Friday, May 24, 2013



ಮನಸ್ಸು ವಿಕಾಸಗೊಳ್ಳಲು ಬೇಸಿಗೆಶಿಬಿರ ಸಹಕಾರಿ.
ಚಿಕ್ಕನಾಯಕನಹಳ್ಳಿ,ಮೇ24: ಸಕರ್ಾರದ ಯೋಜನೆಯ ಸದ್ಬಳಕೆಯಿಂದ ಹಚ್ಚಿನ ಅನುಕೂಲವಾಗಲಿದೆ ಎಂದು ಪುರಸಭಾ ಸದಸ್ಯೆ ರೇಣುಕಮ್ಮ ತಿಳಿಸಿದರು.
ಅವರು ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ 10 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳ ಜ್ಞಾನವಿಕಾಸಕ್ಕೆ ಇಂತಹ ಶಿಬಿರಗಳು ಹೆಚ್ಚಿನ ಅನುಕೂಲವಾಗಲಿದೆ. ನಮ್ಮಲ್ಲಿನ ವೈವಿದ್ಯಮಯ ಸಂಸ್ಕೃತಿಗಳ ಪರಿಚಯ ಹಾಗೂ ವಿನಿಮಯಗಳಿಂದ  ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಿ ಭವಿಷ್ಯದಲ್ಲಿ ಸುಶಿಕ್ಷಿತ ಸಮಾಜ ನಿಮರ್ಾಣಕ್ಕೆ ದಾರಿಯಾಗಲಿದ್ದು ಈ ಶಿಬಿರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರಚಾರ ನೀಡಬೇಕಾಗಿತ್ತೆಂದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಈರಣ್ಣ ಮಾತನಾಡಿ ಇಂದು ಮಕ್ಕಳಿಗೆ ಶಾಲೆಯ ಪುಸ್ತಕಗಳು ಹೆಚ್ಚು ಹೊರೆಯಾಗಿದ್ದು ಅವರ ಮನೋವಿಕಾಸ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ.  ಈ ಶಿಬಿರದಿಂದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಹಾಕುವ ಮೂಲಕ ಮಕ್ಕಳಲ್ಲಿ ಕ್ರಿಯಾತ್ಮಕ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ ರಜಾದಿನಗಳಲ್ಲಿ ಮಕ್ಕಳು ಪರ ಊರುಗಳಿಗೆ ತೆರಳುವುದರಿಂದ ವಿವಿಧ ರೋಗ ರುಜಿನಗಳ ಬಾದೆಗೆ ತುತ್ತಾಗಲಿದ್ದಾರೆ. ಇಂತಹ ಶಿಬಿರಗಲ್ಲಿ ಮಕ್ಕಳು ತಮ್ಮ ಬೇಸಿಗೆ ರಜಾದಿನಗಳನ್ನು ಕರಕುಶಲ ಕಲೆ, ನೃತ್ಯ, ಪೇಪರ್ ಕಟಿಂಗ್ ಮುಂತಾದ ಮನೋವಿಕಾಸ ಚಟುವಟಿಕೆಯಿಂದ ಮನಸ್ಸು ಅರಳಲಿದೆ ಎಂದರು.
ಸಮಾರಂಭದಲ್ಲಿ ಸಂಪನ್ಮೂಲವ್ಯಕ್ತಿಗಳಾದ ಸಿ.ಎನ್. ಕೃಷ್ಣಾಚಾರ್, ಕುಮಾರಯ್ಯ, ಮಾಜಿ ಪುರಸಭಾ ಸದಸ್ಯೆ ರಾಜಲಕ್ಷ್ಮಿ, ನಾಗರತ್ನಮ್ಮ, ಶಶಿಕಲಾ ಹಾಗೂ ಎಸಿಡಿಪಿಒ ಪರಮೇಶ್ವರಪ್ಪ ಉಪಸ್ಥಿತರಿದ್ದರು. ಕುಮಾರ್ನಿರೂಪಿಸಿದರು. 
(ಪೊಟೋ ಇದೆ)
ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ.
ಚಿಕ್ಕನಾಯಕನಹಳ್ಳಿ,ಮೇ.24: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಮಾಡುವಂತೆ ಕೇಳಿದವರ ಮೇಲೆ ಅನೈತಿಕ ಸಂಬಂಧ ಹುಟ್ಟುಹಾಕಿ ಸಾವಿಗೆ ಕಾರಣವಾಗಿದ್ದವರನ್ನು ಪೊಲೀಸರು ಈವರೆಗೂ ಬಂದಿಸಿಲ್ಲ ಎಂದು ದೂರುದಾರರಾದ ಅನುಸೂಯಮ್ಮ ಆರೋಪಿಸಿದ್ದಾರೆ.
ಅವರು ತಾಲ್ಲೂಕಿನ ಹಂದನಕೆರೆವಾಸಿ ಜಗದೀಶನ ಪತ್ನಿ ಶಶಿಕಲಾ ಎಂಬುವರು ತನ್ನ ತಾಯಿ ಅನುಸೂಯಮ್ಮನ ಕಡೆಯಿಂದ ತರಕಾರಿ ಗಂಗಮ್ಮ ಎಂಬುವರ ಅಳಿಯನಾದ ಚಲುವರಾಜುಗೆ ಹತ್ತು ಸಾವಿರ ಹಣವನ್ನು ಸಾಲವಾಗಿ ಕೊಡಿಸಿದ್ದರು ಎನ್ನಲಾಗಿದ್ದು,  ಸಾಲ ಪಡೆದ ಚಲುವರಾಜು ತಿಂಗಳುಗಳು ಕಳೆದರೂ ಹಣ ವಾಪಸ್ಮಾಡದ ಕಾರಣ ಚಲುವರಾಜು ಹಾಗೂ ಶಶಿಕಲಾ ನಡುವೆ ವಾಗ್ವಾದ ನಡೆದು ಚಲುವರಾಜು ಕೊರಳಲ್ಲಿದ್ದ ಚಿನ್ನದ ಸರವನ್ನು ಶಶಿಕಲ ಪಡೆದು ಹಣ ಪಡೆದ ನಂತರ ಸರ ನೀಡಲಾಗುವುದು ಎಂದು ಹೇಳಿದ ಹಿನ್ನಲೆಯಲ್ಲಿ ಅದೇ ಗ್ರಾಮದ ಪಂಚಾಯಿತಿದಾರರ ಸಮ್ಮುಖದಲ್ಲಿ ಬಡ್ಡಿ ಇಲ್ಲದೆ ಅಸಲು ಹತ್ತು ಸಾವಿರ ಹಣವನ್ನು ಚಲುವರಾಜು ರವರಿಗೆ  ಶಶಿಕಲಾ ಸಾಲದ ರೂಪದಲ್ಲಿ ಕೊಡಿಸಿದ್ದ ಹಣವನ್ನು ವಾಪಸ್ ಮಾಡಿ ಚಿನ್ನದ ಸರವನ್ನು ಮೇ 14 ರಂದು ವಾಪಸ್ ಪಡೆದಿದ್ದರು. ಈ ಎಲ್ಲಾ ವಿಚಾರವನ್ನು ಮನದಲ್ಲಿಟ್ಟುಕೊಂಡಿದ್ದ ಚಲುವರಾಜು, ಪತ್ನಿ ಸವಿತಾ ಹಾಗೂ ಅತ್ತೆ ತರಕಾರಿ ಗಂಗಮ್ಮ ಈ ಮೂವರು ಸಾರ್ವಜನಿಕರೆದರು ಶಶಿಕಲಾ ಮೇಲೆ ದ್ವೇಷದಿಂದ ಸವಿತಾಳು ತನ್ನ ಗಂಡನ ಜೊತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಿಯ ಎಂದು ಬೀದಿಯಲ್ಲಿ ಎಳೆದಾಡಿದ ಪರಿಣಾಮ ಅವಮಾನ ತಾಳಲಾರದೆ ಶಶಿಕಲಾ ಹಂದನಕೆರೆಯ ತೋಟದ ಮನೆಯಲ್ಲಿ ಮೇ.19ರಂದು  ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 
ಈ ಪ್ರಕರಣದ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಅನುಸೂಯಮ್ಮ 505/306 ಪ್ರಕರಣ ದಾಖಲಿಸಿದ್ದರು. ಈ ದೂರಿನ ಮೇಲೆ ತರಕಾರಿ ಗಂಗಮ್ಮನನ್ನು ಬಂದಿಸಲಾಗಿದೆ. ಆದರೆ ಚಲುವರಾಜು ಮತ್ತು ಸವಿತಾ ಎಂಬುವರಿರುವ ಸ್ಥಳದ ಮಾಹಿತಿಯನ್ನು ನೀಡಿದರೂ ಅವರನ್ನು ಬಂಧಿಸುವಲ್ಲಿ ಪೊಲೀಸರು ನಿಲ್ರ್ಯಕ್ಷ ತೋರಿದ್ದಾರೆ ಎಂದು ಅನುಸೂಯಮ್ಮ ಆರೋಪಿಸಿದ್ದಾರೆ.

ಕಾಲೇಜ್ ದಿನಗಳನ್ನು ಸ್ಮರಿಸಿಕೊಳ್ಳಲು 12 ವರ್ಷಗಳ ನಂತರ ಒಂದಾದ ಸ್ನೇಹಿತರು.
ಚಿಕ್ಕನಾಯಕನಹಳ್ಳಿ,ಮೇ.24: ಕಾಲೇಜ್ ದಿನಗಳನ್ನು ನೆನಪಿಸಿಕೊಳ್ಳುವ, ಬದುಕಿನ ಜಂಜಾಟದಿಂದ ಕೆಲ ಕಾಲ ಸ್ನೇಹಿತರೊಂದಿಗೆ ತಮ್ಮ ಯಶೋಗಾಧೆಗಳನ್ನು ಹೇಳಿಕೊಳ್ಳುವ ಹಾಗೂ ಸ್ನೇಹಿತೆಯರಿಗೆ ಬಾಗಿಣ ನೀಡುವ ಹೊಸ ಕಲ್ಪನೆಗೆ ನಾಂದಿ ಹಾಡಿದ್ದು, ತಮ್ಮ ಹೆಂಡತಿ, ಮಕ್ಕಳಿಗೆಲ್ಲಾ ತನ್ನ ಕಾಲೇಜ್ ದಿನಗಳ  ಸ್ನೇಹತರನ್ನು ಪರಸ್ಪರ ಪರಿಚಯಿಸಿಕೊಳ್ಳುವ ಮೂಲಕ  ಮರೆತೇನೆಂದರೆ ಮರೆಯಲಿ ಹ್ಯಾಂಗ. . . . ! ಎಂಬ ವಿಶೇಷ ಕಾರ್ಯಕ್ರಮ ಅಭೂತ ಪೂರ್ವವಾಗಿ ನಡೆದಿದೆ.
2001ರಲ್ಲಿ ಪಿ.ಯು.ಸಿ.ಓದುತ್ತಿದ್ದ ವಿದ್ಯಾಥರ್ಿಗಳು ಹನ್ನೆರಡು ವರ್ಷಗಳ ಬಳಿಕ ತಾವು ಒಂದೆಡೆ ಕಲೆಯುವ ಮೂಲಕ ತಾವು ಓದುತ್ತಿದ್ದ ಕುಪ್ಪಾಳಿನ ಶ್ರೀ ಮಲ್ಲಿಕಾರ್ಜನ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ಆವರಣದಲ್ಲಿ ಬೆರೆತು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಈ ರೀತಿಯ ಆಲೋಚನೆ ಮಾಡಿದ್ದು ಕಲಾವಿದ ಗೋಪಾಲನಹಳ್ಳಿ ಆತ್ಮಾನಂದ, ತನ್ನ ಜೊತೆಯ 80 ವಿದ್ಯಾಥರ್ಿಗಳ ವಿಳಾಸ, ಪೋನ್ ನಂಬರ್ಗಳನ್ನು ಸಂಗ್ರಹಿಸಿ ಅವರಿಗೆಲ್ಲಾ ವಿಷಯ ತಿಳಿಸಿ ಕಾಲೇಜ್ಗೆ ಬರಮಾಡಿಕೊಂಡು ವೈಭವದ ಕಾರ್ಯಕ್ರಮವನ್ನು ಗೆಳೆಯರ ಸಹಾಯದಿಂದ ಆಯೋಜಿಸಿದ್ದರು. 
ಸಮಾರಂಭದಲ್ಲಿ ಸ್ನೇಹಿತರೆಲ್ಲಾ ತಮ್ಮ ವೃತ್ತಿ ಜೀವನ, ಸಿಹಿ ಕಹಿ ಘಟನೆಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು. ನಿವೃತ್ತ ಪ್ರಾಂಶುಪಾಲರಾದ ಕೆ.ಸಿ.ಮಲ್ಲಿಕಾಜರ್ುನಯ್ಯ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಬಾಲರಾವ್ರವರನ್ನು ಸನ್ಮಾನಿಸಲಾಯಿತು.  ಸ್ನೇಹಿತ ಶಿವಕುಮಾರ್ ಆಕಸ್ಮಿಕ ಮರಣಹೊಂದಿದ್ದು ಅವರ ಸ್ಮರಣೆಯ ಪ್ರಯುಕ್ತ ಮೌನ ಆಚರಿಸಿದರು.
 ಮುಂದಿನ ದಿನಗಳಲ್ಲಿ ಸ್ನೇಹಿತರು ಪರಸ್ಪರ ಕಷ್ಟ ಸುಖಗಳನ್ನು ಭಾಗಿಯಾಗಬೇಕೆಂದು ದೃಢ ತೀಮರ್ಾನ ತೆಗೆದುಕೊಂರು, ಸಮಾರಂಭದ ನಂತರ ಎಲ್ಲಾ ಸ್ನೇಹಿತರು ತಮ್ಮೊಂದಿಗೆ ಕಲಿತಿದ್ದ ಸ್ನೇಹಿತೆಯರಿಗೆ ಬಾಗಣ ನೀಡಿ ಆತ್ಮೀಯವಾಗಿ ಗೌರವಿಸಿ ಕಳುಹಿಸಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ನಾಗರಾಜು ವಹಿಸಿದ್ದರು, ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.



(ಸಿ.ಗುರುಮೂತರ್ಿ ಕೊಟಿಗೆಮನೆ)
ಮುತ್ಸದ್ದಿ ರಾಜಕಾರಣಿ   ಜೆ.ಸಿ.ಮಾಧುಸ್ವಾಮಿ ನಿವೃತ್ತರಾಗುತ್ತಾರೆಯೇ. . . . . ?!


