Thursday, February 17, 2011





ಚಿ.ನಾ.ಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಫೆ.17: ಆಥರ್ಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಈ ಎಲ್ಲಾ ಕ್ಷೇತ್ರಗಳಲ್ಲಿ ತಾಲೂಕು ಮುಂದುವರಿಯಬೇಕಾದರೆ ಸಕರ್ಾರ ಹಾಗೂ ಖಾಸಗಿ ಸಂಸ್ಥೆಗಳು ಜೊತೆಗೂಡಿ ಸಾರ್ವಜನಿಕ ಕೆಲಸ ಮಾಡಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಾಲೂಕು ಅಭಿವೃದ್ದಿಯಾಗಬೇಕಾದರೆ ತಾಲೂಕಿನ ಎಲ್ಲಾ ಗ್ರಾಮಗಳು ಶೈಕ್ಷಣಿಕವಾಗಿ ಮುಂದುವರಿಯಬೇಕು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಗ್ರಾಮೀಣ ಕೃಷಿಕರು ಹಾಗೂ ಮಹಿಳೆಯರ ಸಂಘಟನೆಯ ಸಬಲೀಕರಣಕ್ಕಾಗಿ ಮುಂದೆ ಬಂದಿದೆ, ಈ ಯೋಜನೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದ ಅವರು ಉಳಿತಾಯ ಸಾಲ ವಿತರಣೆ ಮೂಲಕ ಆಥರ್ಿಕ ಸಂಪನ್ಮೂಲಗಳನ್ನು ಸ್ವಸಹಾಯ ಪದ್ದತಿಯಲ್ಲಿ ಕ್ರೂಡಿಕರಿಸಿ ಕೃಷಿಕ ಮತ್ತು ಮಹಿಳೆಯರನ್ನು ಆಥರ್ಿಕ, ಸಾಮಾಜಿಕ ಬದಲಾವಣೆ ಮಾಡಲು ಈ ಮೂಲಕ ಪ್ರಯತ್ನಿಸುತ್ತಿರುವುದು ಯೋಜನೆಯ ಉತ್ತಮ ಉದ್ದೇಶವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿದರ್ೇಶಕ ಸಿ.ಪಿ.ಪುರುಷೋತ್ತಮ್ ಮಾತನಾಡಿ ತಾಲೂಕಿನಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳನ್ನು ರೂಪಿಸಿ, ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ಯತ್ನಿಸುತ್ತೇವೆ ಅಲ್ಲದೆ ಗ್ರಾಮಗಳಲ್ಲಿ ಸಂಘಗಳನ್ನು ರಚಿಸಿ ಅಲ್ಲಿ ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಮೈಕ್ರೋಫೈನಾನ್ಸ್ಗಳ ಬಗ್ಗೆ ತರಬೇತಿ ನೀಡುತ್ತೇವೆ ಎಂದ ಅವರು ಪ್ರತಿ ಜಿಲ್ಲೆಯಲ್ಲಿ ಇರುವ ತಾಲೂಕುಗಳಿಗೆ ಈಗಾಗಲೇ ಈ ಯೋಜನೆ ಮೂಲಕ 850ಕೋಟಿ ಹಣವನ್ನು ಸಂಘಗಳ ಸದಸ್ಯರಿಗೆ ವಿಸ್ತರಿಸಿದ್ದು 250ಕೋಟಿ ಉಳಿತಾಯವಾಗಿದೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನ್ನದಾನ, ಮೆಡಿಕಲ್ ಮತ್ತು ಇಂಜನಿಯರ್ ಕಾಲೇಜುಗಳನ್ನು ಸ್ಥಾಪಿಸಿದ್ದು ಸಂಚಾರಿ ಆಸ್ಪತ್ರೆ, ಉಚಿತ ಔಷದಿಗಳನ್ನು ಶಾಂತವನ ಟ್ರಸ್ಟ್ ವತಿಯ ಮುಖಾಂತರ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು ಕೃಷಿಯಲ್ಲಿ ತಾಲೂಕು ಮುಂದುವರಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರೈತರಿಗೆ ಬೆಳೆಯ ಮತ್ತು ಮಹಿಳೆಯರಿಗೆ ಸಂಘಗಳ ರಚನೆಯ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಸದಸ್ಯ ಸಿ.ಡಿ.ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ರೋಹಿತಾಕ್ಷ ಉಪಸ್ಥಿತರಿದ್ದರು.
ಮುಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳು
ಚಿಕ್ಕನಾಯಕನಹಳ್ಳಿ,ಫೆ.17: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳನ್ನು ಸೃಜನ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸದಸ್ಯೆ ಎನ್.ಇಂದಿರಮ್ಮ ತಿಳಿಸಿದ್ದಾರೆ.
ಇದೇ 19 ಮತ್ತು 20ರಂದು 9.30ಕ್ಕೆ ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿದ್ದು ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಏಕಪಾತ್ರಾಭಿನಯ, ಛದ್ಮವೇಶ, ಆಶುಭಾಷಣ ಸ್ಪಧರ್ೆ, ರಂಗೋಲಿ, ಬಕೇಟ್ಗೆ ರಿಂಗ್ ಹಾಕುವುದು, ಮ್ಯೂಸಿಕಲ್ ಛೇರ್, ಮಡಿಕೆ ಒಡೆಯುವುದು, ಚಮಚ ಮತ್ತು ನಿಂಬೆಹಣ್ಣು ಓಟ, ಪಾಸಿಂಗ್ ದಿ ಬಾಲ್, ಬಾಂಬ್ ಇನ್ ದಿ ಸಿಟಿ, ಥ್ರೋಬಾಲ್, ಬಾವಿದಡ ಸ್ಪದರ್ೆಗಳನ್ನು ಹಮ್ಮಿಕೊಂಡಿದ್ದು ಸ್ಪಧರ್ೆಗೆ ಭಾಗವಹಿಸುವವರು ಹೆಚ್ಚಿನ ವಿವರಗಳಿಗಾಗಿ 9448648436, 9980760326 ನಂ.ಗಳಿಗೆ ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.

ಕಂದಿಕೆರೆ ಗವಿಶಾಂತವೀರಸ್ವಾಮಿ ಜಾತ್ರ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.17: ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 21ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ 19ರವರಗೆ ನಡೆಯಲಿದೆ.
18ರಂದು ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲೆಗೆ ಅಭಿಷೇಕ, 19ರಂದು ರಥೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

Wednesday, February 16, 2011



ಖಜಾನೆ ಬರಿದಾಗಿರುವಾಗ ಕೃಷಿ ಬಜೆಟ್ಗೆ ಅನುದಾನ ಎಲ್ಲಿದೆ: ಎಚ್.ಡಿ.ಕೆ. ಬಡವರ ಪರವಾಗಿ ಕೆಲಸ ಮಾಡುವುದು ತಪ್ಪೇ ಎಚ್.ಡಿ.ಕೆ. ಕಣ್ಣಂಚಿನಲ್ಲಿ ನೀರು ನನಗೇನು ರಾಜಕೀಯ ಬೇಡ, ಜನ ಇಂದೇ ರಾಜಕೀಯ ಬಿಡಿ ಎಂದರೆ ಬಿಟ್ಟು
ಬಿಡುತ್ತೇನೆ
ಚಿಕ್ಕನಾಯಕನಹಳ್ಳಿ,ಫೆ.16: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಲಿಂಗಾಯಿತರ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಹಾಗಾದರೆ ನಾನು ಒಕ್ಕಲಿಗರಾಗಿ ಹುಟ್ಟಿದ್ದೇ ತಪ್ಪಾ, ಬಡವರ ಪರ ಕೆಲಸ ಮಾಡುವುದೇ ತಪ್ಪಾ, ನಾನು ಹೋರಾಡುತ್ತಿರುವುದು ರಾಜ್ಯದ ಜನತೆಗಾಗಿ, ಜನ ನನ್ನು ರಾಜಕೀಯ ಬಿಡಿ ಎಂದರೆ ಇವತ್ತೇ ಬಿಟ್ಟು ಬಿಡುತ್ತೇನೆ, ಎಂದು ಹುಮ್ಮಳಿಸಿ ಬಂದ ದುಃಖವನ್ನು ತಡೆಯಲಾರದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣಂಚಿನಲ್ಲಿ ನೀರು ಸುರಿಸುತ್ತಾ ಗದ್ಗದಿತರಾಗಿ ನುಡಿದರು.
ಬಡವರ ಬಗ್ಗೆ, ದೀನ ದಲಿತರ ಬಗ್ಗೆ, ಹಗಲಿರುಳ ದುಡಿಯುತ್ತಿದ್ದೇನೆ, ಜನತಾ ದರ್ಶನ, ಗ್ರಾಮವಾಸ್ಥವ್ಯದ ಮೂಲಕ ಜನರ ಸಂಕಷ್ಟುಗಳನ್ನು ಹತ್ತಿರದಿಂದ ನೋಡಿದ ಮೇಲೆ, ನನಗಿರುವ ಹೃದಯ ರೋಗದ ತೊಂದರೆಯನ್ನು ಲೆಕ್ಕಿಸಿದೆ ಜನರ ಸಂಕಷ್ಟವನ್ನು ಆಲಿಸಿ ಅವರಿಗೆ ಪರಿಹಾರವನ್ನು ನೀಡುತ್ತಿದ್ದೇನೆ ಎನ್ನುವ ಸಂದರ್ಭಕ್ಕಾಗಲೇ ಮುಂದೆ ಮಾತನಾಡದೆ ದುಃಖದಿಂದ ಮುಖ ಮುಚ್ಚಿಕೊಂಡು ಕ್ಷಣಕಾಲ ಮಾತನ್ನು ನಿಲ್ಲಿಸಿದರು. ನಂತರದಲ್ಲಿ ಮುಂದೆ ಕಂಠ ಸರಿ ಪಡಿಸಿಕೊಂಡು ಮಾತನಾಡಲು ಪ್ರಯತ್ನಿಸಿದರಾದರೂ ಸ್ಪಷ್ಟ ಉಚ್ಚಾರಣೆ ಬಾರದೆ ಭಾಷಣವನ್ನು ಮೊಟಕು ಮಾಡಿ ಕರವಸ್ತ್ರದಲ್ಲಿ ಕಣ್ಣು ಒರಿಸಿಕೊಂಡು ತಮ್ಮ ಕುಚರ್ಿಯಲ್ಲಿ ಕುಣಿತೇ ಬಿಟ್ಟರು.
ಇದಿಷ್ಟು ನಡೆದಿದ್ದು ಪಟ್ಟಣದ ಸಕರ್ಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ.
ಯಡಿಯೂರಪ್ಪನವರು ಕಳೆದ ಬಜೆಟ್ನ ಯೋಜನೆಗಳೇ ಸಮರ್ಪಕವಾಗಿ ಅನುಷ್ಠಾನಗೊಳಿಸಲ್ಲ ಎಂದು ದೂರಿದ ಅವರು, ಈಗ ಕೃಷಿ ಬಜೆಟ್ ನೀಡುತ್ತೇನೆ ಎನ್ನುವ ಯಡಿಯೂರಪ್ಪ ಹಣವಿಲ್ಲದೆ ಖಜಾನೆ ಬರಿದು ಮಾಡಿಕೊಂಡಿರುವ ಇವರು, ಏನೇ ವಾಗ್ದಾನ ಮಾಡಿದರೂ ಅದನ್ನು ಅನುಷ್ಠಾನಗೊಳಿಸಲು ಹಣವಿಲ್ಲದ ಮೇಲೆ ಇವರು ಬಜೆಟ್ ನೀಡಿ ಏನು ಉಪಯೋಗ ಎಂದರಲ್ಲದೆ, 2009ರಲ್ಲಿ ಉತ್ತರ ಕನರ್ಾಟಕದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ಪರಿಹಾರವಾಗಿ ನೀಡಿದ ಚೆಕ್ಗಳ ನಗದು ಮಾಡಿಸಿಕೊಳ್ಳಲಾಗಿಲ್ಲ, ಈ ಚೆಕ್ಗಳ ಸಂಬಂಧ ಅಲ್ಲಿನ ತಹಶೀಲ್ದಾರ್ ಈ ಚೆಕ್ಗಳಿಗೆ ಸಕರ್ಾರದಿಂದ ಹಣ ಬಿಡುಗಡೆಯಾಗಿಲ್ಲವೆಂದು ಹಿಂಬರ ನೀಡುತ್ತಾರೆ ಇಂತಹ ಸಕರ್ಾರಕ್ಕೆ ಕೃಷಿ ಬಜೆಟ್ನಲ್ಲಿ ವಿಶೇಷವಾಗಿ ಅನುದಾನ ನೀಡಲು ಹಣವೆಲ್ಲಿದೆ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಯಡಿಯೂರಪ್ಪ 45 ಸಾವಿರ ಕೋಟಿ ಸಾಲವನ್ನು ಈ ರಾಜ್ಯದ ಜನತೆಯ ಮೇಲೆ ಹೊರೆಸಿದ್ದಾರೆ ಎಂದರು.
ಯಡಿಯೂರಪ್ಪನವರು ಯಾವೊಬ್ಬ ಸಚಿವರ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಎಲ್ಲರೂ ಅವರಿಗೆ ಅಸಹಕಾರ ತೋರಿಸುತ್ತಿದ್ದಾರೆ, ಸಕರ್ಾರದಲ್ಲಿ ಉತ್ತಮ ಕೆಲಸಗಳನ್ನು ನಡೆಯುತ್ತಿಲ್ಲ, ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ದೂರುವುದು ಸರಿಯಲ್ಲ ಎಂದ ಎಚ್.ಡಿ.ಕೆ, ಅವರೇ ವಿಧಾನ ಸೌಧದ ಅಧಿಕಾರಿಗಳ ಸಭೆಯೊಂದರಲ್ಲಿ ಮಾತನಾಡುತ್ತಾ ನಾವು ನೀವು ತಿಂದದ್ದು ಸಾಕು, ಇನ್ನಾದರೂ ಜನರ ಪರವಾಗಿ ಕೆಲಸ ಮಾಡೋಣ ಎನ್ನುವ ಮೂಲಕ ಅವರ ಯೋಗ್ಯತೆಯನ್ನು ಪರಾಮಶರ್ಿಸಿಕೊಂಡಿದ್ದಾರೆ ಎಂದರು. ಯಡಿಯೂರಪ್ಪನವರು ಒಬ್ಬ ಬಡವನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ, ಅವರಿಗೆ ಮಾನವೀಯ ಸ್ಪಂದನೆ ಎಂಬುದೇ ಇಲ್ಲವೆಂದರು.
ಇಷ್ಟೊಂದು ಭ್ರಷ್ಟಾಚಾರ ನಡೆಸುತ್ತಿರುವ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ನನ್ನನ್ನು ಲಿಂಗಾಯಿತರ ವಿರೋಧಿ ಇನ್ನುತ್ತಾರೆ. ನಾನು ಕೇಳುವುದು ಇಷ್ಟೇ, ಈ ರಾಜ್ಯ ಉಳಿಯಬೇಕಾ ಅಥವಾ ಯಡಿಯೂರಪ್ಪ ಉಳಿಯಬೇಕಾ ನಿರ್ಧರಿಸಿ ಎಂದರು.
ಗ್ರಾಮೀಣ ಬಡ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸಬೇಕಾದ ಕೆಲಸ ಸಕರ್ಾರದ ಜವಬ್ದಾರಿ, ಈ ಕೆಲಸವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಮಾಡುತ್ತಿರುವುದು ಶ್ಲಾಘನೀಯ, ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದ ಅವರು, ಮುಂದೆ ಯಾವುದೇ ಚುನಾವಣೆಗಳು ಬಂದರೂ ಸುರೇಶ್ ಬಾಬು ರವರ ಕೈಬಲ ಪಡಿಸಿ ಎಂದರಲ್ಲದೆ, ಸುರೇಶ್ ಬಾಬುರವರಿಗೆ ಸಚಿವರಾಗುವ ಲಕ್ಷಣ ಹಾಗೂ ಅವಕಾಶಗಳು ಹೆಚ್ಚಿವೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ನನ್ನ ಹುಟ್ಟು ಹಬ್ಬವನ್ನು ಆಡಂಬರಕ್ಕಾಗಿ ಆಚರಣೆ ಮಾಡಿಕೊಳ್ಳುತ್ತಿಲ್ಲ, ಜನತೆಯ ಆರೋಗ್ಯ ಮತ್ತು ಉದ್ಯೋಗದ ಸಮಸ್ಯೆಗಳನ್ನು ಈಡೇರಿಸುವ ಪ್ರಯತ್ನವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದರು.
ಮಾಚರ್ಿ ಎಂಟರಂದು ಮಹಿಳಾ ದಿನಾಚರಣೆ ಅಂಗವಾಗಿ ಈ ತಾಲೂಕಿನಲ್ಲಿ ಪ್ರಥಮವಾಗಿ 2001 ಗಭರ್ಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಶ್ರೀನಿವಾಸ, ಜೆ.ಡಿ.ಎಸ್. ಮುಖಂಡ ಮುದ್ದುಹನುಮೇಗೌಡ ಮಾತನಾಡಿದರು.
ಜಿ.ಪಂ.ಅಧ್ಯಕ್ಷ ಡಾ.ರವಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ ಉಪಸ್ಥಿತರಿದ್ದರು.

