋಡೆಕೆರೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಆಗ್ರಹಿಸಿ ಗೋಡೆಕೆರೆ ಗ್ರಾಮಸ್ಥರು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಹಕ ಅಭಿಯಂತರರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗೋಡೆಕೆರೆ ಗ್ರಾಮಸ್ಥರು ಕಛೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ  ಮಾತನಾಡಿದ ರೇಣುಕಪ್ಪ,  ಸಂಜೆ 6ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಿದ್ಯುತ್ ನೀಡುತ್ತಾರೆ ಈ ಅವಧಿಯಲ್ಲಿಯೂ ನಾಲ್ಕರಿಂದ ಐದು ಬಾರಿ ವಿದ್ಯುತ್ ತೆಗೆಯುತ್ತಾರೆ, ಗೋಡೆಕೆರೆ ಸುತ್ತಮುತ್ತಲಿನಲ್ಲಿ ವಿದ್ಯುತ್ ಸರಿಯಾಗಿ ಸರಬರಾಜು ಆಗದೇ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ ಇದರ ಬಗ್ಗೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪಕರ್ಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಗೋಡೆಕೆರ ಗೇಟ್ ಹಾಗೂ ಜೆ.ಸಿ.ಪುರದಲ್ಲಿ 24ಗಂಟೆಯೂ ವಿದ್ಯುತ್ ಇರುತ್ತದೆ ನಮಗೇಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ನಮಗೇಕೆ ಈ ತಾರತಮ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ಅಲ್ಲದೆ ಲೈನ್ ಎಳೆಯಲು ವಿದ್ಯುತ್ ಪರಿವರ್ತಕ ನೀಡಲು ಹಣ ಕೇಳುತ್ತಾರೆ ಈಗಾದರೆ ರೈತರು ಬದುಕಲು ಸಾಧ್ಯವೇ ಎಂದರು.
ಅಲ್ಲದೆ ಗೋಡೆಕೆರೆ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿರುವವರಿಗೆ   ವಿದ್ಯುತ್ ಇಲ್ಲದೆ ತೀವ್ರ ತೊಂದರೆಯಾಗಿದೆ, ವಿದ್ಯುತ್ ಇಲ್ಲದೆ ಇರುವುದರಿಂದ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿ ವಿಷ ಜಂತುಗಳು ಸಹ ಮನೆಗಳಿಗೆ ಬರುವುದರಿಂದ ಜಮೀನುಗಳಲ್ಲಿರುವ ರೈತರಿಗೆ ಆತಂಕ ಹೆಚ್ಚಾಗಿದೆ ಎಂದರಲ್ಲದೆ, ಇಂಧನ ಸಚಿವರು ಗ್ರಾಮೀಣ ಭಾಗಗಳಿಗೆ 7ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಇದರ ಬಗ್ಗೆ ಏನು ಹೇಳುತ್ತೀರ ಎಂದು ಗ್ರಾಮಸ್ಥರು ಎಇಇ ರಾಜಶೇಖರ್ರವರನ್ನು ಪ್ರಶ್ನಿಸಿದರು.
ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಬೆಸ್ಕಾಂ ಎಇಇ ರಾಜಶೇಖರ್, ಇಂಧನ ಸಚಿವರು 7ಗಂಟೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದಾರೆ, ನಾನೂ ಸಹ ಪತ್ರಿಕೆಗಳಲ್ಲಿ ಓದಿದ್ದೇನೆ ಇದುವರೆವಿಗೂ ಸಕರ್ಾರದ ಆದೇಶ ಬಂದಿಲ್ಲ, ಈಗ ಎಂದಿನಂತೆ ವಿದ್ಯುತ್ ಸರಬರಾಜು ಆಗುತ್ತಿದೆ , ಸಕರ್ಾರದ ಆದೇಶ ಬಂದ ತಕ್ಷಣ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿದ ಅವರು ಲೈನ್ಮೇನ್ಗಳು ಲೈನ್ ಎಳೆಯಲು ಹಣ ಕೇಳುವುದರ ಬಗ್ಗೆ ದೂರು ನೀಡಿದರೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ರೇಣುಕಪ್ರಸಾದ್, ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ, ಅಡಿಕೆ ರೇಣುಕಯ್ಯ, ರವೀಶ, ಸಿದ್ದರಾಮಯ್ಯ, ಮರಿಯಣ್ಣ, ಆನಂದಯ್ಯ ಸೇರಿದಂತೆ ಗೋಡೆಕೆರೆ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದಿಂಡಿ ಉತ್ಸವ 
ಚಿಕ್ಕನಾಯಕನಹಳ್ಳಿ.ಜ.07: ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀವಿಠ್ಠಲ ರುಖುಮಾಯಿಯವರ 6ನೇ ವರ್ಷದ ದಿಂಡಿ ಉತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಪಟ್ಟಣದಲ್ಲಿ ಏರ್ಪಡಿಸಲಾಗಿದೆ.
ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಇದೇ ತಿಂಗಳ 9 ಹಾಗೂ 10ನೇ ತಾರೀಕಿನಂದು ಭಾವಸಾರ ಕ್ಷತ್ರಿಯ ಸಮಾಜ ಹಾಗೂ ರುಕ್ಮೀಣಿ ಮಹಿಳಾ ಸಮಾಜದವರು,  ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  ಇದೇ 9ರಂದು ಸಂಜೆ 6-30ಕ್ಕೆ ಪೋತಿ ಸ್ಥಾಪನೆ ಹಾಗೂ ತುಕಾರಾಮ್ ರಾವ್, ಜಗದೀಶಬಾಬು ಇವರಿಂದ ಕೀರ್ತನಾ ಕಾರ್ಯಕ್ರಮ ನಡೆಯಲಿದೆ.
ಇದೇ ಹತ್ತರ ಭಾನುವಾರ ಬೆಳಗ್ಗೆ 12ಗಂಟೆಗೆ ವಿಠ್ಠಲ ರುಖುಮಾಯಿಯವರ ದಿಂಡಿ ಉತ್ಸವ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ನಡೆಯಲಿದ್ದು ಅಂದು 1ಗಂಟೆಗೆ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಲಾಗಿದ್ದು ಶ್ರೀ ನಾಮದೇವಾನಂದಭಾರತಿ ಸ್ವಾಮಿಗಳು ದಿವ್ಯ ಸಾನಿದ್ಯವನ್ನು ವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸುವರು. ವಿಶೇಷ ಆಹ್ವಾನಿತರಾಗಿ ತುಮಕೂರಿನ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಪಿ.ಎಸ್.ಗುರುಪ್ರಸಾದ್ ಪಿಸ್ಸೆ, ಹೊಸದುರ್ಗದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಉಮೇಶ ಗುಜರೆ ಬಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.


ನವೋದಯ ಶಾಲೆಯ ವಾಷರ್ಿಕೋತ್ಸವ ಸಮಾರಂಭ
ಚಿಕ್ಕನಾಕಯಕನಹಳ್ಳಿ07:-ಪಟ್ಟಣದ ನವೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾಷರ್ಿಕೋತ್ಸವ ಸಮಾರಂಭ ಇದೇ ತಿಂಗಳ 9 ಶನಿವಾರ ಸಂಜೆ 4-30ಕ್ಕೆ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ವಿಶೇಷಾಧಿಕಾರಿ ಪಾಲಾಕ್ಷಯ್ಯ ನೆರೆವೆರಿಸುವರು.
 ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಬಹುಮಾನ ವಿತರಿಸಲಿದ್ದು ಮುಖ್ಯ ಅತಿಥಿಗಳಾಗಿ ನವೋದಯ ಸಂಸ್ಥೆಯ ಉಪಾಧ್ಯಕ್ಷ ಎಂ,ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ನವೋದಯ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಎಸ್.ಎಲ್.ಶಿವಕುಮಾರಸ್ವಾಮಿ, ನವೋದಯ ಪಿಯುಸಿ ಕಾಲೇಜಿನ ಪ್ರಾಂಶುಪಾಲ ಮೋಹನ್ ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Wednesday, January 6, 2016


ವಿದ್ಯುತ್ ಪರಿವರ್ತಕಕ್ಕೆ ಮರದ ಊರುಗೋಲೇ ಬೆಂಗಾವಲು
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಮಾಕುವಳ್ಳಿ ಗ್ರಾಮದ ಹತ್ತಿರವಿರುವ 100ಕೆ.ವಿ ವಿದ್ಯುತ್ ಪರಿವರ್ತಕವನ್ನು  ಎರಡು ವಿದ್ಯುತ್ ಕಂಬಕ್ಕೆ ಅಳವಡಿಸಿದ್ದು ಕಂಬಗಳು ಬಿರುಕುಬಿಟ್ಟುಕೊಂಡಿದ್ದು, ಮುರಿದು ಹೋಗುವ ಸ್ಥಿತಿಯಲ್ಲಿರುವ  ಪರಿಣಾಮ, ವಿದ್ಯುತ್ ಪರಿವರ್ತಕ ಅತಿ ಭಾರದಿಂದ ಕುಸಿಯುತ್ತದೆ ಎಂಬ ಭೀತಿಯಿಂದ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಮರದ ಊರುಗೋಲು ಇಟ್ಟು ಎರಡು ತಿಂಗಳಾಗಿದೆ. ಈ ಬಗ್ಗೆ ಇಲಾಖೆಗೆ ದೂರು ಕೊಟ್ಟರೂ ಇನ್ನೂ ಸರಿಪಡಿಸಿದ ವಿದ್ಯುತ್ ಇಲಾಖೆಯ ಮೇಲೆ ಗ್ರಾಮಸ್ಥರು ಹರಿಹಾಯುತ್ತಿದ್ದಾರೆ.
