Thursday, May 19, 2011
















ಭೂ ಸ್ವಾಧೀನದ ಪ್ರಕ್ರಿಯೆಯನ್ನು ಕೈ ಬಿಡುವಂತೆ ಒತ್ತಾಯಚಿಕ್ಕನಾಯಕನಹಳ್ಳಿ,

ಮೇ.19: ಕೇವಲ ಜೀವನಾದಾರಕ್ಕೆ 5, 10 ಗುಂಟೆ ಭೂ ಪ್ರದೇಶ ಹೊಂದಿರುವವರೆ ಹೆಚ್ಚು, ಈ ಭೂ ಒಡೆಯರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಸಕರ್ಾರದ ಕ್ರಮ ಖಂಡಿಸಿ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಕರ್ಾರವನ್ನು ಎಚ್ಚರಿಸಿದೆ. ಪಟ್ಟಣದ ಎಲ್ಲಮ್ಮದೇವಿಯ ದೇವಾಲಯದ ಆವರಣದಲ್ಲಿ ದಾಸೀಹಳ್ಳಿ ಹಾಗೂ ಬ್ಯಾಲದಕೆರೆಯ ಆಜುಬಾಜಿನಲ್ಲಿರುವ 80 ಎಕರೆ 10ಗುಂಟೆ, ಗೃಹಮಂಡಳಿಯ ಭೂ ಸ್ವಾಧೀನಕ್ಕೆ ಒಳಪಡುವ 107 ಮಂದಿ ರೈತರು ಸಭೆ ಸೇರಿ ಭೂ ಸ್ವಾಧೀನ ಕಾಯಿದೆ ಕಲಂ 4(1) ಅಡಿಯಲ್ಲಿ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು ಕಲಂ 6(1)ಎ ಕಾಯಿದೆಗೆ ಒಳಪಟ್ಟರೆ ರೈತರು ಭೂಮಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಸಕರ್ಾರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿ ಬಡ ರೈತರನ್ನು ರಕ್ಷಿಸುವ ಹೊಣೆ ಎಲ್ಲರ ಜವಾಬ್ದಾರಿಯಾಗಿದೆ. ಈ ಹೋರಾಟದಲ್ಲಿ ಮಾನ್ಯ ಶಾಸಕರು ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.ರೈತ ಮುಖಂಡ ಸಿ.ಬಿ.ತಿಪ್ಪೇಸ್ವಾಮಿ ಮಾತನಾಡಿ ಬದ್ದತೆಯ ಮೂಲಕ ಹೋರಾಟ ಕೈಗೆತ್ತಿಕೊಳ್ಳಬೇಕು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಡುವ ಹೋರಾಟದಲ್ಲಿ ಯಶಸ್ಸು ಕಾಣುವವರೆಗೂ ಸಂಘಟಿತರಾಗಿರಬೇಕು ಎಂದರು.ಸಭೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಿ.ಡಿ.ರಾಜಣ್ಣ, ಪುರಸಭೆ ಸದಸ್ಯ ಸಿ.ಪಿ.ಮಹೇಶ್, ಸಿ.ಪಿ.ಚಂದ್ರಶೇಖರಶೆಟ್ಟಿ, ಟಿ.ಕುಮಾರಯ್ಯ, ಸಿ.ಎನ್.ಕುಮಾರ್, ಪುಟ್ಟಯ್ಯ, ರಾಮಚಂದ್ರಯ್ಯ, ಸಿ.ವಿ.ದಯಾನಂದ, ಸಿ.ಬಿ.ರೇಣುಕಸ್ವಾಮಿ, ಸಿ.ಎಸ್.ಮಲ್ಲಿಕಾಜರ್ುನಯ್ಯ, ಬ್ಯಾಲದಕೆರೆ ನಂಜಪ್ಪ ಉಪಸ್ಥಿತರಿದ್ದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಿಗೆಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ಆಗ್ರಹಿಸಿ ತಾಲೂಕು ದಂಡಾದಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ರಾಜ್ಯ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂ

ಚಿಕ್ಕನಾಯಕನಹಳ್ಳಿ,ಮೇ.19 : ರಾಜ್ಯ ರಕ್ಷಣ ವೇದಿಕೆ ದಶಮಾನೋತ್ಸವವು ಬೆಂಗಳೂರು ಅರಮನೆಯ ಮೈದಾನದಲ್ಲಿ ಇದೇ ತಿಂಗಳ 28-29ರಂದು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕರವೇ ಅಧ್ಯಕ್ಷ ಎನ್.ಎಸ್. ವಿಷ್ಣುವರ್ಧನ್ ಹೇಳಿದರು. ಪಟ್ಟಣದ ಸಕರ್ಾರಿ ನೌಕರರ ಸಂಘದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಕ್ಷಣ ವೇದಿಕೆಗೆ 10ನೇ ವರ್ಷ ದಾಟಿ 11ನೇ ವರ್ಷಕ್ಕೆ ಕಾಲಿಟ್ಟಿದೆ. ಕರವೇ ಒಗ್ಗೂಡಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭಕ್ಕೆ ನಮ್ಮ ಜಿಲ್ಲೆಯಿಂದ 10.000 ಕಾರ್ಯಕರ್ತರು ಆಗಮಿಸುವ ನೀರಿಕ್ಷೆಯಿದೆ ಎಂದರು. ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಗಳ ಜನಪದ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪ್ರದಶರ್ಿಸುವ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದ್ದು ರಾಜ್ಯದ ಅಭಿವೃದ್ಧಿಯ ಚಿಂತನೆ ಜಾನಪದದ ವಿಚಾರವಾಗಿ ರಾಜ್ಯಮಟ್ಟದಲ್ಲಿ ವಿಚಾರ ಗೋಷ್ಟಿಗಳ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರು ನಾಡಿನ ಮಠಾಧೀಶರುಗಳು ಜನ ಪ್ರತಿನಿಧಿಗಳು ಅನಿವಾಸಿ ಕನ್ನಡಿಗರು ಸಾಹಿತಿಗಳು ಹಾಗೂ ನಾಡಪರ ಚಿಂತಕರ ಸಮ್ಮುಖದಲ್ಲಿ ನೆಡೆಯಲಿರುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.ತಾಲೂಕು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಪ್ರತಿಯೊಂದು ಹೋಬಳಿ &ಗ್ರಾಮಗಳಲ್ಲಿ ನಮ್ಮ ಕರವೇ ಶಾಖೆಗಳನ್ನು ತೆಗೆಯಬೇಕು ಮುಖಂಡರುಗಳು ಜನಪರ ರೈತರಿಗಾಗಿ ಅನ್ಯಾಯ ಆಗದಂತೆ ಹೋರಾಟ ಮಾಡಿ ಒಳ್ಳೆಯ ಕೆಲಸ ಮಾಡಬೇಕು ನಮ್ಮ ರಾಜ್ಯದಲ್ಲಿ ಭ್ರಷ್ಟಚಾರ ಜಾಸ್ತಿಯಗಾಗಿದೆ ಬಳ್ಳಾರಿ ಜಿಲ್ಲೆ ಮೊದಲನೆಯದಾದರೆ ಎರಡನೇಯದಾಗಿ ತುಮಕುರು ಜಿಲ್ಲೆ ಇವುಗನ್ನು ಹೋಗಲಾಡಿಸಲು ಪ್ರಯತ್ನಿಸೋಣ ಎಂದರು.ಸಭೆಯಲ್ಲಿ ಕೃಷ್ಣಮೂತರ್ಿ ಪ್ರಾಥರ್ಿಸಿ, ಲಕ್ಷ್ಮೀಶ್ ಸ್ವಾಗತಿಸಿ, ಸಿ.ಟಿ.ಗುರುಮೂತರ್ಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಮರ್ಿಕರ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ವಿದ್ಯಾಥರ್ಿ ಘಟಕದ ಅಧ್ಯಕ್ಷ ರಾಜೇಶ್ ಹಾಗೂ ಕರವೇ ಕಾರ್ಯಕರ್ತರು ಹಾಜರಿದ್ದರು.

Wednesday, May 18, 2011


ರಾಜ್ಯಪಾಲರನ್ನು ವಾಪಸ್ ಕೇಂದ್ರಕ್ಕೆ ಕರೆಸಿಕೊಳ್ಳಲು ಆಗ್ರಹ
ಚಿಕ್ಕನಾಯಕನಹಳ್ಳಿ,ಮೇ.18: ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ರವರು ಬಿ.ಜೆ.ಪಿ ನೇತೃತ್ವದ ಸಕರ್ಾರವನ್ನು ರಾಜ್ಯದಲ್ಲಿ ವಜಾ ಮಾಡಬೇಕೆಂದು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಘಟಕ ಕಾರ್ಯಕರ್ತರೊಂದಿಗೆ ನಗರದ ನೆಹರು ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಸಂವಿಧಾನ ವಿರೋದಿ ರಾಜ್ಯಪಾಲರ ಅಸಂವಿಧಾನಿಕ ಕುತಂತ್ರ ವರದಿಯನ್ನು ಕೇಂದ್ರ ಸಕರ್ಾರ ತಿರಸ್ಕರಿಸಬೇಕು ಹಾಗೂ ಕಾಂಗ್ರೆಸ್ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವ ಇವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದರು.
ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಜನರಿಂದ ಆಯ್ಕೆಯಾದ ಬಿಜೆಪಿ ಸಕರ್ಾರಕ್ಕೆ ಕಿರುಕುಳ ನೀಡುತ್ತಲಿದ್ದಾರೆ, ಸಕರ್ಾರಕ್ಕೆ 121 ಸದಸ್ಯರ ಬಲವಿದ್ದರೂ ಸಕರ್ಾರವನ್ನು ಅಮಾನತ್ತಿನಲ್ಲಿಡಲು ಶಿಫಾರಸ್ಸು ಮಾಡಲು ರಾಜ್ಯಪಾಲರ ಕ್ರಮ ಪ್ರಜಾತಂತ್ರಕ್ಕೆ ಮಾಡಿದ ಅಪಮಾನ ಇಂತಹ ಕೃತ್ಯಗಳನ್ನು ಎಸಗುತ್ತಿರುವ ರಾಜ್ಯಪಾಲರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವುದು ಸೂಕ್ತ ಎಂದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ (ಮಿಲ್ಟ್ರೀ)ಶಿವಣ್ಣ, ಹಳೇಮನೆ ಸುರೇಶ್, ಶ್ರೀನಿವಾಸಮೂತರ್ಿ, ರವಿಕುಮಾರ್, ಎಚ್.ಎಲ್.ಜಯದೇವ್, ಹುಳಿಯಾರ್ ಮೋಹನ್, ರಾಜಣ್ಣ, ರೇವಣ್ಣ ಮಧುಸೂಧನ, ಚಿತ್ತಯ್ಯ, ಕೆ.ಕೆ.ಹನುಮಂತಪ್ಪ ರೋಜೆಗೌಡ, ಈಶ್ವರ್ಭಾಗವತ್ ಕಾರ್ಯಕರ್ತರು ಹಾಜರಿದ್ದರು.ಕವಿಗಳು ಹಾಗೂ ಲೇಖಕರು ಹೆಸರು ನೊಂದಾಯಿಸಿಕೊಳ್ಳಲು ಮನವಿ
ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕು ನಾಲ್ಕನೇಯ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 10 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕವಿಗೋಷ್ಠಿ ಮತ್ತು ಲೇಖಕರ ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗುವುದು, ತಾಲೂಕಿನ ಆಸಕ್ತ ಕವಿಗಳು ತಮ್ಮ ಸ್ವರಚಿತ ಒಂದು ಕವನವನ್ನು ವಾಚಿಸಲು ಅವಕಾಶವಿದೆ, ಲೇಖಕರು ತಮ್ಮ ಹೊಸ ಪುಸ್ತಕದ ಒಂದು ಪ್ರತಿಯನ್ನು ಕಳಿಸಲು ಕೋರಿದೆ.
ಕವಿಗಳು ಹಾಗೂ ಲೇಖಕರು, ಸಿ.ಗುರುಮೂತರ್ಿ ಕೋಟಿಗೆಮನೆ ಕಾರ್ಯದಶರ್ಿ ತಾ.ಕ.ಸಾ.ಪ ಇವರಲ್ಲಿ ದಿ. 31.05.2011ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ, ಹೆಚ್ಚಿನ ಮಾಹಿತಿಗೆ ಮೊ.9448659573. ಸಂಪಕರ್ಿಸಲು ಕೋರಿದೆ.
ಡಿ.ವಿ.ಪಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 71.96 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ದೇಶೀಯ ವಿದ್ಯಾಪೀಠ ಬಾಲಕರ ಪ್ರೌಢಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಶೇ.71.96ರಷ್ಟು ಪಲಿತಾಂಶ ಪಡೆದಿದೆೆ.
ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಮೇಘನ. ಎಮ್. 597, ಶ್ರೀನಿವಾಸ್. ಟಿ. - 594. ಯೋಗೀಶ್. .ಆರ್. 575, ಪೂಜಾ .ಕೆ.ಜೆ. 563, ಅನುಶ್ರೀ 543, ಮನೋಜ್ ಕುಮಾರ್ 535 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ರೋಟರಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 92.72 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ರೋಟಾರಿ ಇಂಗ್ಲೀಷ್ ಪ್ರೌಡಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.92.72ರಷ್ಟು ಪಲಿತಾಂಶ ಪಡೆದಿದೆೆ.
55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು 11 ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿ, 22 ವಿದ್ಯಾಥರ್ಿಗಳು ಪ್ರಥಮ ದಜರ್ೆ, 5 ವಿದ್ಯಾಥರ್ಿಗಳು ದ್ವೀತೀಯ ದಜರ್ೆ, 13 ವಿದ್ಯಾಥರ್ಿಗಳು ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಶಿಲ್ಪ ಎಸ್. (585) 93.6, ಅಮೂಲ್ಯ ಜಿ.ಎಸ್.(582) 93.12, ಪ್ರಿಯಾ ಬಿ.(582)93.12, ಭವ್ಯ ಆರ್.(579)92.64, ದಿಲೀಪ ಎಮ್. ಬಿ.(578)92.48, ಚಿದಾನಂದ(563) 90.08, ಮೇಘನ ಹೆಚ್.(557)89.12, ಬಿಂದುಶ್ರೀ(552)88.32, ಅಪೇಕ್ಷ ಜೆ.ಎಮ್.(549)87.84, ನಂದೀನಿ ಕೆ.(546)87.36. ಹಷರ್ಿತ ಎಸ್.ವಿ.(537) 85.94 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ಭಾರಿ ಮಳೆಗೆ 1ಲಕ್ಷಕ್ಕೂ ಹೆಚ್ಚು ಹಾನಿ
ಚಿಕ್ಕನಾಯಕನಹಳ್ಳಿ,ಮೇ18: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ 34.8ರಷ್ಟು ಮಿ.ಮೀ ಭಾರಿ ಮಳೆಯಿಂದಾಗಿ ತೆಂಗಿನ, ಅಡಿಕೆ, ರಸ್ತೆಬದಿಯ ಮರ ಹಾಗೂ 17 ಮನೆಗಳು ಕುಸಿದು 1ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.
ಕಂದಿಕೆರೆ ಹೋಬಳಿಯ ಆಶ್ರಹಾಳ್ನಲ್ಲಿ 16 ಮನೆಗಳು ಕುಸಿತಗೊಂಡು, ಕಂದಿಕೆರೆಯಲ್ಲಿ 1 ಮನೆ ಕುಸಿದಿದೆ, ಚಿ.ನಾ.ಹಳ್ಳಿಯಲ್ಲಿ 65.ಮಿ.ಮೀ, ಶೆಟ್ಟಿಕೆರೆಯಲ್ಲಿ 22.ಮಿ.ಮೀ, ಮತಿಘಟ್ಟದಲ್ಲಿ 14.1 ಮಿ.ಮೀ, ದೊಡ್ಡೆಣ್ಣೆಗೆರೆ 9.3 ಮಿ.ಮೀ, ಹುಳಿಯಾರು 40.6 ಮಿ.ಮೀ, ಬೋರನಕಣಿವೆ 46.2 ಮಿ.ಮೀ, ಸಿಂಗದಹಳ್ಳಿ 49.2 ಮಿ.ಮೀ.ನಷ್ಠು ಮಳೆಯಾಗಿದ.

























Wednesday, May 11, 2011





ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಲಿಂಗದೇವರು ಹಳೇಮನೆ
ಚಿಕ್ಕನಾಯಕನಹಳ್ಳಿ,ಮೇ.11: ತಾಲೂಕಿನ ನಾಲ್ಕನೇ ಸಾಹಿತ್ಯ ಸಮ್ಮೇಳನ ಜೂನ್ 10ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ಸಮ್ಮೇಳನಾಧ್ಯಕ್ಷರಾಗಿ ರಂಗಾಯಣ ನಿದರ್ೇಶಕ ಲಿಂಗದೇವರು ಹಳೇಮನೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ..ಸಾ.. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹತ್ತಕ್ಕು ಹೆಚ್ಚು ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುವ ಅರ್ಹತೆ ಇರುವ ಸಾಹಿತಿಗಳಿದ್ದು, ಇವರಲ್ಲಿ ಅಂತಿಮವಾಗಿ ಮೂವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದು ನಮ್ಮ ಕಾರ್ಯಕಾರಿ ಸಮಿತಿ ಜಿಲ್ಲಾ .ಸಾ. ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪನವರ ನೇತೃತ್ವದಲ್ಲಿ ಸಭೆ ಸೇರಿ ಲಿಂಗದೇವರು ಹಳೇಮನೆಯವರನ್ನು ಒಮ್ಮತದಿಂದ ತೀಮರ್ಾನಿಸಲಾಯಿತು ಎಂದರು.
ಸಮ್ಮೇಳನವನ್ನು ಒಂದು ದಿನ ನಡೆಸಲು ತೀಮರ್ಾನಿಸಿದ್ದು, ಜೂನ್ 10 ಬೆಳಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಆರಂಭಗೊಳ್ಳುವ ಸಮ್ಮೇಳನ, ಉದ್ಘಾಟನೆ, ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕವಿ ಗೋಷ್ಠಿ,ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಗುವುದಲ್ಲದೆ, ತಾಲೂಕಿನ ಮೂಲದವರಾಗಿದ್ದು ಹೊರಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ತಾ. .ಸಾ.. ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.

ನೆಲಮೂಲದ ಸಂಸ್ಕೃತಿ ನೈಜವಾಗಿರುವುದು ರಂಗಭೂಮಿ, ಜಾನಪದ ಕಲೆಗಳಲ್ಲಿ ಮಾತ್ರ : ಎಸ್.ಜಿ.ಎಸ್
ಚಿಕ್ಕನಾಯಕನಹಳ್ಳಿ,ಮೇ.11: ನಮ್ಮ ನೆಲದ ಪುರಾಣ ಪರಂಪರೆಯನ್ನು ಉಳಿಸಿ ಬೆಳಸಿಕೊಳ್ಳುವುದು ಅಗತ್ಯವಾಗಿದ್ದು, ನೆಲಮೂಲ ಸಂಸ್ಕೃತಿಯನ್ನು ಉಳಿಸಬೇಕಾದರೆ ಬೇರು ಮೂಲದ ಕಲೆಗಳಾದ ರಂಗಭೂಮಿ ಮತ್ತು ಜಾನಪದ ಕಲೆಗಳನ್ನು ಬೆಳಸಬೇಕೆಂದು ಕವಿ, ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಮ್ಮ ಯುವ ಜನಾಂಗದಲ್ಲಿ ಪುರಾಣದ ತಿಳುವಳಿಕೆ ಕಡಿಮೆಯಾಗಿದೆ, ಪಠ್ಯಪುಸ್ತಕದಲ್ಲಿ ಪುರಾಣಗಳಿಗೆ ಸಂಬಂಧಿಸಿದ ಪಾತ್ರಗಳನ್ನು ಪರಚಯಿಸುವುದು ಅವಶ್ಯವಾಗಿದೆ ಎಂದರು. ದೃಶ್ಯಮಾಧ್ಯಮಗಳ ದಾಳಿಯ ಕಾಲದಲ್ಲೂ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಪುರಾಣ ಪಾತ್ರಗಳಿಗೆ ಜೀವತುಂಬವ ಕೆಲಸವನ್ನು ಅನುಚಾನವಾಗಿ ನಡೆಸಿಕೊಂಡು ಬಂದಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ ಮಾತನಾಡಿ ಕಿರು ತೆರೆಯಲ್ಲಿ ಕಲಾವಿದ ಕುಬ್ಜನಾಗಿ ಕಾಣುತ್ತಾನೆ, ಬೆಳ್ಳಿ ತೆರೆಯಲ್ಲಿ ಹಿರಿದಾಗಿ ಕಾಣುತ್ತಾನೆ ಆದರೆ ರಂಗ ಭೂಮಿಯಲ್ಲಿ ಕಲಾವಿದ ನೈಜವಾಗಿ ಕಾಣುತ್ತಾನೆ, ಇದೇ ರಂಗಭೂಮಿಯ ವಿಶೇಷತೆ ಎಂದರಲ್ಲದೆ, ಹಿರಿ ತೆರೆ, ಕಿರು ತೆರೆ ನಡುವೆ ಅನುಸಂಧಾನ ಕಾರ್ಯವನ್ನು ಮಾಡುತ್ತಿರುವುದು ರಂಗ ಕಲೆ ಎಂದರು.
ರಂಗಭೂಮಿಯಲ್ಲಿ ಸ್ಪಂದನ, ಸಂವೇದನೆ ಎರಡಕ್ಕೂ ಸೂಕ್ತ ಅವಕಾಶವಿರುತ್ತದೆ ಆದ್ದರಿಂದಲೇ ಇಲ್ಲಿ ಪ್ರೇಕ್ಷಕನ ಆಸಕ್ತಿಯನ್ನು ನೇರವಾಗಿ ಏಕ ಕಾಲದಲ್ಲಿ ಸಮಗ್ರವಾಗಿ ಕಾಣುವ ಕಲೆ ಇದಾಗಿದೆ ಎಂದರು.
ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ರಂಗ ಕಲೆ ಇಂದಿಗೂ ಜೀವಂತವಾಗಿರುವುದು ಗ್ರಾಮೀಣ ಭಾಗದಲ್ಲಿ ಅದಕ್ಕೆ ಕಾರಣ ನಮ್ಮಲ್ಲಿ ಇನ್ನೂ ಜಾನಪದ ಕಲೆಗಳ ಬಗ್ಗೆ ಜನರಲ್ಲಿರುವ ಆಸಕ್ತಿ ಮತ್ತು ಒಲವು ಎಂದರಲ್ಲೆ, ಪ್ರತಿ ಮನುಷ್ಯನಲ್ಲೂ ಒಂದೊಂದು ಕಲೆ ಸುಪ್ತವಾಗಿರುತ್ತದೆ ಅದಕ್ಕೆ ಅಗತ್ಯವಿರುವ ವೇದಿಕೆಗಳನ್ನು ಒದಗಿಸಿದರೆ ಹೊರ ಹೊಮ್ಮಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಸಮಾರಂಭದಲ್ಲಿ ಚಿತ್ರ ನಿದರ್ೇಶಕ ಲಿಂಗದೇವರು ಬ್ಯಾಲಕೆರೆ ಮಾತನಾಡಿದರು, .ಸಿ. ಪಾಟೀಲ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿದರ್ೇಶಕ ಚಂದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗೋವಿಂದಗೌಡ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿದ್ದರು.
ದಿವ್ಯ ಜ್ಯೋತಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಗೌರವಾಧ್ಯಕ್ಷ ಗುರುಲಿಂಗಯ್ಯ, ಕಲಾವಿದರಾದ ಕೆ.ಪಿ.ಕೃಷ್ಣಪ್ಪ, ಕೃಷ್ಣಾಚಾರ್ ರವರನ್ನು ಸನ್ಮಾನಿಸಲಾಯಿತು.


