
ನಿಮ್ಮ ಸುದ್ದಿ ವಾಹಕ ............................................................................................................................... ......................................................... feed back: chiguru_2020@rediffmail.com
Tuesday, October 19, 2010
ಚಿಕ್ಕನಾಯಕನಹಳ್ಳಿ,ಅ.19: ಸೃಜನ ವತಿಯಿಂದ ಸ್ತ್ರೀ ಶಕ್ತಿ ಮಹಿಳಾ ಸಸ್ವಹಾಯ ಸಂಘಗಳಿಗೆ ಮಹಿಳಾ ಸಬಲೀಕರಣ ಅಧ್ಯಯನ ಶಿಬಿರವನ್ನು ಇದೇ 23ರ ಬೆಳಿಗ್ಗೆ 10-30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಎನ್.ಇಂದಿರಮ್ಮ ತಿಳಿಸಿದ್ದಾರೆ.ಶಿಬಿರವನ್ನು ಗೋಡೇಕೆರೆ ಭೂಕ್ಷೇತ್ರದಲ್ಲಿ ಏರ್ಪಡಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ಕುಶಲ ವಹಿಸಲಿದ್ದು ಹುಳಿಯಾರು ಎಸ್.ಐ ಪಾರ್ವತಮ್ಮ ಎಸ್.ಯಾದವ್ ಉದ್ಘಾಟನೆ ನೆರವೇರಿಸಲಿದ್ದು ಸೃಜನ ಗ್ರಂಥಾಲಯದ ಉದ್ಘಾಟನೆಯನ್ನು ರಂಗಕಮರ್ಿ ವಾಣಿಸತೀಶ್ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಭಸವಯ್ಯ, ಬಾಲ ವಿಕಾಸ ಯೋಜನಾಧಿಕಾರಿ ಅನೀಸ್ಖೈಸರ್ ಉಪಸ್ಥಿತರಿರುವರು. ಮತ್ತು 23ರಂದು ಮಧ್ಯಾಹ್ನ 12-30ಕ್ಕೆ ಮಹಿಳಾ ಹೋರಾಟದ ಚರಿತ್ರೆಯ ಮಜಲುಗಳು, ಸಸ್ವಹಾಯ ಸಂಘಗಳ ಪರಿಕಲ್ಪನೆ, ವಿಕಾಸ ಮತ್ತು ಆಶಯಗಳು, ಸ್ವಸಾಹಯ ಸಂಘಗಳ ಸಂಘದ ವಾರದ ಸಭೆಯ ಕಾರ್ಯ ವಿಧಾನ ಮತ್ತು 24ರಂದು ಸಸ್ವಹಾಯ ಸಂಘಗಳ ಮೂಲಕ ಸಬಲೀಕರಣದ ಸಾಧ್ಯತೆಗಳು, ಸೃಜನ ಕನಸು-ಮುಂದಿನ ಹೆಜ್ಜೆಗಳು, ಮಹಿಳಾ ಸಸ್ವಹಾಯ ಸಂಘಗಳ ಒಕ್ಕೂಟ(ಆಂದ್ರಪ್ರದೇಶದ ಅನುಭವ)ಎಂಬ ವಿಷಯಗಳನ್ನು ಕಾರ್ಯಗಾರದಲ್ಲಿ ಮಂಡಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸೃಜನಸಂಘದ ಅಧ್ಯಕ್ಷರಾದ ಎಲ್.ಜಯಮ್ಮ ಅಧ್ಯಕ್ಷತೆ ವಹಿಸಲಿದ್ದು ಜಿ.ಪಂ.ಯೋಜನಾ ನಿದರ್ೇಶಕ ಕೆ.ಬಿ.ಆಚಿಜನಪ್ಪ ಸಮಾರೋಪ ಭಾಷಣ ಮಾಡಲಿದ್ದು , ಮುಖ್ಯ ಅತಿಥಿಗಳಾಗಿ ಹುಳಿಯಾರು ಸೃಜನ ಅಧ್ಯಕ್ಷೆ ರಮಾದೇವಿ, ಉಪಾಧ್ಯಕ್ಷೆ ವೀಣಾಶಂಕರ್ ಉಪಸ್ಥಿತರಿರುವರು.
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ೆ 2010-11ನೇ ಸಾಲಿನ ನೂತನ ಕಾರ್ಯಕಾರಿಣಿಯನ್ನು ಜಿಲ್ಲಾ ಸಂಚಾಲಕ್ ಶ್ರೀನಿವಾಸ್ ಘೋಷಸಿದ್ದಾರೆ.ತಾಲೂಕು ಪ್ರಮುಖ್ಆಗಿ ಚೇತನ್ಪ್ರಸಾದ್, ನಗರಕಾರ್ಯದಶರ್ಿಯಾಗಿ ಮನೋಹರ್ ಅಣೇಕಟ್ಟೆ, ಸಹ ಕಾರ್ಯದಶರ್ಿಯಾಗಿ ದಿಲೀಪ್, ವಿದ್ಯಾಥರ್ಿನಿ ಪ್ರಮುಖ್ ಸುಷ್ಮಾ, ಸಹ ವಿದ್ಯಾಥರ್ಿನಿ ಪ್ರಮುಖ್ ಸುಪ್ರಿಯ, ಅಧ್ಯಯನ ವೃತ್ತ ಪ್ರಮುಖ್ ರೂಪೇಶ್, ಖಜಾಂಚಿ ಗುರು, ಕಾಲೇಜು ಪ್ರಮುಖ್ ಶರತ್, ಆನಂದ್, ರವಿ, ಭಾನು, ದರ್ಶನ್, ನವೀನ್ ಸಿದ್ದೇಗೌಡ, ಚರಣ್, ಕೇಂದ್ರ ಪ್ರಮುಖ್ ಮಹೇಶ್, ಮತ್ತು ಕಾರ್ಯಕಾರಿಣಿ ಸದಸ್ಯರಾಗಿ ಮಧು, ರವಿ, ಗುರುರಾಜ್, ಸುಧಾಕರ್ ಮೂತರ್ಿ, ಗಿರೀಶ್, ನಂದೀಶ್, ಶಶಿಕಮಾರ್ ಆಯ್ಕೆಯಾಗಿದ್ದಾರೆ.
Monday, October 18, 2010
ರೋಟರಿಯಿಂದ ಸಸಿ ನೆಡು-ಬೆಳಸು ಕಾರ್ಯಕ್ರಮಚಿಕ್ಕನಾಯಕನಹಲ್ಲಿ
ಥಿಯೋಸಫಿಕಲ್, ರೋಟರಿಯಿಂದ ಉಚಿತ ಹೃದ್ರೋಗ ತಪಾಸಣಾ ಶಿಬಿರ
Tuesday, October 12, 2010