ಗ್ರಾಮದ ಹತ್ತಿರವಿರುವ 100.ಕೆ.ವಿ. ವಿದ್ಯುತ್ ಪರಿವರ್ತಕದಿಂದ ಒಟ್ಟು 7 ವಿದ್ಯುತ್ ಪರಿವರ್ತಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು,  ಗ್ರಾಮದ 180 ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ,  ಆಕಸ್ಮಿಕವಾಗಿ 100.ಕೆ.ವಿ ವಿದ್ಯುತ್ ಪರಿವರ್ತಕ ಕುಸಿದು ಬಿದ್ದರೆ ಈ ಭಾಗದ ರೈತರ ಜಮೀನಿನಲ್ಲಿರುವ ಪಂಪ್ಸೆಟ್ಗಳು ಹಾಗೂ ಮನೆಗಳ ಸಂಪರ್ಕ ಕಡಿತವಾಗಿ ಲಕ್ಷಾಂತರ ರೂಪಾಯಿ ನಷ್ಠವಾಗಲಿದೆ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದು,  ಸ್ಥಳಕ್ಕೆ ಭೇಟಿ ನೀಡಿ ಹೋದ ಅಧಿಕಾರಿಗಳು ಇಲ್ಲಿಯವರಿಗೂ ಕ್ರಮ ಕೈಗೊಂಡಿಲ್ಲವೆಂದು  ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ವಿದ್ಯುತ್ ಪರಿವರ್ತಕಕ್ಕೆ ಉತ್ತಮ ಕಂಬಗಳನ್ನು ಒದಗಿಸಿ ಜನ-ಜಾನುವಾರುಗಳ ಪ್ರಾಣ ಉಳಿಸುವಂತೆ ಗ್ರಾಮಸ್ಥರು ಸಂಬಂಧಿಸಿದ  ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. 
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾ.ಪಂ.ಸದಸ್ಯ ಲಿಂಗರಾಜು ಮಾತನಾಡಿ, ವಿದ್ಯುತ್ ಪರಿವರ್ತಕದ ಕಂಬ ಮುರಿದಿರುವ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದೇವೆ, ಅಧಿಕಾರಿಗಳು ತಿಪಟೂರಿನಲ್ಲಿ ಎಸ್ಟಿಮೇಟ್ ಆಗಬೇಕು ನೀವೇ ಹೋಗಿ ಎಂದು ಹೇಳುತ್ತಾರೆ, ತಿಪಟೂರಿಗೂ ಊರಿನ ಗ್ರಾಮಸ್ಥರು ಸೇರಿ ಹೋದೆವು ಅಲ್ಲಿ  ಅಧಿಕಾರಿಗಳು ನಮಗೆ ಸ್ಪಂದಿಸುವುದಿಲ್ಲ, ಅಧಿಕಾರಿಗಳು  ಕಛೇರಿಯಲ್ಲಿದ್ದರೂ ನಮ್ಮ ಸಮಸ್ಯೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಗ್ರಾಮಸ್ಥ ಕುಮಾರಸ್ವಾಮಿ ಮಾತನಾಡಿ, ಕೆ.ಇ.ಬಿಗೆ ಹೋಗಿ ಊರಿನ ವಿದ್ಯುತ್ ಸಮಸ್ಯೆ ಬಗ್ಗೆ ಹಲವಾರು ಬಾರಿ ತಿಳಿಸಿದ್ದೇವೆ, ಯಾವ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥ ಚಂದ್ರಯ್ಯ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಕಛೇರಿಗೆ ಹೋಗಿ ಸಮಸ್ಯೆ ಬಗ್ಗೆ ತಿಳಿಸಿದರೆ ವಾರದೊಳಗೆ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ ಆದರೆ ತಿಂಗುಳುಗಳು ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದರು.


ನವಂಬರ್ ತಿಂಗಳಿನಲ್ಲೇ ವಿದ್ಯುತ್ ಪರಿವರ್ತಕ ಮುರಿದಿರುವ ಬಗ್ಗೆ ಬೆಸ್ಕಾಂ ಸಹಾಯಕ ಇಂಜನಿಯರ್ರವರಿಗೆ ಕಛೇರಿಗೆ ಹೋಗಿ ತಿಳಿಸಿದರೂ ಯಾರೂ ಕೂಡ ಇತ್ತ ಗಮನ ಹರಿಸಿಲ್ಲ, ತಾತ್ಕಾಲಿಕವಾಗಿ ಇರಲಿ ಎಂದು ಗ್ರಾಮಸ್ಥರೇ ಸೇರಿ ಪರಿವರ್ತಕಕ್ಕೆ ಮರದ ಊರುಗೋಲನ್ನು ಸಹಾಯಕ್ಕೆ ನಿಲ್ಲಿಸಿದ್ದೇವೆ, ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಾದರೆ ಲೈನ್ಮೆನ್ ಕೂಡ ಬರುವುದಿಲ್ಲ, ಲೈನ್ಮೆನ್ಗೆ  ಈ ಬಗ್ಗೆ ಕೇಳಿದರೆ ಅಧಿಕಾರಿಗಳ ಬಳಿ ವಿಚಾರಿಸಿ ಎನ್ನುತ್ತಾರೆ ಎಂದು ದೂರಿದರು.
 (ಗ್ರಾಮಸ್ಥ ನಿಜಾನಂದಮೂತರ್ಿ 

ಶೆಟ್ಟಿಕೆರೆಯಲ್ಲಿ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.06 : ತಾಲ್ಲೂಕಿನ ಶೆಟ್ಟಿಕೆರೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದ್ದು ಮನೆಯಲ್ಲಿದ್ದ  1ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳರು ದೋಚಿದ್ದಾರೆ.
ಶೆಟ್ಟಿಕೆರೆವಾಸಿ  ಪ್ರಕಾಶ್ ಎಂಬುವವರು ಹೊಸದುರ್ಗಕ್ಕೆ ಸಂಬಂಧಿಕರ ಮನೆಗೆ ಕುಟುಂಬ ಸಮೇತರಾಗಿ ಮದುವೆಗೆ ಹೋದಾಗ ಈ ಕೃತ್ಯ ನಡೆದಿದೆ.  ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಧೃಡಪಡಿಸಿಕೊಂಡು, ಮಂಗಳವಾರ ರಾತ್ರಿ ಮನೆಯ ಮುಂಭಾಗದ ಬಾಗಿಲು ಹೊಡೆದು ಒಳನುಗಿರುವ ಕಳ್ಳರು ಮನೆಯಲ್ಲಿ 5ಚಿನ್ನದ ಉಂಗುರ, ಬೆಳ್ಳಿಯ ಒಡವೆಗಳು ಹಾಗೂ ನಗದು ದೋಚಿಕೊಂಡು  ಪರಾರಿಯಾಗಿದ್ದಾರೆ. ಚಿಕ್ಕನಾಯಕನಹಳ್ಳಿಯ ಉಪ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ಪತ್ರ ಬರಹಗಾರರಾಗಿರುವ ಪ್ರಕಾಶ್, ಪೊಲೀಸರಿಗೆ ದೂರು ನೀಡಿದ್ದಾರೆ. 
ಸ್ಥಳಕ್ಕೆ ಸಿಪಿಐ ಮಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂದಿಕೆರೆಯ ಗೌರಸಾಗರ ರಸ್ತೆ ಗುಂಡಿಗಳ ತಾಣ
ಚಿಕ್ಕನಾಯಕನಹಳ್ಳಿ06:  ಕಂದಿಕೆರೆ ಹೋಬಳಿಯ ಗೌರಸಾಗರ ರಸ್ತೆ ಹದಿನೈದು ವರ್ಷಗಳಿಂದ ಯಾವುದೇ ದುರಸ್ಥಿಯನ್ನೇ ಕಾಣದೆ,  ಗುಂಡಿಗಳಿಂದ ಕೂಡಿರುವ ರಸ್ತೆಯಿಂದ ಜನ ಬೇಸತ್ತು ಹೋಗಿದ್ದಾರೆ. 
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಗೌರಸಾಗರ, ಉಪಲೀಕನಹಳ್ಳಿ, ರಾಮಪ್ಪನ ಹಟ್ಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳು ದುರಸ್ಥಿಯನ್ನು ಕಾಣದೇ ಕೂಡಿದ್ದು ಸುಮಾರು 15ವರ್ಷದಿಂದ ಯಾವುದೇ ದುರಸ್ಥಿಯನ್ನು ಕಂಡಿಲ್ಲ.  ಈ ಗ್ರಾಮಗಳಿಗೆ ಒಂದ ಸುವ್ಯವಸ್ಥಿತವಾದ ರಸ್ತೆ ಇಲ್ಲದೇ ಪ್ರತಿದಿನ ವೃದ್ದರು, ಮಕ್ಕಳು, ಅಪಘಾತಕ್ಕಿಡಾಗುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ತಲೆಕೆಡಿಸಿಕೊಂಡಿಲ್ಲ ಈ ಬಗ್ಗೆ ಗ್ರಾಮಸ್ಥರು ಅನೇಕಬಾರಿ ಮನವಿ ಮಾಡಿರುವುದಾಗಿ ತಿಳಿಸಿದರು.
