Friday, October 8, 2010

ಚುನಾಯಿತ ಸಂಘಕ್ಕೆ ಮಾತ್ರ ಅಧಿಕಾರ: ಜಿಲ್ಲಾಧ್ಯಕ್ಷ
ಚಿಕ್ಕನಾಯಕನಹಳ್ಳಿ,ಅ.08: ಕೇವಲ ಕೈಲಾಗದವರು ಸ್ವಯಂ ಘೋಷಿತ ಶಿಕ್ಷಕರ ಸಂಘ ರಚಿಸಿಕೊಂಡಿದ್ದು ಅವರ ಸ್ವಂತ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲದಿರುವಾಗ ಶಿಕ್ಷಕರ ಸಮಸ್ಯೆ ಬಗೆಹರಿಸಲು ಹೇಗೆ ಸಾದ್ಯ ಎಂದು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಪ್ರಶ್ನಿಸಿದ್ದಾರೆ.
ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬುದ್ದಿವಂತ ಶಿಕ್ಷಕರು ಚುನಾಯಿಸಿ ಅಧಿಕಾರಕ್ಕೆ ಶಿಕ್ಷಕರ ಸಂಘ ಒಡೆದು ಸಂಘದ ಶಿಕ್ಷಕರನ್ನು ಬೇರೆ ಕಡೆ ಸೆಳೆಯಲು ಸಾದ್ಯವಿಲ್ಲವೆಂದು ಮತ್ತು ನಾಲ್ಕು ತಿಂಗಳಿಂದ ಒದ್ದಾಡಿ ಸಂಘದ ಉದ್ಘಾಟನೆಗೆ ಕೇವಲ 88ಜನ ಶಿಕ್ಷಕರು ಬಂದಿದ್ದರು ಆದರೆ ಚುನಾಯಿತ ಸಂಘದ ಸಂತೋಷ ಕೂಟದ ಸಮಾರಂಭಕ್ಕೆ ಹಾಗೂ ಸಂಘಟನೆಯ ಸಂಘಕ್ಕೆ ಬಲಯುತವಾಗಿ ತಾಲೂಕಿನಿಂದ ಶಿಕ್ಷಕರೆಲ್ಲರೂ ಸೇರಿ 800 ಜನ ಶಿಕ್ಷಕರು ಸೇರಿದ್ದಾರೆ, ಇಷ್ಟು ಜನ ಶಿಕ್ಷಕರು ಸೇರಿರುವುದೇ ನಮ್ಮ ಶಿಕ್ಷಕರ ಸಂಘಟನೆಗೆ ಸಾಕ್ಷಿಯಾಗಿದ್ದು ತಾಲೂಕಿನ ಎಲ್ಲಾ ಶಿಕ್ಷಕರು ಬಹಳ ಅಭಿಮಾನದಿಂದ ನಮ್ಮ ಸಂಘಕ್ಕೆ ಸಹಕಾರ ನೀಡುತ್ತಿದ್ದಾರೆ ಅದಕ್ಕಾಗಿ ಎಲ್ಲರಿಗೂ ಅಭಾರಿಯಾಗಿ ಸದಾ ಸೇವೆ ಮಾಡಲು ಸಿದ್ದನಿದ್ದೇನೆ ಎಂದ ಅವರು ರಾಜ್ಯದಿಂದ ಬಂದ ವಿರೋಧಿ ಬಣದ ರಮಾದೇವಿ ಸೋತು ಸುಣ್ಣವಾಗಿ ನೆಲೆ ಇಲ್ಲದೆ ಒದ್ದಾಡುತ್ತಿದ್ದಾರೆ ಅವರ ಸಂಘಕ್ಕೆ ಮಾನ್ಯತೆ ಕೊಡಬೇಡಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ತಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ಚುನಾವಣೆಯಿಂದ ಗೆದ್ದ ಸಂಘಕ್ಕೆ ಮಾನ್ಯತೆ ಇದ್ದು ಆ ಸಂಘ ಮಾತ್ರ ಶಿಕ್ಷಕರ ಬೇಕು ಬೇಡಿಕೆ ಈಡೇರಿಸುವುದಕ್ಕೆ ಸಾಧ್ಯ, ದಿನಕ್ಕೆ ಸಾವಿರ ಸಂಘ ಹುಟ್ಟುತ್ತವೆ ಸಾವಿರ ಸಂಘ ಸಾಯುತ್ತವೆ ನಮ್ಮ ಸಂಘ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಕುಣಿಗಲ್ ತಾಲೂಕಿನ ರಾಜ್ಯ ಪದಾಧಿಕಾರಿ ನಾಗರಾಜು ಮಾತನಾಡಿ ಹೊಸ ಸಂಘ ಪ್ರಾರಂಭ ಮಾಡುತ್ತಿರುವ ರಮಾದೇವಿ, ಗೋಪಿನಾಥ್, ಬಿ.ಎಲ್.ಬಸವರಾಜು ನಮ್ಮ ಸಂಘದಲ್ಲಿ ಸೋತು ಸುಣ್ಣವಾಗಿ ಭ್ರಷ್ಟಾಚಾರ ಮಾಡಿ ನಿಲ್ಲಲು ನೆಲೆ ಇಲ್ಲದೆ ಹೊಸ ಸಂಘಕ್ಕೆ ಹೋಗಿದ್ದಾರೆ ಎಂದ ಅವರು ಮಾಜಿ ಅಧ್ಯಕ್ಷರಾದ ಗೋಪಿನಾಥ್ 3ಸಾರಿ ಅಮಾನತ್ತುಗೊಂಡಿದ್ದರು ಅಂತವರು ಶಿಕ್ಷಕರನ್ನು ಕಾಪಾಡಲು ಹೇಗೆ ಸಾಧ್ಯವಿಲ್ಲ ಎಂದರು.
ಜಿಲ್ಲಾ ಸಂಘಟನಾ ಕಾರ್ಯದಶರ್ಿ ಚುಡಾಮಣಿ ಮಾತನಾಡಿ ತಿಳಿಗೇಡಿಗಳು ಮಾಡುವ ಸಂಘಕ್ಕೆ ಬೆಲೆ ಇಲ್ಲ, ಅಧ್ಯಕ್ಷರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಶಿಕ್ಷಕರು ಅವರ ಜೊತೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.
ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಘುನಾಥ್, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ರಾಜ್ಯ ಶಿಕ್ಷಕ ಸಂಘದ ಉಪಾಧ್ಯಕ್ಷ ಶೋಭಾ, ಷಣ್ಮುಖ, ತಿಮ್ಮಯ್ಯ, ರಾಮಚಂದ್ರಯ್ಯ, ನರಸಿಂಹಮೂತರ್ಿ, ಗೊರವಣ್ಣ, ಎನ್.ಪ್ರಕಾಶ್, ಜಯರಾಮಯ್ಯ, ಸಿದ್ದರಾಮಣ್ಣ, ಪುಟ್ಟರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಾರದಮ್ಮ,ವಿಜಯಲಕ್ಷ್ಮಮ್ಮ ಪ್ರಾಥರ್ಿಸಿದರೆ, ಶಶಿಧರ್ ಎಸ್,ಎನ್ ಸ್ವಾಗತಿಸಿ, ಪಲ್ಲಕ್ಕಿ ಬಸವರಾಜು ನಿರೂಪಿಸಿ, ನಟರಾಜು ವಂದಿಸಿದರು.

ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಅ.08: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 12ರ ಮಂಗಳವಾರ ಬೆಳಿಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಸಂಸದ ಜಿ.ಎಸ್.ಬಸವರಾಜು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಡಾ.ಎ.ಎಚ್.ಶಿವಯೋಗಿಸ್ವಾಮಿ, ವೈ.ವಿ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕುಸುಮ ಜಗನ್ನಾಥ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕ ಟಿ.ಗಂಗಾಧರಯ್ಯ, ಪುರಸಭಾಧ್ಯಕ್ಷ ಸಿ.ಎಸ್.ರಾಜಣ್ಣ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.






Monday, October 4, 2010


ರಿಯಲ್ ಎಸ್ಟೇಟ್ ಏಜಂಟರಾಗಿರುವ ಶಿಕ್ಷಕರ ಸಂಘ

ಪದಾಧಿಕಾರಿಗಳು

ಚಿಕ್ಕನಾಯಕನಹಳ್ಳಿ,ಅ.04: ರಾಜ್ಯ ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿದ್ದು, ಸಂಘದ ಪದಾಧಿಕಾರಿಗಳು ಏಜೆಂಟರ್ಂತೆ ವತರ್ಿಸುತ್ತಿದ್ದಾರೆ ಎಂದು ರಾಜ್ಯ ಸ.ಪ್ರಾ.ಶಾ.ಶಿಕ್ಷಕ-ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಮಾದೇವಿ ಆರೋಪಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಸ್ವಾಥರ್ಿಗಳು, ಸಂಘಟನೆ ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಲು ಹೊರಟ್ಟಿದ್ದಾರೆ ಎಂದರಲ್ಲದೆ, ತಮ್ಮ ಲಾಭಕ್ಕಾಗಿ ಅಮಾಯಕ ಶಿಕ್ಷಕರ ಗುಂಪುಗಳನ್ನು ಕಟ್ಟಿಕೊಂಡು ಹಲವು ವಿಧದ ಆಮಿಷಗಳನ್ನು ನೀಡುತ್ತಾ ಅವರನ್ನು ದಾರಿತಪ್ಪಿಸುತ್ತಿದ್ದಾರೆ ಎಂದರು.

ಸಂಘಟನೆಗಳು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಹೊರತು ಸಾಮೂಹಿಕವಾಗಿ ಶಿಕ್ಷಕರಿಗೆ ಆಗುವ ಅನುಕೂಲಗಳ ಕಡೆ ಗಮನಕೊಡುತ್ತಿಲ್ಲ, ನಮ್ಮ ರಾಜ್ಯದ ಶಿಕ್ಷಕರಿಗೂ ಪಕ್ಕದ ಆಂಧ್ರ, ತಮಿಳು ನಾಡು ಶಿಕ್ಷಕರುಗಳಿಗೂ ಮೂಲ ವೇತನದಲ್ಲಿ ಭಾರಿ ವ್ಯತ್ಯಾಸವಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಕರ್ಾರದಿಂದ ಮಾನ್ಯತೆ ಪಡೆದುಕೊಂಡಿದೆ ಎಂದು ಹೇಳಿಕೊಳ್ಳುವ ಸಂಘ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಶಿಕ್ಷಕರ ಸಂಘದ ಸದಸ್ಯತ್ವಕ್ಕಾಗಿ ನೀಡುವ ಹಣವನ್ನು 20ರೂ ನಿಂದ 50ರೂಗೆ ಏರಿಸಿರುವುದರಿಂದ ಸಂಗ್ರಹವಾಗುವ ಹಣವನ್ನು ರಾಜ್ಯ ಪದಾಧಿಕಾರಿಗಳು ತಮ್ಮ ಖಾಸಗಿ ವಿಲಾಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಅವರ ದುರ್ಬಲತೆ ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಒಂದು ಸಂಘವು ಎಡವಿದರೆ, ಆ ತಪ್ಪನ್ನು ತಿದ್ದಲು ಇನ್ನೊಂದು ಸಂಘದ ಅವಶ್ಯಕತೆ ಇದೆ ಎಂದರು.

ರಾಜ್ಯ ಸ.ಪ್ರಾ.ಶಾ.ಶಿ.ಶಿ ಸಂಘದ ಕಾರ್ಯದಶರ್ಿ ಶಂಕರಮೂತರ್ಿ ಮಾತನಾಡಿ ಗ್ರಾಮ, ಪಟ್ಟಣಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ, ಈ ವಿಷಯವನ್ನು 10 ವರ್ಷಗಳಿಂದಲೂ ಸಕರ್ಾರಕ್ಕೆ ಹೇಳಿದರೂ ಯಾವ ಪ್ರಯೋಜನವು ಆಗುತ್ತಿಲ್ಲ, ಶಿಕ್ಷಕರು ನಿಮಗೆ ನೀವೆ ನಾಯಕರಾಗಿ ನಮ್ಮ ಸಂಘದ ಜೊತೆ ಕೈಜೋಡಿಸಿದರೆ ನಾವು ಹೋರಾಟದ ಮೂಲಕ ಶಿಕ್ಷಕರ ಸಮಸ್ಯೆ ಪರ ಧ್ವನಿ ಎತ್ತುತ್ತೇವೆ ಎಂದರಲ್ಲದೆ, ನಮ್ಮ ಸಂಘವು ನಿಸ್ವಾರ್ಥ ಸೇವೆ ಮೂಲಕ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಕರ್ಾರಕ್ಕೆ ಒತ್ತಾಯಿಸುತ್ತೇವೆ ಎಂದರು.

ಸಮಾರಂಭದಲ್ಲಿ ಜಿ,ಮು,ಶಿ,ಸಂಘದ ಅಧ್ಯಕ್ಷ ಹೆಚ್.ಎನ್ ಗೋಪಿನಾಥ್, ತಾ,ಸ,ಪ್ರಾ,ಶಾ,ಶಿ,ಶಿ, ಸಂಘದ ಅಧ್ಯಕ್ಷ ಬಿ.ಎಲ್.ಬಸವರಾಜು, ಮುಖ್ಯ ಶಿಕ್ಷಕರ ಜಿಲ್ಲಾ ಉಪಾಧ್ಯಕ್ಷ ಕೆ.ರಾಜಯ್ಯ, ತಾ,ಸ,ಪ್ರಾ,ಶಾ,ಶಿ,ಶಿ ಸಂಘದ ಗೌರವಾಧ್ಯಕ್ಷ ಎಂ ಗಂಗಾಧರಯ್ಯ, ಉಪಾಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದಶರ್ಿ ಬೆಳಗುಲಿ ವೆಂಕಟೇಶ್, ಎನ್.ಪಿ ಕುಮಾರಸ್ವಾಮಿ, ರುಕ್ಮಾಂಗದ, ಜಿ.ತಿಮ್ಮಯ್ಯ, ಜಿ.ರಂಗಯ್ಯ, ಶಿವಕುಮಾರ್, ಕೆಂಬಾಳ್ರಮೇಶ್, ಸಿ.ಜಿ.ಶಂಕರ್, ಚಿಕ್ಕಣ್ಣ ಉಪಸ್ಥಿತರಿದ್ದರು.