ಚಿಕ್ಕನಾಯಕನಹಳ್ಳಿ,ಮೇ.22: ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಕೆ.ಎಂ.ಎಫ್ ಅಧ್ಯಕ್ಷರಾಗಿ, ಜೆ.ಡಿ.ಯು.ನಿಂದ  ಸದನದ ನಾಯಕರಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ, ಸದನ ಶೂರ ಎನಿಸಿಕೊಂಡಿದ್ದ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಕೆ.ಜೆ.ಪಿ. ಪಕ್ಷದಿಂದ ಸೋಲುಂಡ ಮುತ್ಸದ್ದಿ ರಾಜಕಾರಣಿ ಜೆ.ಸಿ.ಮಾಧುಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡುತ್ತಿರುವುದು  ಕ್ಷೇತ್ರದ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚಚರ್ೆಯಾಗುತ್ತಿದೆ.
ಈ ರೀತಿಯ ಚಚರ್ೆಯನ್ನು ಆರಂಭಿಸಿರುವವರು ಸ್ವತಃ ಜೆ.ಸಿ.ಮಾಧುಸ್ವಾಮಿಯವರೇ, ತಮ್ಮ ಬಳಿ ಬರುವ ತಮ್ಮ ಅಭಿಮಾನಿಗಳ ಬಳಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸುತ್ತಿರುವುದು ಗುಟ್ಟಾಗಿ ಉಳಿದಿರುವ ವಿಷಯವಲ್ಲ. ಅವರ  ಈಗಲೂ ಯಾರೇ ಕೆಲಸ ಕೇಳಿಕೊಂಡು ಹೋದವರಿಗೆ ರಾಜಕೀಯದಿಂದ ದೂರ ಉಳಿಯಬೇಕೆಂದಿದ್ದೇನೆ ಯಾಕೆ ನಮ್ಮ ಬಳಿ ಬರುತ್ತೀರ ಎನ್ನುತ್ತಲೇ ಬಂದವರ ಕೆಲಸದ ಬಗ್ಗೆ  ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿ ಕೆಲಸ ಮಾಡಿಸುತ್ತಾರೆ. ಅಭಿಮಾನಿಗಳು, ಕಾರ್ಯಕರ್ತರು ಮುಂದೆ ಏನು ಮಾಡುವುದು ಎಂದು ಕೇಳಿದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂಬ ಮಾತುಗಳಾಡುತ್ತಾರೆ ಎಂದು ಅವರ ಆಪ್ತರು ಹೇಳುತ್ತಾರೆ.
ಕಳೆದ ಎರಡು ಬಾರಿಯಿಂದ ಸೋಲು ಅನುಭವಿಸಿರುವ ನೇರ ನಿಷ್ಠುರ ಮಾತುಗಾರ ಜೆ.ಸಿ.ಎಂ. ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆಯೂ ಅಷ್ಟೇ ದಿಟ್ಟವಾಗಿ ನೇರವಾಗಿ ಮಾತನಾಡುತ್ತಿದ್ದಾರೆ ಎಂಬುದು ಅವರ ಆಪ್ತರ ಅಭಿಪ್ರಾಯ. ಈ ಬಾರಿಯ ಚುನಾವಣೆಯಲ್ಲಿ ಗೆದ್ದೇತೀರಬೇಕೆಂದು ತಂತ್ರಗಾರಿಕೆಯ ಜೊತಗೆ ಎಲ್ಲಾ ರೀತಿಯಲ್ಲೂ ಬಹಳಷ್ಟು ಶ್ರಮ ಹಾಕಿದ್ದ ಜೆ.ಸಿ.ಎಂ. ತಮ್ಮ ಸೋಲಿನಿಂದ ವಿಚಲಿತರಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ರಾಜಕೀಯ ನಡೆಯ ಬಗ್ಗೆಯೂ ಅಸ್ಪಷ್ಟ ಚಿತ್ರಣದಿಂದಾಗಿ ಗೊಂದಲಕ್ಕೀಡಾಗಿದ್ದಾರೆ.
ಹಿನ್ನೆಡೆಗೆ ಕಾರಣಗಳೇನು...?: ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಪುನರ್ ವಿಂಗಡಣೆಯಿಂದ ಇವರ ಓಟ್ ಬ್ಯಾಂಕ್ ಬದಲಾಗಿರುವುದಷ್ಟೇ ಅಲ್ಲ, ಯಾವ ಪಕ್ಷದ ಚಿಹ್ನೆ ಅಡಿಯಲ್ಲಿ ನಿಲ್ಲಬೇಕೆಂಬ ಗೊಂದಲದಿಂದ  ಶುರುವಾದ ಇವರ ಚುನಾವಣಾ ಪರ್ವ ಕೆ.ಜೆ.ಪಿ.ಗೆ ಸೇರುವ ವರೆಗೆ ಅನಿಶ್ಚಿತವಾಗಿಯೇ ನಡೆಯಿತು. ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ಸೇರಬೇಕೊ ಅಥವಾ ಕೆ.ಜೆ.ಪಿ.ಗೆ ಸೇರಬೇಕೊ ಎಂಬ ಗೊಂದಲವೇ ಇವರನ್ನು ಬಹಳಷ್ಟು ತಿಂಗಳು ಕಾಡಿತು, ಈ ಮಧ್ಯೆ ಜೆ.ಸಿ.ಎಂ. ಕೆ.ಜೆ.ಪಿ.ಸೇರದಿದ್ದರೆ ಆ ಪಕ್ಷದಿಂದ ಮತ್ತೊಬ್ಬ ಲಿಂಗಾಯಿತ ಹೊಸ ಅಭ್ಯಾಥರ್ಿ ಹುಟ್ಟುವ ಲಕ್ಷಣಗಳು ಕಂಡಿದ್ದರಿಂದ ಹಾಗೂ 2008ರ ಚುನಾವಣೆಯಲ್ಲಿ ತನ್ನ ಸೋಲಿಗೆ ಯಡಿಯೂರಪ್ಪನವರ ಅಲೆಯೇ ಕಾರಣ ಎಂಬ ಅಭಿಪ್ರಾಯವಿದದ್ದರಿಂದ ಕೊನೆಗೆ ಕೆ.ಜೆ.ಪಿ.ಗೆ ಸೇರ್ಪಡೆಗೊಂಡು ಆ ಪಕ್ಷದಿಂದ ಸ್ಪಧರ್ಿಸಿದ್ದರು.
ಚುನಾವಣೆ ಇನ್ನೂ ಆರು ತಿಂಗಳು ಇರುವಾಗಲೇ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಅಲ್ಲಿ ಅವರ ಕಾರ್ಯಕರ್ತರು, ಅಭಿಮಾನಿಗಳನ್ನೆಲ್ಲಾ ಭೇಟಿ ಮಾಡಿ ತಮ್ಮ ಮುಂದಿನ ಆಲೋಚನೆಗಳನ್ನೇಲ್ಲಾ ಹಂಚಿಕೊಂಡು ತಮ್ಮ ಪರವಾದ ಪಡೆಯನ್ನೇ ಕಟ್ಟುತ್ತಿದ್ದರು.  ಹುಳಿಯಾರು, ಬುಕ್ಕಾಪಟ್ಟಣ ಹೋಬಳಿಗಳಿಗೂ ಅಷ್ಟೇ ಮಹತ್ವವನ್ನು ಕೊಟ್ಟಿದ್ದರೂ, ಇಷ್ಟೆಲ್ಲಾ ಪ್ರಯತ್ನ ಪಟ್ಟರು ಹೀಗಾಯಿತಲ್ಲಾವೆಂಬುದು ಒಂದಡೆಯಾದರೆ, ಮುಂದೇನು ಎಂಬ ವಿಚಾರ ಅವರನ್ನು ಸಾಕಷ್ಟು ಚಿಂತನೆಗೆ ಈಡುಮಾಡಿದೆ.
ಮುಂದಿನ ಅವಕಾಶಗಳು: ಇನ್ನೂ ಒಂದುವರ್ಷವಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದ ಕಸರತ್ತು ಶುರು ಮಾಡುತ್ತಾರೆಂಬ ಒಂದು ಲಹರಿ ಇದೆ, ತುಮಕೂರು ಎಂ.ಪಿ.ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪಧರ್ಿಸುವ ಈರಾದೆ ಇದೆ, ಆದರೆ ಅಲ್ಲಿಗಾಗಲೇ ಈಗಿರುವ ಎಂ.ಪಿ.ಯವರು ಕಾಂಗ್ರೆಸ್ಗೆ ಹೋಗುತ್ತಾರೆ, ಆ ಪಕ್ಷದಿಂದ ಸ್ಪಧರ್ಿಸುತ್ತಾರೆ ಎಂಬು ಕೂಗು ಕೇಳಿಬರುತ್ತಿರುವುದು ಇವರ ದಾರಿಗೆ ತೊಂದರೆಯಾಗಿದೆ. 
ಇನ್ನೂ ಕ್ಷೇತ್ರ ಬದಲಾಯಿಸುವ ಬಗ್ಗೆ ಯೋಚಿಸುವ ಆಲೋಚನೆಯ ಬಗ್ಗೆ ವಿಚಾರ ಬಂದರೂ ಕಳೆದ ಬಾರಿ ಸೋತ ಸಂದರ್ಭದಲ್ಲೇ ಅವರು ಒಂದು ಮಾತು ಹೇಳಿದ್ದರು, ಏನೇ ಆದರೂ ಸೋತ ಕ್ಷೇತ್ರದಲ್ಲಿ ಗೆದ್ದನಂತರವೇ  ಬದಲಾವಣೆಯ ಆಲೋಚನೆಯೇ ಹೊರತು ಅಲ್ಲಿಯವರೆಗೆ ನಾನು ಕ್ಷೇತ್ರ ಬದಲಾವಣೆಯ ಮಾತನಾಡುವುದಿಲ್ಲವೆಂದಿದ್ದರು. ಹಾಗಾಗಿ ಈ ಅವಕಾಶಗಳೂ ಕಡಿಮೆ ಈ ಎಲ್ಲಾ ಲೆಕ್ಕಾಚಾರಗಳ ತಾಳೆ ನೋಡಿದರೆ, ಅವರು ರಾಜಕೀಯ ನಿವೃತ್ತಿಯ ಮಾತನಾಡುತ್ತಿರುವುದು ಸಹಜವೇ ಎನಿಸುತ್ತಿದೆ ಆದರೆ ಅವರು ಮಾತ್ರ ಅಧಿಕೃತವಾಗಿ ಏನನ್ನು ಹೇಳಿಲ್ಲಾ, ಎಲ್ಲವನ್ನು ಕಾದು ನೋಡುವ ತಂತ್ರದ ಜೊತೆಗೆ ಮುಂದಿನ ಅವಕಾಶಗಳ ತೆರೆದಿಟ್ಟುಕೊಂಡಿದ್ದಾರೆ.
ರಾಜಕೀಯ ವಲಯದಲ್ಲಿನ ಅಭಿಪ್ರಾಯಗಳು: ಇನ್ನೂ ಅವರ ರಾಜಕೀಯ ವಲಯದಲ್ಲಿ ಗುತರ್ಿಸಿಕೊಂಡವರ ಪ್ರಕಾರ, ಅವರು ಮಾತುಗಳು ಬಹಳ ಮಾಮರ್ಿಕವಾಗಿರುತ್ತವೆ, ಅದನ್ನು ಹೇಗೆ ಸ್ವೀಕರಿಸಬೇಕೆಂಬುದು ಇಷ್ಟು ಹತ್ತಿರದಲ್ಲಿರುವ ನಮಗೆ ತಿಳಿದಿರುವುದಿಲ್ಲ, ಅವರ ಪ್ರತಿ ನಡೆಯೂ ಒಂದು ರೀತಿ ನಿಗೂಢ, ಏನೇ ಆಗಲಿ ಅಂತಹ ಮುತ್ಸದ್ದಿ ರಾಜಕಾರಣಿಯೊಬ್ಬರು ಸೋಲು ಗೆಲವನ್ನು ಸಮಾನವಾಗಿ ತೆಗೆದುಕೊಳ್ಳಬೇಕು, ಆಟಕ್ಕೆ ಬಂದವರೆಲ್ಲಾ ಗೆಲ್ಲಲಾಗುವುದಿಲ್ಲ ಹಾಗಂತ ರಾಜಕೀಯ ನಿವೃತ್ತಿಯಂತಹ  ನಿಧರ್ಾರ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ಅವರ ಅಭಿಮಾನಿ ಧನಂಜಯ.
ಇನ್ನೂ ಮಾಧುಸ್ವಾಮಿಯವರು ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು, ಬಿರುನುಡಿಗಳನ್ನು ಬಿಡಬೇಕು, ಬಡವರ, ದೀನ ದಲಿತರ ಬಗ್ಗೆ  ಮೃದುಧೋರಣೆ ಇರಬೇಕು, ಯಾವ ರಾಜಕಾರಣಿಯೂ ಸತ್ಯಸಂದನಲ್ಲ ಕೆಲವೊಂದನ್ನಾದರೂ ಅನುಸರಿಸಿಕೊಂಡು ಹೋಗುವ ಗುಣ ಬೆಳಸಿಕೊಳ್ಳಬೇಕು ಜನ ಸಾಮಾನ್ಯರೊಂದಿಗೆ ಬೆರಯುವ ಗುಣ ಬೆಳಸಿಕೊಂಡರೆ ಭರವಸೆಯ ನಾಯಕರಾಗಬಲ್ಲ  ಎಂದು ಹೇಳುತ್ತಲೇ ಆಕಾಶದ ಕಡೆ ಮುಗ ಮಾಡುತ್ತಾನೆ ಹೆಸರು ಬಹಿರಂಗ ಪಡಿಸಲಿಚ್ಚಸದ ಅವರ ನಿಕಟವತರ್ಿ. 

 ಜನರ ಪ್ರೀತಿ,ವಿಶ್ವಾಸದ ಜೊತೆಗೆ ಕ್ಷೇತ್ರದ ಅಭಿವೃದ್ದಿಯೇ ನನ್ನ ಆದ್ಯತೆ: ಶಾಸಕ ಸಿ.ಬಿ.ಸುರೇಶ್ಬಾಬು

ಚಿಕ್ಕನಾಯಕನಹಳ್ಳಿ,ಮೇ.23 : ಕ್ಷೇತ್ರದ ಎಲ್ಲಾ ವರ್ಗದ ಜನತೆಯ ಆಶೀವರ್ಾದದಿಂದ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು ನನ್ನ 42ವರ್ಷ ಜೀವನದಲ್ಲಿ ಐದು ಬಾರಿ ಚುನಾವಣೆ ಎದುರಿಸಿ 3ಬಾರಿ ಗೆಲುವು ಹಾಗೂ 2ಬಾರಿ ಸೋಲನ್ನು ಕಂಡಿರುವೆ, ಶಾಸಕನಾಗಿ ಅಧಿಕಾರವಿದೆ ಎಂದು ನಾನೂ ಎಂದಿಗೂ ದರ್ಪದಿಂದ ವತರ್ಿಸದೆ ಜನರ ಪ್ರೀತಿ, ವಿಶ್ವಾಸಗಳಿಸಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗಿರುವೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಅಧಿಕಾರಾವಧಿಯಲ್ಲಿ ತಾಲ್ಲೂಕಿನಲ್ಲಿ ಒಂದು ಸುಸಜ್ಜಿತವಾದ ತೀ.ನಂ.ಶ್ರೀ ಭವನ ನಿಮರ್ಾಣ, ಹೇಮಾವತಿ ಕುಡಿಯುವ ನೀರನ್ನು ತಾಲ್ಲೂಕಿನ ಜನತೆಗೆ ಸಿಗುವಂತೆ ಮಾಡುವುದು, ತಾಲ್ಲೂಕಿನಲ್ಲಿ ವಿದ್ಯಾಥರ್ಿಗಳಿಗಾಗಿ ಒಂದು ಸಕರ್ಾರಿ ಅಥವಾ ಖಾಸಗಿ ಪಾಲಿಟೆಕ್ನಿಕ್ ಕಾಲೇಜು ತರುವುದಾಗಿ ತಿಳಸಿದರು.
ತಾಲ್ಲೂಕಿನಲ್ಲಿ ಆರಂಭಿಸಲು ಉದ್ದೇಶಿಸಿರುವ  ಗಾಮರ್ೆಂಟ್ಸ್ಗೆ ಈಗಾಗಲೇ ನಾಲ್ಕೈದು ಪ್ರತಿಷ್ಠಿತ ಗಾಮರ್ೆಂಟ್ಸ್ ಕಂಪನಿಗಳಲ್ಲಿ ಚಚರ್ಿಸಿದ್ದು ಅವರು ತಾಲ್ಲೂಕಿನಲ್ಲಿ ಗಾಮರ್ೆಂಟ್ಸ್ ಆರಂಭಿಸಲು ಮುಂದಾಗಿದ್ದಾರೆ ಎಂದರಲ್ಲದೆ, ಈ ಮೂಲಕ ತಾಲ್ಲೂಕಿನ ನಿರುದ್ಯೋಗ ಯುವಕ, ಯುವತಿಯರು ಗುಳೇ ಹೋಗದೇ ತಮ್ಮ ಸ್ಥಳದಲ್ಲೇ ಉತ್ತಮ ಸಂಬಳ ಪಡೆದು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಈ ಕಾರ್ಯಕ್ಕೆ ಎಲ್ಲಾ ಸಂಘ-ಸಂಸ್ಥೆಗಳ ನೆರವು ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದರಲ್ಲದೆ ಜನತೆಯಲ್ಲಿ ಮನೆ ಮಾಡಿರುವ ಜಾತಿ ವ್ಯವಸ್ಥೆ ಹಾಗೂ ಭೇದ-ಭಾವ ತೊಲಗಿಸಲು ಕರೆ ನೀಡಿದರು.
ಸಾರ್ವಜನಿಕ ಸೇವೆಗೆ ಹೆಚ್ಚಿನ ಒತ್ತು ನೀಡಿ ಅವರ ಅಭಿವೃದ್ದಿ ಮೂಲಕ ತಮ್ಮ ಸಂಸ್ಥೆಯ ಏಳಿಗೆಯನ್ನು ಕಾಣುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ಸಂಸ್ಥೆಯ ಶಿಸ್ತಿನ ಆದರ್ಶದ ಸೇವೆ ಇನ್ನಷ್ಟು ಹೆಚ್ಚಲಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆಶಿಸಿದರು.
ರೋಟರಿಯ ಜಿಲ್ಲಾ 3190ರ ಗವರ್ನರ್ ರೊ.ಆರ್.ಬದರಿಪ್ರಸಾದ್ ಮಾತನಾಡಿ ರೋಟರಿ ಅಧ್ಯಕ್ಷ ಹಾಗೂ ಕಾರ್ಯದಶರ್ಿ ಹುದ್ದೆ ಜವಬ್ದಾರಿಯುತವಾದ ಅಧಿಕಾರ, ಇಲ್ಲಿ ಸಾರ್ವಜನಿಕರ ಸೇವೆಗೆ ತಮ್ಮ ಸಮಯವನ್ನು ಮುಡಿಪಾಗಿಡಬೇಕು, ರೋಟರಿ ಸಂಸ್ಥೆ ಸಾರ್ವಜನಿಕರಿಗಾಗಿ ಹಲವು ಸೇವೆ ನೀಡಿದ್ದು ತಾಲ್ಲೂಕಿನಲ್ಲಿ ಪುರಸಭೆ ಜಾಗ ನೀಡಿದ್ದರೆ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿಮರ್ಿಸಲು ಮುಂದಾಗಿದ್ದೆವು ಆದರೆ ಜಮೀನಿನ ಸಮಸ್ಯೆಯಿಂದ ಕೆಲಸವಾಗಲಿಲ್ಲ ಮುಂದೆ ಪುರಸಭೆ ಹಾಗೂ ಶಾಸಕರು ಸಂಸ್ಥೆಯೊಂದಿಗೆ ಕೈ ಜೋಡಿಸಿದರೆ  ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.
ರೊಟರಿಯ ಅಸಿಸ್ಟೆಂಟ್ ಗವರ್ನರ್ ರೊ.ಬಿಳಿಗೆರೆ ಶಿವಕುಮಾರ್ ಮಾತನಾಡಿ ಒಂದು ತಿಂಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ರೋಟರಿ ಅಧ್ಯಕ್ಷ, ಕಾರ್ಯದಶರ್ಿಗಳ ಅಧಿಕಾರಾವಧಿಯು  ಮುಗಿಯಲಿದ್ದು ಮುಂದೆ ಅಧಿಕಾರ ವಹಿಸಿಕೊಳ್ಳಲಿರುವ ಅಧ್ಯಕ್ಷರು, ಎಂ.ವಿ.ನಾಗರಾಜ್ರಾವ್ರವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಉತ್ತಮ ಕಾರ್ಯಕ್ರಮಗಳನ್ನು ನಡೆಸಿರಿ ಎಂದು ತಿಳಿಸಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸನ್ಮಾನ ಸ್ವೀಕರಿಸಿ ಮಾತನಾಡಿ ರೋಟರಿ ಸಂಸ್ಥೆ ಪೋಲಿಯೋ ನಿಮರ್ೂಲನಾ ರಾಷ್ಟ್ರ ಮಾಡುವಲ್ಲಿ ಯಶಸ್ವಿಯೂ ಆಗಿದೆ, ರೋಟರಿ ಸಂಸ್ಥೆಯಿಂದ ತಾಲ್ಲೂಕಿನಲ್ಲಿ 50ಮನೆಗನ್ನು ನಿಮರ್ಾಣ ಮಾಡಿಕೊಡುವ ಕಾರ್ಯ ಉತ್ತಮವಾಗಿದ್ದು ಈ ಕಾರ್ಯಕ್ಕೆ ಪುರಸಭೆ ಸ್ಪಂದಿಸುತ್ತದೆ ಎಂದರಲ್ಲದೆ ತಾಲ್ಲೂಕನ್ನು ಕಸಮುಕ್ತ ನಗರವಾಗಲು ಪುರಸಭೆ ತೀಮರ್ಾನಿಸಿದ್ದು ಇದಕ್ಕೆ ರೋಟರಿ ಸಂಸ್ಥೆ ನಮ್ಮೊಂದಿಗೆ ಕೈ ಜೋಡಿಸುವಂತೆ ಕೋರಿದರು. 
ಸಮಾರಂಭದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಿಸಲಾಯಿತು. ಹಾಗೂ ತಾಲ್ಲೂಕಿನ 30 ಶಾಲೆಗಳಿಗೆ ಉಚಿತ ವಾಟರ್ ಪಿಲ್ಟರ್ನ್ನು ನೀಡಲಾಯಿತು. 
ಸಮಾರಂಭದಲ್ಲಿ  ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಇನ್ನರ್ವೀಲ್ ಅಧ್ಯಕ್ಷೆ ಭವಾನಿಜಯರಾಂ, ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.

ಬೇಸಿಗೆಯ ರಂಗತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಮೇ.23: ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಬೇಸಿಗೆಯ ರಂಗತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ಎಸ್.ಗಂಗಾಧರ್ ತಿಳಿಸಿದ್ದಾರೆ.
ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ26 ಭಾನುವಾರ ಬೆಳಿಗ್ಗೆ 10ಗಂಟೆಗೆ ಬೇಸಿಗೆಯ ರಂಗತರಬೇತಿ ಶಿಬಿರ ಪ್ರಾರಂಭವಾಗುವುದು. ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜಿನ ವಿಧ್ಯಾಥರ್ಿಗಳಿಗೆ ಚಿ.ನಾ.ಹಳ್ಳಿಯ ಸ್ವರಗಂಗಾ ಸ್ಕೂಲ್ ಆಫ್ ಅಕಾಡಮಿ ವತಿಯಿಂದ ವಚನಗಳು, ಶ್ಲೋಕಗಳು, ಸುಗಮ ಸಂಗೀತ, ಭಕ್ತಿಗೀತೆಗಳು, ಚಲನಚಿತ್ರ ಗೀತೆಗಳಿಗೆ ತರಬೇತಿ ಮತ್ತು ರಂಗ ಅಭಿನಯವನ್ನು ಹೇಳಿಕೊಡಲಾಗುವುದು. ಗಾನವಿಶಾರದ ಸಂಗೀತ ವಾದ್ಯವೈವಿದ್ಯ ನಾಟ್ಯ ಸಂಘದ ಜೂ.ಪಿ.ಬಿ.ಶ್ರೀನಿವಾಸ್ ಎಂ.ಸಿ.ಕಲ್ಲೇಶ್ ಮತ್ತು ತಾಲ್ಲೂಕು ರಂಗಕಲಾವಿದರ ಸಂಘ ಇವರ ಸಹಕಾರದಲ್ಲಿ ವಿಶೇಷವಾಗಿ ಶಿಬಿರದಲ್ಲಿ ತರಬೇತಿಯಾದ ಉತ್ತಮ ಕಲಾಪ್ರತಿಭೆಗಳನ್ನು ಗುರುತಿಸಿ ದೂರದರ್ಶನ(ಚಂದನ ವಾಹಿನಿ)ಹಾಗು ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿ ಕೊಡುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9538431494.
ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿ
ಚಿಕ್ಕನಾಯಕನಹಳ್ಳಿ,ಮೇ.23 :ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿಯಾಗಿದ್ದು ಪಾರದರ್ಶಕ ತನಿಖೆ ನಡೆಸಿ ಬೇಜವ್ದಾರಿ ತೋರಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು.
 ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಶೆಟ್ಟಿಕೆರೆ ಹೋಬಳಿ ದಿಬ್ಬದಹಳ್ಳಿಯಲ್ಲಿ ಬುಧವಾರ ಸಂಜೆ 7.30ರ ಸುಮಾರಿನಲ್ಲಿ ಹೈ ಓಲ್ಟೇಜ್ ವಿದ್ಯತ್ ಪ್ರವಹಿಸಿದ್ದರ ಪರಿಣಾಮ ಶಿವಕುಮಾರ್ ಅವರ ಪುತ್ರ ಸುಮಾರು 3 ವರ್ಷದ ಪ್ರಜ್ವಲ್ ಎಂಬ ಬಾಲಕ ಟಿ.ವಿ.ಸ್ಟಾಂಡ್ ಮುಟ್ಟುತ್ತಲೇ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದು ಸಂತ್ರಸ್ತ ಕುಟುಂಬಕ್ಕೆ ಗುರುವಾರ ಬೆಸ್ಕಾಂನಿಂದ ಕೊಡಮಾಡಿದ 2ಲಕ್ಷ ಮೊತ್ತದ ಚಕ್ ವಿತರಿಸಿ ಮಾತನಾಡುತ್ತಿದ್ದರು
   ಈ ಗ್ರಾಮದಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ಏರುಪೇರಾಗುತ್ತಿತ್ತು. 220 ವೋಲ್ಟೇಜ್ ಬದಲಿಗೆ 440 ವೋಲ್ಟೇಜ್ ವಿದ್ಯುತ್ ಹರಿಯುತ್ತಿತ್ತು. ಗೋಡೆಗಳಿಗೆ ಗ್ರೌಂಡ್ ಆಗಿ ಹಲವರಿಗೆ ಸಣ್ಣ ಪುಟ್ಟ ಶಾಕ್ಗಳೂ ಆಗಿದ್ದು ಈ ಬಗ್ಗೆ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ ಎಇಇ ಅವರಿಗೆ ತಿಳಿಸಿದ್ದರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಆದ್ದರಿಂದ ಗ್ರಾಮಸ್ತರೇ ವಿದ್ಯತ್ ಸಂಪರ್ಕವನ್ನು ತೆಗೆದಿದ್ದರು ಎಂದು ಗ್ರಾಮಸ್ತರು ದೂರಿದರಲ್ಲದೆ. ಬುಧವಾರ ಗ್ರಾಮಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ವಿದ್ಯತ್ ಪರಿವರ್ತಕಕ್ಕೆ ಸಂಪರ್ಕ ಕಲ್ಪಿಸಿ ಪರಿಶೀಲಿಸದೆ ಮರಳಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ತರು ದೂರಿದರು
 ತನಿಕೆ ಕೈಗೋಂಡಿರುವ ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್ ತನಿಕೆ ಪೂರ್ಣಗೊಂಡ ನಂತರ ಘಟನೆಯ ಪೂರ್ಣವಿವರ ನೀಡಲಾಗುವುದು ಎಂದು ತಿಳಿಸಿದರು.
 ಸ್ಥಳಕ್ಕೆ ತಹಶಿಲ್ದಾರ್ ಕಾಮಾಕ್ಷಮ್ಮ,ಸಿಡಿಪಿಒ ಅನೀಸ್ ಖೈಸರ್,ಡೆಪ್ಯೂಟಿ ಎಲೆಕ್ತ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್,ವೈತ್ತ ನಿರೀಕ್ಷಕ ಪ್ರಭಾಕರ್,ಎಎಸೈ ನರಸಿಂಹಯ್ಯ ಮುಂತಾದವರು ಬೇಟಿ ನೀಡಿದ್ದರು.
ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿ
ಚಿಕ್ಕನಾಯಕನಹಳ್ಳಿ,ಮೇ.23 : ತಾಲ್ಲೂಕು ಸಮಾಜಕಲ್ಯಾಣ ಇಲಾಖಾ ವ್ಯಾಪ್ತಿಯ ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ 2013-14ನೇ ಸಾಲಿಗೆ ಸೇರ ಬಯಸುವ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಠ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿ, ವಿದ್ಯಾಥರ್ಿನಿಯರಿಂದ ಅಜರ್ಿಯನ್ನು ಆಹ್ವಾನಿಸಿದ್ದು ಜೂನ್ 2013ರ 10ನೇ ತಾರೀಖು ಅಜರ್ಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಬೆಳಗುಲಿ, ಬರಕನಹಾಳ್, ಹುಳಿಯಾರು, ದಸೂಡಿ, ಗುರುವಾಪುರ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಹುಳಿಯಾರು ಈ ನಿಲಯಗಳಲ್ಲಿ ಅಜರ್ಿ ಸಲ್ಲಿಸಬಹುದು. ಸಂಬಂಧಿಸಿದ ವಿದ್ಯಾಥರ್ಿ ನಿಲಯಗಳಲ್ಲಿ ಅಜರ್ಿಗಳನ್ನು ಉಚಿತವಾಗಿ ಪಡೆಯಬಹುದು ಮತ್ತು ಕಛೇರಿ ವೇಳೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಅಜರ್ಿಗಳನ್ನು ಪಡೆಯಬಹುದು.
ಅಜರ್ಿಯೊಂದಿಗೆ ಇತ್ತೀಚಿನ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ ಲಗತ್ತಿಸಿ ಸಲ್ಲಿಸಲು ಕೋರಿದೆ. ಹಾಗೂ ಈ ವಸತಿ ನಿಲಯಗಳಲ್ಲಿ ಉಚಿತವಾಗಿ ಊಟ, ತಿಂಡಿ, ಸಮವಸ್ತ್ರ, ಸ್ಟೇಷನರಿ, ಸಂಕೀರ್ಣ ವಸ್ತುಗಳನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Monday, May 20, 2013



ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿ
ಚಿಕ್ಕನಾಯಕನಹಳ್ಳಿ,ಮೇ.20 : ಪ್ರತಿ ಹೋಬಳಿಯಲ್ಲಿ ಎರಡು ಕುಚ್ಚಗ್ರಾಮಗಳನ್ನು ರಚಿಸಿ, ಆ ಗ್ರಾಮಗಳಿಗೆ ನವಣೆ ಮತ್ತು ತೊಗರಿಬೇಳೆ ಬೆಳಸಿ ಕೃಷಿ ಪ್ರಾತ್ಯಕ್ಷಿಕೆ ತರಬೇತಿ ಕ್ಷೇತ್ರೋತ್ಸವ ಪ್ರವಾಸವನ್ನು ವ್ಯವಸ್ಥಿತವಾಗಿ ನಡೆಸುವಂತೆ  ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿಯಲ್ಲಿ ರೈತರಿಗೆ ತಿಳಿಸಲಾಯಿತು.
ಕೃಷಿ ಇಲಾಖೆ ವತಿಯಿಂದ ಸೋಮವಾರದಂದು ನಡೆದ ಆತ್ಮಯೋಜನೆಯ ತಾಂತ್ರಿಕ ಸಭೆ, ತಾಲ್ಲೂಕು ರೈತರ ಸಲಹಾ ಸಮಿತಿಯಲ್ಲಿ ರೈತರು ಕೃಷಿಯಲ್ಲಿ ಬೆಳೆಗಳನ್ನು ಯಾವ ರೀತಿ ಬೆಳೆಯಬೇಕು ಅದಕ್ಕೆ ಅಳವಡಿಸಿಕೊಳ್ಳಬಹುದಾದ ವಿಧಾನದ ಬಗ್ಗೆ ತಿಳಿಸಲಾಯಿತು.
ತಾಂತ್ರಿಕ ಸಭೆಯಲ್ಲಿ ತಾಲ್ಲೂಕಿನ ಕೃಷಿ ಅಭಿವೃದ್ದಿ ಅಧಿಕಾರಿಗಳಾದ ಹೆಚ್.ಎನ್.ಕೃಷ್ಣಪ್ಪ, ಕೆವಿಕೆಯ ಕಾರ್ಯಕ್ರಮ ಸಂಯೋಜಕ ಸುಜಿತ್ ಜಿ.ಎಮ್, ಮತ್ತು ಕೃಷಿ ವಿಸ್ತರಣೆ ವಿಷಯ ತಜ್ಞರಾದ ಎಮ್.ಎಮ್.ಶಂಕರ್ ಭಾಗವಹಿಸಿ ರೈತರ ಸಲಹಾ ಸಮಿತಿಯ ಸದಸ್ಯರುಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಗೋಪಾಲನಹಳ್ಳಿ, ಕುಪ್ಪೂರು ಇತರೆ ಹಳ್ಳಿಗಳ ರೈತ ಸಲಹಾ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಅಧಿಕಾರಿಗಳಾದ ಕಾಂತರಾಜು ಕಾರ್ಯಕ್ರಮ ನಿರೂಪಿಸಿದರು.


ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಳ್ಳಿ
ಚಿಕ್ಕನಾಯಕನಹಳ್ಳಿ,ಮೇ.20 : ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಂಡು ಪರಿಹಾರ ಕಂಡುಕೊಳ್ಳುವುದರಿಂದ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನ ತಪ್ಪಿಸಬಹುದು ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸಲಹೆ ನೀಡಿದರು.
   ಪಟ್ಟಣದ ರೋಟರಿ ಭವನದಲ್ಲಿ ತಾಲ್ಲೂಕ್ ಡಾಕ್ಟರ್ಸ್ ಅಸೋಸಿಯೇಷನ್, ರೋಟರಿ ಕ್ಲಬ್ ಮತ್ತು ಸಕರ್ಾರಿ ಸಾರ್ವಜನಿಕ ಆಸ್ಪತ್ರೆ, ವಾಸನ್ ಐ ಕೇರ್ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರೋಟರಿ ಸಂಸ್ಥೆ ಈ ರೀತಿಯ ಸಮಾಜ ಸೇವಾ ಕಾರ್ಯಗಳಿಗೆ ಯಾವಾಗಲೂ ಮುಂದಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಕರೆ ನೀಡಿದರು.
  ಶಿಬಿರದಲ್ಲಿ ಕಿವಿ,ಗಂಟಲು,ಮೂಗು ಹಾಗು ನೇತ್ರ ದೋಷ ತಪಾಸಣೆಯನ್ನು ಮಾಡಲಾಯಿತು. ಶಿಬಿರದ ಮೇಲ್ವಿಚಾರಣೆಯನ್ನು ಆಡಳಿತ ವೈದ್ಯಾಧಿಕಾರಿ ಡಾ.ಎನ್.ಎಂ.ಶಿವಕುಮಾರ್, ತಾ.ವೈದ್ಯಾಧಿಕಾರಿ ಡಾ.ಕೆ.ಎಂ.ಶಿವಕುಮಾರ್ ನಡೆಸಿದರೆ ರೊಟೇರಿಯನ್ಗಳಾದ ಸಿ.ಎನ್.ಪ್ರದೀಪ್ ಕುಮಾರ್, ಎಸ್.ಜಿ.ಸುರೇಶ್ ಮತ್ತು ಇಬ್ರಾಹಿಂಸಾಬ್ ಶಿಬಿರಾಧಿಪತ್ಯವನ್ನು ನೋಡಿಕೊಂಡರು. ಡಾಕ್ಟರ್ಸ್ ಅಸೋಷಿಯನ್ನ ಅಧ್ಯಕ್ಷ ಸಿ.ಜಿ.ಜಗದೀಶ್, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ಮತ್ತು ಕಾರ್ಯದಶರ್ಿ ಡಾ.ಜಿ.ಪ್ರಶಾಂತ್ ಕುಮಾರ್ ಶೆಟ್ಟಿ ಉಸ್ತುವಾರಿ ವಹಿಸಿದ್ದರು. ಇನ್ನರ್ ವ್ಹೀಲ್ ಅಧ್ಯಕ್ಷೆ ನಾಗರತ್ನಮ್ಮ ಉಪಸ್ತಿತರಿದ್ದರು. ನೂರಾರು ಜನ ಶಿಬಿರದ ಸದುಪಯೊಗ ಪಡೆದುಕೊಂಡರು.


Saturday, May 18, 2013


ತಾಲೂಕಿನ ಸಕರ್ಾರಿ ಆಸ್ಪತ್ರೆಗಳಲ್ಲಿ ಶೇ.45ರಷ್ಟು ಸಿಬ್ಬಂದಿಗಳ ಕೊರತೆ
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ಆಸ್ಪತ್ರೆಗಳಲ್ಲಿ ಶೇ.45 ಸಿಬ್ಬಂದಿಗಳ ಕೊರತೆ ಇದ್ದು, ಜನಸಂಖ್ಯೆಗೆ ಅನುಗಣವಾಗಿ ಆಸ್ಪತ್ರೆಗಳಲ್ಲಿ ಮೂಲಭೂತ ಅಗತ್ಯಗಳಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.
ತಾಲೂಕಿನ ಶೆಟ್ಟೀಕೆರೆಯಲ್ಲಿ ನಡೆದ ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ  ಮೂಲಭೂತ ಸೌಕರ್ಯಗಳಿಲ್ಲದೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ ಎಂದರಲ್ಲದೆ, ಈ ಬಗ್ಗೆ ಜನರಿಗೆ ಆರೋಗ್ಯ ಶಿಕ್ಷಣ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಜನರೇ ಇರುವುದಿಲ್ಲವೆಂದ ಅವರು, ಅದೇ ಹಣ ಹಂಚುವ ಕಾರ್ಯಕ್ರಮ ಹಮ್ಮಿಕೊಂಡರೆ ನಾ ಮುಂದು, ತಾ ಮುಂದು ಎಂದು ಒಬ್ಬರ ಮೇಲೊಬ್ಬರು ಬರುತ್ತರೆ, ಶಿಕ್ಷಣ ನೀಡುತ್ತವೆಂದರೆ ಬೆರಳೆಣಿಕೆಯಷ್ಟು ಜನರು ಇರುವುದಿಲ್ಲವೆಂದರು. ಆನರು ಆಸ್ಪತ್ರೆಯಿಂದ ಹೇಗೆ ತಮ್ಮ ಕಾಯಿಲೆ ನಿವಾರಣೆಗೆ ಸ್ಪಂದಿಸಬೇಕೆಂದು ಅಪೇಕ್ಷಿಸುತ್ತಾರೋ ಅದೇರೀತಿ ಇಲಾಖೆಯು ಸಮುದಾಯದಿಂದ ಕೆಲವೊಂದು ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಬೇಕೆಂಬ ಹಂಬಲವನ್ನು ಹೊಂದಿರುತ್ತದೆ ಎಂದರು.
ತಾ.ಪಂ.ಸದಸ್ಯ ರಮೇಶ್ ಕುಮಾರ್ ಮಾತನಾಡಿ,ಇಲ್ಲಿನ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು, ಇಲ್ಲಿನ ನಸರ್್ಗಳು ಹೆರಿಗೆ ಮಾಡಿ ಅವರ ಕಡೆಯಿಂದ ಹಣವನ್ನು ವಸೂಲಿ ಮಾಡಿ ಹಂಚಿಕೊಳ್ಳಲು ಕಿತ್ತಾಟಮಾಡುತ್ತಾರೆ, ಒಂದಿಬ್ಬರು ನಸರ್್ಗಳು ರೋಗಿಗಳ ಜೊತೆ ಅಸಭ್ಯವಾಗಿ ವತರ್ಿಸುತ್ತಾರೆ ಎಂದರಲ್ಲದೆ, ನಾನು ಈ ರೀತಿ ನೇರವಾಗಿ ಮಾತನಾಡುವುದು ಹಾಗೂ ಈ ಸಭೆಗೆ ಬಂದಿರುವುದೇ ಅವರಿಗೆ ಅಪಥ್ಯವಾಗಿದೆ ಎಂದರು.
ಗ್ರಾಮಸ್ವರಾಜ್ಯ ಚಿಂತಕ ರಘು ಗೋಪಾಲನಹಳ್ಳಿ ಮಾತನಾಡಿ, ರಕ್ತದಾನ, ಮರಣದ ನಂತರ ನೇತ್ರದಾನ ಹಾಗೂ ವೈದ್ಯಕೀಯ ಕಾಲೇಜ್ಗಳಿಗೆ ದೇಹದಾನ ಮಾಡುವುದರಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಜೊತೆಗೆ ದಾನದ ಮಹತ್ವವನ್ನು ಮುಂದಿನ ಪೀಳಿಗೆಗೆ  ಒಳ್ಳೆಯ ಮಾರ್ಗವನ್ನು ತೋರಿಸಿಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಗಣೇಶ್, ನೂತನ ವೈದ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಡಾ.ರಾಧಿಕ ಉಪಸ್ಥಿತರಿದ್ದರು.
ಫಾರ್ಮಸಿಸ್ಟ್ ರಘುನಾಥ್ ಸ್ವಾಗತಿಸಿ ನಿರೂಪಿಸಿದರೆ, ಆರೋಗ್ಯ ಸಹಾಯಕ ನರೇಂದ್ರ ವಂದಿಸಿದರು.
13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣವನ್ನು ಕುಡಿಯುವ ನೀರಿಗೆ ಮೀಸಲಿಡಿ
           

ಚಿಕ್ಕನಾಯಕನಹಳ್ಳಿ,ಮೇ.18 : 13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣದಲ್ಲಿ ಶೇ.90ರಷ್ಟು ಕಟ್ಟಡಗಳ ಅಭಿವೃದ್ದಿ ಕಾರ್ಯಗಳಿಗೆ ಕಾಯ್ದಿರಿಸಿ ಸುತ್ತೋಲೆ ಹೊರಡಿಸಿರುವುದನ್ನು ಪ್ರಶ್ನಿಸಿದ ತಾ.ಪಂ.ಸದಸ್ಯರು ಕುಡಿಯುವ ನೀರಿನ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಲು ಸಕರ್ಾರ ಕ್ರಮ ಕೈಗೊಳ್ಳುವಂತೆ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಜಿಲ್ಲೆಯಲ್ಲಿ ಮಳೆ ಇಲ್ಲದೆ ಕುಡಿಯುವ ನೀರಿಗಾಗಿ ಹಳ್ಳಿಗಳಲ್ಲಿ ತೀವ್ರ ನೀರಿನ ಕೊರತೆಯಿಂದ ಜನ ತತ್ತರಿಸುವ ಸಂದರ್ಭದಲಿ ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ, ತೆಂಗು ಅಡಿಕೆ ಬೆಳೆಗೆ ನೀರಿಲ್ಲದೆ ಮರಗಳು ಒಣಗುತ್ತಿವೆ, ತೆಂಗು ಅಡಿಕೆ ಬೆಳೆಗಾರರ ನೆರವಿಗೆ ಬರಬೇಕಾದ ಸಕರ್ಾರ ಕುಡಿಯುವ ನೀರಿಗೆ ಆದ್ಯತೆ ನೀಡದೇ, ಕಟ್ಟಡಗಳಿಗೆ ಆದ್ಯತೆ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ತಾ.ಪಂ.ಸದಸ್ಯರು ಸಕರ್ಾರವನ್ನು ಒತ್ತಾಯಿಸಿದ್ದಾರೆ. ಅದ್ದೂರಿಯಾಗಿ ಆಚರಿಸಬೇಕಾದ ಬಸವಜಯಂತಿ ಕಾರ್ಯಕ್ರಮಕ್ಕೆ ಕೆಲವು ತಾ.ಪಂ.ಸದಸ್ಯರಿಗೆ ತಿಳಿಸದೆ ತಾಲ್ಲೂಕು ಆಡಳಿತ ಅವಮಾನಿಸಿದೆ ಎಂದು ಸದಸ್ಯ ಶಶಿಧರ್ ಆರೋಪಿಸಿದರು.
ಜಿಲ್ಲಾ ಪಂಚಾಯತ್ನಲ್ಲಿ ತಾಲ್ಲೂಕಿನ ಯಾವುದೇ ಅಭಿವೃದ್ದಿಗೆ ಅನುದಾನವನ್ನು ಪಡೆಯಬೇಕಾದರೆ ಪ್ರತಿಯೊಂದು ಹಂತದಲ್ಲೂ ಶೇ.35ರಷ್ಟು ಕಮಿಷನ್ಗೆ ಹಣ ಹೋಗುತ್ತದೆ, ಕಳಪೆ ಕಾಮಗಾರಿ ಮಾಡಿದರೆ ಜನ ನಮ್ಮನ್ನು ದೂರುತ್ತಾರೆ, ಆಕ್ಷನ್ ಪ್ಲಾನ್ ಮಾಡಿ ಅನುಮೋದನೆಗೆ ಕಳಿಸಿದರೆ ಎರಡು ತಿಂಗಳಾದರೂ ಮಂಜೂರಾತಿ ನೀಡುವುದಿಲ್ಲ, ಆಕ್ಷನ್ ಪ್ಲಾನ್ ಬದಲಾಯಿಸಿಲು ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರ ಮಂಜೂರಾತಿ ನೀಡುತ್ತಾರೆ ಎಂದರಲ್ಲದೆ ಟ್ರಜರಿಯಲ್ಲಿ ಬಿಲ್ ತೆಗೆದುಕೊಳ್ಳಬೇಕಾದರೆ ಶೇ.1ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಆಕ್ಷೇಪಿಸಿ ಟ್ರಜರಿ ಕ್ಲಕರ್್ನ್ನು ಸಭೆಗೆ ಕರೆಸಿ ಛೀಮಾರಿ ಹಾಕಿದ ಪ್ರಸಂಗ ನಡೆಯಿತು.
ತಾಲ್ಲೂಕಿನಲ್ಲಿ ಎನ್.ಬಿ.ಎ ಹಾಗೂ ಎನ್.ಆರ್.ಇ.ಜಿ.ಇ ಯೋಜನೆ ಅಡಿಯಲ್ಲಿ ನಿಮರ್ಿಸಿದ ಶೌಚಾಲಯಕ್ಕೆ ಒಟ್ಟು 1,36,22,400 ರೂ ಬಿಡುಗಡೆಯಾಗಿದ್ದು ಇದರಲ್ಲಿ 67,84,300ರೂ ಖಚರ್ಾಗಿದೆ, ತಾಲ್ಲೂಕಿನಲ್ಲಿ 4800 ಶೌಚಾಲಯ ನಿಮರ್ಿಸಲು ನಿಗದಿಪಡಿಸಲಾಗಿತ್ತು 5039 ಶೌಚಾಲಯಗಳನ್ನು ನಿಮರ್ಿಸಲಾಗಿದೆ, ಜಿಲ್ಲೆಯಲ್ಲಿ ನಾವು ಪ್ರಥಮಸ್ಥಾನದಲ್ಲಿದ್ದೇವೆ ಎಂದು ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ತಿಳಿಸಿದರು.
ಕನ್ನಡ ಸಂಘದ ವೇದಿಕೆ ಬಳಿ ಕಳೆದ 5ವರ್ಷಗಳ ಹಿಂದೆ 5ಮಳಿಗೆಯನ್ನು  ತಾ.ಪಂ.ವತಿಯಿಂದ ನಿಮರ್ಿಸಿದ್ದು ಅದನ್ನು ಇದುವರೆಗೆ ಬಾಡಿಗೆಗೆ ನೀಡದೇ ಇರುವುದರಿಂದ ಸಕರ್ಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಠ ಉಂಟಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾ.ಪಂ.ಸದಸ್ಯ ಶಶಿಧರ್ ಒತ್ತಾಯಿಸಿದರು.
ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದ್ದು ಕೊಳವೆ ಬಾವಿಗಳನ್ನು ಕೊರೆಸಿ ಎಂದು ಶಶಿಧರ್ ಆಗ್ರಹಿಸಿದರು. ಸಮಾಜ ಕಲ್ಯಾಣಿ ಇಲಾಖೆ ಅಧಿಕಾರಿಗಳು ಯಾವಾಗಲೂ ಕಛೇರಿಯಲ್ಲಿ ಇರುವುದಿಲ್ಲ ಎಂದು ತಾ.ಪಂ.ಸದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ತಿಪಟೂರಿನಿಂದ ಸಮಾಜ ಕಲ್ಯಾಣಾಧಿಕಾರಿಯನ್ನು ನಿಯೋಜಿಸಲಾಗಿದೆ ಆದರೂ ಇದುವರೆಗೂ ಅವರು ರಿಪೋಟ್ ಮಾಡಿಕೊಂಡಿಲ್ಲ ಆದ್ದರಿಂದ ಇವರಿಗೆ ನೋಟಿಸ್ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗೆ ಸಲಹೆ ನೀಡಿದರು.
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಇ.ಓ. ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚೇತನಗಂಗಾಧರ್, ಹೇಮಾವತಿ, ಲತಾ, ಸೀತಾರಾಮಯ್ಯ, ನವೀನ್, ರಮೇಶ್ಕುಮಾರ್, ಜಯಣ್ಣ  ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಕಿ ಆಕಸ್ಮಿಕದಿಂದ ಸಾವನ್ನಪ್ಪಿದ ನಾಗರತ್ನಮ್ಮ ಕುಟುಂಬದವರಿಗೆ ಸಕರ್ಾರದಿಂದ ಪರಿಹಾರ: ಶಾಸಕ ಸಿ.ಬಿ.ಎಸ್.
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ದೊಡ್ಡೇಣ್ಣೆಗೆರೆ ಗ್ರಾಮದಲ್ಲಿ ಇತ್ತೀಚೆಗೆ ಅಗ್ನಿ ದುರಂತ ನಡೆದು ಮೂರು ಮನೆ ಸುಟ್ಟು ಹೋಗಿದ್ದು, ನಾಗರತ್ನಮ್ಮ ಎಂಬುವರು ಅಸುನೀಗಿದ್ದು ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ಸಾಂತ್ವಾನ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು, ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದರಲ್ಲದೆ, ಪರಿಹಾರದ ವಿಷಯವಾಗಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಕರ್ಾರದಿಂದ ಹೆಚ್ಚಿನ ಪರಿಹಾರವನ್ನು ನೀಡುವಂತೆ ಒತ್ತಾಯಿಸದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಘಟನೆ ನಡೆದ 24 ಗಂಟೆ ಒಳಗೆ ನಾಗರತ್ನಮ್ಮ ಕುಟುಂಬದವರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಒಂದುವರೆ ಲಕ್ಷ ರೂಗಳ ಚೆಕ್ನ್ನು ನೀಡುವಂತೆ ತಹಶೀಲ್ದಾರ್ ರವರಿಗೆ ನೀಡಿದ ಆದೇಶದ ಮೇರೆಗೆ ತಹಶೀಲ್ದಾರ್ ಕಾಮಾಕ್ಷಮ್ಮ ಶಾಸಕರ ನೇತೃತ್ವದಲ್ಲಿ ನಾಗರತ್ನಮ್ಮ ಕುಟುಂಬದವರಿಗೆ ಚೆಕ್ ವಿತರಿಸಿದರು.
 ಬೆಂಕಿ ಅವಘಡದಿಂದಾದ ನಷ್ಟ: ಬಸಮ್ಮ ಎಂಬವರ ಮನೆಯಲ್ಲಿದ್ದ ಒಂದು ಜೊತೆ ಬಂಗಾರದ  ಓಲೆ, 50 ಸಾವಿರ ರೂ ಬೆಲೆ ಬಾಳುವ ವಸ್ತುಗಳು ಹಾಗೂ ವರದಯ್ಯನವರ ಮನೆ ಮತ್ತು ಅದರಲ್ಲಿದ್ದ ಒಂದುವರೆ ಲಕ್ಷ ರೂಗಳಷ್ಟು ವಸ್ತುಗಳ ನಾಶವಾಗಿವೆ ಹಾಗೂ ಮಕ್ಕಳ ಎಸ್.ಎಸ್.ಎಲ್.ಸಿ.ಯ ಅಂಕಪಟ್ಟಿ ಸೇರಿದಂತೆ ಶಾಲಾ ದಾಖಲಾತಿಗಳು ನಾಶವಾಗಿವೆ.
ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ದೊಡ್ಡಬಿದರೆ ಪಂಚಾಯಿತಿಯ ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಕರೆಯಲಾಗಿದೆ ಎಂದು ಸಿ.ಡಿ.ಪಿ.ಓ. ಅನೀಸ್ ಖೈಸರ್ ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರ ವ್ಯಾಪ್ತಿಯ ಸಾಮಾನ್ಯ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳೊಂದಿಗೆ ಜೂನ್ 15ರ ಸಂಜೆ 5.30ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿ ಸಭೆ

ಚಿಕ್ಕನಾಯಕನಹಳ್ಳಿ,ಮೇ.18: ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಶಾಸಕ ಸಿ.ಬಿ.ಸುರೇಶ್ಬಾಬು ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಇದೇ 20ರ ಸೋಮವಾರ ಮಧ್ಯಾಹ್ನ 3ಗಂಟೆಗೆ ತಾಲೂಕು ಕಛೇರಿಯಲ್ಲಿ ಕರೆಯಲಾಗಿದೆ ಎಂದು ಕಾರ್ಯದಶರ್ಿ ಮಂಜುನಾಥರಾಜ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಲೋಕಾಯುಕ್ತ ನಿರೀಕ್ಷಕರ ಜನ ಸಂಪರ್ಕ ಸಭೆ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇದೇ 21ರಂದು ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆಯವರೆಗೆ ತುಮಕೂರು ಲೋಕಾಯುಕ್ತ ಪೋಲಿಸ್ ನಿರೀಕ್ಷಕರು ಜನಸಂಪರ್ಕ ಸಭೆಯನ್ನು ನಡೆಸಲಿದ್ದು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಹಶೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, May 17, 2013

ಬಿಸಿಎಂ ವಿದ್ಯಾಥರ್ಿ ನಿಲಯಕ್ಕೆ ಪ್ರವೇಶವಕಾಶ
ಚಿಕ್ಕನಾಯಕನಹಳ್ಳಿ,ಮೇ.17 : 2013-14ನೇ ಸಾಲಿಗೆ ಸಕರ್ಾರಿ ಹಾಗೂ ಅನುದಾನಿತ ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಬಿಸಿಎಂ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ತಾಲ್ಲೂಕಿನ ಚಿಕ್ಕನಾಯಕನಹಳ್ಳಿ, ಕಂದಿಕೆರೆ, ಹುಳಿಯಾರು, ತಿಮ್ಮನಹಳ್ಳಿ, ಹೊಯ್ಸಳಕಟ್ಟೆಯ ಸಕರ್ಾರಿ ಬಿ.ಸಿ.ಎಂ. ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿನಿಲಯಗಳಲ್ಲಿ ಅಜರ್ಿ ಆಹ್ವಾನಿಸಿದ್ದು ನಿಗದಿತ ಅಜರ್ಿನಮೂನೆಗಳನ್ನು ಉಚಿತವಾಗಿ ಬಿ.ಸಿ.ಎಂ ಇಲಾಖೆಯ ವಿಸ್ತರಣಾಧಿಕಾರಿಗಳು ಇವರಿಂದ ಪಡೆಯಬಹುದಾಗಿದ್ದು ಭತರ್ಿ ಮಾಡಿದ ಅಜರ್ಿಗಳನ್ನು ಜೂನ್ 5ರ ಸಂಜೆ 5.30ರೊಳಗಾಗಿ ಕಛೇರಿಗೆ ಸಂಬಂಧಿಸಿದ ನಿಲಯ ಮೇಲ್ವಿಚಾರಕರಿಗೆ ದಾಖಲಾತಿಗಳೊಂದಿಗೆ ಸಲ್ಲಿಸಬೇಕು, ಅಪೂರ್ಣವಾದ ಹಾಗೂ ತಡವಾಗಿ ಬಂದಂತಹ ಅಜರ್ಿಗಳನ್ನು ತಿರಸ್ಕರಿಸಲಾಗುವುದು, ನವೀಕರಣ ವಿದ್ಯಾಥರ್ಿಗಳು ಮೇ 29ರೊಳಗೆ ಅಜರ್ಿಯನ್ನು ಸಲ್ಲಿಸಲುಬೇಕು.
ಪ್ರವೇಶ ಬಯಸುವ ವಿದ್ಯಾಥರ್ಿ ತಹಶೀಲ್ದಾರ್ರವರಿಂದ ಪಡೆದ ಜಾತಿ/ಆದಾಯ ಪ್ರಮಾಣ ಪತ್ರ, ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರವೇಶ ದೃಢೀಕರಣ ಪತ್ರ, ಗ್ರಾಮ ಪಂಚಾಯಿತಿ ಕಾರ್ಯದಶರ್ಿಯಿಂದ ಪಡೆದ ವಸತಿ ನಿಲಯಕ್ಕೂ ವಿದ್ಯಾಥರ್ಿಯ ಸ್ವಂತ ಸ್ಥಳಕ್ಕೂ ಇರುವ ಅಂತರದ ಸಟರ್ಿಫಿಕೇಟ್, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ ಪ್ರತಿ, ವಿದ್ಯಾಥರ್ಿಯ ಪಾಸ್ಪೋಟರ್್ ಅಳತೆಯ ಇತ್ತೀಚಿನ ಎರಡು ಭಾವಚಿತ್ರಗಳು ಸಲ್ಲಿಸಬೇಕು.
ಅಜರ್ಿ ಸಲ್ಲಿಸ ಬಯಸುವ ವಿದ್ಯಾಥರ್ಿಗಳು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತೀರ್ಣರಾಗಿರತಕ್ಕದ್ದು, ಅಭ್ಯಥರ್ಿಯ ಪೋಷಕರ ವಾಷರ್ಿಕ ವರಮಾನ 2ಎ, 2ಬಿ, 3ಎ, 3ಬಿ ವರ್ಗದವರು 44500/-ರೊಳಗೆ, ಪ್ರವರ್ಗ-1ರ ವಿದ್ಯಾಥರ್ಿಗಳಿಗೆ 100000/-ರೊಳಗೆ ಹಾಗೂ ಪರಿಶಿಷ್ಠ ಜಾತಿ/ ಪರಿಶಿಷ್ಟವರ್ಗಕ್ಕೆ ಸೇರಿದ ವಿದ್ಯಾಥರ್ಿಗಳಿಗೆ ರೂ.200000/-ರೊಳಗೆ ವರಮಾನ ಇರಬೇಕು, ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪ್ರವೇಶಕ್ಕೆ ಅರ್ಹರಾಗಿದ್ದು ಶೈಕ್ಷಣಿಕ ಸಂಸ್ಥೆಯಿಂದ 5.ಕಿ.ಮೀ ದೂರದ ಸ್ಥಳಗಳಿಂದ ಬರುವ ವಿದ್ಯಾಥರ್ಿಗಳಿಗೆ ಪ್ರವೇಶವನ್ನು ನೀಡಲಾಗುವುದು, ವಿದ್ಯಾಥರ್ಿನಿಲಯಗಳಲ್ಲಿ ಪ್ರವೇಶ ಪಡೆದವರು ಯಾವುದೇ ರೀತಿಯ ವಿದ್ಯಾಥರ್ಿ ವೇತನ ಪಡೆಯಲು ಅರ್ಹರಿರುವುದಿಲ್ಲ, ನವೀಕರಣ ವಿದ್ಯಾಥರ್ಿಗಳು ಪೇಲ್ ಆಗಿದ್ದಲ್ಲಿ ಅಂತಹ ವಿದ್ಯಾಥರ್ಿಗಳನ್ನು ವಿದ್ಯಾಥರ್ಿ ನಿಲಯದಲ್ಲಿ ಮುಂದುವರೆಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 


Monday, May 13, 2013



ಬೆಂಕಿಗಾಹುತಿಯಾದ ಕಾಯಿ, ಕೊಬ್ಬರಿ
ಚಿಕ್ಕನಾಯಕನಹಳ್ಳಿ,ಮೇ.13 : ತಾಲೂಕಿನ ಅಣೆಕಟ್ಟೆಯ ಶಿವಣ್ಣ ಎಂಬವರ ತೋಟದಲ್ಲಿ ಸಂಗ್ರಹಿಸಲಾಗಿದ್ದ ತೆಂಗಿನ ಕಾಯಿ ಹಾಗೂ ಕೊಬ್ಬರಿಗೆ ಬೆಂಕಿ ಬಿದ್ದರಿಂದ ಸುಮಾರು ಒಂದುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ಕಾಯಿ, ಕೊಬ್ಬರಿ ಬೆಂಕಿಗೆ ಆಹುತಿಯಾಗಿದೆ.
ಸೋಮವಾರ ಮಧ್ಯಾಹ್ನ 1.30ರ ಸುಮಾರಿನಲ್ಲಿ ತೊಟದಲ್ಲಿ ತೆರೆದ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಕಾಯಿ-ಕೊಬ್ಬರಿ ರಾಶಿಗೆ ಬೆಂಕಿ ಕಾಣಿಸಿಕೊಂಡಿದೆ, ಸುತ್ತ ಮುತ್ತಲಿನ ತೋಟದವರು ಹಾಗೂ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಬೆಂಕಿ ಹತೋಟಿಗೆ ಬರಲಿಲ್ಲ ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲವಾಯಿತು. 
ರೋಗಗಳ ಭರಾಟೆಯಲ್ಲಿ ತತ್ತರಿಸಿರುವ ತೆಂಗಿನ ಬೆಳೆಗಾರರಿಗೆ, ಬರದ ಬರೆ, ವೈಜ್ಞಾನಿಕ ಬೆಲೆಯಿಲ್ಲದೆ, ಬರದಾಡುತ್ತಿರುವ ಜೊತೆಗೆ ಮಳೆಗಾಳಿಯಂತಹ ಪ್ರಾಕೃತಿಕ ಮುನಿಸು ಜೊತೆಗೆ ಅಗ್ನಿ ಹಾವುತಿ ಇಂತಹ ಘಟನೆಗಳಿಂದ  ರೈತರ ಬದುಕು ಅತಂತ್ರವಾಗಿದೆ, ಇಂತಹ  ಅವಘಡಗಳಿಗೆಲ್ಲಾ ಪರಿಹಾರವನ್ನು  ನೀಡಲು ಸಕರ್ಾರ ಚಿಂತನೆ ನಡೆಸಬೇಕೆಂದು ಪಿ.ಎಲ್.ಡಿ.ಬ್ಯಾಂಕ್ ನಿದರ್ೇಶಕ ಎಂ.ಬಿ.ನಾಗರಾಜ್ ಒತ್ತಾಯಿಸಿದ್ದಾರೆ.

Friday, May 10, 2013



ಪಟಾಕಿ ಸಿಡಿಸಿ, ಘೋಷಣೆ ಕೂಗಿದ ಸಿದ್ದರಾಮಯ್ಯನವರ ಅಭಿಮಾನಿಗಳು

ಚಿಕ್ಕನಾಯಕನಹಳ್ಳಿ,ಮೇ.10 : ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಆಯ್ಕೆಗೊಂಡಿದ್ದಾರೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಪಟ್ಟಣದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ, ರಾಜ್ಯದ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯಿಂದ ಉತ್ಸಾಹಗೊಂಡು ಸಿದ್ದರಾಮಯ್ಯನವರಿಗೆ ಜೈಕಾರಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳಾದ   ಸಿ.ಎಂ.ಬೀರಲಿಂಗಯ್ಯ, ಸಿ.ಟಿ.ಗುರುಮೂತರ್ಿ, ಓಂಕಾರಮೂತರ್ಿ, ರವಿಕುಮಾರ್(ಲ್ಯಾಬ್), ಸಿ.ಎಸ್.ಬಸವರಾಜು, ನಾಗರಾಜು ಸೇರಿದಂತೆ ಹಲವರಿದ್ದರು.

ಜೋರು ಬಿರುಗಾಳಿಗೆ ಎದರಿ ಎರಡು ದಿನದಿಂದ ಹಾಲು ನೀಡದ ಹಸುಗಳು

ಚಿಕ್ಕನಾಯಕನಹಳ್ಳಿ,ಮೇ.10 :  ಜೋರು ಮಳೆಗಾಳಿಯಿಂದ  ದನದಕೊಟ್ಟಿಗೆಗೆ ಹಾಕಲಾಗಿದ್ದ ಶೆಡ್ ಹಾರಿಹೋಗಿ, ಬೀಸುತ್ತಿದ್ದ ಭಾರಿ ಶಬ್ದಕ್ಕೆ ಹೆದರಿ ಹಸುವು ಎರಡು ದಿನದಿಂದ ಹಾಲು ನೀಡದೆ ಭಯಭೀತವಾಗಿವೆ, ಶೆಡ್ ಹಾರಿಹೋದ ಪರಿಣಾಮ  ಸಾವಿರಾರು ರೂಪಾಯಿ ನಷ್ಟ ಸಂಭವಿರುವ ಘಟನೆ ಪಟ್ಟಣದ 1ನೇ ವಾಡರ್್ನ, ಪಿ.ಯು.ಕಾಲೇಜ್ನ ಹಿಂಭಾಗದ  ಕೆ.ಎಮ್.ವಠಾರದಲ್ಲಿ ನಡೆದಿದೆ.
ಭಾರಿ ಬಿರುಗಾಳಿಗೆ ತಮ್ಮ ಜಮೀನಿನಲ್ಲಿ ಹಾಕಲಾಗಿದ್ದ ಶೆಡ್ ಬಿರುಗಾಳಿಗೆ ನೆಲಕ್ಕುರುಳಿದೆ, ಶೆಡ್ನಲ್ಲಿ ದನದಕೊಟ್ಟಿಗೆ, ಕಾಯಿ ಹಾಗೂ ಅಡಕೆ ದಾಸ್ತಾನು ಮಾಡಲಾಗಿತ್ತು, ಗಾಳಿಗೆ ಶೆಡ್ ಹಾರಿದ ಪರಿಣಾಮ ದಾಸ್ತಾನು ಮಾಡಿದ್ದ ವಸ್ತುಗಳಿಗೆ ಹಾನಿಯಾಗಿದ್ದು ಹಸುಕರುಗಳು ಭಯಭೀತವಾಗಿವೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ, ಹಾನಿಯಾಗಿರುವ ಸಾವಿರಾರು ರೂಪಾಯಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಮಾಲೀಕ ಸಿ.ಎಸ್ ನಾಗರಾಜು ಒತ್ತಾಯಿಸಿದ್ದಾರೆ.

ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮೇ.10 : 19ನೇ ವರ್ಷದ ಶ್ರೀ ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವವು ಇದೇ 11ರ ಶನಿವಾರ ತಾಲ್ಲೂಕಿನ ಕಾಡೇನಹಳ್ಳಿಯಲ್ಲಿ ನಡೆಯಲಿದೆ.
11ರ ಬೆಳಗ್ಗೆ 7.30ಕ್ಕೆ ಶನಿದೇವರಿಗೆ ಪಂಚಾಮೃತ ಅಭಿಷೇಕ ಮತ್ತು ನವಗ್ರಹ ಪೂಜೆ, ಹೋಮಾದಿಗಳು ಹಾಗೂ ಗ್ರಾಮಸ್ಥರಿಂದ ಆರತಿ, ದೇವರ ಉತ್ಸವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನೆಡಯಲಿದೆ.




ರೋಟರಿ ಶಾಲೆಗೆ 96.87ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ರೋಟರಿ ಆಂಗ್ಲ ಪ್ರೌಡಶಾಲೆಗೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.87ರಷ್ಟು ಪಲಿತಾಂಶ ದೊರೆತಿದೆ.
ಶಾಲೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 64 ವಿದ್ಯಾಥರ್ಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅದರಲ್ಲಿ ಒಟ್ಟು 62 ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. 11ಮಂದಿ ವಿದ್ಯಾಥರ್ಿಗಳು ಅತ್ಯುನ್ನತದಜರ್ೆ, 34ವಿದ್ಯಾಥರ್ಿಗಳು ಪ್ರಥಮದಜರ್ೆ, 11ದ್ವಿತೀಯದಜರ್ೆ ಹಾಗೂ 6ವಿದ್ಯಾಥರ್ಿಗಳು ತೇರ್ಗಡೆ ಹೊಂದಿದ್ದಾರೆ.
ಹೀನಾ.ಎ561(89.76), ನಿದಾ557(89.12), ಅನುಷಾ552(88.32), ದೀಕ್ಷಿತ.ಡಿ.546(87.36), ನವ್ಯಶ್ರೀ.ಸಿ.ಕೆ540(86.40) ಶಾಮ್ಪ್ರಸಾದ್.ಎಸ್.ವಿ.539(86.24), ಶಿಲ್ಪ.ಎಮ್.537(85.92), ಪಲ್ಲವಿ.ಎನ್.537(85.92), ಗೌತಮಿ ಡಿ.ಕೆ.535(85.60), ಪೂಜಾಜೈನ್533(85.28), ಲಾವಣ್ಯ.ಎಮ್.ಪಿ.533(58.28) ಅಂಕಗಳನ್ನು ಪಡೆದಿದ್ದಾರೆ.

