Friday, January 11, 2013


ರಸ್ತೆ ಅಭಿವೃದ್ದಿಗೆ ಅನುಧಾನ ನೀಡುವಲ್ಲಿ ರಾಜ್ಯಕ್ಕೆ  ಕೇಂದ್ರ ಸಕರ್ಾರದಿಂದ ಮಲತಾಯಿ ಧೋರಣೆ: ಸಿ.ಎಂ.ಜಗಧೀಶ್ ಶೆಟ್ಟರ್
ಚಿಕ್ಕನಾಯಕನಹಳ್ಳಿ,ಜ.: ಪ್ರಧಾನ ಮಂತ್ರಿಗಳ  ಗ್ರಾಮ ಸಡಕ್ ಯೋಜನೆಯಲ್ಲಿ ಅನುಧಾನ ಹಂಚಿಕೆ ಮಾಡುವ ವಿಷಯದಲ್ಲಿ ಕೇಂದ್ರಸಕರ್ಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ರಾಜ್ಯಕ್ಕೆ ಇಲ್ಲಿವರೆಗೆ ರಸ್ತೆ ಅಭಿವೃದ್ದಿಗೆ ಅನುಧಾನ ನೀಡಿಲ್ಲವೆಂದು ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ಆರೋಪಿಸಿದರು.
ತಾಲೂಕಿನ ಶೆಟ್ಟೀಕೆರೆಯಲ್ಲಿ ರಾಜ್ಯ ಸಕರ್ಾರ 102 ಕೋಟಿ ರೂಗಳ ಅಂದಾಜಿನಲ್ಲಿ ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಶಿಲಾನ್ಯಾಸ ನೆರವೇರಿಸಿದ ನಂತರ ಭಾಜಪ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ರಾಜ್ಯದ ಪ್ರತಿ ವಿಧಾನ ಸಭೆಯ ಗ್ರಾಮಗಳ ರಸ್ತೆಗಳ ಅಭಿವೃದ್ದಿಗೆ ನಮ್ಮ ಸಕರ್ಾರ ಹೆಚ್ಚಿನ ಒತ್ತು ನೀಡಿ ಈ ಹಿಂದೆ 20 ಕಿ.ಮೀ.ರಸ್ತೆಗಳ ಅಭಿವೃದ್ದಿ ಪಡಿಸಿತ್ತು, ಈಗ ನಮ್ಮ ಸಂಪುಟ ಸಭೆಯ ತೀಮರ್ಾನದಂತೆ ಮತ್ತೆ 30 ಕಿ.ಮೀ.ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಲಾಗುವುದು ಎಂದರು.
ಕುಡಿಯುವ ನೀರಿಗಾಗಿ ತಾಲೂಕಿಗೆ ಹೇಮಾವತಿ ನೀರು ಹರಿಸಲು ಈಗ ಶಿಲಾನ್ಯಾಸ ನೆರವೇರಿಸುತ್ತಿದ್ದು, ಇಲ್ಲಿನ ಕೆರೆಗಳಿಗೆ ನೀರು ಹರಿಸುವ ಯೋಜನೆಯ ಉದ್ಘಾಟನೆಯನ್ನು ನಾವೇ ಮಾಡುವಂತೆ ಜನತೆ ಆಶೀರ್ವದಿಸಬೇಕೆಂದರಲ್ಲದೆ, ಕೆ.ಎಸ್.ಕಿರಣ್ಕುಮಾರ್ ಈ ಕಾರ್ಯವನ್ನು ಕೈಗೂಡುವಂತೆ ಮಾಡುವಲ್ಲಿ ಸಾಕಷ್ಟು ಶ್ರಮವಹಿಸಿದ್ದು ಅವರಿಗೆ ನೀವು ಹೆಚ್ಚಿನ ಶಕ್ತಿ ಕೊಡಬೇಕು ಎಂದರು.
ನಮ್ಮ ಅಧಿಕಾರ ಅವಧಿ ಮೇ ತಿಂಗಳಿಗೆ ಮುಗಿಯಲಿದ್ದು ಪೂಣರ್ಾವಧಿವರೆಗೆ ಅಧಿಕಾರ ನಡೆಸಲಿದ್ದೇನೆ ಎಂದರಲ್ಲದೆ, ಫೆಬ್ರವರಿಯಲ್ಲಿ ನಾನೇ ರೈತ ಪರ ಬಜೆಟ್ ಮಂಡಿಸಲಿದ್ದು, ಆ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಅಗತ್ಯವಿರುವ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವುದಾಗಿ ತಿಳಿಸಿದರು.
ಬಿ.ಜೆ.ಪಿ. ಸಕರ್ಾರ ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸುವರ್ಣಭೂಮಿ ಯೋಜನೆ, ಕೆರೆ ಹೂಳೆತ್ತುವ ಯೋಜನೆ, ಅಶಕ್ತ ಜನರಿಗೆ ವಿವಿಧ ರೀತಿಯ ಮಾಸಿಕ ವೇತನ ಯೋಜನೆಯನ್ನು ಯಶಸ್ವಿಗೆ ಅನುಷ್ಠಾನಗೋಳಿಸಲಾಗಿದೆ ಎಂದರು.
ಸಹಕಾರ ಬ್ಯಾಂಕ್ಗಳಿಂದ ಸಣ್ಣ ರೈತರಿಗೆ ನೀಡಿದ್ದ ಸಾಲ ಮನ್ನಾ ಮಾಡಲು 3600 ಕೋಟಿ ರೂಗಳನ್ನು   ಸಹಕಾರ ಇಲಾಖೆಗೆ ನೀಡಿರುವುದಾಗಿ ತಿಳಿಸಿದರಲ್ಲದೆ, ಗ್ರಾಮ ಸಹಾಯಕರಿಗೆ ನೀಡುತ್ತಿದ್ದ ಮಾಸಿಕ ಸಂಬಳವನ್ನು ಮೂರೂವರೆ ಸಾವಿರ ರೂಗಳಿಂದ ಏಳು ಸಾವಿರ ರೂಗಳವರೆಗೆ ಹೆಚ್ಚಿಸಲಾಗಿದೆ ಎಂದರು. 
ಸಮಾರಂಭದಲ್ಲಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ, ತಾಲೂಕಿಗೆ ಹೇಮಾವತಿ ನೀರು ಹರಿಸಲು ಸಾಕಷ್ಟು ವಿಘ್ನಗಳು ಬಂದವು ಆದರೆ ಅವ್ಯಾವುಗಳನ್ನು ಲೆಕ್ಕಿಸದೆ,  ಈ ತಾಲೂಕಿಗೆ ನೀರು ಕೊಡಲೇ ಬೇಕೆಂಬ ಉದ್ದೇಶದಿಂದ ಹಠ ಬಿಡದ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನಮ್ಮ ಕೈಯಲ್ಲಿ ಈ ಕೆಲಸ ಮಾಡಿಸಿದ್ದಾರೆ. ಈ ಕಾರ್ಯಕ್ಕೆ ಮೂವರು ಮುಖ್ಯಮಂತ್ರಿಗಳೂ ಸಹಕರಿಸಿದ್ದು, ಯಡಿಯೂರಪ್ಪನವರು ಯೋಜನೆಯ ಸವರ್ೆಗೆ ಆದೇಶ ಮಾಡಿದರೆ, ಸದಾನಂದ ಗೌಡರವರು ಸಂಪುಟ ಸಭೆಯಲ್ಲಿ ಅನುಷ್ಠಾನಗೊಳಿಸಿದರು, ಜಗದೀಶ್ ಶೆಟ್ಟರ್ರವರು ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದರು. 
ಪಶ್ಚಿಮ ಘಟ್ಟದಿಂದ ಬಯಲು ಸೀಮೆಗೆ ನೀರು ತರುವ ಯೋಜನೆಗೆ ಪರಮಶಿವಯ್ಯನವರ ನೇತೃತ್ವದಲ್ಲಿ ಸಮತಿಯನ್ನು ರಚಿಸಿಸಲಾಗಿದೆ, ಅದೇರೀತಿ ಎತ್ತಿನಹೊಳೆ ಯೋಜನೆಗೂ ಶ್ರಮಿಸಲಾಗುವುದು ಎಂದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ರವರು, 2006 ರಿಂದಲೂ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಅಂದಿನಿಂದ ಇದರ ಹಿಂದೆ ಬಿದ್ದು ಹೋರಾಡಿದ ಫಲ ಇಂದು ಸಾರ್ಥಕವಾಗಿದೆ ಎಂದರಲ್ಲದೆ, ಇದಕ್ಕೆ ಸಾಕಷ್ಟು ವಿಘ್ನಗಳು ಬಂದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹೋರಾಡಿರುವುದಾಗಿ ತಿಳಿಸಿದರಲ್ಲದೆ, ಯಡಿಯೂರಪ್ಪನವರು 2008ರಲ್ಲಿ ಈ ತಾಲೂಕಿನ ಮತಿಘಟ್ಟದ ಸಮಾರಂಭದಲ್ಲಿ ಕೊಟ್ಟ ಮಾತಿನಮೂಲಕ ಈ ಕಾರ್ಯಕ್ಕೆ ಚಾಲನೆ ಸಿಕ್ಕಿದಂತಾಗಿತ್ತು ಎಂದು ಸ್ಮರಿಸಿಕೊಂಡರಲ್ಲದೆ,  ಶೀಘ್ರವಾಗಿ ಈ ಕೆಲಸವನ್ನು ಮುಗಿಸಿ ನಂತರ ತಾಲೂಕಿನ ಬಡಕೆಗುಡ್ಲು, ಹಂದನಕೆರೆ, ತೀರ್ಥಪುರ, ಹಾಗೂ ಗುಬ್ಬಿ ತಾಲೂಕಿನ ಹಾಗಲ್ವಾಡಿ ಮೂಲಕ ಬುಕ್ಕಾಪಟ್ಟಣಕ್ಕೂ   ಕುಡಿಯುವ ನೀರು ಕೊಡುವಂತೆ ಒತ್ತಾಯಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಡಲ ಬಿ.ಜೆ.ಪಿ.ಅಧ್ಯಕ್ಷ ಮಿಲಿಟರಿ ಶಿವಣ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ, ಕುಪ್ಪೂರು ಗದ್ದಿಗೆಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ವಾಲ್ಮೀಕಿ ಮಹಾಸಂಸ್ಥಾನ ಪೀಠದ ವಾಲ್ಮೀಕ ಸಂಜಯಕುಮಾರ ಸ್ವಾಮಿ ದಿವ್ಯ ಸಾನಿಧ್ಯವಹಿಸಿದ್ದರು.
ಸಮಾರಂಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಬೆಳ್ಳುಬ್ಬಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಮುಖ್ಯ ಸಚೇತಕ ಎ.ಎಚ್.ಶಿವಯೋಗಸ್ವಾಮಿ,  ಎಂ.ಎಸ್.ಐ.ಎಲ್ ಎಂ.ಬಿ.ನಂದೀಶ್, ಶಾಸಕ ಬಿ.ಸಿ.ನಾಗೇಶ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಶಿವಪ್ರಸಾದ್, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯೆ ನಿಂಗಮ್ಮ ರಾಮಯ್ಯ, ತಾ.ಪಂ.ಸದಸ್ಯರಾದ ರಮೇಶ್, ಆರ್.ಪಿ.ವಸಂತಯ್ಯ, ಕೆ.ಎಂ.ನವೀನ್, ಸೀತಾರಾಮಯ್ಯ, ಜಯಲಕ್ಷ್ಮಮ್ಮ, ತಿಮ್ಮರಾಜಮ್ಮ, ನೀರಾವರಿ ಸವರ್ೆಯರು ವೇದಾನಂದಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾವಾರಧಿ ಶಾಲೆಯ ಮಕ್ಕಳು ಪ್ರಾಥರ್ಿಸಿದರೆ, ಕವಿತಾ ಕಿರಣ್ಕುಮಾರ್ ನಿರೂಪಿಸಿದರು, ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ ಸ್ವಾಗತಿಸಿದರು.
ಸುದ್ದಿ:2:




ನಿಗದಿತ ಕಾಲಾವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು: ಸಿ.ಎಂ.ಶೆಟ್ಟರ್
ಚಿಕ್ಕನಾಯಕನಹಳ್ಳಿ.ಜ.11: ಒಂದು ವರ್ಷದೊಳಗೆ ತಾಲೂಕಿನ 26 ಕೆರೆಗಳಿಗೂ ನೀರು ಹರಿಸುವ ಕಾಮಗಾರಿಯನ್ನು  ಪೂರ್ಣಗೊಳಿಸುವ ಮೂಲಕ ಈ ಭಾಗದ ಜನ ಶುದ್ದ ನೀರನ್ನು ಕುಡಿಯುವಂತೆ ಮಾಡಲು ಅಧಿಕಾರಿಗಳಾಗಿ ತಾಕೀತು ಮಾಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರು ತಿಳಿಸಿದರು.  
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ವಿವಿಧ 19 ಶಾಲಾ ಕೊಠಡಿಗಳ ಶಂಕುಸ್ಥಾಪನೆ ಮಾಡಿ ಮಾತನಾಡಿ, ಫೆಬ್ರವರಿಯಲ್ಲಿ ನಾನು ಮಂಡಿಸುವ ಬಜೆಟ್ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸದರಲ್ಲದೆ, ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಅಗತ್ಯವಿರುವ ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದರು.
ನನಗೆ ಜನರ ಆಶೀವರ್ಾದ ಇರುವವರೆಗೂ ಯಾರಿಗೂ ಅಂಜುವುದಿಲ್ಲವೆಂದ ಅವರು, ಅಧಿಕಾರ ಶಾಶ್ವತವಲ್ಲ, ಜನರ ಆಶಯವನ್ನು ಈಡೇರಿಸುವುದು ಮುಖ್ಯ ಎಂದ ಅವರು, ರಾಜ್ಯದ ಸಿ.ಎಂ.ಗಳು ಹೋಗದ ಊರುಗಳಿಗೆ ನಾನು ಹೋಗಿದ್ದು, ಕಿತ್ತೂರು ಉತ್ಸವ, ಸವದತ್ತಿ, ಚಾಮರಾಜನಗರಕ್ಕೆ ಹೋದ ಮೇಲೆ ನನಗೆ ಹೆಚ್ಚಿನ ಅನುಕೂಲಗಳಾಗಿವೆ ಎಂದ ಅವರು, ಚಿಕ್ಕನಾಯಕನಹಳ್ಳಿಗೆ ಬರುವಾಗಲೂ ಈ ರೀತಿಯ ಮಾತುಗಳು ಕೇಳಿ ಬಂದವೂ ಆದರೆ ನಾನು ಅದನ್ನು ಕಡೆಗಣಿಸಿ ಇಲ್ಲಿಗೆ ಬಂದಿದ್ದೇನೆ ಎಂದರು. 
ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ನೀರು ರೈತರು ದೇಶದ ಸಂಪತ್ತು ಯಾವುದೇ ಪಕ್ಷದ ಸ್ವತ್ತಲ್ಲ ಎಂದರಲ್ಲದೆ. ಬದುಕಿಗೆ ಬೇಕಾದ ಕುಡಿಯುವ ನೀರಿನ ಯೋಜನೆಗೆ ಯಾವುದೇ ಅಡೆ ತಡೆಗಳಿದ್ದರೂ ಇವುಗಳನ್ನು ನಿವಾರಿಸಿಕೊಂಡು ತಾಲ್ಲೂಕಿನ ಬಹುದಿನಗಳ ಬೇಡಿಕೆಯಾದ 26 ಕೆರೆಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ನೇತ್ರಾವತಿ ತಿರುವು ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತ ಗೊಳಿಸಲು ನೀರಾವರಿ ತಜ್ಞ ಪರಮಶಿವಯ್ಯನವರ ನೇತೃತ್ತದಲ್ಲಿ ಸಮಿತಿ ರಚಿಸಲಾಗಿದ್ದರು ಪ್ರಗತಿಯಲ್ಲಿದೆ ಎಂದರು. ಬಿ.ಜೆ.ಪಿ.ಸಕರ್ಾರದ ಅವಧಿಯಲ್ಲಿ ಕಾಮಗಾರಿಗಳು ಪ್ರಾರಂಭಿಸಲು ಶಂಕುಸ್ಥಾಪನೆ ಮಾಡಿ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಂಡು ನಾವೇ ಉದ್ಘಾಟನೆ ಮಾಡುತ್ತಿದ್ದೇವೆ ಕುಡಿಯುವ ನೀರಿನ ಯೋಜನೆಗೆ ಅಧಿಕಾರಿಗಳು ಪ್ರಾರಂಬಿಸಿ ಒಂದು ವರ್ಷದಲ್ಲಿ ಪೂರೈಸುವಂತೆ ಆದೇಶ ನೀಡಲಾಗಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ತಾಲ್ಲೂಕಿನ 26 ಕೆರೆಗಳಿಗೆ ಕುಡಿಯುವ ನೀರಿ ಯೋಜನೆಗೆ ಚಾಲನೆ ನೀಡಲಾಗಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದು, ಬಸವರಾಜು ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಇದರಿಂದ 137 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು, ಮಠಾದೀಶರು ಬಾಗಿಯಾಗಿದ್ದಾರೆ. ನೇತ್ರಾವತಿ 25 ರಿಂದ 30 ಟಿ.ಎಂ.ಸಿ. ನೀರು ತರುವುದರಿಂದ 8 ಜಿಲ್ಲೆಗಳ 46 ತಾಲ್ಲೂಕುಗಳ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿಗಳು ಮಂಜೂರು ಮಾಡುವಂತೆ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿದ್ದು, ತಾಲ್ಲೂಕಿನ ಗಡಿ ಬಾಗಗಳಾದ ಹಂದನಕೆರೆ, ಕಂದಿಕೆರೆ , ರಾಮನಹಳ್ಳಿ, ಬುಕ್ಕಾಪಟ್ಟಣ ಹೋಬಳಿ ಭಾಗಗಳಿಗೂ ಕುಡಿಯುವ ನೀರು ಒದಗಿಸಲು ನೀರಾವರಿ ಸಚಿವರು ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಪಟ್ಟಣದ ತೀ.ನಂ.ಶ್ರೀ ಭವನಕ್ಕೆ ಹೆಚ್ಚು ಅನದಾನ ಬಿಡುಗಡೆ ಮಾಡುವಂತೆ ಸಿ.ಎಂ.ರವರನ್ನು  ಒತ್ತಾಯಿಸಿದರು. 
ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ||ಯತೀಶ್ವರಶಿವಾಚಾರ್ಯಸ್ವಾಮಿಗಳು ಮುಖ್ಯ ಸಚೇತಕ ಡಾ|| ಶಿವಯೋಗಿಸ್ವಾಮಿ, ಸಚಿವರಾದ ಬೆಳ್ಳುಬ್ಬಿ, ಎಸ್.ಶಿವಣ್ಣ, ಜಿ.ಪಂ. ಅಧ್ಯಕ್ಷೆ ಪ್ರೇಮಾ ಮಹಾಲಿಂಗಯ್ಯ, ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ, ಕೆ.ಎಸ್. ಕಿರಣ್ಕುಮಾರ್, ಬಿ. ಲಕ್ಕಪ್ಪ, ಜಿ.ಪಂ.ಸದಸ್ಯ ಪಂಚಾಕ್ಷರಿ ಜೆ.ಸಿ.ಪುರ ಗ್ರಾ.ಪಂ. ಅಧ್ಯಕ್ಷೆ ಲಲಿತಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Wednesday, January 9, 2013