ಅ.5ಮತ್ತು 6ರಂದು ಸಮುದಾಯದತ್ತ ಶಾಲೆ

ಚಿಕ್ಕನಾಯಕನಹಳ್ಳಿ,ಅ.04: ತಾಲೂಕು ಸಕರ್ಾರಿ ಶಾಲೆಗಳ ಮೊದಲನೇ ಸುತ್ತಿನ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಇದೇ 5 ಮತ್ತು 6ರಂದು ನಡೆಯಲಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಗಳಿಗೆ ಪ್ರೌಡಶಾಲೆ ಶಿಕ್ಷಕರು, ಹಾಗೂ ಪ್ರೌಡಶಾಲೆ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮೇಲ್ವಿಚಾರಕರಾಗಿ ಭಾಗವಹಿಸಲಿದ್ದು ಅಂದು ನಿಯಮಾನುಸಾರ ವೇಳಾ ಪಟ್ಟಿಗನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಸಹ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.


Sunday, October 3, 2010

Saturday, October 2, 2010

Friday, October 1, 2010


ಆಯುವರ್ೇದ ಔಷದಿ ರೋಗನಿರೋದಕ ಶಕ್ತಿಯನ್ನು ಹೊಂದಿದೆ: ನ್ಯಾಯಾದೀಶೆ ಎನ್.ಶೀಲಾ
ಚಿಕ್ಕನಾಯಕನಹಳ್ಳಿ,ಅ.01: ಅನೈರ್ಮಲ್ಯದಿಂದ ದೂರವಿದ್ದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ಚದಿಂದ ಕಾಪಾಡಿಕೊಂಡರೆ ಚಿಕೂನ್ಗುನ್ಯ, ಡೆಂಗೆ, ಎಚ್1ಎನ್1ನಂತಹ ಭಯಾನಕಾರಕ ರೋಗಗಳು ಸುಳಿಯುವುದಿಲ್ಲ ಎಂದು ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ ಹೇಳಿದರು.
ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಆಯುಷ್ ಇಲಾಖೆ, ಸಕರ್ಾರಿ ಆಯುವರ್ೇದ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ನಡೆದ ಆಯುಷ್ ಜಾಗೃತಿ ಶಿಬಿರ ಹಾಗೂ ಔಷದಿ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಆಯುವರ್ೇದ ಔಷದಿಗಳಲ್ಲಿ ರೋಗನಿರೋಧಕ ಶಕ್ತಿಯಿದ್ದು ಹಲವು ಕಾಯಿಲೆಗಳನ್ನು ಆಯುವರ್ೇದ ಔಷದಿಗಳಿಂದ ಪರಿಹರಿಸಬಹುದು ಎಂದ ಅವರು ಜಿಲ್ಲಾ ಆಯುಷ್ ಇಲಾಖೆಯವರು ನಡೆಸುತ್ತಿರುವ ಈ ರೀತಿಯ ಸಮಾರಂಭವನ್ನು ಪ್ರತಿ ಹಳ್ಳಿಯಲ್ಲೂ ನಡೆಸಿ ಗ್ರಾಮಸ್ಥರೇ ಬೆಳಸುವ ಗಿಡಮೂಲಿಕೆಗಳಿಂದ ರೋಗವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂದು ತಿಳಿಸಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಹೊನ್ನತ್ತಿ ಡಿ.ರಾಮರಾವ್ ಮಾತನಾಡಿ ಅಮೃತಬಳ್ಳಿ, ತುಳಸಿಯಂತಹ ಎಲೆ ಸೇವಿಸುವುದರಿಂದ ಪ್ರಾಣವಾಯು ಮತ್ತು ಹಲವು ಕಾಯಿಲೆಗಳಿಂದ ನರಳುತ್ತಿರುವ ಜನರನ್ನು ಕಾಯಿಲೆಗಳಿಂದ ಪರಿಹರಿಸುವುದೇ ಆಯುಷ್ ಇಲಾಖೆ ಉದ್ದೇಶ ಎಂದರು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್.ಗೋಪಾಲಕೃಷ್ಣ, ಸಕರ್ಾರಿ ಅಭಿಯೋಜಕ ಆರ್.ಟಿ.ಆಶಾ, ವಕೀಲರಾದ ಸೀತಾರಾಮಯ್ಯ, ಸಿ.ರಾಜಶೇಖರ್. ವೈದ್ಯಾಧಿಕಾರಿಗಳಾದ ಹೆಚ್.ಸಂಜೀವಮೂತರ್ಿ, ಶ್ರೀಧರ್, ಸಿ.ದೇವೇಂದ್ರಪ್ಪ ಯೋಗ ಶಿಕ್ಷಕ ಭುವನಸುಂದರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಕೀಲ ದಿಲೀಪ್ ಸ್ವಾಗತಿಸಿ, ಹನುಮಂತಯ್ಯ ನಿರೂಪಿಸಿದರು.

ಶಿಕ್ಷಕರ ಬೇಡಿಕೆ ದಿನಾಚರಣೆ ಆಚರಿಸಲು ಕರೆ
ಚಿಕ್ಕನಾಯಕನಹಳ್ಳಿ,ಅ.01: ಪ್ರಾಥಮಿಕ ಶಾಲಾ ಶಿಕ್ಷಕರು ಶಾಲಾ ಹಂತದಲ್ಲಿ 10 ಅಂಶಗಳ ಪಟ್ಟಿಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸಿ ಅಕ್ಟೋಬರ್ 5ರಂದು ಶಿಕ್ಷಕರ ಬೇಡಿಕೆ ದಿನಾಚರಣೆಯಾಗಿ ಆಚರಿಸಲು ತಾ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಕರ್ಾರದ ಗಮನ ಸೆಳೆಯಲು ಶಿಕ್ಷಕರ ರಚಿಸಿರುವ ಬೇಡಿಕೆಳೆಂದರೆ 200ರೂ ವಿಶೇಷ ವೇತನವನ್ನು ವಿಲೀನಗೊಳಿಸಿಬೇಕು, ಮುಖ್ಯೋಪಾಧ್ಯಾಯರಿಗೆ ಆಯ್ಕೆ ದಜರ್ೆಯ ವೇತನ ಶ್ರೇಣಿ ನೀಡಬೇಕು. ಜಿಲ್ಲೆಯಿಂದ ಜಿಲ್ಲೆಗೆ ವಗರ್ಾವಾಗಿ ಬಂದ ಶಿಕ್ಷಕರಿಗೆ 10.15.20 ವರ್ಷದ ಆಥರ್ಿಕ ಸೌಲಭ್ಯ ನೀಡಬೇಕು, ಸಿ.ಆರ್.ಪಿ, ಬಿ.ಆರ್.ಪಿ ಹುದ್ದೆಗಳನ್ನು ಮುಖ್ಯೋಪಾಧ್ಯಾಯರ ಹುದ್ದೆಗಳನ್ನಾಗಿ ಪರಿಗಣಿಸಿ, ಬಿ.ಎ, ಬಿ.ಇಡಿ, ಆದ ಶಿಕ್ಷಕರಿಗೆ ಈಗ ನೀಡುವ ಬಡ್ತಿ ಪ್ರಮಾಣವನ್ನು 50ರಿಂದ 75ಕ್ಕೆ ಹೆಚ್ಚಿಸಿ ಮತ್ತು ಪ್ರೌಡಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡವಾಗ ಶೇ.10ರಷ್ಟು ಮೀಸಲಾತಿ ನೀಡಬೇಕು, ಸಮಾನ ಶಾಲಾ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು.
ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಅವಧಿಯನ್ನು ಗುತ್ತಿಗೆ ಶಿಕ್ಷಕರ ಗುತ್ತಿಗೆ ಅವಧಿಯನ್ನು ನಿರಂತರ ಸೇವೆ ಎಂದು ಪರಿಗಣಿಸಿ ಆಥರ್ಿಕ ಸೌಲಭ್ಯವನ್ನು ಒಳಗೊಂಡು ಎಲ್ಲಾ ಸೌಲಭ್ಯ ನೀಡಬೇಕು, ನಲಿ ಕಲಿ ಯೋಜನೆಯನ್ನು 3ಮತ್ತು 4ನೇ ತರಗತಿಗೆ ವಿಸ್ತರಿಸಬಾರದು. ಸೇವಾ ಜೇಷ್ಠತೆಯನ್ನು ದೈಹಿಕ ಶಿಕ್ಷಕರಿಗೆ, ಉದರ್ು ಶಿಕ್ಷಕರಿಗೆ ಶಿಕ್ಷಣ ಸಂಯೋಜಕ ಹುದ್ದೆಗಳನ್ನು ನೀಡಬೇಕು ಮತ್ತು ಎಲ್ಲಾ ರೀತಿಯ ಬಡ್ತಿ ಅವಕಾಶಗಳನ್ನು ನೀಡಬೇಕು. ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ನೀಡಿ, ಸಕರ್ಾರದ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಈ ಹಿಂದಿನ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು. ಎಂದು ತಿಳಿಸಿದ ಅವರು ತಾಲೂಕಿನಲ್ಲಿ ಹೊಸದಾಗಿ ರಚಿತವಾದ ಸಂಘಗಳು ಯಾವುದೇ ದೇಯೋದ್ದೇಶಗಳನ್ನು ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಶಿಕ್ಷಕರ ಸಮಸ್ಯಗಳ ಬಗ್ಗೆ ಹೆಚ್ಚಿನ ಸಲಹೆ ಮರ್ಗದರ್ಶನ ಪಡೆಯಲು, ಚಚರ್ಿಸಲು ಶ್ರೀ ದುಗರ್ಾದೇವಿ ಬೆಟ್ಟ ಹರೇನಹಳ್ಳಿ ಗೇಟ್ಹತ್ತಿರ ಬೆಳಗ್ಗೆ 10ಕ್ಕೆ ತಾಲೂಕಿನ ಎಲ್ಲಾ ಶಿಕ್ಷಕರನ್ನು ಆಹ್ವಾನಿಸಲಾಗಿದೆ ಎಂದು ತಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ ಕೋರಿದ್ದಾರೆ.

