Wednesday, September 15, 2010


ನಿವೇಶನ ವಿವಾದ: ಅಂಬೇಡ್ಕರ್ ಭಾವ ಚಿತ್ರ ತಿಪ್ಪೆಗುಂಡಿಯಲ್ಲಿ.
ಚಿಕ್ಕನಾಯಕನಹಳ್ಳಿ,ಸೆ.15: ಡಾ. ಅಂಬೇಡ್ಕರ್ ಭಾವಚಿತ್ರವನ್ನು ತಿಪ್ಪೆಗೆಸಿದು ಅವಮಾನಿಸಿದರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಜೋಗಿಹಳ್ಳಿ ರಾಮಾಂಜನೇಯ ಯುವಕ ಸಂಘದ ಕಛೇರಿಯಲ್ಲಿದ್ದ ಡಾ. ಅಂಬೇಡ್ಕರ್ ರವರ ಭಾವಚಿತ್ರವನ್ನು ತಿಪ್ಪೆಗೆಸಿದಿದ್ದರಿಂದ ಕೆಲವು ಕಾಲ ಗೊಂದಲ ಉಂಟಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ಈ ಗೊಂದಲ ಠಾಣೆಯ ಮೆಟ್ಟಿಲ ಹತ್ತಿದೆ.
ಗಣೇಶನ ಹಬ್ಬದ ಅಂಗವಾಗಿ ಸಂಘದ ಕಛೇರಿಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು, ಮಂಗಳವಾರ ಬೆಳಗ್ಗೆ ಸಂಘದ ಬಾಗಿಲು ತೆರೆದಿದ್ದು, ಗಣೇಶನ ವಿಗ್ರಹ ಹಾಗೂ ರಾಮ ದೇವರ ಪೊಟೋಕ್ಕೆ ಯಾವುದೇ ಧಕ್ಕೆಯಾಗಿರಿಲಿಲ್ಲ ಆದರೆ ಅಂಬೇಡ್ಕರ್ ರವರ ಭಾವಚಿತ್ರ ಮಾತ್ರ ತಿಪ್ಪೆಯ ಗುಂಡಿಯಲ್ಲಿ ಬಿದಿತ್ತು. ಇದರಿಂದ ದಲಿತ ಸಂಘಟನೆಗಳು ಜಾಗೃತರಾಗಿ ಈ ಘಟನೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹಿಸಿದರು.
ರಾಮಾಂಜನೇಯ ಯುವಕ ಸಂಘದ ಕಛೇರಿಯ ನಿವೇಶನದ ವಿಷಯದಲ್ಲಿ ತಕರಾರಿದ್ದು, ಕೋಟರ್್ಮೆಟ್ಟಿಲು ಹತ್ತಿತ್ತು. ಈ ಸಂಬಂಧದ ಪ್ರಕರಣ ಸಂಘದ ಪರವಾಗಿ ಒಂದು ತಿಂಗಳ ಹಿಂದೆಯಷ್ಟೇ ಕೋಟರ್್ ಆದೇಶವಾಗಿತ್ತು. ಈ ನಿವೇಶನದಲ್ಲಿ ಕಟ್ಟಡವನ್ನು ಇತ್ತೀಚೆಗಷ್ಟೆ ಕಟ್ಟಿದ್ದು ಈ ಕಟ್ಟಡದಲ್ಲಿದ್ದ ಅಂಬೇಡ್ಕರ್ ಪೊಟೋವನ್ನು ತಿಪ್ಪೆಗೆಸಿದಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕಾರ್ಯದಶರ್ಿ ನರಸಿಂಹಮೂತರ್ಿ ತಿಳಿಸಿದ್ದಾರೆ.
ಈ ಘಟನೆನೆ ಹಿನ್ನೆಲೆಯಲ್ಲಿ ಮಂಜುನಾಥ್ ಸಿಂಗ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಕಾರ್ಯದಶರ್ಿ, ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದಾರೆ. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚಿನ್ನಾಭರಣ ಹಾಗೂ ನಗದು ಕಳ್ಳತನ
ಚಿಕ್ಕನಾಯಕನಹಳ್ಳಿ,ಸೆ.15: ರಾತ್ರಿ ವಿದ್ಯುತ್ ಸರಬರಾಜು ಇಲ್ಲದ ಸಮಯದಲ್ಲಿ ಆಭರಣಗಳು ಮತ್ತು ನಗದು ಹಣ ಕಳ್ಳತನವಾಗಿರುವ ಘಟನೆ ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೇಲನಹಳ್ಳಿಯ ಮಲ್ಲಿಕಾಜರ್ುನಯ್ಯ ಎಂಬುವರ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು ಕುಟುಂಬದವರು ಪರಸ್ಥಳಕ್ಕೆ ಹೋಗಿದ್ದಾಗ, ರಾತ್ರಿ ಸುಮಾರು 2ಗಂಟೆಯಲ್ಲಿ ಮನೆಯ ಮುಂದಿನ ಬೀಗವನ್ನು ಮುರಿದು 4ಜೊತೆ ವಾಲೆ ಒಂದು ಉಂಗುರ ಮತ್ತು ಮಾಟಿಪ್ಲೇಟ್ ಆಭರಣಗಳ ಜೊತೆ 2ಸಾವಿರ ರೂಗಳು ಕಳ್ಳತನವಾಗಿದೆ. ಚಿ.ನಾ.ಹಳ್ಳಿ ಪೋಲಿಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Saturday, September 11, 2010

ಫಾಸ್ಟ್ ಪುಡ್ ನಿಂದ ದೂರವಿರಿ ಸೊಪ್ಪು ತರಕಾರಿಯನ್ನು ಸೇವಿಸಿ
ಚಿಕ್ಕನಾಯಕನಹಳ್ಳಿ,ಸೆ.10: ನಾವು ಸೇವಿಸುವ ಆಹಾರವು ಸಮತೋಲನವಾದ ಹಾಗೂ ಸತ್ವ ಭರಿತವಾದ ನಾರಿನ ಅಂಶ ಒಳಗೊಂಡಿರುವ ಆಹಾರವನ್ನು ಸೇವಿಸುವುದರಿಂದ ಮನುಷ್ಯ ಪೌಷ್ಠಿಕವಾಗಿ ಸದೃಡವಾಗಿರುತ್ತಾನೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ಹೇಳಿದರು.
ತಾಲೂಕಿನ ಶೆಟ್ಟಿಕೆರೆಯ ಮರುಳ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಡೆದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೊಪ್ಪು ತರಕಾರಿಯಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಅಂಶ ದೇಹಕ್ಕೆ ದೊರೆತು ಶಕ್ತಿ ಹೆಚ್ಚುತ್ತದೆ ಎಂದ ಅವರು, ಭಾಗ್ಯಲಕ್ಷ್ಮಿ ಯೋಜನೆಯಡಿ ಬರುವ ಸವಲತ್ತುಗಳನ್ನು ಪಡೆಯುವ ಬಗ್ಗೆ ವಿವರವಾಗಿ ತಿಳಿಸಿದರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನುಸೂಯಮ್ಮ ಮಾತನಾಡಿ ಮಕ್ಕಳ ಉತ್ತಮ ಆರೈಕೆಯಲ್ಲಿ ತಾಯಂದಿರ ಪ್ರಾಮುಖ್ಯತೆ ಹೆಚ್ಚಿನದು, ಮಕ್ಕಳ ಆರೈಕೆ ಉತ್ತಮವಾಗಿದ್ದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಮಗು ಆರೋಗ್ಯವಾಗಿರುತ್ತದೆ, 6ತಿಂಗಳ ನಂತರ ಮಗುವಿಗೆ ಬೇಯಿಸಿದ ಆಹಾರವನ್ನು ಕೊಟ್ಟು ಉತ್ತಮ ಆರೈಕೆ ಮಾಡಿದಲ್ಲಿ ಮುಂದೆ ಮಕ್ಕಳ ಭವಿಷ್ಯ ಉತ್ತಮವಾಗಿರುವುದರಲ್ಲಿ ಸಂದೇಹವಿಲ್ಲ ಎಂದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಪರಮೇಶ್ವರಪ್ಪ, ಪರ್ವತಯ್ಯ ಮಾತನಾಡಿದರು.
ಸಮಾರಂಭದಲ್ಲಿ ಎಂ.ಎನ್.ಮಹದೇವಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಾಶ್ವತ ಪಡಿತರ ಚೀಟಿ ಪಡೆಯಲು ತಹಶೀಲ್ದಾರ್ ಮನವಿ
ಚಿಕ್ಕನಾಯಕನಹಳ್ಳಿ,ಸೆ.10: ನೆಮ್ಮದಿ ಕೇಂದ್ರಕ್ಕಿಂತ ಮೊದಲು ವಿತರಿಸಿರುವ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಹಾಗೂ ಭಾವಚಿತ್ರ ತೆಗೆಸಿಕೊಂಡಿರುವ ಪಡಿತರದಾರರು ಶಾಶ್ವತ ಪಡಿತರ ಚೀಟಿ ಪಡೆದುಕೊಳ್ಳದೇ ಇದ್ದಲ್ಲಿ ತಾಲೂಕು ಕಛೇರಿಯಲ್ಲಿನ ಪಡಿತರ ಚೀಟಿ ವಿತರಣಾ ಕೇಂದ್ರದಲ್ಲಿ ಶಾಶ್ವತ ಪಡಿತರ ಚೀಟಿ ಪಡೆದುಕೊಳ್ಳಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಟ್ಟಿ ಪ್ರಕಟಿಸಿರುವಂತೆ ಖಾಯಂ ಪಡಿತರ ಚೀಟಿಗಳು ಮುದ್ರಿತವಾಗಿ ಬಂದಿದ್ದು ಇದುವರೆವಿಗೂ ಪಡಿತರ ಚೀಟಿ ಪಡೆಯದೇ ಇರುವವರು ಹಾಜರಾಗಿ ಪ.ಚೀಟಿ ಶುಲ್ಕ 15ರೂ ಪಾವತಿಸಿ ಪಡಿತರ ಚೀಟಿ ಪಡೆಯಬಹುದಾಗಿದೆ ಎಂದರು.
ಮೊದಲನೇ ಹಂತದಲ್ಲಿ ವಿತರಿಸಲಾಗಿರುವ ತಾತ್ಕಾಲಿಕ ಬಿಪಿಎಲ್ ಅಕ್ಷಯ, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರು ಇದುವರೆವಿಗೂ ಭಾವಚಿತ್ರ ತೆಗೆಸದೇ ಇದ್ದಂತವರು ತಾಲೂಕು ಕಛೇರಿಗೆ 45ರೂ ಪಾವತಿಸಿ ಭಾವಚಿತ್ರ ತೆಗೆಸಿಕೊಳ್ಳಬಹುದಾಗಿದೆ. ಪೂರ್ಣ ಕುಟುಂಬದ ಸದಸ್ಯರಿದ್ದಲ್ಲಿ ಒಬ್ಬರು ಭಾವಚಿತ್ರ ತೆಗೆಯಿಸಿ ಉಳಿಕೆ ಸದಸ್ಯರಿದ್ದಲ್ಲಿ ಭಾವಚಿತ್ರ ತೆಗೆಸದೇ ಇರುವವರು ಮಾತ್ರ ಹಾಜರಾಗಿ ಭಾವಚಿತ್ರ ತೆಗೆಸಿಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, September 9, 2010



