ನಿಮ್ಮ ಸುದ್ದಿ ವಾಹಕ ............................................................................................................................... ......................................................... feed back: chiguru_2020@rediffmail.com
Friday, June 4, 2010
Tuesday, June 1, 2010
Saturday, May 29, 2010
Friday, May 28, 2010
ಡಿ.ಸಿ.ಸಿ ಬ್ಯಾಂಕ್ನಿಂದ ಹಲವು ರೀತಿಯ ಸಾಲ ಸೌಲಭ್ಯ
Thursday, May 27, 2010
Monday, May 24, 2010
ವಿದ್ಯುತ್ ಸ್ಪರ್ಶ: ಇಬ್ಬರ ಸಾವು
ಚಿಕ್ಕನಾಯಕನಹಳ್ಳಿ,ಮೇ.24: ದೇವಾಲಯವೊಂದರ ಕಾರ್ಯಕ್ರಮಕ್ಕೆ ವಿದ್ಯುತ್ ಬಲ್ಪ್ಗಳನ್ನು ಅಳವಡಿಸುತ್ತಿದ್ದಾಗ ವಿದ್ಯುತ್ ಪ್ರಸಾರವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಂದನಕೆರೆ ಹೋಬಳಿಯಲ್ಲಿ ನಡೆದಿದೆ.
ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಸುಧಾಕರ್ ಹಾಗೂ ಹರೀಶ್ ಮೃತಪಟ್ಟ ದುದರ್ೆವಿಗಳು. ಇವರು ಸಬ್ಬೆನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೀರಿಯಲ್ ಸೆಟ್ ಬಿಡುವ ಕಾರ್ಯದಲ್ಲಿ ಮಗ್ನರಾಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರು ಅರಸೀಕೆರೆಯಿಂದ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರೆನ್ನಲಾಗಿದೆ.
ಈ ಸಂಬಂದ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
Monday, May 17, 2010
ಜೆ.ಡಿ.ಎಸ್. ಮುನ್ನಡೆ, ಎರಡನೇ ಸ್ಥಾನದಲ್ಲಿ ಬಿ.ಜೆ.ಪಿ, ಜೆ.ಡಿ.ಯು ಪಾಳೆಯದಲ್ಲಿ ಅಸಮಧಾನ, ಕಾಂಗ್ರೆಸ್ಗೆ ಗುಟುಕು ಜೀವ.
ಚಿಕ್ಕನಾಯಕನಹಳ್ಳಿ,ಮೇ.17: ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆ ಯಲ್ಲಿ ಜೆ.ಡಿ.ಯು ಹಾಗೂ ಬಿ.ಜೆ.ಪಿ. ಕಾಲೆಳೆದಾಡಿ ಕೊಂಡಿದ್ದರಿಂದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ರವರಿಗೆ ಲಾಭವಾಗಿದೆ.
ತಾಲೂಕಿನ 28 ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ರಾತ್ರಿ 10.30ರ ವೇಳೆಗೆ ದೊರೆತ ಮಾಹಿತಿಯಂತೆ ಒಟ್ಟು 464 ಸ್ಥಾನಗಳಲ್ಲಿ ಜೆ.ಡಿ.ಎಸ್. ಬೆಂಬಲಿತರು 194 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದರೆ, ಬಿ.ಜೆ.ಪಿ. ಬೆಂಬಲಿತರು 120 ಸ್ಥಾನಗಳನ್ನು, ಜೆ.ಡಿ.ಯು. 55 ಸ್ಥಾನಗಳು, ಕಾಂಗ್ರೆಸ್ 35 ಹಾಗೂ ಸ್ವತಂತ್ರ ಅಬ್ಯಾಥರ್ಿಗಳೆಂದು ಹೇಳಿಕೊಳ್ಳುವವರ ಪೈಕಿ 60 ಜನರು ಆಯ್ಕೆಯಾಗಿದ್ದಾರೆ.
ಈ ಜಯ ಶಾಸಕರ ಗುಂಪಿಗೆ ಹರ್ಷ ತಂದುಕೊಟ್ಟಿದ್ದು, ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದ ಶಾಸಕರಿಗೆ ತಮ್ಮ ಜಯದ ಸುದ್ದಿ ತಿಳಿಸಲು ಗುಂಪು ಗುಂಪಾಗಿ ತೆರಳುತ್ತಿದ್ದು ಸಾಮಾನ್ಯ ದೃಶ್ಯವಾಗಿತ್ತು.
ಈ ಬಾರಿ ತಾಲೂಕಿನ 28 ಗ್ರಾಮ ಪಂಚಾಯ್ತಿಗಳ ಪೈಕಿ 484 ಸ್ಥಾನಗಳಲ್ಲಿ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿಕೆ 470 ಸ್ಥಾನಗಳಿಗೆ 1527 ಮಂದಿ ಸ್ಪಧರ್ಿಸಿದ್ದರು
ಮತ ಎಣಿಕೆಯ ಸಂದರ್ಭದಲ್ಲಿ ಕಂಡ ವಿಶೇಷ ಅಂಶಗಳೆಂದರೆ, ಮತ ಎಣಿಕೆ ಆರಂಭದಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಲಕ್ಮೇನಹಳ್ಳಿ ಕ್ಷೇತ್ರದ ಜೆ.ಡಿ.ಯು.ಬೆಂಬಲಿತ ಅಬ್ಯಾಥರ್ಿ ಉಷಾ ಪ್ರಥಮ ವಿಜೇತೆ ಅನಿಸಿಕೊಂಡರು.
ಗೋಡೆಕೆರೆಯ ಬಸವಲಿಂಗಮೂತರ್ಿ ಹಾಗೂ ಜಿ.ಎಂ.ಮಲ್ಲಿಕಾರ್ಜನಯ್ಯ ಸಮವಾಗಿ 144 ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿ ಚೆನ್ನಿಗರಾಮಯ್ಯನವರು ಲಾಟರಿ ಎತ್ತುವ ಮೂಲಕ ಬಸವಲಿಂಗಮೂತರ್ಿ ಜಯಗಳಿಸಿದ್ದಾರೆ ಎಂದು ಘೋಷಿಸಿದರೆ, ಈ ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದವರಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಎಂ.ಎಚ್.ಕಾವಲಿನ ವಿನೋದ ಬಾಯಿ(110) ತನ್ನ ಸಮೀಪ ಪ್ರತಿ ಸ್ಪಧರ್ಿ ನೇತ್ರಾವತಿ(109) ಗಿಂತ ಒಂದು ಮತ ಹೆಚ್ಚೆಗೆ ಪಡೆದು ಜಯಗಳಿಸಿದ್ದಾರೆ.