ಎಸ್.ಎಮ್.ಎಸ್.ಕಾಲೇಜಿಗೆ 90.42ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ಎಸ್.ಎಮ್.ಎಸ್.ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90.42ರಷ್ಟಿ ಪಲಿತಾಂಶ ದೊರೆತಿದೆ.
ಮಾಚರ್್ 2013ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಳಿದ 94 ವಿದ್ಯಾಥರ್ಿಗಳಲ್ಲಿ 85ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ.        
ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಸಿ.ಜಿ.ರೋಜಾ543(90.5), ಬಿ.ಎನ್.ಕೀರ್ತನಕುಮಾರಿ504(84.00), ಸಿ.ಆರ್.ನವೀನ್ಕುಮಾರ್489(81.55), ವಾಣಿಜ್ಯ ವಿಭಾಗದಲ್ಲಿ ವಿದ್ಯಾ.ಎಮ್.ಎನ್.476(79.3), ಅರುಣ್ಕುಮಾರ್.ಡಿ.ಆರ್.453(75.5) ಅಂಕಗಳನ್ನು ಪಡೆದಿದ್ದಾರೆ.

ಕ್ಷೇತ್ರದ ಜನತೆ ಗುಳೇ ಹೋಗುವುದನ್ನು ತಪ್ಪಿಸಲು ಗಾಮರ್ೇಂಟ್ಸ್ಗೆ ಮೊರೆಹೋದ ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಮೇ.9 : ಕ್ಷೇತ್ರದ ಮತದಾರರ ಆಶೀವರ್ಾದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದು, ಈ ಗೆಲುವು ತಾಲ್ಲೂಕಿನ ಕ್ಷೇತ್ರದ ಜನತೆಯ ಗೆಲುವಾಗಿದ್ದು ಕ್ಷೇತ್ರದ ಜನತೆಗೆ ಎಂದೆಂದು ನಾನು ಚಿರಋಣಿಯಾಗಿರುವೆ ಎಂದು ಚುನಾವಣೆಯಲ್ಲಿ ಮರು ಆಯ್ಕೆಗೊಂಡ ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಗೆಲುವಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಸುರೇಶ್ಬಾಬು, ಜ್ಯಾತ್ಯಾತೀತ ಮನೋಭಾವನೆಯಿಂದ  ಎಲ್ಲ ವರ್ಗಗಳಿಗೂ ಸ್ಥಾನಮಾನ ಕಲ್ಪಿಸಿ ತಾಲ್ಲೂಕಿನ ಅಭಿವೃದ್ದಿ ಕಡೆ ಯೋಚಿಸಿದ್ದರಿಂದಲೇ ತಾಲ್ಲೂಕಿನ ಎಲ್ಲಾ ವರ್ಗಗಳ ಮತದಾರರು ನನ್ನನ್ನು ಮರು ಆಯ್ಕೆಮಾಡಿದ್ದಾರೆ. ಶಾಸಕನಾದ ಮೇಲೆ ನಾವು ಮಾಡಿರುವ ಅಭಿವೃದ್ದಿ ಕೆಲಸಗಳು ಹಾಗೂ ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮ ಗೆಲುವಿಗೆ ಸಹಾಯಕವಾಯಿತು ಎಂದರಲ್ಲದೆ ಈ ಮೂಲಕ ತಾಲ್ಲೂಕಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನನ್ನ ಕ್ಷೇತ್ರದಿಂದ ಪಟ್ಟಣಕ್ಕೆ ಗುಳೇ ಹೋಗುವವರು ಹೆಚ್ಚಾಗಿದ್ದಾರೆ, ಅದಕ್ಕಾಗಿ ಇಲ್ಲಿ ಗಾಮರ್ೆಂಟ್ಸ್ ಅನ್ನು ತೆರೆದು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿ ಅವರನ್ನು ಕ್ಷೇತ್ರದಲ್ಲಿಯೇ ಜೀವನ ನಡೆಸುವಂತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವುದಾಗಿ ತಿಳಿಸಿದರು, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ಕ್ಷೇತ್ರದ ಜನತೆಯ ಸಮಸ್ಯೆ ನಿವಾರಿಸಲು ಮುಂದಾಗುವೆ ಎಂದರು.
ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಪಟ್ಟಣದನ ಜನರಿಗೆ ಕೃತಜ್ಞತೆ ತಿಳಿಸಲು ರಾಜ ಬೀದಿಗಳಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮಳೆಯ ನಡುವೆಯೂ ಅಪಾರ ಅಭಿಮಾನಿಗಳೊಂದಿಗೆ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಮೇ.12ರಂದು ತಾ.ಕ.ಸಾ.ಪ ಆಜೀವ ಸದಸ್ಯರ ಸಭೆ
ಚಿಕ್ಕನಾಯಕನಹಳ್ಳಿ,ಮೇ.9: ತಾಲೂಕು ಸಾಹಿತ್ಯ ಪರಿಷತ್ನ ಎಲ್ಲಾ ಆಜೀವ ಸದಸ್ಯರ ಸಭೆಯನ್ನು ಇದೇ 12ರ ಭಾನುವಾರ ಮಧ್ಯಾಹ್ನ 2ಗಂಟೆಗೆ ಪಟ್ಟಣದ ಜ್ಞಾನಪೀಠ ಪ್ರೌಢಶಾಲೆಯ ಆವರಣದಲ್ಲಿ ಕರೆಯಲಾಗಿದೆ ಎಂದು ತಾ.ಕ.ಸಾ.ಪ. ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ  ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಈ ಸಭೆಯನ್ನು ಕರೆದಿದ್ದು ಸಭೆಯಲ್ಲಿ ಜಿಲ್ಲಾ.ಕ.ಸಾ.ಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್ ಉಪಸ್ಥಿತರಿರುವವರು ಆದ್ದರಿಂದ ಎಲ್ಲಾ ಆಜೀವ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.



Wednesday, May 8, 2013


ತಂದೆಯ ದಾಖಲೆ ಸರಿಗಟ್ಟಿದ ಚಿ.ನಾ.ಹಳ್ಳಿ ಶಾಸಕ ಸಿ.ಬಿ.ಸುರೇಶ್ಬಾಬು.
ಚಿಕ್ಕನಾಯಕನಹಳ್ಳಿ,ಮೇ.8: ಈ ಬಾರಿಯ ಚುನಾವಣೆ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬುವಿನ ಮುಖದಲ್ಲಿ ನಗೆಯ ಹೊನಲನ್ನು ತಂದಿದ್ದರೆ, ಕೆ.ಜೆ.ಪಿ. ಯ ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ರವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ ಅದೇನೆಂದರೆ ಈ ಕ್ಷೇತ್ರದ ಚುನಾವಣಾ ಕಣದಲ್ಲಿ ಜೆ.ಸಿ.ಎಂ. ಇರಬೇಕು ಇಲ್ಲ, ಕೆ.ಎಸ್.ಕೆ ಇರಬೇಕು. ಇಬ್ಬರಲ್ಲೊಬ್ಬರು ಇರಬೇಕು ಎಂಬುದನ್ನು ದೃಡಪಡಿಸಿದೆ.
ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ತಮ್ಮ ತಂದೆಯ ದಾಖಲೆಗೆ ಸರಿಸಮನಾಗಿ, ತಂದೆಗೆ ತಕ್ಕ ಮಗ, ನಾನು ತಂದೆಯಂತೆಯೇ ಜನನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ, 1974ರ ಚುನಾವಣೆಯಲ್ಲಿ ಮಾಜಿ ಸಚಿವ ದಿ.
ಎನ್.ಬಸವಯ್ಯ ಸಂಸ್ಥಾ ಕಾಂಗ್ರೆಸ್ನಿಂದ ಗೆಲವು ಸಾಧಿಸಿದ್ದರು,  ನಂತರ 1979ರಲ್ಲಿ ನಡೆದ ಚುನಾವಣೆಯಲ್ಲೂ ಇಂದಿರಾ ಕಾಂಗ್ರೆಸ್ನಲ್ಲಿ ಗೆಲುವು ಸಾಧಿಸಿದ್ದರು. ಅದೇ ರೀತಿ ಸಿ.ಬಿ.ಸುರೇಶ್ಬಾಬು 2008ರಲ್ಲಿ ಹಾಗೂ 2013ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಪ್ಪನಿಗೆ ತಕ್ಕ ಮಗ ಎಂಬುದನ್ನು ಸಾಬೀತು ಮಾಡಿದ್ದರೆ, ಆದರೆ ಎನ್.ಬಿ.ಯವರು ಪಕ್ಷ ಬದಲಾಯಿಸಿ ಜಯಪಡೆದಿದ್ದರು, ಸಿ.ಬಿ.ಎಸ್. ಎರಡೂ ಬಾರಿಯೂ ಹೊರೆಹೊತ್ತ ಮಹಿಳೆಯನ್ನೇ ನಂಬಿ ಜಯಶೀಲರಾಗಿದ್ದಾರೆ. 

ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಇತ್ತೀಚಿನ ಇತಿಹಾಸದಲ್ಲಿ ಒಮ್ಮೆ ಗೆದ್ದವರು ಮತ್ತೇ ಹಿಂದೆಯೇ ಆಯ್ಕೆ ಬಯಸಿದರೆ ಅದು ಸಾಧ್ಯವಾಗದ ಮಾತು ಎಂಬ ಪ್ರತೀತಿ ಇತ್ತು ಅದನ್ನು ಈ ಚುನಾವಣೆಯಲ್ಲಿ ಸಿ.ಬಿ.ಎಸ್. ಸುಳ್ಳು ಮಾಡಿದ್ದಾರೆ. ಅದೇ ರೀತಿ ಈ ಕ್ಷೇತ್ರದಲ್ಲಿ ಜಯಗಳಿಸಿದ ಪಕ್ಷ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದಿಲ್ಲವೆಂಬ ಮಾತು ಮಾತ್ರ ಸುಳ್ಳಾಗಿಲ್ಲ ಎಂಬುದು ಇಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
2008ರ ಚುನಾವಣೆಗೆ ಹೊಲಿಸಿದರೆ ಸಿ.ಬಿ.ಸುರೇಶ್ಬಾಬು ಪಡೆದಿರುವ ಓಟುಗಳು 6,287 ಕಡಿಮೆಯಾಗಿದೆ.  ಕಳೆದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,84,288 ಇತ್ತು ಇದರಲ್ಲಿ ಚಲಾವಣೆಗೊಂಡಿದ್ದ ಮತಗಳು 1,43,589 ಮತಗಳು.  ಈ ಬಾರಿ ಕ್ಷೇತ್ರದಲ್ಲಿದ್ದ ಒಟ್ಟು ಮತಗಳು 1,98,349, ಇದರಲ್ಲಿ ಚಲಾವಣೆಗೊಂಡವು 1,60,041 ಮತಗಳು ಮಾತ್ರ, ಸಿ.ಬಿ.ಸುರೇಶ್ ಬಾಬು 60,759 ಮತಗಳನ್ನು ಪಡೆದು 11,139 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 
 ಜೆ.ಸಿ.ಮಾಧುಸ್ವಾಮಿ 49,620 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಬಂದಿದ್ದರೆ, ಕಳೆದ ಬಾರಿ ಜೆ.ಡಿ.ಯುನಲ್ಲಿ ಸ್ಪಧರ್ಿಸಿದ್ದ ಜೆ.ಸಿ.ಎಂ. 24308 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.
ಈ ಬಾರಿ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ 29150 ಮತಗಳನ್ನು ಪಡೆದು ಮೂರನೇ ಸ್ಥಾನ ತಲುಪಿದ್ದಾರೆ. ಕಳೆದ ಬಾರಿ ಕೆ.ಎಸ್.ಕಿರಣಕುಮಾರ್ 38,002 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು.
ಕಳೆದ ಬಾರಿಯ ಚುನಾವಣೆಗೆ ಹೊಲಿಸಿದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹಳಷ್ಟು ಚೇತರಿಸಿಕೊಂಡಿದೆ, ಕಾಂಗ್ರೆಸ್ನ ಸಾಸಲು ಸತೀಶ್ 10,344 ಮತಗಳನ್ನು ಪಡೆದಿದ್ದಾರೆ, ಕಳೆದ ಬಾರಿ ಕಾಂಗ್ರೆಸ್ನ ಎನ್. ರೇಣುಕಪ್ರಸಾದ್ 3941 ಮತಗಳನ್ನು ಪಡೆದಿದ್ದರು.
 ರೈತ ಸಂಘದ ಕೆಂಕೆರೆ ಸತೀಶ್ 2086 ಮತಗಳು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್ 1743 ಮತಗಳು, ಬಿ.ಎಸ್.ಆರ್.ನ ದೇವರಾಜ್ 1624 ಮತಗಳು, ಸಿ.ಎಂ.ಮಂಜುಳಾ ನಾಗರಾಜ್ 1725, ಬರಗೂರು ರಾಮಚಂದ್ರಯ್ಯ 1648, ಜೆ.ಡಿ.ಯು.ನ ಜಿ.ಪ್ರಕಾಶ್ 1108, ಹನುಮಂತ ರಾಮನಾಯಕ್ 1019 ಮತಗಳನ್ನು ಪಡೆದಿದ್ದಾರೆ. 
 

Tuesday, May 7, 2013


ಆಟೋರಿಕ್ಷಾ ಚಾಲಕನ ಮಗ ಎಸ್.ಎಸ್.ಎಲ್.ಸಿ.ಯಲ್ಲಿ
ತಾಲೂಕಿಗೆ ಮೊದಲು


ಚಿಕ್ಕನಾಯಕನಹಳ್ಳಿ,ಮೇ.7; ಸಕರ್ಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಂದಿಗೆ ಇಲ್ಲೊಂದು ಸಾಧನೆಯ ಸುದ್ದಿ ಇದೆ, ಟ್ಯೂಶನ್ಗೆ ಹೋಗದೆ, ಆಟೋರಿಕ್ಷಾ ಚಾಲಕನ ಮಗನಾಗಿ ಅತ್ಯಲ್ಪ ಸೌಲತ್ತುಗಳಲ್ಲೇ, ಸಕರ್ಾರಿ ಪ್ರೌಢಶಾಲೆಯಲ್ಲಿ ಓದಿರುವ ಆರ್. ಮಧುಸೂಧನ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 590 (ಶೇ.94.40)ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮನೆನಿಸಿಕೊಂಡಿದ್ದಾನೆ.
ಸ್ವಾಮಿ ವಿವೇಕನಂದರೇ ನನ್ನ ಗುರುಗಳು, ಅವರೇ ನನಗೆ ಸ್ಪೂತರ್ಿ, ತಂದೆ-ತಾಯಿಗಳ ಪೋಷಣೆ, ಗುರುಗಳ ಮಾರ್ಗದರ್ಶನದಿಂದಾಗಿ ನಾನು ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳುವ ಮಧುಸೂಧನನ ಕಣ್ಣಲ್ಲಿ ಐ.ಎ.ಎಸ್.ಮಾಡುವ ಕನಸಿದೆ.
ಶಾಲೆಯಲ್ಲಿ ಏಕಾಗ್ರಚಿತ್ತದಿಂದ ಕೇಳುವ, ಅಂದಿನ ಪಾಠವನ್ನು ಅಂದೇ ಓದುವ ಪ್ರವೃತ್ತಿನನಗೆ ಸಹಾಯವೆನಿಸುತು ಎನ್ನುವ ಮಧು, ಸಕರ್ಾರಿ ಶಾಲೆಯಲ್ಲಿ ಉತ್ತಮ ಕೌಶಲ್ಯವಿರುವ ಶಿಕ್ಷಕರಿದ್ದಾರೆ ಅವರ ಮಾರ್ಗದರ್ಶನ ಯಶಸ್ಸಿಗೆ ರಾಜಮಾರ್ಗವಾಯಿತು ಎನ್ನುವ ಹೊತ್ತಿನಲ್ಲೇ, ಗ್ರಾಮೀಣ ಹಾಗೂ ಬಡ ಮಕ್ಕಳಿರುವ ಇಂತಹ ಸಕರ್ಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿ ಮುಂದಿನ ಬಡ ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಿ ಎಂಬುದಷ್ಟೇ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ನನ್ನ ವಿನಮ್ರ ಮನವಿ ಎನ್ನುತ್ತಾನೆ ಮಧು.
ತನ್ನ ಮಗನ ಸಾಧನೆಯಿಂದ ಉಲ್ಲಾಸಿತರಾಗಿರುವ ಆಟೋರಿಕ್ಷಾ ಚಾಲಕ ಸಿ.ಎನ್.ರವಿಕುಮಾರ್, ನನಗೆ ಎಷ್ಟೇ ಕಷ್ಟವಾಗಲಿ ಅವನು ಅಂದುಕೊಂಡಿದ್ದನ್ನು ಓದುಸುತ್ತೇನೆ ಎಂದು ಹೇಳುವಷ್ಟರಲ್ಲಿ ಗದ್ಗಿತರಾಗುವ ಅವರು, ಅವನು ಒಳ್ಳೆಯ ಸ್ಥಾನಕ್ಕೆ ಮುಟ್ಟಿದ ಮೇಲೆ ಅವನಿಂದ ಹೆಚ್ಚಿನದೇನು  ಬಯಸುವುದಿಲ್ಲ, ಒಂದು ಬ್ಯಾಕ್ ಇಂಜಿನ್ ಆಟೋ ಕೊಡಿಸಿದರೆ ಸಾಕು, ಅದನ್ನು ಓಡಿಸಿಕೊಂಡು ಆನಂದವಾಗಿರುತ್ತೇನೆ ಎನ್ನುವಷ್ಟರಲ್ಲಿ ರವಿಯವರ ಕಣ್ಣಲ್ಲಿದ್ದ ನೀರು ಜಳ ಜಳನೆ ಕೆನ್ನೆ ಮೇಲೆ ಬಂದೇ ಬಿಟ್ಟವು.
ಪಡೆದ ಅಂಕಗಳು: ಕನ್ನಡ-119, ಇಂಗ್ಲೀಷ್ 96, ಹಿಂದಿ-95, ಗಣಿತ-90, ವಿಜ್ಞಾನ-93, ಸಮಾಜವಿಜ್ಞಾನ-97 ಅಂಕಗಳು ಒಟ್ಟು 590(ಶೇ.94.4) ತಾಲೋಕಿಗೆ ಪ್ರಥಮ