ಅಧರ್ಮ ಹೆಚ್ಚಿದಾಗ ಧರ್ಮದ ದಾರಿಯನ್ನು ತೋರುವವನೇ ಗುರು
ಚಿಕ್ಕನಾಯಕನಹಳ್ಳಿ,ಸೆ.09: ಅಧರ್ಮ ಹೆಚ್ಚಿದಾಗ ಧರ್ಮವನ್ನು ಎತ್ತಿ ಹಿಡಿಯುವುದು ಉತ್ತಮ ಜ್ಞಾನದಿಂದ ಮಾತ್ರ ಸಾಧ್ಯ ಇಂತಹ ಜ್ಞಾನವನ್ನು ಪಸರಿಸುವ ಶಿಕ್ಷಕ ಇಂತಹ ಸಂದರ್ಭದಲ್ಲಿ ನಾಗರೀಕ ಸಮಾಜಕ್ಕೆ ಮುಖ್ಯನೆನಿಸಿಕೊಳ್ಳುತ್ತಾನೆ ಎಂದು ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಹಾಗೂ ಇನ್ನರ್ವೀಲ್ ಮತ್ತು ಕೆನರಬ್ಯಾಂಕ್ ಹಮ್ಮಿಕೊಂಡಿದ್ದ 'ಗುರುನಮನ' ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿನ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಹಾಗೂ ಪ್ರಾಂಶುಪಾಲರಿಗೆ ಸನ್ಮಾನಿಸಿ ಮಾತನಾಡಿದರು.
ಜ್ಞಾನಶಕ್ತಿ, ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಗಳು ಉತ್ತಮ ಸಮಾಜವನ್ನು ನಿಮರ್ಿಸಬಲ್ಲವು ಈ ಮೂರು ಶಕ್ತಿಗಳು ಎಲ್ಲರಲ್ಲೂ ಇರುತ್ತದೆ ಇದು ಸುಪ್ತವಾಗಿರುತ್ತದೆ, ಇದನ್ನು ಹೊರಕ್ಕೆ ತೋರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಎಂದರಲ್ಲದೆ, ವಿದ್ಯೆ ಪ್ರತಿಯೊಬ್ಬರ ಆಂತರ್ಯದಲ್ಲಿರುವ ದಿವ್ಯಶಕ್ತಿ. ಇದನ್ನು ಉತ್ತೇಜಿಸುವ ಕೆಲಸವನ್ನು ಶಿಕ್ಷಕ ಮಾಡಬೇಕೆಂದರು.
ಸಮಾಜವನ್ನು ಕಟ್ಟುವ ಕೆಲಸಕ್ಕೆ ಕೈಜೋಡಿಸುವ ಶಿಕ್ಷಕರಿಗೆ ಯಾವುದೇ ಕೊರತೆ ಉಂಟಾಗುತ್ತದೆ ನೋಡಿಕೊಳ್ಳುವ ಜವಾಬ್ದಾರಿ ಸಕರ್ಾರದ ಮೇಲಿದೆ. ಶಿಕ್ಷಕರ ಸಂಬಳ, ಸವಲತ್ತುಗಳನ್ನು ಕೊಡುವಾಗ ಚೌಕಾಸಿ ಮಾಡಬಾರದು ಅವರನ್ನು ಸುಖವಾಗಿಟ್ಟು ತನ್ಮೂಲಕ ಜ್ಞಾನ ಪ್ರಸಾರಕ್ಕೆ ಅವರನ್ನು ಅಣಿಗೊಳಿಸಬೇಕೆ ಹೊರತು ಅವರಿಗೆ ಕೊಡುವ ಸಂಬಳಕ್ಕೆ ಸತಾಯಿಸುವುದು, ಅವರಿಗೆ ನೀಡುವ ಸವಲತ್ತುಗಳಿಗೆ ಅಧಿಕಾರ ವರ್ಗಹಣದ ನಿರೀಕ್ಷೆ ಇಟ್ಟುಕೊಳ್ಳುವುದು ಸರ್ವತಾ ಸಮ್ಮತವಲ್ಲ ಎಂದರು.
ಶಿಕ್ಷಕ ಬೋಧನೆಗೆ ಸಮರ್ಥನಾಗಿರಬೇಕು, ಮನಸ್ಸು ಶಾಂತವಾಗಿರಬೇಕು ಮಕ್ಕಳಿಗೆ ವಂಚನೆ ಮಾಡಬಾರದೆಂಬ ಮನೋಭಾವದವರಾಗಿರಬೇಕು ಇದನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು. ಶಿಕ್ಷಣಕ್ಕಾಗಿ ಸಕರ್ಾರಗಳು ಸಾವಿರಾರು ಕೋಟಿಗಳಷ್ಟು ಹಣವನ್ನು ವ್ಯಯಿಸುತ್ತಿದೆ ಎಂದರು.
ಕೆನರ ಬ್ಯಾಂಕ್ ಎ.ಜಿ.ಎಂ, ಎಂ.ಟಿ ಪದ್ಮನಾಭ ಮಾತನಾಡಿ, ಕೆನರಾ ಬ್ಯಾಂಕ್ ಶಿಕ್ಷಕರಿಗಾಗಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಟೀಚರ್ ಲೋನ್ ಕೊಡಲು ಮೊದಲು ಆರಂಭಿಸಿದ್ದು ನಾವು ಎಂದರಲ್ಲದೆ, ಶಿಕ್ಷಣದ ಅಭಿವೃದ್ದಿ ಒಂದು ದೇಶದ ಸರ್ವತೋಮುಖ ಅಭೀವೃದ್ದಿಯ ಸೂಚಕ ಎಂದರು. ಮಕ್ಕಳಿಗೆ ಶಿಕ್ಷಣ ಒಂದನ್ನು ನೀಡಿದರೆ ಮಿಕ್ಕೆಲ್ಲವನ್ನು ಅವರು ತನ್ನ ಸಾಮಥ್ರ್ಯದ ಮೇಲೆ ತಾವೇ ಪಡೆಯುತ್ತಾರೆ ಎಂದರಲ್ಲದೆ ಹೈದರಾಲಿ ಮತ್ತು ದಿವಾನ್ ಪೂರ್ಣಯ್ಯನವರ ನಡುವೆ ನಡೆದ ಘಟನೆಯೊಂದನ್ನು ವಿವರಿಸಿದರು.
ಪ್ರೊ.ನಾ.ದಯಾನಂದ ಮಾತನಾಡಿ ಸರಿಯಾಗಿರುವುದನ್ನು ಪ್ರಶಂಸಿಸುವ, ತಪ್ಪನ್ನು ಖಂಡಿಸುವ ನೈಜ ಸ್ವಭಾವವನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಳ್ಳುವ ಗುಣವನ್ನು ಶಿಕ್ಷಕ ಬೆಳೆಸಿಕೊಳ್ಳಬೇಕು ಮತ್ತು ವಿದ್ಯಾಥರ್ಿಗಳು ತಪ್ಪಾಗಿ ನಡೆದಾಗ ಸರಿದಾರಿಯನ್ನು ತೋರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲಾ ಪ್ರೌಡಶಾಲೆಗಳ ಮುಖ್ಯೋಪಾಧ್ಯಾಯರಿಗೆ ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸನ್ಮಾನಿಸಲಾಯಿತು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳಸುವ ಜವಾಬ್ದಾರಿ ಹೊತ್ತಿದ್ದು ಇದರ ಅಂಗವಾಗಿ ಗುರುಗಳನ್ನು ಅಭಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್, ರೋಟರಿ ಸಂಸ್ಥೆ ಎನ್.ಶ್ರೀಕಂಠಯ್ಯ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಸಹೋದರಿಯರು ಪ್ರಾಥರ್ಿಸಿದರೆ, ಉಪನ್ಯಾಸಕ ಶಿವಲಿಂಗಮೂತರ್ಿ, ಸ್ವಾಗತಿಸಿ, ವೀಣಾ ಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿ, ಸಿ.ಗುರುಮೂತರ್ಿ ಕೊಟಿಗೆಮನೆ ವಂದಿಸಿದರು.
ಜ್ಞಾನದಾಹಿಗಳಿಗೆ ಗುರುಗಳು ದಾರಿ ದೀಪವಾಗಬೇಕು
ಚಿಕ್ಕನಾಯಕನಹಳಳ್ಳಿ,ಸೆ.09: ಗ್ರಂಥಗಳು ಜ್ಞಾನದ ರಾಶಿಗಳಿದ್ದಂತೆ ಇವುಗಳನ್ನು ಏಕಾಗ್ರತೆಯಿಂದ ಓದಿದಾಗ ಜ್ಞಾನವನ್ನು ಇನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಾಹಿತಿ ಆರ್.ಬಸವರಾಜು ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಕರ ವೃತ್ತಿ ಪುಣ್ಯವಾದದ್ದು ಇವರು ವಿದ್ಯಾಥರ್ಿಗಳ ಜ್ಞಾನ ಹೆಚ್ಚಿಸುವಂತಹ ಶಿಲ್ಪಿಗಳಾಗಬೇಕು ಎಂದ ಅವರು ಶಿಕ್ಷಕರು ಅಹಃನ್ನು ತೊರೆದು ವಿದ್ಯಾಥರ್ಿಗಳೊಂದಿಗೆ ತಾನೊಬ್ಬ ವಿದ್ಯಾಥರ್ಿಯೆಂದು ತಿಳಿಯಬೇಕು ಎಂದರು.
ಉಪನ್ಯಾಸಕ ವಾಸುದೇವರಾಜು ಮಾತನಾಡಿ ಸಮರ್ಥ ಗುರುಗಳು ಎಲ್ಲರಿಗೂ ಸಿಗುವುದಿಲ್ಲ ಸಿಕ್ಕ ಗುರುಗಳನ್ನು ಗುರುಭಕ್ತಿಯಿಂದ ಶಿಕ್ಷಣ ಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಉಪನ್ಯಾಸಕರಾದ ಶಿವಲಿಂಗಮೂತರ್ಿ, ಚಂದ್ರಶೇಖರ್ ಉಪಸ್ಥಿತರಿದ್ದರು.