ಚಿ.ನಾ.ಹಳ್ಳಿ ಜಿ.ಜೆ.ಸಿ.ಯ 2ನೇ ಪಿ.ಯು.ಸಿ.ಯಲ್ಲಿ ಶೇ. 60ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.11: ಇಲ್ಲಿನ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್ನ ಎರಡನೇ ವರ್ಷದ ಪಿ.ಯು.ಸಿ.ಯಲ್ಲಿ ಎಲ್ಲಾ ವಿಭಾಗಗಳಿಂದ ಶೇ. 60 ರಷ್ಟು ಫಲಿತಾಂಶ ಬಂದಿದೆ, ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 78, ಕಲಾ ವಿಭಾಗದಲ್ಲಿ ಶೇ.62, ವಿಜ್ಞಾನ ವಿಭಾಗದಲ್ಲಿ ಶೇ 40ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಪ್ತಗಿರಿ ಎಂಬ ವಿದ್ಯಾಥರ್ಿ 500 ಅಂಕ ಪಡೆದು ಕಾಲೇಜಿಗೆ ಪ್ರಥಮ ನೆನಿಸಿಕೊಂಡಿದ್ದರೆ, ಪೂಜಾ ಎಸ್.ಆರ್. 487 ಅಂಕಪಡೆದು ಎರಡನೇ ಸ್ಥಾನದಲ್ಲಿದ್ದಾರೆ,
500ಕ್ಕಿಂತ ಹೆಚ್ಚು ಅಂಕ ಪಡೆದವರು, ಪವಿತ್ರ ಎಸ್ 502, ಮೇನಕಮ್ಮ ಬಿ.ಎನ್.504, ವರಧೀಶ ಕೆ. 510, ಲಾವಣ್ಯ ಡಿ.ಸಿ 517, ಪ್ರಿಯಾ ಎಚ್.ವೈ 505, ಶ್ರೀ ದೇವಿ 506, ಸುಪ್ರೀತ ಟಿ.ಎನ್. 512, ಕಾವ್ಯಶ್ರೀ ಬಿ.ಜೆ 530 ಅಂಕಗಳಿಸಿದ್ದಾರೆ.
ಯೋಗಾಂಜನೇಯಸ್ವಾಮಿ ದೇವಾಲಯ ಪ್ರಾರಂಭೋತ್ಸವ
ಚಿಕ್ಕನಾಯಕನಹಳ್ಳಿ,ಮೇ.11 : ಶ್ರೀ ಮಹಾಗಣಪತಿ, ಯೋಗಾಂಜನೇಯಸ್ವಾಮಿ, ಸುಬ್ರಹ್ಮಣ್ಯಸ್ವಾಮಿಯವರ ನೂತನ ದೇವಾಲಯ ಪ್ರಾರಂಭೋತ್ಸವ, ಕಳಸ ಪ್ರತಿಷ್ಠಾಪನಾ ಮತ್ತು ಧಾಮರ್ಿಕ ಸಭೆಯನ್ನು ಇದೇ 12 13 ಮತ್ತು 14ರಂದು ಏರ್ಪಡಿಸಲಾಗಿದೆ.
ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ನೂತನ ದೇವಾಲಯದಲ್ಲಿ 12ರಂದು ಹಳೆಯೂರು ಆಂಜನೇಯಸ್ವಾಮಿಯವರ ಆಗಮನದೊಂದಿಗೆ ಗಂಗಾಪೂಜೆ ದೇವಾಲಯ ಪ್ರವೇಶ, ನವಗ್ರಹ ಪೂಜೆ, 13ರಂದು ಸುದರ್ಶನ ಹೋಮ, ಜಯಾದಿಹೋಮ, ರಾಮತಾರಕಹೋಮ ಸಂಜೆ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಮ್ಮಿಕೊಂಡಿದ್ದು 14ರಂದು ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಿದ್ದು ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರಸ್ವಾಮಿ, ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿಸ್ವಾಮಿ, ತಮ್ಮಡಿಹಳ್ಳಿ ಮಠದ ಶ್ರೀ ಅಭಿನವಮಲ್ಲಿಕಾಜರ್ುನಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಚಾರ್ಯಸ್ವಾಮಿ, ಗೋಡೆಕೆರೆ ಮಠದ ಮೃಂತ್ಯುಂಜಯಸ್ವಾಮಿ ಉಪಸ್ಥಿತರಿರುವರು.

Tuesday, May 10, 2011

ದಲಿತ ರಂಗಯ್ಯನನ್ನು ಕೊಲೆಮಾಡಿರುವವರನ್ನು ಕೂಡಲೇ ಬಂಧಿಸಿ ಹುಳಿಯಾರ್ ಎಸ್.ಐ.ರವರನ್ನು ಅಮಾನತ್ತು ಪಡಿಸಿ ರಂಗಯ್ಯನ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರಕ್ಕೆ ಒತ್ತಾಯಚಿಕ್ಕನಾಯಕನಹಲ್ಲಿ,

ಮೇ.11: ಕಲ್ಲಹಳ್ಳಿ ದಲಿತ ರಂಗಯ್ಯನನ್ನು ಅಮಾನುಷವಾಗಿ ಕೊಲೆ ಮಾಡಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಎಫ್.ಐ.ಆರ್.ನಲ್ಲಿ ಕಠಿಣವಾದ ಕಾಲಂಗಳನ್ನು ನಮೂದಿಸಬೇಕು, ಹುಳಿಯಾರು ಎಸ್.ಐ.ರವರನ್ನು ಅಮಾನತ್ತುಗೊಳಿಸಬೇಕು ಹಾಗೂ ಮೃತ ರಂಗಯ್ಯನ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ನೀಡಬೇಕೆಂದು ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಹುಳಿಯಾರು ಹೋಬಳಿಯ ಕಲ್ಲಹಳ್ಳಿ ರಂಗಯ್ಯನನ್ನು ಗವಿರಂಗಯ್ಯ, ಅನಂತಯ್ಯ, ಯೋಗೀಶ್, ಶಿವಣ್ಣ, ನಿರುವಗಲ್ ಆಟೋ ಗುರು ಎಂಬುವರು ಔತಣಕೂಟಕ್ಕೆಂದು ಕರೆದುಕೊಂಡು ಹೋಗಿ ಅವನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಬೇವಿನಹಳ್ಳಿ ಚನ್ನಬಸವಯ್ಯ, ಮೂರು ಕುಂಟೆ ಜಮೀನಿಗಾಗಿ ಒಂದು ಪ್ರಾಣವನ್ನೆ ತೆಗೆದಿರುವ ಆರೋಪಿಗಳನ್ನು ಕಠಿಣ ಕಾನೂನಿ ಅಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಹಿಂದೆ ದಲಿತ ಮಹಿಳೆ ಹೊನ್ನಮ್ಮನ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಕಠಿಣ ಕಾನೂನಿನಡಿಯಲ್ಲಿ ಬಂಧಿಸದೇ, ಅವರಲ್ಲಿ ಬಹುತೇಕರು ಜೈಲಿನಿಂದ ಹೊರಬಂದಿರುವುದು ದಲಿತರ ಮೇಲಿನ ದೌರ್ಜನ್ಯಕ್ಕೆ ಕುಮ್ಮುಕ್ಕು ನೀಡಿದೆ ಎಂದಿರುವ ಚನ್ನಬಸವಯ್ಯ, ಈ ಪ್ರಕರಣದಲ್ಲಿ ಮತ್ತೇ ಇಂತಹದೇ ತಪ್ಪು ಮಾಡದೇ ರಂಗಯ್ಯನನ್ನು ಕೊಲೆ ಮಾಡಿರುವ ಆರೋಪಿಗಳಿಗೆ ಬಿಗಿಯಾದ ಕಾನೂನಿನಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದಶರ್ಿ ಗೋಪಾಲಪುರ ಮಹದೇವ್, ಡಿ.ಕುಮಾರ್, ಈಚನೂರು ಮಹದೇವ್, ಜಿಲ್ಲಾ ಅಧ್ಯಕ್ಷ ಮಣಿವಿನ ಕುರಿಕೆ ಶಿವಕುಮಾರ್, ಸಿಂಗದಹಳ್ಳಿ ಗಿರಿಯಪ್ಪ, ಮಾರುಹೊಳೆ ನಾಗರತ್ನಮ್ಮ, ತಿಮ್ಮಯ್ಯ, ಹನುಮಯ್ಯ, ಹೊನ್ನೆಬಾಗಿ ಕೃಷ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೆ.ಸಿ.ಪುರ ಗ್ರಾ.ಪಂ. ಪಿ.ಡಿ.ಓ. ಅಮಾನತ್ತುಚಿಕ್ಕನಾಯಕನಹಳ್ಳಿ,

ಮೇ.11: ತಾಲೂಕಿನ ಜೆ.ಸಿ.ಪುರ ಗ್ರಾ.ಪಂ.ಯ ಪಿ.ಡಿ.ಓ. ಸುಭಾಷ್ ಚಂದ್ರ ಅವರನ್ನು ಜಿ.ಪಂ. ಸಿ.ಇ.ಓ.ರವರು ಸೇವೆಯಿಂದ ಅಮಾನತ್ತು ಗೊಳಿಸಿದ್ದಾರೆ ಎಂದು ಇ.ಓ. ದಯಾನಂದ ತಿಳಿಸಿದ್ದಾರೆ. ಜೆ.ಸಿ.ಪುರ ಗ್ರಾ.ಪಂ.ವ್ಯಾಪ್ತಿಯ ಅಭಿವೃದ್ದಿ ಅಧಿಕಾರಿ ಸಾರ್ವಜನಿಕರೊಂದಿಗೆ ಬೇಜವಬ್ದಾರಿ ವರ್ತನೆ ಹಾಗೂ 3.5 ಲಕ್ಷ ರೂಗಳ ಕಾಮಗಾರಿ ಒಂದರ ಓಚರ್ ನಿರ್ವಹಣೆ ಹಾಗೂ ಕ್ಯಾಷ್ ಬುಕ್ ಬರೆದಿಲ್ಲದಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು ತನಿಖೆಯನ್ನು ಕಾಯ್ದಿರಿಸಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿ.ಪಂ. ಸಿ.ಇ.ಓ. ಅಮಾನತ್ತು ಆದೇಶ ಹೊರಡಿಸಿದ್ದಾರೆ ಎಂದರು.
ರೇವಣ್ಣ ಮಠ ಶಾಲೆಯ 11ವಿದ್ಯಾಥರ್ಿಗಳು ವಸತಿ ಶಾಲೆಗೆ ಆಯ್ಕೆಚಿಕ್ಕನಾಯಕನಹಳ್ಳಿ,ಮೇ.10: ಪಟ್ಟಣದ ರೇವಣ್ಣ ಮಠ ಸಕರ್ಾರಿ ಹೆಚ್.ಪಿ.ಎಸ್ ಶಾಲೆಯ 11 ವಿದ್ಯಾಥರ್ಿಗಳು ಸಕರ್ಾರಿ ವಸತಿ ಶಾಲೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಶಾಲೆಯ ಸಿ.ಆರ್.ಸವಿತ 98 ಅಂಕ 4ನೇ ರ್ಯಾಂಕ್, ಸಿ.ಆರ್.ಚೈತನ್ಯ 95 ಅಂಕ 17ನೇ ರ್ಯಾಂಕ್, ಎ.ಎಚ್.ರೂಪ 90 ಅಂಕ 125ನೇ ರ್ಯಾಂಕ್, ಕೋಕಿಲ 90 ಅಂಕ126ನೇ ರ್ಯಾಂಕ್, ಸಿ.ಕೆ.ಭೂಮಿಕ 85 ಅಂಕ, ಸಿ.ಎನ್.ವೀಣಾ 85, ಹೆಚ್.ಎಂ.ದೇವರಾಜು 83, ಸಿ.ಎನ್.ಶ್ವೇತ 81, ಸಿ.ಆರ್.ಹೇಮಲತ 81, ಸಿ.ಪಿ.ಹಷರ್ಿತ 76, ಸಿ.ಡಿ.ಮಧು 75ಅಂಕ ಪಡೆದಿದ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಜಿ. ರೇವಣ್ಣ, ಮುಖ್ಯೋಪಾಧ್ಯಾಯನಿ ತಿಲೋತ್ತಮೆ, ಶಿಕ್ಷಕ ಬಸವರಾಜು ಸೇರಿದಂತೆ ಶಿಕ್ಷಕ ವೃಂದ ಮಕ್ಕಳನ್ನು ಅಭಿನಂದಿಸಿದ್ದಾರೆ.

Friday, May 6, 2011

Thursday, May 5, 2011





ಬಸವೇಶ್ವರ ಜಯಂತ್ಯೋತ್ಸವ

ಸಮಾರಂಭಚಿಕ್ಕನಾಯಕನಹಳ್ಳಿ,ಮೇ.05: ಮಹಾನ್ ಮಾನವತಾವಾಧಿ, ಸಮಾಜ ಸುಧಾರಕ ಶೇಷ್ಠ ವಚನಕಾರ ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 6ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲೂಕು ಆಡಳಿತ ಮತ್ತು ಬಸವ ಸಮಿತಿಯವರ ಸಂಯುಕ್ತಾಶ್ರಯದಲ್ಲಿ, ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.ಈ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಅನಾವರಣಗೊಳಿಸಲಿದ್ದು ಕಾನೂನು ಸಲಹೆಗಾರರಾದ ಶೋಭ ವಿಶೇಷ ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ಶಿವಯೋಗಿಸ್ವಾಮಿ, ಎಂ.ಆರ್.ಹುಲಿನಾಯ್ಕರ್, ವೈ.ಎಂ.ನಾರಾಯಣಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜು, ಉಪಾಧ್ಯಕ್ಷೆ ಲಲತಿತಮ್ಮ ಮಂಜುನಾಥ್, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತೀಮ, ಪುರಸಭೆ ಉಪಾಧ್ಯಕ್ಷ ಆರ್.ರವಿ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಜಿ.ಪಂಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ ಉಪಸ್ಥಿತರಿರುವರು.
ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂನರ್ಿಮೆಂಟ್ಚಿಕ್ಕನಾಯಕನಹಳ್ಳಿ,

ಈ.05: ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂನರ್ಿಮೆಂಟ್ನ್ನು ಇದೇ 7 ಮತ್ತು 8ರಂದು ಏರ್ಪಡಿಸಲಾಗಿದೆ.ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಥಮ ಬಾರಿಗೆ ಟೂನರ್ಿಮೆಂಟ್ನ್ನು ಕುರುಬರಹಳ್ಳಿಯ ಬಸವೇಶ್ವರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾ ಸದಸ್ಯ ಎಂ.ಎನ್.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ತಂಬಾಕು ಸೇವನೆಯ ವ್ಯವಸ್ಥೆ ತೊಲಗಲಿಚಿಕ್ಕನಾಯಕನಹಳ್ಳಿ,ಮೇ.05:

ಆಸ್ಪತ್ರೆಗಳಲ್ಲಿ ಭಯಂಕರ ರೋಗಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ತಂಬಾಕು ಸೇವನೆ ಮಾಡುವವರೆ ಹೆಚ್ಚಾಗಿದ್ದು ಈ ವ್ಯವಸ್ಥೆಯನ್ನು ತೊಡೆದು ಹಾಕುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪ ತಿಳಿಸಿದರು.ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆದ ಕಾಮರ್ಿಕರ ದಿನಾಚರಣೆ ಮತ್ತು ತಂಬಾಕು ಸೇವನೆ ವಿರೋದಿ ದಿನಾಚರಣೆಯಲ್ಲಿ ಮಾತನಾಡಿದ ಅವರು ಕಾಮರ್ಿಕರ ದಿನಾಚರಣೆಯ ಜೊತೆಗೆ ತಂಬಾಕು ಪಾಲನೆಯ ನಿಮರ್ೂಲನೆಯ ದಿನಾಚರಣೆ ಅಗತ್ಯವಾಗಿದೆ, ತಂಬಾಕು ಸೇವಿಸುವ ಹಲವರು ತಮ್ಮ ಸಂಸಾರದ ಸುಖವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಕಾಮರ್ಿಕರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ, ಕಾಮರ್ಿಕರು ಕಾಯರ್ೋನ್ಮುಖರಾಗಿದ್ದಾಗ ಆಗುವ ಆಕಸ್ಮಿಕ ಅವಗಡಗಳಿಗೆ ಹೆಚ್ಚು ಗಮನ ಹರಿಸಬೇಕು ಎಂದ ಅವರು, ತಂಬಾಕು ಸೇವನೆ ನಿಷೇದವಾದದು ಎಂದು ತಂಬಾಕಿನ ಮೇಲೆ ಬರೆದರೂ ಯಾರೂ ಅದರ ಬಗ್ಗೆ ಗಮನ ಹರಿಸದೇ ಅದರಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಅಲ್ಲದೇ ಚಿಕ್ಕ ವಯಸ್ಸಿನ ಮಕ್ಕಳು ತಂಬಾಕು ಸೇವನೆ ಮಾಡುತ್ತಿದ್ದಾರೆ ಇಂತಹ ತಪ್ಪು ವ್ಯವಸ್ಥೆ ಬದಲಾಗಬೇಕು ಎಂದರು.ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್ ಮಾತನಾಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಉಂಟಾಗುವುದುದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ತಂಬಾಕಿನ ಸೇವನೆಯಿಂದ ದೂರು ಉಳಿಯುವುದು ಒಳ್ಳೆಯದು ಎಂದರು.ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್, ಉಪಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಕೀಲ ಶ್ರೀಧರ್ ಸ್ವಾಗತಿಸಿದರೆ, ವಕೀಲ ಹನುಮಂತಪ್ಪ ನಿರೂಪಿಸಿ, ಶಿರಸ್ತೆದಾರ್ ಕೆ.ವಿ.ಕುಮಾರ್ ವಂದಿಸಿದರು.

Wednesday, May 4, 2011







ನಾಟಕೋತ್ಸವದಲ್ಲಿ ವೃತ್ತಿ ರಂಗಭೂಮಿ, ಕಲಾ ಪ್ರಕಾರಗಳ ಬಗ್ಗೆ ವಿಚಾರಗೋಷ್ಠಿ ಚಿಕ್ಕನಾಯಕನಹಗ್ಳ,ಮೇ.04: ನಾಟಕೋತ್ಸವದ ಸಂದರ್ಭದಲ್ಲಿ ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡಿದ್ದು, ಮೇ 7ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 2 ಮತ್ತು ಮಧ್ಯಾಹ್ನ 2.45ರಿಂದ 5ಗಂಟೆಯವರೆಗೆ ಎರಡು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.ಬೆಳಗ್ಗೆ 11.30ಕ್ಕೆ ಸಾಹಿತಿ ಆರ್.ಬಸವರಾಜುರವರ ಅಧ್ಯಕ್ಷತೆಯಲ್ಲಿ ವೃತ್ತಿ ರಂಗಭೂಮಿ ಮತ್ತು ಗುಬ್ಬಿ ವೀರಣ್ಣನವರ ಬಗ್ಗೆ ಪ್ರೊ.ಟಿ.ಎಸ್.ನಾಗರಾಜಶೆಟ್ಟಿ, ರಂಗಭೂಮಿ ಅಂದು-ಇಂದು ಎಂಬುವುದರ ಬಗ್ಗೆ ಡಾ.ಅಬ್ದುಲ್ ಹಮೀದ್, ಸಿ.ಬಿ.ಮಲ್ಲಪ್ಪ-ನನ್ನ ಪ್ರೀತಿಯ ತಾತ ಎಂಬುವುದರ ಬಗ್ಗೆ ಸಿ.ಎಂ.ಲಿಂಗದೇವರು ಮಾತನಾಡಲಿದ್ದಾರೆ.ಮಧ್ಯಾಹ್ನ 2.45ಕ್ಕೆ ಸಾಹಿತಿ ಎಂ.ವಿ.ನಾಗರಾಜ್ರಾವ್ರವರ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಯ ಕಲಾ ಪ್ರಕಾರಗಳು ವಿಷಯದ ಬಗ್ಗೆ ಕಂಟಲಗೆರೆ ಸಣ್ಣಹೊನ್ನಯ್ಯ, ತುಮಕೂರು ಜಿಲ್ಲೆ ನಾಟಕ ಪರಂಪರೆಯ ಬಗ್ಗೆ ಕೆ.ಎಸ್.ಸತೀಶ್ ಗುಬ್ಬಿ, ಚಿ.ನಾ.ಹಳ್ಳಿ ತಾಲೂಕು ಕಲಾತಂಡಗಳ ಬಗ್ಗೆ ಸಿ.ಎ.ಕುಮಾರಸ್ವಾಮಿ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಶಿವಲಿಂಗಮೂತರ್ಿ ನಿರೂಪಿಸಲಿದ್ದಾರೆ.
ನೂತನ ದೇವಾಲಯ ಪ್ರಾರಂಭೋತ್ಸವಚಿಕ್ಕನಾಯಕನಹಳ್ಳಿ

,ಮೇ.04 : ಶ್ರೀ ನರಸಿಂಹಸ್ವಾಮಿ ದೇವರ ನೂತನ ದೇವಾಲಯದ ಪ್ರಾರಂಭೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 15ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಜೆ.ಸಿ.ಪುರ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮಿಜಿಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಸುತ್ತೂರು ಕ್ಷೇತ್ರದ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿಕೇಂದ್ರಸ್ವಾಮಿ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದು ಬಳ್ಳೆಕಟ್ಟೆ ಸಂಸ್ಥಾನದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮಿ, ಗೋಡೆಕೆರೆ ಸ್ಥಿರಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃಂತ್ಯುಂಜಯ ದೇಶಿಕೇಂದ್ರ ಸ್ವಾಮಿ, ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಯತೀಶ್ವರ ಶಿವಚಾರ್ಯಸ್ವಾಮಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರಸ್ವಾಮಿ, ಅಂತರರಾಷ್ಟ್ರೀಯ ಇಸ್ಕಾನ್ ಕೇಂದ್ರದ ನಿದರ್ೇಶಕ ದಯಾರಾಮ್ದಾಸ್ ಉಪಸ್ಥಿತರಿರುವರು.