ಚಿ.ನಾ.ಹಳ್ಳಿ: ಎಸ್.ಎಸ್.ಎಲ್.ಸಿ.ಯಲ್ಲಿ ಶೇ.75.63 ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.7: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.75.63ರಷ್ಟು ಫಲಿತಾಂಶ ದೊರೆತಿದ್ದು, ಒಟ್ಟು ಮೂರು ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ, 44 ವಿದ್ಯಾಥರ್ಿಗಳು ಅತ್ಯುನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿ.ಇ.ಓ, ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 59 ಶಾಲೆಗಳಿದ್ದು,  ಒಟ್ಟು 2577  ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ 1949ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 1072ಹೆಣ್ಣುಮಕ್ಕಳು ಹಾಗೂ 877ಗಂಡುಮಕ್ಕಳು ತೇರ್ಗಡೆಯಾಗಿದ್ದಾರೆ, ತಾಲೂಕಿನಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳೆಂದರೆ, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 44 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ತಿಮ್ಮನಹಳ್ಳಿ ಶ್ರೀ ಶಾರದ ವಿದ್ಯಾಪೀಠ ಪ್ರೌಡಶಾಲೆಯಲ್ಲಿ 30 ವಿದ್ಯಾಥರ್ಿಗಳು, ಚಿ.ನಾ.ಹಳ್ಳಿ ನವೋದಯ ಪ್ರೌಡಶಾಲೆ(ಆಂಗ್ಲ) ಶಾಲೆಯಲ್ಲಿ 16 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ಈ ಮೂರು ಶಾಲೆಗಳು ಆಂಗ್ಲಮಾಧ್ಯಮ ಶಾಲೆಗಳು.
 ಸಕರ್ಾರಿ ಪ್ರೌಢಶಾಲೆಗಳ ಪೈಕಿ ಸಾಸಲು ಸಕರ್ಾರಿ ಪ್ರೌಢಶಾಲೆ ಶೇ.94.59 ಫಲಿತಾಂಶ ಪಡೆದಿದೆ. ಬರಗೀಹಳ್ಳಿಯ ಬೂದೇವಿ ಗ್ರಾಮಾಂತರ ಪ್ರೌಢಶಾಲೆ 6.67 ಪಡೆದಿದೆ, ಮುದ್ದೇನಹಳ್ಳಿಯ ಇಂದಿರಾಗಾಂಧಿ ಪ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದಿದೆ,  ಈ ಶಾಲೆಯಲ್ಲಿ 25 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು. 
ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳು:  ಸಕರ್ಾರಿ ಪ್ರೌಡಶಾಲೆ ವಿದ್ಯಾಥರ್ಿ ಮಧುಸೂದನ್.ಆರ್ 590 (94.40) ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಳಿಯಾರಿನ ವಾಸವಿ(ಆಂಗ್ಲ) ಶಾಲೆಯ ಸೀಮ.ಎಸ್584(93.44), ತನುಶ್ರೀ ಬಿ.ಎಂ.580(92.80), ಕನಕದಾಸ ಪ್ರೌಡಶಾಲೆ ಹುಳಿಯಾರು ಮಸ್ತಾನ್.ಎಂ.566(90.56), ವಾಸವಿ ಪ್ರೌಡಶಾಲೆ(ಆಂಗ್ಲ)ಹುಳಿಯಾರು ಸಚಿನ್.ಪಿ564(90.24), ಸ.ಪ.ಪೂ.ಕಾ(ಪ್ರೌ.ವಿ) ಹುಳಿಯಾರು-ಕೆಂಕೆರೆ ಸೋನಿಯ ಕೆ.ಎಂ.563(90.08) , ಶ್ರೀ ವಿಶ್ವಭಾರತಿ ಪ್ರೌಡಶಾಲೆ ಬರಕನಹಾಳ್ ಪ್ರಮೋದ್ಕುಮಾರ್.ಹೆಚ್.ಎಲ್563(90.08) ಸೇರಿದಂತೆ ಉಳಿದ 37ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ತಾಲ್ಲೂಕಿನ ಸಕರ್ಾರಿ ಶಾಲೆಗಳ ಶೇಕಡಾವಾರು ಫಲಿತಾಂಶದ ವಿವರ :ಸ.ಪ.ಪೂ.ಕಾಲೇಜು ಗೋಡೆಕೆರೆ ಶೇ.73.58, ಸ.ಪ.ಪೂ.ಕಾಲೇಜು ಹುಳಿಯಾರು ಕೆಂಕೆರೆ80.56, ಸ.ಪ.ಪೂ.ಕಾಲೇಜು ಬೋನಕಣಿವೆ 69.23, ಸಕರ್ಾರಿ ಪ್ರಡಶಾಲೆ ಯಳನಡು 76.92, ಸಕರ್ಾರಿ ಪ್ರೌಢಶಾಲೆ ದಸೂಡಿ 91.18, ಸಕರ್ಾರಿ ಪ್ರೌಢಶಾಲೆ ಸಾಸಲು 94.59, ಸಕರ್ಾರಿ ಪೌಢಶಾಲೆ ಚಿಕ್ಕನಾಯಕನಹಳ್ಳಿ 82.35, ಸಕರ್ಾರಿ ಪ್ರೌಡಶಾಲೆ ಉದರ್ು ಹುಳಿಯಾರು 83.33, ಸಕರ್ಾರಿ ಪ್ರೌಡಶಾಲೆ ಬರಗೂರು 92.11, ಸಕರ್ಾರಿ ಪ್ರೌಡಶಾಲೆ ಬರಶಿಡ್ಲಹಳ್ಳಿ 87.50, ಸಕರ್ಾರಿ ಪ್ರೌಡಶಾಲೆ ದಬ್ಬಗುಂಟೆ 90.00, ಸಕರ್ಾರಿ ಪ್ರೌಡಶಾಲೆ ಜೆ.ಸಿ.ಪುರ 86.96, ಸಕರ್ಾರಿ ಪ್ರೌಡಶಾಲೆ ಕಾಮಲಾಪುರ 60.00, ಸಕರ್ಾರಿ ಪ್ರೌಡಶಾಲೆ ಬಡಕೆಗುಡ್ಲು 86.96, ಸಕರ್ಾರಿ ಪ್ರೌಡಶಾಲೆ ಕೆಂಕೆರೆ 61.11, ಸಕರ್ಾರಿ ಪ್ರೌಡಶಾಲೆ ಗೂಬೆಹಳ್ಳಿ-ನಂದಿಹಳ್ಳಿ 93.75, ಸಕರ್ಾರಿ ಪ್ರೌಡಶಾಲೆ ಹೆಚ್.ತಮ್ಮಡಿಹಳ್ಳಿ 88.00, ಸಕರ್ಾರಿ ಪ್ರೌಡಶಾಲೆ ತೀರ್ಥಪುರ 85.71, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 100.00, ಯು.ಪಿ.ಆರ್.ಎಮ್.ಎಸ್.ಸಿ ಜಿಎಚ್ಎಸ್ಬೆಳ್ಳಾರ 68.42, 
 ತಾಲ್ಲೂಕಿನ ಅನುದಾನಿತ ಶಾಲೆಗಳ ಶೇ.ಫಲಿತಾಂಶದ ವಿವರ: ಡಿವಿಪಿಬಾಲಕರ ಪ್ರೌಡಶಾಲೆ ಚಿ.ನಾ.ಹಳ್ಳಿ ಶೇ.74.75, ಶಾರದ.ಪ.ಪೂ.ಕಾಲೇಜು ತಿಮ್ಮನಹಳ್ಳಿ 72.22, ಶ್ರೀ ಜಯಬಾರತಿ ಪ.ಪೂ.ಕಾಲೇಜು ಮತಿಘಟ್ಟ 71.43, ಜಿ.ವಿ.ಪಿ.ಕಿರಿಯ ಕಾಲೇಜು ಹಂದನಕೆರೆ 58.62, ಜನತಾಪ.ಪೂ.ಕಾಲೇಜು ಶೆಟ್ಟಿಕೆರೆ 62.86, ಡಿವಿಪಿ ಬಾಲಕಿಯರ ಪ್ರೌಡಶಾಲೆಚಿ.ನಾ.ಹಳ್ಳಿ 86.49, ಶ್ರೀ ಸಿದ್ದಗಂಗಾ ಪ್ರೌಡಶಾಲೆ ಕಂದಿಕೆರೆ 63.16, ಟಿ.ಆರ್.ಎಸ್.ಆರ್.ಬಾ.ಪ್ರೌಡಶಾಲೆ ಹುಳಿಯಾರು 89.47,  ಶ್ರೀ ರಂಗನಾಥ ಪ್ರೌಡಶಾಲೆ ಬೆಳಗುಲಿ 83.56, ಡಾ.ಅಂಭೇಡ್ಕರ್ ಪ್ರೌಡಶಾಲೆ ಚಿ.ನಾ.ಹಳ್ಳಿ 58.33, ಶ್ರೀಗವಿರಂಗನಾಥ ಪ್ರೌಡಶಾಲೆ ದೊಡ್ಡೆಣ್ಣಗೆರೆ 86.79, ಶ್ರೀ ಸ್ವಾಮಿವಿವೇಕಾನಂದ ಪ್ರೌಡಶಾಲೆ ಕುಪ್ಪೂರು 68.89, ಡಾ.ಅಂಭೇಡ್ಕರ್ ಪ್ರೌಡಶಾಲೆ ತೀರ್ಥಪುರ-ಕಾತ್ರಿಕೆಹಾಳ್ 78.13, ಶ್ರೀ ಕನಕದಾಸ ಪ್ರೌಡಶಾಲೆ ಹುಳಿಯಾರು 73.68, ಕಾಳಿದಾಸ ಪ್ರೌಡಶಾಲೆ ಹಂದನಕೆರೆ 81.25, ಶ್ರೀ ಮಾರುತಿ ಗ್ರಾಮಾಂತರ ಪ್ರೌಡಶಾಲೆ ಚಿಕ್ಕಬಿದರೆ 73.02, ಶ್ರೀ ಜ್ಞಾನಪೀಠ ಪ್ರೌಡಶಾಲೆ ಚಿ.ನಾ.ಹಳ್ಳಿ 63.83, ನಿವರ್ಾಣೇಶ್ವರ ಬಾಲಿಕ ಪ್ರೌಡಶಾಲೆ ಚಿ.ನಾ.ಹಳ್ಳಿ 78.72, ಶ್ರೀ ಲಕ್ಷ್ಮೀನರಸಿಂಹಸ್ವಾಮಿಬೈಲಪ್ಪನಮಠ 66.67, ದೇವರಾಜುಅರಸ್ ಪ್ರೌಡಶಾಲೆ ಮಲಗೊಂಡನಹಳ್ಳಿ 96.77, ವಿಶ್ವಭಾರತಿ ಪ್ರೌಡಶಾಲೆ ಗಾಣದಾಳು 57.89, ಬಸವೇಶ್ವರ ಪ್ರೌಡಶಾಲೆ ಅಣೇಕಟ್ಟೆ79.41, ಶ್ರೀ ರಾಮಲಿಂಗೇಶ್ವರ ಪ್ರೌಡಶಾಲೆ ರಾಮನಹಳ್ಳಿ 68.75, ವಿಶ್ವಭಾರತಿ ಪ್ರೌಡಶಾಳೆ ಬರಕನಹಾಳ್ 52.17, ಬಸವೇಶ್ವರ ಪ್ರೌಡಶಾಲೆ ಹುಳಿಯಾರು 70.00, ಜಿ.ವಿ.ಪಿ.ಬಾಲಿಕ ಪ್ರೌಡಶಾಲೆ ಹಂದನಕೆರೆ 60.00, ಜಿ.ವಿ.ಪಿ.ಪ್ರೌಡಶಾಲೆ ಸೀಗೇಬಾಗಿ 60.00, ವಿದ್ಯಾರಣ್ಯಾ ಪ್ರೌಡಶಾಲೆ ಬೊಮ್ಮೇನಹಳ್ಳಿ 62.50, ಶ್ರೀ ಚಿತ್ರಲಿಂಗೇಶ್ವರ ಪ್ರೌಡಶಾಲೆ ಹರೇನಹಳ್ಳಿಗೇಟ್ 58.33, ಬಾಪೂಜಿ ಪ್ರೌಡಶಾಲೆ ಬೇವನಹಳ್ಳಿ 40.00, ಮಾರಮ್ಮದೇವರ ಪ್ರೌಡಶಾಲೆ ದೊಡ್ಡರಾಂಪುರ 67.74, ಭೂದೇವಿ ಗ್ರಾಮಾಂತರ ಪ್ರೌಡಶಾಲೆ ಬರಗೀಹಳ್ಳಿ 6.67.
 ತಾಲ್ಲೂಕಿನ ಅನುದಾನ ರಹಿತ ಶಾಲೆಗಳ ಶೇಕಡವಾರು ಫಲಿತಾಂಶದ ವಿವರ: ರಾಮಾಂಜನೇಯ ಪ್ರೌಡಶಾಳೆ ಗೂಬೇಹಳ್ಳಿ 32.00, ಸಾಕ್ಷರತಾ ಮಹಿಳಾ ಪ್ರೌಡಶಾಲೆ ಗುರುವಾಪುರ 56.00, ವಾಸವಿ ಆಂಗ್ಲ ಪ್ರೌಡಶಾಲೆ ಹುಳಿಯಾರು 91.57, ರೋಟರಿ ಆಂಗ್ಲ ಪ್ರೌಡಶಾಲೆ ಚಿ.ನಾ.ಹಳ್ಳಿ 96.88, ಶ್ರೀ ಶಾರದ ವಿದ್ಯಾಪೀಠ ಪ್ರೌಡಶಾಲೆ ಆಂಗ್ಲ ತಿಮ್ಮನಹಳ್ಳಿ 100.00, ಇಂದಿರಾಗಾಂಧಿ ಪ್ರೌಡಶಾಲೆ ಮುದ್ದೇನಹಳ್ಳಿ 00.00, ನವೋದಯ ಪ್ರೌಡಶಾಲೆ(ಆಂಗ್ಲ)ಚಿ.ನಾ.ಹಳ್ಳಿ 100.00, ಒಟ್ಟು ತಾಲ್ಲೂಕು ಶೇಖಡ.76.87 ಫಲಿತಾಂಶ ಪಡೆದಿದೆ. 







Monday, May 6, 2013


ಚಿ.ನಾ.ಹಳ್ಳಿ ಮತದಾನ: ಎರೆಕಟ್ಟೆ ಅತಿಹೆಚ್ಚು, ಮರನಡುಪಾಳ್ಯ ಅತಿಕಡಿಮೆ
ಚಿಕ್ಕನಾಯಕನಹಳ್ಳಿ,ಮೇ.6: ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 1,98,398 ಮತದಾರರಲ್ಲಿ 1,60,041 ಮತದಾರರು ತಮ್ಮ ಹಕ್ಕುಚಲಾಯಿಸಿದ್ದಾರೆ. ಇದರಲ್ಲಿ ಪುರಷರು 81,880 ಮಹಿಳಾ ಮತದಾರರು78,161 ಪಾಲ್ಗೊಂಡಿದ್ದರು. ಇ.ಡಿ.ಸಿ.ಸೇರಿದಂತೆ ಒಟ್ಟು ಶೇ.81,13 ಮತಚಲಾವಣೆಗೊಂಡಿದೆ.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಕಂದಿಕೆರೆ ಹೋಬಳಿಯ ಎರೆಕಟ್ಟೆಯಲ್ಲಿ ಶೇ.93.23ರಷ್ಟು ಮತಚಲಾವಣೆಗೊಂಡಿದ್ದರೆ, ಅತಿ ಕಡಿಮೆ ಹುಳಿಯಾರು ಹೋಬಳಿಯ ಮರೆನಡು ಪಾಳ್ಯದಲ್ಲಿ 62.61 ಮತಗಳು ಚಲಾವಣೆಗೊಂಡಿದೆ.
ಚಿ.ನಾ.ಹಳ್ಳಿ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 17,568 ಮತದಾರರಿದ್ದು 13,157 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ, ಹುಳಿಯಾರಿನಲ್ಲಿ 10,774ಮತದಾರರಲ್ಲಿ 8,115 ಮತ ಚಲಾವಣೆಗೊಂಡಿದೆ.
ಬೆಟ್ಟಿಂಗ್ ಭರಾಟೆ: ಕ್ಷೇತ್ರದಾದ್ಯಂತ ಬೆಟ್ಟಿಂಗ್ ಭರಾಟೆ ಹೆಚ್ಚಾಗಿದ್ದು, ಮೊದಲ ಸ್ಥಾನಕ್ಕೆ ಜೆ.ಡಿ.ಎಸ್.ಕೆ.ಜೆ.ಪಿ, ಬಿ.ಜೆ.ಪಿ. ಈ ಮೂರು ಪಕ್ಷಗಳಲ್ಲಿ  ಯಾರೆಂಬುದಕ್ಕೆ ಲಕ್ಷ ರೂಗಳಿಗೂ ಅಧಿಕ ಹಣವನ್ನು ಕಟ್ಟುತ್ತಿದ್ದರೆ, ಕೆ.ಜೆ.ಪಿ. ಮತ್ತು ಬಿ.ಜೆ.ಪಿ. ವಲಯದಲ್ಲೂ ಹೆಚ್ಚು ಕುತೂಹಲವನ್ನು ಇಟ್ಟುಕೊಂಡಿರುವ ಅಭಿಮಾನಿಗಳು ಹಣವನ್ನು ಕಟ್ಟುತ್ತಿದ್ದಾರೆ. ಇದು ಒಂದು ರೀತಿ ಥ್ರಿಲ್ ಕೊಡುವ ಸಂಗತಿ ಕೆಲವರಿಗೆ ಅನ್ನಿಸಿದರೆ, ಇನ್ನೂ ಕೆಲವರಿಗೆ ಇದು ಜೂಜಿಗೆ ಸರುಕಾಗಿದೆ, ಈ ದಂಧೆಗೆ ಲಕ್ಷಾಂತರ ಹಣವನ್ನು ವ್ಯಯಿಸುತ್ತಿರುವುದು ತಾಲೂಕಿನಾದ್ಯಂತ ನಡೆಯುತ್ತಿದೆ. 

ಹಸುವಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವು

 ಚಿಕ್ಕನಾಯಕನಹಳ್ಳಿ, ತಾಲೂಕಿನ ಚಿಕ್ಕರಾಂಪುರ ಗ್ರಾಮದ ಹೊಲದಲ್ಲಿ ಮೇಯುತ್ತಿದ್ದ ಹಸುವಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರಿಗೆ ತೀವ್ರತರದ ಪೆಟ್ಟಾಗಿ ಚಿ.ನಾ.ಹಳ್ಳಿಯ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಹಲವು ಭಾಗಗಳಲ್ಲಿ ಸೋನೆ ಮಳೆಯಾಗಿದ್ದು ಗುಡ್ಡಪ್ರದೇಶವಾದ  ಕಂದಿಕೆರೆ ಹೋಬಳಿಯ ಚಿಕ್ಕರಾಂಪುದಲ್ಲಿ ಮಧ್ಯಾಹ್ನ ಎರಡು ಘಂಟೆ ಸುಮಾರಿನಲ್ಲಿ ಅದೇ ಗ್ರಾಮದ ಲೆಂಕಪ್ಪ ಹೋಲದಲ್ಲಿ ಹಸು ಮೇಯಿಸುತ್ತಿದ್ದು  ಸಂದರ್ಭದಲ್ಲಿ ಗುಡುಗು ಸಹಿತ ಹೊಡೆದ ಸಿಡಿಲಿಗೆ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ, ಅಲ್ಲದೆ ಅಲ್ಲಿಯೇ ಇದ್ದ ಲೆಂಕಪ್ಪ(50), ಪ್ರದೀಪ್(10), ತಿಮ್ಮದಾಸಯ್ಯ(55) ರವರಿಗೆ ತೀವ್ರತರವಾದ ಆಘಾತವಾಗಿದ್ದು, ಮೆಂಟಲ್ ಶಾಕ್ ಆಗಿದೆ ಎನ್ನಲಾಗಿದೆ, ಈ ಮೂವರಿಗೆ ಚಿ.ನಾ.ಹಳ್ಳಿಯ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಆಸ್ಪತ್ರೆಗೆ ಶಾಸಕ ಸಿ.ಬಿ.ಸುರೇಶ್ಬಾಬು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬವರ್ಗ ಪರಿಹಾರಕ್ಕಾಗಿ ಆಗ್ರಹಿಸಿತು.
ಚಿಕ್ಕನಾಯಕನಹಳ್ಳಿ, ವಿಧಾನ ಸಭಾ ಚುನಾವಣೆಯಲ್ಲಿ ಶೇ.77ರಷ್ಟು ಮತದಾನವಾಗಿದೆ, ಒಂದೆರಡು ಕಡೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುವುದು ಬಿಟ್ಟರೆ ಬಹುತೇಕ ಎಲ್ಲಾ ಕಡೆ ಶಾಂತವಾಗಿದೆ.
ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಒಂದು ಲಕ್ಷದ ತೊಂಭತ್ತೆಂಟು ಸಾವಿರದ ಮೂರು ನೂರ ನಲವತ್ತೊಂಭತ್ತು ಮತದಾರರಿದ್ದು ಇದರಲ್ಲಿ ಒಂದು ಲಕ್ಷದ ಒಂದು ನೂರ ಮೂವತ್ತೊಂದು ಪುರಷರು, ತೊಂಭತ್ತೆಂಟು ಸಾವಿರದ ಇನ್ನೂರ ಹದಿನೆಂಟು ಮಹಿಳಾ ಮತದಾರಿದ್ದಾರೆ.
ಬೆಳಗ್ಗೆ 7ಗಂಟೆಯಿಂದ 10ಗಂಟೆಯವರೆಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ವಿರಳವಾಗಿತ್ತು. 10ಗಂಟೆ ನಂತರ ಮತದಾರರು ಮತಗಟ್ಟೆಗೆ ಬರಲಾರಂಭಿಸಿದರು 12ರವೇಳೆಗೆ ಮತದಾನ ಚುರುಕುಗೊಂಡು 1.30ರ ಸುಮಾರಿನಲ್ಲಿ ಜನ ಓಟು ಹಾಕಲು ಉದ್ದನೆಯ ಸಾಲುಗಳಲ್ಲಿ ನಿಂತಿರುವುದು ಕಾಣಬರುತ್ತಿತ್ತು. ಸುಮಾರು 2ಗಂಟೆಯ ವೇಳೆಯಲ್ಲಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಮತದಾನ ಮಂದಗತಿ ಕಂಡುಕೊಂಡಿತು. ಮೂರರ ನಂತರ ಬಿರುಸಿನ ಮತದಾನ ನಡೆಯಿತು.
ನವಿಲೆ, ಗೋಡೆಕೆರೆ, ಭರಣಾಪುರ, ಶೆಟ್ಟೀಕೆರೆಯ ಮತಕೇಂದ್ರದಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೆ, ಜೆ.ಸಿ.ಪುರದ ಮತಕೇಂದ್ರದಲ್ಲಿ ಭೂತ್ ಏಜೆಂಟ್ ಒಬ್ಬರು ಪಕ್ಷದ ಪರವಾಗಿ ಸಂಜ್ಞೆ ನೀಡಿದನೆಂಬ ಕಾರಣಕ್ಕೆ ಕೆಲವು ನಿಮಿಷ ಗೊಂದಲವಾಯಿತೆನ್ನಲಾಗಿದೆ.