Wednesday, September 8, 2010

Tuesday, September 7, 2010




ಉನ್ನತ ಜ್ಞಾನ ಬೋಧನೆಯನ್ನು ಉತ್ತಮ ಪಡಿಸುತ್ತದೆ.
ಚಿಕ್ಕನಾಯಕನಹಳ್ಳಿ,ಸೆ.07: ಶಿಕ್ಷಕರು ವೃತ್ತಿಗಾಗಿ ಮಾಡಿರುವ ವಿದ್ಯಾಭ್ಯಾಸದ ಜೊತೆಗೆ ಉನ್ನತ ವಿಧ್ಯಾಭ್ಯಾಸ ಮಾಡಿ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಮಕ್ಕಳಿಗೆ ಬೋಧನೆ ಮಾಡಿದರೆ ಮಕ್ಕಳಿಂದ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆಯಬಹುದು ಎಂದು ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯಿ ಅಭಿಪ್ರಾಯಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಶಿಕ್ಷಕರಲ್ಲಿ ಮುಖ್ಯವಾಗಿ ತಾಳ್ಮೆ, ಶಾಂತ ಸ್ವಭಾವದ ವ್ಯಕ್ತಿತ್ವ ಇದ್ದರೆ ದುಶ್ಚಟಗಳಿಗೆ ಬಾಗಿಯಾಗಿರುವ ವಿದ್ಯಾಥರ್ಿಯನ್ನು ಸರಿದಾರಿಗೆ ತರಬಹುದು ಎಂದರಲ್ಲದೆ, ಶಿಕ್ಷಕರು ವೃತ್ತಿಯನ್ನು ಪ್ರೀತಿಸುವುದಕ್ಕಿಂತ ಮಕ್ಕಳನ್ನು ಹೆಚ್ಚು ಪ್ರೀತಿಸಿದರೆ ಅವರು ತಂದೆ, ತಾಯಿ ಬಳಿ ಹೇಳಿಕೊಳ್ಳದಂತಹ ವಿಷಯಗಳನ್ನು ಗುರುಗಳಲ್ಲಿ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಆದ್ದರಿಂದ ಮಕ್ಕಳಿಗೆ ಸತ್ಭಾವನೆಯಿಂದ ಬೋಧಿಸಬೇಕು ಎಂದರು. ಶಿಕ್ಷಕರು ಮಕ್ಕಳ ಆಸಕ್ತಿ ಕಡೆ ಹೆಚ್ಚು ಒತ್ತು ಕೊಟ್ಟರೆ ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸವನ್ನು ಕಲಿಯುತ್ತಾರೆ, ಮತ್ತು ಮಕ್ಕಳಿಗೆ ವಿದ್ಯೆ ಬೋದಿಸುವಾಗ ಧರ್ಮ, ಆಧ್ಯಾತ್ಮ ವಿಷಯಗಳನ್ನು ತಿಳಿಸಿ ಸಮಾಜ ಸುಸ್ಥಿಯಲ್ಲಿಡುವಂತೆ ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಕರು ಮಾಡುವ ಬೋಧನೆಯಲ್ಲಿ ಭವಿಷ್ಯ ಅಡಗಿದ್ದು ಅವರು ವೇತನಕ್ಕೋಸ್ಕರ ಭೋದನೆ ಮಾಡದೆ ಒಬ್ಬ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರನ್ನು ಬೆಳೆಸುತ್ತಿದ್ದೇನೆ ಎಂದು ಅರಿತು ಬೋದಿಸಿದಾಗ ಶಿಕ್ಷಕ ವೃತ್ತಿ ಸಾರ್ಥಕವೆನಿಸುತ್ತದೆ ಎಂದರು. ವಿದ್ಯಾಥರ್ಿಗಳಿಗೆ ದೇಶಕ್ಕೆ ಕೀತರ್ಿ ತಂದ ಮೇರು ವ್ಯಕ್ತಿಯನ್ನು ಮಾದರಿಯನ್ನಾಗಿ ತೋರಿಸಿ ಅವರ ಆದರ್ಶದ ಮಾರ್ಗದಲ್ಲಿ ನಡೆಯುವಂತೆ ಬೋಧಿಸಿದರೆ, ಮಕ್ಕಳು ಉತ್ತಮ ಹಂತಕ್ಕೆ ತಲುಪಿ ವಿದ್ಯೆ ಕಲಿಸಿಕೊಟ್ಟ ಗುರುವನ್ನು ಎಲ್ಲಿದ್ದರೂ ನೆನಪಿಸಿ ತಮ್ಮಲ್ಲೇ ಗೌರವಿಸುತ್ತಾರೆ ಎಂದರು. ಆಡಳಿತದ ಮೂಲ ಉದ್ದೇಶ ಸಾರ್ವಜನಿಕ ಸೇವೆಯಾಗಿದ್ದು ಕುಂದುಕೊರತೆಗಾಗಿ ನಿವಾರಿಸಿಕೊಳ್ಳಲು ಬರುವಂತಹವರಿಗೆ ಸೌಜನ್ಯದಿಂದ ವತರ್ಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ವತಿಯಿಂದ 16ಜನ ಶಿಕ್ಷಕರಿಗೆ ಮತ್ತು ಡಾ.ಲಕ್ಷ್ಮಿಪತಿ ಬಾಬು,ಡಾ.ಸರೋಜ ಲಕ್ಷ್ಮಿಪತಿ ಪ್ರತಿಷ್ಠಾನದ ವತಿಯಿಂದ ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಶಸ್ತಿಯನ್ನು 4ಜನ ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹದೇವಮ್ಮ ಪ್ರಾಥರ್ಿಸಿ, ಬಿ.ಇ.ಓ ಸಾ.ಚಿ.ನಗೇಶ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜ್ ನಿರೂಪಿಸಿದರು.







