Thursday, January 13, 2011

ರಾಜ್ಯದ ವಿಧಾನ ಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲ
ಚಿಕ್ಕನಾಯಕನಹಳ್ಳಿ,ಜ.13: ಸಕರ್ಾರವನ್ನು ರಚಿಸಿ, ಸಕರ್ಾರದ ಹಲವು ಯೋಜನೆಗಳಿಂದ ಕೋಟ್ಯಾಂತರ ಹಣವನ್ನು ಲೂಟಿ ಮಾಡಿ ತಮ್ಮ ಸ್ಚಂತಕ್ಕೆ ಮತ್ತು ಚುನಾವಣೆ ಸಮಯದಲ್ಲಿ ಬಳಸಿ ಇಂತಿಷ್ಟು ಹಣವೆಂದು ಹಂಚುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ್ನು ಬಹಿರಂಗವಾಗಿ ರಾಜ್ಯದ ಲೂಟಿಕೋರ ಪಕ್ಷಗಳು ಹರಾಜು ಮಾಡುತ್ತಿದ್ದಾರೆ ಎಂದು ಜೆ.ಡಿ.ಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ಯಾದವ್ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಜನತಾದಳ ಸಂಯುಕ್ತ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ನಂತೆ ಜನತೆಗೆ ತಲಾ ಇಂತಿಷ್ಟು ಹಣವೆಂದು ನಿಗದಿ ಪಡಿಸಿ ಇಲ್ಲಿನ ಪ್ರಜೆಗಳನ್ನು ಓಟಿಗಾಗಿ ಕೊಂಡುಕೊಳ್ಳುತ್ತಿದ್ದಾರೆ, ಇದರಿಂದ ರಾಜ್ಯದಲ್ಲಿ ಪ್ರಜಾತಂತ್ರ ಮತ್ತು ಲೋಕತಂತ್ರ ವ್ಯವಸ್ಥೆಯು ಬದಲಾವಣೆಯಾಗಿ ಹಣ ನೀಡಿದವನಿಗೆ ಮಾತ್ರ ಓಟು ಎಂಬ ವಾತಾವರಣ ಸೃಷ್ಟಿಯಾಗಿದೆ, ಅನ್ಯಾಯ ಎದರಿಸುವಂತಹ ನಾಯಕರಾದ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಯಂತಹ ಹಲವರ ನಾಯಕರ ಸಿದ್ದಾಂತ ಎಲ್ಲೆಡೆ ಪಸರಿಸಿ ರಾಜಕೀಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಒಂದು ಕಾಲದಲ್ಲಿ ಇತ್ತು, ಆದರೆ ಇತ್ತಿಚಿನ ದಿನಗಳಲ್ಲಿ ರಾಜಕೀಯಕ್ಕೆ ಲೂಟಿಕೋರರ ಆಗಮನವಾಗುತ್ತಾ ರಾಜ್ಯದ ಜನತೆಗೆ ಕಷ್ಟದ ದಿನಗಳು ಎದುರಾಗುತ್ತಿವೆ ಎಂದ ಅವರು ಸುಂದರವಾದ ಕನರ್ಾಟಕ ರಾಜ್ಯ ಈಡೀ ದೇಶಕ್ಕೆ ರಾಜಕೀಯವಾಗಿ ಮಾದರಿಯಾಗಿತ್ತು. ಆದರೆ ಈಗ ಈ ರಾಜ್ಯ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಮಾದರಿಯಾಗಿದೆ ಎಂದ ಅವರು ಕನರ್ಾಟಕದ ಪರಂಪರೆಯನ್ನು ಹೊಸ ಅಧ್ಯಯನದಿಂದ ರೂಪಿಸಲು ಜೆ.ಡಿ.ಯು ಪಕ್ಷಕ್ಕೆ ಸಹಕರಿಸಬೇಕು ಎಂದರು.
ಜೆ.ಡಿ.ಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ ಈ ಸಭೆ ಕನರ್ಾಟಕದಲ್ಲಿ ಹೊಸ ದಿಕ್ಕನ್ನು ನೀಡಲಿದ್ದು, ತತ್ವ ಸಿದ್ದಾಂತಗಳನ್ನು ಬಿಟ್ಟು ರಾಜಕಾರಣ ಮಾಡುತ್ತಿರುವ ನಾಯಕರಿಲ್ಲದ ಪಕ್ಷಗಳಿಗೆ ಸವಾಲಾಗಿದೆ ಎಂದ ಅವರು ವಿಧಾನಸಭೆಗಳಲ್ಲಿ ವಿರೋದ ಪಕ್ಷಗಳಿಲ್ಲದೆ ಆಡಳಿತ ಪಕ್ಷಗಳು ಏನು ಮಾಡಿದರೂ ಕೇಳುವವರಿಲ್ಲದಂತಾಗಿದೆ ಎಂದರು. ಮಾಧುಸ್ವಾಮಿಯವರಿಗೆ ರಾಜ್ಯವನ್ನು ರಕ್ಷಣೆ ಮಾಡುವ ಸಮಥ್ರ್ಯವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗಣಿ ಉದ್ಯಮದಲ್ಲಿ ಬಳ್ಳಾರಿಗೆ ಸಮಾನಾಗಿರುವ ತಾಲೂಕು, ಜನರ ಕಷ್ಟಗಳನ್ನು ಕೇಳದೆ, ಜನತೆಗೆ ಸೇವೆ ಮಾಡದೆ, ಮನೆ ಮನೆಗೆ ಹೋಗಿ ತಮ್ಮ ಪರವಾಗಿ ಪ್ರಚಾರಮಾಡದೆ ಕೇವಲ ಹಣದ ಮೇಲೆ ಚುನಾವಣೆ ನಡೆಯುತ್ತಿದ್ದು ಎಂದರಲ್ಲದೆ, ರಾಜಕೀಯ ವ್ಯಾಪಾರವಾಗಿದೆ ಎಂದರು. ಜನರ ತಮ್ಮ ಓಟುಗಳನ್ನು ರಾಜಕೀಯ ಪಕ್ಷಗಳಿಗೆ ನಿಡದೆ, ಅಬ್ಯಾಥರ್ಿಗಳು ನೀಡುವ ಹಣ, ಹೆಂಡಕ್ಕೆ ಇಂತಿಷ್ಟು ಎಂಬಂತೆ ಹಂಚಿಕೆಯಾಗಿದೆ. ಈ ರೀತಿ ಹಂಚಿಕೆಯಾದರೂ ಜೆ.ಡಿ.ಯು ತಾಲೂಕಿನಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದು ಮುಂದೆ ತಾಲೂಕಿನಾದ್ಯಂತ ಜೆ.ಡಿ.ಯು ಪಕ್ಷ ಮೊದಲ ಸ್ಥಾನವನ್ನು ಅಲಂಕರಿಸಲಿದೆ ಎಂದರು.
ಮಧ್ಯಮ ಕುಟುಂಬದಿಂದ ಬಂದು 3ಬಾರಿ ಶಾಸಕನಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮ ಪಟ್ಟರೂ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷ ಸ್ಥಾನ ಉಳಿಸಿಕೊಳ್ಳದಿದ್ದರೆ ರಾಜಕೀಯದಲ್ಲಿ ಇದೇ ನನ್ನ ಕೊನೇ ಹೋರಾಟವಾಗಿರುತ್ತಿತ್ತು ಎಂದ ಅವರು, ಜೆ.ಡಿ.ಎಸ್, ಬಿ.ಜೆ.ಪಿ ಕಾಲ ಮುಗಿಯುವ ಸಂದರ್ಭ ಬಂದಿದ್ದು ಕಾಂಗ್ರೆಸ್ ಆಗಲೇ ಮುಳುಗಿ ಹೋಗಿರುವ ಹಡಗಾಗಿದೆ, ತಾಲೂಕು ಮತ್ತು ರಾಜ್ಯದ ಆಡಳಿತ ಕೆಳಸ್ಥರಕ್ಕೆ ಹೋಗಿದೆ. ತಾಲೂಕಿನಿಂದಲೇ ಜೆ.ಡಿ.ಯು ಪಕ್ಷ ಅಸ್ಥಿತ್ವಗೊಳಿಸಿ ಹೋರಾಟಕ್ಕೆ ಮುಂದಾಗುತ್ತದೆ ಪಕ್ಷ, ಈ ರೀತಿಯಾಗಿ ಬಾಣದ ದಿಕ್ಕನ್ನು ರಾಜ್ಯಾದ್ಯಂತ ವಿಸ್ತರಿಸಿ ರೈತ ಪರವಾಗಿ ರಾಜ್ಯ ಕಟ್ಟಲಿದೆ ಎಂದರು.
ಸಮಾರಂಭದಲ್ಲಿ ಜೆ.ಡಿ.ಯು.ನ ಜಿ.ಪಂ.ಸದಸ್ಯೆ ಲೋಹಿತಾ ಬಾಯಿ ಮತ್ತು ತಾ.ಪಂ.ಸದಸ್ಯರುಗಳಾದ ಚಿಕ್ಕಮ್ಮ, ನಿರಂಜನಮೂತರ್ಿ, ಸುಮಿತ್ರ, ಲತಾ, ಶಶಿಧರ್, ಸಾವಿತ್ರಿರವರನ್ನು ಸನ್ಮಾನಿಸಲಾಯಿತು, ಚುನಾವಣೆಗಳಲ್ಲಿ ಸ್ಪಧರ್ಿಸಿದ್ದ ಅಬ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೇಣುಕಮೂತರ್ಿ ಸ್ವಾಗತಿಸಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ನಿರೂಪಿಸಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ವಂದಿಸಿದರು.

ಕುಪ್ಪೂರು ಮಠದಲ್ಲಿ 6 ಲಕ್ಷರೂಗಳ ಬೆಳ್ಳಿ ಆಭರಣ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.13: ತಾಲೂಕಿನ ಸುಪ್ರಿಸಿದ್ದ ಕ್ಷೇತ್ರವಾದ ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಗುರುವಾರ ನಸುಕಿನಲ್ಲಿ ಕಳ್ಳತನ ನಡೆದಿದ್ದು ಮಠದ ಗರ್ಭಗುಡಿಯಲ್ಲಿದ್ದ ಸುಮಾರು 15 ಕೆ.ಜಿ.ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿದ್ದಾರೆ.
ಮಠದ ಕಟ್ಟಡದಲ್ಲಿನ ಕರೆಂಟ್ ಕಟ್ಮಾಡಿ, ಮಠದ ಆವರಣದಲ್ಲಿರುವ ಕೊಠಡಿಯಲ್ಲಿ ಮಲಗಿದ್ದವರು ಹೊರಬಾರದಂತೆ ಹೊರಗಿನಿಂದ ಬೋಲ್ಟ್ಗಳನ್ನು ಭದ್ರ ಪಡಿಸಿ, ಮಠದ ಮೇಲ್ಚಾವಣಿಯ ಹೆಂಚನ್ನು ತೆಗೆದು ಗರ್ಭಗುಡಿಯಲ್ಲಿನ ಬೊಲ್ಟ್ನ್ನು ಬಲವಾದ ಅಸ್ತ್ರದಿಂದ ಮೀಟಿ ಬೀಗ ಹೊಡೆದು ಸುಮಾರು 5 ಕೆ.ಜಿ.ತೂಕದ ಶ್ರೀ ಮರಳಸಿದ್ದೇಶ್ವರರ ಮುಖ ಪದ್ಮ ನಾಗಭಾರಣ ಸಮೇತ, ಒಂದು ಕೆ.ಜಿ.ತೂಕದ ಮೂರು ಜೊತೆ ಪಾದುಕೆ, ಕಳಸ, ಪಾನ್ ಬಟ್ಲು, ಪಂಚಾರತಿ, ಬೆಳ್ಳಿಕಾಯಿನ್, ಬೆಳ್ಳಿ ರುದ್ರದೇವರು, ಎರಡು ರೇಣುಕರ ವಿಗ್ರಹ, ಗಣಪತಿ ವಿಗ್ರಹ, ನಟರಾಜನ ನಾಟ್ಯ ವಿಗ್ರಹ, ಆರತಿ ತಟ್ಟೆ, 108 ಬೆಳ್ಳಿ ರುದ್ರಾಕ್ಷಿ, 12 ಬೆಳ್ಳಿ ಭಿಲ್ವ ಪತ್ರೆ ಸೇರಿದಂತೆ ಸುಮಾರು 6 ಲಕ್ಷರೂಗಳ ಬೆಳ್ಳಿಯ ಆಭರಣಗಳು ಹಾಗೂ ಎರಡು ಕಾಣಿಕೆ ಹುಂಡಿಯನ್ನು ಹೊತ್ತು ಹೊಯ್ದಿದ್ದಾರೆ.
ಸ್ಥಳಕ್ಕೆ ಎಸ್.ಪಿ. ಡಾ.ಹರ್ಷ, ಕುಣಿಗಲ್ ಎ.ಎಸ್.ಪಿ. ಶಶಿಕುಮಾರ್, ಸಿ.ಪಿ.ಐ.ರವಿಪ್ರಸಾದ್, ಬೆರಳಚ್ಚು ತಜ್ಞರು, ಶ್ವಾನ ದಳ ತನಿಖೆ ನಡೆಸಿದರು.
ಹಂದನಕೆರೆ ಪಿ.ಎಸ್.ಐ. ರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ದೇವಾಲಯಗಳ ಕಳ್ಳತನ ಹೆಚ್ಚುತ್ತಿದ್ದು, ಪಟ್ಟಣದ ಪಂಚಮುಖಿ ದೇವಾಸ್ಥಾನದಲ್ಲಿನ ಕಾಣಿಕೆ ಹುಂಡಿ ಕಳವು, ಸೊರಲಮಾವು, ತಮ್ಮಡಿಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನದ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುವವರ ತಂಡವೇ ಇಲ್ಲಿಗೆ ಬಂದಿರ ಬಹುದೆಂಬ ಅನುಮಾನಗಳಿವೆ.

Wednesday, January 12, 2011

Monday, January 10, 2011


ನೂತನ ಬಿ.ಸಿ.ಎಂ. ವಿಸ್ತರಣಾಧಿಕಾರಿಗಳ ಕಛೇರಿಗೆ ಚಾಲನೆ:ಚಿಕ್ಕನಾಯಕನಹಳ್ಳಿ,ಜ.10: ಪ್ರತಿ ತಾಲೂಕುಗಳಲ್ಲೂ ಬಿ.ಸಿ.ಎಂ. ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಪ್ರತ್ಯೇಕವಾಗಿ ಸ್ಥಾಪಿಸುವಂತೆ ಸಕರ್ಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಈ ತಾಲೂಕಿನಲ್ಲಿ ಕಛೇರಿ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ ತಿಳಿಸಿದರು.ಪಟ್ಟಣದ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ ತಾಲೂಕು ವಿಸ್ತರಣಾಧಿಕಾರಿಗಳ ಕಛೇರಿ ಆರಂಭದ ಅಂಗವಾಗಿ ದಿ.ದೇವರಾಜ ಅರಸ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ವಿಸ್ತರಣಾಧಿಕಾರಿಗಳ ಕಛೇರಿ ತಾ.ಪಂ.ಯ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಕಛೇರಿ ಇನ್ನು ಮುಂದೆ ಪ್ರತ್ಯೇಕವಾದ ಕಟ್ಟಡದಲ್ಲಿ ನಡೆಯಲಿದೆ ಎಂದ ಅವರು, ನಮ್ಮ ಇಲಾಖೆಯಲ್ಲಿ ಈ ಬೇಡಿಕೆ ಕಳೆದ 20 ವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಈಡೇರುವ ಕಾಲ ಬಂದಿದೆ ಎಂದರು. ಏಪ್ರಿಲ್ ತಿಂಗಳ ಆರಂಭದಿಂದ ಈ ಕಛೇರಿಗೆ ಡ್ರಾಯಿಂಗ್ ಪವರ್ ಬರಲಿದೆ. ಗುಮಾಸ್ತರು ಸೇರಿದಂತೆ ಕಛೇರಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಬಿ.ಸಿ.ಎಂ.ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್, ಮೆಟ್ರಿಕ್ ನಂತರ ವಿದ್ಯಾಥರ್ಿನಿಲಯದ ನಿಲಯ ಪಾಲಕಿ ಭಾನುಮತಿ, ಜೆ.ಸಿ.ಪುರ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಮೇಲ್ವಿಚಾರಕ ದೇವರಾಜಯ್ಯ, ತಾಲೂಕಿನ ವಿವಿಧ ಹಾಸ್ಟೆಲ್ಗಳ ಮೇಲ್ವಿಚಾರಕರುಗಳಾದ ಅಶ್ವತ್ಥ್ನಾರಾಯಣ, ಶಿವಮೂತರ್ಿ, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿ.ನಾ.ಹಳ್ಳಿಯ ಜೆ.ಡಿ.ಯು.ಸಭೆಗೆ ಶರದ್ಯಾದವ್ಚಿಕ್ಕನಾಯಕನಹಳ್ಳಿ,ಜ.10: ಇಲ್ಲಿನ ಜನತಾದಳ(ಸಂಯುಕ್ತ) ಕಾರ್ಯಕರ್ತರ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶರದ್ಯಾದವ್, ರಾಜ್ಯ ಘಟಕದ ಅಧ್ಯಕ್ಷರಾದ ಎಸ್.ಪಿ. ನಾಡಗೌಡ ಅವರು ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಚಿ.ನಾ.ಹಳ್ಳಿಯ ನವೋದಯ ಪ್ರಥಮ ದಜರ್ೆ ಕಾಲೇಜ್ನ ಆವರಣದಲ್ಲಿ ಇದೇ 13ರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿರುವ ಈ ಸಭೆಯಲ್ಲಿ, ಈ ಸಲದ ಜಿ.ಪಂ ಹಾಗೂ ತಾ.ಪಂ. ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಅಭಿನಂದಿಸುವುದರ ಜೊತೆಗೆ ಜಯಶೀಲರಾದ ಸದಸ್ಯರನ್ನು ಸನ್ಮಾನಿಸಲಾಗುವುದು ಹಾಗೂ ಸ್ಪಧಿಸಿದ್ದ ಪಕ್ಷದ ಎಲ್ಲಾ ಅಭ್ಯಾಥರ್ಿಗಳು ಹಾಗೂ ತಾಲೂಕು ಮಟ್ಟದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, January 8, 2011



ಹಾಲು ಉತ್ಪದಾಕರಿಗೆ ಸಿಮ್ ಕಾಡರ್್ ವಿತರಣೆ
ಚಿಕ್ಕನಾಯಕನಹಳ್ಳಿ,ಜ.08: ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಏರ್ಟೆಲ್ ದೂರಸಂಪರ್ಕ ಕಂಪನಿಯ ಸಿಮ್ ವಿತರಣೆ ಮತ್ತು ಅಜೋಲಾ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಇದೇ 10ರಂದು ಏರ್ಪಡಿಸಲಾಗಿದೆ.
ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಅಧ್ಯಕ್ಷತೆ ವಹಿಸಲಿದ್ದು ತು.ಹಾ.ಒ.ಕಾರ್ಯನಿವರ್ಾಹಕ ನಿದರ್ೇಶಕ ಡಾ.ಕೆ.ಸ್ವಾಮಿ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತು.ಹಾ.ಒ ವ್ಯವಸ್ಥಾಪಕರಾದ ಜಿ.ಎಂ.ಚಂದ್ರಪ್ಪ, ಡಿ.ಅಶೋಕ್, ಸುರೇಶ್ನಾಯಕ್ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಉಪ ವ್ಯವಸ್ಥಾಪಕರಾದ ಡಾ.ಸುಬ್ರಾಯ್ಭಟ್, ಮಂಜುನಥ್, ಎನ್.ಬಸಪ್ಪ, ಯರಗುಂಟಪ್ಪ, ಶ್ರೀನಿವಾಸ್, ಸಿದ್ದಲಿಂಗಮೂತರ್ಿ, ಬುದ್ದಿಪ್ರಸಾದ್ ಉಪಸ್ಥಿತರಿರುವರು.

Friday, January 7, 2011







ಪ್ರತಿಬಾ ಕಾರಂಜಿಯಲ್ಲಿ ತಾಲೂಕಿನಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾಥರಿಗಲುಚಿಕ್ಕನಾಯಕನಹಲ್ಲಿ
,ಜ.05: 2010-11ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ತಾಲೂಕಿನ ಶಾಲೆಗಳಿಂದ ವಿದ್ಯಾಥರ್ಿಗಳು ಪ್ರಥಮ ಸ್ಥಾನಗಳಿಸಿ ವಿಜೇತರಾಗಿದ್ದಾರೆ.ಹುಳಿಯಾರಿನ ಉದರ್ು ಶಾಲೆ ಆರ್ಬೀನಾ ಬಾಬು ಭಾಷಣ ಸ್ಫದರ್ೆ, ಗೋಡೆಕೆರೆ ಸಕರ್ಾರಿ ಪ್ರೌಡಶಾಲೆ ಛದ್ಮವೇಷ ಸ್ಪಧರ್ೆ, ಕುಪ್ಪೂರು ವಿವೇಕಾನಂದ ಪ್ರೌಡಶಾಲೆ ಪವನ್ ಕ್ಲೇ ಮಾಡೆಲಿಂಗ್, ಗೋಡೆಕೆರೆ ಸಕರ್ಾರಿ ಪ್ರೌಡಶಾಲೆ ಸಿ.ಶಿವರಾಜು ಮಿಮಿಕ್ರ, ಚಿನಾಹಳ್ಳಿ ಡಿವಿಪಿ ಶಾಲೆ ಪ್ರಮೋದ್ ಸಿ.ಎನ್. ಚಿತ್ರಕಲೆ, ಹುಳಿಯಾರು ಉದರ್ುಶಾಲೆ ಹಬೀಬುಲ್ಲಾ ಗಝಲ್, ಚಿನಾಹಳ್ಳಿ ನಿರ್ವಣೇಶ್ವರ ಪ್ರೌಡಶಾಲೆ ಜಾನಪದ ನೃತ್ಯ, ಸ್ಪದರ್ೆಯಲ್ಲಿ ವಿಜೇತರಾಗಿದ್ದಾರೆ.
ಸಾಂಸ್ಕೃತಿಕ ತಾಲೂಕು ಚಿಕ್ಕನಾಯಕನಹಳ್ಳಿ : ಸಿ.ಬಿ.ಲೋಕೇಶ್ಚಿಕ್ಕನಾಯಕನಹಳ್ಳಿ,ಜ.05: ಕಲೆಯ ತವರೂರಾಗಿರುವ ನಮ್ಮ ತಾಲ್ಲೂಕು ಜನಪದ ಹಾಗೂ ಯಕ್ಷಗಾನ ಕಲಾವಿದರ ಬೀಡಾಗಿದೆ ಎಂದು ಪತ್ರಕರ್ತ ಸಿ.ಬಿ. ಲೋಕೆಶ್ ಬಣ್ಣಿಸಿದ್ದಾರೆ.ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ದೇವಾಂಗ ಸಂಘದವರು ಆಯೋಜಿಸಿದ್ದ ಹೊಸವರ್ಷದ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನೇಕಾರರು ಆಥರ್ಿಕ ಸಂಕಷ್ಟಗಳಲ್ಲಿದ್ದರೂ ಧಾಮರ್ಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳಿಗೆ ಎಂದೂ ಬಡತನ ಮಾಡದೆ ಸಾಂಸ್ಕೃತಿಕವಾಗಿ ಉತ್ಸವಗಳು, ಯಕ್ಷಗಾನದ ಬಯಲು ನಾಟಕ, ಯುವ ವೀರಗಾಸೆಗಳನ್ನು ಸಂಘದವರೆಲ್ಲ ಸೇರಿ ಒಟ್ಟಾಗಿ ಕೂಡಿ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನೆರವೇರಿಸುತ್ತಿರುವುದರಿಂದಲೇ ತಾಲೂಕು ಕಲೆಯ ಬೀಡಾಗಿದೆ ಎಂದ ಅವರು, ನಮ್ಮೂರಿನ ಬನಶಂಕರಮ್ಮ ಅಮ್ಮನವರ ಉತ್ಸವ ಸಣ್ಣ ಮಕ್ಕಳ ಮೇಲೆ ಕಳಸವನ್ನು ಹೊರಿಸಿ ಮೆರವಣಿಗೆ ಹೋಗುವುದು ಉತ್ತಮ ಸಾಂಪ್ರದಾಯಕವಾಗಿದ್ದು ಇದರಿಂದ ಮಕ್ಕಳಿಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ದೇವಾಂಗ ಸಂಘದ ಕಾರ್ಯದಶರ್ಿ ಸಿ.ಎ.ಕುಮಾರಸ್ವಾಮಿ ಮಾತನಾಡಿ ನೇಕಾರರ ಬದುಕು ಅತ್ಯಂತ ದುಸ್ತರವಾಗಿದ್ದುಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಜೀವನೋಪಾಯ ಕೂಲಿ ಕೊಡುವಂತಹ ಪರಿಸ್ಥಿತಿ ಬಂದಿದೆ.ಬನದ ಹುಣ್ಣಿಮೆ ಶ್ರೀ ಬನಶಂಕರಿ ಅಮ್ಮನವರ ಜನ್ಮ ದಿನವಾಗಿದ್ದ ಈ ದಿನವನ್ನು ದೇವಾಂಗ ಜನಾಂಗದವರು ಬಹಳ ವಿಜೃಂಭಣೆಯಿಂದ ನಡೆಸಲು ಇದೇ 19ರ ಬುಧವಾರ ಮುಂಜಾನೆ ಕೆರೆ-ಬಾವಿಯಿಂದ ಅಮ್ಮನವರ ಕಳಸವನ್ನು ವೀರಮಕ್ಕಳೊಂದಿಗೆ ಕರೆತರುತ್ತಾರೆ ವಿವಿಧ ಭಜನಾ ತಂಡಗಳ ಜನಪದ ತಂಡಗಳು ಮೆರವಣಿಗೆಯೊಂದಿಗೆ ದೇವಾಲಯವನ್ನು ತಲುಪುತ್ತವೆ ನಂತರ ಸುಮಂಗಲಿಯರಿಂದ ಸಹಸ್ರ ಕುಂಕುಮಾರ್ಚನೆ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಮಧ್ಯಾಹ್ನ 12.00 ಗಂಟೆಗೆ ಅಮ್ಮನವರನ್ನು ರಥದಲ್ಲಿ ಕೂರಿಸಿ ಮೆರವಣಿಗೆಯನ್ನು ಮಾಡಲಾಗುತ್ತದೆ. ದೇವಾಲಯಕ್ಕೆ ತಲುಪಿದ ನಂತರ ವೀರ ಮಕ್ಕಳಿಂದ ಅಲಗುಸೇವೆ ಕಾರ್ಯಕ್ರಮವನ್ನು ಏರ್ಪಡಿಸಿದೆ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶೇಷಪ್ಪ ಸಿ.ಜಿ. ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದರು, ಎಸ್ ಶಂಕರಪ್ಪನವರು ಪ್ರಾಥರ್ಿಸಿದರೆ , ಸಿ.ಟಿ. ಜಯಕೃಷ್ಣ ಸ್ವಾಗತಸಿ, ಎಂ. ಬನಶಂಕರಯ್ಯನವರು ವಂದಿಸಿದರು.