ಮಾಧ್ಯಮದೊಂದಿಗೆ  ಮಾತನಾಡಿದ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಜಯರಾಮಯ್ಯ ನಾವು ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಗ್ರಾಮಗಳಿಗೆ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲ ರಸ್ತೆಯು ಸರಿಯಾಗಿಲ್ಲ ರಸ್ತೆಯಲ್ಲಿ ನಡೆದು ಕೊಂಡು ಹೋಗಲು ಸಾದ್ಯವಾಗದಷ್ಟು ಹಾಳಾಗಿದ್ದು, ದ್ವಿಚಕ್ರ ವಾಹನದವರು, ಆಟೋದವರು ಪ್ರತಿನಿತ್ಯ ಹರಸಾಸಹ ಪಡುವಂತಾಗಿದೆ. ಆದ್ದರಿಂದ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಸರಿಪಡಿಸ ಬೇಕೆಂದು ಒತ್ತಾಯಿಸಿದರು.
ಈ ಭಾಗದ ಕಂದಿಕೆರೆ ಗ್ರಾಮಪಂಚಾಯಿತಿ ಸದಸ್ಯ ಶಾನುವುಲ್ಲಾಖಾನ್ ಪ್ರತಿಕ್ರಿಯಿಸಿ ರಸ್ತೆಯ ದುರಸ್ಥಿಯ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಮುಂದಿನ ದಿನಗಳಲ್ಲಿ ನಮ್ಮಊರು ನಮ್ಮ ರಸ್ತೆಯಡಿ ದುರಸ್ಥಿ ಮಾಡಿಸಿರುವುದಾಗಿ ತಿಳಿಸಿದರು.
ಗ್ರಾಮಸ್ಥ ಜಿ.ಹೆಚ್ ರಂಗಚಾರ್ ಮಾತನಾಡಿ ಪ್ರತಿನಿತ್ಯ ಯಾರಾದರೊಬ್ಬರು ಈ ರಸ್ಥೆಯಲ್ಲಿ ಬಿಳುತ್ತಲೇ ಇರುತ್ತಾರೆ ಯಾವುದಾದರು ತೊಂದರೆಯಾದರೆ ಇಲ್ಲಿಂದ ಮುಖ್ಯರಸ್ಥೆಯಾದ ಹುಳಿಯಾರು ರಸ್ತೆಗೆ ಇಲ್ಲವೇ ಕಂದಿಕೆರೆ ರಸ್ತೆಗೆ ಹೋಗಲು ಸುಮಾರು 1ಗಂಟೆಯಾಗುತ್ತದೆ ಅದ್ದರಿಂದ ಕೂಡಲೇ ಈ ರಸ್ಥೆಯನ್ನು ಸರಿಪಡಿಸ ಬೇಕು ಈ ಬಗ್ಗೆ ತಿಳಿಸಿದ್ದು ರಸ್ತೆ ದುರಸ್ಥಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದರು.

ಮಗಳ ಮದುವೆಯ ಮುನ್ನಾದಿನ ವಧುವಿನ ತಾಯಿ 


ಆತ್ಮಹತ್ಯೆ
ಚಿಕ್ಕನಾಯಕನಹಳ್ಳಿ06: ಮಗಳ ಮದುವೆಯ ಮುನ್ನಾದಿನ ವಧುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಮ್ಮನಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಖಮರುನ್ನೀಸಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,  ಮಗಳ ಮದುವೆಯನ್ನು ತನ್ನ ತಂಗಿಯ ಮಗನ ಜೊತೆ ನಿಶ್ಚಿಯಿಸಿದ್ದರು, ಆದರೆ ವಧು ಬೀಬಿ ಆಯಿಷಾಳಿಗೆ ಒಪ್ಪಿಗೆ ಇಲ್ಲದಿದ್ದರಿಂದ ಮದುವೆಯ ವಿಷಯದಲ್ಲಿ ಕುಟುಂಬದಲ್ಲಿ ಉಂಟಾದ ಕಲಹದಿಂದ ಬೇಸತ್ತು ಖಮರುನ್ನೀಸಾ ವಿಷ ಸೇವಿಸಿದ್ದಾಳೆ.  
ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನ ಹೊಂದಿದ್ದಾರೆ ಈ ಸಂಬಂಧ ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Wednesday, December 30, 2015


2015ನೇ ವರ್ಷದಲ್ಲಿನ ಚಿಕ್ಕನಾಯಕನಹಳ್ಳಿಯ ಹೈಲೈಟ್ಸ್
ಚಿಕ್ಕನಾಯಕನಹಳ್ಳಿ,ಡಿ.30 : 2015ನೇ ವರ್ಷ ತಾಲ್ಲೂಕಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿತ್ತು, ಈ ವರ್ಷದಲ್ಲಿ ಸಂಘ ಸಂಸ್ಥೆಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ನಡೆಸಿ ಸಾರ್ವಜನಿಕರಿಗೆ ಮನರಂಜನೆ ನೀಡಿದವು, ತಾಲ್ಲೂಕಿಗೆ ರಾಜ್ಯ ಮಟ್ಟದ ನಾಯಕರು ಆಗಮಿಸಿದ್ದರು, ಕಳ್ಳತನ, ಕೊಲೆ ಅಪರಾಧಗಳು, ಜಾತಿ ವೈಷಮ್ಯದಿಂದಾದ ಗಲಭೆ ಪ್ರಕರಣಗಳು ನಡೆದವು, ಕುರಿಗಳಿಗೆ ಉಂಟಾದ ನೀಲಿನಾಲಿಗೆ ರೋಗ, ಇಪ್ಪತ್ತು ದಿನಗಳ ಕಾಲ ಸುರಿದ ಮಳೆಯಿಂದಾಗಿ ರಾಗಿ ಬೆಳೆ ನಾಶವಾಗಿ ರೈತರಿಗೆ ಆಥರ್ಿಕ ಸಮಸ್ಯೆ ಎದುರಾಯಿತು. 
ಜನವರಿ-2015 : ಜನವರಿಯಲ್ಲಿ ಅಂತರ್ಜಿಲ್ಲಾ ಹೊನಲು ಬೆಳಕಿನ ಚಿಕ್ಕನಾಯಕ ಕಪ್ ಕಬಡ್ಡಿ ಲೀಗ್ ನಡೆದು ಅತ್ಯುತ್ತಮವಾಗಿ ನಡೆದು ಬೆಂಗಳೂರಿನ ಹೆಚ್.ಎ.ಎಲ್. ತಂಡ ಪ್ರಶಸ್ತಿ ಗಳಿಸಿತು, ರೈತರ ಬೇಡಿಕೆ ಈಡೇರಿಸುವಂತೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ, ಸಾಹಿತಿಗಳು, ಪ್ರಗತಿಪರ ಹೋರಾಟಗಾರರ ಬೆಂಬಲ, ಸಚಿವ ಜಯಚಂದ್ರರ ಭರವಸೆ ನಂತರ ಹಿಂಪಡೆದ ಧರಣಿ,  ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಯಶಸ್ವಿ, ಗಣರಾಜ್ಯೋತ್ಸವದಲ್ಲಿ ಪ್ರತಿಭಾವಂತರಿಗೆ ಸನ್ಮಾನ, 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಗಂಗಾಧರಯ್ಯ ಆಯ್ಕೆ, ಯಶಸ್ವಿಯಾದ ಸಮ್ಮೇಳನ.