Friday, September 3, 2010

16ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಚಿಕ್ಕನಾಯಕನಹಳ್ಳಿ,ಸೆ.03: 2010-11ನೇ ಸಾಲಿನ ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಘದ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ 16 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಸೆಪ್ಟಂಬರ್ 5ರ ಭಾನುವಾರ ನಡೆಯಲಿರುವ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 123ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಿಕ್ಷಕರಾದ ಬರಗೂರಿನ-ಹನುಮಂತಯ್ಯ, ತೀರ್ಥಪುರ-ಬಸವರಾಜು, ಕಂದಿಕೆರೆ-ರೇವಣ್ಣಎಸ್.ಬಿ, ಶೆಟ್ಟಿಕೆರೆ-ಸಿದ್ದರಾಮಯ್ಯ, ಜೆ.ಸಿ.ಪುರ-ಕೃಷ್ಣಪ್ಪ ಮತ್ತು ಅಜ್ಜಯ್ಯ, ಮತಿಘಟ್ಟ-ರಾಧಮ್ಮ, ಹುಳಿಯಾರು-ಲೀಲಾವತಿ, ಯಸ್ಮಿನಾಬಾನು, ಗಾಣಧಾಳು-ಹನುಮಂತರಾಜು, ಯಳನಡು-ಪುರಂದರ, ಹೋಯ್ಸಳಕಟ್ಟೆ-ದೇವರಾಜು, ಹಂದನಕೆರೆ-ಸೀತಮ್ಮ, ಚಿಕ್ಕನಾಯಕನಹಳ್ಳಿ-ಸಿ.ಕೆ.ಪುಟ್ಟಸ್ವಾಮಿ, ಸರ್ವಮಂಗಳ, ಜಗದಾಂಬ ಶಿಕ್ಷಕರುಗಳನ್ನು ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ.

ರಾಜಕೀಯ ಪಕ್ಷಗಳು ನಡೆಸುತ್ತಿರುವ ದಂಧೆಗಳನ್ನು ತಡೆಯಲು ಕ.ಜ.ಪಕ್ಷ
ಚಿಕ್ಕನಾಯಕನಹಳ್ಳಿ,ಸೆ.03: ಕನ್ನಡ ಹೆಸರಿನಲ್ಲಿ ನಡೆಯುತ್ತಿರುವ ದಂಧೆಗಳು ನಿಲ್ಲಬೇಕು ಅದಕ್ಕಾಗಿ ಕನರ್ಾಟಕ ಜನತಾ ಪಕ್ಷ ಎಂಬ ಪಕ್ಷವನ್ನು ರಾಜ್ಯದ್ಯಂತ ವಿಸ್ತರಿಸುತ್ತಿದ್ದೇವೆ ಎಂದು ಕನರ್ಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನರ್ಾಟಕ ರಕ್ಷಣಾ ವೇದಿಕೆಯಂತಹ ಕನ್ನಡ ಸಂಘ ಸಂಸ್ಥೆಗಳು ಭಕ್ಷಣಾ ಸಂಸ್ಥೆಗಳಾಗಿ ಮಾರ್ಪಟ್ಟಿವೆ ಎಂದರು. ರಾಜ್ಯಾದ್ಯಂತ ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿ ಅನ್ಯಾಯದ ವಿರುದ್ದ ನ್ಯಾಯಕ್ಕಾಗಿ ಹೋರಾಡಿ ಕನರ್ಾಟಕ ರಾಜ್ಯವನ್ನು ಸುವರ್ಣ ಕನರ್ಾಟಕ ಮಾಡಬೇಕಾಗಿದೆ ಎಂದರು.
ಅಕ್ರಮ ಗಣಿಗಾರಿಕೆ, ರೈತರು ಬೆಳೆದ ಉತ್ಪನ್ನಗಳಿಗೆ ಸಿಗದ ಬೆಲೆ ಮತ್ತು ರಾಜ್ಯಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಂದಾಗಿ ರಾಜ್ಯದ ಉದ್ಯಮಗಳು ನಶಿಸುತ್ತಿವೆ ಎಂದರು. 60ವರ್ಷಗಳಿಂದ ರಾಜ್ಯದಲ್ಲಿ ರೈಲ್ವೆ ಯೋಜನೆಗಳಲ್ಲಿ ಆದ ಅನ್ಯಾಯಗಳು ಮತ್ತು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಸಂಪತ್ಭರಿತವಾಗುವ ಮೂಲಕ ರಾಜ್ಯವನ್ನು ಬರಿದು ಮಾಡಲು ಹೊರಟಿವೆ ಎಂದರಲ್ಲದೆ, ಜನತಾ ಪಕ್ಷವು ಇವುಗಳನ್ನೆಲ್ಲ ತಡೆಹಿಡಿಯಲು ಪಣ ತೊಟ್ಟಿದೆ ಎಂದರು.
ಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಚೆಲುವರಾಜ್, ಸಂಚಾಲಕಿ ಜಯಪದ್ಮ, ಕಾರ್ಯದಶರ್ಿ ಜ್ಯೋತಿ ಉಪಸ್ಥಿತರಿದ್ದರು.