Saturday, February 12, 2011




ಬೀದಿಗೆ ಬಿದ್ದ ವ್ಯಾಪಾರಿಗಳ ನೆರವಿಗೆ ಪುರಸಭೆ ಬರುತ್ತದೆಯೇ...?
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಫೆ.11: ಆಡಳಿತ ಸಭೆಗೆ ದೂರದೃಷ್ಠಿ ಇಲ್ಲದೆ ಇದ್ದರೆ ಯಾರು ಬೇಕಾದರೂ ಬೀದಿಗೆ ಬೀಳಬಹುದು, ಎಂಬುದಕ್ಕೆ ಸ್ಪಷ್ಠ ನಿದರ್ಶನ ಪಟ್ಟಣದ ಖಾಸಗಿ ಬಸ್ಸ್ಟಾಂಡ್ ವ್ಯಾಪಾರಿಗಳ ಇಂದಿನ ಸ್ಥಿತಿ.
ಪಟ್ಟಣದ ಖಾಸಗಿ ಬಸ್ಸ್ಟ್ಯಾಂಡ್ ಸುಂದರವಾಗಿ ಕಾಣಬೇಕು, ನಾಗರೀಕ ಸೌಲಭ್ಯಗಳು ಪ್ರಯಾಣಿಕರಿಗೆ ಕಣ್ಣೋಟದಷ್ಠು ದೂರದಲ್ಲಿರಬೇಕು. ಪಟ್ಟಣಕ್ಕೆ ಹೊಸಬರು ಬಂದಾಗ ಬಸ್ಟಾಂಡ್ ಮೊದಲ ನೋಟಕ್ಕೆ ಆಕಷರ್ಿಸಬೇಕು ಸರಿ, ಎಲ್ಲವೂ ಸರಿ, ಅಟ್ ದ ಸೇಮ್ ಟೈಮ್ ಬಸ್ಟಾಂಡ್ ವ್ಯಾಪಾರಿಗಳ ಬದುಕು ಬೀದಿಗೆ ಬೀಳಬಾರದಲ್ಲವೆ?.
ಕಳೆದ 45ವರ್ಷಗಳಿಂದ ವ್ಯಾಪಾರ ವಹಿವಾಟನ್ನು ನಡೆಸುತ್ತಾ ತಮ್ಮ ಬಾಳಿನ ಬುತ್ತಿಯನ್ನು ಕಟ್ಟಿಕೊಳ್ಳುತ್ತಿದ್ದ ಜನರ ಅನ್ನಕ್ಕೆ ಮಣ್ಣಾಕಬಾರದಲ್ಲವೇ?. ಈಗ ಆಗಿರುವುದು ಇದೇ ಸ್ಥಿತಿ, ಬಸ್ಟ್ಯಾಂಡ್ನಲ್ಲಿ ಶೌಚಾಲಯ ನಿಮರ್ಿಸಬೇಕೆಂದು ಅಲ್ಲಿದ್ದ 27 ವಿವಿಧ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಕಾನೂನು ಪ್ರಕಾರ ಪುರಸಭೆಯ ದಿಟ್ಟ ಕ್ರಮ ಓ.ಕೆ, ಆದರೆ ಅದರಾಚೆಗೆ ಮಾನವೀಯತೆ ಎಂಬುದೊಂದು ಇರುತ್ತದೆ. ಅದು ಕಾನೂನು ಕಟ್ಟಲೆಗಳಾಚೆಗೆ ಇರುವ ಮನುಷ್ಯ ಪ್ರೀತಿಯ ಬಾಂಧವ್ಯ, ಅದನ್ನೇ ಮರೆತರೆ , ಈ ವಿಶ್ವಾಸ, ನಂಬಿಕೆ. ಕಷ್ಠಕಾರ್ಪಣ್ಯಗಳ ಸಂಕೋಲೆ ಅದನ್ನು ಪರಿಹರಿಸುವ ಪುರಪಿತೃಗಳು, ಜನಪ್ರತಿನಿಧಿಗಳ ಸಂಬಂಧ, ಇವೆಲ್ಲವೂ ಈ ವ್ಯಾಪಾರಿಗಳ ಪಾಲಿಗೆ ಇಲ್ಲವಾಗಿದೆ.
ಕಾರಣ ಇಷ್ಠೆ, ಇಲ್ಲಿ ಶೌಚಾಲಯ ನಿಮರ್ಿಸಬೇಕು, ಉದ್ಯಾನವನ್ನು ಮಾಡಬೇಕು ಎಂಬ ಯೋಜನೆ, ಹಲವು ವರ್ಷಗಳಿಂದ ಪುರಸಭೆಯ ಪುರಪಿತೃಗಳ ಮುಂದೆ ಇದ್ದ ಪ್ರಾಜೆಕ್ಟ್. ಈ ಪ್ರಾಜೆಕ್ಟ್ಗೆ ಆಡಳಿತ ಮಂಜೂರಾತಿಗೆ ಕಳುಹಿಸುವಾಗಲೇ ಈ ವ್ಯಾಪಾರಿಗಳ ಬಗ್ಗೆ ಪುರಸಭೆ ಕನಿಷ್ಠ ಹತ್ತು ನಿಮಿಷ ಯೋಚಿಸಿದ್ದರೂ ಈ ರೀತಿಯ ಸ್ಥಿತಿಯಲ್ಲಿ ವ್ಯಾಪಾರಿಗಳು ಇರಬೇಕಾಗಿರಲಿಲ್ಲ.
ಈ ವ್ಯಾಪಾರಿಗಳ ವಹಿವಾಟಿಗೆ ಬೇರೊಂದು ಸ್ಥಳವನ್ನು ಕಲ್ಪಿಸಿ ಅಲ್ಲಿಗೆ ವ್ಯಾಪಾರಿಗಳನ್ನು ಶಿಪ್ಟ್ ಮಾಡಿಸಿದ್ದರೆ, ಅವರು ಅಲ್ಲಿಗೆ ತಮ್ಮ ಸಾಮಾನು ಸರಂಜಾಮಗಳನ್ನು ಎತ್ತಿಕೊಂಡು ಎಂದಿನಂತೆ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ತುತ್ತಿನ ಚೀಲಕ್ಕೆ ಮಾರ್ಗ ಮಾಡಿಕೊಳ್ಳುತ್ತಿದ್ದ್ದರೆ. ಆದರೆ ಈಗ ಆ ಜನ ಪುರಸಭೆಯ ಆಡಳಿತಕ್ಕೆ ಹಿಡಿ ಶಾಪವಾಕುತ್ತಿದ್ದಾರೆ. ಅದರಲ್ಲಿ 45ವರ್ಷಗಳಿಂದ ಈ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವ ವೆಂಕಟಪ್ಪ, ನನ್ನ 70ವರ್ಷಗಳ ಇತಿಹಾಸದಲ್ಲಿ ಈ ರೀತಿ ಕರುಣೆ ಇಲ್ಲದ ಆಡಳಿತವನ್ನು ನೋಡಿಲ್ಲ ಎನ್ನುವ ಅವರು, ಹಿಂದೆ ಮೂರು ಬಾರಿ ಇಲ್ಲಿನ ಅಂಗಡಿಗಳಿಗೆ ಬೆಂಕಿ ಬಿದ್ದಾಗಲೂ ಇಷ್ಟು ನೋವಾಗಿರಲಿಲ್ಲ. ಇರಲಿ ಬಿಡು ನಮ್ಮ ಅಂಗಡಿಗಳಿಗಷ್ಟೇ ಬೆಂಕಿ ಬಿದ್ದಿರುವುದು. ಎರಡು ದಿನಗಳಲ್ಲಿ ಮತ್ತೇ ಅದೇ ಜಾಗದಲ್ಲಿ ನಮ್ಮ ಬದುಕು ಕಟ್ಟಿ ಕೊಳ್ಳುತ್ತೇವೆಂಬ ವಿಶ್ವಾಸವಿತ್ತು. ಆದರೆ ಈಗ ನಾವು ಕುಳಿತುಕೊಳ್ಳಲು ಜಾಗವೇ ಇಲ್ಲದಾಗ, ನಾವು ನಿಂತ ಜಾಗವೇ ಬೆಂಕಿ ಹತ್ತಿ ಹುರಿಯುವಾಗ ನಿಲ್ಲವುದಾದರೂ ಎಲ್ಲಿ ? ಎಂಬ ಚಿಂತೆಯಿಂದ ಕಳೆದು ಎರಡು ದಿನಗಳಿಂದ ಹೊಟ್ಟೆಗೆ ಊಟ ಸೇರಿಲ್ಲವೆಂದು ಕಣ್ಣಂಚಿನಲ್ಲಿ ನೀರು ಸುರಿಸುತ್ತಾರೆ.
ಈ ಶೌಚಾಲಯವನ್ನು ಇಲ್ಲಿಯೇ ಕಟ್ಟಲಿ, ಆದರೆ ನಮಗೂ ಒಂದೈದಡಿ ಜಾಗ ತೋರಿಸಿ, ಅಲ್ಲಿ ನಾವು ನಮ್ಮ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆಂದರೆ ಅದೆಲ್ಲಾ ನಮಗೆ ಗೊತ್ತಿಲ್ಲ, ನಾವು ಈ ಮಾಚರ್ಿ ಒಳಗೆ ಶೌಚಾಲಯ ನಿಮರ್ಿಸದಿದ್ದರೆ ದುಡ್ಡು ವಾಪಸ್ ಹೋಗುತ್ತದೆ. ಮೊದಲು ನಾವು ಶೌಚಾಲಯದ ಬಿಲ್ ಮಾಡಿಯಾದ ಮೇಲೆ ನಿಮಗೆ ಜಾಗ ತೋರಿಸುವುದರ ಬಗ್ಗೆ ಆಲೋಚಿಸುತ್ತೇವೆಂದು ಪುರಸಭೆಯ ಅಧಿಕಾರಿಗಳು ಕರುಣೆ ಇಲ್ಲದಂತೆ ಮಾತನಾಡಿ ಇಲ್ಲಿದ್ದ ಮರ ಮಂಡಿಯನ್ನೇಲ್ಲಾ ಜೆ.ಸಿ.ಬಿಯಲ್ಲಿ ತಳ್ಳಿ ಬಿಟ್ರು ಎಂದು ವೆಂಕಟಪ್ಪ ಆ ಚಿತ್ರಣವನ್ನು ನೊಂದ ಧ್ವನಿಯಲ್ಲಿ ಚಿತ್ರಿಸುತ್ತಾರೆ.
ಈ ಜಾಗವನ್ನು ತೆರವುಗೊಳಿಸಲು ಇಡೀ ತಾಲೂಕು ಆಡಳಿತವೇ ಮುಂದೆ ನಿಂತು ಕಾಯರ್ಾಚರಣೆ ನಡೆಸುತ್ತಿದ್ದರಿಂದ ನಾವೇನು ಮಾಡಲಾಗದೇ ಮೂಕ ಪ್ರೇಕ್ಷಕರಂತೆ ನಿಂತಿದ್ದೆವು ಎನ್ನುತ್ತಾರೆ ವ್ಯಾಪಾರಿ ಲೋಕೇಶ್.
ನಮ್ಮದು ಈಗಲೂ ಒಂದೇ ಮನವಿ, ನಾವಿರುವುದು 27ಜನ ವ್ಯಾಪಾರಿಗಳು, ನಮಗೆ ತಲಾ ಐದಡಿಯಷ್ಟು ಜಾಗವನ್ನು ಕಲ್ಪಿಸಿಕೊಟ್ಟರೆ ಈ ಪುರಸಭೆಗೆ ಋಣಿಯಾಗಿರುತ್ತೇವೆ. ಈ ಹಿಂದೆ ಕೆ.ಎಸ್.ಆರ್.ಟಿ.ಸಿ ಸ್ಟಾಂಡ್ನ ಜಾಗದಲ್ಲಿ ಮನೆ ಕಟ್ಟಿ ಕೊಂಡವರಿಗೆ ಅನುಸರಿಸಿದರಲ್ಲಾ, ಆ ನಿಯಮವನ್ನೇ ನಮಗೂ ಅನ್ವಯಿಸಿದರೆ ನಾವು ಪುರಸಭೆಗೆ ಹಣವನ್ನು ಕಟ್ಟಲು ಸಿದ್ದರಿದ್ದೇವೆ ಎನ್ನುತ್ತಾರೆ. ಈ ವ್ಯಾಪಾರಿಗಳು ಆದರೆ ಪುರಸಭೆಯ ಆಡಳಿತವರ್ಗ ಈ ಬಡ ವ್ಯಾಪಾರಿಗಳ ಕೂಗು ಕೇಳಿಸಿಕೊಳ್ಳುತ್ತಿದೆಯೇ..?



ಕುರುಬರಶ್ರೇಣಿ ಶಾಲೆಯಲ್ಲಿ ಓದಿ,ಎಸ್.ಎಸ್ಎಲ್.ಸಿ. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ಪ್ರತಿಭಾ ಪುರಸ್ಕಾರ
ಚಿಕ್ಕನಾಯಕನಹಳ್ಳಿ,ಫೆ.11: ಕುರುಬರಶ್ರೇಣಿ ಶಾಲೆಯಲ್ಲಿ ಓದಿದ ವಿದ್ಯಾಥರ್ಿಗಳು 200-10ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರವನ್ನು ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದೆ.
ಕುರುಬರಶ್ರೇಣಿ ಶಾಲೆಯಲ್ಲಿ 1ರಿಂದ 7ನೇ ತರಗತಿವರಗೆ ಓದಿದ್ದರೆ ಆ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಇದೇ 13ರ ಭಾನುವಾರ ಬೆಳಗ್ಗೆ 10.30ಕ್ಕೆ ನೀಡಲಿದ್ದು, ಅರ್ಹ ವಿದ್ಯಾಥರ್ಿಗಳು ಸಂಘದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದಶರ್ಿಗಳಲ್ಲಿ ಮಾಚರ್್ 1ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಿದ್ದಾರೆ.

ಪ್ರತಿಷ್ಠಾಪನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.11: ಕಂಬದ ನರಸಿಂಹ ಸ್ವಾಮಿ ನೂತನ ದೇವಾಲಯದ ಪ್ರಾರಂಭೊತ್ಸವ ಹಾಗೂ ನೂತನ ಶಿಲಾಮೂತರ್ಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶಿಖರ ಕಳಸ ಸ್ಥಾಪನೆ ಮತ್ತು ಧಾಮರ್ಿಕ ಸಮಾರಂಭವನ್ನು ಇದೇ 16 ಮತ್ತು 17ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಶೆಟ್ಟಿಕೆರೆ ಹೋಬಳಿಯ ಅಗಸರಹಳ್ಳಿಯಲ್ಲಿ ಏರ್ಪಡಿಸಿದ್ದು ರಂಗಾಪುರದ ಸುಕ್ಷೇತ್ರಾಧ್ಯಕ್ಷರಾದ ಗುರು ಪರದೇಶಿಕೇಂದ್ರ ಮಹಾಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಸ್ವಾಮಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮಿ, ಇಮ್ಮಡಿ ಕರಿಬಸವದೇಶೀಕೇಂದ್ರಸ್ವಾಮಿ, ಮೃಂತ್ಯುಂಜಯದೇಶೀಕೇಂದ್ರ ಸ್ವಾಮಿ, ಸಿದ್ದರಾಮದೇಶೀಕೇಂದ್ರ ಸ್ವಾಮಿ, ಆಶೀರ್ವಚನ ನೀಡಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ದೇವಾಲಯ ನಿಮರ್ಾಣ ಸಮಿತಿ ಅಧ್ಯಕ್ಷ ಅಗಸರಹಳ್ಳಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತು.ಹಾ.ಒ.ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ರಮೇಶ್ಕುಮಾರ್, ಮಾಜಿ.ಜಿ.ಪಂ.ಸದಸ್ಯ ಸುಶೀಲಸುರೇಂದ್ರಯ್ಯ, ಗ್ರಾ.ಪಂ.ಅಧ್ಯಕ್ಷ ಪಾರ್ವತಮ್ಮ, ಗ್ರಾ.ಪಂ.ಸದಸ್ಯರಾದ ಎ.ಎಸ್.ಮಲ್ಲಿಕಾಜರ್ುನಯ್ಯ, ಶಶಿಧರ್, ಉಪಸ್ಥಿತರಿರುವರು.


ರೈತರು ಮತ್ತು ಸಂಘಗಳಿಗೆ ತಿಳುವಳಿಗೆ ತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಫೆ.11: ಸ್ವಸಹಾಯ ಸಂಘಗಳಿಗೆ, ರೈತರ ಇತರ ಚಟುವಟಿಕೆಗಳಿಗೆ ತಿಳುವಳಿಕೆ ನೀಡುವ ಸಲುವಾಗಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಗೋಡೆಕೆರೆ ಗ್ರಾಮದಲ್ಲಿ ಶಿಬಿರವನ್ನು ಇದೇ 14ರ ಸೋಮವಾರ ಹಮ್ಮಿಕೊಂಡಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್.ಸ್ವಾಮಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4ರವರಗೆ ನಡೆಯುವ ಶಿಬಿರದಲ್ಲಿ ಭಾರತೀಯ ರಿಸವರ್್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಶ್ಯಾಮಲಾ ಗೋಪಿನಾಥ್, ಎಸ್.ಬಿ.ಎಂನ ವ್ಯವಸ್ಥಾಪಕ ನಿದರ್ೇಶಕ ಪಿ.ವಿಜಯ್ಭಾಸ್ಕರ್, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಎಲ್.ಟಿ.ಅಂಬುಜಾಕ್ಷಿ ಉಪಸ್ಥಿತರಿರುವರು.

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನೆ ಸಮಾರಂಭ
ಚಿಕ್ಕನಾಯಕನಹಳ್ಳಿ,ಫೆ.12: ನವೋದಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾಷರ್ಿಕ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 14ರ ಸೋಮವಾರ ಸಂಜೆ 6-30ಕ್ಕೆ ನಡೆಯಲಿದೆ.
ಸಮಾರಂಭವನ್ನು ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಗದ್ದಿಗೆ ಮಠದ ಪೀಠಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಗಾಟನೆ ನೆರವೇರಿಸಲಿದ್ದು ತಮ್ಮಡಿಹಳ್ಳಿಯ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಆಶೀರ್ವಚನ ನೀಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಹಿಸಲಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನವೋದಯ ವಿದ್ಯಾಸಂಸ್ಥೆ ನಿದರ್ೇಶಕ ಮಹದೇವಣ್ಣ, ಖಜಾಂಚಿ ಎಸ್.ಜಿ.ಸಿದ್ದಲಿಂಗಪ್ಪ, ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಈಶ್ವರಮೂತರ್ಿ, ತಾ.ಪಂ.ಸದಸ್ಯೆ ಚಿಕ್ಕಮ್ಮ, ವರದಿಗಾರರಾದ ಕೆ.ಜಿ.ರಾಜೀವ್, ಸಿದ್ದರಾಮಣ್ಣ ಅಣೇಕಟ್ಟೆ, ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿರುವರು.
ಶಿಕ್ಷಕರಿಗೆ ಬಡ್ತಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾ.ಪ್ರಾ.ಶಾ.ಶಿ.ಸಂಘದಿಂದ ಅಬಿನಂದನೆ
ಚಿಕ್ಕನಾಯಕನಹಳ್ಳಿ,ಫೆ.12: ಜಿಲ್ಲೆಯಿಂದ ಜಿಲ್ಲೆಗೆ ವಗರ್ಾವಣೆಗೊಂಡ ಸಕರ್ಾರಿ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಕರುಗಳಿಗೆ ಹೆಚ್ಚುವರಿ ಬಡ್ತಿ ಮಂಜೂರು ಮಾಡಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜಾಧ್ಯಕ್ಷ ಬಸವರಾಜ್ ಗುರಿಕಾರ್, ಪ್ರಧಾನ ಕಾರ್ಯದಶರ್ಿ ನಾರಾಯಣಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಆರ್.ಪರಶಿವಮೂತರ್ಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್.ಗೋಪಾಲಕೃಷ್ಣರವರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Thursday, February 10, 2011


ಫೆ.16ರಂದು 3 ಸಾವಿರ ಯುವಕರಿಗೆ ಸ್ಥಳದಲ್ಲೇ ನೇಮಕಾತಿ ಆದೇಶ: ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಫೆ.10: ಕನಿಷ್ಟ ಮೂರು ಸಾವಿರ ಯುವಕರಿಗೆ ಉದ್ಯೋಗ ನೇಮಕಾತಿ ಆದೇಶ ಪತ್ರ ವಿತರಿಸಲಾಗುವುದಲ್ಲದೆ, ಅಬಾಲ ವೃದ್ದರಾಗಿ ಎಲ್ಲಾ ವರ್ಗದ ಜನರ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣಾ ಕಾರ್ಯಕ್ರಮವನ್ನು ಸಿ.ಬಿ.ಎಸ್. ಸಮಾಜ ಸೇವಾ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಭಾಗದ ಯುವಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಬೇಕು, ತನ್ಮೂಲಕ ಬಡ ಕುಟುಂಬಗಳು ಆಥರ್ಿಕವಾಗಿ ಸದೃಢಗೊಳ್ಳಬೇಕು ಎಂಬ ಉದ್ದೇಶ ಅದೇ ರೀತಿ, ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆಯ ದೃಷ್ಠಿಯನ್ನಿಟ್ಟುಕೊಂಡು ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಸಾಮಾನ್ಯ ಜನತೆಗೂ ತಲುಪುವಂತಾಗಲಿ ಎಂಬ ಸದುದ್ದೇಶದಿಂದ, ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯ ಸಹಕಾರದಲ್ಲಿ ನಮ್ಮ ಹುಟ್ಟು ಹಬ್ಬದಂದು ಈ ಎರಡೂ ಕಾರ್ಯಕ್ರಮಗಳನ್ನು ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ 16 ರಂದು ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ, ಜಿಲ್ಲೆಯಾದ್ಯಂತ ಯುವಕರು ಭಾಗವಹಿಸಲಿದ್ದು, 12 ರಿಂದ 15 ಸಾವಿರ ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸ್ಥಳೀಯ ತಾ.ಪಂ.ಯ ಕಾರ್ಯನಿವರ್ಾಹಣಾಧಿಕಾರಿಗಳ ಮೂಲಕ ಎಲ್ಲಾ ಪಂಚಾಯ್ತಿಯ ನಿರುದ್ಯೋಗಿಗಳಿಗೆ ವಿಷಯ ತಿಳಿಸಿದ್ದು, ಇದೇ ಸಂದರ್ಭದಲ್ಲಿ ನಿರುದ್ಯೋಗಿ ಯುವಕರ ವೈಯಕ್ತಿಕ ವಿವರಗಳ ದಾಖಲೀಕರಣವನ್ನು ಮಾಡಲಾಗುವುದು ಎಂದರು.
ಉದ್ಯೋಗಾಂಕ್ಷಿಗಳು ತಮ್ಮ ಬಯೋಡೇಟಾ ಹಾಗೂ ಇತ್ತೀಚಿನ ಮೂರು ಭಾವಚಿತ್ರಗಳನ್ನು ಕಡ್ಡಾಯವಾಗಿ ಮೇಳಕ್ಕೆ ತರಬೇಕು ಎಂದರಲ್ಲದೆ, ಈ ಮೇಳ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟನಲ್ಲಿ ಸಾಗುವುದರ ಜೊತೆಗೆ ಉದ್ಯೋಗ ಹುಡುಕಿಕೊಂಡ ಹೊರಟವರಿಗೆ ಮಾರ್ಗ ಸೂಚಿಯಾಗಿಯೂ ಕೆಲಸ ನಿರ್ವಹಿಸುವುದು.
ಈ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಟಫೇ, ವಿಡಿಯೋಕಾನ್ ವಿಕ್ರಾಂತ್ ಟೈರ್ಸ್, ಜೆ.ಕೆ.ಟೈರ್ಸ್, ರಿಲೆಯಾನ್ಸ್ ಫ್ರೆಶ್, ಅಪೊಲೋ ಪವರ್ ಸಿಸ್ಟಂ, ಮೋರ್ ಆದಿತ್ಯ ಬಿಲರ್ಾ, ಹಿಂದೂಜಾ, ವಿನ್ನರ್ ಗ್ರೂಪ್, ಶ್ರೀಸಾಯಿ ಟೆಲಿಕಮ್ಯುನಿಕೇಶನ್, ಸೇರಿದಂತೆ 45 ರಿಂದ 50 ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಮೇಳದಲ್ಲಿ ಭಾಗವಹಿಸುವರು ಎಂದರು.
ಸಕರ್ಾರ ತಾಲೂಕಿನ ಸಾಲ್ಕಟ್ಟೆ ಬಳಿ ಒಂದು ಸಾವಿರ ಎಕರೆ ಭೂ ಪ್ರದೇಶವನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜಿಸಿದ್ದು, ಅಲ್ಲಿ ಗಾಮರ್ೆಂಟ್ಸ್ ಫ್ಯಾಕ್ಟರಿ ಅಥವಾ ಐರನ್ ಸ್ಪಾಂಜಸ್ ಕಾಖರ್ಾನೆಗೆ ಅವಕಾಶ ನೀಡಬಹುದು ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರಕ್ಕೆ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಸುಮಾರು 130 ತಜ್ಞ ವೈದ್ಯರ ಸಿಬ್ಬಂದಿ ಭಾಗವಹಿಸುತ್ತಾರೆ, ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ ಮತ್ತು ಮೂತ್ರಾಂಗಗಳ ಕಲ್ಲು, ಸಕ್ಕರೆ ರೋಗ, ಗಭರ್ಿಣ ಮತ್ತು ಸ್ತ್ರೀರೋಗ, ಕೀಲು ಮತ್ತು ಮೂಳೆ, ಕಿವಿ ಮೂಗು ಗಂಟಲು, ಕಣ್ಣು, ಚರ್ಮ, ಮಕ್ಕಳ ತಜ್ಞರು ಸೇರಿದಂತೆ ಮಾನಸಿಕ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ವೈದ್ಯಕೀಯ ತಪಾಸಣೆ ನಡೆಸಿದ ನಂತರ, ಗಂಭೀರ ವ್ಯಾಧಿಗಳಿಗೆ ತಜ್ಞ ವೈದ್ಯರುಗಳಿಂದ ಚಿಕಿತ್ಸೆಗಳನ್ನು ನೀಡಿ ಅಗತ್ಯ ಬಂದಲ್ಲಿ ಆದಿ ಚುಂಚುನಗಿರಿ ಆಸ್ಪತ್ರೆಗೆ ಹೋಗಲು ಗುರುತಿನ ಚೀಟಿ ನೀಡಲಾಗುವುದು ಹಾಗೂ ಆಸ್ಪತ್ರೆ ವಾಹನದಲ್ಲಿ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿ ಪುನಃ ವಾಪಸ್ಸು ಕರೆತರಲಾಗುವುದು. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ಉಚಿತವಾಗಿ ಆಪರೇಷನ್ ಮಾಡಲಾಗುವುದು, ರೋಗಿಗೆ ಊಟದ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಜನರಲ್ ವಾಡರ್್ಗಳ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು.
ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಹಾಗೂ ಉಚಿತ ಕನ್ನಡಕವನ್ನು ನೀಡಲಾಗುವುದು ಎಂದರು.
ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಸಿ.ಬಿ.ಎಸ್. ಅಭಿಮಾನಿ ಬಳಗದ ವತಿಯಿಂದ ಬಸವೇಶ್ವರ ನಗರ ಹಾಗೂ ಕೇದಿಗೆಹಳ್ಳಿ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಉಚಿತವಾಗಿ ಸಿದ್ದ ಉಡುಪುಗಳನ್ನು ವಿತರಿಸಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಮಾಯಸಂದ್ರ ಆದಿಚುಂಚನ ಗಿರಿ ಮಠದ ಶಿವಕುಮಾರ ನಾಥ ಸ್ವಾಮಿ, ಆದಿಚುಂಚನಗಿರಿ ಮಠದ ಕಾರ್ಯದಶರ್ಿ ನಿರ್ಮಲಾನಂದನಾಥಸ್ವಾಮಿ, ಎ.ಐ.ಎಂ.ಎಸ್.ನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ವೈದ್ಯಾಧೀಕ್ಷಕ ಡಾ.ಎಸ್.ಬಿ.ವಸಂತಕುಮಾರ್ ಉಪಸ್ಥಿತರಿರುವರು ಎಂದು ಸಿ.ಬಿ.ಸುರೇಶ್ ಬಾಬು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಗೋಷ್ಠಿಯಿಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಟೌನ್ ಕೊ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ಸದಸ್ಯರುಗಳಾದ ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರವಿ(ಮೈನ್ಸ್) ಹಾಜರಿದ್ದರು.