ಚಿ.ನಾ.ಹಳ್ಳಿ ತಾಲೂಕಿನ ಮೂರು ಹೋಬಳಿಯ 26 ಕೆರೆಗಳ ಒಡಲ ತಣಿಸಲಿರುವ ಹೇಮೆ.
                           (ಸಿ.ಗುರುಮೂತರ್ಿ ಕೊಟಿಗೆಮನೆ)
aPÀÌ£ÁAiÀÄPÀ£ÀºÀ½î vÁ®ÆQ£À°è ºÉêÉÄ ºÀjAiÀÄĪÀ 26 PÉgÉUÀ¼À ªÀiÁUÀðzÀ £ÀPÉë
ಚಿಕ್ಕನಾಯಕನಹಳ್ಳಿ,ಜ.8: ತಾಲೂಕಿನ ಜನತೆಯ ಬಹುದಿನಗಳ ಕನಸು, ಹಲವು ವರ್ಷಗಳ ಹೋರಾಟದ ಫಲ, ಸಾವಿರಾರು ಜನರ ಬಾಯಾರಿಕೆಯನ್ನು ನೀಗಿಸಲು ಹೇಮೆಯನ್ನು ತಾಲೂಕಿಗೆ ಹರಿಸಲು ಸಿದ್ದತೆ ನಡೆಯುತ್ತಿದೆ.
ಕೆರೆಗಳ ಒಡಲು ಬರಿದಾಗಿ ಬಾಯಿತೆರೆದುಕೊಂಡಿದ್ದ ಕೆರೆಯ ಅಂಗಳಗಳು ಇನ್ನು ಮುಂದಾದರೂ ನೀರು ಕಾಣುತ್ತಾವಲ್ಲವೆಂಬ ಸಂತೋಷ, ಜೊತೆಗೆ ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ, ಪ್ಲೋರೈಡ್ ನೀರನ್ನೇ ಕುಡಿದು ಹಲವು ರೋಗಳಿಗೆ ತುತ್ತಾಗುತ್ತಿದ್ದ ಜನಕ್ಕೆ ರೋಗಗಳಿಂದ ದೂರ ಉಳಿಯಬಹುದೆಂಬ ಸ್ವಲ್ಪಮಟ್ಟಿನ  ನಿಟ್ಟುಸಿರು ಬಿಡುವ ಕಾಲ ಸನ್ನಿಹಿತವಾಗುತ್ತಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ನೀರು ಬಿಡಲು ಜಲ ಸಂಪನ್ಮೂಲ ಇಲಾಖೆಯು ಕಾವೇರಿ ನೀರಾವರಿ ನಿಗಮ ಮೂಲಕ 0.4 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಿದ್ದು, ಈ ನೀರು ತಾಲೂಕಿನಲ್ಲಿ ಮೂರು ರಿಂದ ಐದು ತಿಂಗಳ ವರೆಗೆ ಹರಿಯುತ್ತದೆ, ತಾಲೂಕಿನ 26 ಕೆರೆಗಳು ತುಂಬಲು ಕನಿಷ್ಟ ಪಕ್ಷ ಮುನ್ನೂರು ಕ್ಯೂಸಿಕ್ಸ್ ನೀರಾದರೂ ಅಗತ್ಯವಿದ್ದು, ಈ ಮಟ್ಟದ ನೀರು ನಮ್ಮ ತಾಲೂಕಿಗೆ ಸಿಗುತ್ತದೆ ಎಂಬುದೇ ಹರ್ಷದ ಸಂಗತಿ, ಈ ನೀರಿನಿಂದಾಗಿ ಹೇಮೆ ಹರಿಯುವ 26 ಕೆರೆಗಳ ಭಾಗದಲ್ಲಿನ ಜನ ಶುದ್ದ ನೀರನ್ನು ಕುಡಿಯುವುದರ ಜೊತೆಗೆ ತಮ್ಮ ಭಾಗದ ಬೋರ್ವೆಲ್ಗಳ ಅಂತರ್ಜಲವನ್ನು ಅಭಿವೃದ್ದಿ ಪಡಿಸಿಕೊಳ್ಳುತ್ತಾರೆ.
ತಾಲೂಕಿಗೆ ಹೇಮೆ ಹರಿಯುವ ದಾರಿ: ಹೇಮಾವತಿ ಮುಖ್ಯ ನಾಲೆಯಿಂದ  ನೀರು ಬರುವ ದ್ವಾರವೆಂದರೆ ಕೆ.ಬಿ.ಕ್ರಾಸ್-ಬಿಳಿಗೆರೆ ಬಳಿ ಇರುವ ಗಡಬನಹಳ್ಳಿಯ ಬಳಿಯಿಂದ,  ಗುರುತ್ವಾಕರ್ಷಣ ಬಲದಿಂದ ತಾಲೂಕಿನೊಳಕ್ಕೆ ಬರುವ ಹೇಮೆ ಪೆಮ್ಮಲದೇವರಹಳ್ಳಿ  ಮಾರು ದೂರವಿದೆ ಎನ್ನುವ ಸ್ಥಳದಿಂದ ಎರಡು ಮಾರ್ಗಗಳಾಗಿ ವಿಂಗಡಣೆಗೊಂಡು ಒಂದು ಶಾಖಾನಾಲೆ ಚಿಕ್ಕನಾಯಕನಹಳ್ಳಿ ಕಡೆಗೆ ಹರಿದರೆ, ಮತ್ತೊಂದು ಶಾಖಾನಾಲೆ ಹಾಲ್ಕುರಿಕೆಯ ಕಡೆಗೆ ಹರಿಯುತ್ತದೆ. ಈ ಎರಡೂ ಶಾಖಾನಾಲೆಗಳಿಂದ ನೈಸಗರ್ಿಕ ಹಳ್ಳಕೊಳ್ಳಗಳಿಂದ  22 ಕೆರೆಗಳು ತುಂಬಿಕೊಂಡರೆ, 4 ಕೆರೆಗಳು ಲಿಫ್ಟ್ ಮೂಲಕ ಒಟ್ಟು 26 ಕೆರೆಗಳು,  ಹತ್ತಾರು ಕಟ್ಟೆಗಳು ತುಂಬಿಕೊಂಡು 50ಕ್ಕೂ ಹೆಚ್ಚು  ಗ್ರಾಮಗಳ ಜನರು ಉಪಯೋಗವನ್ನು ಪಡೆದುಕೊಳ್ಳುತ್ತಾರೆ.
ಗುರುತ್ವಾಕರ್ಷಣ ಬಲದಿಂದ ನೀರು ಹರಿದಾಗ ತುಂಬವ ಕೆರೆಗಳೆಂದರೆ ಪೆರಮಲದೇವರಹಳ್ಳಿ, ಸಾಸಲು, ಪಟ್ಟದೇವರಕೆರೆ, ಶೆಟ್ಟೀಕೆರೆ, ತಿಮ್ಲಾಪುರ, ಹುಳಿಯಾರು, ಅಜ್ಜೇನಹಳ್ಳಿ, ಹೊಸೂರು, ಮಂಚಸಂದ್ರ, ಕೊಡ್ಲಾಗರ, ಚುಂಗನಹಳ್ಳಿ, ದಬ್ಬೇಗಟ್ಟ, ಮೇಲನಹಳ್ಳಿ, ಮಾರಸಂದ್ರ, ಚಿಕ್ಕನಾಯಕನಹಳ್ಳಿ, ಕಂದಿಕೆರೆ, ತಮ್ಮಡಿಹಳ್ಳಿ, ದಾಸೀಹಳ್ಳಿ, ಕುಪ್ಪೂರು ಇವಷ್ಟೇ ಅಲ್ಲದೆ, ಈ ಮಾರ್ಗವಾಗಿ ಹರಿಯುವ ಕಟ್ಟೆಗಳು, ಹಳ್ಳ-ಕೊಳ್ಳಗಳು ತುಂಬಿ ಈ ಭಾಗದಲ್ಲಿ ಬರುವ ಲಕ್ಷಾಂತರ ಗಿಡ ಮರಗಳು ಹಸಿರಿನಿಂದ ನಳನಳಿಹಿಸುತ್ತವೆ.
ಲಿಫ್ಟ್ ಮೂಲಕ ನೀರು ಪಡೆಯುವ ಕೆರೆಗಳು:  ಹೇಮಾವತಿ ನೀರು ಗುರುತ್ವಾಕರ್ಷಣೆ ಅಲ್ಲದೆ, ನಾಲ್ಕು ಕೆರೆಗಳಿಗೆ ಲಿಫ್ಟ್ ಮೂಲಕ ನೀರು ಹರಿಸಬೇಕಾಗುತ್ತದೆ, ಅವುಗಳೆಂದರೆ ನಾಗೇನಹಳ್ಳಿ, ಬ್ಯಾಡರಹಳ್ಳಿ, ಜೆ.ಸಿ.ಪುರ, ನಡುವನಹಳ್ಳಿ ಕೆರೆಗಳೂ ನೀರನ್ನು ಪಡೆಯುತ್ತವೆ.
ಈ ಯೋಜನೆಗೆ ಸಕರ್ಾರ ಈಗಾಗಲೇ 102 ಕೋಟಿ ರೂಗಳನ್ನು ಬಜೆಟ್ನಲ್ಲಿ ಹಂಚಿಕೆ ಮಾಡಿದ್ದು ಹಣಕ್ಕೇನು ತೊಂದರೆ ಇಲ್ಲ, ಈ ಯೋಜನೆಯ ಕಾಮಗಾರಿಯನ್ನು ಹೈದ್ರಾಬಾದ್ ಮೂಲದ ಎಂ.ಇ.ಐ ಎಂಬ ಸಂಸ್ಥೆಗೆ ಸಕರ್ಾರ ಗುತ್ತಿಗೆ ನೀಡಿದೆ. ಈ ಕಾರ್ಯವನ್ನು ಪೂರೈಸಲು ಸಕರ್ಾರ ಒಂದು ವರ್ಷದೊಳಗೆ ಕಾಲಾವಕಾಶವನ್ನು ನೀಡಿದೆ, ಈ ಕಾರ್ಯಕ್ಕೆ ಶಿಲಾನ್ಯಾಸ ಮಾಡಲು ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ರವರು ಇದೇ ತಿಂಗಳ 11ಕ್ಕೆ ತಾಲೂಕಿಗೆ ಬರಲಿದ್ದಾರೆ ಅವರ ಜೊತೆ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿಯವರು ಬರುವವರಿದ್ದು ಅವರನ್ನೇಲ್ಲಾ  ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಗೌರವಿಸಲಿದ್ದಾರೆ. ಇಲಾಖೆ ಅಂದುಕೊಂಡ ವೇಗದಲ್ಲಿ ಕೆಲಸವಾದರೆ  ಈ ಭಾಗದ ಜನ ಒಂದರಿಂದ ಎರಡು ವರ್ಷಗಳೊಳಗೆ ಹೇಮಾವತಿ ನೀರು ಕುಡಿಯುತ್ತಾರೆ, ಇಷ್ಟೊ ಅಷ್ಟೊ ಬೋರ್ವೆಲ್ಗಳಿಂದ ನೀರು ಪಡೆದು ತಮ್ಮ ಮರಗಿಡಗಳನ್ನು ಉಳಿಸಿಕೊಳ್ಳಬಹದು ಎಂಬುದು ದೂರದ ಆಶಯ. ಆದರೆ ಅಂದುಕೊಂಡಂತೆ ಆಗುತ್ತದೆಯೇ. . . . . !? 
 

ಹೈದ್ರಾಬಾದ್ ಮುಸ್ಲಿಂ ಶಾಸಕನ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಒತ್ತಾಯ
ಚಿಕ್ಕನಾಯಕನಹಳ್ಳಿ,:  ಹೈದ್ರಾಬಾದ್ ಮುಸ್ಲಿಂ ಶಾಸಕ ಸಾರ್ವಜನಿಕ ಸಭೆಯಲ್ಲಿ ಹಿಂದೂಗಳ ಭಾವೈಕೆತೆಗೆ ದಕ್ಕೆ ತರುವಂತಹ ಹೇಳಿಕೆ ನೀಡಿದನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನೆಡೆಸಿ ಖಂಡಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಕಾರ್ಯಕರ್ತರು ಆ ಶಾಸಕನ ವಿರುದ್ದ ಘೋಷಣೆ ಕೂಗುತ್ತ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಪತ್ರವನ್ನು ತಹಶಿಲ್ದಾರರಿಗೆ  ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಚಾಲಕ ಜಯಸಿಂಹ ಮಾತನಾಡಿ ಈ ದೇಶದ ಮುಸ್ಲಿಂ ಸಮುದಾಯದ ಮಾನಸಿಕತೆ ಏನೂ ಎಂಬುದು ತಿಳಿಯುತ್ತದೆ, ನಮ್ಮ ದೇಶದಲ್ಲಿ ಇಂತಹ ಮುಸ್ಲಿಂ ಜನಾಂಗದವರು ಹಿಂದೂಗಳು ಒಂದಾಗಿ ದೇಶದ ರಕ್ಷಣೆ ಮಾಡಬೇಕು ಎಂದರು.
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಮಾತನಾಡಿ ಕೀಳು ಮಟ್ಟದ ರಾಜಕಾರಣ ಮಾಡುವ ಉದ್ದೇಶದಿಂದ ಈ ಮುಸ್ಲಿಂ ಶಾಸಕ ಈ ಹೇಳಿಕೆ ನೀಡಿದ್ದರೆ, ನಮ್ಮ ದೇಶ ಸಂಸ್ಕೃತಿಯ ತವರು ಭೂಮಿ ಎಲ್ಲಾ ಧರ್ಮದವರನ್ನು ಪ್ರೀತಿಸುವ ಸಮುದಾಯ, ಯಾರೋ ಒಬ್ಬ ಇಂತಹ ನೀಚ ಬುದ್ದಿಯವನಿಂದ ಹಿಂದೂ ಮುಸ್ಲಿಂ ಜನಾಂಗದವರ ನಡುವೇ ದ್ವೇಶ ಉಂಟುಮಾಡುತ್ತಿದ್ದರೆ ಇಂತವರನ್ನು ಜೈಲಿಗೆ ತಳ್ಳಬೇಕು ಎಂದು ಆಗ್ರಹಿಸಿದ್ದರು.
ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ನಮ್ಮ ದೇಶದ ರಾಜಕಾರಣಿಗಳು ಅಲ್ಪ ಸಂಖ್ಯಾತರನ್ನು ಓಟು ಬ್ಯಾಂಕಿಗೊಸ್ಕರ ಅವರನ್ನು ಎತ್ತಿ ಮೆರೆಸಿದ ಪರಿಣಾಮ ಈ ಹೇಳಿಕೆಗಳು ಬರುತ್ತಿವೆ ಆಗಾಗಿ ಎಲ್ಲಾ ಹಿಂದೂ ರಾಜಕಾರಣಿಗಳು ಜಾಗೃತರಾಗಬೇಕು ಎಂದರು
ಈ ಸಂದರ್ಭದಲ್ಲಿ ಹಳೇಮನೆ ಸುರೇಶ್, ಮಲ್ಲಿಕಾಜರ್ುನ ಮಾತನಾಡಿದ್ದರು. ತಾಲ್ಲೂಕು ಕ.ರ.ವೇ ಅಧ್ಯಕ್ಷ ಸಿ.ಟಿ ಗುರುಮೂತರ್ಿ, ದಿಲೀಪ, ಜಗದೀಶ್ ಸ್ವಾಮಿ ಪ್ರತಿಭಟನೆಯಲ್ಲಿ ಭಾಗವಯಿಸಿದ್ದರು.

ಹೈದ್ರಾಬಾದ್ ಮುಸ್ಲಿಂ ಶಾಸಕನ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಒತ್ತಾಯ
ಚಿಕ್ಕನಾಯಕನಹಳ್ಳಿ,:  ಹೈದ್ರಾಬಾದ್ ಮುಸ್ಲಿಂ ಶಾಸಕ ಸಾರ್ವಜನಿಕ ಸಭೆಯಲ್ಲಿ ಹಿಂದೂಗಳ ಭಾವೈಕೆತೆಗೆ ದಕ್ಕೆ ತರುವಂತಹ ಹೇಳಿಕೆ ನೀಡಿದನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನೆಡೆಸಿ ಖಂಡಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಕಾರ್ಯಕರ್ತರು ಆ ಶಾಸಕನ ವಿರುದ್ದ ಘೋಷಣೆ ಕೂಗುತ್ತ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಪತ್ರವನ್ನು ತಹಶಿಲ್ದಾರರಿಗೆ  ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಚಾಲಕ ಜಯಸಿಂಹ ಮಾತನಾಡಿ ಈ ದೇಶದ ಮುಸ್ಲಿಂ ಸಮುದಾಯದ ಮಾನಸಿಕತೆ ಏನೂ ಎಂಬುದು ತಿಳಿಯುತ್ತದೆ, ನಮ್ಮ ದೇಶದಲ್ಲಿ ಇಂತಹ ಮುಸ್ಲಿಂ ಜನಾಂಗದವರು ಹಿಂದೂಗಳು ಒಂದಾಗಿ ದೇಶದ ರಕ್ಷಣೆ ಮಾಡಬೇಕು ಎಂದರು.
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಮಾತನಾಡಿ ಕೀಳು ಮಟ್ಟದ ರಾಜಕಾರಣ ಮಾಡುವ ಉದ್ದೇಶದಿಂದ ಈ ಮುಸ್ಲಿಂ ಶಾಸಕ ಈ ಹೇಳಿಕೆ ನೀಡಿದ್ದರೆ, ನಮ್ಮ ದೇಶ ಸಂಸ್ಕೃತಿಯ ತವರು ಭೂಮಿ ಎಲ್ಲಾ ಧರ್ಮದವರನ್ನು ಪ್ರೀತಿಸುವ ಸಮುದಾಯ, ಯಾರೋ ಒಬ್ಬ ಇಂತಹ ನೀಚ ಬುದ್ದಿಯವನಿಂದ ಹಿಂದೂ ಮುಸ್ಲಿಂ ಜನಾಂಗದವರ ನಡುವೇ ದ್ವೇಶ ಉಂಟುಮಾಡುತ್ತಿದ್ದರೆ ಇಂತವರನ್ನು ಜೈಲಿಗೆ ತಳ್ಳಬೇಕು ಎಂದು ಆಗ್ರಹಿಸಿದ್ದರು.
ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ನಮ್ಮ ದೇಶದ ರಾಜಕಾರಣಿಗಳು ಅಲ್ಪ ಸಂಖ್ಯಾತರನ್ನು ಓಟು ಬ್ಯಾಂಕಿಗೊಸ್ಕರ ಅವರನ್ನು ಎತ್ತಿ ಮೆರೆಸಿದ ಪರಿಣಾಮ ಈ ಹೇಳಿಕೆಗಳು ಬರುತ್ತಿವೆ ಆಗಾಗಿ ಎಲ್ಲಾ ಹಿಂದೂ ರಾಜಕಾರಣಿಗಳು ಜಾಗೃತರಾಗಬೇಕು ಎಂದರು
ಈ ಸಂದರ್ಭದಲ್ಲಿ ಹಳೇಮನೆ ಸುರೇಶ್, ಮಲ್ಲಿಕಾಜರ್ುನ ಮಾತನಾಡಿದ್ದರು. ತಾಲ್ಲೂಕು ಕ.ರ.ವೇ ಅಧ್ಯಕ್ಷ ಸಿ.ಟಿ ಗುರುಮೂತರ್ಿ, ದಿಲೀಪ, ಜಗದೀಶ್ ಸ್ವಾಮಿ ಪ್ರತಿಭಟನೆಯಲ್ಲಿ ಭಾಗವಯಿಸಿದ್ದರು.

ಜ.13ರಂದು ತಮ್ಮಡಿಹಳ್ಳಿ ಹಿರಿಯ ಶ್ರೀಗಳ 4ನೇ ಪುಣ್ಯಗುರು ಸಂಸ್ಮರಣೋತ್ಸವ
ಚಿಕ್ಕನಾಯಕನಹಳ್ಳಿ,ಜ.09: ಲಿಂಗೈಕ್ಯ ಶ್ರೀ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಗಳವರ ಕತರ್ೃಗದ್ದಿಗೆ ಹಾಗೂ ಶ್ರೀಮಠದ ಅಭಿವೃದ್ದಿಗೆ ಮೂರು ಕೋಟಿ ರೂಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಹಿರಿಯ ಶ್ರೀಗಳ  ನಾಲ್ಕನೇ  ಪುಣ್ಯಗುರು ಸಂಸ್ಮರಣೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 13ರ ಭಾನುವಾರ ಬೆಳಗ್ಗೆ11ಕ್ಕೆ  ತಮ್ಮಡಿಹಳ್ಳಿಯ ವಿರಕ್ತ ಸಂಸ್ಥಾನಮಠದಲ್ಲಿ ಏರ್ಪಡಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ತಿಳಿಸಿದರು.
ಭಾನುವಾರದಂದು ಬೆಳಗ್ಗೆ 8ಗಂಟೆಗೆ ಮಲ್ಲಿಕಾಜರ್ುನಸ್ವಾಮಿಯವರ ಪಲ್ಲಕ್ಕಿ ಉತ್ಸವವು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಆರಂಭವಾಗಲಿದ್ದು 10.30ಕ್ಕೆ ಧ್ವಜಾರೋಹಣ ನೆರವೇರಲಿದೆ. 11ಕ್ಕೆ ಏರ್ಪಡಿಸಿದ್ದು ಗೋಡೆಕೆರೆ ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶಿಕೇಂದ್ರಸ್ವಾಮಿ, ಷಡಕ್ಷರಮಠದ ರುದ್ರಮುನಿಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದಾರೆ. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಉಪಸ್ಥಿತರಿರುವರು. ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ತು.ಹಾ.ಉ.ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಮಾಜಿ ಶಾಸಕರಾದ ಬಿ.ನಂಜಾಮರಿ, ಕೆ.ಷಡಾಕ್ಷರಿ, ಜಿ.ಪಂ.ಸದಸ್ಯ ಪಂಚಾಕ್ಷರಿ, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಕೆ.ಜೆ.ಪಿ ಮುಖಂಡರಾದ ಲೊಕೇಶ್ವರ್, ಮಸಾಲೆಜಯರಾಮ್, ತಾ.ಪಂ.ಅಧ್ಯಕ್ಷ ಜಗದೀಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶಿವಪ್ರಕಾಶ್, ಮಾಜಿ ಜಿ.ಪಂ.ಸದಸ್ಯ ಸುರೇಂದ್ರಯ್ಯ ಆಗಮಿಸಲಿದ್ದು ಎ.ಪಿ.ಎಂ.ಸಿ ಸದಸ್ಯ ಶಿವರಾಜ್, ಎಸ್.ಎಂ.ಎಸ್ ವಿದ್ಯಾಸಂಸ್ಥೆ ಎಂ.ಬಿ.ಶಿವಣ್ಣ ಉಪಸ್ಥಿತರಿರುವರು.