Thursday, September 2, 2010

ಗ್ರಾ.ಪಂ ನೌಕರರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಸೆ.02: ಗ್ರಾಮ ಪಂಚಾಯ್ತಿ ನೌಕರರ ವಿವಿಧ ಬೇಡಿಕೆಗಳನ್ನು ಇದೇ 6ರ ಸೋಮವಾರ ಪ್ರತಿಭಟನೆ ಹಾಗೂ ಅನಿಧರ್ಿಷ್ಠ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ ತಿಳಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆಯನ್ನು ನಗರದ ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ನೆಹರು ಸರ್ಕಲ್ ಮುಖಾಂತರ ತಾಲೂಕು ಪಂಚಾಯ್ತಿ ಕಛೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾದಂಬರಿಗಾತರ್ಿ ದಿ.ತ್ರಿವೇಣಿ ನೆನಪು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಸೆ.02: ಭುವನೇಶ್ವರಿ ಯುವಕ ಸಂಘ ಮತ್ತು ಜ್ಞಾನಪೀಠ ಪ್ರೌಡಶಾಲೆ ಸಂಯುಕ್ತ ಆಶ್ರಯದಲ್ಲಿ ಕಾದಂಬರಿಗಾತರ್ಿ ದಿವಂಗತ ತ್ರಿವೇಣಿಯವರ ಜನ್ಮದಿನದ ಸವಿನೆನಪನ್ನು ಇದೇ ಸೆಪ್ಟಂಬರ್ 6ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಜ್ಞಾನಪೀಠ ಪ್ರೌಡಶಾಲೆ ಆವರಣದಲ್ಲಿ ಮಧ್ಯಾಹ್ನ 3-30ಕ್ಕೆ ಹಮ್ಮಿಕೊಂಡಿದ್ದು ಮುಖ್ಯೋಪಾಧ್ಯಾಯ ಗೋವಿಂದರಾಜ್, ಸಂಘದ ಗೌರವಾಧ್ಯಕ್ಷ ಸಿ.ಕೆ.ಶಾಂತಕುಮಾರ್, ಅಧ್ಯಕ್ಷ ಸಿ.ಎಸ್.ರೇಣುಕಾಮೂತರ್ಿ ಉಪಸ್ಥಿತರಿರುವರು.
ಸೆ.08ಗುರುನಮನ
ಚಿಕ್ಕನಾಯಕನಹಳ್ಳಿ,ಸೆ.02: ತಾಲೂಕು ಕಸಾಪ, ರೋಟರಿ-ಇನ್ನರ್ವೀಲ್ ಕ್ಲಬ್ ಮತ್ತು ಕೆನರ ಬ್ಯಾಂಕ್ ವತಿಯಿಂದ ಗುರುನಮನ ಮತ್ತು ನಗರದ ಎಲ್ಲ ಪ್ರೌಡಶಾಲೆ ಮುಖ್ಯೋಪಾಧ್ಯಾಯ ಮತ್ತು ಕಾಲೇಜು ಪ್ರಾಚಾರ್ಯರಿಗೆ ಗೌರವಾಭಿನಂದನೆ ಕಾರ್ಯಕ್ರಮವನ್ನು ಇದೇ ಸೆಪ್ಟಂಬರ್ 8ರ ಬುಧವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಬಾಲಭವನದಲ್ಲಿ ಸಂಜೆ 5-30ಕ್ಕೆ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಕೆನರ ಬ್ಯಾಂಕ್ ಡಿ.ಜಿ.ಎಂ. ರವೀಂದ್ರ ಭಂಡಾರಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಜಸ್ಟೀಸ್ ಎನ್.ವೆಂಕಟಾಚಲ ಮುಖ್ಯೋಪಾಧ್ಯಾಯ ಮತ್ತು ಪ್ರಾಚಾರ್ಯರಿಗೆ ಗೌರವಾಭಿನಂದನೆ ಸಲ್ಲಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್, ಕೆನರ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಎಸ್.ಜಿ.ನಾಗರಾಜ್, ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಉಪಸ್ಥಿತರಿರುವರು.
ಸೆ.05ರಂದು ಶಿಕ್ಷಕರ ದಿನಾಚರಣೆ
ಚಿಕ್ಕನಾಯಕನಹಳ್ಳಿ,ಸೆ.02: ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 123ನೇ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟಂಬರ್ 5ರ ಭಾನುವಾರ ಬೆಳಗ್ಗೆ 9-30ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.
ತಾ.ಪಂ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಡಾ.ರಾಧಕೃಷ್ಣನ್ರವರ ಭಾವಚಿತ್ರ ಅನಾವರಣ ಮಾಡಲಿದ್ದು ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಿದ್ದಾರೆ.
ಬೆಂಗಳೂರಿನ ಭವತಾರಿಣಿ ಆಶ್ರಮ ಮಾತಾಜಿ ವಿವೇಕಮಹಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದು ವಿಧಾನ ಪರಿಷತ್ ಮುಖ್ಯ ಸಚೇತಕ ಎ.ಎಚ್.ಶಿವಯೋಗಿಸ್ವಾಮಿ ಬಹುಮಾನ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಎಂ.ಆರ್.ಹುಲಿನಾಯ್ಕರ್ ಜಿ.ತಿಮ್ಮಯ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಜಿ.ಪಂ.ಸದಸ್ಯರಾದ ಸುಶೀಲಸುರೇಂದ್ರಯ್ಯ, ಜಿ.ರಘುನಾಥ್, ಜಯಮ್ಮದಾನಪ್ಪ, ಹೊನ್ನಪ್ಪ, ಈರಣ್ಣ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಸಿ.ಪಿ.ಐ ರವಿಪ್ರಸಾದ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಪ್ರೌ.ಶಾ.ಮು.ಶಿ ಸಂಘಧ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

Wednesday, September 1, 2010

ಚಿಕ್ಕನಾಯಕನಹಳ್ಳಿ,ಸೆ.01:ತಾಲೂಕಿನ ಹಂದನಕೆರೆ ಹೋಬಳಿ ಸಕರ್ಾರಿ ಕಿರಿಯ ಪ್ರೌಡಶಾಲಾ ಆವರಣದಲಿ ್ಲಶಾಸಕ ಸಿ.ಬಿ.ಸುರೇಶ್ಬಾಬುರವರ ಅಧ್ಯಕ್ಷತೆಯಲ್ಲಿ ಇದೇ 4ರ ಶನಿವಾರ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಬೆಳಗ್ಗೆ 11ಗಂಟೆಗೆ ಏರ್ಪಡಿಸಿದ್ದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳ ಬಗ್ಗೆ ಮನವಿ ನೀಡಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಲಿತ ಸಹಾಯವಾಣಿಗೆ ಪದಾಧಿಕಾರಿಗಳ ಆಯ್ಕೆ
ಚಿಕ್ಕನಾಯಕನಹಳ್ಳಿ,ಸೆ.01: ಕನರ್ಾಟಕ ದಲಿತ ಸಹಾಯವಾಣಿ ಕೇಂದ್ರದ ತಾಲೂಕು ಶಾಖೆಯ ಸಭೆಯು ರಾಜ್ಯ ಅಧ್ಯಕ್ಷ ಜಿ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ತಾಲೂಕು ಗೌರವಾಧ್ಯಕ್ಷರಾಗಿ ನರಸಿಂಹಯ್ಯ, ಅಧ್ಯಕ್ಷರಾಗಿ ಆರ್.ಹನುಮಂತಯ್ಯ, ಪ್ರಧಾನ ಕಾರ್ಯದಶರ್ಿ ಸಿ.ನರಸಿಂಹಮೂತರ್ಿ, ಸಹಕಾರ್ಯದಶರ್ಿ ಜಿ.ಕೆ.ಮಹೇಶ್, ಖಜಾಂಚಿ ಕರಿಯಪ್ಪ, ಸಂಚಾಲಕ ನರಸಿಂಹಮೂತರ್ಿ, ನಿದರ್ೇಶಕ ಟಿ.ಎನ್.ಶಿವಣ್ಣ ಕೆಂಕೆರೆಗೆ ಕಾಳಪ್ಪ, ಹುಳಿಯಾರಿಗೆ ಮಾಸ್ತಯ್ಯ, ಗೋಪಾಲಪುರಕ್ಕೆ ಕುಮಾರಣ್ಣರವರನ್ನು ತಾಲೂಕು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದಶರ್ಿ ನರಸಿಂಹಮೂತರ್ಿ, ಸಂಘಟನಾ ಸಂಚಾಲಕ ಕಬ್ಬಡ್ಡಿ ಮಂಜುನಾಥ್, ರಾಜ್ಯ ಖಜಾಂಚಿ ಸೀಬಯ್ಯ, ಜಿಲ್ಲಾಧ್ಯಕ್ಷ ನರಸಿಂಹಮೂತರ್ಿ ಉಪಸ್ಥಿತರಿದ್ದರು.