ಜನಸ್ಪಂದನ ಸಭೆಚಿಕ್ಕನಾಯಕನಹಳ್ಳಿ,ಮೇ.05:

ಹುಳಿಯಾರು ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಇದೇ 7ರ ಶನಿವಾರ ಬೆಳಗ್ಗೆ 11ಗಂಟೆಗೆ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉಚಿತ ಸಾಮೂಹಿಕ ಉಪನಯನ ಮತ್ತು ರಾಮಾನುಜಾಚಾರ್ಯ ಜಯಂತಿಚಿಕ್ಕನಾಯಕನಹಳ್ಳಿ,ಮೇ.05:

ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಮತ್ತು ಶ್ರೀ ರಾಮಾನುಜಾಚಾರ್ಯ ಜಯಂತಿ ಮಹೋತ್ಸವವನ್ನು ಇದೇ 11ರ ಬುಧವಾರದಂದು ಏರ್ಪಡಿಸಲಾಗಿದೆ ಎಂದು ಸಾಲ್ಕಟ್ಟೆ ಶ್ರೀನಿವಾಸ್ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ತಾಲೂಕು ವೈಷ್ಣವ ಸಂಘದ ವತಿಯಿಂದ ತಾಲೂಕಿನ ಸಾದರಹಳ್ಳಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು ಭಾಗವಹಿಸುವ ವಟುಗಳಿಗೆ ಪರಿಕರಗಳನ್ನು ಸಂಘವೇ ಒದಗಿಸಲಿದ್ದು ಉಪನಯನ ಮಾಡಿಸುವ ವಟು ಮತ್ತು ತಂದೆ ತಾಯಿ ಇದೇ ತಿಂಗಳ 10ರ ಸಂಜೆ 5 ಗಂಟೆಗೆ ಸಾದರಹಳ್ಳಿ ಗ್ರಾಮಕ್ಕೆ ಆಗಮಿಸಬೇಕಾಗಿ ಮತ್ತು ಉಪನಯನ ಮಾಡಿಸುವವರು ತಾಲ್ಲೂಕು ಶ್ರೀವೈಷ್ಣವ ಸಂಘ ಮತ್ತು , ಹೆಚ್ಚಿನ ವಿವರಗಳಿಗಾಗಿ 9448748206, 9164030784 ಮೊ.ನಂ.ಗೆ ಸಂಪರ್ಿಸಲು ಕೋರಿದ್ದಾರೆ.
ನಾಟಕ ಸ್ಫಧರ್ೆಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರಚಿಕ್ಕನಾಯಕನಹಳ್ಳಿ,ಮೇ.05: ಸಿ.ಬಿ.ಮಲ್ಲಪ್ಪನವರ 125ನೇ ಜನ್ಮವಷರ್ಾಚರಣೆಗಾಗಿ ಏರ್ಪಡಿಸಿರುವ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ಗೆಲುವು ಪಡೆದ ತಂಡಗಳಿಗೆ ಪ್ರಥಮ ಬಹುಮಾನವಾಗಿ 15ಸಾವಿರ. ದ್ವಿತೀಯ ಬಹುಮಾನ 10ಸಾವಿರ, ಹಾಗೂ ತೃತೀಯ ಬಹುಮಾನ 7500ರೂ ಸಾವಿರ ರೂಗಳು ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದರು.ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 5ರಂದು ಸಿ.ಬಿ.ಮಲ್ಲಪ್ಪನವರ ಭಾವಚಿತ್ರವನ್ನು ಹೊತ್ತ ವಾಹನದಲ್ಲಿ ಪ್ರವಾಸಿ ಮಂದಿರದಿಂದ ಕನ್ನಡ ಸಂಘದ ವೇದಿಕೆಯವರೆಗೆ ಮೆರವಣಿಗೆಯ ಮೂಲಕ ಆಗಮಿಸಿ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ತಿಳಿಸಿದ ಅವರು ತಾಲ್ಲೂಕಿನಲ್ಲಿರುವ ಹತ್ತು ಕಲಾವಿದರಾದ ಕುಪ್ಪೂರು ಕೃಷ್ಣಮೂತರ್ಿ, ದೇವರಮನೆ ಆಂಜಿನಪ್ಪ, ಷರಾಪ್ ಶಿವಣ್ಣ, ಅನಂತರಾಮು ಹೊಸಳ್ಳಿ, ಹಂದನಕೆರೆ ಕರಿಯಣ್ಣಶೆಟ್ಟರು, ದೇವಿನಾಟಕದ ಕೆಂಪಣ್ಣ, ಹುಳಿಯಾರಿನ ಮಂಜುಳಮ್ಮ, ಕಂದಿಕೆರೆ ಶಂಕರಲಿಂಗಪ್ಪ, ಎಲ್ಲೇನಹಳ್ಳಿ ಮೂರ್ತಣ್ಣ, ಚಿ.ನಾ.ಹಳ್ಳಿ ಕೃಷ್ಣಾಚಾರ್ರವರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ, ಸದಸ್ಯರಾದ ಸಿದ್ದು ಜಿ.ಕೆರೆ, ಜಯಣ್ಣ, ಶ್ರೀನಿವಾಸ್, ಅನಂತರಾಮು, ಗಂಗಾದರ್, ಸಿದ್ದರಾಮಯ್ಯ, ನಾಗರಾಜು ಉಪಸ್ಥಿತರಿದ್ದರು.

Tuesday, May 3, 2011



ಚಿಕ್ಕನಾಯಕನಹಳ್ಳಿ,ಮೇ.02: ಮಾಲೀಕರ, ಕಾಮರ್ಿಕರ ಭಾಂದವ್ಯವು ಉತ್ತಮವಾಗಿದ್ದರೆ ಕಾಖರ್ಾನೆಗಳಲ್ಲಿ ಯಾವುದೇ ಆಂತರಿಕ, ಬಾಹ್ಯ ಸಮಸ್ಯೆಗಳು ಎದುರಾಗದೆ ಕಾಖರ್ಾನೆಗಳ ಕೆಲಸಗಳು ಶಾಂತಿಯುತವಾಗಿ ನಡೆಯುತ್ತವೆ ಎಂದು ಸಿವಿಲ್ ನ್ಯಾಯಾದೀಶರಾದ ಎ.ಜಿ.ಶಿಲ್ಪ ಅಭಿಪ್ರಾಯಪಟ್ಟರು.ಪಟ್ಟಣದ ಕುಶಾಲ್ ಗಾಮರ್ೆಂಟ್ಸ್ ಆವರಣದಲ್ಲಿ ನಡೆದ ಕಾಮರ್ಿಕ ದಿನಾಚರಣೆ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಖರ್ಾನೆಗಳಲ್ಲಿ ಸ್ವಚ್ಚತೆಯ ವ್ಯವಸ್ಥೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಕಾಮರ್ಿಕರು ಸಂಘಟಿತರಾಗಿ ಕಾನೂನಿನ ಹಿತರಕ್ಷಣೆ ತಿಳಿದುಕೊಂಡು ತಮ್ಮ ಹಕ್ಕುಗಳನ್ನು ಪಡೆಯಬೇಕು. ಮಹಿಳಾ ಕಾಮರ್ಿಕರು ಮಹಿಳಾ ಸಬಲೀಕರಣಕ್ಕಾಗಿ, ತಮಗೆ ಸಿಗಬೇಕಾದ ಸಮಾನ ಸ್ಥಾನಮಾನ ಅವಕಾಶಗಳನ್ನು ತಿಳಿಯಲು ಕಾನೂನಿನ ಅರಿವನ್ನು ತಿಳಿದುಕೊಳ್ಳಬೇಕು ಮತ್ತು ಕಾನೂನಿನಲ್ಲಿರುವ ವಿಷಯಗಳನ್ನು ಪ್ರತಿಯೊಬ್ಬರಿಗೂ ತಿಳಿಸುವುದೇ ಕಾನೂನು ಸೇವಾ ಸಮಿತಿಯ ಉದ್ದೇಶವಾಗಿದೆ. ಕಾನೂನು ಸೇವಾ ಸಮಿತಿಯಡಿಯಲ್ಲಿ ಮಹಿಳೆಯರು ತಮಗೆ ಆಗಿರುವ ಅನ್ಯಾಯದ ಬಗ್ಗೆ ಉಚಿತವಾಗಿ ನ್ಯಾಯ ಪಡೆಯಬಹುದು ಮತ್ತು ಸಂಸಾರದಲ್ಲಿ ಪ್ರತಿ ವಸ್ತುಗಳ ಬೆಲೆಯು ಏರಿಕೆಯಾಗುತ್ತಿರುವುದರಿಂದ ಗಂಡು-ಹೆಣ್ಣು ಖಚರ್ು, ವೆಚ್ಚಗಳಿಗೆ ಸಮಪಾಲು ನೀಡುವ ಮೂಲಕ ಮಹಿಳಾ ಕಾಮರ್ಿಕರು ಸಮಾಜಮುಖಿ ಎಂಬುದು ತಿಳಿಯಬೇಕಾಗಿದೆ ಎಂದ ಅವರು ಭಾರತ ದೇಶವು ಕಾಮರ್ಿಕರಿಂದಲೇ ಆಥರ್ಿಕವಾಗಿ ಸದೃಡವಾಗಿದ್ದು ಕಾನೂನಿನ ಚೌಕಟ್ಟಿನಲ್ಲಿರುವ ಕಾಖರ್ಾನೆಗಳು ಕಾಮರ್ಿಕರ ಹಿತದೃಷ್ಠಿಯನ್ನು ಹೊಂದಿರಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ದಿನನಿತ್ಯದ ಕೂಲಿಗಾಗಿ ಶ್ರಮಿಸುವವರೆ ಕಾಮರ್ಿಕರಾಗಿದ್ದು ಅವರಿಗೆ ಬೇಕಾಗಿರುವ ಸಾಮಾನ್ಯ ಕಾನೂನಿನ ಅರಿವು ತಿಳಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.ಸಕರ್ಾರಿ ಅಭಿಯೋಜಕಾರದ ಆರ್.ಟಿ.ಆಶಾ ಮಾತನಾಡಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾನೂನಿನ ಅರಿವನ್ನು ತಿಳಿದುಕೊಳ್ಳಲು ಕಾನೂನಿನ ಅರಿವು ನಡೆಯುವ ಕಾರ್ಯಗಾರದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.ಕುಶಾಲ್ ಗಾಮರ್ೆಂಟ್ಸ್ ಮಾಲೀಕ ಎಸ್.ಎಲ್.ಶಾಂತಕುಮಾರ್ ಮಾತನಾಡಿ ನಮ್ಮ ಕಂಪನಿಯಲ್ಲಿ ಕಾಮರ್ಿಕರ ದಿನಾಚರಣೆ ನಡೆಸಲು ಸಹಕರಿಸಿದ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದವರಿಗೆ ಧನ್ಯವಾದವನ್ನು ಅಪರ್ಿಸಿದರು.ಸಮಾರಂಭದಲ್ಲಿ ವಕೀಲರರಾದ ವೈ.ಜಿ.ಲೋಕೇಶ್ ಕಾಮರ್ಿಕರ ಕಾಯಿದೆಗಳ ಬಗ್ಗೆ , ಆರ್.ಎ.ಎಲಿಜಬೆತ್ರಾಣಿ ಮಹಿಳಾ ಕಾಮರ್ಿಕರ ಹಿತರಕ್ಷಣೆಯ ಬಗ್ಗೆ ವಿಷಯ ಮಂಡಿಸಿದರು.ಸಮಾರಂಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದಶರ್ಿ ಸಿ.ರಾಜಶೇಖರ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಕೀಲರಾದ ಚಿಕ್ಕಣ್ಣ ಸ್ವಾಗತಿಸಿದರೆ, ಹೆಚ್.ಟಿ.ಹನುಮಂತಯ್ಯ ನಿರೂಪಿಸಿ, ದಿಲೀಪ್ ವಂದಿಸಿದರು.
ನಾಟಕೋತ್ಸವದಲ್ಲಿ ವಿಚಾರ ಸಂಕಿರಣ ಮತ್ತು 10ಕಲಾವಿದರಿಗೆ ಸನ್ಮಾನಚಿಕ್ಕನಾಯಕನಹಳ್ಳಿ,ಮೇ.2: ರಾಜ್ಯ ಮಟ್ಟದ ನಾಟಕೋತ್ಸವದ ಅಂಗವಾಗಿ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭವನ್ನು ಮೇ 7ರಂದು ನಾಟಕರತ್ನ ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಶ್ರೀ ರಂಗರಂಗ ಹವ್ಯಾಸಿ ಕಲಾತಂಡದ ಅಧ್ಯಕ್ಷ ಎಸ್.ನಾಗಣ್ಣ ಉದ್ಘಾಟನೆ ನೆರವೇರಿಸಲಿದ್ದು ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಹೊನ್ನವಳ್ಳಿ ನಟರಾಜ್, ರಾಜ್ಕುಮಾರ್ ವಿಶ್ವೇಶ್ವರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಸದಸ್ಯ ವರದರಾಜು, ಈಶ್ವರಭಾಗವತ್, ಕೃಷ್ಣಮೂತರ್ಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವಲೋಚನ, ಬನಶಂಕರಿ ಸೊಸೈಟಿ ಅಧ್ಯಕ್ಷ ಸಿ.ಜಿ.ಕಿರಣ್, ಸಾಹಿತಿ ಎನ್.ನಾಗಪ್ಪ, ಸಿ.ಡಿ.ಪಿ.ಓ ಅನೀಸ್ಖೈಸರ್, ತಾ.ದೇವಾಂಗ ಸಂಘದ ಅಧ್ಯಕ್ಷ ಶೇಷಪ್ಪ, ಉಪಸ್ಥಿತರಿರುವರು.ತಾಲೂಕು ಹತ್ತು ಕಲಾವಿದರಿಗೆ ಸನ್ಮಾನ: ತಾಲೂಕಿನ ಹತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮೇ 8ರಂದು ಸಂಜೆ 6ಕ್ಕೆ ದಿ.ಕುಪ್ಪೂರು ಗೋಪಾಲರಾವ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ರಂಗಭೂಮಿಯ ಪ್ರಸಿದ್ದ ನಟ ಬಾಬು ಹಿರಣ್ಣಯ್ಯ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂದರು ಹಾಗೂ ಒಳನಾಡು ಸಾರಿಗೆ ಸಚಿವಾಲಯದ ವಿಶೇಷಾಧಿಕಾರಿ ರಘುಶೆಟ್ಟಿಗಾರ್ ಸನ್ಮಾನಿತರಿಗೆ ಸನ್ಮಾನಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಕೆ.ಎಸ್.ಲೋಕೇಶ್, ತಾ.ಪಂ.ಮಾಜಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ತಾ.ಪಂ.ಸದಸ್ಯ ಶಶಿಧರ್, ನಿವೃತ್ತ ಕೃಷಿ ಅಧಿಕಾರಿ ಸಿ.ಹೆಚ್.ನಾಗರಾಜು, ಪುರಸಭಾ ಸದಸ್ಯೆ ಶುಭಾ ಬಸವರಾಜು, ತಾ.ಕಸಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಪಿ.ಎಲ್.ಡಿ.ಟಿ ನಿದರ್ೇಶಕ ಟಿ.ಶಂಕರಲಿಂಗಪ್ಪ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜ್ಕುಮಾರ್, ಟೌನ್ ಬ್ಯಾಂಕ್ ನಿದರ್ೇಶಕ ಶಶಿಕುಮಾರ್ ಉಪಸ್ಥಿತರಿರುವರು.