ಹಂದನಕೆರೆಯ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ 1.50 ಕೋಟಿ ರೂ ಬಿಡುಗಡೆ
ಚಿಕ್ಕನಾಯಕನಹಳ್ಳಿ,ಫೆ.10: ಸಕರ್ಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸ್ಥಾನಗಳಲ್ಲಿ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳು ಅಭಿವೃದ್ದಿಯಾಗುತ್ತದೆ ಎಂದು ಜಿ.ಪಂ.ಮಾಜಿ ಅಧ್ಯಕ್ಷ ಜಿ.ರಘುನಾಥ್ ಹೇಳಿದರು.
ತಾಲೂಕಿನ ಹಂದನಕೆರೆಯಲ್ಲಿ ನಡೆದ ಸುವರ್ಣ ಗ್ರಾಮೋದಯ ಯೋಜನೆ ಹಾಗೂ ಶಿಕ್ಷಕರು ವಸತಿ ನಿಲಯ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರವಾಗಿರುವ ಹಂದನಕೆರೆ ಒಂದೇ ಮನೆಯಲ್ಲಿ 5ರಿಂದ 6ಜನ ವಾಸಿ ಮಾಡುವುದರಿಂದ ಮನೆಗಳು ಕಿಸ್ಕಿಂದೆಯಾಗಿದೆ, ಆದ್ದರಿಂದ ಶಾಸಕರು ಈ ಗ್ರಾಮದ ಜನತೆಗೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು. ಜಿ.ಪಂ.ಅಧ್ಯಕ್ಷರಾದ ಸಮಯದಲ್ಲಿ 28ಗ್ರಾಮ ಪಂಚಾಯ್ತಿಗಳಿಗೆ ತಲಾ 29 ನಿವೇಶನ ಹಂಚಿದ್ದಾಗಿ ತಿಳಿಸಿದ ಅವರು, ಈಗ ಪ್ರತಿ ಗ್ರಾ.ಪಂ.ಗಳಿಗೆ 50 ನಿವೇಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ರಾಜೀವ್ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನೀಡಬೇಕಾದೆರೆ, ನಿವೇಶನ ಬೇಕು, ಆದರೆ ಶಾಸಕರಿಗೆ ಮನೆ ನೀಡುವ ಅಧಿಕಾರವಿಲ್ಲ ಎಂದು ವಿಷಾದಿಸಿದರು.
ಎಲ್ಲವೂ ಸಕರ್ಾರದ ಕೈಯಲ್ಲಿದೆ, ಹಿಂದೆ ಶಾಸಕರಿಗೆ ಮನೆ ಹಾಗೂ ನಿವೇಶನ ನೀಡುವ ಅಧಿಕಾರವಿತ್ತು. ಇದನ್ನು ಸಕರ್ಾರ ಕಿತ್ತುಕೊಂಡಿದೆ, ಈ ಭಾಗದಲ್ಲಿನ ಜನ ಆಥರ್ಿಕವಾಗಿ ಹಿಂದುಳಿದಿರುವುದರಿಂದ ಪ್ರತಿ ಮನೆಯಲ್ಲಿ 5ರಿಂದ 6ಜನ ವಾಸಿಸುತ್ತಿದ್ದಾರೆ ಆದ್ದರಿಂದ ಈ ಹಂದನಕೆರೆ ಗ್ರಾಮದ ಬಡವರಿಗೆ ನಿವೇಶನ ಹಾಗೂ ಮನೆ ನಿಮರ್ಿಸಿ ಕೊಡುವ ಕಡೆ ಸಕರ್ಾರ ಶಾಸಕರು ಗಮನ ಹರಿಸುವಂತೆ ತಿಳಿಸಿದರು.
ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಗುತ್ತಿಗೆದರರು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜೊತೆಗೆ ಬೇಗನೇ ಕಾಮಗಾರಿ ಪೂರೈಸಿಕೊಡಬೇಕು ಇದಕ್ಕೆ ಗ್ರಾಮಸ್ಥರೆಲ್ಲರೂ ಸಹಕಾರ ನೀಡುತ್ತೇವೆಂದರು, ಹಂದನಕೆರೆ ಸಮುದಾಯ ಭವನಕ್ಕೆ 22ಲಕ್ಷ ಮಂಜೂರಾಗಿದೆ, ಇಲ್ಲಿ ಮದುವೆ, ಮುಂಜಿ ಮಾಡಲು ಈ ಸಮುದಾಯ ಭವನ ಚಿಕ್ಕದಾಗುತ್ತದೆ ಆದ್ದರಿಂದ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ದೊಡ್ಡ ಸಮುದಾಯ ಭವನ ನಿಮರ್ಿಸಲು ಕ್ರಮ ಕೈಗೊಳ್ಳಬೇಕೆಂದು ರಘುನಾಥ್ ಮನವಿ ಮಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸುವರ್ಣ ಗ್ರಾಮದ ಯೋಜನೆ ಅಡಿಯಲ್ಲಿ ಹಂದನಕೆರೆಗೆ 1.48.ಕೋಟಿ ರೂ ಬಿಡುಗಡೆಯಾಗಿದ್ದು, ಕಾಂಕ್ರಿಟ್ ರಸ್ತೆ ನಿಮರ್ಾಣಕ್ಕೆ 20.35 ಲಕ್ಷ, ಡಾಂಬರು ರಸ್ತೆ ನಿಮರ್ಾಣಕ್ಕೆ 42.65 ಲಕ್ಷ, ಸಿಮೆಂಟ್ ಕಾಂಕ್ರಿಕಟ್ ಚರಂಡಿ ನಿಮರ್ಾಣಕ್ಕೆ ಹಾಗೂ 8ಸೇತುವೆ ನಿಮರ್ಾಣಕ್ಕೆ 36ಲಕ್ಷ, ಸಮುದಾಯ ಭವನ್ಕೆ 22ಲಕ್ಷ, ಅಂಗನವಾಡಿ ಕಟ್ಟಡಕ್ಕೆ 5ಲಕ್ಷ ತ್ಯಾಜ್ಯ ವಸ್ತು ವಿಲೇವಾರಿಗಾಗಿ 10ಲಕ್ಷ, ತರಬೇತಿಗಾಗಿ 9.2ಲಕ್ಷ, ವಿದ್ಯುತ್ ಸಲಕರಣೆಗೆ 1.48ಲಕ್ಷ ಐ.ಇ ಗೆ 1.48ಲಕ್ಷ ಬಿಡುಗಡೆಯಾಗಿದ್ದು ಸಕರ್ಾರ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಕೋಂಟ್ಯಾಂತರ ರೂ ಹಣ ಬಿಡುಗಡೆ ಮಾಡಿದೆ, ಇದರ ಸದುಪಯೋಗ ಪಡಿಸಿಕೊಂಡು ಗುಣ ಮಟ್ಟದ ಕಾಮಗಾರಿಯ ಕಡೆ ಜನರು ಗಮನ ಹರಿಸಿ ಎಂದರಲ್ಲದೆ, ಹಂದನಕೆರೆಗೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಾಗೂ ಕೃಷಿ ಮಾರುಕಟ್ಟೆ ತರಲು ಅಧಿವೇಶನದಲ್ಲಿ ಪ್ರಾಸ್ತಾಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಸೂತಿ ಹಾಗೂ ಜನನಿ ರಕ್ಷ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಚೆಕ್ ವಿತರಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಶಿಕ್ಷಕರ ವಸತಿ ಗೃಹ ಕೆಲವು ಕಡೆ ಪಾಳು ಬಿದ್ದಿವೆ, ಹಂದನಕೆರೆ ಹೃದಯ ಭಾಗದಲ್ಲಿ ನಿಮರ್ಿಸುತ್ತಿರುವ 8ವಸತಿ ಗೃಹಗಳಲ್ಲಿ ಶಿಕ್ಷಕರು ವಾಸಮಾಡುವ ಮೂಲಕ ಶಿಕ್ಷಣದ ಅಭಿವೃದ್ದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯರಾದ ಹೇಮಾವತಿ, ಮಂಜುನಾಥ್, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಈರಪ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು ಇ.ಓ ದಯಾನಂದ್ ಉಪಸ್ಥಿತರಿದ್ದರು.

Wednesday, February 9, 2011


ಬೇಡಿಕೆ ಈಡೇರುವ ತನಕ ಹೋರಾಟ ನಿರಂತರ: ಆರ್.ಪರಶಿವಮೂತರ್ಿ
ಚಿಕ್ಕನಾಯಕನಹಳ್ಳಿ.ಫೆ.09: ಕೇಂದ್ರ ಹಾಗೂ ರಾಜ್ಯ ಸಕರ್ಾರಿ ನೌಕರರ ವೇತನ, ಭತ್ಯೆಗಳಲ್ಲಿ ಅಘಾದವಾದ ವ್ಯತ್ಯಾಸವಿದ್ದು, ಇಬ್ಬರಿಗೂ ಒಂದೇ ರೀತಿಯ ವೇತನವನ್ನು ನೀಡುವ ಮೂಲಕ ಇದನ್ನು ಸರಿಪಡಿಸುವುದರ ಜೊತೆಗೆ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು, ಶೀಘ್ರವಾಗಿ ಸಕರ್ಾರ ಈಡೇರಿಸಬೇಕೆಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಕೋರಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ನಡೆದ ಸಕರ್ಾರಿ ನೌಕರರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ಇತರೆ ರಾಜ್ಯ ಸಕರ್ಾರಿ ನೌಕರರ ವೇತನ ಹಾಗೂ ಭತ್ಯೆಗಳಿಗೆ ಹೊಲಿಸಿದರೆ, ಕನರ್ಾಟಕ ರಾಜ್ಯ ಸಕರ್ಾರಿ ನೌಕರರು ಸುಮಾರು ಶೇ.40 ರಷ್ಟು ವೇತನದ ವ್ಯತ್ಯಾಸವನ್ನು ಹೊಂದಿದ್ದು ಇದರಿಂದ ರಾಜ್ಯ ಸಕರ್ಾರಿ ನೌಕರರು ಆಥರ್ಿಕವಾಗಿ ನಷ್ಠವನ್ನು ಅನುಭವಿಸುತ್ತಿದ್ದಾರೆ, ಅಲ್ಲದೆ ಕೇಂದ್ರ ಸಕರ್ಾರಿ ನೌಕರರು ಪ್ರತಿ 10ವರ್ಷಗಳಿಗೊಮ್ಮೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸುವ ಪರಿಪಾಠ ಹೊಂದಿದ್ದಾರೆ. ಇದನ್ನು ರಾಜ್ಯ ಸಕರ್ಾರಿ ನೌಕರರಿಗೂ ಅನ್ವಯಿಸಬೇಕೆಂದರು.
ಕೇಂದ್ರ ಸಕರ್ಾರ 1998ರ 5ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸಿದ ನಂತರ 6ನೇ ವೇತನ ಆಯೋಗವನ್ನು ರಚಿಸುವ ಪೂರ್ವದಲ್ಲಿ ನೌಕರರಿಗೆ ಶೇಕಡ 50ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ವಿಲೀನಗೊಂಡ ಮೂಲ ವೇತನಕ್ಕನುಗುಣವಾಗಿ ತುಟ್ಟಿಭತ್ಯೆ, ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಿತ್ತು ಆದರೆ ರಾಜ್ಯ ಸಕರ್ಾರ ಇಂತಹ ಯಾವುದೇ ಸೌಲಭ್ಯಗಳನ್ನು ನೌಕರರಿಗೆ ಕಲ್ಪಿಸಿಲ್ಲ, ಈ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದ ಅವರು, 2001ರ ಜನಗಣತಿಯ ಆಧಾರದ ಮೇಲೆ ಕೇಂದ್ರ ಸಕರ್ಾರ ತನ್ನ ನೌಕರರಗೆ ಜಿಲ್ಲಾ ಮತ್ತು ತಾಲೂಕುಗಳನ್ನು ಪುನರ್ ವಿಂಗಡಿಸಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಮತ್ತು ಇತರ ಸೌಲಭ್ಯ ನೀಡಿದೆ ಅದೇ ಮಾದರಿಯಲ್ಲಿ ರಾಜ್ಯ ಸಕರ್ಾರಿ ನೌಕರರಿಗೂ ಭತ್ಯೆಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ನಮ್ಮ ಬೇಡಿಕೆಗಳು ಈಡೇರುವ ತನಕ ಈ ಹೋರಾಟ ಮುಂದುವರೆಯಲಿದೆ ಎಂದರಲ್ಲದೆ, ಈ ಹೋರಾಟದ ವಿರುದ್ದವಾಗಿ ನಾವು ನೌಕರಿಯಿಂದ ವಜಾಗೊಳಿಸಿದರೂ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಸಕರ್ಾರಿ ನೌಕರರು ಶಿರಸ್ತೆದಾರ್ ಕೆ.ವಿ.ಕುಮಾರ್ರವರಿಗೆ ಮನವಿ ಅಪರ್ಿಸಿದರು.
ಸಭೆಯಲ್ಲಿ ಎಸ್.ಸಿ.ನಟರಾಜು, ನೌಕರರ ಸಂಘದ ತಿಮ್ಮಾಬೋವಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ಕುಮಾರಸ್ವಾಮಿ, ನರಸಿಂಹಮೂತರ್ಿ, ಬಸವರಾಜು ಮಾತನಾಡಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶೋಭಾ, ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.


Tuesday, February 8, 2011








ಚಿಕ್ಕನಾಯಕನಹಳ್ಳಿ.ಫೆ.08: ಮಹಿಳೆಯರು ತಮಗೆ ಸಿಗಬೇಕಾದ ಹಕ್ಕು, ಮೀಸಲಾತಿ ಹಾಗೂ ಕಾನೂನಿನ ಅರಿವಿನ ಬಗ್ಗೆ ತಿಳಿದುಕೊಳ್ಳಲು ಮಹಿಳೆಯರಿಗಾಗಿ ನಡೆಯುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಕಾನೂನಿನ ಅರಿವಿನ ನೆರವನ್ನು ಪಡೆದುಕೊಳ್ಳಬೇಕು ಎಂದು ಸಿವಿಲ್ ಹಿರಿಯ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಕರೆ ನೀಡಿದರು.
ತಾಲೂಕಿನ ಹಂದನಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಟುಂಬಿಕ ದೌರ್ಜನ್ಯ ಸಂ ರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೌಂಟುಬಿಕ ಸಮಸ್ಯೆಯನ್ನು ಬಗೆಹರಿಸಲು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ದೂರಿನ ಅಜರ್ಿಯನ್ನು ಸಲ್ಲಿಸಿ, ರಾಜಿ ಸಂದಾನದ ಮೂಲಕ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು, ಸಮಸ್ಯೆ ರಾಜಿ ಸಂದಾನದ ಮೂಲಕ ಇತ್ಯರ್ಥವಾಗದೆ ಇದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ, ಶೀಘ್ರವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
ವಕೀಲ ವೈ.ಜಿ.ಲೋಕೇಶ್ ಮಾತನಾಡಿ ಮಹಿಳೆಯರು ಕಾಖರ್ಾನೆ ಮತ್ತು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಹೆರಿಗೆ ರಜೆ, ತಂದೆ ಆಸ್ತಿಯಲ್ಲಿನ ಹಕ್ಕು, ಜೀವನಾಂಶದ ಬಗ್ಗೆ ಆಸ್ತಿಯನ್ನು ಮಾರಾಟಮಾಡುವುದು ಹಾಗೂ ಆಸ್ತಿಯನ್ನು ವಿಲ್ ಮಾಡುವ ಬಗ್ಗೆ ಇರುವ ಕಾನೂನುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಎಂದ ಅವರು ಕಾಖರ್ಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಸಂಬಳ ಸಾರಿಗೆಯನ್ನು ಹಣದ ರೂಪದಲ್ಲಿಯೇ ನೀಡಬೇಕೇ ಹೊರತು ವಸ್ತು ರೂಪದಲ್ಲಿ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ವಕೀಲ ಎಂ.ಎನ್.ಶೇಖರ್ ಮಾತನಾಡಿ ಕುಟುಂಬದಲ್ಲಿನ ಸದಸ್ಯರಲ್ಲಿ ನಡೆಯುವ ಹಿಂಸೆ, ದೈಹಿಕ ಹಿಂಸೆ, ಲೈಂಗಿಕ ಹಿಂಸೆ, ಅಶ್ಲೀಲ ಚಿತ್ರ ಪ್ರದರ್ಶನ, ಭಾವನಾತ್ಮಕ ಹಿಂಸೆ ಮತ್ತು ಆಥರ್ಿಕ ಹಿಂಸೆ ಇವೆಲ್ಲಾ ಕೌಟುಂಬಿಕ ಹಿಂಸೆಯಡಿಯಲ್ಲಿದ್ದು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು ಇಂತಹ ಪ್ರಕರಣಗಳ ಬಗ್ಗೆ, ದೂರಿನ ಅಜರ್ಿಯನ್ನು ಸಲ್ಲಿಸಿ ನ್ಯಾಯವನ್ನು ದೊರಕಿಸಿಕೊಳ್ಳಬೇಕು ಮತ್ತು ಪ್ರಕರಣಗಳು ಇತ್ಯರ್ಥವಾಗದಿದ್ದಲ್ಲಿ ನ್ಯಾಯಾಲಯದಲ್ಲಿ ಉಚಿತವಾಗಿ ಕಾನೂನಿನ ನೆರವು ಪಡೆದು 60ದಿನಗಳ ಒಳಗಾಗಿ ನ್ಯಾಯವನ್ನು ಪಡೆಯುವಂತೆ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ..ಪರ್ವತಯ್ಯ ಮಾತನಾಡಿ ಮಹಿಳೆಯ ಮೇಲಿನ ಕೌಟುಂಬಿಕ ದೌರ್ಜನ್ಯಗಳು ಹಾಗೂ 2005-06 ಕಾನೂನಿನ ಬಗ್ಗೆ ವಿವರವಾಗಿ ತಿಳಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಸಲಹೆ ಮತ್ತು ಪರಿಹಾರಗಳನ್ನು ಪಡೆಯುವಂತೆ ತಿಳಿಸಿದ ಅವರು ಭಾಗ್ಯಲಕ್ಷ್ಮಿ ಯೋಜನೆಯಡಿ ಬಂದಿರುವ ಬಾಂಡ್ಗಳ ಸಂಖ್ಯೆಗಳನ್ನು ಆಧಾರ್ ಯೋಜನೆಯಡಿ ಅಳವಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಬಿ.ಸಿ.ಹೇಮಾವತಿ, ವಕೀಲರ ಸಂಘದ ಗೋಪಾಲಕೃಷ್ಣ, ಸಹಾಯಕ ಸಕರ್ಾರಿ ಅಭಿಯೋಜಕ ಕೆ.ಎಲ್.ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ, ವಕೀಲರಾದ ಎಂ.ಕೆ.ಸುಲೋಚನ ಸ್ವಾಗತಿಸಿ, ಆರ್.ಎಲ್. ಎಲಿಜಬೆತ್ ರಾಣಿ ನಿರೂಪಿಸಿ, ವೈ.ಜಿ.ಲೋಕೇಶ್ವರ ವಂದಿಸಿದರು.