Tuesday, January 4, 2011








ಜಿ.ಪಂ.ನಲ್ಲಿ ಜೆ.ಡಿ.ಎಸ್, ಬಿ.ಜೆ.ಪಿ.ಸಮಪಾಲ, ತಾ.ಪಂ.ನಲ್ಲಿ ಜೆ.ಡಿ.ಎಸ್.ಮುನ್ನಡೆ, ಬಿ.ಜೆ.ಪಿ.ಮತ್ತು ಜೆ.ಡಿ.ಯು.ಸಮಪಾಲ
ಚಿಕ್ಕನಾಯಕನಹಳ್ಳಿ,ಜ.04: ತಾಲೂಕಿನಲ್ಲಿ ಚುನಾವಣಾ ಫಲಿತಾಂಶವನ್ನು ನಿರೀಕ್ಷೆಗೂ ಮೀರಿದಂತೆ ನೀಡಿದ ಜನತೆ ಪಕ್ಷಗಳ ಭವಿಷ್ಯವನ್ನು ಬಿಚ್ಚಿಟ್ಟಿದ್ದು 5 ಜಿ.ಪಂಗಳ ಪೈಕಿ ಜೆ.ಡಿ.ಎಸ್.ಹಾಗೂ ಬಿ.ಜೆ.ಪಿ ತಲಾ ಎರಡು ಸ್ಥಾನಗಳನ್ನು ಪಡೆದರೆ, ಜೆ.ಡಿ.ಯು ಒಂದು ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಗಿದೆ. ತಾ.ಪಂ.ಯಲ್ಲಿ ಜೆ.ಡಿ.ಎಸ್ ಮೊದಲನೇ ಸ್ಥಾನ ಪಡೆದರೆ ಬಿಜೆಪಿ ಮತ್ತು ಜೆ.ಡಿ.ಯು ಸಮವಾಗಿದ್ದು, ಕಾಂಗ್ರೆಸ್ ತಾಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಸ್ಥಾನ ಪಡೆಯದೇ ಶೂನ್ಯ ಫಲಿತಾಂಶ ಪಡೆಯುವ ಮೂಲಕ ಇತಿಹಾಸದಲ್ಲೇ ಎನ್ನೆಂದು ಕಂಡರಿಯದ ರೀತಿಯಲ್ಲಿ ನೆಲಕಚ್ಚಿದೆ.
ತಾಲೂಕಿನ 19 ತಾ.ಪಂ ಕ್ಷೇತ್ರಗಳ ಪೈಕಿ ಜೆ.ಡಿ.ಎಸ್ 7, ಬಿ.ಜೆ.ಪಿ 6, ಜೆ.ಡಿ.ಯು 6ಸ್ಥಾನಗಳನ್ನು ಹಂಚಿಕೊಂಡಿವೆ.
ಜಿ.ಪಂ.ಕ್ಷೇತ್ರಗಳಲ್ಲಿ ಸ್ಫದರ್ಿಸಿದ್ದ ಅಭ್ಯಥರ್ಿಗಳು ಪಡೆದ ಮತಗಳ ವಿವರ: ಶೆಟ್ಟಿಕೆರೆ ಕ್ಷೇತ್ರ: ಒಟ್ಟು 20618 ಮತ ಚಲಾಚಣೆಯಾಗಿದ್ದು ಹೆಚ್.ಬಿ.ಪಂಚಾಕ್ಷರಯ್ಯ ಬಿ.ಜೆ.ಪಿ ಕ್ಷೇತ್ರದಿಂದ ಸ್ಫದರ್ಿಸಿದ್ದು 5501 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ, ಬಿ.ಎನ್.ಶಿವಪ್ರಕಾಶ್(ಪಕ್ಷೇತರ) 4949, ಟಿ.ಶಂಕರಲಿಂಗಪ್ಪ(ಜೆ.ಡಿ.ಯು)3832 ಬಿ.ಲಕ್ಕಪ್ಪ (ಕಾಂಗ್ರೆಸ್)3376, ಸತೀಶ್ ಸಾಸಲು(ಜೆ.ಡಿ.ಎಸ್)2422, ಬಿ.ನಾಗರಾಜು(ಪಕ್ಷೇತರ) 401, ಟಿ.ಆರ್.ಮಹೇಶ್(ಪಕ್ಷೇತರ) 137 ಮತಗಳನ್ನು ಪಡೆದಿದ್ದಾರೆ.
ಹುಳಿಯಾರು ಕ್ಷೇತ್ರ: ಒಟ್ಟು 20751 ಮತಗಳು ಚಲಾಚಣೆಯಾಗಿದ್ದು ಎನ್.ಜಿ.ಮಂಜುಳ(ಜೆ.ಡಿ.ಎಸ್) 7189ಮತಗಳನ್ನು ಪಡೆದು ಜಯಶೀಲರಾದರೆ, ಎಸ್.ಹೆಚ್.ಲತಾ (ಬಿ.ಜೆ.ಪಿ) 5335, ರೇಣುಕಾದೇವಿ.ವೈ.ಎಂ.(ಜೆ.ಡಿಯು) 3747, ಹೆಚ್.ಡಿ.ರಮಾದೇವಿ (ಕಾಂಗ್ರೆಸ್)3566, ಎನ್.ಪಿ.ಚಂದ್ರಕಲಾ(ಪಕ್ಷೇತರ) 914 ಮತಗಳನ್ನು ಪಡೆದುಕೊಂಡಿದ್ದಾರೆ.
ಹೊಯಿಸಲಕಟ್ಟೆ ಕ್ಷೇತ್ರ: ಒಟ್ಟು 17836 ಮತಗಳು ಚಲಾವಣೆಯಾಗಿದ್ದು ನಿಂಗಮ್ಮ (ಬಿ.ಜೆ.ಪಿ) 7082 ಮತಗಳನ್ನು ಪಡೆದು ಜಯಶೀಲರಾದರೆ, ಜಯಲಕ್ಷ್ಮೀ(ಜೆ.ಡಿ.ಎಸ್)5653, ಜ್ಯೋತಿ (ಕಾಂಗ್ರೆಸ್)1975, ಭಾರತಮ್ಮ (ಜೆ.ಡಿ.ಯು)3126, ಮತಗಳನ್ನು ಪಡೆದಿದ್ದಾರೆ.
ಕಂದಿಕೆರೆ ಕ್ಷೇತ್ರ: ಒಟ್ಟು 21388 ಮತಗಳು ಚಲಾವಣೆಯಾಗಿದ್ದು ಜಿ.ಲೋಹಿತಾಬಾಯಿ (ಜೆ.ಡಿ.ಯು) 9517 ಮತಗಳನ್ನು ಪಡೆದು ಜಯಶೀಲರಾದರೆ, ಈರಯ್ಯ (ಜೆ.ಡಿ.ಎಸ್)7930, ಸಿ.ರಂಗಾನಾಯ್ಕ(ಬಿಜೆಪಿ) 2286, ಜಿ.ಪರಮೇಶ್ವರಯ್ಯ(ಕಾಂಗ್ರೆಸ್)1655 ಮತಗಳನ್ನು ಪಡೆದಿದ್ದಾರೆ.
ಹಂದನಕೆರೆ ಕ್ಷೇತ್ರ: ಒಟ್ಟು 20,975 ಮತಗಳು ಚಲಾವಣೆಯಾಗಿದ್ದು ಜಾನಮ್ಮ ರಾಮಚಂದ್ರಯ್ಯ(ಜೆಡಿಎಸ್) 7531ಮತಗಳನ್ನು ಪಡೆದು ಜಯಶೀಲರಾದರೆ, ಎ.ಎಸ್.ಅನುಸೂಯಮ್ಮ(ಜೆಡಿಯು)5842, ಯಶೋಧಬಸವರಾಜು(ಬಿಜೆಪಿ)5260, ಜಯಲಕ್ಷ್ಮಮ್ಮ(ಕಾಂಗ್ರೆಸ್)1019, ಬಿ.ವಿ.ಮರುಳಮ್ಮ(ಪಕ್ಷೇತರ)991,ಪ್ರೇಮಲತಾ(ಬಿ.ಎಸ್.ಪಿ)332 ಮತಗಳನ್ನು ಪಡೆದುಕೊಂಡಿದ್ದಾರೆ.
ತಾ.ಪಂ.ಕ್ಷೇತ್ರಗಳಲ್ಲಿ ಸ್ಪಧರ್ಿಸಿದ್ದ ಅಭ್ಯಥರ್ಿಯ ಮತಗಳ ವಿವರ: ಶೆಟ್ಟಿಕೆರೆ ಕ್ಷೇತ್ರ: ಒಟ್ಟು 5550 ಮತಗಳು ಚಲಾವಣೆಯಾಗಿದ್ದು ಎ.ಬಿ.ರಮೇಶ್ಕುಮಾರ್(ಬಿಜೆಪಿ) 1557 ಮತಗಳನ್ನು ಪಡೆದು ಜಯಶೀಲರಾದರೆ, ಎ.ಬಿ.ಮಹೇಶ್(ಜೆಡಿಎಸ್)1514, ಎಸ್.ಬಿ.ರಾಜಶೇಖರಪ್ಪ(ಜೆಡಿಯು)1346, ಎಸ್.ಎಂ.ನಿಂಗಪ್ಪ(ಕಾಂಗ್ರೆಸ್) 531, ಎಸ್.ಜಿ.ಮಹೇಶ್(ಪಕ್ಷೇತರ) 175, ಉಮೇಶ್ ಎಸ್.ಆರ್(ಪಕ್ಷೇತರ)59, ಜಿ.ಟಿ.ವೆಂಕಟೇಶ್ 368 ಮತಗಳನ್ನು ಪಡೆದಿದ್ದಾರೆ.
ಹೊನ್ನೇಬಾಗಿ ಕ್ಷೇತ್ರ: ಒಟ್ಟು 5265 ಮತಗಳು ಚಲಾವಣೆಯಾಗಿದ್ದು ಹೆಚ್.ಆರ್.ಶಶಿಧರ(ಜೆಡಿಯು) 2634 ಮತಗಳನ್ನು ಪಡೆದು ಜಯಶೀಲರಾದರೆ , ಪ್ರಸನ್ನಕುಮಾರ್ ಹೆಚ್.ಜಿ.(ಬಿಜೆಪಿ)1157, ಶಂಕರಯ್ಯ(ಜೆಡಿಎಸ್) 867, ನಾಗರಾಜು ಹೆಚ್.ಟಿ(ಕಾಂಗ್ರೆಸ್) 607 ಮತಗಳನ್ನು ಪಡೆದಿದ್ದಾರೆ.
ಮತಿಘಟ್ಟ ಕ್ಷೇತ್ರ: ಒಟ್ಟು 5825 ಮತಗಳು ಚಲಾವಣೆಯಾಗಿದ್ದು ಎ.ನಿರಂಜನಮೂತರ್ಿ(ಜೆ.ಡಿಯು)2010 ಮತಗಳನ್ನು ಪಡೆದು ಜಯಶೀಲರಾದರೆ, ತಿಮ್ಮಯ್ಯ(ಜೆ.ಡಿ.ಎಸ್)1962, ಡಿ.ದೇವರತ್ನಯ್ಯ(ಬಿ.ಜೆ.ಪಿ)1567, ಕೆ.ಮಹದೇವಯ್ಯ(ಕಾಂಗ್ರೆಸ್ ಐ)194, ರಾಜಣ್ಣ (ಬಿ.ಎಸ್.ಪಿ)92 ಮತಗಳನ್ನು ಪಡೆದಿದ್ದಾರೆ.
ಹಂದನಕೆರೆ ಕ್ಷೇತ್ರ : ಒಟ್ಟು 5597 ಮತಗಳು ಚಲಾವಣೆಗೊಂಡಿದ್ದು ಡಿ.ಶಿವರಾಜು(ಜೆ.ಡಿ.ಎಸ್)2193 ಮತಗಳನ್ನು ಪಡೆದು ಜಯಶೀಲರಾದರೆ , ಎಂ.ಲಿಂಗರಾಜು(ಜೆ.ಡಿ.ಯು)1845, ಹೆಚ್.ಎನ್.ರಾಮನಾಥ(ಬಿಜೆಪಿ)1298, ಸಿದ್ದಪ್ಪ(ಕಾಂಗ್ರೆಸ್ ಐ) 261 ಮತಗಳನ್ನು ಪಡೆದಿದ್ದಾರೆ.
ದಸೂಡಿ ಕ್ಷೇತ್ರ: ಒಟ್ಟು 4237 ಮತಗಳು ಚಲಾವಣೆಗೊಂಡಿದ್ದು ಆರ್.ಪಿ.ವಸಂತಯ್ಯ(ಬಿ.ಜೆಪಿ)2162 ಮತ ಪಡೆದು ಜಯಶೀಲರಾದರೆ ಡಿ.ಬಿ.ರಮೇಶ್(ಜೆ.ಡಿ.ಎಸ್)965, ಎಂ.ಎಲ್.ನಿಂಗಪ್ಪ(ಜೆ.ಡಿ.ಯು)596, ಆರ್.ಶ್ರೀನಿವಾಸಮೂತರ್ಿ(ಪಕ್ಷೇತರ)113, ಆರ್.ಪಿ.ವಸಂತಯ್ಯ (ಬಿ.ಜೆ.ಪಿ)2162, ಡಿ.ಎಸ್.ಶಾಂತಕುಮಾರ್(ಕಾಂಗ್ರೆಸ್)401 ಮತಗಳನ್ನು ಪಡೆದಿದ್ದಾರೆ.
ಹುಳಿಯಾರು ಕ್ಷೇತ್ರ ಒಟ್ಟು 6292 ಮತಗಳು ಚಲಾವಣೆಯಾಗಿ ಬಿಬಿಫಾತಿಮ(ಜೆಡಿಎಸ್) 2147ಮತಗಳನ್ನು ಪಡೆದು ಜಯಶೀಲರಾದರೆ ಹೆಚ್.ಆರ್.ಚಂದ್ರಕಲಾ(ಜೆಡಿಯು) 1461, ವೀಣಾಧನುಷ್(ಕಾಂಗ್ರೆಸ್)1325, ರುಕ್ಸನಬಾನು(ಬಿಜೆಪಿ)1228, ಪವರ್ೀನ್(ಪಕ್ಷೇತರ) 84, ಹಸೀನಾಬಾನು(ಪಕ್ಷೇತರ) 47 ಮತಗಳನ್ನು ಪಡೆದಿದ್ದಾರೆ.
ತಿಮ್ಲಾಪುರ ಕ್ಷೇತ್ರ: ಒಟ್ಟು 5912 ಮತಗಳು ಚಲಾವಣೆಯಾದರೆ ಹೆಚ್.ಜಯಣ್ಣ(ಜೆಡಿಯು)1805 ಮತಗಳನ್ನು ಪಡೆದು ಜಯಶೀಲರಾದರೆ , ಟಿ.ಆರ್.ರಮೇಶ್(ಜೆಡಿಎಸ್) 1460, ಟಿ.ವಿ.ಚಂದ್ರಶೇಖರಯ್ಯ(ಬಿಜೆಪಿ) 1039, ಹೆಚ್.ಆರ್.ಕೃಷ್ಣಮೂತರ್ಿ(ಪಕ್ಷೇತರ) 887, ಎನ್.ಪಿ.ಕುಮಾರಸ್ವಾಮಿ(ಕಾಂಗ್ರೆಸ್) 589, ಹೆಚ್.ಚಂದ್ರಯ್ಯ(ಪಕ್ಷೇತರ) 132 ಮತಗಳನ್ನು ಪಡೆದಿದ್ದಾರೆ,
ಗಾಣಧಾಳು ಕ್ಷೇತ್ರ: ಒಟ್ಟು 4006 ಮತಗಳು ಚಲಾವಣೆಗೊಂಡಿದ್ದು ಜಿ.ಆರ್.ಸೀತರಾಮಯ್ಯ 1358(ಬಿಜೆಪಿ) ಮತ ಪಡೆದು ಜಯಶೀಲರಾದರೆ ಆರ್.ಉದಯ್ಕುಮಾರ್(ಜೆಡಿಎಸ್)1176, ಹೆಚ್.ಕೆ.ರಾಮಲಿಂಗಪ್ಪ(ಜೆಡಿಯು) 931, ಹೆಚ್.ಜಿ.ವಿಶ್ವನಾಥ್(ಕಾಂಗ್ರೆಸ್) 541 ಮತಗಳನ್ನು ಪಡೆದಿದ್ದಾರೆ.
ತಿಮ್ಮನಹಳ್ಳಿ ಕ್ಷೇತ್ರ : ಒಟ್ಟು 4724 ಮತಗಳು ಚಲಾವಣೆಗೊಂಡಿದ್ದು ಕೆ.ಎಸ್.ಸುಮಿತ್ರ(ಜೆಡಿಯು) 1680 ಮತಗಳನ್ನು ಪಡೆದು ಜಯಶೀಲರಾದರೆ ಕರಿಯಮ್ಮ(ಜೆಡಿಎಸ್) 1388, ಪುಟ್ಟಗಂಗಮ್ಮ(ಕಾಂಗ್ರೆಸ್) 1111, ಲಲಿತಮ್ಮ(ಬಿಜೆಪಿ) 545 ಮತಗಳನ್ನು ಪಡೆದಿದ್ದಾರೆ.
ಕಂದಿಕೆರೆ ಕ್ಷೇತ್ರ : ಒಟ್ಟು 5054 ಮತಗಳು ಚಲಾಚಣೆಗೊಂಡರೆ ವೈ.ಎಂ.ಉಮಾದೇವಿ 1764 ಮತಗಳನ್ನು ಪಡೆದು ಜಯಶೀಲರಾದರೆ ರೇಣುಕಮ್ಮ(ಜೆಡಿಯು) 1653, ಕ್ಯಾತಲಿಂಗಮ್ಮ(ಕಾಂಗ್ರೆಸ್) 1150, ಪಾರ್ವತಮ್ಮ(ಬಿಜೆಪಿ) 487 ಮತಗಳನ್ನು ಪಡೆದಿದ್ದಾರೆ.
ಮಾಳಿಗೆಹಳ್ಳಿ ಕ್ಷೇತ್ರ: ಒಟ್ಟು 5272 ಮತಗಳು ಚಲಾವಣೆಗೊಂಡು ಚಂದ್ರಕಲಾ ಎಂ.ಎಸ್(ಜೆಡಿಎಸ್) 2055 ಮತಗಳನ್ನು ಪಡೆದು ಜಯಶೀಲರಾದರೆ, ಲತಾ(ಜೆಡಿಎಸ್) 2101, ನಿರ್ಮಲ ಶಿವಾನಂದಯ್ಯ(ಬಿಜೆಪಿ) 903, ಎನ್.ಸಿ.ಮಧು(ಕಾಂಗ್ರೆಸ್) 213 ಮತಗಳನ್ನು ಪಡೆದಿದ್ದಾರೆ.
ಕುಪ್ಪೂರು ಕ್ಷೇತ್ರ: ಒಟ್ಟು 5387 ಮತ ಚಲಾವಣೆಗೊಂಡರೆ ಟಿ.ಡಿ.ಚಿಕ್ಕಮ್ಮ(ಜೆಡಿಯು) 1905 ಮತಗಳನ್ನು ಪಡೆದು ಜಯಶೀಲರಾದರು, ಕೆ.ಪಿ.ಪ್ರೇಮಲೀಲ(ಜೆಡಿಎಸ್) 1671, ಸುವರ್ಣಮ್ಮ ಎಸ್.ಬಿ(ಬಿಜೆಪಿ) 1379, ಪಿ.ಸುಜಾತ(ಕಾಂಗ್ರೆಸ್) 432 ಮತಗಳನ್ನು ಪಡೆದಿದ್ದಾರೆ.
ಜಯಚಾಮರಾಜಪುರ ಕ್ಷೇತ್ರ: ಒಟ್ಟು 5459 ಮತ ಚಲಾವಣೆಗೊಂಡು ಎಂ.ಎಂ.ಜಗದೀಶ್(ಬಿಜೆಪಿ) 2092 ಮತ ಪಡೆದು ಜಯಶೀಲರಾದರೆ ಎಂ.ಪಿ.ಪ್ರಸನ್ನಕುಮಾರ್(ಜೆಡಿಯು) 2028, ಬಿ.ದಯಾನಂದಮೂತರ್ಿ(ಜೆಡಿಎಸ್)652, ಶೇಖರಯ್ಯ(ಕಾಂಗ್ರೆಸ್) 604, ಕೆ.ಎಂ.ಸತೀಶ್ಬಾಬು(ಬಿಎಸ್ಪಿ) 83 ಮತಗಳನ್ನು ಪಡೆದಿದ್ದಾರೆ.
ಬರಗೂರು ಕ್ಷೇತ್ರ: ಒಟ್ಟು 5487 ಮತ ಚಲಾವಣೆಗೊಂಡು ಕೆ.ಆರ್.ಚೇತನಗಂಗಾಧರ(ಜೆ.ಡಿ.ಎಸ್) 2380 ಮತಗಳನ್ನು ಪಡೆದು ಜಯಶೀಲರಾದರೆ ನೇತ್ರಾವತಿ ಹೆಚ್.ಡಿ(ಬಿಜೆಪಿ) 1011, ಶ್ರೀದೇವಿ(ಜೆ.ಡಿ.ಯು) 1941, ಶಾರದಮ್ಮ(ಕಾಂಗ್ರೆಸ್ ಐ) 155 ಮತಗಳನ್ನು ಪಡೆದಿದ್ದಾರೆ.
ದೊಡ್ಡೆಣ್ಣೆಗೆರೆ ಕ್ಷೇತ್ರ: ಒಟ್ಟು 5352 ಮತ ಚಲಾವಣೆಗೊಂಡು ಬಿ.ಸಿ.ಹೇಮಾವತಿ(ಜೆ.ಡಿ.ಎಸ್) 1754 ಮತಗಳನ್ನು ಪಡೆದು ಜಯಶೀಲಾದರೆ ಪುಷ್ಪಾವತಿ(ಜೆ.ಡಿ.ಯು) 1632, ಬಿ.ಜಿ.ಲೀಲಾವತಿ(ಬಿ.ಜೆ.ಪಿ)983, ಎಸ್.ಗೀತಶಿವಕುಮಾರ್(ಕಾಂಗ್ರೆಸ್) 502, ಚಂದ್ರಮ್ಮ ಡಿ.ಬಿ.ಬಸವರಾಜು(ಪಕ್ಷೇತ್ರ)369, ಮಂಜಮ್ಮ(ಬಿ.ಎಸ್.ಪಿ)59, ಲಕ್ಷ್ಮೀದೇವಿ(ಪಕ್ಷೇತರ)53 ಮತಗಳನ್ನು ಪಡೆದಿದ್ದಾರೆ.
ಯಳನಡು ಕ್ಷೇತ್ರ: ಒಟ್ಟು 5787 ಮತ ಚಲಾವಣೆಗೊಂಡಿದ್ದು ಜಯಲಕ್ಷ್ಮೀ(ಬಿಜೆಪಿ) 1920 ಮತಗಳನ್ನು ಪಡೆದು ಜಯಶೀಲರಾದರೆ ತಾರಾಮಣಿಯಾದವ್(ಜೆಡಿಎಸ್) 1596, ವೈ.ಆರ್.ಲತಾಮಣಿ(ಕಾಂಗ್ರೆಸ್) 926, ಕೆ.ವಿಜಯಲಕ್ಷ್ಮಮ್ಮ (ಜೆಡಿಯು) 780, ಹೆಚ್.ಆರ್.ಜ್ಯೋತಿ(ಪಕ್ಷೇತರ) 565 ಮತಗಳನ್ನು ಪಡೆದಿದ್ದಾರೆ.
ಕೆಂಕೆರೆ ಕ್ಷೇತ್ರ: ಒಟ್ಟು 4756 ಮತ ಚಲಾವಣೆಗೊಂಡಿದ್ದು ಕೆ.ಎಂ.ನವೀನ್(ಬಿಜೆಪಿ) 2266 ಮತಗಳನ್ನು ಪಡೆದು ಜಯಶೀಲರಾದರೆ ಶಿವಕುಮಾರ್(ಜೆಡಿಯು) 1130, ಕೆ.ಆರ್.ಚನ್ನಬಸವಯ್ಯ(ಜೆಡಿಎಸ್)1126, ಎಂ.ನಾಗರಾಜು(ಕಾಂಗ್ರೆಸ್) 234 ಮತಗಳನ್ನು ಪಡೆದಿದ್ದಾರೆ.
ಹೊಯಿಸಲಕಟ್ಟೆ ಕ್ಷೇತ್ರ: ಒಟ್ಟು 5025 ಮತ ಚಲಾವಣೆಗೊಂಡಿದ್ದು ಎ.ಜಿ.ಕವಿತಾ(ಜೆಡಿಎಸ್) 1834 ಮತಗಳನ್ನು ಪಡೆದು ಜಯಶೀಲರಾದರೆ ಚಂದ್ರಪ್ರಭ (ಬಿಜೆಪಿ)1625, ಎಂ.ಪಿ.ಲಕ್ಷ್ಮೀದೇವಿ(ಕಾಂಗ್ರೆಸ್) 874, ಮೀನಾಕ್ಷಮ್ಮ(ಜೆಡಿಯು) 692 ಮತಗಳನ್ನು ಪಡೆದಿದ್ದಾರೆ.
ತೀರ್ಥಪುರ ಕ್ಷೇತ್ರ: ಒಟ್ಟು 6563 ಮತ ಚಲಾವಣೆಗೊಂಡಿದ್ದು ಲತ.ಎಂ.ಇ(ಜೆಡಿಯು) 3036 ಮತಗಳನ್ನು ಪಡೆದು ಜಯಶೀಲರಾದರೆ, ಕೆ.ಬಿ.ಮಂಜುಳ(ಜೆಡಿಎಸ್) 2290,ಲಕ್ಷ್ಮೀದೇವಮ್ಮ(ಬಿಜೆಪಿ) ಎಂ.ಕೆ 783, ಧನಲಕ್ಷ್ಮೀ(ಕಾಂಗ್ರೆಸ್) 454 ಮತಗಳನ್ನು ಪಡೆದಿದ್ದಾರೆ.