Saturday, April 30, 2011

ಮೇ 5ರಿಂದ 9ರವರಗೆ ರಾಜ್ಯ ಮಟ್ಟದ ನಾಟಕೋತ್ಸವ : ಸಿಡಿಸಿ

ಚಿಕ್ಕನಾಯಕನಹಳ್ಳಿ,ಏ.30: ಸಿ.ಬಿ.ಮಲ್ಲಪ್ಪನವರ 125ನೇ ಜನ್ಮವಷಾಚರಣೆ, ರಾಜ್ಯ ಮಟ್ಟದ ನಾಟಕೋತ್ಸವ ಮತ್ತು ನಾಟಕ ಸ್ಪಧರ್ೆ ಹಾಗೂ ರಂಗಗೀಗೆಗಳ ಸ್ಪದರ್ೆ, ವಿಚಾರ ಸಂಕಿರಣವನ್ನು ಮೇ 5ರಿಂದ 9ರವರಗೆ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ದಿವ್ಯಜ್ಯೋತಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.ದಿವ್ಯಜ್ಯೋತಿ ಹವ್ಯಾಸಿ ಕಲಾ, ರಾಜ್ಯ ನಾಟಕ ಅಕಾಡೆಮೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋದಲ್ಲಿ ನಾಟಕೋತ್ಸವ ಹಮ್ಮಿಕೊಂಡಿದ್ದು ಉದ್ಘಾಟನಾ ಸಮಾರಂಭವನ್ನು ಮೇ.5ರಂದು ಸಂಜೆ 5-30ಕ್ಕೆ ದಿ.ಎನ್.ಬಸವಯ್ಯನವರ ವೇದಿಕೆ ಯಲ್ಲಿ ಹಮ್ಮಿಕೊಂಡಿದ್ದು ಸಮಾರಂಭದ ಉದ್ಘಾಟನೆಯನ್ನು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಡಾ ಬಿ.ವಿ.ರಾಜಾರಾಂ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ರಂಗಾಯಣ ನಿದರ್ೇಶಕರಾದ ಲಿಂಗದೇವರು ಹಳೆಮನೆ, ಜಿಲ್ಲಾ ಹಿಂದುಳಿದ &ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ. ಮುದ್ದುಕುಮಾರ್, ಚಲನಚಿತ್ರ ನಿದರ್ೇಶಕ ಬೂದಾಳ್ ಕೃಷ್ಣಮೂತರ್ಿ, , ತಾ.ಪಂ.ಅಧ್ಯಕ ಸೀತಾರಾಮಯ್ಯ, ರಾಜ್ಯ ಅಡ್ವೋಕೇಟ್ ಸೊಸೈಟಿ ಅಧ್ಯಕ್ಷ ರಮೇಶ್ಬಾಬು, ಕೆ.ಬಿ.ರಮೇಶ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಜಿ.ಪಂ.ಸದಸ್ಯ ಪಂಚಾಕ್ಷರಯ್ಯ, ಚಲನಚಿತ್ರ ನಟಿ ಹೇಮಾಶ್ರೀ, ತಾ.ಪಂ.ಕಾರ್ಯನಿರ್ವಣಾಧಿಕಾರಿ ಎ.ಎಂ.ದಯಾನಂದ್, ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತಿಮಾ, ಪುರಸಭೆ. ಉಪಾಧ್ಯಕ್ಷ ರವಿ (ಮೈನ್ಸ್), ಪುರಸಭೆ ಸದಸ್ಯೆ ರುಕ್ಮಿಣಮ್ಮ, ಉಪಸ್ಥಿತರಿರುವರು.ಬಸವಜಯಂತಿ ಹಾಗೂ 2ನೇ ದಿನದ ನಾಟಕ ಸ್ಪಧರ್ೆ ಉದ್ಘಾಟನೆ : ಬಸವಜಯಂತಿ ಹಾಗೂ 2ನೇ ದಿನದ ನಾಟಕ ಸ್ಪಧರ್ೆ ಉದ್ಘಾಟನೆಯನ್ನು ಮೇ 6ರಂದು ಸಿ.ಎಚ್.ಲಿಂಗದೇವರುರವರ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಂಡಿದ್ದು ತಮ್ಮಡಿಹಳ್ಳಿ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ.ದಿವ್ಯಜ್ಯೋತಿ ಕಲಾ ಸಂಘದ ಮಾಜಿ ಅಧ್ಯಕ್ಷ ಚಿ.ನಿ.ಪುರಷೋತ್ತಮ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ತಾಲೂಕು ಮಾಜಿ ಬಿಜೆಪಿ ಅಧ್ಯಕ್ಷ ಸಿ.ಎಲ್.ಜಯದೇವ್, ಪಿ.ಎಲ್. ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ. ನಾಗರಾಜ್, ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಭಾರತಿ ನಟರಾಜ್, ಪುರಸಭೆ ಮುಖ್ಯಾಧಿಕಾರಿ ಹೆಚ್.ಹೊನ್ನಪ್ಪ, ಪುರಸಭೆ ಸದಸ್ಯರಾದ ಎಂ.ಎಸ್.ರವಿಕುಮಾರ್, ಕವಿತಾ ಚನ್ನಬಸವಯ್ಯ, ರಾಜು, ಎಂ. ಎನ್. ಸುರೇಶ್, ಗಾಯಿತ್ರಿ ಪುಟ್ಟಯ್ಯ, ನೇತಾಜಿ ಯುವಕಸಂಘದ ಮಾಜಿ ಉಪಾಧ್ಯಕ್ಷ ಎಚ್. ಬಿ.ಕಿರಣ್, ತಾ ಬಿ.ಜೆ.ಪಿ. ಅಧ್ಯಕ ಶಿವಣ್ಣ, ಸಿ.ಪಿ.ಐ ರವಿಪ್ರಸಾದ್, ವಕೀಲರ ಸಂಘ ಅಧ್ಯಕ್ಷ ಶಿವಾನಂದ, ವಕೀಲ ಸಾ.ಚಿ.ರಾಜಕುಮಾರ, ಕನ್ನಡ ಯುವ ಕ್ರೀಡಾಕಲಾಸಂಘ ಅಧ್ಯಕ್ಷ ಸಿ.ಬಿ. ಲೋಕೇಶ್, ಉಪಸ್ಥಿತರಿರುವರು.ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ : ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭವನ್ನು ಮೇ 7ರಂದು ನಾಟಕರತ್ನ ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಶ್ರೀ ರಂಗರಂಗ ಹವ್ಯಾಸಿ ಕಲಾತಂಡದ ಅಧ್ಯಕ್ಷ ಎಸ್.ನಾಗಣ್ಣ ಉದ್ಘಾಟನೆ ನೆರವೇರಿಸಲಿದ್ದು ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಹೊನ್ನವಳ್ಳಿ ನಟರಾಜ್, ರಾಜ್ಕುಮಾರ್ ವಿಶ್ವೇಶ್ವರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಸದಸ್ಯ ವರದರಾಜು, ಈಶ್ವರಭಾಗವತ್, ಕೃಷ್ಣಮೂತರ್ಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವಲೋಚನ, ಬನಶಂಕರಿ ಸೊಸೈಟಿ ಅಧ್ಯಕ್ಷ ಸಿ.ಜಿ.ಕಿರಣ್, ಸಾಹಿತಿ ಎನ್.ನಾಗಪ್ಪ, ಸಿ.ಡಿ.ಪಿ.ಓ ಅನೀಸ್ಖೈಸರ್, ತಾ.ದೇವಾಂಗ ಸಂಘದ ಅಧ್ಯಕ್ಷ ಶೇಷಪ್ಪ, ಉಪಸ್ಥಿತರಿರುವರು.3ನೇ ದಿನದ ನಾಟಕೋತ್ಸವದ ಉದ್ಘಾಟನೆ: 3ನೇ ದಿನದ ನಾಟಕೋತ್ಸವದ ಉದ್ಘಾಟನೆಯನ್ನು 7ರ ಸಂಜೆ 6ಗಂಟೆಗೆ ದಿ.ಚಿಕ್ಕರಾಮಯ್ಯನವರ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿದರ್ೇಶಕ ಎಂ.ಎಸ್.ಚಂದ್ರಪ್ಪ ಉದ್ಘಾಟನೆ ನೆರವೇರಿಸಲಿದ್ದು ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಜಿ.ಪಂ.ಸದಸ್ಯೆ ಲೋಹಿತಬಾಯಿ, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಸಿ.ಜಿ.ರಾಜಣ್ಣ, ಸಿ.ಪಿ.ಮಹೇಶ್, ಬಾಬುಸಾಹೇಬ್, ಸುಮಿತ್ರ ಕಣ್ಣಯ್ಯ, ರೇಣುಕಾ ಗುರುಮೂತರ್ಿ, ಶಾರದ ಶಂಕರಬಾಬು, ಲಕ್ಷ್ಮಯ್ಯ, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್, ಸೃಜನಾ ಕಾರ್ಯದಶರ್ಿ ಎನ್.ಇಂದಿರಮ್ಮ, ಜಲಾನಯನ ಅಭಿವೃದ್ದಿ ಇಲಾಖೆಯ ಮಲ್ಲಿಕಾಜರ್ುನಯ್ಯ, ಯೋ.ವಿ.ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ವಿಶ್ವನಾಥ, ಛಲವಾದಿ ಸಂಘದ ಅಧ್ಯಕ್ಷ ದೇವರಾಜು ಉಪಸ್ಥಿತರಿರುವರು.ತಾಲೂಕು ಹತ್ತು ಕಲಾವಿದರಿಗೆ ಸನ್ಮಾನ: ತಾಲೂಕು ಹತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮೇ 8ರಂದು ಸಂಜೆ 6ಕ್ಕೆ ದಿ.ಕುಪ್ಪೂರು ಗೋಪಾಲರಾವ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ರಂಗಭೂಮಿಯ ಪ್ರಸಿದ್ದ ನಟ ಬಾಬು ಹಿರಣ್ಣಯ್ಯ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂದರು ಹಾಗೂ ಒಳನಾಡು ಸಾರಿಗೆ ಸಚಿವಾಲಯದ ವಿಶೇಷಾಧಿಕಾರಿ ರಘುಶೆಟ್ಟಿಗಾರ್ ಸನ್ಮಾನಿತರಿಗೆ ಸನ್ಮಾನಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಕೆ.ಎಸ್.ಲೋಕೇಶ್, ತಾ.ಪಂ.ಮಾಜಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ತಾ.ಪಂ.ಸದಸ್ಯ ಶಶಿಧರ್, ನಿವೃತ್ತ ಕೃಷಿ ಅಧಿಕಾರಿ ಸಿ.ಹೆಚ್.ನಾಗರಾಜು, ಪುರಸಭಾ ಸದಸ್ಯೆ ಶುಭಾ ಬಸವರಾಜು, ತಾ.ಕಸಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಪಿ.ಎಲ್.ಡಿ.ಟಿ ನಿದರ್ೇಶಕ ಟಿ.ಶಂಕರಲಿಂಗಪ್ಪ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜ್ಕುಮಾರ್, ಟೌನ್ ಬ್ಯಾಂಕ್ ನಿದರ್ೇಶಕ ಶಶಿಕುಮಾರ್ ಉಪಸ್ಥಿತರಿರುವರು.ರಾಜ್ಯ ಮಟ್ಟದ ರಂಗಗೀತೆ ಹಾಗೂ ಪೌರಾಣಿಕ ದೃಶ್ಯಾವಳಿ ಉದ್ಘಾಟನೆ: ರಾಜ್ಯ ಮಟ್ಟದ ರಂಗಗೀತೆ ಹಾಗೂ ಪೌರಾಣಿಕ ದೃಶ್ಯಾವಳಿಯನ್ನು ಮೇ 9ರಂದು ಬೆಳಗ್ಗೆ 10 ಗಂಟೆಗೆ ದಿ.ಸಿ.ವಿ.ರಾಮಚಂದ್ರಮೂತರ್ಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮೆನೆ ಶಿವನಂಜಪ್ಪ, ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ರಂಗಕಲಾವಿದೆ ಸುಮಿತ್ರಮ್ಮ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಹಸಿರು ಸೇನೆ ಜಿಲ್ಲಾ ಸಂಚಾಲಕ ಕೆಂಕೆರೆ ಸತೀಶ್, ಅನ್ನಪೂಣರ್ೇಶ್ವರಿ ಕಲಾ ಸಂಘದ ಅಧ್ಯಕ್ಷ ಸಿ.ಬಿ.ತಿಪ್ಪೇಸ್ವಾಮಿ, ದಿವ್ಯಜ್ಯೋತಿ ಕಲಾಸಂಘದ ಮಾಜಿ ಅಧ್ಯಕ್ಷ ಕೆ.ಜಿಕೃಷ್ಣೆಗೌಡ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ಸಿ.ಎಸ್.ರಮೇಶ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಬಿ.ಪ್ರಕಾಶ್, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಂಠಯ್ಯ, ಗುತ್ತಿಗೆದಾರ ಆಲದಕಟ್ಟೆ ತಿಮ್ಮಯ್ಯ, ಭುವನೇಶ್ವರಿ ಯುವಕ ಸಂಘದ ಅಧ್ಯಕ್ಷ ಸಿ.ಎಸ್.ರೇಣುಕಮೂತರ್ಿ, ದ.ಸಂ.ಸ ಸಂಚಾಲಕ ಲಿಂಗದೇವರು, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಜಿ.ಎಲ್.ಮಹೇಶ್, ಸ್ನೇಹಕೂಟ ಅಧ್ಯಕ್ಷ ವೈ.ವಿ.ನಂಜುಂಡಪ್ಪ ಉಪಸ್ಥಿತರಿರುವರು.ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಹುಮಾನಗಳ ವಿತರಣಾ ಸಮಾರಂಭ : ಮೇ 9ರಂದು ಸಿ.ಕೆ.ರಾಜಯ್ಯಶೆಟ್ಟರ ವೇದಿಕೆಯಲ್ಲಿ ಸಂಜೆ 7ಗಂಟೆಗೆ ಸಮಾರಂಭ ಹಮ್ಮಿಕೊಂಡಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಬಹುಮಾನ ವಿತರಣೆ ಮಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ಬಿ.ಎಸ್.ಲಿಂಗದೇವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.ತಾ.ಬಿ.ಜೆ.ಪಿ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ, ಮೈನಿಂಗ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಹೇಮಚಂದ್ರ, ಧರ್ಮದಶರ್ಿ ಸಿ.ಪಿ.ಚಂದ್ರಶೇಖರಶೆಟ್ಟರು, ಜಿಲ್ಲಾ ಪರಿಷತ್ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ, ಮಂಜುಳ ಗವಿರಂಗಯ್ಯ, ಶಂಕರಿ ಬಳಗದ ದ್ರಾಕ್ಷಾಯಣಮ್ಮ ಸೋಮಶೇಖರ್ ಉಪಸ್ಥಿತರಿರುವರು.ರಂಗಗೀತೆಗಳ ಸ್ಪಧರ್ೆ ಹಾಗೂ ಪೌರಾಣಿಕ ನಾಟಕಗಳ ದೃಶ್ಯಾವಳಿಗಳು: ಸಂಜೆ 5ಗಂಟೆಯಿಂದ ಪೌರಾಣಿಕ ನಾಟಕದ ದೃಶ್ಯಾವಳಿ, ದೃಶ್ಯಾವಳಿ 1: ಕುರುಕ್ಷೇತ್ರ: ಸನ್ನಿವೇಶ- ಶಯನಗೃಹ ವಿಧುರನ ಕುಠೀರ, ಸಂಗೀತ ನಿದರ್ೇಶನ ಸಿ.ಎಸ್.ಗಂಗಾಧರ್ ಮತ್ತು ತಂಡ, ದೃಶ್ಯಾವಳಿ 2: ಕುರುಕ್ಷೇತ್ರ : ಸನ್ನಿವೇಶ ದುಯರ್ೋಧನನ ದಬರ್ಾರು, ಸಂಗೀತ ನಿದರ್ೇಶನ ಕೆ.ಎಲ್.ಶಂಕರಲಿಂಗಪ್ಪ ಮತ್ತು ತಂಡ, ದೃಶ್ಯಾವಳಿ3: ಸಂಪೂರ್ಣ ರಾಮಾಯಣ- ಸುಗ್ರೀವ ಸಖ್ಯ, ಸಂಗೀತ ನಿದರ್ೇಶನ ಜಿ.ಎಲ್.ಮಹೇಶ್ ಮತ್ತು ತಂಡ, ದೃಶ್ಯಾವಳಿ4: ಸಂಪೂರ್ಣ ರಾಮಾಯಣ-ರಾವಣನ ದಬರ್ಾರು, ಸಂಗೀತ ನಿದರ್ೇಶನ ಸಿ.ಎಸ್.ಗಂಗಾಧರ್ ಮತ್ತು ತಂಡ, ದೃಶ್ಯಾವಳಿ 5 :ಯಕ್ಷಗಾನ ನೃತ್ಯ ರೂಪಕ, ಅನಂತು ಹೊಸಹಳ್ಳಿ ಸಂಗೀತ ನಿದರ್ೇಶಿಸಲಿದ್ದಾರೆ.

ಚಿಕ್ಕನಾಯಕನಹಳ್ಳಿ,ಏ.30: 2011-12ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿದೆ.ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಮೇ 4ರಂದು ಬೆಳಗ್ಗೆ 10 ಗಂಟೆಗೆ ತುಮಕೂರಿನ ಆರ್ಯನ್ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಬಿ.ಇ.ಓ ಸಾ.ಚಿ.ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, April 29, 2011













ಮೇ.2ರಂದು ಬಸವ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಮೇಳ







ಚಿಕ್ಕನಾಯಕನಹಳ್ಳಿ,ಏ.29: ಶ್ರೀ ಬಸವೇಶ್ವರ ಜಯಂತಿ ಮಹೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಮೇಳವನ್ನು ಮೇ 2ರ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಗೋಡೇಕೆರೆ ಶ್ರೀ ಸಿದ್ದರಾಮದೇಶೀಕೇಂದ್ರ ಸ್ವಾಮಿಗಳು ತಿಳಿಸಿದ್ದಾರೆ.ಪಟ್ಟಣದ ನನ್ನಯ್ಯ ಸ್ವಾಮಿಗಳ ಮಠದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಮೇಳವನ್ನು ಕೆ.ಬಿ.ಕ್ರಾಸ್ ಬಳಿ ಇರುವ ಶ್ರೀಮದ್ ರಂಭಾಪುರಿ ಶಾಲಾ ಸಂಕೀರ್ಣದಲ್ಲಿ ಏರ್ಪಡಿಸಲಾಗಿದೆ ಎಂದರಲ್ಲದೆ, ಜಾನಪದ ತತ್ವಪದಗಳು ನಶಿಸುತ್ತಿರುವ ಈಗಿನ ಕಾಲದಲ್ಲಿ ಅವುಗಳನ್ನು ಅಭಿವೃದ್ದಿ ಪಡಿಸಲು ಭಜನಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.6 ವರ್ಷಗಳಿಂದ ನಿರಂತರವಾಗಿ ಈ ಮೇಳವನ್ನು ಸಂಯೋಜಿಸಿಕೊಂಡು ಬರುತ್ತಿರುವುದಲ್ಲದೆ, ಪ್ರತಿ ತಿಂಗಳು ಏಕಾದಶಿಯೊಂದು ಸಂಜೆಯಿಂದ ಬೆಳಗಿನ ವರೆಗೆ ಮಠದಲ್ಲಿ ಭಜನಾ ಕಾರ್ಯಕ್ರಮ ಹಾಗೂ ತತ್ವಪದಗಳ ಮೇಲೆ ವಿಚಾರಗೋಷ್ಠಿಯನ್ನು ಹಮ್ಮಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಈ ಮೇಳದ ಉದ್ಘಾಟನೆಯನ್ನು ಮೇ 2ರ ಬೆಳಿಗ್ಗೆ 10ಕ್ಕೆ ಏರ್ಪಡಿಸಿದ್ದು ಗೋಡೇಕೆರೆ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮದೇಶೀಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮಿಜಿ, ಗೋಡೆಕೆರೆ ಚರ ಪಟ್ಟಾಧ್ಯಕ್ಷರಾದ ಮೃತ್ಯಂಜಯ ದೇಶಿಕೇಂದ್ರ ಸ್ವಾಮಿ, ಜಯಚಂದ್ರ ಶೇಖರ್ ಸ್ವಾಮಿಜೀ, ಇಮ್ಮಡಿ ಕರಿ ಬಸವ ದೇಶೀಕೇಂದ್ರ ಸ್ವಾಮಿಜಿ, ಡಾ. ಅಭಿನವ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮಿ, ಡಾ. ಯತೀಶ್ವರ ಶಿವಾಚಾರ್ಯಸ್ವಾಮಿ ಹಾಗೂ ಬೆಂಗಳೂರಿನ ನೆಸ್ಟರ್ ಪ್ರಾಜೆಕ್ಟ್ನ ವ್ಯವಸ್ಥಾಪಕ ನಿದರ್ೇಶಕ ಕೆ.ಜಿ.ಶಿವರುದ್ರಯ್ಯ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಭಜನಾ ಮೇಳದಲ್ಲಿ ನಿಜಗುಣರ ತತ್ವಪದಗಳು, ಶಂಕರಾನಂದರ ಪದ್ದತಿ ತತ್ವಪದಗಳು, ಸರ್ಪ ಭೂಷಣ ಶಿವಯೋಗಿ ತತ್ವಪದಗಳು, ಕೈವಲ್ಯ ನವನೀತ ಪದ್ದತಿ ತತ್ವಪದಗಳನ್ನಾದರೂ ಸ್ಪಧರ್ಿಗಳಲ್ಲಿ ಹಾಡಬಹುದು. ಮೇಳದಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ, ಹೆಣ್ಣು ಮತ್ತು ಗಂಡು ಮಕ್ಕಳು ಭಾಗವಹಿಸಬಹುದು, ಭಜನಾ ಸಲಕರಣೆಗಳನ್ನು ತಂಡಗಳೇ ತರಬೇಕು, ತಿಂಡಿ ಮತ್ತು ಊಟದ ವ್ಯವಸ್ಥೆ ಇದೆ, ಭಾಗವಹಿಸುವರಿಗೆಲ್ಲಾ ಪ್ರಶಸ್ತಿ ಪತ್ರ ನೀಡಲಾಗುವುದು, ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ 101ರೂಗಳನ್ನು ನಿಗದಿಪಡಿಸಲಾಗಿದೆ, ವೇಷಭೂಷಣಗಳಿಗೆ ಆದ್ಯತೆ ನೀಡಲಾಗುತ್ತದೆ, ಒಂದು ತಂಡಕ್ಕೆ ಕಾಲಮಿತಿ ನಿಗಧಿ ಪಡಿಸಲಾಗಿದೆ, ವಿಜೇತರಿಗೆ ನಗದು ರೂಪದಲ್ಲಿ ಬಹುಮಾನ ಕೊಡಲಾಗುವುದು. ಪ್ರಥಮ ಬಹುಮಾನವನ್ನು ಅತಿಹೆಚ್ಚು ಅಂಕ ಪಡೆದ ಮೊದಲ 5 ತಂಡಗಳಿಗೆ, ದ್ವಿತೀಯ ಬಹುಮಾನವನ್ನು ಹೆಚ್ಚು ಅಂಕ ಪಡೆದ 10 ತಂಡಗಳಿಗೆ, ತೃತೀಯ ಬಹುಮಾನವನ್ನು ಹೆಚ್ಚು ಅಂಕ ಪಡೆದ 10 ತಂಡಗಳಿಗೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ 9448709755, 9886806037, 9900684694 ಸಂಪಕರ್ಿಸಲು ಕೋರಿದೆ.

Thursday, April 28, 2011

Wednesday, April 27, 2011



ಜೈವಿಕ ಇಂಧನ ಕಾರ್ಯಗಾರ
ಚಿಕ್ಕನಾಯಕನಹಳ್ಳಿ,ಏ.27: ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಹಾಗೂ ತುಮಕೂರು ವಿಜ್ಞಾನ ಕೇಂದ್ರ ವತಿಯಿಂದ ಜೈವಿಕ ಇಂಧನ ಕಾರ್ಯಗಾರವನ್ನು ಇದೇ 29ರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.ಕಾರ್ಯಗಾರವನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಉದ್ಟಾಟನೆ ನೆರವೇರಿಸಲಿದ್ದಾರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ.ಜಿ. ನಾಯ್ಕ ಆಶಯ ನುಡಿಗಳನ್ನಾಡಲಿದ್ದಾರೆ,ಮುಖ್ಯ ಅತಿಥಿಗಳಾಗಿ ತಾ,ಪಂ, ಉಪಾಧ್ಯಕ್ಷೆ, ಬೀಬಿ ಫಾತಿಮಾ, ಜಿಲ್ಲಾ ವಿಜ್ಞಾನ ಕೇಂದ್ರ ಅಧ್ಯಕ್ಷ ಸಿ.ವಿಶ್ವನಾಥ್ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಜಿ.ಪಂ.ಸದಸ್ಯರಾದ ಎನ್.ಮಂಜುಳ, ನಿಂಗಮ್ಮ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಿ, ಜಿ.ಲೋಹಿತಾಬಾಯಿ, ತಾ.ಪಂ.ಸದಸ್ಯರಾದ ಜಯಲಕ್ಷ್ಮಿ, ಕೆ.ಎಂ.ನವೀನ್, ಕೆ.ಎಸ್.ಸುಮಿತ್ರ, ವೈ.ಎಂ.ಉಮಾದೇವಿ, ಹೆಚ್.ಆರ್.ಶಶಿಧರ, ಎ.ಬಿ.ರಮೇಶ್ಕುಮಾರ್, ಡಿ.ಶಿವರಾಜು, ಹೆಚ್.ಜಯಣ್ಣ, ಎ.ಜಿ.ಕವಿತಾ, ಎಂ.ಇ.ಲತಾ, ಎಂ.ಎಂ.ಜಗದೀಶ, ಟಿ.ಡಿ.ಚಿಕ್ಕಮ್ಮ, ಕೆ.ಆರ್.ಚೇತನಗಂಗಾಧರಯ್ಯ, ಬಿ.ಸಿ.ಹೇಮಾವತಿ, ಆರ್.ಪಿ.ವಸಂತಯ್ಯ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಎ.ಸಿ.ಎಫ್ ಮಾಗಡಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ವಲಯ ಅರಣ್ಯಾಧಿಕಾರಿ ಪಿ.ಎಚ್.ಮಾರುತಿ, ಇ.ಓ ಎನ್.ಎಂ.ದಯಾನಂದ್, ಎ.ಸಿ.ಎಫ್(ಸಾ.ಅ) ಕೆ.ಜಿ.ಉಮೇಶ್, ಸಿ.ಡಿ.ಪಿ.ಓ ಅನೀಶ್ ಖೈಸರ್, ವಲಯ ಅರಣ್ಯಾಧಿಕಾರಿ(ಪ್ರಾ.ಅ) ನಂಜುಂಡಪ್ಪ, ಉಪಸ್ಥಿತರಿರುವರು.