Thursday, September 30, 2010

ಸವಿತ.ಟಿ
ವಿಜ್ಞಾನ ಶಿಕ್ಷಕರು
ರೋಟರಿ ಆಂಗ್ಲ ಪ್ರೌಡಶಾಲೆ












ಚಿಕ್ಕನಾಯಕನಹಳ್ಳಿ, ಸೆ.30:
ಓಜೋನ್ ಕ್ಷೀಣಿಸುವಿಕೆ:
ಭೂಮಿಯ ಸುತ್ತ ಆವರಿಸುತ್ತಿರುವ ವಾಯು ಮಂಡಲದಲ್ಲಿ ಸುಮಾರು 10ರಿಂದ 50 ಕಿ.ಮೀ.ವರೆವಿಗೂ ಸ್ಥಿರಗೋಲ ಎನ್ನುತ್ತಾರೆ. ಮೂರು ಆಮ್ಲಜನಕ ಅಣುಗಳ ಘನೀಕರಣದಿಂದ ಓಜೋನ್ ಅನಿಲ ಉಂಟಾಗಿದೆ ಇದು ಸೂರ್ಯನ ಕಿರಣಗಳ ಮತ್ತು ಆಮ್ಲಜನಕದ ನಿರಂತರ ಚಟುವಟಿಕೆಗಳಿಂದ ಉಂಟಾಗುತ್ತದೆ, ಓಜೋನ್ ಒಂದು ನೈಸಗರ್ಿಕ ಶೋಧಕವಾಗಿ ಕೆಲಸ ನಿರ್ವಹಿಸುತ್ತದೆ ಇದು ಸೂರ್ಯಗಳಿಂದ ಹೊಮ್ಮುವ ಜೀವಿಗಳಿಗೆ ಅಪಾಯಕಾರಿಯಾದ ನೇರಳಾತೀತ ಕಿರಣಗಳನ್ನು ತಡೆಯುತ್ತದೆ.
ನೈಸಗರ್ಿಕ ಕಾರಣಗಳಿಂದ ಮತ್ತು ಮಾನವರ ಚಟುವಟಿಕೆಗಳಿಂದ ಓಜೋನ್ ಅಣುಗಳು ಕಡಿಮೆಯಾಗಿ ಕ್ರಮೇಣ ಓಜೋನ್ ಪದರ ನಾಶವಾಗುತ್ತಿದೆ. ಇಂತಹ ರಾಸಾಯನಿಕಗಳನ್ನು ಓಜೋನ್ ನಾಶಕಗಳು ಎಂದು ಕರೆಯಲಾಗಿದೆ.
ಕಾರಣಗಳು
ಏರ್ಸಾಲ್, ಸಲ್ಫೇಟ್ಗಳು,ನೀರಾವಿ ತೇಲುಧೂಳಿನ ಕಣಗಳು ಜ್ವಾಲಮುಖಿಯಿಂದ ಉಂಟಾಗುವ ಇತರೆಅನಿಲಗಳು
ಪಳಯುಳಿಕೆ ಇಂಧನಗಳ ದಹನ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲಗಳು
ಕೈಗಾರಿಕೆಗಳ ರಾಸಾಯಿನಿಕಗಳು ಮತ್ತು ವಾಹನಗಳು ಉಗುಳುವ ಧೂಳು ಮತ್ತು ವಿಷಕಾರಕ ಅನಿಲಗಳು ನೈಟ್ರೋಜನ್ ಆಕ್ಸೈಡ್ಗಳು, ದ್ಯುತಿರಾಸಾಯಿನಿಕ ಕ್ರಿಯೆಗಳಿಂದ ಉಂಟಾಗುವ ರಾಸಾಯನಿಕ ಸ್ಮಾಗ್ಗಳು, ಸ್ಮಾಗ್ಗಳಿಂದ ಉಂಟಾಗುವ ಆಮ್ಲಮಳೆ, ಸಲ್ಫರ್ ಡೈ ಆಕ್ಸೈಡ್ಗಳು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಹೊರಸೂಸುವ ವಿಷ ಅನಿಲಗಳು.
ಕ್ಲೋರೋ ಪ್ಲೋರೋ ಕಾರ್ಬನ್(ಸಿ.ಎಫ್.ಸಿ): ಅಂದರೆ ಸಂಶ್ಲೇಷಿತ ರಾಸಾಯನಿಕ ಅನಿಲ ರೂಪದಲ್ಲಿರುವ ಈ ರಾಸಾಯನಿಕಗಳಿಗೆ ವಾಸನೆ ಇಲ್ಲ ಕ್ಲೋರಿನ್ ಫ್ಲೋರಿನ್ ಮತ್ತು ಇಂಗಾಲಗಳ ಪರಮಾಣುಗಳಿಂದ ರಚಿತವಾದ ಸಂಯುಕ್ತಗಳಿವು. ಸಿ.ಎಪ್.ಸಿ ಯನ್ನು ಮೊಟ್ಟಮೊದಲು 1892ರಲ್ಲಿ ಸಂಶ್ಲೇಷಿಸಲಾಯಿತು ಆದರೆ 1920ವರೆಗೂ ಅದರಿಂದ ಯಾವ ಪ್ರಯೋಜನವನ್ನು ಪಡೆಯಲಾಗಲಿಲ್ಲ. ನಂತರ ಶೈತ್ಯಾಪೆಟಿಗೆಯಲ್ಲಿ (ರೆಫ್ರಿಜಿರೇಟರ್) ತಂಪುಕಾರಕ ರಾಸಾಯನಿಕವಾಗಿ ಬಳಕೆಯಾಗುತ್ತಿದೆ.
ಈ ಸಿ.ಎಪ್.ಸಿ ಮತ್ತು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು-ಎರಡರ ಮಧ್ಯೆ ರಾಸಾಯನಿಕ ಕ್ರಿಯೆ ಉಂಟಾಗಿ ಕ್ಲೋರಿನ್ ಪ್ರತ್ಯೇಕಗೊಂಡು ಓಜೋನ್ ನಾಶವಾಗುತ್ತಾ ಬರುತ್ತದೆ. ಅಲ್ಲದೆ ಅಣುಸ್ಥಾವರ ಮತ್ತು ವಿದ್ಯುತ್ಸ್ಥಾವರಗಳು ಹೊರ ಸೂಸುವ ಅನಿಲಗಳು ಸಿ.ಎಪ್.ಸಿಯನ್ನು ಒಳಗೊಂಡಿರುತ್ತದೆ.
ಪರಿಣಾಮಗಳು
ಓಜೋನ್ ಕ್ಷೀಣಿಸುವುದರ ಪರಿಣಾಮವಾಗಿ ಸೌರಕಿರಣಗಳಿಂದ ಹೊರಬರುವ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತವೆ.
ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕುಂಠಿತಗೊಳ್ಳುತ್ತದೆ.
ಕಲ್ಲು ಹೂ ಜಲಸಸ್ಯಗಳ ಬೆಳವಣಿಗೆಯನ್ನು ತಡೆಯುತ್ತದೆ.
ಮಾನವನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬ್ರಾಂಕೈಟಿಸ್, ಶ್ವಾಸಕೋಶದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಕ್ಯಾಟರಾಕ್ಟ್ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ.
ಜಲಚರಗಳು ಉಭಯವಾಸಿ ಜೀವಿಗಳು ಇದರಿಂದ ಬಹಳ ತೊಂದರೆಯನ್ನು ಅನುಭವಿಸುತ್ತವೆ.
ಪರಿಸರ ತನ್ನ ಸಮತೋಲನವನ್ನು ಕಳೆದುಕೊಂಡು ಪರಿಸರ ನಾಶಕ್ಕೆ ಅನುವು ಮಾಡಿಕೊಡುತ್ತದೆ.
ತಡೆಗಟ್ಟುವ ಕ್ರಮಗಳು
ರೆಫ್ರಿಜರೇಟರ್ ಮತ್ತು ವಾಹನಗಳ ಮಿತಬಳಕೆ.
ಕೈಗಾರಿಕೆಗಳಲ್ಲಿ ಶೋಧಕ ಚಿಮಣಿಗಳ ಅಳವಡಿಕೆ.
ಪರಿಸರ ಸಂರಕ್ಷಣೆ.
ಓಜೋನ್ ನಾಶದ ವಿಷಯವನ್ನು ಪ್ರಪಂಚವು ಗಂಭೀರವಾಗಿ ಪರಿಗಣಿಸಿದ್ದು 1980ರ ಮಧ್ಯಭಾಗದಲ್ಲಿ 1985ರಲ್ಲಿ ಅಂಟಾಟರ್ಿಕಾ ಪ್ರದೇಶದಲ್ಲಿ ಮೊಟ್ಟಮೊದಲು ಓಜೋನ್ ಪದರ ತೆಳುವಾಗುತ್ತಿರುವುದನ್ನು ಗಮನಿಸಲಾಯಿತು ಇದರ ಪರಿಣಾಮವಾಗಿ 1985ರಲ್ಲಿ ವಿಯೆನ್ನಾ ದೇಶದಲ್ಲಿ ಓಜೋನ್ ಪದರ ರಕ್ಷಣೆ ಕುರಿತು ಒಂದು ಸಮ್ಮೇಳನ ಜರುಗಿತು ಇಲ್ಲಿ ನಡೆದ ವಿಚಾರ ವಿನಿಮಯದಲ್ಲಿ ಮಾನವರಿಂದಾಗುತ್ತಿರುವ ಓಜೋನ್ ಪದರದ ನಾಶವನ್ನು ಅತ್ಯಂತ ಕಡಿಮೆ ಮಾಡಬೇಕೆಂದು ಮುಖ್ಯವಾಗಿ ಸಿ.ಎಫ್.ಸಿ ಗಳ ಉತ್ಪಾದನೆ ಬಳಕೆ ಮತ್ತು ಉತ್ಸರ್ಜಗಳನ್ನು ಕಡಿಮೆ ಮಾಡಬೇಕೆಂದು ನಿರ್ಧರಿಸಲಾಯಿತು. ಓಜೋನ್ ಪದರದ ರಕ್ಷಣೆಯನ್ನು ಕುರಿತು 1987ರ ಮಾಂಟ್ರಿಯಲ್ ಕೆನಡಾ ಒಪ್ಪಂದಕ್ಕೆ ಸುಮಾರು 150 ರಾಷ್ಟ್ರಗಳ ಸಹಿ ಹಾಕಿ ಸಿ.ಎಫ್.ಸಿ ಉತ್ಪಾದನೆಯನ್ನು 1986ರ ನಂತರ ಹೆಚ್ಚು ಮಾಡದೆ 1993ರ ವೇಳೆಗೆ ಶೇ.20ರಷ್ಟು ಉತ್ಪಾದನೆಯನ್ನು 1999ರ ವೇಳೆಗೆ ಶೇ.50ರಷ್ಟು ಉತ್ಪಾದನೆಯನ್ನು ಡಿಮೆ ಗೊಳಸಬೇಕೆಂಬುದೇ ಮಾಂಟ್ರಿಯಲ್ ಒಪ್ಪಂದದ ಉದ್ದೇಶ.
ಓಜೋನ್ ಪದರವನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುವ ಈ ಒಪ್ಪಂದವನ್ನು ಅನೇಕ ರಾಷ್ಟ್ರಗಳು ಸ್ವಾಗತಿಸಿವೆ. ಭಾರತವು 1992ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದೆ ಇದು ಸಾಧ್ಯವಾಗಿ ಸಿ.ಎಫ್.ಸಿ ಬಳಕೆ ಸಂಪೂರ್ಣವಾಗಿ ನಿಂತರೂ ಓಜೋನ್ ಪದರವು ತನ್ನ ಹಿಂದಿನ ಸ್ಥಿತಿಗೆ ಮರಳಲು ಸುಮಾರು 50ವರ್ಷಗಳು ಬೇಕೆಂಬುದು ಅಂದಾಜು, ಇದರ ಅರಿವು ಮತ್ತು ಜಾಗೃತಿಗಾಗಿ ಪ್ರತಿ ವರ್ಷ ಸೆಪ್ಟಂಬರ್ 16ರಂದು ವಿಶ್ವ ಓಜೋನ್ ದಿನವನ್ನಾಗಿ ಆಚರಿಸಲಾಗುತ್ತದೆ.




ಗಣೇಶನ ಹೆಸರಿನಲ್ಲಿ ಗ್ರಾಮದ ಸ್ವಚ್ಚತೆ, ಆರೋಗ್ಯ ಶಿಬಿರಕ್ಕೆ ಮುಂದಾಗುವ 'ಗೆಳೆಯರ ಬಳಗ'
ಚಿಕ್ಕನಾಯಕನಹಳ್ಳಿ,ಸೆ.29: ಕುಪ್ಪೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಗಣೇಶನ ಮೂತರ್ಿ ಪ್ರತಿಷ್ಠಾಪನೆ ಕಾರ್ಯ ಸಾಂಗವಾಗಿ ನಡೆದುಕೊಂಡು ಬರುತ್ತಿರುವ ಧಾಮರ್ಿಕ ಆಚರಣೆ, ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಗೆಳೆಯರ ಬಳಗ ಸಂಘಟನೆಯ ವಿಶೇಷವೆಂದರೆ, ಈ ಸಂದರ್ಭದಲ್ಲಿ ಗಣೇಶನ ಪೂಜೆಯ ಜೊತೆಗೆ ಗ್ರಾಮದ ಸ್ವಚ್ಚತೆ ಹಾಗೂ ಆರೋಗ್ಯ ಶಿಬಿರಕ್ಕೆ ಹೆಚ್ಚು ಒತ್ತುಕೊಟ್ಟು ಸಂಘದ ಎಲ್ಲರೂ ಈ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವುದು ಗಮನಾರ್ಹ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹಾಗೂ ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜನ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಪ್ರತಿಷ್ಠಾಪನಾ ಕಾರ್ಯಕ್ಕೆ ಗ್ರಾಮದ ಹಿರಿಯರು, ಯುವಕರು, ಸ್ತ್ರೀಶಕ್ತಿ ಸಂಘದವರ ಮುತುವಜರ್ಿಯಲ್ಲಿ ನಡೆಯುವ ಈ ಕಾರ್ಯದಲ್ಲಿ ಪೂಜಾ ವಿಧಾನಗಳಿಗೆ ವಹಿಸುವಷ್ಟು ಶ್ರದ್ಧೆಯನ್ನೇ ಗ್ರಾಮದ ಸ್ವಚ್ಚತೆಯ ಕಡೆಗೂ ನಿಗಾ ವಹಿಸುವುದು ವಿಶೇಷ. ಗಣಪತಿ ವಿಸಜರ್ಿಸುವವರೆಗೆ ಯುವಕರೆಲ್ಲಾ ಸ್ವಯಂ ಪ್ರೇರಿತರಾಗಿ ಕೊಳಚೆ ಪ್ರದೇಶಗಳ ನಿಮರ್ೂಲನೆ ಹಾಗೂ ಕಸಕಡ್ಡಿಗಳ ನಿರ್ವಹಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ವಿದ್ಯಾಥರ್ಿಗಳಿಗೆ ಕ್ರೀಡಾ ತರಬೇತಿ, ರಾಜ್ಯಮಟ್ಟದ ಜಾನಪದ ಕಲಾವಿದರಿಗೆ ಸನ್ಮಾನ, ಆರೋಗ್ಯ ಶಿಬಿರಗಳನ್ನು ನಡೆಸುವ ಈ ಬಳಗ, ಗಣೇಶನ ಹೆಸರಿನಲ್ಲಿ ಸೃಜನಶೀಲ ಕಾರ್ಯಗಳನ್ನು ಮಾಡುತ್ತಿರುವುದು, ಧಾಮರ್ಿಕ ಕಾರ್ಯದಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಮಹತ್ವಕೊಟ್ಟಿರುವುದು ಒಂದು ಹೊಸ ಆಯಾಮ.
ಈ ಗಣೇಶನ ಮೂತರ್ಿಯನ್ನು ಇದೇ ಅ.2ರ ಶನಿವಾರ ಸಂಜೆ 8ಕ್ಕೆ ವಿಸಜರ್ಿಸಲಿದ್ದು, ಈ ಸಂದರ್ಭದಲ್ಲಿ ವಿವಿಧ ಜಾನಪದ ಪ್ರಕಾರಗಳಾದ ವೀರಭದ್ರನ ಕುಣಿತ, ಕಂಸಾಳೆ, ಮ್ಯೂಸಿಕ್ ನಾಸಿಕ್ ಡೋಲ್ ಬ್ಯಾಂಡ್ ತಂಡ, ಜಾನಪದ ನೃತ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