Monday, January 3, 2011

Sunday, January 2, 2011


ಮತ ಎಣಿಕೆಗೆ ಸಕಲ ಸಿದ್ದತೆ, ಪಟ್ಟಣದಲ್ಲಿ ಬಿಗಿ ಬಂದುಬಸ್ತು
ಚಿಕ್ಕನಾಯಕನಹಳ್ಳಿ,ಜ.02: ತಾಲೂಕಿನ ಚುನಾವಣಾ ಕ್ಷೇತ್ರಗಳ ಮತ ಎಣಿಕೆಗಾಗಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜಿನ 7ಕೊಠಡಿಗಳಲ್ಲಿ ಮತಎಣಿಕೆ ನಡೆಯಲಿದ್ದು 3ಕೊಠಡಿ ಜಿ.ಪಂ ಕ್ಷೇತ್ರ, 4ಕೊಠಡಿ ತಾ.ಪಂ ಕ್ಷೇತ್ರಗಳಿಗೆ ಮೀಸಲಿಡಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜ್ ತಿಳಿಸಿದ್ದಾರೆ.
ಜನವರಿ 4ರ ಮಂಗಳವಾರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಕಾರ್ಯಕ್ರಮ ನಡೆಯಲಿದ್ದು 100ಜನ ಪೋಲಿಸ್ ಸಿಬ್ಬಂದಿ ಮತ್ತು 100 ಮಂದಿ ಎಣಿಕೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಅಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಕಾನೂನು ಸುವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮಧ್ಯ ಮಾರಟವನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕಾರ್ಯ ಮಧ್ಯಾಹ್ನ 12ರ ಹೊತ್ತಿಗೆಲ್ಲಾ ಮುಗಿಯುವ ನಿರೀಕ್ಷಿ ಇದೆ ಎಂದರು.
ಜಿ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : ಜಿ.ಪಂ ಕ್ಷೇತ್ರಗಳಿಗೆ 3ಕೊಠಡಿ ಮೀಸಲಿಟ್ಟಿದ್ದು 1ನೇ ಕೊಠಡಿ ಹೇಮಾವತಿಯಲ್ಲಿ ಹುಳಿಯಾರು ಮತ್ತು ಹೊಯ್ಸಳಕಟ್ಟೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 2ನೇ ಕೊಠಡಿ
ಘಟ್ಟಪ್ರಭ ಕಂದಿಕೆರೆ , ಹಂದನಕೆರೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 3ನೇ ಕೊಠಡಿ ವೇದಾವತಿಯಲ್ಲಿ ಶಟ್ಟಿಕೆರೆ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ತಾ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : 4ನೇ ಕೊಠಡಿ ಶರಾವತಿಯಲ್ಲಿ ತಾ.ಪಂ.ನ 6ಕ್ಷೇತ್ರಗಳಾದ ಹುಳಿಯಾರು, ಯಳನಡು, ತಿಮ್ಲಾಪುರ, ಕೆಂಕೆರೆ, ಗಾಣದಾಳು, ಹೊಯ್ಸಲಕಟ್ಟೆ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
5ನೇ ಕೊಠಡಿ ನೇತ್ರಾವತಿಯಲ್ಲಿ 6ಕ್ಷೇತ್ರಗಳಾದ ತಿಮ್ಮನಹಳ್ಳಿ, ತೀರ್ಧಪುರ, ಕಂದಿಕೆರೆ, ಮಾಳಿಗೆಹಳ್ಳಿ, ಹೊನ್ನೆಬಾಗಿ, ಜೆ.ಸಿ.ಪುರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
6ನೇ ಕೊಠಡಿ ಕೃಷ್ಣದಲ್ಲಿ ಶೆಟ್ಟಿಕೆರೆ ಮತ್ತು ಕುಪ್ಪೂರು ಈ 2ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
7ನೇ ಕೊಠಡಿ ಮಲಪ್ರಭದಲ್ಲಿ 5ಕ್ಷೇತ್ರಗಳಾದ ಮತಿಘಟ್ಟ, ಬರಗೂರು, ಹಂದನಕೆರೆ, ಡಿ.ವೈ.ಗೆರೆ, ದಸೂಡಿ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
ಎ.ಬಿ.ವಿ.ಪಿ. ತಾಲೂಕು ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಜ.02: ಆಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲೂಕು ಘಟ್ಟದ ನೂತನ ಕಛೇರಿ ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಉದ್ಘಾಟಿಸಿದರು.
ಪಟ್ಟಣದ ಚಿಕ್ಕ ಆಂಜನೇಯ ಸ್ವಾಮಿ ಬಳಿ ಉದ್ಘಾಟನೆಗೊಂಡ ಅಭಾವಿಪ ಕಛೇರಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತು.ಹಾ.ಒಕ್ಕೂಟದ ಅದ್ಯಕ್ಷ ಶಿವನಂಜಪ್ಪ ಹಳೇಮನೆ, ಅಭಾವಿಪ ಸಂಘಟನೆಯು ಹೆಚ್ಚು ಪ್ರಚಲಿತವಾಗಿ ವಿದ್ಯಾಥರ್ಿಗಳ ಸಮಸ್ಯೆಗಳನ್ನು ನಿವಾರಿಸಲು ಹೋರಾಡಬೇಕು, ಚಿಕ್ಕದಾಗಿ ಸ್ಥಾಪಿತವಾಗಿರುವ ಕಛೇರಿ ಅತಿ ಎತ್ತರಕ್ಕೆ ಬೆಳೆಯಬೇಕೆಂದು ಆಶಿಸಿದರು.
ಸಮಾರಂಭದಲ್ಲಿ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಮಾರಸಂದ್ರ ಸಿದ್ದರಾಮಯ್ಯ, ಕಾರ್ಯಕರ್ತರುಗಳಾದ ರಾಕೇಶ್, ನವೀನ್, ಚಂದನ್ ಉಪಸ್ಥಿತರಿದ್ದರು.

Thursday, December 30, 2010

Sunday, December 26, 2010


ಕೃಷಿ ಅಭಿವೃದ್ದಿಗೆ ಬ್ಯಾಂಕ್ಗಳು ಹೆಚ್ಚು ಆಥರ್ಿಕ ಸೌಲಭ್ಯ ನೀಡಲು ಬದ್ದ
ಚಿಕ್ಕನಾಯಕನಹಳ್ಳಿ,ಡಿ.26: ಕೃಷಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಒಂದು ಉದ್ಯಮವೆಂದು ತಿಳಿದು ಉಳುಮೆ ಮಾಡಿದರೆ ಉತ್ತಮ ಫಸಲು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಕೆನರಾ ಬ್ಯಾಂಕ್ ಉಪಪ್ರಬಂಧಕ ರವೀಂದ್ರ ಭಂಡಾರಿ ಹೇಳಿದರು.
ತಾಲೂಕಿನ ಅಣೇಕಟ್ಟೆಯಲ್ಲಿ ನಡೆದ ಧರಿತ್ರಿ ಕೃಷಿಕರ ಕೂಟ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಾಹಿತಿ ಸಂಗ್ರಹಣೆ, ತರಬೇತಿ, ಮಾರುಕಟ್ಟೆಯು ಬ್ಯಾಂಕ್ನೊಂದಿಗಿನ ಸಂಬಂಧವಾಗಿದ್ದು, ಕೃಷಿಕರ ಒಕ್ಕೂಟ, ಕೇಂದ್ರವಾಗಿ ಪರಿವರ್ತನೆಯಾಗಿ ಸಂಘಟನೆಯ ಮುಖೇನ ಕೆಲಸ ನಿರ್ವಹಿಸಿದರ ಯಶಸ್ವಿಯಾಗುತ್ತದೆ ಎಂದ ಅವರು ಜನಪರ ಕಾರ್ಯಗಳಿಗೆ ಕೆನರಾ ಬ್ಯಾಂಕ್ ಸದಾ ಸಹಕಾರ ನೀಡುವುದೆಂದು ತಿಳಿಸಿದರು.
ನಬಾಡರ್್ ಸಹಾಯಕ ಪ್ರಬಂಧಕ ಅನಂತಕೃಷ್ಣ ಮಾತನಾಡಿ ಕೃಷಿಕರ ಕೂಟಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು, ಮಾಸಿಕ ಸಭೆಗಳನ್ನು ನಡೆಸಲು, ನಬಾಡರ್್ನಿಂದ ಹತ್ತು ಸಾವಿರ ರೂಗಳನ್ನು ಪ್ರತಿವರ್ಷ ನೀಡಲಾಗುವುದು ಮತ್ತು ನಬಾಡರ್್ ಸಂಸ್ಥೆಯು ರೈತರ ಏಳ್ಗೆಗಾಗಿಯೇ ಇರುವ ಒಂದು ಸಕರ್ಾರಿ ಸಂಸ್ಥೆಯಾಗಿದ್ದು ಯಾವುದೇ ಸಹಾಯ ಬೇಕಾದಲ್ಲಿ ತಮ್ಮನ್ನು ಸಂಪಕರ್ಿಸಲು ಕೋರಿದರು.
ಅಕ್ಷಯ ಕಲ್ಪ ಸಂಸ್ಥೆ ನಿದರ್ೇಶಕ ಡಾ.ಜಿ.ಎನ್.ಎಸ್.ರೆಡ್ಡಿ ಮಾತನಾಡಿ ರೈತರು ಮಾರುಕಟ್ಟೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಬಾಡರ್್ನಿಂದ ದೊರಕುವ ಉಗ್ರಾಣ ಸಹಾಯಧನವನ್ನು ಉಪಯೋಗಿಸಿಕೊಳ್ಳಬೇಕು ಎಂದ ಅವರು ಕೇವಲ ಸೆಮಿನಾರ್ ರೈತರಾಗದೆ ಕ್ರಿಯೆಯ ರೈತರಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಧರಿತ್ರಿ ಕೃಷಿಕರ ಕೂಟದ ಮುಖ್ಯ ಸಂಚಾಲಕ ನಂಜಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶ್, ವೀರಣ್ಣ ಉಪಸ್ಥಿತರಿದ್ದರು.
ಕೃಷಿ ವಿಸ್ತರಣಾಧಿಕಾರಿ ಮನೋಜ್ನಾಯಕ್ ಸ್ವಾಗತಿಸಿದರೆ, ಸಂಚಾಲಕ ರಘುರಾಂ ನಿರೂಪಿಸಿ, ನವಿಲೆರಘು ವಂದಿಸಿದರು.

ವಿಕಲಚೇತನಿರಿಗೆ ಉಚಿತ ಕೃತಕ ಉಪಕರಣಗಳ ಜೊಡಣೆ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.26: ಮುಂಗೈ ಮತ್ತು ಕಾಲಿಲ್ಲದವರಿಗಾಗಿ ಕೃತಕವಾಗಿ ಕಾಲುಗಳು, ಪೋಲಿಯೋ ಪೀಡಿತರಿಗೆ ಕ್ಯಾಲಿಪರ್ಸಗಳನ್ನು ರೋಟರಿ ಸಂಸ್ಥೆ ಉಚಿತವಾಗಿ ಇದೇ ಜನವರಿ 3 ರಿಂದ 9ರವರಗೆ ನೀಡುವುದು ಎಂದು ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ತಿಳಿಸಿದ್ದಾರೆ.
ರೋಟರಿ ಬೆಂಗಳೂರು ಪೀಣ್ಯಾ ಮತ್ತು ಜೈಪುರ ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿವತಿಯಿಂದ ಈ ಕಾರ್ಯಕ್ರಮ ಏರ್ಪಡಿಸಿದ್ದು ಉಚಿತವಾಗಿ ಪೋಲಿಯೋ ಕರೆಕ್ಟಿವ್ ಸರ್ಜರಿಗೆ ನೋಂದಾವಣೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ 9886732338ಗೆ ಸಂಪಕರ್ಿಸಲು ಕೋರಿದ್ದಾರೆ.


Saturday, December 25, 2010

ಜೆ.ಡಿ.ಎಸ್, ಬಿ.ಜೆ.ಪಿ. ಸಿಂಹಪಾಲಿಗಾಗಿ ಹೋರಾಟ. ಜೆ.ಡಿ.ಯು, ಕಾಂಗ್ರೆಸ್ ಸ್ಥಾನ
ಹೆಚ್ಚಿಸಿಕೊಳ್ಳುವ ಹಠ.