Monday, April 25, 2011

Saturday, April 23, 2011







ನೆಮ್ಮದಿಯ ಜೀವನ ನಡೆಸಲು ಉತ್ತಮ ಆರೋಗ್ಯ ಬೇಕು : ಡಿ.ಸಿ.ಸೋಮಶೇಖರ್ಚಿಕ್ಕನಾಯಕನಹಳ್ಳಿ,
.23 : ಜೀವನದ ಅರ್ಧ ಆಯುಷ್ಯನ್ನು ಆರೋಗ್ಯವನ್ನು ಕಾಪಾಡಿಕೊಳ್ಳಲು, ಆರೋಗ್ಯ ಕಾಪಾಡಲು ತಾವು ಸಂಪಾದಿಸಿದ ಸಂಪತ್ತನ್ನು ಖಚರ್ು ಮಾಡುತ್ತಾ ಜೀವನ ಕಳೆಯುತ್ತೇವೆ, ಇದನ್ನು ತಪ್ಪಿಸಲು ಆರೋಗ್ಯವನ್ನು ಉತ್ತಮವಾಗಿರಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದೆಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಅರುಣೋದಯ ಮಹಿಳಾ ಮಂಡಳಿ ಉದ್ಗಾಟನಾ ಸಮಾರಂಭದ ಅಂಗವಾಗಿ ನಡೆದ ಉಚಿತ ಸ್ತ್ರೀರೋಗ ತಪಾಸಣೆ, ಚಿಕಿತ್ಸೆ ಮತ್ತು ಸಲಹಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಜೀವನದ ಅರ್ಧ ಆಯುಷ್ನ್ನು ಹಣ ಸಂಪಾದನೆ ಮಾಡಲು, ಉಳಿದ ಅರ್ಧ ಆಯುಷ್ನ್ನು ಆರೋಗ್ಯ ಕಾಪಾಡಿಕೊಳ್ಳುವುದರಲ್ಲೇ ಜೀವನ ಕಳೆಯುತ್ತದೆ ಎಂದ ಅವರು ಇದನ್ನು ತಪ್ಪಿಸಲು ಆರೋಗ್ಯ ಉತ್ತಮವಾಗಿರಿಸಿಕೊಳ್ಳಬೇಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯು ಕಾರ್ಯನಿರ್ವಹಣಾಧಿಕಾರಿ ಶಿವಯೋಗಿ ಕಳಸದ ಮಾತನಾಡಿ ಮಹಿಳೆಯರು ಬಹಳ ಸಂಕೋಚ ಸ್ವಭಾವದವರಾಗಿದ್ದು, ತಮ್ಮ ಕಾಯಿಲೆಗಳ ಬಗ್ಗೆ ಬೇರೆಯವರ ಹತ್ತಿರ ಹೇಳಿಕೊಳ್ಳಲಾಗದಂತವರಿಗೆ ಆರೋಗ್ಯ ಆರೋಗ್ಯ ಶಿಬಿರಗಳು ಬಹಳ ಉಪಯುಕ್ತವಾಗಿದೆ, ಮತ್ತು ವೈಯಕ್ತಿಕ ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕು, ಪ್ರತಿಕುಟುಂಬವು ಶೌಚಲಯವನ್ನು ಹೊಂದಬೇಕು ಎಂದರು. ಸಂಘದ ಅಧ್ಯಕ್ಷೆ ಜಿ.ಎಸ್.ಕುಶಲ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಬಂದ ನಾನು ಗ್ರಾಮೀಣ ಪ್ರದೇಶದ ಮಹಿಳೆಯರು ಅನುಭವಿಸುತ್ತಿರುವ ಆರೋಗ್ಯದ ಸಮಸ್ಯಗಳನ್ನು ಬಹಳ ಹತ್ತಿರದಿಂದ ನೋಡಿರುವ ಕಾರಣ ಇಂತಹ ಕಾರ್ಯಕ್ರಮಗಳು ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ನಡೆಸಲು ನನಗೆ ಸಾಧ್ಯವಾಹಿತೆಂದು ಹೇಳಿದರು. ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ಎನ್.ಎಂ.ದಯಾನಂದ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಚನ್ನಮಲ್ಲಯ್ಯ, ನಗರಾಭಿವೃದ್ದಿ ಆಯುಕ್ತ ಆದರ್ಶಕುಮಾರ್, ತಾ.ಪಂ.ಸದಸ್ಯ ಜಗದೀಶ್, ವೈದ್ಯರುಗಳಾದ ಶ್ರೀಧರ್, ಮಹೇಂದ್ರ, ಗಣೇಡ್, ಗಂಗಾಮಣಿ. ಸುದರ್ಶನ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವೀಣಾರಮೇಶ್ ಪ್ರಾಥರ್ಿಸಿ, ತಾರಾ ಸ್ವಾಗತಿಸಿ, ಸಿ.ಎ.ರಮೇಶ್ಕೆಂಬಾಳ್ ನಿರೂಪಿಸಿ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಏ.23: ಗ್ರಾಮಾಂತರ ಪ್ರದೇಶದ ರೈತರು ಆಥರ್ಿಕವಾಗಿ ಸದೃಡವಾಗಲು ನಂದಿನಿ ಹಾಲು ಒಕ್ಕೂಟ ಹೆಚ್ಚಿನ ಪ್ರೋತ್ಸಾಹ ನೀಡಲು ಕಂಕಣ ಬದ್ದವಾಗಿದೆ ಎಂದು ಜಿಲ್ಲಾ ನಂದಿನಿ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಪ್ರತಿಪಾದಿಸಿದರು. ತಾಲೂಕಿನ ನವಿಲೆ ಗ್ರಾಮದ ಕಲ್ಲೇನಹಳ್ಳಿಯಲ್ಲಿ ನಂದಿನಿ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ ಕನರ್ಾಟಕ ಸಕರ್ಾರ ಹಾಲು ಹಾಕುವ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ, ಹಸು ಕೊಳ್ಳುವವರಿಗೆ ಧನ ಸಹಾಯ ಹಸುವಿಗೆ ವಿಮೆ ಸೌಲಭ್ಯ ಒಂದು ಲೀಟರ್ ಹಾಲಿಗೆ ಹೆಚ್ಚುವರಿ 2ರೂ ನೀಡಿಕೆ, ಮೇವು ಕತ್ತರಿಸುವ ಯಂತ್ರ ಕೊಳ್ಳುವವರಿಗೆ ಶೇ.25 ಸಬ್ಸಿಡಿ ಗ್ರಾಹಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ 2400 ರೂ. ಸಹಾಯ ಧನ ನೀಡುವುದು, ಆರೋಗ್ಯದ ವ್ಯವಸ್ಥೆಗೆ ಯಶಸ್ವಿನಿ ಯೋಜನೆ, ಮನೆ ಬಾಗಿಲಿಗೆ ಮಾಕರ್ೆಟ್ ವ್ಯವಸ್ಥೆ ಮುಂತಾದ ಅತ್ಯಮೂಲ್ಯವಾದ ಸೌಲಭ್ಯಗಳನ್ನು ಒಕ್ಕೂಟ ಒದಗಿಸಲಿದೆ, ಆದುದರಿಂದ ಖಾಸಗೀಯವರೊಂದಿಗೆ ವ್ಯವಹರಿಸದೆ, ಸಕರ್ಾರದ ಅಧೀನದ ಈ ಸಂಸ್ಥೆಯೊಂದಿಗೆ ಸಹಕರಿಸಿ, ಮುಂದಿನ ದಿನಗಳಲ್ಲಿ 250ಕ್ಕೂ ಹೆಚ್ಚಿನ ಲೀಟರ್ ಹಾಲು ನೀಡುವುದರ ಮುಖಾಂತರ ಮುಖ್ಯ ಕೇಂದ್ರವನ್ನಾಗಿಸಲು ಎಲ್ಲಾ ರೈತರು ಸಹಕರಿಸಬೇಕೆಂದರು. ಸ್ಥಳೀಯ ಶಿಕ್ಷಕರಾದ ಅಧ್ಯಕ್ಷ ಹಾಗೂ ಅಧಿಕಾರಿಗಳಿಳ ಉಪಕೇಂದ್ರ ಸಥಾಪನೆಗೆ ಸಹಕರಿಸಿದ ಅಧ್ಯಕ್ಷ ಹಾಗೂ ಅಧಿಕಾರಿಗಳಿಗೆ ಅಭಿನಂದಿಸಿ ರೈತರು ಕೇಂದ್ರಕ್ಕೆ ಹಾಲು ಹಾಕುವುದರ ಮುಖಾಂತರ ಸದೃಡವಾಗಲು ಸಹಕರಿಸಬೇಕೆಂದರು. ಸಮಾರಂಭದಲ್ಲಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಂಚಾಯ್ತಿ ಸದಸ್ಯರುಗಳಾದ ಶಕುಂತಲಾ ನಾಗರಾಜ್, ಶ್ರೀಧರ್, ಸ್ವಾತಂತ್ರ ಹೋರಾಟಗಾರ ಕೆ.ಶಿವಪ್ಪ, ಜಿಲ್ಲಾ ವಿಸ್ತರಣಾಧಿಕಾರಿ ಯರಗುಂಟಪ್ಪ, ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್, ನವಿಲೆ ಒಕ್ಕೂಟದ ಅಧ್ಯಕ್ಷ ನಂಜುಡಪ್ಪ ಉಪಸ್ಥಿತರಿದ್ದರು.ಸಮಾರಂಭದಲ್ಲಿ ನಂದನ, ತನುಪ್ರಭ ಪ್ರಾಥರ್ಿಸಿ ಕೆ.ಎನ್.ಶಂಕರಯ್ಯ ಸ್ವಾಗತಿಸಿ, ನಾಗರಾಜ್ ನಿರೂಪಿಸಿರಾಜಶೇಖರ್ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಏ.20: ರಾಜ್ಯ ನಿವೃತ್ತ ನೌಕರರ 8ನೇ ಮಹಾ ಸಮ್ಮೇಳನವು ಇದೇ ತಿಂಗಳ 25ರಂದು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ಏರ್ಪಡಿಸಿದ್ದು ತಾಲೂಕಿನ ಎಲ್ಲಾ ನಿವೃತ್ತ ನೌಕರ ಬಾಂದವರು ಈ ಸಮ್ಮೇಳನಕ್ಕೆ ಪಾಲ್ಗೊಳ್ಳಬೇಕೆಂದು ತಾಲೂಕು ನಿವೃತ ನೌಕರರ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಕೋರಿದ್ದಾರೆ.ಶ್ರೀ ಶಿವಕುಮಾರಸ್ವಾಮಿಯವರ ಸಾನಿದ್ಯದಲ್ಲಿ ಸಮ್ಮೇಳನ ನಡೆಯಲಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ನೌಕರರು ಪಾಲ್ಗೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

,ಏ.20;: 2011-12ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಗುರತಿಸಿ ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಆದ್ಯತಾಪಟ್ಟಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.ತಾತ್ಕಾಲಿಕ ಆದ್ಯತಾಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ಶಿಕ್ಷಕರು ತಮ್ಮ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಇದೇ 23ರೊಳಗಾಗಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಿಗೆ ಸಲ್ಲಿಸಲು ತಿಳಿಸಿದ್ದು, ಸಲ್ಲಿಸಲು ವಿಳಂಬವಾದಲ್ಲಿ ಇಲಾಖೆಯು ಹೊಣೆಯಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, April 20, 2011

Thursday, April 14, 2011



ಹರಿಜನರಿಗೆ ಪ್ರತ್ಯೇಕ ರಾಜ್ಯ ಕೊಡಿ: ಬೇವಿನಹಳ್ಳಿ

ಚನ್ನಬಸವಯ್ಯಚಿಕ್ಕನಾಯಕನಹಳ್ಳಿ,ಏ.14: ಅಸ್ಪೃಶ್ಯತೆ, ಅಸಮಾನತೆಯನ್ನು ನಿವಾರಿಸಲು ಸಾಧ್ಯವಾಗದ ಮೇಲೆ ಹರಿಜನರಿಗಾಗಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಡಾ. ಅಂಬೇಡ್ಕರ್ ಅವರು ಅಂದೇ ಗಾಂಧಿಜೀಯವರನ್ನು ಕೇಳಿದ್ದರು ಎಂದು ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ, ದಲಿತ ಸಂಘಟನೆಗಳ ಹಾಗೂ ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ರವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ದಲಿತರನ್ನು ಹರಿಜನರೆಂದು ಕರೆಯುವ ಬಗ್ಗೆಯೇ ಆಕ್ಷೇಪವೆತ್ತಿದ್ದಲ್ಲದೆ, ಸಮಾನತೆಯನ್ನು ನೀಡುವ ವಿಷಯದಲ್ಲಿ ತೋರುತ್ತಿದ್ದ ಅಸಡ್ಡೆಯನ್ನು ಬಹಿರಂಗವಾಗಿ ಅಂಬೇಡ್ಕರ್ ಖಂಡಿಸುತ್ತಿದ್ದರು ಎಂದರು. ಇಡೀ ಪ್ರಪಂಚದಲ್ಲಿ ಬೃಹತ್ ಸಂವಿಧಾನವೆಂಬ ಖ್ಯಾತಿಗೆ ಒಳಗಾಗಿರುವ ನಮ್ಮ ಸಂವಿಧಾನವನ್ನು ರಚಿಸಿದ ಮುಖ್ಯಸ್ಥರಿಗೆ ಸಂವಿಧಾನದ ಆಶಯಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸುವ ಬಗ್ಗೆ ಅನುಮಾನಗಳಿದ್ದವು ಎಂದರು. ಅಂದು ಮೇಲ್ವರ್ಗದ ಜನ ತಮ್ಮ ಆಥರ್ಿಕ ಲಾಭಕ್ಕಾಗಿ ದಲಿತರನ್ನು ದುಡಿಸಿಕೊಳ್ಳುತ್ತಿದ್ದರೆ, ಇಂದು ರಾಜಕೀಯ ಲಾಭಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ ಇಂದಿಗೂ ದಲಿತರ ಕೈಗೆ ಅಧಿಕಾರ ಸಿಕ್ಕಿಲ್ಲ, ಸಿಗುವ ಲಕ್ಷಣಗಳೂ ಇಲ್ಲವೆಂದು ನಿರಾಸೆ ವ್ಯಕ್ತ ಪಡಿಸಿದರು. ಬಾಬು ಜಗಜೀವನ್ ರಾಂರವರು ಅಭಿವೃದ್ಧಿಯ ನೇತಾರರಾಗಿದ್ದರು, ಅವರು ಅಂದು ತಂದ ವಿಮಾ ಮಸೂದೆ, ವೈಮಾನಿಕ ಕ್ಷೇತ್ರದಲ್ಲಿ ತಂದ ರಾಷ್ಟ್ರೀಕರಣ ವ್ಯವಸ್ಥೆ, ಆಹಾರ ಉತ್ಪಾದನೆಯಲ್ಲಿ ಮಾಡಿದ್ದ ಕ್ಷಿಪ್ರ ಪ್ರಗತಿಯ ಕ್ರಾಂತಿ ಇವೆಲ್ಲವೂ ಅವರನ್ನು ಈ ರಾಷ್ಟ್ರ ಇಂದಿಗೂ ನೆನಪಿಸಿಕೊಳ್ಳುವಂತೆ ಮಾಡಿದೆ ಎಂದರು. ಜಲಾನಯನದ ಕಲ್ಪನೆಯನ್ನು ಆಗಲೇ ಅನುಷ್ಠಾನಕ್ಕೆ ತರುವ ಮೂಲಕ ಒಣ ಭೂಮಿಗೆ ನೀರುಣ್ಣಿಸುವ ಕಾರ್ಯವನ್ನು ಕೈಗೊಂಡಿದ್ದಲ್ಲದೆ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವಂತೆ ಮಾಡಿದ ಹರಿಕಾರ ಎಂಬ ಖ್ಯಾತಿಗೆ ಜಗಜೀವನ್ರಾಂ ಪಾತ್ರರಾದರು ಎಂದರು. ಅಂಬೇಡ್ಕರ್ರವರು ಸಂವಿಧಾನದ ಮೂಲಕ ದಲಿತರ ಏಳಿಗೆಯನ್ನು ಬಯಸಿದರೆ, ಜಗಜೀವನ್ ರಾಂ ಅಧಿಕಾರದ ಮೂಲಕ ದಲಿತರಲ್ಲಿ ಆತ್ಮವಿಶ್ವಾಸ ಮೂಡಿಸಿದವರು ಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಡುವ ಮೂಲಕ ಅಂಬೇಡ್ಕರ್ ಈ ದೇಶದ ನಾಯಕರಾದರು ಎಂದರಲ್ಲದೆ, ಪತ್ರಿಕೆಗಳಿಲ್ಲದ ಮುಂದಾಳು, ರೆಕ್ಕೆ ಇಲ್ಲದ ಪಕ್ಷಿಯಂತೆ. ಎಂಬುದನ್ನು ಅರಿತು ಮೂಕ ನಾಯಕ ಮತ್ತು ಸಮತಾ ಎಂಬ ಪತ್ರಿಕೆಗಳನ್ನು ಆರಂಭಿಸಿದರು ಎಂದರು. ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಮಾತನಾಡಿ, ಡಾ.ಅಂಬೇಡ್ಕರ್ ರವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದರು. ಶಾಸಕ ಸಿ.ಬಿ.ಸುರೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.ಸಮಾರಂಭದಲ್ಲಿ ಅಂಬೇಡ್ಕರ್ರವರ ಭಾವಚಿತ್ರವನ್ನು ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ ಅನಾವರಣಗೊಳಿಸಿದರೆ, ಬಾಬು ಜಗಜೀವನ್ರಾಂರವರ ಭಾವಚಿತ್ರವನ್ನು ಜಿ.ಪಂ.ಸದಸ್ಯೆ ಲೋಹಿತಬಾಯಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಮಾಜಿ ಶಾಸಕ ಬಿ.ಲಕ್ಕಪ್ಪ, ಸಿ.ಪಿ.ಐ,ಪಿ.ರವಿಪ್ರಸಾದ್ ಮಾತನಾಡಿದರು. ಸಮಾರಂಭದಲ್ಲಿ ಬಿ.ಸಿ.ಎಂ.ಕಾಲೇಜ್ ಹಾಸ್ಟೆಲ್ನ ವಿದ್ಯಾಥರ್ಿನಿಯರು ಪ್ರಾಥರ್ಿಸಿದರೆ, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಲಿಂಗದೇವರು ನಿರೂಪಿಸಿದರು.

Tuesday, April 12, 2011


ಶೀರಾಮ, ರಾಜ್ರ ಹೆಸರಿನಲ್ಲಿ ಪಾನಕ

,ಏ.12: ಶ್ರೀರಾಮ ನವಮಿ ಮತ್ತು ಡಾ.ರಾಜ್ ಕುಮಾರ್ ರವರಿಗೆ ಶ್ರದ್ದಾಂಜಲಿ ಅಪರ್ಿಸುವ ಸಲುವಾಗಿ ಪಟ್ಟಣದ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬ್ರಿಯನ್ನು ವಿತರಿಸಲಾಯಿತು. ಪಟ್ಟಣದ ನೆಹರು ವೃತ್ತದಲ್ಲಿ ಬೆಳಗ್ಗಿನ 11ಕ್ಕೆ ಆರಂಭಗೊಂಡ ವಿತರಣಾ ಕಾರ್ಯಕ್ರಮ ಸಂಜೆ 4ರವರೆಗೆ ನಿರಂತರವಾಗಿ ನಡೆಯಿತು, ಈ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ಪಾನಕ, ಮಜ್ಜಿಗೆ ಮತ್ತು ಕೋಸಂಬ್ರಿಯನ್ನು ಸವಿದರು.ಈ ಕಾರ್ಯಕ್ರಮವನ್ನು ಗೆಳೆಯರ ಬಳಗದ ಎ.ಎಂ.ಉಮೇಶ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಅಂಜನಮೂತರ್ಿ, ಅಡಿಟರ್ ಲಿಂಗದೇವರು, ಜಯರಾಂ, ರಿದಂ ರೂಪೇಶ್, ಬಸವರಾಜು. ಶಿಲ್ಪಿ ವಿಶ್ವನಾಥ್ ಸೇರಿದಂತೆ ಹಲವು ಗೆಳೆಯರು ಪಾಲ್ಗೊಂಡಿದ್ದರು.

Monday, April 11, 2011

ಪ್ರಥಮ ದಜರ್ೆ ಕಾಲೇಜಿನ ವಾಷರ್ಿಕೋತ್ಸವ

ಚಿಕ್ಕನಾಯಕನಹಳ್ಳಿ,ಏ.10: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಇದೇ 15ರ ಶುಕ್ರವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಕಾಲೇಜಿನ ಆವರಣದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಶೇಷಾದ್ರಿಪುರಂ ಶಿಕ್ಷಣ ದತ್ತಿ ಧರ್ಮದಶರ್ಿ ಎಸ್.ವೀರಭದ್ರಯ್ಯ ಸಮಾರೋಪ ಭಾಷಣ ಮಂಡಿಸಲಿದ್ದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಭೇಡ್ಕರ್ ಮತ್ತು ಬಾಬು ಜಗಜೀವರಾಮ್ರವರ ಜನ್ಮದಿನಾಚರಣೆಚಿಕ್ಕನಾಯಕನಹಳ್ಳಿ,ಏ.10: ಡಾ.ಬಿ.ಆರ್.ಅಂಭೇಡ್ಕರ್ರವರ 120ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನರಾಮ್ರವರ 104ನೇ ಜನ್ಮದಿನಾಚರಣೆ ಸಮಾರಂಭವನ್ನು ಇದೇ 14ರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಮತ್ತು ದಲಿತ ಸಂಘಟನೆ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.ಡಾ.ಬಿ.ಆರ್.ಅಂಭೇಡ್ಕರ್ರವರ ಭಾವಚಿತ್ರವನ್ನು ಪುರಸಭಾಧ್ಯಕ್ಷ ರಾಜಣ್ಣ ಮತ್ತು ಡಾ.ಬಾಬು ಜಗಜೀವನರಾಂರವರ ಭಾವಚಿತ್ರವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಹಿತಬಾಯಿರವರ ಅನಾವರಣಗೊಳಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕಿರಣ್ಕುಮಾರ್, ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮರಾಮಚಂದ್ರಯ್ಯ, ನಿಂಗಮ್ಮ, ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತಿಮಾ, ಪುರಸಭಾ ಉಪಾಧ್ಯಕ್ಷ ಆರ್.ರವಿ, ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದಶರ್ಿಬೇವಿನಹಳ್ಳಿ ಚನ್ನಬಸವಯ್ಯ, ವಿಶೇಷ ಆಹ್ವಾನಿತರಾಗಿ ಇ.ಒ ಎನ್.ಎಂ.ದಯಾನಂದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಉಪಸ್ಥಿತರಿರುವರು. ರಾಜಕಾರಣಿಗಳು, ಅಧಿಕಾರಿಗಳಿಂದಲೇ ಭ್ರಷ್ಠತೆ

