Monday, October 31, 2011








ಚಿ.ನಾ.ಹಳ್ಳಿಗೆ ಇಂದು ಮಾಜಿ ಸಿ.ಎಂ.ಕುಮಾರಸ್ವಾಮಿ ಭೇಟಿ
ಚಿಕ್ಕನಾಯಕನಹಳ್ಳಿ,ಅ.31: ಸಕರ್ಾರಿ ಪ್ರಾಥಮಿಕ ಪಾಠಶಾಲೆ ಮತ್ತು ಸಕರ್ಾರಿ ಪ್ರೌಡಶಾಲಾ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ನವಂಬರ್ 1ರಂದು ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕಿನ ಹಂದನಕೆರೆ ಹೋಬಳಿಯ ಕಾಮಲಾಪುರದಲ್ಲಿ ಏರ್ಪಡಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಮುರುಗೇಶ್ನಿರಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಸಂಸದ ಹೆಚ್.ಡಿ.ಕುಮಾರಸ್ವಾಮಿ ನೂತನವಾಗಿ ನಿಮರ್ಿಸಿರುವ ಪ್ರೌಡಶಾಲಾ ಕಟ್ಟಡ ಹಾಗೂ ಸಂಸದ ಜಿ.ಎಸ್.ಬಸವರಾಜು ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ.
 ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಕೊಳಾಯಿ ನೀರು ಸರಬರಾಜು ಶಂಕುಸ್ಥಾಪನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಶಾಸಕ ಶಿವಲಿಂಗೇಗೌಡರು, ಜಿ.ಪಂ.ಅಧ್ಯಕ್ಷ ಡಾ.ರವಿ.ಡಿ.ನಾಗರಾಜಯ್ಯ, ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ಸದಸ್ಯ ಆರ್.ಸಿ.ಆಂಜನಪ್ಪ, ತಾ.ಪಂ.ಅಧ್ಯಕ್ಷ ಬಿ.ಆರ್.ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿ ಪಾತೀಮ, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಉಪಸ್ಥಿತರಿರುವರು.
ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ:  ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು
ಚಿಕ್ಕನಾಯಕನಹಳ್ಳಿ,ಅ.31: ಪಟ್ಟಣದ ಪತ್ರಕರ್ತರೊಬ್ಬರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ತಾಲೂಕಿನ ವಿವಿಧ ಜನಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
    ಪಟ್ಟಣದ ನೆಹರು ವೃತ್ತದಿಂದ ತೆರಳಿದ ಪ್ರತಿಭಟನಾಕಾರರು ತಾಲ್ಲೂಕು ಕಛೇರಿ ಮುಂದೆ ಕೆಲವುಕಾಲ ರಸ್ತೆತಡೆ ನಡೆಸಿ ನಂತರ ತಾಲೂಕು ಕಛೇರಿ  ಆವರಣದಲ್ಲಿ ಹಲ್ಲೆಯನ್ನು ಖಂಡಿಸಿ ಜನಪರ ಚಿಂತಕ ಒಕ್ಕೂಟ,   ರೈತಸಂಘ, ದಲಿತ ಸಮುದಾಯ, ಹಾಗೂ ಟೈಲರ್ ಅಸೋಸಿಯೇಶನ್, ಕಾಲೇಜ್ ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಎಂ.ವಿ.ನಾಗರಾಜ್ರಾವ್,  ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಗುಂಡಾಗಿರಿ ರಾಜಕಾರಣ ಮಾಡಿದವರ ವಿರುದ್ದ ಪೋಲಿಸ್ ಇಲಾಖೆ ಇನ್ನು ಪಾರದರ್ಶಕ ಸ್ಥಿತಿಗತಿ ಕೇಳುತ್ತಿದೆ ಹೊರತು ಪ್ರಕರಣದ ವಿರುದ್ದ ಯಾವುದೇ ತೀವ್ರ ತನಿಖೆ ನಡೆಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
    ಮಾಜಿ ಶಾಸಕರೊಬ್ಬರು ಹಲ್ಲೆ ನಡೆಸಿರುವುದು ಕೇವಲ ಒಬ್ಬ ವ್ಯಕ್ತಿಯ ಮೇಲೆ ಮಾತ್ರ್ರವಲ್ಲ ಪತ್ರಿಕಾರಂಗದ ಮೇಲೆ ನಡೆಸಿದ ಹಲ್ಲೆ, ಕಳೆದ 20 ವರ್ಷಗಳಿಂದ ಪತ್ರಿಕೆಯಲ್ಲಿ ಅವರು ದುಡಿಯುತ್ತಿದ್ದಾರೆ ಎಂದರಲ್ಲದೆ,  ಸಮಾರಂಭವೊಂದರ ವರದಿಯಲ್ಲಿ  ತಮ್ಮ ಹೆಸರನ್ನು ಹಾಕಿಲ್ಲ ಎಂಬ ಕಾರಣವೊಡ್ಡಿ ಕುಟುಂಬವರ್ಗ ಹಾಗೂ ಸಹಚರರೊಂದಿಗೆ ಅವರ ಅಂಗಡಿ ಬಳಿ ಬಂದು  ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು ಮುಂದೆ ಇಂತಹ ಘಟನೆಗಳ ಮರುಕಳಿಸಬಾರದು ಹಾಗೂ ಪ್ರಕರಣದ ಬಗ್ಗೆ ಪೋಲಿಸರು ತೀವ್ರ ತನಿಖೆ ನಡೆಸಬೇಕೆಂದರು.
    ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಈ ರೀತಿಯ ಹಲ್ಲೆಗಳಿಂದ ವರದಿಗಾರರು ದೃತಿಕೆಡ ಬಾರದು, ಇದನ್ನು ಸವಾಲೆಂದು ಸ್ವೀಕರಿಸಿ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೆ ಮುಂದಾಗಬೇಕೆಂದ ಅವರು, ಲೇಖನಿಗೆ ಬಲವಾದ ಶಕ್ತಿ ಇದೆ, ಅದರಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದರು. ಕಾನೂನಿನ ಬಗ್ಗೆ ಅರಿವಿರುವೊಬ್ಬ ಮಾಜಿ ಶಾಸಕ ಈ ರೀತಿಯ ಕೃತ್ಯಕ್ಕೆ ಇಳಿಯಬಾರದಿತ್ತು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಅಕ್ಷಮ್ಯ ಅಪರಾಧ ಎಂದರು.
    ಜನಪರ ಚಿಂತಕ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರಜಾಪ್ರಭುತ್ವದಲ್ಲ್ಲಿ ಪತ್ರಿಕಾರಂಗ ತನ್ನದೇ ಆದ ಸ್ಥಾನ ಹೊಂದಿದ್ದು ಜಗತ್ತಿನ ಸರಿತಪ್ಪುಗಳನ್ನು ತಿದ್ದುವ ಕ್ಷೇತ್ರ ಇದಾಗಿದೆ,  ಅಂತಹ ಕ್ಷೇತ್ರದಲ್ಲಿ ದುಡಿಯುವವರ ಮೇಲೆ,  ಕೇವಲ ಹೆಸರು ಬರಲಿಲ್ಲವೆಂಬ ಕಾರಣವೊಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.  ಮಾಜಿ ಶಾಸಕರು ಕೇವಲ ಹೆಸರಿಗೋಸ್ಕರ ರಾಜಕೀಯ ಮಾಡುವುದಾದರೆ ಅದು ಅವರಿಗೆ ನಾಚಿಕೆಗೇಡು ತರುವ ವಿಷಯ, ಇಲ್ಲಿ ಯಾರನ್ನೂ ತೇಜೋವಧೆ ಮಾಡಲು ಹೊರಟಿಲ್ಲ ಹಲ್ಲೆ ನಡೆಸಿರುವವರ ವಿರುದ್ದ ಹೋರಾಟ ಹಾಗೂ ಮುಂದೆಂದು ಈ ರೀತಿ ಆಗಬಾರದೆಂಬ ಎಚ್ಚರಿಕೆ ಎಂದರು.
ಪ್ರತಿಭಟನೆಯಲ್ಲಿ  ರೈತ ಸಂಘದ ಸತೀಶ್ ಕೆಂಕೆರೆ, ಡಿ.ಎಸ್.ಎಸ್ನ ಲಿಂಗದೇವರು, ಪತ್ರಕರ್ತ ಚಿ.ನಿ.ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹುಳಿಯಾರಿನ ಇಬ್ರಾಹಿಂ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ತಾ.ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಶಂಕರಪ್ಪ, ಶಂಕರಲಿಂಗಪ್ಪ, ರಾಕೇಶ್,  ಸೇರಿದಂತೆ ಹಲವರು ಹಾಜರಿದ್ದರು.
ಡಿಪ್ಲೊಮೊ ಕಾಲೇಜ್ ಮಂಜೂರಾತಿಗೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಅ.31 : ತಾಲ್ಲೂಕಿನಲ್ಲಿ ತಾಂತ್ರಿಕ ತರಬೇತಿ ಕಾಲೇಜುಗಳು ಇಲ್ಲದೆ ನೂರಾರು ವಿದ್ಯಾಥರ್ಿಗಳು ಶಿಕ್ಷಣಕ್ಕಾಗಿ ಬೇರೆ ಬೇರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ತಾಲ್ಲೂಕಿಗೆ ಸಕರ್ಾರಿ  ಇಂಜನಿಯರಿಂಗ್ ಮತ್ತು ಡಿಪ್ಲೊಮೊ ಕಾಲೇಜನ್ನು ಮಂಜೂರು ಮಾಡಬೇಕಾಗಿ ಅಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲ್ಲೂಕು ದಂಡಾಧಿಕಾರಿ ಉಮೇಶ್ವಂದ್ರರವರಿಗೆ ಮನವಿ ಅಪರ್ಿಸಿತು.
    ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲ್ಲೂಕ್ ಪ್ರಮುಕ್ ಚೇತನ್ಪ್ರಸಾದ್ ತಾಲ್ಲೂಕನ್ನು ಶಿಕ್ಷಣ ಕ್ಷೇತ್ರದಲ್ಲಿ ಕಡೆಗಣಿಸಿದ್ದು ತಾಂತ್ರಿಕ ತರಬೇತಿ ಕಾಲೇಜುಗಳು  ಅತ್ಯವಶ್ಯಕವಾಗಿದೆ ಇದರಿಂದ ಇಂಜನಿಯರಿಂಗ್ ಮತ್ತು ಡಿಪ್ಲೊಮೊ ಕಾಲೇಜುಗಳು ಬೇಕಾಗಿವೆ ಇದನ್ನು ಪರಿಗಣಿಸಿ ಸಕರ್ಾರ  ಸೂಕ್ತಗಮನ ಹರಿಸಿ ಕಾಲೇಜನ್ನು ಮಂಜೂರು ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರ ಕಾರ್ಯದಶರ್ಿ ದಿಲೀಪ್, ರವಿ, ನಂದನ್, ನಂದನ್, ಮಧು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
 

Saturday, October 29, 2011






ಮಾದಿಗರು, ದಕ್ಕಲಿಗರು ಸಹೋದರರು,  ನಮ್ಮಲ್ಲಿ ವಿಷಬೀಜ ಬಿತ್ತುತ್ತಿರುವವರ ವಿರುದ್ದ ಹೋರಾಡಿ
ಚಿಕ್ಕನಾಯಕನಹಳ್ಳಿ,ಅ.29 : ದಕ್ಕಲಿಗ ಸಮುದಾಯವನ್ನು  ಹೀಯಾಳಿಸುವುದು, ನಿಂದಿಸುವುದನ್ನು ಮಾದಿಗ ಜನಾಂಗ ಎಂದಿಗೂ ಮಾಡುವುದಿಲ್ಲ ಅವರು ನಮ್ಮ ಅಣ್ಣತಮ್ಮಂದಿರಂತೆ ಇದ್ದು ದಕ್ಕಲಿಗ ಹಾಗೂ ಮಾದಿಗರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ಬರವಣಿಗೆಯು ಕಿಡಿಗೇಡಿಗಳು ನಮ್ಮ ಸಮಾಜಗಳ  ನಡುವೆ ವಿರಸ ತರುವ ಕೆಲಸಮಾಡುತ್ತಿದ್ದಾರೆ  ಇದನ್ನು ಮಾದಿಗ ಸಮುದಾಯ ಖಂಡಿಸುತ್ತದೆ ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯ ಪದಾಧಿಕಾರಿ ಬೇವಿನಹಳ್ಳಿ ಚನ್ನಬಸವಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ರಾಜ್ಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಲೇಖನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಕ್ಕಲಿಗ ಸಮುದಾಯವು ಮಾದಿಗ ಜನಾಂಗದ 30 ಬುಡಕಟ್ಟಿಗಳ ಪಟ್ಟಿಯಲ್ಲಿ   ದಕ್ಕಲಿಗ ಸಮುದಾಯವೂ ಸೇರಿದೆ, ದಕ್ಕಲಿಗರು ನಮ್ಮ ಅಣ್ಣತಮ್ಮಂದಿರಿದ್ದಂತೆ ಅವರ ವಾಸ, ಜೀವನಶೈಲಿ ಬಗ್ಗೆ ಎಲ್ಲಿಯೂ ಅಪಸ್ವರ ತೆಗೆದಿಲ್ಲ, ಅವರು ನಮ್ಮ ಕಾಲೋನಿಗಳಿಗೆ ಪ್ರವೇಶಿಸಲು ಸ್ವಾಗತವಿದೆ ಆದರೂ ಈ ಬಗ್ಗೆ ಪತ್ರಿಕೆಯಲ್ಲಿ ಅಲ್ಪ ತಿಳುವಳಿಕೆಯ ಲೇಖಕರೊಬ್ಬರು ಮಾದಿಗರಿಂದ ದಕ್ಕಲಿಗರ ವಿರುದ್ದ ಧೋರಣೆ ಇದೆ ಎಂಬ ಬರವಣಿಗೆಯು ಖಂಡನೀಯವಾಗಿದೆ ಎಂದರು.
    ಗೋಷ್ಠಿಯಲ್ಲಿ ತಾ.ಮಾದಿಗ ಸಂಘದ ಅಧ್ಯಕ್ಷ ಸಾದರಹಳ್ಳಿ ಜಯಣ್ಣ, ರಾಜ್ಯ ಡಾ.ಅಂಭೇಡ್ಕರ್ ಯುವಸೇನೆ ಅಧ್ಯಕ್ಷ ಚೌಳಕಟ್ಟೆ ನಾಗರಾಜು, ಸಿ.ಎನ್.ಹನುಮಯ್ಯ , ಕಂದಿಕೆರೆ ಕೃಷ್ಣಮೂತರ್ಿ ಉಪಸ್ಥಿತರಿದ್ದರು.

ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಪ್ಪಿಸಿ
ಚಿಕ್ಕನಾಯಕನಹಳ್ಳಿ,ಅ.29 : ಬಡತನದಿಂದ ಬೇಸತ್ತು ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ, ಈ ರೀತಿಯ ಘಟನೆ ನಡೆದ ಸ್ಥಳಗಳಲ್ಲಿ ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಗೆ ತಿಳಿಸಿದರೆ ಶಿಶುಗಳ ಪಾಲನೆ ಹಾಗೊ ಪೋಷಣೆಯನ್ನು ಇಲಾಖೆ ನೋಡಿಕೊಳ್ಳುತ್ತದೆ ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ತಿಳಿಸಿದರು.
    ಪಟ್ಟಣದ ಸಿ.ಡಿ.ಪಿ.ಓ ಕಛೇರಿಯಲ್ಲಿ ನವಜಾತ ಶಿಶುಗಳ ಪಾಲನೆ, ಪೋಷಣೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಬಡತನದಲ್ಲಿ ನೊಂದು ಜೀವನ ಸಾಗಿಸಲಾಗದ ಸ್ಥಿತಿಯಲ್ಲಿ ಅಥವಾ ಅನೈತಿಕ ಸಂಬಂಧಗಳನ್ನು ಮರೆಮಾಚಲು ಕೆಲವರು ಹೆರಿಗೆಯಾದ ತಕ್ಷಣ ತಮ್ಮ ಮಕ್ಕಳನ್ನು ತೊಟ್ಟಿಗಳಿಗೆ ಬಿಸಾಡುತ್ತಿದ್ದಾರೆ ಇದರಿಂದ ಶಿಶುಗಳು ಪ್ರಾಣಿಗಳಿಗೆ ಆಹಾರವಾಗುತ್ತದೆ ಇಲ್ಲವಾದರೆ ಕಿಡಿಗೇಡಿಗಳಿಗೆ ದೊರಕಿ ಮಗುಗಳಿಂದ ಬಿಕ್ಷಾಟನೆ, ಅವರ ಅಂಗಗಳನ್ನು ಮಾರುವುದು ಇತ್ಯಾದಿ ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಾರೆ ಎಂದ ಅವರು,  ದೇಶದಲ್ಲಿ 1000 ಗಂಡಸರಿಗೆ ಕೇವಲ 973 ಮಹಿಳೆಯರಿದ್ದು  ಇದಕ್ಕೆ ಕಾರಣ ಮಹಿಳೆಯರ ಬಗ್ಗೆ ಇರುವ ಅಸಡ್ಡೆ ಇದನ್ನು ತೊರೆಯಬೇಕು ಎಂದು ಸಲಹೆ ನೀಡಿದರು.
    ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಕೆಲವು ಪೋಷಕರು ಮಕ್ಕಳು ತಮಗೆ ಸಂಬಂಧವಿಲ್ಲವೆಂದು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ ಇದರಿಂದ ಮಕ್ಕಳು ಹಲವು ಕೆಟ್ಟಚಟಗಳನ್ನು ಕಲಿತು ದೇಶಕ್ಕೆ ಅಪಾಯಕಾರಿಗಳಾಗುತ್ತಿದ್ದಾರೆ ಎಂದ ಅವರು,  ಮಹಿಳೆಯರನ್ನು ಗ್ರಾಮೀಣ ಪ್ರದೇಶಗಳಲ್ಲಿ ನೌಕರಿ ಕೊಡಿಸಿಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ದೊಡ್ಡ ನಗರಗಳಲ್ಲಿ  ವೇಶ್ಯಾವಾಟಿಕೆಗಳಲ್ಲಿ ತೊಡಗಿಸುತ್ತಿರುವುದು ಹೆಚ್ಚಾಗಿದೆ,  ಮಹಿಳೆಯರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
    ಸಮಾರಂಭದಲ್ಲಿ ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿದೇವಿಪುಟ್ಟಯ್ಯ, ಸ್ತ್ರೀ ಶಕ್ತಿ ಸಂಘದ ಅಂಬಿಕ, ಯೋಜನಾಧಿಕಾರಿ ಪರ್ವತಯ್ಯ, ಪರಮೇಶ್ವರಯ್ಯ, ಪುಟ್ಟಸ್ವಾಮಿ, ಶಶಿಕಲಾ, ನಾಗರತ್ನ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ಪರ್ವತಯ್ಯ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.