Saturday, September 25, 2010


ತಂದೆಯ ಕತ್ತು ಕಡಿದ ಮಗ, ಶವವನ್ನು ಹೊಲದಲ್ಲಿ ಹೂತ್ತಿಟ್ಟ.
ಚಿಕ್ಕನಾಯಕನಹಳ್ಳಿ,ಸೆ.25: ತಂದೆ ಮತ್ತು ಮಗನ ನಡುವೆ ನಡೆದ ವಾಗ್ವಾದದಲ್ಲಿ ತಂದೆಯ ಕತ್ತು ಕಡಿದ ಮಗ, ತಂದೆಯ ದೇಹವನ್ನು ಹೂತ್ತಿಟ್ಟ ಎಂಟು ದಿನಗಳ ನಂತರ ತಾಯಿಗೆ ತಿಳಿಸಿರುವ ವಿಲಕ್ಷಣ ಘಟನೆ ತಾಲೂಕಿನ ಕಾಮಲಾ ಪುರದಲ್ಲಿ ನಡೆದಿದೆ.
ಹಂದನಕೆರೆ ಹೋಬಳಿಯ ಕಾಮಲಾ ಪುರದ ಶಂಕರಪ್ಪ(51) ಕೊಲೆಯಾದ ದುದರ್ೈವಿ, ಮಗ ವೀರಭದ್ರ(21) ಕೃತ್ಯವೆಸಿಗಿರುವ ಆರೋಪಿ.
ಕೊಲೆಗೆ ಕಾರಣ: ಶಂಕರಪ್ಪ ಕುಡಿದ ಅಮಲಿನಲ್ಲಿ ಮಗ ವೀರಭದ್ರ ಹಾಗೂ ಪತ್ನಿ ಲಕ್ಕಮ್ಮನೊಂದಿಗೆ ನಿತ್ಯವೂ ಜಗಳವಾಡುತ್ತಿದ್ದ, ಇದರಿಂದ ರೋಸಿ ಹೋದ ಮಗ, ತನ್ನ ತಾಯಿ ಲಕ್ಕಮ್ಮನನ್ನು ತನ್ನ ಅಕ್ಕನ ಊರಾದ ಹನುಮಂತಪರಕ್ಕೆ ಕಳುಹಿಸುತ್ತಾನೆ. ಇದರಿಂದ ಸಿಟ್ಟಿಗೆದ್ದ ಶಂಕರಪ್ಪ ಹೊಲದ ಬಳಿ ಬಂದು ಮಗನೊಂದಿಗೆ ಜಗಳಕ್ಕಿಳಿದಿದ್ದಾನೆ, ಸೌದೆ ಕಡಿಯುತ್ತಿದ್ದ ವೀರಭದ್ರ ಸಿಟ್ಟಿನಿಂದ ಕೈಯಲ್ಲಿದ್ದ ಕುಡುಗೋಲಿನಿಂದ ಹೊಡೆದಿದ್ದಾನೆ, ಹೊಡೆತ ತಂದೆಯ ಕುತ್ತಿಗೆ ಬಿದ್ದ ಪರಿಣಾಮ ಶಂಕರಪ್ಪ ಸ್ಥಳದಲ್ಲೇ ಸಾವನ್ನಾಪಿದ್ದಾನೆ. ತನ್ನ ತಪ್ಪಿನ ಅರಿವಾದ ವೀರಭದ್ರ ತನ್ನ ಸ್ನೇಹಿತರೊಂದಿಗೆ ತಂದೆಯ ಶವವನ್ನೇ ಅಲ್ಲೇ ಇದ್ದ ಗುಂಡಿಯಲ್ಲಿ ಹೂತಿಟ್ಟು, ಅದರ ಮೇಲೆ ಎಳ್ಳಿನ ಕಡ್ಡಿಯ ರಾಶಿಯನ್ನು ಹಾಕಿದ್ದಾನೆ. ಈ ವಿಷಯವನ್ನು ಯಾರಿಗೂ ಹೇಳದೆ ಒಂದು ವಾರ ಸುಮ್ಮನಾಗಿದ್ದು, ತನ್ನ ತಾಯಿ ಮನೆಗೆ ಬಂದ ನಂತರವೂ ತಂದೆಯ ಸಾವಿನ ಸುಳಿವನ್ನು ನೀಡಲ್ಲ, ಒಂದೆರಡು ದಿನಗಳ ನಂತರ ಊರಿನ ಗ್ರಾಮಸ್ಥರು ಅನುಮಾನಗೊಂಡು ವೀರಭದ್ರನನ್ನು ವಿಚಾರಿಸಿದ್ದಾರೆ, ಅಂತಿಮವಾಗಿ ತನ್ನ ತಾಯಿಯ ಬಳಿ ಎಲ್ಲ ಸತ್ಯವನ್ನು ಹೇಳಿಕೊಂಡ ಹಿನ್ನೆಲೆಯಲ್ಲಿ ಲಕ್ಕಮ್ಮ ತನ್ನ ಮಗನೊಂದಿಗೆ ಹಂದನಕೆರೆ ಪೊಲೀಸ್ ಠಾಣೆಗೆ ಬಂದು ವಿಷಯವನ್ನು ತಿಳಿಸಿ ದೂರು ನೀಡಿದ್ದಾಳೆ. ದೂರಿನ ಅನ್ವಯ ಪೊಲೀಸರು ಶವವನ್ನು ಹೊರಕ್ಕೆ ತೆಗೆಸಿ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಆರೋಪಿ ವೀರಭದ್ರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಎ.ಸಿ. ಪಾಟೀಲ್, ಎ.ಎಸ್.ಪಿ.ಡಾ.ಎನ್.ಬಿ.ಬೋರಲಿಂಗಯ್ಯ, ಪ್ರಭಾರ ತಹಶೀಲ್ದಾರ್ ವಿಜಯಕುಮಾರ್, ಸಿ.ಪಿ.ಐ, ಪಿ.ರವಿಪ್ರಸಾದ್ ಭೇಟಿ ನೀಡಿದ್ದರು.

ಚಿಕ್ಕನಾಯಕನಹಳ್ಳಿ,ಸೆ.25: ಹೃದಯದ ತೊಂದರೆ ಇರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಂಪನ್ಮೂಲ ಕೇಂದ್ರ ಸ್ಥಾಪನೆ, ಶಾಲೆಗಳಿಗೆ ಎರಡು ಸಾವಿರ ಕಂಪ್ಯೂಟರ್ ಕೊಡೆಗೆ ನೀಡುವ ಕಾರ್ಯಕ್ರಮವೂ ಸೇರಿದಂತೆ ದೊಡ್ಡ ದೊಡ್ಡ ಯೋಜನೆಗಳನ್ನು ಜಿಲ್ಲಾ ರೋಟರಿ ರೂಪಿಸಿದೆ ಎಂದು ರೋಟರಿ ಗೌರ್ನರ್ ಮಾನಂದಿ ಎನ್.ಸುರೇಶ್ ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ರೋಟರಿ 3190 ಗೌರ್ನರ್ ಭೇಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಮಕ್ಕಳಿಗೆ ಐ.ಸಿ.ಯು ಸೌಲಭ್ಯವನ್ನು ಕಲ್ಪಿಸುವ ದೃಷ್ಠಿಯಿಂದ ಒಂದು ಕೋಟಿ ರೂ ಅಂದಾಜಿನಲ್ಲಿ ಬೆಂಗಳೂರಿನಲ್ಲಿ ಐ.ಸಿ.ಯು.ಘಟಕವನ್ನು ನಿಮರ್ಿಸುತ್ತಿರುವುದಾಗಿ ತಿಳಿಸಿದರಲ್ಲದೆ, 80 ಸಾವಿರ ವಿದ್ಯಾಥರ್ಿಗಳಿಗೆ 4 ಲಕ್ಷ ನೋಟ್ ಬುಕ್ಗಳನ್ನು ವಿತರಿಸಿದ್ದೇವೆ ಎಂದರು.
ರೋಟರಿ ಸಂಸ್ಥೆ ಸಮಾಜ ಸೇವೆಗಾಗಿ ರೂಪುಗೊಂಡಿದ್ದು, ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗಬೇಕು ಎಂದರು.
ಸ್ಥಳೀಯ ಅಧ್ಯಕ್ಷ ಎನ್.ಶ್ರೀಕಂಠಯ್ಯ ಮಾತನಾಡಿ, ಈ ವರ್ಷ 101 ಕಾರ್ಯಕ್ರಮಗಳನ್ನು ಯೋಜಿಸಲಾಗಿದ್ದು, ಎಸ್.ಆರ್.ಎಸ್. ಸೊಸೈಟಿಯ ಬಳಿ ಬಸ್ ನಿಲ್ದಾಣವನ್ನು ನಿಮರ್ಿಸಲು ಮುಂದಾಗಿದ್ದೇವೆ, ಆ ಪ್ರದೇಶಕ್ಕೆ ಕಂಬಳಿ ನಗರವೆಂಬ ನಾಮಫಲಕವನ್ನು ಇಂದು ಅನಾವರಣ ಮಾಡಿದ್ದೇವೆ ಎಂದರಲ್ಲದೆ, ಅದೇರೀತಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭವನ್ನು ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಸಮಾರಂಭದಲ್ಲಿ ಕಾರ್ಯದಶರ್ಿ ಸಿ.ಎನ್.ಅಶ್ವಥ್ನಾರಾಯಣ್ ತಮ್ಮ ಅವಧಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮುನ್ನೋಟ ನೀಡಿದರು.
ಸಮಾರಂಭದಲ್ಲಿ ಪೊಲೀಸ್ ಪೇದೆ ಸದರ್ಾರ್, ಅಂಗನವಾಡಿ ಶಿಕ್ಷಕಿ ಹೊನ್ನಶೆಟ್ಟಿ ಹಳ್ಳಿ ಪುಷ್ಪಾವತಮ್ಮ, ಅಡುಗೆ ಸಹಾಯಕ ಹನುಮಂತರಾಯಪ್ಪ ನವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಸಹೋದರಿಯರು ಪ್ರಾಥರ್ಿಸಿದರೆ, ಎನ್.ಎಂ.ಗಂಗಾಧರ್ ಸ್ವಾಗತಿಸಿದರು, ಎಂ.ಎಲ್.ಮಲ್ಲಿಕಾರ್ಜನಯ್ಯ ನಿರೂಪಿಸಿದರು, ಎಂ.ವಿ.ನಾಗರಾಜ್ ರಾವ್ ವಂದಿಸಿದರು.