,ಏ.10: ವಿಧಾನಸಭೆ, ಲೋಕಸಭೆಗಳಲ್ಲಿರುವ ರಾಜಕಾರಣಿಗಳು, ಅಧಿಕಾರಿಗಳಿಂದಲೇ ಭ್ರಷ್ಠಾಚಾರ ಹೆಚ್ಚುತ್ತಿದ್ದು ಅವರಿಂದಲೇ ಸಾಮಾನ್ಯ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ಬಾಳೆಕಾಯಿ ಶಿವನಂಜಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ನೆಹರು ಸರ್ಕಲ್ ಬಳಿ ತಾಲೂಕು ಜನಪರ ವೇದಿಕೆ ವತಿಯಿಂದ ಅಣ್ಣ ಹಜಾರೆರವರ ಭ್ರಷ್ಠಚಾರ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದ ಸಂದರ್ಬದಲ್ಲಿ ಮಾತನಾಡಿದ ಅವರು ಭ್ರಷ್ಠಾಚಾರಕ್ಕೆ ತೊಡಗದೆ ಪ್ರಾಮಾಣಿಕವಾಗಿ ಇರುವವರನ್ನು ತಾತ್ಸಾರವಾಗಿ ನೋಡುತ್ತಾರೆ ಇಂತಹ ದೃಷ್ಠಿ ಬದಲಾಗಬೇಕು ಅದರಲ್ಲೂ ಭ್ರಷ್ಠಾಚಾರದಲ್ಲಿ ತೊಡಗಿ ಸಿಕ್ಕಿಹಾಕೊಂಡವರಿಗೆ ಕಾನೂನು ಬದ್ದವಾಗಿ ಯಾರಿಗೂ ಶಿಕ್ಷೆಯಾಗಿಲ್ಲ ಅಂತಹವರ ವಿರುದ್ದ ಈ ಹೋರಾಟ ಸಮಂಜಸವಾಗಿದೆ.ಭ್ರಷ್ಠಾಚಾರವನ್ನು ಮೈಗೂಡಿಸಿಕೊಂಡವರೇ ಇಂದು ರಾಜಕಾರಣಿಗಳು, ಅಧಿಕಾರಿಗಳು ಉನ್ನತ ಹುದ್ದೆಗಳನ್ನು ಹೊಂದಿ ಸಾಮಾನ್ಯ ಜನರಿಗೆ ಕಾಣದೆ ಹಿಂಸಿಸುತ್ತಿದ್ದಾರೆ ಎಂದ ಅವರು ರೈತರ ಆತ್ಮಹತ್ಯೆಗಳಿಗೆ ಹೆಚ್ಚಾಗಿ ಕಾಣುತ್ತಿರುವುದು ಭ್ರಷ್ಠಾಚಾರ, ಇದನ್ನು ತಪ್ಪಿಸಲು ಭ್ರಷ್ಠ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿ ಉತ್ತಮೋತ್ತರಿಗೆ ಕೆಲಸ ನೀಡಬೇಕು ಎಂದರು.ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಭಾರತ ದೇಶ ಬಹುಜನಗಳ ರಾಷ್ಟ್ರ ಇಲ್ಲಿನ ಸಂಪತ್ತು ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಆದರೆ ಇಂದು ದೇಶದ ಸಂಪತ್ತು ರಾಜಕೀಯ ಬಲ, ಜಾತಿಯ ಬಲ, ತೋಳ್ ಬಲ ಇರುವ ಭ್ರಷ್ಠಾಚಾರಿಗಳ ಪಾಲಾಗುತ್ತಿದೆ, ಇದೇ ರೀತಿ ದೇಶದಲ್ಲಿ ಸಂಪತ್ತು ಒಂದೇ ಕಡೆ ಕ್ರೂಡೀಕೃತವಾದರೆ ಭ್ರಷ್ಠಾಚಾರ ಮುಂದುವರೆದರೆ ಈ ದೇಶ ಮತ್ತು ರಾಜ್ಯ ಕೆಲವೇ ವ್ಯಕ್ತಿಗಳ ಸಾಮ್ರಾಜ್ಯವಾಗುತ್ತದೆ, ಸ್ವಾತಂತ್ರದ ಅರ್ಥ ಕಳೆದು ಹೋಗಿ ಜನರು ಗುಲಾಮಗಿರಿ ದಾಸ್ಯಕ್ಕೆ ಒಳಪಡಬೇಕಾಗುತ್ತದೆ, ಇದನ್ನು ತಪ್ಪಿಸಲು ಜನಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ 64 ವರ್ಷಗಳಿಂದಲೂ ಭಾರತ ಭ್ರಷ್ಠಕೂಪದಿಂದ ಹೊರಬರದೇ ನರಳುತ್ತಿದ್ದು ಈ ಭ್ರಷ್ಠತೆಯನ್ನು ಹೋಗಲಾಡಿಸಲು ಗಾಂಧಿವಾದಿ ಅಣ್ಣ ಅಜಾರೆರವರು ಉಪವಾಸ ಕೈಗೊಂಡಿರುವುದಕ್ಕೆ ರಾಷ್ಟ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಇದ್ದು ಶೀಘ್ರವಾಗಿ ಜನಲೋಕಪಾಲ ಮಸೂದೆಯನ್ನು ಸಕರ್ಾರ ಜಾರಿಗೆ ತರಬೇಕು ಎಂದರು. ಉಪವಾಸ ಸತ್ಯಾಗ್ರಹದ ನಂತರ ಜನಲೋಕಪಾಲ ಮಸೂದೆ ಜಾರಿಗೆ ಬಂದ ಸಂತಸಕ್ಕಾಗಿ ಜನಪರ ವೇದಿಕೆ, ಕನರ್ಾಟಕ ರಕ್ಷಣಾ ವೇದಿಕೆ, ಭುವನೇಶ್ವರಿ ಕಲಾ ಸಂಘ, ಹಿಂದುಳಿದ ವರ್ಗಗಲ ಜಾಗೃತಿ ವೇದಿಕೆ, ದಲಿತ ಸಂಘರ್ಷ ಸಮಿತಿ, ಪತ್ರಕರ್ತರ ಸಂಘ, ಕುಂಚಾಂಕುರ ಕಲಾ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಎಲ್ಲಾ ಪಧಾದಿಕಾರಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಉಪವಾಸ ಸತ್ಯಾಗ್ರಹದಲ್ಲಿ ಸಿ.ಎಸ್.ರೇಣುಕಮೂತರ್ಿ, ಸಿ.ಟಿ.ಗುರುಮೂತರ್ಿ, ಸುಬ್ರಮಣ್ಯ, ಲಿಂಗದೇವರು, ಸಿ.ಹೆಚ್.ಗಂಗಾಧರ್, ಸಿ.ಎನ್.ಮಂಜುನಾಥ, ಕೆ.ಜಿ.ರಾಜೀವಲೋಚನ, ಸಿ.ಬಿ.ಲೋಕೇಶ್, ರವಿಕುಮಾರ್ ಉಪಸ್ಥಿತರಿದ್ದರು. ಅಭಾವಿಪ ಪತಿಯಿಂದ ಅಣ್ಣ ಅಜಾರೆರವರ ಸತ್ಯಾಗ್ರಹಕ್ಕೆ ಬೆನ್ಬಲಚಿಕ್ಕನಾಯಕನಹಲ್ಲಿ,ಏ.09

ಅಣ್ಣ ಅಜಾರೆರವರ ಉಪವಾಸ ಸತ್ಯಾಗ್ರಹಕ್ಕೆ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಬೆಂಬಲ ಸೂಚಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ವಿದ್ಯಾಥರ್ಿಗಳ ಮೂಲಕ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲೂಕ್ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಬ್ರಿಟೀಷರು ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಸಂಪನ್ಮೂಲವನ್ನು ಕೊಳ್ಳೆಹೊಡಿದರು ಆದರೆ ಇಂದು ನಮ್ಮ ದೇಶದ ಸಂಸ್ಕೃತಿಯನ್ನು ಅರಿತ ಭ್ರಷ್ಠ ರಾಜಕಾರಣಿಗಳು ಕೋಟಿ ಕೋಟಿ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಠಾಚಾರ ಎಂಬ ಪಿಡುಗು ದೇಶ ವ್ಯಾಪ್ತಿ ಹರಡಿರುವುದು ಶೋಚನೀಯ, ಸಾರ್ವಜನಿಕರ ಹಣವನ್ನು ಭ್ರಷ್ಠರು ಸಿಸ್ವ್ ಬ್ಯಾಂಕ್ನಲ್ಲಿ ಬಚ್ಚಿಟ್ಟಿದ್ದಾರೆ, ಇದನ್ನು ಹೊರತರಲು ಕೇಂದ್ರ ಸಕರ್ಾರ ವಿಫಲವಾಗಿದೆ. ಯುವ ಜನತೆಯು ಭ್ರಷ್ಠಾಚಾರತೆಯ ವಿರುದ್ದ ಸಮರ ಸಾರಬೇಕು ಈ ಭ್ರಷ್ಠತೆಯನ್ನು ಹೋಗಲಾಡಿಸಲು ಅಣ್ಣ ಅಜಾರೆರವರು ಕೈಗೊಂಡಿರುವುದು ಸ್ವಾಗತಾರ್ಹ ಎಂದರು.ಈ ಸಂದರ್ಭದಲ್ಲಿ ಅಭಾವಿಪ ಹಿರಿಯ ಕಾರ್ಯಕರ್ತ ರಾಕೇಶ್ ಮಾತನಾಡಿದರು.ಅಭಾವಿಪ ಕಾರ್ಯಕರ್ತರಾದ ಮನು, ವಿಜಯ್, ಗುರು, ದರ್ಶನ್, ನಂದನ್, ವಾಸು, ರವಿ, ಸುಷ್ಮಾ, ಸುಪ್ರಿಯಾ ಈ ಸಂದರ್ಭದಲ್ಲಿ ಹಾಜರಿದ್ದರು.

Thursday, April 7, 2011

ಪ್ರಥಮ ದಜರ್ೆ ಕಾಲೇಜ್ನಲ್ಲಿ ಹಲವು 'ಇಲ್ಲಗಳ' ಮಧ್ಯೆ ಅಭಿವೃದ್ದಿ ಚಿಕ್ಕನಾಯಕನಹಳ್ಳಿ, ಸಕರ್ಾರಿ ಕಾಲೇಜು ಎಂದರೆ ವಿದ್ಯಾಥರ್ಿಗಳು ದೂರ ಉಳಿಯುವ ಕಾಲ ಒಂದಿತ್ತು, ಆದರೆ ಇಂದು ಈ ಚಿತ್ರಣ ಬದಲಾಗಿದೆ. ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ ವಿದ್ಯಾಬ್ಯಾಸದ ಜೊತೆಗೆ ಹಲವು ಹತ್ತು ತರಬೇತಿಗಳು, ಉದ್ಯೋಗಕ್ಕೆ ಅನುಕೂಲವಾಗುವಂತಹ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಿರುವುದರಿಂದ ನಾವೂ ಸಕರ್ಾರಿ ಕಾಲೇಜ್ನಲ್ಲಿ ಕಲಿಯಬೇಕು ಎಂಬ ಉದ್ದೇಶ ಹೊಂದಿ, ಇಲ್ಲಿಂದ ಬೇರೆ ತಾಲ್ಲೂಕಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದ ವಿದ್ಯಾಥರ್ಿಗಳು ಇಂದು ಈ ಕಾಲೇಜಿಗೆ ಸೇರ ಬಯಸುತ್ತಿದ್ದಾರೆ, ಆದರೆ ಈ ವಿದ್ಯಾಥರ್ಿಗಳು ಕಾಲೇಜಿನ ಮೂಲಭೂತ ಸೌಕರ್ಯಗಳಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. 1989ರಲ್ಲಿ ಸ್ಥಾಪನೆಯದ ಕಾಲೇಜು, ಇಂದಿಗೆ 22 ವಸಂತಗಳು ತುಂಬಿದ್ದರೂ ತರಗತಿಗಳಿಗಾಗಿ ಗ್ರಂಥಾಲಯ, ಉಗ್ರಾಣದ ಕೊಠಡಿಗಳಲ್ಲಿ ವಿದ್ಯಾಥರ್ಿಗಳು ಭೋದನೆ ಆಲಿಸಬೇಕಾಗಿದೆ, 3ವರ್ಷಗಳ ಹಿಂದೆ ಕೇವಲ 4 ಕೊಠಡಿಗಳಲ್ಲಿ ಬಿ.ಎ, ಬಿ.ಬಿ.ಎಂ, ಬಿ.ಕಾಂ ನ 7 ತರಗತಿ ನಡೆಯುತ್ತಿತ್ತಲ್ಲದೆ, ಕೊಠಡಿಗಳಿಲ್ಲದೆ ವಿದ್ಯಾಥರ್ಿಗಳು ತಮ್ಮ ಬೋಧನೆಗಾಗಿ ಗಂಟೆಗಟ್ಟಲೆ ಕಾಯಬೇಕಿತ್ತು, ಈ ವಿಷಯ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಆ ಸಂದರ್ಭದಲ್ಲಿ ಇದ್ದ ಪ್ರಾಂಶಪಾಲ ದಿವಂಗತ ಎಲ್.ಟಿ.ಶಿವಶಂಕರ್ರವರ ಒತ್ತಾಯದಿಂದ ಕಾಲೇಜಿನ ಕಟ್ಟಡ ಕಾಮಗಾರಿಗೆ ಅನುದಾನ ದೊರೆತು ಕಾಲೇಜಿಗೆ ಕೊಠಡಿಗಳ ಕಾಮಗಾರಿ ಶುರುವಾಯಿತು. ಆ ಸಂದರ್ಭದಲ್ಲಿ ಕಾಲೇಜಿಗೆ ಹೊಸದಾಗಿ ಬಂದ ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕೊಠಡಿಗಳ ಕಾಮಗಾರಿ ಪೂರ್ಣಗೊಳಿಸಿದರಲ್ಲದೆ, ತರಗತಿಗಳಿಗಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡರು. ಆದರೂ ಕಾಲೇಜಿನ ವಿದ್ಯಾಥರ್ಿಗಳಿಗೆ ಸಮಸ್ಯೆಗಳು ಹೆಚ್ಚಾಗಿದೆ, ಕಾಲೇಜಿಗೆ ಈಗಿರುವ ಹಾಜರಾತಿ ಗಮನಿಸಿದರೆ ಕೊಠಡಿಗಳ ಸಮಸ್ಯೆ ಇನ್ನೂ ಇದೆ, ವಿದ್ಯಾಥರ್ಿಗಳು ತಮ್ಮ ಬೋದನೆಗಾಗಿ ಗ್ರಂಥಾಲಯ, ಉಗ್ರಾಣ ಮತ್ತು ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳಲ್ಲಿ ಕುಳಿತು ಬೋದನೆ ಆಲಿಸುತ್ತಿದ್ದಾರೆ, ಕಾಲೇಜಿನಲ್ಲಿ ತರಗತಿ ನಡೆಸಲು 8 ಕೊಠಡಿಗಳಿದ್ದು ಗ್ರಂಥಾಲಯಕ್ಕೆ, ವಿದ್ಯಾಥರ್ಿಗಳ ಶೌಚಾಲಯಕ್ಕೆ, ಕಾಲೇಜಿನ ಸಭಾಂಗಣ, ಕಂಪ್ಯೂಟರ್ ಕೊಠಡಿಗಾಗಿ ಮತ್ತು ಮುಂದಿನ ವರ್ಷದ ದಾಖಲಾತಿ ಗಮನಿಸಿದರೆ ಇನ್ನೂ 10 ಕೊಠಡಿಗಳ ಕೊರತೆಯು ಎದ್ದು ಕಾಣುತ್ತಿದೆ ಅಲ್ಲದೆ ಕಾಲೇಜಿನ 5 ಎಕರೆ ಜಮೀನಿನಲ್ಲಿ ಸುಮಾರು 600 ಸಸಿಗಳನ್ನ ನೆಟ್ಟಿರುವ ಪರಿಸರ ಸಂರಕ್ಷಣೆಗಾಗಿ ಮತ್ತು ಕಾಲೇಜಿನ ಭದ್ರತೆಗಾಗಿ ಕಾಲೇಜಿಗೆ ಕಾಂಪೌಂಡ್ನ ಕೊರತೆಯನ್ನೂ ನೀಗಿಸಬೇಕಾಗಿದೆ. ಈ ಎಲ್ಲಾ ಕೊರತೆಗಳಿದ್ದರೂ ಸಹ ಕಾಲೇಜಿನ ವಿದ್ಯಾಥರ್ಿಗಳ ಹಾಜರಾತಿ 220 ಇದ್ದದ್ದು ಈಗ 477ಸಂಖ್ಯೆಗೆ ಏರಿದೆ. ಒಂದು ವರ್ಷದಲ್ಲಿ ಈ ಏರಿಕೆಗೆ ಕಾರಣವಾಗಿರುವ ಬಗ್ಗೆ ಪತ್ರಿಕೆ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ತಾಲ್ಲೂಕಿನ ಸುತ್ತಮುತ್ತಲಿನಲ್ಲಿರುವ ಸುಮಾರು 25 ಕಾಲೇಜುಗಳಿಗೆ ಭೇಟಿ ಮಾಡಿ ಅಲ್ಲಿರುವ ಸೌಕರ್ಯಗಳು, ಅಲ್ಲಿನ ಉತ್ತಮವಾದ ಬೋದನೆ, ಈ ಎಲ್ಲಾ ಅಂಶಗಳನ್ನು ಗಮನಿಸಿ ಕಾಲೇಜಿನಲ್ಲೂ ಅಂತಹ ಸೌಕರ್ಯಗಳನ್ನು ನೀಡುವಲ್ಲಿ ಮುಂದಾದೆ, ಅಲ್ಲದೆ ಕಾಲೇಜಿಗಾಗಿ ಕನ್ನಡ ಮೇಜರ್, ಇಂಗ್ಲೀಷ್ ಮೇಜರ್, ಮತ್ತು ಬಿ.ಎಸ್.ಡಬ್ಲ್ಯೂ ಈ ಕೋಸರ್್ಗಳನ್ನು ತರುವಲ್ಲಿ ಯಶಸ್ವಿಯಾಗಿ ಪಕ್ಕದ ತಾಲ್ಲೂಕುಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದ ವಿದ್ಯಾಥರ್ಿಗಳನ್ನು ಕಾಲೇಜಿನತ್ತ ಸೆಳೆಯುವಲ್ಲಿ ಯಶಸ್ವಿಯಾಗಿ, ಗ್ರಾಮೀಣ ವಿದ್ಯಾಥರ್ಿಗಳಿಗೆ ಸಂವಹನ ಕೌಶಲ್ಯ, ಧ್ಯೆರ್ಯ, ಮತ್ತು ಬೌದ್ದಿಕ ಬೆಳವಣಿಗೆ ಬೆಳಸಿ ಅವರಿಗೆ ಉತ್ತಮ ತರಬೇತಿ ನೀಡುವ ಜೊತೆಗೆ ವಿದ್ಯಾಥರ್ಿಗಳ ಉದ್ಯೋಗಕ್ಕೆ ಸಹಾಯವಾಗುವಂತಹ ಶಿಬಿರಗಳು, ಯೋಗ ಶಿಬಿರಗಳನ್ನು ಹಲವು ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಕಾರ್ಯಗಾರ, ಸಾಂಸ್ಕೃತಿಕ ಕಾರ್ಯಕ್ರಮ, ಇಂತಹ ಹಲವಾರು ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಏರ್ಪಡಿಸುವ ಮೂಲಕ ಕಾಲೇಜಿನಲ್ಲಿ ವಿದ್ಯಾಥರ್ಿಗಳ ಹೆಚ್ಚಿನ ಸಂಖ್ಯೆಯ ಹಾಜರಾತಿ ದಾಖಲಾಗಿದೆ ಮುಂದಿನ ವರ್ಷ ದಾಖಲಾತಿ 800ಕ್ಕೂ ಹೆಚ್ಚು ವಿದ್ಯಾಥರ್ಿಗಳ ದಾಖಲಾತಿ ಅವಕಾಶದ ಕನಸು ನನ್ನದಾಗಿದೆ ಎಂದಿರುವ ಪ್ರಾಂಶುಪಾರು ತಾಲೂಕಿನಲ್ಲಿ, ಇರದ ಬಿ.ಎಸ್ಸಿ(ವಿಜ್ಞಾನ) ಕೋಸರ್್ನ್ನು ಕಾಲೇಜಿಗೆ ತರುವಲ್ಲಿ ಯಶಸ್ವಿಯಾದರೂ ಕಾಲೇಜಿನಲ್ಲಿರುವ ಕೊರತೆಗಳಿಂದ ವಿಜ್ಞಾನ ಕೋಸರ್್ ತಾಲೂಕಿಗೆ ಮರೀಚಿಕೆಯಾಯಿತು ಮತ್ತು ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಕಾಲೇಜಿನ ಅಭಿವೃದ್ದಿ ಮತ್ತು ವಿದ್ಯಾಥರ್ಿಗಳ ಬೆಳವಣಿಗೆಗಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪ್ರಾಂಶುಪಾಲರು ಇನ್ನು ಒಂದೂವರೆ ವರ್ಷದಲ್ಲಿ ಹಲವು ಕೆಲಸ ನಿರ್ವಹಿಸುವ , ತನ್ನ ವಿದ್ಯಾಥರ್ಿಗಳಿಗಾಗಿ ತೀವ್ರ ಆಸಕ್ತಿ ವಹಿಸಿ ಅಭಿವೃದ್ದಿಗಾಗಿ ಶ್ರಮಿಸುವ ಪ್ರಾಂಶುಪಾಲರ ಕನಸುಗಳಿಗೆ, ತಾಲೂಕಿನಲ್ಲಿ ಇರದ ವಿಜ್ಞಾನ ಕೋಸರ್್ ತಾಲೂಕಿಗೆ ತರುವಲ್ಲಿ ಶಾಸಕರು, ತಾಲೂಕು ಆಡಳಿತ ಮಂಡಳಿ ಸ್ಪಂದಿಸಿ ಕಾಲೇಜಿನ ಅಭಿವೃದ್ದಿ ಮತ್ತು ತಾಲೂಕಿನ ವಿದ್ಯಾಥರ್ಿಗಳ ಬೆಳವಣಿಗೆ ಬಗ್ಗೆ ಗಮನ ಹರಿಸುವರೇ ಎಂಬುದು ಶಿಕ್ಷಣಾಸಕ್ತರ ಒತ್ತಾಸೆ..