(ಕೆ.ಎನ್.ಎನ್)
ಚಿಕ್ಕನಾಯಕನಹಳ್ಳಿ,ಡಿ.25: ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಮತದಾರನನ್ನು ಓಲೈಸುವ ಅಂತಿಮ ಪ್ರಯತ್ನವಾಗಿ ಆಮೀಷಕ್ಕೆ ಇಡು ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ಇದರಿಂದಾಗಿ ಕ್ಷಣ ಕ್ಷಣಕ್ಕೂ ಅಬ್ಯಾಥರ್ಿಗಳ ಪರವಾದ ವಾತಾವರಣ ಬದಲಾಗುತ್ತಿದೆ.
ನಾಮಪತ್ರ ಅಂತಿಮಗೊಂಡು ನಿಜವಾದ ಅಬ್ಯಾಥರ್ಿಗಳು ಯಾರೆಂಬುದು ಸ್ಪಷ್ಟವಾದ ಐದಾರು ದಿನಗಳ ತನಕ ಒಂದು ರೀತಿಯ ಅಲೆ ನಿಮರ್ಾಣವಾಗಿದ್ದರೆ, ಶುಕ್ರವಾರದಿಂದ ಅದರ ಸ್ವರೂಪವೇ ಬದಲಾಗುತ್ತಿದೆ. ಕೊನೆಯ ಎರಡು ದಿನಗಳಲ್ಲಿ ಚುನಾವಣೆಯ ತಂತ್ರಗಳು ವಿಭಿನ್ನರೀತಿಯಾಗಿರುವುದರಿಂದ ಮತದಾರರ ಒಲವು ಯಾವ ಕಡೆ ಎಂಬುದನ್ನು ಸುಲಭವಾಗಿ ಅಥರ್ೈಸುವುದು ಕಷ್ಟ ಸಾಧ್ಯವೇ ಸರಿ.
ಅಬ್ಯಾಥರ್ಿಗಳ ಹಾಗೂ ಅವರ ಬೆಂಬಲಿಗರ ಹಲವಾರು ತಂತ್ರಗಾರಿಕೆಗಳ ನಡುವೆಯೂ, ಮತದಾರ ತಾನು ಯಾರಿಗೆ ಓಟು ನೀಡಬೇಕೆಂಬ ಗುಟ್ಟನ್ನು ಆತ್ಮೀಯವಾಗಿ ಮಾತಿಗೆಳೆದಾಗ ಮಾತ್ರ ಸೂಕ್ಷ್ಮವಾಗಿ ತಿಳಿಸ ಬಲ್ಲ. ಕೆಲಸಕ್ಕಾಗಿ ಪತ್ರಿಕೆ ಗ್ರಾಮಸ್ಥರಿಂದ ಪಡೆದ ವಿವರಣೆಗಳನ್ನು ವಿಶ್ಲೇಷಿಸಿದಾಗ ದೊರೆತ ಮಾಹಿತಿ ಇಂತಿದೆ.
ತಾಲೂಕಿನಲ್ಲಿನ ಐದು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪೈಕಿ ಬಿ.ಜೆ.ಪಿ ಹಾಗೂ ಜೆ.ಡಿ.ಎಸ್. ಸಿಂಹಪಾಲನ್ನು ಪಡೆಯುವುದಾಕ್ಕಾಗಿ ಶತಾಯಗಥಾಯ ಹೋರಾಡುತ್ತಿದ್ದರೆ, ಕಾಂಗ್ರೆಸ್ ಹಾಗೂ ಜೆ.ಡಿ.ಯು ತಲಾ ಎರಡು ಕ್ಷೇತ್ರಗಳನ್ನು ಪಡೆಯಲೇ ಬೇಕೆಂದು ಹಠ ಹಿಡಿದಿವೆ. ನಡುವೆ ಜೆ.ಡಿ.ಯು ಹಾಗೂ ಬಂಡಾಯ ಅಬ್ಯಾಥರ್ಿ ಬಲ ಮೇಲುಗೈ ಆದರೆ ಇದರಿಂದ ಬಿ.ಜೆ.ಪಿ.ಗೆ ಸಹಿಸಿಕೊಳ್ಳುವುದು ಕಷ್ಟವಾದರೆ, ಕಾಂಗ್ರೆಸ್ ಬಲಿಷ್ಟವಾದಷ್ಟು ಜೆ.ಡಿ.ಎಸ್.ಗೆ ಪೆಟ್ಟು ಗ್ಯಾರಂಟಿ.
ಮಾಜಿ ಸಿ.ಎಂ. ಕುಮಾರಸ್ವಾಮಿ ಗರಡಿಯಲ್ಲಿ ಚೆನ್ನಾಗಿ ಪಳಗಿರುವ ಶಾಸಕ ಸಿ.ಬಿ.ಸುರೇಶ್ ಬಾಬು, ಇತ್ತೀಚೆಗಂತೂ ತಂತ್ರಗಾರಿಕೆ ರೂಪಿಸುವಲ್ಲಿ ಸಿದ್ದ ಹಸ್ತರಾಗಿರುವಂತಿದೆ. ತಮ್ಮ ಯಾವುದೇ ನಡೆಯನ್ನು ಬಿಟ್ಟುಕೊಡದೆ ಚುನಾವಣಾ ತಂತ್ರಗಳನ್ನು ರಾತ್ರಿ ಕಾಯರ್ಾಚರಣೆಗೆ ಮೀಸಲಿಟ್ಟಿದ್ದಾರೆ. ಬಿ.ಜೆ.ಪಿ. ಕಿರಣ್ಕುಮಾರ್ ರವರು ತಮ್ಮ ಅನುಭವದ ಜೊತೆಗೆ ಸಂಸದ ಜಿ.ಎಸ್.ಬಸವರಾಜು ರವರೊಂದಿಗೆ ಒಂದು ರೌಂಡ್ ಬಂದಿದ್ದಾರೆ ಮತದಾರರ ಆಸೆ ಆಮೀಷಗಳನ್ನು ಪೂರೈಸಲು ಸನ್ನದ್ದರಾಗಿದ್ದಾರೆ ಹಣವನ್ನು ಸ್ಪಲ್ಪ ಧಾರಳವಾಗಿಯೇ ಕೈ ಬಿಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಜೆ.ಡಿ.ಯು. ಜೆ.ಸಿ.ಮಾಧುಸ್ವಾಮಿ ಪಕ್ಷಕ್ಕಿಂತ ನಾಯಕತ್ವಕ್ಕೆ ಬೆಲೆ ಕೊಡಿ, ಬೆಂಗಳೂರಿನಲ್ಲಿರುವ ಜನರು ಬೇಕೇ, ಕ್ಷೇತ್ರದಲ್ಲಿ ವಾಸ್ತವ್ಯ ಇರುವ ನಾಯಕರು ಬೇಕೊ ಆರಿಸಿಕೊಳ್ಳಿ ಎಂಬ ಭಾವನಾತ್ಮಕ ಮಾತುಗಳಿಂದ ಜನರನ್ನು ತಮ್ಮ ಪರವಾಗಿ ಎಳೆದುಕೊಳ್ಳುವ ಜೊತೆಗೆ ತಮ್ಮ ಕೈಲಾದ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರೆ. ಕಾಂಗ್ರೆಸ್ನಲ್ಲಿ ಈಗ ಒಂದಿಷ್ಟು ಚೇತರಿಕೆಯ ವಾತಾವರಣ ಮೂಡಿದೆ, ಹೊಯ್ಸಳಕಟ್ಟೆ, ಹುಳಿಯಾರು, ಕಂದಿಕೆರೆ ಜಿ..ಕ್ಷೇತ್ರಗಳಲ್ಲಿ ಪದೇ ಪದೇ ಕಾಣಸಿಗುತ್ತಿರುವ ಜಯಚಂದ್ರ ರವರ ಮಗ ಸಂತೋಷ ಇಲ್ಲಿಯೇ ಗಿರಿಕಿ ಹೊಡೆಯುತ್ತಿದ್ದಾರೆ. ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ ತಮ್ಮ ಕೈಲಾದಷ್ಟು ಕಾರ್ಯಕರ್ತರನ್ನು ಹುರುದುಂಬಿಸುತ್ತಿದ್ದಾರೆ.
ಜಿ.ಪಂ. ಕ್ಷೇತ್ರಗಳ ಪೈಕಿ ಶೆಟ್ಟೀಕೆರೆ ಕ್ಷೇತ್ರಕ್ಕೆ ಎಲ್ಲಿಲ್ಲದ ಮಹತ್ವ ಯಾಕೆಂದರೆ ತಾಲೂಕಿನ ಗಣಿ ಪ್ರದೇಶದಲ್ಲಿನ ಶೇ.80ರಷ್ಟು ಖನಿಜ ಇರುವುದು ಪ್ರದೇಶದ ವ್ಯಾಪ್ತಿಯಲ್ಲಿಯೇ, ಈಗಾಗಿ ಇಲ್ಲಿ ಐದು ಜನ ಅಬ್ಯಾಥರ್ಿಗಳು. ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯಲು ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಯು, ಜೆ,ಡಿ.ಎಸ್ ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ. ಇಲ್ಲಿ ಬಿ.ಜೆ.ಪಿ.ಯವರ ಕಾಲನ್ನು ಜೆ.ಡಿ.ಯು ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ ಎಳೆಯುತ್ತಿದ್ದರೆ, ಕಾಂಗ್ರೆಸ್ನವರ ಕಾಲನ್ನು ಜೆ.ಡಿ.ಎಸ್.ನವರು ಎಳೆಯುತ್ತಿದ್ದಾರೆ.
ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಆರಂಭದಿಂದ ಇಲ್ಲಿಯವರೆಗೂ ಗೆದ್ದಿರುವವರು ಲಿಂಗಾಯಿತರೇ ಹೆಚ್ಚು, ಇಲ್ಲಿ ಹಿಂದುಳಿದ ವರ್ಗಗಳ ಮತಗಳೂ ನಿಣರ್ಾಯಕವಾದವು ಎಂಬುದನ್ನು ಇತ್ತೀಚಗಷ್ಟೇ ಅರಿತಿರುವುದರಿಂದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಹಿಂದುಳಿದವರನ್ನು ಕಣಕ್ಕಿಳಿಸಿದ್ದಾರೆ. ಜೆ.ಡಿ.ಎಸ್. ಸಾಸಲು ಸತೀಶ್ ಇಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಲಕ್ಕಪ್ಪನವರಿಗೆ ತೊಡರಗಾಲು ಆಗುತ್ತಾರೆಯೇ ಹೊರತು ಗೆಲ್ಲುವ ಅವಕಾಶಗಳು ಕಡಿಮೆ. ಜೆ.ಡಿ.ಯುನ ಶಂಕರಲಿಂಗಯ್ಯನಿಗೆ ಹಿಂದೆ ಸೋತಿದ್ದಾರೆಂಬ ಅನುಕಂಪ ಹಾಗೂ ಜೆ.ಸಿ.ಎಂ. ಪ್ರಭಾವಳಿ ಕೆಲಸ ಮಾಡಬೇಕಿದೆ. ಸದ್ಯಕ್ಕೆ ಇಲ್ಲಿ ಕಾಂಗ್ರೆಸ್ನ ಬಿ.ಲಕ್ಕಪ್ಪ ಹಾಗೂ ಪಕ್ಷೇತರ ಅಬ್ಯಾಥರ್ಿ ಬಿ.ಎನ್.ಶಿವಪ್ರಕಾಶ್ಗೆ ನೇರ ಹಣಾಹಣಿ ಇದ್ದರೂ, ಬಿ.ಜೆ.ಪಿ. ಅಬ್ಯಾಥರ್ಿ ಪಂಚಾಕ್ಷರಯ್ಯ ಪ್ರಬಲ ಅಬ್ಯಾಥರ್ಿಯೇ, ಮೂವರು ಲಿಂಗಾಯಿತರು ಓಟಗಳನ್ನು ಹಂಚಿಕೊಳ್ಳಲಿದ್ದು, ಹಿಂದುಳಿದವರ ಪೈಕಿ ಇಬ್ಬರಿದ್ದು ಉಳಿದ ಜಾತಿಯವರು ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಯಾರೇ ಗೆದ್ದರೂ ಅಲ್ಪ ಮತಗಳ ಅಂತರದಲ್ಲೇ. ಚುನಾವಣೆಯ ದಿನ ಯಾರ್ಯಾರ ಬೆಂಬಲಕ್ಕೆ ಯಾರ್ಯಾರು ಪಾಂಪ್ಲೇಟ್ ಹಿಡಿದು ನಿಲ್ಲುತ್ತಾರೆ ಎಂಬುದರ ಮೇಲೂ ಒಂದು ಕಣ್ಣಿದೆ.
ಕಂದಿಕೆರೆ ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳು ಸ್ಪಧರ್ಿಸಿವೆ ಇಲ್ಲಿ ಪಕ್ಷೇತರರಿಲ್ಲ, ಬಂಡಾಯದ ಬಿಸಿಯೂ ಕಡಿಮೆ. ಇಲ್ಲಿ ಆರಂಭದಲ್ಲಿ ಕಾಂಗ್ರೆಸ್ನ ಪರಮೇಶ್ವರಯ್ಯ ವೀಕ್ ಎಂಬಂತೆಯೇ ಇತ್ತು, ಆದರೆ ಸಂತೋಷ ಜಯಚಂದ್ರ ಅಖಾಡಕ್ಕಿಣದ ಮೇಲೆ ಸ್ವಲ್ಪ ಚೇತರಿಕೆ ಕಂಡಿದೆ, ಬಿ.ಜೆ.ಪಿ.ಪಕ್ಷದ ಆಲದಕಟ್ಟೆ ಸಿ.ರಂಗನಾಯ್ಕ ಬೆಂಗಳೂರಿನಿಂದ ಧುತ್ತನೆ ಬಂದು ನಿಂತಿರುವದರಿಂದ ಸ್ಥಳೀಯರೇ ಆದರೂ ಇವರು ಕ್ಷೇತ್ರದ ಜನರಿಗೆ ಹೊರಗಿನಂತೆ ಕಾಣುತ್ತಿದ್ದಾರೆ. ಇಲ್ಲಿ ಜೆ.ಡಿ.ಯು ಹಾಗೂ ಜೆ.ಡಿ.ಎಸ್.ಗೆ ನೇರ ಸ್ಪಧರ್ೆ. ಜೆ.ಡಿ.ಎಸ್. ಹೀರಯ್ಯ ಕ್ಷೇತ್ರಕ್ಕೆ ಹೊಸಬ, ಶಾಸಕ ಸಿ.ಬಿ.ಸುರೇಶ್ ಬಾಬು ರವರ ಬೆಂಬಲ ಪ್ರಬಲವಾಗಿ ಕೆಲಸ ಮಾಡಿದರೆ ಉಂಟು ಇಲ್ಲದಿದ್ದರೆ, ಜೆ.ಡಿ.ಯು. ಅಬ್ಯಾಥರ್ಿ ಲೋಹಿತಾ ಬಾಯಿಗೆ ಅವಕಾಶ ಹೆಚ್ಚು. ಲೋಹಿತಾ ಇಷ್ಟು ಪ್ರಬಲವಾಗಲು ಕಾರಣ ಅಬ್ಯಾಥರ್ಿಯ ಭಾವ ಸಿಂಗದಹಳ್ಳಿ ರಾಜ್ಕುಮಾರ್ಗೆ ಕ್ಷೇತ್ರದಲ್ಲಿರುವ ನೆಟ್ ವಕರ್್ ಹಾಗೂ ಕಳೆದ ಜಿ.ಪಂ.ಗಳಲ್ಲಿ ಸೋತಿದ್ದಾರೆಂಬ ಸಿಂಪತಿ ಚೆನ್ನಾಗಿ ಕೆಲಸ ಮಾಡಿತ್ತಿರುವುದರಿಂದ ಲೋಹಿತಾ ಬಾಯಿಯ ಗೆಲುವನ್ನು ತಡೆಯುವುದು ಬೇರೆ ಅಬ್ಯಾಥರ್ಿಗಳಿಗೆ ಕಷ್ಟ ಸಾಧ್ಯ.
ಹಂದನಕೆರೆ ಜಿ.ಪಂ. ಕ್ಷೇತ್ರದಲ್ಲಿ ಆರು ಜನ ಸ್ಪಧರ್ೆಯಲ್ಲಿದ್ದು, ಜೆ.ಡಿ.ಎಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಯು ತ್ರಿಕೋನ ಸ್ಪಧರ್ೆ ಇದೆ. 40 ಮತಗಟ್ಟೆಗಳ ಪೈಕಿ 25 ಮತಗಟ್ಟೆಗಳಲ್ಲಿ ಜೆ.ಡಿ.ಎಸ್. ಜಾನಮ್ಮ ರಾಮಚಂದ್ರಯ್ಯ, ಯಶೋಧ ಬಸವರಾಜು ನೇರ ಹಣಾಹಣಿಯಲ್ಲಿದ್ದಾರೆ, ಉಳಿದ 15 ರಲ್ಲಿ ಜೆ.ಡಿ.ಯು. .ಎಸ್. ಅನುಸೂಯಮ್ಮ ಪ್ರಬಲರಾಗಿದ್ದಾರೆ. ಯಾವ್ಯಾವ ಮತಗಟ್ಟೆಗಳಲ್ಲಿ ಯಾರ್ಯಾರು ಯಾರ್ಯಾರ ಸೀರೆಯ ಸೆರಗು ಹಿಡಿದು ಎಳೆದಾಡುತ್ತಾರೊ ಹೇಳುವುದು ಕಷ್ಟ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳಿಂದ ನಾಲ್ಕು ಅಬ್ಯಾಥರ್ಿಗಳು ಸ್ಪಧರ್ೆಯಲ್ಲಿದ್ದಾರೆ ಇದರಲ್ಲಿ ಆರಂಭದಲ್ಲಿ ಜೆ.ಡಿ.ಎಸ್ನ ಜಯಲಕ್ಷ್ಮಿ, ಬಿ.ಜೆ.ಪಿ. ನಿಂಗಮ್ಮ ನವರ ಬೆಂಬಲಿಗರುಗಳು ನಮ್ಮಿಬ್ಬರಲ್ಲಿ ಯಾರು ಬೇಕಾದರೂ ಗೆಲ್ಲ ಬಹುದೆಂದು ಅಂದುಕೊಂಡಿದ್ದರು, ಆದರೆ ಈಗ ಕಾಂಗ್ರೆಸ್ನ ಸಂತೋಷ ಜಯಚಂದ್ರ ಲವಲವಿಕೆಯಿಂದ ಓಡಾಡುತ್ತಿರುವುದು ಜೆ.ಡಿ.ಯು. ವರಿಷ್ಠ ಮಾಧುಸ್ವಾಮಿ ಜನರನ್ನು ತಮ್ಮ ಮಾತಿನ ಮೋಡಿಗೆ ಎಳೆದುಕೊಂಡಿರುವುದರಿಂದ ಜಯಲಕ್ಷ್ಮಿ ಮತ್ತು ನಿಂಗಮ್ಮ ಹೆಚ್ಚು ತ್ರಾಸು ಪಡಬೇಕಿದೆ.
ಹುಳಿಯಾರು ಜಿ.ಪಂ. ಕ್ಷೇತ್ರದಲ್ಲಿ 5 ಜನ ಮಹಿಳೆಯರಲ್ಲಿ ಹೊರೆ ಹೊತ್ತಿರುವ ಎನ್.ಜಿ. ಮಂಜುಳ ನಾನು ಮುಂದು ಎಂದರೆ, ಕಮಲ ಹಿಡಿದಿರುವ ಮಹಿಳೆ ಎಸ್.ಎಚ್.ಲತಾ ನಾನೇನು ಕಮ್ಮಿ ಇಲ್ಲ ಎನ್ನುತ್ತಿದ್ದಾರೆ, ರೇಣುಕಾದೇವಿ ಬಾಣ ಹಿಡಿದು ಯಾರಿಗೆ ಹೊಡೆಯಲಿ ಎನ್ನುತ್ತಿದ್ದಾರೆ, ರಮಾದೇವಿ ಓಟದಲ್ಲಿ ಸ್ವಲ್ಪ ಮುಂದಿರುವ ಇಬ್ಬರ ಪೈಕಿ ಯಾರಿಗೆ ಕೈ ಕೊಡಲಿ ಎನ್ನುತ್ತಿದ್ದಾರೆ. ಬಾಣದ ಹೊಡೆತದಿಂದ ಹಾಗೂ ಕೈ ಕೆಲಸದವರಿಂದ ಮಂಜುಳ ಹಾಗೂ ಲತಾ ಇಬ್ಬರಲ್ಲಿ ಜಯಲಕ್ಷ್ಮಿ ಯಾರ ಕೈ ಹಿಡಿಯುತ್ತಾರೆ ನೋಡಬೇಕಿದೆ.
ತಾ.ಪಂ. ಕ್ಷೇತ್ರಗಳ ಪಕ್ಷವಾರು ವಿಶ್ಲೇಷಣೆ: 19 ತಾ.ಪಂ. ಕ್ಷೇತ್ರಗಳ ಪೈಕಿ ಜೆ.ಡಿ.ಎಸ್. ಏಳು ಕ್ಷೇತ್ರಗಗಳಲ್ಲಿ, ಜೆ.ಡಿ.ಯು. ಐದು ಕ್ಷೇತ್ರಗಳಲ್ಲಿ, ಬಿ.ಜೆ.ಪಿ. ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮೂರು ಸ್ಥಾನಗಳಲ್ಲಿ ಮುಂದಿವೆ.
ಶುಕ್ರವಾರ ರಾತ್ರಿ ಹಾಗೂ ಶನಿವಾರ ನಡೆಯುವ ಚುನಾವಣಾ ತಂತ್ರಗಳನ್ನು ಯಾವ್ಯಾವ ಪಕ್ಷಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೂ ಫಲಿತಾಂಶ ನಿಂತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ

Thursday, December 23, 2010





ಬೆರಳ ತುದಿಯಲ್ಲಿ ಜ್ಞಾನ ಹೊಂದಿರುವವರ ಜೊತೆ ಗ್ರಾಮೀಣ ವಿದ್ಯಾಥರ್ಿಗಳು ಸ್ಪಧರ್ಿಸಬೇಕಿದೆ.
ಚಿಕ್ಕನಾಯಕನಹಳ್ಳಿ,ಡಿ.19: ಅಕ್ಷರ ಜ್ಞಾನ ಅಹಂಕಾರವಾಗಬಾರದು, ಅಂತಃಕರಣ, ಆತ್ಮವಿಶ್ವಾಸ, ತಿಳುವಳಿಕೆಯನ್ನು ಹೆಚ್ಚಿಸುವಂತಹದಾಗಬೇಕು ಎಂದು ಸಾಹಿತಿ ಪ್ರೊ.ಮ.ಲ.ನ.ಮೂತರ್ಿ ಅಭಿಪ್ರಾಯಪಟ್ಟರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಢಶಾಲೆಯ ವಾಷರ್ಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು. ಜ್ಞಾನದೊಂದಿಗೆ ವಿಧೇಯತೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಾಗ ಅಕ್ಷರ ಸಂಸ್ಕೃತಿಗೆ ಶ್ರೇಷ್ಠತೆ ಬರುತ್ತದೆ ಎಂದರು.
ಗ್ರಾಮೀಣ ವಿದ್ಯಾಥರ್ಿಗಳು ನಗರಗಳ ವಿದ್ಯಾಥರ್ಿಗಳೊಂದಿಗೆ ಸ್ಪಧರ್ೆ ಮಾಡುವಂತಹ ಸ್ಥಿತಿ ಇರುವ ಈ ಹೊತ್ತಿನೊಳಗೆ ನಗರದವರು ಬೆರಳ ತುದಿಯಲ್ಲಿ ಜ್ಞಾನ ಕೋಶವನ್ನು ಕಂಪ್ಯೂಟರ್ಗಳ ಮೂಲಕ ಕ್ಷಣಾರ್ಧದಲ್ಲಿ ಪಡೆಯುತ್ತಾರೆ, ಅದೇ ಗ್ರಾಮೀಣ ವಿದ್ಯಾಥರ್ಿಗಳು ಹತ್ತಾರು ಪುಸ್ತಕಗಳನ್ನು ಹುಡುಕಿ ಗುರುಗಳ ಕೃಪೆಗೆ ಒಳಗಾಗಿ ಪಡೆಯುವಂತಹ ಸ್ಥಿತಿ ಇದೆ, ಇದರಿಂದ ಗ್ರಾಮೀಣ ವಿದ್ಯಾಥರ್ಿಗಳು ದೃತಿಗೆಡದೆ ಇಂಟರ್ನೆಟ್ ಲೋಕವನ್ನು ತಾವು ಪರಿಚಯಿಸಿಕೊಂಡು ಜ್ಞಾನದ ದೀವಿಗೆ ನಮ್ಮ ವಿದ್ಯಾಥರ್ಿಗಳ ಕೈಬೆರಳಿಗೂ ಬರುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ಪೋಷಕರು ಹಾಗೂ ಶಾಲೆಯ ಆಡಳಿತ ವರ್ಗ ಹೊಂದುವುದು ಅವಶ್ಯವಾಗಿದೆ ಎಂದರು.
ಗ್ರಾಮೀಣ ಶಿಕ್ಷಕರು ಇನ್ನು ಬೆತ್ತ ಹಿಡಿದು ಬೋಧಿಸುವದನ್ನು ಬಿಟ್ಟು ಚಿತ್ತಹಿಡಿದು ಕಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶಾಸಕ ಹಾಗೂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಪೋಷಕರು ಮಕ್ಕಳ ಓದಿನ ಕಡೆ ಹೆಚ್ಚು ಒತ್ತು ಕೊಟ್ಟಾಗ ಮಕ್ಕಳಿಗೆ ವಿದ್ಯಾಭ್ಯಾಸದ ಪ್ರಾಮುಖ್ಯತೆ ಅರಿವಾಗುತ್ತದೆ, ಆದ್ದರಿಂದ ಪೋಷಕರು ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳ ಬಗ್ಗೆಯೂ ನಿಗಾ ಇಡುವುದು ಅವಶ್ಯ, ವಾಷರ್ಿಕೋತ್ಸವದಂತಹ ಸಂದರ್ಭದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪೋಷಕರು ಆಗಮಿಸಿ ತಮ್ಮ ಮಕ್ಕಳನ್ನು ಉತ್ತೇಜಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ದಜರ್ೆಯಲ್ಲಿ ಉತ್ತೀರ್ಣರಾದ ವಿದ್ಯಾಥರ್ಿಗಳಿಗೆ ಎ.ಪಿ.ಎಂ.ಸಿ.ಅಧ್ಯಕ್ಷ ಸಿ.ಬಸವರಾಜು ಬೆಳ್ಳಿ ಪದಕ ವಿತರಿಸಿದರು. ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಿವಿಧ ದತ್ತಿ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದಶರ್ಿ ಸಿ.ಎಸ್.ನಟರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ, ಪ್ರೊ.ಮ.ಲ.ನ.ಮೂತರ್ಿ,ಕೆ.ಜಿ.ಮಲ್ಲಿಕಾರ್ಜನಯ್ಯ, ನಿದರ್ೇಶಕರುಗಳಾದ ಜಿ.ತಿಮ್ಮಯ್ಯ, ಸಿ.ಪಿ.ಚಂದ್ರಶೇಖರ್ ಶೆಟ್ಟಿ, ಸಿ.ಎನ್.ಚಂದ್ರಶೇಖರ್ ಗುಪ್ತ, ಸಿ.ಎಂ.ರಂಗಸ್ವಾಮಿ, ಸಿ.ಬಿ.ರೇಣುಕಸ್ವಾಮಿ, ಕಣ್ಣಯ್ಯ, ರಮೇಶ್ಬಾಬು, ಪರಶಿವಮೂತರ್ಿ ಉಪಸ್ಥಿತರಿದ್ದರು.
ಶಾಲೆಯ ಎಚ್.ಎಂ, ಎಂ.ಎಲ್.ಮಲ್ಲಿಕಾರ್ಜನಯ್ಯ ಸ್ವಾಗತಿಸಿದರು, ಎಂ.ಕೆ.ಗಂಗಾಧರಯ್ಯ, ವೇಣುಗೋಪಾಲ್ ನಿರೂಪಿಸಿದರು.