Saturday, May 4, 2013



ಅಕ್ರಮ ಮರಳು ಸಾಗಾಣಿಕೆ: ಗ್ರಾಮಸ್ಥರಿಂದ  ದಿಬಂಧನ
 
ಚಿಕ್ಕನಾಯಕನಹಳ್ಳಿ,ಮೇ.3 : ಚುನಾವಣಾ ಗಲಾಟೆಯಲ್ಲಿ ಎಲ್ಲರೂ ಮತಪ್ರಚಾರ ಕಾರ್ಯದಲ್ಲಿ ತೊಡಗಿರುತ್ತಾರೆ, ಇದೇ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬ ಕೆರೆಯಲ್ಲಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ತಮ್ಮ ತೋಟಕ್ಕೆ ರಾಶಿರಾಶಿ ಮರಳನ್ನು ದಾಸ್ತಾನು ಮಾಡಿದ್ದನ್ನು ಕಂಡ ಗ್ರಾಮಸ್ಥರು ಈ ಕೃತ್ಯವನ್ನು ಗಮನಿಸಿ ಮಾಧ್ಯಮದವರಿಗೆ ಸಾಕ್ಷಿ ಸಮೇತವಾಗಿ ಹಿಡಿದುಕೊಟ್ಟ ಘಟನೆ ಕಾಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಡೇನಹಳ್ಳಿ  ಕೆರೆಯಲ್ಲಿ ನರಸಿಂಹಮೂತರ್ಿ ಎಂಬ ವ್ಯಕ್ತಿ ಜೆಸಿಬಿಯಿಂದ ಮರಳನ್ನು ಎತ್ತೊಯ್ದು ತಮ್ಮ ಸ್ವಂತ ತೋಟದ ಸುಮಾರು ನೂರು ತೆಂಗಿನ ಮರಗಳ ಬದಿಯಲ್ಲಿ ಮರಳ ರಾಶಿಯನ್ನು ಅಕ್ರಮವಾಗಿ ಮಾಡಿಕೊಂಡಿದ್ದ ಮರಳನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಸಾಕ್ಷಿ ಸಮೇತವಾಗಿ ಮಾಧ್ಯಮದವರಿಗೆ ತೋರಿಸಿದರು.
ಈ ಸಂದರ್ಭದಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ನರಸಿಂಹಮೂತರ್ಿ ಮತ್ತು ಗ್ರಾಮಸ್ಥರಲ್ಲಿ ಮಾತಿನ ಚಕಮಕಿ ನಡೆಯುತ್ತಿತ್ತು. ಆಗ ಗ್ರಾಮಸ್ಥರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಯಾರು ಇಲ್ಲದ ಸಂದರ್ಭವನ್ನು ಕಾಯ್ದಿದ್ದು ಬೆಳಗಿನ 10ರಿಂದ ಸಂಜೆ 3ರವರೆಗೆ ನಿರಂತರವಾಗಿ ಅಕ್ರಮವಾಗಿ ಮರಳನ್ನು ತಮ್ಮ ತೋಟದಲ್ಲಿ ಸಂಗ್ರಹ ಮಾಡಿ ನಿಧಾನವಾಗಿ ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ಅಕ್ರಮವಾಗಿ ತಮ್ಮ ತೋಟದಲ್ಲಿ ಸಂಗ್ರಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
 ಈ ವಿಚಾರವನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಸುಮಾರು ಐವತ್ತು ಲೋಡಿನಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಘಟನೆ ಬೆಳಕಿಗೆ ಬಂದಿತು.
ಈ ಸಂದರ್ಭ ನರಸಿಂಹಮೂತರ್ಿಯವರು ಈ ವಿಚಾರವನ್ನು ತಳ್ಳಿ ಹಾಕಿ ನಾನು ತೋಟಕ್ಕೆ ಮಣ್ಣು ಹೊಡೆಯುವ ಉದ್ದೇಶದಿಂದ ಮರಳು ಮಿಶ್ರಿತ ಮಣ್ಣನ್ನು ತೋಟಕ್ಕೆ ಹೊಡೆದಿದ್ದೇನೆ ಯಾವುದೇ ಕಾರಣಕ್ಕೂ ಅಕ್ರಮ ಮರಳು ಸಾಗಾಣಿಕೆ ಮಾಡಿಲ್ಲ ಎಂದು ಗ್ರಾಮಸ್ಥರ ಮಾತನ್ನು ತಿರಸ್ಕರಿಸಿದರು. 
ಅದೇ ಸಂದರ್ಭಕ್ಕೆ ಸ್ಥಳಕ್ಕಾಗಮಿಸಿದ ಕಸಬಾ ಹೋಬಳಿಯ ಕಾರ್ಯದಶರ್ಿಹನುಮಂತನಾಯಕ್ರವರು ಸ್ಥಳ ಪರಿಶೀಲನೆ ಮಾಡಿ ನಡೆದಿರುವ ಘಟನೆಯನ್ನು ವೀಕ್ಷಿಸಿ ಈ ಅಕ್ರಮ ದಂಧೆಗೆ ಬಳಸಿದ ಜೆಸಿಬಿಯನ್ನು ಹಾಗೂ ಮರಳು ದಂಧೆಯ ವಿಚಾರವನ್ನು ತಹಶೀಲ್ದಾರ್ರವರಿಗೆ ದೂರು ಸಲ್ಲಿಸುತ್ತೇನೆಂದು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮದ ಪ್ರತ್ಯಕ್ಷದಶರ್ಿಗಳಾದ ನವೀನ್, ಪ್ರತಾಪ್, ಶರತ್, ಗೋವಿಂದಯ್ಯ, ಕೋದಂಡರಾಮಯ್ಯ, ರುದ್ರಪ್ಪ, ಮೂರ್ತಣ್ಣ ಮುಂತಾದವರಿದ್ದರು.
 ಇದೇ ರೀತಿ ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಅಂತರ್ಜಲ ಕುಸಿದಿದೆ, ಈ ದಂಧೆಯ ಬಗ್ಗೆ ಗ್ರಾ.ಪಂ.ಕಾರ್ಯದಶರ್ಿಗಳು, ಪೋಲಿಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕಂಡೂ ಕಾಣದಂತೆ ಜಾಣಕುರುಡನ್ನು ಪ್ರದಶರ್ಿಸುತ್ತಿದೆ ಎಂದು ಜನರು ದೂರಿದರು.

ಚಿ.ನಾ.ಹಳ್ಳಿ: 258 ಮತಗಟ್ಟೆಗಳಿಗೆ 1032 ಜನ ಚುನಾವಣಾ ಸಿಬ್ಬಂದಿ: ಆರ್.ಓ. ಇ.ಪ್ರಕಾಶ್
ಚಿಕ್ಕನಾಯಕನಹಳ್ಳಿ,ಮೇ.4 : ವಿಧಾನಸಭಾ ಕ್ಷೇತ್ರದಲ್ಲಿನ  258 ಮತಗಟ್ಟೆಯಲ್ಲಿ 44 ಸೂಕ್ಷ್ಮ, 38 ಅತಿಸೂಕ್ಷ್ಮ ಮತಗಟ್ಟೆಗಳಿದ್ದು ಶಾಂತಿಯುತ ಮತದಾನಕ್ಕಾಗಿ 1032 ಚುನಾವಣಾ ಸಿಬ್ಬಂದಿ, 379 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರದಾದ್ಯಂತ ಚುನಾವಣಾ ಕಾರ್ಯಕ್ಕಾಗಿ ಸಿಬ್ಬಂದಿಗಳನ್ನು ವಾಹನಗಳಲ್ಲಿ  ಸಂಬಂಧಪಟ್ಟ ಮತಗಟ್ಟೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಚುನಾವಣಾ ಸಿಬ್ಬಂದಿಯು ತುಮಕೂರು ಗ್ರಾಮಾಂತರ, ತುರುವೇಕೆರೆ, ತಿಪಟೂರು ತಾಲ್ಲೂಕುಗಳಿಂದ ನಮ್ಮ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ. ಕ್ಷೇತ್ರದಾದ್ಯಂತ 1244 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದು ಅದರಲ್ಲಿ 212ಮಂದಿ ಚುನಾವಣಾ ಸಿಬ್ಬಂದಿಯನ್ನು ಕಾಯ್ದಿರಿಸಿದ್ದು 1032 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಹಾಗೂ  ಒಟ್ಟು 45 ವಾಹನಗಳನ್ನು ಬಳಸಿದ್ದು ಅವುಗಳಲ್ಲಿ 36 ಬಸ್ಸುಗಳು, 2ಮಿನಿಬಸ್ ಹಾಗೂ 7ಜೀಪ್ಗಳನ್ನು ಏಪರ್ಾಟು ಮಾಡಲಾಗಿದೆ. 
ಕ್ಷೇತ್ರದಲ್ಲಿ 258 ಮತಗಟ್ಟೆಗಳಿಗೆ 22ಜನ ಸೆಕ್ಟ್ರಲ್ ಆಫೀಸ್ರ್ಗಳನ್ನು ನೇಮಿಸಲಾಗಿದೆ. ಪ್ರತಿಯೊಬ್ಬ ಸೆಕ್ಟ್ರಲ್ ಆಫೀಸರ್ 10ರಿಂದ 12 ಬೂತ್ಗಳ ಮೇಲ್ವಿಚಾರಣೆ ವಹಿಸಿದ್ದಾರೆ ಹಾಗೂ ಚುನಾವಣಾ ಅಕ್ರಮವನ್ನು ತಡೆಯಲು 12 ತನಿಖಾ ದಳಗಳಿದ್ದು ಕ್ಷೇತ್ರದಾದ್ಯಂತ ಎಲ್ಲಾ ಪಂಚಾಯತ್ ಮಟ್ಟದ ವಿಭಾಗಗಳನ್ನು ಮಾಡಿ ಒಂದೊಂದು ವಿಭಾಗಗಳಲ್ಲಿ ಒಂದೊಂದು ತನಿಖಾದಳವನ್ನು ನೇಮಿಸಲಾಗಿದೆ ಎಂದರು. ಯಾವುದೇ ಚುನಾವಣಾ ಅಕ್ರಮಗಳು ನಡೆದಲ್ಲಿ ತನಿಖಾದಳು ವಿಷಯದ ತಿಳಿಸಿದ 15ನಿಮಿಷದಲ್ಲಿ ಹಾಜರಿರುತ್ತಾರೆಂದು ಚುನಾವಣಾಧಿಕಾರಿ ಇ.ಪ್ರಕಾಶ್ ಮಾಧ್ಯಮದವರಿಗೆ ತಿಳಿಸಿದರು. 
ವೃತ್ತ ನಿರೀಕ್ಷಕರಾದ ಕೆ.ಪ್ರಭಾಕರ್ರವರು ಪೋಲಿಸ್ ಸಿಬ್ಬಂದಿಯ ನಿಯೋಜನೆ ಬಗ್ಗೆ ತಿಳಿಸಿ, ಚುನಾವಣಾ ಕಾರ್ಯಕ್ಕಾಗಿ 2 ಸಿಪಿಐ, 7ಪಿಎಸ್ಐ, 15ಎ.ಎಸೈ, 47ಹೆಡ್ಕಾನ್ಸೇಟಬಲ್, 106ಪಿಸಿಗಳನ್ನು, 10ಹೋಮ್ಗಾಡ್ಸರ್್ ಹಾಗೂ 84 ಸಿಐಎಸ್ಎಫ್ಗಳನ್ನು ನಿಯೋಜಿಸಲಾಗಿದೆ ಒಟ್ಟಾರೆಯಾಗಿ ತಾಲ್ಲೂಕಿನಾದ್ಯಂತ 379 ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.







Friday, April 26, 2013


ಸಿ.ಗುರುಮೂತರ್ಿ ಕೊಟಿಗೆಮನೆ.
ಬಿಸಿಲಿನ ಧಗೆಯಲ್ಲಿ ಅಭ್ಯಥರ್ಿಗಳಿಂದ ಚುನಾವಣಾ ಕಾವು



ಚಿಕ್ಕನಾಯಕನಹಳ್ಳಿ,ಏ.26: ಜಾತಿ ಮತ್ತು ವ್ಯಕ್ತಿ ಆಧಾರಿತವಾಗಿರುವ ಇಲ್ಲಿನ ವಿಧಾನ ಸಭಾ ಚುನಾವಣೆಯ ಕಾವು ಬಿಸಲಿನ ಧಗೆಯ ಜೊತೆ ಪೈಪೋಟಿಗಿಳಿದಿದೆ. ಕುಡಿಯುವ ನೀರಿಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕಿ.ಲೋ.ಮೀಟರ್ ಗಟ್ಟಲೆ ಬಿಂದಿಗೆ ಹಿಡಿದು ಓಡಾಡುತ್ತಿದ್ದರೆ, ಇವರ ಹಿಂದೆ ರಾಜಕಾರಣಿಗಳು ಜಾತಿಯ ಲೇಬಲ್ ಹಿಡಿದುಕೊಂಡು ಅಲೆದಾಡುತ್ತಿದ್ದಾರೆ.
'ಜಾತಿ'ಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಮುಂದಾಗಿರುವ ಉರಿಯಾಳುಗಳು ತಮ್ಮ ಮತಬ್ಯಾಂಕ್ಗಳನ್ನು ಹೆಚ್ಚಿಸಿಕೊಳ್ಳಲು ಪ್ರಬಲ ಕೋಮಿನ ಪ್ರಭಾವಿ ನಾಯಕರುಗಳನ್ನು ಕ್ಷೇತ್ರಕ್ಕೆ ಕರೆಸಿ ಅವರ ಮೂಲಕ ತಮ್ಮ ಗೆಲುವಿನ ಕನಸುಕಾಣುತ್ತಿದ್ದಾರೆ. ಆ ಪ್ರಭಾವಿ ನಾಯಕರುಗಳು ಅಷ್ಟೇ ನಮ್ಮ ಶಕ್ತಿಯನ್ನು ರಾಜ್ಯದ ಜನತೆಗೆ ತೋರಿಸಬೇಕೆಂದರೆ ನಮ್ಮನ್ನು ಆಶೀರ್ವದಿಸಿ, ಎಂದು ಹಿಗ್ಗೂಸಿಗ್ಗಿಲ್ಲದೆ, ನೇರವಾಗಿ 'ಜಾತಿ' ರಾಜಕೀಯದ ಮಾತನಾಡುತ್ತಿದ್ದರೆ, ಸಣ್ಣಪುಟ್ಟ ಜಾತಿಯವರು ನಮ್ಮಗ್ಯಾರು ಗತಿ ಎಂಬಂತೆ ಪ್ರಶ್ನೆ ಹಾಕಿಕೊಳ್ಳುತ್ತಿದ್ದರೆ, ಇವರನ್ನು ಹಿಡಿದುಕೊಳ್ಳಲು ದುಡ್ಡು ಹೆಂಡದ ರುಚಿ ತೋರಿಸಿ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಹವಣಿಸುತ್ತಿದ್ದಾರೆ. ಇಲ್ಲಿಗೆ ಬಂದಿದೆ ಪ್ರಜಾ(ಜಾತಿ)ಪ್ರಭುತ್ವದ ಸ್ಥಿತಿ.
ಕ್ಷೇತ್ರದಲ್ಲಿನ ಜನರ ಬದುಕು ದುಸ್ತರವಾಗಿ ಜೀವನ ನಡೆಸಲು ಫ್ಯಾಕ್ಟ್ರಿಗಳನ್ನು ಹುಡುಕಿಕೊಂಡು ಅಕ್ಷರಸ್ಥ ವರ್ಗ ನಗರದ ಕಡೆಗೆ ಹೊರಟರೆ, ಕಾಫಿ ತೋಟಗಳಲ್ಲಿ ಜೀತ ಮಾಡಲು ಇನ್ನೊಂದು ವರ್ಗ ಹೋಗಿದೆ, ಒಳ್ಳೆಯ ಕೋಸರ್್ಗಳಿಲ್ಲದೆ ತಮ್ಮ ಮಕ್ಕಳ ಬಗ್ಗೆ ಚಿಂತಿಸುತ್ತಾ ಮಗದೊಂದು ವರ್ಗ ಪಟ್ಟಣ ಸೇರಿದ್ದಾರೆ. ಈಗಾಗಿ ಹಳ್ಳಿಗಳು ವೃದ್ದಾಶ್ರಮಗಳಾಗಿವೆ. ಇನ್ನೂ ಇಲ್ಲಿ ನೆಲೆಸಿರುವ ಜನರಿಗೆ ನೀರಿನ ಸಮಸ್ಯೆ, ರಸ್ತೆ, ವಿದ್ಯುತ್ ಸೇರಿದಂತೆ ಒಳ್ಳೆಯ ಆದಾಯ ಕೊಡುವ ಹಾಗೂ ನಿರಂತರ ಕೆಲಸ ಸಿಗುವಂತಹ ಕೆಲಸದ ಸಮಸ್ಯೆ ಅಪಾರವಾಗಿದ್ದರೂ ಈ ಬಗ್ಗೆ ಎಳ್ಳೆಷ್ಟು ಕಾಳಜಿಯಿಲ್ಲದ ನಾಯಕರುಗಳು, ನಮ್ಮನ್ನು ಗೆಲ್ಲಿಸಿದರೆ ಮಾತ್ರ ನಿಮ್ಮ ಸೇವೆಗೆ ನಾವು ಸಿದ್ದ ಎಂದು ಬೊಗಳೆ ಬಿಡುತ್ತಿದ್ದಾರೆ. 
ಕಣದಲ್ಲಿರುವ 11 ಅಭ್ಯಥರ್ಿಗಳ ಪೈಕಿ, ಕೆ.ಜೆ.ಪಿ.ಯ ಜೆ.ಸಿ.ಮಾಧುಸ್ವಾಮಿ, ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್, ರೈತ ಸಂಘದ ಕೆಂಕೆರೆ ಸತೀಶ್ ಈ ಮೂರು ಜನ ಲಿಂಗಾಯಿತರಾದರೆ,  ಜೆ.ಡಿ.ಎಸ್.ನ ಸಿ.ಬಿ.ಸುರೇಶ್ ಬಾಬು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್, ಪಕ್ಷೇತರ ಅಭ್ಯಥರ್ಿ ಮಂಜುಳಾ ನಾಗರಾಜ್ ಇವರು  ಕುರುಬ ಸಮಾಜಕ್ಕೆ ಸೇರಿದವರಾಗಿದ್ದಾರೆ, ಕಾಂಗ್ರೆಸ್ನ ಸತೀಶ್ ಸಾಸಲು, ಜೆ.ಡಿ.ಯು.ನ ಜಿ.ಪ್ರಕಾಶ್ ಇಬ್ಬರೂ ಗೊಲ್ಲ ಸಮಾಜದವರು, ಬಿ.ಎಸ್.ಆರ್ ಪಕ್ಷದ ಕೆ.ಎಲ್.ದೇವರಾಜು ನಾಯಕ ಸಮಾಜದವರಾದರೆ, ವೆಲ್ಫೇರ್ ಪಾಟರ್ಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯಕ್ ಮತ್ತು ಪಕ್ಷೇತರ ರಾಮಚಂದ್ರಯ್ಯ ಬರಗೂರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ, ತಾಲೂಕಿನ ಐದು ಹೋಬಳಿಗಳ ಜೊತೆಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸೇರಿಸಿಕೊಂಡು ಆರು ಹೋಬಳಿಗಳಿರುವ ದೊಡ್ಡ ಕ್ಷೇತ್ರವಾಗಿದೆ. ಒಂದು ಲಕ್ಷದ ತೊಂಭತ್ತೆಂಟು ಸಾವಿರ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಲಿಂಗಾಯಿತರು 45 ಸಾವಿರ, ಕುರುಬರು 38 ಸಾವಿರ, ಒಕ್ಕಲಿಗರು 18 ಸಾವಿರ, ಗೊಲ್ಲರು 16ಸಾವಿರ, ಮುಸ್ಲಿಂ ಮತ್ತು ಅಲ್ಪಸಂಖ್ಯಾತರು 15ಸಾವಿರ, ಪರಿಶಿಷ್ಟಜಾತಿ ಮತ್ತು ಪಂಗಡ ಸೇರಿ 40 ಸಾವಿರ, ಮಡಿವಾಳರು 4ಸಾವಿರ, ಬಲಿಜ 6ಸಾವಿರ, ಉಪ್ಪಾರರು 10ಸಾವಿರ ಮತ್ತು ಇತರೆ ಜಾತಿಯವರು 6 ಸಾವಿರ ಹೀಗೆ ಹಂಚಿ ಹೋಗಿದ್ದು ಸ್ಫಧರ್ೆಯಲ್ಲಿ ಮುಂಚೂಣಿಯಲ್ಲಿರುವ ಉರಿಯಾಳುಗಳು  ನಿಣರ್ಾಯಕ ಮತಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡ, ಮುಸ್ಲಿಂ ಮತ್ತು ಇತರೆ ಸಣ್ಣ ಪುಟ್ಟ ಜಾತಿಗಳ ಮೇಲೆ  ಕಣ್ಣಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಜಾತಿ ರಾಜಕಾರಣದ ಜತೆಗೆ ಚೆಲ್ಲುವ ಕೋಟಿಗಳ ಲೆಕ್ಕದ ಹಣವೂ ನಿಣರ್ಾಯಕವಾಗಲಿದೆ.
ಜೆ.ಸಿ.ಎಂ. ಓಟಕ್ಕೆ ಕೆ.ಎಸ್.ಕೆ. ಅಡ್ಡಗಾಲೇ. . . ?
ಜೆ.ಸಿ.ಮಾಧುಸ್ವಾಮಿಯವರ ಜೊತೆ ಲಿಂಗಾಯಿತ ಲೀಡರ್ಗಳಿದ್ದಾರೆ, ಯಡಿಯೂರಪ್ಪನವರ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾರೆ ಜೊತೆಗೆ ಅವರದೇ ಆದ 25 ಸಾವಿರ ಮತಗಳಿವೆ ಇವುಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಜೆ.ಸಿ.ಎಂ.ರವರ ನಿಷ್ಠೂರ ವರ್ತನೆ, ಅಧಿಕಾರಯುತವಾದ ಮಾತುಗಳು, ಯಾರಿಗೂ ಕೇರ್ ಮಾಡದ ನಡವಳಿಕೆಗಳಿಂದ ಹಲವರು ಬೇಸತ್ತಿದ್ದಾರೆ. ಇವುಗಳನ್ನೆಲ್ಲಾ ತನ್ನ ಪರವಾಗಿಸಿಕೊಂಡಿರುವ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಜೊತೆಗೆ  ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಹುಳಿಯಾರು ಮತ್ತು ಬುಕ್ಕಾಪಟ್ಟಣಕ್ಕೆ ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಈಗಲೂ ಸ್ಮರಿಸುವ ಆ ಭಾಗದ ಹಲವರು ಇವರ ಜೊತೆಯಲ್ಲಿದ್ದಾರೆ. ಹೇಮಾವತಿ ನೀರನ್ನು ತಾಲೂಕಿನ 27 ಕೆರೆಗಳಿಗೆ ಮಂಜೂರಾತಿ ಮಾಡಿಸುವಲ್ಲಿ ಶ್ರಮವಹಿಸಿರುವ ಕಿರಣ್ಕುಮಾರ್ ತಮ್ಮ ಶ್ರಮಕ್ಕೆ ಕೂಲಿ ಕೇಳುತ್ತಿದ್ದಾರೆ.
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗಿನ ಆಶೀವರ್ಾದ ಯಾರಿಗೆ. . .?  
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗೆ ಎಲ್ಲರ ಹೆಗಲ ಮೇಲೆ ಕೈ ಹಾಕಿ ಭಾವನಾತ್ಮಕವಾಗಿ ಮಾತನಾಡಿಸುವ ಸಿ.ಬಿ.ಸುರೇಶ್ ಬಾಬು ಸೌಮ್ಯ ಸ್ವಭಾವ, ಬಡವರಾದಿಯಾಗಿ ಅಧಿಕಾರಿಗಳವರೆಗೆ  ಎಲ್ಲರನ್ನೂ ಅಣ್ಣ, ಅಕ್ಕ, ಎಂದು ಮಾತನಾಡಿಸುತ್ತಾ ಯುವಕರ ಕಣ್ಮಣಿಯಾಗಿರುವ ಸಿ.ಬಿ.ಎಸ್. ಆಡಳಿತ ನಡೆಸುವಲ್ಲಿ ಬಿಗಿ ನಿಲುವುಗಳಿಲ್ಲವೆಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿದ್ದಾರೆ, ಇವರ ಓಟದ ಓಘಕ್ಕೆ ಕಾಂಗ್ರೆಸ್ನ ಸತೀಶ್ ಅಡ್ಡಗಾಲು ಹಾಕುತ್ತಾರಾ ಎಂಬುದೇ ಈಗಿನ ಪ್ರಶ್ನೆ.
ಒಂದು ಹಂತದಲ್ಲಿ ಇಲ್ಲಿನ ಕಾಂಗ್ರೆಸ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿತ್ತು. ಅದಕ್ಕೆ ಸ್ವಲ್ಪ ಚೇತರಿಕೆ ಕೊಟ್ಟವರು ಸತೀಶ್ ಸಾಸಲು, ಗೆಲ್ಲುವಷ್ಟು ತಾಕತ್ತು ಇಲ್ಲದಿದ್ದರೂ ತೊಡರುಗಾಲು ಕೊಡುವಷ್ಟು ಇಕ್ಕಮತ್ತು ಇದೆ. 
ಇವೆಲ್ಲಾ ಸದ್ಯದ ಲೆಕ್ಕಾಚಾರಗಳಷ್ಟೇ, ಇನ್ನೂ  ಮುಂದೈತೆ ಮಾರಿಹಬ್ಬ ಅಷ್ಟು ಹೊತ್ತಿಗೆ ಏನೇನು ಬದಲಾಗುತ್ತೋ ಕಾದುನೋಡಣ. . . . . ! 