Monday, February 7, 2011

ಅಧಿಕಗೊಂಡಿರುವ ಸರಣಿ ಕಳ್ಳತನ, ಆತಂಕದಲ್ಲಿ ಜನತೆ: ರಾತ್ರಿ ಪಹರೆಯಲ್ಲಿ ಯುವಕರು.
ಚಿಕ್ಕನಾಯಕನಹಳ್ಳಿ.ಫೆ.07: ತಾಲೂಕಿನ ಕುಪ್ಪೂರು ಸೇರಿದಂತೆ ಹಲವು ಭಾಗಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಪೋಲೀಸ್ನ ಪೇದೆಯೊಬ್ಬರ ಮನೆಯ ಬೀಗ ಹೊಡೆದಿರುವುದರಿಂದ ಜನರು ಭಯದ ನೆರಳಿನಲ್ಲಿ ಬದುಕುವಂತಾಗಿದೆ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಭಾರಿ ಪ್ರಮಾಣದಲ್ಲಿ ಆದ ಕಳ್ಳತನವಿನ್ನು ಜನರ ಮನದಲ್ಲಿ ಹಸಿರಾಗಿರುವಾಗಲೇ, ಅದೇ ಕುಪ್ಪೂರಿನಲ್ಲಿ ಒಂದೇ ರಾತ್ರಿ 10 ಕಡೆ ಬೀಗ ಮುರಿದಿದ್ದಾರೆ, ಇದರಲ್ಲಿ ಒಂದು ದೇವಸ್ಥಾನವೂ ಸೇರಿದೆ. ಮಲ್ಲಿಗೆರೆಯಲ್ಲಿ ಮೂರು ಮನೆ ಬೀಗ ಹೊಡೆದಿದ್ದಾರೆ ಇದರಲ್ಲಿ ಒಂದು ಪೋಲೀಸ್ನವರ ಮನೆಯೂ ಸೇರಿದೆ, ಮತಿಘಟ್ಟದಲ್ಲಿ 2 ಮನೆ, ಅಣೆಕಟ್ಟೆಯಲ್ಲಿ ಒಂದು ಅಂಗಡಿ, ಚಿನಾಹಳ್ಳಿ ಪಟ್ಟಣದಲ್ಲಿ ಮೂರು ಅಂಗಡಿ, ಹಂದನಕೆರೆಯಲ್ಲಿ ಹಗಲಿನ ಸಮಯದಲ್ಲೇ ಕಳವು ಮಾಡಿರುವ ಪ್ರಕರಣಗಳು ನಡೆದಿವೆ.
ಕುಪ್ಪೂರಿನ ಜನ ಕಳ್ಳರ ಭಯಕ್ಕೆ ರೋಸಿ, ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ಪ್ರತಿ ರಾತ್ರಿ ಐದಾರು ಜನರ ಗುಂಪು ಪ್ರತಿದಿನ ರಾತ್ರಿ ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ರಾತ್ರಿ ಐದಾರು ಜನರ ಗುಂಪು ಪೋಲಿಸನವರೊಂದಿಗೆ ಪಹರೆ ಮಾಡುತ್ತಿದ್ದಾರೆ.
ಮೊನ್ನೆ ರಾತ್ರಿ ಅಣೆಕಟ್ಟೆ, ಕುಪ್ಪೂರು, ಮತಿಘಟ್ಟ ಮಲ್ಲಿಗೆರೆ ಈ ನಾಲ್ಕು ಊರುಗಳಲ್ಲಿ ಒಂದೇ ರಾತ್ರಿ ಬೀಗ ಮುರಿದಿರುವುದು ಹಲವು ಅನುಮಾನಗಳಿಗೆ ಗ್ರಾಸವಾಗಿದೆ. ಅಣೆಕಟ್ಟೆಯಲ್ಲಿ ಅಂಗಡಿಯೊಂದರ ಬೀಗ ಮುರಿದು ಕೈಗೆ ಸಿಕ್ಕಿದ್ದು ತೆಗೆದುಕೊಂಡು ಹೋಗಿದ್ದಾರೆ. ಕುಪ್ಪೂರಿನಲ್ಲಿ ಬ್ರಹ್ಮದೇವರ ದೇವಸ್ಥಾನದ ಬೀಗ ಮುರಿದಿದ್ದು ಎರಡು ಹೊಸ ಸೈಕಲ್ಗಳನ್ನು ಕದಿದ್ದಾರಲ್ಲದೆ, ಅಲ್ಲಿದ್ದ ಟೈರು, ಟ್ಯೂಬ್, ಆಯಿಲ್ ಸೇರಿದಂತೆ 25 ಸಾವಿರ ರೂ ಮೌಲ್ಯದ ವಸ್ತುಗಳನ್ನು ಕದಿದ್ದಾರೆ. ರಾಮು ಟೈಲರ್ ಅಂಗಡಿಗೆ ನುಗ್ಗಿರುವ ಕಳ್ಳರು ಬಟ್ಟೆ ಬರೆಗಳನ್ನು ಹೊತ್ತು ಹೊಯ್ದಿದ್ದಾರೆ. ಇದಲ್ಲದೆ ಕುಪ್ಪೂರಿನ ಗೋವಿಂದಪ್ಪ ಬಿನ್ ನಾರಾಯಣಪ್ಪ, ಪೋಸ್ಟಮನ್ ಮರುಳಯ್ಯ, ಸಿದ್ದಮರಿ, ನರಸಿಂಹಯ್ಯ, ಲಕ್ಕಮ್ಮ, ರಾಮಣ್ಣ ಎಂಬುವರ ಮನೆಗಳ ಬೀಗ ಮುರಿದಿದ್ದಾರೆ.
ಮಲ್ಲಿಗೆರೆ ಮೂಲ ನಿವಾಸಿ ಮತ್ತಿಘಟ್ಟ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿರುವ ರವಿ ಎಂಬುವರ ಮನೆಯ ಬೀಗವನ್ನು ಹೊಡೆದಿದ್ದಾರೆ, ಅದೇ ಗ್ರಾಮದ ಸಿದ್ದರಾಮಣ್ಣ ಎಂಬುವರ ಮನೆಯ ಬೀಗವನ್ನು ಮುರಿದಿದ್ದಾರೆ.
ಒಟ್ಟಿನಲ್ಲಿ ಈ ಕಳ್ಳರ ಗುಂಪು ಮನೆ ಬಾಗಿಲಿನ ಚಿಲಕಕ್ಕೆ ಬೀಗ ಹಾಕಿರುವ ಮನೆಗಳನ್ನು ಹುಡುಕಿಕೊಂಡು ಅಂತಹ ಮನೆಗಳ ಬೀಗವನ್ನೇ ಹೊಡಿದಿದ್ದಾರೆ.
ಈ ಮೇಲಿನ ವಿಷಯಗಳು ಒಂದೇ ರಾತ್ರಿ ಬೀಗ ಮುರಿದ ಪ್ರಕರಣಗಳಾದರೆ, ಈ ಭಾಗದಲ್ಲಿ ಎರಡು ತಿಂಗಳಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
ಮೊದಲು ಆರಂಭಗೊಂಡಿದ್ದು ದೇವಸ್ಥಾನಗಳ ಬೀಗ ಮುರಿಯುವ ಹಾಗೂ ದೇವರ ಆಭರಣಗಳನ್ನು ಕದ್ದು ಹೊಯ್ಯುವ ಪ್ರಕರಣಗಳು, ಆರಂಭದಲ್ಲಿ ಸೋರಲಮಾವಿನಲ್ಲಿ ಗ್ರಾಮದೇವರ ದೇವಸ್ಥಾನದ ಬೀಗಹೊಡೆದು ಅಲ್ಲಿದ್ದ ಸಣ್ಣಪುಟ್ಟ ವಸ್ತಗಳನ್ನು ಕದ್ದಿರುವುದು, ನಂತರ ಹೊಸಕೆರೆಯಲ್ಲಿನ ತೋಟದಲ್ಲಿನ ದೇವಸ್ಥಾನ, ತದನಂತರ ಕುಪ್ಪೂರು ಬಳಿಯ ತೋಟದಲ್ಲಿರುವ ಆಂಜನೇಯ ದೇವಸ್ಥಾನ, ಇದಾದನಂತರ ತಮ್ಮಡಿಹಳ್ಳಿಯಲ್ಲಿ, ನಂತರದಲ್ಲಿ ಬಹುದೊಡ್ಡ ಮಟ್ಟದ ಕಳ್ಳತನವೆಂದರೆ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಮಠದಲ್ಲಿ ಲಕ್ಷಗಟ್ಟಲೆ ಮೌಲ್ಯದ ಬೆಳ್ಳಿ ಆಭರಣಗಳನ್ನು ಕದ್ದು ಹೊಯ್ದಿರುವುದು. ತಾಲೂಕಿನ ಇತಿಹಾಸದಲ್ಲೇ ಮಠ ಒಂದಕ್ಕೆ ನುಗ್ಗಿ ದೊಡ್ಡ ಮಟ್ಟದಲ್ಲಿ ಬೆಳ್ಳಿ ಆಭರಣಗಳನ್ನು ಕದ್ದಿರುವುದು ಇದೇ ಪ್ರಥಮ.
ಇವಿಷ್ಟು ತಾಲೂಕಿನ ಗ್ರಾಮಾಂತರ ಮಟ್ಟದಲ್ಲಾದರೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲೂ ಒಂದೇ ದಿನ ಮೂರು ಅಂಗಡಿಗಳಿಗೆ ನುಗ್ಗಿ ಅಲ್ಲಿದ್ದ ಸಾಮಾನು ಸರಂಜಾಮುಗಳನ್ನು ಹಾಗೂ ನಗದನ್ನು ಹೊತ್ತು ಹೊಯ್ದಿರುವ ಘಟನೆಯೂ ನಡೆದಿದೆ. ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಗುರು ಬಾರ್ ರೆಸ್ಟೋರೆಂಟ್ಗೆ ನುಗ್ಗಿ ಅಲ್ಲಿದ್ದ ಮಧ್ಯವನ್ನು ಕದ್ದು ಅದೇ ರಸ್ತೆಯಲ್ಲಿನ ಎಸ್.ಆರ್.ಎಸ್. ಕಂಬಳಿ ಸೊಸೈಟಿ ಬಳಿಯ ಪ್ರಕಾಶ್ ಎಂಬುವರ ಅಂಗಡಿಗೆ ನುಗ್ಗಿ ಅಲ್ಲೇ ಮಧ್ಯೆವನ್ನು ಕುಡಿದು, ಸಿಕ್ಕ ಕುರುಕಲು ತಿಂಡಿಯನ್ನು ತಿಂದ್ದು ಬಾಟಲಿ ಮತ್ತಿತರ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಅದೇ ದಿನ ಆ ರಸ್ತೆಯ ಹಿಂಭಾಗದ ಬೀದಿಯಲ್ಲಿ ಸೋಮಶೇಖರ್ ಎಂಬುವರಿಗೆ ಸೇರಿದ ಅಂಗಡಿಯಲ್ಲೂ ನಗದು ಮತ್ತು ದಿನ ಬಳಕೆಯ ವಸ್ತುಗಳನ್ನು ಕದಿದ್ದಾರೆ.
ಪಟ್ಟಣದ ಯುನಿವರ್ಸಲ್ ಕಂಪ್ಯೂಟರ್ ಕೇಂದ್ರದಲ್ಲಿ 6 ಸಿ.ಪಿ.ಯು, ಯು.ಪಿ.ಎಸ್ ಸೇರಿದಂತೆ ಕಂಪ್ಯೂಟರ್ಗಳ ಬಿಡಿ ಭಾಗಗಳನ್ನು ಕದಿದ್ದಾರೆ
ಪಟ್ಟಣದ ಹೊರ ವಲಯದ ಮಸಾಲ್ತಿಗುಡ್ಲುವಿನಲ್ಲಿ ಶಿವಣ್ಣ ಎಂಬವರಿಗೆ ಸೇರಿದ ತೆಂಗಿನ ಕಾಯಿ ಗೋಡೌನ್ನಿನ ಬೀಗ ಹೊಡೆದಿದ್ದಾರೆ.
ಈ ಎಲ್ಲಾ ಪ್ರಕರಣಗಳಿಂದ ಜನ ಆತಂಕದಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕುಪ್ಪೂರು ಮಠದ ಕಳ್ಳತನ ಮಾಡಿರುವವರು ಹೈಟೆಕ್ ಕಳ್ಳರು, ಈಗ ಬೀಗ ಮುರಿದಿರುವವರು ಸಣ್ಣ ಪುಟ್ಟ ಕಳ್ಳರು, ಈ ಇಬ್ಬರನ್ನು ಹಿಡಿಯಲು ತಂತ್ರ ರೂಪಿಸಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿದ್ದೇವೆ. ನಮ್ಮಲ್ಲೂ ಸಿಬ್ಬಂದಿ ಕೊರತೆಯಿಂದ ಪರಿಣಾಮಕಾರಿಯಾಗಿ ಕಾರ್ಯ ಪ್ರವೃತ್ತರಾಗುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ.
ಆದರೆ ಜನತೆ ಪೊಲೀಸಿನವರ ಸಬೂಬು ಕೇಳುವ ಸ್ಥಿತಿಯಲಿಲ್ಲ, ನಮಗೆ ರಾತ್ರಿ ಹೊತ್ತು ನಿದ್ದೆ ಬಾರದೆ ಸದಾ ಎಚ್ಚರದಲ್ಲಿರುವಂತಾಗಿದೆ. ಪೊಲೀಸ್ ಅಧಿಕಾರಿಗಳು ಹೇಗಾದರೂ ಸರಿಯೇ ಆ ಕಳ್ಳರನ್ನು ಹಿಡಿದು ನಮಗೆ ಕಣ್ಣು ತುಂಬಾ ನಿದ್ದೆ ಮಾಡುವಂತಹ ವಾತಾವರಣ ನಿಮರ್ಿಸುವಂತಾಗಬೇಕು ಎನ್ನುತ್ತಿದ್ದಾರೆ.
ಇದಕ್ಕೆ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಏನೆನ್ನುತ್ತಾರೆ.
ಆರೋಗ್ಯಕ್ಕಾಗಿ ಸತ್ಸಂಗ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಫೆ.07: ಆರೋಗ್ಯಕ್ಕಾಗಿ ಸತ್ಸಂಗ ಎಂಬ ಉಪನ್ಯಾಸವನ್ನು (ಇಂದು) ಪೆ.8ರಿಂದ ಪ್ರತಿ ಮಂಗಳವಾರ ಸಂಜೆ 6ರಿಂದ 7ರವರಗೆ ಹಮ್ಮಿಕೊಳ್ಳಲಾಗಿದೆ ಎಂದು ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಉಪನ್ಯಾಸವನ್ನು ಪಟ್ಟಣದ ಬ್ರಹ್ಮ ವಿದ್ಯಾ ಸಮಾಜದಲ್ಲಿ ಏರ್ಪಡಿಸಲಾಗಿದ್ದು ಆರೋಗ್ಯಸಕ್ತರಿಗೆ ಯೋಗವಿಜ್ಷಾನ ,ಧ್ಯಾನಗಳ ಬಗ್ಗೆ ಶಿಬಿರದಲ್ಲಿ ಹೆಚ್ಚಿನ ವಿವರ ನೀಡಲಿದ್ದು ಪ್ರವೇಶ ಉಚಿತವಾಗಿರುವುದರಿಂದ ಎಲ್ಲಾ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದ್ದಾರೆ.

Sunday, February 6, 2011


ತಾಲೂಕಿನಲ್ಲಿ ರಾಜ್ಯ ಸಕರ್ಾರಿ ನೌಕರರ ಸಂಘದ ಬೃಹತ್ ಬಹಿರಂಗ ಸಭೆ
ಚಿಕ್ಕನಾಯಕನಹಳ್ಳಿ,ಫೆ.06: ತಾಲೂಕು ಸಕರ್ಾರಿ ನೌಕರರ ಬೃಹತ್ ಬಹಿರಂಗ ಸಭೆಯನ್ನು ಇದೇ 9ರ ಬುಧವಾರ ಮಧ್ಯಾಹ್ನ 1.35ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ತಿಳಿಸಿದ್ದಾರೆ.
ಬಹಿರಂಗ ಸಭೆಯನ್ನು ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ನೌಕರರ ಹಲವು ಬೇಡಿಕೆಗಳಾದ ಕೇಂದ್ರ ಸಕರ್ಾರ ತನ್ನ ನೌಕರರಿಗೆ ಜಾರಿಗೊಳಿಸಿರುವ ವೇತನ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ರಾಜ್ಯ ಸಕರ್ಾರಿ ನೌಕರರಿಗೂ ಜಾರಿಗೊಳಿಸುವುದು, ಕೇಂದ್ರ ಸಕರ್ಾರಕ್ಕನುಗುಣವಾಗಿ ರಾಜ್ಯ ಸಕರ್ಾರಿ ನೌಕರರಿಗೂ ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಮಂಜೂರು ಮಾಡುವುದು, ವಗರ್ಾವಣೆ ಬಗ್ಗೆ ಕಾಯಿದೆ ರೂಪಿಸುವುದು, ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಸಕರ್ಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಮಾಡುವುದು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಕರ್ಾರಿ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಸುವುದು, ರಾಜ್ಯ ಸಕರ್ಾರಿ ನೌಕರರ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಮೀಸಲಾತಿ ಪಡೆಯಲು ವರಮಾನದ ಮಿತಿ ಬಹಳ ಹಿಂದೆ ನಿಗದಿಪಡಿಸಲಾಗಿದ್ದು ಕೇಂದ್ರ ಸಕರ್ಾರದ ಮಾದರಿಯಲ್ಲಿಯೇ ವರಮಾನ ಮಿತಿ ಹೆಚ್ಚಿಸುವುದು, ಸೇವಾವಧಿಯ ಅಂತಿಮ ವರ್ಷದ ಸೇವೆಯನ್ನು ಪರಿಗಣಿಸಿ ವಾಷರ್ಿಕ ಮುಂಬಡ್ತಿಯನ್ನು ನೀಡುವುದು, ಸ್ಥಗಿತ ವೇತನ ಬಡ್ತಿಗಳನ್ನು ಹೆಚ್ಚಿಸುವುದು, ಸ್ಥಗಿತ ವೇತನ ಮುಂಬಡ್ತಿಗಳನ್ನು ವೇತನ ಶ್ರೇಣಯ ಕೊನೆಯ ಹಂತದ ವಾಷರ್ಿಕ ಮುಂಬಡ್ತಿಯನ್ನು ನೀಡುವುದರ ಬದಲು ಮುಖ್ಯ ವೇತನ ಶ್ರೇಣಿಯನ್ವಯ ನಂತರದ ಮುಂದಿನ ಹಂತಕ್ಕೆ ಸಮನಾದ ಮುಂಬಡ್ತಿಯನ್ನು ನೀಡುವುದು, ಸಕರ್ಾರಿ ನೌಕರರ ತಂದೆ-ತಾಯಿಗಳು ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆಯಲು ನಿಗದಿಪಡಿಸಿದ್ದ 4ಸಾವಿರ ಮಾಸಿಕ ಪಿಂಚಣಿ ನಿರ್ಭಂದವನ್ನು ಸಡಿಲಿಸಿ ಪಿಂಚಣಿ ಪರಿಷ್ಕರಿಸಿದಂತೆ ಅವರ ಮಾಸಿಕ ಆದಾಯವನ್ನು ಪರಿಷ್ಕರಿಸುವುದು ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯ ಸಂದರ್ಭದಲ್ಲಿ ಅವಲಂಬಿತರು ಎಂಬ ಬಗ್ಗೆ ದೃಡೀಕರಣಕ್ಕಾಗಿ ಕುಟುಂಬ ಆಹಾರ ಪಡಿತರ ಚೀಟಿಯನ್ನು ಪರಿಗಣಿಸವುದು ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕಿನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಕೋರಿದ್ದಾರೆ ಹಾಗೂ ಪಟ್ಟಣದ ನೌಕರರು ಮಧ್ಯಾಹ್ನ ಉಪಹಾರದ ಸಮಯದಲ್ಲಿ ಮಾತ್ರ ಬಹಿರಂಗ ಸಭೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
ಕುಪ್ಪೂರ್ ಗೋಪಾಲ್ ನಿಧನಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಶ್ರೀಗಳ ಸಂತಾಪ
ಚಿಕ್ಕನಾಯಕನಹಳ್ಳಿ,ಫೆ.6: ಸ್ವತಂತ್ರ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲ್ ರವರ ನಿಧನಕ್ಕೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಅಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ ಸಂತಾಪ ಸೂಚಿಸಿದ್ದಾರೆ.
ವಿದ್ಯಾಥರ್ಿ ದೆಸೆಯಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಾಭಿಮಾನವನ್ನು ಬೆಳಸಿಕೊಂಡಿದ್ದ ಶ್ರೀಯುತರು ಸ್ವಾತಂತ್ರಾನಂತರದಲ್ಲಿ ಪತ್ರಿಕೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಆಳುವ ವರ್ಗದ ಕಣ್ಣು ತೆರೆಸಿದ್ದ ಇವರ ಸಾಮಾಜಿಕ ಕಾಳಜಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ತಾಲೂಕಿನ ಹಿರಿಯ ಪತ್ರಕರ್ತರ ಗುಂಪಿನಲ್ಲಿ ಕೊನೆಯ ಕೊಂಡಿಯೊಂದು ಕಳಜಿದಂತಾಗಿದೆ ಎಂದಿದ್ದಾರೆ.
60 ವರ್ಷಗಳ ಸುದೀರ್ಘಕಾಲ ಪತ್ರಿಕಾ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ಗೋಪಾಲ್ ಅವರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ದಯಾಮಯನಾದ ಭಗವಂತ ಅವರ ಕುಟುಂಬಕ್ಕೆ ಹಾಗೂ ಅವರ ಹಿತೈಷಿಗಳಿಗೆ ಅವರ ಅಗಲಿಕೆಯ ದುಃಕಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.