Tuesday, January 1, 2013



ಜೆ.ಡಿ.ಎಸ್.ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು.ಸಿ.ಬಿ.ಎಸ್
                             
ಚಿಕ್ಕನಾಯಕನಹಳ್ಳಿ,ಜ.01 : ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಮೇಲೆ ಮುಂದಿನ ಚುನಾವಣೆಯ ಜವಬ್ದಾರಿ ಇದೆ, ನಿಮ್ಮ ಮುಖಾಂತರ ನಾವು ಚುನಾವಣೆಗೆ ತೆರಳಬೇಕಿದೆ, ಅದಕ್ಕಾಗಿ ಪಕ್ಷ ಸಂಘಟನೆ ಮಾಡಲು ಈ ತಿಂಗಳ 15ನೇ ತಾರೀಖಿನಿಂದ ರೂಪುರೇಶೆ ರಚಿಸಿ, ಕಾರ್ಯಕರ್ತರನ್ನು ಹುರುದುಂಬಿಸಬೇಕು ಎಂದು  ಶಾಸಕ ಸಿ.ಬಿ.ಸುರೇಶ್ಬಾಬು ಕರೆನೀಡಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಾಗಿ 2ನೇ ಅವಧಿಗೆ ಆಯ್ಕೆಯಾದವರನ್ನು ಅಭಿನಂದಿಸಿ ಮಾತನಾಡಿದರು.
ಪಕ್ಷ ಸಂಘಟನೆ ಮಾಡುವಾಗ ಎಲ್ಲರೂ ತಮ್ಮಲ್ಲಿರುವ ಲೋಪದೋಷಗಳನ್ನು ಸರಿಪಿಡಿಸಿಕೊಳ್ಳಲು ಮುಂದಾಗಬೇಕು ಆ ಕೆಲಸವನ್ನು ನನ್ನಿಂದಲೇ ಆರಂಭಿಸುವುದಾಗಿ ತಿಳಿಸಿದರಲ್ಲದೆ, ಪಕ್ಷದಲ್ಲೇ ಇದ್ದು ಒಳಗೆ ಪಿತೂರಿ ನಡೆಸುವ ಪಕ್ಷಾಂತರಿಗಳು ಈಗಲೇ ಪಕ್ಷ ಬಿಟ್ಟು ತೆರಳುವುದು ಒಳಿತು ಎಂದರು. ನಮ್ಮ ಪಕ್ಷದಲ್ಲಿ ಜಾತಿ ತಾರತಮ್ಯವಿಲ್ಲ ಎಲ್ಲಾ ವರ್ಗದವರಿಗೂ ಪಕ್ಷ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳನ್ನು ನೀಡಿದೆ, ನಮ್ಮನ್ನು ವಿಮರ್ಶ ಮಾಡುವವರು  ಆರೋಪಿಸಿರುವಂತೆ ಪುರಸಭೆಯ ಅಧ್ಯಕ್ಷ ಹುದ್ದೆಗೆ ಆರು ತಿಂಗಳಿಗೊಮ್ಮೆ ಅಧ್ಯಕ್ಷ ಹುದ್ದೆ ಬದಲಾಯಿಸುತ್ತಿರುವುದು ಎಲ್ಲಾ ವರ್ಗದವರಿಗೂ ಅವಕಾಶ ದೊರಕಲಿ, ಅಲ್ಪಸಂಖ್ಯಾತ ಜನಾಂಗ ಬೆಳೆಯಲಿ ಎಂಬ ಉದ್ದೇಶದಿಂದ ಮಾಜಿ ಶಾಸಕರಂತೆ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗುವ ಮನೋಭಾವ ನಮ್ಮಲ್ಲ ಎಂದರು.
ನಮ್ಮ ಪಕ್ಷದಲ್ಲಿ ಎಲ್ಲಾ ಸಮಾಜದವರು ಅಧಿಕಾರ ಹೊಂದಿದ್ದಾರೆ, ಜ್ಯಾತ್ಯಾತೀತ ಭಾವನೆ ಹೊಂದಿರುವ ಪಕ್ಷವು ಎ.ಪಿ.ಎಂ.ಸಿ ಚುನಾವಣೆಯಲ್ಲಿ ಯಾವ ಕಾರಣಕ್ಕೆ ಕಡಿಮೆ ಮತಗಳನ್ನು ಪಡೆಯಿತು ಎಂಬುದರ ಬಗ್ಗೆ ಚಿಂತಿಸುತ್ತಿದೆ, ಪಕ್ಷದಲ್ಲಿ ಸಂಘಟನೆಗಾಗಿ ಈಗಿನಿಂದಲೇ ಎಲ್ಲಾ ಕಾರ್ಯಕರ್ತರು ಸಿದ್ದರಾಗಿ ಎಂದರಲ್ಲದೆ ಪ್ರತಿಯೊಬ್ಬರನ್ನು ಗೌರವವಾಗಿ ಕಾಣುವುದು ನಮ್ಮ ಪಕ್ಷದ ಸಿದ್ದಾಂತವಾಗಿದೆ ಎಂದರು.
ಜೆ.ಡಿ.ಎಸ್. ಪಕ್ಷದಲ್ಲಿ ಸುರೇಶ್ಬಾಬು ಒಬ್ಬ ಕಾರ್ಯಕರ್ತ, ಪಕ್ಷ ಬೆಳೆಯಲು ಸುರೇಶ್ಬಾಬುವಿನಿಂದ ಮಾತ್ರ ಸಾಧ್ಯವಿಲ್ಲ, ಎಲ್ಲಾ ಕಾರ್ಯಕರ್ತರು ಸುರೇಶ್ಬಾಬು ಆಗಿ ಶ್ರಮ ವಹಿಸಿದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರುವುದು ಎಂದರಲ್ಲದೆ ಜಿಲ್ಲೆಯಲ್ಲಿ 9ಕ್ಷೇತ್ರಗಳನ್ನಾದರೂ ಜೆಡಿಎಸ್ ಹೊಂದಿದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನಹಿತ ಕಾರ್ಯಕ್ರಮ ಮಾಡುವುದರಲ್ಲಿ ಅನುಮಾನವಿಲ್ಲ ಎಂದರು.  
ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಗ್ರಾಮವಾಸ್ತವ್ಯ, ವೇತನ ಹೆಚ್ಚಳ, ಪ್ರತಿ ಶನಿವಾರ ಜನತಾದರ್ಶನ ಅಲ್ಲದೆ ಇತರ ಉತ್ತಮ ಕಾರ್ಯಕ್ರಮ ನಡೆಸಿ ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಟ್ಟಿದ್ದರು, ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಡವರ್ಗದ ಜನತೆಗೆ ಅನುಕೂಲವಾಗಲಿದೆ, ಎಂದರಲ್ಲದೆ ಫೆಬ್ರವರಿ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ತಾಲ್ಲೂಕಿಗೆ ಕರೆಸಿ ಅಂಗವಿಕಲರ, ಮಹಿಳೆಯರ ಸಮಾವೇಶ ಹಾಗೂ ಉದ್ಯೋಗ ಮೇಳವನ್ನು ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ ಮಾತನಾಡಿ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಮೂರು ಅಥವಾ ನಾಲ್ಕು ಸಚಿವ ಸ್ಥಾನಗಳು ಖಂಡಿತ ದೊರಕುತ್ತವೆ, ಅದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ, ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಬೇಕು ಎಂದರಲ್ಲದೆ ಶಾಸಕ ಸಿ.ಬಿ.ಸುರೇಶ್ಬಾಬುರವರಿಗೆ  ಸಚಿವ ಸ್ಥಾನ ದೊರಕುವಂತೆ ಆಗಲಿ ಎಂದರು. ನಾನು ಜಿ.ಪಂ.ಅಧ್ಯಕ್ಷೆಯಾಗಲು ಕಾರಣ ಶಾಸಕ ಸಿ.ಬಿ.ಸುರೇಶ್ಬಾಬು, ಅವರು ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮಾತನಾಡಿ ಹಿಂದುಳಿದವರಿಗೆ ಅಧಿಕಾರ ನೀಡಿದರೆ ದೇಶ ಅಭಿವೃದ್ದಿಯಾಗುತ್ತದೆ ಎಂಬ ಕಾರಣದಿಂದ ಈ ಹುದ್ದೆ ದೊರಕಿಸಿದ್ದಾರೆ ಎಂದರು. 
ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ ಅಲ್ಪಸಂಖ್ಯಾತರ ಬಗ್ಗೆ ಅಭಿಮಾನ ಹೊಂದಿರುವ ಶಾಸಕರು ನನಗೆ ಪುರಸಭಾಧ್ಯಕ್ಷ ಸ್ಥಾನ ನೀಡಿದವರು, ಅವರು ಈ ಬಾರಿ ಶಾಸಕರಾಗಿ ಸಚಿವರಾಗಲು ಎಲ್ಲಾ ಕಾರ್ಯಕರ್ತರು ಚುನಾವಣೆಯಲ್ಲಿ ಸಂಘಟಿತರಾಗಿ ಪಕ್ಷ ಕಟ್ಟಬೇಕು ಎಂದರು.
ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಮಾತನಾಡಿ ಕಳೆದ ಬಾರಿ ಗೆಲುವು ಸಾಧಿಸಿದ ಮತಗಳಿಗಿಂತ ಈ ಬಾರಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲು ಎಲ್ಲಾ ಕಾರ್ಯಕರ್ತರು ಸಂಘಟಿತರಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ರಘುನಾಥ್, 28ಗ್ರಾಮ ಪಂಚಾಯಿತಿಗಳಲ್ಲಿ 17ಗ್ರಾಮಪಂಚಾಯಿತಿಗಳಲ್ಲಿ  ಜೆ.ಡಿ.ಎಸ್. ಪಕ್ಷದ ಮೇಲುಗೈ ಸಾಧಿಸಿದೆ ಅಧ್ಯಕ್ಷರು ಉಪಾಧ್ಯಕ್ಷರು ತಮ್ಮ ಸ್ವಾರ್ಥಬಿಟ್ಟು ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಸ್ಪಂದಿಸಿ ಎಂದು ಹೇಳಿದರು. 
ಸಭೆಯಲ್ಲಿ ಜಿ.ಪಂ. ಸದಸ್ಯರಾದ ಮಂಜುಳಗವಿರಂಗಯ್ಯ, ತಾ.ಪಂ. ಸದಸ್ಯರಾದ ಹೇಮಾವತಿ, ಚೇತನಾಗಂಗಾಧರ್, ಉಮಾದೇವಿ, ಶಿವರಾಜು, ಜೆ.ಡಿ.ಎಸ್.ಪ್ರಧಾನ ಕಾರ್ಯದಶರ್ಿ ಕೆ.ಟಿ.ಗೋವಿಂದಪ್ಪ, ಸಿ.ಪಿ.ಚಂದ್ರಶೇಖರಪ್ಪಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಪುರಸಭಾ ಸದಸ್ಯರಾದ ಎಂ.ಎನ್.ಸುರೇಶ್, ಜೆ.ಡಿ.ಎಸ್.ವಕ್ತಾರ ಸಿ.ಎಸ್.ನಟರಾಜು, ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ರಂಗಸ್ವಾಮಿ, ರುದ್ರೇಶ್. ರೇವಣ್ಣ ಒಡೆಯರ್,  ಗ್ರಾ.ಪಂ. ಮಾಜಿ ಅಧ್ಯಕ್ಷೆ ಕುಶಲ ಮತ್ತಿತರರು ಭಾಗವಹಿಸಿದ್ದರು.
ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರೆ,  ಸಿ.ಎಸ್.ನಟರಾಜ್ ನಿರೂಪಿಸಿ , ಸಾಲ್ಕಟ್ಟೆ ಶ್ರೀನಿವಾಸ ವಂದಿಸಿದರು. 

aPÀÌ£ÁAiÀÄPÀ£ÀºÀ½îAiÀÄ «PÀ® ZÉÃvÀ£ÀgÀÄ ¨É¼ÀUÀÄA§zÀ ¨sÁgÀwÃAiÀÄ gÉqïPÁæ¸ï ¸ÀA¸ÉÜAiÀÄ QªÀÅqÀ ªÀÄvÀÄÛ ªÀÄÆPÀgÀ ±Á¯ÉAiÀÄ°è £ÀqÉAiÀÄĪÀ ¸ÁzsÀ£À ¸À®PÀgÀuÉ ¤ÃqÀĪÀ ¸ÀA§AzsÀ ¥ÀƪÀð¨sÁ« GavÀ vÀ¥Á¸ÀuÁ ²©gÀPÉÌ vÉgÀ¼À®Ä ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð ©Ã¼ÉÆÌlÖgÀÄ. F ¸ÀAzÀ¨sÀðzÀ°è vÁ.«PÀ®ZÉÃvÀ£ÀgÀ ¨É£ÀPÀ£ÀPÀmÉÖ gÀªÉÄñï G¥À¹ÜvÀjzÀÝgÀÄ.

aPÀÌ£ÁAiÀÄPÀ£ÀºÀ½îAiÀÄ ²æÃ PÀȵÀÚ UɼÉAiÀÄgÀ §¼ÀUÀzÀ ªÀw¬ÄAzÀ K¥Àðr¸À¯ÁVzÀÝ ºÉƸÀ ªÀµÀðzÀ DZÀgÀuÁ ¸ÀªÀiÁgÀA¨sÀzÀ CAUÀªÁV ªÀÄ£ÀgÀAd£Á PÁAiÀÄðPÀæªÀÄ K¥Àðr¸À¯ÁVvÀÄÛ. F ¸ÀAzÀ¨sÀðzÀ°è ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð, dAiÀÄgÁªÀÄAiÀÄå, ¹.Dgï.¦. zÀÄUÀðAiÀÄå, QgÀuï G¥À¹ÜvÀjzÀÝgÀÄ.

aPÀÌ£ÁAiÀÄPÀ£ÀºÀ½î gÉÆÃlj DAUÀè ¥ËæqÀ±Á¯ÉAiÀÄ «zÁåyðUÀ¼ÀÄ vÀĪÀÄPÀÆj£À°è £ÀqÉzÀ f¯Áè ªÀÄlÖzÀ ¥Àæw¨sÁ PÁgÀAfAiÀÄ°è ¨ÁUÀªÀ»¹ ¥ÀæxÀªÀÄ ¸ÁÜ£À ¥ÀqÉzÀÄ gÁdå ªÀÄlÖPÉÌ DAiÀiÁÌAiÀiÁVzÁÝgÉ. ±Á¯ÉAiÀÄ CzsÀåPÀëgÁzÀ qÁ.¹.JªÀiï.¸ÀÄgÉñï, PÁAiÀÄðzÀ²ð JªÀiï.J¯ï.ªÀİèPÁdÄð£ÀAiÀÄå, ªÀÄgÀļÁgÁzsÀå, ±ÀAPÀgÀªÀÄÆwð, C±Àævï¥ÁµÀ, ¸ÀĤvÀ, ¸ËªÀÄå, gÀªÉÄñï, ¹zÉÝÃ±ï ºÁUÀÆ ±Á¯ÉAiÀÄ ²PÀëPÀgÀÄ, DqÀ½vÀ ªÀÄAqÀ½ «zÁåyðUÀ¼À£ÀÄß C©ü£ÀA¢¹zÁÝgÉ.

ಶೀರ್ಷಿಕೆ ಸೇರಿಸಿ
aPÀÌ£ÁAiÀÄPÀ£ÀºÀ½î vÁ®ÆèQ£À zÀ¸ÀÆr UÁæªÀÄzÀ ªÀĮ̥ÀÄgÀzÀ DAd£ÉÃAiÀĸÁé«Ä eÁvÁæ ¥ÀæAiÀÄÄPÀÛ ¤Ãj£À ¸ÀªÀĸÉå ¤ÃV¸À®Ä zÉêÀ¸ÁÜ£ÀPÁÌV PÁAUÉæ¸ï£À AiÀÄĪÀ ªÀÄÄRAqÀ ¸Àwñï¸Á¸À®Ä C°èUÉ ¨ÉÆÃgïªÉ¯ï PÉÆj¹zÁÝgÉ. ¨ÁèPï PÁAUÉæ¸ï CzsÀåPÀë  ¹.§¸ÀªÀgÁdÄ G¥À¹ÜvÀjzÀÝgÀÄ.

Monday, December 31, 2012



ಯುವತಿಯ ಮೇಲೆ ಅತ್ಯಾಚಾರ: ಶೀಘ್ರ, ಉಗ್ರ ರೂಪದ ಶಿಕ್ಷೆಗೆ ಒತ್ತಾಯಿಸಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ
                         