ನೇರರಸ್ತೆ ಕಾಮಗಾರಿ ನಿಲ್ಲಿಸಿ, ಖಾಸಗಿ ಕಂಪನಿಯವರ ಪ್ರಸ್ತಾವನೆಯನ್ನು ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಅ.28 : ತಾಲ್ಲೂಕಿನ ಶೆಟ್ಟಿಕೆರೆ ಗೇಟ್ನಿಂದ ಹಾಸನ ಜಿಲ್ಲೆ ಚಿಂದೇನಹಳ್ಳಿ ಗಡಿಯವರೆಗೆ ರಸ್ತೆ ನಿಮರ್ಾಣ ಮಾಡಲು ಈಗಿರುವ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಹೊಸ ರಸ್ತೆ ನಿಮರ್ಾಣ ಮಾಡಲು ಸಕರ್ಾರ ಆದೇಶ ನೀಡಿದ್ದರೂ ಖಾಸಗಿ ಕಂಪನಿಯವರು ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ನೇರ ರಸ್ತೆ ನಿಮರ್ಾಣ ಮಾಡಲು ಸವರ್ೆ ಕಾರ್ಯವನ್ನು ನಿರ್ವಹಿಸುತ್ತಾ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರ ಬಗ್ಗೆ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಕಟ್ಟೆರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರರವರಿಗೆ ಮನವಿ ಅಪರ್ಿಸಿತು.
ಹಾಲಿ ಇರುವ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಹೊಸರಸ್ತೆ ನಿಮರ್ಾಣ ಮಾಡಲು ಸಕರ್ಾರ ಆದೇಶಿಸಿದ್ದರೂ ಭೂ ಸ್ವಾಧೀನ ಮಾಡಿಕೊಂಡಿಲ್ಲದ ರೈತರ ಜಮೀನನ್ನು ರೈತರಲ್ಲಿ ಅನುಮತಿ ಪಡೆಯದೇ ನೇರ ರಸ್ತೆ ಸಂಪರ್ಕ ಮಾಡಿ ಹಣ ಲಪಟಾಯಿಸುವ ಹುನ್ನಾರ ಹಾಕಿ, ರೈತರ ಜಮೀನುಗಳಲ್ಲಿ ಅಳತೆ ಮಾಡಿ ಗಡಿಗುರುತಗಳ ಬಗ್ಗೆ ಸವರ್ೆ ಕಾರ್ಯ ನಡೆಸಿದ್ದಾರೆ. ಇದರಿಂದ  ರೈತರ ನೆಮ್ಮದಿ ಹಾಳಳಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿರುವ ಅವರು ಇಲ್ಲಿರುವ ಜಮೀನುಗಳಲ್ಲಿ ತೆಂಗು, ಅಡಕೆ, ಮಾವು ಹಾಗೂ ಇತರೆ ಬೆಲೆ ಬಾಳುವ ಮರಗಳಿಂದ ಆದಾಯವಿದ್ದು ತಮ್ಮ ಕುಟುಂಬದ ಸಂಪೂರ್ಣ ನಿರ್ವಹಣೆ ಈ ಜಮೀನುಗಳಿಂದ ನಡೆಯುತ್ತಿದೆಯಾದ್ದರಿಂದ ಖಾಸಗಿ ಕಂಪನಿಯವರು ಲಾಭ ಸಂಪಾದನೆಯ ದುರುದ್ದೇಶದಿಂದ ರೈತರ ಜಮೀನನ್ನು ರಸ್ತೆ ಕಾಮಗಾರಿ ನಡೆಸಲು ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಸ್ಥಳ ತನಿಖೆ ಮಾಡಿ ಅವರ ಪ್ರಸ್ತಾವನೆಯನ್ನು ಕೈ ಬಿಟ್ಟು ಸಕರ್ಾರದ ಆದೇಶಾನುಸಾರ ಹಾಲಿ ಇರುವ ರಸ್ತೆಯನ್ನೇ ಅಗಲೀಕರಣ ಮಾಡಿಕೊಂಡು ಕಾಮಗಾರಿ ಮಾಡಲು ಆದೇಶ ನೀಡಿ ರೈತರ ಜಮೀನನ್ನು ಉಳಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲಿ ರೈತರುಗಳಾದ ಬಿ.ಎಸ್.ಯೋಗಾನಂದ್, ರಾಮೇಗೌಡರು, ಜಯಶಂಕರ್,  ರೈತ ಸಂಘದ ಸತೀಶ್ ಕೆಂಕೆರೆ, ಗಂಗಾಧರ್,  ಜಗದೀಶ್, ಗ್ರಾ.ಪಂ.ಅಧ್ಯಕ್ಷ ಶಶಿಧರ್, ತೋಂಟಾದಾರ್ಯ, ತೇಜಸ್ವಿ.ಎಸ್.ಸಿ, ಮಲ್ಲೇಶಪ್ಪ, ಮರುಳಯ್ಯ, ಸತೀಶ್ ಕೆ.ಆರ್, ಶಿವಲಿಂಗಯ್ಯ, ಬಿ.ಎಸ್.ರವೀಶಯ್ಯ, ಲೋಕೇಶ್, ನಟರಾಜ್ ಮುಂತಾದವರಿದ್ದರು.

ಚಿಕ್ಕನಾಯಕನಹಳ್ಳಿ,ಅ.28 :
ತಾಲ್ಲೂಕು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಇದೇ ಮಂಗಳವಾರ 1ರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಂದಿಕೆರೆಯ ಶ್ರೀ ಶನೇಶ್ವರ ನಾಟಕ ವಸ್ತ್ರಾಭರಣ ಮಂಡಳಿ ಮಾಲೀಕ ದಿವಂಗತ ಮಹದೇವಪ್ಪ(ಮರಣೋತ್ತರ), ಹುಳಿಯಾರಿನ ಹಾಮರ್ೋನಿಯಂ ಕಲಾವಿದರಾದ ಗೌರಮ್ಮಶಿವಕುಮಾರ್ರವರಿಗೆ ಸನ್ಮಾನಿಸಲಾಗುವುದು.

ಚಿಕ್ಕನಾಯಕನಹಳ್ಳಿ,ಅ.28 : ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸ್ಟೆಪ್ ಅಪ್ ಘಟಕದಡಿಯಲ್ಲಿ 2011-12ನೇ ಸಾಲಿಗೆ ಪುರಸಭಾ ವ್ಯಾಪ್ತಿಯ ಬಿ.ಪಿ.ಎಲ್ ಕುಟುಂಬದ ಫಲಾನುಭವಿಗಳಿಗೆ ಮೆಕಾನಿಕಲ್ ತರಬೇತಿ, ಕಂಪ್ಯೂಟರ್ ಶಿಕ್ಷಣದಲ್ಲಿ ಬಿ.ಪಿ.ಓ ಮತ್ತು ಸ್ಟೋಕನ್ ಇಂಗ್ಲೀಷ್ ಕೋಸರ್್ 6ತಿಂಗಳ ತರಬೇತಿ ನೀಡಲಾಗುವುದು ಎಂದು ಪುರಸಭಾ ಕಾಯರ್ಾಲಯ ತಿಳಿಸಿದೆ.
ಟೈಲರಿಂಗ್ ತರಬೇತಿಯು ಒಂದು ತಿಂಗಳ ಅವದಿಯಾಗಿದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರತಿ ತಿಂಗಳು 500 ರೂ ಸ್ಟ್ರೈಫಂಡ್ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ತರಬೇತಿಯ ನಂತರ ಬೆಂಗಳೂರು, ಹುಳಿಯಾರು, ತಿಪಟೂರು, ತುಮಕೂರು, ಚಿಕ್ಕನಾಯಕನಹಳ್ಳಿಯಲ್ಲಿ ತರಬೇತಿ ನೀಡಿದ ಸಂಸ್ಥೆಯವರು ಉದ್ಗೋಗವಕಾಶ ಒದಗಿಸಿಕೊಡುವುದರಿಂದ ಉದ್ಯೋಗಾಕಾಂಕ್ಷಿಗಳು ಮಾತ್ರ 02.11.2011 ರೊಳಗಾಗಿ ಕಛೇರಿಯಿಂದ ಅಜರ್ಿ ಪಡೆದು ಸಲ್ಲಿಸುವುದು, ತಡವಾಗಿ ಬಂದ ಅಜರ್ಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Wednesday, October 26, 2011



ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಮೊದಲನೇ ವರ್ಷದ ವಾಷರ್ಿಕೋತ್ಸವ ಚಿಕ್ಕನಾಯಕನಹಳ್ಳಿ,ಅ.26 : ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಮೊದಲನೇ ವಾಷರ್ಿಕೋತ್ಸವ ಸಮಾರಂಭವನ್ನು ಇದೇ ನವಂಬರ್ 1ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಸಹಾಯಕ ನಿದರ್ೇಶಕ ಎ.ಕೆ.ಬಸವರಾಜಪ್ಪ, ಸಿ.ಪಿ.ಐ ಕೆ.ಪ್ರಭಾಕರ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿದೇವಿ, ಮುಖ್ಯಾಧಿಕಾರಿ ಹೊನ್ನಪ್ಪ, ಪುರಸಬಾ ಸದಸ್ಯರಾದ ಸಿ.ಬಸವರಾಜು, ಸಿ.ಡಿ.ಚಂದ್ರಶೇಖರ್, ರಾಜಣ್ಣ, ಸಿ.ಎಂ.ರಂಗಸ್ವಾಮಯ್ಯ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾಜಿ ಪುರಸಭಾಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಸಾಹಿತಿ ಆರ್.ಬಸವರಾಜು, ಕಾಂಗ್ರೆಸ್ ಮುಖಂಡ ಕೃಷ್ಣೆಗೌಡ, ಸಿದ್ದು ಜಿ.ಕೆರೆ, ಸಿ.ಎನ್.ಹನುಮಯ್ಯ, ಚಿದಾನಂದ್, ನಿಂಗಪ್ಪ ಉಪಸ್ಥಿತರಿರುವರು.
ಮಹಾಲಕ್ಷ್ಮೀ ದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ಚಿಕ್ಕನಾಯಕನಹಳ್ಳಿ,ಅ.26 : ಶ್ರೀ ಮಹಾಲಕ್ಷ್ಮೀದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ ನವಂಬರ್ 4ರಂದು ಏರ್ಪಡಿಸಲಾಗಿದೆ. ಸಮಾರಂಭವನ್ನು ದೇವಾಂಗ ಬೀದಿಯ ಬನಶಂಕರಿ ದೇವಾಲಯದ ಬಳಿ ಹಮ್ಮಿಕೊಂಡಿದ್ದು ಹಂಪಿ ಹೇಮಕೂಟದ ಗಾಯಿತ್ರಿ ಪೀಠಾಧ್ಯಕ್ಷರಾದ ದಯಾನಂದಪುರಿ ಮಹಾಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು ಮಹಾಲಕ್ಷ್ಮೀ ದೇವಾಲಯ ಸಮಿತಿ ಅಧ್ಯಕ್ಷ ವಿ.ಶೇಷಗಿರಿ(ಮಂದಾಲಿ) ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ನೇಕಾರರ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕೋದಂಡರಾಮಯ್ಯ, ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಕೆ.ಜೆ.ವೆಂಕಟರಮಣಪ್ಪ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಹೇಮಚಂದ್ರ, ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಸಿ.ಟಿ.ವರದರಾಜು, ಪುರಸಭಾ ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ನಾಮಿನಿ ಸದಸ್ಯ ಈಶ್ವರ್ ಭಾಗವತ್, ಗಾಯಿತ್ರಿ ಪೀಠ ಸಂಸ್ಥಾನದ ಕಾರ್ಯದಶರ್ಿ ಕೆ.ಸಿ.ತಿಮ್ಮಶೆಟ್ಟಿ ಉಪಸ್ಥಿತರಿರುವರು.

Saturday, October 22, 2011



ಪ್ಯಾಕೇಜ್ ಗುತ್ತಿಗೆ ನಿಲ್ಲಿಸಿ ಸ್ಥಳೀಯ ಗುತ್ತಿಗೆದಾರರನ್ನು ಉಳಿಸಿ
ಚಿಕ್ಕನಾಯಕನಹಳ್ಳಿ.ಅ.21 : ದೊಡ್ಡ ದೊಡ್ಡ ಕಂಪನಿಯವರು ತಾಲ್ಲೂಕಿನ ಹಲವು ಗುತ್ತಿಗೆಗಳನ್ನು ಪಡೆದು ತಾಲ್ಲೂಕಿನ ಗುತ್ತಿಗೆದಾರರನ್ನು ತಮ್ಮ ಮೇಸ್ತ್ರಿಗಳನ್ನಾಗಿ ಮಾಡಿಕೊಳ್ಳುತ್ತಾ ಗುತ್ತಿಗೆದಾರರಿಗೆ ಆಥರ್ಿಕವಾಗಿ ತೊಂದರೆ ಪಡಿಸುತ್ತಿದ್ದಾರೆ, ಅದಕ್ಕಾಗಿ ಸ್ಥಳೀಯ ಗುತ್ತಿಗೆದಾರರೆಲ್ಲರೂ ಸಂಘಟನೆಯ ಮೂಲಕ ಒಂದಾಗಬೇಕು ಎಂದು ಗುತ್ತಿಗೆದಾರ ನಂದಿಹಳ್ಳಿ ಶಿವಣ್ಣ ಹೇಳಿದರು.
ಪಟ್ಟಣದ ಜಿ.ಪಂ ಇಂಜನಿಯರಿಂಗ್ನ ಎ.ಇ.ಇ.ಕಛೇರಿಯ ಬಳಿ ನೂತನವಾಗಿ ಆರಂಭಗೊಂಡ ತಾಲ್ಲೂಕು ಗುತ್ತಿಗೆದಾರರ ಸಂಘವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರಿಗೆ ಇನ್ನೊಬ್ಬ ಗುತ್ತಿಗೆದಾರರಿಂದ ವ್ಯವಹಾರಕ್ಕೆ ಪೈಪೋಟಿ ಇದ್ದರೂ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಬೇರೆ ತಾಲ್ಲೂಕಿನಿಂದ ಬಂದಂತಹ ಗುತ್ತಿಗೆದಾರಿಗೆ ಗುತ್ತಿಗೆ ನೀಡುವುದನ್ನು ಇಲ್ಲಿನವರು ವಿರೋಧಿಸಿ, ಸ್ಥಳೀಯರಿಗೆ ಗುತ್ತಿಗೆ ಕೆಲಸಗಳಲ್ಲಿ ಮೊದಲ ಆದ್ಯತೆ ನೀಡಬೇಕು ಎಂದ ಅವರು, ಬೇರೆ ಕಡೆಯಿಂದ ಬಂದಂತಹ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕೆಲಸ ನೀಡುವುದು ಅಷ್ಟಕಷ್ಟೆಯಾಗಿದೆ, ಸ್ಥಳೀಯರಿಗೆ ನೀಡಿದರೆ ಕೆಲಸ ಮುಗಿಯುವವರೆಗೆ ಅದೇ ಸ್ಥಳದಲ್ಲಿದ್ದು ಉತ್ತಮ ಗುಣಮಟ್ಟ ಕಾಯ್ದುಕೊಳ್ಳುತ್ತಾರೆ ಎಂದರು. ಈತ ಅಸ್ತ್ರಿತ್ವಕ್ಕೆ ಬಂದಿರುವ ನಮ್ಮ ಸಂಘದ ಗುತ್ತಿಗೆದಾರರು ಒಬ್ಬರಿಗೊಬ್ಬರು ಸಹಕರಿಯಾಗಿ ಸಂಘದ ಮಾತುಗಳಿಗೆ ಸ್ಪಂದಿಸಬೇಕು ಎಂದರು.
ತಾ.ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರುಣ್ಕುಮಾರ್ ಮಾತನಾಡಿ ಕೋಟಿಗಟ್ಟಲೆ ಕಾಮಗಾರಿ ಗುತ್ತಿಗೆಯನ್ನು ಕೇವಲ ಕೆಲವೇ ಮಂದಿಗೆ ಸಕರ್ಾರ ನೀಡುತ್ತಿರುವುದು ವಿಪಯರ್ಾಸ ಇದನ್ನು ಹಲವರಿಗೆ ನೀಡಲು ಒತ್ತಾಯಸಿದರಲ್ಲದೆ, 1 ಮತ್ತು 2ನೇ ದಜರ್ೆ ಗುತ್ತಿಗೆದಾರರು 3 ಮತ್ತು .4ನೇ ದಜರ್ೆ ಗುತ್ತಿಗೆದಾರರ ಕೆಲಸಗಳಿಗೆ ತೊಂದರೆ ಪಡಿಸದಂತೆ ಕೆಲಸ ನಿರ್ವಹಿಸಬೇಕು ಹಾಗೂ ತಾಲ್ಲೂಕಿನ ಸಂಘದಲ್ಲಿ ಈಗಾಗಲೇ 60ಜನ ಗುತ್ತಿಗೆದಾರರಿದ್ದು ಒಬ್ಬರು ಇನ್ನೊಬ್ಬರಿಗೆ ಪ್ರೋತ್ಸಾಹ ನೀಡಬೇಕು ಮತ್ತು ನೂತನವಾಗಿ ಉದ್ಘಾಟನೆಗೊಂಡಿರುವ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಸಮಾರಂಭದಲ್ಲಿ ಗುತ್ತಿಗೆದಾರರಾದ ಆಲದಕಟ್ಟೆ ತಿಮ್ಮಯ್ಯ, ಜಲಾಲ್ಸಾಬ್, ಮಾತನಾಡಿದರು.
ಸಮಾರಂಭದಲ್ಲಿ ಎ.ಡಬ್ಲ್ಯೂ,ಇ ಚಿಕ್ಕದಾಸಪ್ಪ, ಗುತ್ತಿಗೆದಾರರಾದ ಚಿದಂಬರಶಾಸ್ತ್ರಿ, ಕೆ.ಗಂಗಣ್ಣ, ಕೃಷ್ಣಪ್ಪ, ಎಂ.ಎನ್.ಶಿವರಾಜು, ಶಿವಣ್ಣ, ನಾಗಣ್ಣ ಮುಂತಾದವರಿದ್ದರು.