ತೀರ್ಥಪುರ ಗ್ರಾ.ಪಂ.ಯ ಕಾಮಾಕ್ಷಮ್ಮ(286), ಮಂಜುಳ(285) ಮತಗಳನ್ನು ಪಡೆದಿದ್ದರಿಂದ ಕಾಮಾಕ್ಷಮ್ಮನಿಗೆ ಅದೃಷ್ಟ ಒಲಿದಿದೆ. ಜೆ.ಸಿ.ಪುರ ಗ್ರಾ.ಪಂ.ಯ ಹಾಲುಗೊಣದಲ್ಲಿ ದೇವರಾಜು ಎರಡು ಮತಗಳಿಂದ ಜಯಗಳಿಸಿದ್ದಾರೆ, ಹೊನ್ನೆಬಾಗಿ ಗ್ರಾ.ಪಂ.ಯ ಬುಳ್ಳೇನಹಳ್ಳಿಯ ಉದಯಕುಮಾರ್ ಎರಡು ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಮತ ಎಣಿಕೆ ನಡೆಯುತ್ತಿದ್ದ ಸಕರ್ಾರಿ ಪದವಿ ಪೂರ್ವ ಕಾಲೇಜ್ನ ಬಳಿ ಸಾವಿರಾರು ಜನರು ತಮ್ಮ ಪರವಾದ ವ್ಯಕ್ತಿಗಳ ಫಲಿತಾಂಶವನ್ನು ತಿಳಿಯಲು ತವಕದಿಂದ ಕಾದು ಕುಳಿದಿದ್ದರು, ನೂರಾರು ವಾಹನಹಳು ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ನಿಂತಿದ್ದು ಇಡೀ ದಿನ ಪಟ್ಟಣದ ಹೈಸ್ಕೂಲ್ ಆವರಣ ಹಾಗೂ ಕಾಲೇಜ್ ಆವರಣ ಜನ ಜಂಗುಳಿಯಿಂದ ಕೂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರು ಅದು ಜನರ ಜಯಘೋಷಣೆಗೆ ಹಾಗೂ ಮೆರವಣಿಗೆಗೆ ಯಾವುದೇ ಕೆಡಕನ್ನು ಉಂಟು ಮಾಡಿರಲಿಲ್ಲ.
ರಾತ್ರಿ 10.45 ಆದರೂ ಇನ್ನೂ ಯಳನಡು ಗ್ರಾ.ಪಂ.ಯ ತಮ್ಮಡಿಹಳ್ಳಿ ಕ್ಷೇತ್ರ ಮತ ಎಣಿಕೆ ನಡೆಯುತ್ತಲೇ ಇತ್ತು.
ಚುನಾವಣೆ ಶಾಂತ ರೀತಿಯಲ್ಲಿ ಸುವ್ಯವಸ್ಥಿತವಾಗಿ ನಡೆಯಿತು, ಚುನಾವಣೆಯ ನೇತೃತ್ವವನ್ನು ವಹಿಸಿದ್ದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಹಾಗೂ ಸಿ.ಪಿ.ಐ, ಪಿ.ರವಿ ಪ್ರಸಾದ್ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗ ಚುನಾವಣೆ ಯಶಸ್ವಿಯಾಗಲು ಸಾಕಷ್ಟು ಶ್ರಮಿಸಿದೆ.
Friday, May 14, 2010
Monday, May 10, 2010
ಮತಪೆಟ್ಟಿಗೆಗಳಿದ್ದ ಭದ್ರತಾಕೊಠಡಿಗೆ ನಿಯೋಜನೆಗೊಂಡಿದ್ದ ಎ.ಎಸೈ.ಸಾವು
ಚಿಕ್ಕನಾಯಕನಹಳ್ಳಿ,ಮೇ.9: ಮತಪೆಟ್ಟಿಗೆ ಇಟ್ಟಿದ್ದ ಭದ್ರತಾ ಕೊಠಡಿಯನ್ನು ಕಾಯಲು ನಿಯೋಜಿಸಿದ್ದ ಹುಳಿಯಾರು ಎ.ಎಸೈ. ಈರಮರಿಯಪ್ಪ(55) ಕರ್ತವ್ಯ ನಿರ್ವಹಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ತಾಲೂಕಿನ ಗ್ರಾ.ಪಂ. ಚುನಾವಣೆಯ ಮತಪೆಟ್ಟಿಗೆಯನ್ನು ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಈಡಲಾಗಿತ್ತು, ಇದರ ಭದ್ರತಾ ವ್ಯವಸ್ಥೆಗಾಗಿ ಹುಳಿಯಾರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹುಳಿಯಾರಿನ ಎಸೈ.ಪಾವತಮ್ಮ ಹಾಗೂ ಎ.ಎಸೈ.ಈರಮರಿಯಪ್ಪನವರು ಭಾನುವಾರ ಭದ್ರತಾ ಕೊಠಡಿಯಲ್ಲಿದ್ದರು, ಬೆಳಗಿನ 9ರ ಸುಮಾರಿಗೆ ಈರಮರಿಯಪ್ಪನವರು ಹೃದಯಾಘಾತದಿಂದ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ನೀಡುವ ಮೊದಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ. ಶಿವರುದ್ರಸ್ವಾಮಿ, ವೃತ್ತ ನಿರೀಕ್ಷಕ ಪಿ.ರವಿಪ್ರಸಾದ್ ಆಸ್ಪತ್ರೆಗೆ ಆಗಮಿಸಿ ಕಳೆ ಬರಹವನ್ನು ಈರ ಮರಿಯಪ್ಪನವರ ಸ್ವಂತಃ ಸ್ಥಳವಾದ ಶಿರಾ ತಾಲೂಕಿನ ರತ್ನಸಂದ್ರಕ್ಕೆ ಕಳುಹಿಸಿದರು. ಇವರು ಇಲಾಖೆಯಲ್ಲಿ 33 ವರ್ಷ ಸೇವೆಸಲ್ಲಿಸಿದ್ದರು. ಪತ್ನಿ, ಮಕ್ಕಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.
ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷರಿಗೆ ಮಾತೃ ವಿಯೋಗ
ಚಿಕ್ಕನಾಯಕನಹಳ್ಳಿ,ಮೇ.9: ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ, ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿ.ಟಿ.ವರದರಾಜು ರವರ ತಾಯಿ ನಾಗಮ್ಮ(72) ಸಾವನ್ನಪಿದ್ದಾರೆ.
ತಾಲೂಕು ದೇವಾಂಗ ಸಂಘದ ಮಾಜಿ ಅಧ್ಯಕ್ಷರಾದ ಕೆ.ಟಿ.ತಿಮ್ಮರಾಯಪ್ಪನವರ ಪತ್ನಿ ನಾಗಮ್ಮನವರು ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ.
ಇವರಿಗೆ ನಾಲ್ಕು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ನಾಲ್ಕು ಗಂಡು ಮಕ್ಕಳಲ್ಲಿ ಸಿ.ಟಿ.ವರದರಾಜು ಹಿರಿಯ ಮಗನಾದರೆ, ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿರುವ ಸಿ.ಟಿ.ಕೋದಂಡರಾಮಯ್ಯ, ಬಾದಮಿ ಬನಶಂಕರಿ ಹಾಡರ್್ವೇರ್ನ ಮಾಲೀಕ ಸಿ.ಟಿ.ಪಾಂಡುರಾಜ್ ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ರೈಸ್ ಮೀಲನ ಮಾಲೀಕ ಸಿ.ಟಿ.ಜಗಧೀಶ್ ಸೇರಿದಂತೆ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ತಾಲೂಕು ದೇವಾಂಗ ಸಂಘ, ಪಟ್ಟಣದ ಬಯಲಾಟ ಕಲಾವಿದರ ಸಂಘವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು.
ಬಹುತೇಕ ಶಾಂತ ಸ್ಥಿತಿ: ಶೇ.85 ರಷ್ಟು ಮತದಾನ
ಚಿಕ್ಕನಾಯಕನಹಳ್ಳಿ,ಮೇ.9: ತಾಲೂಕಿನ ಗ್ರಾಮ ಪಂಚಾಯ್ತಿ ಮತದಾನದ ಸಂದರ್ಭದಲ್ಲಿ ಸಣ್ಣ ಪುಟ್ಟ ಗಲಾಟೆಗಳು, ಲಘು ಲಾಠಿ ಪ್ರಹಾರ, ಮತ ಕೇಂದ್ರ ಒಂದರಲ್ಲಿ ಬ್ಯಾಲೇಟ್ ಪೇಪರ್ ಹರಿದು ಹಾಕಿರುವುದು ಬಿಟ್ಟರೆ ಬಹುತೇಕ ಶಾಂತವಾಗಿ ನಡೆದಿದೆ. ತಾಲೂಕಿನಲ್ಲಿ ಒಟ್ಟು ಶೇ.85 ಮತದಾನ ನಡೆದಿದೆ.
ತಾಲೂಕಿನ 28 ಗ್ರಾ.ಪಂ.ಗಳಲ್ಲಿ 484 ಸ್ಥಾನಗಳಿಗೆ 1527 ಅಬ್ಯಾಥರ್ಿಗಳು ಅದೃಷ್ಟ ಪರೀಕ್ಷೆಗೆ ಒಡ್ಡಿದ್ದ ಈ ಚುನಾವಣೆ, ಬಹುತೇಕ ಗ್ರಾಮೀಣ ಜನರ ಕುತೂಹಲಕ್ಕೆ ಕಾರಣವಾಗಿದೆ. ಬೆಳಗಿನಿಂದಲೇ ಚುರುಕುಗೊಂಡಿದ್ದ ಇಲ್ಲಿನ ಮತದಾರರು ಮಧ್ಯಾಹ್ನ 12ರವೇಳೆಗೆ ಶೇ.60ರಷ್ಟು ಮತದಾನವನ್ನು ಪೂರ್ಣಗೊಳಿಸಿದ್ದರು.
ಪತ್ರಿಕೆ ತಾಲೂಕಿನ ಹಲವು ಮತಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ಹಲವು ವಿಷಯಗಳ ಪೈಕಿ ಕಾತ್ರಿಕೆಹಾಳ್ನಲ್ಲಿ ಮತದಾರರ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಸಹಿ ಹಾಕಿಸಿತ್ತಾ ಕೂತರೆ ತಡೆವಾಗುತ್ತದೆ ಎಂಬ ನಿಲುವಿನಿಂದ ಅಲ್ಲಿನ ಪಿ.ಆರ್.ಓ. ಮತದಾರರ ಹೆಬ್ಬೆಟ್ಟಿನ ಗುರ್ತನ್ನು ಹಾಕಿಸಿಕೊಳ್ಳುತ್ತಿದ್ದರು, ರಾಮನಹಳ್ಳಿಯಲ್ಲಿ ಸುವರ್ಣಮ್ಮ ಎಂಬ ವಯೋವೃದ್ದಿಯನ್ನು ಮತಕೇಂದ್ರಕ್ಕೆ ಕರೆದುಕೊಂಡು ಬಂದ ಫಾಲಾಕ್ಷಯ್ಯ ಎಂಬವರು, ಪಿ.ಆರ್.ಓ ಜೊತೆ ಅನುಚಿತವಾಗಿ ವತರ್ಿಸಿ, ವಾಗ್ವಾದಕ್ಕೆ ಇಳಿದ ಸಂದರ್ಭದಲ್ಲಿ ಮತಪತ್ರವನ್ನೇ ಹರಿದು ಹಾಕಿರುವ ಘಟನೆ ವರದಿಯಾಗಿದೆ, ತಿಮ್ಮನಹಳ್ಳಿಯ ಬ್ಲಾಕ್ ಎರಡರಲ್ಲಿ ಮತಗಟ್ಟೆ ಅಧಿಕಾರಿಗಳು ಮಧ್ಯಾಹ್ನ ಊಟಕ್ಕಾಗಿ ಮತಕೇಂದ್ರದ ಬಾಗಿಲು ಮುಚ್ಚಿ ಊಟ ಮುಗಿಸಿಕೊಂಡ ನಂತರ ಮತದಾನದ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ತಿಮ್ಮನಹಳ್ಳಿಯ ಬ್ಲಾಕ್ 1 ಮತ್ತು 2 ಮತ ಕೇಂದ್ರವಿದ್ದ ಸ.ಮಾ.ಹಿ.ಪ್ರಾ.ಶಾಲೆಯ ಒಳಗೆ ಗುಂಪೊಂದು ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಚದುರಿಸಲು ಲಘುಲಾಠಿ ಪ್ರಹಾರ ನಡೆಸಿದ್ದಾರೆ, ಹಾಲುಗೊಣ, ಗೌರಸಾಗರ, ಮುದ್ದೇನಹಳ್ಳಿ, ಬಂಗಾರಗೆರೆ,ಮೇಲನಹಳ್ಳಿ, ಅಣೇಕಟ್ಟೆ, ಅರಳೀಕೆರೆ, ದಿಬ್ಬದಹಳ್ಳಿಗಳಲ್ಲಿ ಮತದಾರ ಸಂಖ್ಯೆ ಹೆಚ್ಚಿದ್ದರಿಂದ ಕೆಲ ಸಮಯ ಗೊಂದಲವೇರ್ಪಟಿದ್ದು ಬಿಟ್ಟರೆ ಬಹುತೇಕ ಶಾಂತವಾಗಿ ಮತದಾನ ನಡೆದಿದೆ.