ಫೆಬ್ರವರಿ-2015 : ತಾಲ್ಲೂಕಿನ ರೈತರ ಮನೆಗಳಿಗೆ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವಿರೇಂದ್ರಹೆಗ್ಗಡೆ ಭೇಟಿ, ಬೆಳೆಯ ಪರಿಶೀಲನೆ, ಪಟ್ಟಣದ ಕಂಬಳಿ ಸೊಸೈಟಿಯ ಬಳಿಯಲ್ಲಿರುವ ತಂಗುದಾಣದಲ್ಲಿ ವ್ಯಕ್ತಿಯ ನಿಗೂಡ ಕೊಲೆ, ಬ್ರಾಹ್ಮಣರ ಬೀದಿಯ ವೃದ್ದೆಯ ಮೇಲಿದ್ದ ವಡವೆಗಳ ಕಳ್ಳತನ, ತಾಲ್ಲೂಕು ಪಂಚಾಯ್ತಿಯಲ್ಲಿ ತಾ.ಪಂ.ಸದಸ್ಯರ ಕೋರಂ ಕೊರತೆಯಿಂದಾಗಿ ಸಭೆ ನಡೆಯದೇ ಹೋಳಿಗೆ ಊಟ ಮಾಡಿ ವಾಪಾಸದ ತಾ.ಪಂ.ಸದಸ್ಯರು, ಜಾತಿ ಧರ್ಮಗಳ ಆಚೆಗಿನ ವಿಚಾರ ಎಂಬ ಕಾರ್ಯಕ್ರಮ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಕಾರ್ಯಕ್ರಮದಲ್ಲಿ ಭಾಗಿ, 
ಮಾಚರ್್-2015 : ಗೋಡೆಕೆರೆಯ ಸಿದ್ದರಾಮೇಶ್ವರ ದೇವಾಲಯದಲ್ಲಿ ವ್ಯಕ್ತಿ ಕೊಲೆ, ಹುಂಡಿ ಹಣ ಕಳ್ಳತನ, ಸಹಕಾರಿ ಸಂಘಗಳ ಚುನಾಯಿತ ಸದಸ್ಯರಿಗೆ ಅಭಿನಂದನಾ ಸಮಾರಂಭ, ಪಂಡಿತ್ ಪುಟ್ಟರಾಜಗವಾಯಿಗಳವರ ಜನ್ಮಶತಮಾನೋತ್ಸವ ಕಾರ್ಯಕ್ರಮ, ಸಿ.ಡಿ.ರವಿ ಹತ್ಯೆ ಖಂಡಿಸಿ ಹಲವು ಸಂಘ ಸಂಸ್ಥೆಗಳ ಪ್ರತಿಭಟನೆ. ಹಂದನಕೆರೆಯಲ್ಲಿ ಅಕ್ರಮ ಮರಳು ಸಾಗಾಣಿಕೆ.
ಏಪ್ರಿಲ್-2015 : ಕುರುಬರಹಳ್ಳಿಯಲ್ಲಿ ವಿದ್ಯುತ್ ಶಾಕ್ನಿಂದ ಲೈನ್ಮೆನ್ ಸಾವು, ನಾನು ಅವನಲ್ಲ ಅವಳು ಖ್ಯಾತಿಯ ನಟ ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಜಯ್ ಮತ್ತು ಬಿ.ಎಸ್.ಲಿಂಗದೇವರಿಗೆ ನವೋದಯ ಕಾಲೇಜ್ನಲ್ಲಿ ಸನ್ಮಾನ, ಹೇಮಾವತಿ ನೀರಿಗಾಗಿ ದಬ್ಬೆಘಟ್ಟ ಬಸವರಾಜುರವರಿಂದ ಅರೆಬೆತ್ತಲೆ ಪ್ರತಿಭಟನೆ, ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ, ಕನ್ನಡ ಸಂಘದ ವೇದಿಕೆಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅನುದಾನದಲ್ಲಿ ಮೇಲ್ಚಾವಣಿ ನಿಮರ್ಾಣ.
ಮೇ-2015 : ತಿಮ್ಮನಹಳ್ಳಿಯಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಎಸ್.ಪಿ.ಕಾತರ್ಿಕ್ರೆಡ್ಡಿ ಭೇಟಿ, ಸೋಮನಹಳ್ಳಿಗೆ ಆನಂದಗುರೂಜಿ ಭೇಟಿ, ವೃದ್ದೆ ಮೇಲೆ ಕರಡಿ ದಾಳಿ, ತಾಲ್ಲೂಕಿನ ರೋಟರಿ ಶಾಲೆಯ ಹಾಗೊ ಮೊರಾಜರ್ಿ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ಕೇಂದ್ರ ವಲಯ ಐಜಿಪಿ ಅರುಣ್ಚಕ್ರವತರ್ಿ ತಾಲ್ಲೂಕಿನ ಪೋಲಿಸ್ ಠಾಣೆಗಳಿಗೆ ಭೇಟಿ, ಪರಿಶೀಲನೆ, ಪಟ್ಟಣದ ದೇವಾಲಯಗಳಲ್ಲ ಸರಣಿ ಕಳ್ಳತನ.
ಜೂನ್-2015 : ಗ್ರಾಮ ಪಂಚಾಯಿತಿ ಚುನಾವಣೆ, ಕಂದಿಕೆರೆಯಲ್ಲಿ ಸಮರ್ಪಕ ವಿದ್ಯುತ್ಗಾಗಿ ಪ್ರತಿಭಟನೆ, ಜಿಲ್ಲಾ ಡಿಸಿಸಿ ಬ್ಯಾಂಕ್ಗೆ ಅವಿರೋಧವಾಗಿ ಸಿಂಗದಹಳ್ಳಿರಾಜ್ಕುಮಾರ್ ಪುನರಾಯ್ಕೆ, ಸಾಲ್ಕಟ್ಟೆಯಲ್ಲಿ ಮೀನುಗಳ ಮಾರಣ ಹೋಮ, ತಿಮ್ಮನಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥೆ ಯುವತಿಯನ್ನು ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಚಿಕಿತ್ಸೆಗೆ , ಹಂದನಕೆರೆಯಲ್ಲಿ ಕುರಿಆಡು ಸಾಕಾಣಿಕೆ ಸವಾಲುಗಳ ಕಾರ್ಯಕ್ರಮ, ಪಟ್ಟಣದ ಕುರುಬರಹಳ್ಳಿಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಕುರಿಗಳ ಮಾರಣ ಹೋಮ, ಚಿಕ್ಕನಾಯಕ ಪ್ರೀಮಿಯರ್ ಲೀಗ್ ಗೆದ್ದ ಯದುಯಾಕರ್್ಸರ್್ ಕ್ರಿಕೆಟ್ ಟೀಮ್, ಸಮಾಜ ಸೇವಕ ಕಣ್ಣಯ್ಯ ನಿಧನ, ಗಣ್ಯರ ಸಂತಾಫ, ಹಳೆಕುರುಬರಶ್ರೇಣಿ ಶಾಲೆ ಬೀದಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರಸ್ತೆ ನಾಮಕರಣ. 
ಜುಲೈ-2015 : ಗ್ರಾಮ ಪಂಚಾಯಿತಿಗೆ ನೂತನ ಸದಸ್ಯರ ಆಯ್ಕೆ, ಮಳೆಗಾಗಿ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಕೆಂಕೆರೆ ಪುರದ ಮಠದಲ್ಲಿ ಡಾ.ಯತೀಶ್ವರಶಿವಾಚಾರ್ಯಸ್ವಾಮಿಗಳ ವಿಶೇಷ ಪೂಜೆ, ಬಿಜೆಪಿ ಕಾರ್ಯಕರ್ತರ ಸಭೆಗೆ ಯಡಿಯೂರಪ್ಪ ಭೇಟಿ, ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ, ಸಂಘ-ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮ. 
ಆಗಸ್ಟ್-2015 : ಎ.ಪಿ.ಜೆ ಅಬ್ದುಲ್ ಕಲಾಂ ನಿಧನಕ್ಕೆ ಸಂಘ, ಸಂಸ್ಥೆಗಳ ಸಂತಾಪ, ಪಟ್ಟಣದ ಶಿಕ್ಷಕ ಶಿವಣ್ಣರವರ ಮನೆ ಕಳ್ಳತನ, ಜೆ.ಸಿ.ಪುರದಲ್ಲಿ ಪೈಲ್ಲೈನ್ ರಂದ್ರಕ್ಕೆ ಪಟ್ಟಣದ ಪುರಸಭೆಯಲ್ಲಿ ಗದ್ದಲ, ಸ್ವಾಮೀಜಿಗಳ ನೇತೃತ್ವದಲ್ಲಿ ಹೇಮಾವತಿ ನಾಲಾ ಕಾಮಗಾರಿ ಪ್ರಾರಂಭಿಸಲು ಚಿ.ನಾ.ಹಳ್ಳಿಯಿಂದ ಕೆ.ಬಿ.ಕ್ರಾಸ್ವರೆಗೆ ಪಾದಯಾತ್ರೆ, ಬೈಪಾಸ್ ರಸ್ತೆ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಾರ್ವಜನಿಕರ ಸಭೆ, ಎಂ.ವಿ.ನಾಗರಾಜ್ರಾವ್ರವರ ಅಮೃತಮಹೋತ್ಸವ ಕಾರ್ಯಕ್ರಮ.  
ಸೆಪ್ಟೆಂಬರ್-2015 : ಶ್ರೀ ಕೃಷ್ಣ ಜಯಂತಿ ಅಂಗವಾಗಿ ಯುವಕರಿಗೆ ಮಡಕೆ ಹೊಡೆಯುವ ಸ್ಪಧರ್ೆ, ಮಕ್ಕಳ ಕೃಷ್ಣ ವೇಷ ಸ್ಪಧರ್ೆ, ಮಹಾಲಕ್ಷ್ಮೀ ಬಡಾವಣೆಯಲ್ಲಿ ರಸ್ತೆಗೆ ಅಡ್ಡಲಾಗಿ ಸುರಿದಿದ್ದ ಮಣ್ಣನ್ನು ತೆರವುಗೊಳಿಸಿದ ಅಧಿಕಾರಿಗಳು, ಕನರ್ಾಟಕ ಸಾಹಿತ್ಯ ಅಕಾಡೆಮಿ ನೀಡುವ ಮಧುರ ಚೆನ್ನ ದತ್ತಿ ನಿಧಿ ಪ್ರಶಸ್ತಿಯನ್ನು ತಾಲ್ಲೂಕಿನ ಮಾಕಳ್ಳಿ ಗ್ರಾಮದ ಯುವ ಬರಹಗಾತರ್ಿ ಸ್ಮಿತರವರಿಗೆ ನೀಡಲಾಗಿತ್ತು. ಪೋಲಿಸ್ ಸಮುದಾಯ ಭವನ ಉದ್ಘಾಟನೆ ಐಜಿಪಿ ಅರುಣ್ಚಕ್ರವತರ್ಿ ಭೇಟಿ, ಜೆ.ಸಿ.ಪುರದಲ್ಲಿ ಹೊಡೆದಿದ್ದ ಹೇಮಾವತಿ ಪೈಪ್ಲೈನ್ಗೆ ಪುರಸಭೆಯಿಂದ ವೆಲ್ಡಿಂಗ್, ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ, ನಾನು ಅವನಲ್ಲ ಅವಳು ಚಿತ್ರ ವೀಕ್ಷಿಸಿದ ತಾಲ್ಲೂಕಿನ ಸ್ವಾಮಿಜಿಗಳು.