Friday, September 24, 2010





ಶಿಲ್ಪಕೆತ್ತನೆ, ಮರಕೆತ್ತನೆ ತರಬೇತಿಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಸೆ.24: ಶಿಲ್ಪಕೆತ್ತನೆ ಮತ್ತು ಮರಕೆತ್ತನೆ ವಿಭಾಗದಲ್ಲಿ ತರಬೇತಿ ನೀಡಲು ಸಪ್ತಗಿರಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆ ತಿಳಿಸಿದ್ದಾರೆ.
ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನಿರುದ್ಯೋಗದಿಂದ ಪಾರಾಗಿ ಸ್ವಾವಲಂಬನ ಜೀವನ ನಡೆಸಲು ಅನುಕೂಲವಾಗುವಂತೆ ಸಂಸ್ಥೆ ವೃತ್ತಿ ತರಬೇತಿ ನೀಡಲು ಇಚ್ಛಿಸಿದೆ ಮತ್ತು ಹೊಯ್ಸಳ ಶಿಲ್ಪಿಕೇಂದ್ರದ ಶಿಲ್ಪಿ ವಿಶ್ವನಾಥ್, ಇವರಿಂದ ಮರಕೆತ್ತನೆ ವಿಭಾಗದಲ್ಲಿ ತರಬೇತಿ ನೀಡಲು ಮುಂದಾಗಿದ್ದು ಕಲಿಯಲಿಚ್ಚಿಸಿವ ಯುವಕ ಯುವತಿಯರು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ 9ನೇ ತರಗತಿ ಅಂಕಪಟ್ಟಿಯ ನಾಲ್ಕು ಪ್ರತಿ ಮತ್ತು 7 ಭಾವಚಿತ್ರಗಳೊಂದಿಗೆ ಪೋನ್.ನಂ.9845279517, 8971803395, 9620855028 ನಂಬರ್ಗಳಿಗೆ ಸಂಪಕರ್ಿಸಲು ಕೋರಿದ್ದಾರೆ.
ರೈತರಿಗೆ, ಸ್ವಸಹಾಯ ಸಂಘಗಳಿಗೆ ಕೆ.ಸಿ.ಸಿ.ಅರಿವು ಕಾಯರ್ಾಗಾರ
ಚಿಕ್ಕನಾಯಕನಹಳ್ಳಿ,ಸೆ.24: ಬ್ಯಾಂಕುಗಳು ನೀಡುತ್ತಿರುವ ಸಾಲಸೌಲಭ್ಯ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ರಿಯಾಯಿತಿ ಪಡೆಯಬೇಕೆಂದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಕಂದಿಕೆರೆ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಶಾಖೆಯ ಕಿಸಾನ್ ಕ್ರೆಡಿಟ್ ಕಾಡರ್್ ಅರಿವು ಮತ್ತು ಸಂಘಕ್ಕೆ ಸಾಲ ಸೌಲಭ್ಯದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರು ಸರಿಯಾಗಿ ಮರುಪಾವತಿ ಮಾಡುತ್ತಾರೋ ಅವರಿಗೆ ಬ್ಯಾಂಕ್ ವಿವಿಧ ಉದ್ದೇಶಗಳಿಗೆ ಎಲ್ಲಾ ತರಹದ ನೆರವು ನೀಡುವುದರಲ್ಲಿ ಸಂದೇಹವಿಲ್ಲ ಎಂದ ಅವರು, ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳು ವ್ಯವಸಾಯದ ಜೊತೆಗೆ ಗುಡಿ ಕೈಗಾರಿಕೆ, ಕುಲ ಕಸುಬಿಗೆ ಸಾಲ ಪಡೆದು ಆಥರ್ಿಕವಾಗಿ ಮುಂದೆ ಬರಬೇಕೆಂದು ಹೇಳಿದರು.
ತಾ.ಪಂ.ಸದಸ್ಯ ಕಮಲಾನಾಯಕ್ ಮಾತನಾಡಿ ಬ್ಯಾಂಕುಗಳು ನೀಡುವ ಸಾಲ ಸೌಲಭ್ಯ ಪಡೆದು ಶೇ.100ರಷ್ಟು ಮರುಪಾವತಿ ಮಾಡಿರುವುದರಿಂದ ಅವರಿಗೆ ಯಾವುದೇ ಆಧಾರವಿಲ್ಲದೆ 5ಲಕ್ಷ ರೂಗಳನ್ನು ಬ್ಯಾಂಕ್ಗಳು ಸಾಲ ನೀಡುತ್ತೀವೆ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಆರ್.ಎಮ್.ಕುಮಾರಸ್ವಾಮಿ ಕಿಸಾನ್ ಕ್ರೆಡಿಟ್ ಕಾಡ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ವಸಂತ್ಕುಮಾರ್, ಸದಸ್ಯೆ ಉಷಾ, ಸಿ.ಕೆ.ಜಿ.ಬಿ.ಕಂದೀಕೆರೆ ಶಾಖೆಯ ವ್ಯವಸ್ಥಾಪಕ ಆರ್.ಎಂ.ಕುಮಾರಸ್ವಾಮಿ, ಶ್ರೀ ಆಂಜನೇಯ ರೈತಕೂಟದ ಅಧ್ಯಕ್ಷ ಎಲ್.ಎಸ್. ಕುಮಾರಸ್ವಾಮಿ, ಮಹೇಶ್, ದಕ್ಷಿಣಾಮೂತರ್ಿ, ರಮೇಶ್, ಹರೀಶ್, ರಘು ಮುಂತಾದವರು ಉಪಸ್ಥಿತರಿದ್ದರು.
ಚಂದ್ರಕಲಾ ಪ್ರಾಥರ್ಿಸಿ, ರೇಖಾ ಸ್ವಾಗತಿಸಿ ತ್ರಿವೇಣಿ ನಿರೂಪಿಸಿದರು.
ಜಿಲ್ಲಾ ಮಟ್ಟದ ಥ್ರೋಬಾಲ್, ಬ್ಯಾಟ್ಮಿಟನ್ ವಿಜೇತರು
ಚಿಕ್ಕನಾಯಕನಹಳ್ಳಿ,ಸೆ.24: 2010-11ನೇ ಸಾಲಿನ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲೆಗಳ ಕ್ರೀಡಾಕೂಟದಲ್ಲಿ ವಿವಿಧ ತಾಲೂಕುಗಳ ಶಾಲೆಗಳು ಪ್ರಥಮ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದೆ.
ಹಿ.ಪ್ರಾ.ಶಾಲೆಗಳ ಬಾಲಕರ ವಿಭಾಗದ ಥ್ರೋಬಾಲ್ನಲ್ಲಿ ತುಮಕೂರು ಪ್ರಥಮ ಸ್ಥಾನ, ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ. ಹಿ.ಪ್ರಾ.ಶಾಲೆಗಳ ಬಾಲಕಿಯರ ಥ್ರೋಬಾಲ್ನಲ್ಲಿ ತುರುವೇಕೆರೆ ಪ್ರಥಮ ಸ್ಥಾನ, ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ. ಪ್ರೌಡಶಾಲಾ ಮಟ್ಟದ ಬಾಲಕರ ಥ್ರೋಬಾಲ್ನಲ್ಲಿ ತಿಪಟೂರು ಪ್ರಥಮ ಸ್ಥಾನ, ಗುಬ್ಬಿ ದ್ವಿತೀಯ ಸ್ಥಾನ. ಬಾಲಕಿಯರ ವಿಭಾಗದಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತುರುವೇಕೆರೆ ದ್ವಿತೀಯ ಸ್ಥಾನ, ಬಾಲಕರ ಬಾಲ್ಬ್ಯಾಟ್ಮಿಟನ್ನಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತಿಪಟೂರು ದ್ವಿತೀಯ ಸ್ಥಾನ. ಬಾಲಕಿಯರ ವಿಭಾಗದಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತಿಪಟೂರು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.
ನೂತನ ತಾ.ಸ.ಪ್ರಾ.ಶಿ.ಶಿ.ಸಂಘದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಸೆ.23: ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘ(ರಿ)ದ ಉದ್ಘಾಟನೆಯನ್ನು ಅ.3ರ ಭಾನುವಾರ ಬೆಳಿಗ್ಗೆ 10ಕ್ಕೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಕನರ್ಾಟಕ ರಾಜ್ಯ ಸ.ಪ್ರಾ.ಶಾ.ಶಿ.ಶಿ.ಸಂಘದ ಅಧ್ಯಕ್ಷರಾದ ರಮಾದೇವಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷರಾದ ಬಿ.ಎಲ್.ಬಸವರಾಜು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನರ್ಾಟಕ ರಾಜ್ಯ ಸ.ಪ್ರಾ.ಶಾ.ಶಿ.ಶಿ.ಸಂಘದ ಕಾರ್ಯದಶರ್ಿ ಶಂಕರಮೂತರ್ಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಗೋಪಿನಾಥ್, ಜಿ. ಮು. ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ರಾಜಯ್ಯ, ತಾ.ಸ.ಪ್ರಾ.ಶಾ.ಶಿ.ಶಿ.ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರಯ್ಯ, ಉಪಾಧ್ಯಕ್ಷರಾದ ಆರ್.ಮಹದೇವಮ್ಮ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಶಾ.ಶಿ.ಸಂಘದ ಮಾಜಿ ಅಧ್ಯಕ್ಷರುಗಳಾದ ಎನ್.ಪಿ.ಕುಮಾರಸ್ವಾಮಿ, ರುಕ್ಮಾಂಗದ, ಪ್ರೌಢ ಶಾಲಾ ಮು.ಶಿ.ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಗೋವಿಂದರಾಜು, ಟಿ.ರಂಗದಾಸಪ್ಪ, ಮಾದಪ್ಪ ಉಪಸ್ಥಿತರಿರುವರು ಎಂದು ಸಂಘದ ಪ್ರಧಾನ ಕಾರ್ಯದಶರ್ಿ ಬಿ.ಜಿ.ವೆಂಕಟೇಶ್ ತಿಳಿಸಿದ್ದಾರೆ.
ಮೃತ ಗ್ರಾ.ಪಂ.ಸದಸ್ಯರುಗಳ ಕುಟುಂಬಕ್ಕೆ ಸಕರ್ಾರದ ನೆರವಿಗೆ ಮನವಿ
ಚಿಕ್ಕನಾಯಕನಹಳ್ಳಿ,ಸೆ.24: ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಮೂರೇ ತಿಂಗಳಲ್ಲಿ ನಾಲ್ಕು ಜನ ಗ್ರಾಮ ಪಂಚಾಯ್ತಿ ಸದಸ್ಯರುಗಳು ಮುಋತಪಟ್ಟಿದ್ದು ಅವರಿಗೆ ರಾಜ್ಯ ಸಕರ್ಾರ ಇವರ ಕುಟುಂಬಗಳೀಗೆ ತಲಾ ಒಂದು ಲಕ್ಷರೂಗಳನ್ನು ಪರಿಹಾರ ಧನವನ್ನು ನೀಡಿ ಅವರ ಆಥರ್ಿಕ ದುಸ್ಥಿತಿಯಿಂದ ಕಾಪಾಡಬೇಕೆಂದು ಗ್ರಾ.ಪಂ.ಸದಸ್ಯೆ ಬಿ.ಎನ್.ಶಶಿಕಲಾ ಕೋರಿದ್ದಾರೆ.
ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬೆಳಗುಲಿ ಗಾ. ಪ. ರವಿಶಂಕರ್, ಬರಗೂರು ಗ್ರಾ.ಪಂ.ಯ ಯು.ಟಿ ಬಸವರಾಜು, ದೊಡ್ಡರಾಂಪುರ ಗ್ರಾ.ಪಂ.ಯ ಗಿರೀಶ್ ಮತ್ತು ರಾಮನಹಳ್ಳಿ ಗ್ರಾ.ಪಂ. ನಾರಾಯಣ್ ಅಕಾಲಿಕ ಮರಣವನ್ನು ಅಪ್ಪಿದ್ದು ಗ್ರಾಮೀಣ ಪಂಚಾಯತ್ ರಾಜ್ಯ ಸಚಿವರು ಅಧಿವೇಶನದ ವೇಳೆ ಪಂಚಾಯ್ತಿ ಕಾಯ್ದೆಯಡಿ ದೊರಕಬಹುದಾದ ಸೌಲಭ್ಯಗಳನ್ನು ಅಮೈಂಡ್ಮೆಂಟ್ ಮೂಲಕ ಒದಗಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.





ಮಗನಿಂದಾಗಿ ತಂದೆಗೆ ಪೂಜೆ......!
ಚಿಕ್ಕನಾಯಕನಹಳ್ಳಿ.ಸೆ.22: ಗಣಪನ ದೆಸೆಯಿಂದ ಶಿವಪ್ಪ ಪೂಜೆ ಕಂಡ ಅಪರೂಪದ ಘಟನೆ ನವಿಲೆಯಲ್ಲಿ ನಡೆದಿದೆ.
ಪಟ್ಟಣದಿಂದ ಐದು ಕಿ.ಮೀ ದೂರವಿರುವ ನವಿಲೆ ಗ್ರಾಮದಲ್ಲಿರುವ ಶಿವಲಿಂಗ ಹಾಗೂ ಬಸವಣ್ಣ ವಿಗ್ರಹವಿರುವ ಗುಡಿ ಶತಮಾನಗಳಿಂದ ಪೂಜೆಯನ್ನು ಕಾಣದೆ ಪಾಳು ಬಿದ್ದು ದನ ಕರುಗಳನ್ನು ಕಟ್ಟುವ ಗುಡಾರವಾಗಿತ್ತು.
ಈಗ್ಗೆ ಐವತ್ತು ವರ್ಷಗಳಾಚೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮಿಗಳು ಕಾರ್ಯಕ್ರಮವೊಂದಕ್ಕೆ ನವಿಲೆಗೆ ಆಗಮಿಸಿದ ಸಂದರ್ಭದಲ್ಲಿ ಈ ಪಾಳು ಬಿದ್ದ ದೇವಾಲಯದಲ್ಲಿನ ದೊಡ್ಡ ಗಾತ್ರದ ಶಿವಲಿಂಗ ಹಾಗೂ ಬಸವಣ್ಣನ ವಿಗ್ರಹಗಳನ್ನು ನೋಡಿ, ಈ ವಿಗ್ರಹಗಳು ಚೋಳರ ಕಾಲದ ಮೂತರ್ಿಗಳೆಂದು ಅರಿತು, ಪೂಜೆ ಕಾಣದ ಈ ಪ್ರತಿಮೆಗಳನ್ನು ಸಿದ್ದಗಂಗಾ ಮಠಕ್ಕೆ ಕೊಂಡೊಯ್ಯಲು ಬಯಸಿದುಂಟು ಎಂದು ಹೇಳುವ ಗ್ರಾಮದ ಹಿರಿಯ ಜೀವ ಮೂರ್ತಪ್ಪ ಆಗಿನ ಗ್ರಾಮದ ಮುಖ್ಯಸ್ಥರು ಆಸಕ್ತಿ ತೋರಲಿಲ್ಲವೆನ್ನುತ್ತಾರೆ.
ಈ ಮಧ್ಯೆ ಇದೇ ಗ್ರಾಮದ ಚನ್ನಯ್ಯ ಎಂಬುವರು ಚೋಳರ ಕಾಲದ ಈ ದೇವಾಲಯವನ್ನು ಪಾಳು ಬಿಡುವುದು ಬೇಡವೆಂದು ಕೆಲಕಾಲ ಸಣ್ಣದಾಗಿ ಪೂಜೆ ಮಾಡಲು ಹೋದರಾದರೂ ಅವರ ಜೀವನದ ತಾಪತ್ರೆಯಗಳಿಂದ ಅವರ ವ್ರತ ಕೈಗೂಡದೆ ಪೂಜಾ ಕಾರ್ಯಕ್ಕೆ ಕೈ ಚೆಲ್ಲಿದರು.
ಈಗ ಈ ದೇವಾಲಯದ ಅನತಿ ದೂರದಲ್ಲಿದ್ದ ಗಣಪತಿ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಮುಂದಾದ ಗ್ರಾಮಸ್ಥರು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾಜರ್ುನ ಸ್ವಾಮಿಗಳನ್ನು ಗ್ರಾಮಕ್ಕೆ ಕರೆಸಿಕೊಂಡು ಗಣಪತಿ ಪುನರ್ ಪ್ರತಿಷ್ಠಾಪಿಸಬೇಕೆಂದು ಕೋರಿದ ಹಿನ್ನೆಲೆಯಲ್ಲಿ ದೇವಾಲಗಳನ್ನು ವೀಕ್ಷಿಸಿದ ಸ್ವಾಮಿಗಳು ಶಿವಲಿಂಗವಿದ್ದ ದೇವಾಲಯವನ್ನು ತೋರಿಸಿದ್ದರಲ್ಲದೆ, ಶಿವಲಿಂಗಕ್ಕೆ ಮೊದಲ ಪೂಜೆಯನ್ನು ಅವರೇ ನೆರವೇರಿಸಿ ಮುಂದೆ ಸಾಂಗವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ಗ್ರಾಮದ ಹಿರಿಯರಿಗೆ ವಹಿಸಿ ಅದಕ್ಕೊಂಬ ಪೂಜಾರಿಯನ್ನು ನೇಮಿಸಿದ್ದಾರೆ. ಜಲವಾಸದಲ್ಲಿರುವ ಗಣಪತಿಯನ್ನು ಪುನರ್ ಪ್ರತಿಷ್ಠಾಪಿಸಲು ಸಿದ್ದತೆ ನಡೆಯುತ್ತಿದೆ.
ಶಾಸಕ ಸಿ.ಬಿ.ಸುರೇಶ್ ಬಾಬು ಗ್ರಾಮಸ್ಥರೊಂದಿಗೆ ಶಿವಲಿಂಗಕ್ಕೆ ಪೂಜೆ ನೆರವೇರಿಸುವುದು, ದೇವಾಲಯದ ಅಭಿವೃದ್ದಿ ಹಾಗೂ ಗಣಪತಿ ಪುನರ್ ಪ್ರತಿಷ್ಠಾಪನೆ ವಿಷಯವಾಗಿ ಚಚರ್ಿಸಿದ್ದಾರೆ.
ಅಯೋಧ್ಯೆ ತೀಪರ್ು: ಸೌಹಾರ್ಧತೆಯಿಂದ ನಡೆದುಕೊಳ್ಳುವಂತೆ ಸಿ.ಪಿ.ಐ.ಮನವಿ
ಚಿಕ್ಕನಾಯಕನಹಳ್ಳಿ,ಸೆ.22: ನ್ಯಾಯಾಲಯದಲ್ಲಿ ನಡೆಯುತ್ತಿರುವ ಅಯೋಧ್ಯೆ ರಾಮ ಮಂದಿರದ ತೀಪರ್ು ಯಾವ ಕಡೆಯಾದರೂ ಸರಿ ಸಂಘಟನೆಗಳು ಗಲಭೆಯಾಗದಂತೆ ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕು ಎಂದು ವೃತ್ತ ನಿರೀಕ್ಷಕ ಪಿ. ರವಿಪ್ರಸಾದ್ ಸಂಘಟನೆಗಳಲ್ಲಿ ಮನವಿ ಮಾಡಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್.ಎಸ್.ಎಸ್, ಎ.ಬಿ.ವಿ.ಪಿ ಮತ್ತು ಪಕ್ಷ ಸಂಘಟನೆಗಳು ನ್ಯಾಯಾಲಯದಲ್ಲಿರುವ ರಾಮಮಂದಿರದ ತೀಪರ್ು ಹೊರಬಿದ್ದಾಗ ಸಂಘಟನೆಗಳು ಸಾರ್ವಜನಿಕ ಆಸ್ತಿಗೆ ತೊಂದರೆಯಾಗದಂತೆ ಕಾಪಾಡಬೇಕು. ಸಾರ್ವಜನಿಕ ಆಸ್ತಿ, ದೇಶದ ಆಸ್ತಿಗಳಿಗೆ ತೊಂದರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದ ಅವರು ಈ ಘಟನೆಗೆ ಸಂಬಂದಿಸಿದಂತೆ ಗಲಭೆಗಳ ಬಗ್ಗೆ ವಿಷಯ ತಿಳಿದರೆ ಸಾರ್ವಜನಿಕರು ಪೋಲಿಸ್ ಮತ್ತು ಹೋಂ ಗಾಡ್ಸ್ಗಳಿಗೂ ತಿಳಿಸಬೇಕು ಎಂದು ಸಭೆಯಲ್ಲಿ ಕೋರಿದರು.
ಪುರಸಭಾಧ್ಯಕ್ಷ ರಾಜಣ್ಣ ಮಾತನಾಡಿ ತಾಲೂಕಿನಲ್ಲಿ ಹಿಂದು, ಮುಸ್ಲಿಂ ಗಲಭೆಗಳು ಎಂದು ನಡೆದಿಲ್ಲ ತೀಪರ್ಿನ ನಂತರವೂ ಹಿಂದು ಮುಸ್ಲಿಂಗಳಲ್ಲಿ ಗಲಭೆಯಾಗದಂತೆ ನೋಡಿಕೊಳ್ಳಬೇಕು. ಅಣ್ಣ, ತಮ್ಮಂದಿರಂತೆ ಬಾಳಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ನ್ಯಾಯಾಲಯದ ತೀಪರ್ಿಗೆ ಎಲ್ಲರೂ ತಲೆಬಾಗಿ ಪಾಲಿಸಬೇಕು ಹೈಕೋಟರ್್ನಲ್ಲಿ ತೀಪರ್ು ನ್ಯಾಯೋಚಿತವಾದ ಕಡೆ ಆಗದಿದ್ದರೆ ಸುಪ್ರೀಂ ಕೋಟರ್್ಗೂ ಮೊರೆ ಹೋಗಿ ಗೆಲ್ಲಬಹುದು ಇದಕ್ಕಾಗಿ ಹಿಂದೂ ಮುಸ್ಲಿಂ ಗಲಭೆಗಳು ಆಗಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್, ಬಿ.ಜೆ.ಪಿ.ಮುಖಂಡರಾದ ಶ್ರೀನಿವಾಸಮೂತರ್ಿ, ಸಿ.ಎಸ್.ರಾಜಣ್ಣ, ಜೆ.ಡಿ.ಎಸ್ ಮುಖಂಡರುಗಳಾದ ಸಿ.ಎಸ್.ನಟರಾಜು, ಎಚ್.ಬಿ. ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಬಾಬು ಸಾಹೇಬ್, ಪೀರ್ ಪಾಷ, ಸಿ.ಎಂ.ಬೀರಲಿಂಗಯ್ಯ ಎಚ್.ಬಿ.ಎಸ್.ನಾರಾಯಣಗೌಡ, ಮತ್ತು ಅ.ಭಾ.ವಿ.ಪ, ಮುಖಂಡ ಚೇತನ್ ಪ್ರಸಾದ್, ಆರ್.ಎಸ್.ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Friday, September 17, 2010