ಕಾತ್ರಿಕೆಹಾಳ್ನ ನಾಗಯ್ಯನ ಸಾವಿಗೆ ಕಾರಣವೇನು ?: ಕಾತ್ರೆಕೆಹಾಳ್ನ ನಾಯಕರ ನಾಗಯ್ಯ ಚುನಾವಣೆಯ ಮದ್ಯ ಕುಡಿದು ಬಾಯಿ, ಮೂಗಿನಲ್ಲಿ ರಕ್ತಕಾರಿಕೊಂಡು ಸಾವನ್ನಪ್ಪಿದ್ದಾನೆ, ಮೃತ ದೇಹವನ್ನು ಸುಡಲಾಗಿದೆ. ಇದರಿಂದ ಇಲ್ಲಿನ ಕೆಲವು ಜನರು ನಕಲಿ ಮದ್ಯದಿಂದ ನಾಗಯ್ಯ ಸಾವನ್ನಪ್ಪಿದ್ದಾನೆ ಎಂದರೆ, ಇನ್ನೂ ಕೆಲವು ಜನ ಆತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ ಎನ್ನುತ್ತಾರೆ. ಸರಿಯಾದ ಕಾರಣ ತಿಳಿಯಬೇಕಾಗಿದ್ದರೆ ಶವ ಪರೀಕ್ಷೆ ಮಾಡಿಸಿದ್ದರೆ ಸ್ಪಷ್ಟ ಕಾರಣ ತಿಳಿಯುವುದು ಆದರೆ ಹಾಗಾಗದೆ ಶವಕ್ಕೆ ಅಗ್ನಿ ಸ್ಪರ್ಶ ಮಾಡಿದ್ದರಿಂದ ಈ ಸಾವು ಚಚರ್ೆಗೆ ಗ್ರಾಸವಾಗಿದೆ.
ಬಿ.ಸಿ.ಎಂ. ವಸತಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.08: ತಾಲೂಕಿನಲ್ಲಿರುವ ಬಿ.ಸಿ.ಎಂ ವಿದ್ಯಾಥರ್ಿ ನಿಲಯಗಳಿಗೆ 2010-11ನೇ ಸಾಲಿನ ಪ್ರವೇಶಕ್ಕಾಗಿ ಆಸಕ್ತಿಯುಳ್ಳ ವಿದ್ಯಾಥರ್ಿಗಳಿಂದ ಅಜರ್ಿಯನ್ನು ಆಹ್ವಾನಿಸಲಾಗಿದೆ ಎಂದು ಪ್ರಭಾರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಟೌನ್, ಹುಳಿಯಾರು, ತಿಮ್ಮನಹಳ್ಳಿ, ಕಂದಿಕೆರೆ, ಹೊಯ್ಸಳಕಟ್ಟೆ, ಬೆಳುಗುಲಿ ಮೆಟ್ರಿಕ್ ಪೂರ್ವ ಬಾಲಕರ ಅನುದಾನಿತ ವಿದ್ಯಾಥರ್ಿ ನಿಲಯಗಳಲ್ಲಿ ಅಜರ್ಿಗಳನ್ನು ಆಹ್ವಾನಿಸಿದ್ದು ಅಜರ್ಿಯನ್ನು ಸಂಬಂದಿಸಿದ ವಿದ್ಯಾಥರ್ಿ ನಿಲಯದ ಮೇಲ್ವಿಚಾರಕರುಗಳಿಂದ ಪಡೆದು ಜೂನ್ 10ರ ಸಂಜೆ 5ಗಂಟೆಯೊಳಗೆ ಮೇಲ್ವಿಚಾರಕರುಗಳಿಗೆ ಸಲ್ಲಿಸುವುದು.
ಅಜರ್ಿಸಲ್ಲಿಸುವವರು ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಮಾತ್ರ ಈ ಪ್ರವೇಶ ಕಲ್ಪಿಸಲಾಗಿದ್ದು ಉಚಿತ ಊಟ, ಸಮವಸ್ತ್ರ, ಲೇಖನ ಸಾಮಗ್ರಿ, ಹಾಸಿಗೆಹೊದಿಕೆ, ನುರಿತ ಅಧ್ಯಾಪಕರಿಂದ ಟ್ಯೂಶನ್ ನೀಡಲಾಗುವುದು ಮತ್ತು ಅನುದಾನಿತ ವಿದ್ಯಾಥರ್ಿನಿಲಯಗಳಲ್ಲಿ ಉಚಿತ ಊಟ, ವಸತಿ ಮಾತ್ರ ನೀಡಲಾಗುತ್ತದೆ. ಮತ್ತು ಸೇರ ಬಯಸುವ ವಿದ್ಯಾಥರ್ಿಗಳು ತಮ್ಮ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರವರ್ಗ 11ಎ, 11ಬಿ, 111ಎ, 111ಬಿ ಗುಂಪಿಗೆ ಸೇರಿದ ವಿದ್ಯಾಥರ್ಿಗಳಿಗೆ ವಾಷರ್ಿಕ ರೂ 15000ಸಾವಿರ ಆದಾಯ ಮಿತಿ ಇದ್ದು ಪ್ರವರ್ಗ1 ಹಾಗೂ ಪರಿಶಿಷ್ಠ ಜಾತಿ, ಪಂಗಡದ ವಿದ್ಯಾಥರ್ಿಗಳಿಗೆ ಆದಾಯ ಮಿತಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.