ಅಕ್ಟೋಬರ್-2015 : ತುಮಕೂರಲ್ಲಿ ಕೊಲೆಯಾದ ವ್ಯಕ್ತಿಯ ಪೋಸ್ಟ್ಮಾಟಂ ಆಗದೆ ಚಿ.ನಾ.ಹಳ್ಳಿಯಲ್ಲಿ ಸಮಾಧಿ ಮಾಡಿದ್ದ ಶವವನ್ನು ಹೊರತೆಗೆದ ಪೋಲಿಸರು, ಪಟ್ಟಣದಲ್ಲಿ ದೇವರ ಮೆರವಣಿಗೆ ಕೊಂಡೊಯ್ಯಲು ಕುರುಬ-ಬಲಿಜ ಜನಾಂಗದ ನಡುವೆ ಘರ್ಷಣೆ, ಗಲಭೆ ವ್ಯಕ್ತಿಗಳ ಬಂಧನ, ಎರಡು ಸಮಾಜಗಳ ನಡುವೆ ಪೋಲಿಸರ ಶಾಂತಿ ಸಭೆ, ರೈತ ಅನುವುಗಾರರ ಪ್ರತಿಭಟನೆ, ಸರ್ವಧಮರ್ೋತ್ಸವ ಸಮ್ಮೇಳನ, ಲೋಕಾಯುಕ್ತರ ಕುಂದುಕೊರತೆ ಸಭೆ.
ನವಂಬರ್-2015 : ಹಂದನಕೆರೆಯಲ್ಲಿ ವೃದ್ದ ದಂಪತಿ ನಿಗೂಡ ಕೊಲೆ, ತಾಲ್ಲೂಕಿನ ಗ್ರಾಮ ರಸ್ತೆ ಡಾಂಬರೀಕರಣಕ್ಕೆ ಚಾಲನೆ, ಮಕ್ಕಳ ದಿನಾಚಾರಣೆ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಮಕ್ಕಳಿಂದ ಭಾಷಣ, ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಮುಖಂಡರುಗಳಿಂದ ತಾಲ್ಲೂಕು ಭೇಟಿ, ಅಗ್ನಿಶಾಮಕ ಸಿಬ್ಬಂದಿಯಿಂದ ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ, ಹೆಚ್ಚು ಮಳೆ ರಾಗಿ ಬೆಳೆ ನಾಶ.
ಡಿಸಂಬರ್-2015 :  ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ತಾಲ್ಲೂಕಿನ ಮಕ್ಕಳು ಆಯ್ಕೆ, ವ್ಯಾಪಕವಾಗಿ ಹರಡಿದ ಕುರಿಗಳಿಗೆ ನೀಲಿನಾಲಗೆ ರೋಗ, ವಿಧಾನ ಪರಿಷತ್ ಚುನಾವಣೆಯ ಅಭ್ಯಥರ್ಿಗಳಿಂದ ಪ್ರಚಾರ ಭರಾಟೆ, ಕಾತರ್ಿಕಮಾಸದ ಅಂಗವಾಗಿ ದೇವಾಲಯಗಳಲ್ಲಿ ದೀಪೋತ್ಸವ, ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವ, ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚುನಾವಣಾ ಪ್ರಚಾರ, ಕುಪ್ಪೂರು ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಿತು. ಜೆಡಿಎಸ್ ಅಭ್ಯಥರ್ಿ ಬೆಮೆಲ್ ಕಾಂತರಾಜು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು.


ರೈತರು ಮೇವು ಸ್ವಾವಲಂಬನೆ ಸಾಧಿಸಬೇಕು
ಚಿಕ್ಕನಾಯಕನಹಳ್ಳಿ,ಡಿ.30 : ರೈತರು ಮೇವು ಸ್ವಾವಲಂಭನೆ ಸಾಧಿಸಿದಾಗ ಮಾತ್ರ ಹೈನುಗಾರಿಕೆ ಲಾಭದಾಯಕ ಕಸುಬು ಆಗಬಲ್ಲದು ಎಂದು ಕೇಂದ್ರೀಯ ಮೇವು ಬೀಜ ಉತ್ಪಾಧನಾ ಕೇಂದ್ರ ನಿದರ್ೇಶಕ ಎ.ಬಾಲಸುಬ್ರಮಣ್ಯನ್ ಹೇಳಿದರು.
  ತಾಲ್ಲೂಕಿನ ಮುದ್ದೇನಹಳ್ಳಿ ರೈತ ವಿರಭದ್ರಯ್ಯ ಅವರ ತೋಟದಲ್ಲಿ ಬುಧವಾರ ಸುಧಾರಿತ ಮೇವು ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ರೈತರು ಹಾಲು ಉತ್ಪಾಧನೆಯಿಂದ ಬರುವ ಆಧಾಯದ ಶೇ.70 ಭಾಗ ಕೃತಕ ಆಹಾರ ಕಂಪನಿಗಳ ಪಾಲಾಗುತ್ತಿದೆ, ರಾಸುಗಳ ಲಾಲನೆ-ಪಾಲನೆ, ರೈತರ ಶ್ರಮ ಲೆಕ್ಕ ಹಾಕಿದರೆ ರೈತರು ಶೇ.15ರಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದರು.
  1979ರಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ ಸ್ಥಾಪಿತವಾಗಿರುವ ಕೇಂದ್ರೀಯ ಮೇವು ಬೀಜ ಉತ್ಪಾಧನೆ ಕೇಂದ್ರ ಮೇವು ಸ್ವಾವಲಂಭನೆ ಸಾಧಿಸಲು ರೈತರಿಗೆ ನೆರವು ಆಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ, ಈ ವರ್ಷ ದಕ್ಷಿಣ ಭಾರತದ 5 ರಾಜ್ಯಗಳಾದ ಕನರ್ಾಟಕ, ಕೇರಳ, ತಮಿಳುನಾಡು, ಆಂದ್ರ ಮಧ್ಯಪ್ರದೇಶಗಳಲ್ಲಿ 1200 ಮಾಧರಿ ಮೇವು ತಾಕುಗಳನ್ನು ನಿಮರ್ಾಣ ಮಾಡುವ ಗುರಿ ಹೊಂದಿದೆ. ಕನರ್ಾಟಕದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಈ ಯೋಜನೆಗೆ ಆಯ್ಕೆಯಾಗಿದ್ದು 200 ಮಾಧರಿ ತಾಕುಗಳನ್ನು ತಾಲ್ಲೂಕಿನಲ್ಲಿ ನಿಮರ್ಿಸಲಾಗಿದೆ ಎಂದರು.
   ಮಳೆ ಆಶ್ರಿತ ಪ್ರದೇಶಕ್ಕೆ ಸೂಕ್ತವಾದ ಗಿನಿಯಾ ಮೆಕುನಿ ಹಾಗೂ ಕೆಲಿಡಿ ಕೊತ್ತಂಬರಾ ಜಾತಿಯ ಮೇವಿನ ಬೀಜವನ್ನು ತಾಲ್ಲೂಕಿನ ಮಾಧರಿ ತಾಕುಗಳಲ್ಲಿ ಬಿತ್ತಲಾಗಿದೆ. ಬಿತ್ತನೆ ಮಾಡಿದ 50 ದಿವಸಕ್ಕೆ ಕಟಾವಿಗೆ ಬರುತ್ತದೆ. ಕಟಾವು ಮಾಡಿದಂತೆ ಮತ್ತೆ ಚಿಗುರುವ ಗುಣ ಇರುವ ಈ ಪ್ರಬೇಧ ನಿರಂತರವಾಗಿ 15ರಿಂದ 20 ವರ್ಷ ರಾಸುಗಳಿಗೆ ಮೇವ ಒದಗಿಸಬಲ್ಲದು. ನೀರಾವರಿ ಹಾಗೂ ಮಳೆ ಆಶ್ರಿತ ತಾಕುಗಳಲ್ಲಿ ಬೆಳೆಯಬಲ್ಲ ಈ ಮೇವು ಬಯಲು ನಾಡಿನ ರೈತರ ಮೇವು ಸ್ವಾವಲಂಭನೆಗೆ ಸಹಕಾರಿಯಾಗಲಿದೆ ಎಂದರು. 
   ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಶು ಇಲಾಖೆ ಸಹಾಯಕ ನಿದರ್ೇಶಕ ಡಾ.ಜಿ.ಕೆ.ನಾಗರಾಜು ಮಾತನಾಡಿ, ಮೇವಿನ ಕ್ರಾಂತಿ ಕ್ಷೀರಕ್ರಾಂತಿಯ ತಾಯಿ, ಈ ಯೋಜನೆಯನ್ನು ಪಶು ಇಲಾಖೆ ಹಾಗೂ ಹಂದನಕೆರೆ ರೇವಣಸಿದ್ಧೇಶ್ವರ ಕುರಿಗಾಹಿಗಳ ಸಹಕಾರ ಸಂಘ ಸೋಯುಕ್ತವಾಗಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುತ್ತಿವೆ ಎಂದರು.
 ಈ ಸಂದರ್ಭದಲ್ಲಿ ರೈತ ವೀರಭದ್ರಪ್ಪ, ಡಾ.ಅಜಿತ್, ಡಾ.ಸಂಜಯ್, ಡಾ.ತಿಮ್ಮರಾಜು, ಡಾ.ರಘುಪತಿ, ಹುಳಿಯಾರ್ ರಾಜಪ್ಪ ಮುಂತಾದವರು ಇದ್ದರು.




Tuesday, December 29, 2015


ಓದು, ಬರಹ ಅಭಿವ್ಯಕ್ತಿಗೆ ಪೂರಕವಾದ ವಾತಾವರಣ ಅಗತ್ಯ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಡಿ.29 : :ಶಾಲಾ ಕಲಿಕೆ ಓದು, ಬರಹ ಹಾಗೂ ಅಭಿವ್ಯಕ್ತಿಗೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸಲು ಶಿಕ್ಷಕರು ಸೃಜನಾತ್ಮಕವಾಗಿ ಚಿಂತಿಸುವ ಅಗತ್ಯ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಬಿಆರ್ಸಿ ಸಭಾಂಗಣದಲ್ಲಿ ನಡೆದ ಓದು ಬರಹ ಮತ್ತು ಅಭಿವ್ಯಕ್ತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಮಾಹಿತಿ ತುಂಬುವುದಕ್ಕಿಂತ ಭಾವನಾತ್ಮಕ ವಾತಾವರಣ ನಿಮರ್ಿಸಿವುದು ಮುಖ್ಯ, ಚಿಕ್ಕಂದಿನಲ್ಲೇ ಭಾವನೆಗಳನ್ನು ಸಂಭಾಳಿಸುವ ಕಲೆ ಕರಗತ ಮಾಡಿಕೊಂಡ ಮಕ್ಕಳು ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದರು.
ಸಕರ್ಾರ ಜಾರಿಗೆ ತಂದಿರುವ ನಲಿ-ಕಲಿ ಪದ್ದತಿ ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ಒತ್ತು ಕೊಡಲು ರೂಪಿಸಿರುವ ಪದ್ದತಿ, ಪ್ರಾಥಮಿಕ ಹಂತದಲ್ಲಿ ಕಲಿಸುವ ಜವಾಬ್ಧಾರಿ ಹೊತ್ತಿರುವ ಶಿಕ್ಷಕರು ಇದನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು. 
     ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಪರಶಿವಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.


ರೈತ ಅನುವುಗಾರರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮನವಿ
ಚಿಕ್ಕನಾಯಕನಹಳ್ಳಿ,ಡಿ.29 : ಕೃಷಿ ಇಲಾಖೆ ಮತ್ತು ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಅನುವುಗಾರರ ಜೀವನ ಮತ್ತು ಅವರ ಕುಟುಂಬಗಳ ಪರಿಸ್ಥಿತಿ ಅತಂತ್ರವಾಗಿದೆ ಎಂದು ರೈತ ಅನುವುಗಾರರ ಸಂಘದ ಜಿಲ್ಲಾ ಕಾರ್ಯದಶರ್ಿ ಗಂಗಪ್ಪ ಹೇಳಿದರು.
ಇತ್ತೀಚೆಗೆ ತಾಲ್ಲೂಕಿನ ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತ ಅನುವಾಗರರ ಸಂಘ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯ ಪುಟ್ಟರಾಜು ಮಾತನಾಡಿ ರಾಜ್ಯದಲ್ಲಿ 9617 ರೈತ ಅನುವುಗಾರರಿದ್ದು ಇಲಾಖೆಯ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಅನುವುಗಾರರನ್ನು ತೆಗೆದುಹಾಕಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮುಂದಾಗಿರುವ ಸಕರ್ಾರದ ಕ್ರಮದಿಂದ ರೈತ ಅನುವುಗಾರರ ಸ್ಥಿತಿ ಅತಂತ್ರಗೊಂಡಿದೆ ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಇತ್ತ ಗಮನ ಹರಿಸಿ ಅನುವುಗಾರರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಅನುವುಗಾರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಸಿ.ನಾಗರಾಜು, ಕಾರ್ಯದಶರ್ಿ ಶ್ರೀನಿವಾಸ್, ಖಜಾಂಚಿ ಜಯಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗುರುಸ್ಪಂದನ ಕಾರ್ಯಕ್ರಮ ಜನವರಿ 2
ಚಿಕ್ಕನಾಯಕನಹಳ್ಳಿ,ಡಿ.29 : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಿಆರ್ಸಿ ಸಭಾಂಗಣದಲ್ಲಿ ಜನವರಿ,2 ಶನಿವಾರ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಗುರುಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದ್ದಾರೆ.
  ತಾಲ್ಲೂಕಿನ ಕಂದಿಕೆರೆ, ತೀರ್ಥಪುರ, ಬರಗೂರು ಹಾಗೂ ಮತಿಘಟ್ಟ ಕ್ಲಸ್ಟರ್ಗಳ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಗುರುಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಂಬಂಧಿಸಿದ ಕಾರ್ಯನಿವರ್ಾಕರಿಗೆ ಸಲ್ಲಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಧರ್ಮದಲ್ಲಿನ ವೈಚಾರಿಕತೆ ಪಾಲಿಸುತ್ತಿರುವ ಪಂಚಪೀಠಗಳು
ಚಿಕ್ಕನಾಯಕನಹಳ್ಳಿ,ಡಿ.29 : ಪಂಚಪೀಠಗಳಾದ ಬಾಳೆ ಹೊನ್ನೂರು ಮಠ, ಶ್ರೀಶೈಲ ಮಠ, ಕಾಶಿ ಮಠ, ಉಜ್ಜಯನಿ ಮಠ ಹಾಗೂ ಕೇದಾರ ಮಠಗಳು ವೀರಶೈವ ಧರ್ಮದಲ್ಲಿನ ವೈಚಾರಿಕತೆಯನ್ನು ಪಾಲಿಸುತ್ತಾ ಬರುತ್ತಿವೆ ಎಂದು ಹಿಮಾಚಲ ಪ್ರದೇಶದ ಕೇದಾರ ಪೀಠದ ಹಿಮವಂತ್ ರಾವಲ್ ಭೀಮಾಶಂಕರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಈಚೆಗೆ ನಡೆದ ವಿಶೇಷ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ ಮಾತನಾಡಿ, ಸಕಲ ಜೀವ ರಾಶಿಗಳಲ್ಲೇ ಮನಷ್ಯನ ಮೇಲೆಯೆ ಶಿವನ ಒಲುಮೆಯು ಹೆಚ್ಚಾಗಿದೆ, ಗಂಡಾಗಲಿ ಹೆಣ್ಣಾಗಲಿ ಬಾಳಿನಲ್ಲಿ ಸುಖ ಶಾಂತಿಯನ್ನು ಪಡೆಯಲು ಹಣ, ಅಧಿಕಾರದಿಂದ ಸಾದ್ಯವಾಗುವುದಿಲ್ಲ ಎಂದ ಅವರು ಇಷ್ಟಲಿಂಗ ಪೂಜೆ ಪಂಚಾಚಾರ್ಯ ಪರಂಪರೆ ಅಡಿಪಾಯ, ಪಂಚಾಚಾರ್ಯ ಪರಂಪರೆ ರಕ್ಷಣಾ ಸಮಿತಿ ರಚಿಸುವ ಮೂಲಕ ಶರಣ ತತ್ವವನ್ನು ಪಸರಿಸುವ ಕೆಲಸ ಆಗಬೇಕು ಎಂದರು. 
ವಿಭೂತಿಪುರ ಮಠಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಧರ್ಮವಿರುವವರೆಗೂ ದೇಶ ಮೃತ್ಯುಂಜಯವಾಗಿರುತ್ತದೆ, ಧರ್ಮವನ್ನು ಬಿಟ್ಟ ದೇಶ ನಾಶವಾಗುತ್ತದೆ ಎಂದರು.
  ಕುಪ್ಪೂರು ಗದ್ದಿಗೆಯ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠಾಧ್ಯಕ್ಷ ಚನ್ನ ಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿ ಮಠಾಧ್ಯಕ್ಷ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.