Friday, October 8, 2010


Monday, October 4, 2010
ರಿಯಲ್ ಎಸ್ಟೇಟ್ ಏಜಂಟರಾಗಿರುವ ಶಿಕ್ಷಕರ ಸಂಘ
ಪದಾಧಿಕಾರಿಗಳು
ಚಿಕ್ಕನಾಯಕನಹಳ್ಳಿ,ಅ.04: ರಾಜ್ಯ ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿದ್ದು, ಸಂಘದ ಪದಾಧಿಕಾರಿಗಳು ಏಜೆಂಟರ್ಂತೆ ವತರ್ಿಸುತ್ತಿದ್ದಾರೆ ಎಂದು ರಾಜ್ಯ ಸ.ಪ್ರಾ.ಶಾ.ಶಿಕ್ಷಕ-ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಮಾದೇವಿ ಆರೋಪಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಸ್ವಾಥರ್ಿಗಳು, ಸಂಘಟನೆ ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಲು ಹೊರಟ್ಟಿದ್ದಾರೆ ಎಂದರಲ್ಲದೆ, ತಮ್ಮ ಲಾಭಕ್ಕಾಗಿ ಅಮಾಯಕ ಶಿಕ್ಷಕರ ಗುಂಪುಗಳನ್ನು ಕಟ್ಟಿಕೊಂಡು ಹಲವು ವಿಧದ ಆಮಿಷಗಳನ್ನು ನೀಡುತ್ತಾ ಅವರನ್ನು ದಾರಿತಪ್ಪಿಸುತ್ತಿದ್ದಾರೆ ಎಂದರು.
ಸಂಘಟನೆಗಳು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಹೊರತು ಸಾಮೂಹಿಕವಾಗಿ ಶಿಕ್ಷಕರಿಗೆ ಆಗುವ ಅನುಕೂಲಗಳ ಕಡೆ ಗಮನಕೊಡುತ್ತಿಲ್ಲ, ನಮ್ಮ ರಾಜ್ಯದ ಶಿಕ್ಷಕರಿಗೂ ಪಕ್ಕದ ಆಂಧ್ರ, ತಮಿಳು ನಾಡು ಶಿಕ್ಷಕರುಗಳಿಗೂ ಮೂಲ ವೇತನದಲ್ಲಿ ಭಾರಿ ವ್ಯತ್ಯಾಸವಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಕರ್ಾರದಿಂದ ಮಾನ್ಯತೆ ಪಡೆದುಕೊಂಡಿದೆ ಎಂದು ಹೇಳಿಕೊಳ್ಳುವ ಸಂಘ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಶಿಕ್ಷಕರ ಸಂಘದ ಸದಸ್ಯತ್ವಕ್ಕಾಗಿ ನೀಡುವ ಹಣವನ್ನು 20ರೂ ನಿಂದ 50ರೂಗೆ ಏರಿಸಿರುವುದರಿಂದ ಸಂಗ್ರಹವಾಗುವ ಹಣವನ್ನು ರಾಜ್ಯ ಪದಾಧಿಕಾರಿಗಳು ತಮ್ಮ ಖಾಸಗಿ ವಿಲಾಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಅವರ ದುರ್ಬಲತೆ ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಒಂದು ಸಂಘವು ಎಡವಿದರೆ, ಆ ತಪ್ಪನ್ನು ತಿದ್ದಲು ಇನ್ನೊಂದು ಸಂಘದ ಅವಶ್ಯಕತೆ ಇದೆ ಎಂದರು.