ಪುರಸಭೆಯವರ ನಿರ್ಲಕ್ಷ್ಯದಿಂದ ನಿವಾಸಿಗಳಿಗೆ ಅಲಜರ್ಿ
ಚಿಕ್ಕನಾಯಕಯಕನಹಳ್ಳಿ,ಅ.22: ಪಟ್ಟಣದ ಹ್ಲದಯಭಾಗವಾಗದ ಬಸ್ಸ್ಟಾಂಡ್ ಪಕ್ಕದಲ್ಲೇ ಕೋಳಿ ಅಂಗಡಿಗಳು ಇರುವುದರಿಂದ ಕೋಳಿಯ ತ್ಯಾಜ್ಯವಸ್ತುಗಳಾದ ಪುಕ್ಕ, ಸೇರಿದಂತೆ ಇತರ ತ್ಯಾಜ್ಯ ಮಾಂಸ ಪದಾರ್ಥಗಳನ್ನು ಅಂಗಡಿಗಳ ಹಿಂಭಾಗದಲ್ಲೇ ಹಾಕುವುದರಿಂದ ಈ ಭಾಗದ ನಿವಾಸಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ
ಈ ಪ್ರದೇಶ ವಾಣಿಜ್ಯ ಪ್ರದೇಶವಾಗಿರುವುದರಿಂದ ಈ ಭಾಗಕ್ಕೆ ಬರುವ ಗ್ರಾಹಕರಿಗೂ ತೊಂದರೆಯಾಗಿದೆ ಎಂದು ಹಲವು ವರ್ಷಗಳಿಂದ ಪುರಸಭೆಗೆ ದೂರು ನೀಡಿದರು ಅವರು, ದಿವ್ಯ ನಿರ್ಲಕ್ಷವಹಿಸುವುದರಿಂದ ನಾವಿಲ್ಲಿ ಬದುಕುವುದೇ ದುಸ್ಥರವಾಗಿದೆ ಎಂದು ಈ ಭಾಗದ ನಿವಾಸಿ ಚನ್ನಬಸವಯ್ಯ ಪತ್ರಿಕೆಗೆ ಅಲವತ್ತುಕೊಂಡಿದ್ದಾರೆ.
ಅಂಗಡಿಯವರು ಕೋಳಿಗಳನ್ನು ಕ್ಲೀನ್ ಮಾಡಿದ ನಂತರ ಅದರ ಪುಕ್ಕ, ಕರಳು, ಮಾಂಸ ಇತ್ಯಾಧಿ ತ್ಯಾಜ್ಯವಸ್ತುಗಳನ್ನು ಮನೆಗಳ ಸಮೀಪದಲ್ಲೇ ಹಾಕುವುದರಿಂದ ಅವುಗಳು ಕೊಳೆತು ನಿವಾಸಿಗಳಿಗೆ ದುವರ್ಾಸನೆ ಬರುವುದಲ್ಲದೆ, ಹಂದಿ ನಾಯಿಗಳ ಕಾಟ ಜಾಸ್ತಿಯಾಗಿ ಮಕ್ಕಳು ಹಾಗು ವೃದ್ದರಿಗೆ ಇವುಗಳಿಂದ ಅಲಜರ್ಿ ಹೆಚ್ಚಾಗಿದೆ ಎಂದಿದ್ದಾರೆ.
ಈ ತ್ಯಾಜ್ಯವಸ್ತುಗಳಿಂದ ಸಾಂಕ್ರಾಮಿಕ ರೋಗಗಳು ಉಂಟಾಗುತ್ತಿದೆ ಇವರು ಈ ಬಗ್ಗೆ ಇಲ್ಲಿನ ಅಂಗಡಿ ಮಾಲೀಕರು, ಆಟೋಚಾಲಕರು, ಹಾಗೂ ಮನೆಗಳ ನಿವಾಸಿಗಳು ಈಗಾಗಲೇ ಜಿಲ್ಲಾಧಿಕಾರಿಗಳು, ತಿಪಟೂರು ವಿಭಾಗದ ಅಸಿಸ್ಟೆಂಟ್ ಕಮಿಷನರ್, ಪುರಸಭೆ ಮುಖ್ಯಾಧಿಕಾರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನೀಡಿದ್ದರೂ ಇತ್ತ ಯಾರೊಬ್ಬರೂ ಗಮನ ಹರಿಸಿಲ್ಲ ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಳಿ ಅಂಗಡಿ ಮಾಲೀಕರ ಅಳಲು: ಕೋಳಿ ಅಂಗಡಿಯ ಮಾಲೀಕ ಪುಟ್ಟಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಈ ಮೊದಲು ನಾವು ಬಸ್ಟಾಂಡ್ ಬಳಿ ಕೋಳಿಅಂಗಡಿಗಳನ್ನು ನಡೆಸುತ್ತಿದ್ದಾಗ ಪುರಸಭೆಯವರು ಈ ಜಾಗದಿಂದ ತೆರವುಗೊಳಿಸಿದರು, ನಂತರ ಕೋಳಿಅಂಗಡಿಯವರೆಲ್ಲ ಸೇರಿ ಖಾಸಗಿ ಜಮೀನಲ್ಲಿ ಕೋಳಿ ಅಂಗಡಿ ಇಡುವುದೆಂದು ತೀಮರ್ಾನಿಸಿ ಕೋಳಿ ಅಂಗಡಿಗಳನ್ನು ಇಲ್ಲಿ ಇಟ್ಟುಕೊಂಡಿದ್ದೇವೆ.
ಕೋಳಿ ಕ್ಲೀನ್ ಮಾಡುವ ಈ ಪ್ರದೇಶಕ್ಕೆ ಪುರಸಭೆಯವರು ಕಂಟೈನರ್(ಕಸದ ತೊಟ್ಟಿ) ಒದಿಸಿಲು ಹಾಗೂ ನೀರಿನ ವ್ಯವಸ್ಥೆ ನೀಡಬೇಕೆಂದು ಕೇಳಿಕೊಂಡಿದ್ದೆವು ಅವರು ಈವೆರೆಗೆ ನೀಡಿಲ್ಲ ಎಂದರಲ್ಲದೆ, ನಮಗೆ ಪುರಸಭೆಯವರೇ ಒಳ್ಳೆ ಜಾಗವನ್ನು ತೋರಿಸಿದರೆ ನಾವು ಅಲ್ಲಿಗೆ ನಮ್ಮ ಅಂಗಡಿಗಳನ್ನು ಸ್ಥಳಾಂತರಿಸಿಕೊಳ್ಳುತ್ತೇವೆ ಎನ್ನುತ್ತಾರೆ.








Wednesday, October 19, 2011



ಗಣಿ ಪ್ರದೇಶದ ಗ್ರಾಮಸ್ಥರಿಂದ ತಲಸ್ಪಶರ್ಿ ಮಾಹಿತಿ ಪಡೆದ ಸಿ.ಇ.ಸಿ ತಂಡಚಿಕ್ಕನಾಯಕನಹಳ್ಳಿ,ಅ.19: ಗಣಿಗಾರಿಕೆ ನಡೆಯ ಬೇಕೋ, ಬೇಡವೋ ಎಂಬ ಪ್ರಶ್ನೆಗೆ ಹಲವರು ಬೇಡವೇ ಬೇಡ ಎಂದರೆ, ಕೆಲವು ಜನ ಗ್ರಾಮಸ್ಥರು ದೊಡ್ಡ ಗಾತ್ರದ ಯಂತ್ರಗಳನ್ನು ಬಳಸಿಕೊಂಡು ಗಣಿಗಾರಿಕೆ ನಡೆಸುವುದಾದರೇ ಬೇಡ. ಸ್ಥಳೀಯ ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ಗಣಿ ಪರವಾನಿಗೆ ನೀಡುವ ಸಂದರ್ಭದಲ್ಲಿ ವಿಧಿಸಿರುವ ನಿಯಮಗಳಂತೆ ನಡೆಯುವುದಾದರೆ ಗಣಿಗಾರಿಕೆ ಮುಂದುವರೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಗಣಿ ಪ್ರದೇಶಗಳಿಗೆ ಸುಪ್ರಿಂ ಕೋಟರ್್ನ ನಿದರ್ೇಶನದ ಮೇರಿಗೆ ನೇಮಕಕೊಂಡಿರುವ ಸಿ.ಇ.ಸಿ.ತಂಡದ ತಜ್ಞರಾದ ಡಾ.ಅರುಣ ಕುಮಾರ್, ಡಾ.ಸೋಮಶೇಖರ್ ಗ್ರಾಮಸ್ಥರೊಮದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಜನರು ವ್ಯಕ್ತಪಡಿಸದ ಮುಖ್ಯ ಅಭಿಪ್ರಾಯವಿದು. ಗಣಿ ಪ್ರದೇಶದ ಗ್ರಾಮವಾದ ಹೊನ್ನೆಬಾಗಿ, ಗೊಲ್ಲರಹಳ್ಳಿ ಹಾಗೂ ಬುಳ್ಳೇನಹಳ್ಳಿ ಗ್ರಾಮಸ್ಥರಗಳೊಂದಿಗೆ ಸಂವಾದ ನಡೆಸಿದ ಸಿ.ಇ.ಸಿ. ತಂಡ ಈ ಭಾಗದ ಜನರ ಸಮಾಜೋಆಥರ್ಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿತು. ಈ ಸಂದರ್ಭದಲ್ಲಿ ತಜ್ಞರು ಗ್ರಾಮಸ್ಥರಗಳೊಂದಿಗೆ ಮಾತನಾಡಿ, ಇಲ್ಲಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಯುವ ಮೊದಲು ಇಲ್ಲಿನ ಹೊಲಗಳಲ್ಲಿ ಆಹಾರ ಧಾನ್ಯಗಳ ಇಳುವರಿ ಎಕರೆಗೆ ಎಷ್ಟಿತ್ತು, ಈಗ ಎಷ್ಟಿದೆ, ಒಂದು ಎಕರೆ ತೋಟದಲ್ಲಿ ಮೊದಲು ಬೀಳುತ್ತಿದ್ದ ತೆಂಗಿನ ಕಾಯಿಗಳೆಷ್ಟು, ಅಡಿಕೆ ಇಳುವರಿಗಳೆಷ್ಟು, ಈಗ ಎಷ್ಟಿದೆ, ಜನರ ಆರೋಗ್ಯದ ಮೇಲೆ ಗಣಿಗಾರಿಕೆ ಯಾವ ರೀತಿಯ ದುಷ್ಪರಿಣಾಮ ಬೀರಿದೆ, ಜಾನುವಾರಗಳ ಆರೋಗ್ಯದ ಮೇಲೆ ಯಾವ ಪ್ರಮಾಣದಲ್ಲಿ ಕೇಡುವುಂಟು ಮಾಡಿದೆ, ಅಂತರ್ಜಲ ಎಷ್ಟು ಕುಸಿದಿದೆ, ಬ್ಲಾಸ್ಟಿಂಗ್ನಿಂದ ಆಗಿರುವ ಅನಾಹುತಗಳೇನು ಎಂಬ ಹಲವು ರೀತಿಯ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ಗ್ರಾಮಸ್ಥರಿಗೆ ಪ್ರಶ್ನೆಗಳನ್ನು ಕೇಳಿ ತಲ ಸ್ಪಶರ್ಿ ವಿವರಗಳನ್ನು ಪಡೆದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮಸ್ಥರು ತಾವು ಕುಡಿಯುತ್ತಿರುವ ನೀರಿನ ಗುಣ ಮಟ್ಟವನ್ನು ತೋರಿಸಿದರಲ್ಲದೆ, ತಮಗಾಗಿರುವ ಚರ್ಮ ರೋಗದ ಬಗ್ಗೆ, ಹೃದ್ರೋಗ, ಉಬ್ಬಸ ಮುಂತಾದ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಜ್ಞರೊಂದಿಗೆ ತೋಟಗಾರಿಕೆ ಇಲಾಖೆಯ ಉಪ ನಿದೇರ್ಶಕ ಪ್ರಸಾದ್, ಸಹಾಯಕ ನಿದೇರ್ಶಕ ರೇಣುಕ ಪ್ರಸಾದ್, ತಹಶೀಲ್ದಾರ್ ಎನ್.ಆರ್. ಉಮೇಶ ಚಂದ್ರ, ಪಿ.ಎಸೈ. ಚಿದಾನಂದ ಮೂತರ್ಿ ಹಾಜರಿದ್ದರು.ಬಾಕ್ಸ್:1ಸಿ.ಇ.ಸಿ ತಂಡ ಗುರುವಾರ ಗಣಿ ಪ್ರದೇಶದ ಉಳಿದ ಗ್ರಾಮಗಳಾದ ಗೋಡೆಕೆರೆ, ಸೊಂಡೇನಹಳ್ಳಿ, ಸೋಮನಹಳ್ಳಿ, ನಡುವನಹಳ್ಳಿ, ಬಗ್ಗನಹಳ್ಳಿ ಭಾಗದ ಗ್ರಾಮಗಳಿಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.ಮಾಹಿತಿಯ ಕೊರತೆ: ಸಿ.ಇ.ಸಿ.ತಂಡ ಗಣಿ ಪ್ರದೇಶಗಳಿಗೆ ಆಗಮಿಸಿ ಜನರಿಂದ ಮಾಹಿತಿ ಪಡೆಯುತ್ತದೆ ಎಂಬು ವಿಷಯ ತಿಳಿದಿತ್ತು ಆದರೆ ಬುಧವಾರವೇ ಹೊನ್ನೆಬಾಗಿ ಭಾಗದ ಹಳ್ಳಿಗಳಿಗೆ ಆಗಮಿಸುತ್ತದೆ ಎಂಬ ಮಾಹಿತಿ ತಮಗೆ ತಿಳಿದಿರಲಿಲ್ಲವೆಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದರು.












ಗಂಗಾ ಕಲ್ಯಾಣ ಯೋಜನೆಯಲ್ಲಿ 36 ಪಂಪ್ ಸೆಟ್ ವಿತರಣೆಚಿಕ್ಕನಾಯಕನಹಳ್ಳಿ,ಅ.18:







ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ತಾಲೂಕಿನ ಫಲಾನುಭವಿಗಳಿಗೆ ಮಂಜೂರಾಗಿರುವ ವಿವಿಧ ಸವಲತ್ತುಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ಪರಿಶಿಷ್ಟ ಜಾತಿಯವರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 36 ಜನ ಫಲಾನುಭವಿಗಳಿಗೆ ಒಂದು ಲಕ್ಷ ರೂ ಮೌಲ್ಯದ ಪಂಪ್ ಸೆಟ್ಗಳನ್ನು ವಿತರಿಸಲಾಯಿತು, ಒಂದು ಲಕ್ಷ ರೂಗಳ ಪೈಕಿ 86 ಸಾವಿರ ಸಕರ್ಾರದ ಸಬ್ಸಿಡಿಯಾದರೆ ಉಳಿದ 14 ಸಾವಿರ ರೂಗಳನ್ನು ಫಲಾನುಭವಿಗಳು ಸಂಬಂಧಿಸಿದ ನಿಗಮಕ್ಕೆ ಮರುಪಾವತಿ ಮಾಡಬೇಕು. ದೊಡ್ಡ ಬಿದರೆಯ ಶ್ರೀ ರೇಣುಕಾಂಬ ಸುಜಲ ಜಲಾನಯನ ಸಂಘದ 14 ಮಹಿಳಾ ಸದಸ್ಯರಿಗೆ ತಲಾ 25 ಸಾವಿರ ರೂ ಗಳ ಸಾಲ ಸೌಲಭ್ಯ ನೀಡಲಾಯಿತು, ಇದರಲ್ಲಿ 10 ಸಾವಿರ ಸಬ್ಸಿಡಿ, ಉಳಿದ 15 ಸಾವಿರ ಹಣವನ್ನು ಮರು ಪಾವತಿ ಮಾಡುವ ಷರತ್ತಿಗೊಳಪಟ್ಟು ಈ ಸಾಲವನ್ನು ನೀಡಲಾಗಿದೆ. ಅದೇ ರೀತಿ ಒಂದು ಟಾಟಾ ಇಂಡಿಕಾ ಕಾರ್ಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಈ ಸಂದರ್ಭದಲ್ಲಿ ತಾ.ಪಂ. ಇ.ಓ. ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಅಭಿವೃದ್ದಿ ನಿಗಮದ ಮಧು ಉಪಸ್ಥಿತರಿದ್ದರು.(ಪೊಟೋ ಇದೆ. 18 ಸಿ.ಎನ್.ಎಚ್.ಪಿ1)ರೈತರಿಗೆ ಡೀಸೆಲ್ ದರದಲ್ಲಿ ರಿಯಾಯಿತಿ ನೀಡಲು ರೈತ ಮೋಚರ್ಾ ಒತ್ತಾಯಚಿಕ್ಕನಾಯಕನಹಳ್ಳಿ,ಸೆ.18: ಭಾರತೀಯ ಜನತಾ ಪಕ್ಷದ ರೈತ ಮೋಚರ್ಾ ಸಮಿತಿಯ ಕಾರ್ಯಗಾರಿ ಸಮಿತಿ ಸಭೆಯು ತಾ.ಬಿಜೆಪಿ ರೈತ ಮೋಚರ್ಾ ಅಧ್ಯಕ್ಷ ಗುರುವಾಪುರ ಜಿ.ಎಸ್.ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಜಿಲ್ಲಾ ರೈತ ಮೋಚರ್ಾ ಅಧ್ಯಕ್ಷರಾದ ರೇಣುಕಯ್ಯ, ಪ್ರಧಾನ ಕಾರ್ಯದಶರ್ಿ ಗರುಡಯ್ಯ, ತಾ.ಬಿಜೆಪಿ ಅಧ್ಯಕ್ಷ ಶಿವಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ರೈತ ಮೊಚರ್ಾದಿಂದ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ರೈತ ಪ್ರಹರಿಗಳನ್ನು ನೇಮಿಸುವಂತೆಯೂ ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಬಳಸುವ ಜನುವಾರುಗಳ ಸಂಖ್ಯೆ ಕಡಿಮೆ ಇರುವುದರಿಂದ ರೈತರು ಟ್ರಾಕ್ಟರ್ ಅವಲಂಬಿಸಿರುವುದರಿಂದ ರೈತರಿಗೆ ವ್ಯವಸಾಯಕ್ಕೆ ಉತ್ತೇಜನ ನೀಡುವ ಸಲುವಾಗಿ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸುವಂತೆ ಕೇಂದ್ರ ಸಕರ್ಾರವನ್ನು ಒತ್ತಾಯಿಸಲಾಯಿತು.ರಾಜ್ಯ ಸಕರ್ಾರದಿಂದ ಬಿಡುಗಡೆ ಮಾಡಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸುವರ್ಣಬೂಮಿ ಯೋಜನೆಯ ಸಹಾಯ ಧನವನ್ನು ಅಧಿಕಾರಿಗಳು ವಿಳಂಬೆ ಮಾಡದೆ ತಕ್ಷಣ ರೈತರಿಗೆ ತಲುಪಿಸವುದು ಹಾಗೂ ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳಲಾಗಿದೆ ಎಂದು ತಾಲೂಕು ರೈತ ಮೋಚರ್ಾದ ಪ್ರಧಾನ ಕಾರ್ಯದಶರ್ಿ ಕೆ.ಎಸ್.ಪರಮೇಶ್ವರಯ್ಯ ತಿಳಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ರೈತ ಮೋಚರ್ಾದ ಕಾರ್ಯದಶರ್ಿ ಎ.ಬಿ.ಶರತ್ ಕುಮಾರ್ ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