ಭಾರತದ ಸುಪ್ರಸಿದ್ದ ರಂಗಕಲಾವಿದ ಸಿ.ಬಿ.ಮಲ್ಲಪ್ಪನವರ 125ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ನಾಟಕೋತ್ಸವ ಹಾಗೂ ನಾಟಕ ಸ್ಪಧರ್ೆ ಮತ್ತು ವಿಚಾರ ಸಂಕೀರಣವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ತಿಳಿಸಿದ್ದಾರೆ.ಸಂಘದ ಮುವತ್ತನೇ ವರ್ಷ ಆಚರಣೆ ಮತ್ತು ಪಟ್ಟಣದ ರಂಗಕಮರ್ಿಗಳಾದ ಸಿ.ಬಿ.ಮಲ್ಲಪ್ಪ, ಬಿ.ಕೆ.ಈಶ್ವರಪ್ಪ ಹಾಗೂ ಪಂಚಲಿಂಗಯ್ಯನವರ ಸ್ಮರಣೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಏಪ್ರಿಲ್ ಅಂತಿಮ ವಾರ ಅಥವಾ ಮೇ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಉತ್ಸವವನ್ನು ಐದು ದಿನಗಳ ವರೆಗೆ ಹಮ್ಮಿಕೊಳ್ಳಲು ನಿರ್ಧರಿಸಿದ್ದು ಸ್ಪಧರ್ೆಗೆ ಹೆಚ್ಚು ನಾಟಕಗಳು ಆಗಮಿಸಿದರೆ ಏಳು ದಿನಗಳ ವರೆಗೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿರುವ ಅವರು ಸಾಮಾಜಿಕ ಮತ್ತು ಪ್ರಯೋಗಿಕ ನಾಟಕಗಳಿಗೆ ಒತ್ತು ನೀಡಲಾಗಿದ್ದು ಕೊನೆಯ ದಿನ ಪೌರಾಣಿಕ ಮತ್ತು ಐತಿಹಾಸಕ ನಾಟಕಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಸ್ಫದರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ಬಿ.ಕೆ.ಈಶ್ವರಪ್ಪನವರ ಹೆಸರಿನ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ, ತೃತೀಯ ಬಹುಮಾನ 7 ಸಾವಿರ ರೂ., ಪಂಚಲಿಂಗಯ್ಯವರ ಹೆಸರಿನ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಇದಲ್ಲದೆ ಉತ್ತಮ ರಂಗಸಜ್ಜಿಕೆ ಉತ್ತಮ ನಿದರ್ೇಶಕ ಉತ್ತಮ ಕಥೆ, ಉತ್ತಮ ನಟ-ನಟಿ, ಉತ್ತಮ ಬೆಳಕು-ಧ್ವನಿ, ಉತ್ತಮ ಸಂಗೀತ, ಇವರುಗಳಿಗೆ ವೈಯಕ್ತಿಕ ನಗದು ಬಹುಮಾನಗಳಿರುತ್ತದೆ ಹಾಗೂ ಭಾಗವಹಿಸಿದ ಎಲ್ಲಾ ನಾಟಕ ತಂಡಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶ್ತಿ ಪತ್ರ ವಿತರಿಸಲಾಗುವುದು.ಸ್ಪಧರ್ೆಯಲ್ಲಿ ಭಾಗವಹಿಸುವ ತಂಡಗಳ ಕಲಾವಿದರ ಊಟ ಮತ್ತು ವಸತಿ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುವುದು, ನಾಟಕ ಸ್ಪಧರ್ೆಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳಿಗೆ ಅಜರ್ಿ ನಮೂನೆಗಳನ್ನು ವಿತರಿಸಲಾಗುತ್ತಿದ್ದು, ಪ್ರವೇಶ ಧನ ಐದು ನೂರು ರೂಗಳೊಂದಿಗೆ ಅಜರ್ಿ ಸಲ್ಲಿಸುವುದಕ್ಕೆ ಏ.7 ಕೊನೆಯ ದಿನವಾಗಿರುತ್ತದೆ. ಸಂಘದ ಕಾರ್ಯದಶರ್ಿ ಸುಪ್ರೀಂ ಸುಬ್ರಹ್ಮಣ್ಯ ಮಾತನಾಡಿ, ಅಭಿನವ ಭಕ್ತಶಿರೋಮಣಿ ಸಿ.ಬಿ.ಮಲ್ಲಪ್ಪನವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ಮಲ್ಲಪ್ಪನವರ ವ್ಯಕ್ತಿ ಮತ್ತು ಪಾತ್ರ ಚಿತ್ರಣ ಹಾಗೂ ರಂಗ ಕಲೆಯ ವಿಷಯವಾಗಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.ಸಂಘದ 30ನೇ ವರ್ಷದ ಆಚರಣೆಗಾಗಿ ಹೊರತರುತ್ತಿರುವ ಸ್ಮರಣೆ ಸಂಚಿಕೆಗೆ ಲೇಖನವನ್ನು ಆಹ್ವಾನಿಸಿದ್ದು ಈ ಹಿಂದೆ ನಮ್ಮ ಸಂಘ ಹಮ್ಮಿಕೊಂಡಿದ್ದ ನಾಟಕೋತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು, ರಂಗಾಸಕ್ತರು ಲೇಖನಗಳನ್ನು ಕಳುಹಿಸಬಹುದು ಎಂದರು.ಗೋಷ್ಠಿಯಲ್ಲಿ ಸಿದ್ದು ಜಿ.ಕೆರೆ, ಸಿ.ಎಚ್.ಗಂಗಾಧರ್, ಸಿದ್ದರಾಮಯ್ಯ ಉಪಸ್ಥಿತರಿದ್ದರು.ಹೆಚ್ಚಿನ ವಿವರಗಳಿಗಾಗಿ ಸಿದ್ದು ಜಿ.ಕೆರೆ, ಮೊ.ನಂ. 9886531222, ಸುಪ್ರೀಂ ಸುಬ್ರಹ್ಮಣ್ಯ ಮೊ.ನಂ.9742192989, ಸಿ.ಎಚ್.ಗಂಗಾಧರ್ ನಂ, 9845007131, ಸಿ.ಕೆ.ಹರೀಶ್ 9740179009, ಶ್ರೀನಿವಾಸ ಸಾಲ್ಕಟ್ಟೆ 9448748206 ಇವರುಗಳನ್ನು ಸಂಪಕರ್ಿಸಲು ಕೋರಲಾಗಿದೆ.

Sunday, March 27, 2011





ಯಡಿಯೂರಪ್ಪನವರನ್ನು ಕೆಳಗಿಸುವವರೆಗೆ ವಿರಮಿಸೆವು: ಜಮೀರ್ ಖಾನ್
ಚಿಕ್ಕನಾಯಕನಹಳ್ಳಿ,ಮಾ.26: ಸಾಧನೆಯ ಸೋಗಿನಲ್ಲಿ ರಾಜ್ಯದ ಜನರಿಗೆ ದ್ರೋಹ ಬಗೆದು ಜನಪರ ಕಾರ್ಯಕ್ರಮ ಮಾಡದೆ ಬರೀ ಮಾಟ ಮಂತ್ರದ ಮೊರೆ ಹೋಗಿ ಮುಖ್ಯಮಂತ್ರಿ ಪಟ್ಟ ಉಳಿಸಿಕೊಂಡಿದ್ದಾರೆ, ಕುಮಾರಣ್ಣನ ಜೊತೆಯಾಗಿರುವ ನಾವು ಭ್ರಷ್ಠ ಬಿಜೆಪಿ ಸಕರ್ಾರವನ್ನು ಉರುಳಿಸುತ್ತೇವೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಪಟ್ಟಣದ ಹೈಸ್ಕೂಲ್ ಆವರಣದಲ್ಲಿ 51ನೇ ತಾತಯ್ಯನ ಉರುಸ್ ಅಂಗವಾಗಿ ಏರ್ಪಡಿಸಿದ್ದ ಜಿದ್ದಾಜಿದ್ದಿನ ಖವ್ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರಾಜ್ಯದ ಜನತೆ ಬಿಜೆಪಿ ಪಕ್ಷವನ್ನು ಸಕರ್ಾರ ರಚನೆ ಮಾಡುವಷ್ಠು ಸಾಮಥ್ರ್ಯ ತಂದುಕೊಟ್ಟವರೂ ತೃಪ್ತರಾಗದ ಬಿಜೆಪಿ ನಾಯಕರು, ಆಪರೇಷನ್ ಕಮಲವನ್ನೇ ತಮ್ಮ ಅಧಿಕಾರದಿನಗಳಲ್ಲಿ ಮಾಡಿಕೊಂಡು ಬಂದು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಇಂತಹವರಿಗೆ ಪಾಠ ಕಲಿಸಬೇಕು ಎಂದು ಜೆ.ಡಿ.ಎಸ್ ಪಕ್ಷ, 120 ಸದಸ್ಯರಿದ್ದ ಬಿಜೆಪಿಯನ್ನು 105ಕ್ಕೆ ಇಳಿಸಿದ್ದರೂ ಅವರಿಗೆ ಬುದ್ದಿ ಬಂದಿಲ್ಲ, ಜನಪರ ಕಾರ್ಯ ಮಾಡುತ್ತಿಲ್ಲ ಬರೀ ಧರ್ಮದ ಸೋಗಿನಲ್ಲಿ ಜನರನ್ನು ಗಾಡಾಂದರಕ್ಕೆ ತಳ್ಳಲು ಹೊರಟಂತಿದೆ ಉಳಿಸಿಕೊಳ್ಳಲು ಮಾಟಮಂತ್ರಕ್ಕೆ ಮೊರೆ ಹೋಗಿದ್ದಾರೆ, ರಾಜ್ಯದ ಜನರ ಮೇಲಿಲ್ಲದೆ ವಿಶ್ವಾಸ ಮಾಟ ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಹೆಚ್.ಡಿ.ಕುಮಾರಣ್ಣನ ಜೊತೆಗೆ ಚೆಲುವರಾಯಸ್ವಾಮಿ ಪುಟ್ಟಣ್ಣ, ಬಾಲಕೃಷ್ಣ, ಸುರೇಶ್ಬಾಬು, ನಾನೂ ಸೇರಿದರೆ ಸಾಕು ರಾಜ್ಯದ ಜನರ ಆಶೀವರ್ಾದ ಫಲದಿಂದಾಗಿ ಈ ಕೆಟ್ಟ ಸಕರ್ಾರವನ್ನು ಕಿತ್ತೊಗೆಯುತ್ತೇವೆ. ಕ್ಷೇತ್ರದ ಜನರಲ್ಲಿ ಮನವಿ ಮಾಡುವುದೇನೆಂದರೆ ಯಾರೋ ಇಲ್ಲಿ ಶಾಸಕರನ್ನು ಹುಡುಕಿಕೊಡಿ ಎಂದು ಮಾಧ್ಯಮಗಳ ಮೊರೆ ಹೋಗಿದ್ದರಂತೆ ಶಾಸಕರು ನಮ್ಮನ್ನು ಬಿಟ್ಟು ಎಲೂ ಹೋಗಿರಲಿಲ್ಲ, ರಾಜ್ಯದ ಮೂಲೆಮೂಲೆಗಳಲ್ಲಿನ ನಿಮ್ಮ ಅಣ್ಣ ತಮ್ಮಂದಿರುಗಳಿಗಾಗುತ್ತಿರುವ ಅನ್ಯಾಯ ಸರಿ ಪಡಿಸಬೇಕಾದರೆ ಬಿಜೆಪಿ ದುರಾಡಳಿತ ಸಕರ್ಾರದ ಅಕ್ರಮಗಳನ್ನು ಬಯಲು ಮಾಡಲು ಹೋಗಬೇಕಾಗಿ ನಿಮಗೆರಡು ತಿಂಗಳ ಸಿಗದೆ ಹೋಗಿರಬಹುದು, ಲಾಭಕ್ಕಾಗಿಯೇ ಇರೋ ರಾಜಕಾರಣಿಗಳ ಬೇರೆ ನಮ್ಮ ಶಾಸಕರು ಯಾವುದನ್ನು ನಿರೀಕ್ಷೆ ಮಾಡದೆ ತಲತಲಾಂತರದಿಂದ ಧಾಮರ್ಿಕ ಸೇವೆ ಮಾಡಿಕೊಂಡು ಹಿಂದು, ಮುಸಲ್ಮಾನರು ಒಂದೇ ಎಂಬ ಭಾವನೆಯಿಂದ ನಮ್ಮೊಂದಿಗೆ ಇರುವಂತಹವರ ಬಗ್ಗೆ ಅವಹೇಳನದ ಮಾತಿಗೆ ಕಿವಿಗೊಡದೆ ಅವರಲ್ಲಿರುವ ಏಕತೆಗೆ ಗೌರವ ನೀಡಿ, ಬಡವರ ರಕ್ಷಣೆಗೆ ಸದಾ ಸಿದ್ದವಿರುವಂತಹ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತು ಅಧಿಕಾರ ನೀಡಿ ರಾಜ್ಯದ ಪ್ರಗತಿಗೆ ಮುಂದಾಗಿ ಎಂದು ಹೇಳಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ನಡೆಯುವ ಸಂಘರ್ಷ ನಿಲ್ಲಬೇಕು ನಾವ್ಯಾರು ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ದೇವರಲ್ಲಿ ಅಜರ್ಿ ಹಾಕಿರಲಿಲ್ಲ ನಮ್ಮ ಜೀವನ ಶೈಲಿಯಲ್ಲಿ ಭಾವೈಕತೆ ಬೆಳಸಿಕೊಂಡರೆ ನಿಜವಾದ ಅರ್ಥ ಸಿಗುವುದಲ್ಲದೆ ಮಾನವ ಸರ್ವಶ್ರೇಷ್ಠರನಿಸಲು ಸಾಧ್ಯವಾಗುತ್ತದೆ, ಒಂದು ಧರ್ಮದಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಧರ್ಮಗಳ ನಡುವೆ ಕಲಹ ಬೆರಸದೆ ಎಲ್ಲಾ ಧರ್ಮಗಳ ಸಮಾನವಾಗಿ ಕಂಡು ಬಾಳಿದರೆ ದೇಶದಲ್ಲಿ ಶಾಂತಿ ನೆಲಸುತ್ತದೆ ಎಂದರು.
ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಜಿಲ್ಲ್ಲಾ ವಕ್ಪ್ ಮಂಡಳಿ ಛೇರ್ಮನ್ ಮುಸ್ತಾಕ್ ಅಹಮದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಟಿ.ರಾಮಯ್ಯ, ಚಂದ್ರಶೇಖರಶೆಟ್ಟಿ, ಮಹಮದ್ಖಲಂದರ್, ರಾಜ್ಯ ಅಲ್ಪಸಂಖ್ಯಾ ಘಟಕ ಕಾರ್ಯದಶರ್ಿ ಶಕಿರ್ ಅಹಮದ್, ಪ್ಯಾರಜಾನ್ ಜಕಾವುಲ್ಲಾ, ಜಲಾಲ್ಸಾಬ್, ಸಿ.ಎಸ್.ನಟರಾಜು, ವರದರಾಜು ಉಪಸ್ಥಿತರಿದ್ದರು.

ಮಹಾಭಾರತದ ಪಾತ್ರಗಳ ವರ್ಣನೆಯನ್ನು ಸೂಫಿಸಂತರು ಅದ್ಭುತವಾಗಿ ಮಾಡುತ್ತಾರೆ: ರೆಹಮತ್ ತರೀಕೆರೆ
ಚಿಕ್ಕನಾಯಕನಹಳ್ಳಿ,ಮಾ.25: ಭಾರತದ ಪರಧರ್ಮ ಸಹಿಷ್ಣುತೆಯನ್ನು ಎತ್ತಿಹಿಡಿಯಲು ಅಸಂಖ್ಯಾತ ಹಿಂದೂ ಮುಸಲ್ಮಾನರು ಭಾವೈಕತೆಯ ಸಂಕೇತದಿಂದ ಉರುಸ್ ಆಚರಣೆಯಲ್ಲಿ ಭಾಗವಹಿಸಿರುವುದು ವಿಶ್ವಕ್ಕೆ ಮಾದರಿ ಎಂದು ಖ್ಯಾತ ಸಾಹಿತಿ ರಹಮತ್ ತರೀಖೆರೆ ವ್ಯಾಖ್ಯಾನಿಸಿದರು.
ಪಟ್ಟಣದ ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ತಾತಯ್ಯನವರ 51 ವಷರ್ಾಚರಣೆಯ ಉರುಸ್ ಅಂಗವಾಗಿ ಅಸ್ಲಂ ಅಕ್ರಂ ಪಾಟರ್ಿ ಮುಜಾಫರ್ ಮತ್ತು ಕರಿಷ್ಮಾ ತಾಜ್ ಪಾಟರ್ಿ ಆಫ್ ನಾಗಪುರ ತಂಡದಿಂದ ಜಿದ್ದಾ ಜಿದ್ದಿನ ಖವ್ವಾಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಿದ್ದರು. ಗುಡಿ ಚಚರ್್ಗಳಿಗೆ ಹೋಗುವವರಲ್ಲಿ ಸಂಬಂಧ ಪಟ್ಟವರು ಮಾತ್ರ ಹೋಗುತ್ತಾರೆ, ಸೂಫಿ ಸಂತರ ದರ್ಗಕ್ಕೆ ಹಿಂದೂ ಮುಸಲ್ಮಾನ್ ಕ್ರೈಸ್ತರು ಎಂಬ ಬಾವನೆಯನ್ನು ಮರೆತು ಎಲ್ಲರೂ ಹೋಗುವಂತ ಪವಿತ್ರ ಸ್ಥಳ ಈ ಗೋರಿಗಳು, ಇಂತಹ ಸಂತರು ಕೂಡ 12 ಶತಮಾನದ ಕಾಯಕ ಜೀವಿಗಳ ಪರಂಪರೆಯ ಹಾದಿಯಲ್ಲಿ ಬಂದವರು, ಸಂತರಿಗೆ ಮತ ಜಾತಿ ಎಂಬುದಿಲ್ಲ, ಎಲ್ಲಾಧಮರ್ೀಯರೂ ಒಂದೇ ಎಂದು ಸಾರುವ ತಾಣಗಳು ಎಂದರಲ್ಲದೆ, ಧರ್ಮದ ಹೆಸರಲ್ಲಿ ಅಂತಹ ಕಲಹ ಉಂಟು ಮಾಡದೆ ಶಾಂತಿ ನೆಲಸುವಂತಾಗಬೇಕು ಎಂದರು. ಭಾರತದ ಯೋಗಿ ಪರಂಪರೆ ಮತ್ತು ಸೂಫಿ ಪರಂಪರೆ ಒಂದೇ ಆಗಿರುತ್ತದೆ ಉತ್ತರ ಕನರ್ಾಟಕದ ಭಾಗಗಳಲ್ಲಿ ಮುಸಲ್ಮಾನರಿಲ್ಲದ ಊರುಗಳಲ್ಲೇ ಮೊಹರಂ ಹಬ್ಬವನ್ನು ಹೆಚ್ಚು ಆಚರಣೆ ಮಾಡುತ್ತಾರೆ.
ರಾಮಯಣದಲ್ಲಿ ಬರುವ ಪಾತ್ರಗಳನ್ನು ಮುಸ್ಲಿಂ ಧಮರ್ೀಯರಲ್ಲೂ ಅಂತಹ ಹೆಸರು ಹೋಲಿಕೆ ಹೊಂದಿರುವಂತಹವರ ಲಕ್ಷಣಗಳನ್ನು ಸೂಫಿಗಳಲ್ಲಿ ಕಾಠಣಬಹುದು ಅಲ್ಲದೆ ಇಡೀ ಮಹಾಭರತದ ಕತೆಗಳನ್ನು ನಿರರ್ಗಳವಾಗಿ ಹೇಳಿ ಧರ್ಮ ಸಾರುತ್ತಾರೆ ಸೂಫಿ ಸಂತರು, ವಿಶ್ವದ ರಕ್ಷಣೆ ಆಗಬೇಕಾದರೆ ಸೂಫಿ ಮೊಹರಂ ಗಾಯಕರ ಪರಂಪರೆಗಳ ಮೂಲಕ ಸುನಾಮಿಯಂತ ಭಯೋತ್ಪಾದನೆ ತಡೆಯಲು ಸಾಧ್ಯವಾಗುತ್ತದೆ, ದ್ವೇಷ ಹಗೆಯಂತಹ ವಿಷಬೀಜಗಳನ್ನು ಹುಟ್ಟು ಹಾಕದಂತೆ ರಾಜ್ಯಭಾರ ಮಾಡುವವನೇ ನಿಜವಾದ ದೊರೆ ಆಗುವನು, ಧರ್ಮಕ್ಕೆ ಜಿದ್ದಾಜಿದ್ದಿ ಹೆಚ್ಚಿ ದೇಶವನ್ನು ಅಶಾಂತಿಗೆ ತಳ್ಳದಂತೆ ಶಾಂತಿ ಕಾಪಾಡುವ ಪ್ರತಿಯೊಬ್ಬರೂ ಹಿಂದೂ ಮುಸ್ಲಿಂರ ಭಾವೈಕತೆಯನ್ನು ಸಾರುವ ಕೇಂದ್ರಕ್ಕೊಂದು ಬಾರಿ ಭೇಟಿ ನೀಡಬನ್ನಿ ಭಾವೈಕ್ಯತೆ ಸಾರ ಬನ್ನಿ ಎಂದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಅರಿತು ಬಾಳುವ ಶಕ್ತಿಯನ್ನು ಮಾನವ ಹೊಂದಿದ್ದಾನೆ, ಧರ್ಮಗಳ ನಡುವೆ ಸಂಘರ್ಷಕ್ಕೆ ಹೋಗದಂತೆ ರಕ್ತಪಾಕ ತಡೆದು ಸೌಹಾರ್ಧತೆ ಕಾಯಬೇಕು ಎಂದರು.
ರಾಜ್ಯ ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದಶರ್ಿ ಶಕಿಲ್ ಅಹಮದ್ ಮಾತನಾಡಿ ಕಾಯಕ ಮಾಡುವುದರ ಮೂಲಕ ಮೋಕ್ಷ ಕಾಣಬೇಕು ಅನಾಚಾರ ಅನೀತಿ ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅದರ ಮೂಲಕ ಮೋಕ್ಷ ದೊರೆಯುತ್ತದೆ ಎಂದರು.
ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಸಮಾರಂಭ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಟಿ.ರಾಮಯ್ಯ ನಡೆಸಿಕೊಟ್ಟರು. ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಎಮ್.ರಂಗಸ್ವಾಮಯ್ಯ, ಚಂದ್ರಶೇಖರಶೆಟ್ಟಿ, ಹಾಜಿ ಮಹಮದ್ ಖಲಂದರ್, ಮುಕ್ತಿಯಾರ್, ಬಾಬುಸಾಹೇಬ್, ಸಿ.ಬಸವರಾಜು, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸಂಸ್ಕೃತಿ, ಪ್ರಗತಿ ಯಶಸ್ಸಿನ ಧ್ಯೂತಕಗಳು: ಡಿ.ಸಿ.
ಚಿಕ್ಕನಾಯಕನಹಳ್ಳಿ,ಮಾ.25: ಸಂಸ್ಕೃತಿ ಹಾಗೂ ಪ್ರಗತಿ ಎಂಬವವು ಒಂದೇ ನಾಣ್ಯದ ಎರಡು ಮುಖಗಳ ಪರಿಚಯಹೊಂದಿರುವ ರಾಜಕಾರಣಿಗಳಿಗೆ ಯಶಸ್ಸು ಖಂಡಿತ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ತಾತಯ್ಯನ ಉರುಸ್ ಆಚರಣೆಯ ಕೊನೆಯ ದಿನದಂದು ಏರ್ಪಡಿಸಿದ್ದ ಡಾ.ಪಿ.ಬಿ.ಶ್ರೀನಿವಾಸ್ ಹಾಗೂ ಎಲ್.ಆರ್.ಈಶ್ವರಿ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕಲೋಪಾಸಕನಿಗೆ ವಯಸ್ಸೇ ತಿಳಿಯುವುದಿಲ್ಲ, ಚಿಕ್ಕನಾಯಕನಹಳ್ಳಿ ಕಲಾವಿದರ ಸಮ್ಮಿಲನ ಕೇಂದ್ರವಾಗಿದ್ದು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಹಳ ವಿಜೃಂಭಣೆಯಿಂದ ನಡೆಯುತಿದ್ದು ನನ್ನಲ್ಲಿ ಕೃತಜ್ಞಾ ಭಾವನೆ ಮೂಡಿದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಕರ್ಾರದಿಂದ ಆಚರಿಸಿದ ಜಿಲ್ಲಾ ಉತ್ಸವವನ್ನೇ ನಾಚಿಸುವಂತಹ ಕಾರ್ಯಕ್ರಮದ ಮೂಲಕ ಹಲವು ದಶಕಗಳಿಂದ ಅತಿ ವಿಜೃಂಭಣೆಯಿಂದ ಆಚರಿಸಿ ಜನಸಾಗರವನ್ನೇ ಸಮ್ಮಿಲನಗೊಳಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಇಂತಹ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದಾರೆ. ನಮ್ಮನ್ನಾಳುವಂತಹವರಿಗೆ ಸಂಸ್ಕೃತಿ ಮತ್ತು ಪ್ರಗತಿಯ ಬಗ್ಗೆ ಆಸಕ್ತಿ ಇದ್ದಂತವರಲ್ಲಿ ಬದುಕು ಹಿತವಾಗಿದ್ದು ಜನರ ಅಭಿರುಚಿಗೆ ತಕ್ಕಂತೆ ಬೇಕಿರುವುದನ್ನು ನೀಡುವವರು ಎಂದರು.
ಡಾ.ಪಿ.ಬಿ.ಶ್ರೀನಿವಾಸ್ ಸನ್ಮಾನ ಸ್ವೀಕರಿಸಿ ಮಾತನಾಡಿ ಸಂಗೀತ ಸಾಹಿತ್ಯ ದಂಪತಿಗಳಿದ್ದಂತೆ ಇವರೆಡೂ ಒಂದಾದರೇ ಮಾತ್ರ ರಸಿಕರಿಗೆ ಸಂಗೀತ ರುಚಿಸಲು ಸಾಧ್ಯ ಎಂದರು.
ಸಮಾರಂಭದಲ್ಲಿ ಕಲೈಲಾಮಣಿ ಎಲ್.ಆರ್.ಈಶ್ವರಿ ಕಲಾವಿದರಾದ ಸಾಧುಕೋಕಿಲ, ಹೇಮಂತ್, ನಂದಿತ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾತನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಎ.ಎಸ್.ಪಿ.ಬೋರಲಿಂಗಯ್ಯ, ಜಿ.ಪಂ.ಸದಸ್ಯೆ ಜಾನಮ್ಮ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿದ್ದರು.