Saturday, May 8, 2010
ಜಿ.ಜೆ.ಸಿ.ಯ ಪಿ.ಯು.ಸಿ.ಫಲಿತಾಂಶ ಶೆ.75
Wednesday, May 5, 2010

Monday, May 3, 2010
ಸಂತೆ ಸ್ಥಳವನ್ನು ಬದಲಿಸದಂತೆ ಒತ್ತಾಯಿಸಿ ವರ್ತಕರಿಂದ ಪ್ರತಿಭಟನೆ
Sunday, May 2, 2010
ಬೋರನಕಣಿವೆಗೆ 'ಹೇಮೆ'ಯನ್ನು ಹರಿಸಲು ಕನಿಷ್ಟ 3 ಟಿ.ಎಂ.ಸಿ. ನೀರು ಬೇಕು: ಟಿ.ಬಿ.ಜೆ
ಚಿಕ್ಕನಾಯಕನಹಳ್ಳಿ,ಮೇ.2: ಹೇಮಾವತಿ ನಾಲೆಯಿಂದ ತಾಲೂಕಿನ ಜಲಾಶಯವೆಂದೇ ಹೆಸರು ಪಡೆದಿರುವ ಬೋರನಕಣಿವೆಗೆ ನೀರು ಹರಿಸಬೇಕೇಂದರೆ ಕನಿಷ್ಟ 3ಟಿ.ಎಂ.ಸಿ. ನೀರು ಅಗತ್ಯವಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಹೇಮಾವತಿ ನಾಲೆಯಿಂದ 31 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದ್ದು, ಇದರಲ್ಲಿ ನಾವು ಬಳಸಿಕೊಂಡಿರುವುದು ಕೇವಲ 21 ಟಿ.ಎಂ.ಸಿ.ಮಾತ್ರ, ಉಳಿದ 10 ಟಿ.ಎಂ.ಸಿ.ಯನ್ನು ನಾವು ಬಳಸಿಕೊಳ್ಳಲು ಅವಕಾಶವಿದ್ದು, ಇದನ್ನು ನಾವು ಸರಿಯಾದ ರೀತಿಯಲ್ಲಿ ಸದ್ವಿನಿಯೋಗಿಸಿಕೊಂಡರೆ ಈಗಿರುವ ದೂರಕ್ಕಿಂತ ಇನ್ನೂ 240 ಕಿ.ಮೀ.ಗೂ ಹೆಚ್ಚು ದೂರು ನೀರನ್ನು ತೆಗೆದುಕೊಂಡು ಹೋಗಬಹುದು ಎಂದ ಅವರು, ಆಗ ಕುಣಿಗಲ್ ಒಂದೇ ಏನು ಇಡೀ ಜಿಲ್ಲೆಯ ಬಹುತೇಕ ಭಾಗಕ್ಕೆ ನೀರು ಹರಿಸಬಹದು ಎಂದರಲ್ಲದೆ, ನಾವೀಗ ಉಳಿಕೆ 10 ಟಿ.ಎಂ.ಸಿ.ನೀರನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ ಎಂದರು. ಈ ಬಗ್ಗೆ ಚಿಂತನೆ ನಡೆಸಬೇಕಾಗಿರುವುದು ಈ ಜಿಲ್ಲೆಯ ಶಾಸಕರೆಲ್ಲರ ಕರ್ತವ್ಯ, ಅದನ್ನು ಬಿಟ್ಟು ಅಲ್ಲಿಗೆ ನೀರು ಹರಿಸಬೇಡಿ, ಇಲ್ಲಿಗೆ ನೀರು ಹರಿಸಬೇಡಿ ಎಂದೇಳುವ ಮೂಲಕ ಜಿಲ್ಲೆಯ ಕೆಲವು ಶಾಸಕರು ಜನರನ್ನು ಗೊಂದಲಕ್ಕೆ ಈಡುಮಾಡುತ್ತಿದ್ದಾರೆ ಎಂದರು.
ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಹೇಮಾವತಿಯಿಂದ ಮಂಜೂರಾಗಿರುವ ನೀರಿನ ಪಾಲು ಕೇವಲ 0.06 ಟಿ.ಎಂ.ಸಿ.ಮಾತ್ರ, ಇದರಲ್ಲಿ ಇಲ್ಲಿಯವರು ಬಳಸಿಕೊಂಡಿರುವುದು 0.04 ಟಿ.ಎಂ.ಸಿ.ಮಾತ್ರ ಎಂದ ಅವರು, ಇಲ್ಲೂ ಸಹ 0.02 ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುವಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದರಲ್ಲದೆ, ಕೇವಲ 0.02 ಟಿ.ಎಂ.ಸಿ.ಯನ್ನು ಇಟ್ಟುಕೊಂಡು ಬೋರನಕಣಿವೆಗೆ ನೀರು ಹರಿಸುತ್ತೇವೆಂದು ಹೇಳುವ ಜನರು ನೀರಾವರಿಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದುವುದು ಅಗತ್ಯ ಎಂದರು.
ಈ ಭಾಗಕ್ಕೆ ಒಂದು ಟಿ.ಎಂ.ಸಿ.ಗಿಂತ ಹೆಚ್ಚು ನೀರು ತರುತ್ತೇನೆಂದು ಹೇಳುವ ಹೋರಾಟಗಾರರನ್ನು ಇಲ್ಲಿಯ ಜನ ನಂಬಬೇಕೆ ಹೊರತು ಕೇವಲ 'ಸೊನ್ನೆ ಪಾಯಿಂಟ್ ಸಮತಿಂಗ್' ನೀರು ತರುವೆ ಎನ್ನುವ ಜನರ ಮಾತುಗಳಿಗೆ ಮರುಳಾಗಬೇಡಿ ಎಂದರು.