ಮಹಿಳಾ ಜನಪ್ರತಿನಿಧಿಗಳಿಗೆ ರಾಜ್ಯಮಟ್ಟದ ವಿಚಾರ ಸಂಕೀರಣಚಿಕ್ಕನಾಯಕನಹಳ್ಳಿ.ಅ.17: ಮಹಿಳಾ ಜನಪ್ರತಿನಿಧಿಗಳ ರಾಜ್ಯಮಟ್ಟದ ವಿಚಾರ ಸಂಕೀರಣ ಮುಂಬರುವ ನವೆಂಬರ್ನಲ್ಲಿ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ತಿಳಿಸಿದ್ದಾರೆ. ನವೆಂಬರ್ 17 ರಿಂದ 19ರವರೆಗೆ ನಡೆಯುವ ವಿಚಾರ ಸಂಕೀರಣದಲ್ಲಿ ಜನತಂತ್ರ ಮತ್ತು ಸಂವಿಧಾನ, ಮಾನವ ಹಕ್ಕುಗಳು, ಕೌನ್ಸಿಲರ್ಗಳ ಪಾತ್ರ ಹಾಗೂ ಸ್ಥಳೀಯ ಸಕರ್ಾರದಲ್ಲಿ ಮಹಿಳಾ ಜನಪ್ರತಿನಿಧಿಗಳು ಸಕ್ರೀಯವಾಗಿ ಭಾಗವಹಿಸಬೇಕಾದರೆ ಆಡಳಿತಾತ್ಮಕವಾಗಿ ತರಬೇಕಾದ ಬದಲಾವಣೆಗಳ ಬಗ್ಗೆ ಚಚರ್ಿಸಲಾಗುವುದು ಎಂದರು. ಈ ಸಭೆಯಲ್ಲಿ ನಗರ ಸಂಶೋಧನಾ ಕೇಂದ್ರದ ಮಂಗಳೂರು ವಿಭಾಗದ ಹರಿಣಿ, ಬೆಂಗಳೂರು ವಿಭಾಗದ ಗುರುರಾಜ್ ಬುಥ್ಯಾ ಉಪಸ್ಥಿತರಿದ್ದರು.

Monday, October 17, 2011







ಬರಗೂರು ಪಿ.ಡಿ.ಓ. ಅಮಾನತ್ತಿಗೆ ಒತ್ತಾಯಿಸಿ ತಾ.ಪಂ.ಕಛೇರಿ ಮುಂದೆ ಪ್ರತಿಭಟನೆಚಿಕ್ಕನಾಯಕನಹಳ್ಳಿ,ಅ.17: ಬರಗೂರು ಪಂಚಾಯಿತಿ ಪಿ.ಡಿ.ಓ. ಶಿವಕುಮಾರ್ರವರನ್ನು ಕರ್ತವ್ಯದಿಂದಲೇ ವಿಮುಕ್ತಿಗೊಳಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ಬಸವರಾಜು ರವರ ನೇತೃತ್ವದಲ್ಲಿ ಹಲವು ಪಂಚಾಯಿತಿಗಳ ಅಧ್ಯಕ್ಷರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳನ್ನು ಒತ್ತಾಯಿಸಿದರು. ತಾಲೂಕಿನ ಬರಗೂರು ಗ್ರಾ.ಪಂ.ಯಲ್ಲಿ ಗಾಂಧಿಜಯಂತಿಯಂದು ನಡೆದ ಸ್ವಚ್ಚತಾ ಕಾರ್ಯಕ್ರಮದ ಗ್ರಾಮ ಸಭೆಯಲ್ಲಿ ಪಿ.ಡಿ.ಓ. ಶಿವಕುಮಾರ್ ಹಾಗೂ ಅಧ್ಯಕ್ಷ ಬರಗೂರು ಬಸವರಾಜು ಇಬ್ಬರೂ ಕೈ ಕೈ ಮೀಲಾಯಿಸಿದ್ದರು, ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಈಗ ಅಧ್ಯಕ್ಷ ಬಸವರಾಜು, ಸದಸ್ಯರು, ತಾಲೂಕಿನ ವಿವಿಧ ಗ್ರಾ.ಪಂ.ಅಧ್ಯಕ್ಷರು ಹಾಗೂ ಗ್ರಾಮಸ್ಥರು ತಾ.ಪಂ. ಕಛೇರಿ ಮುಂದೆ ಪಿ.ಡಿ.ಓ. ಶಿವಕುಮಾರ್ ರವರ ದೌರ್ಜನ್ಯ ಖಂಡಿಸಿ ಮತ್ತು ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಬಸವರಾಜು, ಪಿ.ಡಿ.ಓ. ಶಿವಕುಮಾರ್ ರವರ ಮೇಲೆ 8 ಗುರುತರ ಆರೋಪಗಳಿದ್ದು, ಆರೆ, ಗುದ್ದಲಿ, ಸಿ.ಎಫ್.ಎಲ್ ಬಲ್ಪ್ಗಳ ಖರೀದಿಯಲ್ಲಿ, ವಸತಿ ಯೋಜನೆಗಳಲ್ಲೂ ಭ್ರಷ್ಟಾಚಾರ ನಡೆಸಿದ್ದರು, ಈ ಬಗ್ಗೆ ಸಾರ್ವಜನಿಕರೆದರು ಕೇಳಿದಾಗ ಏಕಾಏಕಿ ನನ್ನ ಮೇಲೆರಗಿದರು ಎಂದು ಆರೋಪಿಸಿದರಲ್ಲದೆ, ಜನಪ್ರತಿನಿಧಿಗಳಿಗೆ ಗೌರವವನ್ನು ಕೊಡುವ ಪ್ರವೃತ್ತಿಯನ್ನು ಬೆಳಿಸಿಕೊಂಡಿದ್ದಾರೆ ಎಂದರು.ತಾಲೂಕು ಗ್ರಾ.ಪಂ.ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷೆ ಹಾಗೂ ಗೋಡೆಕೆರೆ ಗ್ರಾ.ಪಂ. ಅಧ್ಯಕ್ಷೆ ಕುಶಲ ಮರಿಸ್ವಾಮಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಸದಾ ಜನರ ಬಳಿಯೇ ಇರುವುದರಿಂದ ನೀರು, ಸ್ವಚ್ಚತೆ ಹಾದಿಯಾಗಿ ಎಲ್ಲಾ ಸಮಸ್ಯೆಗಳಿಗೆ ನಾವು ತಕ್ಷಣ ಪ್ರತಿಕ್ರಿಯಿಸಿ ಸಮಸ್ಯೆ ಬಗೆಹರಿಸಬೇಕು, ಇಂತಹ ಸಂದರ್ಭಗಳಲ್ಲಿ ಪಿ.ಡಿ.ಓ.ಗಳು ಸ್ಥಳದಲ್ಲಿ ವಾಸ್ತವ್ಯವಿದ್ದರೆ ಜನರ ಸಮಸ್ಯೆಗಳನ್ನು ನಾವು ಶೀಘ್ರ ಪರಿಹರಿಸಲು ಸಹಾಯಕವಾಗುತ್ತದೆ ಇದನ್ನು ಅರಿತು ಕೆಲಸ ಮಾಡಬೇಕು ಎಂದರಲ್ಲದೆ, ಸಕರ್ಾರದಿಂದ ಬರುವ ಪ್ರತಿಯೊಂದು ಆದೇಶವನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು ಆದರೆ, ಅನುದಾನಗಳ ಬಗ್ಗೆ ಬರುವ ಆದೇಶವನ್ನು ಪಿ.ಡಿ.ಓ.ಗಳು ತಮ್ಮ ಬಳಿ ಇಟ್ಟುಕೊಂಡು ನಮ್ಮನ್ನು ಕತ್ತಲಿಯಲ್ಲಿಟ್ಟಿರುತ್ತಾರೆ ಎಂದರು. ಕುಪ್ಪೂರು ಗ್ರಾ.ಪಂ. ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ ತಾಲೂಕಿನ ಪಿ.ಡಿ.ಓ. ಗಳು ಸರಿಯಾದ ಸಮಯಕ್ಕೆ ಗ್ರಾ.ಪಂ.ಕಾಯರ್ಾಲಯಕ್ಕೆ ಬರುವುದಿಲ್ಲ ಸದಾ ತಾ.ಪಂ. ಕಛೇರಿಯಲ್ಲಿ ಬೀಡುಬಿಟ್ಟಿರುತ್ತಾರೆ, ಕೇಳಿದರೆ ಆ ಸಭೆ, ಈ ಸಭೆ ಇತ್ತು ಎಂದು ಸಬೂಬು ಹೇಳುತ್ತಾರೆ ಎಂದರು. ಮತ್ತಿಘಟ್ಟ ಗ್ರಾ.ಪಂ.ಅಧ್ಯಕ್ಷ ಮಹೇಶ್ ಮಾತನಾಡಿ ಅಧಿಕಾರ ವಿಕೆಂದ್ರೀಕರಣದಿಂದ ಗ್ರಾಮ ಮಟ್ಟಕ್ಕೆ ಅಧಿಕಾರ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸೇವೆ ಮಾಡಲು ಮುಂದಾದರೆ ನಮ್ಮನ್ನು ನಿಯಂತ್ರಿಸುವವರು ಹಲವು ಮಂದಿ ಅದರ ಜೊತೆಗೆ ಅಧಿಕಾರ ಶಾಹಿಯೂ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಾವು ಅಧಿಕಾರದಲ್ಲಿದ್ದು ಜನರಿಗೆ ಯಾವ ರೀತಿಯ ಸೇವೆಯನ್ನು ಕೊಟ್ಟಂತಾಗುತ್ತದೆ ಎಂದರು. ಕೆಂಕೆರೆ ತಾ.ಪಂ.ಸ್ಯದಸ್ಯ ನವೀನ್ ಮಾತನಾಡಿ, ಪಿ.ಡಿ.ಓಗಳು ಹಾಗೂ ಕಾರ್ಯದಶರ್ಿಗಳನ್ನು ಗ್ರಾ.ಪಂ.ಯಲ್ಲಿ ಹುಡುಕಿದರೂ ಸಿಗುವುದಿಲ್ಲ, ಅವರನ್ನು ನೋಡಬೇಕೆಂದರೆ ಚಿ.ನಾ.ಹಳ್ಳಿ.ಯ ಮಿಲ್ಟ್ರಿ ಹೋಟೆಲ್ ಹಾಗೂ ಬಾರ್ಗಳ ಬಳಿ ಬಂದರೆ ತಕ್ಷಣವೇ ಸಿಗುತ್ತಾರೆ ಎಂದರು. ಪ್ರತಿಭಟನಾಕಾರರ ನೇತೃತ್ವವಹಿಸಿದ್ದ ಬಸವರಾಜು ತಮ್ಮ ಮನವಿ ಪತ್ರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ ರವರಿಗೆ ಸಲ್ಲಿಸಿದರು. ಇ.ಓ.ದಯಾನಂದ ಮನವಿ ಸ್ವೀಕರಿಸಿ ಮಾತನಾಡಿ, ಪಿ.ಡಿ.ಓ.ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಇ.ಓ.ಗಳಿಗೆ ಅಧಿಕಾರವಿರುವುದಿಲ್ಲ, ನಾನು ನಿಮ್ಮ ಮನವಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ.ಸದಸ್ಯೆ ಬಿ.ಎನ್.ಶಿವಪ್ರಕಾಶ್, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಹುಳಿಯಾರ್ ಗ್ರಾ.ಪಂ.ಅಧ್ಯಕ್ಷ ಮಹಮದ್ ಸಯದ್ ಅನ್ಸರ್ ಆಲಿ ಸೇರಿದಂತೆ ಹಲವು ಗ್ರಾ.ಪಂ. ಅಧ್ಯಕ್ಷರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.