ಹಿರಿಯಪತ್ರಕರ್ತ ಕುಪ್ಪೂರು ಗೋಪಾಲ್ರಾವ್ ಇನ್ನಿಲ್ಲ
ಚಿಕ್ಕನಾಯಕನಹಳ್ಳಿ: 06.02.11: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲರಾವ್ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದವರಾಗಿದ್ದು, ಇವರು ವಿದ್ಯಾಭ್ಯಾಸಕ್ಕಾಗಿ ತಿಪಟೂರಿಗೆ ತೆರಳಿ, ಅಲ್ಲಿ ಶ್ರೀ ರಾಮಾಜೋಯಿಸ್ ರವರ ಆಶ್ರಯ ಪಡೆದು, ಅವರು ನಡೆಸುತ್ತಿದ್ದ ಪತ್ರಿಕಾ ಏಜೆನ್ಸಿಯಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ಹಂಚಿಕೊಂಡು ವಿದ್ಯಾಭ್ಯಾಸ ಪಡೆದರು, ಆ ಸಂದರ್ಭದಲ್ಲೇ ಶೇಷಪ್ಪನವರ ಕಿಡಿ ಪತ್ರಿಕೆ ಹಾಗೂ ಗಾಂಧೀಜಿಯವರು ಲೇಖನ ಬರೆಯುತ್ತಿದ್ದ ಹರಿಜನ ಪತ್ರಿಕೆ ಓದುವ ಮುಖಾಂತರ ಪ್ರಭಾವಿತರಾಗಿ ವಿದ್ಯಾಥರ್ಿ ಯೂನಿಯನ್ ಮುಖಂಡರಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟ ಚಳುವಳಿಗೆ ಧುಮುಕಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಬಂಧನಕ್ಕೊಳಗಾದರು ಬಾಲಕ ಎಂಬ ಕಾರಣಕ್ಕೆ ಬ್ರಿಟಿಷ್ ಸಕರ್ಾರ ಬಂಧಿಸುತ್ತಿರಲಿಲ್ಲ, ಆನಂತರ ಇವರು ಜವಾಬ್ದಾರಿ ಸಕರ್ಾರ ರಚನೆಯ ಸಂದರ್ಭದಲ್ಲಿ ಮರು ಹೋರಾಟಕ್ಕೆ ಧುಮುಕಿದಾಗ ತಿಪಟೂರಿನಲ್ಲಿ ಬಂಧಿಸಿ ಇವರನ್ನು ಬೆಂಗಳೂರಿನ ಕಾರಾಗೃಹದಲ್ಲಿ 45 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ಈ ಸಂದರ್ಭದಲ್ಲಿ ಹೆಚ್. ಎಸ್. ದೊರೆ ಸ್ವಾಮಿ ಹಾಗೂ ಎಂ. ಎಸ್. ಹನುಮಂತರಾವ್ ರವರ ಪರಿಚಯ ಪಡೆದು ಇನ್ನು ಉತ್ಸಾಹದಿಂದ ಹೋರಾಟ ನಡೆಸಿದವರು. ಇವರು ವಿದ್ಯಾಥರ್ಿ ಜೀವನದ ನಂತರ ಬದುಕಿಗಾಗಿ ಚಿಕ್ಕನಾಯಕನಹಳ್ಳಿಯನ್ನು ಹರಸಿ ಬಂದ ಇವರು, ವೃತ್ತಿಯಲ್ಲಿ ಬಸ್ ಎಜೆಂಟ್, ಬೀಡಾ ಅಂಗಡಿ, ಚಿಲ್ಲರೆ ವ್ಯಾಪಾರ, ಗೃಹ ಕೈಗಾರಿಕೆ ವಸ್ತು ತಯಾರಿಕೆಯ ಮೂಲಕ ಪತ್ರಿಕಾ ಜೀವನಕ್ಕೆ ಧುಮುಕಿ ಪ್ರಜಾವಾಣಿ ಪತ್ರಿಕೆಯ ಪ್ರತಿನಿಧಿಯಾಗಿ 60 ವರ್ಷಗಳ ಕಾಲ ಸೇವೆ ಸಲ್ಲಿಸಿ, 50 ವರ್ಷಗಳ ಕಾಲ ಇದೇ ಪತ್ರಿಕೆ ವರದಿಗಾರರಾಗಿ ಇವರ ನಿರಂತರ ಸೇವೆಯ ಮುಖಾಂತರ ಹೆಚ್ಚು ಮನ್ನಣೆಗೆ ಒಳಗಾದವರು. ಪಾಮರ ಎಂಬ ನಾಮಧೇಯದಲ್ಲಿ ಹಲವು ಪತ್ರಿಕೆಗಳಿಗೆ ಕವನಗಳನ್ನು ಬರೆದಿದ್ದಾರೆ. ನೆಹರು ಕುಟುಂಬಕ್ಕೆ ನಿಷ್ಠರಾಗಿದ್ದುಕೊಂಡು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದಶರ್ಿಯಾಗಿ ಸೇವೆ ಮಾಡಿ ಕಾಂಗ್ರೆಸ್ ಅನ್ನು ಸುಭದ್ರವಾಗಿ ಕಟ್ಟಿ ಬೆಳೆಸಿದವರು.
ಇವರು ತಾಲ್ಲೂಕಿನ ಟೌನ್ ಕೋ-ಆಪರೇಟೀವ್ ಬ್ಯಾಂಕ್, ಗೃಹ ನಿಮರ್ಾಣ ಸಹಕಾರಿ ಸಂಘ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿಯೂಕಾಡ ಸೇವೆ ಸಲ್ಲಿಸಿದ್ದರು, ಕೈಗಾರಿಕ ಸಹಕಾರಿ ಸಂಘ, ದೇಶೀಯ ವಿದ್ಯಾಪೀಠ ಪ್ರೌಢಶಾಲೆ, ತಾಲ್ಲೂಕು ಕೃಷಿಕ ಸಮಾಜ. ಇವುಗಳಲ್ಲಿ ನಿದರ್ೇಶಕರಾಗಿ ಸೇವೆ ಸಲ್ಲಿಸದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂಘದ ಹಾಲಿ ಅಧ್ಯಕ್ಷರಾಗಿದ್ದರು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದರಲ್ಲದೆ, ಪುರಸಭೆಯ ನಾಮಿನಿ ಸದಸ್ಯರಾಗಿದ್ದರು. ಇವರು ದಿ|| ಮಾಜಿ ಶಾಸಕರಾದ ಸಿ.ಕೆ. ರಾಜಯ್ಯ ಶೆಟ್ಟಿ, ದಿ|| ಮಾಜಿ ಸಚಿವ ಎನ್ ಬಸವಯ್ಯ, ಮಾಜಿ ಶಾಸಕ ಬಿ ಲಕ್ಕಪ್ಪ ಇವರ ನಿಕಟವತರ್ಿಯಾಗಿದ್ದರು ಮೃತರು ಪತ್ನಿ ರಾಧಾಲಕ್ಷ್ಮಿ, 4ಜನ ಮಕ್ಕಳಾದ ರಾಜೇಂದ್ರ, ಚಿದಾನಂದ, ಭಾಸ್ಕರ, ರಾಜೀವಲೋಚನ, 4 ಸಹೋದರರು, 3ಸಹೋದರಿಯರು, 8 ಮೊಮ್ಮಕ್ಕಳು ಅಲ್ಲದೇ ಅಪಾರ ಬಂಧುಗಳನ್ನು ಅಗಲಿದ್ದಾರೆ.
ತಾಲ್ಲೂಕ ಆಡಳಿತ ವತಿಯಿಂದ ಕಂದಾಯ ನಿರೀಕ್ಷಕ ಚಿಂತಾಮಣಿ ಗೌರವ ವಂದನೆ ಸಲ್ಲಿಸಿದರು. ಮೃತರ ಅಂತಿಮ ದರ್ಶನವನ್ನು ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಬಿ.ಲಕ್ಕಪ್ಪ, ತಾಲೂಕು ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಸ್ವತಂತ್ರ ಹೋರಾಟಗಾರ ಕಲ್ಲೇನಹಳ್ಳಿ ಶಿವಣ್ಣ, ಪುರಸಭಾ ಅಧ್ಯಕ್ಷ ರಾಜಣ್ಣ, ಸಿ. ಎಸ್. ರಮೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್. ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಬಸವರಾಜು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಕ್ಯಾಪ್ಟನ್ ಸೋಮಶೇಖರ್, ಎಸ್.ಆರ್.ಎಸ್ ಸಹಕಾರ ಸಂಘದ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್, ಕೃಷಿಕ ಸಮಾಜದ ಕಾರ್ಯದಶರ್ಿ ರಂಗನಕೆರೆ ಮಹೇಶ್ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಸಂತಾಪ ಸೂಚಿಸಿತು ಹಾಗೂ ತಾಲ್ಲುಕಿನ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಇವರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆಯನ್ನು ಪಟ್ಟಣದ ಹೊರವಲಯದ ಬ್ರಾಹ್ಮಣ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ ರಕ್ಷಣಾ ವೇದಿಕೆ
ಚಿಕ್ಕನಾಯಕನಹಳ್ಳಿ, ಫೆ.6: ನಾಡಿನಲ್ಲಿ ಕನ್ನಡದ ಜಾತ್ರೆ ನಡೆಯುವ ಸಂದರ್ಭದಲ್ಲಿ ತೆಲಗು ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ಚಿತ್ರ ಮಂದಿರದ ಬಳಿ ಪ್ರತಿಭಟಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕನ್ನಡ ಚಿತ್ರ ಪ್ರದರ್ಶನಗೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ನಾಡಿನಲ್ಲಿ ಕನ್ನಡ ಜಾತ್ರೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಮಂದಿರವೊಂದು ಶನಿವಾರ ರಾತ್ರಿ ಎರಡನೇ ಪ್ರದರ್ಶನಕ್ಕೆ ತೆಲಗು ಚಿತ್ರ ಪ್ರದಶರ್ಿಸಲು ಮುಂದಾಗಿರುವುದನ್ನು ಮನಗಂಡ ಕನ್ನಡ ಪರ ಸಂಘಟನೆಗಳು ಚಿತ್ರ ಮಂದಿರದ ಬಳಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಚಿತ್ರ ಮಂದಿರವನ್ನು ಗುತ್ತಿಗೆ ಪಡೆದಿದ್ದವರು ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರಾದರೂ, ಅಂತಿಮವಾಗಿ ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿ ಕನ್ನಡ ಚಿತ್ರವಾದ ಮೈಲಾರಿಯನ್ನು ಪ್ರದಶರ್ಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಸಿ.ಟಿ.ಗುರುಮೂತರ್ಿ, ನಿಂಗರಾಜು ಎಸ್.ಎಂ., ವಾಸು, ಸಿ.ಡಿ.ಸುರೇಶ್, ಸಿ.ಎನ್.ಮೋಹನ್ ಶಾಸ್ತ್ರಿ, ಪುರುಷೋತ್ತಮ್ ಭಾಗವಹಿಸಿದ್ದರು.
ಚಿ.ಮೂ. ಗೌರವ ಡಾಕ್ಟರೇಟ್ಗೆ ಅರ್ಹ ವಿದ್ವಾಂಸ: ಎಂ.ವಿ.ಎನ್. ಚಿಕ್ಕನಾಯಕನಹಳ್ಳಿ,ಫೆ.6: ಹಿರಿಯ ಸಂಶೋಧಕ, ಕನ್ನಡ ಸರಸ್ವತಾ ಲೋಕದ ಗಣ್ಯ ಎಂ.ಚಿದಾನಂದ ಮೂತರ್ಿಯವರಿಗೆ ಗೌರವ ಡಾಕ್ಟರೇಟ್ ನಿಡಲು ಅಡ್ಡಿಪಡಿಸಿದ ರಾಜ್ಯಪಾಲರ ಕ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಾಡಿನ ಹೆಸರಾಂತ ವಿದ್ವಾಂಸ ಹಾಗೂ ಹಿರಿಯ ಸಂಶೋಧಕ ಎಂ.ಚಿದಾನಂದ ಮೂತರ್ಿಯವರಿಗೆ ಬೆಂಗಳೂರು ವಿ.ವಿ.ಯ ಸಿಂಡಿಕೇಟ್ ಸಭೆ ಗೌರವ ಡಾಕ್ಟರೇಟ್ ನೀಡುವ ಸಂಬಂಧ ನಿರ್ಣಯವೊಂದನ್ನು ಕೈಗೊಂಡು ಅದನ್ನು ರಾಜ್ಯಪಾಲರ ಅನುಮೋದನೆ ಕಳುಹಿಸಿದ ಸಂದರ್ಭದಲ್ಲಿ ರಾಜ್ಯಪಾಲರ ಕಛೇರಿ ಅವರಿಗೆ ಡಾಕ್ಟರೇಟ್ ಗೌರವವನ್ನು ನೀಡಲು ಅನುಮತಿಸದ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಕನ್ನಡ ಭಾಷೆಗೆ ನೀಡಿದ ಸೇವೆ ಮುಖ್ಯವೇ ಹೊರತು, ಅವರ ವೈಚಾರಿಕ ವಿಚಾರ ಪ್ರಧಾನವಲ್ಲ, ಸಾಹಿತ್ಯ ಲೋಕದಲ್ಲಿ ವೈಚಾರಿಕ ಬಿನ್ನಭಿಪ್ರಾಯಗಳು ಸಹಜ ಅದನ್ನೇ ಮುಂದಿಟ್ಟುಕೊಂಡು ಈ ರೀತಿಯ ತೀಮರ್ಾನವನ್ನು ರಾಜ್ಯಪಾಲರ ಕಛೇರಿ ಕೈಗೊಂಡಿದ್ದರೆ ಅದು ಸರ್ವತ ಅಕ್ಷಮ್ಯವೆಂದಿದ್ದಾರೆ.

Saturday, February 5, 2011

Friday, February 4, 2011

ಚಿಕ್ಕನಾಯಕನಹಳ್ಳಿ,ಫೆ.03: ತಾಲೂಕು ಪಂಚಾಯ್ತಿಯಲ್ಲಿ ಪಕ್ಷ ಭೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಶ್ಲಾಘಿಸಿದರು.
ಬುಧವಾರ ತಾಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ಕಳೆದ ಬಾರಿಯಾಗಿ ಅವಧಿ ಮುಕ್ತಾಯವಾದ 19ಜನ ತಾ.ಪಂ.ಸದಸ್ಯರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಸಮಸ್ಯೆ ಬಂದರು ಪಕ್ಷಬೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಕಡಿಮೆ ಅನುದಾನದಲ್ಲೂ ತಮ್ಮ ಕೈಲಾದ ಸೇವೆ ಜನತೆಗೆ ಮಾಡಿದ್ದೀರಿ ಅಧಿಕಾರವಿದ್ದಾಗ ಸಾರ್ವಜನಿಕ ಕೆಲಸ ಮಾಡುವುದು ಮುಖ್ಯವಲ್ಲ ಅಧಿಕಾರದ ನಂತರ ಜನರ ಸೇವೆ ಮಾಡುವುದು ಮುಖ್ಯ, ಎಂದ ಅವರು ಮುಂದೆ ಬರುವ ತಾ.ಪಂ.ಸದಸ್ಯರು ಎಲ್ಲರ ಜೊತೆಗೂಡಿ ಹೊಂದಣಿಕೆ ಮಾಡಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನ್ಯಯ ಮಾತನಾಡಿ ಕಳೆದ ಸಕರ್ಾರ ತಾ.ಪಂ.ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿದ್ದರೂ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕು ಅಭಿವೃದ್ದಿಗೆ ಶ್ರಮಿಸಿದ್ದೇವೆ ಎಂದ ಅವರು ಸದಸ್ಯರಿಂದ ಅಧಿಕಾರಿಗಳ ಬಗ್ಗೆ ಕಠಿಣವಾಗಿ ವತರ್ಿಸಿದರೆ ಕ್ಷಮೆ ಇರಲಿ, ನಾವು ಅಭಿವೃದ್ದಿಗೆ ಕಾರ್ಯಕಗಳಿಗೆ ಮಾತ್ರ ಕಠಿಣವಾಗಿ ವತರ್ಿಸುತ್ತಿದ್ದೆವೆ ಹೊರತು ನಿಮ್ಮ ಬಗ್ಗೆ ನಮಗೆ ದ್ವೇಶ ಇರಲಿಲ್ಲ ಎಂದರು.
ಮಾಜಿ ಅಧ್ಯಕ್ಷೆ ಶಾರದ ಸೀತರಾಮಯ್ಯ ಮಾತನಾಡಿ ಕಳೆದ ಬಾರಿ ನಾವು ತಾ.ಪಂ.ಗೆ ಆಯ್ಕೆಯಾದ ಸಂದರ್ಭದಲ್ಲಿ ತಾಲೂಕನ್ನು ಅಭಿವೃದ್ದಿ ಮಾಡಬೇಕು, ಜನತೆಯ ಸಮಸ್ಯೆಗಳನ್ನು ಈಡೇರಿಸಬಹುದು ಎಂದು ಅಧಿಕಾರಕ್ಕೆ ಬಂದಿದ್ದು ಸಕರ್ಾರ ತಾ.ಪಂ.ಗಳಿಗೆ ಅನುದಾನ ಬಿಡುಗಡೆ ಮಾಡದೆ ಇದ್ದುದನ್ನು ನೋಡಿ ನಮಗೆ ನಿರಾಸೆಯಾಯಿತು ಎಂದ ಅವರು ಸಕರ್ಾರ ಹಣ ಬಿಡುಗಡೆ ಮಾಡುವಂತೆ ಅನೇಕ ಬಾರಿ ರಾಜ್ಯ ಮಟ್ಟದಲ್ಲಿ ಎಲ್ಲಾ ತಾ.ಪಂ.ಸದಸ್ಯರು ಹೋರಾಟ ಮಾಡಿದರೂ ಏನು ಪ್ರಯೋಜನವಾಗಲಿಲ್ಲ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಇ.ಓ ದಯಾನಂದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ಪಿ.ರವಿಪ್ರಸಾದ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.