ಅಳಿಯನನ್ನು ಆರಿಸುವಾಗ ನೀಡುವಷ್ಟೇ ಪ್ರಾಮುಖ್ಯತೆಯನ್ನು ಆಳುವವರನ್ನು ಆರಿಸುವಾಗಲು ನೀಡಿ: ದೊರೆಸ್ವಾಮಿ

ಚಿಕ್ಕನಾಯಕನಹಳ್ಳಿ,ಡಿ.23: ಪ್ರಜಾ ಪ್ರತಿನಿಧಿ ಪ್ರಭುತ್ವ ಎನ್ನುವುದಕ್ಕಿಂತ ಪಕ್ಷ ಪ್ರತಿನಿಧಿ ಪ್ರಭುತ್ವ ಎನ್ನುವುದು ಹೆಚ್ಚು ಸೂಕ್ತ ಎಂದು ಗಾಂಧಿವಾದಿ ಡಾ.ಎಚ್.ಎಸ್.ದೊರೆಸ್ವಾಮಿ ವಿಶ್ಲೇಷಿಸಿದರು.
ತಾಲೂಕಿನ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಗದ್ದಿಗೆ ಮಠದ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಭಾವೈಕ್ಯತಾ ಸಮಾರಂಭದಲ್ಲಿ 'ಶ್ರೀ ಕುಪ್ಪೂರು ಮರುಳಸಿದ್ದ ಶ್ರೀ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜನ ಸೇವೆ ಮಾಡುವ ಮೂಲಕ ಚುನಾವಣೆಗೆ ಅವಕಾಶವನ್ನು ಕೋರುವ ಕಾಲ ಒಂದಿತ್ತು ಆಗ ಪ್ರಜಾಪ್ರಭುತ್ವಕ್ಕೆ ಅರ್ಥವಿತ್ತು ಆದರೆ ಇಂದು ಈ ವ್ಯವಸ್ಥೆ ಇಲ್ಲ, ಯಾರ ಬಳಿ ಹೆಚ್ಚು ಹಣವಿದೆ ಅಂತವರಿಗೆ ಪಕ್ಷಗಳು ಮಣೆ ಹಾಕುತ್ತಿವೆ, ಪಕ್ಷಗಳು ಕಳುಹಿಸುವ ಪ್ರತಿನಿಧಿಗೆ ಮತದಾರರು ಓಟು ಹಾಕುವಂತಾಗಿದೆ ಎಂದ ಅವರು, ಕೆಲವು ರಾಜಕೀಯ ಪಕ್ಷಗಳ ನೇತಾರರು ದುಡ್ಡಿನ ಹಿಂದೆ ಬಿದ್ದು ಬಿ ಫಾರಂಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಮತದಾರರು ಬಹು ದಿನಗಳಿಗೆ ಒಮ್ಮೆ ಸಿಗುವ ಅವಕಾಶವನ್ನು ಸಮರ್ಥವಾಗಿ ಸದುಪಯೋಗ ಪಡಿಸಿಕೊಳ್ಳುವುದು ಕರ್ತವ್ಯವಾಗಿರುವುದರಿಂದ ಮತದಾನ ಮಾಡುವ ಮುಂಚೆ ತಮ್ಮ ಮಗಳಿಗೆ ವರನನ್ನು ನೋಡುವಾಗ ಪೂವರ್ಾಪರ ತಿಳಿದುಕೊಂಡು, ಯೋಚಿಸಿ ಮಗಳನ್ನು ಕೋಡುವ ರೀತಿಯಲ್ಲೇ ಮತದಾನ ಮಾಡುವಾಗಲೂ ಸಮರ್ಥವಾದ ಅಬ್ಯಾಥರ್ಿಯನ್ನೇ ಹುಡಕಿ ಮತದಾನ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಮಾತನಾಡಿ ಇಂದಿನ ಸಮಾಜದಲ್ಲಿ ನುಡಿ ವೀರರ ಸಂಖ್ಯೆಯೇ ಹೆಚ್ಚುತ್ತಿದ್ದು ನಡೆ ವೀರರು ಇಲ್ಲವಾಗುತ್ತಿದ್ದರೆ ಎಂದರಲ್ಲದೆ, ಮಠಗಳು ಜಾತಿಯ ಕೇಂದ್ರಗಳಾಗತ್ತಿವೆ ಇದರಿಂದ ಜನರಲ್ಲಿ ಭಾವನಾತ್ಮಕ ಕಂದಕಗಳು ಹೆಚ್ಚುತ್ತಿವೆ ಎಂದರು.
ಗುರು ಸನ್ಮಾರ್ಗ ತೋರ ಬೇಕು, ಭಕ್ತ ಮೋಕ್ಷವನ್ನು ಬೇಡಬೇಕು, ಆದರೆ ಇಂದು ಇದು ತಿರು-ಮುರುವಾಗುತ್ತಿದ್ದು, ಗುರು ಹಣವನ್ನು ಬೇಡುತ್ತಿದ್ದಾನೆ, ಭಕ್ತ ಗುರುವನ್ನು ಅಡ್ಡದಾರಿ ಹಿಡಿಸುತ್ತಿದ್ದಾನೆ ಎಂದರು.
ಸಮಾರಂಭದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಧರ್ಮ ರಕ್ಷಕರಾಗಿರುವ ಗುರುಗಳು ಭಕ್ತನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸಬೇಕು, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಸಮಾರಂಭದಲ್ಲಿ ಯಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ, ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ, ಯಸಳೂರು ಮಠದ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮಿ ಮಾತನಾಡಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಹಾಜರಿದ್ದರು.
ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉಪಸ್ಥಿತರಿದ್ದರು.

Wednesday, December 22, 2010

Tuesday, December 21, 2010



ಕೆರೆಗೆ ಹಾರವಾದ ಆಟೋ, ಪ್ರಯಾಣಿಕರು ಪಾರು, ಸ್ಥಳದಲ್ಲಿದ್ದವರ ಸಹಕಾರದಿಂದ ತಪ್ಪಿದ ಭಾರಿ ಅನಾಹುತ:
ಚಿಕ್ಕನಾಯಕನಹಳ್ಳಿ,ಡಿ.21: ತಾಲೂಕಿನ ನವಿಲೆ ಕೆರೆಗೆ ಎರಡು ಆಟೋಗಳು ಮುಖಾಮುಖಿ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದ್ದು ಇದರಿಂದ 6 ಜನಕ್ಕೆ ತೀವ್ರತರತರವಾಗಿ ಪೆಟ್ಟು ಬಿದ್ದಿದ್ದು ಇದರಲ್ಲಿ ಇಬ್ಬರು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಿದ್ದಾರೆ. ಆಟೋದಲ್ಲಿ 12 ಜನರಿದ್ದರು ಎಂಬುದಾಗಿ ಪ್ರತ್ಯಕ್ಷ ದಶರ್ಿ ಪತ್ರಿಕೆಗೆ ತಿಳಿಸಿದ್ದಾರೆ.
ಕುಪ್ಪೂರು ಕಡೆಯಿಂದ ಬಂದ ಲಗೇಜ್ ಆಟೋ, ಚಿ.ನಾ.ಹಳ್ಳಿ ಕಡೆಯಿಂದ ಬಂದ ಪ್ಯಾಸೆಂಜರ್ ಆಟೋಕ್ಕೆ ನವಿಲೆ ಏರಿಯ ಮೇಲೆ ಮುಖಾಮುಖಿ ಢಿಕ್ಕಿ ಹೊಡೆದು ಎರಡು ಆಟೋಗಳು ನವಿಲೆ ಕೆರೆಗೆ ಬಿದ್ದಿವೆ. ಇದರಿಂದ ಆಟೋದಲ್ಲಿದ್ದ 12 ಜನರು ನೀರಿನೊಳಗೆ ಬಿದ್ದಿದ್ದು ತಕ್ಷಣವೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದವರು ಹಾಗೂ ಹೋಲದಲ್ಲಿ ಕೆಲಸ ಮಾಡುತ್ತಿದ್ದವರು ತಕ್ಷಣ ಕಾರ್ಯ ಪ್ರವೃತ್ತರಾಗಿ ನೀರಿನಲ್ಲಿ ಬಿದ್ದವರನ್ನು ದಡಕ್ಕೆ ತಂದು ಆಟೋ ಒಂದರಲ್ಲಿ ಕೆಲವರನ್ನು, ನಂತರ ಸಕರ್ಾರಿ ಬಸ್ನಲ್ಲಿ ಉಳಿದವರನ್ನು ತಕ್ಷಣವೇ ಚಿ.ನಾ.ಹಳ್ಳಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದರಲ್ಲಿ ಹಾಸನದಿಂದ ಕಪ್ಪೂರು ಜಾತ್ರೆಗೆಂದು ಬಂದಿದ್ದ ಹೇಮ ಹಾಗೂ ಚಿ.ನಾ.ಹಳ್ಳಿಯ ಸರ್ವಮಂಗಳ ಎಂಬುವವರಿಗೆ ತೀವ್ರವಾದ ಪೆಟ್ಟಾಗಿದ್ದು ಪ್ರಜ್ಞಾಹೀನರಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ನೀಡಿದ ಎರಡು ಗಂಟೆ ಕಳೆದರೂ ಪ್ರಜ್ಞೆ ಬಾರದ ಹಿನ್ನೆಲೆಯಲ್ಲಿ ಇವರನ್ನು ಹೆಚ್ಚನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಲಾಯಿತು. ಅಪಘಾತಕ್ಕೆ ಇಡಾಗಿದ್ದ ಲಗೇಜ್ ಆಟೋ ಮಾಲೀಕರಾದ ಚಟ್ಟಸಂದ್ರದ ಮೈಲಾರಲಿಂಗಾಚಾರ್ ಹಾಗೂ ಅವರ ಮಗ ಹರೀಶ್ ಇಬ್ಬರಿಗೂ ಗಾಯಗಳಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ನವಿಲೆ, ಮಾರಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿಮಾನವೀಯತೆ ಮೆರೆದು ಗಾಯಳುಗಳನ್ನು ಸಾಗಿಸುವುದರಿಂದ ಮೊದಲಗೊಂಡು ಜೆ.ಸಿ.ಬಿ.ಯನ್ನು ತಂದು ಆಟೋಗಳನ್ನು ಎತ್ತುವ ತನಕ ಎಲ್ಲ ಕಾರ್ಯದಲ್ಲೂ ಗ್ರಾಮಸ್ಥರ ಸಹಕಾರದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿತ್ತು.
ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ತಿಪಟೂರು ಉಪವಿಭಾಗಾಧಿಕಾರಿ ಪಾಟೀಲ್, ತಹಶೀಲ್ದರ್ ಟಿ.ಸಿ.ಕಾಂತರಾಜು, ಸ್ಥಳಕ್ಕೆ ಭೇಟಿ ನೀಡಿದ್ದರು. ಚಿ.ನಾ.ಹಳ್ಳಿ ಪಿ.ಎಸ್.ಐ. ಶಿವಕುಮಾರ್ ಪ್ರಕರಣ ದಾಖಲಿಸಿದ್ದಾರೆ.
ಖಚಿತತೆಗಿಂತ ರೋಚಕತೆಗೆ ಒತ್ತು ನೀಡಿದ ಟಿ.ವಿ.ಮಾಧ್ಯಮ: ಘಟನೆ ನಡೆದು ಸ್ವಲ್ಪ ಹೊತ್ತಿಗೆ ಸುದ್ದಿ ಚಾನಲ್ಗಳು ಸುದ್ದಿಯನ್ನು ಬ್ರೇಕ್ ಮಾಡುವ ಭಾರಟೆಯಲ್ಲಿ ಬದುಕಿದ್ದಗಾಯಳುಗಳನ್ನು ತಮ್ಮ ಸುದ್ದಿ ಪ್ರಸಾರದ ಮೂಲಕ ಸಾಯಿಸಿದರಲ್ಲದೆ, ಆಸ್ಪತ್ರೆಯಲ್ಲಿದ್ದವರನ್ನು ಕಾಣೆಯನ್ನಾಗಿಸಿದರು. ಇದರಿಂದ ಗಾಬರಿಗೊಂಡ ಜನರ ದಂಡೇ ಘಟನೆಯ ಸ್ಥಳಕ್ಕೆ ಧಾವಿಸಿದ್ದರು. ಸ್ಥಳಕ್ಕೆ ಆಗಮಿಸಿದ ಜನರು ಸಂಪೂರ್ಣ ವಿಷಯವನ್ನು ಗ್ರಹಿಸಿದ ಮೇಲೆ ಸುದ್ದಿಯನ್ನು ಖಚಿತವಾಗಿ ಬಿತ್ತರಿಸದ ಟಿ.ವಿ.ಯವರನ್ನು ಶಪಿಸುತ್ತಿದ್ದರು. ರೋಚಕ ಸುದ್ದಿಯನ್ನು ಕೊಡುವ ಆತುರದಲ್ಲಿ ತಪ್ಪು ಸುದ್ದಿಯನ್ನು ನೀಡುವುದು ಎಷ್ಟು ಸರಿ ಎಂದು ಸ್ಥಳದಲ್ಲಿದ್ದ ಪತ್ರಿಕೆಯ ವರದಿಗಾರರನ್ನು ಪ್ರಶ್ನಿಸುತ್ತಾ ು ವಿಮಶರ್ೆ ಮಾಡುತ್ತಿದ್ದರು.

ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ ಅಂತಿಮವಾಗಿ 26 ಅಭ್ಯಥರ್ಿ ಕಣದಲ್ಲಿದ್ದಾರೆ
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಈ ಪೈಕಿ 26 ಜನರು ಅಂತಿಮವಾಗಿ ಕಣದಲ್ಲಿ ಉಳಿದು 23 ಜನರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಹುಳಿಯಾರು ಕ್ಷೇತ್ರದಲ್ಲಿ 5, ಹೊಯ್ಸಳಕಟ್ಟೆಯಿಂದ 4, ಹಂದನಕೆರೆ 6, ಕಂದೀಕೆರೆ 4 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 7 ಅಬ್ಯಾಥರ್ಿಗಳು ಕಣದಲ್ಲಿ ಉಳಿದಿದ್ದಾರೆ.
ಶೆಟ್ಟೀಕೆರೆ ಕ್ಷೇತ್ರದಿಂದ ಕಾಂಗೈನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಬಿ.ಜೆ.ಪಿಯಿಂದ ಎಚ್.ಬಿ.ಪಂಚಾಕ್ಷರಯ್ಯ, ಜೆ.ಡಿ.ಯು ನಿಂದ ಟಿ.ಶಂಕರಲಿಂಗಪ್ಪ, ಜೆ.ಡಿ.ಎಸ್ನಿಂದ ಎಸ್.ಎನ್.ಸತೀಶ್, ಪಕ್ಷೇತರರಾಗಿ ಬಿ.ಎನ್.ಶಿವಪ್ರಕಾಶ್, ಬಿ.ನಾಗರಾಜು, ಟಿ.ಆರ್.ಮಹೇಶ್ ಅಂತಿಮವಾಗಿ ಕಣದಲ್ಲಿದ್ದಾರೆ.
ಕಂದಿಕೆರೆ ಕ್ಷೇತ್ರದಲ್ಲಿ ಜೆ.ಡಿ.ಯುನ ಜಿ.ಲೋಹಿತಾ ಬಾಯಿ, ಕಾಂಗ್ರೆಸ್ನಿಂದ ಜಿ.ಪರಮೇಶ್ವರಯ್ಯ, ಬಿ.ಜೆ.ಪಿಯಿಂದ ಸಿ.ರಂಗನಾಯ್ಕ, ಜೆ.ಡಿ.ಎಸ್ನಿಂದ ಈರಯ್ಯ, ಅಂತಿಮ ಕಣದಲ್ಲಿದ್ದಾರೆ.
ಹಂದನಕೆರೆ: ಕ್ಷೇತ್ರದಲ್ಲಿ ಬಿ.ಎಸ್.ಪಿಯಿಂದ ಪ್ರೇಮಲತ, ಕಾಂಗ್ರೆಸ್ನಿಂದ ಜಯಲಕ್ಷ್ಮಮ್ಮ, ಜೆ.ಡಿ.ಎಸ್ನಿಂದ ಜಾನಮ್ಮ, ಬಿ.ಜೆ.ಪಿಯಿಂದ ಯಶೋದ ಬಸವರಾಜು, ಜೆ.ಡಿ.ಯು.ನಿಂದ ಎ.ಎಸ್.ಅನುಸೂಯಮ್ಮ, ಪಕ್ಷೇತರರಾಗಿ ಮರುಳಮ್ಮ ಕಣದಲ್ಲಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜ್ಯೋತಿ, ಬಿ.ಜೆ.ಪಿಯಿಂದ ನಿಂಗಮ್ಮ, ಜೆ.ಡಿ.ಎಸ್ನಿಂದ ಜಯಲಕ್ಷ್ಮೀ, ಜೆ.ಡಿ.ಯು ನಿಂದ ಭಾರತಮ್ಮ, ಕಣದಲ್ಲಿದ್ದಾರೆ..
ಹುಳಿಯಾರು: ಕ್ಷೇತ್ರದಲ್ಲಿ ಜೆ.ಡಿ.ಎಸ್ನಿಂದ ಎನ್.ಜಿ.ಮಂಜುಳ, ಬಿ.ಜೆ.ಪಿಯಿಂದ ಎಸ್.ಎಚ್.ಲತಾ, ಕಾಂಗ್ರೆಸ್ನಿಂದ ಎಚ್.ಡಿ.ರಮಾದೇವಿ, ಜೆ.ಡಿ.ಯು ನಿಂದ ವೈ.ಎಮ್.ರೇಣುಕಾದೇವಿ, ಪಕ್ಷೇತರರಾಗಿ ಚಂದ್ರಕಲಾ ಕಣದಲ್ಲಿದ್ದಾರೆ.

ಜನಪದ ಕಲಾವಿದರು ಸಂಘಟಿತರಾದರೆ ಮಾತ್ರ ಕಲೆ ಉಳಿಯಲು ಸಾಧ್ಯ: ಎಂ.ಎಸ್.ಚಂದ್ರಪ್ಪ
ಚಿಕ್ಕನಾಯಕನಹಳ್ಳಿ,ಡಿ.18: ಜಾನಪದ ಕಲಾವಿದರು ಸಂಘಟಿತರಾಗಿ ಜನರಿಂದ ದೂರವಾಗುತ್ತಿರುವ ಜಾನಪದ ಕಲೆಗಳನ್ನು ಬೆಳಸಲು ಸಹಕಾರ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಎಂ.ಎಸ್. ಚಂದ್ರಪ್ಪನವರು ಹೇಳಿದರು.
ಪಟ್ಟಣದ ಬನಶಂಕರಿ ದೇವಾಲಯದ ಶ್ರೀ ರಾಮಮಂದಿರದಲ್ಲಿ ನಡೆದ ಚಿಗುರು ಹಾಗೂ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಚಿಕ್ಕವಯಸ್ಸಿನಿಂದಲೇ ಕಲೆಗಳನ್ನು ಮೈಗೂಡಿಸಿಕೊಂಡು. ಪರಂಪರಾನುಗತವಾಗಿ ಉಳಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳಸಬೇಕು ಮತ್ತು ಶ್ರೀರಂಗ ಕ್ರೀಡಾ ಸಾಂಸ್ಕೃತಿಕ ಯುವ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಾಲೂಕು ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ಹಾಗೂ ಇಲಾಖಾ ವತಿಯಿಂದ ಸಕರ್ಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜಾನಪದ ಕಲಾವಿದರ ಸಂಘದ ಅಧ್ಯಕ್ಷರಾದ ಸಿ.ಎ.ಕುಮಾರಸ್ವಾಮಿ ಮಾತನಾಡಿ ಇಂದಿನ ಸಮಾಜದ ಅವನತಿಗೆ ಜನಪದ ಕಲೆಗಳು ಜನರಿಂದ ದೂರವಾಗುತ್ತಿರುವುದೇ ಕಾರವಾಗಿದ್ದು, ಜನಪದ ಕಲೆಗಳು ಸಮಾಜದ ಕೈಗನ್ನಡಿಯಂತಿದ್ದು ಇದನ್ನು ಬೆಳಸುವುದರಿಂದ ಸಾಮಾಜಿಕ ಮೌಲ್ಯಗಳು ವೃದ್ದಿಯಾಗುತ್ತವೆ ಎಂದು ತಿಳಿಸಿದರು. ಕಲಾವಿದರ ಇಂದಿನ ಸ್ಥಿತಿಗತಿಗಳ ಬಗ್ಗೆ ಚಚರ್ಿಸುತ್ತಾ ಜನಪದ ಕಲಾವಿದರ ಬಗ್ಗೆ ಗೌರವ ಭಾವನೆ ತಾಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ದೇವಾಂಗ ಸಂಘದ ಅಧ್ಯಕ್ಷ ಸಿ.ಜೆ.ಶೇಷಪ್ಪ, ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು ಭಾಗವಹಿಸಿದ್ದರು.
ಸಿ.ಎ.ಚಿಕ್ಕನಾರಾಯಣಸ್ವಾಮಿ ನಿರೂಪಿಸಿ ಸಿ.ಟಿ.ಜಯಕೃಷ್ಣ ಸ್ವಾಗತಿಸಿ, ಸಿ.ಎಂ.ರಂಗನಾಥ್ ವಂದಿಸಿದರು.