ಡಾ.ಪುಟ್ಟರಾಜು ಗವಾಯುಗಳ ಲಿಂಗೈಕ್ಯಕ್ಕೆ ಕುಪ್ಪೂರು ಶ್ರೀಗಳ ಶೋಕ
ಚಿಕ್ಕನಾಯಕನಹಳ್ಳಿ,ಸೆ.17: ಗದಗದ ಡಾ.ಪುಟ್ಟರಾಜು ಗವಾಯುಗಳು ಇಹಲೋಕ ತ್ಯಜಿಸಿದ್ದರಿಂದ ಸಮಾಜಕ್ಕೆ ಹಾಗೂ ಸಂಗೀತ ಕ್ಷೇತ್ರಕ್ಕೆ ತೀವ್ರ ನಷ್ಟವಾಗಿದೆ ಎಂದು ಕುಪ್ಪೂರು ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಅಂಧರ ಬಾಳಿನ ಬೆಳಕಾಗಿದ್ದ ಗವಾಯುಗಳು, ಈನಾಡಿನ ಸಾವಿರಾರು ಅಂಧರಿಗೆ ಬದಕನ್ನು ಕಲ್ಪಿಸಿಕೊಡುವ ಮೂಲಕ ಹೊರಗಣ್ಣಿಗಿಂತ ಒಳಗಣ್ಣು ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದರೆ ಎಂದಿದ್ದಾರಲ್ಲದೆ, ಗದಗದಲ್ಲಿನ ಮಠ ಹಾಗೂ ಸಮಾಜದ ಅಭಿವೃದ್ದಿಗಾಗಿ ಸಾಕಷ್ಟು ದುಡಿದಿದ್ದಾರೆ. ಭಕ್ತರಿಗೆ ಸನ್ಮಾರ್ಗವನ್ನು ಬೋಧಿಸುವ ಕೆಲಸಕ್ಕೆ ಸಂಗೀತವನ್ನು ದುಡಿಸಿಕೊಳ್ಳುವ ಮೂಲಕ ವಿಶಿಷ್ಟರೀತಿಯಲ್ಲಿ ತಮ್ಮ ಸೇವೆಯನ್ನು ಅಜರಾಮರಗೊಳಿಸಿದ್ದಾರೆ ಎಂದರು.
ಅವರ ಅಗಲಿಕೆ ಈ ನಾಡಿಗೆ ಹಾಗೂ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆನಿಸಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮುದ್ರೆ ಸಹಿತ ಯೋಗ ನಡಿಗೆ ಶಿಬಿರ
ಚಿಕ್ಕನಾಯಕನಹಳ್ಳಿ,ಸೆ.17: ನೇತಾಜಿ ಯೋಗ ಪ್ರತಿಷ್ಠಾನದ ವತಿಯಿಂದ ಮುದ್ರೆ ಸಹಿತ ಯೋಗ ನಡಿಗೆ ಶಿಬಿರ ಕಾರ್ಯಕ್ರಮವನ್ನು ಇದೇ 20ರ ಸೋಮವಾದಂದು ಬೆಳಗ್ಗೆ 6ಗಂಟೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ದೇಶಿಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ರೋಟರಿ, ಇನ್ನರ್ವೀಲ್ ಕ್ಲಬ್, ನಿವೃತ್ತ ನೌಕರರ ಸಂಘ ಮತ್ತು ತಾಲೂಕು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದು ವಕೀಲ ಸಿ.ಕೆ.ಸೀತಾರಾಮಯ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ನೇತಾಜಿ ಯೋಗ ಪ್ರತಿಷ್ಠಾನ ಅಧ್ಯಕ್ಷ ಡಾ.ಜಿ.ಪ್ರಶಾಂತಕುಮಾರ್ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಮಾಧವರಾವ್ ಉಪಸ್ಥಿತರಿರುವರು.
ಎಸ್.ಡಿ.ಎಂ.ಸಿ.ಗೆ ಆಯ್ಕೆ
ಚಿಕ್ಕನಾಯಕನಹಳ್ಳಿ,ಸೆ.17: ತಾಲೂಕಿನ ಅರಳೀಕೆರೆ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನೂತನ ಎಸ್.ಡಿ.ಎಂ.ಸಿ ಸಮಿತಿಯನ್ನು ರಚಿಸಲಾಗಿದೆ.
ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರಾಜಶೇಖರಯ್ಯ, ಉಪಾಧ್ಯಕ್ಷರಾಗಿ ಶಿವಮ್ಮ ಎ.ಎಲ್, ಸದಸ್ಯ ಕಾರ್ಯದಶರ್ಿ ಶಾಲೆಯ ಎಚ್.ಎಂ, ಕೆ.ಎನ್.ಮೂಡ್ಲಯ್ಯ, ಸದಸ್ಯರಾಗಿ ಮಂಜುನಾಥ್, ಕುಮಾರಸ್ವಾಮಿ, ಚಂದ್ರಕಲಾ, ಕೆಂಪಯ್ಯ, ಲಕ್ಷ್ಮಯ್ಯ, ಸಿದ್ರಾಮಕ್ಕ, ಪ್ರಸನ್ನರವರು ನೂತನವಾಗಿ ಆಯ್ಕೆಯಾಗಿದ್ದಾರೆ.



Thursday, September 16, 2010





ಚಿಕ್ಕನಾಯಕನಹಳ್ಳಿ,ಸೆ.16: ವ್ಯವಹಾರಕ್ಕಾಗಿ ಕಲಿಯುತ್ತಿದ್ದ ಶಿಕ್ಷಣ ಇಂದು ವ್ಯಾಪಾರೀಕರಣವಾಗಿ ಡೊನೇಶನ್ ಎಂಬ ಭೂತ ಬಡವರ ಬೆನ್ನುಹತ್ತಿದೆ. ಎಲ್.ಕೆ.ಜಿ, ಯು.ಕೆಜಿ.ಯಂತಹ ಪೂರ್ವ ಪ್ರಾಥಮಿಕ ಶಿಕ್ಷಣಗಳಕ್ಕೂ ತಾಲ್ಲೂಕು ಮಟ್ಟದ ಶಾಲೆಗಳಲ್ಲಿ ಸುಮಾರು 10 ರಿಂದ 20 ಸಾವಿರದವರೆವಿಗೂ ಡೊನೇಶನ್ ಎಂಬುದನ್ನು ದೇಣಿಗೆ ರೂಪದಲ್ಲಿ ವಸೂಲಿ ಮಾಡುವ ಮೂಲಕ ಶಿಕ್ಷಣ ಸಂಸ್ಥೆಗಳು ನಾಗರೀಕರನ್ನು ವಂಚಿಸುತ್ತಿವೆ ಎಂದು ಎ.ಬಿ.ವಿ.ಪಿ. ನಗರ ಕಾರ್ಯದಶರ್ಿ ಚೇತನ್ ಪ್ರಸಾದ್ ಆಂತಕವನ್ನು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಎ.ಬಿ.ವಿ.ಪಿ.ಕರೆ ನೀಡಿದ್ದ ರಸ್ತೆ ತಡೆ ನಡೆಸಿ ಮಾತನಾಡಿದ ಅವರು, ಶಿಕ್ಷಣದ ವ್ಯಾಪಾರೀಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬಡ ವಿದ್ಯಾಥರ್ಿಗಳ ಪೋಷಕರಲ್ಲಿ ಆತಂಕ ಮಡುಗಟ್ಟಿದ್ದು ಸಮಾಜದಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕಾದರೆ ಶಿಕ್ಷಣ ಅತ್ಯವಶ್ಯಕ. ಮನುಷ್ಯನಿಗೆ ನೀರು, ಗಾಳಿ, ಆಹಾರ ಎಷ್ಟು ಅಗತ್ಯವೆನಿಸಿದ್ದರು ಅಷ್ಟೇ ಪ್ರಮಾಣದಲ್ಲಿ ಶಿಕ್ಷಣ ಕೂಡ ಅಷ್ಟೇ ಅಗತ್ಯವಾಗಿದ್ದು ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಡೊನೇಶನ್ ಹಾವಳಿಯಿಂದ ನಲುಗುತ್ತಿದೆ ಎಂದರಲ್ಲದೆ, ಶಾಲಾ, ಕಾಲೇಜುಗಳಲ್ಲಿ ಪ್ರತಿ ನಿತ್ಯವು ಶಾರದೆಯನನು ಪೂಜಿಸುವ ಬದಲು ಲಕ್ಷ್ಮಿಯುನ್ನೇ ಬರಮಾಡುವುದರಲ್ಲಿ ವಿದ್ಯಾಸಂಸ್ಥೆಗಳು ಮುಂದಾಗಿವೆ ಎಂದರು.
ಎ.ಬಿ.ವಿ.ಪಿ. ಹಿರಿಯ ಕಾರ್ಯಕರ್ತ ರಾಕೇಶ ಮಾತನಾಡಿ ಸಕರ್ಾರಗಳು ಉಚಿತವಾಗಿ ಶಿಕ್ಷಣ ನೀಡುತ್ತಿದ್ದರು ಶಿಕ್ಷಕರು ಮನೆ ಪಾಠ ಮಾಡವ ಲೆಕ್ಕಾಚಾರದಲ್ಲಿ ಇರುತ್ತಾರೆ. ಇಂತಹವರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು ಮಕ್ಕಳ ಪೋಷಕರಲ್ಲಿ ಆತಂಕ ಕೂಡ ಹೆಚ್ಚಾಗಿದೆ. ಮೈಸೂರು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕ್ರಮ ಜರುಗಿಸುವಂತೆ ಮಾನ್ಯ ರಾಜ್ಯಪಾಲ ಹೆಚ್.ಆರ್.ಭಾರದ್ವಜ್ ಅವರಲ್ಲಿ ಎ.ಬಿ.ವಿ.ಪಿ. ಮನವಿ ಮಾಡಲು ಹೋದ ಸಂದರ್ಭದಲ್ಲಿ. ಪೋಲಿಸರು ವಿದ್ಯಾಥರ್ಿ ಸಮೂಹಕ್ಕೆ ನ್ಯಾಯೋಚಿತವಾಗಿ ಸೂಕ್ತ ಸಲಹೆ ಸಹಕಾರ ನೀಡದೆ ಪೋಲಿಸರು್ರೆ ಏಕಾಏಕಿ ಲಾಠಿ ಚಾಚರ್್ ಮಾಡಿರುವುದನ್ನು ತಾಲ್ಲೂಕು ಎ.ಬಿ.ವಿ.ಪಿ.ಖಂಡಿಸುತ್ತದೆ. ಶಿಕ್ಷಣದಲ್ಲಿ ಏಕರೂಪ ಶಿಕ್ಷಣವನ್ನು ಜಾರಿಗೆ ತರುವುದರ ಮೂಲಕ ಸಕರ್ಾರ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಕಾರ್ಯಕರ್ತರಾದ ಮನು ಅಣೇಕಟ್ಟೇ, ವಿಜಯ್, ದಿಲೀಪ್, ದರ್ಶನ್, ಆನಂದ್, ಗುರು, ನಂದ ಎಲ್ಲಾ ಶಾಲಾ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಳ್ಳುವುದರ ಮೂಲಕ ಪ್ರತಿಭಟನೆ ನಡೆಸಿದರು.
ಢಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿ ಪೊಲೀಸರ ವಶಕ್ಕೆ
ಚಿಕ್ಕನಾಯಕನಹಳ್ಳಿ,ಸೆ.16: ಮಹಿಳೆಯ ಕೈಮೇಲೆ ಲಾರಿ ಚಕ್ರ ಹರಿದ ಪರಿಣಾಮ ಎಡಗೈ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಕೆನರಾ ಬ್ಯಾಂಕ್ ಎದರು ಬೈಕ್ನಲ್ಲಿ ತಮ್ಮನ ಜೊತೆ ಬಟ್ಟೆ ತರಲೆಂದು ಹೋಗುತ್ತಿದ್ದ ರಾಜಮ್ಮ(30) ಎಂಬಾಕೆಗೆ ಹಿಂದಿನಿಂದ ಬಂದ ರಾಜಸ್ಥಾನದ ನೊಂದಾಣೆ ಹೊಂದಿರುವ ಲಾರಿ(ಆರ್.ಜೆ.04 ಜಿ.ಎ.4331) ಢಿಕ್ಕಿ ಹೊಡೆದ ಪರಿಣಾಮ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ರಾಜಮ್ಮ ಕೆಳಗೆ ಬಿದ್ದ ತಕ್ಷಣ ಲಾರಿಯ ಚಕ್ರ ಈಕೆಯ ಎಡಗೈ ಮೇಲೆ ಹರಿದ ಪರಿಣಾಮ ಕೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಢಿಕ್ಕಿ ಹೊಡೆದ ತಕ್ಷಣ ಚಾಲಕ ವೇಗವಾಗಿ ಲಾರಿಯನ್ನು ಓಡಿಸಿಕೊಂಡು ಹೋಗಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಲಾರಿಯನ್ನು ಬೆನ್ನತ್ತಿ ಕಾಡೇನಹಳ್ಳಿಯ ಬಳಿ ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Wednesday, September 15, 2010


