Thursday, June 9, 2011













ಪಂಚಭೂತಗಳಲ್ಲಿ ಲೀನವಾದ ಪ್ರೊ..ಲಿಂಗದೇವರು ಹಳೆಮನೆಚಿಕ್ಕನಾಯಕನಹಳ್ಳಿ,ಜೂ.9: ಸಾಹಿತ್ಯ ಮತ್ತು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಶ್ರೇಷ್ಠ ಸಾಧನೆಮಾಡಿದ್ದ ರಂಗಾಯಣದ ನಿದರ್ೇಶಕ ಪ್ರೊ.ಲಿಂಗದೇವರು ಹಳೆಮನೆಯವರು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನ ಹೊಂದಿದ್ದು, ಅವರ ಹುಟ್ಟೂರಾದ ಹಾಲುಗೊಣದಲ್ಲಿ ಅವರ ಅಂತ್ಯಸಂಸ್ಕಾರವನ್ನು ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆಸಲಾಯಿತು. ಮೈಸೂರಿನಿಂದ ಹಾಲುಗೊಣಕ್ಕೆ ಗುರುವಾರ ರಾತ್ರಿ ಕರೆತರಲಾಯಿತು, ಗ್ರಾಮದ ಅಂಗನವಾಡಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬೆಳಗ್ಗೆ 7ಕ್ಕೆ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಜೊತೆಯಲ್ಲಿ ಚಿ.ನಾ.ಹಳ್ಳಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್ ಅಂತಿಮ ದರ್ಶನ ಪಡೆದರು. ಮೈಸೂರಿನ ರಂಗಾಯಣದ ವಿದ್ಯಾಥರ್ಿಗಳ ಭಜನೆಯ ನಂತರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಮೃತ ದೇಹವನ್ನು ಶವಸಂಸ್ಕಾರದ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಲಿಂಗದೇವರು ಅವರ ಮನೆಯ ಹಿಂಭಾಗದಲ್ಲಿ ನಡೆದ ಹೊಲದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೆಮನೆ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಂಪಾದಕ ಎಸ್.ನಾಗಣ್ಣ, ಸಿ.ಎಚ್.ಮರಿದೇವರು, ಎಂ.ಬಸವಯ್ಯ, ಹಂಪಿ ವಿ.ವಿ.ಯ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್, ಚಲನಚಿತ್ರ ನಿದರ್ೇಶಕ ಬ್ಯಾಲಕೆರೆ ಲಿಂಗದೇವರು, ಗಾಯಕ ಜನ್ನಿ, ತಾ.ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಆರ್.ಬಸವರಾಜು, ಬಿಳಗೆರೆ ಕೃಷ್ಣಮೂತರ್ಿ,ಎನ್.ಇಂದಿರಮ್ಮ, ರಾಮಕೃಷ್ಣಪ್ಪ ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಸಿ.ಪಿ.ಐ.ರವಿ ಪ್ರಸಾದ್, ಪತ್ರಕರ್ತ ಉಜಜ್ಜಿ ರಾಜಣ್ಣ, ಮಲ್ಲಿಕಾರ್ಜನ ಮೇಟಿ, ಪ್ರೊ.ರಮೇಶ್, ಪ್ರೊ.ಎಚ್.ಎಂ.ಉಮೇಶ್, ಶೋಕ ಸಾಗರದಲ್ಲಿ ಅಭಿಮಾನಿಗಳು: ಮೈಸೂರಿನ ರಂಗಾಯಣದ ಕಲಾವಿದರು, ಸಾಹಿತ್ಯಾಸಕ್ತರು, ರಂಗಶಿಕ್ಷಣಕ್ಕೆಂದು ತರಬೇತಿಗೆ ಬಂದಿದ್ದ ಯುವಕರು, ಲಿಂಗದೇವರು ಅವರ ತಾಯಿ ಬೋರಮ್ಮ, ಪತ್ನಿ ಡಿ.ನಂದಾ, ಮಕ್ಕಳಾದ ಭೂಮಿಕಾ, ನಿಹಾರಿಕ, ತಮ್ಮಂದಿರಾದ ಚಿದಾನಂದ ಮೂತರ್ಿ, ನಟರಾಜ್, ಕುಟುಂಬದವರಾದ ಸುರೇಶ್ ಹಳೆಮನೆ, ನವೀನ ಹಳೆಮನೆ ಸೇರಿದಂತೆ ಹಲವರು ಶೋಕ ಸಾಗರದಲ್ಲಿ ಮುಳುಗಿದ್ದರು. ಸಕರ್ಾರಿ ಪ್ರೌಡಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ70ಸಾವಿರ :ಮೋಹನ್ಕುಮಾರ್ಚಿಕ್ಕನಾಯಕನಹಳ್ಳಿ,ಜೂ.09: ಸಕರ್ಾರಿ ಪ್ರೌಢಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಈ ವರ್ಷ ಪ್ರತಿ ಶಾಲೆಗೆ 70ಸಾವಿರವನ್ನು ಶೀಘ್ರವೇ ನೀಡಲಾಗುವುದು ಎಂದು ಡಿ.ಡಿ.ಪಿ.ಐ ಮೋಹನ್ಕುಮಾರ್ ತಿಳಿಸಿದರು. ಪಟ್ಟಣದ ಬಿ.ಆರ್.ಸಿ. ಕಛೇರಿ ಸಭಾಂಗಣದಲ್ಲಿ ನಡೆದ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಕೊಠಡಿ, ಶೌಚಾಲಯ ಇನ್ನಿತರ ಸೌಕರ್ಯಗಳ ಕೊರತೆಯನ್ನು ಹಂತ-ಹಂತವಾಗಿ ನಿವಾರಿಸುವಲ್ಲಿ ಪ್ರಯತ್ನಿಸುತ್ತೇವೆ. ಶಾಲೆಗಳಿಗೆ ಮಕ್ಕಳ ಜ್ಞಾನವೃದ್ದಿಗಾಗಿ ಗ್ರಂಥಾಲಯಕ್ಕಾಗಿ ಕಳೆದ ವರ್ಷ 10ಸಾವಿರ ನೀಡಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲು ಶಿಕ್ಷಕರು ಗ್ರಾಮಗಳಲ್ಲಿ ಪೋಷಕರ ಸಭೆ ಕರೆದು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬೇಕು, ಪ್ರತಿ 3ಕಿ.ಮೀಗೆ ಪ್ರೌಢಶಾಲೆ, 1ಕಿ.ಮೀಗೆ ಪ್ರಾಥಮಿಕ ಶಾಲೆಗಳಿದ್ದು , ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಮಾಜ ಬೆಳವಣಿಗೆ ಕಾಣುವುದು ಶಿಕ್ಷಕರ ಗಮನಾರ್ಹವಾದ ಕಾರ್ಯವೃತ್ತಿಯಿಂದ, ಸಮಾಜ ತಿದ್ದುವುದು ಹೊಣೆಗಾರಿಕೆ ಶಿಕ್ಷಕರದ್ದು, ಶಿಕ್ಷಕರು ಪ್ರತಿ ಹಂತದಲ್ಲೂ ಪ್ರಾಮಾಣಿಕವಾಗಿ ಶ್ರಮಿಸಿ ಗಾಂಧೀಜಿ ಕಂಡಂತಹ ಕನಸು ಈಡೇರಿಸುವಂತೆ ಪ್ರಯತ್ನಿಸಬೇಕು, ಗ್ರಾಮಗಳ ಮಾಪರ್ಾಡಿನಲ್ಲಿ ಶಿಕ್ಷಕರ ಮಹತ್ವ ಹೆಚ್ಚಾಗಿದೆ ಎಂದ ಅವರು, ಕಡಿಮೆ ಅಂಕ ಪಡೆದ ಶಾಲೆಗಳು ಪ್ರಾರಂಭದಿಂದಲೇ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ನೀಡಿ ಮಕ್ಕಳಲ್ಲಿ ಕೊನೆಗಳಿಗೆಯಲ್ಲಿ ಒತ್ತಡ ಹೇರುವುದನ್ನು ತಪ್ಪಿಸಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಈ ತಾಲ್ಲೂಕಿನಲ್ಲಿ 48 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ರೂಪಗೊಂಡಿದ್ದು, ಇನ್ನೂ 50 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆಯನ್ನು ಶೀಘ್ರವಾಗಿ ನಿಮರ್ಿಸಲಾಗುವುದೆಂದರು. ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಅಂಕಗಳಿಸಲು ದಾರಿ ತೋರಬೇಕು ಎಂದರು.ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು.

Wednesday, June 8, 2011


ನೇಪಥ್ಯಕ್ಕೆ ಸರಿದ ರಂಗಾಯಣದ ಲಿಂಗದೇವರುಚಿಕ್ಕನಾಯಕನಹಳ್ಳಿ,ಜು.08: ಭಾಷಾ ವಿಜ್ಞಾನಿ, ಅಂಕಣಕಾರ, ನಾಟಕಕಾರ, ಅಂತರರಾಷ್ಟ್ರೀಯ ಚಿಂತಕ, ಮೈಸೂರಿನ ರಂಗಾಯಣದ ನಿದರ್ೇಶಕ ಹಾಗೂ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪ್ರೊ.ಲಿಂಗದೇವರು ಹಳೆಮನೆ(62) ಅವರ ನಿಧನಕ್ಕೆ ತಾಲೂಕಿನ ಜನತೆಯ ಪರವಾಗಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ದಾಂಜಲಿ ಅಪರ್ಿಸಿದರು. ತಾಲೂಕು ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ತಾಲೂಕಿನ ಸಾಂಸ್ಕೃತಿಕ ಚೇತನವಾಗಿದ್ದ ಪ್ರೊ.ಲಿಂಗದೇವರು ಅವರು, ತಾವು ಹುಟ್ಟಿದ ನಾಡಿನ ಕೀತರ್ಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತರು ಎಂದು ಬಣ್ಣಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ಮಾತನಾಡಿ, ಸಿ.ಬಿ.ಮಲ್ಲಪ್ಪ, ಬಿ.ಕೆ.ಈಶ್ವರಪ್ಪನ ತಲೆ ಮಾರಿನ ನಂತರದಲ್ಲಿ ರಂಗಭೂಮಿಯಲ್ಲಿ ಹೆಚ್ಚು ಕೆಲಸ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾಟಕ ಕಾರ ಪ್ರೊ.ಲಿಂಗದೇವರು ಹಳೆಮನೆಯನ್ನು ರಂಗಾಯಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರ ಪಡೆಯಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದರು. ಶಿವಮೊಗ್ಗ ಮತ್ತು ಧಾರವಾಡದಲ್ಲಿ ರಂಗಾಯಣದ ಶಾಖೆಯನ್ನು ತೆರೆಯಲು ಸಕರ್ಾರದಿಂದ ಅನುಮೋದನೆ ಪಡೆದಿದ್ದರು ಎಂದರು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್ ನುಡಿ ನಮನ ಸಲ್ಲಿಸಿದರು. ಜಿ.ಪಂ.ಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ಪುರಸಭಾ ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತಿಮಾ ತಾ.ಪಂ.ಸದಸ್ಯೆ ಹೇಮಾವತಿ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ವರದರಾಜು, ಕೃಷ್ಣಮೂತರ್ಿ, ಸೇರಿದಂತೆ ಹಲವು ಸಂಸ್ಥೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಕಣ್ಣಯ್ಯ ನಿರೂಪಿಸಿದರು.
ಪರಿಚಯ: ಪ್ರೊ.ಲಿಂಗದೇವರು ಅವರು, 06.3.1949ರಲ್ಲಿ ಹಾಲುಗೋಣದಲ್ಲಿ ಜನ್ಮವೆತ್ತ ಶ್ರೀಯುತರು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ತಾಯಿ ಬೋರಮ್ಮನವರ ತವರೂರಾದ ಪಂಕಜನಹಳ್ಳಿಯಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣವನ್ನು ಬಿಳಿಗಿರೆಯಲ್ಲಿ ಪೂರೈಸಿದರು, ಪಿ.ಯು.ಸಿ ಹಾಗೂ ಬಿ.ಎ. ಪದವಿಯನ್ನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದರು. 1973ರಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ(ಎಂ.ಎ)ಯನ್ನು ತಮಿಳು ನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಪೂರೈಸಿದ ನಂತರ ಅದೇ ವರ್ಷ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಕ್ಕೆ ಭಾಷಾ ವಿಜ್ಞಾನಿಯಾಗಿ ಸೇರಿದರು. ಈ ಸಂಸ್ಥೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ, 2009ರ ಮಾಚರ್ಿನಲ್ಲಿ ನಿವೃತ್ತಿ ಹೊಂದಿದ್ದರು. 1986ರಲ್ಲಿ ಮೈಸೂರ ವಿ.ವಿ.ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ನಾಲ್ಕು ಚಿನ್ನದ ಪದಕಗಳನ್ನು ಪಡೆದರು. ವಯಸ್ಕರ ಶಿಕ್ಷಣದ ರಾಜ್ಯ ಸಂಪನ್ಮೂಲ ಕೇಂದ್ರದ ನಿದರ್ೇಶಕರಾಗಿದ್ದರಲ್ಲದೆ, ರಾಷ್ಟ್ರೀಯ ಸಾಕ್ಷರತಾ ಮಿಷನಿನ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯ ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮಲೇಶಿಯಾ, ಜರ್ಮನಿ, ಶ್ರೀಲಂಕ ದೇಶಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಕನರ್ಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಡಾ.ಹಾ.ಮಾ.ನಾಯಕ ಅಂಕಣ ಪ್ರಶಸ್ತಿ, ಧಾರವಾಡದ ಶಿಕ್ಷಣ ಸಿರಿ ಪ್ರಶಸ್ತಿ, ಕೆ.ವಿ.ಸುಬ್ಬಣ್ಣ ನಾಟಕ ಪ್ರಶಸ್ತಿ, ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಡ್ಯದ ಜವರಪ್ಪಗೌಡ ಸಮಾಜಮುಖಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತೆ 6 ಕೃತಿಗಳು, 14 ನಾಟಕಗಳು, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಕೃತಿಗಳನ್ನು ಇವರು ಹೊರೆತಂದಿದ್ದರು. ರಂಗಭೂಮಿಗೆ ಸಂಬಂಧಿಸಿದಂತೆ ಮೈಸೂರು ಸಮುದಾಯ ಘಟಕದ ಸ್ಥಾಪಕ ಅಧ್ಯಕ್ಷರಾಗಿದ್ದರಲ್ಲದೆ, ರಂಗಾಯಣದ ಭಾರತೀಯ ರಂಗಶಿಕ್ಷಣದ ಗೌರವ ಪ್ರಾಂಶುಪಾಲರಾಗಿ ನಾಲ್ಕು ವರ್ಷ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ರಂಗಾಯಣದ ನಿದರ್ೇಶಕರಾಗಿದ್ದ ಇವರು, ಚಿಕ್ಕನಾಯಕನಹಳ್ಳಿ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಈ ಸಮ್ಮೇಳನ ಇದೇ 10ರ ಶುಕ್ರವಾರ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಬೇಕಾಗಿತ್ತು.ಶ್ರದ್ದಾಂಜಲಿ: ಶಾಸಕ ಸಿ.ಬಿ.ಸುರೇಶ್ ಬಾಬು, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ, ತಾಲೂಕು ವಕೀಲರ ಸಂಘ ಶ್ರದ್ದಾಂಜಲಿ ಅಪರ್ಿಸಿತು.
ತಾಲ್ಲೂಕಿನ ಸಾಹಿತ್ಯದ ಮಾಣಿಕ್ಯ ಲಿಂಗದೇವರು ಹಳೆಮನೆ : ಎಂ.ವಿ.ಎನ್ಚಿಕ್ಕನಾಯಕನಹಳ್ಳಿ,ಜೂ.08: ಸಾಹಿತಿಯಾಗಿ, ರಂಗಾಯಣದ ನಿದೇಶಕರಾಗ್ಲಿ, ಪತ್ರಕರ್ತರಾಗಿ ತಾಲ್ಲೂಕಿನ ಕೀತರ್ಿಯನ್ನು ಬೆಳಗಿಸಿದ್ದ ಲಿಂಗದೇವರು ಹಳೆಮನೆರವರ ಮರಣದಿಂದ ತಾಲ್ಲೂಕಿಗೆ ತುಂಬಲಾರದ ನಷ್ಠವುಂಟಾಗಿದೆ ಎಂದು ಸಾಹಿತಿ ಹಾಗೂ ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಹೇಳಿದರು.ಪಟ್ಟಣದ ನೆಹರು ಸರ್ಕಲ್ನಲ್ಲಿ ಲಿಂಗದೇವರು ಹಳೆಮನೆರವರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅಪರ್ಿಸಿ ಮಾತನಾಡಿದ ಅವರು ತಾಲ್ಲೂಕಿನ ತೀ.ನಂ.ಶ್ರೀಕಂಠಯ್ಯರವರು, ಸಾ.ಶಿ.ಮರುಳಯ್ಯರವರ ಸಾಲಿಗೆ ಸೇರುವ ಇವರು ಸಾಹಿತ್ಯಾಸಕ್ತಿ, ರಂಗಾಯಣವನ್ನು ಬೆಳಸಿದ ಕೀತರ್ಿ ಸಲ್ಲುತ್ತದೆ ಎಂದರು.ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಲಿಂಗದೇವರು ಹಳೆಮನೆರವರ ಮರಣದಿಂದಾಗಿ ನಮಗೆಲ್ಲರಿಗೂ ಆಘಾತ ಉಂಟಾಗಿದೆ, ಪಟ್ಟಣದಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನಕ್ಕೆ ಹಳೆಮನೆರವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಗಿದ್ದು ಆದರೆ ಅವರ ಮರಣದಿಂದಾಗಿ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಹಳೆಮನೆರವರು ಕಳೆದೆರಡು ವಾರಗಳೀಂದೀಚೆ ನಡೆದಿದ್ದ ರಾಜ್ಯಮಟ್ಟದ ನಾಟಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು, ಇನ್ನೆರಡು ದಿನಗಳಲ್ಲಿ ನಡೆಯಬೇಕಿದ್ದ ಸಮ್ಮೇಳನಕ್ಕೆ ಭಾಗವಹಿಸಲು ಸಿದ್ದರಿದ್ದ ಅವರು ಮೈಸೂರಿನಲ್ಲಿದ್ದರೂ ತಾಲ್ಲೂಕಿನ ಬಗ್ಗೆ ಅಬಿಮಾನವನ್ನು ಹೊಂದಿದ್ದರು ಎಂದರು.ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ಡಾ.ಸುರೇಶ್, ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ತಾ.ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಕೃಷ್ಣೆಗೌಡ ಉಪಸ್ಥಿತರಿದ್ದರು.
ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಚಿಕ್ಕನಾಯಕನಹಳ್ಳಿ,ಜೂ.08:


ತಾಲ್ಲೂಕಿನ ಎಲ್ಲಾ ಸಕರ್ಾರಿ ಅನುದಾನಿತ, ಅನುದಾನ ರಹಿತ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಇದೇ 9ರ ಗುರುವಾರದಂದು ಮಧ್ಯಾಹ್ನ 3ಕ್ಕೆ ಬಿ.ಆರ್.ಸಿ.ಸಭಾಂಗಣದಲ್ಲಿ ಕರೆಯಲಾಗಿದೆ.ಅನ್ಯರನ್ನು ನಿಯೋಜಿಸದೆ ಎಸ್.ಎಸ್.ಎಲ್.ಸಿ ಫಲಿತಾಂಶದ ಪೂರ್ಣ ಮಾಹಿತಿಯೊಂದಿಗೆ ಮುಖ್ಯ ಶಿಕ್ಷಕರು ಖಡ್ಡಾಯವಾಗಿ ಭಾಗವಹಿಸಲು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, June 7, 2011



ಧಾಮರ್ಿಕ, ಆಧ್ಮ್ಯಾತಿಕತೆಯಲ್ಲಿ ಪ್ರಾಮಾಣಿಕತೆ ಇದ್ದರೆ ವಿಶ್ವಶಾಂತಿ :ರಂಭಾಪುರಿ ಶ್ರೀ ಚಿಕ್ಕನಾಯಕನಹಳ್ಳಿ,ಜೂ.07 : ಧಾಮರ್ಿಕ ಆಧ್ಮ್ಯಾತಿಕತೆಯು ಪ್ರಾಮಾಣಿಕವಾಗಿದ್ದರೆ ಧರ್ಮದ ನಿಲುವಿನಲ್ಲಿ ವಹಿಸುವ ಕಾರ್ಯಗಳಿಗೆ ಜಯ ದೊರಕಿ ವಿಶ್ವವು ಶಾಂತಿಯುತವಾಗಿರುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯಸ್ವಾಮಿ ಹೇಳಿದರು.ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಜಾಗೃತಿ ಧಾಮರ್ಿಕ ಸಮಾರಂಭದಲ್ಲಿ ಮಾತನಾಡಿದ ಅವರು ಸತ್ಯಪಾಲನೆ ಮತ್ತು ಅಹಿಂಸಾ ಪಾಲನೆಯಿಂದ ಅಸಾಧ್ಯವಾದುದನ್ನು ಸಾದಿಸಿ ಜಯ ಪಡೆಯಬಹುದು, ಸತ್ಯಪಾಲನೆಯನ್ನು ಬಿಟ್ಟು ಸಮಾಜದ ದಿಕ್ಕುಗಳನ್ನು ಬೇರೆ ರೀತಿಯಲ್ಲಿ ಬದಲಾಯಿಸುತ್ತಿರುವ ಸಮಾಜ ಕಂಟಕರು ಧರ್ಮಗಳ ಆದರ್ಶವನ್ನು ಬೀದಿಗೆ ಹಾಕುತ್ತಿದ್ದಾರೆ, ಸಜ್ಜನರರ ಪ್ರಾಮಾಣಿಕತೆ, ಸತ್ಯ, ಅಹಿಂಸೆಯ ದಾರಿಯನ್ನು ಪಾಲಿಸುವವರು ಇಂದು ಸಮಾಜದಲ್ಲಿ ಮುಂದೆ ಬರುತ್ತಿಲ್ಲ ಎಂದ ಅವರು ನಾಗರೀಕರು, ಹಿರಿಯರು ಕಟ್ಟಿ ಹೋಗಿರುವ ನುಡಿಮುತ್ತುಗಳನ್ನು ಪಾಲಿಸಿ ಆ ತತ್ವಗಳ ಮಾರ್ಗದರ್ಶನಕ್ಕೆ ಬಾಳಬೇಕು ಎಂದರು.ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಾದು ಹೋಗುವ ರಾಜ್ಯದ ಹೆದ್ದಾರಿಯ ಅಭಿವೃದ್ದಿಗೆ 234ಕೋಟಿ ರೂ ಸಕರ್ಾರದಿಂದ ಬಿಡುಗಡೆ ಮತ್ತು ಸಾಸಲು ಗ್ರಾಮದಲ್ಲಿರುವ ಬನಶಂಕರಿ ದೇವಾಲಯದ ನಿಮರ್ಾಣಕ್ಕೆ 5ಲಕ್ಷರೂಗಳನ್ನು ನೀಡಲಾಗುವುದು ಎಂದ ಅವರು ಗುಡಿಸಲು ವಾಸಿಗಳಿಗೆ ನಿವೇಶನ ನೀಡಿ, ಸೂರುಕಟ್ಟುವ ಕಾರ್ಯವನ್ನು ಪಕ್ಷಾತೀತವಾಗಿ ನಿರ್ವಹಿಸುವುದಾಗಿ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಕಳೆದ 3ದಶಕಗಳಿಂದಲೂ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಹೋರಾಟ ನಡೆಸುತ್ತಿದ್ದು, ಗಡಬನಕೆರೆ ಮೂಲಕ ಬೋರನಕಣಿವೆಗೆ, ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಮೂಲಕ ಹುಳಿಯಾರು, ದಬ್ಬೇಘಟ್ಟದಿಂದ ಮೇಲನಹಳ್ಳಿ ಕೆರೆಗೆ ನೀರು ಹರಿಸಲು 106ಕೋಟಿ ರೂ. ಅನುದಾನಕ್ಕೆ ಸಂಪುಟ ಸಚಿವ ಸಭೆಯಲ್ಲಿ ಅನುಮತಿ ದೊರೆಯಬೇಕಿದೆ, ಶುದ್ದ ಕುಡಿಯುವ ನೀರನ್ನು ಜನರಿಗೆ ಒದಗಿಸಲು ರಾಜ್ಯ ಸಕರ್ಾರ ಪ್ರಯತ್ನ ನಡೆಸಿದ್ದು ಈ ಕಾರ್ಯಕ್ಕಾಗಿ 850ಕೋಟಿ ರೂ. ಮಂಜೂರಾಗಿದೆ ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಗುರುವಿನ ಮೂಲಕ ದೇವರನ್ನು ಕಾಣಬೇಕು, ಅವರ ಮಾರ್ಗದರ್ಶನದಂತೆ ಸಮಾಜವನ್ನು ತಿದ್ದಬೇಕು ಎಂದ ಅವರು ಎಲ್ಲಾ ಜಾತಿಯ ಜನಾಂಗದವರು ಒಗ್ಗಟ್ಟಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಷಡಕ್ಷರಮಠದ ರುದ್ರಮುನಿಸ್ವಾಮೀಜಿ ಮಾತನಾಡಿ ಕಲುಷಿತಗೊಳ್ಳುತ್ತಿರುವ ಸಮಾಜವನ್ನು ತಿದ್ದಲು ಲೀನಗೊಳ್ಳದ ಮನಸ್ಸುಗಳು ಮುಖ್ಯವಾಹಿನಿಗೆ ಬರಬೇಕು ಎಂದರು. ಸಮಾರಂಭದಲ್ಲಿ ಡಾ.ಯತೀಶ್ವರಶಿವಚಾರ್ಯಸ್ವಾಮಿ, ಡಾ. ಅಭಿನವಮಲ್ಲಿಕಾಜರ್ುನಸ್ವಾಮಿ, ಮಲ್ಲಿಕಾಜರ್ುನಸ್ವಾಮಿ, ರೇವಣಸಿದ್ದೇಶ್ವರ ಶಿವಚಾರ್ಯಸ್ವಾಮಿ, ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಹಾ.ಒ.ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಬಿ.ಎನ್.ಶಿವಪ್ರಕಾಶ್, ಬಿ.ಎಸ್.ನಟರಾಜು ಉಪಸ್ಥಿತರಿದ್ದರು.

Monday, June 6, 2011









ಬಾಬಾ ರಾಮ್ದೇವ್ರವರ ಬಂಧನ ಖಂಡಿಸಿ ಪ್ರತಿಭಟನೆ ಚಿಕ್ಕನಾಯಕನಹಳ್ಳಿ,

ಜೂ.06: ಕೋಟ್ಯಾಂತರ ರೂಗಳನ್ನು ಸ್ವಿಸ್ಬ್ಯಾಂಕ್ನಲ್ಲಿಟ್ಟು ಸಕರ್ಾರಕ್ಕೆ ತೆರಿಗೆ ಕಟ್ಟದೆ ದೇಶದ ಸಂಪತ್ತನ್ನು ಲೂಟಿ ಹೊಡಯುತ್ತಿರುವವರ ಭ್ರಷ್ಠರ ವಿರುದ್ದ ಬಾಬಾ ರಾಮ್ದೇವ್ರವರು ಶಾಂತಿಯುತವಾಗಿ ಹೋರಾಟ ಮಾಡಿದರೆ ಸಕರ್ಾರ ಗೂಂಡಾ ಸಕರ್ಾರವಾಗಿ ತಿರುಗಿ ಗುರೂಜಿರವರನ್ನು ರಾತ್ರೋರಾತ್ರಿ ಬಂಧಿಸಿರುವುದು ಖಂಡನೀಯ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹೇಳಿದರು.ಪಟ್ಟಣದ ಎಸ್.ಬಿ.ಎಂ. ಬ್ಯಾಂಕ್ ಬಳಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ವತಿಯಿಂದ ಬಾಬಾ ರಾಮ್ದೇವರ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡಸಿದ ಸಂದರ್ಭದಲ್ಲಿ ಮಠಾಧೀಶರು, ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಮಾತನಾಡಿದ ಅವರು ಪ್ರತಿಭಟನೆ ನಡೆಯುತ್ತಿರುವುದು ಯಾವುದೇ ವ್ಯಕ್ತಿ ಅಥವಾ ರಾಜಕಾರಣಿಗಳ ವಿರುದ್ದವಲ್ಲ, ದೇಶದ ಸಂಪತ್ತನ್ನು, ದೇಶದಲ್ಲಿರುವ ಕೆಟ್ಟ ವ್ಯವಸ್ಥೆಯ ವಿರುದ್ದವಷ್ಟೇ ಎಂದ ಅವರು, ಸ್ವಿಸ್ ಬ್ಯಾಂಕ್ನಲ್ಲಿರುವ ಹಣವನ್ನು ತರಲು ಸಕರ್ಾರಕ್ಕೆ ಯಾವುದೇ ಕಾನೂನುಗಳಿಲ್ಲವಾದರೂ ಈ ರೀತಿಯ ವ್ಯವಸ್ಥೆಗೆ ಬೆಂಬಲಿಸುವುದಾದರೂ ಏಕೆ ಎಂದು ಪ್ರಶ್ನಿಸಿದರು. ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಮಾತನಾಡಿ ರಾಮ್ದೇವ್ ಗುರೂಜಿರವರ ಪ್ರತಿಭಟನೆಯು ನಮ್ಮ ಮುಂದಿನ ಯುವಪೀಳಿಗೆಯ ಭವಿಷ್ಯಕ್ಕಾಗಿದೆ, ಭ್ರಷ್ಠಾಚಾರದ ಮೂಲಕ ನಮ್ಮ ದೇಶದ ಸಂಪತ್ತನ್ನು ಕಾಣದೆ ಪರದೇಶದಲ್ಲಿ ಕಾಪಾಡುತ್ತಿವವರ ವಿರುದ್ದ ಬಾಬಾರವರು ಪ್ರತಿಭಟಿಸುತ್ತಿರುವುದು ಸಮಂಜಸವಾಗಿದೆ, ಆದರೆ ಪ್ರಾಮಾಣಿಕವಾಗಿ ಪ್ರತಿಭಟನೆಯ ಪರವಾಗಿ ಹೋರಾಡುತ್ತಿರುವ ಬಾಬಾರವರನ್ನು ಬಂಧಿಸಿರುವುದು ಅಪರಾಧವಾಗಿದೆ ಎಂದರು. ಗೋಡೆಕೆರೆ ಸಿದ್ದರಾಮದೇಶೀಕೇಂದ್ರಸ್ವಾಮಿ ಮಾತನಾಡಿ ಸಂಧಾನದ ಮೂಲಕವಾದರೂ ಅಥವಾ ಮಾಧ್ಯಮದ ಮೂಲಕವಾದರೂ ಪ್ರತಿಭಟನೆಯ ಬಗ್ಗೆ ಸಕರ್ಾರ ಮಾತನಾಡಬಹುದಿತ್ತು ಆದರೆ ಬಾಬಾರವರನ್ನು ಬಂಧಿಸಿರುವುದು ಖಂಡನೀಯ ಎಂದರು. ಮಾದೀಹಳ್ಳಿಯ ಮಲ್ಲಿಕಾಜರ್ುನಸ್ವಾಮಿ ಮಾತನಾಡಿ ಭ್ರಷ್ಠಾಚಾರದ ವಿರುದ್ದ ನಮ್ಮ ನಿಮ್ಮೆಲ್ಲರ ಪಾಲು ಮುಖ್ಯವಾಗಿದೆ ಎಂದರು. ಅಭಾವಿಪ ತಾಲ್ಲೂಕ್ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಭ್ರಷ್ಠಾಚಾರವನ್ನು ಕಿತ್ತೊಗೆಯಲು ಯೋಗಗುರು ಬಾಬಾರಾಮ್ದೇವ್ರವರು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿ ಅವರನ್ನು ಅಮಾನುಷವಾಗಿ ನಡೆಸಿಕೊಂಡಿರುವದು ಮತ್ತು ಅವರ ಬೆಂಬಲಿಗರ ಮೇಲೆ ಲಾಠಿ ಚಾಜರ್್ ಮಾಡಿರುವುದ ಅಕ್ಷಮ್ಯ ಅಪಾರಾದ ಎಂದರು. ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಜಾತಿ ವಿನಾಶವಾಗದಿದ್ದರೆ ಭ್ರಷ್ಠಾಚಾರ ವಿನಾಶವಾಗುವುದಿಲ್ಲ ಈ ಭ್ರಷ್ಠಾಚಾರದ ವಿರುದ್ದ ಹೋರಾಡುತ್ತಿರುವ ಬಾಬಾರಾಮ್ದೇವ್ ಮತ್ತು ಹಜಾರೆಅಣ್ಣರವರಂತೆ ಅನೇಕರು ಮುಂದೆ ಬರಬೇಕು ಎಂದ ಅವರು ಭ್ರಷ್ಠಾಚಾರದಿಂದ ಸ್ವಿಸ್ಬ್ಯಾಂಕ್ಗಳಲ್ಲಿ 500ಲಕ್ಷ ಕೋಟಿ ತೊಡಗಿಸಿರುವ ಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರಿಗೊ 1ಕೋಟಿಯಂತೆ ನೀಡದರೂ ಹೆಚ್ಚಾಗಿ ಉಳಿಯುತ್ತದೆ ಎಂದರುಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಅಭಾವಿಪ ಕಾಯಕರ್ತರಾದ ರವಿಕುಮಾರ್, ಮನು, ವಿಜಯ್, ರವಿ, ನಂದನ್ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Saturday, June 4, 2011






ಬಾಬಾ ರಾಮ್ದೇವ್ರವರಿಗೆ ಬೆಂಬಲ

ಚಿಕ್ಕನಾಯಕನಹಳ್ಳಿ,ಜೂ.04 : ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ಹಿಂದಿರುಗಿ ಪಡೆಯುವುದು, ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಠಾಚಾರವನ್ನು ತಡೆಯುವುದು ವಿದೇಶಿ ಕಾನೂನು ಪದ್ದತಿ ರದ್ದು ಮಾಡುವುದು, ತಪ್ಪಿತಸ್ಥರನ್ನು ಗಲ್ಲಿಗೇರಿಸುವುದು, 500, 1000 ಮುಖ ಬೆಲೆಯ ನೋಟು ಹಿಂದೆ ಪಡೆಯಲು ಒತ್ತಾಯಿಸುತ್ತಿರುವ ಯೋಗ ಗುರು ರಾಮದೇವರ ನಿಲುವು ಸ್ವಾಗತಾರ್ಹ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀನಿವಾಸಮೂತರ್ಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ಭ್ರಷ್ಠರಾಜಕಾರಣಿಗಳು ಕೋಟಿಗಟ್ಟಲೆ ಹಣ ಲೂಟಿ ಮಾಡಿ ವಿದೇಶಿ ಬ್ಯಾಂಕ್ನಲ್ಲಿಟ್ಟಿರುವುದು ಅಕ್ಷಮ್ಯ ಅಪರಾಧ, ಅಂತಹ ಹಣವನ್ನು ಹಿಂದಿರುಗಿ ಪಡೆಯುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ, ಇದೀಗ ಬಾಬ ರಾಮದೇವರವರು, ಅಣ್ಣಾ ಹಜಾರೆರವರು ಈ ನಿಟ್ಟಿನಲ್ಲಿ ಹೋರಾಟ ಕೈಗೊಂಡು ಜನಜಾಗೃತಿ ಮೂಡಿಸುತ್ತಿದ್ದಾರೆ, ದೇಶದ ಪ್ರತಿಯೊಬ್ಬ ಪ್ರಜೆಯೂ ಇವರು ಕೈಗೊಂಡಿರುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೋರಿದ್ದಾರೆ.
ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಚಿಕ್ಕನಾಯಕನಹಳ್ಳಿ,ಜೂ.04: ತಾಲ್ಲೂಕಿನ ಕಂದಿಕೆರೆ ಹೋಬಳಿಯಲ್ಲಿ ಕೃಷಿ, ಐನುಗಾರಿಕೆ, ಜೇನುಸಾಕಾಣೀಕೆ, ಮೀನುಗಾರಿಕೆ, ತೋಟಗಾರಿಕೆಗಳ ಚಟುವಟಿಕೆಗಳಿಗೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆಮಾಡಲಾಯಿತು. ಪರಿಷಿಷ್ಠ ಜಾತಿಯ 46 ಮಹಿಳಾ ಫಲಾನುಭವಿಗಳು, 92 ಮಂದಿ ಪುರಷ ಫಲಾನುಭವಿಗಳು, ಸಾಮಾನ್ಯವರ್ಗದ 68 ಮಹಿಳೆಯರು, 137 ಮಂದಿ ಸಾಮಾನ್ಯ ರೈತ ಫಲಾನುಭವಿಗಳು ಆಯ್ಕೆಗೊಂಡು ಶೇಖಡಾ 10ರ ಅನುಪಾತದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತಾ.ಪಂ.ಸದಸ್ಯೆ ಲತಾ, ಕೆ.ಎಸ್.ಸುಮಿತ್ರಾ, ಉಮಾದೇವಿ, ಇ,ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಆಂಜನಪ್ಪ, ಆನಂದಪ್ಪ, ಸೋಮಶೇಖರ್ ಉಪಸ್ಥಿತರಿದ್ದರು.