Tuesday, August 31, 2010


ಕಲಿತವನು ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದ
ಚಿಕ್ಕನಾಯಕನಹಳ್ಳಿ,ಆ.31: ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಅನಾವರಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಎಸ್.ಎಂ.ಎಸ್. ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಹಂದನಕೆರೆ ಹೋಬಳಿಯ ಬಂದ್ರೇಹಳ್ಳಿಯ ಸಕರ್ಾರಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿತವನು ಹಾಗೂ ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದವಾಗುತ್ತದೆ ಎಂದ ಅವರು, ಕುಟುಂಬದಲ್ಲೂ ಅಷ್ಟೇ ದುಡಿಯುವ ಯುವಕರು ಅನುಭವಿ ಪೋಷಕರ ಮಾರ್ಗದರ್ಶನದಲ್ಲೂ ನಡೆಯುವ ಕುಟುಂಬಗಳು ಏಳ್ಗೆ ಹೊಂದುತ್ತದೆ ಎಂದರು.
ಇಂದಿನ ಯುವಕರು ಗಡಿಯಾರದ ಮುಳ್ಳಿನ ಹಿಂದೆ ಓಡುವುದನ್ನು ಕಲಿತಾದ ಮೇಲೆ ಒತ್ತಡದ ಬದುಕಿಗೆ ಒಳಗಾಗಿದ್ದು ಮದುವೆ ಮುಂಜಿಯಂತಹ ಬಾಂಧವ್ಯ ಬೆಸೆಯುವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸದೆ ಮುಖ ತೋರಿಸಿ ಹೋಗುವ ಪರಿಪಾಟಲಿಗೆ ಒಳಗಾಗಿದ್ದಾರೆ ಎಂದ ಅವರು ಬಂಧುಬಾಂದವ ಸಂಬಂಧಗಳನ್ನು ವೃದ್ದಿಸಿಕೊಳ್ಳುವುದನ್ನು ಈಗಿನಿಂದಲೇ ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಜಾನಪದ ಕಲಾ ಪ್ರಕಾರಗಳಿಂದ ಸೋಬಾನೆ ಪದ, ಲಾವಣಿಗಳು ಹಾಗೂ ಒಡಪುಗಳ ವೃದ್ದರ ಬಾಯಿಂದ ಮಾಯವಾಗುವ ಮುನ್ನ ಅವುಗಳು ಶಾಶ್ವತವಾಗಿ ಉಳಿಯುವಂತೆ ಮಾಡಲು ಬರೆದಿಡುವ ಅಥವಾ ಧ್ವನಿ ಮುದ್ರಿಸಿಕೊಳ್ಳುವ ಕಾರ್ಯ ನಡೆಯಬೇಕೆಂದರು.
ಹಂದನಕೆರೆ ಐತಿಹಾಸಿಕ ಸ್ಮಾರಕದ 12 ಸೋಪನಾದ ಬಾವಿಗೆ ದೊಡ್ಡ ಇತಿಹಾಸವಿದ್ದು, ಈ ಇತಿಹಾಸ ಇಂದಿಗೂ ಹಿರಿಯರು ಹೇಳುವ ಲಾವಣಿಯಲ್ಲಿ ಅಡಕವಾಗಿದೆ ಎಂದ ಅವರು, 15ನೇ ಶತಮಾನದಲ್ಲಿದ್ದ ನಾಗತಿ ಚನ್ನವ್ವ ಮಕ್ಕಳ ಫಲ ಪಡೆಯಲು ಮಾಡಿಕೊಂಡ ಹರಕೆಯಂತೆ ಈ 12 ಸೋಪನಾದ ಬಾವಿಯನ್ನು ತೋಡಿಸಿರುವುದು ಐತಿಹಾಸಿಕ ಘಟನೆ ಇಂದಿಗೂ ಈ ಬಾವಿ ಚೆನ್ನವ್ವನ ವೃತ್ತಾಂತವನ್ನು ಹೇಳುವ ಸ್ಮಾರಕವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಗೆರೆ ಗ್ರಾ.ಪಂ. ಅಧ್ಯಕ್ಷೆ ವಿಮಲಮ್ಮ ವಹಸಿದ್ದು, ಉಪಾಧ್ಯಕ್ಷ ಚಂದ್ರನಾಯ್ಕ, ಸದಸ್ಯರಾದ ರಾಜಶೇಖರ್, ನಾಗಭೂಷಣ್, ಇ.ಸಿ.ಓ ತಿಮ್ಮಬೋವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವಕುಮಾರ್, ಎಸ್.ಡಿ.ಎಂ.ಸಿ ಬಸವಲಿಂಗಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 8ರಿಂದ 14 ವರ್ಷದ ವಿದ್ಯಾಥರ್ಿಗಳು ಕಾವ್ಯವಾಚನ ಮಾಡಿದರು. ಶಾಲೆಯ ಎಚ್.ಎಂ. ಮಂಜುಳಮ್ಮ, ಸ್ವಾಗತಿಸಿದರೆ, ಶಿಕ್ಷಕ ಎ.ಸೋಮಶೇಖರಯ್ಯ ನಿರೂಪಿಸಿದರು.
ದುರಾಲೋಚನೆಯಿಂದ ದೂರವಿದ್ದು ಮುಂದಾಲೋಚನೆಗೆ ಒತ್ತು ನೀಡಿ
ಚಿಕ್ಕನಾಯಕನಹಳ್ಳಿ,ಆ.31: ಶಿಸ್ತುಬದ್ದತೆಯಿಂದ ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಉತ್ತಮ ಫಲಿತಾಂಶ ತರುವ ಮೂಲಕ ಕಾಲೇಜಿನ ಕೀತರ್ಿಯನ್ನು ಬೆಳಗಿಸಬೇಕು ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳಿಂದ ಕಿರಿಯ ವಿದ್ಯಾಥರ್ಿಗಳಿಗೆ ನಡೆದ ಸ್ನೇಹಸಂಗಮ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾಥರ್ಿಗಳು ದುರಭ್ಯಾಸ ಬಿಟ್ಟು ಉತ್ತಮ ನಡವಳಿಕೆಯಿಂದ ಕಾಲೇಜಿಗೆ ಆಗಮಿಸಿ ಗುರುವಿನ ಮಾತನ್ನು ಅಲ್ಲಗಳೆಯದೇ ಅವರ ಮಾತನ್ನು ಶಿರಸಾವಹಿಸಿ ಪಾಲಿಸಿ ಉತ್ತಮ ಫಲಿತಾಂಶ ತರಬೇಕು ಎಂದರಲ್ಲದೆ, ತಮ್ಮ ನಡವಳಿಕೆಯಿಂದ ಎಲ್ಲರ ವಿಶ್ವಾಸಗಳಿಸಬೇಕು ಎಂದ ರು. ಮುಂದೆ ಗುರಿ ಇದ್ದು ಹಿಂದೆ ಗುರು ಇದ್ದರೆ ಎಂತಹ ಕ್ಲಿಷ್ಟಕರವಾದ ಸಂಗತಿಯನ್ನು ಬಗೆಹರಿಸಿ ಯಶಸ್ಸನ್ನು ಸಾಧಿಸಬಹುದು ಎಂದರು.
ಉಪನ್ಯಾಸಕ ಶಿವಲಿಂಗಮೂತರ್ಿ ಮಾತನಾಡಿ ಹಿರಿಯ ವಿದ್ಯಾಥರ್ಿಗಳ ಉತ್ತಮ ನಡವಳಿಕೆಯನ್ನು ಕಿರಿಯ ವಿದ್ಯಾಥರ್ಿಗಳು ಪಾಲಿಸಿ ಎಲ್ಲರ ಮನಸ್ಸನ್ನು ಗೆಲ್ಲಬೇಕು ಮತ್ತು ಹಿರಿಯ ವಿದ್ಯಾಥರ್ಿಗಳು ಕಿರಿಯ ವಿದ್ಯಾಥರ್ಿಗಳಿಗೆ ಯಾವುದೇ ಅಹಿತಕರ ಘಟನೆ ನಡೆಸಿ ಮನಸ್ಸನ್ನು ನೋಯಿಸದೆ ಸ್ನೇಹ ಸಹಬಾಳ್ವೆಯಿಂದ ಬಾಳಲು ತಿಳಿಸಿದರಲ್ಲದೆ ಪ್ರಾರಂಭದಲ್ಲಿ ಪ್ರತಿ ವಿಷಯವೂ ಕಷ್ಟ ಆದರೆ ಅನುಭವದ ನಂತರ ಎಲ್ಲ ವಿಷಯವೂ ಸುಲಭವೆಂದು ತಿಳಿಸಿದರು.
ಉಪನ್ಯಾಸಕಿ ರಂಜಿತ ಮಾತನಾಡಿ ಕಿರಿಯ ವಿದ್ಯಾಥರ್ಿಗಳು ತಮ್ಮ ಹಿಂದಿನ ಜೀವನದ ಅಹಿತಕರ ಘಟನೆ, ಕೆಟ್ಟ ನಡತೆ ಮತ್ತು ಬೇಜವಬ್ದಾರಿತನದಂತಹ ದೂರಾಲೋಚನೆಗಳನ್ನು ಮರೆತು ಉತ್ತಮ ನಡತೆಯಿಂದ ಹೊಸ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ಉತ್ತಮ ಪಲಿತಾಂಶ ತರಲು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಚಂದ್ರಶೇಖರ್, ಸುರೇಶ್, ಪ್ರಸನ್ನಕುಮಾರ್, ಮಹೇಶ್, ದರ್ಶನ, ವೇದಮೂತರ್ಿ, ಲಕ್ಷೀಶ, ಶಶಿಧರ್, ನಾಗಭೂಷಣ್, ಚಿರಂಜೀವಿ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿಗಳಾದ ಲಕ್ಷ್ಮೀ ಸ್ವಾಗತಿಸಿದರೆ, ಗೌಸ್ಪಾಷ ನಿರೂಪಿಸಿ, ರಂಗಸ್ವಾಮಿ ವಂದಿಸಿದರು.