ರಾಜ್ಯ ಸ.ಪ್ರಾ.ಶಾ.ಶಿ.ಶಿ ಸಂಘದ ಕಾರ್ಯದಶರ್ಿ ಶಂಕರಮೂತರ್ಿ ಮಾತನಾಡಿ ಗ್ರಾಮ, ಪಟ್ಟಣಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ, ಈ ವಿಷಯವನ್ನು 10 ವರ್ಷಗಳಿಂದಲೂ ಸಕರ್ಾರಕ್ಕೆ ಹೇಳಿದರೂ ಯಾವ ಪ್ರಯೋಜನವು ಆಗುತ್ತಿಲ್ಲ, ಶಿಕ್ಷಕರು ನಿಮಗೆ ನೀವೆ ನಾಯಕರಾಗಿ ನಮ್ಮ ಸಂಘದ ಜೊತೆ ಕೈಜೋಡಿಸಿದರೆ ನಾವು ಹೋರಾಟದ ಮೂಲಕ ಶಿಕ್ಷಕರ ಸಮಸ್ಯೆ ಪರ ಧ್ವನಿ ಎತ್ತುತ್ತೇವೆ ಎಂದರಲ್ಲದೆ, ನಮ್ಮ ಸಂಘವು ನಿಸ್ವಾರ್ಥ ಸೇವೆ ಮೂಲಕ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಕರ್ಾರಕ್ಕೆ ಒತ್ತಾಯಿಸುತ್ತೇವೆ ಎಂದರು.
ಸಮಾರಂಭದಲ್ಲಿ ಜಿ,ಮು,ಶಿ,ಸಂಘದ ಅಧ್ಯಕ್ಷ ಹೆಚ್.ಎನ್ ಗೋಪಿನಾಥ್, ತಾ,ಸ,ಪ್ರಾ,ಶಾ,ಶಿ,ಶಿ, ಸಂಘದ ಅಧ್ಯಕ್ಷ ಬಿ.ಎಲ್.ಬಸವರಾಜು, ಮುಖ್ಯ ಶಿಕ್ಷಕರ ಜಿಲ್ಲಾ ಉಪಾಧ್ಯಕ್ಷ ಕೆ.ರಾಜಯ್ಯ, ತಾ,ಸ,ಪ್ರಾ,ಶಾ,ಶಿ,ಶಿ ಸಂಘದ ಗೌರವಾಧ್ಯಕ್ಷ ಎಂ ಗಂಗಾಧರಯ್ಯ, ಉಪಾಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದಶರ್ಿ ಬೆಳಗುಲಿ ವೆಂಕಟೇಶ್, ಎನ್.ಪಿ ಕುಮಾರಸ್ವಾಮಿ, ರುಕ್ಮಾಂಗದ, ಜಿ.ತಿಮ್ಮಯ್ಯ, ಜಿ.ರಂಗಯ್ಯ, ಶಿವಕುಮಾರ್, ಕೆಂಬಾಳ್ರಮೇಶ್, ಸಿ.ಜಿ.ಶಂಕರ್, ಚಿಕ್ಕಣ್ಣ ಉಪಸ್ಥಿತರಿದ್ದರು.
ಅ.5ಮತ್ತು 6ರಂದು ಸಮುದಾಯದತ್ತ ಶಾಲೆ
ಚಿಕ್ಕನಾಯಕನಹಳ್ಳಿ,ಅ.04: ತಾಲೂಕು ಸಕರ್ಾರಿ ಶಾಲೆಗಳ ಮೊದಲನೇ ಸುತ್ತಿನ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಇದೇ 5 ಮತ್ತು 6ರಂದು ನಡೆಯಲಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಗಳಿಗೆ ಪ್ರೌಡಶಾಲೆ ಶಿಕ್ಷಕರು, ಹಾಗೂ ಪ್ರೌಡಶಾಲೆ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮೇಲ್ವಿಚಾರಕರಾಗಿ ಭಾಗವಹಿಸಲಿದ್ದು ಅಂದು ನಿಯಮಾನುಸಾರ ವೇಳಾ ಪಟ್ಟಿಗನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಸಹ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
Sunday, October 3, 2010
Saturday, October 2, 2010
Friday, October 1, 2010

Thursday, September 30, 2010



Saturday, September 25, 2010
Friday, September 24, 2010







Friday, September 17, 2010


Thursday, September 16, 2010