ಸಿಇಸಿಯ ಮೂರನೇ ತಂಡ ಚಿ.ನಾ.ಹಳ್ಳಿ ಗಣಿ ಪ್ರದೇಶಕ್ಕೆ ಭೇಟಿಚಿಕ್ಕನಾಯಕನಹಳ್ಳಿ,

ಅ.17: ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಪರಿಣಾಮ/ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ಸುಪ್ರೀಂಕೋಟರ್್ ನೇಮಿಸಿರುವ ಸಿಇಸಿ ತಂಡದ ಸದಸ್ಯರು ಸೋಮವಾರ ಚಿಕ್ಕನಾಯಕನಹಳ್ಳಿ ತಾಲೂಕಿನ ಗಣಿ ಪ್ರದೇಶಕ್ಕೆ ಭೇಟಿ, ನೀರಿನ ಮೂಲಗಳ ಮೇಲೆ ಆಗಿರುವ ಪರಿಣಾಮ ಶೋಧಿಸಿತು.ಬೆಳಗ್ಗೆ 11.30ರ ಸುಮಾರಿಗೆ ಸಿಇಸಿ ತಂಡದ ನಾಲ್ಕೈದು ಮಂದಿ ಸದಸ್ಯರು ಚಿಕ್ಕನಾಯಕನಹಳ್ಳಿ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಬಳಿಕ ಗಣಿ ಹೊನ್ನೆಬಾಗಿ, ಬುಳ್ಳೇನಹಳ್ಳಿ ಮಾರ್ಗದಲ್ಲಿ ಗಣಿ ಪ್ರದೇಶಕ್ಕೆ ತೆರಳಿದರು. ಅಬ್ಬಿಗೆ ಗುಡ್ಡದಲ್ಲಿ ನಡೆದಿರುವ ಗಣಿಗಳಿಗೆ ಭೇಟಿ ನೀಡಿದ ಸದಸ್ಯರು, ಪುನಾಃ ಪ್ರವಾಸಿ ಮಂದಿರಕ್ಕೆ ಆಗಮಿಸಿ ವಾಪಸಾದರು.ಇದರಿಂದಾಗಿ ಸಿಇಸಿ ತಂಡದ ಪೈಕಿ 3ನೇ ಉಪ ತಂಡ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಕ್ಕೆ ಭೇಟಿ ನೀಡಿದಂತಾಗಿದೆ. ನೀರಿನ ಮೂಲ ಶೋಧ:ಸೋಮವಾರ ಭೇಟಿ ನೀಡಿದ್ದ ತಂಡ ಕೇವಲ ನೀರಿನ ಮೂಲದ ಮೇಲಾಗಿರುವ ಪರಿಣಾಮ ಶೋಧಿಸಿತು. ಬುಳ್ಳೇನಹಳ್ಳಿ, ಹೊನ್ನೆಬಾಗಿ ಸೇರಿದಂತೆ ಈ ಬೆಟ್ಟದ ತಳ ಭಾಗದಲ್ಲಿರುವ ಕೆರೆ, ಕೊಳವೆ ಬಾವಿಗಳ ನೀರು ಸಂಗ್ರಹಿಸಿದ ತಂಡ, ಗಣಿಗಾರಿಕೆಯಿಂದ ನೀರಿನ ಮೇಲೆ ದುಷ್ಪರಿಣಾಮವಾಗಿದೆಯೇ ಎಂದು ತಲೆ ಕೆಡಿಸಿಕೊಂಡಿತು. ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಿಇಸಿ ತಂಡದ ಜೊತೆಯಲ್ಲಿದ್ದರು.ಬಾಲಾಜಿ ಮೈನ್ಸ್ ಸಮೀಕ್ಷೆ:ಈ ಹಿಂದೆ ಎಲ್ಲ ಗಣಿಗಳ ಸವರ್ೆ ಕಾರ್ಯ ನಡೆದಿತ್ತು. ಅಬ್ಬಿಗೆ ಗುಡ್ಡದ ತುದಿಯಲ್ಲಿರುವ ಬಾಲಾಜಿ ಮೈನ್ಸ್ ಸವರ್ೆ ಕಾರ್ಯ ಮಾತ್ರ ಉಳಿದಿತ್ತು. ಸೋಮವಾರ ಅರಣ್ಯ, ಗಣಿ ಇಲಾಖೆ, ಜಿಲ್ಲಾಡಳಿತ ಜಂಟಿಯಾಗಿ ಸವರ್ೆ ಕಾರ್ಯ ನಡೆಸಿದವು.ಬಾಕ್ಸ್-1ಮಳೆಗಾಲದಲ್ಲಿ ಶೋಧ ಸರಿಯೇ?ಕಳೆದ ಜೂನ್ ಅಂತ್ಯದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಆರಂಭವಾಗಿದೆ. ಈವರೆಗೂ ವಾಡಿಕೆ ಮಳೆ ಸಂಪೂರ್ಣವಾಗಿ ಆಗಿಲ್ಲ. ಆದರೂ ಶೇ.40ರಷ್ಟು ಮಳೆಯಾಗಿದೆ.ಗಣಿಗಾರಿಕೆ ಪ್ರದೇಶವಾದ ಅಬ್ಬಿಗೆ ಗುಡ್ಡ, ಸೊಪ್ಪಿನ ಗುಡ್ಡ ಪ್ರದೇಶಗಳ ಸುತ್ತಮುತ್ತಲ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳ ನೀರು ಮಳೆಯಿಂದಾಗಿ ಹೊಸ ನೀರು ಬಂದು ತಿಳಿಯಾಗಿದೆ. ಅದರಲ್ಲೂ ತಾಲೂಕಿನೆಲ್ಲೆಡೆಗಿಂತ ಈ ಗಣಿ ಗುಡ್ಡಗಳ ಪ್ರದೇಶದಲ್ಲೇ ಅತಿ ಹೆಚ್ಚು ಮಳೆಯಾಗುತ್ತದೆ. ಇದರಿಂದ ಗಣಿ ಗುಡ್ಡದ ಧೂಳೆಲ್ಲ ಜೂನ್ ಅಂತ್ಯದಿಂದ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿವೆ. ಪರಿಸರ, ಗಿಡ, ಮರ, ಗಣಿ ಲಾರಿಗಳು ಸಾಗುವ ದಾರಿಗಳ ಇಕ್ಕೆಗಳ ಹಸಿರು ಗಿಡಗಳೆಲ್ಲ ಮಳೆ ನೀರಿನಿಂದ ತೊಳೆದು ಸ್ವಚ್ಛ ಪರಿಸರ ಉಂಟಾಗಿದೆ.ಮೊದಲ ಮಳೆಗೇ ಎಲ್ಲ ಧೂಳು ಕೊಚ್ಚಿಕೊಂಡು ಹೋಗಿದ್ದು, ಆ ಬಳಿಕ ಸುರಿದ ಮಳೆಯ ತಿಳಿಯಾದ, ಸ್ವಚ್ಛ ನೀರು ಈಗ ಕೆರೆ, ಕಟ್ಟೆಗಳಲ್ಲಿವೆ. ಬೇಸಿಗೆಯಲ್ಲಿ ಧೂಳು ಹಿಡಿದು ಕೆರೆ ನೀರು ಹಾಳಾಗಿರುತ್ತವೆ. ಆಗ ನೀರಿನ ಮೇಲಾಗಿರುವ ಪರಿಣಾಮ ಶೋಧಿಸದೇ ಮಳೆಗಾಲದಲ್ಲಿ ನೀರಿನ ಮೇಲಾಗಿರುವ ಪರಿಣಾಮ ಶೋಧಿಸುತ್ತಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.ಆದರೆ ಮಳೆ ನೀರು ಅಂತರ್ಜಲ ಸೇರುವುದರಿಂದ ಅಂತರ್ಜಲದ ಮೇಲಾಗಿರುವ ಪರಿಣಾಮವನ್ನು ಶೋಧಿಸಲು ಈಗ ಸಕಾಲ ಎಂಬ ಅಭಿಪ್ರಾಯವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.

Wednesday, October 12, 2011

Friday, October 7, 2011


ಚಿ.ನಾ..ಹಳ್ಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಒಗ್ಗೂಡಿಸಿ ಉಗ್ರಹೋರಾಟ
ಚಿಕ್ಕನಾಯಕನಹಳ್ಳಿ,ಸೆ.07 : ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ತಾಲ್ಲೂಕಿನ ಪ್ರತಿ ಹಳ್ಳಿಹಳ್ಳಿಯಲ್ಲೂ ಎಲ್ಲಾ ಪಕ್ಷ, ರೈತರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರಹೋರಾಟ ನಡೆಸುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಸಕರ್ಾರಕ್ಕೆ ಎಚ್ಚರಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವ ಬಗ್ಗೆ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ತಾಲ್ಲೂಕು ಕಛೇರಿ ಆವರಣದಲ್ಲಿ ಮಾತನಾಡಿದರು.
ಡಾ.ನಂಜುಡಪ್ಪರವರ ವರದಿಯನ್ವಯ ತಾಲ್ಲೂಕು ಅತಿಹಿಂದುಳಿದ ಪ್ರದೇಶವಾಗಿದ್ದು ಇಲ್ಲಿನ ರೈತರು ಮಳೆಯನ್ನು ತಮ್ಮ ಬದುಕಿಗೆ ಅಳವಡಿಸಿಕೊಂಡು ಜೀವನ ನಡೆಸುತ್ತಿರುವವರು ಮುಂಗಾರು ಮತ್ತು ಹಿಂಗಾರು ಮಳೆಯಿಲ್ಲದೆ ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ ಅಲ್ಲದೆ ತಾಲ್ಲೂಕಿನಲ್ಲಿರುವ 195600 ಜಾನುವಾರುಗಳಿಗೆ ಮೇವಿನ ಸಮಸ್ಯ ಎದುರಾಗಿದ್ದು ರೈತರು ತೀವ್ರ ಆಥರ್ಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ, ಈ ಪ್ರದೇಶದಲ್ಲಿ ಬರಗಾಲ ಕಾಣಿಸಿಕೊಂಡಿರುವುದರಿಂದ ಹಿಂಗಾರು, ಮುಂಗಾರು ಬೆಳೆಯ ವೈಪಲ್ಯದ ಬಗ್ಗೆ ಈಗಾಗಲೇ ಸಕರ್ಾರಕ್ಕೆ ವರದಿ ನೀಡಲಾಗಿದೆ ಆದರೂ ಬರಪ್ರದೇಶದ ಹೆಸರಿನಿಂದ ತಾಲ್ಲೂಕನ್ನು ಕೈಬಿಟ್ಟಿರುವುದರಿಂದ ಜನತೆ ಮುಂದಿನ ದಿನಗಳಲ್ಲಿ ಆಥರ್ಿಕ ಸಂಕಷ್ಟ ಎದುರಿಸಲಿದ್ದಾರೆ ಎಂದ ಅವರು ತಾಲ್ಲೂಕಿನಲ್ಲಿ ನೀರಿನ ಜೊತೆಗೆ ವಿದ್ಯುತ್ ಸಮಸ್ಯೆಯೂ ಎದುರಾಗಿದೆ ತಾಲ್ಲೂಕಿನಲ್ಲಿ ವ್ಯಾಪ್ತಿಯಲ್ಲಿ ಸುಮಾರು 19000 ಐ.ಪಿ.ಸೆಟ್ಟುಗಳು ಚಾಲನೆಯಲ್ಲಿದ್ದು ಐ.ಪಿ.ಸೆಟ್ ಹೊಂದಿರುವ ರೈತರಿಗೆ ಉತ್ತಮ ವೋಲ್ಟೇಜ್ ಒದಗಿಸಲು ತೊಂದರೆಯಾಗಿರುತ್ತದೆ ಅಲ್ಲದೆ ಇತ್ತೀಚಿನ ಅನಿಯಮಿತ ಲೋಡ್ಶೆಡ್ಡಿಂಗ್ನಿಂದ ಸಾಕಷ್ಟು ತೊಂದರೆಯಾಗುತ್ತಿದ್ದು ಬಡರೈತರ ಹಿತದೃಷ್ಠಿಯಿಂದ ಇವುಗಳನ್ನು ತಪ್ಪಿಸಲು ಹೋರಾಟ ಆರಂಬಿಸಿದ್ದು ತಕ್ಷಣಕ್ಕೆ ಪಕ್ಷದ ಜನಪ್ರತಿನಿಧಿಗಳ ವತಿಯಿಂದ ನಡೆಯುತ್ತಿರುವ ಈ ಪ್ರತಿಭಟನೆಯು ತಾಲ್ಲೂಕನ್ನು ಸಕರ್ಾರ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಎಲ್ಲಾ ಪಕ್ಷಗಳ ಜೊತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ ತಾಲ್ಲೂಕಿನಲ್ಲಿ ಈಗಾಗಲೇ ಮಳೆಯಿಲ್ಲದೇ ಆಹಾರ ಧಾನ್ಯ ಬೆಳೆಯು ಇಳಿಮುಖವಾಗಿದ್ದು ರೈತರು ಕಂಗಾಲಾಗಿದ್ದಾರೆ, ನೀರಿಗಾಗಿ ಪರದಾಡುತ್ತಿದ್ದಾರೆ ಇದರ ಕೂಲಂಕುಶವಾಗಿ ಜಿಲ್ಲಾಧಿಕಾರಿಗಳು ಅರಿತು ತಾಲ್ಲೂಕನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು ಎಂದು ಹೇಳಿದರು.
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂಬಿ.ನಾಗರಾಜು, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಚಂದ್ರಶೇಖರಶೆಟ್ಟರು ಮಾತನಾಡಿದರು.
ಪ್ರತಿಭಟನೆಯಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ಸಿ.ಎಸ್.ರಮೇಶ್, ಎಂ.ಎನ್.ಸುರೇಶ್, ಸಿ.ಕೆ.ಕೃಷ್ಣಮೂತರ್ಿ, ರಾಜಣ್ಣ, ರುಕ್ಮಿಣಮ್ಮ, ಮಾಜಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ , ತಾ.ಪಂ.ಸದಸ್ಯರಾದ ಲತಾ, ಚೇತನಗಂಗಾಧರ್ ಮುಂತಾದವರಿದ್ದರು.

Friday, September 30, 2011






ತಂದೆಗೆ ತಕ್ಕ ಮಗ ಶಾಸಕ ಸಿ.ಬಿ.ಎಸ್: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ಸೆ.26 : ನಮ್ಮ ತಂದೆಯವರು ತೋರಿಸಿಕೊಟ್ಟ ಉತ್ತಮ ಹಾದಿಯಲ್ಲೇ ನಾವು ಈಗಲೂ ನಡೆಯುತ್ತಿದ್ದು, ಮುಂದೆಯೂ ಅದೇ ರೀತಿ ಜನರ ಮಧ್ಯೆ ಇರುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ದಿ.ಎನ್.ಬಸವಯ್ಯನವರ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂದೆಯವರಂತೆಯೇ ನಾವು ಸಾರ್ವಜನಿಕರಲ್ಲಿ ಬೆರೆತು ಅವರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ, ಬಡವರ್ಗದ ಹಾಗೂ ಹಿಂದುಳಿದ ಜನಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇನೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಬಸವಯ್ಯನವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ತೀಪರ್ು ನೀಡುವ ಮೂಲಕ ಅವರನ್ನು ನ್ಯಾಯಾಲಯದ ಮೆಟ್ಟಿಲನ್ನು ತುಳಿಯದಂತೆ ನೋಡಿಕೊಳ್ಳುತ್ತಿದ್ದರಲ್ಲದೆ, ಜನರ ಕಷ್ಠ ಸುಖಗಳಿಗೆ ಸ್ಪಂದಿಸುತ್ತಿದ್ದರು ಅದೇ ಗುಣ ಅವರ ಮಗನಾದ ಸುರೇಶ್ ಬಾಬುವಿಗೂ ಇದೆ, ತಂದೆಯಂತೆ ಮಗ ಎಂಬ ಗಾದೆಯನ್ನು ಇವರು ನಿಜ ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್), ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ರಂಗಸ್ವಾಮಯ್ಯ, ರಾಜಣ್ಣ ಉಪಸ್ಥಿತರಿದ್ದರು.

ಗಾಂಧಿಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಗ್ರಾ.ಪಂ.ಅಧ್ಯಕ್ಷರ ಬಹಿಷ್ಕಾರ: ಒಕ್ಕೂಟದ ಹೇಳಿಕೆ
ಚಿಕ್ಕನಾಯಕನಹಳ್ಗ್ಭಿ,ಸೆ.26 : ಗ್ರಾಮಪಂಚಾಯ್ತಿಗಳ್ಲಿ ನಡೆಯುವ ಉದ್ಯೋಗ ಖಾತ್ರಿ ಯೋಜನೆಯು 3 ವರ್ಷದಿಂದ ವಿಳಂಬಗತಿಯಲ್ಲಿರುವುದರಿಂದ ಗಾಂಧಿಜಯಂತಿಯಂದು ಕ್ರಿಯಾ ಯೋಜನೆಗೆ ನಡೆಸುವ ಗ್ರಾಮಸಭೆಗೆ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರು ಸಭೆಯನ್ನು ಬಹಿಷ್ಕರಿಸತ್ತೇವೆ ಎಂದು ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷೆ ಕುಶಾಲಮರಿಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಯಂತಿ ದಿನ ಗ್ರಾಮಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಉದ್ಯೋಗ ಖಾತ್ರಿ ಯೋಜನೆ ಕರಡು ತಯಾರಿಸಲು ಸುತ್ತೋಲೆ ಬಂದಿದೆ, ಕಳೆದ 2010-11ನೇ ಸಾಲಿನಲ್ಲಿ ತಯಾರಿಸಿದ್ದ ಕ್ರಿಯಾ ಯೋಜನೆಯೇ ಇನ್ನೂ ಪರಿಪೂರ್ಣವಾಗಿಲ್ಲ, 11-12ನೇ ಸಾಲಿನಲ್ಲಿ ತಯಾರಿಸಿದ ಯೋಜನೆ ಪ್ರಾರಂಭಿಸಿಯೇ ಇಲ್ಲ, ಈಗ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ತಯಾರಿಸಲು ಗ್ರಾ.ಪಂ.ಗಳಿಗೆ ಅಸಮಾಧಾನವಾಗಿದೆ ಎಂದು ತಿಳಿಸಿದವ ಅವರು, ಈ ಹಿಂದಿನ ಕ್ರಿಯಾ ಯೋಜನೆಗಳ ವಿಚಾರದಲ್ಲಿ ಗ್ರಾ.ಪಂ. ಪಿಡಿಓ ಮತ್ತು ಕಾಯರ್ಾದಶರ್ಿಗಳನ್ನು ವಿಚಾರಿಸಿದರೆ ನಮಗೆ ಸಕರ್ಾರದಿಂದ ಆದೇಶ ಬಂದಿಲ್ಲ ಎಂದು ಮೇಲಧಿಕಾರಿಗಳನ್ನು ತೋರಿಸಿ ಕೈ ತೊಳೆದಕೊಳ್ಳುತ್ತಾರೆ ಎಂದರು. 10-11ನೇ ಸಾಲಿನ ಮತ್ತು 11-12ನೇ ಸಾಲಿನ ಕ್ರಿಯಾ ಯೋಜನೆ ಪೂರ್ಣಗೊಳ್ಳದೆ 12-13ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಸಭೆಗಳಿಗೆ ಸುತ್ತೋಲೆ ಕಳುಹಿಸಿರುವುದನ್ನು ಗ್ರಾ.ಪಂ. ಒಕ್ಕೂಟ ತಿರಸ್ಕರಿಸುತ್ತದೆ. ಹೊರ ರಾಜ್ಯಗಳಲ್ಲಿ ಗ್ರಾ.ಪಂ.ಅಭಿವೃದ್ದಿಗೆ ಕೇಂದ್ರ ಸಕರ್ಾರದಿಂದ 15 ರಿಂದ 16 ಸಾವಿರ ಕೋಟಿ ರೂ ಬಳಕೆಯಾಗುತ್ತದೆ, ಆದರೆ ನಮ್ಮ ರಾಜ್ಯದಲ್ಲಿ ಕೇಂದ್ರ ಸಕರ್ಾರ ಬಿಡುಗಡೆಗೊಳಿಸುವ ಗ್ರಾಮೀಣ ಅಭಿವೃದ್ದಿ ಅನುದಾನವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು. ಇನ್ನೆರಡು ಮೂರು ದಿನಗಳೊಳಗೆ ಹಿಂದಿನ ಕ್ರಿಯಾ ಯೋಜನೆಗಳ ಅನುಷ್ಠಾನ ಪೂರ್ಣಗೊಳ್ಳದಿದ್ದರೆ 12-13ನೇ ಸಾಲಿನ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಕರಡು ತಯಾರಿಸುವುದನ್ನು ಗ್ರಾಮಸಭೆಗಳಲ್ಲಿ ಬಹಿಷ್ಕರಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಬರಗೂರು ಬಸವರಾಜು, ಉಷಾ, ಕಲ್ಪನಾ ಉಪಸ್ಥಿತರಿದ್ದರು.