ಬೋರನಕಣಿವೆಗೆ ಅಗತ್ಯವಿರುವಷ್ಟು ನೀರನ್ನು ನಾವು ಗುಂಡ್ಯಾಯೋಜನೆಯಿಂದ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದ ಅವರು, ಈ ಯೋಜನೆಯ ಬಗ್ಗೆ ಕಸರತ್ತು ಮಾಡಿತ್ತಿದ್ದು, ಈ ಯೋಜನೆಗೆ ಅಗತ್ಯವಿರುವ ರೂಪುರೇಷೆಯನ್ನು ಪೂರ್ಣಗೊಳಿಸದ ನಂತರ ನಾನು ಗುಂಡ್ಯಾಯೋಜನೆಯ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.
ಹೇಮಾವತಿ ನೀರು ಚಿ.ನಾ.ಹಳ್ಳಿ ಹರಿಯುವ ಸಂಬಂಧ ಈ ಹಿಂದೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಕ್ಷಣಕಾಲ ವಿಚಲಿತರಾದಂತೆ ಕಂಡು ಬಂದ ಟಿ.ಬಿ.ಜೆ, ನಾನು ಹೇಳಿರುವುದು ತಿಪಟೂರಿನ ಹೊನ್ನವಳ್ಳಿ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಹಾಗೂ ಕುಣಿಗಲ್ನ ಕೆಲವು ಕೆರೆಗಳಿಗೆ ನೀರು ಹರಿಸಲು ತೊಂದರೆ ಇಲ್ಲಾ ಎಂದರೆ ಚಿ.ನಾ.ಹಳ್ಳಿಗೂ ನೀರು ಹರಿಸಲು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದೇನೆ ಹೊರತು ಬೇರೆ ಅರ್ಥ ಬರುವಂತೆ ಹೇಳಿಲ್ಲವೆಂದು ಸ್ಪಷ್ಟಪಡಿಸಿದರು.
ನನ್ನ ರಾಜಕೀಯ ಜೀವನ ಆರಂಭವಾಗಿ 33 ವರ್ಷ ತುಂಬಿದೆ ಇದರಲ್ಲಿ 20 ವರ್ಷಗಳ ಕಾಲ ನಾನು ನೀರಾವರಿಗಾಗಿಯೇ ಹೋರಾಟ ಮಾಡಿದ್ದೇನೆ. ಈ ತಾಲೂಕಿಗೆ ಹೇಮಾವತಿಯೂ ಬರಲಿ ಹಾಗೂ ಬೇರೆ ಮಾರ್ಗಗಳಿಂದಲೂ ನೀರು ಬರಲಿ ಎಂದು ಹೋರಾಟ ಮಾಡಿದ ಕುರುಹುಗಳು ಹುಳಿಯಾರಿನಲ್ಲಿ ಇನ್ನೂ ಇದೆ ಎಂದರು.
ಹೊಗೆನಿಕಲ್ ಬಗ್ಗೆ ಸಚಿವರಲ್ಲೇ ಗೊಂದಲ: ಈ ರಾಜ್ಯದ ಜಲದ ವಿಷಯದಲ್ಲಿ ಇಲ್ಲಿನ ಸಂಪುಟ ಸಚಿವರಿಗೆ ಸ್ಪಷ್ಟ ಅರಿವಿಲ್ಲ ಎಂದ ಟಿ.ಬಿ.ಜಯಚಂದ್ರ, ಗೃಹ ಸಚಿವರು ಒಂದರೀತಿಯ ಹೇಳಿಕೆ ನೀಡುತ್ತಾರೆ, ಜಲ ಸಂಪನ್ಮೂಲ ಸಚಿವರು ಮತ್ತೊಂದು ರೀತಿಯ ಹೇಳಿಕೆ ನೀಡುತ್ತಾರೆ ಎಂದ ಅವರು, ಸುಪ್ರಿಂ ಕೋಟರ್್ನಲ್ಲಿ ಇರುವ ವಿಷಯದ ಬಗ್ಗೆ ವಿಭಿನ್ನವಾದ ಹೇಳಿಕೆ ನೀಡಿ ಗೊಂದಲವನ್ನು ಏರ್ಪಡಿಸುವ ಈ ರಾಜ್ಯದ ಸಚಿವರುಗಳಿಗೆ ಇದರ ಪರಿಣಾಮ ಏನಾಗುತ್ತದೆ ಎಂದು ಜವಬ್ದಾರಿ ಸ್ಥಾನದಲ್ಲಿರುವವರಿಗೆ ತಿಳಿಯುವುದಿಲ್ಲವೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ಮುಖಂಡ ಕಿಬ್ಬನಹಳ್ಳಿ ಮಹಾಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದ
Saturday, May 1, 2010
28 ಗ್ರಾ.ಪಂನಲ್ಲಿನ 484 ಸ್ಥಾನಕ್ಕೆ 1527 ಮಂದಿ ಕಣದಲ್ಲಿ: 14 ಮಂದಿ ಅವಿರೋಧ
Friday, April 30, 2010
Tuesday, April 27, 2010
ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನೆ ಮನಜ: ಡಾ.ಹಮೀದ್
Monday, April 26, 2010
'ಸುಡುಗಾಡು ಸಿದ್ದ'ರಿಂದ ಗ್ರಾ. ಪಂ.ಚುನಾವಣಾ ಬಹಿಷ್ಕಾರ......?!
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಏ.26: ತಾಲೂಕಿನ ನೂರಕ್ಕೂ ಹೆಚ್ಚಿನ ಸುಡಗಾಡು ಸಿದ್ದರ ಕುಟುಂಬಗಳು ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿವೆ.
ಕಳೆದ ಇಪ್ಪತ್ತು ವರ್ಷಗಳಿಂದ ನಾವು ಸಕರ್ಾರಕ್ಕೆ ನಿವೇಶನ ಕೊಡುವಂತೆ ಕೋರಿ ಸಲ್ಲಿಸಿದ ಮನವಿಗೆ ಪುರಸ್ಕಾರ ಸಿಕ್ಕಿಲ್ಲ ಹಾಗೂ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿರ್ಲಕ್ಷ ವಹಿಸಿವೆ, ನಮ್ಮ ಬೇಡಿಕೆ ಪೂರೈಸದ ಜನರಿಗೆ ನಾವೇಕೆ ಓಟು ಹಾಕಬೇಕು ಎಂಬ ನಿಲುವನ್ನು ವ್ಯಕ್ತ ಪಡಿಸುವ ಈ ಜನರು, ಕಳೆದ ಇಪ್ಪತ್ತು ವರ್ಷಗಳಿಂದ ಸಕರ್ಾರಿ ಜಮೀನಿನಲ್ಲೇ ಗುಡಿಸಲುಗಳನ್ನು ಹಾಕಿಕೊಂಡಿದ್ದು, ಈ ಸ್ಥಳಗಳನ್ನೇ ನಮಗೆ ಮಂಜೂರ ಮಾಡಿಕೊಡುವಂತೆ ಕೋರಿ ರಾಜ್ಯಪಾಲರಿಂದ ಹಿಡಿದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ವರೆಗೆ ಎಲ್ಲರಿಗೂ ಅಜರ್ಿ ಕೊಟ್ಟರೂ ನಮ್ಮ ಕೆಲಸವಾಗಿಲ್ಲ ಎಂದು ದೂರಿದ್ದಾರೆ.
ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಬೆಣ್ಣೆಯಂತಹ ಮಾತುಗಳನ್ನು ಹಾಡಿಕೊಂಡು ನಮ್ಮ ಬಳಿ ಬರುವ ಅಭ್ಯಾಥರ್ಿಗಳಿಗೆ ಈ ಭಾರಿ ನಾವು ಎಷ್ಟು ಮುಖ್ಯರು ಎಂಬುದನ್ನು ತೋರಿಸುವ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ.
ತಾಲೂಕಿನ ಕಾತ್ರಿಕೆಹಾಳ್, ಸಿಂಗದಹಳ್ಳಿ, ಕೇದಿಗೆಹಳ್ಳಿ ಪಾಳ್ಯದ ಗುಂಡು ತೋಪು ಹಾಗೂ ಹೊಯ್ಸಲಕಟ್ಟೆಗಳಲ್ಲಿ ವಾಸಿಸುವ ಈ ಜನಾಂಗದವರು ಕಳೆದ 20 ವರ್ಷಗಳಿಂದ ಒಂದೇ ಕಡೆ ನೆಲೆಸಿದ್ದು ಸ್ಥಳೀಯ ತೋಟಗಳಲ್ಲಿ ಹಾಗೂ ಹೋಲಗಳಲ್ಲಿ ಕೃಷಿ ಕಾಮರ್ಿಕರ ಕೆಲಸವನ್ನು ಮಾಡುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಈ ಜನರು, ನಾವು ಕಳೆದ 20 ವರ್ಷಗಳಿಂದ ನಿಗಧಿತ ಸ್ಥಳದಲ್ಲಿ ವಾಸಿಸುತ್ತಿದ್ದೇವೆ ಎಂಬುದಕ್ಕೆ ವಾಸಸ್ಥಳ ಧೃಡೀಕರಣ ಪತ್ರವನ್ನು ಇದೇ ಸ್ಥಳೀಯ ಸಂಸ್ಥೆಗಳು ನೀಡಿವೆ. ಆದರೆ ಉಚಿತ ನಿವೇಶನವನ್ನು ಮಾತ್ರ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕಳೆದ 15 ವರ್ಷಗಳಿಂದ ಅಲೆದಾಟವನ್ನು ಆರಂಭಿಸಿದ್ದು, ನೂರಾರು ಬಾರಿ ಅಜರ್ಿ ಸಲ್ಲಿಸಿದ್ದೇವೆ, ಅಜರ್ಿ ಸಲ್ಲಿಸಿದ್ದಕ್ಕೆ ದಾಖಲೆಗಳನ್ನು ಇಟ್ಟು ಕೊಂಡಿದ್ದೇವೆ ಎನ್ನುವ ಗೌರಮ್ಮ, ಜೋಪಡಿಗಳಲ್ಲಿ ವಾಸ ಮಾಡುವ ನಾವು ನಿದ್ರೆಯಲ್ಲೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಮಲಗಬೇಕಾದ ಸಂದರ್ಭಗಳೂ ಉಂಟು, ಕಾರಣ ನಾವು ಜೀವಿಸುವುದು ಹಾವು, ಜೇಳು, ಮಂಡ್ರಗಪ್ಪೆಗಳು ವಾಸ ಮಾಡುವ ಜಾಗದಲ್ಲಿ, ಅವು ನಮ್ಮ ಪ್ರಾಣಕ್ಕೆ ಯಾವಾಗ ಬೇಕಾದರೂ ಸಂಚಕಾರ ತರಬಲ್ಲವು ಎನ್ನುವ ಸಿಂಗದಹಳ್ಳಿ ಮಾರಯ್ಯ, ಈ ಬಾರಿ ಜೋರಾದ ಗಾಳಿಯೊಂದಿಗೆ ಮಳೆ ಬಂದಂತಹ ಸಂದರ್ಭದಲ್ಲಂತೂ ಜೀವವೇ ಬಾಯಿಗೆ ಬಂದಂತಾಯಿತು ಎನ್ನುವ ಮೂಲಕ ಭಾವೋದ್ವೇಗಕ್ಕೆ ಒಳಗಾಗುತ್ತಾರೆ.
ಹೆಂಚು, ಶೀಟುಗಳಿರುವ ಮನೆಗಳೇ ಈ ಮಳೆಯಲ್ಲಿ ಅಧ್ವಾನವಾಗಿ ಹೋಗಿರುವಾಗ, ನಮ್ಮ ಗುಡಿಸಲುಗಳ ಸ್ಥಿತಿ ಹೇಗಾಗಿರಬೇಕೆಂಬುದನ್ನು ನೀವೇ ಊಹಿಸಿಕೊಳ್ಳಿ ಎನ್ನುವ ಕಾತ್ರಿಕೆಹಾಳ್ನ ಶಂಕ್ರಯ್ಯ, ನಮಗೆ ನಿವೇಶನ ನೀಡಿ, ಆಶ್ರಯ ಮನೆಯಲ್ಲಿ ಅವಕಾಶ ಕಲ್ಪಿಸಿ ಎಂದು ಹಲವು ಸಲ ಅಲವತ್ತುಕೊಂಡರೂ ನಮ್ಮ ಬಗ್ಗೆ ಕರುಣೆ ತೋರದ ಜನಪ್ರತಿನಿಧಿಗಳಿಗೆ ನಾವೇಕೆ ಓಟು ಹಾಕಬೇಕು, ನಮ್ಮ ಕಷ್ಠಕ್ಕೆ ಯಾರು ಸ್ಪಂಧಿಸುತ್ತಾರೆ, ನಮ್ಮ ಬೇಡಿಕೆಗಳನ್ನು ಯಾರು ಈಡೇರಿಸಿಯೇ ತೀರುತ್ತೇವೆಂದು ನಮ್ಮ ಬಳಿಗೆ ಬರುವವರೆಗೆ ನಾವು ಚುನಾವಣೆಗಳಲ್ಲಿ ಭಾಗವಹಿಸಬಾರದೆಂಬ ನಿಧರ್ಾರಕ್ಕೆ ಬಂದಿದ್ದೇವೆ ಎಂದು ಕಾತ್ರಿಕೆಹಾಳ್ನ ಅಂಬಿಕಾ ಹೇಳುತ್ತಾರೆ.