ಚಿಕ್ಕನಾಯಕನಹಳ್ಳಿ,ಡಿ.31 : ಮಹಿಳೆಯರಿಗೆ ಪುರುಷರಿಂದ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಅಂಜದೆ ಅನ್ಯಾಯದ ವಿರುದ್ದ ಹೋರಾಡಿ ಇಂತಹ ಹೋರಾಟಕ್ಕೆ ಎಲ್ಲಾ ಮಹಿಳಾ ಸಂಘಟನೆಗಳು ಬೆಂಬಲಿಸುತ್ತವೆ ಎಂದು ಸೃಜನಾ ಸಂಘಟನೆಯ ಎನ್.ಇಂದಿರಮ್ಮ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಸೃಜನಾ ಸಂಘಟನೆ ಹಾಗೂ ಪುರಸಭಾ ಸದಸ್ಯೆಯರು, ಇನ್ನರ್ವೀಲ್ ಸಂಸ್ಥೆ, ಅಕ್ಕಮಹಾದೇವಿ ಮಹಿಳಾ ಸಮಾಜ, ಶಿವಶಕ್ತಿ ಸಂಘ, ವಾಸವಿ ಮಹಿಳಾ ಸಮಾಜ, ತಾಲ್ಲೂಕು ವಿಜ್ಞಾನ ಕೇಂದ್ರ ಹಾಗೂ ಕಾಲೇಜು ವಿದ್ಯಾಥರ್ಿಗಳು ದೆಹಲಿಯ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾಥರ್ಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಸಕರ್ಾರಕ್ಕೆ ಮನವಿ ಪತ್ರ ಅಪರ್ಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ಸ್ತ್ರೀ ಕುಲದ ಮೇಲೆ ನಡೆದ ಅಮಾನುಷ ಹಲ್ಲೆ, ಈ ಕೃತ್ಯ ಎಸಗಿದ ಎಲ್ಲಾ ಅಪರಾಧಿಗಳಿಗೂ ಗರಿಷ್ಠ ಮಟ್ಟದ ಶಿಕ್ಷೆಯಾಗಬೇಕು ಹಾಗೂ ಇಂತಹ ಪ್ರಕರಣಗಳಲ್ಲಿ ಸಕಾರಿ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸುವ ಜೊತೆಗೆ ಆರೋಪಿಗಳ ಮೇಲೆ ತೀವ್ರವಾದ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಮಹಿಳೆಯರ ಮೇಲೆ ಕುಕೃತ್ಯ ನಡೆಸುವ ಆರೋಪಿಗಳು ಎಷ್ಟೇ ಬಲಾಡ್ಯರಾಗಿದ್ದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಭೋದನೆಯಾಗಬೇಕು ಎಂದರು.
ಹುಳಿಯಾರಿನ ಇನ್ನರ್ವೀಲ್ ಕ್ಲಬ್ನ  ಜಯಲಕ್ಷ್ಮೀ ಮಾತನಾಡಿ ನನ್ನ ಗಂಡನಿಂದ ನನಗೂ ಆಸಿಡ್ ಎರಚುವ ಮೂಲಕ ಅನ್ಯಾಯವಾಗಿತ್ತು ಎಂದರಲ್ಲದೆ, ರಾಯಚೂರಿನಲ್ಲಿ ಅತ್ಯಾಚಾರ ನಡೆಸಿದ ವ್ಯಕ್ತಿಯೊಬ್ಬ ಹುಡುಗಿಗೆ ಬೆದರಿಕೆ ಹಾಕಿದ್ದರು ಎರಡು ದಿನಗಳ ನಂತರ ಈ ವಿಷಯ ತಿಳಿದು ಮಹಿಳೆಯರೆಲ್ಲ ಸೇರಿ ಪ್ರತಿಭಟನೆ ನಡೆಸಿ ಈ ಕೃತ್ಯದ ವಿರುದ್ದ ಹೋರಾಡಿ ಜಯಗಳಿಸಿದ್ದೆವು, ಇದೇ ರೀತಿ ಅನ್ಯಾಯದ ನಡೆದ ಮಹಿಳೆಯರು ಹೆದರದೆ ವಿಷಯವನ್ನು ತಿಳಿಸಿದರೆ ನ್ಯಾಯಕ್ಕಾಗಿ ಹೋರಾಡಬಹುದು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಅತ್ಯಾಚಾರದಂತಹ ಹೇಯ ಕೃತ್ಯ ನಡೆಯುತ್ತಿರುವುದು ಭಾರತೀಯ ಹೆಣ್ಣು ಮಕ್ಕಳ ದೌಭರ್ಾಗ್ಯ, ಪುಸ್ತಕದಲ್ಲಿ ಮಾತ್ರ ಹೆಣ್ಣಿಗೆ ಉತ್ತಮ ಸ್ಥಾನಮಾನವನ್ನು ಸಕರ್ಾರ ಕಲ್ಪಿಸುತ್ತಿದೆ, ಆದರೆ ಭದ್ರತೆ ದುಷ್ಠಿಯಲ್ಲಿ ರಕ್ಷಣೆ ದೊರಕುತ್ತಿಲ್ಲ ಎಂದ ವಿಷಾದಿಸಿದರು.
ಪುರಸಭಾ ಸದಸ್ಯೆ ಕವಿತಾಚನ್ನಬಸವಯ್ಯ ಮಾತನಾಡಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು, ಮಹಿಳೆಯರ ಗೌರವ ಪೂರ್ಣ ಬದುಕಿಗೆ ಸಾಧ್ಯವಾಗುವಂತೆ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಸಶಕ್ತಿ ಕಾನೂನು ಜಾರಿ ಮಾಡಿ ಪೋಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.
  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಅತ್ಯಾಚಾರಿಗಳು ಭಾರತದ ಉಗ್ರರು ಇವರಿಗೆ ಸಕರ್ಾರ ಉಗ್ರಶಿಕ್ಷೆ ನೀಡಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ  ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಸೃಜನ ಸಂಘದ ಅಧ್ಯಕ್ಷೆ ಎಲ್.ಜಯಮ್ಮ, ಇನ್ನರ್ವೀಲ್ ಸಂಸ್ಥೆ ಅಧ್ಯಕ್ಷೆ ಭವಾನಿಜಯರಾಂ, ತೇಜಾವತಿನರೇಂದ್ರಬಾಬು, ಪುಷ್ಪಶಿವಣ್ಣ, ಚಂದ್ರಿಕಾಮೂತರ್ಿ, ಧರಣಿಲಕ್ಕಪ್ಪ, ಮಾಜಿ ಶಾಸಕ ಬಿ.ಲಕ್ಕಪ್ಪ, ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಜ್ಞಾನ ಸಂಘದ ರಾಮಕೃಷ್ಣಪ್ಪ,  ಸೇರಿದಂತೆ ಹಲವರಿದ್ದರು.
                         (ಸುದ್ದಿ 2)
ಜೆ.ಡಿ.ಯು.ವತಿಯಿಂದ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಡಿ.31 : ದೆಹಲಿಯಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಸಾವಿನಂತಹ ಘಟನೆಗಳು ದೇಶದಲ್ಲಿ ಪದೇ ಪದೇ ನಡೆಯುತ್ತಿದ್ದು ಕೇಂದ್ರ ಸಕರ್ಾರ ಮಹಿಳೆಯರಿಗೆ ರಕ್ಷಣೆಯನ್ನು ನೀಡುವುದರಲ್ಲಿ ವಿಫಲವಾಗಿದ ಎಂದು ತಾಲ್ಲೂಕು ಸಂಯುಕ್ತ ಜನತಾದಳ(ಜೆ.ಡಿ.ಯು) ಪ್ರತಿಭಟನೆ ನಡೆಸಿತು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೆದಾರ್ ಬೊಮ್ಮಯ್ಯರಿಗೆ ಮನವಿ ಪತ್ರ ಸಲ್ಲಿಸಿದರು.
ಇಂದು ಮಹಿಳೆಯರ ರಕ್ಷಣೆಯ ಬಗ್ಗೆ ಸಕಾರ ಭಾರತೀಯ ದಂಡ ಸಂಹಿತೆಯು ಕಲಂನನ್ನು ತಿದ್ದುಪಡಿ ಮಾಡಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಹಾಗೂ ಮರಣ ದಂಡನೆಯಂತಹ ಶಿಕ್ಷೆಯನ್ನು ತರಬೇಕೆಂದು ಒತ್ತಾಯಿಸಿದರು.
ತುಮಕೂರು ಜೆಡಿಯು ಅಧ್ಯಕ್ಷ ಕೆ.ಜಿ.ಎಲ್.ರವಿ, ತಾಲ್ಲೂಕು ಸಂಚಾಲಕ ಪ್ರಕಾಶ್ಯಾದವ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
                      ಕೃಷಿ, ಹೈನುಗಾರಿಕೆ ಒಂದೇ ನೊಗದ ಎರಡು ಎತ್ತುಗಳಿದ್ದಂತೆ
                                   
ಚಿಕ್ಕನಾಯಕನಹಳ್ಳಿ,ಡಿ.31 : ಕೃಷಿ ಮತ್ತು ಹೈನುಗಾರಿಕೆ ಒಂದೇ ನೊಗದ ಎರಡು ಎತ್ತುಗಳಿದ್ದಂತೆ,  ಇವರೆಡನ್ನು ಜೊತೆಯಲ್ಲಿ ತೆಗೆದುಕೊಂಡು ಹೋದರೆ ರೈತರ ಆಥರ್ಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ಕೃಷಿ ತಜ್ಞ ಡಾ.ಶಶಿಕಾಂತ್ ಅಭಿಪ್ರಾಯಪಟ್ಟರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಜಾಗೃತಿ ಆಂದೋಲನ ಹಾಗೂ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾವಯುವ ಕೃಷಿಯಲ್ಲಿ ಮಣ್ಣಿನ ಅಸ್ಥಿತ್ವವಿರುತ್ತದೆ, ರಾಸಾಯನಿಕಗಳನ್ನು ಹೆಚ್ಚು ಬಳೆಸಿದರೆ ಮಣ್ಣು ಈ ಅಸ್ಥಿತ್ವವನ್ನು ಕಳೆದುಕೊಳ್ಳದಂತೆ ಎಂದ ಅವರು, ಹೆಚ್ಚು ಜಮೀನು ಹೊಂದಿರುವ ರೈತರು ತಮ್ಮ ಕೃಷಿ ಜೊತೆಗೆ ಖುಷ್ಕಿಗೆ, ತೋಟಗಾರಿಕೆಗೆ, ಹೈನುಗಾರಿಕೆಗೆ ಹಾಗೂ ಇತ್ಯಾದಿ ಉಪಕಸುಬುಗಳಿಗೆ ಜಮೀನನ್ನು ಮೀಸಲಿಟ್ಟರೆ ಕೃಷಿಯೊಂದಿಗೆ ಉತ್ತಮ ಲಾಭ ಪಡೆಯಬಹುದಾಗಿ ಹಾಗೂ ಹೈನುಗಾರಕೆ ಕೃಷಿ ಮಾಡುವಾಗ ಸುಧಾರಿತ ಹೈನುಗಾರಿಕೆ ಮಾಡಲು ತಿಳಿಸಿದರು.
ಸಮಗ್ರ ಕೃಷಿ ಪದ್ದತಿ ಜೊತೆಗೆ ಎಲ್ಲಾ ಕೃಷಿಯನ್ನು ಅಳವಡಿಸಿಕೊಂಡು ಸಾವಯುವ ಕೃಷಿ ಮಾಡಲು ಹಾಗೂ ಕೃಷಿಯಲ್ಲಿ ಒಂದೇ ರೀತಿಯ ಬೆಳೆ ಬೆಳೆಯುವ ಬದಲು ಪರಿವರ್ತನಾ ಬೆಳೆ ಮಾಡಲು ತಿಳಿಸಿದರು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಉತ್ಪಾದನೆ ಹೆಚ್ಚಿಸಬಹುದು ಎಂದರು.
ದೇಶದಲ್ಲಿ ಕಾಡು ನಾಶವಾಗಿರುವುದರಿಂದ ಚರ್ಮರೋಗ ರಕ್ತದೊತ್ತಡ ದಂತಹ ಖಾಯಿಲೆಗಳು ಹೆಚ್ಚುತ್ತಿದೆ. ದೇಶದಲ್ಲಿ ಶೇ.12 ರಷ್ಟು ಮಾತ್ರ ಕಾಡಿರುವುದರಿಂದ ಮಳೆ ಕಡಿಮೇಯಾಗಿ ಕೃಷಿಗೆ ಹಿನ್ನೆಡಿಯಾಗುತ್ತಿದೆ. ಶೇ.32 ರಷ್ಟು ಜನಕ್ಕೆ ಅಸ್ತಮಾ ರೋಗವಿದೆ. ಕಾಡು ಕೃಷಿ ನಶಿಸಿರುವುದಿರಿಂದ ಜಮೀನು ಕೃಷಿ ನಶಿಸಲು ಕಾರಣವಾಗಿ ಪ್ರತಿ ರೈತರು ತಮ್ಮ ತೋಟಗಳಲ್ಲಿ 2 ರಿಂದ 3 ಜೇನು ಪೆಟ್ಟಿಗೆಗಳನ್ನು ಇಡುವ ಮೂಲಕ ಜೇನು ಕೃಷಿಗೆ ಹೆಚ್ಚು ಒತ್ತು ನೀಡಿ ಜೇನು ಸೇವಿಸುವುದರಿಮದ ಅನೇಕ ರೋಗಗಳು ಮಾಯವಾಗುತ್ತದೆ. ಪಟ್ಟಣಗಳು ಕಾಂಕ್ರಿಟ್ ಕಾಡುಗಳಾಗುತ್ತಿವೆ ಇದರಿಂದ ಮನುಷ್ಯ ಆರೋಗ್ಯ ಹದಗೆಡುತ್ತಿದೆ. ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಮಡು ರೈತರು ತೋಟಗಾರಿಕೆ ಹೈನುಗಾರಿಕೆ, ಕೋಳಿಸಾಕಾಣಿಕೆ, ಮೀನುಸಾಕಾಣಿಕೆ ಹಾಗೂ ತರಕಾರಿ ಜೊತೆಯಲ್ಲಿ ಸೊಪ್ಪು ಬೆಳೆಯಬೇಕೆಂದು ಸಲಹೆ ನೀಡಿದರು. ನಮ್ಮ ದೇಶದಲ್ಲಿ ಆಹಾರ ಪದ್ದತಿ ಸರಿ ಇಲ್ಲದೆ ವಿದೇಶಿ ಆಹಾರದ ದಾಸರಾಗುತ್ತಿರುವುದರಿಮದ ಇನ್ನು 5 ವರ್ಷಗಳಲ್ಲಿ ದೇಶದಲ್ಲಿ ಪ್ರತಿಯೊಂದು ಮನೆಗಳಲ್ಲಿ ರೋಗದ ಕೇಂದ್ರಗಳಾಗುವುದರಲ್ಲಿ ದೂರವಿಲ್ಲ ಆದ್ದರಿಂದ ಭಾರತದ ಆಹಾರ ಪದ್ದತಿಯನ್ನು ಅಳವಡಿಕೊಸಿಕೊಳ್ಳಬೇಕೆಂದು ತಿಳಿಸಿದರು.
ಜಿ.ಪಂ. ಸದಸ್ಯ ಲೋಹಿತಾಬಾಯಿ ಮಾತನಾಡಿ ನಗರ ಪ್ರದೇಶಗಳಲ್ಲಿ ಗ್ರಾಮೀಣ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ನಗರದಲ್ಲಿನ ಆಹಾರ ಪದ್ದತಿಯನ್ನು ಅಳವಡಿಕೊಳ್ಳುತ್ತಿರುವುದು ವಿಷಾದನೀಯ. ನಮ್ಮ ರೈತರು ಬೆಳೆದ ಬೆಳೆಗೆ ದೇಶದಲ್ಲಿ ಬೆಲೆ ಇಲ್ಲ. ವಿದೇಶಗಳಿಂದ ಆಮದು ಮಾಡಿಕೊಂಡ ನಗರ ಪ್ರದೇಶಗಳಲ್ಲಿ ಬಳಸುತ್ತಿರುವುದು ವಿಷಾದನೀಯ, ಸಕರ್ಾರ ಸಾವಯವ ಕೃಷಿಗೆ ಸಕರ್ಾರ ಹೆಚ್ಚು ಒತ್ತು ನೀಡುತ್ತಿದ. ಆದ್ದರಿಂದ ರೈತರು ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ ಹಾಕಿ ಬೆಳೆ ಬೆಳೆಯುವುದನ್ನು ರೂಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು
ಡಾ|| ಮಮತ ಮಾತನಾಡಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ಉತ್ಕೃಷ್ಟ ದಜರ್ೆಯ ಆಹಾರವಾದ ಆರ್ಕ, ನವಣೆ ಬಡವರ ಆಹಾರ ಈಗ ಶ್ರೀಮಂತರ ಆಹಾರವಾಗುತ್ತಿದೆ. ಈ ಎರಡು ಆಹಾರದಲ್ಲಿ ಮನುಷ್ಯನಿಗೆ ಬೇಕಾದ ಇನ್ಸುಲಿನ್ ಉತ್ಪತ್ತಿಮಾಡುವ ಗುಣವಿದೆ. ಆರ್ಕದಲ್ಲಿ ರೋಗ ನಿರೋಧಕ ಅಂಶವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಎನ್.ಜಿ.ಮಂಜುಳ, ನಿಂಗಮ್ಮ ರಾಮಯ್ಯ, ತಾ.ಪಂ. ಉಪಾಧ್ಯಕ್ಷ ಲತಾಕೇಶವಮೂತರ್ಿ, ಲತಾವಿಶ್ವೇಶ್ವರಯ್ಯ, ತೀರ್ಥಪುರ ಗ್ರಾ.ಪಂ.ಅಧ್ಯಕ್ಷೆ ಪದ್ಮಮ್ಮ, ಕೃಷಿ ಅಧಿಕಾರಿ ಕೃಷ್ಣಪ್ಪ, ಗೋಪಾಲನಹಳ್ಳಿ ರಘು, ನಿವೃತ್ತ ಕೃಷಿ ಅಧಿಕಾರಿ ಗಂಗಾಧರಪ್ಪ, ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

                     
ಕುಪ್ಪೂರು ಗದ್ದಿಗೆ ಮಠದಲ್ಲಿ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.31 : ಮನುಷ್ಯ ಚಾರಿತ್ರ್ಯ ಹೀನನಾಗದೇ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕೆಂದು ಹಾರನಹಳ್ಳಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕಪ್ಪೂರು ಗದ್ದಿಗೆ ಮರುಳ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನಜಾಗೃತಿ ಭಾವೈಕ್ಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ಸಮಾಜದಲ್ಲಿ ಬೇಗ ಶ್ರೀಮಂತರಾಗಬೇಕೆಂಬ ಆಸೆಯಿಂದ  ಬಹುತೇಕರು ಕೆಟ್ಟ ಮಾರ್ಗದಲ್ಲಿ ಹಣ ಸಂಪಾದನೆಗಿಳಿದಿದ್ದಾರೆ. ಅನ್ಯ ಮಾರ್ಗದಲ್ಲಿ ಹಣ ಆಸ್ತಿ ಸಂಪಾದನೆಗೆ ಹೋದರೆ ಜೀವನದ ನೆಮ್ಮದಿ ಮರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಾಜ-ಮಹಾರಾಜರ ಕಾಲದಲ್ಲಿ ಕಾವಿಧಾರಿಗಳಿಗೆ, ಸನ್ಯಾಸಿಗಳಿಗೆ ಹೆಚ್ಚಿನ ಮಹತ್ವವಿತ್ತು. ಆದರೆ ಇಂದು ಸನ್ಯಾಸಿಗಳ ಬಗ್ಗೆಯೂ ಅಪಸ್ವರ ಕೇಳಿ ಬರುತ್ತಿರುವುದು ದುದರ್ೆವವೆನಿಸಿದೆ. ಸನ್ಯಾಸಿಯೆಂದರೆ ತ್ಯಾಗದ ಸಂಕೇತ. ಮಠಾಧೀಶರುಗಳು ಹರಿಷಡ್ವರ್ಗಗಳನ್ನು ಜಯಿಸಿ ಸಾತ್ವಿಕ ಜೀವನ ನಡೆಸಬೇಕು ಎಂದರು.ದಿನ ಸಮಾಜದಲ್ಲಿ ದಿನನಿತ್ಯ ಅನ್ಯಾಯ ಮೋಸ-ಕ್ರೌರ್ಯಗಳು ಹೆಚ್ಚಾಗುತ್ತಿವೆ ಎಂದ ಅವರು ಈ ಬಗ್ಗೆ ಜನಜಾಗೃತಿ ಮೂಡಿಸಲು ಮಠಾಧೀಶರು ಮುಂದಾಗಬೇಕೆಂದರು. ತುಮಕೂರು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ ಭಗವಂತನು ಸೃಷ್ಠಿಕರ್ತನೇ ಹೊರತು ಲಯ ಕರ್ತನಲ್ಲ. ಪ್ರಳಯಕ್ಕೆ ಭೀತಿ ಪಡುವುದನ್ನು ಬಿಟ್ಟು  ಕಾನೂನಿಗೆ ಭೀತಿ ಪಡಿ. ಕಾನೂನಿನ ಬಗ್ಗೆ ಹೆದರಿಕೆಯಿದ್ದರೆ ಸಮಾಜ ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಇಂದು ಧರ್ಮವೂ ವ್ಯವಹಾರವಾಗುತ್ತಿದ್ದು, ಭಕ್ತಿ ಭಾವನೆಗಳು ವಾಣಿಜ್ಯೀಕರಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.ುಡಿಯೂರು ರಂಭಾಪುರಿ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ , ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರಿಗೆ ಕುಪ್ಪೂರು ಮರುಳ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಸಿಪಿಐ ಲೋಕೇಶ್ವರ್ ಶ್ರೀ ಕುಪ್ಪೂರೇಶ್ವರ ವಡಪುಗಳು ವಿಸಿಡಿ ಬಿಡುಗಡೆಗೊಳಿಸಿದರು.ುಪ್ಪೂರು ಈಶಾ ಮರುಳ ಸಿದ್ಧೇಶ ಭಜನಾಗೀತೆಗಳನ್ನು ಬಿಡುಗಡೆಮಾಡಲಾಯಿತು. ಮಾಜಿ ಶಾಸಕ ಎಸ್.ಪಿ. ಗಂಗಾಧರಪ್ಪ, ಬೆಂಗಳೂರಿನ ಉಮಾಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ದಯಾಶಂಕರ್ ನಿರೂಪಿಸಿದರು. ಕೋಟೆ ನಾಗರಾಜ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

             aPÀÌ£ÁAiÀÄPÀ£ÀºÀ½îAiÀÄ C¨sÁ«¥À ªÀw¬ÄAzÀ zɺÀ°AiÀÄ ¥ÁågÁªÉÄrPÀ¯ï 
             «zÁåyð¤ CvÁåZÁgÀPÉÆÌ¼ÀUÁV ¸ÁªÀ£ÀߦàzÀPÁÌV ªÉÆA§wÛ ¨É¼ÀV¹ 
             ±ÀæzÁÝAf° C¦ð¸À¯Á¬ÄvÀÄ. F ¸ÀAzÀ¨sÀðzÀ°è C¨sÁ«¥À vÁ.¥ÀæªÀÄÄSï 
            ZÉÃvÀ£ï¥Àæ¸Ázï, vÁ.¨sÁd¥À CzsÀåPÀë «Ä°Ö粪ÀtÚ, PÀgÀªÉà CzsÀåPÀë 
            ¹.n.UÀÄgÀĪÀÄÆwð, C¨sÁ«¥À PÁAiÀÄðzÀ²ð ¢°Ã¥ï, «zÁåyðUÀ¼ÀÄ ¨sÁUÀªÀ»¹zÀÝgÀÄ.