ಯಡಿಯೂರಪ್ಪನವರನ್ನು ಕೆಳಗಿಸುವವರೆಗೆ ವಿರಮಿಸೆವು: ಜಮೀರ್ ಖಾನ್
ಚಿಕ್ಕನಾಯಕನಹಳ್ಳಿ,ಮಾ.26: ಸಾಧನೆಯ ಸೋಗಿನಲ್ಲಿ ರಾಜ್ಯದ ಜನರಿಗೆ ದ್ರೋಹ ಬಗೆದು ಜನಪರ ಕಾರ್ಯಕ್ರಮ ಮಾಡದೆ ಬರೀ ಮಾಟ ಮಂತ್ರದ ಮೊರೆ ಹೋಗಿ ಮುಖ್ಯಮಂತ್ರಿ ಪಟ್ಟ ಉಳಿಸಿಕೊಂಡಿದ್ದಾರೆ, ಕುಮಾರಣ್ಣನ ಜೊತೆಯಾಗಿರುವ ನಾವು ಭ್ರಷ್ಠ ಬಿಜೆಪಿ ಸಕರ್ಾರವನ್ನು ಉರುಳಿಸುತ್ತೇವೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಪಟ್ಟಣದ ಹೈಸ್ಕೂಲ್ ಆವರಣದಲ್ಲಿ 51ನೇ ತಾತಯ್ಯನ ಉರುಸ್ ಅಂಗವಾಗಿ ಏರ್ಪಡಿಸಿದ್ದ ಜಿದ್ದಾಜಿದ್ದಿನ ಖವ್ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರಾಜ್ಯದ ಜನತೆ ಬಿಜೆಪಿ ಪಕ್ಷವನ್ನು ಸಕರ್ಾರ ರಚನೆ ಮಾಡುವಷ್ಠು ಸಾಮಥ್ರ್ಯ ತಂದುಕೊಟ್ಟವರೂ ತೃಪ್ತರಾಗದ ಬಿಜೆಪಿ ನಾಯಕರು, ಆಪರೇಷನ್ ಕಮಲವನ್ನೇ ತಮ್ಮ ಅಧಿಕಾರದಿನಗಳಲ್ಲಿ ಮಾಡಿಕೊಂಡು ಬಂದು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಇಂತಹವರಿಗೆ ಪಾಠ ಕಲಿಸಬೇಕು ಎಂದು ಜೆ.ಡಿ.ಎಸ್ ಪಕ್ಷ, 120 ಸದಸ್ಯರಿದ್ದ ಬಿಜೆಪಿಯನ್ನು 105ಕ್ಕೆ ಇಳಿಸಿದ್ದರೂ ಅವರಿಗೆ ಬುದ್ದಿ ಬಂದಿಲ್ಲ, ಜನಪರ ಕಾರ್ಯ ಮಾಡುತ್ತಿಲ್ಲ ಬರೀ ಧರ್ಮದ ಸೋಗಿನಲ್ಲಿ ಜನರನ್ನು ಗಾಡಾಂದರಕ್ಕೆ ತಳ್ಳಲು ಹೊರಟಂತಿದೆ ಉಳಿಸಿಕೊಳ್ಳಲು ಮಾಟಮಂತ್ರಕ್ಕೆ ಮೊರೆ ಹೋಗಿದ್ದಾರೆ, ರಾಜ್ಯದ ಜನರ ಮೇಲಿಲ್ಲದೆ ವಿಶ್ವಾಸ ಮಾಟ ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಹೆಚ್.ಡಿ.ಕುಮಾರಣ್ಣನ ಜೊತೆಗೆ ಚೆಲುವರಾಯಸ್ವಾಮಿ ಪುಟ್ಟಣ್ಣ, ಬಾಲಕೃಷ್ಣ, ಸುರೇಶ್ಬಾಬು, ನಾನೂ ಸೇರಿದರೆ ಸಾಕು ರಾಜ್ಯದ ಜನರ ಆಶೀವರ್ಾದ ಫಲದಿಂದಾಗಿ ಈ ಕೆಟ್ಟ ಸಕರ್ಾರವನ್ನು ಕಿತ್ತೊಗೆಯುತ್ತೇವೆ. ಕ್ಷೇತ್ರದ ಜನರಲ್ಲಿ ಮನವಿ ಮಾಡುವುದೇನೆಂದರೆ ಯಾರೋ ಇಲ್ಲಿ ಶಾಸಕರನ್ನು ಹುಡುಕಿಕೊಡಿ ಎಂದು ಮಾಧ್ಯಮಗಳ ಮೊರೆ ಹೋಗಿದ್ದರಂತೆ ಶಾಸಕರು ನಮ್ಮನ್ನು ಬಿಟ್ಟು ಎಲೂ ಹೋಗಿರಲಿಲ್ಲ, ರಾಜ್ಯದ ಮೂಲೆಮೂಲೆಗಳಲ್ಲಿನ ನಿಮ್ಮ ಅಣ್ಣ ತಮ್ಮಂದಿರುಗಳಿಗಾಗುತ್ತಿರುವ ಅನ್ಯಾಯ ಸರಿ ಪಡಿಸಬೇಕಾದರೆ ಬಿಜೆಪಿ ದುರಾಡಳಿತ ಸಕರ್ಾರದ ಅಕ್ರಮಗಳನ್ನು ಬಯಲು ಮಾಡಲು ಹೋಗಬೇಕಾಗಿ ನಿಮಗೆರಡು ತಿಂಗಳ ಸಿಗದೆ ಹೋಗಿರಬಹುದು, ಲಾಭಕ್ಕಾಗಿಯೇ ಇರೋ ರಾಜಕಾರಣಿಗಳ ಬೇರೆ ನಮ್ಮ ಶಾಸಕರು ಯಾವುದನ್ನು ನಿರೀಕ್ಷೆ ಮಾಡದೆ ತಲತಲಾಂತರದಿಂದ ಧಾಮರ್ಿಕ ಸೇವೆ ಮಾಡಿಕೊಂಡು ಹಿಂದು, ಮುಸಲ್ಮಾನರು ಒಂದೇ ಎಂಬ ಭಾವನೆಯಿಂದ ನಮ್ಮೊಂದಿಗೆ ಇರುವಂತಹವರ ಬಗ್ಗೆ ಅವಹೇಳನದ ಮಾತಿಗೆ ಕಿವಿಗೊಡದೆ ಅವರಲ್ಲಿರುವ ಏಕತೆಗೆ ಗೌರವ ನೀಡಿ, ಬಡವರ ರಕ್ಷಣೆಗೆ ಸದಾ ಸಿದ್ದವಿರುವಂತಹ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತು ಅಧಿಕಾರ ನೀಡಿ ರಾಜ್ಯದ ಪ್ರಗತಿಗೆ ಮುಂದಾಗಿ ಎಂದು ಹೇಳಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ನಡೆಯುವ ಸಂಘರ್ಷ ನಿಲ್ಲಬೇಕು ನಾವ್ಯಾರು ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ದೇವರಲ್ಲಿ ಅಜರ್ಿ ಹಾಕಿರಲಿಲ್ಲ ನಮ್ಮ ಜೀವನ ಶೈಲಿಯಲ್ಲಿ ಭಾವೈಕತೆ ಬೆಳಸಿಕೊಂಡರೆ ನಿಜವಾದ ಅರ್ಥ ಸಿಗುವುದಲ್ಲದೆ ಮಾನವ ಸರ್ವಶ್ರೇಷ್ಠರನಿಸಲು ಸಾಧ್ಯವಾಗುತ್ತದೆ, ಒಂದು ಧರ್ಮದಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಧರ್ಮಗಳ ನಡುವೆ ಕಲಹ ಬೆರಸದೆ ಎಲ್ಲಾ ಧರ್ಮಗಳ ಸಮಾನವಾಗಿ ಕಂಡು ಬಾಳಿದರೆ ದೇಶದಲ್ಲಿ ಶಾಂತಿ ನೆಲಸುತ್ತದೆ ಎಂದರು.
ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಜಿಲ್ಲ್ಲಾ ವಕ್ಪ್ ಮಂಡಳಿ ಛೇರ್ಮನ್ ಮುಸ್ತಾಕ್ ಅಹಮದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಟಿ.ರಾಮಯ್ಯ, ಚಂದ್ರಶೇಖರಶೆಟ್ಟಿ, ಮಹಮದ್ಖಲಂದರ್, ರಾಜ್ಯ ಅಲ್ಪಸಂಖ್ಯಾ ಘಟಕ ಕಾರ್ಯದಶರ್ಿ ಶಕಿರ್ ಅಹಮದ್, ಪ್ಯಾರಜಾನ್ ಜಕಾವುಲ್ಲಾ, ಜಲಾಲ್ಸಾಬ್, ಸಿ.ಎಸ್.ನಟರಾಜು, ವರದರಾಜು ಉಪಸ್ಥಿತರಿದ್ದರು.

ಮಹಾಭಾರತದ ಪಾತ್ರಗಳ ವರ್ಣನೆಯನ್ನು ಸೂಫಿಸಂತರು ಅದ್ಭುತವಾಗಿ ಮಾಡುತ್ತಾರೆ: ರೆಹಮತ್ ತರೀಕೆರೆ
ಚಿಕ್ಕನಾಯಕನಹಳ್ಳಿ,ಮಾ.25: ಭಾರತದ ಪರಧರ್ಮ ಸಹಿಷ್ಣುತೆಯನ್ನು ಎತ್ತಿಹಿಡಿಯಲು ಅಸಂಖ್ಯಾತ ಹಿಂದೂ ಮುಸಲ್ಮಾನರು ಭಾವೈಕತೆಯ ಸಂಕೇತದಿಂದ ಉರುಸ್ ಆಚರಣೆಯಲ್ಲಿ ಭಾಗವಹಿಸಿರುವುದು ವಿಶ್ವಕ್ಕೆ ಮಾದರಿ ಎಂದು ಖ್ಯಾತ ಸಾಹಿತಿ ರಹಮತ್ ತರೀಖೆರೆ ವ್ಯಾಖ್ಯಾನಿಸಿದರು.
ಪಟ್ಟಣದ ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ತಾತಯ್ಯನವರ 51 ವಷರ್ಾಚರಣೆಯ ಉರುಸ್ ಅಂಗವಾಗಿ ಅಸ್ಲಂ ಅಕ್ರಂ ಪಾಟರ್ಿ ಮುಜಾಫರ್ ಮತ್ತು ಕರಿಷ್ಮಾ ತಾಜ್ ಪಾಟರ್ಿ ಆಫ್ ನಾಗಪುರ ತಂಡದಿಂದ ಜಿದ್ದಾ ಜಿದ್ದಿನ ಖವ್ವಾಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಿದ್ದರು. ಗುಡಿ ಚಚರ್್ಗಳಿಗೆ ಹೋಗುವವರಲ್ಲಿ ಸಂಬಂಧ ಪಟ್ಟವರು ಮಾತ್ರ ಹೋಗುತ್ತಾರೆ, ಸೂಫಿ ಸಂತರ ದರ್ಗಕ್ಕೆ ಹಿಂದೂ ಮುಸಲ್ಮಾನ್ ಕ್ರೈಸ್ತರು ಎಂಬ ಬಾವನೆಯನ್ನು ಮರೆತು ಎಲ್ಲರೂ ಹೋಗುವಂತ ಪವಿತ್ರ ಸ್ಥಳ ಈ ಗೋರಿಗಳು, ಇಂತಹ ಸಂತರು ಕೂಡ 12 ಶತಮಾನದ ಕಾಯಕ ಜೀವಿಗಳ ಪರಂಪರೆಯ ಹಾದಿಯಲ್ಲಿ ಬಂದವರು, ಸಂತರಿಗೆ ಮತ ಜಾತಿ ಎಂಬುದಿಲ್ಲ, ಎಲ್ಲಾಧಮರ್ೀಯರೂ ಒಂದೇ ಎಂದು ಸಾರುವ ತಾಣಗಳು ಎಂದರಲ್ಲದೆ, ಧರ್ಮದ ಹೆಸರಲ್ಲಿ ಅಂತಹ ಕಲಹ ಉಂಟು ಮಾಡದೆ ಶಾಂತಿ ನೆಲಸುವಂತಾಗಬೇಕು ಎಂದರು. ಭಾರತದ ಯೋಗಿ ಪರಂಪರೆ ಮತ್ತು ಸೂಫಿ ಪರಂಪರೆ ಒಂದೇ ಆಗಿರುತ್ತದೆ ಉತ್ತರ ಕನರ್ಾಟಕದ ಭಾಗಗಳಲ್ಲಿ ಮುಸಲ್ಮಾನರಿಲ್ಲದ ಊರುಗಳಲ್ಲೇ ಮೊಹರಂ ಹಬ್ಬವನ್ನು ಹೆಚ್ಚು ಆಚರಣೆ ಮಾಡುತ್ತಾರೆ.
ರಾಮಯಣದಲ್ಲಿ ಬರುವ ಪಾತ್ರಗಳನ್ನು ಮುಸ್ಲಿಂ ಧಮರ್ೀಯರಲ್ಲೂ ಅಂತಹ ಹೆಸರು ಹೋಲಿಕೆ ಹೊಂದಿರುವಂತಹವರ ಲಕ್ಷಣಗಳನ್ನು ಸೂಫಿಗಳಲ್ಲಿ ಕಾಠಣಬಹುದು ಅಲ್ಲದೆ ಇಡೀ ಮಹಾಭರತದ ಕತೆಗಳನ್ನು ನಿರರ್ಗಳವಾಗಿ ಹೇಳಿ ಧರ್ಮ ಸಾರುತ್ತಾರೆ ಸೂಫಿ ಸಂತರು, ವಿಶ್ವದ ರಕ್ಷಣೆ ಆಗಬೇಕಾದರೆ ಸೂಫಿ ಮೊಹರಂ ಗಾಯಕರ ಪರಂಪರೆಗಳ ಮೂಲಕ ಸುನಾಮಿಯಂತ ಭಯೋತ್ಪಾದನೆ ತಡೆಯಲು ಸಾಧ್ಯವಾಗುತ್ತದೆ, ದ್ವೇಷ ಹಗೆಯಂತಹ ವಿಷಬೀಜಗಳನ್ನು ಹುಟ್ಟು ಹಾಕದಂತೆ ರಾಜ್ಯಭಾರ ಮಾಡುವವನೇ ನಿಜವಾದ ದೊರೆ ಆಗುವನು, ಧರ್ಮಕ್ಕೆ ಜಿದ್ದಾಜಿದ್ದಿ ಹೆಚ್ಚಿ ದೇಶವನ್ನು ಅಶಾಂತಿಗೆ ತಳ್ಳದಂತೆ ಶಾಂತಿ ಕಾಪಾಡುವ ಪ್ರತಿಯೊಬ್ಬರೂ ಹಿಂದೂ ಮುಸ್ಲಿಂರ ಭಾವೈಕತೆಯನ್ನು ಸಾರುವ ಕೇಂದ್ರಕ್ಕೊಂದು ಬಾರಿ ಭೇಟಿ ನೀಡಬನ್ನಿ ಭಾವೈಕ್ಯತೆ ಸಾರ ಬನ್ನಿ ಎಂದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಅರಿತು ಬಾಳುವ ಶಕ್ತಿಯನ್ನು ಮಾನವ ಹೊಂದಿದ್ದಾನೆ, ಧರ್ಮಗಳ ನಡುವೆ ಸಂಘರ್ಷಕ್ಕೆ ಹೋಗದಂತೆ ರಕ್ತಪಾಕ ತಡೆದು ಸೌಹಾರ್ಧತೆ ಕಾಯಬೇಕು ಎಂದರು.
ರಾಜ್ಯ ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದಶರ್ಿ ಶಕಿಲ್ ಅಹಮದ್ ಮಾತನಾಡಿ ಕಾಯಕ ಮಾಡುವುದರ ಮೂಲಕ ಮೋಕ್ಷ ಕಾಣಬೇಕು ಅನಾಚಾರ ಅನೀತಿ ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅದರ ಮೂಲಕ ಮೋಕ್ಷ ದೊರೆಯುತ್ತದೆ ಎಂದರು.
ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಸಮಾರಂಭ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಟಿ.ರಾಮಯ್ಯ ನಡೆಸಿಕೊಟ್ಟರು. ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಎಮ್.ರಂಗಸ್ವಾಮಯ್ಯ, ಚಂದ್ರಶೇಖರಶೆಟ್ಟಿ, ಹಾಜಿ ಮಹಮದ್ ಖಲಂದರ್, ಮುಕ್ತಿಯಾರ್, ಬಾಬುಸಾಹೇಬ್, ಸಿ.ಬಸವರಾಜು, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸಂಸ್ಕೃತಿ, ಪ್ರಗತಿ ಯಶಸ್ಸಿನ ಧ್ಯೂತಕಗಳು: ಡಿ.ಸಿ.
ಚಿಕ್ಕನಾಯಕನಹಳ್ಳಿ,ಮಾ.25: ಸಂಸ್ಕೃತಿ ಹಾಗೂ ಪ್ರಗತಿ ಎಂಬವವು ಒಂದೇ ನಾಣ್ಯದ ಎರಡು ಮುಖಗಳ ಪರಿಚಯಹೊಂದಿರುವ ರಾಜಕಾರಣಿಗಳಿಗೆ ಯಶಸ್ಸು ಖಂಡಿತ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ತಾತಯ್ಯನ ಉರುಸ್ ಆಚರಣೆಯ ಕೊನೆಯ ದಿನದಂದು ಏರ್ಪಡಿಸಿದ್ದ ಡಾ.ಪಿ.ಬಿ.ಶ್ರೀನಿವಾಸ್ ಹಾಗೂ ಎಲ್.ಆರ್.ಈಶ್ವರಿ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕಲೋಪಾಸಕನಿಗೆ ವಯಸ್ಸೇ ತಿಳಿಯುವುದಿಲ್ಲ, ಚಿಕ್ಕನಾಯಕನಹಳ್ಳಿ ಕಲಾವಿದರ ಸಮ್ಮಿಲನ ಕೇಂದ್ರವಾಗಿದ್ದು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಹಳ ವಿಜೃಂಭಣೆಯಿಂದ ನಡೆಯುತಿದ್ದು ನನ್ನಲ್ಲಿ ಕೃತಜ್ಞಾ ಭಾವನೆ ಮೂಡಿದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಕರ್ಾರದಿಂದ ಆಚರಿಸಿದ ಜಿಲ್ಲಾ ಉತ್ಸವವನ್ನೇ ನಾಚಿಸುವಂತಹ ಕಾರ್ಯಕ್ರಮದ ಮೂಲಕ ಹಲವು ದಶಕಗಳಿಂದ ಅತಿ ವಿಜೃಂಭಣೆಯಿಂದ ಆಚರಿಸಿ ಜನಸಾಗರವನ್ನೇ ಸಮ್ಮಿಲನಗೊಳಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಇಂತಹ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದಾರೆ. ನಮ್ಮನ್ನಾಳುವಂತಹವರಿಗೆ ಸಂಸ್ಕೃತಿ ಮತ್ತು ಪ್ರಗತಿಯ ಬಗ್ಗೆ ಆಸಕ್ತಿ ಇದ್ದಂತವರಲ್ಲಿ ಬದುಕು ಹಿತವಾಗಿದ್ದು ಜನರ ಅಭಿರುಚಿಗೆ ತಕ್ಕಂತೆ ಬೇಕಿರುವುದನ್ನು ನೀಡುವವರು ಎಂದರು.
ಡಾ.ಪಿ.ಬಿ.ಶ್ರೀನಿವಾಸ್ ಸನ್ಮಾನ ಸ್ವೀಕರಿಸಿ ಮಾತನಾಡಿ ಸಂಗೀತ ಸಾಹಿತ್ಯ ದಂಪತಿಗಳಿದ್ದಂತೆ ಇವರೆಡೂ ಒಂದಾದರೇ ಮಾತ್ರ ರಸಿಕರಿಗೆ ಸಂಗೀತ ರುಚಿಸಲು ಸಾಧ್ಯ ಎಂದರು.
ಸಮಾರಂಭದಲ್ಲಿ ಕಲೈಲಾಮಣಿ ಎಲ್.ಆರ್.ಈಶ್ವರಿ ಕಲಾವಿದರಾದ ಸಾಧುಕೋಕಿಲ, ಹೇಮಂತ್, ನಂದಿತ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾತನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಎ.ಎಸ್.ಪಿ.ಬೋರಲಿಂಗಯ್ಯ, ಜಿ.ಪಂ.ಸದಸ್ಯೆ ಜಾನಮ್ಮ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿದ್ದರು.