Thursday, December 24, 2015


ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವಿಕೇಂದ್ರಿಕರಣಕ್ಕೆ ಬದ್ಧವಾಗಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ



ಚಿಕ್ಕನಾಯಕನಹಳ್ಳಿ : ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವೀಕೇಂದ್ರಿಕರಣಕ್ಕೆ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪಕ್ಷದ ಕಾಂಗ್ರೆಸ್ ಅಭ್ಯಥರ್ಿ ಆರ್.ರಾಜೇಂದ್ರ ಪರವಾಗಿ ಚುನಾವಣಾ ಪ್ರಚಾರದ ಸಮಾವೇಶವನ್ನು ಉದ್ಘಾಟಸಿ ಮಾತನಾಡಿ, ಬಿ.ಜೆ.ಪಿ, ಜೆ.ಡಿ.ಎಸ್ ಪಕ್ಷಗಳು ಬಂದು ದಿನವಾದರೂ ಸಾಮಾಜಿಕ ನ್ಯಾಯ ಅಧಿಕಾರ ವೀಕೇಂದ್ರಿಕರಣದ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು ದಿ.ರಾಜೀವ್ಗಾಂಧಿಯವರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳನ್ನು ತರುವ ಮೂಲಕ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿಯನ್ನು ತಂದು ಸ್ಥಳಿಯ ಸಂಸ್ಥೆಗಳಲ್ಲಿ ಅಧಿಕಾರ ಸಿಗಲು ಕಾರಣವಾದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮಾಜೋಯಿಸ್ರವರು ಮೀಸಲಾತಿ ತಿದ್ದುಪಡಿ ವಿರೋಧಿಸಿ ಸುಪ್ರೀಂ ಕೋಟರ್್ಗೆ ರಿಟ್ ಅಜರ್ಿ ಸಲ್ಲಿಸಿದರು ಇದರಿಂದ ಅಲ್ಪಸಂಖ್ಯಾಂತರು. ಮಹಿಳೆಯರು, ದಲಿತರು ಹಿಂದುಳಿದ ವರ್ಗಗಳು. ಸಾಮಾಜಿಕ ನ್ಯಾಯದಲ್ಲಿ ಸಮಾನತೆ ಮೂಲಕ ಪರಿವರ್ತನೆ ಆಗಬಾರದು ಎಂಬ ಉದ್ದೇಶವಿತ್ತು ಆ ಸಂದರ್ಭದಲ್ಲಿ ಈ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರು, ಜಗದೀಶಶೆಟ್ಟರು ಇದರ ಬಗ್ಗೆ ಚಕಾರವೆತ್ತಲಿಲ್ಲ, ಅದೃಷ್ಠವಶಾತ್ ಅಜರ್ಿ ತಿರಸ್ಕೃತಗೊಂಡ ಪರಿಣಾಮ ಮೀಸಲಾತಿ ಉಳಿಯಿತು. 
ಬಿ.ಜೆ.ಪಿ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ, ಜೆ.ಡಿ.ಎಸ್. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿದ್ದಾರೆ, ದೇವೇಗೌಡರು ಹೋರಾಟಗಾರರು ಆದರೆ ಆ ಹೋರಾಟವೆಲ್ಲಾ ಅವರ ಕುಟುಂಬಕ್ಕೆ ರಾಜಕೀಯ ಅಧಿಕಾರ ಕೊಡಿಸುವುದಕ್ಕೆ ಸೀಮಿತವಾಗಿದೆ ಎಂಬುದರಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ ಎಂದ ಅವರು, ಹಣವಿಲ್ಲದೆ ರಾಜಕಾರಣ ಮಾಡುವುದಿಲ್ಲ, ಹಣದಿಂದಲೇ ಎಲ್ಲವನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಜೊತೆಗೆ ಈ ಎರಡು ಪಕ್ಷಗಳೂ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿವೆ, ಈ ಪಕ್ಷಗಳು ಪಂಚಾಯಿತಿ ವ್ಯವಸ್ಥೆ ಅಡಿಯಲ್ಲಿ ಮತ ಕೇಳಲು ನೈತಿಕತೆ ಇಲ್ಲ ಅದು ಕಾಂಗ್ರೇಸ್ಗೆ ಮಾತ್ರ ಇದೆ ಎಂದರು.
ಡಾ||ಎಂ.ಆರ್ ಹುಲಿನಾಯ್ಕರ್ ನಮ್ಮ ಜೊತೆಯಲ್ಲಿದ್ದು, ನಂತರ ಜೆ.ಡಿ.ಎಸ್. ಸೇರಿ ವಿಧಾನ ಪರಿಷತ್ ಸದಸ್ಯರಾದರು, ನಂತರ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಬಿ.ಜೆ.ಪಿ ಸೇರಿದ್ದಾರೆ ಎಂದರು. ಕಾಂಗ್ರೇಸ್ ಸಕರ್ಾರ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾಗಿದೆ ವಿಧಾನ ಸಭೆಯಲ್ಲಿ ಬಹುಮತಬೇಕಾಗಿದೆ,  25 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ನಡೆಯುವ 20 ಸ್ಥಾನಗಳಿಗೆ ಸ್ಪಧರ್ಿಸಿದ್ದೇವೆ 20ಸ್ಥಾನಗಳಲ್ಲೂ ಕಾಂಗ್ರೇಸ್ ಅಭ್ಯಥರ್ಿಗಳು ಗೆಲ್ಲಲಿದ್ದಾರೆ ಎಂಬ ಭರವಸೆ ಇದೆ. ಬಿ.ಜೆ.ಪಿಯ ವಿರೋದ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಹರಕು ನಾಲಿಗೆಯ ನಾಯಕ. ಇವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕವೆ ಇಲ್ಲ ನಾನು ಏನು ಮಾತಾನಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಹೇಳುವ ಅವರು, ತಪ್ಪೊಪು ಕೊಳ್ಳವಲ್ಲಿಯೂ ನಿಸ್ಸೀಮರು, ಅವರೊಬ್ಬ ಮೂರ್ಖ, ಅವಿವೇಕಿ ಎಂದು ಜರಿದರು,  ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಬಿ.ಜೆ.ಪಿಗಿಂತ ಹೆಚ್ಚು ಸ್ಥಾನ ಪಡೆದು ನೂರಕ್ಕೆ ನೂರು ರಾಜಕೀಯ ಸನ್ಯಾಸತ್ವ ಪಡೆಯುವುದು ಗ್ಯಾರಂಟಿ ಎಂದರು.
10 ಸಾವಿರ ಜನಸಂಖ್ಯೆಗೆ ಕಡಿಮೆ ಇರುವ ಪಂಚಾಯಿತಿಗಳಿಗೆ 6 ಲಕ್ಷ ಅನುದಾನವನ್ನು 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ, ದೇಶದಲ್ಲಿ ಶೇ.50% ರಷ್ಟು ಮೀಸಲಾತಿಯನ್ನು  ಹೆಚ್ಚಿಸಲು ಸೋನಿಯಾ ಗಾಂಧಿ ಕಾಂಗ್ರೇಸ್ ಕಾರಣ. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ನಿಯಮಗಳನ್ನು  ಮಾಡುವ ಅಧಿಕಾರ ನೀಡಿದೆ ರಾಜ್ಯದಲ್ಲಿ ಕಾಂಗ್ರೇಸ್ ಜನತೆಗೆ ಅಧೀಕಾರ ನೀಡಿದರೆ 165 ಭರವಸೆಗಳನ್ನು ನೀಡಿತ್ತು ಇದರಲ್ಲಿ 100ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಕಾಂಗ್ರೇಸ್ ಸಕರ್ಾರ ಬಂದ ಮೇಲೆ ಅನ್ನಭಾಗ್ಯ, ಕ್ಷೀರಭಾಗ್ಯದ ಮೂಲಕ 1 ಕೋಟಿ ಮಕ್ಕಳಿಗೆ ಶಾಲೆಗಳಲ್ಲಿ ಹಾಲು ನೀಡುತ್ತಿದ್ದೇವೆ. ರೈತರಿಗೆ ಸಾಲ ಮನ್ನಾ ರೈತರಿಗೆ 3 ಲಕ್ಷದವರಿಗೆ ಬಡ್ಡಿ ರಹಿತ ಸಾಲ,  ಮೈತ್ರಿ,  ಮನಸ್ವಿನಿ ಕಾರ್ಯಕ್ರಮವನ್ನು ಎಲ್ಲ ವರ್ಗದವರಿಗೂ ನೀಡಿದ್ದೇವೆ. ಕಾಂಗ್ರೇಸ್ ಸಕರ್ಾರ ನೀರಾವರಿ  ಹಾಗೂ ರಸ್ತೆ ನಿಮರ್ಾಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಬೇಕು ಆದ್ದರಿಂದ ಜಿ.ಪಂ ಗ್ರಾ.ಪಂ ತಾ.ಪಂ, ಸದಸ್ಯರು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಿಗೆ ಮತ ಚಲಾಯಿಸಿ ಅವರನ್ನು ಗೆಲ್ಲಿಸಿ ವಿಧಾನ ಪರಿಷತ್ಗೆ  ಕಳಿಸಿ ಎಂದರು.