Thursday, December 16, 2010


ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಸಪ್ತದ್ವಾರ ದರ್ಶನ
ಚಿಕ್ಕನಾಯಕನಹಳ್ಳಿ.ಡಿ.16: 15ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವದ ಪ್ರಯುಕ್ತ ಪಟ್ಟಣದ ಲಕ್ಷ್ಮೀವೆಂಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ 17, 18, 19 ರಂದು ದೇವಸ್ಥಾನದಲ್ಲಿ ಪುಷ್ಪಾಲಂಕಾರ, ಸಪ್ತದ್ವಾರದ ದರ್ಶನವನ್ನು ಏರ್ಪಡಿಸಲಾಗಿದೆ.
17ರಂದು ಸಪ್ತದ್ವಾರಗಳ ದರ್ಶನ, ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 18ರಂದು ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ ದೇವರ ಉಯ್ಯಾಲೆ ಉತ್ಸವ, 19ರಂದು ಊರಿನ ಪ್ರಮುಖ ಬೀದಿಗಳಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶಿಕ್ಚಕರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಉನ್ನತ ವ್ಯಾಸಾಂಗ
ಚಿಕ್ಕನಾಯಕನಹಳ್ಳಿ,ಡಿ.16: ವಿಜ್ಞಾನ ಗಣಿತ ಮತ್ತು ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಉನ್ನತ ವ್ಯಾಸಾಂಗ ನಿಯೋಜಿಸಲು ಶಿಕ್ಷಕರ ತಮ್ಮಾ ಇಚ್ಚಾ ಪತ್ರವನ್ನು ಇದೇ 20ರ ಒಳಗಾಗಿ ಬಿ.ಇ.ಒ ಕಛೇರಿಗೆ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ 49 ಉಮೇದುವಾರಿಕೆ, 19 ತಾ.ಪಂ. ಕ್ಷೇತ್ರಗಳಿಗೆ 114 ನಾಮಪತ್ರಗಳು
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು, 19 ತಾ.ಪಂ.ಕ್ಷೇತ್ರಗಳಿಗೆ 114 ಅಬ್ಯಾಥರ್ಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರ ದಿಂದ 7, ಹೊಯ್ಸಳಕಟ್ಟೆಯಿಂದ 10, ಹಂದನಕೆರೆ 7, ಕಂದೀಕೆರೆ ಕ್ಷೇತ್ರದಿಂದ 15 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 10 ಉಮೇದುವಾರಿಕೆ ಅಜರ್ಿಗಳು ಚುನಾವಣಾಧಿಕಾರಿ ರವಿಕುಮಾರ್ ರವರಿಗೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅಬ್ಯಾಥರ್ಿಗಳು ಉತ್ಸಾಹದಿಂದ ಉಮೇದುವಾರಿಕೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ 6 ಅಜರ್ಿಗಳು, ಬಿ.ಜೆ.ಪಿ. ಹೆಸರಿನಲ್ಲಿ 7, ಜೆ.ಡಿ.ಎಸ್.ಹೆಸರಿನಲ್ಲಿ 9, ಜೆ.ಡಿ.ಯು ಹೆಸರಿನಲ್ಲಿ 7, ಪಕ್ಷೇತರರು 17, ರೈತ ಸಂಘದಿಂದ 1, ಬಿ.ಎಸ್.ಪಿ.ಯಿಂದ 1 ಅಜರ್ಿಗಳು ಜಿ.ಪಂ. ಕ್ಷೇತ್ರಕ್ಕೆ ನೊಂದಾಯಿತವಾಗಿದೆ.
ಶೆಟ್ಟೀಕೆರೆ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಲಕ್ಕಪ್ಪ , ನಿಜಾನಂದ ಮೂತರ್ಿ, ಬಿ.ನಾಗರಾಜು, ಟಿ.ಆರ್.ಮಹೇಶ್, ಎಚ್.ಬಿ.ಪಂಚಾಕ್ಷರಯ್ಯ, ಟಿ.ಶಂಕರಲಿಂಗಪ್ಪ, ಎಸ್.ಎನ್.ಸತೀಶ್, ಎಸ್.ಸಿ.ದಿನೇಶ್, ಬಿ.ಎನ್.ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.
ಕಂದಿಕೆರೆ ಕ್ಷೇತ್ರದಿಂದ ಜಿ.ಲೋಹಿತಾ ಬಾಯಿ, ಎಸ್.ಡಿ.ಮೂಡ್ಲಯ್ಯ, ಆರ್.ಹನುಮಂತಯ್ಯ, ಜಿ.ರಘುನಾಥ್, ರಾಮಚಂದ್ರನಾಯ್ಕ, ಜಿ.ರೇವಾನಾಯ್ಕ, ಎಸ್.ಟಿ.ಚಂದ್ರಯ್ಯ, ಜಿ.ಪರಮೇಶ್ವರಯ್ಯ, ಕಮಲಾನಾಯ್ಕ, ಸಿ.ರಂಗನಾಯ್ಕ, ಎಮ್.ಎಲ್.ಗಂಗಾಧರಯ್ಯ, ಸಣ್ಣಯ್ಯ, ಈರಯ್ಯ, ಜಿ.ನರಸಿಂಹಮೂತರ್ಿ, ಎಸ್.ಟಿ.ಗಿರಿಯಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ: ಕ್ಷೇತ್ರದಿಂದ ಪ್ರೇಮಲತ, ಜಯಲಕ್ಷ್ಮಮ್ಮ, ಜಾನಮ್ಮ, ಯಶೋದ ಬಸವರಾಜು, ರೇಣುಕಮ್ಮ ಎ.ಎಸ್.ಅನುಸೂಯಮ್ಮ, ಮರುಳಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಲಕ್ಷ್ಮೀದೇವಿ, ತೊಳಸಮ್ಮ, ಜ್ಯೋತಿ, ಎಚ್.ಎನ್.ಗೌರಮ್ಮ, ನಿಂಗಮ್ಮ, ಜಯಲಕ್ಷ್ಮೀ, ಮಹಾಲಕ್ಷ್ಮಿ, ರಾಧಮ್ಮ, ಭಾರತಮ್ಮ, ಚಂದ್ರಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹುಳಿಯಾರು: ಕ್ಷೇತ್ರದಿಂದ ಬಿ.ಎ.ನಾಗವೇಣಿ, ಎನ್.ಜಿ.ಮಂಜುಳ, ನಾಗಮ್ಮ, ಎಸ್.ಎಚ್.ಲತಾ, ಚಂದ್ರಕಲಾ, ಎಚ್.ಡಿ.ರಮಾದೇವಿ, ವೈ.ಎಮ್.ರೇಣುಕಾದೇವಿ ನಾಮಪತ್ರ ಸಲ್ಲಿಸಿದ್ದಾರೆ.
19 ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿರುವವರು: 114 ಅಬ್ಯಾಥರ್ಿಗಳು ನಾಮಪತ್ರ ಸಲ್ಲಿಸಿದ್ದು ಕ್ಷೇತ್ರವಾರು ವಿವರ ಇಂತಿದೆ. ಹುಳಿಯಾರಿನಲ್ಲಿ 8 ಜನ ನಾಮಪತ್ರ ಸಲ್ಲಿಸಿದ್ದು, ಯಳನಡುವಿನಲ್ಲಿ 6, ತಿಮ್ಲಾಪುರದಲ್ಲಿ 9, ಕೆಂಕೆರೆಯಲ್ಲಿ 9, ಗಾಣಧಾಳು 4, ಹೊಯ್ಸಳಕಟ್ಟೆ 4, ತಿಮ್ಮನಹಳ್ಳಿ 5, ತೀರ್ಥಪುರ 5, ಕಂದಿಕೆರೆ 4, ಮಾಳಿಗೆಹಳ್ಳಿ 5, ಹೊನ್ನೆಬಾಗಿ 5, ಜಯಚಾಮರಾಜ ಪುರ 6, ಶೆಟ್ಟೀಕೆರೆ 7, ಕುಪ್ಪೂರು 5, ಮತ್ತೀಘಟ್ಟ 7, ಬರಗೂರು 6, ಹಂದನಕೆರೆ 5, ದೊಡ್ಡೆಣ್ಣೆಗೆರೆ 8, ದಸೂಡಿ 8 ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರದಿಂದ ಪವರ್ಿನ್, ಸಿ.ಎಮ್.ಗಾಯಿತ್ರಿ, ಫಾತಿಮ.ಬಿ.ಬಿ, ಚಂದ್ರಕಲಾ ಎಚ್.ಆರ್, ಹಸೀನಾಬಾನು, ವೀಣಾ, ರುಕ್ಸನಾಭಾನು ನಾಮಪತ್ರ ಸಲ್ಲಿಸಿದ್ದಾರೆ.
ಯಳನಡು ಕ್ಷೇತ್ರದಿಂದ ಸುಮಿತ್ರ, ಲತಾಮಣಿ, ತಾರಾಮಣಿ ಯಾದವ್, ಜಯಲಕ್ಷ್ಮೀ, ಎಂ.ಆರ್.ಜ್ಯೋತಿ, ವಿಜಯಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಲಾಪುರ ಕ್ಷೇತ್ರದಿಂದ ಎಚ್.ಆರ್.ಕೃಷ್ಣಮೂತರ್ಿ, ಎಚ್.ಆರ್.ರಾಜಣ್ಣ, ಟಿ.ಆರ್.ರಮೇಶ್, ಎಚ್.ಎನ್.ರಾಮಯ್ಯ, ಕುಮಾರಸ್ವಾಮಿ, ಚಂದ್ರಶೇಖರಯ್ಯ, ಜಯಣ್ಣ, ಎಮ್.ಮಲ್ಲೇಶಯ್ಯ, ಎಚ್.ಚಂದ್ರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಕೆಂಕೆರೆ ಕ್ಷೇತ್ರದಿಂದ ರಾಜಶೇಖರರೆಡ್ಡಿ, ಕೆ.ಆರ್.ಚನ್ನಬಸವಯ್ಯ, ಕೆ.ಎಂ.ನವೀನ, ನಾಗರಾಜ್, ಶಿವಕುಮಾರ್, ಕೆ.ಸಿ.ಶಿವಮೂತರ್ಿ, ಧನಂಜಯ್ಯ, ಎಮ್,ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.
ಗಾಣದಾಳು ಕ್ಷೇತ್ರದಿಂದ ಎಚ್.ಕೆ.ರಾಮಲಿಂಗಪ್ಪ, ಆರ್.ಉದಯಕುಮಾರ್, ಜಿ.ಆರ್.ಸೀತಾರಾಮಯ್ಯ, ಹೆಚ್.ಜಿ.ವಿಶ್ವನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಕವಿತ ಎ.ಜಿ, ಚಂದ್ರಪ್ರಭಾ, ಲಕ್ಷ್ಮೀದೇವಿ, ಮೀನಾಕ್ಷಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಮನಹಳ್ಳಿ ಕ್ಷೇತ್ರದಿಂದ ಕೆ.ಎಸ್.ಸುಮಿತ್ರ, ಪುಟ್ಟಗಂಗಮ್ಮ, ಕರಿಯಮ್ಮ, ಶಿವಮ್ಮ, ಲಲಿತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತೀರ್ಥಪುರ ಕ್ಷೇತ್ರದಿಂದ ರತ್ನಮ್ಮ, ಕೆ.ಬಿ.ಮಂಜುಳ, ಎಮ್.ಇ.ಲತಾ, ಧನಲಕ್ಷ್ಮೀ, ಎಮ್.ಕೆ.ಲಕ್ಷ್ಮೀದೇವಯ್ಯ ನಾಮಪತ್ರ ಸಲ್ಲಿಸಿದ್ದಾರೆ
ಕಂದಿಕೆರೆ ಕ್ಷೇತ್ರದಿಂದ ಉಮಾದೇವಿ, ಪಾರ್ವತಮ್ಮ, ರೇಣುಕಮ್ಮ, ಕ್ಯಾತಲಿಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಮಾಳಿಗೆಹಳ್ಳಿ ಕ್ಷೇತ್ರ ಎಂ.ಎಸ್. ಚಂದ್ರಕಲಾ, ಮಧು ಎನ್.ಸಿ, ನಿರ್ಮಲ, ಲತಾ, ಶಾರದಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊನ್ನೆಬಾಗಿ ಕ್ಷೇತ್ರದಿಂದ ನಾಗರಾಜು ಎಚ್.ಟಿ, ಶಶಿಧರ, ವಿವೇಕಾನಂದಸ್ವಾಮಿ, ಎಚ್.ಜಿ.ಪ್ರಸನ್ನಕುಮಾರ್, ಶಂಕರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಜಯಚಾಮರಾಜಾಪುರ ಕ್ಷೇತ್ರದಿಂದ ಜಗದೀಶ್ ಎಮ್.ಎಮ್, ರವೀಶ್, ದಯಾನಂದಮೂತರ್ಿ, ಎಂ.ಪಿ.ಪ್ರಸನ್ನಕುಮಾರ್, ಶೇಖರಯ್ಯ, ಕೆ.ಎಮ್.ಸತೀಶ್ಬಾಬು ನಾಮಪತ್ರ ಸಲ್ಲಿಸಿದ್ದಾರೆ.
ಶೆಟ್ಟಿಕೆರೆ ಕ್ಷೇತ್ರದಿಂದ ಎಸ್.ಎನ್.ನಿಂಗಪ್ಪ, ಎಸ್.ಜಿ.ಮಹೇಶ್, ಜಿ.ಟಿ.ವೆಂಕಟೇಶ್, ಎ.ಬಿ.ರಮೇಶ್ಕುಮಾರ್, ರಾಜಶೇಖರಪ್ಪ, ಎ.ಬಿ.ಮಹೇಶ್, ಎಸ್.ಆರ್. ಉಮೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಕುಪ್ಪೂರು ಕ್ಷೇತ್ರದಿಂದ ಭಾಗ್ಯಮ್ಮ, ಚಿಕ್ಕಮ್ಮ, ಸುಜಾತ, ಪ್ರೇಮಲೀಲ, ಸುವರ್ಣಮ್ಮ ನಾಮಪತ್ರ ಸಲ್ಲಸಿದ್ದಾರೆ.
ಮತಿಘಟ್ಟ ಕ್ಷೇತ್ರದಿಂದ ನಿರಂಜನಮೂತರ್ಿ, ಮಹದೇವಯ್ಯ, ಕರಿಯಪ್ಪ, ತಿಮ್ಮಯ್ಯ, ಪ್ರಭಾಕರ, ಡಿ.ದೇವರತ್ನಯ್ಯ, ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಬರಗೂರು ಕ್ಷೇತ್ರದಿಂದ ಚಂದ್ರಬಾಯಿ, ಶ್ರೀದೇವಿ, ಶಾರದಮ್ಮ, ಗುಂಡಮ್ಮ, ಕೆ.ಆರ್.ಚೇತನ, ನೇತ್ರಾವತಿ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ ಕ್ಷೇತ್ರದಿಂದ ಸಿದ್ದಪ್ಪ, ಪಾಂಡುರಂಗಯ್ಯ, ಎಮ್.ಲಿಂಗರಾಜು, ಎಚ್.ಎನ್.ರಾಮನಾಥ್, ಡಿ.ಶಿವರಾಜು ನಾಮಪತ್ರ ಸಲ್ಲಿಸಿದ್ದಾರೆ.
ದೊಡ್ಡೆಎಣ್ಣೆಗೆರೆ ಕ್ಷೇತ್ರದಿಂದ ಪುಷ್ಪಾವತಿ, ರೇಣುಕಮ್ಮ, ಚಂದ್ರಮ್ಮ, ಮಂಜಮ್ಮ, ಲಕ್ಷ್ಮೀದೇವಿ, ಲೀಲಾವತಿ, ಗೀತಾ, ಹೇಮಾವತಿ ನಾಮಪತ್ರ ಸಲ್ಲಿಸಿದ್ದಾರೆ.
ದಸೂಡಿ ಕ್ಷೇತ್ರದಿಂದ ಶ್ರೀನಿವಾಸಮೂತರ್ಿ, ಆರ್.ಪಿ.ವಸಂತಯ್ಯ, ರಮೇಶ್ ಡಿ.ಬಿ, ನಿಂಗಪ್ಪ ಎಮ್.ಎಲ್, ಶಾಂತಕುಮಾರ್ ಡಿ.ಎಸ್, ಚಿನ್ನಸ್ವಾಮಿ, ಶಿವಕುಮಾರ್, ಎಮ್.ಎಲ್.ರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.


ಸ್ಮಾಟರ್್ ಕಾಡರ್್ಗೆ ಶಿಕ್ಷಕ ಶಿಕ್ಷಕಿಯರ ಸಂಘದ ವಿರೋಧ
ಚಿಕ್ಕನಾಯಕನಹಳ್ಳಿ ಡಿ.15 : ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡಲು ಹೊರಟಿರುವುದು ಶಿಕ್ಷಕರ ಸಮೂಹಕ್ಕೆ ಹೊರೆಯೇ ಹೊರತು ಅದರಿಂದ ಯಾವುದೇ ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲ ಬದಲಾಗಿ ಶಿಕ್ಷಕರ ಸಂಬಳದಲ್ಲೂ ತಲಾ 210 ರೂ.ಗಳನ್ನು ಸಂಬಳದಲ್ಲಿ ಕಟಾವಣೆ ಮಾಡ ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಶಿಕ್ಷಕ ಸಮೂಹ ಎಚ್ಚರದಿಂದಿರಬೇಕು ಎಂದು ತಾಲ್ಲೂಕು ಸಕರ್ಾರಿ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ಮನವಿ ಮಾಡಿದೆ.
ರಾಜ್ಯ ಶಿಕ್ಷಕರ ಸಂಘ ಈ ಬಗ್ಗೆ ಹಣಕಾಸು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ ಎಂಬುದು ನಮ್ಮ ಸಂಘದ ಗಮನಕ್ಕೆ ಬಂದಿದೆ. ಶಿಕ್ಷಕರು ತಮ್ಮ ಸೇವಾ ಮಾಹಿತಿಯನ್ನು ತಮ್ಮ ಎಸ್.ಆರ್. ಗಳ ನಕಲು ಪ್ರತಿಯ ಮೂಲಕ ಪಡೆಯಬಹುದು ಅಥವಾ ಹೆಚ್.ಆರ್.ಎಂ.ಎಸ್ ನಲ್ಲಿ ಪಡೆಯಬಹುದು ಎಂದು ಶಿಕ್ಷಕ-ಶಿಕ್ಷಕಿಯರ ಸಂಘವು ತಿಳಿಸಿದೆ.
ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡುವ ಯೋಜನೆ ಶಿಕ್ಷಣ ಇಲಾಖೆಯ ಉದ್ದೇಶವಾಗಿದ್ದರೆ ಶಿಕ್ಷಕರಿಗೆ ಆಥರ್ಿಕ ಹೊರೆಯಾಗದಂತೆ ಇಲಾಖೆಯೇ ನಿರ್ವಹಿಸುವುದಾದರೆ ನಮ್ಮ ಸಂಘ ಸ್ವಾಗತಿಸುತ್ತದೆ.
ಅಭಿನಂದನೆ : 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ನಮ್ಮ ತಾಲ್ಲೂಕಿನ ರೋಟರಿ ಶಾಲೆ ಹಾಗೂ ಜೆ.ಸಿ. ಪುರ ಮೊರಾಜರ್ಿ ವಸತಿ ಶಾಲೆ ಆಯ್ಕೆಯಾಗಿರುವುದಕ್ಕೆ ತಾಲ್ಲೂಕು ಸರ್ಕರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ವಿದ್ಯಾಥರ್ಿಗಳನ್ನು ಹಾಗೂ ಶಾಲಾ ಆಡಳಿತವನ್ನು ಅಭಿನಂದಿಸುತ್ತದೆ.