           
2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಡಿ.31 : ಚಿಕ್ಕನಾಯಕನಹಳ್ಳಿ ವಿಧಾನಸಭಾಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜೆ.ಡಿ.ಎಸ್ ಪಕ್ಷದ ವತಿಯಿಂದ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯರಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಇದೇ ಜನವರಿ 1ರಂದು ಅಭಿನಂದನೆ ಸಲ್ಲಿಸಲಿದ್ದಾರೆ.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕರಮ ನಡೆಯಲಿದ್ದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪ್ರೇಮ ಮಹಾಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು, ಶಿರಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯರು, ಪುರಸಭಾಧ್ಯಕ್ಷರು, ಪುರಸಭಾ ಸದಸ್ಯರು, ಸಂಘಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

Thursday, December 20, 2012



ಕೈಕೊಟ್ಟ ಪ್ರಿಯತಮನ ಮನೆ ಬಾಗಿಲಿನಲ್ಲಿ ಮಹಿಳೆಯ ಬಿಡಾರ
                                     
ಚಿಕ್ಕನಾಯಕನಹಳ್ಳಿ,ಡಿ.20 : ಮದುವೆಯಾಗಿದ್ದ ಮಹಿಳೆಯನ್ನು ತನ್ನ ಪ್ರೇಮ ಪಾಶಕ್ಕೆ ಸಿಲುಕಿಸಿದ ಯುವಕ 5ತಿಂಗಳ ಕಾಲ ಜೊತೆಯಲ್ಲಿ ಜೀವನ ಮಾಡಿ ನಂತರ ಪ್ರೇಯಸಿಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕುಪ್ಪೂರು ಗ್ರಾಮದಲ್ಲಿ ನಡೆದಿದೆ.
ಕುಪ್ಪೂರು ಗ್ರಾಮದ ಮಹೇಶ್ ಎಂಬ ವ್ಯಕ್ತಿ ಅದೇ ಗ್ರಾಮದ ನಾಗರಾಜುರವರ ಪತ್ನಿ ಮಮತರಾಣಿ ಎಂಬ ಮಹಿಳೆಯನ್ನು ಪ್ರೀತಿಸುತ್ತಿದ್ದೇನೆಂದು ನಂಬಿಸಿ, ಗಂಡನಿಂದ ದೂರವಾಗಿಸಿ ತನ್ನೊಡನೆ ಕಳೆದ 5ತಿಂಗಳ ಹಿಂದೆ ಕರೆದೊಯ್ದು ಬೆಂಗಳೂರು, ತುಮಕೂರಿನಲ್ಲಿ ಒಂದೇ ಮನೆಯಲ್ಲಿ ವಾಸಸಿ, ನಂತರ ತಿಪಟೂರಿನಲ್ಲಿ ಮನೆ ಮಾಡಿರುವುದಾಗಿ ನಂಬಿಸಿ ಕುಪ್ಪೂರು ಮಾರ್ಗವಾಗಿ ತಿಪಟೂರಿಗೆ ಹೋಗೋಣವೆಂದು ನಂಬಿಸಿ ಮಮತಾಳನ್ನು ಕುಪ್ಪೂರಿನಲ್ಲಿ ಬಿಟ್ಟು ಕೈಕೊಟ್ಟಿರುವುದಾಗಿ ಮಮತ ದೂರಿದ್ದಾರೆ. 
ಕುಪ್ಪೂರಿನ ಗ್ರಾಮದವರಾದ ಮಹೇಶ ಮತ್ತು ಮಮತಾ ಇಬ್ಬರು ಮೊದಲಿನಿಂದಲೂ ಪರಿಚಯಸ್ಥರಾಗಿದ್ದು ಮಮತ ನಾಗರಾಜುವಿನೊಂದಿಗೆ ಮದುವೆಯಾಗಿ ಒಂದು ಮಗು ಆದ ನಂತರ ಆರೋಪಿ ಮಹೇಶ ಮಮತಾಳನ್ನು ಪ್ರೇಮಿಸಿರುವುದಾಗಿ ಪುಸುಲಾಯಿಸಿ ಗಂಡ ಮತ್ತು ಮಗುವನ್ನು ಬಿಟ್ಟು ತನ್ನ ಜೊತೆಯಲ್ಲಿ ಸಂಸಾರ ನಡೆಸುವಂತೆ ಒತ್ತಾಯಿಸುತ್ತಿದ್ದರು. ಮಹೇಶನ ಈ ನಡವಳಿಕೆಯನ್ನು ನಂಬಿದ ಮಮತಾ ತನ್ನ ಮಗು ಮತ್ತು ಗಂಡನನ್ನು ಬಿಟ್ಟು ಮಹೇಶನ ಜೊತೆ ಓಡಿ ಹೋಗಿದ್ದಳು. ಈ ಮಧ್ಯೆ ಐದು ತಿಂಗಳ ನಂತರ ಮಹೇಶನ ನಿಜ ಬಣ್ಣ ಬಯಲಾಗಿ,  ತನಗೆ ಮೋಸ ಮಾಡುತ್ತಿರುವುದು ಮಮತನಿಗೆ ಅರಿವಾಗಿ  ಶಾಶ್ವತವಾಗಿ ಒಂದೆಡೆ ನೆಲಸುವಂತೆ ಒತ್ತಾಯಿಸಿದಳು. ಇದರಿಂದ ವಿಚಲಿತನಾದ ಮಹೇಶ ಮಮತಾಗೆ ಇಲ್ಲದ ಸಬೂಬುಗಳನ್ನು ಹೇಳಿ ಕುಪ್ಪೂರಿಗೆ ತಂದು ಬಿಟ್ಟು ಪರಾರಿಯಾಗಿದ್ದಾನೆ.
ಈ ಘಟನೆಯಿಂದ ನೆಲೆ ಇಲ್ಲದಂತಾದ ಮಮತ ಕುಪ್ಪೂರಿನಲ್ಲೇ ಇರುವ ಮಹೇಶನ ಮನೆಯ ಬಾಗಿಲಿನಲ್ಲೇ ಬಿಡಾರ ಹೂಡಿದ್ದಾಳೆ.

ಆರಂಭವಾದ ಮುಕ್ತಿಗಾಗಿ ಒಂದು ಲಕ್ಷ ಮೃಣ್ಮಯ(ಹುತ್ತದ ಮಣ್ಣಿನ) ಪೂಜೆ
                                         



                                       
            
ಚಿಕ್ಕನಾಯಕನಹಳ್ಳಿ,ಡಿ.19 : ಕುಪ್ಪೂರಿನ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರಳಯ ಬೀತಿಯ ಮುಕ್ತಿಗಾಗಿ ಒಂದು ಲಕ್ಷ ಮೃಣ್ಮಯ(ಹುತ್ತದ ಮಣ್ಣಿನ) ಪೂಜೆಯನ್ನು ಪೀಠಧ್ಯಕ್ಷರಾದ ಡಾ.ಯತೀಶ್ವರ ಶೀವಾಚಾರ್ಯಸ್ವಾಮಿ ಆರಂಭಿಸಿದರು. 
ಮಠದಲ್ಲಿ ಶ್ರೀ ಮರುಳಸಿದ್ದೇಶ್ವರರಿಗೆ ವಿಶೇಷ ಪೂಜೆಯೊಂದಿಗೆ ಹೋಮ, ಹವನ ನೆರವೇರಿಸಲಾಯಿತು.. ಬೆಳಗ್ಗೆ ಮರುಳಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಕ್ಷಿರಾಭಿಷೇಕ, ಸಹಸ್ರಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು.
ನಂತರ ಮೃಣ್ಮಯ(ಹುತ್ತದ ಮಣ್ಣಿನ) ಶಿವಲಿಂಗಗಳಿಗೆ-ಲಕ್ಷ ಬಿಲ್ವಾರ್ಚನೆ, ಶತರುದ್ರಯಾಗ ಮತ್ತು ಶಿವಪಂಚಾಕ್ಷರಿ ಜಪಯಜ್ಞವು  ನೆರವೇರಿತು.
ಈ ಶಾಸಕ ಸಿ.ಬಿ.ಸುರೇಶ್ಬಾಬು ಹಾಗೂ ಭಕ್ತಾಧಿಗಳು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. 

ಉಚಿತ ಮಧುಮೇಹ(ಡಯಾಬಿಟಿಸ್) ರೋಗ ತಪಾಸಣೆ, ಚಿಕಿತ್ಸೆ ಮತ್ತು ಸಂವಾದ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.19 : ಉಚಿತ ಮಧುಮೇಹ(ಡಯಾಬಿಟಿಸ್) ರೋಗ ತಪಾಸಣೆ, ಚಿಕಿತ್ಸೆ ಮತ್ತು ಸಂವಾದ ಶಿಬಿರ, ಸೀಳುತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಹಾಗೂ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಇದೇ 23ರ ಭಾನುವಾರ ಏರ್ಪಡಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.
ಶಿಬಿರವನ್ನು ರೋಟರಿ ಹಾಗೂ ಸಕರ್ಾರಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ರೋಟರಿ ಬಾಲಭವನದಲ್ಲಿ ಬೆಳಗ್ಗೆ 8ಕ್ಕೆ ಹಮ್ಮಿಕೊಂಡಿದ್ದು ಡಯಾಬಿಟಿಸ್ ರೋಗತಜ್ಞರಾದ ಬೆಂಗಳೂರಿನ ಡಾ.ಪುಟ್ಟಶಂಕರಪ್ಪ, ಮೈಸೂರಿನ ಸಿ.ಎಚ್.ಲಕ್ಷ್ಮೀನಾರಾಯಣ ಮತ್ತು ತುಮಕೂರು ಸಿದ್ದಾರ್ಥ ಮೆಡಿಕಲ್ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಬಿ.ಗಿರೀಶ್ರವರಿಂದ ತಪಾಸಣೆ ಏರ್ಪಡಿಸಲಾಗಿದೆ.
ಉಚಿತ ಹೃದಯರೋಗ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನು ಇದೇ 23ರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.
ಬ್ರಹ್ಮವಿದ್ಯಾಸಮಾಜದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಬಿ.ಪಿ, ಇಸಿಜಿ, ಇಸಿಎಚ್ಓ ಸ್ಕ್ಯಾನಿಂಗ್ಗಳನ್ನು ಅಗತ್ಯವಿದ್ದವರಿಗೆ ಉಚಿತವಾಗಿ ನಡೆಸಲಾಗುವುದು. 

ಸಮಗ್ರ ಕೃಷಿ ಕ್ಷೇತ್ರೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.20 : ಉಚಿತ ಬೀಜ, ಗೊಬ್ಬರದ ನೆರವು ನೀಡುವುದರ ಜೊತೆಗೆ ಮಾರುಕಟ್ಟೆ ಬಗ್ಗೆ ತರಬೇತಿ ನೀಡುವುರದ ಮೂಲಕ, ಪರಿಷ್ಕರಣೆಗೆ ಅಗತ್ಯವಾದ ಯಂತ್ರೋಪಕರಣ ಒದಗಿಸಿ ಕೊಡುವ ಪ್ರಯತ್ನ ಮಾಡಿದರೆ, ರೈತ ಬೆಳೆಯುವುದನ್ನು ಹೆಚ್ಚಿಸುತ್ತಾನೆ ಎಂದು ಕೃಷಿ ಸಲಹಾ ಸೇವೆಯ ಯೋಜನಾ ಸಂಯೋಜಕ ಜಿ.ಕೆ.ವಿ.ಕೆ. ಬೆಂಗಳೂರಿನ ಡಾ ಈಶ್ವರಪ್ಪ ಕರೆ ನೀಡಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಕೃಷಿ ಸಲಹಾ ಸೇವೆ ವತಿಯಿಂದ ನಡೆದ ಹಾರಕ ಮತ್ತು ಸಮಗ್ರ ಕೃಷಿ ಕ್ಷೇತ್ರೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕಡಿಮೆ ನೀರುಬಳಸಿ ಬೆಳೆಯಬಹುದಾದಂತಹ ಹಾರಕ ಬೆಳೆಯನ್ನು ಗೋಪಾಲನಹಳ್ಳಿಯ 20 ಯುವಕರು 25 ಎಕರೆ ಪ್ರದೇಶದಲ್ಲಿ ಬೆಳೆದಿದ್ದು ಇವರಿಗೆ ಆತ್ಮಸ್ಥೈರ್ಯ ನೀಡುವಲ್ಲಿ ಎಲ್ಲರು ಮುಂದಾಗಬೇಕು ಎಂದರು.
ಜೆಕೆವಿಕೆ ಸಮಾಲೋಚಕ ಡಾ.ಯಲ್ಲಪ್ಪ ಮಾತನಾಡಿ ಗೋಪಾಲನಹಳ್ಳಿ ಯುವಕರ ಉತ್ಸಾಹ ಮೆಚ್ಚತಕ್ಕಂತದ್ದು. ಇತರೆ ಹಳ್ಳಿಗಳೂ ಇದರ ಸದುಪಯೋಗ ಪಡಿಸಿಕೊಂಡು ಕಣ್ಮರೆಯಾಗುತ್ತಿರುವ ಕಿರುಧಾನ್ಯಗಳನ್ನು ಉಳಿಸೋಣ ಎಂದರು. 
ಸಹ ಸಂಶೋಧನಾ ನಿದರ್ೇಶಕರಾದ ಡಾ. ನೂತನ್ ಮಾತನಾಡಿ ಹಾರಕ ಪರಿಷ್ಕರಣೆ ಕಷ್ಟ ಆದರೂ ಅಗತ್ಯ ಯಂತ್ರೋಪಕರಣಗಳು ಸೇಲಂನಲ್ಲಿ ಲಭ್ಯವಿದ್ದು ನಮ್ಮಲ್ಲಿಯೂ ಈ ಯಂತ್ರಗಳ ಆಗಮನವಾದರೆ ಬೆಳೆಯುವವರ ಸಂಖ್ಯೆ ಹೆಚ್ಚಿ ತಿನ್ನುವವರ ಸಂಖ್ಯೆಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದರು.
ಹಾಸನ ಎಫ್. ಎಮ್. ರೇಡಿಯೋದ ಕೃಷಿ ಕಾರ್ಯಕ್ರಮಗಳ ನಿರೂಪಕರಾದ, ಬರಹಕಾರ ಡಾ.ವಿಜಯ ಅಂಗಡಿಯವರು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದು. ಬಳಸುವುದು ಹೆಚ್ಚಾದಾಗ ಉತ್ತಮ ಆರೋಗ್ಯವಿರುವ ಸಾಧ್ಯ ರೈತರು ದುಶ್ಟಟಗಳಿಂದ ದೂರವಾಗಿ ಸಮಗ್ರ ಕೃಷಿ ಮೂಲಕ ಮಿತವ್ಯಯದಲ್ಲಿ ಸುಖಜೀವನ ನಡೆಸಬಹಹುದು ಎಂದ ಅವರು ನಾವು ತಿನ್ನುವುದಕ್ಕಿಂತ ಏನನ್ನು ತಿನ್ನುತ್ತೇವೆ ಎನ್ನುವುದು ಮುಖ್ಯ ಆ ನಿಟ್ಟಿನಲ್ಲಿ ಗೋಪಾಲನಹಳ್ಳಿ ಜನತೆ ಇತರೆ ಹಳ್ಳಿಗಳಿಗೆ ಮಾದರಿ ಈ ಕರುಧಾನ್ಯ ಹಾರಕ ರಾಜ್ಯದಾದ್ಯಂತ ವಿಸ್ತರಿಸಿದರೆ ಮದುವೇಹದಂತಹ ರೋಗ ಹತೋಟಿಗೆ ಬರುತ್ತದೆ. ಎಂದರು.  
ಜಿ.ಕೆ.ಯು.ಕೆಯ ಪ್ರೊ.ಕೃಷ್ಣಪ್ಪ ಮಾತನಾಡಿ 3000 ವರ್ಷಗಳ ಇತಿಹಾಸವಿರುವ                                                                         ಈ ಹಾರಕ ಮರಳಿ ಬೆಳೆಯಲು  ಹೆಚ್ಚುತ್ತಿರುವ ರೋಗಗಳೂ ಕಾರಣವಾಗಿದ್ದು, ಈ ರೋಗಗಳ ನಿಯಂತ್ರಣಕ್ಕೆ ಕಿರುಧಾನ್ಯ  ಸೇವನೆ ಸಹಕಾರಿ ಎಂದರು. ಜಿ.ಕೆ. ರಘು ಹಾರಕ ಬೆಳೆದವರ  ಮುಂದಿನ ಉದ್ದೇಶವನ್ನು  ಹಂಚಿಕೊಂಡರು. ಜಿಕೆ.ವಿ.ಕೆ ಯ ಡಾ  ಮಮತರವರು ಹಾರಕದಿಂದ ವಿವಿಧ ತಿನಿಸುಗಳಾದ ರೋಟ್ಟಿ, ದೋಸೆ, ಇಡ್ಲಿ. ಮೊಸರನ್ನ, ಚಿತ್ನಾನ, ಪಲಾವು ಹೀಗೆ ವೈವಿದ್ಯಮಯವಾದ ತಿನಿಸುಗಳನ್ನು ಹೇಗೆ ಮಾಡಬಹುದೆಂದು ಮಾಹಿತಿನೀಡಿದರು. 
ಕಾರ್ಯಕ್ರಮದಲ್ಲಿ ತಿಪಟೂರಿನ ಗುರುಕುಲ ಸಿ.ಇ.ಒ ಹರಿಪ್ರಸಾದ್, ಸಹಾಯಕ ಕೃಷಿ ನಿದರ್ೇಶಕರಾದ (ಎ.ಡಿ.ಎ.) ಕೃಷ್ಣಪ್ಪ,  ಶಿವಣ್ಣ, ನಾಗರಾಜು,ಎನ್. ಸಿ. ತುಮಕೂರು. ಅಶೋಕ್ಕುಮಾರ್. ಜೆ.ಎಸ್.ವೈ.ಎಸ್. ಸಿ.ಎನ್.ಹಳ್ಳಿ ಭಾಗವಹಿಸಿದ್ದರು.  
ಸಮಗ್ರ ಕೃಷಿಯ ಪ್ರಯೋಜನಪಡೆದ ರೈತ ನಿರಂಜನವರು ಬೆಳೆದ ಟಮೋಟ, ಬೆಂಡೆ. ಬದನೆ, ಮೆಣಸಿನಗಿಡ. ವೀಕ್ಷಿಸಿದ ರೈತರು ಹಸು. ಕುರಿ. ಕೋಳಿ ಮೊಲ ಎರೆಹುಳು ತೊಟ್ಟಿ ವೀಕ್ಷಿಸಿದರು. ನಿರಂಜನ್ರವರು ಸ್ಪರಚಿತ ಭಜನೆ ಹಾಡಿದರು. ಈ ಕ್ಷೇತ್ತೋತ್ಪವದ ಆಕರ್ಷಣೆ ಜಿ.ಬಿ. ಆತ್ಮಾನಂದರವರ ಚಿತ್ರಕಲಾ ಕುಟೀರ ನೋಡುಗರ ಮನಸೆಳೆಯಿತು.
ಡಾ. ಸೋಮಶೇಖರ್. ವಂದಿಸಿದರು. ನಿರಂಜನ್. ಸಮಗ್ರ ಕೃಷಿಯ ಬಗ್ಗೆ ಭಜನೆ ಮೂಲಕ ನಿರೂಪಿಸಿದರು. ಡಾ. ಗೋಪಿನಾಥ್. ನಿರೂಪಿಸಿ ಸ್ವಾಗತಿಸಿದರು. ಪೂಜಾ, ಸ್ವಾತಿ. ಪ್ರಾಥರ್ಿಸಿದರು.