ಶೈಕ್ಷಣಿಕ ಪ್ರಗತಿಗಾಗಿ ಎಲ್ಲರ ಒಲವು ಅಗತ್ಯ
ಚಿಕ್ಕನಾಯಕನಹಳ್ಳಿ,ಸೆ.30 : ವಿದ್ಯಾಥರ್ಿಗಳು ಎಸ್.ಡಿ.ಎಂ.ಸಿ, ಶಿಕ್ಷಕವರ್ಗ ಹಾಗೂ ಪೋಷಕರ ಒಲವನ್ನು ಗಳಿಸಿ ಅವರ ಮಾರ್ಗದರ್ಶನದಂತೆ ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿ.ನಂಜಯ್ಯ ಸಲಹೆ ನೀಡಿದರು.
ಪಟ್ಟಣದ ಎಂ.ಎಚ್.ಪಿ.ಎಸ್ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಶಿಕ್ಷಕರು ಆಯಾ ಮಕ್ಕಳ ಉತ್ತರ ಪತ್ರಿಕೆಗಳೊಂದಿಗೆ ಚಚರ್ೆ ನಡೆಸಿ ಇನ್ನೂ ಹೆಚ್ಚಿನ ಪ್ರಗತಿಗೆ ಶ್ರಮಿಸಬೇಕೆಂದು ಹಾಗೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಹಲವು ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಪತ್ರಕರ್ತ ಸಿ.ಬಿ.ಲೋಕೇಶ್ ಮಾತನಾಡಿ ಶೇ.75ರಷ್ಟು ರೈತರ ಹಾಗೂ ಬಡಕೂಲಿ ಕಾಮರ್ಿಕರ ಮಕ್ಕಳು ಸಕರ್ಾರಿ ಶಾಲೆಯಲ್ಲಿ ಓದುತ್ತಿರುವುದರಿಂದಲೇ ಸಕರ್ಾರಿ ಶಾಲೆಗಳು ಈಗಲೂ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡಿರುವುದು ಎಂದ ಅವರು ಪೋಷಕರು ಶಾಲೆಗಳಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಆಗಮಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕ್ರೀಡೆ, ಇನ್ನಿತರ ಚಟುವಟಿಕೆಗಳ ಬಗ್ಗೆ ಶಿಕ್ಷಕರೊಂದಿಗೆ ಚಚರ್ಿಸಬೇಕು ಮತ್ತು ಪೋಷಕರು ಮಕ್ಕಳನ್ನು ಸಕರ್ಾರಿ ಶಾಲೆಗೆ ಸೇರಿಸಿ ಸಕರ್ಾರಿ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ ಅವರು ಮಕ್ಕಳು ಅತಿ ಹೆಚ್ಚಾಗಿ ಟಿವಿ ನೋಡುವುದನ್ನು ತಪ್ಪಿಸಿ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಿಸುತ್ತಾ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠವನ್ನು ಪೋಷಕರು ಮನೆಯಲ್ಲಿ ಮತ್ತೊಮ್ಮೆ ತಿಳಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶರವರು ಆಗಮಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪರಿಶೀಲಿಸಿ, ವಸ್ತು ಪ್ರದರ್ಶನ ವೀಕ್ಷಿಸಿ ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ಮುಖ್ಯಶಿಕ್ಷಕರಾದ ಕೆ.ಪಿ.ಚೇತನ, ಧನಪಾಲ್, ಮಾರ್ಗದಶರ್ಿ ಶಿಕ್ಷಕ ಬಸವರಾಜು, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಗದೀಶ್ ಹೆಚ್.ಸ್ವಾಗತಿಸಿದರೆ, ಎಸ್.ಕೆ.ವಿಜಯ್ಕುಮಾರ್ ನಿರೂಪಿಸಿದರು.


ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೆ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಸೆ.30 : ಶಿಕ್ಷಕ-ಶಿಕ್ಷಕಿಯರ ಸಂಘದ ಮೊದಲನೇ ವರ್ಷದ ವಾಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು (ಇಂದು) ಅಕ್ಟೋಬರ್ 1ರಂದು ಮಧ್ಯಾಹ್ನ 1ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿದ್ದು ಖುಷಿ ಸಂಸ್ಕೃತಿ ಕೇಂದ್ರದ ಆಚಾರ್ಯ ರಂಗಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಉಮೇಶ್ಚಂದ್ರ, ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ, ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮರಾಮಯ್ಯ, ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ ವಿಶೇಷ ಆಹ್ವಾನಿತರಾಗಿ ರಾ.ಸ.ಪ್ರಾ.ಶಾ.ಶಿ.ಶಿಸಂಘದ ಅಧ್ಯಕ್ಷ ರಮಾದೇವಿ, ಕಾರ್ಯದಶರ್ಿ ಶಂಕರಮೂತರ್ಿ, ಖಜಾಂಚಿ ಟಿ.ಮನೋರಮಾ, ಮುಖ್ಯಶಿಕ್ಷಕರಾದ ಗೊವಿಂದರಾಜು, ತಾ.ಪ್ರೌ.ಶಾ.ಸ.ಶಿ.ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಪ್ರೌ.ಶಾ.ಶಿ.ಸಂಘದ ಕಾರ್ಯದಶರ್ಿ ತಿಮ್ಮಯ್ಯ ಉಪಸ್ಥಿತರಿರುವರು.

Saturday, September 24, 2011



ನೈತಿಕತೆ ಕಳೆದುಕೊಳ್ಳುತ್ತಿರುವ ಪ್ರಜಾಪ್ರಭುತ್ವದ ಆಧಾರ ಸ್ಥಂಬಗಳು: ಕೋಡಿಹಳ್ಳಿ ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ,ಸೆ.24 : ಪ್ರಜಾಪ್ರಭುತ್ವದ ಆಧಾರ ಸ್ಥಂಬಗಳಾದ ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಹಾಗೂ ಸಮೂಹ ಮಾಧ್ಯಮಗಳು ತಮ್ಮ ನೈತಿಕತೆ ಕಳೆದುಕೊಂಡು ದೇಶವನ್ನು ದಿವಾಳಿ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪಟ್ಟಣದಲ್ಲಿ ರೈತ ಸಂಘ ಕಛೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕನರ್ಾಟಕ ಭ್ರಷ್ಠಾಚಾರದಲ್ಲಿ ರಾಷ್ಟ್ರದಲ್ಲೇ ಅಗ್ರ ಸ್ಥಾನ ಪಡೆದಿದೆ, ಇದು ಕೇವಲ ರಾಜಕೀಯ ನಾಯಕರಿಗೆ ಬಂದಿಲ್ಲ ಇಡೀ ನಾಡಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋಟರ್್ ಕನರ್ಾಟಕದ ಗಣಿಗಾರಿಕೆಯ ಬಗ್ಗೆ ತನಿಖೆಗೆ ಆದೇಶ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸಕರ್ಾರ 2ಜಿ ಸೆಕ್ಟ್ರಂ ಹಗರಣದಲ್ಲಿ ಸಿಲುಕಿದೆ ಅಷ್ಟೇಅಲ್ಲ, ರಾಷ್ಟ್ರದ ಎಲ್ಲಾ ಪಕ್ಷಗಳೂ ನೈತಿಕತೆ ಕಳೆದುಕೊಳ್ಳುತ್ತಿವೆ ಇದನ್ನು ಸರಿದಾರಿಗೆ ತರಲು ಪ್ರಜ್ಞಾವಂತ ನಾಗರೀಕರು ಸತ್ಯಾಗ್ರಹ, ಚಳುವಳಿಗಳನ್ನು ಕೈಗೊಳ್ಳಲು ರೈತಸಂಘ ಹಾಗೂ ಸಾರ್ವಜನಿಕರು ಸಂಘಟನೆಗೊಂಡು ಸರಿ ದಾರಿಗೆತರಬೇಕಿದೆ. ಕಳೆದ ಮೂರು ದಶಕಗಳಿಂದ ನಮ್ಮ ಸಂಘ ರಾಜಕೀಯ ವ್ಯಕ್ತಿಗಳ ವಿರುದ್ದ ಹೋರಾಟ ನಡೆಸುತ್ತಲೇ ಇದ್ದು ಮುಂದಿನ ದಿನಗಳಲ್ಲೂ ಈ ಕಾರ್ಯ ಮುಂದುವರಿಯಲಿದೆ ಎಂದರು.
ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಮಳೆಯಿಂದ ಹಾನಿಯಾದರೆ ಬಯಲು ಪ್ರದೇಶದಲ್ಲಿ ಮಳೆಯಿಲ್ಲದೆ ಬರಗಾಲ ಬಂದಿದೆ, ರಾಜ್ಯ ಸಕರ್ಾರ ಈ ಭಾಗದ ಪ್ರದೇಶವನ್ನು ಬರಗಾಲವೆಂದು ಘೋಷಿಸಿ ಜನಜಾನುವಾರಗಳನ್ನು ರಕ್ಷಿಸಬೇಕು ಎಂದರು.
ಸಭೆಯಲ್ಲಿ ರಾಜ್ಯ ರೈತ ಸಂಘದ ಸೋಮಗುದ್ದ ರಂಗಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಕಾರ್ಯದಶರ್ಿ ದೇವರಾಜು. ಜಿಲ್ಲಾ ಸಂಚಾಲಕ ಶಂಕರಣ್ಣ, ಹಸಿರುಸೇನೆ ಜಿಲ್ಲಾ ಸಂಚಾಲಕ ಕೆ.ಎಸ್.ಸತೀಶ್, ತಾಲ್ಲೂಕು ಉಪಾಧ್ಯಕ್ಷ ಗಂಗಾಧರ್, ತಿಮ್ಮನಹಳ್ಳಿ ಲೋಕೇಶ್, ಕೆ.ಪಿ.ಮಲ್ಲೇಶ್, ಎ.ಬಿ.ಪ್ರಕಾಶಯ್ಯ, ಮರುಳಸಿದ್ದಪ್ಪ, ಮಲ್ಲಿಕಾಜರ್ುನಯ್ಯ ಮುಂತಾದವರಿದ್ದರು.

ಚಿಕ್ಕನಾಯಕನಹಳ್ಳಿ,ಸೆ.24: ಚಂದ್ರಶೇಖರ್ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡದ ಹಿರಿಮೆಯನ್ನು ಅಂತರರéಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಬಿಂಬಿಸಿದಂತಾಗಿದೆ ಎಂದು ತಾಲ್ಲೂಕು ಕಸಾಪ ಹರ್ಷವ್ಯಕ್ತ ಪಡಿಸಿದೆ.
ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಈ ಬಗ್ಗೆ ಪ್ರತಿಕ್ರಿಯಿಸಿ ದೇಶೀ ಸಂಸ್ಕೃತಿಯನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡು ಕನ್ನಡ ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದಿದ್ದಾರೆ.

Friday, September 23, 2011






ಸಕರ್ಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಶ್ರಮಿಸಲು ಕರೆ
ಚಿಕ್ಕನಾಯಕನಹಳ್ಳಿ,ಸೆ.23 : ಸಕರ್ಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ಸಮುದಾಯ ಶ್ರಮಿಸುವಂತೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ಬಿ.ಲೋಕೇಶ್ ಕರೆ ನೀಡಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ 2011-12ನೇ ಸಾಲಿನ ಎಸ್.ಡಿ.ಎಂ.ಸಿ ಹಾಗೂ ಸಿ.ಎ.ಸಿ ಸದಸ್ಯರಿಗೆ ನಡೆದ ಎರಡು ದಿನದ ಸಂಕಲ್ಪ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕರ್ಾರಿ ಅಧಿಕಾರಿಗಳು, ಸಕರ್ಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಿಂದ ದೂರವಿರಿಸಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಇದರಿಂದ ಸಕರ್ಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದೆ ಎಂದ ಅವರು, ಸಕರ್ಾರಿ ಅಧಿಕಾರಿಗಳು ಮೊದಲು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಿಗೆ ಕಳುಹಿಸಿದರೆ ಸಕರ್ಾರಿ ಶಾಲೆಗಳು ಅಭಿವೃದ್ದಿ ಹೊಂದುತ್ತವೆ, ಅಲ್ಲದೆ ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಸಕರ್ಾರ ಗುಣಾತ್ಮಕ ಶಾಲಾ ಶಿಕ್ಷಣದತ್ತ ಸಮುದಾಯ ಎಂಬಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಹಾಗಾಗಿ ಸಮುದಾಯ ಸಕರ್ಾರಿ ಶಾಲೆಗಳ ಅಭಿವೃದ್ದಿಯಲ್ಲಿ ಶಿಕ್ಷಕರ ಜೊತೆ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯ ಸಕರ್ಾರದ ವತಿಯಿಂದ ಎಸ್.ಎಸ್.ಎ ಬಂದಾಗಿನಿಂದ ಎಸ್.ಡಿ.ಎಂ.ಸಿ ರಚಿಸಲಾಗಿ ಶಾಲೆಗಳ ಗುಣಾತ್ಮಕ ಶಿಕ್ಷಣ ಹಾಗೂ ಶಾಲಾ ಭೌತಿಕ ಅಭಿವೃದ್ದಿಯತ್ತ ಗಮನ ಹರಿಸಲಾಗಿದ್ದು ಇದಕ್ಕೆ ಎಲ್ಲಾ ಪೋಷಕರು ಸಹಕಾರ ಅಗತ್ಯವಾಗಿದೆ. ಸಕರ್ಾರಿ ಶಾಲೆಗಳನ್ನು ಓದಿದ ಹಲವರು ಇಂದು ಸಕರ್ಾರದ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸದೆ ಸಕರ್ಾರಿ ಶಾಲೆಗಳಿಗೆ ಕಳುಹಿಸುವಂತೆ ಮನವಿ ನೀಡಿದರು.
ಮುಖ್ಯ ಅತಿಥಿಗಳಾದ ಶಿಕ್ಷಣ ಸಂಯೋಜಕರಾದ ಮರುಳಾನಾಯ್ಕ ಮಾತನಾಡಿ ಎಸ್.ಡಿ.ಎಂ.ಸಿ.ಸದಸ್ಯರ ಸಹಕಾರದಿಂದ ಇಂದು ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಗಣನೀಯ ಹೆಚ್ಚಳ ಕಂಡಿದ್ದು ಪ್ರಶಂಸನೀಯ ಎಂದರು. ಹಿಂದೆ ಶಿಕ್ಷಕರಿಗೆ ಗುರುಸ್ಥಾನ ನೀಡಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ಗೌರವಿಸಿ ಸ್ವಾಗತಿಸುತ್ತಿದ್ದರು. ಆದರೆ ಖಾಸಗಿ ಶಾಲೆಗಳ ಬಗ್ಗೆ ಜನರಲಿ ವ್ಯಾಮೋಹ ಹೆಚ್ಚಾಗಿದೆ ಎಂದರಲ್ಲದೆ, ಸಕರ್ಾರಿ ಶಾಲೆಗಳಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಂದರು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಚೇತನ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾಥರ್ಿಸಿದರು. ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿದರೆ, ಜಗದೀಶ್ ನಿರೂಪಿಸಿ, ಎಚ್.ಆರ್.ಹೊನ್ನಲಿಂಗಯ್ಯ ವಂದಿಸಿದರು.



ರೈತ ಸಂಘದ ಉದ್ಘಾಟನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಸೆ.23 : ರೈತ ಸಂಘಗಳ ಉದ್ಘಾಟನಾ ಸಮಾರಂಭ ಹಾಗೂ ತಾಲ್ಲೂಕು ರೈತಸಂಘ ಕಾಯರ್ಾಯಲದ ಉದ್ಘಾಟನೆಯನ್ನು 24ರ(ಇಂದು) ಶನಿವಾರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ರೈತ ಸಂಘದ ಕಾಯರ್ಾಲಯದ ಉದ್ಘಾಟನೆ ನೆರವೇರಿಸಲು ರಾಜ್ಯ ರೈತ ಸಂಘದ ಕಾಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗಮಿಸುತ್ತಿದ್ದು ಪಟ್ಟಣದ ಅರಣ್ಯ ಇಲಾಖೆ ಎದುರು ನೂತನವಾಗಿ ಆರಂಭಿಸಿರುವ ಕಾಯರ್ಾಲಯ, ಶೆಟ್ಟಿಕೆರೆ ಹೋಬಳಿ ಮಾಕುವಳ್ಳಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಹಾಗೂ ದಬ್ಬೇಘಟ್ಟ ಗ್ರಾಮದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ರೈತ ಸಂಘದ ಉದ್ಘಾಟನೆ ನೆರವೇರಿಸಲಿದ್ದಾರೆ.