Tuesday, December 14, 2010

Monday, December 13, 2010

Sunday, December 12, 2010


ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲಾಗದವರೂ ವಿಕಲ ಚೇತನರು: ಅನೀಸ್ ಕೈಸರ್
ಚಿಕ್ಕನಾಯಕನಹಳ್ಳಿ,ಡಿ.9: ವಿಕಲ ಚೇತನರನ್ನು ಸ್ವಾವಲಂಭಿಗಳನ್ನಾಗಿಸಿ ಅವರ ಬದುಕನ್ನು ಹಸನು ಮಾಡಿಕೊಂಡು ಉತ್ತಮ ಜೀವನ ನಡೆಸಲು ಹುರಿದುಂಬಿಸುವುದೇ ವಿಶ್ವ ಅಂಗವಿಕಲ ದಿನಾಚರಣೆಯ ಉದ್ದೇಶವೆಂದು ಸಿ.ಡಿ.ಪಿ.ಓ. ಅನೀಸ್ ಕೈಸರ್ ತಿಳಿಸಿದರು.
ಪಟ್ಟಣದ ಸಿ.ಡಿ.ಪಿ.ಓ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗಗಳು ಊನವಾಗಿದ್ದು ಯಾವುದೇ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ತನ್ನ ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲು ಅಸಮರ್ಥರಾಗುತ್ತಾರೋ ಅಂತಹವರನ್ನು ವಿಕಲಚೇತನರೆಂದು ಕರೆಯುತ್ತೇವೆ ಎಂದರಲ್ಲದೆ, ಅಧಿನಿಯಮ 1995 ರ ಪ್ರಕಾರ ಅಂಗವಿಕಲತೆಯನ್ನು ಚಲನ ದೋಷವುಳ್ಳವರು ಅಥವಾ ದೈಹಿಕ ವಿಕಲ ಚೇತನರು, ದೃಷ್ಟಿ ದೋಷವುಳ್ಳವರು, ವಾಕ್ ಶ್ರವಣ ದೋಷವುಳ್ಳವರು, ಬುದಿಮಾಂದ್ಯತೆ. ಕುಷ್ಠರೋಗ ನಿವಾರಿತ ವಿಕಲ ಚೇತನರು, ಬಹುವಿಧ ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥರು ಈ ರೀತಿ ವಗರ್ಿಕರಿಸಬಹುದಾಗಿದೆ ಎಂದು ತಿಳಿಸಿದರು.
ವಿಕಲ ಚೇತನಕ್ಕೆ ಸಾಮಾನ್ಯ ಕಾರಣಗಳು ತಾಯಿಗೆ ಪೌಷ್ಠಿಕಂಶದ ಕೊರತೆ (ಅಪೌಷ್ಠಿಕತೆ) ಗಭರ್ಾವಸ್ಥೆಯಲ್ಲಿ ಸೋಂಕುಗಳು, ಸೋದರ ಸಂಬಂಧಿ ವಿವಾಹ, ತಂದೆ ತಾಯಿ ರಕ್ತ ಹೊಂದಾಣಿಕೆಯಿಲ್ಲದ ಪ್ರಸಂಗ, ಗಭರ್ಾವಸ್ಥೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ, ಖಾಯಿಲೆಗಳು, ತಾಯಿ ಮಾದಕ ವ್ಯಸನಿಯಾಗಿದ್ದಲ್ಲಿ, ಅಪಘಾತಗಳು, ಅವಧಿ ಪೂರ್ವ ಜನನಗಳು, ಕಾರಣವಾಗಿರುತ್ತದೆ ಎಂದು ತಿಳಿಸಿದರು.
ವಿಕಲ ಚೇತನ್ಯವನ್ನು ತಡೆಗಟ್ಟಲು ಗಭರ್ಾವಸ್ಥೆಯಲ್ಲಿ ಇದ್ದಾಗಲೇ ತಾಯಿ ವೇಳೆಗೆ ಸರಿಯಾಗಿ ಆಹಾರವನ್ನು ಸೇವಿಸಿ ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿದಲ್ಲಿ ವಿಕಲ ಚೇತನ ಮಕ್ಕಳು ಜನಿಸುವುದನ್ನು ತಡೆಗಟ್ಟಬಹುದು, ಮಗು ಹುಟ್ಟಿದ ಕೂಡಲೇ ತಾಯಿ ಮಗುವಿಗೆ ಎದೆಹಾಲನ್ನು ಕುಡಿಸುವುದರಿಂದ ಅದರಲ್ಲಿರುವ ಕೊಲೆಸ್ಟ್ರಾಲ್ ಅಂಶ ದಿಂದಾಗಿ 6 ಮಾರಕ ರೋಗಗಳನ್ನು ತಡೆಗಟ್ಟುಲು ಸಾಧ್ಯ, ಆದುದರಿಂದ ಎಲ್ಲ ತಾಯಂದಿರು ಮಕ್ಕಳಿಗೆ ತಪ್ಪದೇ ಎದೆ ಹಾಲನ್ನು ಕುಡಸಬೇಕೆಂದರು.
ವಿಕಲ ಚೈತನ್ಯರನ್ನು ಪ್ರಾರಂಭದಲ್ಲಿ ಗುರುತಿಸಿ ವಿಕಲ ಚೈತನ್ಯತೆಯನ್ನು ತಡೆಗಟ್ಟುವುದು, ಅಂಗವಿಕಲತೆ ತಡೆಗಟ್ಟುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ನಿವಾರಣಾತ್ಮಕ ಶಸ್ತ್ರ ಚಿಕಿತ್ಸೆ ಸಾಧನ ಸಲಕರಣೆಗಳನ್ನು ಒದಗಿಸುವುದು, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ತಿಳಿಸಿದರು. ವಿಕಲ ಚೈತನ್ಯರಿಗೆ ವಿಶೇಷ ಶಾಲೆಗಳು, ಸಮನ್ವಯ ಶಿಕ್ಷಣ ವಿದ್ಯಾಥರ್ಿ ವೇತನ ಅಥವಾ ಪ್ರೋತ್ಸಾಹ ಧನವನ್ನು ಶಿಕ್ಷಣದಲ್ಲಿ ನಿಯಮಗಳ ಸಡಿಲಿಕೆ, ಶಬ್ದ, ಗ್ರಂಥಾಲಯ, ವಿಶೇಷ ತರಬೇತಿ ಕೇಂದ್ರಗಳು, ಪುಸ್ತಕಳ ಸರಬರಾಜು, ಸಕರ್ಾರಿ ಹುದ್ದೆಗಳಲ್ಲಿ ಮೀಸಲಾತಿ ಸಾಧನ ಉದ್ಯೋಗಕ್ಕೆ ಪ್ರೋತ್ಸಾಹ ಆಧಾರ, ಓಊಈಆಅ ಯೋಜನೆಗಳು, ಸಾದನ ಸಲಕರಣೆಗಳ ವಿತರಣೆ (ರಿಯಾಯಿತಿ ದರದಲ್ಲಿ) ಪೋಷಣಾ ಭತ್ಯೆ ಯೋಜನೆ, ಗುರುತಿನ ಚೀಟಿ, ಬುದ್ದಿ ಮಾಂಧ್ಯ ಮಕ್ಕಳ ಪೋಷಕರಿಗೆ ವಿಮಾ ಯೋಜನೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹ ಧನ, ರಾಜ್ಯ ಪ್ರಶಸ್ತಿಗಳು, ಸ್ವಯಂ ಸೇವಾ ಸಂಸ್ಥೆಗಳ ನೆರವುಗಳ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ ನವರು ಉದ್ಘಾಟನಾ ನುಡಿಗಳನ್ನು ಆಡುತ್ತಾ ತಾಯಿ ತನ್ನ ಮಗುವನ್ನು ಗಭರ್ಾವಸ್ಥೆಯಲ್ಲಿದ್ದಾಗಲೇ ಉತ್ತಮ ಆರೈಕೆ ಮಾಡಿ ವಿಕಲ ಚೈತನ್ಯವನ್ನು ತಡೆಗಟ್ಟುವಂತೆ ಶ್ರಮಿಸಿ ಉತ್ತಮ ಮಕ್ಕಳನ್ನು ಪಡೆದು ಸತ್ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು.
ದೊರೆಮುದ್ದಯ್ಯ ನವರು ಪುರಸಭಾ ಸದಸ್ಯರು ಮಾತನಾಡುತ್ತಾ ವಿಕಲ ಚೈತನ್ಯರು ಎಂದು ದ್ರೃತಿಗೆಡದೆ ಸಕರ್ಾರದ ಸವಲತ್ತುಗಳನ್ನು ಪಡೆದು ಉತ್ತಮ ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು
ಸಪ್ತಕೋಟಿ ಪಂಚಾಕ್ಷರಿ ಮಂತ್ರದ ಜಪಯಜ್ಞ
ಚಿಕ್ಕನಾಯಕನಹಳ್ಳಿ,ಡಿ.09: ಗುರು ಮರುಳ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಪ್ರಯುಕ್ತ ಸಪ್ತಕೋಟಿ ಪಂಚಾಕ್ಷರಿ ಮಹಾ ಮಂತ್ರದ ಜಪಯಜ್ಞ ಕಾರ್ಯಕ್ರಮವನ್ನು ಇದೇ 13ರಿಂದ 19 ರವರಗೆ ಏರ್ಪಡಿಸಲಾಗಿದೆ ಎಂದು ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.
ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಏಳು ದಿವನಗಳ ಕಾಲ ದಿನದ 24 ಗಂಟೆ ಸತತವಾಗಿ ಭಜನೆ ಮತ್ತು ಪಂಚಾಕ್ಷರಿಯ ಮಂತ್ರದೊಡನೆ ಏಕದಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
75 ವರ್ಷದ ನಿ. ನೌಕರರು ಸಂಘದಲ್ಲಿ ಹೆಸರನ್ನು ನೊಂದಾಯಿಸಿ
ಚಿಕ್ಕನಾಯಕನಹಳ್ಳಿ.ಡಿ.09: ತಾಲ್ಲೂಕು ನಿವೃತ್ತ ನೌಕರರ ಸಂಘದ 26 ನೇ ವರ್ಷದ ವಾಷರ್ಿಕ ಸಮಾರಂಭವನ್ನು ಇದೇ 19 ನೇ ತಾರೀಖಿನ ಭಾನುವಾರದಂದು ಹುಳಿಯಾರಿನ ಶ್ರೀ ಸೀತಾರಾಮ ಕಲ್ಯಾಣ ಪ್ರತಿಷ್ಟಾನ ದಲ್ಲಿ ಏರ್ಪಡಿಸಲಾಗಿದ್ದು, 75ವರ್ಷ ತುಂಬಿದ ಸಂಘದ ಸದಸ್ಯರು ತಮ್ಮ ಜನ್ಮ ದಿನಾಂಕವಿರುವ ದಾಖಲೆಗಳನ್ನು ಕೂಡಲೇ ಚಿಕ್ಕನಾಯಕನಹಳ್ಳಿ ನಿವೃತ್ತ ನೌಕರರು ಸಂಘದ ಪ್ರಧಾನ ಕಾರ್ಯದಶರ್ಿಗಳಾದ ಸಿ.ಡಿ. ರುದ್ರಮುನಿ ಯವರನ್ನು ಹಾಗೂ ಹುಳಿಯಾರು ಭಾಗದ ನಿವೃತ್ತ ನೌಕರರು ಸಂಘದ ಉಪಾಧ್ಯಕ್ಷರಾದ ಸಿ ರಾಮಯ್ಯ ಇವರನ್ನು 12ರ ಒಳಗೆ ಸಂಪಕರ್ಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಚಿ.ನಾ.ಹಳ್ಳಿ: ಜಾತಿ ಮತ್ತು ದುಡ್ಡಿನ ಲೆಕ್ಕಾಚಾರದಲ್ಲಿ ಟಿಕೇಟ್ ಹಂಚಿಕೆಯ ಕಸರತ್ತು
ಚಿಕ್ಕನಾಯಕನಹಳ್ಳಿ,ಡಿ.10: ಸ್ಥಳೀಯ ಸಂಸ್ಥೆಗಳಾದ ಜಿ.ಪಂ. ಹಾಗೂ ತಾ.ಪಂ.ಗಳ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರು ಮುಖವಾಗಿದೆ.
ಚುನಾವಣಾ ಕಣದಲ್ಲಿ ನೆಲೆ ನಿಲ್ಲಲು ಅವಣಿಸುತ್ತಿರುವ ಉರಿಯಾಳುಗಳು ತಮ್ಮ ಬೆಂಬಲಿಗರನ್ನು ಬೆನ್ನಿಗೆ ಕಟ್ಟಿಕೊಂಡು ಮಿರಿ ಮಿರಿ ಬಟ್ಟೆತೊಟ್ಟು ಓಡಾಡುತ್ತಿದ್ದಾರೆ. ಇದನ್ನು ನಿರ್ಧರಿಸಬೇಕಾದ ಮತದಾರ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಒದ ಕೈಗೆ ತುತ್ತು ಬಾಯಿಗೆ ಬರುವ ಮುನ್ನ ಕೈಚಾರಿತೇನೊ ಎಂಬ ದುಗುಡದಿಂದ ಗೊಂದಲದಲ್ಲಿ ದಲ್ಲಿ ಸಿಕ್ಕಿರುವ ಮಹಾ ಪ್ರಭು ಹೊಲದಲ್ಲಿನ ಬೆಳೆಯಲ್ಲಿ ಸಿಕ್ಕಷ್ಟು ಮನೆಗೆ ತರಲು ಚಳಿಯನ್ನೂ ಲೆಕ್ಕಿಸಿದೆ ಹಗಲಿರುಳು ಶ್ರಮಿಸುತ್ತಿದ್ದಾನೆ,
ತಾಲೂಕಿನಲ್ಲಿ 5 ಜಿ.ಪಂ.ಕ್ಷೇತ್ರಗಳು, 19 ತಾ.ಪಂ. ಕ್ಷೇತ್ರಗಳಿವೆ. ಇವುಗಳಲ್ಲಿ ತಮ್ಮ ಪಕ್ಷ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ತಾಲೂಕಿನ ಹಿಡಿತವನ್ನು ಕೈಗೆತ್ತಿಕೊಳ್ಳಬೇಕೆಂಬ ಹಂಬಲದಿಂದ ಹಲವು ಕಸರತ್ತುಗಳ ಮೂಲಕ ಪ್ರಯತ್ನಿಸುತ್ತಿರುವ ಪಕ್ಷಗಳ ನಾಯಕರು, ಇನ್ನಿಲ್ಲದ ಲೆಕ್ಕಾಚರದಲ್ಲಿ ತೊಡಗಿದ್ದಾರೆ. ಜೆ.ಡಿ.ಯು. ಎನ್ನುವುದಕ್ಕಿಂತ ಜೆ.ಸಿ.ಎಂ. ಬೆಂಬಲಿಗರು ಬಿ.ಜೆ.ಪಿ.ಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂಬ ಪುಕಾರು ದಟ್ಟವಾಗಿದ್ದು, ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಹೊಂದಾಣಿಕೆಯ ಮಾತುಗಳು ರಾಜ್ಯ ಮಟ್ಟದಲ್ಲಿ ಕೇಳಿ ಬರುತ್ತಿರುವುದರಿಂದ ಟಿಕೇಟ್ ಆಕಾಂಕ್ಷಿಗಳು ಸ್ವಲ್ಪ ಮಟ್ಟಿನ ಗೊಂದಲದಲ್ಲಿದ್ದಾರೆ.
ಈ ಚುನಾವಣೆ ವಿಶೇಷವಾಗಿ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ಕುಮಾರ್ಗೆ ಪ್ರತಿಷ್ಠೆಯ ಕಣವಾಗಿದೆ, ಕಾರಣ ಈ ಇಬ್ಬರು ನಾಯಕರಲ್ಲಿ ತಾಲೂಕಿನಲ್ಲಿ ಯಾರು ಹೆಚ್ಚು ಜನಪ್ರಿಯರು ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಬೇಕಾಗಿದೆ. ಈ ಚುನಾವಣೆಯಲ್ಲಿ ಯಾರು ತಮ್ಮ ಬೆಂಬಲಿಗರನ್ನು ಹೆಚ್ಚು ಗೆಲ್ಲಿಸಿಕೊಳ್ಳುತ್ತಾರೊ ಅವರು ಮುಂದಿನ ವಿಧಾನ ಸಭೆಯ ಮೆಟ್ಟಿಲು ಹತ್ತಲು ಸಹಕಾರಿಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿವೆ. ಒಟ್ಟನಲ್ಲಿ ಜೆ.ಸಿ.ಎಂ. ಹಾಗೂ ಕೆ.ಎಸ್.ಕೆ.ಗೆ ಜಿದ್ದಾಜಿದ್ದು ಆರಂಭಗೊಂಡಿದೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ದೃಷ್ಠಿಯನ್ನಿಟ್ಟು ಕೊಂಡು ನೋಡುವುದಾದರೆ ಇಬ್ಬರೂ ಸಮ ಬಲರೇ, ಕಾರಣ ಮಾಧುಸ್ವಾಮಿ ಹಂದನಕೆರೆ, ಕಂದೀಕೆರೆ, ಶೆಟ್ಟೀಕೆರೆ ಭಾಗಗಳಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿದ್ದರೆ, ಕೆ.ಎಸ್.ಕಿರಣ್ಕುಮಾರ್ ಹುಳಿಯಾರು, ಹೊಯ್ಸಲಕಟ್ಟೆ, ಬುಕ್ಕಾಪಟ್ಟಣದ ಕಡೆ ಫೆಮಸ್. ಈಗಾಗಿ ಇವರಿಬ್ಬರ ಬಲವನ್ನು ನಿರ್ಧರಿಸುವಲ್ಲಿ ಈ ಚುನಾವಣೆ ನಿಣರ್ಾಯಕ ಪಾತ್ರ ವಹಿಸಲಿದೆ.
ಸ್ಥಳೀಯ ಜೆ.ಡಿ.ಎಸ್. ನಾಯಕ ಸಿ.ಬಿ.ಸುರೇಶ್ ಬಾಬು ಕ್ಷೇತ್ರದಲ್ಲಿ ಜನರಿಗೆ ನೇರವಾಗಿ ದೊರೆಯದಾದಾಗ ಕ್ಷಪಿಸಿದ್ದು ಬಿಟ್ಟರೆ ಅವರು ಕ್ಷೇತ್ರಕ್ಕೆ ಬಂದು ''ಅಣ್ಣ, ಅಕ್ಕ, ಬರ್ದರ್'' ಎಂದು ಹೆಗಲ ಮೇಲೆ ಕೈ ಹಾಕಿದ ತಕ್ಷಣ ಎಲ್ಲವನ್ನು ಮರೆತು 'ಬಾಬಣ್ಣ' ಎಂದು ಜನ ಗುಂಪು ಗುಂಪಾಗಿ ಹಿಂಬಾಲಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇಲ್ಲಿನ ಕಾಂಗ್ರೆಸಿಗರನ್ನು ಅನಾಥರನ್ನಾಗಿಸಿರುವ ಮೇಲ್ಮಟ್ಟದ ನಾಯಕರು, ಈ ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಹಾಗೇ ಉಳಿದಿದೆ. ಹಾಗಂತ ಆಕಾಂಕ್ಷಿಗಳೇನು ಕಡಿಮೆಯಾಗಿಲ್ಲ, ಟಿಕೇಟ್ ಆಕಾಂಕ್ಷಿಗಳು ಅಷ್ಟೇ, ಮೊದಲು ಜೆ.ಡಿ.ಎಸ್.ನಲ್ಲಿ ಟ್ರೈ ಮಾಡೋಣ ಅಲ್ಲಿ ಸಿಗದಿದ್ದರೆ ಕಾಂಗ್ರೇಸ್ ಇದ್ದೇ ಇದೆಯಲ್ಲಾ ಎಂಬ ಮನೋಭಾವನೆಯವರು ಹೆಚ್ಚಾಗಿದ್ದಾರೆ. ಎರಡು ಪಕ್ಷಗಳಲ್ಲಿ ಅಜರ್ಿ ಸಲ್ಲಿಸಿರುವ ಉದಾಹರಣೆ ಇಲ್ಲದಿಲ್ಲ. ಈ ಮಾತನನ್ನು ಕೇಳಿದ ಕೆಲವು ಕಾರ್ಯಕರ್ತರು ಜೆ.ಡಿ.ಎಸ್. ಜೊತೆ ಹೊಂದಾದರೆ ನಮ್ಮ ಕೈ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ಆಸೆಗಣ್ಣಿನಿಂದ ನೋಡುವವರು ಇದ್ದಾರೆ. ಆದರೆ ನಿಷ್ಠಾವಂತ ಬೆರಳೆಣಿಕೆಯಷ್ಟು ಕಾಂಗ್ರೆಸಿಗರು ಇದಕ್ಕೆ ಹೊರತಾದವರೂ ಇದ್ದಾರೆ. ಆದರೆ ರಾಜ್ಯ ನಾಯಕರು ಪಕ್ಷಗಳ ಹೊಂದಾಣಿಕೆಯಲ್ಲಿ ಏನು ನಿಲುವು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಟಿಕೆಟ್ ಆಕಾಂಕ್ಷಿಗಳ ಗಮನ ನೆಟ್ಟಿದೆ.
ಜೆ.ಡಿ.ಎಸ್, ಕಾಂಗ್ರೆಸ್ ಈಗಾಗಲೇ ಒಂದೊಂದು ಸುತ್ತಿನ ಕಾರ್ಯಕರ್ತರ ಸಭೆ ಕರೆದು ಅಜರ್ಿಗಳನ್ನು ಪಡೆದಿವೆ, ಜೆ.ಸಿ.ಎಂ.ಬೆಂಬಲಿಗರು ಇದೇ 11ರಂದು ಒಂದೆಡೆ ಸೇರಲಿದ್ದಾರೆ, ಬಿ.ಜೆ.ಪಿ.ಯವರು ಪಟ್ಟಿಯನ್ನೇನು ಸಿದ್ದಗೊಳಿಸಿಕೊಂಡಿದ್ದಾರೆ ಆದರೆ ಎರಡು ಪಟ್ಟಿ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ, ಇದರಲ್ಲಿ ಹೈಕಮಾಂಡ್ ಯಾರ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲಾ ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ಹಾಗೂ ವ್ಯಕ್ತಿಗತವಾಗಿ ಅಬ್ಯಾಥರ್ಿಗಳೆಷ್ಟು ತೂಗುತ್ತಾರೆ ಎಂಬುದರ ಮೇಲೆ ಟಿಕೇಟ್ ನೀಡಲು ಮುಂದಾಗುತ್ತಿದ್ದಾರೆ.
ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಶೆಟ್ಟೀಕೆರೆ ಕ್ಷೇತ್ರ: ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದು, ಈ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಗೋಡೆಕೆರೆ ನಿಜಾನಂದಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಸಾಸಲು ಸತೀಶ ಅಜರ್ಿ ಸಲ್ಲಿಸಿದ್ದಾರೆ, ಜೆ.ಡಿ.ಎಸ್.ನಿಂದ ತಾ.ಪಂ. ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಭೈರವ ಮೈನ್ಸ್ನ ಸಿ.ಡಿ.ಸುರೇಶ್ ಕೇಳುತ್ತಿದ್ದಾರೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ತಾ.ಪ0.ಮಾಜಿ ಅಧ್ಯಕ್ಷ ಎಚ್.ಎಂ.ಸುರೇಂದ್ರಯ್ಯ, ಟಿ. ಶಂಕರಲಿಂಗಪ್ಪ ಆಕಾಂಕ್ಷಿಗಳಾಗಿದ್ದಾರೆ. ಬಿ.ಜೆ.ಪಿ.ಯಿಂದ ಬಿ.ಎನ್.ಶಿವಪ್ರಕಾಶ್, ಗಣಿ ಉದ್ಯಮಿ ಪಂಚಾಕ್ಷರಿ ಪೈಪೋಟಿಯಲಿದ್ದಾರೆ.
ಕಂದೀಕೆರೆ ಕ್ಷೇತ್ರ: ಅನುಸೂಚಿತ ಜಾತಿಗೆ ಮೀಸಲಿದ್ದು ಜೆ.ಡಿ.ಎಸ್.ನಿಂದ ತೀರ್ಥಪುರದ ಕುಮಾರ್, ನಿವೃತ್ತ ಶಿಕ್ಷಕ ಶಿವಣ್ಣ, ಪೈಪೋಟಿಯಲಿದ್ದು ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್ರವರ ಹೆಸರೂ ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಗುಂಪಿನಲ್ಲಿ ಲೋಹಿತಾ, ಸಾಲ್ಕಟ್ಟೆ ಚಂದ್ರಣ್ಣ, ಹೊಸಕೆರೆ ಮಲ್ಲಿಕಾರ್ಜನ್ ಮುಂಚೂಣಿಯಲಿದ್ದಾರೆ, ಕಾಂಗ್ರೇಸ್ನಲ್ಲಿ ವಕೀಲ ಪರಮೇಶ್ ಅಜರ್ಿ ಹಾಕಿಕೊಂಡಿದ್ದಾರೆ, ಬಿ.ಜೆ.ಪಿ.ಯಿಂದ ಬೇವಿನಹಳ್ಳಿ ಚನ್ನಬಸವಯ್ಯ, ಆಲದಕಟ್ಟೆ ರಂಗನಾಯ್ಕ, ಬೆಳ್ಳಾರದ ಈರಣ್ಣ, ಅಜ್ಜಿಗುಡ್ಡೆ ಸಣ್ಣಯ್ಯನ ಹೆಸರು ಕೇಳಿ ಬರುತ್ತಿದೆ.
ಹಂದನಕೆರೆ ಕ್ಷೇತ್ರ: ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ್ದು, ಈ ಕ್ಷೇತ್ರದಲ್ಲಿನ ಎಲ್ಲಾ ಪಕ್ಷಗಳ ಗಟ್ಟಾನುಗಟಿ ನಾಯಕರುಗಳು ತಮ್ಮ ಧರ್ಮಪತ್ನಿಯನ್ನು ನಿಲ್ಲಿಸಲು ಕಸರತ್ತು ನಡೆಸುತ್ತಿದ್ದು, ಜೆ.ಡಿ.ಎಸ್.ನಿಂದ ಜಿ.ಪಂ. ಮಾಜಿ ಅಧ್ಯಕ್ಷ ರಘುನಾಥ್ರವರ ಪತ್ನಿ ಲಕ್ಷ್ಮಿ, ಕುದುರೆ ರಾಜಣ್ಣನವರ ಪತ್ನಿ, ತಾ.ಪಂ.ಸದಸ್ಯೆ ಜಾನಮ್ಮ ರಾಮಚಂದ್ರಯ್ಯ,ನವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ, ಕಾಂಗ್ರೆಸ್ನಿಂದ ಸೋರಲಮಾವು ಕೃಷ್ಣಮೂತರ್ಿಯವರ ಪತ್ನಿಯ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ಚೆನ್ನಪ್ಪನ ಪಾಳ್ಯದ ಚೆನ್ನಪ್ಪನ ಪತ್ನಿ, ಮಲ್ಲಿಗೆರೆ ರಾಜಣ್ಣನ ಪತ್ನಿ ಪೈಪೋಟಿಯಲ್ಲಿದ್ದಾರೆ. ಬಿ.ಜೆ.ಪಿ.ಯಿಂದ ಬರಗೂರು ಬಸವರಾಜು ಪತ್ನಿ ಶುಭಾ, ಮತ್ತಿಘಟ್ಟ ಆನಂದಕುಮಾರ್ ರವರ ಪತ್ನಿ ವಸಂತಮ್ಮನ ಹೆಸರು ಚಾಲ್ತಿಯಲ್ಲಿದೆ.
ಹುಳಿಯಾರು ಕ್ಷೇತ್ರ: ಕಾಂಗ್ರೆಸ್ನಿಂದ ರಮಾದೇವಿ, ಜೆ.ಡಿ.ಎಸ್.ನ ಮಂಜುಳ ಗವಿರಂಗಯ್ಯ, ಹೊಸಹಳ್ಳಿ ಪಾಳ್ಯದ ರಾಜಮ್ಮ, ಬಿಂದು ರಮೇಶ್ಬಾಬು ಮಧ್ಯೆ ಪೈಪೋಟಿ ಇದೆ, ಬಿ.ಜೆ.ಪಿ.ಯಿಂದ ಕೆ.ಎಸ್.ಕಿರಣ್ಕುಮಾರ್ರವರ ಪತ್ನಿ ಕವಿತಾ ರವರ ಹೆಸರು ಜನ ಸಾಮಾನ್ಯರಲ್ಲಿ ದಟ್ಟವಾಗಿದೆ ಆದರೆ ಕಿರಣ್ ಈ ಬಗ್ಗೆ ಮೌನವಹಿಸಿದ್ದು, ಜಿ.ಪಂ. ಮಾಜಿ ಸದಸ್ಯ ಶಿವರಾಮಯ್ಯನವರ ಪತ್ನಿ ಹೆಸರು ಚಾಲ್ತಿಯಲ್ಲಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಈ ಕ್ಷೇತ್ರದ ಮಟ್ಟಿಗೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದು ಉಪ್ಪಾರ ಜಾತಿಗೆ ಆದ್ಯತೆ ಕೊಡತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಹೊಯ್ಸಿಲಕಟ್ಟೆ ಕ್ಷೇತ್ರ: ಬಿ.ಸಿ.ಎಂ.(ಎ) ಮಹಿಳೆಗೆ ಮೀಸಲಿದ್ದು, ಕಾಂಗ್ರೆಸ್ನಿಂದ ಕ್ಯಾತಲಿಂಗಮ್ಮ, ಬಿ.ಜೆ.ಪಿಯಿಂದ ನಿಂಗಮ್ಮನ ಹೆಸರು ಕೇಳಿ ಬರುತ್ತಿದೆ. ಜೆ.ಡಿ.ಎಸ್.ನಿಂದ ಜಯಲಕ್ಷ್ಮಿ ಚಿಕ್ಕಣ್ಣ, ರಾಜಮ್ಮ ರಾಮಣ್ಣನ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಅಬ್ಯಾಥರ್ಿಗಳ ಆಯ್ಕೆ ಕಸರತ್ತು ನಡೆದಿದೆ.