ಹೊಲಿಗೆ ಯಂತ್ರದಲ್ಲಿ ಅವ್ಯವಹಾರ, ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಆರೋಪ
ಚಿಕ್ಕನಾಯಕನಹಳ್ಳಿ,ಡಿ.20 :  ಪರಿಶಿಷ್ಟ ಜಾತಿ-ಪಂಗಡದ ಶೇ.22ರ ಅನುದಾನದಡಿ ಪುರಸಭೆ ಖರೀದಿಸಿರುವ ಹೊಲಿಗೆಯಂತ್ರದಲ್ಲಿ ಅವ್ಯವಹಾರ ನಡೆದಿದೆ ಎ ಂದು ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಆರೋಪಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ  ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು 3000 ಬೆಲೆಬಾಳುವ ಹೊಲಿಗೆಯಂತ್ರವನ್ನು 6950 ರೂ.ಮೊತ್ತದ ಅಧಿಕ ಬೆಲೆಗೆ ಖರೀದಿಸಿದ್ದು, 6.5 ಲಕ್ಷ ರೂ. ಬಿಲ್ ಪಾವತಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿಗಳು ತಾತ್ಕಾಲಿಕ ತಡೆ ನೀಡಿ ಹೊಲೆಗೆಯಂತ್ರ, ಪಾವತಿಸಿರುವ ಬಿಲ್ ಅನ್ನು ಪರಿಶೀಲಿಸಿ ನಂತರ ವಿತರಿಸಲು ಸೂಚಿಸಿದ್ದಾರೆ. ಆದರೆ ಹಾಲಿ ಖರೀದಿಸಿರುವ ಹೊಲಿಗೆಯಂತ್ರಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ದೂರಿದರು.
ಸದಸ್ಯ ಮಹೇಶ್ ಮಾತನಾಡಿ ಪಟ್ಟಣದ ವೆಂಕಣ್ಣನ ಕಟ್ಟೆಯಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ನಿಮರ್ಿಸಲು  ಭೂ ಸೇನಾ ನಿಗಮಕ್ಕೆ ಗುತ್ತಿಗೆ ನೀಡಲಾಗಿದ್ದು, ಕಳೆದ ಎರಡು ವರ್ಷಗಳಿಂದ ಉದ್ಯಾನವನ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿದೆ ಎಂದುಆರೋಪಿಸಿದರು.
  ಮಟನ್ ಮಾಕರ್ೆಟ್ನಲ್ಲಿ ಮೂರು ವರ್ಷಗಳ ಹಿಂದೆ 8 ಮಳಿಗೆಗಳನ್ನು ನಿಮರ್ಿಸಿದ್ದು, ಮಳಿಗೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ. ಈ ಕಾರಣದಿಂದ ಯಾರು ಬಾಡಿಗೆಗೆ ಬರುತ್ತಿಲ್ಲ. ಸೌಲಭ್ಯ ಕಲ್ಪಿಸಲು ವಿಫಲರಾದ ಎಂಜನಿಯರ್ ಅವರಿಂದ ಬಾಡಿಗೆ ವಸೂಲು ಮಾಡುವಂತೆ ಸದಸ್ಯ ಮಹೇಶ್ ಆಗ್ರಹಿಸಿದರು.
ಸದಸ್ಯ ಸಿ.ಎಲ್ ದೊಡ್ಡಯ್ಯ ಪಟ್ಟಣದ 19ನೇ ವಾಡರ್ಿನಲ್ಲಿ 7.5 ಲಕ್ಷ ರೂ. ವೆಚ್ಚದಲ್ಲಿ ನಿಮರ್ಿಸಿರುವ ಶೌಚಾಲಯ ಇದುವರೆಗೂ ಉದ್ಘಾಟನೆಯಾಗದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಉಪಯೋಗಕ್ಕೆ ಶೌಚಾಲಯ ಬೇಡವೇ ಎಂದು ಪ್ರಶ್ನಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಐಡಿಎಸ್ಎಂಟಿ ಹಾಗೂ ಪುರಸಭೆ ವತಿಯಿಂದ ನಿಮರ್ಿಸಿರುವ ಮಳಿಗೆಗಳನ್ನು ಹರಾಜಿನಲ್ಲಿ  ಕೂಗಿ ತೆಗೆದುಕೊಂಡವರು ಹೆಚ್ಚಿನ ಬಾಡಿಗೆ ಹಾಗೂ ಗುಡ್ವಿಲ್ ಪಡೆದು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯ ಸಿ.ಡಿ.ಚಂದ್ರಶೇಖರ್ ಒತ್ತಾಯಿಸಿದರು.
ಪುರಸಭಾಧ್ಯಕ್ಷರು ವಾಡರ್್ಗಳಿಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ. ಇದರಿಂದ ಕಸವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ ಪ್ರತಿ ದಿನ ಮಂಜಾನೆ 5ಕ್ಕೆ ಪುರಸಭೆ ಬಳಿ ಬಂದು ಕಸಗುಡಿಸುವವರನ್ನು ವಾಡರ್್ಗಳಿಗೆ ಕಳುಹಿಸುತ್ತಿರುವುದಾಗಿ ಸಮಜಾಯಿಷಿ ನೀಡಿದರು.ಕಸಗುಡಿಸುವ ಆಟೋಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಕಸವಿಲೇವಾರಿ ವಾಹನಗಳಿಂದಾಗಿ ಪಟ್ಟಣದ ಎಲ್ಲಂದರಲ್ಲಿ ಕಸದ ರಾಶಿಗಳು ಬಿದ್ದಿವೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ಪುಟ್ಟಣ್ಣ ಮುಖ್ಯಾಧಿಕಾರಿ  ವೆಂಕಟೇಶ್ ಶೆಟ್ಟಿ, ರಂಗಸ್ವಾಮಯ್ಯ, ಸಿಎಲ್.ದೊಡ್ಡಯ್ಯ, ಸಿ.ಎಸ್.ರಮೇಶ್, ಮಿಲಿಟರಿ ಶಿವಣ್ಣ, ರುಕ್ಮಿಣಮ್ಮ , ಶಾರದಮ್ಮ, ಸಿ.ಎಸ್.ರಾಜಣ್ಣ, ಎಂ.ಎನ್.ಸುರೇಶ್ ಮತ್ತಿತರ ಸದಸ್ಯರು ಹಾಗೂ ಅಧಿಕಾರಿವರ್ಗದವರು ಹಾಜರಿದ್ದರು.


ಹುರುಳಿ ಬೆಳೆಗೆ ಬೆಳೆ ವಿಮೆ ಮಾಡಿಸಲು ಅವಕಾಶ
ಚಿಕ್ಕನಾಯಕನಹಳ್ಳಿ,ಡಿ.20 : ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಿಂಗಾಮಿಗೆ ಕಸಬಾ, ಹುಳಿಯಾರು ,ಮತ್ತು ಹಂದನಕೆರೆ ಹೋಬಳಿಗಳಲ್ಲಿ ಹುರುಳಿ ಬೆಳೆಗೆ ಬೆಳೆ ವಿಮೆ ಮಾಡಿಸಲು ಅವಕಾಶವಿರುತ್ತದೆ ಎಂದು ಸಹಾಯಕ ಕೃಷಿ ನಿದರ್ೇಶಕರು ತಿಳಿಸಿದ್ದಾರೆ.
 ಬೇಸಿಗೆ ಹಂಗಾಮಿಗೆ  ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯಿತಿ ಮತ್ತು ಹೋಯ್ಸಲಕಟ್ಟೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತದ ಬೆಳೆಗೆ ಬೆಳೆವಿಮೆ ಮಾಡಿಸಲು  ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Friday, December 14, 2012



ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಪ್ರತಿಭಾ ಕಾರಂಜಿ  ಕಾರ್ಯಕ್ರಮ ಉತ್ತಮ ವೇದಿಕೆ
                             
ಚಿಕ್ಕನಾಯಕನಹಳ್ಳಿ,ಡಿ.14 : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಶಿಕ್ಷಣ ಇಲಾಖೆ ಆಯೋಜಿಸಿರುವ ಪ್ರತಿಭಾ ಕಾರಂಜಿ ಸ್ಪಧರ್ಾ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದ್ದು, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ  ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ತಾಲ್ಲೂಕು ಮಟ್ದದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತಾರತಮ್ಯ ಮಾಡದಂತೆ ತೀಪರ್ುಗಾರರು ಉತ್ತಮ ರೀತಿಯ ಫಲಿತಾಂಶ ನೀಡಬೇಕು ಎಂದರು. ಈ ತಾಲ್ಲೂಕು ಮಟ್ಟದ ಕಾರ್ಯಕ್ರಮದಲ್ಲಿ ಯಶಸ್ವಿಯಾಗುವ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ರೀತಿಯ ಪ್ರದರ್ಶನ ನೀಡುವಂತೆ ಹೆಚ್ಚಿನ ತರಬೇತಿಯನ್ನು ಶಿಕ್ಷಕರು ನೀಡಬೇಕೆಂದರು.
 ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ  ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ, ಆ ಪ್ರತಿಭೆ ಹೊರ ತರಲು ಶಿಕ್ಷಕರೊಂದಿಗೆ ಪೋಷಕರು ಮುಂದಾಗಬೇಕು ಎಂದರು.
ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ ಮಾತನಾಡಿ ಮಕ್ಕಳು ಓದುವುದರ ಜೊತೆಗೆ ಇತರೆ ಸ್ಪಧರ್ೆಗಳಲ್ಲಿ ಭಾಗವಹಿಸುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಾಯವಾಗಲಿದೆ ಎಂದರಲ್ಲದೆ, ಹೋಬಳಿ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು ಮುಂದಿನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವಂತೆ ಮಕ್ಕಳಿಗೆ ಹಾರೈಸಿದರು.
 ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಸಕರ್ಾರ ಹಮ್ಮಿಕೊಂಡಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಪಠ್ಯೇತರ ಪಾಠದೊಂದಿಗೆ ಸಾಹಿತ್ಯ, ಕಲೆ, ಕ್ರೀಡೆ ಇತ್ಯಾದಿ ಸ್ಪಧರ್ಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸ ಬೇಕು  ಎಂದರು.
ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯೂ ತಾಲ್ಲೂಕಿನಲ್ಲಿ ನಡೆಯಬೇಕು ಅದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಸಮಾರಂಭದಲ್ಲಿ ತಾ.ಪ್ರೌ.ಶಾ.ಮು.ಶ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ,  ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಡಿ.ನಾಗರಾಜು, ಕಾರ್ಯದಶರ್ಿ ರಾಜಶೇಖರ್, ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ತಾ.ಪ್ರತಿಭಾ ಕಾರಂಜಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಮೂತರ್ಿ, ಮುಂತಾದವರಿದ್ದರು.


ಕಂದಿಕೆರೆ ಸಾಹಿತ್ಯ ಸಮ್ಮೇಳನದಲ್ಲಿ ಅಸ್ಪೃಶ್ಯತೆ ಆಚರಣೆ: ಕಪ್ಪುಬಾವುಟ ಪ್ರದರ್ಶನ ಆರೋಪ
ಚಿಕ್ಕನಾಯಕನಹಳ್ಳಿ,ಡಿ.14 : ಕಂದಿಕೆರೆಯಲ್ಲಿ ನಡೆಯುತ್ತಿರುವ ಹೋಬಳಿ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದ ಸಂಘಟಕರು ಅಸೃಶ್ಯತೆ ಆಚರಣೆ ಮಾಡುತ್ತಿದ್ದಾರೆಂದು ಆರೋಪಿಸಿ ಸಮ್ಮೇಳನದಲ್ಲಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಸುವುದಾಗಿ ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಸಾದರಹಳ್ಳಿ ಜಯಣ್ಣ ಆರೋಪಿಸಿದ್ದಾರೆ.
ತಾಲ್ಲೂಕು ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಹಾಗೂ ಮಾದಿಗ ದಂಡೋರ ಸಮಿತಿಯ ಮುಖಂಡನಾದ ನನ್ನನ್ನು ಉದ್ದೇಶ ಪೂರ್ವಕವಾಗಿ ಸಮ್ಮೇಳನಕ್ಕೆ ಆಹ್ವಾನಿಸದೆ ಅಸ್ಪೃಶ್ಯತೆ  ಆಚರಿಸುತ್ತಿದ್ದಾರೆ ಎಂದರಲ್ಲದೆ ನಮ್ಮ ಪಂಚಾಯ್ತಿಯ ಉಳಿದ ಎಲ್ಲರನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಪತ್ರಿಕೆಗೆ ಹೆಸರು ಹಾಕಿಸಿದ್ದಾರೆ ನಾನು ಅಸ್ಪೃಶ್ಯ ಎಂಬ ಕಾರಣಕ್ಕೆ ನನ್ನ ಹೆಸರನ್ನು ಸಮ್ಮೇಳನದ ಆಹ್ವಾನ ಪತ್ರಿಕೆಗೆ ಹಾಕಿಸಿಲ್ಲ ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುತ್ತಿರುವುದಲ್ಲದೆ ಸಮ್ಮೇಳನದ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದಶರ್ಿಸಿ ಪ್ರತಿಭಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, December 13, 2012


ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಸಂಚಾರಿ ವಾಹನ
                           
ಚಿಕ್ಕನಾಯಕನಹಳ್ಳಿ,ಡಿ.13 : ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಮೂರು ದಿನಗಳ ವರೆಗೆ ಸಂಚಾರಿ ವಾಹನ ಸೌಲಭ್ಯವನ್ನು ಒದಗಿಸಿಕೊಡುವ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಚಾಲನೆ ನೀಡಿತು.
ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು. 
ತಾಲ್ಲೂಕಿನ ವ್ಯಾಪ್ತಿಯಲ್ಲಿನ ಸಮಾರು 30 ಸ್ತ್ರೀಶಕ್ತಿ ಗುಂಪಿನ ಸದಸ್ಯರು ಸ್ವತಃ ತಾವೇ ತಯಾರಿಸಿದ ದೀಪದ ಬತ್ತಿ, ಅಕ್ಕಿ ಹಪ್ಪಳ, ಕಾಳು ಹಪ್ಪಳ, ರಾಗಿ ಮಾಲ್ಟ್, ಸಿಹಿತಿಂಡಿ, ಸಾಂಬಾರ ಪುಡಿ ಮತ್ತು ಖಾರದ ಪುಡಿ, ಮೇಣದ ಬತ್ತಿ, ಊಟದ ಎಲೆ ಹಾಗೂ ವಿಶೇಷವಾಗಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಯಾರಿಸಿ ಬೆಣ್ಣೆ ಉತ್ಪನ್ನಗಳನ್ನು ಒಳಗೊಂಡು ಸುಮಾರು ಹತ್ತು ಸಾವಿರ ಬೆಲೆ ಬಾಳುವ ವಸ್ತುಗಳನ್ನು ಸಂಚಾರಿ ಮಾರುಕಟ್ಟೆ ವಾಹನದಲ್ಲಿ ಮಾರಾಟಕ್ಕಾಗಿ ಕಛೇರಿಗೆ ವಸ್ತುಗಳನ್ನು ತಂದು ಒಪ್ಪಿಸಿರುವುದು ಶ್ಲಾಘನೀಯ ಎಂದು ಅಧಿಕಾರಿ ಅನೀಸ್ಖೈಸರ್ ತಿಳಿಸಿದರು. ಇದೇ ರೀತಿ ಇನ್ನು ಮುಂದೆ ಹೆಚ್ಚಿನ ಸಂಘಗಳು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಆಥರ್ಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ  ಹಾಗೂ ಒಕ್ಕೂಟದ ಕಾರ್ಯದಶರ್ಿ ಜಿ.ಈ.ಪರ್ವತಯ್ಯ ಮಾತನಾಡಿ ಮೂರು ದಿವಸಗಳಲ್ಲಿ ವಿವಿಧ ಸ್ಥಳಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ವಸ್ತುಗಳನ್ನು ಸಂಚಾರಿ ಮಾರುಕಟ್ಟೆ ವಾಹನದಲ್ಲಿ ಮಾರಾಟಕ್ಕಾಗಿ ವಾಹನ ಸೌಲಭ್ಯವನ್ನು ಒದಗಿಸಿದ್ದು ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು  ಇದೇ ಡಿಸೆಂಬರ್ 14ರ ಶುಕ್ರವಾರದಂದು ದುಗಡಿಹಳ್ಳಿ, ಶೆಟ್ಟಿಕೆರೆ, ಮಾದಿಹಳ್ಳಿ, ಮತಿಘಟ್ಟದಲ್ಲಿ ಮತ್ತು 15ರ ಶನಿವಾರ ತಿಮ್ಮನಹಳ್ಳಿ, ಕಂದಿಕೆರೆ, ಬರಗೂರು, ಹಂದನಕೆರೆ, ಕುಪ್ಪೂರಿನಲ್ಲಿ ಸಂಚಾರಿ ಮಾರುಕಟ್ಟೆ ನಡೆಯಲಿದೆ ಎಂದರು. 
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ.ಈ.ಪರ್ವತಯ್ಯ, ಪರಮೇಶ್ವರಪ್ಪ, ವಿವಿಧ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಪ್ರತಿನಿಧಿಗಳು  ಉಪಸ್ಥಿತರಿದ್ದರು.
ಕಂದಿಕೆರೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಡಿ.13 : ಕಂದಿಕೆರೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ 15ರ ಶನಿವಾರ ಕಂದಿಕೆರೆಯ ಶ್ರೀ ಗಣಪತಿ ಜ್ಞಾನವಾಹಿತಿ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಸಮ್ಮೇಳನದ ಧ್ವಜಾರೋಹಣವು ಬೆಳಗ್ಗೆ 7-45ಕ್ಕೆ ನಡೆಯಲಿದ್ದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ರಾಷ್ಟ್ರಧ್ವಜ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಪರಿಷತ್ ಧ್ವಜ, ತಾ.ಪಂ.ಸದಸ್ಯೆ ಉಮಾದೇವಿರಾಜ್ಕುಮಾರ್ ಕನ್ನಡಧ್ವಜ ಹಾರಿಸಲಿದ್ದಾರೆ. ಬೆಳಗ್ಗೆ 8-30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದ ರಾಜ ಬೀದಿಗಳಲ್ಲಿ ಜಾನಪದ ಕಲಾ ತಂಡಗಳು ಹಾಗೂ ವಾದ್ಯಗಳೊಂದಿಗೆ ನಡೆಯಲಿದ್ದು ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮೆರವಣಿಗೆ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9-30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು  ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರಾ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಮಾಜಿ ಶಾಸಕ ಬಿ.ಲಕ್ಕಪ್ಪ, ತಿಪಟೂರು ತಹಶೀಲ್ದಾರ್ ವಿಜಯ್ಕುಮಾರ್, ಸಮಾಜ ಸೇವಕ ರೇವಣ್ಣ ಒಡೆಯರ್ ಆಗಮಿಸಲಿದ್ದು ಸಮ್ಮೇಳನಾಧ್ಯಕ್ಷ ಕೆ.ಎಂ.ನಂಜಪ್ಪ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
ಗೋಷ್ಠಿ : ಮಧ್ಯಾಹ್ನ 2.30ರಿಂದ 5ರವರೆಗೆ ಸಮ್ಮೇಳನದಲ್ಲಿ ಗೋಷ್ಠಿ ನಡೆಯಲಿದ್ದು ಸ.ಪ್ರ.ದ.ಕಾ ಅಧ್ಯಾಪಕ ತಿಮ್ಮನಹಳ್ಳಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಲಿದ್ದು ಗ್ರಾ.ಪಂ.ಅಧ್ಯಕ್ಷೆ ಟಿ.ಎಸ್.ಲಕ್ಷ್ಮೀದೇವಮ್ಮ ಉದ್ಘಾಟನೆ ನೆರವೇರಿಸಲಿದ್ದಾರೆ. ಗೋಷ್ಠಿಯಲ್ಲಿ ವಿಷಯ 1: ಕವಿ ಜೈಶಂಕರ್ ಗಣೇಶ್ ಕಂದಿಕೆರೆ ಸಾಂಸ್ಕೃತಿ ಅವಲೋಕನ, ಉಪನ್ಯಾಸಕರಾಗಿ ಡಾ.ಮಹೇಶ್ ಶ್ರೀ ಮುಡಲಗಿರಿಯಪ್ಪ, ವಿಷಯ 2: ಗ್ರ್ರಾಮೀಣ ಕೃಷಿ ಮತ್ತು ಆಥರ್ಿಕತೆ, ಉಪನ್ಯಾಸಕರಾಗಿ ತಿಪಟೂರು ತಾ.ಕಸಾಪ ಅಧ್ಯಕ್ಷ ಉಜ್ಜಜ್ಜಿರಾಜಣ್ಣ, ಕವಿ ಸಮಯ ಕೆ.ಎನ್.ಮಲ್ಲಯ್ಯ, ವಿಷಯ 3 : ವಚನ ಸಾಹಿತ್ಯದಲ್ಲಿ ಬಂಡಾಯ ಉಪನ್ಯಾಸಕರಾಗಿ ಅಧ್ಯಾಪಕ ಡಾ.ಶಿವಣ್ಣ ಭಾಗವಹಿಸಲಿದ್ದಾರೆ.