ಗೃಹ ಸಚಿವ ಡಾ|| ಜಿ. ಪರಮೇಶ್ವರ್ ಮಾತನಾಡಿ,  ದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರ  ಸಕರ್ಾರ ಬಿಡಿಕಾಸನ್ನು  ಬಿಡುಗಡೆ ಮಾಡಿಲ್ಲ ಇದರ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು,  ಕೇಂದ್ರ ಸಕರ್ಾರ ಬರಗಾಲ ಪರಿಹಾರಕ್ಕೆ 1500 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ, ಆದರೂ ಬಿಡುಗಡೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಮುಂದುವರೆಸಲು 10 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ದೇಶದಲ್ಲಿನ ರೈತರ ಸಾಲ 72 ಸಾವಿರ ಕೋಟಿಗಳನ್ನು ಮನ್ನಾ ಮಾಡಿದ್ದಾರೆ. ಮುಖ್ಯಮಂತ್ರಿಗಳು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿಧಾನ ಸಭೆಯ ಜೊತೆಯಲ್ಲಿ ವಿಧಾನ ಪರಿಷತ್ನಲ್ಲೂ ಸಂಖ್ಯಾಬಲ ಅಗತ್ಯ ಆದ್ದರಿಂದ ಯುವಕರಾದ ಆರ್,ರಾಜೇಂದ್ರರವರಿಗೆ ಮತ ನೀಡಿಗೆಲುವಿಗೆ ಶ್ರಮಿಸಿ ಎಂದು ಹೇಳಿದರು.
ಜಿಲ್ಲಾ ಉಸುವಾರಿ ಸಚಿವ ಟಿ.ಬಿ ಜಯಚಂದ್ರ ಮಾತನಾಡಿ,  ರಾಜ್ಯದಲ್ಲಿ ಅಂತರ್ಜಲ ಕಡಿಮೆಯಾಗಿ ಕುಡಿಯಲು ನೀರಿಲ್ಲ ಸಮಸ್ಯೆ ಜಾಸ್ತಿಯಾಗಿದೆ ಆದರಿಂದ ಹುಳಿಯಾರು ಭಾಗಕ್ಕೆ ಬೋರನ ಕಣಿವೆ ಜಲಾಶಯದಿಂದ  4 ಕೋಟಿ ವೆಚ್ಚದಲ್ಲಿ ಹುಳಿಯಾರಿಗೆ  ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಆದರೆ ಅಧಿಕಾರಿಗಳೂ ಅಥವಾ ಗ್ರಾಮ ಪಂಚಾಯಿತಿ ನೀರನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದೆ. ಹಸಿದ ಹೊಟ್ಟೆಗೆ ಅನ್ನ ಬರಡು ಭೂಮಿಗೆ  ನೀರುಬೇಕಾಗಿದೆ ಆದ್ದರಿಂದ ಭದ್ರಮೆಲ್ದಂಡೆ ಯೋಜನೆಗೆ ಒತ್ತು ನೀಡಿದ್ದೇವೆ ಎಂದರಲ್ಲದೆ,  ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜು ಅರಸ್ ಚಾಲನೆ ನೀಡಿದರು 12360ಕೋಟಿ ರೂ ವೆಚ್ಚದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಕರ್ಾರ ಹಣ ಬಿಡುಗಡೆ ಮಾಡಿದೆ ಎಂದರು, ಕಾಂಗ್ರೆಸ್ ನಡಿಗೆ, ಕೃಷ್ಣೆ ಕಡೆಗೆ ಎಂಬ ಪಾದಯಾತ್ರೆಯಲ್ಲಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಪ್ರತಿ ವರ್ಷ ನೀರಿಗಾಗಿ ಬಜೆಟ್ನಲ್ಲಿ 10 ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗುತ್ತಿದೆ ಎಂದರು.
ಇಂದನ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ,  ಕಾಂಗ್ರೇಸ್ ಪಕ್ಷ ಜಾತ್ಯಾತೀತ ಪಕ್ಷ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಎಲ್ಲ ಜಾತಿಗಳು ಅಧಿಕಾರಕ್ಕೆ ಬಂದ ಹಾಗೆ ಎಂದ ಅವರು ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗ ಜಿಲ್ಲಾ ಪಂಚಾಯಿತ್ ತಾಲ್ಲೂಕು ಪಂಚಾಯಿತ್ಗಳಿಗೆ  ಅಧಿಕಾರ ನೀಡಿದ್ದೇವೆ. ಜೆ.ಡಿ.ಎಸ್, ಬಿ.ಜೆ.ಪಿ ಸಕರ್ಾರಗಳು  ಗ್ರಾಮ ಪಂಚಾಯಿತ್ಗಳಿಗೆ ಅಧಿಕಾರ ನೀಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಚಿಕ್ಕನಾಯಕನಹಳ್ಳಿ ಕ್ಷೇತ್ರ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತದಾರರಿವವ ಕ್ಷೇತ್ರ, ಇಲ್ಲಿ ಪಕ್ಷವನ್ನು ಕಟ್ಟಲು ಸಾಕಷ್ಟು ಅವಕಾಶವಿದೆ, ಮೊದಲು ನಾವು ಇಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಇಲ್ಲಿನ ಮೊದಲ ಸಮಸ್ಯೆ ತಾಲೂಕಿಗೆ ಹೇಮಾವತಿ ಕುಡಿಯುವ ನೀರು ಯೋಜನೆಗೆ ಪುನರ್ ಚಾಲನೆ ನೀಡುವುದು, ರಸ್ತೆಗಳ ಅಭಿವೃದ್ದಿ, ಹುಳಿಯಾರನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದಜರ್ೆಗೇರಿಸುವುದು, ಬುಕ್ಕಾಪಟ್ಟಣ ಹೋಬಳಿಯ ಅಭಿವೃದ್ದಿಗೆ ಒತ್ತು ನೀಡುವುದು ಸೇರಿದಂತೆ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೀರಿಸಿದರೆ ಹಾಗೂ  ಜಿಲ್ಲಾ ಸಚಿವರು ನಮಗೆ ಹೆಚ್ಚು ಒತ್ತು ನೀಡಿವುದು ಸೇರಿದಂತೆ ಕಾಂಗ್ರೆಸ್ ಪಕ್ಷದವರು ಜೆ.ಡಿ.ಎಸ್.ಪಕ್ಷ ಬೆಳೆಸುವುದನ್ನು ಬಿಟ್ಟರೆ ನಾವು ಇಲ್ಲಿ ಜೆ.ಡಿ.ಎಸ್.ಗೆ ಬಾವುಟ ಕಟ್ಟಲು ಜನವಿಲ್ಲದಂತೆ ಮಾಡಬಹುದು ಎಂದರು.
ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ ಬಿ.ಜೆ.ಪಿ. ಮುಖಂಡರಾದ ಸುಬ್ರಮಣ್ಯ ಸ್ವಾಮಿಯವರನ್ನು ಮುಂದಿಟ್ಟುಕೊಂಡು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಯ ಮೇಲೆ ರಾಹುಲ್ಗಾಂಧಿ ಹಾಗೂ ಸೋನಿಯಾಗಾಂಧಿಯವರ ಮೇಲೆ ಸುಳ್ಳು ಮೊಖದ್ದಮೆ ದಾಖಲಿಸಿದ್ದಾರೆ. ಇದರ ವಿರುದ್ದ ದೇಶಾದ್ಯಾಂತ ಮುಷ್ಕರ ನಡೆಸಿದ್ದೇವೆ ತಾಲ್ಲೂಕಿನ ಹೇಮಾವತಿ ನಾಲೆ ಕಾಮಗಾರಿ ಪೂರ್ಣಗೊಳಿಸಲು ಇರುವ ಅಡೆತಡೆಗಳನ್ನು ತೊಲಗಿಸಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿಮಾಡಿದರು,
 ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಚಂದ್ರಪ್ಪ ವಿಧಾನ ಸಭಾ ಸದಸ್ಯರಾದ ಬಿ.ಜಿ.ಗೋವಿಂದಪ್ಪ, ಕೆ.ಷಡಾಕ್ಷರಿ, ರಫೀಕ್ ಅಹಮದ್, ಕೆ.ಎನ್ ರಾಜಣ್ಣ, ವಿಧಾನ ಪರಿಷತ್ ಸದಸ್ಯ ಎಮ್ ಡಿ. ಲಕ್ಷ್ಮೀನಾರಾಯಣ್, ಮಾಜಿ ಶಾಸಕರಾದ ಹೆಚ್ ಲಿಂಗಪ್ಪ, ಕಾಂಗ್ರೇಸ್ ಮುಂಖಡ ಸಾಸಲು ಸತೀಶ್, ಬಿ.ಲಕ್ಕಪ್ಪ, ಅಭ್ಯಾಥರ್ಿ ಆರ್.ರಾಜೇಂದ್ರ, ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ರಿಜ್ವಾನ್ಹರ್ಷದ್ ಕಾಂಗ್ರೆಸ್ ಮುಖಂಡರುಗಳಾದ ಜಿ.ರಘುನಾಥ್ .ಸಿ. ಬಸವರಾಜು, ವೈ.ಸಿ ಸಿದ್ದರಾಮಯ್ಯ. ಅಶೋಕ, ಮತ್ತಿತ್ತರರು ಉಪಸ್ಥಿತರಿದ್ದರು.