ಕಾನ್ವೆಂಟ್ ಶಾಲೆಗಳ ವ್ಯಾಮೋಹ ; ಸಕರ್ಾರಿ ಶಾಲೆಗಳು ಮುಚ್ಚುವ ಸಂಭವಗಳಿಂದ ಚಿಕ್ಕನಾಯಕನಹಳ್ಳಿ,ಜೂ.03: ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ಗಳಿಗೆ ಕಳಿಸುವುದರಿಂದ ಸಕರ್ಾರಿ ಶಾಲೆಗಳನ್ನು ಮುಚ್ಚುವಂತಾಗಿದೆ ಎಂದ ಬಿ.ಇ.ಓ ಸಾ.ಚಿ.ನಾಗೇಶ್ ಕರೆ ನೀಡಿದರು. ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಇಲಾಖೆರವರ ಸಂಯುಕ್ತಾಶ್ರಯದಲ್ಲಿ ನಡೆದ ಮಾಧ್ಯಮ ಮತ್ತು ದಾಖಲೀಕರಣ ಬುಡಕಟ್ಟು ಪ್ರದೇಶದ ಪೋಷಕರ ಜಾಗೃತ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುಡಕಟ್ಟು ಜನಾಂಗ, ಬೋವಿ ಕಾಲೋನಿಗಳ ತಾಂಡಗಳ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಸಕರ್ಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ, ಮಕ್ಕಳಿಗೆ ಉಚಿತ ಊಟ, ಸಮವಸ್ತ್ರ, ಸೈಕಲ್, ವಿದ್ಯಾಥರ್ಿವೇತನ ನೀಡುತ್ತಾ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದೆ ಎಂದರು. ಎ.ಸಿ.ಡಿ.ಪಿ.ಓ ಪರ್ವತಯ್ಯ ಮಾತನಾಡಿ ತಾಲ್ಲೂಕಿನಲ್ಲಿ 1015ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿವೆ, ಮಹಿಳೆಯರು ಜಾಗೃತರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದ ಅವರು ಸ್ತ್ರೀ ಶಕ್ತಿ ಸಂಘಗಳು ಬರೀ ಉಳಿತಾಯ ಮಾಡಿದರೆ ಸಾಲದು ಸಸ್ವಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳನ್ನು ಸ್ತ್ರೀ ಶಕ್ತಿ ಭವನದಲ್ಲಿ ಮಾರಾಟ ಮಾಡಿ ಆಥರ್ಿಕವಾಗಿ ಸದೃಡವಾಗಿ ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಲತಾ, ಡಿ.ವಿ.ಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಖಜಾಂಚಿ ತಿಮ್ಮಯ್ಯ, ಮುಖ್ಯೋಪಾಧ್ಯಾಯ ಮಲ್ಲಿಕಾಜರ್ುನಯ್ಯ ಉಪಸ್ಥಿತರಿದ್ದರು.
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭಚಿಕ್ಕನಾಯಕನಹಳ್ಳಿ,ಜೂ.01: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮತ್ತು ಸನ್ಮಾನ ಸಮಾರಂಭವನ್ನು ಇದೇ ಜೂನ್ 10ರಂದು ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ಕುಪ್ಪೂರಿನ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ಬಾಬು ಸಮ್ಮೇಳನಾಧ್ಯಕ್ಷರಿಗೆ ಗೌರವಾರ್ಪಣೆ ಮಾಡಲಿದ್ದಾರೆ, ನಾಲ್ಕನೆಯ ಕಸಪಾ ಸಮ್ಮೇಳನಾಧ್ಯಕ್ಷ ಲಿಂಗದೇವರು ಹಳೆಮನೆ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದು ಕನರ್ಾಟಕ ಜಾನಪದ ಪರಿಷತ್ ಡಾ.ಚಕ್ಕೆರೆ ಶಿವಶಂಕರ್ ಸಮಾರೋಪ ಭಾಷಣ ಮಾಡಲಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಾಲ್ಲೂಕಿನ ಗಣ್ಯರಾದ ಸಿ.ಎಸ್.ನಾರಾಯಣರಾವ್, ಸಿ.ಕೆ.ಪರುಶುರಾಮಯ್ಯ, ಪ್ರಭಾಕರ್, ಎಂ.ಬಸವಯ್ಯ, ಸಿ.ಎಂ.ಹೊಸೂರಪ್ಪ, ಡಾ.ಕೆ.ಆರ್.ಕಮಲೇಶ್, ಡಾ.ಸಿ.ಎಂ.ಸುರೇಶ್, ಸಿ.ಟಿ.ಮುದ್ದುಕುಮಾರ್, ಬಿ.ಎಸ್.ಲಿಂಗದೇವರು, ರಂಗಸ್ವಾಮಿ, ಸುಶೀಲಮ್ಮ, ಎಂ.ಮಹಾಲಿಂಗಯ್ಯ, ಎಂ.ಚಂದ್ರಶೇಖರ್ರವರಿಗೆ ಸನ್ಮಾನಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿಫಾತೀಮ, ಜಿ.ಹಾ.ಒಕ್ಕೂಟ ಶಿವನಂಜಪ್ಪ ಹಳೇಮನೆ, ಮೈನ್ಸ್ ಅಸೋಸಿಯೇಶನ್ ಎಸ್.ಎ.ನಭಿ, ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಮಾ.ಅ.ಪಿ.ಎಲ್.ಡಿ.ಬ್ಯಾಂಕ್ ಸಿ.ಎಲ್.ಜಯದೇವ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್, ಪತ್ರಕರ್ತ ಎಚ್.ಎನ್.ಮಲ್ಲೇಶ್, ಕಿರುತರೆಯ ನಟಿ ಹೇಮಾಶ್ರೀ ಉಪಸ್ಥಿತರಿರುವರು.

Friday, June 3, 2011

ಸದಸ್ಯರ ಗಮನಕ್ಕೆ ತಾರದೆ ಸಭೆ : ಮುಂದೂಡಲು ಪಟ್ಟು
ಚಿಕ್ಕನಾಯಕನಹಳ್ಳಿ,ಜೂ.3: ಗ್ರಾಮ ಪಂಚಾಯಿತಿ ಪಿಡಿಓಗಳು ಮತ್ತು ಕಾರ್ಯದಶರ್ಿಗಳು ಸದಸ್ಯರ ಗಮನಕ್ಕೆ ತಾರದೆ ಗ್ರಾಮ ಸಭೆಗಳನ್ನು ನಡೆಸುತ್ತಿದ್ದಾರೆ, ಇದರ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಪಿ.ಡಿ.ಓ ಹಾಗೂ ಕಾರ್ಯದಶರ್ಿಗಳನ್ನು ಈ ಸಭೆಗೆ ಕರೆಸುವವರೆಗೆ ಸಭೆಯನ್ನು ಮುಂದೂಡಿ ಎಂದು ತಾ.ಪಂ. ಸದಸ್ಯ ಶಶಿಧರ್ ಪಟ್ಟು ಹಿಡಿದರು.ವಿರೋಧ ಪಕ್ಷದ ಸದಸ್ಯರ ಹಠ ಅಧಿಕಗೊಂಡ ಹಂತದಲ್ಲಿ ಅಧ್ಯಕ್ಷ ಜಿ.ಆರ್.ಸೀತರಾಮಯ್ಯ, ಸಭೆಯನ್ನು ನಡೆಸಿಯೇ ತೀರುತ್ತೇಗೆ, ಬೇಕಾದರೆ ಸಭೆಯಿಂದ ನೀವು ಹೊರಹೋಗಬಹುದು ಎಂದರು, ಇದರಿಂದ ಕುಪಿತರಾದ ತಾ.ಪಂ.ಸದಸ್ಯ ನಿರಂಜನಮೂತರ್ಿ ಹಾಗೂ ಶಶಿಧರ ತೀವ್ರವಾಗಿ ಪ್ರತಿಭಟಿಸಿ, ನಾವು ಹೊರಗೆ ಹೋಗಲು ಬಂದಿಲ್ಲ ನಮ್ಮನ್ನು ಜನ ಅಭಿವೃದ್ದಿ ಕಾರ್ಯ ಮಾಡಲು ಚುನಾಯಿಸಿ ಕಳುಹಿಸಿದ್ದಾರೆ, ಅಧ್ಯಕ್ಷರಿಗೆ ಸಭೆಯಿಂದ ಹೊರಗೆ ಹೋಗಿ ಎನ್ನುವ ಅಧಿಕಾರವಿಲ್ಲ ಎಂದು ಪ್ರತಿಭಟನೆ ಮಾಡಿದರು. ಈ ಮಾತನ್ನು ವಾಪಸ್ ತೆಗೆದುಕೊಳ್ಳಿರಿ ಎಂದು ಒತ್ತಾಯಿಸಿದರು. ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆದು ನಂತರ ಕಾರ್ಯನಿರ್ವಹಣಾಧಿಕಾರಿಗಳು, ಪಿಡಿಓ ಮತ್ತು ಕಾರ್ಯದಶರ್ಿಗಳನ್ನು ಸಭೆಗೆ ಮಧ್ಯಾಹ್ನದ ಸಭೆಗೆ ಕರೆಸುವುದಾಗಿ ಆಶ್ವಾಸನೆ ನೀಡಿದ ನಂತರ ಸಭೆ ಮುಂದುವರಿಯಿತು.ನಂತರ ಇಲಾಖಾವಾರು ಕ್ರಿಯಾ ಯೋಜನಾ ವರದಿಯನ್ನು ತಾಲ್ಲೂಕು ಅಧಿಕಾರಿಗಳು ಸಭೆ ಮಂಡಿಸಿದರು.ಪಿಡಿಓಗಳು ಹಾಗೂ ಕಾರ್ಯದಶರ್ಿಗಳು ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಗೌರವಿಸುವುದಿಲ,್ಲ ಗ್ರಾಮ ಸಭೆಗಳಿಗೆ ಆಹ್ವಾನಿಸುವುದಿಲ,್ಲ ಅಭಿವೃದ್ದಿ ಕಾರ್ಯಗಳ ವಿವರವನ್ನು ಗಮನಕ್ಕೆ ತರದೇ ತಿರಸ್ಕಾರ ಮಾಡುತ್ತಾರೆ, ಕಳೆದ 5ತಿಂಗಳಿನಿಂದ ಪಿಡಿಓಗಳ ಸಭೆಯನ್ನೆ ಕರೆದಿಲ್ಲ, ಮೊದಲು ಸಭೆ ಕರೆಯುವಂತೆ ಒತ್ತಾಯಿಸಿದರು. ಯಾವ ಸಮಯದಲ್ಲೇ ಕಾರ್ಯನಿರ್ವಹಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದರೂ, ನಾನು ಮೀಟಿಂಗ್ನಲ್ಲಿ ಇದ್ದೇನೆ ಎಂದು ಉತ್ತರಿಸುತ್ತಾರೆ, ಮೀಟಿಂಗ್ ಮುಗಿದ ನಂತರ ಸೌಜನ್ಯಕ್ಕಾದರೂ ಪೋನ್ ಮಾಡವುದಿಲ್ಲ್ಲ, ಉದ್ಯೋಗ ಖಾತ್ರಿ ಯೋಜನಾ ಕಾಮಗಾರಿಗಳ ಸ್ಥಳ ತನಿಖೆಗೆ ಹೋಗುವಾಗ ತಾ.ಪಂ.ಸದಸ್ಯರ ಗಮನಕ್ಕೆ ತರದೆ ನಿರ್ಲಕ್ಷ್ಯಸುತ್ತಾರೆ ಎಂದು ಅಪಾದಿಸಿದರು. ದೊಡ್ಡೆಣ್ಣೆಗೆರೆ ಗ್ರಾ.ಪಂ. ಪಿಡಿಓ ರಜಾ ಹಾಕದೇ ಉದ್ಯೋಗ ಖಾತ್ರಿ ಯೋಜನೆಯ ಹಣ ದುರುಪಯೋಗ ಮಾಡಿಕೊಂಡು ಯಾವುದೇ ಮಾಹಿತಿ ನೀಡದೆ ಗ್ರಾ.ಪಂ. ಕಛೇರಿಯಲ್ಲಿದ್ದ ನಡಾವಳಿ ಪುಸ್ತಕ, ಚೆಕ್ ಪುಸ್ತಕ ಸೇರಿದಂತೆ ಇತರೆ ದಾಖಲಾತಿಗಳನ್ನು ತೆಗೆದುಕೊಂಡು ಕಾಣೆಯಾಗಿದ್ದಾರೆ, ಈ ಬಗ್ಗೆ ಏನು ಕ್ರಮಕೈಗೊಂಡಿದ್ದೀರೆಂದು ಸದಸ್ಯೆ ಹೇಮಾವತಿ ಇ.ಓ.ರವರನ್ನು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಉತ್ತರಿಸಿದ ತಾ.ಪಂ.ಕಾರ್ಯನಿರ್ವಹಾಣಾಧಿಕಾರಿ ದಯಾನಂದ್, ಗ್ರಾಮ ಪಂಚಾಯಿತಿಯ ಕಾರ್ಯಗಳಿಗೆ ಅಡ್ಡಿಯಾಗದಂತೆ ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚನಾಮ ಮಾಡಿ ಕಛೇರಿಯ ಬೀಗ ತೆರೆಸಿ ಬೇರೆ ಕಾರ್ಯದಶರ್ಿಯನ್ನು ನಿಯೋಜನೆಗೊಳಿಸಲಾಯಿತು ಎಂದರು.ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಕರ್ಾರದ ಕ್ರಿಯಾ ಯೋಜನೆಯನ್ನು ರೈತರಿಗೆ ಅಗತ್ಯವಾದ ಇಂಗುಗುಂಡಿ, ಉದಿಬದ, ಜಲಸಂಗ್ರಹಣೆ ಕಾಮಗಾರಿಗಳನ್ನು ಕೈಗೊಳ್ಳ್ಲದೇ ಕಾರ್ಯದಶರ್ಿಗಳು ಹಾಗೂ ಪಿ.ಡಿ.ಓಗಳು ಮನಬಂದಂತೆ ಕಾಮಗಾರಿಗಳನ್ನು ಮಾಡಲು ಹೊರಟಿರುವುದು ಅಕ್ರಮ ಹಾಗೂ ನಿಯಮ ಬಾಹಿರ ಎಂದು ಸದಸ್ಯ ನಿರಂಜನಮೂತರ್ಿ ಹಾಗೂ ಶಶಿಧರ ಆಕ್ಷೇಪಿಸಿದರು.ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ಹಿಂದೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಕ್ರಿಯಾ ಯೋಜನೆ ತಯಾರಿಸಿದ್ದೇವೆ ಎಂದು ಕಾರ್ಯದಶರ್ಿ ಪಿಡಿಓಗಳು ತಿಳಿಸಿದ್ದಾರೆ ಎಂದಾಗ, ಸದಸ್ಯ ನಿರಂಜನಮೂತರ್ಿ ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ ಆದ್ದರಿಂದ ಸ್ಪಿಲ್ಓವರ್ ಕಾಮಗಾರಿಗಳನ್ನು ತೆಗೆದುಕೊಳ್ಳಬಾರದು ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಬೀಬಿಫಾತಿಮಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಚೇತನ ಗಂಗಾಧರ್, ತಾ.ಪಂ.ಸದಸ್ಯರುಗಳಾದ ಎಂ.ಎಂ.ಜಗಧೀಶ್, ಕೆ.ಎಂ.ನವೀನ್, ಲತಾ ವಿಶ್ವನಾಥ್, ಜಯಣ್ಣ, ಸುಮಿತ್ರಮ್ಮ, ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಾಹಿತ್ಯ ಸಮ್ಮೇಳನದಲ್ಲಿ ಹಲವು ಗೋಷ್ಠಿ ಮತ್ತು ಉಪನ್ಯಾಸಗಳುಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಉಪನ್ಯಾಸ-ಗೋಷ್ಠಿಯನ್ನು ಜೂನ್ 10ರಂದು ಮಧ್ಯಾಹ್ನ 1ನೇ ಗೋಷ್ಥಿ 12.45ಕ್ಕೆ ಮತ್ತು 2ನೇ ಗೋಷ್ಠಿ 2.45ಕ್ಕೆ , 3ನೇ ಗೋಷ್ಠಿ 5ಕ್ಕೆ ಏರ್ಪಡಿಸಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.1ನೇ ಗೋಷ್ಠಿಯು ತಾಲ್ಲೂಕಿನ ಮರೆಯಲಾರದ ಮಹಾನುಭಾವರು ವಿಷಯದಡಿ ಆಚಾರ್ಯ ತೀ.ನಂ.ಶ್ರೀರವರ ಬಗ್ಗೆ ತಾಲ್ಲೂಕಿನ ಮೊದಲನೇ ಕಸಾಪ ಸಮ್ಮೇಳನಾಧ್ಯಕ್ಷರಾದ ಡಾ.ತೀ.ನಂ.ಶಂಕರನಾರಾಯಣ, ಹರಿದಾಸ ಸಾಹಿತ್ಯದ ಅಗ್ರಗಣ್ಯ ಚಿ.ನಾ.ಹಳ್ಳಿಯ ವೆಂಕಟದಾಸರು ಬಗ್ಗೆ ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕಲಾ ತಪಸ್ವಿ ಬಿ.ಕೆ.ಈಶ್ವರಪ್ಪನವರ ಬಗ್ಗೆ ತಾ.ಎರಡನೇ ಕಸಾಪ ಸಮ್ಮಳನಾಧ್ಯಕ್ಷರಾದ ಆರ್.ಬಸರವಾಜು ಮಾತನಾಡಲಿದ್ದು ವಿಶೇಷ ಆಹ್ವಾನಿತರಾಗಿ ಕನ್ನಡ ಸಂಘದ ಅದ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ದಲಿತ ಮುಖಂಡ ಚನ್ನಬಸವಯ್ಯ ಭೇವಿನಹಳ್ಳಿ ಉಪಸ್ಥಿತರಿರುವರು, ಗೋಷ್ಠಿಯಲ್ಲಿ ಎ.ಸೋಮಶೇಖರ್ ಸ್ವಾಗತಿಸಲಿದ್ದು ಸಿ.ಎಚ್.ಗಂಗಾಧರ್ ವಂದಿಸಲಿದ್ದು ಸಿ.ಡಿ.ಚಂದ್ರಶೇಖರ್ ನಿರೂಪಿಸಲಿದ್ದಾರೆ.2ನೇ ಗೋಷ್ಠಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ದರ್ಶನ ವಿಷಯದಡಿ ಕೃಷಿ ತಜ್ಞ ಜಿ.ಶಿವನಂಜಪ್ಪ ಬಾಳೆಕಾಯಿ, ಪ್ರಾಚಾರ್ಯ ಕೆ.ಸಿ.ಬಸಪ್ಪ ಪ್ರಚಲಿತ ಪೇಟೆ ವ್ಯವಸ್ಥೆಯಲ್ಲಿ ಚಿ.ನಾ.ಹಳ್ಳಿ ತಾಲ್ಲೂಕನ್ನು ಸಜ್ಜುಗೊಳಿಸುವ ಮಾರ್ಗಗಳು, ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣ ತಾಲ್ಲೂಕಿನ ಜೀವವೈವಿಧ್ಯಗಳು, ವರದಕ್ಷಿಣೆ ವಿರೋಧಿ ವೇದಿಕೆಯ ಸಾ.ಚಿ.ರಾಜ್ಕುಮಾರ್ ತಾಲ್ಲೂಕಿನ ಮಹಿಳಾ ಪ್ರತಿನಿಧೀಕರಣದ ಬಗ್ಗೆ ಮಾತನಾಡಲಿದ್ದು ಪ್ರಾಚಾರ್ಯ ಎ.ಎನ್.ವಿಶ್ವೇಶ್ವರಯ್ಯ, ಎಂ.ಬಿ.ಶಿವಕುಮಾರ್, ಜಿ.ಸ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು ಉಪಸ್ಥಿತರಿರುವರು.3ನೇ ಗೋಷ್ಠಿಯು ಕವಿ ಮಿಲನ ಗೋಷ್ಠಿಯ ಬಗ್ಗೆ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿರವರು ಅಧ್ಯಕ್ಷತೆ ವಹಿಸಲಿದ್ದು ಪ್ರಸೂತಿ ತಜ್ಞ ಡಾ.ರಮೇಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಕ.ಸಾಪ ಮಾಜಿ ಅಧ್ಯಕ್ಷ ಟಿ.ಎಲ್.ರಂಗನಾಥಶೆಟ್ಟಿರವರು ಬರೆದಿರುವ ಕಾವ್ಯಶ್ರೀ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ.ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಮು.ಸಂಘದ ಅದ್ಯಕ್ಷ ಕೃಷ್ಣಯ್ಯ, ರಾ.ಸ.ನೌ.ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ತಾ.ಶಿ.ಸಂಘದ ಅಧ್ಯಕ್ಷ ಎಚ್.ಎಂ.ಸುರೇಶ್, ತಾ.ಶಿ.ಶಿಸಂಘದ ಬಿ.ಎಲ್.ಬಸವರಾಜು ಉಪಸ್ಥಿತರಿರುವರು. ನರೇಂದ್ರಬಾಬು ಸ್ವಾಗತಿಸಲಿದ್ದು ಸಿ.ಎಸ್.ರೇಣುಕಮೂತರ್ಿ ವಂದಿಸಲಿದ್ದು ಶಶಿಭೂಷಣ್, ಕೆ.ಎನ್.ರಂಗನಾಥ್ ನಿರೂಪಿಸಲಿದ್ದಾರೆ.

ಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಜೂನ್ 10ರ ಶುಕ್ರವಾರ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ.ಅಂದು ಬೆಳಗ್ಗೆ 8.15ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ ನೆರವೇರಿಸಲಿದ್ದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ.ಪಂಚಾಕ್ಷರಿ, ಎನ್.ಜಿ.ಮಂಜುಳ, ಜಿ.ಲೋಹಿತಾಬಾಯಿ, ನಿಂಗಮ್ಮ, ಜಾನಮ್ಮರಾಮಚಂದ್ರಯ್ಯ ಉಪಸ್ಥಿತರಿರುವರು.ಸಮ್ಮೇಳನಾದ್ಯಕ್ಷರ ಮೆರವಣಿಗೆ ನಂತರ ಬೆಳಗ್ಗೆ 10.45ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕ.ಸಾ.ಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಕಾರ್ಯಕ್ರಮದ ಪ್ರಸ್ತಾವನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕಾರ್ಯಕ್ರಮದ ಸ್ವಾಗತ ಕೋರಲಿದ್ದಾರೆ. ತಾ.ಕಸಾಪ ಅಧ್ಯಕ್ಷ ಎಂ.ವಿ. ನಾಗರಾಜರಾವ್ ನಿಕಟ ಪೂರ್ವ ಮಾತಗಳನ್ನಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ. ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಭಿನವ ಭಕ್ತಶಿರೋಮಣಿ ಸಿ.ಬಿ. ಮಲ್ಲಪರವರ -ಸಿ.ಡಿ. ಬಿಡುಗಡೆ ಮತ್ತು ಹಿರಿಯ ಸಾಹಿತಿ ಡಾ.ಅಬ್ದುಲ್ಹಮೀದ್ ಪುಸ್ತಕ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ ರಂಗಾಯಣದ ನಿದರ್ೇಶಕ ಹಾಗೂ ಸಮ್ಮೇಳನಾಧ್ಯಕ್ಷ ಲಿಂಗದೇವರು ಹಳೆಮನೆರವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಕವಿ,ಲೇಖಕ ಡಾಸಾ.ಶಿ.ಮರುಳಯ್ಯ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ.ಚಂದ್ರಪ್ಪ ಸನ್ಮಾನಿತರಾಗುವ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನ ರಾವ್, ಸೃಜನಾ ಅಧ್ಯಕ್ಷೆ ಜಯಮ್ಮ, ಅಕ್ಕಮಹಾದೇವಿ ಮಹಿಳಾ ಸಮಾಜ ಅಧ್ಯಕ್ಷೆ ಭಾರತಿ ನಟರಾಜ್, ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಸರಸ್ವತಮ್ಮ, ಬನಶಂಕರಿ ಮಹಿಳಾ ಸಮಾಜ ಅಧ್ಯಕ್ಷೆ ಪದ್ಮ ವರದರಾಜು, ಕನಕ ಮಹಿಳಾ ಸಮಾಜ ಅಧ್ಯಕ್ಷೆ ಸುಲೋಚನಮ್ಮ, ಯೋಗಿನಾರಾಯಣ ಬಲಿಜ ಮಹಿಳಾ ಸಮಾಜ ಅಧ್ಯಕ್ಷೆ ಜಯಮ್ಮವೇದಮೂತರ್ಿ, ಅಂಗವಿಕಲರ ಸೇವೆಗಾಗಿ ನಾಗರಾಜು, ಸೋಬಾನೆ ಪದಗಳಿಗಾಗಿ ಲಕ್ಕಮ್ಮ, ಸ್ವತಂತ್ರ ಹೋರಾಟಗಾರರಾದ ಜೋಡಿಕಲ್ಲೇನಹಳ್ಳಿ ಶಿವಪ್ಪ ಬಿ.ಪಿ.ಚನ್ನಪ್ಪ, ಕಲಾವಿದರಾದ ಜಿ.ಎಲ್.ಮಹೇಶ್, ಬಿ.ಮರುಳಪ್ಪ, ಶ್ರಮಜೀವಿ ಅನ್ಸರ್ಪಾಷ, ಹರಿಕಥೆ ಕೆ.ಎನ್.ಶಂಕರಲಿಂಗಯ್ಯ, ಗೃಹ ಕೈಗಾರಿಕೆ ಬಿ.ಎಲ್.ಪಂಕಜ ಚಂದ್ರಶೇಖರ್, ಕೋಲಾಟ ರಂಗಪ್ಪರವರಿಗೆ ಸನ್ಮಾನಿಸಲಿದ್ದಾರೆ.ಸಮಾರಂಭದಲ್ಲಿ ಸಾಹಿತಿ ಆರ್.ಬಸವರಾಜುರವರ ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗಕಲಾವಿದರು ಮತ್ತು ಎಂ.ವಿ.ನಾಗರಾಜ್ರವರ 100 ಕಥೆ ನೂರಾರು ನೀತಿ, ಗಾಂಧೀಜಿ 100 ಆದರ್ಶಗಳು ಎಂಬ ಪುಸ್ತಕಗಳು ಬಿಡುಗಡೆಯಾಗಲಿವೆ.ವಿಶೇಷ ಆಹ್ವಾನಿತರಾಗಿ ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಐ ರವಿಪ್ರಸಾದ್, ಮುಖ್ಯಾಧಿಕಾರಿ ಹೊನ್ನಪ್ಪ, ಕೈಗಾರಿಕೋದ್ಯಮಿ ಎನ್.ಎಂ.ಧೃವಕುಮಾರ್, ಜಿ.ಕಾ.ನಿ.ಪ.ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾ.ಕಾ.ನಿ.ಪ.ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಉಪಸ್ಥಿತರಿರುವರು.ಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕಿನ ಕಂದಿಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಇದೇ 6ರಂದು ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.ಪ್ರತಿ ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಲು ಸಕರ್ಾರಿ ಆದೇಶವಿದ್ದು ಅಂದು ಬೆಳಗ್ಗೆ 11ಗಂಟೆಗೆ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ,ಜೂ.03: ಬುಡಕಟ್ಟು ಪ್ರದೇಶದ ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳಿಗೆ ಜಾಗೃತಿ ಶಿಬಿರ ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೇಳಗಳನ್ನು ಸರ್ವ ಶಿಕ್ಷಣದ ಅಭಿಯಾನ, ತಾ.ವಿಭಾಗದದ ಮಾಧ್ಯಕ್ಷ ಮತ್ತು ದಾಖಲೀಕರಣದ ವತಿಯಿಂದ ಇದೇ ಜೂನ್ 3ರಿಂದ 10ರವರೆಗೆ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.ಜೂನ್ 3ರಂದು ಪಟ್ಟಣದ ಡಿ.ವಿ.ಪಿ ಬಾಲಕರ ಪ್ರೌಡಶಾಲೆಯಲ್ಲಿ ಚಿ.ನಾ.ಹಳ್ಳಿ ನಗರ, ಬರಗೂರು, ತೀರ್ಥಪುರ ಒಳಪಡುವ ಕ್ಲಸ್ಟರ್ಗಳಿಗೆ, 4ರಂದು ಕಂದಿಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಕಂದಿಕೆರೆ ಕ್ಲಸ್ಟರ್ಗೆ, ಜೂನ್ 5ರಂದು ಹುಳಿಯಾರು ಹೋಬಳಿಯ ಯುಗಚಿಹಳ್ಳಿ ಸ.ಹಿ.ಪ್ರಾ.ಶಾಲೆಯಲ್ಲಿ ಹುಳಿಯಾರು, ಗಾಣದಾಳು, ಹೊಯ್ಸಳಕಟ್ಟೆ ಕ್ಲಸ್ಟರ್ಗೆ, ಹಂದನಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಹಂದನಕೆರೆ, ಮತಿಘಟ್ಟ, ಯಳನಡು ಕ್ಲಸ್ಟರ್ಗಳಿಗೆ, ಶೆಟ್ಟಿಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಜೆ.ಸಿ.ಪುರ ಕ್ಲಸ್ಟ್ರ್ಗೆ ಮೇಳಗಳನ್ನು ನಡೆಸಲು ತೀಮರ್ಾನಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, June 1, 2011

ಆಧಾರ್ ಕಾಡರ್್ ಇಲ್ಲದಿದ್ದರೆ ಭವಿಷ್ಯದಲ್ಲಿ ಆಧಾರವಿಲ್ಲ
ಚಿಕ್ಕನಾಯಕನಹಳ್ಳಿ,ಮೇ.01: ಆಧಾರ್ ಕಾಡರ್್ ಹೊಂದಿಲ್ಲದವರಿಗೆ ಭವಿಷ್ಯದಲ್ಲಿ ಸಕರ್ಾರಿ ಸವಲತ್ತುಗಳು ಸಿಗಲಾರವು ಆದ್ದರಿಂದ ಎಲ್ಲರೂ ಆಧಾರ್ ಕಾಡರ್್ ಪಡೆಯುವುದು ಕಡ್ಡಾಯ , ತಾಲ್ಲೂಕಿನಲ್ಲಿ ಈಗಾಗಲೇ ಶೇ.79ರಷ್ಟು ಜನರು ಕಾಡರ್್ ಹೊಂದಿದ್ದು ಉಳಿದವರು ಕೂಡಲೇ ಕಾಡರ್್ ಹೊಂದುವುದು ಅತ್ಯಗತ್ಯ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು ಎರಡುಲಕ್ಷದ ಹನ್ನೆರಡು ಸಾವಿರದ ಅರವತ್ತಮೂರು ಜನರಿದ್ದು ಇದರಲ್ಲಿ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟು ಜನರು ಈಗಾಗಲೇ ಈ ಯೋಜನೆಗೆ ಒಳಪಟ್ಟಿದ್ದಾರೆ ಎಂದರು. ಪ್ರತಿ ದಿವಸ ಸರಾಸರಿ ಒಂದು ಸಾವರದಷ್ಟು ಜನರು ತಮ್ಮ ಗುರುತಿನ ಸಂಖ್ಯೆಯನ್ನು ಪಡೆಯುತ್ತಿದ್ದಾರೆ ಎಂದರು.
ತಾಲ್ಲೂಕಿನಲ್ಲಿ 324 ಹಳ್ಳಿಗಳಿದ್ದು ಗ್ರಾ.ಪಂ.ಕೇಂದ್ರಗಳಲ್ಲಿ ಹಾಗೂ ಪ್ರಮುಖ ಗ್ರಾಮಗಳಲ್ಲಿ ಪೋಟೋ ತೆಗೆಯುವ ಕೇಂದ್ರವನ್ನು ತೆರೆಯಲಾಗಿದೆ ಈ ಕಾರ್ಯಕ್ಕೆ ಆರಂಭದಲ್ಲಿ 23 ಲ್ಯಾಪ್ಟ್ಯಾಪ್ಗಳನ್ನು ಬಳಸಲಾಗುತ್ತಿದ್ದು ಈಗ 25ಲ್ಯಾಪ್ಟ್ಯಾಪ್ಗಳನ್ನು ಉಪಯೋಗಿಸಲಾಗುತ್ತದೆ ಎಂದರು. ಜೂನ್ 15ರೊಳಗೆ ಎಲ್ಲರೂ ಈ ಯೋಜನೆಗೆ ಒಳಪಡಬೇಕೆಂದರು.
ಕೇಂದ್ರ ಸಕರ್ಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ವಿಶಿಷ್ಠ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರು ನೊಂದಣಿ ಮಾಡಿಸಿಕೊಳ್ಳದಿದ್ದದರೆ ಸಕರ್ಾರಿ ಸವಲತ್ತುಗಳಿಗೆ ಅನರ್ಹರಾಗುತ್ತಾರೆ ಎಂದರಲ್ಲದೆ ಆಧಾರ್ ಯೋಜನೆಯಡಿ ನೊಂದಾಣಿ ಮಾಡಿಸದ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಪದಾರ್ಥಗಳನ್ನು ವಿತರಿಸದಂತೆ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲಾಗುವುದು ಎಂದರು.
ತಾಲ್ಲೂಕಿನ ಎಲ್ಲಾ ಇಲಾಖೆಗಳ ಸಕರ್ಾರಿ ನೌಕರರು ಆಧಾರ್ ಯೋಜನೆಯಡಿ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯ, ಗುರುತಿನ ಸಂಖ್ಯೆ ಪಡೆಯದ ಸಕರ್ಾರಿ ನೌಕರರಿಗೆ ವೇತನ ಪಾವತಿಸದಂತೆ ಆಯಾ ಇಲಾಖೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರಲ್ಲದೆ ಪೋಲಿಸ್ ಸೇರಿದಂತೆ ಶಾಲಾ ಕಾಲೇಜುಗಳ ಮುಖ್ಯಸ್ಥರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲರಿಗೂ ಸೂಚನೆ ನೀಡಲಾಗಿದೆ.

Tuesday, May 31, 2011

ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳು






ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಚಿಕ್ಕನಾಯಕನಹಳ್ಳಿ

,ಮೇ.31: ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಜೂನ್ 3ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ತಾ.ಪಂ ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಡಾ.ಎಂ.ಸಿ ಮೋದಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ, ಮತ್ತು ಕೆ.ಟಿ.ಗೋವಿಂದಪ್ಪನವರ ಅಭಿಮಾನಿ ಬಳಗದ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಸ್ಥಳೀಯ ವೈದ್ಯಾಧಿಕಾರಿಗಳು ಮತ್ತು ನೇತ್ರ ಪರೀಕ್ಷಕರ ಸಂಯುಕ್ತಾಶ್ರಯದಲ್ಲಿ ಕುಪ್ಪೂರು ಗದ್ದಿಗೆ ಮಠದ ಆವರಣದಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ಡಾ.ಅಭಿನವ ಮಲ್ಲಿಕಾಜರ್ುಸದೇಶೀಕೇಂದ್ರಸ್ವಾಮಿರವರ ದಿವ್ಯ ಸಾನಿದ್ಯದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪರವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಮಲ್ಲಯ್ಯ, ಮೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ಉದಯವಾಣಿ ಜಿಲ್ಲಾ ವರದಿಗಾರ ಚಿ.ನಿ.ಪುರಷೋತ್ತಮ್ರವರಿಗೆ ಸನ್ನಾನಿಸಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಅಮರನಾಥ ಎಂ.ಮೋದಿ, ಡಾ.ಎಸ್.ಜಿ.ಪರಮೇಶ್ವರಪ್ಪ, ಕೆ.ಜಿ.ಶ್ರೀಧರ್, ಎನ್.ಎಂ.ಶಿವಕುಮಾರ್, ಕೆ.ಆರ್.ಲಕ್ಷ್ಮೀನಾರಾಯಣ್, ಎಸ್.ಎಲ್.ಶಾಂತಕುಮಾರ್, ಡಾ.ಮಹೇಂದ್ರ, ಎನ್.ಎನ್.ಶ್ರೀಧರ್, ಶಶಿಕಿರಣ್, ಸಿ.ಎನ್.ಮರುಳಾರಾಧ್ಯ, ಕೆ.ಜಿ.ರಾಜೀವ್, ಸಿ.ಗುರುಮೂತರ್ಿ ಕೊಟಿಗೆಮನೆ, ವಾಗೀಶ್ ಪಂಡಿತಾರಾಧ್ಯ ಉಪಸ್ಥಿತರಿರುವರು.
.