Monday, September 19, 2011



ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯ ಧುರೀಣರೇ ಹಾಳುಮಾಡುತ್ತಿರುವುದು
ಚಿಕ್ಕನಾಯಕನಹಳ್ಳಿ,ಸೆ.18 : ನಮ್ಮ ಪ್ರಜಾಪ್ರಭುತ್ವದ ರಾಜಕೀಯದ ಧುರೀಣರು, ಜಾತಿ ಅಂಕುಶ, ಶ್ರೀಮಂತ ವರ್ಗಗಳ ಪ್ರಭಾವ ಹಾಗೂ ಆಮಿಷಗಳ ಅಂಕುಶಗಳಿಗೆ ಒಳಗಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾ ಇನ್ನೊಬ್ಬರ ಅಡಿಯಾಳಾಗಿ ಪ್ರಜಾಪ್ರಭುತ್ವದ ರಾಜಕಾರಣವನ್ನು ಹಾಳುಮಾಡುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆ ತರುತ್ತಿದಾರೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಹೇಳಿದರು.
ಪಟ್ಟಣದಲ್ಲಿ ನಡದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ಪ್ರಾಬಲ್ಯಕ್ಕಾಗಿ ಬದುಕಿನ ಅಸ್ಥಿರತೆ, ಅಶಾಂತಿ, ಗೊಂದಲಗಳು ಸ್ಥಷ್ಠಿಗೊಂಡು ನಿರುದ್ಯೋಗ, ಮತಧರ್ಮ ಸಂಸ್ಥೆಗಳ ದುರ್ಬಳಕೆ, ಶಿಕ್ಷಣದ ವೈರುಧ್ಯಗಳು, ವ್ಯಕ್ತಿ ಸಮಾಜದ ಮುಖಾಮುಖಿಯು ಮಾನವೀಯ ಸಂಬಂಧಗಳ ಅರ್ಥಹೀನತೆ ದಾರಿ ಕಾಣುತ್ತದೆ. ರಾಜಕೀಯ ಧುರೀಣರು ಕ್ರಿಯಾಶೀಲತೆಯನ್ನು ಪ್ರಕಟಗೊಳಿಸಿ ಸರಕಾರ ಮತ್ತು ಸಮುದಾಯ ಮಟ್ಟದಲ್ಲಿ ಮುಂದಾಲೋಚನೆಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಪ್ರಯತ್ನ ಮಾಡಬೇಕಾಗಿದೆ. ನಿರಪೇಕ್ಷ ಸೇವೆ ಮತ್ತು ಪ್ರೀತಿಯು ಬಾಳಿನಲ್ಲಿ ಮಿಂಚಿನಂತೆ, ಹೊಳೆದಾಗಲೇ ಸಾಹಿತ್ಯ ಸಂಕೀರ್ಣ ಶುರುವಾಗಿ ಜಗತ್ತಿನ ವೈರುಧ್ಯಗಳ ಸಂಘರ್ಷವನ್ನು ಬಿಂಬಿಸಿ ಬದುಕಿನ ಆಶಯವನ್ನು ಕಟ್ಟಿಕೊಡಲು ಪ್ರಾರಂಭಿಸುತ್ತದೆ. ಈಗೆ ಬದುಕು ಸಮುದಾಯಗಳ ಬಿನ್ನಭಿಪ್ರಾಯವಿದ್ದರೂ ವಿರೋಧದಿಂದ ಕೂಡಿರದೆ ಪ್ರಾಕೃತಿಕ ಸಂಪನ್ಮೂಲ ವಿತರಣೆ, ರಕ್ಷಣೆ ಮೊದಲಾದವನ್ನು ಎಲ್ಲರ ಅಭ್ಯುದಯಕ್ಕೆ, ಸುಖಕ್ಕೆ ಬಳಕೆ ಮಾಡುವ ಚಿಂತನೆ ಹಾಗೂ ಕ್ರಿಯೆಯಲ್ಲಿ ತೊಡಗುವ ಆಲೋಚನೆಯೇ ಆಗಿರುತ್ತದೆ, ಹೀಗೆ ಜೀವನವನ್ನು ಹಲವು ಮಗ್ಗಲುಗಳಿಂದ ಕಂಡು, ಅನುಭವದ ದ್ರವ್ಯದಲ್ಲಿ ಅದ್ದಿ ಸಾಹಿತ್ಯ ಸೃಷ್ಠಿ ಮಾಡಬೇಕಾಗುತ್ತದೆ, ಈ ರೀತಿಯ ಸತ್ವಯುತ ಬರಹದಲ್ಲಿಯೇ ಸಾಹಿತಿ ಬದುಕನ್ನು ಬಿಂಬಿಸುವ ಕಾರ್ಯದಲ್ಲಿ ತೊಡಗುತ್ತಾ ಜೀವನ ಕಳೆಯುತ್ತಾನೆ ಎಂದ ಅವರು ಗ್ರಾಮೀಣ ಸೊಗಡಿನ ಜಾನಪದ, ಪಟ್ಟಣಗಳ ಶಿಷ್ಟ ಮಾತು ಹಾಗೂ ಸಂಸ್ಕೃತದ ಒಡನಟ ಹಾಗೂ ಪ್ರಭಾವ ಹಳಗನ್ನಡದ ಸಿರಿನುಡಿ, ಹೊಸಗನ್ನಡದ ಚೆಲುವು, ಕನ್ನಡ ಭಾಷೆಯಲ್ಲಿ ನುಡಿ ಸಂವಹನ ಹಾಗೂ ಬರಹ ಸಂವಹನ ಸೂಕ್ತ ರೀತಿಯಲ್ಲಿ ಸಜ್ಜುಗೊಳಿಸಿದ್ದು ಅದೇ ರೀತಿಯಲ್ಲಿ ನಮ್ಮ ಚಿಂತನಾ ಕ್ರಮ ಮತ್ತು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವ ಬಗೆಯೂ ಹೊಸತನ ಕಂಡುಕೊಂಡಿದೆ. ತಾಲ್ಲೂಕಿನಲ್ಲಿ ಕೈಮಗ್ಗ ನೇಕಾರಿಕೆ ಹಾಗೂ ಉಣ್ಣೆ ಕಂಬಳಿಯ ಉದ್ಯಮದ ಪ್ರಾಧನ್ಯತೆಯು ನಿರುದ್ಯೋಗ ಪ್ರಪಾತದಲ್ಲಿ ಸಿಲುಕಿ ನೇಕಾರಿಕೆ ಹಾಗೂ ಕಂಬಳಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಇದರಿಂದ ಆಥರ್ಿಕ ಪರಿಸ್ಥಿತಿಯನ್ನು ತಂದುಕೊಡಲು ಸಾಧ್ಯವಾಗದೆ ರಾಜಕಾರಣ ಮಾತ್ರ ಪಲ್ಲವದ ಚೈತ್ರದಂತೆ ಜನಮನವನ್ನು ಸಂಪೂರ್ಣ ತಟ್ಟಿದೆ ಎಂದರು.
ತಾಲ್ಲೂಕಿನ ಗಣಿ ಉದ್ಯಮ ಎರಡು ದಶಕಗಳಿಗೂ ಹೆಚ್ಚು ಕಾಲ ಇಲ್ಲಿನ ಗುಡ್ಡಗಳನ್ನು ಕಬಳಿಸಿ ಭೂ ಸಂಪತ್ತನ್ನು ಬರಿದುಮಾಡುವ ಮಟ್ಟಕ್ಕೂ ನಡೆದಿದೆ, ಗಣಿಗಾರಿಕೆಯ ಕಾರಣದಿಂದ ಉತ್ತಮ ರಸ್ತೆ ಮಾಡಲ್ಪಟ್ಟರೂ, ಧೂಳಿನ ಪರಿಸರ ಊರಿನ ಜನತೆಗೆ ದುಷ್ಪರಿಣಾಮವನ್ನು ಉಂಟುಮಾಡಿ ತಾಲ್ಲೂಕಿನ ನೈಸಗರ್ಿಕ ಸಂಪತ್ತನ್ನು ಹಾಳುಮಾಡುತ್ತಿದ್ದು ಪ್ರಜ್ಞಾವಂತರಾದ ಎಲ್ಲಾ ರಂಗದ ಧುರೀಣರು ಒಗ್ಗೂಡಿ ಗಣಿಗಾರಿಕೆಯ ಉತ್ಪನ್ನವನ್ನು ಸೂಕ್ತ ವಹಿವಾಟಿನ ಮೂಲಕ ಮಾರಾಟ ಯೋಜನೆಗೆ ಸೀಮಿತಗೊಳಿಸಲು ಸರಕಾರಕ್ಕೆ ನೆರವಾಗಬೇಕು ಎಂದರು.

ಚಿಕ್ಕನಾಯಕನಹಳ್ಳಿ, ಅನುಭವದ ಅಭಿವ್ಯಕ್ತಿಯೇ ಸಾಹಿತ್ಯವಾಗಿದ್ದು, ಸಾಹಿತ್ಯ ಎನ್ನುವುದು ಅನುಭವದ ಸಾರ ಆಗಿರಬೇಕು ಎಂದು ನಾಡಿನ ಪ್ರಸಿದ್ದ ಕವಿ ಡಾ.ಸಾ.ಶಿ.ಮರುಳಯ್ಯ ನುಡಿದರು.
ಅವರು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿನ ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿನ ಅನುಭವವು ಸಾಹಿತ್ಯ ರಚಿಸುವ ಅಂಶ ಒಳಗೊಂಡಿದೆ, ಪ್ರತಿಯೊಬ್ಬರ ಅನುಭವದ ಬಗ್ಗೆ ಕುರಿತು ರಚಿಸುವವ ಸಾಹಿತ್ಯವು ಇನ್ನೊಬ್ಬರಿಗೆ ಆನಂದವನ್ನುಂಟು ಮಾಡುತ್ತದೆ. ಸಾಹಿತ್ಯವು ಸರ್ವರ ಸ್ವತ್ತಾಗಬೇಕಾಗಿದೆಯೇ ಹೊರತು ಯಾರೊಬ್ಬರ ಸ್ವತ್ತಾಗಬಾರದು ಎಂದರು. ಸ್ತ್ರೀಯರು ಸಾಹಿತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಉನ್ನತ ಸಾಧನೆ ಮಾಡುತ್ತಲೇ ಬಂದಿದ್ದಾರೆ ಅವರಿಗೆ ಈಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುವವರಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ ಅಂತಹವರಿಗೆ ಸಾಹಿತ್ಯ ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದ ಅವರು ನಮ್ಮ ಹೊಟ್ಟೆಯ ಮುಂದೆ ಯಾವ ಫಿಲಾಸಪಿಯೂ ಫಲ ಕೊಡುವುದಿಲ್ಲ, ಆದ್ದರಿಂದ ನಮ್ಮ ಹೊಟ್ಟೆಗೆ ಅನ್ನ ಕೊಡುವ ಕೃಷಿಕರನ್ನು ನೆನೆಯಬೇಕಿದೆ ಅವರ ಬಗ್ಗೆ ಮಾತನಾಡಬೇಕಿದೆ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಬಿಟ್ಟು ವಲಸೆ ಹೋಗುತ್ತಿದ್ದಾರೆ ನಿರುದ್ಯೋಗ ಸಮಸ್ಯೆಯೂ ಸ್ಥಷ್ಠಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕ.ಪು. ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಇಂದು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಪರಿಷತ್ತಿನ ಪಧಾಧಿಕಾರಿಳಿಗೆ ಮಾತ್ರ ಸೀಮಿತವಾಗಿರಬಾರದು ಅದು ಪ್ರತಿಯೊಬ್ಬ ಕನ್ನಡಿಗರೂ ಮುಂದೆ ಬಂದು ಸಾಹಿತ್ಯ ಚಟುವಟಿಕೆಗಳಿಗೆ ಮುಂದಾಗಿ ಕನ್ನಡ ಸಾಹಿತ್ಯವನ್ನು ಉಳಿಸವಂತಾಗುವುದು ಎಂದ ಅವರು ಈಗಿನ ಜಾಗತಿಕ ವೇದಿಕೆಯಲ್ಲಿ ಸಂಸ್ಕೃತಿಯನ್ನು ಯುವಕರೇ ಹಾಳುಮಾಡುತ್ತಿದ್ದಾರೆ, ಕಲಿಯಬಾರದ ವ್ಯಸನಗಳನ್ನೆಲ್ಲಾ ಕಲಿತು ತಮ್ಮ ತಮ್ಮ ಹಳ್ಳಿಗಳನ್ನು ಬಿಟ್ಟು ದೂರದ ಊರುಗಳಿಗೆ ಗುಳೇ ಹೋಗುತ್ತಾ ಅಲ್ಲಿನ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ಸಾಹಿತ್ಯ ಸಂಸ್ಕೃತಿಳನ್ನು ಮರೆಯುತ್ತಿದ್ದಾರೆ, ಇದರಿಂದಲೇ ಸಾಹಿತ್ಯವು ಈಗಿನ ಯುವಕರಲ್ಲಿ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಉಳಿದುಕೊಂಡಿದ್ದ ಕನ್ನಡ ಭಾಷೆಯು ಕಾನ್ವೆಂಟ್ ಶಾಲೆಗಳಿಂದ ಆಂಗ್ಲ ಭಾಷೆಗೆ ಮಾರುಹೋಗಿ ಕನ್ನಡ ಸಂಸ್ಕೃತಿ ನಾಶವಾಗುತ್ತಿದೆ, ಇದರಿಂದ ಸಾಹಿತ್ಯಾಸಕ್ತಿಯು ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಪೂರ್ಣಕುಂಭ, ದೊಳ್ಳುಕುಣಿತ, ನಾಸಿಕ್ಡೋಲ, ನಂದಿಧ್ವಜ, ಸೋಮನಕುಣಿತ, ತಮಟೆವಾಧ್ಯ, ಸೇರಿದಂತೆ ಅನೇಕ ಜನಪದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳಾದ ಲೋಹಿತಾಬಾಯಿ, ಸಿ.ಎಸ್.ನಟರಾಜು, ಸಿ.ಎಲ್.ದೊಡ್ಡಯ್ಯ, ಸಿ.ಟಿ.ಗುರುಮೂತರ್ಿ, ಸಿ.ಬಿ.ರೇಣುಕಸ್ವಾಮಿ, ಸೀಮೆಎಣ್ಣೆಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಎಂ.ಎನ್.ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಇ.ಒ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಪತ್ರಕರ್ತರಾದ ಜಿ.ಇಂದ್ರಕುಮಾರ್, ಚಿ.ನಿ,ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹಲವರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಉಪನ್ಯಾಸಕ ಕಣ್ಣಯ್ಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಇನ್ನರ್ವೀಲ್ ಕ್ಲಬ್ ಸದಸ್ಯರು ಕ್ನನಡಗೀತೆ ಹಾಡಿದರು. ಅಣ್ಣಪ್ಪರಾವ್ ವಂದಿಸಿದರು. ವೀಣಾಶಂಕರ್ ಹಾಗೂ ಭವಾನಿ ಜಯರಾಂ ನಿರೂಪಿಸಿದರು.






ಚಿಕ್ಕನಾಯಕನಹಳ್ಳಿ,ಸೆ.19 : ನಮ್ಮ ಮಕ್ಕಳು ದೇಶದ ಪ್ರಜೆಯಾದರೆ ಸಾಲದು, ದೇಶ ರಕ್ಷಿಸುವಂತಹ ದೇಶಪ್ರೇಮಿಗಳಾಗಬೇಕು ಎಂದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಹೇಳಿದರು.
ಪಟ್ಟಣದ ಕಾಳಮ್ಮನ ಗುಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಡಿ,ಎಂ.ಸಿ ಮತ್ತು ಸಿ, ಎ, ಸಿ ,ಸದಸ್ಯರಿಗೆ ಸನಿವಾಸ ಕಾರ್ಯಕ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಉತ್ತಮ ವಿದ್ಯಾಭ್ಯಾಸ ಕಲಿತು ದೇಶದ ರಕ್ಷಣೆಯಂತಹ ಕಾರ್ಯಗಳಲ್ಲಿ ಭಾಗವಹಿಸಿಬೇಕು, ಹಲವಾರು ಸಂಘ ಸಂಸ್ಥೆಗಳು ದೇಶಪ್ರೇಮದ ಬಗ್ಗೆ ಉತ್ತಮ ತರಬೇತಿ ನೀಡುತ್ತಿದ್ದು ಮಕ್ಕಳು ಇದರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಉತ್ತಮ ವಿದ್ಯಾಭ್ಯಾಸದ ಬಗ್ಗೆ ಜವಾಬ್ದಾರಿ ವಹಿಸಿ ದೇಶ ರಕ್ಷಣೆಗೆ ಪರೋಕ್ಷವಾಗಿ ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್ ಶಾಲೆಗೆ ಬರುವ ಮಕ್ಕಳು ನಮ್ಮ ಮಕ್ಕಳೆಂದು ಭಾವಿಸಿ ಅವರ ಭವಿಷ್ಯದ ಕಡೆ ಯೋಚಿಸಿ ಯಾವ ಮಗುವೂ ಶಾಲೆಗೆ ಗೈರುಹಾಜರಾಗದಂತೆ ನೋಡಿಕೊಂಡು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗುವಂತೆ ಪ್ರೋತ್ಸಾಹಿಸಬೇಕು. ಶಾಲಾ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ ಮಾಡಬೇಕು. ಶಾಲಾ ಮಕ್ಕಳ ಕಲಿಕೆ ಕುರಿತಂತೆ ಅಧ್ಯಾಪಕರೊಂದಿಗೆ ಚಚರ್ಿಸಿ ಉತ್ತಮಪಡಿಸಲು ಪ್ರಯತ್ನಿಸಬೇಕು ಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಶಿಕ್ಷಣ ಸಂಯೋಜಕ ಮರುಳಾನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಯ್ಯ ಮಾತನಾಡಿದರು.
ಸಮಾರಂಭದಲ್ಲಿ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿ, ಮು.ಶಿ ಶಂಕರಪ್ಪ ವಂದಿಸಿದರು.