ತಾಲೂಕಿನ 27 ಕೆರೆಗಳಿಗೆ ಹೇಮೆ ಹರಿಯುವ ಕಾಮಗಾರಿ ಬರದಿಂದ ಸಾಗುತ್ತಿದೆ.

ಚಿಕ್ಕನಾಯಕನಹಳ್ಳಿ,ಏ.26 : ತಾಲ್ಲೂಕಿನ 27 ಕೆರೆಗೆ ನೀರುಣಿಸಲಿರುವ ಹೇಮಾವತಿ ನೀರಿನ ಯೋಜನೆಯ ಕಾಮಗಾರಿಯು ಬಿಳಿಗೆರೆಯಲ್ಲಿ ಆರಂಭವಾಗಿ ಒಂದು ಕಿ.ಮೀ.ಉದ್ದದವರೆಗೆ ಕಾಮಗಾರಿಯ ಕೆಲಸ ನಡೆದಿದ್ದು  ಬಿರುಸಿನಿಂದ ಕಾಮಗಾರಿ ಮುಂದುವರೆಯುತ್ತಿದೆ.
ತಾಲ್ಲೂಕಿಗೆ ಬಿಡುಗಡೆಯಾಗಿರುವ 102ಕೋಟಿ ರೂಗಳ  ಅನುದಾನದ ಕಾಮಗಾರಿಯು ತಿಪಟೂರು ತಾಲ್ಲೂಕಿನ ಬಿಳಿಗೆರೆಯಿಂದ ಆರಂಭವಾಗಿದ್ದು ಕಾಮಗಾರಿಯು ತಾಲ್ಲೂಕಿನ ಕಡೆ ಮುಖ ಮಾಡಿದೆ. ಕಾಮಗಾರಿಯಲ್ಲಿ  ಇಟಾಚಿಗಳು ಸೇರಿದಂತೆ ಕೆಲಸಗಾರರು ಬಿರುಸಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ.
ಈಗ ನಡೆದಿರುವ ಕಾಮಗಾರಿಯಲ್ಲಿ 24 ಅಡಿವರೆಗೆ ಭೂಮಿ ಅಗೆದಿದ್ದು, ಇನ್ನೂ  2ಮೀಟರ್ ಆಳ ಇದೆ. ಕೊರೆದಿರುವ ನೆಲಕ್ಕೆ ಸಿಮೆಂಟ್ ಕಾಂಕ್ರೆಟ್ ಹಾಗೂ ಎರಡು ಕಡೆ ಭಾಗಕ್ಕೆ ಸ್ಟೋನ್ ಸ್ಟಿಚಿಂಗ್ ಹಾಕಲಾಗುವುದು. 
ಬಿಳಿಗೆರೆಯಲ್ಲಿರುವ ಸಕರ್ಾರಿ ಜಮೀನಿನಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಮುಂದಿನ ಖಾಸಗಿ ಜಮೀನಿನಲ್ಲಿ ಕಾಮಗಾರಿ ಆರಂಭವಾಗಬೇಕಿದೆ, ಖಾಸಗಿ ಜಮೀನುಗಳ ನಂತರ ಮುಂದೆ ಇರುವ ಸಕರ್ಾರಿ ಜಮೀನಿನಲ್ಲಿ ಕಾಮಗಾರಿ ಆರಂಭವಾಗಿ ಕೆಲಸ ಮುಂದುವರೆಯಲಿದೆ, ನೀರು ಹರಿಯುವ ಅನುಸಾರವಾಗಿ ಆಳ ತೆಗೆಯಲಾಗುವುದು ಹಾಗೂ ಕಾಮಗಾರಿಯು ಹದಿನೆಂಟು ತಿಂಗಳ ಟೆಂಡರ್ಗೆ ನಿಗದಿಯಾದ್ದು ಅಷ್ಟರೊಳಗೆ ಪೂರ್ಣಗೊಳಿಸಲಾಗುವುದೆಂದು ಸಂಬಂಧಪಟ್ಟ ಗುತ್ತಿಗೆದಾರರು ತಿಳಿಸಿದ್ದಾರೆ.
ಕೆಲ ರಾಜಕೀಯ ಮುಖಂಡರು ಕೆಲಸವನ್ನು ಸ್ಥಗಿತಗೊಳಿಸಲು ಗಲಾಟೆ ಮಾಡಿದ್ದರಿಂದ ಎ.ಸಿಯವರಿಂದ ಪಮರ್ಿಷನ್ ಪಡೆದು ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ತಾಲೂಕ್ ಪ್ರಮುಖ್ ಚೇತನ್ಪ್ರಸಾದ್, ಮಾಜಿ ನಾಮಿನಿ ಪುರಸಭಾ ಸದಸ್ಯ ಲಕ್ಷ್ಮಯ್ಯ ಮುಂತಾದವರಿದ್ದರು.

aPÀÌ£ÁAiÀÄPÀ£ÀºÀ½îAiÀİè eÉrJ¸ï C¨sÀåyð ¹.©.¸ÀÄgÉñï¨Á§ÄgÀªÀgÀ ZÀÄ£ÁªÀuÁ ¥ÀæZÁgÀPÉÌ  gÁ¶ÖçÃAiÀÄ CzsÀåPÀë ºÉZï.r.zÉêÉÃUËqÀ DUÀ«Ä¹zÀÝ ¸ÀAzÀ¨sÀðzÀ°è £ÀUÀgÀ PÁAUÉæ¸ï PÁAiÀÄðzÀ²ð PÉ.f.PÀȵÉÚUËqÀ ¥ÀPÀëPÉÌ ¸ÉÃ¥ÀðqÉUÉÆAqÀgÀÄ. F ¸ÀAzÀ¨sÀðzÀ°è eÉrJ¸ï C¨sÀåyð ¹.©.¸ÀÄgÉñï¨Á§Ä, ¥ÀÄgÀ¸À¨sÁ ¸ÀzÀ¸Àå ¹.r.ZÀAzÀæ±ÉÃRgï G¥À¹ÜvÀjzÀÝgÀÄ

aPÀÌ£ÁAiÀÄPÀ£ÀºÀ½î «zsÁ£À ¸À¨sÁ PÉëÃvÀæzÀ gÁªÀİAUÁ¥ÀÄgÀ UÁæ.¥ÀA.¸ÀzÀ¸Àå ©.PÉ.UÀÄgÀÄgÁeï, ªÀiÁf ¸ÀzÀ¸Àå ©.PÉ.ªÀÄAdÄ£Áxï, J¯ÉQÖçPÀ¯ï PÀAmÁæPÀÖgï dAiÀÄtÚ ªÀÄvÀÄÛ zÀ°vÀ ªÀÄÄRAqÀ ZÀAzÀæ¥Àà EªÀgÀÄUÀ¼ÀÄ PÁAUÉæ¸ï¤AzÀ eÉ.r.J¸ï.UÉ ¹.©.¸ÀÄgÉñï¨Á§Ä ¸ÀªÀÄÄäRzÀ°è ¸ÉÃ¥ÀðqÉUÉÆAqÀgÀÄ. F ¸ÀAzÀ¨sÀðzÀ°è PÉ.J¯ï.ªÀĺÀzÉêÀ¥Àà, dAiÀÄ¥ÀæPÁ±ï, vÁ.¥ÀA.¸ÀzÀ¸Àå ºÉÆ£ÉßñÀ¥Àà G¥À¹ÜvÀjzÀÝgÀÄ.


Friday, April 19, 2013


ಬಿ.ಎಸ್.ಪಿ ಪಕ್ಷ ದುಡ್ಡ ಹಂಚುವುದಿಲ್ಲ, ಎಣ್ಣೆಯನ್ನು ಹಂಚುವುದಿಲ್ಲ
ಚಿಕ್ಕನಾಯಕನಹಳ್ಳಿ,ಏ.19 : ಬಿ.ಎಸ್.ಪಿ ಪಕ್ಷ ದುಡ್ಡ ಹಂಚುವುದಿಲ್ಲ, ಎಣ್ಣೆಯನ್ನು ಹಂಚುವುದಿಲ್ಲ, ಪಕ್ಷದಲ್ಲಿ ಖುಷಿಯಿಂದ ಸೇವೆ ಮಾಡುವ ಮನೋಭಾವ ಇರುವವರೆಗೆ ಸ್ವಾಗತಿಸುತ್ತೇವೆ ಎಂದು ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಬಿಎಸ್ಪಿ ಕಛೇರಿಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ತಾ.ಬಿಜೆಪಿ ಅಧ್ಯಕ್ಷ ಸಿ.ಎಸ್.ರಾಜಣ್ಣ, ಮಾಜಿ ಗ್ರಾ.ಪಂ.ಸದಸ್ಯ ರೋಜೆಗೌಡ್ರು, ಮಾಜಿ ಪಿಎಲ್ಡಿ ಬ್ಯಾಂಕ್ ನಿದರ್ೇಶಕ ರೇವಣ್ಣರವರನ್ನು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಪತ್ರಿಕಾಗೋಷ್ಠಿಯನ್ನು ಕುರಿತು ಮಾತನಾಡಿದರು. 
ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಬಳಿಕ ಬಿಎಸ್ಪಿ ಪಕ್ಷದಲ್ಲಿ ರಾಜ್ಯ ಮಟ್ಟದ ಹುದ್ದೆ ದೊರಕಿದ್ದು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರೊಂದಿಗೆ ಚಚರ್ಿಸಿರುವುದಾಗಿ ತಿಳಿಸಿದರಲ್ಲದೆ ನಮಗೆ ಜನಸೇವೆ ಮಾಡುವ ಮನೋಭಾವ ಇದೆ ಅದಕ್ಕಾಗಿ ರಾಜಕೀಯಕ್ಕೆ ಇಳಿದಿದ್ದೇವೆ ಎಂದರು.
ಪ್ರಚಾರಕ್ಕೆಂದು ಹಳ್ಳಿಗಳಿಗೆ ತೆರಳಿದಾಗ ಅಲ್ಲಿನ ಸಾರ್ವಜನಿಕರೇ ನಮಗೆ ಸ್ವಾಗತ ಕೋರಿ ನಿಮ್ಮ ವ್ಯಕ್ತಿತ್ವ, ಕಾರ್ಯಶೈಲಿಯನ್ನು ಗುರುತಿಸಿ ನಿಮಗೆ ಮತ ಹಾಕಿ ಗೆಲುವು ದೊರಕಿಸುತ್ತೇವೆ ಎಂದಿದ್ದಾರೆ, ವಿಧಾನಸಭೆ ಚುನಾವಣೆ ನಂತರ ಮುಂದೆ ಬರುವ ಲೋಕಸಭಾ ಚುನಾವಣೆಗೂ ಪಕ್ಷದಿಂದ ಸ್ಪಧರ್ಿಸುವುದಾಗಿ ತಿಳಿಸಿದರು.
ತಾವು ಪ್ರಚಾರ ಕೈಗೊಂಡಾಗ ಜನಗಳಿಂದ ಬಂದ ಮಾತುಗಳನ್ನು ಕೇಳಿ ಮಾಜಿ ಶಾಸಕರುಗಳು ತಾಲ್ಲೂಕಿನಲ್ಲಿ ಯಾವ ಅಭಿವೃದ್ದಿಯನ್ನು ಮಾಡದೇ ಇರುವುದರಿಂದ ಒಬ್ಬ ಭಿನ್ನವಾದ ಕಾರ್ಯವೈಖರಿ ಹೊಂದಿರುವ ವ್ಯಕ್ತಿ ತಾಲ್ಲೂಕಿಗೆ ಅಗತ್ಯ ಅದಕ್ಕಾಗಿ ನಿಮಗೆ ಬೆಂಬಲಿಸುತ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಿಎಸ್ಪಿ ಪಕ್ಷದ ಜಿಲ್ಲಾ ಕಾರ್ಯದಶರ್ಿ ಸತೀಶ್ಕಂಟಲಗೆರೆ, ತಾಲ್ಲೂಕು ಅಧ್ಯಕ್ಷ ನಾರಾಯಣರಾಜು ಉಪಸ್ಥಿತರಿದ್ದರು.
ಏಳು ದಿನಗಳ ಕಾಲ ರಾಮ ಸಪ್ತಾಹ ಮಹೋತ್ಸ
ಚಿಕ್ಕನಾಯಕನಹಳ್ಳಿ,ಏ.19 : ಶ್ರೀರಾಮನವಮಿ ಪ್ರಯುಕ್ತ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಶ್ರೀ ರಾಮ ಸಪ್ತಾಹ ಮಹೋತ್ಸವವನ್ನು ಏಳು ದಿನಗಳ ಕಾಲ ವಿಜೃಂಭಣೆಯಾಗಿ ನೆರವೇರಲಿದೆ.
 ನವಗ್ರಹ ಸ್ಥಾಪನೆ, ಹೋಮ, ಮಂಗಳಾರತಿ ಅಖಂಡ ಶ್ರೀ ರಾಮ ಭಜನೆಯನ್ನು ಏರ್ಪಡಿಸಿದ್ದು ಪ್ರತಿದಿನ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಚುನಾವಣೆ ಸಂಬಂಧ ಆಕ್ಷೇಪಣೆಗಳಿಗೆ ಸಂಪಕರ್ಿಸಿ
ಚಿಕ್ಕನಾಯಕನಹಳ್ಳಿ,ಏ.19 : ವಿಧಾನಸಭಾ ಚುನಾವಣೆ ಸಂಬಂಧ ಏನಾದರೂ ಆಕ್ಷೇಪಣೆಗಳು/ಸಲಹೆಗಳು ಇದ್ದಲ್ಲಿ ಚುನಾವಣಾ ವೀಕ್ಷಕ ಚಂದ್ರಕಾಂತ್ ಕಾಡೆರವರನ್ನು ಸಂಪಕರ್ಿಸಲಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿದಿನ ಸಂಜೆ 4ರಿಂದ 5ಗಂಟೆಯವರೆಗೆ ಚುನಾವಣಾ ವೀಕ್ಷಕರನ್ನು ಸಂದಶರ್ಿಸಬಹುದಾಗಿದೆ, ವೀಕ್ಷಕರನ್ನು ಸಂಪಕರ್ಿಸಲು 8277310941 ಮೊಬೈಲ್ ನಂಬರ್ನ್ನು ನೀಡಿದ್ದಾರೆ.
aPÀÌ£ÁAiÀÄPÀ£ÀºÀ½îAiÀÄ ¥ÀÄgÀ¸À¨sÁ PÁAiÀiÁð®AiÀÄzÀ ªÀÄÄSÁå¢üPÁj ºÁUÀÆ ªÀÄvÀUÀmÉÖ C¢üPÁjUÀ¼ÀÄ ªÀÄvÀzÁ£ÀzÀ ºÀQÌ£À §UÉÎ ¸ÁªÀðd¤PÀgÀ°è CjªÀÅ ªÀÄÆr¸À®Ä ¥ÀlÖtzÀ°è eÁxÁ £ÀqɹzÀgÀÄ. 

aPÀÌ£ÁAiÀÄPÀ£ÀºÀ½î ¸À«ÄÃ¥ÀzÀ ªÀĸÁ°ÛUÀÄqÀÄè UÁæªÀÄzÀ°è ²æÃ gÁªÀÄ£ÀªÀ«Ä ºÀ§âzÀ ¥ÀæAiÀÄÄPÀÛ UÁæªÀĸÀÜgÀÄ ²æÃgÁªÀĤUÉ «±ÉõÀ ¥ÀÆeÉ ¸À°è¹zÀgÀÄ. ¥Á£ÀPÀ, ¥À®ºÁgÀªÀ£ÀÄß ¨sÀPÁÛ¢üUÀ½UÉ ºÀAZÀ¯Á¬ÄvÀÄ.