Monday, May 30, 2011



ರೈತರ ಏಳಿಗೆಗಾಗಿ ಸಹಾಯ ಧನ : ಟಿ.ಸಿ.ಕಾಂತರಾಜುಚಿಕ್ಕನಾಯಕನಹಳ್ಳಿ,

ಮೇ.30: ಸಣ್ಣ ಮತ್ತು ಅತಿಸಣ್ಣರೈತರ ಏಳಿಗೆಗಾಗಿ ಸುವರ್ಣ ಭೂಮಿ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ರೈತರ ಏಳಿಗೆಯನ್ನು ಕಾಣಲು ಸಕರ್ಾರ ಪ್ರಯತ್ನಿಸುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಾವಯುವ ಕೃಷಿ, ಜೈವಿಕ ಇಂಧನ, ಜೇನುಸಾಕಾಣಿಕೆ ಚಟುವಟಿಕೆಗಳ ಎಲ್ಲಾ ಫಲಾನುಭವಿಗಳು ಆಯ್ಕೆಯಾಗಿದ್ದು ಕೃಷಿ ಕಾರ್ಯಗಳ ಸಹಾಯಧನಕ್ಕೆ ಹೆಚ್ಚು ಅಜರ್ಿ ಸಲ್ಲಸಿದ್ದು ಈ ಚಟುವಟಿಕೆಯ ಫಲಾನುಭವಿಗಳ ಆಯ್ಕೆಗೆ ಮಾತ್ರ ಲಾಟರಿ ಎತ್ತಲಾಗುತ್ತಿದೆ ಎಂದು ತಿಳಿಸಿದರು.ಯೋಜನ ನಿದರ್ೇಶಕ ಆಂಜನಪ್ಪ ಮಾತನಾಡಿ 5ಎಕರೆ ಒಳಪಟ್ಟ ರೈತರಿಗೆ 10ಸಾವಿರವರೆಗೆ ಸಹಾಯ ಧನ ನೀಡಲಿದ್ದು ಆಯ್ಕೆಯಾದ ಅಭ್ಯಥರ್ಿಗಳಿಗೆ ಇರುವ ಜಮೀನಿನ ಆಧಾರದ ಮೇಲೆ ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು. ಸಮಾರಮಭದಲ್ಲಿ ತಾ.ಪಂ.ಸದಸ್ಯೆ ಲತಾ, ಸಿ.ಡಿ.ಪಿ.ಓ ಅನೀಸ್ ಖೈಸರ್, ಇ.ಓ ದಯಾನಂದ್, ಕೃಷಿ ಸಹಾಯಕ ಅಧಿಕಾರಿ ರಂಗಸ್ವಾಮಿ, ರಾಜಸ್ವ ನಿರೀಕ್ಷಕ ಚಿಂತಾಮಣಿ ಉಪಸ್ಥಿತರಿದ್ದರು.
ಯೋಗಾಂಜನೇಯಸ್ವಮಿಗೆ ವಿಶೇಷ ಬೆಣ್ಣೆ ಅಲಂಕಾರಚಿಕ್ಕನಾಯಕನಹಳ್ಳಿ,

ಮೇ.30: ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿನ ಯೋಗಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರ ಏರ್ಪಡಿಸಲಾಗಿತ್ತು.ಇಲ್ಲಿನ ಯೋಗಾಂಜನೇಯಸ್ವಾಮಿ ಯೋಗ ಮುದ್ರೆಯನ್ನು ಹೊತ್ತು ಗಂಭೀರವಾಗಿ ಕುಳಿತಿರುವುದು ವಿಶೇಷವಾಗಿದೆ ಮತ್ತು ದೇವಸ್ಥಾನದಲ್ಲಿ ಗಣಪತಿ, ಸುಬ್ರಹ್ಮಣ್ಯಸ್ವಾಮಿ ಮೂತರ್ಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಬಡಾವಣೆಯ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.ಸಂಘದ ಅಧ್ಯಕ್ಷ ರಾಜಣ್ಣ, ಕೃಷ್ಣೆಗೌಡ, ದಿನರಾಜು, ಗುರುಮೂತರ್ಿ, ಜಯರಾಮಯ್ಯ, ನಾರಾಯಣಪ್ಪ ಮತ್ತು ಸದಸ್ಯರು ಜಯಂತಿಯಂದು ಪಾಲ್ಗೊಂಡಿದ್ದರು.
ರಂಭಾಪುರಿ ಜಗದ್ಗುರುಗಳ ಪುರಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಚಿಕ್ಕನಾಯಕನಹಳ್ಳಿ,ಮೇ.30: ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀಮದ್ರಂಭಾಪುರೀ ಜಗದ್ಗುರುಗಳವರ ಪುರಪ್ರವೇಶ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾಮರ್ಿಕ ಸಮಾರಂಭವನ್ನು ಜೂನ್ 5ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ಸಾಸಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ರಾಜದೇಶೀಕೇಂದ್ರ ಶಿವಚಾರ್ಯ ಭಗವತ್ಪಾದರು ದಿವ್ಯ ಸಾನಿದ್ಯ ವಹಿಸಲಿದ್ದು, ಯತೀಶ್ಚರ ಶಿವಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಜಲಸಂಪನ್ಮೂಲ ಸಚಿವ ಬಸವರಾಜು ಬೊಮ್ಮಾಯಿ ಉದ್ಘಾಟನೆ ನೆರವೇರಿಸಲಿದ್ದಾರೆ.ವಸತಿ ಸಚಿವ ವಿ.ಸೋಮಣ್ಣ ಉದ್ಯಾನವನ ಶಂಕುಸ್ಥಾಪನೆ ನೆರವೇರಿಸಲಿದ್ದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಭಾವಚಿತ್ರ ಅನಾವರಣ ಮಾಡಲಿದ್ದಾರೆ.ಕರಿವೃಷಭ ಶಿವಯೋಗೀಶ್ವರ ಸ್ವಾಮಿ ನಾಂದಿನುಡಿಯನ್ನಾಡಲಿದ್ದು, ಅಭಿನವ ಮಲ್ಲಿಕಾಜರ್ುನಸ್ವಾಮಿ ಬೋದಾಮೃತ, ಸಾಹಿತಿ ಡಾ.ಸಾ.ಶಿ.ಮರುಳಯ್ಯ ಉಪನ್ಯಾಸ ನೀಡಲಿದ್ದಾರೆ.ಶಿವಪ್ರಕಾಶ ಶಿವಚಾರ್ಯಸ್ವಾಮಿ, ರುದ್ರಮುನಿಸ್ವಾಮಿ, ಮಲ್ಲಿಕಾಜರ್ುನ ಶಿವಚಾರ್ಯಸ್ವಾಮಿ ರೇವಣಸಿದ್ದೇಶ್ವರ ಶಿವಚಾರ್ಯಸ್ವಾಮಿ ನುಡಿನಮನಗಳನ್ನಾಡಲಿದ್ದು ಸಿ.ಮೃಂತ್ಯುಂಜಯಸ್ವಾಮಿ ಸನ್ಮಾನಿತರಾಗಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿ.ಪಂ.ಅಧ್ಯಕ್ಷ ಡಾ.ರವಿ, ಮಾಜಿ ಶಾಸಕರಾದ ಎಸ್.ಪಿ.ಗಂಗಾಧರಪ್ಪ, ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ, ಬಿ.ಲಕ್ಕಪ್ಪ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ, ಜಿ.ಪಂ.ಸದಸ್ಯ ಪಂಚಾಕ್ಷರಿ, ಪಿ.ಎಲ್.ಡಿ ಬ್ಯಾಂಕ್ ನಿದರ್ೇಶಕ ಬಿ.ಎನ್.ಶಿವಪ್ರಕಾಶ್, ಜೆ.ಸಿ.ಪುರ ಜಗದೀಶ್, ನಟರಾಜ್ ರಂಗಕಮರ್ಿ ನಾಗರಾಜ್ಮೂತರ್ಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಉಪಸ್ಥಿತರಿರುವರು.

Sunday, May 29, 2011

Saturday, May 28, 2011




ರೈತರ ಬೆಲೆಯುಳ್ಳ ಜಮೀನುಗಳು ಗೃಹ ನಿಮರ್ಾಣ ಮಂಡಳಿಯ ಬಾಯಿಗೆ ?
ಸಂಕಷ್ಟದಲ್ಲಿರುವ ರೈತರು
ತಕರಾರು ಅಜರ್ಿ ಸಲ್ಲಿಸಿರುವ ಹೋರಾಟಗಾರರು
ಕವಲು ದಾರಿಯಲ್ಲಿರುವ ಸಣ್ಣ ಪುಟ್ಟ ಜಮೀನಿನವರು

(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಮೇ.28: ತಾಲೂಕಿನ ನಾಲ್ಕು ಜನ ವಿಚಾರವಂತ ರೈತರು ಎಲ್ಲೇ ಕುಳಿತು ಕುಶೋಲಪರಿ ಶುರು ಮಾಡಿದರು ಎಂದರೆ ಕೊನೆಯಲ್ಲಿ ಮಾತು ಮುಗಿಯುವುದು ಸಕರ್ಾರ ತಾಲೂಕಿನಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಡಿಸಿರುವ ಆದೇಶದ ಬಗ್ಗೆ ಚಚರ್ೆಯ ನಂತರವೇ.
ಪಟ್ಟಣದ ಹುಳಿಯಾರು ಗೇಟ್ ಬಳಿ ರಾಜ್ಯ ಗೃಹ ನಿಮರ್ಾಣ ಮಂಡಳಿಯವರು 80 ಎಕರೆ 10 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವುದು ಒಂದೆಡೆಯಾದರೆ, ಸಾಲ್ಕಟ್ಟೆಯ ಬಳಿ ಕೈಗಾರಿಕೆಯ ಉದ್ದೇಶದಿಂದ ಕೆ.ಎ.ಐ.ಡಿ.ಬಿ. ಯವರು ಮೂರು ಸಾವಿರ ಎಕರೆ ಪ್ರದೇಶವನ್ನು ವಶ ಪಡಿಸಿಕೊಳ್ಳಲು ಹೊರಟಿರುವ ವಿಷಯ ಮತ್ತೂ ಚಚರ್ೆಗೆ ಗ್ರಾಸವಾಗಿದೆ. ಕೆ.ಎ.ಐ.ಡಿ.ಬಿ.ನವರು ಜಮೀನಿಗೆ ಕನಿಷ್ಟ 20 ಲಕ್ಷ ರೂಗಳನ್ನಾದರೂ ಕೊಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಎರಡರ ಪೈಕಿ ಪಟ್ಟಣದ ಹುಳಿಯಾರು ಗೇಟ್ ಬಳಿ ಗೃಹ ನಿಮರ್ಾಣ ಮಂಡಳಿ, ಬ್ಯಾಲಕೆರೆ ಹಾಗೂ ದಾಸಿಹಳ್ಳಿ ಸವರ್ೆ ನಂಬರ್ಗಳಲ್ಲಿ ಒಟ್ಟು 80 ಎಕರೆ 10 ಗುಂಟೆ ಜಮೀನನ್ನು ಭೂ ಸ್ವಾಧೀನ ಕಾಯ್ದೆ ಕಲಂ 4(1)ರ ಅಡಿಯಲ್ಲಿ, ದಿನಾಂಕ 7.1.2011ರಂದು ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆ ಈಗಾಗಲೇ ಕನರ್ಾಟಕ ರಾಜ್ಯ ಪತ್ರದಲ್ಲಿ ಭಿತ್ತರಗೊಂಡಿದೆ ಅಲ್ಲದೆ, ಸಾರ್ವಜನಿಕರ ಮಾಹಿತಿಗಾಗಿ ಪುರಸಭೆಯ ನೋಟಿಸ್ ಬೋಡರ್್ನಲ್ಲೂ ಪ್ರಚುರ ಪಡಿಸಲಾಗಿದೆ.
ಪುರಸಭೆಯ ನೋಟಿಸ್ ಬೋಡರ್್ಗೆ ಈ ವಿಷಯ ಬರುವವರೆಗೆ ಯಾವುದೇ ರೈತರಿಗೆ ಈ ಬಗ್ಗೆ ಸಣ್ಣ ಸುಳಿವೂ ದೊರೆತಿರಲಿಲ್ಲ, ಈ ಮುಂಚೆ ಹುಳಿಯಾರ್ ಗೇಟ್ ಬಳಿ ಜಮೀನಿರುವ ಹಲವರಿಗೆ ಕೆಲವು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಧಿಕ ಹಣದ ರುಚಿ ತೋರಿಸಿ ಜಮೀನನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆ ಭಾಗದ ಕೆಲವು ಸಣ್ಣ ಪುಟ್ಟ ರೈತರು ತಮ್ಮ ಸಂಕಷ್ಟಕೆಂದು ಜಮೀನು ಮಾರಲು ಪ್ರಯತ್ನಿಸುತ್ತಿದ್ದರು, ಇಂತಹ ಸಮಯಕ್ಕೆ ಸರಿಯಾಗಿ ಗೃಹ ನಿಮರ್ಾಣ ಮಂಡಳಿ ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿಸೂಚನೆಯನ್ನು ಹೊರಡಿಸಿ ರೈತರಲ್ಲಿ ಗೊಂದಲ ಮೂಡಿಸಿರುವುದು ಒಂದೆಡೆಯಾದರೆ, ಇರುವ ಚೂರು ಪಾರು ಜಮೀನು ಕಳೆದುಕೊಂಡು ಮುಂದಿನ ಮಕ್ಕಳಿಗೆ ಜಮೀನಿಲ್ಲದೆ 'ಬರಿಗೈ' ಮಾಡಿ ಹೋಗುತ್ತೆವೇನಪ್ಪ ಎಂಬ ಚಿಂತೆಯಲ್ಲಿದ್ದವವರು ಕೆಲವರು. ಜುಮೀನಿದ್ದರೆ ಕೊನೆ ಪಕ್ಷ ರಾಗಿ ಕಾಳನ್ನಾದರೂ ಬೆಳೆದು ತಿನ್ನುತ್ತಾರೆ, ಜಮೀನು ಮಾರಿದರೆ ಅವರು ಕೊಡುವ ಅಷ್ಟೋ ಇಷ್ಟೋ ದುಡ್ಡು ತಮ್ಮ ಸಂಕಷ್ಟಗಳನ್ನು ತೀರಿಸಿಕೊಂಡು ಮುಂದಿನ ಜೀವನಕ್ಕೆ ಪರದಾಡುವ ಸ್ಥಿತಿ ನಿಮರ್ಾಣವಾಗುತ್ತದೆಯೇ ಎಂಬ ಚಿಂತಿಯಲ್ಲಿ ದಿನ ದೂಡುವಂತಾಗಿರುವುದು ಮತ್ತೊದೆಡೆಯ ಚಿತ್ರಣ.
ಆಥರ್ಿಕವಾಗಿ ಸಬಲರಾಗಿರುವವರು, ಹೆಚ್ಚು ಜಮೀನು ಉಳ್ಳವರು ಮಾತ್ರ ಏನಾದರೂ ಸರಿಯೇ ನಮ್ಮ ಜಮೀನನ್ನು ಉಳಿಸಿಕೊಂಡೇ ತೀರುತ್ತೇವೆಂದು ಈಗಾಗಲೇ ಎರಡು ಭಾರಿ ಬೆಂಗಳೂರಿನ ಗೃಹ ನಿಮರ್ಾಣ ಮಂಡಳಿಯ ಕಛೇರಿ ಹೋಗಿ ಬಂದು ಹೋರಾಟದ ಹಾದಿಗೆ ಸಜ್ಜುಗೊಳ್ಳುತ್ತಿದ್ದಾರೆ.
ತಕರಾರು ಅಜರ್ಿ: ಬ್ಯಾಲಕೆರೆ ಹಾಗೂ ದಾಸಿಹಳ್ಳಿಯ ಸವರ್ೆ ನಂಬರಿನಲ್ಲಿ ಜಮೀನುಳ್ಳ ಸುಮಾರು 37 ಜನರು ಗೃಹ ನಿಮರ್ಾಣ ಮಂಡಳಿಗೆ ಈಗಾಗಲೇ ತಕರಾರು ಅಜರ್ಿ ಹಾಕಿಕೊಂಡಿದ್ದಾರೆ.
ಗೃಹ ನಿಮರ್ಾಣ ಮಂಡಳಿ ಈ ಸಂಬಂಧ ಹೊರಡಿಸಿರುವ ಸವರ್ೆ ನಂಬರ್ಗಳಲ್ಲಿ ಫಲವತ್ತಾದ ತೆಂಗಿನ ತೋಟಗಳಿವೆ, ಹಣ್ಣು ಬಿಡುವ ತೋಟಗಾರಿಕೆ ಗಿಡಗಳಿವೆ, ತಮ್ಮ ಪೂವರ್ಿಕರ ಸಮಾಧಿಗಳಿವೆ ಇವ್ಯಾವನ್ನು ನೋಡದ ಮಂಡಳಿ, ಬೆಂಗಳೂರಿನಲ್ಲಿ ಕುಳಿತು ಭೂ ಮಾಪನ ಇಲಾಖೆಯಲ್ಲಿನ ನಕ್ಷೆ ಹಿಡಿದುಕೊಂಡು ಒಟ್ಟಾರೆ ಇಂತಿಷ್ಟು ಜಾಗ ಎಂಬಂತೆ ಗುತರ್ಿಸಿ ಅಧಿಸೂಚನೆ ಹೊರಡಿಸಿದೆ, ಈಗ ಈ ಭಾಗದ ರೈತರು ಮೇಲಿನ ಅಂಶಗಳ ಆಧಾರದ ಮೇಲೆ ತಕರಾರು ಅಜರ್ಿ ಹಾಕಿಕೊಂಡಿದ್ದಾರೆ.
ಇನ್ನೂ ಕೆಲವರು ಅಜರ್ಿ ಹಾಕುವ ಹಂತದಲ್ಲಿದ್ದಾರೆ. ಒಟ್ಟಾರೆ ಅಜರ್ಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇನ್ನೂ ಕೆಲವರು 5(1) ಘೋಷಣೆ, 6(1) ಘೋಷಣೆ ಯಾಗವ ವರೆಗೆ ಕಾದು ನೋಡುವ ತಂತ್ರವನ್ನು ಬಳಸುತ್ತಿದ್ದಾರೆ.
ಆಸೆಗೆ ಬಿದ್ದಿರುವ ಕೆಲವರು ; ಉಳುಮೆ ಮಾಡದಿರುವ ಕೆಲವು ರೈತರು ಹೋಗಲಿ ಬಿಡು, ಗೃಹ ನಿಮರ್ಾಣ ಮಂಡಳಿಯವರು ಒಂದು ಎಕರೆ ಜಮೀನಿನಲ್ಲಿ 60 * 40 ಸೈಟ್ಗಳನ್ನು ಕನಿಷ್ಟವೆಂದರೂ 15 ನಿವೇಶನಗಳನ್ನು ನಿಮರ್ಿಸಿ, ರಸ್ತೆ, ಚರಂಡಿ, ನೀರಿ, ಬೆಳಕಿನ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಜೊತೆಗೆ ಭೂ ಪರಿವರ್ತನೆಯನ್ನು ಅವರೇ ಮಾಡಿಸಿಕೊಡುತ್ತಾರೆ, 15ರ ಪೈಕಿ ನಮಗೆ 5 ಸೈಟ್ ಕೊಡುತ್ತಾರೆ ಆಗ ನಮ್ಮ ಸೈಟಿಗೆ ಚಿನ್ನದಂತಹ ಬೆಲೆ ಬರುತ್ತದೆ ನಾವ್ಯಾಕೆ ಕಷ್ಟು ಪಡಬೇಕು ಎಂಬ ಧೋರಣೆಯ ಜನರು ಇಲ್ಲದಿಲ್ಲ. ಈಗಾಗಿ ಹೋರಾಟ ತೀವ್ರ ಸ್ವರೂಪ ಪಡೆಯುವಲ್ಲಿ ಇನ್ನೂ ನಿಧಾನ ಗತಿಯನ್ನು ಪಡೆಯುತ್ತಿದೆ.
ಈಗಾಗಲೇ ರೈತ ಸಂಘದ ನೇತೃತ್ವದಲ್ಲಿ ಹಲವರು ತಹಶೀಲ್ದಾರ್ ಕಛೇರಿಗೆ ತೆರಳಿ ತಮ್ಮ ವಿರೋಧದ ಹೇಳಿಕೆಯ ಜೊತೆಗೆ ತಮಗೆ ನ್ಯಾಯ ಒದಗಿಸುವ ಸಂಬಂಧ ಸಕರ್ಾರಕ್ಕೆ ಮನವಿಕೊಟ್ಟು ಬಂದಿದ್ದಾರೆ. ಈ ಬಗ್ಗೆ ಪಟ್ಟಣದ ಮಾವುರದಮ್ಮ ದೇವಸ್ಥಾನದ ಬಳಿ ಸಭೆಗಳು ನಡೆದಿವೆ. ಅಲ್ಲಿಯ ತೀಮರ್ಾನದಂತೆ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಸಿ.ಎಸ್.ಕೋದಂಡರಾಮಯ್ಯ, ದಯಾನಂದ್, ಸಂತೋಷ ಬೆಂಗಳೂರಿನ ಗೃಹ ನಿಮರ್ಾಣ ಮಂಡಳಿಯ ಕಛೇರಿಗೆ ಹೋಗಿ ಬಂದಿದ್ದಾರೆ. ಹೋರಾಟಗಾರರು ಇನ್ನೂ ಮಾಹಿತಿ ಕಲೆ ಹಾಕುವ ಹಂತದಲ್ಲಿದ್ದಾರೆ ನಿಜವಾದ ಹೋರಾಟವಿನ್ನು ಪ್ರಖರ ರೀತಿಯಲ್ಲಿ ಆರಂಭವಾಗಿಲ್ಲ.
ಹೋರಾಟಗಾರರು ತುಸು ಚಿಂತನೆಯಲ್ಲಿದ್ದಾರೆ, ಶಾಸಕರನ್ನು ಕಂಡು ಅವರು ನೀಡುವ ಮಾರ್ಗದರ್ಶನಲ್ಲಿ ನಡೆಯಬೇಕೆಂದು ಕೆಲವರ ಯೋಚನೆಯಾದರೆ, ಇನ್ನೂ ಕೆಲವರು ನಾವು ಮುಂದೆ ನುಗ್ಗಿ ಹೋರಾಟದ ಆದಿ ಹಿಡಿಯುವುದು, ನಮ್ಮಲ್ಲಿಯೇ ಕೆಲವರು ಯಾವುದೋ ಪ್ರಲೋಭನೆಗೆ ಬಿದ್ದು ಗೃಹ ನಿಮರ್ಾಣ ಮಂಡಳಿಗೆ ಭೂ ಸ್ವಾಧೀನಕ್ಕೆ ಒಪ್ಪಿಗೆ ಪತ್ರ ಕೊಡುವುದು ಆಗ ಇಲ್ಲದ ರಾದ್ದಾಂತಗಳಾಗುವುದರ ಜೊತೆಗೆ, ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯಗಳು ಹೇಳುತ್ತವೆ ಎಂಬ ಕಾರಣಕ್ಕೆ ಕೆಲವರು ಹಿಂದೇಟು ಆಕುತ್ತಿದ್ದರೆ. ಮುಂದಿನ ನಡೆ ಎತ್ತ ಕಡೆ ಇರಬೇಕೆಂಬುದರ ಬಗ್ಗೆ ಚಚರಿಸಲು ಸೋಮವಾರ ಬೆಳಗ್ಗೆ 10ಕ್ಕೆ ಮತ್ತೇ ಮಾವುರದಮ್ಮನ ದೇವಾಲಯದ ಬಳಿ ಸಭೆ ಸೇರುತ್ತಿದ್ದಾರೆ, ಸಭೆಗೆ ಎಲ್ಲಾ ರೈತ ಪರ ಹೋರಾಟಗಾರರಿಗೆ ಸ್ವಾಗತವಿದೆ.