Wednesday, February 2, 2011





ರೈತರು ತಮ್ಮ ಹೆಸರಗಳನ್ನು ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಲು ಸೂಚನೆ
ಚಿಕ್ಕನಾಯಕನಹಳ್ಳಿ. ಫೆ.2: ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ದೊರೆಯುವ ಸವಲತ್ತುಗಳನ್ನು ನೀಡಲು ತಾಲ್ಲೂಕಿನಾದ್ಯಂತ ಇರುವ ರೈತರ ಸಮಗ್ರ ಮಾಹಿತಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ನಲ್ಲಿ ದಾಖಲಿಸುವ ಈ ಕಾರ್ಯವನ್ನು ಉಚಿತವಾಗಿ ಇಲಾಖೆ ಕೈಗೊಂಡಿದ್ದು, ರೈತರಿಗೆ ಯಾವುದೇ ಆಥರ್ಿಕ ಹೊರೆ ಇರುವುದಿಲ್ಲ, ಆದ್ದರಿಂದ ಎಲ್ಲಾ ರೈತಬಾಂಧವರು ಇಲಾಖೆಯಲ್ಲಿ ಮುಂದೆ ಸಕರ್ಾರ ನೀಡುವ ಸವಲತ್ತುಗಳನ್ನು ಪಡೆಯಲು ತಮ್ಮ ಹೆಸರಗಳನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಮೊದಲ ಹಂತವಾಗಿ ತಾಲೂಕಿನ ಕಸಬ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಣಿ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದಿರುವ ಅವರು, ಸಂಬಂಧಪಟ್ಟ ಹೋಬಳಿಯ ರೈತರುಗಳು ತಮ್ಮ ಜಮೀನಿನ (ಪಟ್ಟೆ ಪಹಣಿ ಜಮೀನಿಗೆ ಸೇರಿದ) ದಾಖಲಾತಿಗಳನ್ನು ತಂದು ದಾಖಲಿಸುವಂತೆ ಸಹಾಯಕ ಕೃಷಿ ನಿದರ್ೇಶಕರು ಮನವಿ ಮಾಡಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಇಲಾಖೆಯ ಯಾವುದೇ ಸವಲತ್ತುಗಳನ್ನು ಈ ದಾಖಲೆಯ ಆಧಾರದ ಮೇಲೆ ವಿತರಣೆ ಕೈಗೊಳ್ಳುವುದರಿಂದ ಸದರಿ ಪ್ರ್ರಕ್ರಿಯೆಯನ್ನು ಅರಿತು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.
ಗ್ರಾಮಸ್ಥರ ಮನವಿಗೆ ಶೀಘ್ರ ಸ್ಪಂಧಿಸಿದ ತಹಶೀಲ್ದಾರ್ರವರೆಗೆ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಫೆ.2: ತಾಲೂಕಿನ ಶೆಟ್ಟೀಕೆರೆಯ ಗ್ರಾಮಸ್ಥರ ಮನವಿಯ ಮೇರೆಗೆ ಸ್ಥಳಕ್ಕೆ ಆಗಮಿಸಿ ದೊಡ್ಡಕೆರೆ ತೂಬನ್ನೆತ್ತಲು ಅವಕಾಶ ಮಾಡಿಕೊಟ್ಟ ತಹಶೀಲ್ದಾರ್ ಟಿ.ಸಿ.ಕಾಂತರಾಜು ರವರ ಕಾರ್ಯಶೈಲಿಗೆ ಶೆಟ್ಟೀಕೆರೆ ಗ್ರಾ.ಪಂ. ಅಧ್ಯಕ್ಷ ಶಶಿಧರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಶೆಟ್ಟೀಕೆರೆ ದೊಡ್ಡಕೆರೆ ತುಂಬಿ ಕಾಲುವೆಯಲ್ಲಿ ಸೀಪೆಜ್ ಹೋಗುತ್ತಿದ್ದು, ತೂಬನ್ನೆತ್ತಲು ಗ್ರಾಮಸ್ಥರು ಹಲವು ಸಲ ಸಕರ್ಾರದ ಮೊರೆಹೊಗಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆಯ ಅಚ್ಚುಕಟ್ಟುದಾರರು ಹಾಗೂ ಗ್ರಾಮಸ್ಥರು ಕೆರೆಯ ಕಾಲುವೆಯ ಬಳಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ತಹಶೀಲ್ದಾರ್ರವರು ಆಗಮಿಸಿ ತೂಬೆತ್ತಲು ಅವಕಾಶ ಕೊಡುವವರೆಗೆ ಸ್ಥಳವನ್ನು ಬಿಟ್ಟು ಕದಲುವುದಿಲ್ಲವೆಂದು ಹಠ ಹಿಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಾಂತರಾಜು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಶಶಿಧರ್ ಈ ಭಾಗದಲ್ಲಿ 250 ಹೆಕ್ಟೇರ್ಗೂ ಅಧಿಕ ಜಮೀನಿನ ರೈತರು ಈ ಕೆರೆಯ ತೊಬನ್ನೆತ್ತುವುದರಿಂದ ಭತ್ತ ಬೆಳೆಯಲು ಅವಕಾಶವಾಗುತ್ತದೆ, ಯಾರದೋ ಕೆಲವೇ ಬೆರಳಿಕೆಯಷ್ಟು ಜನರ ಹಿತಾಸಕ್ತಿಗೋಸ್ಕರ ನೂರಾರು ಜನರಿಗೆ ಆಗುವ ಅನುಕೂಲವನ್ನು ತಪ್ಪಿಸುವುದು ಸರಿಯಲ್ಲ, ನಮ್ಮ ಮನವಿಯನ್ನು ಪರಿಗಣಿಸಿ ತೊಬನ್ನೆತ್ತಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರ ಹಾಗೂ ಕೆರೆ ಅಚ್ಚುಕಟ್ಟುದಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರವರು, ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಈ ನೀರು ಬಳಕೆಯ ಬಗ್ಗೆ ತೀಮರ್ಾನಿಸಲು ಎ.ಸಿ.ಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ಇದೆ, ಆ ಸಮಿತಿಯ ಸದಸ್ಯನಾಗಿರುವ ನಾನು, ಸಮಿತಿಯ ತೀಮರ್ಾನದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ತಕ್ಷಣವೇ ಪ್ರತಿಭಟನಾಕಾರರು ತಿಪಟೂರು ಎ.ಸಿ.ಯವರನ್ನು ದೂರವಾಣಿಯಲ್ಲಿ ಸಂಪಕರ್ಿಸಿದ ಹಿನ್ನೆಲೆಯಲ್ಲಿ ಎ.ಸಿ.ಯವರು ಜಿಲ್ಲಾಧಿಕಾರಿಗಳ ಸಭೆಯೊಂದರ ನಡಾವಳಿಯಂತೆ ತಹಶೀಲ್ದಾರ್ರವರೆಗೆ ಸೂಚಿಸಿದ್ದಾರೆ. ತಹಶೀಲ್ದಾರ್ರವರು ಅಚ್ಚುಕಟ್ಟುದಾರರು ಕೆರೆ ನೀರನ್ನು ಉಪಯೋಗಿಸಿಕೊಳ್ಳಲು ತಿಳಿಸಿದ್ದಾರೆ.
ಈ ಕೆರೆಯ ಕಾಲುವೆಯ ದುರಸ್ಥಿಗಾಗಿ ತಂದಿದ್ದ ಪರಿಕರಗಳನ್ನು ಕಿಡಿಗೇಡಿಗಳು ಕದ್ದು ಹೋಯ್ದಿದ್ದಾರೆಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ತಹಶೀಲ್ದಾರ್ರವರೆಗೆ ದೂರಿದರು.
ತಹಶೀಲ್ದಾರ್ರವರ ಶೀಘ್ರ ಸ್ಪಂದನೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ, ಈ ಪ್ರತಿಭಟನೆಯಲ್ಲಿ ಭೈರೇಶ್, ಅರುಣ, ರಾಮಕೃಷ್ಣ ಜೋಯಿಸ್, ತೋಂಟಧಾರ್ಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.


Tuesday, February 1, 2011




ತು.ಹಾ.ಒಕ್ಕೂಟಕ್ಕೆ ಮೂರು ತಿಂಗಳಲ್ಲಿ 3.89 ಕೋಟಿ ಲಾಭ
ಚಿಕ್ಕನಾಯಕನಹಳ್ಳಿ,ಫೆ.01: ತುಮಕೂರು ಹಾಲು ಒಕ್ಕೂಟದ ಕಳೆದ ತ್ರೈಮಾಸಿಕ ವಹಿವಾಟಿನಲ್ಲಿ ಸುಮಾರು 3.89 ಕೋಟಿ ಲಾಭ ಬಂದಿದೆ ಎಂದು ಹಾಲು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೆಚ್.ಬಿ.ಶಿವನಂಜಪ್ಪ ಹಳೇಮನೆ ತಿಳಿಸಿದರು.
ತಾಲೂಕಿನ ಬೆನಕನಕಟ್ಟೆ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಅಳೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷನಾಗಿ ಎರಡನೇ ಬಾರಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಆರಂಭದ ತಿಂಗಳಲ್ಲೇ ಒಕ್ಕೂಟಕ್ಕೆ 1.40ಕೋಟಿ ಲಾಭ ಬಂದಿತು. ನಂತರ ನವೆಂಬರ್ನಲ್ಲಿ ಒಂದು ಕೋಟಿ ಲಾಭ ಬಂದಿದೆ, ಡಿಸೆಂಬರ್ನಲ್ಲಿ 45ಲಕ್ಷ ಲಾಭ ತಂದು ಕೊಡುವ ಮೂಲಕ ತುಮಕೂರು ಹಾಲು ಒಕ್ಕೂಟ ಲಾಭದಾಯಕ ಒಕ್ಕೂಟವಾಗುವಲ್ಲಿ ನಮ್ಮೆಲ್ಲ ನಿದರ್ೇಶಕರ ಸಹಕಾರ ಮಹತ್ವ ಪೂರ್ಣವಾದದ್ದು ಎಂದರು.
ಗ್ರಾಮೀಣ ಭಾಗದಲ್ಲಿ ಹಾಲು ಉತ್ಪಾದನೆ ಒಂದು ಉದ್ಯಮವಾಗಿ ಬೆಳೆದಿದ್ದು, ತೋಟಕ್ಕೆ ಬಂಡವಾಳ ಹಾಕುವುದಕ್ಕಿಂತ ಸೀಮೆ ಹಸು ಮೇಲೆ ಬಂಡವಾಳ ಹೂಡುವುದು ಹೆಚ್ಚು ಲಾಭದಾಯಕ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ ಎಂದರಲ್ಲದೆ, ಹಾಲು ಉತ್ಪಾದಕರು ತಮ್ಮ ಗ್ರಾಮಗಳಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಮೂಲಕ ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಸ್ಥಳೀಯವಾಗಿ ದೊರೆಯುವಂತೆ ಮಾಡಿಕೊಳ್ಳಲು ಮುಂದಾಗುವಂತೆ ಸಲಹೆ ನೀಡಿದರು.
ಪ್ರಸ್ತುತ ಚಿಕ್ಕನಾಯಕನಹಳ್ಳಿಯಲ್ಲಿ 86 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಈ ಸಂಖ್ಯೆಯನ್ನು ಅಧಿಕಗೊಳಿಸಬೇಕಾಗಿದೆ ಎಂದರಲ್ಲದೆ, ನನ್ನ ಅಧ್ಯಕ್ಷಾವಧಿ ಮುಗಿಯುವುದರೊಳಗೆ ಈ ತಾಲೂಕಿನಲ್ಲಿ 101 ಸಂಘಗಳನ್ನು ಸ್ಥಾಪಿಸಬೇಕೆಂಬ ಹಂಬಲ ಹೊಂದಿದ್ದೇನೆ ಎಂದರು.
ಹಸುಗಳಿಗೆ ನೀಡುವ ಆಹಾರದಲ್ಲಿ ಹಸಿರು ಮೇವಿಗೆ ಹೆಚ್ಚು ಒತ್ತು ನೀಡಿ, ಅದರ ಜೊತೆಗೆ ಅಜೋಲಾವನ್ನು ಹಸುಗಳಿಗೆ ನೀಡಿ ಎಂದರಲ್ಲದೆ, ಬೂಸದ ಉತ್ಪಾದನೆ ಕಡಿಮೆಯಾಗಿರುವುದರಿಂದ ಅದರ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಶೆಟ್ಟಿಕೆರೆ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ ಮಾತನಾಡಿ, ಹಾಲು ಉತ್ಪಾದಕರ ಸಂಘದ ಅಳಿವು-ಉಳಿವು ಉತ್ಪಾದಕರ ಕೈಯಲ್ಲಿದ್ದು ಯಾವ ಸಂಘ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ ಅಂತಹ ಸಂಘ ಅಭಿವೃದ್ದಿ ಶೀಲವಾಗಿರುತ್ತದೆ ಎಂದರು. ನಾನು ಸಹ ಆರಂಭದಲ್ಲಿ ಹಾಲುಗೊಣ ಹಾಲು ಉತ್ಪಾದಕರ ಸಂಘದ ಕಾರ್ಯದಶರ್ಿಯಾಗಿ ದುಡಿದ ಅನುಭವವನ್ನು ಹಂಚಿಕೊಂಡರು.
ಬೆನಕನಕಟ್ಟೆ ಗ್ರಾಮ ನನ್ನ ರಾಜಕೀಯ ಬೆಳವಣಿಗೆಗೆ ಸ್ಪಂದಿಸಿದೆ, ಚುನಾವಣೆಗೆ ಮುನ್ನ ನಾನು ಈ ಊರಿಗೆ ಭೇಟಿ ನೀಡಿದಾಗ, ಊರಿನ ಕೆರೆಯ ಅಭಿವೃದ್ದಿ ಬಗ್ಗೆ ಹಾಗೂ ಅಲ್ಲಿಗೆ ಮಲ್ಲಿಕಾಜರ್ುನ ಸ್ವಾಮಿ ಬೆಟ್ಟದಿಂದ ನೀರು ಹರಿಸುವ ಬಗ್ಗೆ ಗ್ರಾಮಸ್ಥರು ಚಚರ್ಿಸಿದ್ದರು, ಆ ದಿನ ನಾನು ಏನು ಮಾತು ಕೊಟ್ಟಿದ್ದೆನೋ, ಅದೇ ಮಾತಿಗೆ ಇಂದು ಕಟಿಬದ್ದನಾಗಿದ್ದೇನೆ. ಗ್ರಾಮಸ್ಥರೆಲ್ಲಾ ಯಾವ ಸಂದರ್ಭದಲ್ಲೇ ಈ ಕಾರ್ಯಕ್ಕೆ ಕೈಯಾಕಿದರು ನಾನು ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದರು. ಈ ಗ್ರಾಮದ ಆಂಜನೇಯ ದೇವಸ್ಥಾನ ಜೀಣರ್ೋದ್ದಾರ ಕಾರ್ಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತು.ಹಾ.ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸುಬ್ರಾಯ್ಭಟ್ರು ಮಾತನಾಡಿ, ಹಸು ಸಾಕುವವರು ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಹಸುಗಳಿಗೆ ಕಾಲಕಾಲಕ್ಕೆ ಚುಚ್ಚು ಮದ್ದುಗಳನ್ನು ಹಾಕಿಸುವುದರ ಕಡೆ ಹೆಚ್ಚು ಗಮನ ನೀಡಿದರೆ ಹಸುಗಳು ಆರೋಗ್ಯ ಪೂರ್ಣವಾಗಿರುವುದರ ಜೊತೆಗೆ ಹೆಚ್ಚು ಹಾಲು ಕೊಡುವ ಮೂಲಕ, ಹೆಚ್ಚು ಆದಾಯವನ್ನು ತಂದು ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ, ನಮ್ಮೂರಿನ ಹಲವು ದಿನಗಳ ಬೇಡಿಕೆಯಾಗಿದ್ದ ಹಾಲಿನ ಕೇಂದ್ರ ಆರಂಭಗೊಂಡಿರುವುದು ನಮಗೆಲ್ಲಾ ಹರ್ಷ ತಂದಿದೆ ಎಂದರಲ್ಲದೆ, ಈ ಸಂಘದ ಅಭಿವೃದ್ದಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ದೊರೆಯುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ನಮ್ಮ ಪಂಚಾಯಿತಿ ಮುಂದಾಗುವುದಾಗಿ ತಿಳಿಸಿದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಂಗಾಧರಪ್ಪ, ತು.ಹಾ.ಒಕ್ಕೂಟದ ವಿಸ್ತರಣಾಧಿಕಾರಿ ಎ.ಪಿ.ಯರಗುಂಟಪ್ಪ ಕುಪ್ಪೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಬಿ.ಬಿ.ಕೃಷ್ಣಮೂತರ್ಿ, ಕಾರ್ಯದಶರ್ಿ ಕೆ.ಎಂ.ಕುಮಾರಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಪ್ಪೂರು ತಾ.ಪಂಸದಸ್ಯೆ ಚಿಕ್ಕಮ್ಮಗಂಗಾಧರಪ್ಪ, ಗ್ರಾ.ಪಂ.ಸದಸ್ಯರುಗಳಾದ ಬಿ.ಆರ್.ಕೃಷ್ಣಮೂತರ್ಿ, ಪೂಣರ್ಿಮ ಆನಂದ್. ಉಮೇಶ್, ಕುಪ್ಪೂರು ಗದ್ದಿಗೆ ಮಠದ ಏಜೆಂಟ್ ವಾಗೀಶ್ ಪಂಡಿತಾರಾಧ್ಯ, ಕುಪ್ಪೂರು ಹಾ.ಉ.ಸ.ಸಂಘದ ಅಧ್ಯಕ್ಷ ಗೋವಿಂದಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಂಘದ ಕಾರ್ಯದಶರ್ಿ ಬಿ.ಸಿ.ವೆಂಕಟೇಶ್ ಮೂತರ್ಿ ಸ್ವಾಗತಿಸಿ, ಶಿಕ್ಷಕ ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿ ವಂದಿಸಿದರು.


ಅಲ್ಪಸಂಖ್ಯಾತರ ಮಕ್ಕಳು ಗೈರು ಹಾಜರಾದರೆ ಶಿಕ್ಷಕರೆ ಹೊಣೆ
ಚಿಕ್ಕನಾಯಕನಹಳ್ಳಿ.ಫೆ.02: ಅಲ್ಪಸಂಖ್ಯಾತ ವರ್ಗಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಹೆಚ್ಚು ಜವಬ್ದಾರಿ ಹೊರಬೇಕೆಂದು ತುಮಕೂರು ದಕ್ಷಿಣ ಜೆಲ್ಲೆಯ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಮೋಹನ್ಕುಮಾರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಅಲ್ಪಸಂಖ್ಯಾತರ ಮಕ್ಕಳ ನಾವಿನ್ಯಯುತ ಕಾರ್ಯಕ್ರಮದ ಅಂಗವಾಗಿ ನಡೆದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಮಕ್ಕಳು ಶಾಲೆಗೆ ಗೈರು ಹಾಜರಾಗುವ ಪ್ರಮಾಣ ಹೆಚ್ಚುತ್ತಿದೆ, ಇಂತಹ ಮಕ್ಕಳ ಗೈರು ಹಾಜರಿಯನ್ನು ತಪ್ಪಿಸಲು ಸಕರ್ಾರ ಹಲವು ಉತ್ತೇಜಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವರ ಗೈರು ಹಾಜರಿ ತಪ್ಪಿಸಲು ಪ್ರಯತ್ನಿಸುತ್ತಿದೆ, ಇದಕ್ಕೆ ಈ ವರ್ಗದ ಶಿಕ್ಷಕರ ಪ್ರಯತ್ನವೂ ಬಹಳ ಮುಖ್ಯ ಎಂದರು.
ಅಲ್ಪಸಂಖ್ಯಾತರ ಶಾಲೆಗಳಲ್ಲಿ ವಿಜ್ಞಾನ ಉಪಕರಣ ಕೊಳ್ಳಲು ತಾಲೂಕಿಗೆ ಒಂದು ಲಕ್ಷರೂಗಳನ್ನು ನೀಡಲಾಗಿದೆ ಎಂದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳ ಶಿಕ್ಷಕರು ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ತಾವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕೆಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳಲ್ಲಿನ ಶಿಕ್ಷಕರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಗೈರು ಹಾಜರಿಯನ್ನು ಕಡಿಮೆ ಮಾಡಬೇಕು, ಹಾಗೂ ಪ್ರತಿ ಮನೆಗೆ ಭೇಟಿ ನೀಡಿ ದಾಖಲಾಗದ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿಯನ್ನು ನಿರ್ವಹಿಸಬೇಕು, ಅಲ್ಪಸಂಖ್ಯಾತರ ಶಾಲೆಗಳಿರುವ ಸ್ಥಳಗಳಲ್ಲಿ ದಾಖಲಾಗದ ಹಾಗೂ ದೀರ್ಘಕಾಲದ ಮಕ್ಕಳು ಕಂಡುಬಂದರೆ ಆ ಶಾಲೆಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದರ್ು ಸಿ.ಆರ್.ಪಿ. ಅಪ್ರೋಜ್ ಉನ್ನೀಸಾ ಪ್ರಾಥರ್ಿಸಿದರೆ, ಬಿ.ಆರ್.ಸಿ.ಸುಧಾಕರ್ ಸ್ವಾಗತಿಸಿದರು, ದುರ್ಗಯ್ಯ ನಿರೂಪಿಸಿ, ಪುಟ್ಟಮಾದಯ್ಯ ವಂದಿಸಿದರು.