Monday, August 30, 2010

ತಾಲೂಕಿನ 48 ಶಾಲೆಗಳು ಮುಚ್ಚುವ ಅಂಚಿನಲ್ಲಿವೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಆ.30: ಉಳ್ಳವರು ಎಲ್ಲೊ ಹೋಗಿ ಓದುತ್ತಾರೆ ಬಡವರಿಗಾಗಿ ಇರುವ ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಬದ್ದತೆಯಿಂದ ಬೋಧನೆ ಮಾಡಿ, ಕಾನ್ವೆಂಟ್ ಮಕ್ಕಳಿಗಿಂತ ಪ್ರಬುದ್ದರನ್ನಾಗಿ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ರೇವಣಪ್ಪನ ಮಠ ಸಕರ್ಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶಾಲೆಗೆ ಸ್ಥಳದಾನ ಮಾಡಿದ ದಂಪತಿಗಳ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡುವುದರ ಜೊತಗೆ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತರಲು ಶ್ರಮಿಸಬೇಕು ಎಂದ ರಲ್ಲದೆ, ತಾಲೂಕಿನ 48 ಸಕರ್ಾರಿ ಶಾಲೆಗಳು ಮುಚ್ಚುವ ಅಂಚಿನಲ್ಲಿದ್ದು ಶಿಕ್ಷಕರು ಮಕ್ಕಳ ಹಾಜರಾತಿಯ ಬಗ್ಗೆ ಗಮನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು. ಸಕರ್ಾರಿ ಶಾಲೆಗಳಿಗೆ ವಿದ್ಯಾಥರ್ಿಗಳನ್ನು ಕರೆತರಲು ಸಕರ್ಾರ ಹೆಚ್ಚು ಉತ್ತೇಜನ ನೀಡುತ್ತಿದೆ, ಅದಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ವಿದ್ಯಾಥರ್ಿಗಳನ್ನು ಶಾಲೆಗೆ ನಿರಂತರವಾಗಿ ಬರುವಂತೆ ಪ್ರೇರೆಪಿಸುತ್ತಿದೆ, ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಶಿಕ್ಷಕರು ಜವಬ್ದಾರ ಹೊರಬೇಕೆಂದರು.
ವಾತರ್ಾ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ ಸಿ.ಕೆ.ಪರುಶುರಾಮಯ್ಯ ಮಾತನಾಡಿ ಶಾಲೆಗಳಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು, ಗುರು ಪ್ರಾರಂಭದಿಂದ ಅಂತ್ಯದವರೆವಿಗೂ ಅಡಿಪಾಯ ಹಾಕುವ ಒಬ್ಬ ಶಿಲ್ಪಿಯಂತೆ ಎಂದರಲ್ಲದೆ, ವಿದ್ಯಾಥರ್ಿಯ ಮನಸ್ಸನ್ನು ಅರಿತು ವಿದ್ಯೆ ಬೋದಿಸಿದಾಗ ಅವನ ಮನಸ್ಸಿನಲ್ಲಿ ಶಾಂತಿ ನೆಲಸಿ ವಿದ್ಯೆ ಕಲಿಯಲು ಮುಂದಾಗುತ್ತಾನೆ ಎಂದರು, ವಿದ್ಯಾಥರ್ಿಗಳನ್ನ ಪರಿಪೂರ್ಣತೆಗೆ ಕೊಂಡೊಯ್ಯುವಾಗ ಗುರುವು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕೆಂದರು.
ತುಮಕೂರು ಡಿ.ಡಿ.ಪಿ.ಐ.ಕಛೇರಿಯ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 12ಕ್ಕಿಂತ ಕಡಿಮೆ ವಿದ್ಯಾಥರ್ಿಗಳಿರುವ ಸಕರ್ಾರಿ ಶಾಲೆಗಳು 412 ಇದ್ದು, ಇವುಗಳ ಸ್ಥಿತಿ ಸಂಕಷ್ಟದಲ್ಲಿದೆ ಅಲ್ಲಿನ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ.ಸದಸ್ಯರು ದಾಖಲಾತಿ ಮತ್ತು ಹಾಜರಾತಿಗಳ ಹೆಚ್ಚು ಗಮನ ನೀಡಬೇಕಾಗುತ್ತದೆ ಎಂದರಲ್ಲದೆ, ನಗರೀಕರಣ ಮತ್ತು ಇಂಗ್ಲೀಷೀಕರಣದಿಂದಾಗಿ ಸಕರ್ಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಶಿಕ್ಷಕರು ತಮಗೆ ನೀಡುತ್ತಿರುವ ಸಾಮಥ್ರ್ಯ ಆಧಾರಿತ ತರಬೇತಿಗಳನ್ನು ಶಾಲೆಗಳಲ್ಲಿ ಬಳಸಿಕೊಂಡು ಬೋಧಿಸಿದರೆ ವಿದ್ಯಾಥರ್ಿಗಳ ಕಲಿಕೆ ಉತ್ತಮಗೊಂಡು ಸಕರ್ಾರಿ ಶಾಲೆಗಳ ಕಡೆ ಪೋಷಕರು ಮುಖಮಾಡತ್ತಾರೆ ಎಂದರು. ಶಿಕ್ಷಣ ಹಕ್ಕು ಕಾಯಿದೆ ಪ್ರಖರವಾಗಿದ್ದು ವಿದ್ಯಾಥರ್ಿಗಳು ತಮ್ಮ ವಿದ್ಯಾರ್ಜನೆಯ ನ್ಯೂನತೆಗಳನ್ನು ನ್ಯಾಯಾಲಯಗಳಲ್ಲೂ ಪ್ರಶ್ನಿಸಬಹುದಾದಂತಹ ದಿನಗಳು ದೂರವಿಲ್ಲವೆಂದರು.
ಕಾರ್ಯಕ್ರಮದಲ್ಲಿ ಸ್ಥಳದಾನಿಗಳದ ಚೌಡಿಕೆ ಕರಿಯಪ್ಪ ಹಾಗೂ ಸಣ್ಣಮುದ್ದಮ್ಮನವರ ಭಾವಚಿತ್ರಗಳನ್ನು ಇ.ಎನ್.ಟಿ.ತಜ್ಞ ಡಾ.ಸಿ.ಗುರುಮೂತರ್ಿ ಹಾಗೂ ಸಿ.ಎಚ್.ಹನುಮಂತಯ್ಯ ಅನಾವರಣಗೊಳಿಸಿದರು. ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಶಾಲೆಗೆ ಸ್ಥಳದಾನ ಮಾಡಿದ ಸಿ.ಕೆ.ಪರಶುರಾಮಯ್ಯ, ಸಿ.ಆರ್.ನಾಗರತ್ನ ದಂಪತಿಗಳನ್ನು ಶಾಸಕರು ಸನ್ಮಾನಿಸದರು.
ಸಮಾರಂಭದಲ್ಲಿ ಸ್ವಾತಂತ್ರ ಹೋರಾಟಗಾರ ಮುರುಡಯ್ಯ, ಪುರಸಬಾಧ್ಯಕ್ಷ ರಾಜಣ್ಣ, ಬಿ.ಇ.ಓ ಸಾ.ಚಿ.ನಾಗೇಶ್, ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾ ಸದಸ್ಯರಾದ ಸುಮಿತ್ರಾ ಕಣ್ಣಯ್ಯ, ರೇಣುಕಾಗುರುಮೂತರ್ಿ, ಸಿ.ಡಿ.ಚಂದ್ರಶೇಖರ್, ಸಿ.ಬಸವರಾಜು, ಸಿ.ಎಂ.ರಂಗಸ್ವಾಮಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ಜಿ.ರೇವಣ್ಣ, ಮಾಜಿ ಪುರಸಭಾ ಅಧ್ಯಕ್ಷ ಕೆ.ರಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಶೀಲ ರಾಮಸ್ವಾಮಿ ಪ್ರಾಥರ್ಿಸಿದರೆ, ಮುಖ್ಯ ಶಿಕ್ಷಕಿ ತಿಲೋತ್ತಮೆ ಸ್ವಾಗತಿಸಿ, ಉಪನ್ಯಾಸಕ ಕಣ್ಣಯ್ಯ ನಿರೂಪಿಸಿದರು, ಶಿಕ್ಷಕ ಬಸವರಾಜು ವಂದಿಸಿದರು.