Sunday, December 9, 2012


ಮೇಲ್ಜಾತಿ ಕೆಳಜಾತಿಗಳ ಅಂತರ ಹೆಚ್ಚುತ್ತಿದೆ, ಇದು ತರವಲ್ಲ:  ಡಾ.ವೀರೇಶಾನಂದ ಸರಸ್ವತಿ

                              
ಚಿಕ್ಕನಾಯಕನಹಳ್ಳಿ,ಡಿ.09 :  ಜಾತಿಯ ಅಭಿಮಾನ ನಮ್ಮನ್ನು ಆಳುವ ಜನ ನಾಯಕರು ಸಹ ಕಟ್ಟಿ ಹಾಕುವತಂಹ ರೀತಿಯಲ್ಲಿ ಬೆಳೆದಿದೆ. ನಾವು ಯಾವಾಗಲು ನಿಂತ ನೀರಾಗಿರದೆ ಹರಿಯುವಂತಾಗಿ ಎಲ್ಲಾರನ್ನು ಸಮಾನ ಮನ ಸ್ಥಿತಿಯಲ್ಲಿ ನೊಡಿದರೆ ದಾಸ ಶ್ರéೇಷ್ಟರಿಗೆ ನಾವುಗಳು ಗೌರವ ಅಪರ್ಿಸಿದಂತಾಗುತ್ತದೆ ಎಂದು ಶ್ರೀ ರಾಮಕೃಷ್ಣ ಮಠದ ಡಾ|| ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು. 
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನಕಜಯಂತಿ ಆಚರಣಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,  ವ್ಯಾಸ ಕೂಟದ ಸಮೂಹಗಳು, ಮಠ ದೇವಾಲಯಗಳ ಮೂಲಕ ಸಂದೇಶ ಸಾರಿದರೆ ಇವೆಲ್ಲವನ್ನು ಮೀರಿ ದಾಸ ಕೂಟಗಳು ಜಾತ್ರೆ ರಥೋತ್ಸವ, ಹಬ್ಬ ಹರಿದಿನಗಳು ಎನ್ನದೇ ಮನೆ ಮನೆ ಬಾಗಿಲಿಗೆ ಮನು ಕುಲವನ್ನು ಜಾಗೃತಗೊಳಿಸುವಂತಹ ಕೆಲಸವನ್ನು ಮಾಡುವ ಮೂಲಕ ದೇವದೂತರಾದವರು. ಇವತ್ತಿನ ದಿನಗಳಲ್ಲಿ ಮೇಲ್ಜಾತಿ ಮತ್ತು ಕೆಳ ಜಾತಿಗಳಲ್ಲಿನ ಅಂತರ ಹೆಚ್ಚು ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಅನುಕೂಲಸ್ಥ ವ್ಯಕ್ತಿಗಳು ಅನಾನುಕೂಲಸ್ಥನಿಗೆ ನೆರವು ನೀಡುವ ಮೂಲಕ ಸಮಾನ ಮನಸ್ಥಿತಿ ಹೋಂದಿರೆ ಮಾತ್ರ ನಾವು ಆಚರಣೆಗೆ ತರುವಂತಹ ಜಂಯಂತ್ಯೋತ್ಸವಗಳಿಗೆ ಅರ್ಥ ದೋರೆಯುತ್ತದೆ ಎಂದರು
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತಿಗಳಿಂದ ಯಾರನ್ನು ಸೀಮಿತಗೊಳಿಸಬಾರದು, ವ್ಯಕ್ತಿಯ ಆದರ್ಶ ಜೀವನದ ಮೂಲಕ ಅವರ ಮಾದರಿ ಅನುಸರಿಸಬೇಕು ಎಂದ ಅವರು ಸಮಾಜ ನಮಗೆ ಏನು ಮಾಡಿತು ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಯಾವ ರೀತಿಯಲ್ಲಿ ನೆರವಾಗಿದ್ದೇವೆ ಎಂಬುದೇ ಉತ್ತಮ ಅಲ್ಲದೆ ಇದರಿಂದ ಸಮಾಜದಲ್ಲಿ ನಾವು ಗುರುತಿಸಿಕೊಳ್ಳಬಹುದು ಎಂದರು. 
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡುತ್ತ ದೇಶದಲ್ಲಿ ಆರು ಸಾವಿರ ಜಾತಿಗಳಿವೆ. 12-15 ನೇ ಶತಮಾನಗಳಲ್ಲಿ ಬಸವಣ್ಣ, ದಾಸಶೇಷ್ಠರು, ವಿವೇಕಾನಂದರು ಶತಮಾನಗಳಿಂದಲು ಮೂಡನಂಬಿಕೆಗಳನ್ನು ದೂರ ಮಾಡಲು ಜಾಗೃತಗೊಳಿಸಿಕೊಂಡು ಬಂದಿದ್ದರು. ಮನುಷ್ಯ ಮನುಷ್ಯರನ್ನು ಸಮಾನ ದೃಷ್ಠಿಯಿಂದ ಕಾಣುವುದು ಇನ್ನು ದೂರ ಉಳಿದಿದೆ ಎಂದರು. 
ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ದಾಸರು ತಮ್ಮ ಕೀರ್ತನೆಯ ಮೂಲಕ ಅನೇಕ  ವಿಚಾರವನ್ನು ಜನಸಾಮಾನ್ಯರಿಗೆ ತಿಳಿಸುತ್ತಾ ಜನರ ಮನದಲ್ಲಿ ನೆಲೆನಿಂತವರು, ಅವರ ಆಧ್ಯ್ಮಾತಿಕ ಚಿಂತನೆ ಎಲ್ಲರಲ್ಲೂ ಮೂಡಬೇಕು ಎಂದರು.
ಇದೇ ಸಂದರ್ಭದಲ್ಲಿ ದೇವರಾಜು ಅಭಿವೃದ್ದಿ ನಿಗಮದ ವತಿಯಿಂದ 106ಜನಕ್ಕೆ ಮೂಲ ಕಸಬುಗಳ ಅಭಿವೃದ್ದಿಗಾಗಿ 106 ಫಲಾನುಭವಿಗಳಿಗೆ 22 ಲಕ್ಷರೂಗಳ ಚೆಕ್ ವಿತರಿಸಲಾಯಿತು.
ಸಮಾರಂಬದಲ್ಲಿ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಜಿ.ಪಂ.ಸದಸ್ಯರಾದ ಲೋಹಿತಬಾಯಿ, ಮಂಜುಳ, ಜಾನಮ್ಮರಾಮಚಂದ್ರಯ್ಯ, ತಾ.ಪಂ. ಸದಸ್ಯೆ ಲತಾ ಕೇಶವಮೂತರ್ಿ, ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ಎಂ.ಎನ್.ಸುರೇಶ್, ರುಕ್ಮಿಣಮ್ಮ, ಸಿ.ಟಿ.ವರದರಾಜು, ಸಿ.ಎಂ.ರಂಗಸ್ವಾಮಯ್ಯ  ಚೇತನಗಂಗಾಧರ್, ಶಾರದಾಶಂಕರ್ ಬಾಬು ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ,  ಸೇರಿದಂತೆ ಹಲವರಿದ್ದರು.
ಪ್ರಾರ್ಥನೆ ಅಂಬಿಕ ಸ್ವಾಗತ ಕಣ್ಣಯ್ಯ ನಿರೂಪಣೆ ಬಸವರಾಜು, ಸುರೇಶ್ ವಂದಿಸಿದರು.

ಪುರಸಭಾ ಸದಸ್ಯ ಮೈನ್ಸ್ ರವಿ ನಿಧನ
ಚಿಕ್ಕನಾಯಕನಹಳ್ಳಿ,ಡಿ.09 : ಪುರಸಭಾ ಸದಸ್ಯ ಮೈನ್ಸ್ ರವಿ(35) ಭಾನುವಾರ ಬೆಳಗ್ಗೆ ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ನಿಧನರಾದರು.
ರವಿ ಪುರಸಭಾ ಉಪಾಧ್ಯಕ್ಷರಾಗಿ, ಟೌನ್ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು 6ತಿಂಗಳಿನಿಂದ ಕಾಮಾಲೆ ರೋಗದಿಂದ ನರಳುತ್ತಿದ್ದರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು  ಅವರ ದಿಬ್ಬದಹಳ್ಳಿಯ ತೋಟದಲ್ಲಿ ನಡೆಯಿತು. 
ಅಂತಿಮ ದರ್ಶನ : ಶಾಸಕ ಸಿ.ಬಿ.ಸುರೇಶ್ಬಾಬು, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಪುರಸಭಾ ಸದಸ್ಯರುಗಳಾದ ದೊರೆಮುದ್ದಯ್ಯ, ರಾಜಣ್ಣ, ಸಿ.ಡಿ.ಚಂದ್ರಶೇಖರ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಕಾಂಗ್ರೆಸ್ ಮುಖಂಡರಾದ ಕ್ಯಾಪ್ಟನ್ ಸೋಮಶೇಖರ್, ಸೀಮೆಎಣ್ಣೆಕೃಷ್ಣಯ್ಯ,  ಕೆ.ಜಿ.ಕೃಷ್ಣೇಗೌಡ, ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

Saturday, December 8, 2012


ಜಿಲ್ಲೆಯಲ್ಲಿ ಪ್ರಥಮ ಶುದ್ದಗಂಗಾ ನೀರಿನ ಘಟಕ ತಾಲ್ಲೂಕಿನ ಶೆಟ್ಟಿಕೆರೆಗೆ

                                 ಚಿಕ್ಕನಾಯಕನಹಳ್ಳಿ,ಡಿ.08 : ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ತಾಲ್ಲೂಕಿನಾದ್ಯಂತ ಸಂಘಗಳನ್ನು ರಚಿಸಿ ಗ್ರಾಮಗಳ ಅಭಿವೃದ್ದಿ ಹಾಗೂ ಸ್ವಚ್ಛತೆಯನ್ನು ಕಾಪಾಡುತ್ತಿದೆ ಈ ನಂಬಿಕೆಯ ಮೇಲೆ ಯೋಜನೆಗೆ ಶುದ್ದಗಂಗಾ ನೀರಿನ ಘಟಕವನ್ನು ಆರಂಭ ಮಾಡಲು ನೆರವು ನೀಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಶುದ್ದ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಜನೆಯು ರಾಜ್ಯಾದ್ಯಂತ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿಗ್ರಾಮಗಳ ಅಭಿವೃದ್ದಿ ಬಗ್ಗೆ ಜಾಗೃತಿ ಮೂಡಿಸುತ್ತಿದೆ, ಇದೇ ರೀತಿ ತಾಲ್ಲೂಕಿನಲ್ಲೂ ಯೋಜನೆ ಆರಂಭವಾದ ಒಂದುವರೆ ವರ್ಷದಲ್ಲಿ ಸುಮಾರು ಮುವತ್ತು ಸಾವಿರಕ್ಕೂ ಹೆಚ್ಚು ಸಂಘದ ಸದಸ್ಯರಾಗಿದ್ದಾರೆ ಎಂದ ಅವರು ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನರಲ್ಲಿನ ವಿಶ್ವಾಸ ಉಳಿಸಿಕೊಂಡಿದೆ, ಜಿಲ್ಲೆಗೆ ಪ್ರಥಮವಾಗಿ ಆರಂಭವಾಗಿರುವ ಶುದಗಂಗಾ ನೀರಿನ ಘಟಕಕ್ಕೆ ಶಾಸಕರ ನಿಧಿಯಿಂದ 3 ಲಕ್ಷ ನೀಡುತ್ತಿರುವುದಾಗಿ ತಿಳಿಸಿದ ಅವರು ಈ ಯೋಜನೆಗೆ ಗ್ರಾಮ ಪಂಚಾಯಿತಿಯಿಂದ 5ಲಕ್ಷರೂ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ವತಿಯಿಂದ  5ಲಕ್ಷ ಭರಿಸುತ್ತಿದ್ದು ಒಟ್ಟು 13 ಲಕ್ಷ ರೂವೆಚ್ಚದಲ್ಲಿ ಘಟಕ ಪ್ರಾರಂಭವಾಗಲಿದೆ ಎಂದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ತಾಲ್ಲೂಕಿನ ಮಾದರಿ ಗ್ರಾಮವನ್ನಾಗಿ ಶೆಟ್ಟಿಕೆರೆ ಮಾಡಬೇಕೆಂಬ ಚಿಂತನೆಯಿದೆ ಅದಕ್ಕೆ ಸಾಕ್ಷಿಯೆಂಬಂತೆ ಶುದ್ದಗಂಗಾ ನೀರಿನ ಘಟಕ ಶೆಟ್ಟಿಕೆರೆ ಹೋಬಳಿಗೆ ಬಂದಿರುವುದ ಸ್ವಾಗತಾರ್ಹವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮೇಲ್ವಿಚಾರಕ ನಾಗರಾಜು ಮಾತನಾಡಿ ಸಂಸ್ಥೆಯು ಸೇವಾ ಮನೋಭಾವದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಶುದ್ದಗಂಗಾ ನೀರಿನ ಘಟಕದಂತೆ ಇತರೆ 40 ರೀತಿಯ ಯೋಜನೆಯ ಪಟ್ಟಿಯಿದೆ, ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮದ ಜನರ ಸಹಾಯ ಅಗತ್ಯವಾಗಿದೆ ಎಂದರಲ್ಲದೆ ಈಗ ಶಂಕುಸ್ಥಾಪನೆಗೊಳ್ಳುತ್ತಿರುವ ಶುದ್ದಗಂಗ ನೀರಿನ  ಘಟಕ ರಾಜ್ಯದಲ್ಲಿ 51ನೇಯದಾಗಿದ್ದು ತುಮಕೂರು ಜಿಲ್ಲೆಯಲ್ಲಿ ಪ್ರಥಮ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರಂಭಿಸಿರುವ ಶುದ್ದಗಂಗಾ ನೀರಿನ ಘಟಕ ಯೋಜನೆಯು ಜಾರಿಗೆ ತರುವುದರ ಜೊತೆಗೆ ಉತ್ತಮವಾಗಿ ನಿರ್ವಹಣೆ ಮಾಡಲಿ ಎಂದು ಆಶಿಸಿದರು. ಸಮಾರಂಭದಲ್ಲಿ ಪಿಡಿಓ ಸಿದ್ದರಾಮಯ್ಯ ಪ್ರಾಸ್ತಾವಿಕ ನುಡಿಳಗನ್ನಾಡಿದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯರಾದ ರಮೇಶ್ಕುಮಾರ್, ಗ್ರಾ.ಪಂ.ಅಧ್ಯಕ್ಷ ಶಶಿಧರ್, ಸಾವಿತ್ರಮ್ಮ, ಲತಾಮಣಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೃಷಿ ಅಧಿಕಾರಿ ನಾಗರಾಜು ನಿರೂಪಿಸಿದರೆ, ಹರ್ಷ ಸ್ವಾಗತಿಸಿದರು.
ಶನೇಶ್ವರಸ್ವಾಮಿಗೆ ರಜತ ಕವ

ಚಿಕ್ಕನಾಯಕನಹಳ್ಳಿ,ಡಿ.08 : ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀ ಗೌರಮ್ಮ ತಾಯಿ ಮತ್ತು ವರಸಿದ್ದಿ ಶನೇಶ್ಚರ ಸ್ವಾಮಿ ದೇವಾಲಯದಲ್ಲಿ ರಜತ ಕವಚ ಧಾರಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಇದೇ 7 ಶುಕ್ರವಾರ ಬನಶಂಕರಿ ದೇವರ ಉತ್ಸವ ಶ್ರೀ ಬನಶಂಕರಿ ಮಹಿಳಾ ಮಂಡಳಿ ಹಾಗೂ ದೇವಾಂಗ ಯುವಕರಿಂದ ಭಜನೆ ನಡೆಯಿತು  ಶನಿವಾರ ಗಣಹೋಮ, ಸುದರ್ಶನ ಹೋಮ, ನವಗ್ರಹ ಹೋಮಗಳು ಸಾಂಗೋಪಾಂಗವಾಗಿ ಜರುಗಿದವು. ವರಸಿದ್ದಿ ಶನೇಶ್ಚರಸ್ವಾಮಿ ಮತ್ತು ಬನಶಂಕರಮ್ಮ ದೇವರುಗಳಿಗೆ ಸುಮಾರು 4.5ಕೆಜಿ ಬೆಳ್ಳಿಯ ರಜತ ಕವಚ, ಡಮರುಗವನ್ನು ಶ್ರೀಮತಿ ಚಂದ್ರಕಲಾ ಶ್ರೀನಿವಾಸಮೂತರ್ಿ(ಪಾರ್ಥ) ಮಕ್ಕಳು, ಸಿ.ಎಲ್ ಚಕ್ಕಣ್ಣ ಪಾರ್ಥ ಮಕ್ಕಳು ಹಾಗೂ ಪಾರ್ಥ ಕುಟುಂಬದವರು ದಾನಿಗಳಾಗಿ ಕಾರ್ಯಕ್ರಮದ ಸೇವೆಯನ್ನು ನೀಡಿದರು. ದೇವಾಂಗ ಸಂಘದ ಅಧ್ಯಕ್ಷರು ಕಾರ್ಯಕಾರಿ ಮಂಡಳಿ ಸೇವಾಕರ್ತರು ಒಳಗೊಂಡು ಪೂಜಾ ಕೈಂಕರ್ಯದ ಹೋಮಕ್ಕೆ ಪೂಣರ್ಾಹುತಿ ಅಪರ್ಿಸಿದರು.

Tuesday, December 4, 2012


ಸಂಸ್ಕೃತಿ ಕಾಣಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾದ್ಯ  : ಸಾ.ಶಿ.ಮರುಳಯ್ಯ