Monday, January 31, 2011

ಬಡವರ್ಗದ ಜನರಿಗೆ ಉಚಿತ ಕಾನೂನು ನೆರವು ಮಾಹಿತಿ: ಜಿ.ಎಂ.ಶೀನಪ್ಪ
ಚಿಕ್ಕನಾಯಕನಹಳ್ಳಿ,ಜ.31: 50 ಸಾವಿರಕ್ಕಿಂತ ಕಡಿಮೆ ಆದಾಯವಿರುವಂತಹ ಸಾರ್ವಜನಿಕರು ಕಾನೂನು ಅಧಿಕಾರದ ಪ್ರಾಧಿಕಾರಕ್ಕೆ ಅಜರ್ಿ ಸಲ್ಲಿಸಿ ಉಚಿತ ಕಾನೂನು ನೆರವು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಂ. ಸೀನಪ್ಪ ತಿಳಿಸಿದರು.
ನಗರದ ಸಿ.ಡಿ.ಪಿ.ಒ. ಕಛೇರಿ ಆವರಣದಲ್ಲಿ ನಡೆದ ಕೌಟುಂಬಿಕ ಮಹಿಳಾ ಸಂರಕ್ಷಣಾ ಕಾನೂನು ಅರಿವು ಕಾರ್ಯಗಾರವನ್ನು ಉದ್ಗಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವಿವಾಹ ವಿಚ್ಛೇದನ ಜಾಸ್ತಿಯಾಗುತ್ತಿದೆ ನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸುವ ಮುಂಚಿತವಾಗಿ ಇಂತಹ ಪ್ರಕರಣಗಳನ್ನು ರಾಜಿ ಸಂಧಾನ ಮುಖಾಂತರ ಬಗೆಹರಿಸಿಕೊಂಡು ಸುಖ ನೆಮ್ಮದಿಯಿಂದ ಬಾಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿ.ಡಿ.ಪಿ.ಒ ಅನಿಸ್ ಖೈಸರ್, ಕರುಣೆ ಇರುವ ಕಡೆ ಜೀವನದಲ್ಲಿ ಸ್ವರ್ಗವನ್ನು ಕಾಣಬಹುದಾಗಿದೆ ಎಂದರು. ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಸಕರ್ಾರದಿಂದ ನಿಗದಿಪಡಿಸಿರುವ ದಾಖಲಾತಿಗಳನ್ನು ಸಕಾಲಕ್ಕೆ ಸಕರ್ಾರಕ್ಕೆ ಸಲ್ಲಿಸಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ತಿಳಿಸಿದರಲ್ಲದೆ ಆಧಾರ್ ಯೋಜನೆಯಡಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡಿನಲ್ಲಿರುವ ಠೇವಣಿ ಸಂಖ್ಯೆಯನ್ನು ಪೋಷಕರು ನಮೂದಿ ಮಾಡಿಸದೇ ಇದ್ದಲ್ಲಿ ಯೋಜನೆಯ ಸೌಲಭ್ಯ ವಂಚಿತರಾಗಬೇಕಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎನ್.ಶೀಲಾ, ಎ.ಜಿ.ಶಿಲ್ಪ, ಸಕರ್ಾರಿ ವಕೀಲರಾದ ಆಶಾ ಮಾತನಾಡಿದರು.
ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಕೀಲರಾದ ಮಹಾಲಿಂಗಯ್ಯ, ಎನ್.ಎನ್. ಶ್ರೀಧರ್, ಪಿ.ಎಲ್.ಡಿ. ಬ್ಯಾಂಕ್ನ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕತರ್ೆ ಸಾವಿತ್ರಮ್ಮ ಪ್ರಾರ್ಥಸಿ , ವಕೀಲ ಆದಶರ್್ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.

ಗಳಿಕೆ ರಜೆಯನ್ನು ನಗಧೀಕರಿಸಲು ಸಹಕರಿಸಿದ ಬಿ.ಇ.ಓರವರಿಗೆ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಜ.31: ತಾಲೂಕಿನ 640ಕ್ಕೂ ಹೆಚ್ಚಿನ ಶಿಕ್ಷಕ ಬಂಧುಗಳಿಗೆ ಪಾರದರ್ಶಕವಾಗಿ ಗಳಿಕೆ ರಜೆಯನ್ನು ನಗದೀಕರಿಸಿಕೊಡಲು ಸಹಕರಿಸಿದ ಬಿ.ಇ.ಓ ಸಾ.ಚಿ.ನಾಗೇಶ್ರವರಿಗೆ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದ್ದ.
ಇದೇ ಸಂದರ್ಭದಲ್ಲಿ ಅಂತರ ಜಿಲ್ಲೆಯಿಂದ ವಗರ್ಾವಣೆಗೊಂಡ ಶಿಕ್ಷಕರಿಗೆ 10.15. ವರ್ಷದ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡಿದ ಶಿಕ್ಷಣ ಸಚಿವರನ್ನು ಅಬಿನಂದಿಸಿದ್ದಾರೆ.


Sunday, January 30, 2011

Saturday, January 29, 2011

ತಾಲೂಕಿನ ಕೆಲವು ಗ್ರಾಮಗಳಿಗೆ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನ
ಚಿಕ್ಕನಾಯಕನಹಳ್ಳಿ,ಜ.29: ಬರಸಿಡ್ಲಹಳ್ಳಿ, ದೊಡ್ಡರಾಂಪುರ, ಗೊಲ್ಲರಹಟ್ಟಿ, ಭಾಗಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ 77ಲಕ್ಷ ರೂ, ತೀರ್ಥಪುರ ಸಕರ್ಾರಿ ಪ್ರೌಡಶಾಲೆಗೆ 25ಲಕ್ಷ ರೂ ಸಕರ್ಾರ ಬಿಡುಗಡೆ ಮಡಿದ್ದು ಬಸವ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ 1000 ಮನೆ ನಿಮರ್ಿಸಲು ಮಂಜೂರಾತಿ ನೀಡಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲೂಕಿನ ಕಾತ್ರಿಕೆಹಾಳ್ನಲ್ಲಿ ಜಿ.ಪಂ. ತಾ.ಪಂ. ಲೋಕೋಪಯೋಗಿ,ಸಾರ್ವಜನಿಕ ಶಿಕ್ಷಣ ಇಲಾಖೆ, ಜಲಾನಯನ ಇಲಾಖೆ ವತಿಯಿಂದ ನಡೆದ ವಿವಿಧ ಅಭಿವೃದ್ದಿ ಕಾಮಗಾರಿಗಳ ಹಾಗೂ ಶಂಕುಸ್ಥಾಪನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೀರ್ಥಪುರ ಗ್ರಾಮ ವ್ಯಾಪ್ತಿಯ ನಿವೇಶನ ರಹಿತರಿಗೆ 1200 ನಿವೇಶನ ನೀಡಲು ತೀಮರ್ಾನಿಸಿದ್ದೇವೆ, ಕಾತ್ರಿಕೆಹಾಳ್, ತೀರ್ಥಪುರ, ಹಾಗಲವಾಡಿ, ಡಾಂಬರು ನಿಮರ್ಿಸಲು 78ಲಕ್ಷ ಬಿಡುಗಡೆಯಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು ಎಂದರಲ್ಲದೆ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಜಾಣೆಹಾರ್, ಕಾತ್ರಿಕೆಹಾಳ್ ಮಧ್ಯ ಇರುವ ಸೇತುವೆಯು ಮಾಚರ್್ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಹಳ್ಳಿಗಳು ದೇಶದ ಬೆನ್ನೆಲುಬು, ಹಳ್ಳಿಗಳ ಸವರ್ಾಂಗೀಣ ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿಯಾಗುವುದು ಖಂಡಿತ, ಮಹಾತ್ಮಾಗಾಂಧೀಜಿಯವರು ಕಂಡಂತಹ ರಾಮರಾಜ್ಯ ನನಸು ಮಾಡಲು ಯುವ ಜನತೆ ಮುಂದೆ ಬರಬೇಕಾಗಿದೆ ಎಂದ ಅವರು, ಅತಿ ಹಿಂದುಳಿದ ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಕರ್ಾರ ಅನೇಕ ಯೋಜನೆ ಹಾಕಿಕೊಂಡು ಶಿಕ್ಷಣ, ರಸ್ತೆ ಅಭಿವೃದ್ದಿ, ಸಮುದಾಯಭವನ, ಪದವಿ ಪೂರ್ವ ಕಟ್ಟಡ ನಿಮರ್ಿಸಿ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ, ಗುಡ್ಡಗಾಡು ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ಭಾಗದಲ್ಲಿ ವಾಹನ ಸೌಕರ್ಯವಿಲ್ಲದೆ ವಿದ್ಯಾಥರ್ಿಗಳು ವಿದ್ಯೆಯಿಂದ ವಂಚಿತರಾಗುತ್ತಿದ್ದು ಈ ಸ್ಥಳದಲಿ ಪದವಿ ಪೂರ್ವ ಕಾಲೇಜು ಸ್ಥಾಪಿಸಿ ಹೆಣ್ಣುಮಕ್ಕಳು ಕ್ರಿಯಾಶೀಲರಾಗಲು ಮತ್ತು ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಸಕರ್ಾರ ಸ್ಪಂದಿಸುತ್ತಿದೆ ಎಂದರು.
ಮಹಿಳೆಯರಿಗೆ

ಜನಗಣತಿ ಕಾರ್ಯಕ್ರಮದ ನಿಮಿತ್ತ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿಗೆ ರಜೆ
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜನಲ್ಲಿ ಇದೇ ಜನವರಿ 31ರ ಸೋಮವಾರ ದಂದು ಜನಗಣತಿ ಕಾರ್ಯಕ್ರಮವನ್ನು ಏರ್ಪಡಿಸಿರುವುದರಿಂದ ಅಂದು ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಿರಲು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಕೊಠಡಿಗಳನ್ನು ಜನಗಣತಿ ಕಾರ್ಯಕ್ಕೆ ಬಿಟ್ಟುಕೊಡಲಾಗಿದ್ದು ಅಂದು ವಿದ್ಯಾಥರ್ಿಗಳ ತರಗತಿಗಳಿಗೆ ಅಡಚಣೆ ಉಂಟಾಗುತ್ತದೆ ಎಂಬ ಮುಂದಾಲೋಚನೆಯಿಂದ ತರಗತಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ದಿಗೆ ಜನಗಣತಿಯ ಆಧಾರ ಮುಖ್ಯ: ಡಿ.ಡಿ.ಪಿ.ಐ ಮೋಹನ್ಕುಮಾರ್
ಚಿಕ್ಕನಾಯಕನಹಳ್ಳಿ,ಜ.29: ಒಂದು ದೇಶ ಅಭಿವೃದ್ದಿಯಾಗ ಬೇಕಾದರೆ ಅದು ದೇಶದ ಜನಗಣತಿಯ ಆಧಾರದ ಮೇಲೆ ದೇಶದ ಯೋಜನೆಗಳು ರೂಪುಗೊಳ್ಳುತ್ತದೆ ಎಂದು ಡಿ.ಡಿ.ಪಿ.ಈ ಮೋಹನ್ಕುಮಾರ್ ಹೇಳಿದರು.
ಶನಿವಾರ ಪಟ್ಟಣದ ಸಕರ್ಾರಿ ಪದವಿ ಕಾಲೇಜನಿಲ್ಲಿ ನಡೆದ 2010-11ನೇ ಸಾಲಿನ 3ದಿನದ ಜನಗಣತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಂದು ದೇಶದ ರಾಜ್ಯ,ಜಿಲ್ಲೆ ತಾಲೂಕು ಅಭಿವೃದ್ದಿಯಾಗಬೇಕದಾರರೆ ಜನಗಣತಿಯ ಆಧಾರದ ಮೇಲೆ ಪಂಚವಾಷರ್ಿಕ ಯೋಜನೆಗಳನ್ನು ಸಕರ್ಾರ ರೂಪಿಸುತ್ತದೆ. ಆಥರ್ಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಯಶಸ್ವಿಯಾಗ ಬೇಕಾದರೆ ಜನಗಣತಿ ಅಗತ್ಯ ಎಂದರು.
ಸರ್ವ ಶಿಕ್ಷಣ ಅಭಿಯಾನದ ಹಾಗೆ ಪ್ರೌಡಶಾಲೆಗಗಳಿಗೆ ಆರ್.ಎಮ್.ಇ.ಸಿ ಯೋಜನೆಯಡಿಯಲ್ಲಿ ಸಕರ್ಾರಿ ಪ್ರೌಡಶಾಲೆಗಳ ಅಭಿವೃದ್ದಿಗೆ 25ರಿಂದ 40ಸಾವಿರ ರೂಪಾಯಿಗಳನ್ನು ಪ್ರೌಡಶಾಲಾ ಮುಖ್ಯೋಪಾಧ್ಯಾರ ಖಾತೆಗೆ ಜಮಾ ಮಡಲಾಗಿದ್ದು ಈ ಹಣವನ್ನು ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ 10ವರ್ಷಕ್ಕೊಮ್ಮೆ ಒಮ್ಮೆ ನಡೆಯುವ ಜನಗಣತಿಯ ಕಾರ್ಯಕ್ರಮದಲ್ಲಿ ಶಿಕ್ಷಕರು ವ್ಯವಸ್ಥಿತವಾಗಿ ಜನಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ಭಾರತದ ಸಕರ್ಾರಿ ಯೋಜನೆಗಳ ಶೈಕ್ಷಣಿಕವಾಗಿ ಆಥರ್ಿಕ ಸಾಮಾಜಿಕ ವೈಜ್ಞಾನಿಕವಾಗಿ ಕ್ಷೇತ್ರಗಳಲ್ಲಿ ಹಾಗೂ ವಸತಿ ರಹಿತರಿಗೆ ಶೌಚಾಲಯ ಹಾಗೂ ಮಕ್ಕಳ ಶೈಕ್ಷಣಿಕ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಜನಗಣತಿ ಆಧಾರದ ಮೇಲೆ ನಿಂತಿದೆ ಎಂದ ಅವರು ಎರಡನೇ ಹಂತದ ಜನಗಣತಿ ಕಾರ್ಯಕ್ರಮ ಫೆಬ್ರವರಿ 6ರಿಂದ 28ರವರಗೆ ನಡೆಯಲಿದೆ ಜನಗಣತಿ ಕಾರ್ಯಕ್ರಮದಲ್ಲಿ ಶಿಕ್ಷಕರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಯಾನಂದ್, ಸಿ.ಡಿ.ಪಿ.ಓ ಅನೀಸ್ಖೈಸರ್, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ಸಮಾಜ ಕಲ್ಯಾಣಅಧಿಕಾರಿ ಸಯದ್ಮುನೀರ್ ಹಾಜರಿದ್ದರು
ಗಣತಿ ಕಾರ್ಯಕ್ಕೆ ಗೈರಾದರೆ ಶಿಸ್ತು ಕ್ರಮ: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಜನಗಣತಿಯ ಗಣತಿ ಕಾರ್ಯಕ್ರಮವು ಇದೇ 29ರಿಂದ 31ರವರಗೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ನೇಮಕಗೊಂಡಿರುವ ಮೇಲ್ವಿಚಾರಕರು ಗಣತಿ ಕಾರ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಗೊಂಡಿರುವವರ ಮೇಲೆ ನಿದರ್ಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯವು ರೋಟರಿ ಶಾಲಾ ಆವರಣದಲ್ಲಿ ನಡೆಯಲಿದೆ, ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬ ನಾಗರೀಕರು ಗಣತಿದಾರರಿಗೆ ಸಹಕರಿಸಿ ಅವರಿಗೆ ಆಗಿರುವ ತೊಂದರೆಯನ್ನು ಮುಚ್ಚು ಮರೆಯಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕು ಎಂದ ಅವರು ಫೆಬ್ರವರಿ 9ರಿಂದ 28ರವರಗೆ ನಡೆಯುವ ಭಾರತದ ಜನಗಣತಿ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿ ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದ ಅವರು ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಬೆಳಗ್ಗೆ 11ಗಂಟೆ ವೇಳೆಗೆ ಮುಗಿಸಿ ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗದಂತೆ

Friday, January 28, 2011





ಕುಷ್ಠ ರೋಗದ ನಿಮರ್ೂಲನೆಗೆ ಸಹಕರಿಸಿ
ಚಿಕ್ಕನಾಯಕನಹಳ್ಳಿ,ಜ.28: ಕುಷ್ಠರೋಗದ ಲಕ್ಷಣಗಳು ಕಂಡ ಬಂದ ಮೇಲೆಯೂ ರೋಗಿ ಶೀಘ್ರ ಚಿಕಿತ್ಸೆ ಪಡೆಯದೇ ರೋಗದ ಬಗ್ಗೆ ನಿಗಾವಹಿಸದಿದ್ದಲ್ಲಿ ರೋಗಿಯು ಅಂಗವಿಕಲತೆಗೆ ತುತ್ತಾಗುತ್ತಾನೆ ಎಂದು ಆರೋಗ್ಯಾಧಿಕಾರಿ ಶಿವಕುಮಾರ್ ಹೇಳಿದರು.
ಪಟ್ಟಣದ ಜ್ಞಾನಪೀಠ ಪ್ರೌಡಶಾಲಾ ಆವರಣದಲ್ಲಿ ರೋಟರಿ ಕ್ಚಬ್ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ನಡೆದ ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಷ್ಠರೋಗವನ್ನು ಸಾರ್ವಜನಿಕರು ತಮ್ಮ ನೆರಹೊರೆಯವರಲ್ಲಿ ಅರಿವು ಮೂಡಿಸಿ ಕುಷ್ಠರೋಗ ನಿಮರ್ೂಲನೆ ಮಾಡಬೇಕು ಎಂದರು.
ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಕಾರ್ಯದಶರ್ಿ ಅಶ್ವತ್ಥ್ನಾರಾಯಣ್ ಮಾತನಾಡಿದರು.
ಸಮಾರಂಭದಲ್ಲಿ ರೋಟರಿ ಸಂಸ್ಥೆಯಿಂದ ಕುಷ್ಠರೋಗಿಗಳಿಗೆ ಕಂಬಳಿ ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯ ಗೋವಿಂದರಾಜ್, ಆರೋಗ್ಯ ಕಾರ್ಯಕರ್ತರಾದ ರೇಣುಕಾರಾಧ್ಯ, ರಂಗನಾಥ್, ಶಂಕರ್ ಉಪಸ್ಥಿತರಿದ್ದರು. ಜನಗಣತಿ ಕಾರ್ಯಕ್ಕೆ ಗೈರು ಹಾಜರಾಗುವ ನೌಕರರ ಮೇಲೆ ನಿದ್ಯರ್ಾಕ್ಷಣ್ಯ ಕ್ರಮ
ಚಿಕ್ಕನಾಯಕನಹಳ್ಳಿ,ಜ.28: ತಾಲೂಕಿನ ಜನಗಣತಿಯ ಗಣತಿ ಕಾರ್ಯದ ತರಬೇತಿ ಇದೇ 29ರಿಂದ 31ರವರಗೆ ನಡೆಯಲಿದ್ದು ಈ ಕಾರ್ಯಕ್ಕೆ ನೇಮಕಗೊಂಡಿರುವ ಮೇಲ್ವಿಚಾರಕರು ಗಣತಿ ಕಾರ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಗೊಂಡಿರುವವರ ಮೇಲೆ ನಿದರ್ಾಕ್ಷಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯವು ರೋಟರಿ ಶಾಲಾ ಆವರಣದಲ್ಲಿ ನಡೆಯಲಿದೆ, ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬ ನಾಗರೀಕರು ಗಣತಿದಾರರಿಗೆ ಸಹಕರಿಸಿ ಅವರಿಗೆ ಮುಚ್ಚು ಮರೆಯಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕು ಎಂದ ಅವರು, ಫೆಬ್ರವರಿ 9ರಿಂದ 28ರವರಗೆ ನಡೆಯುವ ಭಾರತದ ಜನಗಣತಿ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿ ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಬೆಳಗ್ಗೆ 8ಕ್ಕೆ ಆರಂಭಿಸಿ 11ಗಂಟೆ ವೇಳೆಗೆ ಮುಗಿಸಿ ಶಾಲೆಗಳಿಗೆ ಹಾಜರಾಗಬೇಕು ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಸ್ತ್ರೀಶಕ್ತಿ ಭವನವನ್ನು ಮಹಿಳೆಯರ ಅಭಿವೃದ್ದಿಗಾಗಿ ಬಳಸಿ
ಚಿಕ್ಕನಾಯಕನಹಳ್ಳಿ,ಜ.28: ಸ್ತ್ರೀಯರ ಮೇಲಿನ ನಂಬಿಕೆಯಿಂದ ಸ್ತ್ರಿ ಶಕ್ತಿ ಸಂಘಗಳಿಗೆ, ಸಹಕಾರ ಸಂಘಗಳು ಸೇರಿದಂತೆ ಬ್ಯಾಂಕುಗಳು ಸಾಲವನ್ನು ನೀಡಿ ಅವರಿಗೆ ಆಥರ್ಿಕವಾಗಿ ಸಹಕರಿಸಿತ್ತಿರುವುದರ ಜೊತೆಗೆ ಬೇರೊಂದು ರೀತಿಯಲ್ಲಿ ನಮ್ಮ ಬೆಂಬಲ ಮಹಿಳೆಯರಿಗೆ ನಿರಂತರವಾಗಿರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸ್ತ್ರೀ ಶಕ್ತಿಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಥರ್ಿಕ ಸಂಸ್ಥೆಗಳು ನೀಡಿದ ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸಿ ಪುನಃ ಮತ್ತೊಬ್ಬರಿಗೆ ಹಣದ ನೆರವು ನೀಡಲು ಮಹಿಳೆಯರು ಸಹಕರಿಸಿ, ನೀಡಿದ ಹಣವನ್ನು ಒಳ್ಳೆ ರೀತಿಯ ಕೆಲಸ ಕಾರ್ಯಗಳಿಗೆ ಬಳಸಿ ಉತ್ತಮ ಲಾಭವನ್ನು ಪಡೆಯಬೇಕು ಎಂದ ಅವರು, ತಾಲೂಕಿನಲ್ಲಿ 1035 ಸ್ತ್ರೀ ಶಕ್ತಿ ಸಂಘಗಳಿದ್ದು ಈ ಸಂಘಗಳ ಬೆಳವಣಿಗೆಯಿಂದಲೇ ಮಹಿಳೆಯರು ರಾಜಕೀಯವಾಗಿ, ಸಾಮಾಜಿಕವಾಗಿ ಪ್ರೇರಿತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದರು. ಮುಂದಿನ ಫೆಬ್ರವರಿ 16ರಂದು ನಗರದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು 7ನೇ ತರಗತಿಯಿಂದ ಪದವಿ ವರೆಗೆ ಓದಿರುವ 3000 ವಿದ್ಯಾಥರ್ಿಗಳಿಗೆ ಉದ್ಯೋಗವನ್ನು ವಿವಿಧ ಕಂಪನಿಗಳಿಂದ ಕೊಡಿಸುವ ನಿರೀಕ್ಷೆ ವ್ಯಕ್ತಪಡಿಸಿದರು, ಆದಿಚುಂನಚಗಿರಿಯ ವೈದ್ಯಕೀಯ ಕಾಲೇಜಿನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಟಿ.ರಾಮು ಮಾತನಾಡಿ, ಸ್ತ್ರೀಯರು ಜೀವನದ ಮುಂದಿನ ರೂಪುರೇಷೆಗಾಗಿ ಮಿತಿವಾಗಿ ಹಣವನ್ನು ಬಳಸಿ, ಉಳಿಸಿದ ಹಣವನ್ನು ಸದ್ಬಳಕೆಗೆ ಉಪಯೋಗಿಸಿ ಜೀವನ ನಿರ್ವಹಣೆಯನ್ನು ಸುಗಮಗೊಳಿಸಬೇಕು ಎಂದರು. ಸ್ತ್ರೀ ಶಕ್ತಿ ಭವನವು ಸ್ತ್ರೀಯರಿಗಾಗಿದ್ದು ಅವರ ವಿಶ್ರಾಂತಿ, ಉದ್ಯೋಗ ಇನ್ನೂ ಹಲವಾರು ಉಪಯೋಗಕ್ಕಾಗಿ ಬಳಸಿಕೊಳ್ಳಬಹುದು ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಉಪಾದ್ಯಕ್ಷೆ ಕವಿತಾಚನ್ನಬಸವಯ್ಯ, ಅಂಬಿಕಾ ಮಲ್ಲಿಕಾಜರ್ುನಯ್ಯ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಸದಸ್ಯರಾದ ಲತಾ, ಚೇತನ, ಉಮಾದೇವಿ, ಇ.ಓ ದಯಾನಂದ್, ಪುರಸಭಾ ಸದಸ್ಯರಾದ ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರುಕ್ಮಿಣಮ್ಮ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿ.ಡಿ.ಪಿ.ಓ ಅನೀಸ್ಖೈಸರ್ ಪ್ರಾಸ್ತಾವಿಕ ಮಾತನಾಡಿ, ಪರಮೇಶ್ವರಪ್ಪ ಸ್ವಾಗತಿಸಿ ವಂದಿಸಿದರು.