Sunday, August 29, 2010

Friday, August 27, 2010

ಬಂದ್ರೇಹಳ್ಳಿಯಲ್ಲಿ ಚಿಗುರು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಆ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 8ರಿಂದ 14 ವರ್ಷದ ಶಾಲಾ ಮಕ್ಕಳಿಗೆ ಚಿಗುರು ಕಾರ್ಯಕ್ರಮ ಇದೇ 28(ಇಂದು)ಶನಿವಾರ ಬೆಳಿಗ್ಗೆ 11-30ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ತಾಲೂಕಿನ ಬಂದ್ರೇಹಳ್ಳಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ವಿಮಲಮ್ಮವೀರಭದ್ರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯೆ ಜಾನಕಮ್ಮ ರಾಮಚಂದ್ರಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಡಿ.ಇಡಿ.ಕಾಲೇಜ್ನ ಪ್ರಾಂಶುಪಾಲ ರಾಜ್ಕುಮಾರ್, ಮಲ್ಲಿಗೆರೆ ಗ್ರಾ.ಪಂ.ಉಪಾಧ್ಯಕ್ಷ ಚಂದ್ರನಾಯ್ಕ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ಗ್ರಾ.ಪಂ.ಸದಸ್ಯ ರಾಜಶೇಖರ, ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಮಲ್ಲಿಕಾಜರ್ುನಯ್ಯ ಉಪಸ್ಥಿತರಿದ್ದು ಶಿಕ್ಷಕ ಎ.ಸೋಮಶೇಖರಯ್ಯ ಕಾರ್ಯಕ್ರಮ ಭಾಗವಹಿಸಲಿದ್ದಾರೆ.
ಸಾಧಕನ ದೇಹಕ್ಕಷ್ಟೇ ಸಾವು, ಸಾಧನೆಗಲ್ಲ: ಗೀತಾಚಾರ್ಯ
ಚಿಕ್ಕನಾಯಕನಹಳ್ಳಿ,ಆ.27: ವಿಶ್ವದಲ್ಲಿ ಆಗಿಹೋಗಿರುವ ಮಹಾತ್ಮರೆಲ್ಲಾ ತಮ್ಮ ಸಾಧನೆಯಿಂದ ಮೇಲೆ ಬಂದವರು ಹಾಗೂ ಅವರು ಮಾಡಿರುವ ಕೆಲಸಗಳಿಂದ ಇಂದಿಗೂ ಅವರು ನಮ್ಮ ನಡುವೆ ಇದ್ದಾರೆ ಇಂತಹ ಮಹಾತ್ಮರ ಆದರ್ಶಗಳು ಇಂದಿನ ಯುವಕರಿಗೆ ದಾರಿದೀಪವಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಚಂದ್ರಮೋಹನ್ ಅಭಿಪ್ರಾಯಪಟ್ಟರು.
ಪಟ್ಟಣದ ನವೊದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನ ವತಿಯಿಂದ ನಡೆದ ಎಂ.ವೀ.ಸಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂ.ವೀ.ಸಿ, ಪು.ತೀ.ನ ರವರನ್ನು ನಾವು ನೋಡುತ್ತ ಬೆಳೆದವರು ಅಂತವರ ಆದರ್ಶವನ್ನು ನಾವು ಪಾಲಿಸುತ್ತಿದ್ದೇವೆ, ಅವರ ಆದರ್ಶವನ್ನು ನಿಮ್ಮೆಲ್ಲರಿಗೂ ತಿಳಿಸಲು ಪ್ರಯತ್ನಿಸುತ್ತೇದ್ದೇವೆ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಅವರು ಸಾಕಷ್ಟು ಕೆಲಸಮಾಡಿದ್ದಾರೆ ಎಂದರಲ್ಲದೆ, ಭಾಷೆಯ ಭಾಗವಾಗಿ ಸಾಹಿತ್ಯವೂ ಇರುತ್ತದೆ, ಸಾಹಿತ್ಯ ಗ್ರಂಥಗಳನ್ನು ವೃದ್ದಿಸುವ ಮೂಲಕ ಭಾಷೆಯ ಬೆಳವಣಿಗೆಯನ್ನು ವಿಸ್ತರಿಸಬೇಕು ಎಂದರು.
ಲೇಖಕ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ಕಾರ್ಯದಶರ್ಿ ಎಸ್.ವಿ.ಶ್ರೀನಿವಾಸರಾವ್ ಮಾತನಾಡಿ ಎಂ.ವಿ.ಸೀರವರ ಬರವಣಿಗೆಯನ್ನು ಆಧಾರವಾಗಿಟ್ಟುಕೊಂಡು ಲಕ್ಷಾಂತರ ಜನ ಲೇಖನ ಬರೆಯುವುದಕ್ಕೆ ಸ್ಪೂತರ್ಿಗೊಂಡಿದ್ದಾರೆ ಮತ್ತು ಯಾವುದೇ ವಿಷಯವನ್ನು ಪ್ರೀತಿಯಿಂದ ಸಲಹಿ ಪ್ರೋತ್ಸಾಹಿಸಿದರೆ ಅದು ಕಾಣದ ದಾರಿ ತೋರಿಸುತ್ತದೆ ಎಂದರು. ಸಾಹಿತ್ಯವನ್ನು ಬೆಳಸಬೇಕಾದರೆ ಅದರ ಹಿಂದಿನ ಮರ್ಮವನ್ನು ಹುಡುಕಿ ತೆಗೆದು ಸಾಹಿತ್ಯವನ್ನು ಕಾಣಬೇಕು ಎಂದ ಅವರು ಎಂ.ವಿ.ಸೀ ರವರ ಮಕ್ಕಳ ಸಾಹಿತ್ಯದ ಬಗ್ಗೆ ಪುಸ್ತಕ ರಚಿಸುತ್ತಿದ್ದೇವೆ ಎಂದರು.
ಡಾ.ನಾ.ಗೀತಾಚಾರ್ಯ ಮಾತನಾಡಿ ಎಂ.ವಿ.ಸೀತರಾಮಯ್ಯನವರು ಹಸ್ತಪ್ರತಿ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡಿದವರು, ಅವರು ಸಂಗ್ರಹಿಸಿ ಸಂಸ್ಕರಿಸುವ ಮೂಲಕ ವಿನಾಶದಲ್ಲಿದ್ದ ಪ್ರಕಾರದ ಬಗ್ಗೆ ಹೆಚ್ಚು ಗಮನ ನೀಡಿ ಆ ಬಗ್ಗೆ ಸಂಶೋಧನೆ ನಡೆಸಿದ ಕೆಲವೇ ಸಂಶೋಧಕರಲ್ಲಿ ಎಂ.ವಿ.ಸೀ.ಅವರು ಒಬ್ಬರು, ಇವರು ಮೈಸೂರಿನವರಾದರೂ ಅವರ ಪೂವರ್ಿಕರ ಸ್ಥಳ ಚಿಕ್ಕನಾಯಕನಹಳ್ಳಿ. ಇದೇ ಕಾರಣಕ್ಕೆ ಅವರ ಜನ್ಮ ಶತಮಾನೋತ್ಸವದ ಕೊನೆಯ ಕಾರ್ಯಕ್ರಮವನ್ನು ಈ ಊರಿನಲ್ಲಿ ಹಮ್ಮಿಕೊಂಡಿದ್ದು, ಸೆ.9ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಕುವೆಂಪು, ಎಂ.ವೀ.ಸಿ ರಂತಹ ಕನ್ನಡ ಸಾಹಿತ್ಯ ಲೋಕದ ರತ್ನತ್ರಯರನ್ನು ಎಂದಿಗೂ ಮರೆಯಬಾರದು ಮತ್ತು ಇಂತಹ ಮಹನ್ ವ್ಯಕ್ತಿಗಳ ಆದರ್ಶವನ್ನು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂಬ ಆಶಯದಿಂದ ನಮ್ಮ ಕಾಲೇಜನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.