ನಾವು ಅಧಿಕೃತವಾಗಿ ಸಕರ್ಾರಿ ಕಛೇರಿಗೆ 1995ರಿಂದಲೂ ಅಜರ್ಿ ಸಲ್ಲಿಸುತ್ತಲೇ ಬಂದಿದ್ದೇವೆ ಎಂದು ದಾಖಲೆ ಸಮೇತ ತೋರಿಸುವ ಇವರು, ಕಳೆದ ಡಿಸೆಂಬರ್ 14 ರಂದು ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಾಜ್ಯಪಾಲರಿಗೂ ಮನವಿ ಪತ್ರವನ್ನು ನೀಡಿದ್ದು, ಈ ಸಂಬಂಧ ರಾಜ್ಯಪಾಲರು ಸಹ ಸಕರಾತ್ಮಕವಾಗಿ ಸ್ಪಂದಿಸಿ ಜಿಲ್ಲಾಧಿಕಾರಿಗಳಿಗೆ ಡಿ.17 ರಂದೇ ಪತ್ರ ಬರೆದಿದ್ದಾರೆ ಆದರೂ ಸಹ ಪ್ರಯೋಜನವಾಗಿಲ್ಲ ಎನ್ನುವ ಗುಂಡುತೋಪಿನ ವೆಂಕಟೇಶ್, ರಾಜ್ಯಪಾಲರಿಗೆ ಅಜರ್ಿ ಕೊಟ್ಟ ನಂತರ ನಮಗೆ ನಾವೀಗಿರುವ ಸ್ಥಳದಿಂದ ಎತ್ತಂಗಡಿ ಮಾಡುವಂತೆ ತಹಶೀಲ್ದಾರ್ ನೋಟೀಸ್ ನೀಡಿದ್ದಾರೆ ಎಂದು ಮಮ್ಮಲಮರುಗುವ ವೆಂಕಟೇಶ್, ನಾವು ಈ ದೇಶದ ಪ್ರಜೆಯೇ ಅಲ್ಲವೇ, ನಮಗೆ ಇಲ್ಲಿ ವಾಸಿಸುವ ಹಕ್ಕೇ ಇಲ್ಲವೆ, ನಾವೇನು ಯಾರದೊ ಖಾಸಗಿ ಸ್ವತ್ತಿನಲ್ಲಿ ವಾಸ ಮಾಡುತ್ತಿಲ್ಲ ಎಂದು ಕಣ್ಣಂಚಲಿ ನೀರು ತುಂಬಿಕೊಂಡು ಮಾತನಾಡುವ ವೆಂಕಟೇಶ್, ಈ ಜಾಗ ಗುಂಡಿಗೊಟರುಗಳಿಂದ ಕೂಡಿದ್ದ ಸ್ಥಳ, ಇಲ್ಲಿ ಹಂದಿ-ನಾಯಿ ಮತ್ತಿತರ ಪ್ರಾಣಿಗಳು ವಾಸಿಸುತ್ತಿದ್ದವು, ಅವುಗಳನ್ನೇಲ್ಲಾ ಓಡಿಸಿ ಈಗ ನಾವು ವಾಸಿಸುತ್ತಿದ್ದೇವೆ, ಆ ಪ್ರಾಣಿಗಳು ವಾಸಿಸುತ್ತಿದ್ದಾಗ ಅಧಿಕಾರಿಗಳಿಗೆ ಈ ಜಾಗ ಸಕರ್ಾರಿ ಜಮೀನು ಅನ್ನಿಸರಲಿಲ್ಲವೆ, ಯಾವಾಗ ನಾವು ಇಲ್ಲಿ ಗುಡಿಸಲು ಹಾಕಿಕೊಂಡವೊ ಹಾಗೂ ಈ ಜಾಗದಲ್ಲಿ ನಮಗೂ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿ ಎಂದು ಅಧಿಕಾರಿಗಳನ್ನು ಮನವಿ ಮಾಡಿಕೊಂಡೆವೊ, ಆಗ ಈ ಅಧಿಕಾರಿಗಳಿಗೆ ಇದು ಸಕರ್ಾರಿ ಜಾಗ ಎಂಬ ಸುಳಿವು ಸಿಕ್ಕಿತೇ ಎನ್ನುವ ವೆಂಕಟೇಶ್, ಈ ಸವರ್ೇ ನಂಬರಿನಲ್ಲಿರುವ ಜಾಗದಲ್ಲಿ ಬೇರೆ ಜನಕ್ಕೆ ಹಕ್ಕು ಪತ್ರಗಳನ್ನು ಕೊಡಲು ಸಾಧ್ಯವಾಗಿದೆ, ನಾವು ಕೇಳಿದರೆ ಕೊಡಲು ಇಲ್ಲದ ಕಾನೂನುಗಳನ್ನು ಹೇಳುವ ಈ ಅಧಿಕಾರಿಗಳು ನಮ್ಮಂತಹ ಬಡವರು ಇಲ್ಲಿ ವಾಸ ಮಾಡಲು, ಬದುಕು ಕಟ್ಟಿಕೊಳ್ಳಲು ಅವಕಾಶವಿಲ್ಲವೆ ಎಂದು ಮುಗ್ದವಾಗಿ ಪ್ರಶ್ನಿಸುತ್ತಾರೆ. ಇವರ ಪ್ರಶ್ನೆಗೆ ಉತ್ತರ ಕೊಡಬೇಕಾದ ಜನ ಚುನಾವಣೆಯಲ್ಲಿ ತಮ್ಮ 'ನೆಲೆಯನ್ನು' ಕಂಡುಕೊಳ್ಳಲು ಬ್ಯೂಸಿಯಾಗಿದ್ದಾರೆಯೇ..........?