Thursday, January 27, 2011


ಚಿಕ್ಕನಾಯಕನಹಳ್ಳಿ,ಜ.27: ಹಿಂದುಳಿದ ವರ್ಗಗಳ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬೇಕೆಂದರೆ ಮೊದಲು ಸಂಘಟಿತರಾಗಬೇಕೆಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು ತಿಳಿಸಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಉಣ್ಣೆ ಮತ್ತು ಕಂಬಳಿ ಉತ್ಪಾದನಾ ಸಹಕಾರ ಸಂಘದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೊಳ್ಳಿರಾಯಣ್ಣನ 180ನೇ ಪುಣ್ಯಸ್ಮರಣೆ ಜಿ.ಪಂ. ಹಾಗೂ ತಾ.ಪಂನಲ್ಲಿ ಜಯಗಳಿಸಿದ ತಾಲೂಕಿನ ನೇಕಾರ ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ, ನೇಕಾರರಿಗೆ ಗುರುತು ಪತ್ರ ವಿತರಣೆ ಹಾಗೂ ಷೇರು ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕೆಂದರೆ ಮೊದಲು ತಮ್ಮೊಳಗಿನ ಭಿನ್ನಭೇದಬಿಟ್ಟು ಎಲ್ಲರೂ ಒಂದು ಎಂಬ ಮನೋಭಾವ ಬೆಳಸಿಕೊಂಡು ಅಸಾಹಯಕರನ್ನು ಮೇಲುತ್ತುವ ಕೆಲಸ ಮಾಡಬೇಕೆಂದರು.
ಕಾಳಿದಾಸ ಬ್ಯಾಂಕ್, ಕಾಳಿದಾಸ ವಿದ್ಯಾವರ್ದಕ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿನ ದುರ್ಬಲವರ್ಗದವರಿಗೆ ಆಥರ್ಿಕವಾಗಿ ಹಾಗೂ ಶೈಕ್ಷಣಿಕವಾಗಿ ನೆರವು ನೀಡಿದ ಎನ್ ಮಲ್ಲಪ್ಪನವರು ನಮ್ಮ ತಂದೆ ಎಂಬುದು ಹೆಮ್ಮೆಯ ವಿಷಯ ಎಂದ ಅವರು, ಕೇಂದ್ರ ಉಣ್ಣೆ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಹಲವು ಉಣ್ಣೆ ಸಂಘಗಳ ಸ್ಥಾಪನೆಗೆ ಪ್ರೇಕರಕರಾಗಿದ್ದರು, ಅವರ ಶತಮಾನೋತ್ಸವದ ವಷರ್ಾಚರಣೆಯ ಸಂದರ್ಭದಲ್ಲಿ ಈ ವೇದಿಕೆಗೆ ನಮ್ಮ ತಂದೆಯ ಹೆಸರನ್ನಿಟ್ಟಿರುವುದು ಹರ್ಷ ತಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಗೊಳ್ಳಿರಾಯಣ್ಣನ 180ನೇ ಪುಣ್ಯ ಸ್ಮರಣೆಯನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಬೆಳಗಾಂ ಜಿಲ್ಲೆಯ ನಂದಗಡದಲ್ಲಿರುವ ಅವರ ಸಮಾಧಿಯನ್ನು ಅಭಿವೃದ್ದಿ ಪಡಿಸಬೇಕೆಬುದು ನಮ್ಮ ಒತ್ತಾಯ, ಈ ಬಗ್ಗೆ ಸಕರ್ಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದೇವೆ ಎಂದರಲ್ಲದೆ, ಈ ಬಜೆಟ್ನ ಮಂಡನೆಯ ಈ ಸಂದರ್ಭದಲ್ಲಾದರೂ ರಾಯಣ್ಣನ ಸಮಾಧಿ ಅಭಿವೃದ್ದಿಗೆ ಹಣವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ನಮ್ಮ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿನ ಅಮಾಮ್ ಕೋಮಿನ ಜನರಿಗೆ ತಮಾಮ್ ಆಗಿ ಜಮೀನು ಹಂಚಿದವರು ಮಲ್ಲಪ್ಪನವರು, ಅವರು ಅಧಿಕಾರದಲ್ಲಿದ್ದಾಗ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲ ಮಡಿಕೊಟ್ಟರು ಎಂದರು.
ಇತ್ತೀಚಿಗೆ ಸಕರ್ಾರ ನೇಕಾರರ ನೆರವಿಗೆ ಬರುವಂತಹ ಯೋಜನೆಯನ್ನು ರೂಪಿಸುತ್ತಿದ್ದು ಕ್ಲಷ್ಟರ್ ಯೋಜನೆಯಲ್ಲಿ 5ವರ್ಷಗಳ ಅವಧಿಗೆ 50 ಲಕ್ಷರೂಗಳನ್ನು ನಮ್ಮ ಸೊಸೈಟಿಗೆ ನೀಡಿದೆ ಎಂದರಲ್ಲದೆ, ಉಣ್ಣೆಯಲ್ಲಿ ಮೌಲ್ಯವಧರ್ಿತ ಉತ್ಪನ್ನಗಳ ತರಬೇತಿಗೆ ಪುರಸಭೆಯವರು ಹಣ ಮೀಸಲಿಟ್ಟಿರುವುದು ನೇಕಾರಿಕೆಯಲ್ಲಿ ನವೀನ ರೀತಿಯ ವಸ್ತುಗಳ ಉತ್ಪಾದನಾ ತರಬೇತಿಗೆ ಅನುಕೂಲಕರವಾಗಲಿದೆ ಎಂದರು.
ಕಂಬಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಕರ್ಾರ ಮುಂದಾಗಬೇಕು ಅದಕ್ಕಾಗಿ ಎಲ್ಲಾ ಸಕರ್ಾರಿ ಆಸ್ಪತ್ರೆ ಹಾಗೂ ಹಾಸ್ಟಲ್ಗಳಿಗೆ ಬೆಡ್ಶೀಟ್ ಬದಲಾಗಿ ಕಂಬಳಿಗಳನ್ನು ವಿತರಿಸಬೇಕೆಂದರು.
ಬಿ.ಸಿ.ಎಂ ಇಲಖೆಯಲ್ಲಿ ನಮ್ಮ ಸೊಸೈಟಿಯ ಕಟ್ಟಡದಕ್ಕಾಗಿ 5ಲಕ್ಷರೂ ಅನುದಾನ ನೀಡಲು ಅವಕಾಶವಿದ್ದು ಈ ಹಣವನ್ನು ಪಡೆಯುವುದಕ್ಕೆ ನಮ್ಮ ಸೊಸೈಟಿಯ 5ಲಕ್ಷ ರೂಗಳನ್ನು ತುಂಬಿದರೆ 10ಲಕ್ಷ ರೂಗಳಲ್ಲಿ ಕಟ್ಟಡವನ್ನು ಕಟ್ಟಲು ಅವಕಾಶವಿದೆ, ಈ ನಿಟ್ಟಿನಲ್ಲಿ ನಮ್ಮ ಸೊಸೈಟಿ ಕಾಯರ್ೋನ್ಮುಕವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿದರ್ೇಶಕ ಕುಮಾರಸ್ವಾಮಿ, ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ, ಅಹಿಂದ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಕಾರ್ಯದಶರ್ಿ ಸಿ.ಪಿ.ಗಿರೀಶ್ ಸ್ವಾಗತಿಸಿದರೆ, ಶಿಕ್ಷಕ ದೇವರಾಜು ನಿರೂಪಿಸಿದರು, ಸಿ.ಎಚ್.ಗಂಗಾಧರ್ ವಂದಿಸಿದರು.









Tuesday, January 25, 2011







ಮತದಾರರು ಚುನಾವಣಾ ಘನತೆಯನ್ನು ಎತ್ತಿಹಿಡಿಯಬೇಕು: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜ.25: ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರು ಪ್ರತಿಯೊಂದು ಚುನಾವಣೆಯಲ್ಲಿ ನಿಭರ್ೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತಭಾಷೆಗಳ ಯಾವುದೇ ಪ್ರೇರೇಪಣೆಗಳಿಂದ ದೂರವಿದ್ದು, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಬೇಕೆಂದು ತಮ್ಮ ಪ್ರತಿಜ್ಷಾ ವಿಧಿಯಲ್ಲಿ ತಿಳಿಸಿದರು.
ಸಿ.ಡಿ.ಪಿ.ಓ ಅನೀಸ್ ಖೈಸರ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು, ಚುನಾವಣಾ ಪ್ರಕ್ರಿಯೆಗಳಲ್ಲಿ ಯುವ ಜನತೆ ತೊಡಗಿಸಿಕೊಳ್ಳಲು ಚುನಾವಣಾ ಗುರುತಿನ ಚೀಟಿ ಮುಖ್ಯವಾಗಿದೆ ಎಂದರಲ್ಲದೆ, ಚುನಾವಣೆಯ ಸಂದರ್ಭದಲ್ಲಿ ಮತ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದಾಗ ಮತದಾರರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು. 18ವರ್ಷ ವಯಸ್ಸಿನ ಎಲ್ಲಾ ವಯಸ್ಕರಿಗೂ ಮತದಾರರ ಗುರುತಿನ ಚೀಟಿ ಪಡೆಯ ಬೇಕೆಂದರು.
ಸಮಾರಂಭದಲ್ಲಿ ತಾಪಂ,ಇ.ಓ. ಎನ್.ಎಂ.ದಯಾನಂದ್, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ ಉಪಸ್ಥಿತರಿದ್ದರು.
ಲೋಕ ಶಿಕ್ಷಣ ಕೇಂದ್ರಗಳು, ಗ್ರಾಮದ ಮಾಹಿತಿ ಕೇಂದ್ರಗಳು
ಚಿಕ್ಕನಾಯಕನಹಳ್ಳಿ,ಜ.25: ಗ್ರಾಮಗಳ ಅಭಿವೃದ್ದಿಗಾಗಿ ಗ್ರಾಮಗಳ ವಯಸ್ಕರಿಗೆ ಸಾಕ್ಷರತೆ ಮತ್ತು ಕೌಶಲ್ಯಾಭಿವೃದ್ದಿ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸಕರ್ಾರ ಸಾಕ್ಷರ್ ಭಾರತ್ ಎಂಬ ಕಾರ್ಯಕ್ರಮ ಏರ್ಪಡಿಸಿದೆ ಎಂದು ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ರಾಜ್ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಕ್ಷರ್ ಭಾರತ್ 2012 ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಮಾಹಿತಿ ಪತ್ರ ಮುಂತಾದವುಗಳನ್ನೊಳಗೊಂಡ ಗ್ರಂಥಾಲಯವನ್ನು ತೆರೆಯಲಾಗಿದ್ದು ಆಧುನಿಕ ಸೌಲಭ್ಯಗಳನ್ನು ಸುಸಜ್ಜಿತಗೊಳಿಸಲಾಗುತ್ತದೆ ಎಂದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಗ್ರಾಮಗಳಲ್ಲಿರುವ ಜನರು ತಮ್ಮ ಹಳ್ಳಿಗಳಲ್ಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕ್ಷರರಾಗಲು ತಿಳಿಸಿದ ಅವರು ದೇಶ ಪ್ರಗತಿ ಹೊಂದಲು ಸಹಕರಿಸಬೇಕು ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ,ಇ.ಓ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್ ಸಿ.ಡಿ.ಪಿ.ಓ ಅನೀಸ್ಖೈಸರ್ ಉಪಸ್ಥಿತರಿದ್ದರು.

Sunday, January 23, 2011

ಸಂಗೊಳ್ಳಿರಾಯಣ್ಣ ಹುತಾತ್ಮ ದಿನದ ನೆನಪಿಗಾಗಿ ನೇಕಾರರಿಗೆ ಸವಲತ್ತು ವಿತರಣೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.23: ಸಂಗೊಳ್ಳಿರಾಯಣ್ಣ ಹುತಾತ್ಮ ದಿನದ ನೆನಪಿನ ಅಂಗವಾಗಿ ನೇಕಾರರಿಗೆ ವಿವಿಧ ಸವಲತ್ತುಗಳ ವಿತರಣೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಇದೇ 26ರ ಮಧ್ಯಾಹ್ನ 3ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೇವಣಸಿದ್ದೇಶ್ವರ ಕಂಬಳಿ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು ಚುನಾಯಿತರಿಗೆ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಕುಮಾರಸ್ವಾಮಿ ನೇಕಾರರ ಗುತರ್ಿನ ಚೀಟಿ ವಿತರಿಸಲಿದ್ದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಸಾಪ ಕಾರ್ಯದಶರ್ಿ ಸಿ.ಗುರುಮೂತರ್ಿ ನುಡಿ ನಮನ ಮಾಡಲಿದ್ದು ಪುರಸಭಾಧ್ಯಕ್ಷ ರಾಜಣ್ಣ ಷೇರು ಪತ್ರ ವಿತರಿಸಲಿದ್ದು ರೋಟರಿ ಕ್ಲಬ್ ಅಧ್ಯಕ್ಷ ಎನ್.ಶ್ರೀಕಂಠಯ್ಯ ನೋಟ್ ಪುಸ್ತಕ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರೀ ಶಿವಣ್ಣ, ಅಹಿಂದ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್, ತಾ.ಪ.ಕಾ.ನಿ. ಸಂಘದ ಕಾರ್ಯದಶರ್ಿ ಸಿ.ಹೆಚ್.ಚಿದಾನಂದ್, ಜಿಲ್ಲಾ,ಕ.ರ.ವೇ ಕಾರ್ಯದಶರ್ಿ ಟಿ.ಈ.ರಘುರಾಮ್, ತಾ.ಕ.ರ.ವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸ.ನೌ.ಸಂ.ಅಧ್ಯಕ್ಷ ಪರಶಿವಮೂತರ್ಿ, ಕ.ಭ.ಸಮಿತಿ ಅಧ್ಯಕ್ಷ ಸಿ.ಎಸ್.ಬಸವರಾಜು, ಕ.ಯು.ಕ್ರೀ.ಕ.ಸಂಘದ ಅಧ್ಯಕ್ಷ ಸಿ.ಬಿ.ಲೋಕೇಶ್, ಕಂಬಳಿ ಸೊಸೈಟಿ ಉಪಾಧ್ಯಕ್ಷ ಸಿ.ಕೆ.ಲೋಕೇಶ್, ನಿದರ್ೇಶಕರುಗಳಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಎನ್.ವಿಜಯ್ಕುಮಾರ್, ಆರ್.ಜಿ.ಗಂಗಾಧರಯ್ಯ, ಗೋವಿಂದಯ್ಯ, ಭಾರತಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ನೇಕಾರ ಸಮಾಜದ ಪ್ರತಿನಿಧಿಗಳಾದ ಜಿ.ಪಂ.ಸದಸ್ಯೆ ಎನ್.ಜಿ.ಮಂಜುಳ, ತಾ.ಪಂ.ಸದಸ್ಯರುಗಾಳದ ಡಿ.ಶಿವರಾಜು, ಎ.ಬಿ.ರಮೇಶ್ಕುಮಾರ್, ಉಮಾದೇವಿ, ಜಯಲಕ್ಷಮ್ಮ ರವರಿಗೆ ಸನ್ಮಾನಿಸಲಾಗುವುದು.
ಜಿಲ್ಲಾ ಮಟ್ಟದ ಜಾನಪದ, ಭಾವಗೀತೆ ಹಾಗೂ ಚಲನಚಿತ್ರ ಗೀತೆ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಜ.22: ಜಿಲ್ಲಾ ಮಟ್ಟದ ಜಾನಪದ ಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆ ಸ್ಪಧರ್ೆಯನ್ನು ಇದೇ 26ರ ಬುಧವಾರ ಸಂಜೆ 4ಗಂಟೆಗೆ ಏರ್ಪಡಿಸಲಾಗಿದೆ.
62ನೇ ಗಣರಾಜ್ಯೋತ್ಸವದ ಅಂಗವಾಗಿ ಹಾಗೂ ಭುವನೇಶ್ವರ ಯುವಕ ಸಂಘದ 30ನೇ ವರ್ಷದ ವಾಷರ್ಿಕೋತ್ಸವದ ಸವಿನೆನಪಿಗಾಗಿ ಸ್ಪಧರ್ೆಗಳನ್ನು ಏರ್ಪಡಿಸಿದ್ದು ಜಾನಪದ ಗೀತೆ 1ರಿಂದ 7ನೇ ತರಗತಿ, ಭಾವಗೀತೆ ಸ್ಪಧರ್ೆ 8ರಿಂದ 10ನೇ ತರಗತಿ ಮತ್ತು ಚಲನಚಿತ್ರಗೀತೆ ಸ್ಪಧರ್ೆಯನ್ನು ಪದವಿ ಪೂರ್ವ ಕಾಲೇಜು ವಿದ್ಯಾಥರ್ಿಗಳಿಗೆ ಏರ್ಪಡಿಸಿದ್ದು ಆಸಕ್ತರು 9980163152 ನಂ.ಗೆ ಸಂಪಕರ್ಿಸಬಹುದು ಎಂದು ಕೋರಿದ್ದಾರೆ.



Saturday, January 22, 2011