Thursday, May 26, 2011



ಮನುಷ್ಯರಿಗೆೆ ಮರಣಾ ನಂತರ ನೆರವೇರಿಸುವಂತೆ ಕೋತಿಗೆ ಅಂತ್ಯಕ್ರಿಯೆಚಿಕ್ಕನಾಯಕನಹಳ್ಳಿ,

ಮೇ.26 : ಮನುಷ್ಯರಿಗೆ ಮರಣಾ ನಂತರ ನಡೆಯುವ ಅಂತ್ಯಕ್ರಿಯೆಯಂತೆ ಮರಣವನ್ನಪ್ಪಿದ ಕೋತಿಯೊಂದಕ್ಕೆ ಅಂತ್ಯಕ್ರಿಯೆ ನಡೆಸಿರುವ ಘಟನೆ ತಾಲ್ಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.ವಯಸ್ಸಾಗಿದ್ದ ಕೋತಿಯನ್ನು ಕಾಯಿಲೆಯಿಂದ ನರಳುತ್ತಿದ್ದುದನ್ನು ನೋಡಿ ಅಲ್ಲಿನ ಗ್ರಾಮಸ್ಥರು ಹಣ್ಣುಗಳನ್ನು ತಿನ್ನಿಸಿದಾಗ ಛೇತರಿಸಿಕೊಂಡು ಸ್ವಲ್ಪ ಹೊತ್ತು ಗ್ರಾಮದ ಸುತ್ತ ಓಡಾಡಿ ಪುನಃ ಅದೇ ಜಾಗಕ್ಕೆ ಬಂದು ನರಳಿ ಮರಣವನ್ನಪಿತು, ಗ್ರಾಮಸ್ಥರು ಎಲ್ಲಾ ಸೇರಿ ಮೀನಾಕ್ಷಮ್ಮಸಿದ್ದರಾಮಯ್ಯನ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ಮಾಡಿಸಿದರು. ಅಂತ್ಯಕ್ರಿಯೆಯ ನಂತರ ಪಾನಕ ಫಲಹಾರ ಹಂಚಲಾಯಿತು, ಗ್ರಾಮಸ್ಥರೆಲ್ಲಾರ ಹಣ ಸಹಾಯದೊಂದಿಗೆ ಅಂತ್ಯಕ್ರೀಯ ಜಾಗದಲ್ಲಿ ಮಂಟಪ ಕಟ್ಟಲಾಗಿದೆ ನಾಳೆ ಹನುಮಜ್ಜಯಂತಿ ಪ್ರಯಕ್ತ ಹಲವು ದೇವರು ಆಗಮಿಸಲಿದ್ದು ವಿಶೇಷ ಪೂಜೆಯನ್ನು ನಡೆಸಲು ಗ್ರಾಮಸ್ಥರು ತೀಮರ್ಾನಿಸಿದ್ದಾರೆ.
ಬುದ್ದಿವಂತಿಕೆಯಿಂದ ಕೆಲಸ ನಿರ್ವಹಿಸಿದರೆ ನ್ಯಾಯಾಲಯದಲ್ಲಿ ಗೆಲವುಚಿಕ್ಕನಾಯಕನಹಳ್ಳಿ,

ಈ.26: ನ್ಯಾಯಾಲಯಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡುವ ಅಗತ್ಯವಿರುವುದಿಲ್ಲ, ಬುದ್ದಿವಂತಿಕೆಯಿಂದ ಕೆಲಸ ನಿರ್ವಹಿಸಬೇಕು, ಎಂದು ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಕೆ.ಜಿ.ಎಫ್ನಿಂದ ವಗರ್ಾವಣೆಗೊಂಡು ಬಂದಿರುವ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ ಮತ್ತು ನ್ಯಾಯಾಲಯ ಸಿಬ್ಬಂದಿ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನ್ಯಾಯಾಧೀಶರು ನ್ಯಾಯಾಲಯದಲ್ಲಿ ತೀಪರ್ು ಬರೆಯುವಾಗ ಪುಟಗಟ್ಟಲೆ ತೀಪರ್ಿನ ವಿವರಣೆ ಬರೆಯುವ ಅಗತ್ಯತೆ ಇಲ್ಲ, ಮೊಕದ್ದಮೆಯ ಸರಳತೆಗೆ ತಕ್ಕಂತೆ ಒಂದೆರಡು ಪುಟಗಳಲ್ಲಿ ತೀಪರ್ು ಬರೆಯಬಹುದು ಎಂದರಲ್ಲದೆ ನನ್ನ ಮೊದಲ ಆದ್ಯತೆ ಹಳೆಯ ಮೊಕದ್ದಮೆಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸುವುದು, ಹೊಸ ಮೊಕದ್ದಮೆಗಳಿಗೆ ಕಾಲಾವಕಾಶ ನೀಡುವುದು, ಈ ನಿಟ್ಟಿನಲ್ಲಿ ಸ್ಥಳೀಯ ವಕೀಲರುಗಳು ಸಹಕಾರ ನೀಡಬೇಕು ವಕೀಲರು ಜಟಿಲವಾಗಿರುವ ಹಳೆಯ ಮೊಕದ್ದಮೆಗಳ ಬಗ್ಗೆ ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಲು ಸಹಕರಿಸಬೇಕು ಎಂದರು. ನ್ಯಾಯಾಧೀಶೆ ಎ.ಜಿ.ಶಿಲ್ಪರವರು ಮಾತನಾಡಿ ಶಿಸ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ನ್ಯಾಯಾಧೀಶರು ಕೆ.ಎಂ.ರಾಜಶೇಖರ್ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್ ಇಲ್ಲಿಗೆ ಹೊಸದಾಗಿ ಬರುವ ನ್ಯಾಯಾಧೀಶರನ್ನು ಸ್ವಾಗತಿಸುವುದು ಸಂಘದ ಸಂಪ್ರದಾಯ, ತಾಲೂಕು ಆಥರ್ಿಕವಾಗಿ ಹಿಂದುಳಿದ ತಾಲ್ಲೂಕು, ಇಲ್ಲಿ ಬಡ ಕಕ್ಷಿದಾರರಿಗೆ ವಕೀಲರುಗಳೇ ತಮ್ಮ ಸ್ವಂತ ಖಚರ್ಿನಲ್ಲಿ ಕಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆತಂದಿರುವ ಉದಾಹರಣೆಗಳಿವೆ ಆದುದರಿಂದ ನ್ಯಾಯಾಲಯವು ಕೆಲವು ವಿಷಯಗಳಲ್ಲಿ ಕಕ್ಷಿದಾರರಿಗೆ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದರು. ಹಿರಿಯ ವಕೀಲರಾದ ಎಂ.ಮಹಲಿಂಗಯ್ಯ, ಜಿ.ಎಸ್.ಚನ್ನಬಸಪ್ಪ, ಸಿ.ಕೆ.ಸೀತಾರಾಮಯ್ಯ, ಸಿದ್ದನಕಟ್ಟೆ ಚಂದ್ರಶೇಖರ್ ಮಾತನಾಡಿದರು.ಸಮಾರಂಭದಲ್ಲಿ ವಕೀಲರಾದ ಹನುಮಂತಪ್ಪ ಪ್ರಾಥರ್ಿಸಿ, ಸಿ.ರಾಜಶೇಖರ್ ಸ್ವಾಗತಿಸಿ ಲೋಕೇಶ್ ನಿರೂಪಿಸಿ, ಎನ್.ಎನ್.ಶ್ರೀಧರ್ ವಂದಿಸಿದರು.
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಮೇ

.26: ಅಂಗನವಾಡಿ ಸಹಾಯಕಿಯರ ನಿವೃತ್ತಿಯಿಂದ 13 ಅಂಗನವಾಡಿ ಕೇಂದ್ರಗಳಿಗೆ ಅರ್ಹ ಅಭ್ಯಥರ್ಿಗಳಿಂದ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಜರ್ಿಗಳನ್ನು ಆಹ್ವಾನಿಸಲಾಗಿದೆ.ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಯ ಅಡಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿಯಾಗಿದ್ದು ತಾಲ್ಲೂಕಿನ ನಡುವನಹಳ್ಳಿ, ಚಟ್ಟಸಂದ್ರ, ಇಂದಿರಾನಗರ ಹುಳಿಯಾರು, ಲಕ್ಮಗೊಂಡನಹಳ್ಳಿ, ಸಾಸಲ.ಎ, ಹೊಸಹಳ್ಳಿ, ಕೇದಿಗೆಹಳ್ಳಿ, ಬುಳ್ಳೇನಹಳ್ಳಿ, ಮಾರಸಂದ್ರ ಪಾಳ್ಯ, ಕುರಿಹಟ್ಟಿ, ಬಾಲದೇವರಹಟ್ಟಿ, ಕೆಂಕೆರೆ, ದೊಡ್ಡರಾಂಪುರ, ಗ್ರಾಮಗಳಿಗೆ ಮೇ 24ರಂದು ಪ್ರಕಟಣೆ ಹೊರಡಿಸಿದ್ದು ಸಂಬಂಧಪಟ್ಟ ಗ್ರಾಮ, ಗ್ರಾಮಪಂಚಾಯ್ತಿ, ಗ್ರಾಮದ ಶಾಲೆಗಳಲ್ಲಿ ಪ್ರಕಟಣೆಯನ್ನು ಪ್ರಚಾರಪಡಿಸಲಾಗಿದೆ, ಭತರ್ಿ ಮಾಡಿದ ಅಜರ್ಿಗಳನ್ನು ಜೂನ್ 6ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸಬಹುದಾಗಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಖೈಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, May 21, 2011













ಸಕರ್ಾರಿ ಸವಲತ್ತುಗಳನ್ನು ಪಡೆಯಲು ಕರೆಚಿಕ್ಕನಾಯಕನಹಳ್ಳಿ,







ಮೇ.21: ಸಕರ್ಾರಿ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಕಂಬಳಿ ನೇಕಾರರು ಆಥರ್ಿಕವಾಗಿ ಅಭಿವೃದ್ದಿ ಹೊಂದುವಂತೆ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಕರೆ ನೀಡಿದರು. ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘ(ನಿ) ದಲ್ಲಿ ಕಂಬಳಿ ನೇಕಾರರಿಗೆ ಜವಳಿ ಮತ್ತು ಕೈಮಗ್ಗ ಇಲಾಖೆಯಿಂದ ಮಂಜೂರಾದ ಮನೆ ನಿಮರ್ಾಣದ ಸಹಾಯಧನ, ಗ್ರಾಮೀನ ಮತ್ತು ನಗರ ವ್ಯಾಪ್ತಿಯ ಕಾರ್ಯಗಾರ ಹಾಗೂ ಕಂಬಳಿ ನೇಕಾರರ ಮಕ್ಕಳಿಗೆ ವಿದ್ಯಾಥರ್ಿ ವೇತನದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ ಸಂಘಗಳು ಏಕಮುಖಿಯಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಮತ್ತು ಉತ್ತಮವಾಗಿ ಕೆಲಸ ಮಾಡುವವರನ್ನು ಕಾಲಿಡಿದು ಎಳೆಯುವ ಪ್ರವೃತ್ತಿಯನ್ನು ಬಿಡಬೇಕು ಆಗ ಮಾತ್ರ ಸಂಘಗಳು ಅಭಿವೃದ್ದಿ ಹೊಂದುತ್ತವೆ ಎಂದು ಹೇಳಿದರು.ಸಮಾರಂಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು, ಜಿ.ಪಂ.ಸದಸ್ಯೆ ಮಂಜುಳ ಗವಿರಂಗಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಉಪಾಧ್ಯಕ್ಷ ಸಿ.ಕೆ.ಲೋಕೇಶ್, ಸಿ.ಪಿ.ಗಿರೀಶ್, ಸಿ.ಎಸ್.ದೇವರಾಜು , ಸಂಘದ ನಿದರ್ೇಶಕರುಗಳು ಹಾಜರಿದ್ದರು.