ನಿವೇಶನ ವಿವಾದ: ಅಂಬೇಡ್ಕರ್ ಭಾವ ಚಿತ್ರ ತಿಪ್ಪೆಗುಂಡಿಯಲ್ಲಿ.
ಚಿಕ್ಕನಾಯಕನಹಳ್ಳಿ,ಸೆ.15: ಡಾ. ಅಂಬೇಡ್ಕರ್ ಭಾವಚಿತ್ರವನ್ನು ತಿಪ್ಪೆಗೆಸಿದು ಅವಮಾನಿಸಿದರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಜೋಗಿಹಳ್ಳಿ ರಾಮಾಂಜನೇಯ ಯುವಕ ಸಂಘದ ಕಛೇರಿಯಲ್ಲಿದ್ದ ಡಾ. ಅಂಬೇಡ್ಕರ್ ರವರ ಭಾವಚಿತ್ರವನ್ನು ತಿಪ್ಪೆಗೆಸಿದಿದ್ದರಿಂದ ಕೆಲವು ಕಾಲ ಗೊಂದಲ ಉಂಟಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ಈ ಗೊಂದಲ ಠಾಣೆಯ ಮೆಟ್ಟಿಲ ಹತ್ತಿದೆ.
ಗಣೇಶನ ಹಬ್ಬದ ಅಂಗವಾಗಿ ಸಂಘದ ಕಛೇರಿಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು, ಮಂಗಳವಾರ ಬೆಳಗ್ಗೆ ಸಂಘದ ಬಾಗಿಲು ತೆರೆದಿದ್ದು, ಗಣೇಶನ ವಿಗ್ರಹ ಹಾಗೂ ರಾಮ ದೇವರ ಪೊಟೋಕ್ಕೆ ಯಾವುದೇ ಧಕ್ಕೆಯಾಗಿರಿಲಿಲ್ಲ ಆದರೆ ಅಂಬೇಡ್ಕರ್ ರವರ ಭಾವಚಿತ್ರ ಮಾತ್ರ ತಿಪ್ಪೆಯ ಗುಂಡಿಯಲ್ಲಿ ಬಿದಿತ್ತು. ಇದರಿಂದ ದಲಿತ ಸಂಘಟನೆಗಳು ಜಾಗೃತರಾಗಿ ಈ ಘಟನೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹಿಸಿದರು.
ರಾಮಾಂಜನೇಯ ಯುವಕ ಸಂಘದ ಕಛೇರಿಯ ನಿವೇಶನದ ವಿಷಯದಲ್ಲಿ ತಕರಾರಿದ್ದು, ಕೋಟರ್್ಮೆಟ್ಟಿಲು ಹತ್ತಿತ್ತು. ಈ ಸಂಬಂಧದ ಪ್ರಕರಣ ಸಂಘದ ಪರವಾಗಿ ಒಂದು ತಿಂಗಳ ಹಿಂದೆಯಷ್ಟೇ ಕೋಟರ್್ ಆದೇಶವಾಗಿತ್ತು. ಈ ನಿವೇಶನದಲ್ಲಿ ಕಟ್ಟಡವನ್ನು ಇತ್ತೀಚೆಗಷ್ಟೆ ಕಟ್ಟಿದ್ದು ಈ ಕಟ್ಟಡದಲ್ಲಿದ್ದ ಅಂಬೇಡ್ಕರ್ ಪೊಟೋವನ್ನು ತಿಪ್ಪೆಗೆಸಿದಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕಾರ್ಯದಶರ್ಿ ನರಸಿಂಹಮೂತರ್ಿ ತಿಳಿಸಿದ್ದಾರೆ.
ಈ ಘಟನೆನೆ ಹಿನ್ನೆಲೆಯಲ್ಲಿ ಮಂಜುನಾಥ್ ಸಿಂಗ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಕಾರ್ಯದಶರ್ಿ, ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದಾರೆ. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚಿನ್ನಾಭರಣ ಹಾಗೂ ನಗದು ಕಳ್ಳತನ
ಚಿಕ್ಕನಾಯಕನಹಳ್ಳಿ,ಸೆ.15: ರಾತ್ರಿ ವಿದ್ಯುತ್ ಸರಬರಾಜು ಇಲ್ಲದ ಸಮಯದಲ್ಲಿ ಆಭರಣಗಳು ಮತ್ತು ನಗದು ಹಣ ಕಳ್ಳತನವಾಗಿರುವ ಘಟನೆ ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೇಲನಹಳ್ಳಿಯ ಮಲ್ಲಿಕಾಜರ್ುನಯ್ಯ ಎಂಬುವರ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು ಕುಟುಂಬದವರು ಪರಸ್ಥಳಕ್ಕೆ ಹೋಗಿದ್ದಾಗ, ರಾತ್ರಿ ಸುಮಾರು 2ಗಂಟೆಯಲ್ಲಿ ಮನೆಯ ಮುಂದಿನ ಬೀಗವನ್ನು ಮುರಿದು 4ಜೊತೆ ವಾಲೆ ಒಂದು ಉಂಗುರ ಮತ್ತು ಮಾಟಿಪ್ಲೇಟ್ ಆಭರಣಗಳ ಜೊತೆ 2ಸಾವಿರ ರೂಗಳು ಕಳ್ಳತನವಾಗಿದೆ. ಚಿ.ನಾ.ಹಳ್ಳಿ ಪೋಲಿಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Saturday, September 11, 2010

ಫಾಸ್ಟ್ ಪುಡ್ ನಿಂದ ದೂರವಿರಿ ಸೊಪ್ಪು ತರಕಾರಿಯನ್ನು ಸೇವಿಸಿ
ಚಿಕ್ಕನಾಯಕನಹಳ್ಳಿ,ಸೆ.10: ನಾವು ಸೇವಿಸುವ ಆಹಾರವು ಸಮತೋಲನವಾದ ಹಾಗೂ ಸತ್ವ ಭರಿತವಾದ ನಾರಿನ ಅಂಶ ಒಳಗೊಂಡಿರುವ ಆಹಾರವನ್ನು ಸೇವಿಸುವುದರಿಂದ ಮನುಷ್ಯ ಪೌಷ್ಠಿಕವಾಗಿ ಸದೃಡವಾಗಿರುತ್ತಾನೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ಹೇಳಿದರು.
ತಾಲೂಕಿನ ಶೆಟ್ಟಿಕೆರೆಯ ಮರುಳ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಡೆದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೊಪ್ಪು ತರಕಾರಿಯಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಅಂಶ ದೇಹಕ್ಕೆ ದೊರೆತು ಶಕ್ತಿ ಹೆಚ್ಚುತ್ತದೆ ಎಂದ ಅವರು, ಭಾಗ್ಯಲಕ್ಷ್ಮಿ ಯೋಜನೆಯಡಿ ಬರುವ ಸವಲತ್ತುಗಳನ್ನು ಪಡೆಯುವ ಬಗ್ಗೆ ವಿವರವಾಗಿ ತಿಳಿಸಿದರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನುಸೂಯಮ್ಮ ಮಾತನಾಡಿ ಮಕ್ಕಳ ಉತ್ತಮ ಆರೈಕೆಯಲ್ಲಿ ತಾಯಂದಿರ ಪ್ರಾಮುಖ್ಯತೆ ಹೆಚ್ಚಿನದು, ಮಕ್ಕಳ ಆರೈಕೆ ಉತ್ತಮವಾಗಿದ್ದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಮಗು ಆರೋಗ್ಯವಾಗಿರುತ್ತದೆ, 6ತಿಂಗಳ ನಂತರ ಮಗುವಿಗೆ ಬೇಯಿಸಿದ ಆಹಾರವನ್ನು ಕೊಟ್ಟು ಉತ್ತಮ ಆರೈಕೆ ಮಾಡಿದಲ್ಲಿ ಮುಂದೆ ಮಕ್ಕಳ ಭವಿಷ್ಯ ಉತ್ತಮವಾಗಿರುವುದರಲ್ಲಿ ಸಂದೇಹವಿಲ್ಲ ಎಂದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಪರಮೇಶ್ವರಪ್ಪ, ಪರ್ವತಯ್ಯ ಮಾತನಾಡಿದರು.
ಸಮಾರಂಭದಲ್ಲಿ ಎಂ.ಎನ್.ಮಹದೇವಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಾಶ್ವತ ಪಡಿತರ ಚೀಟಿ ಪಡೆಯಲು ತಹಶೀಲ್ದಾರ್ ಮನವಿ
ಚಿಕ್ಕನಾಯಕನಹಳ್ಳಿ,ಸೆ.10: ನೆಮ್ಮದಿ ಕೇಂದ್ರಕ್ಕಿಂತ ಮೊದಲು ವಿತರಿಸಿರುವ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಹಾಗೂ ಭಾವಚಿತ್ರ ತೆಗೆಸಿಕೊಂಡಿರುವ ಪಡಿತರದಾರರು ಶಾಶ್ವತ ಪಡಿತರ ಚೀಟಿ ಪಡೆದುಕೊಳ್ಳದೇ ಇದ್ದಲ್ಲಿ ತಾಲೂಕು ಕಛೇರಿಯಲ್ಲಿನ ಪಡಿತರ ಚೀಟಿ ವಿತರಣಾ ಕೇಂದ್ರದಲ್ಲಿ ಶಾಶ್ವತ ಪಡಿತರ ಚೀಟಿ ಪಡೆದುಕೊಳ್ಳಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಟ್ಟಿ ಪ್ರಕಟಿಸಿರುವಂತೆ ಖಾಯಂ ಪಡಿತರ ಚೀಟಿಗಳು ಮುದ್ರಿತವಾಗಿ ಬಂದಿದ್ದು ಇದುವರೆವಿಗೂ ಪಡಿತರ ಚೀಟಿ ಪಡೆಯದೇ ಇರುವವರು ಹಾಜರಾಗಿ ಪ.ಚೀಟಿ ಶುಲ್ಕ 15ರೂ ಪಾವತಿಸಿ ಪಡಿತರ ಚೀಟಿ ಪಡೆಯಬಹುದಾಗಿದೆ ಎಂದರು.
ಮೊದಲನೇ ಹಂತದಲ್ಲಿ ವಿತರಿಸಲಾಗಿರುವ ತಾತ್ಕಾಲಿಕ ಬಿಪಿಎಲ್ ಅಕ್ಷಯ, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರು ಇದುವರೆವಿಗೂ ಭಾವಚಿತ್ರ ತೆಗೆಸದೇ ಇದ್ದಂತವರು ತಾಲೂಕು ಕಛೇರಿಗೆ 45ರೂ ಪಾವತಿಸಿ ಭಾವಚಿತ್ರ ತೆಗೆಸಿಕೊಳ್ಳಬಹುದಾಗಿದೆ. ಪೂರ್ಣ ಕುಟುಂಬದ ಸದಸ್ಯರಿದ್ದಲ್ಲಿ ಒಬ್ಬರು ಭಾವಚಿತ್ರ ತೆಗೆಯಿಸಿ ಉಳಿಕೆ ಸದಸ್ಯರಿದ್ದಲ್ಲಿ ಭಾವಚಿತ್ರ ತೆಗೆಸದೇ ಇರುವವರು ಮಾತ್ರ ಹಾಜರಾಗಿ ಭಾವಚಿತ್ರ ತೆಗೆಸಿಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, September 9, 2010