ಚಿಕ್ಕನಾಯಕನಹಳ್ಳಿ,ಸೆ.19 : ಲಂಬಾಣಿ ಸಮಾಜದ ತಮ್ಮದೇ ಆದ ಗುರುಪರಂಪರೆ ಸಂಸ್ಕೃತಿ ಇದ್ದು ಸಮಾಜ ಅಭಿವೃದ್ದಿ ಹೊಂದಲು ಶಿಕ್ಷಣ, ಸಂಸ್ಕಾರ, ಸ್ವಾಭಿಮಾನದಿಂದ ಬಾಳಬೇಕಾಗಿದೆ ಎಂದು ಚಿತ್ರದುರ್ಗದ ಸೇವಾಲಾಲ್ ಮಠದ ಸರದಾರ್ ಸೇವಾಲಾಲ್ ಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ಆಲದಕಟ್ಟೆ ತಾಂಡ್ಯದ ನೂತನ ಸೇವಲಾಲ್ ಪರಿಶಿಷ್ಠ ಜಾತಿ(ಲಂಬಾಣಿ) ವಿವಿದ್ದೋದ್ದೇಶ ಸಹಕಾರ ಸಂಘದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಪಾಲಿಸುವುದು ಲಂಬಾಣಿ ಜನಾಂಗದಲ್ಲಿ ಹೆಚ್ಚು, ನಮ್ಮಲ್ಲಿ ವ್ಯವಸಾಯ ವೃತ್ತಿ ಮಾಡುವವರೇ ಹೆಚ್ಚು, ದುಡಿದ ಹಣವನ್ನು ದುಶ್ಚಟಗಳಿಗೆ ವ್ಯಯಮಾಡದೆ ಸ್ವಲ್ಪ ಹಣ ಉಳಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ ಎಂದರು. ಜನಾಂಗದ ಮಹಿಳೆಯರು ಸಂಸ್ಕೃತವಂತರಾಗಿ ಅಡುಗೆ ಜೊತೆಯಲ್ಲಿ ಸಮಾಜ ಸೇವೆ ಮಾಡುವಂತೆ ಸಲಹೆ ನೀಡಿದರು. ನಮ್ಮ ಜನಾಂಗದ ವಿದ್ಯಾವಂತರು ಹಾಗೂ ಸಕರ್ಾರಿ ನೌಕರರು ತಮ್ಮ ತಾಂಡ್ಯಗಳಿಗೆ ಭೇಟಿ ನೀಡಿ ಅನಕ್ಷರಸ್ಥರಿಗೆ ತಿಳುವಳಿಕೆ ನೀಡಲು ಸಲಹೆ ನೀಡಿದರು.
ಜಿ.ಪಂ.ಸದಸ್ಯ ಲೋಹಿತಾಬಾಯಿ ಮಾತನಾಡಿ ಸಹಕಾರ ಮನೋಭಾವವನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಂಡು ದ್ವೇಶ, ಅಸೂಹೆಗಳಿಂದ ದೂರವಿದ್ದರೆ ಮಾತ್ರ ಸಮಾಜ ಉದ್ದಾರವಾಗಲಿದೆ, ಇದಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ನಮ್ಮ ಜನಾಂಗವನ್ನು ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಅಲ್ಪಸ್ವಲ್ಪ ಆಮಿಶ ಒಡ್ಡಿ ಮತ ಪಡದು ಕೈಬಿಡುತ್ತಾರೆ ಎಂದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ,ಸಹಕಾರ ಸಂಘಗಳು ನಮ್ಮದು ಎನ್ನುವ ಭಾವನೆ ಬಂದಾಗ ಮಾತ್ರ ಸಂಘಗಳು ಉಳಿಯಲು ಸಾಧ್ಯ ಎಂದರಲ್ಲದೆ, ್ನ ತೆಗೆದುಕೊಂಡ ಸಾಲವನ್ನು ಸರಿಯಾಗಿ ಪಾವತಿಸಿ ಸಂಘದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸವುಂತೆ ತಿಳಿಸಿದರು.
ಸಮಾರಂಭದಲ್ಲಿ ಬಿ.ವೆಂಕಟೇಶ್ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್, ಕೈಗಾರಿಕೋದ್ಯಮಿ ಟಿ.ಜಿ.ತಿಮ್ಮಯ್ಯ, ಆಲದಕಟ್ಟೆ ಶ್ರೀರಂಗನಾಯಕ, ಮಾಜಿ ತಾ.ಪಂ.ಉಪಾಧ್ಯಕ್ಷ ಕಮಲಾನಾಯಕ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರುಗಳಾದ ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಗ್ರಾ.ಪಂ.ಸದಸ್ಯರಾದ ನಾಗರಾಜನಾಯ್ಕ, ರಂಗಮ್ಮ ವೆಂಕಟೇಶ್, ವಿನೋದಬಾಯಿ ರಾಜಾನಾಯಕ, ಕರಿಯಮ್ಮರಾಮಚಂದ್ರನಾಯಕ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಮಲಾನಾಯಕ ಸ್ವಾಗತಿಸಿದರು. ರಾಮಚಂದ್ರನಾಯಕ ನಿರೂಪಿಸಿದರು.


ರಾಜ್ಯ ವೀರಶೈವ ವೇದಿಕೆಯ ಸೆ.26ರಂದು ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಸೆ.19 : ವೀರಶೈವ ಸಮಾಜದ ಸಂಘಟನೆಯನ್ನು ಮನೆ ಮನೆ ಹಾಗೂ ಹಳ್ಳಿಗಳಿಂದ ಸಂಘಟನೆ ಮಾಡಲು ಕನರ್ಾಟಕ ರಾಜ್ಯ ವೀರಶೈವ ವೇದಿಕೆ ತೀಮರ್ಾನಿಸಿದೆ ಎಂದು ರಾಜ್ಯಧ್ಯಾಕ್ಷ ಶಿವಮಹದೇವಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಮಂಟಪ ಉಚಿತ ವಿದ್ಯಾಥರ್ಿನಿಲಯಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಬಡವಿದ್ಯಾಥರ್ಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗುವುದು, ಬಸವ ಜಯಂತಿ ಹಾಗೂ ಶರಣರ ಜಯಂತಿ ಸೇರಿದಂತೆ ಶಾಲಾ ಮಕ್ಕಳಿಗೆ ಚಚರ್ಾ ಸ್ಪಧರ್ೆ, ಪ್ರಭಂದ ಸ್ಪಧರ್ೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳನ್ನು ನಡೆಸಲಾಗುವುದು ಹಾಗೂ ಸ್ಮಧರ್ಾತ್ಮಕ ಪರೀಕ್ಷೆ, ಉದ್ಯೋಗಕ್ಕೆ ಸಲಹೆ, ಗಾಂಧೀ ಜಯಂತಿ, ಸ್ವತಂತ್ರ ದಿನಾಚಾರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುವುದು ಎಂದರು. ಈ ಸಂಘಟನೆಯ ರೂಪರೇಷೆ ಹಾಗೂ ಸಂಘದ ಸಂಘಟೆನಯ ಬಗ್ಗೆ ಚಚರ್ಿಸಲು ಇದೇ 26ರಂದು ಪಟ್ಟಣದ ಎಸ್.ಎಂ.ಎಸ್. ಶಾಲೆಯ ಆವರಣಲದಲ್ಲಿ ಬೆಳಗ್ಗೆ 10.30ಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿಯವರ ಸಾನಿಧ್ಯದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಗಂಗಾಧರ, ತೋಟರಾಧ್ಯ ಉಪಸ್ಥಿತರಿದ್ದರು.

Wednesday, September 14, 2011

ಪದವೀಧರ ಸಹಕಾರ ಸಂಘಕ್ಕೆ ಚಾಲನೆ :ಕ್ಯಾಪ್ಟನ್ ಸೋಮಶೇಖರ್ಚಿಕ್ಕನಾಯಕನಹಳ್ಳಿ,ಸೆ.14 : ತಾಲ್ಲೂಕು ಪಧವೀದರರ ಪತ್ತಿನ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತರಲು ಯೋಜಿಸಲಾಗುತ್ತಿದೆ ಎಂದು ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ. ಪಟ್ಟಣದ ರೋಟರಿ ಬಾಲಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಉದ್ದೇಶಿತ ಸಹಕಾರ ಸಂಘಕ್ಕೆ 500ರಿಂದ 600 ಜನ ಷೇರುದಾರರನ್ನು ಹೊಂದುವ ಉದ್ದೇಶವಿದ್ದು ಪ್ರತಿ ಷೇರಿಗೆ 1200 ರೂ ಷೇರು ಧನವಾಗಿ ಸಂಗ್ರಹಿಸಲಾಗುವುದು ಎಂದರಲ್ಲದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೊತೆಗೆ ಬಿಳಿಗೆರೆ ಹಾಗೂ ಬುಕ್ಕಾಪಟ್ಟಣವನ್ನು ನಮ್ಮ ಷೇರುದಾರರ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುವುದು ಎಂದರು.ನಮ್ಮ ಈ ಸಹಕಾರ ಸಂಘದಲ್ಲಿ 10ಜನ ಪ್ರಮೋಟರ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು. ಹೆಚ್ಚಿನ ವಿವರಗಳಿಗೆ ಕ್ಯಾಪ್ಟನ್ ಸೋಮಶೇಖರ್ ರವರನ್ನು 9448175389 ಇಲ್ಲಿ ಸಂಪಕರ್ಿಸಲು ಕೋರಲಾಗಿದೆ.

Tuesday, September 13, 2011



ಸಮ್ಮೇಳನದಲ್ಲಿ ವಿವಿದ ಗೋಷ್ಠಿ, ಉಪನ್ಯಾಸಗಳುಚಿಕ್ಕನಾಯಕನಹಳ್ಳಿ,ಸೆ.13: ತಾಲ್ಲೂಕಿನಲ್ಲಿ ಇದೇ 17ರಂದು ನಡೆಯುವ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 12.45ಕ್ಕೆ ವಿಶೇಷ ಉಪನ್ಯಾಸ -ಗೋಷ್ಠಿ 1, ತಾಲ್ಲೂಕಿನ ಮರೆಯಲಾರದ ಮಹಾನುಭಾವರು ವಿಷಯದಡಿ ಹಿರಿಯ ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ, ಹರಿದಾಸ ಸಾಹಿತ್ಯದ ಅಗ್ರಗಣ್ಯ ಚಿ.ನಾ.ಹಳ್ಳಿಯ ವೆಂಕಟದಾಸರು ಬಗ್ಗೆ ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕಲಾತಪಸ್ವಿ ಬಿ.ಕೆ.ಈಶ್ವರಪ್ಪನವರ ಬಗ್ಗೆ ತಾ. ಎರಡನೇ ಕಸಾಪ ಸಮ್ಮೇಳನಾಧ್ಯಕ್ಷ ಆರ್.ಬಸವರಾಜು ಮಾತನಾಡಲಿದ್ದು , ವಿಶೇಷ ಆಹ್ವಾನಿತರಾಗಿ ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ದಲಿತ ಮುಖಂಡ ಚನ್ನಬಸವಯ್ಯ ಬೇವಿನಹಳ್ಳಿ ಉಪಸ್ಥಿತರಿರುವರು. ಇದೇ ಸಮಯದಲ್ಲಿ ಪ್ರೊ.ಲಿಂಗದೇವರು ಹಳೆಮನೆ ಒಂದು ನೆನಪು ಕಾರ್ಯಕ್ರಮವನ್ನು ಪ್ರೊ.ಕೃಷ್ಣಮೂತರ್ಿ ಬಿಳಿಗೆರೆ ನಡೆಸಿಕೊಡುವರು. ಮಧ್ಯಾಹ್ನ 2.45ಕ್ಕೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ದರ್ಶನ-ಗೋಷ್ಠಿ2 ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕೃಷಿ ಪರಿಸರದ ಬಗ್ಗೆ ಕೃಷಿ ತಜ್ಞ ಪ್ರೊ.ಜಿ.ಶಿವನಂಜಯ್ಯ ಬಾಳೆಕಾಯಿ ಮಾತನಾಡಲಿದ್ದು ಪ್ರೊ.ಕೆ.ಸಿ.ಬಸಪ್ಪ ಪ್ರಚಲಿತ ಪೇಟೆ ವ್ಯವಸ್ಥೆಯಲ್ಲಿ ಚಿ.ನಾ.ಹಳ್ಳಿ ತಾಲ್ಲೂಕನ್ನು ಸಜ್ಜುಗೊಳಿಸುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಮಾತನಾಡುವರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣಪ್ಪ ತಾಲ್ಲೂಕಿನ ಜೀವವೈವಿಧ್ಯಗಳು ಬಗ್ಗೆ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆಯ ಸಾ.ಚಿ.ರಾಜಕುಮಾರ್ ತಾಲ್ಲೂಕಿನ ಮಹಿಳಾ ಪ್ರತಿನಿಧೀಕರಣದ ಬಗ್ಗೆ ಮಾತನಾಡುವರು.ವಿಶೇಷ ಆಹ್ವಾನಿತರಾಗಿ ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಎಂ.ಬಿ.ಶಿವಕುಮಾರ್, ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್ ಉಪಸ್ಥಿತರಿರುವರು. ಸಂಜೆ 5ಕ್ಕೆ ಕವಿ ಮಿಲನ ಗೋಷ್ಠಿ-3 ಕಾರ್ಯಕ್ರಮವಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಪ್ರಸೂತಿ ತಜ್ಞ ಡಾ.ರಮೇಶ್ ಸಿಂಗಾಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಕ.ಸಾ.ಪ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮರಿದೇವರು ಟಿ.ಎಲ್.ರಂಗನಾಥಶೆಟ್ಟಿರವರ ಕಾವ್ಯಶ್ರೀ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಮು.ಸಂಘದ ಅಧ್ಯಕ್ಷ ಕೃಷ್ಣಯ್ಯ, ರಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಶಿ.ಸಂಘದ ಅಧ್ಯಕ್ಷ ಎಚ್.ಎಂ.ಸುರೇಶ್, ತಾ.ಶಿ.ಶಿ.ಸಂಘದ ಬಿ.ಎಲ್.ಬಸವರಾಜು ಹಾಗೂ ಹಲವರು ಕವಿಗಳು ಭಾಗವಹಿಸುವರು.

Friday, September 9, 2011

ಶಾಲೆಗೊಂದು ವನ ಕಾರ್ಯಕ್ರಮದ ಅನುಷ್ಠಾನ ತೃಪ್ತಿದಾಯಕವಾಗಿಲ್ಲಚಿಕ್ಕನಾಯಕನಹಳ್ಳಿ,ಸೆ.09 : ಸಕರ್ಾರ ಜಾರಿಗೆ ತಂದಿರುವ ಶಾಲೆಗೊಂದು ವನ ಕಾರ್ಯಕ್ರಮ ಯಶಸ್ವಿಯಾಗದ ಬಗ್ಗೆ ಆಕ್ಷೇಪಿಸಿದ ಅವರು ಶಾಲೆಗಳಲ್ಲಿ ಸಣ್ಣದೊಂದು ಉದ್ಯಾನವನದಂತೆ ಸಸಿಗಳನ್ನು ನೆಟ್ಟು ಯಶಸ್ವಿಗೊಳಿಸಲು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಸೂಚಿಸಿದರು. ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾ.ಪಂ.ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಪಶು ಇಲಾಖೆಯವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಪ್ರತಿಬಾರಿ ಆಕ್ಷೇಪಣೆಗಳು ಕೇಳಿಬರುತ್ತಿದ್ದು ಇದರ ಬಗ್ಗೆ ಗಮನ ಹರಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಸಕರ್ಾರಿ ಕಾರ್ಯಕ್ರಮಗಳು, ಉದ್ಘಾಟನೆಗೊಳ್ಳುವ ಹಲವು ಸಮಾರಂಭಗಳನ್ನು ಏರ್ಪಡಿಸುವ ಮುನ್ನ ತಹಶೀಲ್ದಾರ್, ತಾ.ಪಂ.ಅಧ್ಯಕ್ಷರು, ಆ ಕ್ಷೇತ್ರಕ್ಕೆ ಸಂಭಂದಪಟ್ಟ ಜನಪ್ರತಿನಿಧಿಗಳಿಗೆ ಖಡ್ಡಾಯವಾಗಿ ತಿಳಿಸಿ ಆನಂತರ ಕಾರ್ಯಕ್ರಮ ಏರ್ಪಡಿಸಬೇಕೆಂದು ತಾಲ್ಲೂಕು ಇಲಾಖಾಧಿಕಾರಿಗಳಿಗೆ ಇ.ಓ.ಎನ್.ಎಂ.ದಯಾನಂದ್ ಸೂಚಿಸಿದರು.ತಾಲ್ಲೂಕಿನ ಇಲಾಖಾಧಿಕಾರಿಗಳು ತಮಗೆ ಬೇಕಾದಾಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳಿಗೆ, ತಮ್ಮ ಮೇಲಾಧಿಕಾರಿಗೆ ಕಾರ್ಯಕ್ರಮಗಳ ಬಗ್ಗೆ ತಿಳಿಸದೆ ಇಲಾಖಾ ಸಮಾರಂಭಗಳನ್ನು ಏರ್ಪಡಿಸಿ ಸಮಾರಂಭ ಕೆಲವು ದಿನಗಳಿವೆ ಎಂದಾಗ ತಿಳಿಸಲು ಬರುತ್ತಾರೆ ಎಂದು ಆರೋಪಿಸಿದ ಅವರು, ಈ ರೀತಿಯ ಕಾರ್ಯಗಳು ನಡೆಯಬೇಕಾದರೆ ಮುಂಚಿತವಾಗಿ ತಹಶೀಲ್ದಾರ್ರವರಿಂದ ಮೊದಲು ಅನುಮತಿ ಪಡೆದು ನಂತರ ಶಾಸಕರಿಂದ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಿ, ಸಮಾರಂಭ ನಡೆಯುವ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಆನಂತರ ಸಮಾರಂಭವನ್ನು ಏರ್ಪಡಿಸಿ ಶಿಷ್ಠಾಚಾರ ಪಾಲಿಸಬೇಕು ಎಂದು ತಿಳಿಸಿದರು.ತೋಟಗಾರಿಕೆಯ ವ್ಯಾಪ್ತಿಯಲ್ಲಿ ಕೆಂಪುಮೂತಿ ಹುಳುವಿನಿಂದ ತೆಂಗಿನ ಬೆಳೆಗೆ ಹಾನಿಯುಂಟಾಗುತ್ತಿದ್ದು ತಾಲ್ಲೂಕಿನಲ್ಲಿ ಈಗಾಗಲೇ ಹಳ್ಳಿಕೆರೆಪುರ, ಸೊಂಡೇನಹಳ್ಳಿ ಗ್ರಾಮಗಳಲ್ಲಿ 25ಎಕರೆಯಷ್ಟು ಬೆಳೆಯು ಹುಳುವಿನಿಂದ ನಾಶವಾಗಿದ್ದು ಇದರ ಬಗ್ಗೆ ಜನಜಾಗೃತಿಯನ್ನು ಹಮ್ಮಿಕೊಳ್ಳುವುದಾಗಿ ಹಾಗೂ ಕೆಂಪುಮೂತಿ ಹುಳುವಿನಿಂದ ಬೆಳೆಯಲ್ಲಿ ಏರುಪೇರು ಉಂಟಾದರೆ ಹೋಬಳಿ ಮಟ್ಟದಲ್ಲಿ ಸಹಾಯಕ ಅಧಿಕಾರಿ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರೆ ಇದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ತೋಟಗಾರಿಕಾ ಇಲಾಖಾಧಿಕಾರಿ ತಿಳಿಸಿದರು.ಸಮಾರಂಭದಲ್ಲಿ ತಾ.ಪಂ.ಅದ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್ ಹಾಗೂ ತಾಲ್ಲೂಕು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.