ಚಿಕ್ಕನಾಯಕನಹಳ್ಳಿ,ಡಿ.4 : ಸಂಸ್ಕೃತಿ ವ್ಯಕ್ತಿಯ ಆಂತರಿಕ ಶೋಭೆ, ನಾಗರೀಕತೆ ವ್ಯಕ್ತಿಯ ಬಹಿರಂಗ ಶೋಭೆಯಾಗಿ ಸಮಾಜ ಗುರುತಿಸಿದೆ, ನಮ್ಮ ಸಂಸ್ಕೃತಿ ಕಾಣಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾದ್ಯ ಎಂದು ಖ್ಯಾತ ಸಾಹಿತಿ ಸಾ.ಶಿ.ಮರುಳಯ್ಯನವರು ಅಭಿಪ್ರಾಯಪಟ್ಟರು.
ಪಟ್ಟಣದ ಬಲಿಜ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಡಶಾಲಾ ಕನ್ನಡ ಭಾಷಾ ಬೋದಕರ ಐದನೆಯ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವದ ಸಂಸ್ಕೃತಿಯಲ್ಲಿ ಭಾರತೀಯ ಸಂಸ್ಕೃತಿಯು ಶ್ರೇಷ್ಠವಾದದ್ದು ಈ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ, ಕುವೆಂಪು ರಚಿಸಿರುವ ನಾಡಗೀತೆ  ಕೊಡುವ ಭಾವಾರ್ಥ ಭರತ ಖಂಡದ ಯಾವ ಭಾಷೆಯಲ್ಲಿಯೂ ಹೊಹೊಮ್ಮಿಲ್ಲ, ಈ ನಾಡಗೀತೆ ದೇಶದ ಸಂಸ್ಕೃತಿಯನ್ನು ಬೆಳಗುತ್ತದೆ ಎಂದರು. ಕ ುವೆಂಪು ರಚಿಸಿರುವ ನಾಟಕಗಳು ಷೇಕ್ಸ್ಪಿಯರ್ ರಚಿಸಿರುವ ನಾಟಕಗಳಿಗಿಂತ ಉತ್ತಮವಾಗಿದೆ ಎಂದರಲ್ಲದೆ ಶಿಕ್ಷಕರು ತಮ್ಮ ವಿದ್ಯಾಥರ್ಿಗಳಿಗೆ ತಿಳುವಳಿಕೆ ನೀಡುವಾಗ ಪ್ರೀತಿಯಿಂದ ತಿಳಿಸಿ, ಶಿಕ್ಷಿಸುವುದರಿಂದ ಸಾದ್ಯವಿಲ್ಲ, ಶಿಷ್ಯರು ಏನೇ ತಪ್ಪು ಮಾಡಿದರು ಆ ಅಪವಾದ ಬರುವುದು ಗುರುವಿನ ಮೇಲೆ ಅದಕ್ಕಾಗಿ ಗುರುಗಳು ಶಿಷ್ಯರಿಗೆ ತಮ್ಮ ಬೋಧನೆಯಲ್ಲಿ ಸನ್ಮಾರ್ಗದತ್ತ ಸಾಗುವ ದಾರಿ ತೋರಬೇಕು ಎಂದರು.
ಯುವಕರು ಸಮಾಜದ ಆಗು ಹೋಗುಗಳನ್ನು ತಿಳಿದುಕೊಂಡು ದೇಶಾಭಿಮಾನವನ್ನು ಉತ್ತುಂಗಕ್ಕೆ ಏರಿಸಬೇಕು, ಯುವಶಕ್ತಿ ಹಾಳಾದರೆ ಇಡೀ ದೇಶ ಹಾಳಾಗುತ್ತದೆ, ಶಿಕ್ಷಕರು ಮಕ್ಕಳಲ್ಲಿ ಈಗಿನಿಂದಲೇ ರಾಷ್ಟ್ರಪ್ರೇಮವನ್ನು ಮೂಡಿಸಬೇಕು ಎಂದು ತಿಳಿಸಿದ ಅವರು ಪುಸ್ತಕವನ್ನು ಪ್ರತಿನಿತ್ಯ ಓದಿ ಅದರಲ್ಲಿನ ಹೊಸ ಹೊಸ ವಿಷಯಗಳನ್ನು ಮಕ್ಕಳಿಗೆ ತಿಳಿಸಿಬೇಕು ಎಂದರು.
ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಮೋಹನ್ಕುಮಾರ್ ಮಾತನಾಡಿ ಕನ್ನಡ ಭಾಷಾ ಶಿಕ್ಷಕರು ಸಾಹಿತ್ಯ ಮತ್ತು ಸಾಹಿತಿಗಳ ಪರಿಚಯ ವಿದ್ಯಾಥರ್ಿಗಳಿಗೆ ಮಾಡಿಕೊಡಿ ಭಾಷೆಯ ಇತಿಹಾಸ ಪರಂಪರೆ ಸಂಸ್ಕೃತಿ ಎಂದು ತಿಳಿಸಿ, ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಈಗಿನ ಯುವಶಕ್ತಿ ಮುಂದಾಗಬೇಕು, ತಮ್ಮ ಕಾರ್ಯದಲ್ಲಿ ಕ್ರಿಯಾಶೀಲವಾಗುವುದರ ಜೊತೆಗೆ ಸಾಹಿತ್ಯದ ಕಡೆಗೂ ಗಮನ ನೀಡಿ ಎಂದರಲ್ಲದೆ ಶಿಕ್ಷಕರು ಕನ್ನಡ ಸಾಹಿತ್ಯ ಹಾಗೂ ಪರಂಪರೆಯನ್ನು ಮಕ್ಕಳಿಗೆ ತಿಳಿಸಿದರೆ ಕನ್ನಡದ ಬಗ್ಗೆ ಒಲವು ಹೆಚ್ಚುತ್ತದೆ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿದರು.
  ಸಮಾರಂಭದಲ್ಲಿ ಸಾಹಿತಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ತಾ.ಪ್ರೌ.ಕ.ಭಾ.ಬೋ.ಸಂಘದ ಅಧ್ಯಕ್ಷ ಗೋವಿಂದರಾಜು, ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮರ್, ಜಿಲ್ಲಾ ಕನ್ನಡ ಭಾಷ ಭೋದಕರ ಅಧ್ಯಕ್ಷ ಮಾದಾಪುರ ಶಿವಪ್ಪ, ಜಿಲ್ಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷೆ ರೇಣುಕಮ್ಮ, ಕನ್ನಡ ವಿಷಯ ಪರಿವೀಕ್ಷಕ ನರಸಿಂಹಯ್ಯ ಉಪಸ್ಥಿತರಿದ್ದರು.



Monday, December 3, 2012


ಗೋಡೆಕೆರೆ ಮಠದಲ್ಲಿ ತತ್ವಪದ, ಜಾನಪದ ನೃತ್ಯ ಸ್ಪಧರ್ೆ
                                          
ಚಿಕ್ಕನಾಯಕನಹಳ್ಳಿ,ಡಿ.03  : ತಾಲೂಕಿನ ಗೋಡೆಕೆರೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ಲಕ್ಷದೀಪೋತ್ಸವದ ಅಂಗವಾಗಿ ಹಾಗೂ ಗೋಡೆಕೆರೆ ಸಂಸ್ಥಾನದ ಸ್ಥಿರ ಪಟ್ಟಾಧ್ಯಕ್ಷರಾಗಿದ್ದ ಲಿಂಗೈಕ್ಯ ಚಂದ್ರಶೇಖರ ಭಾರತಿಸ್ವಾಮಿಯವರ 11ನೇ ವರ್ಷದ ಪುಣ್ಯಾರಾಧನೆಯ ಸ್ಮರಣಾರ್ಥ ಜಿಲ್ಲಾ ಮಟ್ಟದ ಧಾಮರ್ಿಕ ತತ್ವ ಪದಗಳ ಹಾಗೂ ಜಾನಪದ ನೃತ್ಯ ಸ್ಪಧರ್ೆಗಳನ್ನು ಇದೇ 10ರಂದು ಗೋಡೆಕೆರೆಯಲ್ಲಿ ಏರ್ಪಡಿಸಲಾಗಿದೆ ಎಂದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಶಿವಯೋಗಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಧಾಮರ್ಿಕ ತತ್ವಪದಗಳಲ್ಲಿ ಸ್ಪಧರ್ೆಯಲ್ಲಿ ಭಾಗವಹಿಸಲು ವಯೋಮಿತಿ ಇರುವುದಿಲ್ಲ, ಯಾವ ತತ್ವಪದವನ್ನಾದರೂ ಹಾಡಬಹುದಾಗಿದ್ದು ಸ್ಪಧರ್ೆಗೆ 50ರೂ ಪ್ರವೇಶ ಶುಲ್ಕವಾಗಿದೆ, ಸ್ಪಧರ್ೆಯು 5ಜನರನ್ನು ಮೀರಿರಬಾರದು, ತಮ್ಮ ಸಲಕರಣೆಗಳನ್ನು ತಾವೇತರುವುದು, ವೇಷ ಭೂಷಣಗಳಿಗೆ ಆದ್ಯತೆ ನೀಡಲಾಗುವುದು, ಪ್ರತಿ ತಂಡಕ್ಕೆ ಸಮಯವನ್ನು ನಿಗದಿ ಪಡಿಸಿದ್ದು ನಗದು ರೂಪದಲ್ಲಿ ಬಹುಮಾನ ನೀಡಲಾಗುತ್ತದೆ, ಭಾಗವಹಿಸಿದ ಪ್ರತಿ ತಂಡಕ್ಕೂ ಪ್ರಶಸ್ತಿ ಪತ್ರ ನೀಡಲಾಗುವುದು ಹಾಗೂ ಜಾನಪದ ನೃತ್ಯ ಸ್ಪಧರ್ೆಯಲ್ಲಿ ದೇವರ ನಾಮಗಳಿಗೆ ಆದ್ಯತೆ ನೀಡಿದ್ದು  ವೇಷ ಭೂಷಣಗಳಿಗೆ ಆದ್ಯತೆಯಿದೆ, ಜಾನಪದ ಗೀತೆ ಹಾಡುವವರನ್ನು ಸೇರಿ 5ಜನ ಮೀರಿರಬಾರದು, ನಗದು ರೂಪದಲ್ಲಿ ಬಹುಮಾನ ನೀಡಲಿದ್ದು ಸ್ಪಧರ್ೆಗೆ ಪ್ರವೇಶ ಶುಲ್ಕ 50ರೂ ಆಗಿದೆ ಎಂದು ತಿಳಿಸಿದ ಅವರು ಹೆಚ್ಚಿನ ಮಾಹಿತಿಗಾಗಿ ಮೊ. 9448709755, 96115436678, 9986904011 ಗೆ ಸಂಪಕರ್ಿಸಲು ಕೋರಿದ್ದಾರೆ. 
ಚಿ.ನಾ.ಹಳ್ಳಿ ರೋಟರಿಗೆ 'ಬೆಸ್ಟ್ ಕ್ಲಬ್'ಆವಾಡರ್್

ಚಿಕ್ಕನಾಯಕನಹಳ್ಳಿ,ಡಿ.3: ಇಲ್ಲಿನ ರೋಟರಿ ಕ್ಲಬ್, ತುಮಕೂರಿನಲ್ಲಿ ನಡೆದ ಇಂಟರ್ ಸಿಟಿ ಜನರಲ್ ಫೋರಂ ಸಮಾವೇಶದಲ್ಲಿ ಬೆಸ್ಟ್ ಕ್ಲಬ್ ಆವಾಡರ್್'' ಪ್ರಶಸ್ತಿಗೆ ಭಾಜನವಾಗಿದೆ. ಇಲ್ಲಿನ ಕ್ಲಬ್ ನಡೆಸುವ ಸರಾಸರಿ ದಿನಕ್ಕೊಂದರಂತೆ ಸೇವಾ ಕಾರ್ಯಕ್ರಮವನ್ನು ನಡೆಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿ ಫಲಕವನ್ನು ನೀಡಲಾಗಿದೆ, ಸ್ಥಳೀಯ ಕ್ಲಬ್ನ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮತ್ತು ಕಾರ್ಯದಶರ್ಿ ಎಂ.ದೇವರಾಜ್ರವರನ್ನು ರೋಟರಿ ಗವರ್ನರ್ ಆರ್.ಬದರಿ ಪ್ರಸಾದ್ ಅಭಿನಂದಿಸಿದ್ದಾರೆ. ಜಿಲ್ಲಾ 3190ರ 87 ಕ್ಲಬ್ಗಳ ಪೈಕಿ ಇಲ್ಲಿನ ಕ್ಲಬ್ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. 
ತಾ|ಕೃಷಿ ಬ್ಯಾಂಕ್ನಲ್ಲಿ ಲಾಕರ್, ಚಿನ್ನಾಭರಣ ಸಾಲ ಸೌಲಭ್ಯಕ್ಕೆ ಚಾಲನೆ.
ಚಿಕ್ಕನಾಯಕನಹಳ್ಳಿ,ಡಿ.03 : ಇಲ್ಲಿನ ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ನಲ್ಲಿ ನೂತನ ಲಾಕರ್ ಸೌಲಭ್ಯ, ಚಿನ್ನಾಭರಣ ಸಾಲ ಮತ್ತು ಠೇವಣಿ ಸಂಗ್ರಹಣೆಗೆ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್ ಚಾಲನೆ ನೀಡಿದರು.
ತಾಲೂಕಿನ ಎಲ್ಲಾ ರೈತಬಾಂಧವರು, ಸಾಲಗಾರರು, ಷೇರುದಾರರು ಈ ಸೌಲಭ್ಯವನ್ನು ಪಡೆಯಲು ಬ್ಯಾಂಕಿನ ವ್ಯವಸ್ಥಾಪಕರಾದ ಡಿ.ಚಿತ್ತಪ್ಪ ಮಾನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಅಹಲ್ಯ ಸಾಂಭವಮೂತರ್ಿ, ನಿದರ್ೇಶಕರಾದ ಎಂ.ಬಿ.ನಾಗರಾಜ್, ಎಂ.ಬಿ.ಆನಂದಕುಮಾರ್, ಪರಮೇಶ್ವರ, ಎಚ್.ಎಂ.ಸುರೇಂದ್ರಯ್ಯ, ಯಳ್ಳೇನಹಳ್ಳಿ ಬಸವರಾಜು ಹಾಜರಿದ್ದರು.

Friday, November 30, 2012



ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ನೂಕು ನುಗ್ಗಲಿನಲ್ಲಿ ಅಜರ್ಿ ಸಲ್ಲಿಸಿದ ಆಕಾಂಕ್ಷಿಗಳು
ಚಿಕ್ಕನಾಯಕನಹಳ್ಳಿ,ನ.30 : ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯಥರ್ಿಗಳಾಗಿ ಕಣಕ್ಕಿಳಿಯಲು ಸುಮಾರು 24ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಾಗಿ ಅಜರ್ಿ ಸಲ್ಲಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಮಹಿಮಾ ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಜರ್ಿ ಸಲ್ಲಿಸಿರುವ ಪ್ರಮುಖರೆಂದರೆ ಕ್ಯಾಪ್ಟನ್ ಸೋಮಶೇಖರ್, ಡಾ.ಎಸ್.ಜಿ.ಪರಮೇಶ್ವರಪ್ಪ, ಸಂತೋಷ್ ಜಯಚಂದ್ರ, ರಾಜೇಂದ್ರ, ಬಿ.ಲಕ್ಕಪ್ಪ, ಸತೀಶ್ ಸಾಸಲು, ಟಿ.ಆರ್.ವಾಸುದೇವ್, ಹೆಚ್.ಬಿ.ಎಸ್ ನಾರಾಯಣಗೌಡ, ತುಮಕೂರು ಶಿವಮೂತರ್ಿ, ಸಾದರಹಳ್ಳಿ ಮಲ್ಲಿಕಾಜರ್ುನಯ್ಯ, ವೈ.ಜಿ.ಸಿದ್ದರಾಮಯ್ಯ, ನಿಜಾನಂದಮೂತರ್ಿ, ಆರ್.ರಾಮಚಂದ್ರಯ್ಯ,  ಶಿವಣ್ಣ ಸೇರಿದಂತೆ ಹಲವು ಆಕಾಂಕ್ಷಿಗಳು ಅಜರ್ಿ ಸಲ್ಲಿಸಿದ್ದಾರೆ ಎಂದರು.
ನಂತರ ಮಾತನಡಿದ ಅವರು,  ಪಕ್ಷ ಟಿಕೆಟ್ ನೀಡುವಲ್ಲಿ ಹೆಚ್ಚಿನ ಆದ್ಯತೆಯನ್ನು  ಸ್ಥಳೀಯ ಆಕಾಂಕ್ಷಿಗಳಿಗೆ ನೀಡುವುದಾಗಿ  ತಿಳಿಸಿದರಲ್ಲದೆ,  ಮತದಾರರು ಯಾವ ಆಕಾಂಕ್ಷಿಗೆ ಹೆಚ್ಚಿನ ಆದ್ಯ್ಯತೆ ನೀಡುತ್ತಾರೆಯೋ ಅಂತಹವರನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ತಿಳಿಸಿದರು. ಅದಕ್ಕಾಗಿ ಮತದಾರರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ತಾಲ್ಲೂಕಿಗೆ ಆಗಮಿಸಿದ್ದು ಅಭಿಪ್ರಾಯದ ವರದಿಯನ್ನು ಕೆಪಿಸಿಸಿ ಹೈಕಮಾಂಡ್ ಕಛೇರಿಗೆ ನೀಡಲಿದ್ದೇವೆ, ಈ ವರದಿ ಸಲ್ಲಿಸಿದ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಆಗಮಿಸಿ ವರದಿ ಪಡೆಯಲಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ವರದಿಯನ್ನು ಪಡೆದಿದ್ದು ಎಲ್ಲಾ ತಾಲ್ಲೂಕಿನಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅಭಿಪ್ರಾಯ ಬಂದಿದೆ ಎಂದು ತಿಳಿಸಿದರಲ್ಲದೆ ಕಾಂಗ್ರೆಸ್ ಪಕ್ಷ ಯಾವ ಪಕ್ಷದೊಂದಿಗೆ ಹೊಂದಣಿಕೆ ಮಾಡಿಕೊಳ್ಳದೇ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದಾರೆ ಎಂದರು.
ಕಾಂಗ್ರೆಸ್ ವೀಕ್ಷಕ ಮತ್ತು ಮಾಜಿ ಶಾಸಕ ಐವಾನ್ ನೀಕ್ಲಿ, ಕೆಪಿಸಿಸಿ ಕಾರ್ಯದಶರ್ಿ ನೂರ್ಜಾನ್ಷರೀಪ್, ಕಾರ್ಯದಶರ್ಿ ಶಿವಮೂತರ್ಿ, ವಿಧಾನಸಭಾ ಸಂಘಟನಾ ಉಸ್ತುವಾರಿ ಕ್ಯಾಪ್ಟನ್ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ನಗರ ಪ್ರಧಾನ ಕಾರ್ಯದಶರ್ಿ ಕೆ.ಜಿ.ಕೃಷ್ಣೆಗೌಡ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.


aPÀÌ£ÁAiÀÄPÀ£ÀºÀ½î ¥ÉÆÃmÉÆÃUÁæ¥sÀgï ¸ÀAWÀ¢AzÀ  PÀ£ÀßqÀ gÁeÉÆåÃvÀìªÀªÀ£ÀÄß DZÀj¸À¯Á¬ÄvÀÄ. F ¸ÀAzÀ¨sÀðzÀ°è ¸Á»w JA.«.£ÁUÀgÁeïgÁªï, ¸ÀAWÀzÀ CzsÀåPÀë ªÀÄÈAvÀÄåAdAiÀÄ, PÁAiÀÄðzÀ²ð eÉãÀÄPÀ¯ï ªÀÄAdÄ£Áxï, Pˤì®gï ¹.r.ZÀAzÀæ±ÉÃRgï ¸ÉÃjzÀAvÉ ¸ÀAWÀzÀ ¸ÀzÀ¸ÀågÀÄ ºÁdjzÀÝgÀÄ.

aPÀÌ£ÁAiÀÄPÀ£ÀºÀ½îAiÀÄ°è ¸ÀĨsÁµï ZÀAzÀæ¨ÉÆÃ¸ï DmÉÆÃ ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀ ºÀ«ÄäPÉÆArzÀÝ 56£Éà PÀ£ÀßqÀ gÁeÉÆåÃvÀìªÀªÀPÉÌ ¥ÀlÖtzÀ J¯Áè DmÉÆÃZÁ®PÀgÀÄ ¥Á¯ÉÆÎAqÀÄ ¸ÀªÀiÁgÀA¨sÀ «dÈA©ü¹zÀgÀÄ.

aPÀÌ£ÁAiÀÄPÀ£ÀºÀ½îAiÀÄ ¸ÀĨsÁµï ZÀAzÀæ¨ÉÆÃ¸ï DmÉÆÃ ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀzÀ ªÀw¬ÄAzÀ 56£Éà PÀ£ÀßqÀ gÁeÉÆåÃvÀìªÀªÀ£ÀÄß DZÀj¸À®¬ÄvÀÄ. F ¸ÀAzÀ¨sÀðzÀ°è f¯Áè DmÉÆÃ ZÁ®PÀgÀ dAn QæAiÀiÁ ¸À«Äw CzsÀåPÀë «.¥ÀævÁ¥ï, vÁ.UËgÀªÁzsÀåPÀë ¹.©.gÉÃtÄPÀ¸Áé«Ä, PÀgÀªÉà CzsÀåPÀë ¹.n.UÀÄgÀĪÀÄÆwð ¸ÉÃjzÀAvÀ ºÀ®ªÀjzÀÝgÀÄ.


ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗಧಿ
ಚಿಕ್ಕನಾಯಕನಹಳ್ಳಿ,ನ.30: ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ಹಾಗೂ ಸಮ್ಮೇಳನಾಧ್ಯಕ್ಷರನ್ನು ಆಯ್ಕೆಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಡಿಸೆಂಬರ್ 28ರಂದು ಹಂದನಕೆರೆಯಲ್ಲಿ ಏರ್ಪಡಿಸಲಗಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ಖ್ಯಾತ ಸಾಹಿತಿ ಅಬ್ದುಲ್ಹಮೀದ್ರವರನ್ನು ಆಯ್ಕೆಮಾಡಲಾಗಿದೆ. ಕಂದಿಕೆರೆ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 9ರಂದು ಕಂದಿಕೆರೆಯಲ್ಲಿ ಏರ್ಪಡಿಸಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ನಿವೃತ್ತ ಉಪನ್ಯಾಸಕ ಕೆ.ಎಂ.ನಂಜಪ್ಪರವರನ್ನು, ಶೆಟ್ಟಿಕೆರೆ ಹೋಬಳಿಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸಂಬರ್ 15ರಂದು ಗೋಡೆಕೆರೆಯಲ್ಲಿ ಏರ್ಪಡಿಸಿದ್ದು ಚಿಂತಕ ಶಿವನಂಜಪ್ಪ ಬಾಳೇಕಾಯಿರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ, ಚಿ.ನಾ.ಹಳ್ಳಿ ನಗರ ಕೇಂದ್ರಿತ ಕಸಬಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 22ರಂದು ಕೇದಿಗೆಹಳ್ಳಿಯ ರಾಘವೇಂದ್ರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದು ಮಾಜಿ ಕಾಸಪ ಅಧ್ಯಕ್ಷ ಹೆಚ್.ಎಸ್.ಶಿವಲಿಂಗಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.