Thursday, May 19, 2011
















ಭೂ ಸ್ವಾಧೀನದ ಪ್ರಕ್ರಿಯೆಯನ್ನು ಕೈ ಬಿಡುವಂತೆ ಒತ್ತಾಯಚಿಕ್ಕನಾಯಕನಹಳ್ಳಿ,

ಮೇ.19: ಕೇವಲ ಜೀವನಾದಾರಕ್ಕೆ 5, 10 ಗುಂಟೆ ಭೂ ಪ್ರದೇಶ ಹೊಂದಿರುವವರೆ ಹೆಚ್ಚು, ಈ ಭೂ ಒಡೆಯರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಸಕರ್ಾರದ ಕ್ರಮ ಖಂಡಿಸಿ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಕರ್ಾರವನ್ನು ಎಚ್ಚರಿಸಿದೆ. ಪಟ್ಟಣದ ಎಲ್ಲಮ್ಮದೇವಿಯ ದೇವಾಲಯದ ಆವರಣದಲ್ಲಿ ದಾಸೀಹಳ್ಳಿ ಹಾಗೂ ಬ್ಯಾಲದಕೆರೆಯ ಆಜುಬಾಜಿನಲ್ಲಿರುವ 80 ಎಕರೆ 10ಗುಂಟೆ, ಗೃಹಮಂಡಳಿಯ ಭೂ ಸ್ವಾಧೀನಕ್ಕೆ ಒಳಪಡುವ 107 ಮಂದಿ ರೈತರು ಸಭೆ ಸೇರಿ ಭೂ ಸ್ವಾಧೀನ ಕಾಯಿದೆ ಕಲಂ 4(1) ಅಡಿಯಲ್ಲಿ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು ಕಲಂ 6(1)ಎ ಕಾಯಿದೆಗೆ ಒಳಪಟ್ಟರೆ ರೈತರು ಭೂಮಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಸಕರ್ಾರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿ ಬಡ ರೈತರನ್ನು ರಕ್ಷಿಸುವ ಹೊಣೆ ಎಲ್ಲರ ಜವಾಬ್ದಾರಿಯಾಗಿದೆ. ಈ ಹೋರಾಟದಲ್ಲಿ ಮಾನ್ಯ ಶಾಸಕರು ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.ರೈತ ಮುಖಂಡ ಸಿ.ಬಿ.ತಿಪ್ಪೇಸ್ವಾಮಿ ಮಾತನಾಡಿ ಬದ್ದತೆಯ ಮೂಲಕ ಹೋರಾಟ ಕೈಗೆತ್ತಿಕೊಳ್ಳಬೇಕು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಡುವ ಹೋರಾಟದಲ್ಲಿ ಯಶಸ್ಸು ಕಾಣುವವರೆಗೂ ಸಂಘಟಿತರಾಗಿರಬೇಕು ಎಂದರು.ಸಭೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಿ.ಡಿ.ರಾಜಣ್ಣ, ಪುರಸಭೆ ಸದಸ್ಯ ಸಿ.ಪಿ.ಮಹೇಶ್, ಸಿ.ಪಿ.ಚಂದ್ರಶೇಖರಶೆಟ್ಟಿ, ಟಿ.ಕುಮಾರಯ್ಯ, ಸಿ.ಎನ್.ಕುಮಾರ್, ಪುಟ್ಟಯ್ಯ, ರಾಮಚಂದ್ರಯ್ಯ, ಸಿ.ವಿ.ದಯಾನಂದ, ಸಿ.ಬಿ.ರೇಣುಕಸ್ವಾಮಿ, ಸಿ.ಎಸ್.ಮಲ್ಲಿಕಾಜರ್ುನಯ್ಯ, ಬ್ಯಾಲದಕೆರೆ ನಂಜಪ್ಪ ಉಪಸ್ಥಿತರಿದ್ದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಿಗೆಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ಆಗ್ರಹಿಸಿ ತಾಲೂಕು ದಂಡಾದಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ರಾಜ್ಯ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂ

ಚಿಕ್ಕನಾಯಕನಹಳ್ಳಿ,ಮೇ.19 : ರಾಜ್ಯ ರಕ್ಷಣ ವೇದಿಕೆ ದಶಮಾನೋತ್ಸವವು ಬೆಂಗಳೂರು ಅರಮನೆಯ ಮೈದಾನದಲ್ಲಿ ಇದೇ ತಿಂಗಳ 28-29ರಂದು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕರವೇ ಅಧ್ಯಕ್ಷ ಎನ್.ಎಸ್. ವಿಷ್ಣುವರ್ಧನ್ ಹೇಳಿದರು. ಪಟ್ಟಣದ ಸಕರ್ಾರಿ ನೌಕರರ ಸಂಘದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಕ್ಷಣ ವೇದಿಕೆಗೆ 10ನೇ ವರ್ಷ ದಾಟಿ 11ನೇ ವರ್ಷಕ್ಕೆ ಕಾಲಿಟ್ಟಿದೆ. ಕರವೇ ಒಗ್ಗೂಡಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭಕ್ಕೆ ನಮ್ಮ ಜಿಲ್ಲೆಯಿಂದ 10.000 ಕಾರ್ಯಕರ್ತರು ಆಗಮಿಸುವ ನೀರಿಕ್ಷೆಯಿದೆ ಎಂದರು. ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಗಳ ಜನಪದ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪ್ರದಶರ್ಿಸುವ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದ್ದು ರಾಜ್ಯದ ಅಭಿವೃದ್ಧಿಯ ಚಿಂತನೆ ಜಾನಪದದ ವಿಚಾರವಾಗಿ ರಾಜ್ಯಮಟ್ಟದಲ್ಲಿ ವಿಚಾರ ಗೋಷ್ಟಿಗಳ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರು ನಾಡಿನ ಮಠಾಧೀಶರುಗಳು ಜನ ಪ್ರತಿನಿಧಿಗಳು ಅನಿವಾಸಿ ಕನ್ನಡಿಗರು ಸಾಹಿತಿಗಳು ಹಾಗೂ ನಾಡಪರ ಚಿಂತಕರ ಸಮ್ಮುಖದಲ್ಲಿ ನೆಡೆಯಲಿರುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.ತಾಲೂಕು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಪ್ರತಿಯೊಂದು ಹೋಬಳಿ &ಗ್ರಾಮಗಳಲ್ಲಿ ನಮ್ಮ ಕರವೇ ಶಾಖೆಗಳನ್ನು ತೆಗೆಯಬೇಕು ಮುಖಂಡರುಗಳು ಜನಪರ ರೈತರಿಗಾಗಿ ಅನ್ಯಾಯ ಆಗದಂತೆ ಹೋರಾಟ ಮಾಡಿ ಒಳ್ಳೆಯ ಕೆಲಸ ಮಾಡಬೇಕು ನಮ್ಮ ರಾಜ್ಯದಲ್ಲಿ ಭ್ರಷ್ಟಚಾರ ಜಾಸ್ತಿಯಗಾಗಿದೆ ಬಳ್ಳಾರಿ ಜಿಲ್ಲೆ ಮೊದಲನೆಯದಾದರೆ ಎರಡನೇಯದಾಗಿ ತುಮಕುರು ಜಿಲ್ಲೆ ಇವುಗನ್ನು ಹೋಗಲಾಡಿಸಲು ಪ್ರಯತ್ನಿಸೋಣ ಎಂದರು.ಸಭೆಯಲ್ಲಿ ಕೃಷ್ಣಮೂತರ್ಿ ಪ್ರಾಥರ್ಿಸಿ, ಲಕ್ಷ್ಮೀಶ್ ಸ್ವಾಗತಿಸಿ, ಸಿ.ಟಿ.ಗುರುಮೂತರ್ಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಮರ್ಿಕರ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ವಿದ್ಯಾಥರ್ಿ ಘಟಕದ ಅಧ್ಯಕ್ಷ ರಾಜೇಶ್ ಹಾಗೂ ಕರವೇ ಕಾರ್ಯಕರ್ತರು ಹಾಜರಿದ್ದರು.

Wednesday, May 18, 2011


ರಾಜ್ಯಪಾಲರನ್ನು ವಾಪಸ್ ಕೇಂದ್ರಕ್ಕೆ ಕರೆಸಿಕೊಳ್ಳಲು ಆಗ್ರಹ
ಚಿಕ್ಕನಾಯಕನಹಳ್ಳಿ,ಮೇ.18: ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ರವರು ಬಿ.ಜೆ.ಪಿ ನೇತೃತ್ವದ ಸಕರ್ಾರವನ್ನು ರಾಜ್ಯದಲ್ಲಿ ವಜಾ ಮಾಡಬೇಕೆಂದು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಘಟಕ ಕಾರ್ಯಕರ್ತರೊಂದಿಗೆ ನಗರದ ನೆಹರು ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಸಂವಿಧಾನ ವಿರೋದಿ ರಾಜ್ಯಪಾಲರ ಅಸಂವಿಧಾನಿಕ ಕುತಂತ್ರ ವರದಿಯನ್ನು ಕೇಂದ್ರ ಸಕರ್ಾರ ತಿರಸ್ಕರಿಸಬೇಕು ಹಾಗೂ ಕಾಂಗ್ರೆಸ್ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವ ಇವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದರು.
ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಜನರಿಂದ ಆಯ್ಕೆಯಾದ ಬಿಜೆಪಿ ಸಕರ್ಾರಕ್ಕೆ ಕಿರುಕುಳ ನೀಡುತ್ತಲಿದ್ದಾರೆ, ಸಕರ್ಾರಕ್ಕೆ 121 ಸದಸ್ಯರ ಬಲವಿದ್ದರೂ ಸಕರ್ಾರವನ್ನು ಅಮಾನತ್ತಿನಲ್ಲಿಡಲು ಶಿಫಾರಸ್ಸು ಮಾಡಲು ರಾಜ್ಯಪಾಲರ ಕ್ರಮ ಪ್ರಜಾತಂತ್ರಕ್ಕೆ ಮಾಡಿದ ಅಪಮಾನ ಇಂತಹ ಕೃತ್ಯಗಳನ್ನು ಎಸಗುತ್ತಿರುವ ರಾಜ್ಯಪಾಲರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವುದು ಸೂಕ್ತ ಎಂದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ (ಮಿಲ್ಟ್ರೀ)ಶಿವಣ್ಣ, ಹಳೇಮನೆ ಸುರೇಶ್, ಶ್ರೀನಿವಾಸಮೂತರ್ಿ, ರವಿಕುಮಾರ್, ಎಚ್.ಎಲ್.ಜಯದೇವ್, ಹುಳಿಯಾರ್ ಮೋಹನ್, ರಾಜಣ್ಣ, ರೇವಣ್ಣ ಮಧುಸೂಧನ, ಚಿತ್ತಯ್ಯ, ಕೆ.ಕೆ.ಹನುಮಂತಪ್ಪ ರೋಜೆಗೌಡ, ಈಶ್ವರ್ಭಾಗವತ್ ಕಾರ್ಯಕರ್ತರು ಹಾಜರಿದ್ದರು.ಕವಿಗಳು ಹಾಗೂ ಲೇಖಕರು ಹೆಸರು ನೊಂದಾಯಿಸಿಕೊಳ್ಳಲು ಮನವಿ
ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕು ನಾಲ್ಕನೇಯ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 10 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕವಿಗೋಷ್ಠಿ ಮತ್ತು ಲೇಖಕರ ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗುವುದು, ತಾಲೂಕಿನ ಆಸಕ್ತ ಕವಿಗಳು ತಮ್ಮ ಸ್ವರಚಿತ ಒಂದು ಕವನವನ್ನು ವಾಚಿಸಲು ಅವಕಾಶವಿದೆ, ಲೇಖಕರು ತಮ್ಮ ಹೊಸ ಪುಸ್ತಕದ ಒಂದು ಪ್ರತಿಯನ್ನು ಕಳಿಸಲು ಕೋರಿದೆ.
ಕವಿಗಳು ಹಾಗೂ ಲೇಖಕರು, ಸಿ.ಗುರುಮೂತರ್ಿ ಕೋಟಿಗೆಮನೆ ಕಾರ್ಯದಶರ್ಿ ತಾ.ಕ.ಸಾ.ಪ ಇವರಲ್ಲಿ ದಿ. 31.05.2011ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ, ಹೆಚ್ಚಿನ ಮಾಹಿತಿಗೆ ಮೊ.9448659573. ಸಂಪಕರ್ಿಸಲು ಕೋರಿದೆ.
ಡಿ.ವಿ.ಪಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 71.96 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ದೇಶೀಯ ವಿದ್ಯಾಪೀಠ ಬಾಲಕರ ಪ್ರೌಢಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಶೇ.71.96ರಷ್ಟು ಪಲಿತಾಂಶ ಪಡೆದಿದೆೆ.
ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಮೇಘನ. ಎಮ್. 597, ಶ್ರೀನಿವಾಸ್. ಟಿ. - 594. ಯೋಗೀಶ್. .ಆರ್. 575, ಪೂಜಾ .ಕೆ.ಜೆ. 563, ಅನುಶ್ರೀ 543, ಮನೋಜ್ ಕುಮಾರ್ 535 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ರೋಟರಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 92.72 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ರೋಟಾರಿ ಇಂಗ್ಲೀಷ್ ಪ್ರೌಡಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.92.72ರಷ್ಟು ಪಲಿತಾಂಶ ಪಡೆದಿದೆೆ.
55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು 11 ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿ, 22 ವಿದ್ಯಾಥರ್ಿಗಳು ಪ್ರಥಮ ದಜರ್ೆ, 5 ವಿದ್ಯಾಥರ್ಿಗಳು ದ್ವೀತೀಯ ದಜರ್ೆ, 13 ವಿದ್ಯಾಥರ್ಿಗಳು ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಶಿಲ್ಪ ಎಸ್. (585) 93.6, ಅಮೂಲ್ಯ ಜಿ.ಎಸ್.(582) 93.12, ಪ್ರಿಯಾ ಬಿ.(582)93.12, ಭವ್ಯ ಆರ್.(579)92.64, ದಿಲೀಪ ಎಮ್. ಬಿ.(578)92.48, ಚಿದಾನಂದ(563) 90.08, ಮೇಘನ ಹೆಚ್.(557)89.12, ಬಿಂದುಶ್ರೀ(552)88.32, ಅಪೇಕ್ಷ ಜೆ.ಎಮ್.(549)87.84, ನಂದೀನಿ ಕೆ.(546)87.36. ಹಷರ್ಿತ ಎಸ್.ವಿ.(537) 85.94 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ಭಾರಿ ಮಳೆಗೆ 1ಲಕ್ಷಕ್ಕೂ ಹೆಚ್ಚು ಹಾನಿ
ಚಿಕ್ಕನಾಯಕನಹಳ್ಳಿ,ಮೇ18: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ 34.8ರಷ್ಟು ಮಿ.ಮೀ ಭಾರಿ ಮಳೆಯಿಂದಾಗಿ ತೆಂಗಿನ, ಅಡಿಕೆ, ರಸ್ತೆಬದಿಯ ಮರ ಹಾಗೂ 17 ಮನೆಗಳು ಕುಸಿದು 1ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.
ಕಂದಿಕೆರೆ ಹೋಬಳಿಯ ಆಶ್ರಹಾಳ್ನಲ್ಲಿ 16 ಮನೆಗಳು ಕುಸಿತಗೊಂಡು, ಕಂದಿಕೆರೆಯಲ್ಲಿ 1 ಮನೆ ಕುಸಿದಿದೆ, ಚಿ.ನಾ.ಹಳ್ಳಿಯಲ್ಲಿ 65.ಮಿ.ಮೀ, ಶೆಟ್ಟಿಕೆರೆಯಲ್ಲಿ 22.ಮಿ.ಮೀ, ಮತಿಘಟ್ಟದಲ್ಲಿ 14.1 ಮಿ.ಮೀ, ದೊಡ್ಡೆಣ್ಣೆಗೆರೆ 9.3 ಮಿ.ಮೀ, ಹುಳಿಯಾರು 40.6 ಮಿ.ಮೀ, ಬೋರನಕಣಿವೆ 46.2 ಮಿ.ಮೀ, ಸಿಂಗದಹಳ್ಳಿ 49.2 ಮಿ.ಮೀ.ನಷ್ಠು ಮಳೆಯಾಗಿದ.

























Wednesday, May 11, 2011





ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಲಿಂಗದೇವರು ಹಳೇಮನೆ
ಚಿಕ್ಕನಾಯಕನಹಳ್ಳಿ,ಮೇ.11: ತಾಲೂಕಿನ ನಾಲ್ಕನೇ ಸಾಹಿತ್ಯ ಸಮ್ಮೇಳನ ಜೂನ್ 10ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ಸಮ್ಮೇಳನಾಧ್ಯಕ್ಷರಾಗಿ ರಂಗಾಯಣ ನಿದರ್ೇಶಕ ಲಿಂಗದೇವರು ಹಳೇಮನೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ..ಸಾ.. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹತ್ತಕ್ಕು ಹೆಚ್ಚು ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುವ ಅರ್ಹತೆ ಇರುವ ಸಾಹಿತಿಗಳಿದ್ದು, ಇವರಲ್ಲಿ ಅಂತಿಮವಾಗಿ ಮೂವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದು ನಮ್ಮ ಕಾರ್ಯಕಾರಿ ಸಮಿತಿ ಜಿಲ್ಲಾ .ಸಾ. ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪನವರ ನೇತೃತ್ವದಲ್ಲಿ ಸಭೆ ಸೇರಿ ಲಿಂಗದೇವರು ಹಳೇಮನೆಯವರನ್ನು ಒಮ್ಮತದಿಂದ ತೀಮರ್ಾನಿಸಲಾಯಿತು ಎಂದರು.
ಸಮ್ಮೇಳನವನ್ನು ಒಂದು ದಿನ ನಡೆಸಲು ತೀಮರ್ಾನಿಸಿದ್ದು, ಜೂನ್ 10 ಬೆಳಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಆರಂಭಗೊಳ್ಳುವ ಸಮ್ಮೇಳನ, ಉದ್ಘಾಟನೆ, ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕವಿ ಗೋಷ್ಠಿ,ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಗುವುದಲ್ಲದೆ, ತಾಲೂಕಿನ ಮೂಲದವರಾಗಿದ್ದು ಹೊರಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ತಾ. .ಸಾ.. ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.