ಅಧರ್ಮ ಹೆಚ್ಚಿದಾಗ ಧರ್ಮದ ದಾರಿಯನ್ನು ತೋರುವವನೇ ಗುರು
ಚಿಕ್ಕನಾಯಕನಹಳ್ಳಿ,ಸೆ.09: ಅಧರ್ಮ ಹೆಚ್ಚಿದಾಗ ಧರ್ಮವನ್ನು ಎತ್ತಿ ಹಿಡಿಯುವುದು ಉತ್ತಮ ಜ್ಞಾನದಿಂದ ಮಾತ್ರ ಸಾಧ್ಯ ಇಂತಹ ಜ್ಞಾನವನ್ನು ಪಸರಿಸುವ ಶಿಕ್ಷಕ ಇಂತಹ ಸಂದರ್ಭದಲ್ಲಿ ನಾಗರೀಕ ಸಮಾಜಕ್ಕೆ ಮುಖ್ಯನೆನಿಸಿಕೊಳ್ಳುತ್ತಾನೆ ಎಂದು ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಹಾಗೂ ಇನ್ನರ್ವೀಲ್ ಮತ್ತು ಕೆನರಬ್ಯಾಂಕ್ ಹಮ್ಮಿಕೊಂಡಿದ್ದ 'ಗುರುನಮನ' ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿನ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಹಾಗೂ ಪ್ರಾಂಶುಪಾಲರಿಗೆ ಸನ್ಮಾನಿಸಿ ಮಾತನಾಡಿದರು.
ಜ್ಞಾನಶಕ್ತಿ, ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಗಳು ಉತ್ತಮ ಸಮಾಜವನ್ನು ನಿಮರ್ಿಸಬಲ್ಲವು ಈ ಮೂರು ಶಕ್ತಿಗಳು ಎಲ್ಲರಲ್ಲೂ ಇರುತ್ತದೆ ಇದು ಸುಪ್ತವಾಗಿರುತ್ತದೆ, ಇದನ್ನು ಹೊರಕ್ಕೆ ತೋರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಎಂದರಲ್ಲದೆ, ವಿದ್ಯೆ ಪ್ರತಿಯೊಬ್ಬರ ಆಂತರ್ಯದಲ್ಲಿರುವ ದಿವ್ಯಶಕ್ತಿ. ಇದನ್ನು ಉತ್ತೇಜಿಸುವ ಕೆಲಸವನ್ನು ಶಿಕ್ಷಕ ಮಾಡಬೇಕೆಂದರು.
ಸಮಾಜವನ್ನು ಕಟ್ಟುವ ಕೆಲಸಕ್ಕೆ ಕೈಜೋಡಿಸುವ ಶಿಕ್ಷಕರಿಗೆ ಯಾವುದೇ ಕೊರತೆ ಉಂಟಾಗುತ್ತದೆ ನೋಡಿಕೊಳ್ಳುವ ಜವಾಬ್ದಾರಿ ಸಕರ್ಾರದ ಮೇಲಿದೆ. ಶಿಕ್ಷಕರ ಸಂಬಳ, ಸವಲತ್ತುಗಳನ್ನು ಕೊಡುವಾಗ ಚೌಕಾಸಿ ಮಾಡಬಾರದು ಅವರನ್ನು ಸುಖವಾಗಿಟ್ಟು ತನ್ಮೂಲಕ ಜ್ಞಾನ ಪ್ರಸಾರಕ್ಕೆ ಅವರನ್ನು ಅಣಿಗೊಳಿಸಬೇಕೆ ಹೊರತು ಅವರಿಗೆ ಕೊಡುವ ಸಂಬಳಕ್ಕೆ ಸತಾಯಿಸುವುದು, ಅವರಿಗೆ ನೀಡುವ ಸವಲತ್ತುಗಳಿಗೆ ಅಧಿಕಾರ ವರ್ಗಹಣದ ನಿರೀಕ್ಷೆ ಇಟ್ಟುಕೊಳ್ಳುವುದು ಸರ್ವತಾ ಸಮ್ಮತವಲ್ಲ ಎಂದರು.
ಶಿಕ್ಷಕ ಬೋಧನೆಗೆ ಸಮರ್ಥನಾಗಿರಬೇಕು, ಮನಸ್ಸು ಶಾಂತವಾಗಿರಬೇಕು ಮಕ್ಕಳಿಗೆ ವಂಚನೆ ಮಾಡಬಾರದೆಂಬ ಮನೋಭಾವದವರಾಗಿರಬೇಕು ಇದನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು. ಶಿಕ್ಷಣಕ್ಕಾಗಿ ಸಕರ್ಾರಗಳು ಸಾವಿರಾರು ಕೋಟಿಗಳಷ್ಟು ಹಣವನ್ನು ವ್ಯಯಿಸುತ್ತಿದೆ ಎಂದರು.
ಕೆನರ ಬ್ಯಾಂಕ್ ಎ.ಜಿ.ಎಂ, ಎಂ.ಟಿ ಪದ್ಮನಾಭ ಮಾತನಾಡಿ, ಕೆನರಾ ಬ್ಯಾಂಕ್ ಶಿಕ್ಷಕರಿಗಾಗಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಟೀಚರ್ ಲೋನ್ ಕೊಡಲು ಮೊದಲು ಆರಂಭಿಸಿದ್ದು ನಾವು ಎಂದರಲ್ಲದೆ, ಶಿಕ್ಷಣದ ಅಭಿವೃದ್ದಿ ಒಂದು ದೇಶದ ಸರ್ವತೋಮುಖ ಅಭೀವೃದ್ದಿಯ ಸೂಚಕ ಎಂದರು. ಮಕ್ಕಳಿಗೆ ಶಿಕ್ಷಣ ಒಂದನ್ನು ನೀಡಿದರೆ ಮಿಕ್ಕೆಲ್ಲವನ್ನು ಅವರು ತನ್ನ ಸಾಮಥ್ರ್ಯದ ಮೇಲೆ ತಾವೇ ಪಡೆಯುತ್ತಾರೆ ಎಂದರಲ್ಲದೆ ಹೈದರಾಲಿ ಮತ್ತು ದಿವಾನ್ ಪೂರ್ಣಯ್ಯನವರ ನಡುವೆ ನಡೆದ ಘಟನೆಯೊಂದನ್ನು ವಿವರಿಸಿದರು.
ಪ್ರೊ.ನಾ.ದಯಾನಂದ ಮಾತನಾಡಿ ಸರಿಯಾಗಿರುವುದನ್ನು ಪ್ರಶಂಸಿಸುವ, ತಪ್ಪನ್ನು ಖಂಡಿಸುವ ನೈಜ ಸ್ವಭಾವವನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಳ್ಳುವ ಗುಣವನ್ನು ಶಿಕ್ಷಕ ಬೆಳೆಸಿಕೊಳ್ಳಬೇಕು ಮತ್ತು ವಿದ್ಯಾಥರ್ಿಗಳು ತಪ್ಪಾಗಿ ನಡೆದಾಗ ಸರಿದಾರಿಯನ್ನು ತೋರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲಾ ಪ್ರೌಡಶಾಲೆಗಳ ಮುಖ್ಯೋಪಾಧ್ಯಾಯರಿಗೆ ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸನ್ಮಾನಿಸಲಾಯಿತು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳಸುವ ಜವಾಬ್ದಾರಿ ಹೊತ್ತಿದ್ದು ಇದರ ಅಂಗವಾಗಿ ಗುರುಗಳನ್ನು ಅಭಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್, ರೋಟರಿ ಸಂಸ್ಥೆ ಎನ್.ಶ್ರೀಕಂಠಯ್ಯ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಸಹೋದರಿಯರು ಪ್ರಾಥರ್ಿಸಿದರೆ, ಉಪನ್ಯಾಸಕ ಶಿವಲಿಂಗಮೂತರ್ಿ, ಸ್ವಾಗತಿಸಿ, ವೀಣಾ ಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿ, ಸಿ.ಗುರುಮೂತರ್ಿ ಕೊಟಿಗೆಮನೆ ವಂದಿಸಿದರು.
ಜ್ಞಾನದಾಹಿಗಳಿಗೆ ಗುರುಗಳು ದಾರಿ ದೀಪವಾಗಬೇಕು
ಚಿಕ್ಕನಾಯಕನಹಳಳ್ಳಿ,ಸೆ.09: ಗ್ರಂಥಗಳು ಜ್ಞಾನದ ರಾಶಿಗಳಿದ್ದಂತೆ ಇವುಗಳನ್ನು ಏಕಾಗ್ರತೆಯಿಂದ ಓದಿದಾಗ ಜ್ಞಾನವನ್ನು ಇನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಾಹಿತಿ ಆರ್.ಬಸವರಾಜು ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಕರ ವೃತ್ತಿ ಪುಣ್ಯವಾದದ್ದು ಇವರು ವಿದ್ಯಾಥರ್ಿಗಳ ಜ್ಞಾನ ಹೆಚ್ಚಿಸುವಂತಹ ಶಿಲ್ಪಿಗಳಾಗಬೇಕು ಎಂದ ಅವರು ಶಿಕ್ಷಕರು ಅಹಃನ್ನು ತೊರೆದು ವಿದ್ಯಾಥರ್ಿಗಳೊಂದಿಗೆ ತಾನೊಬ್ಬ ವಿದ್ಯಾಥರ್ಿಯೆಂದು ತಿಳಿಯಬೇಕು ಎಂದರು.
ಉಪನ್ಯಾಸಕ ವಾಸುದೇವರಾಜು ಮಾತನಾಡಿ ಸಮರ್ಥ ಗುರುಗಳು ಎಲ್ಲರಿಗೂ ಸಿಗುವುದಿಲ್ಲ ಸಿಕ್ಕ ಗುರುಗಳನ್ನು ಗುರುಭಕ್ತಿಯಿಂದ ಶಿಕ್ಷಣ ಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಉಪನ್ಯಾಸಕರಾದ ಶಿವಲಿಂಗಮೂತರ್ಿ, ಚಂದ್ರಶೇಖರ್ ಉಪಸ್ಥಿತರಿದ್ದರು.



Wednesday, September 8, 2010

Tuesday, September 7, 2010




ಉನ್ನತ ಜ್ಞಾನ ಬೋಧನೆಯನ್ನು ಉತ್ತಮ ಪಡಿಸುತ್ತದೆ.
ಚಿಕ್ಕನಾಯಕನಹಳ್ಳಿ,ಸೆ.07: ಶಿಕ್ಷಕರು ವೃತ್ತಿಗಾಗಿ ಮಾಡಿರುವ ವಿದ್ಯಾಭ್ಯಾಸದ ಜೊತೆಗೆ ಉನ್ನತ ವಿಧ್ಯಾಭ್ಯಾಸ ಮಾಡಿ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಮಕ್ಕಳಿಗೆ ಬೋಧನೆ ಮಾಡಿದರೆ ಮಕ್ಕಳಿಂದ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆಯಬಹುದು ಎಂದು ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯಿ ಅಭಿಪ್ರಾಯಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಶಿಕ್ಷಕರಲ್ಲಿ ಮುಖ್ಯವಾಗಿ ತಾಳ್ಮೆ, ಶಾಂತ ಸ್ವಭಾವದ ವ್ಯಕ್ತಿತ್ವ ಇದ್ದರೆ ದುಶ್ಚಟಗಳಿಗೆ ಬಾಗಿಯಾಗಿರುವ ವಿದ್ಯಾಥರ್ಿಯನ್ನು ಸರಿದಾರಿಗೆ ತರಬಹುದು ಎಂದರಲ್ಲದೆ, ಶಿಕ್ಷಕರು ವೃತ್ತಿಯನ್ನು ಪ್ರೀತಿಸುವುದಕ್ಕಿಂತ ಮಕ್ಕಳನ್ನು ಹೆಚ್ಚು ಪ್ರೀತಿಸಿದರೆ ಅವರು ತಂದೆ, ತಾಯಿ ಬಳಿ ಹೇಳಿಕೊಳ್ಳದಂತಹ ವಿಷಯಗಳನ್ನು ಗುರುಗಳಲ್ಲಿ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಆದ್ದರಿಂದ ಮಕ್ಕಳಿಗೆ ಸತ್ಭಾವನೆಯಿಂದ ಬೋಧಿಸಬೇಕು ಎಂದರು. ಶಿಕ್ಷಕರು ಮಕ್ಕಳ ಆಸಕ್ತಿ ಕಡೆ ಹೆಚ್ಚು ಒತ್ತು ಕೊಟ್ಟರೆ ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸವನ್ನು ಕಲಿಯುತ್ತಾರೆ, ಮತ್ತು ಮಕ್ಕಳಿಗೆ ವಿದ್ಯೆ ಬೋದಿಸುವಾಗ ಧರ್ಮ, ಆಧ್ಯಾತ್ಮ ವಿಷಯಗಳನ್ನು ತಿಳಿಸಿ ಸಮಾಜ ಸುಸ್ಥಿಯಲ್ಲಿಡುವಂತೆ ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಕರು ಮಾಡುವ ಬೋಧನೆಯಲ್ಲಿ ಭವಿಷ್ಯ ಅಡಗಿದ್ದು ಅವರು ವೇತನಕ್ಕೋಸ್ಕರ ಭೋದನೆ ಮಾಡದೆ ಒಬ್ಬ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರನ್ನು ಬೆಳೆಸುತ್ತಿದ್ದೇನೆ ಎಂದು ಅರಿತು ಬೋದಿಸಿದಾಗ ಶಿಕ್ಷಕ ವೃತ್ತಿ ಸಾರ್ಥಕವೆನಿಸುತ್ತದೆ ಎಂದರು. ವಿದ್ಯಾಥರ್ಿಗಳಿಗೆ ದೇಶಕ್ಕೆ ಕೀತರ್ಿ ತಂದ ಮೇರು ವ್ಯಕ್ತಿಯನ್ನು ಮಾದರಿಯನ್ನಾಗಿ ತೋರಿಸಿ ಅವರ ಆದರ್ಶದ ಮಾರ್ಗದಲ್ಲಿ ನಡೆಯುವಂತೆ ಬೋಧಿಸಿದರೆ, ಮಕ್ಕಳು ಉತ್ತಮ ಹಂತಕ್ಕೆ ತಲುಪಿ ವಿದ್ಯೆ ಕಲಿಸಿಕೊಟ್ಟ ಗುರುವನ್ನು ಎಲ್ಲಿದ್ದರೂ ನೆನಪಿಸಿ ತಮ್ಮಲ್ಲೇ ಗೌರವಿಸುತ್ತಾರೆ ಎಂದರು. ಆಡಳಿತದ ಮೂಲ ಉದ್ದೇಶ ಸಾರ್ವಜನಿಕ ಸೇವೆಯಾಗಿದ್ದು ಕುಂದುಕೊರತೆಗಾಗಿ ನಿವಾರಿಸಿಕೊಳ್ಳಲು ಬರುವಂತಹವರಿಗೆ ಸೌಜನ್ಯದಿಂದ ವತರ್ಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ವತಿಯಿಂದ 16ಜನ ಶಿಕ್ಷಕರಿಗೆ ಮತ್ತು ಡಾ.ಲಕ್ಷ್ಮಿಪತಿ ಬಾಬು,ಡಾ.ಸರೋಜ ಲಕ್ಷ್ಮಿಪತಿ ಪ್ರತಿಷ್ಠಾನದ ವತಿಯಿಂದ ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಶಸ್ತಿಯನ್ನು 4ಜನ ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹದೇವಮ್ಮ ಪ್ರಾಥರ್ಿಸಿ, ಬಿ.ಇ.ಓ ಸಾ.ಚಿ.ನಗೇಶ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜ್ ನಿರೂಪಿಸಿದರು.