ಚಿಕ್ಕನಾಯಕನಹಳ್ಳಿ,ಡಿ.11: ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದ್ದು ಚುನಾವಣೆ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಟಿಕೇಟ್ ಹಂಚಿಕೆಯಲ್ಲಿ ಮಾದಿಗರಿಗೆ ಹೆಚ್ಚು ಅವಕಾಶ ಕಲ್ಪಿಸಬೇಕೆಂದು ಜೆ.ಸಿ.ಪುರ ಗ್ರಾಪಂ ಸದಸ್ಯೆ ಬಿ.ಎನ್.ಶಶಿಕಲಾ ಮನವಿ ಮಾಡಿದ್ದಾಋಎ.
ರಾಜ್ಯದಲ್ಲಿ 98ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಾದಿಗರಿದ್ದು, ಈ ಮತಗಳ ಆಧಾರದ ಮೇಲೆ ಚುನಾವಣಾ ಕಣಕ್ಕಿಳಿದರೆ ಅರ್ಧ ಬಾಗದಷ್ಟು ಜನಪ್ರತಿನಿಧಿಗಳಾಗಿ ಹೊರಹೊಮ್ಮುಬಹುದು, ಪಕ್ಷ ಯಾವುದೇ ಇರಲಿ ಚುನಾವಣೆಗೆ ನಿಲ್ಲಿ ಅವಕಾಶವಿದ್ದರೆ ಪಕ್ಷೇತರರಾಗಿ ನಿಂತು ಮಾದಿಗರು ಮುಂದೆ ಬರಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕ್ರೀಡೆಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.
ಚಿಕ್ಕನಾಯಕನಹಳ್ಳಿ,ಡಿ.11: ಯುವಕರು ಕ್ರೀಡಾ ಮನೋಭಾವನೆಯನ್ನು ಬೆಳಸಿಕೊಂಡು ಜೀವನ ನಿರ್ವಹಣೆಯ ಕೌಶಲ್ಯವನ್ನು ಕಲಿಯಬೇಕೆಂದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಮುಕ್ತಾಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ನಡೆಸಿದ ನೆಹರು ಯುವ ಕೇಂದ್ರ ಹಾಗೂ ಶ್ರೀರಂಗ ಯುವ ಸಂಘದ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಣದ ಜೊತೆಗೆ ಕ್ರೀಡೆಯ ಅವಶ್ಯಕತೆ ಇದ್ದು ಗ್ರಾಮೀಣ ಪ್ರದೇಶದ ಯುವಕರು ಹೆಚ್ಚಿನ ರೀತಿಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಮತ್ತು ಮಹಿಳೆಯರು ಕ್ರೀಡೆಗಳಲ್ಲಿ ಚಿನ್ನದ ಪದಕ ಪಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು. ವೇದಿಕೆಯಲ್ಲಿ ನೆಹರು ಯುವ ಕೇಂದ್ರದ ಡಿಸೋಜಾ, ಮುಖ್ಯ ಶಿಕ್ಷಕ ಸಂತೋಷ್, ಗ್ರಾ.ಪಂ.ಸದಸ್ಯರಾದ ದಿನೇಶ್, ಶಿವಕುಮಾರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈಶ್ವರಯ್ಯ ಸ್ವಾಗತಿಸಿದರೆಎ ಸಿ.ಎ.ಕುಮಾರಸ್ವಾಮಿ ನಿರೂಪಿಸಿ ಲೋಕೇಶ್ ವಂದಿಸಿದರು.
ಮನುಷ್ಯ ಜೀವಿಸುವುದಕ್ಕಾಗಿ ಹಾಕಿಕೊಂಡ ನೀತಿ ನಿಯಮವೇ ಧರ್ಮ
ಚಿಕ್ಕನಾಯಕನಹಳ್ಳಿ,ಡಿ.11: ವ್ಯಕ್ತಿ ತನ್ನ ಚಾರಿತ್ರ್ಯವನ್ನು ಬಿಟ್ಟು ಜೀವನ ನಡೆಸಲು ಮುಂದಾಗಬಾರದು, ತನ್ನ ಚಾರಿತ್ರ್ಯ ಬಿಟ್ಟು ಬಾಳಿದರೆ ಮನುಷ್ಯ ಇದ್ದೂ ಸತ್ತಂತೆ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಸುಹಾಸಿನಿ ಹೇಳಿದರು.
ಪಟ್ಟಣದಲ್ಲಿ ಕಾನೂನು ಸೇವಾ ಸಮಿತಿಯ ವತಿಯಿಂದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಪ್ರಸಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನ ಮನಸ್ಸಿಗೆ ಶಾಂತಿ ದೊರಕಿದರೆ ವಿಶ್ವದಲ್ಲಿ ಅಶಾಂತಿ ದೂರವಾಗಿ ಶಾಂತಿ ನೆಲಸಲು ಸಹಕಾರಿಯಾಗುತ್ತದೆ ಎಂದ ಅವರು ಸಮಯ ದೊರಕುವುದು ಬಹಳ ಕಡಿಮೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಬಹುದು ಎಂದರು.
ಸಿ.ಡಿ.ಪಿ.ಒ ಅನೀಸ್ ಖೈಸರ್ ಮಾತನಾಡಿ ಧರ್ಮ ಎಂಬುದು ಮನುಷ್ಯನು ಹಾಕಿಕೊಂಡಿರುವ ನೀತಿ ನಿಯಮದ ಜೀವನ ಕ್ರಿಯೆ ಎಂದ ಅವರು ಮನುಷ್ಯ ಮನುಷ್ಯನಿಗೆ ಸಹಾಯ ಮಾಡಬೇಕು ಮತ್ತು ಮನುಷ್ಯನು ಶಾಂತಿ ಸಹಬಾಳ್ವೆಗಾಗಿ ಒಬ್ಬರಿಗೊಬ್ಬರೂ ಅರಿತುಕೊಂಡು ಬಾಳಬೇಕು ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶೆ ಶೀಲಾ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಜ್ಞಾನಮೂತರ್ಿ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ. ಡಿ.12: ಮಕ್ಕಳು ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಭಾಗವಹಿಸಿ ಆಸಕ್ತಿಯಿಂದ ಪಾಲ್ಗೊಂಡು ವೇದಿಕೆಗಳನ್ನು ಬಳಸಿಕೊಂಡರೆ ಅವರ ಮುಂದಿನ ಗುರಿ ತಲುಪಲು ಸಹಾಯಕವಾಗಲಿದೆ ಎಂದು ತಹಸೀಲ್ದಾರ್ ಟಿ.ಸಿ. ಕಾಂತರಾಜು ಮಾತನಾಡುತ್ತ
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ಮಾತನಾಡುತ್ತಾ ಎಲ್ಲಾ ತೀಪರ್ುಗಾರರು ನಿಷ್ಪಕ್ಷಪಾತವಾಗಿ ಪ್ರತಿಭೆಯನ್ನು ಗುತರ್ಿಸಿ ಯಾವುದೇ ಮಗುವಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಮತ್ತು ಸ್ಪಧರ್ಿಗಳಿಗೆ ಸೋಲು ಗೆಲುವು ಮುಖ್ಯವಲ್ಲ ಭಾಗವಿಸುವ ಸಾಮಥ್ರ್ಯ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಪ್ರ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಪರಶಿವಮೂತರ್ಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಪಠ್ಯೇತರ ಚಟುವಟಿಕೆಗಳ ವೇದಿಕೆ ಅಗತ್ಯವಾಗಿದೆ. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಧೈರ್ಯದ ಜೊತೆಗೆ ಸವರ್ಾಂಗೀಣ ಮುಖಿಯಾಗಿ ಬೆಳವಣಿಗೆಯಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಇ.ಓ ದಯಾನಂದ್ ತಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ. ಸುರೇಶ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಉಪಧ್ಯಕ್ಷ ನಟರಾಜು, ನಿದರ್ೇಶಕ ರಾಜಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಿಕಾಜರ್ುನ್ ಪ್ರಾಥರ್ಿಸಿದರೆ, ಎನ್. ಮೂತರ್ಿಸ್ವಾಗತಿಸಿದರು, ಪ್ರಕಾಶ್ ವಂದಿಸಿ, ದುರ್ಗಯ್ಯ ನಿರೂಪಿಸಿದರು.

Wednesday, December 8, 2010



: ಕೆ.ಎಸ್.ಕೆ.ವಿರುದ್ದ ಆರೋಪ ಮಾಡಲು ಟಿ.ಬಿ.ಜೆ.ಯವರಿಗೆ ನೈತಿಕ ಹಕ್ಕಿಲ್ಲ: ಸುರೇಶ್ ಹಳೇಮನೆ
ಚಿಕ್ಕನಾಯಕನಹಳ್ಳಿ,ಡಿ.6: ನಮ್ಮ ತಾಲೂಕನ್ನು ಸದಾ ಮಲತಾಯಿ ಧೋರಣೆಯಲ್ಲೇ ಅಭಿವೃದ್ಧಿಯಿಂದ ದೂರ ಮಾಡಿದ ಟಿ.ಬಿ.ಜಯಚಂದ್ರರವರಿಗೆ ನಮ್ಮ ಮಾಜಿ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರು ಹಾಗೂ ಶಿರಾ ವಿಧಾನಸಭಾ ಸದಸ್ಯರು ಆದ ಟಿ ಬಿ ಜಯಚಂದ್ರ ರವರು ತಮ್ಮ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಬಿ ಜೆ ಪಿ ಮಾಜಿ ಶಾಸಕರೊಬ್ಬರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ಹರಿಯುತ್ತದೆಂದು ಸುಳ್ಳು ಹೇಳಿದ್ದಾರೆ ಆ ತರಹದ ಯಾವುದೇ ಪ್ರಯತ್ನ ನಡೆದಿಲ್ಲ ಚೀಫ್ ಎಂಜಿನಿಯರ್ ರವರು ಸಕರ್ಾರಕ್ಕೆ ವರದಿಯನ್ನು ಮಾತ್ರ ನೀಡಿದ್ದಾರೆ, ನಾನು ಸದನದ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಸತ್ಯವನ್ನು ಅನಾವರಣಗೊಳಿಸಿದ್ದು ಈ ರೀತಿ ನೀರಾವರಿ ವಿಷಯಗಳನ್ನು ಬಹಿರಂಗಪಡಿಸಬಾರದು ಆದರೆ ನಾನು ಈಗಾಗಲೆ ಕಳ್ಳಂಬೆಳ್ಳ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸಿ ಅನುಭವಸ್ಥನಾಗಿದ್ದೇನೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೂ ನೀರನ್ನು ಹರಿಸಲು ಸಕರ್ಾರದೊಳಗೆ ಗೌಪ್ಯವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದಾರಲ್ಲದೆ, ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಈ ಮಾತುಗಳನ್ನಾಡಿರುವ ಜಯಚಂದ್ರ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆಯೂ ಚಿಕ್ಕನಾಯಕನಹಳ್ಳಿಯಲ್ಲಿಯೇ ಇದ್ದ ಅವರ ಕಛೇರಿಗೆ ಬಾರದ, ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸದೆ ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾರ್ಯಗಳನ್ನು ಸದಾ ಕಡೆಗಣಿಸುತ್ತಲೇ ಬಂದಿರುವ ಇವರಿಂದ ನಾವು ಹೇಳಿಸಿಕೊಳ್ಳಬೇಕಾದ್ದು ಏನು ಇಲ್ಲವೆಂದಿದ್ದಾರೆ.
ಈಗಾಗಲೇ ನೀರಾವರಿ ಬಗ್ಗೆ ಬಿ ಜೆ ಪಿ ಸ್ಪಷ್ಟ ನಿಲುವನ್ನು ತಳೆದಿದ್ದು, ಈ ಯೋಜನೆ ಅನುಷ್ಟಾನಗೊಳ್ಳುತ್ತದೆಂಬ ಧೃಡ ವಿಶ್ವಾಸವಿರುವಾಗ ಅದನ್ನು ನಾನೇ ಮಾಡಿದೆನೆಂದು ಹೇಳಿಕೊಳ್ಳಲು ಜಯಚಂದ್ರರವರು ಈ ರೀತಿಯ ಕೆಳಮಟ್ಟದ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಷಯ. ತಮ್ಮದೇ ಸಕರ್ಾರವಿದ್ದು, ತಾವೇ ಸಚಿವರಾಗಿದ್ದು, ಸಾಧಿಸಲಾಗದ್ದನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಸಾಧಿಸುತ್ತೇನೆ ಎಂದು ಹೇಳುತ್ತಲೇ ಭಾ ಜ ಪಾ ವಿರುದ್ದ ಅಪಪ್ರಚಾರ ಮಾಡುತ್ತಿರುವ ಜಯಚಂದ್ರರವರು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ನಮ್ಮ ಪಕ್ಷದ ಮಾಜಿ ಶಾಸಕರ ಬಗ್ಗೆ ಮಾತನಾಡುವ ಸಾಹಸಕ್ಕೆ ಇನ್ನು ಮುಂದೆ ಮುಂದಾದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ಅಂಶ ನೆನಪಿರಲಿ ಸದನದ ಸಮಿತಿ ಅಧ್ಯಕ್ಷರಾಗಿ ಪಡೆದವೆಂದು ಹೇಳುತ್ತಿರುವ ವಿಷಯವನ್ನು ಸಕರ್ಾರದಿಂದ ಪಡೆಯಲು ಸಾಮಾನ್ಯ ವ್ಯಕ್ತಿಯಾದರೆ ಸಾಕು, ಮಾಹಿತಿ ಹಕ್ಕಿನಡಿ ಪಡೆಯಬಹುದು. ಅದನ್ನು ಹೇಳಲು ಇಷ್ಟೊಂದು ದೊಡ್ಡ ಡೌಲು-ಡಂಗೂರ ಅವಶ್ಯಕತೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪದರ್ಿಸುವ ಉಮೇದಿನಲ್ಲಿ ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸುವ ಮಾತನಾಡುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದು ಸುರೇಶ್ ಹಳೇಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಡುಗಾಡು ಸಿದ್ದರಿಗೆ ನಿವೇಶನ ಒದಗಿಸಲು ಶ್ರಮಿಸುವೆ: ಪುರಸಭಾ ಅಧ್ಯಕ್ಷ ರಾಜಣ್ಣ
ಚಿಕ್ಕನಾಯಕನಹಳ್ಳಿ,ಡಿ.8: ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 53ನೇ ಪರಿನಿವರ್ಾಣ ದಿನವನ್ನು ಪಟ್ಟಣದ ಕೇದಿಗೆಹಳ್ಳಿ ಗುಂಡುತೋಪಿನ ಶ್ರಮಿಕ ವರ್ಗದ ಬಿಡಾರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುರಸಭಾ ಅಧ್ಯಕ್ಷ ಸಿ.ಜಿ.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ರವರು ದಲಿತರ ಉದ್ದಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದು, ಅವರ ಪರಿನಿವರ್ಾಣ ದಿನವನ್ನು ಜಾಗೃತಿ ವೇದಿಕೆ ಈ ಬಿಡಾರದಲ್ಲಿ ಹಮ್ಮಿಕೊಂಡಿರುವುದು ಸಮಂಜಸವಾಗಿದ್ದು, ಇಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸಿಕೊಂಡು ಬಂದಿರುವ ಈ ಜನಕ್ಕೆ ಶಾಶ್ವತವಾಗಿ ನಿವೇಶನವನ್ನು ನೀಡುವ ಜವಬ್ದಾರಿ ಪುರಸಭೆಯ ಮೇಲಿದ್ದು, ಶೀಘ್ರ ಇವರಿಗೆ ನಿವೇಶನವನ್ನು ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪುರಸಭಾ ಸದಸ್ಯ ಹಾಗೂ ಜಾಗೃತಿ ವೇದಿಕೆ ಸಂಚಾಲಕ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ದರು ಎಂಬ ಪರಿಶಿಷ್ಟ ಜಾತಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಜನರು ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರು ಚಳಿ, ಮಳೆ, ಬಿಸಲುಗಳಲ್ಲಿ ನೊಂದಿದ್ದಾರೆ, ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಜಲಾವೃತಗೊಂಡಿದ್ದ ಈ ಸ್ಥಳದಲ್ಲೇ ವಾಸಿಸಿದ್ದು ಸಾವಲಾಗಿತ್ತು. ಕನಿಷ್ಟ ಮಟ್ಟದ ಸವಲತ್ತುಗಳಿಲ್ಲದೆ ಬೇಸತ್ತು ಹೋಗಿರುವ ಈ ಜನಕ್ಕೆ ಪುರಸಭೆಯ ವತಿಯಿಂದ ಶೀಘ್ರ ನಿವೇಶನ ಕೊಡಬೇಕೆಂದು ಒತ್ತಾಯಿಸಿದರು.
ಈ ಭಾಗದ ಪುರಸಭಾ ಸದಸ್ಯೆ ಧರಣಿ ಲಕ್ಕಪ್ಪ ಮಾತನಾಡಿ, ಈ ಜನರಿಗೆ ನಿವೇಶನ ಕೊಡಿಸಲು ಯಾವುದೇ ರೀತಿಯ ರಾಜಕೀಯವನ್ನು ಮಧ್ಯೆ ತರದೆ ಇವರ ಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ ಗುಣ ಎಂದರು.
ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಇವರ ಕಷ್ಟಕ್ಕೆ ಪುರಸಭೆಯವರು ಶೀಘ್ರ ಸ್ಪಂದಿಸಬೇಕು, ಕಾನೂನು ಕಟ್ಟಲೆಗಳನ್ನೇ ಮುಂದು ಮಾಡಿಕೊಂಡು ಹೋಗದೆ, ಮಾನವೀಯ ನೆಲಗಟ್ಟಿನಲ್ಲಿ ಯೋಚಿಸಿ ಸುಡುಗಾಡು ಸಿದ್ದರಿಗೆ ಅನುಕೂಲ ಮಾಡಿಕೊಂಡಬೇಕೆಂದರು.
ಸವಿತ ಸಮಾಜದ ಮುಖಂಡ ಸುಬ್ರಹ್ಮಣ್ಯ ಮಾತನಾಡಿ ಈ ಜನರಿಗೆ ವಸತಿಯದೊಂದೆ ಸಮಸ್ಯೆಯಲ್ಲ, ಗುಡಿಸಲಿನಲ್ಲಿ ವಾಸಿಸುತ್ತಿರವುದರಿಂದ ಇವರ ಜೀವಕ್ಕೆ ಸಂಚಾಕರವಿದೆ ಎಂದರಲ್ಲದೆ, ಇತ್ತೀಚೆಗೆ ಇಲ್ಲಿಯ ಹೆಣ್ಣು ಮಕ್ಕಳೊಬ್ಬಳ ಮೇಲೆ ಅತ್ಯಾಚರವೆಸೆಗಿದ ಘಟನೆಯೂ ನಡೆದಿದೆ ಇಂದಿನ ನಾಗರೀಕ ಸಮಾಜದಲ್ಲಿ ಇನ್ನೂ ಈ ರೀತಿಯ ಅಮಾನವೀಯ ಘಟನೆಗಳು ನಡೆಯುತ್ತಿರುವುದು ನಾಚಿಗೆಗೇಡಿನ ವಿಷಯವೆಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರುಗಳಾದ ರುಕ್ಮಿಣಮ್ಮ, ಎಂ.ಎಸ್.ರವಿಕುಮಾರ್, ಡಿ.ಎಸ್.ಎಸ್.ಮುಖಂಡರುಗಳಾದ ಲಿಂಗದೇವರು, ಹೊಸಕೆರೆ ಮಲ್ಲಿಕಾರ್ಜನಯ್ಯ, ಬೋರವೆಲ್ ತಿಮ್ಮಯ್ಯ, ತಾ.ಕ.ರ.ವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ.ಡಿ.07: ಕೃಷಿ ಬಗ್ಗೆ ರೈತರು ಹೆಚ್ಚು ಒತ್ತು ನೀಡಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರಗಳನ್ನು ರೈತರು ಉಪಯೋಗಿಸದ ನಂತರ ಒಳ್ಳೆಯ ಇಳುವರಿ ಹಾಗೂ ಸಮೃದ್ಧವಾದ ಬೆಳೆಯಿಂದ ಉತ್ತಮ ಆಹಾರ ದೊರಕುವುದು ಎಂದು ಶಾಸಕ ಸಿ.ಬಿ. ಸುರೇಶ್ಬಾಬು ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಉತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸಮಸ್ಯೆಗಳನ್ನು ಹೊತ್ತು ಬರುವ ರೈತರುಗಳ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ, ಕೃಷಿ ಇಲಾಖೆಯಲ್ಲಿ ಸಲಕರಣೆಗಳನ್ನು ರೈತರಿಗೆ ಕಾಲಕಾಲಕ್ಕೆ ಒದಗಿಸುವುದಲ್ಲದೆ ಸಕರ್ಾರದಿಂದ ಬಂದಂತಹ ಸಾಮಾಗ್ರಿಗಳು ನೇರವಾಗಿ ರೈತರಿಗೆ ಸಿಗುವಂತೆ ಹಾಗೂ ಫಲಾನುಭವಿಗಳಿಗೆ ದೊರೆಯಬೇಕಾದ ಸೌಲಭ್ಯವನ್ನು ಅಧಿಕಾರಿಗಳು ದೊರೆಯುವಂತೆ ಮಾಡಬೇಕು ಮತ್ತು ರೈತರ ಅಭಿವೃದ್ಧಿಗೆ ಸಕರ್ಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ|| ಶಶಿಧರ್ ಮಾತನಾಡಿ ಕಾಡುಗಳನ್ನು ಬೆಳೆಸಿ ನಾಡನ್ನು ಉಳಿಸಿ ಕಾಡಿನ ನಾಶದಿಂದ ಪಕ್ಷಿ ಪ್ರಪಂಚ ನಾಶವಾಗುತ್ತಿದೆ ಇದರಿಂದ ಮರಗಳಲ್ಲಿ ಗೂಡು ಕಟ್ಟುವ ಜೇನಿನಗೂಡುಗಳು ಸಹ ಕಡಿಮೆಯಾಗುತ್ತಿದು ಜೇನುಕೃಷಿಯು ಸಹ ನಾಶವಾಗುತ್ತಿದೆ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿ ಆಹಾರ ಪದಾರ್ಥವನ್ನು ಆಮದು ಮಾಡಿಕೊಳ್ಳುಂತಹ ಪರಿಸ್ಥಿತಿ ಬರುವಂತಾಗಿದೆ. ಕಾಡಿಲ್ಲದೆ ಮಳೆಯಿಲ್ಲ ಮಳೆಯಿಲ್ಲದೇ ಬೆಳೆಯಿಲ್ಲ ಬೆಳೆಯಿಲ್ಲದೆ ರೈತರಿಗೆ ಬದುಕಿಲ್ಲ ಇದರಿಂದಾಗಿ ರೈತರು ಕೃಷಿಯನ್ನು ಬಿಟ್ಟು ಹೊರಗಡೆ ಕೂಲಿ ಕೆಲಸಗಳಿಗಾಗಿ ವಲಸೆ ಹೋಗುತ್ತಿದ್ದಾರೆ ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ ಇದಕ್ಕೆಲ್ಲ ಕಾರಣ ಕಾಡು ಮುಖ್ಯ, ಕಾಡನ್ನು ಬೆಳೆಸಿ ಕೃಷಿಯನ್ನು ಉಳಿಸಿ ಕೃಷಿಯಿಂದ ರೈತರ ಸುಖವಾದ ಜೀವನ ಮತ್ತೆ ಸಿಗುವಂತಾಗಲಿ ಎಂದ ಅವರು ರೈತರು ಉಳುಮೆ ಮಾಡಬೇಕಾದರೆ ಕಬ್ಬಿಣದ ನೇಗಿಲಿನಿಂದ ಆಳವಾದ ಉಳುಮೆ ಮಾಡಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆಯು ಉತ್ತಮವಾಗಿ ಬಂದು ಇಳುವರಿಯು ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಬೆಳೆಸಿಕೊಂಡು ಬಂದಂತಹ ಮರಗಳಿಂದ ಮಳೆ ಬೆಳೆ ಚೆನ್ನಾಗಿ ಆಗುತ್ತಿತ್ತು ಬೆಳೆದಂತಹ ಬೆಳೆಗಳಿಂದ ನಮ್ಮ ಹಿರಿಯರು ಆರೋಗ್ಯವಾಗಿದ್ದರು. ಈಗ ಅವರು ಬೆಳಸಿದಂತಹ ಮರಗಳನ್ನು ನಾಶ ಮಾಡಿ ನಾವು ಉಳಿಸಿದಂತಹ ಪರಿಸರವೆಷ್ಟು ಎಂಬುದನ್ನು ನಾವೆ ಊಹೆ ಮಾಡಬೇಕು. ಕೃಷಿಯಲ್ಲಿ ಹೆಚ್ಚು ಲಾಭ ಮಾಡಬೇಕಾದರೆ ಹೈನುಗಾರಿಕೆ ಬೇಕು.
ವೇದಿಕೆಯಲಿ ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಶಿವಲಿಂಗಯ್ಯ, ತಾಲ್ಲೂಕು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಚಂದ್ರಶೇಖರ್, ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಲೋಕೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ರಘುನಾಥ್, ಪುರಸಭಾ ಅಧ್ಯಕ್ಷ ರಾಜಣ್ಣ, ಉಪಾಧಕ್ಷೆ ಕವಿತಾಚನ್ನಬಸವಯ್ಯ, ಪುರಸಭಾ ಸದಸ್ಯ ಸಿ.ಎಸ್. ರಮೇಶ್, ತಾ.ಪಂ. ಸದಸ್ಯ ದಾಸೇಗೌಡರು, ಶಿವಕುಮಾರ್, ಕಮಲಾನಾಯಕ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಲಿಂಗದೇವರು ಪ್ರಾಥರ್ಿಸಿದರೆ, ರೈತಗೀತೆಯನ್ನು ನಿವರ್ಾಣೇಶ್ವರ ಬಾಲಿಕಾ ಪ್ರೌಢಶಾಲೆಯ ಮಕ್ಕಳಿಂದ ನೆರವೇರಿಸಲಾಯಿತು ರಂಗಸ್ವಾಮಿ ಸ್ವಾಗತಿಸಿದರೆ ಶ್ಯಾಮಸುಂದರ್ ನಿರೂಪಿಸಿ ಬಸಪ್ಪ ಭಾಗವತ್ ವಂದಿಸಿದರು.