ನೆಲಮೂಲದ ಸಂಸ್ಕೃತಿ ನೈಜವಾಗಿರುವುದು ರಂಗಭೂಮಿ, ಜಾನಪದ ಕಲೆಗಳಲ್ಲಿ ಮಾತ್ರ : ಎಸ್.ಜಿ.ಎಸ್
ಚಿಕ್ಕನಾಯಕನಹಳ್ಳಿ,ಮೇ.11: ನಮ್ಮ ನೆಲದ ಪುರಾಣ ಪರಂಪರೆಯನ್ನು ಉಳಿಸಿ ಬೆಳಸಿಕೊಳ್ಳುವುದು ಅಗತ್ಯವಾಗಿದ್ದು, ನೆಲಮೂಲ ಸಂಸ್ಕೃತಿಯನ್ನು ಉಳಿಸಬೇಕಾದರೆ ಬೇರು ಮೂಲದ ಕಲೆಗಳಾದ ರಂಗಭೂಮಿ ಮತ್ತು ಜಾನಪದ ಕಲೆಗಳನ್ನು ಬೆಳಸಬೇಕೆಂದು ಕವಿ, ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಮ್ಮ ಯುವ ಜನಾಂಗದಲ್ಲಿ ಪುರಾಣದ ತಿಳುವಳಿಕೆ ಕಡಿಮೆಯಾಗಿದೆ, ಪಠ್ಯಪುಸ್ತಕದಲ್ಲಿ ಪುರಾಣಗಳಿಗೆ ಸಂಬಂಧಿಸಿದ ಪಾತ್ರಗಳನ್ನು ಪರಚಯಿಸುವುದು ಅವಶ್ಯವಾಗಿದೆ ಎಂದರು. ದೃಶ್ಯಮಾಧ್ಯಮಗಳ ದಾಳಿಯ ಕಾಲದಲ್ಲೂ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಪುರಾಣ ಪಾತ್ರಗಳಿಗೆ ಜೀವತುಂಬವ ಕೆಲಸವನ್ನು ಅನುಚಾನವಾಗಿ ನಡೆಸಿಕೊಂಡು ಬಂದಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ ಮಾತನಾಡಿ ಕಿರು ತೆರೆಯಲ್ಲಿ ಕಲಾವಿದ ಕುಬ್ಜನಾಗಿ ಕಾಣುತ್ತಾನೆ, ಬೆಳ್ಳಿ ತೆರೆಯಲ್ಲಿ ಹಿರಿದಾಗಿ ಕಾಣುತ್ತಾನೆ ಆದರೆ ರಂಗ ಭೂಮಿಯಲ್ಲಿ ಕಲಾವಿದ ನೈಜವಾಗಿ ಕಾಣುತ್ತಾನೆ, ಇದೇ ರಂಗಭೂಮಿಯ ವಿಶೇಷತೆ ಎಂದರಲ್ಲದೆ, ಹಿರಿ ತೆರೆ, ಕಿರು ತೆರೆ ನಡುವೆ ಅನುಸಂಧಾನ ಕಾರ್ಯವನ್ನು ಮಾಡುತ್ತಿರುವುದು ರಂಗ ಕಲೆ ಎಂದರು.
ರಂಗಭೂಮಿಯಲ್ಲಿ ಸ್ಪಂದನ, ಸಂವೇದನೆ ಎರಡಕ್ಕೂ ಸೂಕ್ತ ಅವಕಾಶವಿರುತ್ತದೆ ಆದ್ದರಿಂದಲೇ ಇಲ್ಲಿ ಪ್ರೇಕ್ಷಕನ ಆಸಕ್ತಿಯನ್ನು ನೇರವಾಗಿ ಏಕ ಕಾಲದಲ್ಲಿ ಸಮಗ್ರವಾಗಿ ಕಾಣುವ ಕಲೆ ಇದಾಗಿದೆ ಎಂದರು.
ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ರಂಗ ಕಲೆ ಇಂದಿಗೂ ಜೀವಂತವಾಗಿರುವುದು ಗ್ರಾಮೀಣ ಭಾಗದಲ್ಲಿ ಅದಕ್ಕೆ ಕಾರಣ ನಮ್ಮಲ್ಲಿ ಇನ್ನೂ ಜಾನಪದ ಕಲೆಗಳ ಬಗ್ಗೆ ಜನರಲ್ಲಿರುವ ಆಸಕ್ತಿ ಮತ್ತು ಒಲವು ಎಂದರಲ್ಲೆ, ಪ್ರತಿ ಮನುಷ್ಯನಲ್ಲೂ ಒಂದೊಂದು ಕಲೆ ಸುಪ್ತವಾಗಿರುತ್ತದೆ ಅದಕ್ಕೆ ಅಗತ್ಯವಿರುವ ವೇದಿಕೆಗಳನ್ನು ಒದಗಿಸಿದರೆ ಹೊರ ಹೊಮ್ಮಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಸಮಾರಂಭದಲ್ಲಿ ಚಿತ್ರ ನಿದರ್ೇಶಕ ಲಿಂಗದೇವರು ಬ್ಯಾಲಕೆರೆ ಮಾತನಾಡಿದರು, .ಸಿ. ಪಾಟೀಲ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿದರ್ೇಶಕ ಚಂದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗೋವಿಂದಗೌಡ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿದ್ದರು.
ದಿವ್ಯ ಜ್ಯೋತಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಗೌರವಾಧ್ಯಕ್ಷ ಗುರುಲಿಂಗಯ್ಯ, ಕಲಾವಿದರಾದ ಕೆ.ಪಿ.ಕೃಷ್ಣಪ್ಪ, ಕೃಷ್ಣಾಚಾರ್ ರವರನ್ನು ಸನ್ಮಾನಿಸಲಾಯಿತು.


ಚಿ.ನಾ.ಹಳ್ಳಿ ಜಿ.ಜೆ.ಸಿ.ಯ 2ನೇ ಪಿ.ಯು.ಸಿ.ಯಲ್ಲಿ ಶೇ. 60ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.11: ಇಲ್ಲಿನ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್ನ ಎರಡನೇ ವರ್ಷದ ಪಿ.ಯು.ಸಿ.ಯಲ್ಲಿ ಎಲ್ಲಾ ವಿಭಾಗಗಳಿಂದ ಶೇ. 60 ರಷ್ಟು ಫಲಿತಾಂಶ ಬಂದಿದೆ, ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 78, ಕಲಾ ವಿಭಾಗದಲ್ಲಿ ಶೇ.62, ವಿಜ್ಞಾನ ವಿಭಾಗದಲ್ಲಿ ಶೇ 40ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಪ್ತಗಿರಿ ಎಂಬ ವಿದ್ಯಾಥರ್ಿ 500 ಅಂಕ ಪಡೆದು ಕಾಲೇಜಿಗೆ ಪ್ರಥಮ ನೆನಿಸಿಕೊಂಡಿದ್ದರೆ, ಪೂಜಾ ಎಸ್.ಆರ್. 487 ಅಂಕಪಡೆದು ಎರಡನೇ ಸ್ಥಾನದಲ್ಲಿದ್ದಾರೆ,
500ಕ್ಕಿಂತ ಹೆಚ್ಚು ಅಂಕ ಪಡೆದವರು, ಪವಿತ್ರ ಎಸ್ 502, ಮೇನಕಮ್ಮ ಬಿ.ಎನ್.504, ವರಧೀಶ ಕೆ. 510, ಲಾವಣ್ಯ ಡಿ.ಸಿ 517, ಪ್ರಿಯಾ ಎಚ್.ವೈ 505, ಶ್ರೀ ದೇವಿ 506, ಸುಪ್ರೀತ ಟಿ.ಎನ್. 512, ಕಾವ್ಯಶ್ರೀ ಬಿ.ಜೆ 530 ಅಂಕಗಳಿಸಿದ್ದಾರೆ.
ಯೋಗಾಂಜನೇಯಸ್ವಾಮಿ ದೇವಾಲಯ ಪ್ರಾರಂಭೋತ್ಸವ
ಚಿಕ್ಕನಾಯಕನಹಳ್ಳಿ,ಮೇ.11 : ಶ್ರೀ ಮಹಾಗಣಪತಿ, ಯೋಗಾಂಜನೇಯಸ್ವಾಮಿ, ಸುಬ್ರಹ್ಮಣ್ಯಸ್ವಾಮಿಯವರ ನೂತನ ದೇವಾಲಯ ಪ್ರಾರಂಭೋತ್ಸವ, ಕಳಸ ಪ್ರತಿಷ್ಠಾಪನಾ ಮತ್ತು ಧಾಮರ್ಿಕ ಸಭೆಯನ್ನು ಇದೇ 12 13 ಮತ್ತು 14ರಂದು ಏರ್ಪಡಿಸಲಾಗಿದೆ.
ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ನೂತನ ದೇವಾಲಯದಲ್ಲಿ 12ರಂದು ಹಳೆಯೂರು ಆಂಜನೇಯಸ್ವಾಮಿಯವರ ಆಗಮನದೊಂದಿಗೆ ಗಂಗಾಪೂಜೆ ದೇವಾಲಯ ಪ್ರವೇಶ, ನವಗ್ರಹ ಪೂಜೆ, 13ರಂದು ಸುದರ್ಶನ ಹೋಮ, ಜಯಾದಿಹೋಮ, ರಾಮತಾರಕಹೋಮ ಸಂಜೆ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಮ್ಮಿಕೊಂಡಿದ್ದು 14ರಂದು ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಿದ್ದು ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರಸ್ವಾಮಿ, ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿಸ್ವಾಮಿ, ತಮ್ಮಡಿಹಳ್ಳಿ ಮಠದ ಶ್ರೀ ಅಭಿನವಮಲ್ಲಿಕಾಜರ್ುನಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಚಾರ್ಯಸ್ವಾಮಿ, ಗೋಡೆಕೆರೆ ಮಠದ ಮೃಂತ್ಯುಂಜಯಸ್ವಾಮಿ ಉಪಸ್ಥಿತರಿರುವರು.

Tuesday, May 10, 2011

ದಲಿತ ರಂಗಯ್ಯನನ್ನು ಕೊಲೆಮಾಡಿರುವವರನ್ನು ಕೂಡಲೇ ಬಂಧಿಸಿ ಹುಳಿಯಾರ್ ಎಸ್.ಐ.ರವರನ್ನು ಅಮಾನತ್ತು ಪಡಿಸಿ ರಂಗಯ್ಯನ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರಕ್ಕೆ ಒತ್ತಾಯಚಿಕ್ಕನಾಯಕನಹಲ್ಲಿ,

ಮೇ.11: ಕಲ್ಲಹಳ್ಳಿ ದಲಿತ ರಂಗಯ್ಯನನ್ನು ಅಮಾನುಷವಾಗಿ ಕೊಲೆ ಮಾಡಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಎಫ್.ಐ.ಆರ್.ನಲ್ಲಿ ಕಠಿಣವಾದ ಕಾಲಂಗಳನ್ನು ನಮೂದಿಸಬೇಕು, ಹುಳಿಯಾರು ಎಸ್.ಐ.ರವರನ್ನು ಅಮಾನತ್ತುಗೊಳಿಸಬೇಕು ಹಾಗೂ ಮೃತ ರಂಗಯ್ಯನ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ನೀಡಬೇಕೆಂದು ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಹುಳಿಯಾರು ಹೋಬಳಿಯ ಕಲ್ಲಹಳ್ಳಿ ರಂಗಯ್ಯನನ್ನು ಗವಿರಂಗಯ್ಯ, ಅನಂತಯ್ಯ, ಯೋಗೀಶ್, ಶಿವಣ್ಣ, ನಿರುವಗಲ್ ಆಟೋ ಗುರು ಎಂಬುವರು ಔತಣಕೂಟಕ್ಕೆಂದು ಕರೆದುಕೊಂಡು ಹೋಗಿ ಅವನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಬೇವಿನಹಳ್ಳಿ ಚನ್ನಬಸವಯ್ಯ, ಮೂರು ಕುಂಟೆ ಜಮೀನಿಗಾಗಿ ಒಂದು ಪ್ರಾಣವನ್ನೆ ತೆಗೆದಿರುವ ಆರೋಪಿಗಳನ್ನು ಕಠಿಣ ಕಾನೂನಿ ಅಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಹಿಂದೆ ದಲಿತ ಮಹಿಳೆ ಹೊನ್ನಮ್ಮನ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಕಠಿಣ ಕಾನೂನಿನಡಿಯಲ್ಲಿ ಬಂಧಿಸದೇ, ಅವರಲ್ಲಿ ಬಹುತೇಕರು ಜೈಲಿನಿಂದ ಹೊರಬಂದಿರುವುದು ದಲಿತರ ಮೇಲಿನ ದೌರ್ಜನ್ಯಕ್ಕೆ ಕುಮ್ಮುಕ್ಕು ನೀಡಿದೆ ಎಂದಿರುವ ಚನ್ನಬಸವಯ್ಯ, ಈ ಪ್ರಕರಣದಲ್ಲಿ ಮತ್ತೇ ಇಂತಹದೇ ತಪ್ಪು ಮಾಡದೇ ರಂಗಯ್ಯನನ್ನು ಕೊಲೆ ಮಾಡಿರುವ ಆರೋಪಿಗಳಿಗೆ ಬಿಗಿಯಾದ ಕಾನೂನಿನಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದಶರ್ಿ ಗೋಪಾಲಪುರ ಮಹದೇವ್, ಡಿ.ಕುಮಾರ್, ಈಚನೂರು ಮಹದೇವ್, ಜಿಲ್ಲಾ ಅಧ್ಯಕ್ಷ ಮಣಿವಿನ ಕುರಿಕೆ ಶಿವಕುಮಾರ್, ಸಿಂಗದಹಳ್ಳಿ ಗಿರಿಯಪ್ಪ, ಮಾರುಹೊಳೆ ನಾಗರತ್ನಮ್ಮ, ತಿಮ್ಮಯ್ಯ, ಹನುಮಯ್ಯ, ಹೊನ್ನೆಬಾಗಿ ಕೃಷ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೆ.ಸಿ.ಪುರ ಗ್ರಾ.ಪಂ. ಪಿ.ಡಿ.ಓ. ಅಮಾನತ್ತುಚಿಕ್ಕನಾಯಕನಹಳ್ಳಿ,

ಮೇ.11: ತಾಲೂಕಿನ ಜೆ.ಸಿ.ಪುರ ಗ್ರಾ.ಪಂ.ಯ ಪಿ.ಡಿ.ಓ. ಸುಭಾಷ್ ಚಂದ್ರ ಅವರನ್ನು ಜಿ.ಪಂ. ಸಿ.ಇ.ಓ.ರವರು ಸೇವೆಯಿಂದ ಅಮಾನತ್ತು ಗೊಳಿಸಿದ್ದಾರೆ ಎಂದು ಇ.ಓ. ದಯಾನಂದ ತಿಳಿಸಿದ್ದಾರೆ. ಜೆ.ಸಿ.ಪುರ ಗ್ರಾ.ಪಂ.ವ್ಯಾಪ್ತಿಯ ಅಭಿವೃದ್ದಿ ಅಧಿಕಾರಿ ಸಾರ್ವಜನಿಕರೊಂದಿಗೆ ಬೇಜವಬ್ದಾರಿ ವರ್ತನೆ ಹಾಗೂ 3.5 ಲಕ್ಷ ರೂಗಳ ಕಾಮಗಾರಿ ಒಂದರ ಓಚರ್ ನಿರ್ವಹಣೆ ಹಾಗೂ ಕ್ಯಾಷ್ ಬುಕ್ ಬರೆದಿಲ್ಲದಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು ತನಿಖೆಯನ್ನು ಕಾಯ್ದಿರಿಸಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿ.ಪಂ. ಸಿ.ಇ.ಓ. ಅಮಾನತ್ತು ಆದೇಶ ಹೊರಡಿಸಿದ್ದಾರೆ ಎಂದರು.
ರೇವಣ್ಣ ಮಠ ಶಾಲೆಯ 11ವಿದ್ಯಾಥರ್ಿಗಳು ವಸತಿ ಶಾಲೆಗೆ ಆಯ್ಕೆಚಿಕ್ಕನಾಯಕನಹಳ್ಳಿ,ಮೇ.10: ಪಟ್ಟಣದ ರೇವಣ್ಣ ಮಠ ಸಕರ್ಾರಿ ಹೆಚ್.ಪಿ.ಎಸ್ ಶಾಲೆಯ 11 ವಿದ್ಯಾಥರ್ಿಗಳು ಸಕರ್ಾರಿ ವಸತಿ ಶಾಲೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಶಾಲೆಯ ಸಿ.ಆರ್.ಸವಿತ 98 ಅಂಕ 4ನೇ ರ್ಯಾಂಕ್, ಸಿ.ಆರ್.ಚೈತನ್ಯ 95 ಅಂಕ 17ನೇ ರ್ಯಾಂಕ್, ಎ.ಎಚ್.ರೂಪ 90 ಅಂಕ 125ನೇ ರ್ಯಾಂಕ್, ಕೋಕಿಲ 90 ಅಂಕ126ನೇ ರ್ಯಾಂಕ್, ಸಿ.ಕೆ.ಭೂಮಿಕ 85 ಅಂಕ, ಸಿ.ಎನ್.ವೀಣಾ 85, ಹೆಚ್.ಎಂ.ದೇವರಾಜು 83, ಸಿ.ಎನ್.ಶ್ವೇತ 81, ಸಿ.ಆರ್.ಹೇಮಲತ 81, ಸಿ.ಪಿ.ಹಷರ್ಿತ 76, ಸಿ.ಡಿ.ಮಧು 75ಅಂಕ ಪಡೆದಿದ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಜಿ. ರೇವಣ್ಣ, ಮುಖ್ಯೋಪಾಧ್ಯಾಯನಿ ತಿಲೋತ್ತಮೆ, ಶಿಕ್ಷಕ ಬಸವರಾಜು ಸೇರಿದಂತೆ ಶಿಕ್ಷಕ ವೃಂದ ಮಕ್ಕಳನ್ನು ಅಭಿನಂದಿಸಿದ್ದಾರೆ.